ಒಟ್ಟು 11932 ಕಡೆಗಳಲ್ಲಿ , 136 ದಾಸರು , 6615 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೇಯ ಸುಖ ಬೀರುತ ಸದೋದಿತ ಮೂಡಿ ಧ್ರುವ ಪೂರ್ವ ಪುಣ್ಯಾಚಲದಿ ಉದಯವಾದ ತೋರ್ವ ಭವಬಂಧವೆಂಬ ಕಗ್ಗತ್ತಲೆ ಹರಿಸಿದ 1 ಹೃದಯ ಕಮಲವಾಯಿತು ಸುವಿಕಾಸ ದ್ವ್ವಿಧಾ ಭಾವೆಂಬ ಚಕ್ರವಾ ಕೊಂದಾಯಿತು ಹರುಷ 2 ಸಂಚಿತ ಪ್ರಾಲಬ್ಧ ಕ್ರಿಯಮಾಣ ವಂಚನಿಲ್ಲದಾಯಿತು ಸಮರ್ಪಣ ಆಘ್ರ್ಯದಾನ 3 ಮಹಿಪತಿಗಾಯಿತು ಆನಂದೋದಯ ಸ್ವಹಿತದೋರಲು ಬಂದೆನಗೆ ತತ್ವೋಪಾಯ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ಲೋ||ಶª-Àುದಮ ಸಹಿತೇನಸ್ವಾನುಭಾವೇನ ನಿತ್ಯಂಸಮಮತಿಮನುಯವ್ಯಣ ಸರ್ವದಾ ಸೇವಕಾನಾಂಯಮ ನಿಯಮ ಪರಾಣಾಮೇಕ ತತ್ಪಾದರಾಣಾಮಮಿತನಿಜ ಮಹಿಮ್ನಾ ದೇಶಿಕೇಂದ್ರೊ ವಿಭಾತಿಯೇನು ವಿಚಿತ್ರ ಪೇಳೆ ಯೇ ಮತಿಯೆ ನಿದಾನವನೆನ್ನೊಡನೆಮಾನಸ ವೃತ್ತಿಯಾತ್ಮನ ಕೂಡಿಬರಲೊಂದು ಗಾನ ತೋರುವುದಿದೇನೆ ಪಎಲ್ಲವನುಳಿದೀಗಲೂ ಬಗೆಗೊಂಡು ಮುದದಿಂದ ಬಂದು ನಿಂದುಸಲ್ಲಲಿತಾನಂದ ಪದವ ನೋಡುವೆನೆಂದು ಸವರಿಸಿ ಬರಲು ಮುಂದುಇಲ್ಲ ಮತ್ತೊಂದಾತ್ಮನಿಂದಧಿಕವೆಂದು ನಿಲ್ಲದೆ ಧ್ಯಾನಿಸಲುಝಲ್ಲನೆ ಜಲಧಿಯ ಮೊರವಿನಂದದಿ ತೋರಲಲ್ಲಿ ನಾ ಬೆರಗಾದೆನು 1ಅಂಜದೆ ಚಿಂತಿಸಲು ಮುರಜ ಭೇರಿ ಮಂಜುಳ ವೀಣೆಗಳಸಿಂಜಿತಗಳು ಮೇಘನಾದ ಮುಂತಾದವು ಸಂಜನಿಸಿದವೊಳಗೆರಂಜನೆುಂದವನು ಕೇಳುತ ಹೃತ್ಕಂಜದೊಳ್ಬೋಧೆಯೆಂಬಅಂಜನವಚ್ಚಲು ಬಿಂದು ಪೊಳೆುತು ನಿರಂಜನ ರೂಪಿನಲಿ 2ಮತ್ತೆ ಮುಂದೆ ನೋಡಲು ಬಿಂದುವೆಂಬುತ್ತಮ ಹಿಮಕರನಕತ್ತಲೆಗವಿದುದು ಅದ ನೋಡುತ ಮನ ತತ್ತರಿಸಿತು ನಿಲ್ಲದೆಚಿತ್ತವನಲುಗದೆ ಗುರುಪಾದವ ಧೃತಿವೆತ್ತು ಚಿಂತಿಸುತಿರಲುಕತ್ತಲೆ ಪರಿದು ಕಳಾ ವಿಶೇಷ ನೋಡಲೆತ್ತಲೆತ್ತಲು ತುಂಬಿತು 3ಛಂದದಿತೇಜವನು ನೋಡುತಲದರಿಂದಲಧಿಕ ಸುಖವೂಮುಂದೆ ಪುಟ್ಟಲದರನುಭವದಲಿ ಹಿಗ್ಗಿ ನಿಂದು ಜುಂಮುದಟ್ಟಲುಎಂದೆಂದು ಕಾಣದ ಸುಖದೊಳು ಮನ ಬಳಿಸಂದು ಲಯವನೈದಲುಒಂದಲ್ಲದೆರಡಿಲ್ಲದ ನಿಜ ನಿತ್ಯಾನಂದವೆ ನಾನಾದೆನೂ 4ತಾಪತ್ರಯಗಳಡಗಿ ಕರ್ಮಕಲಾಪವಿಲ್ಲದೆ ಪೋದುದುಗೋಪಾಲಾರ್ಯರ ಕೃಪೆುಂದ ಭವಬಂಧವೀ ಪರಿ ಬಯಲಾದುದುವ್ಯಾಪಾರವೆಲ್ಲವನಿತ್ಯವಾದವು ನಿರ್ಲೇಪತೆಯೆನಗಾದುದುದೀಪಿತ ವಿಜ್ಞಾನ ರತ್ನವೆಂದೆನಿಸುವ ದೀಪ ಸುಸ್ಥಿರವಾುತೂ 5
--------------
ಗೋಪಾಲಾರ್ಯರು
ಶ್ವಾನ ಪ ಹೆಂಡತಿ ಉಟ್ಟು ತಿರುಗಾಡುವುದು ಹರಕು ಹರಕು ಚಿಂದಿಮಿಂಡಿತಿ ಉಟ್ಟು ಮೆರೆಯುವುದು ಮಿಸುನಿಯ ಮೇಲ್ಬಂದಿ 1 ಹೆಂಡತಿಯದು ತಾ ಕೊಳೆ ತುಂಬಿದ ಮಂಡೆಮಿಂಡತಿಯದು ಚೌರಿ ರಾಗಟೆ ಗೊಂಡೆ 2ಇದ್ದಲಿಯನು ಹಾಲೊಳ್ ತೊಳೆದರೆ ಶುಭ್ರವು ತಾನಹುದೆಶುದ್ಧ ಚಿದಾನಂದನ ಬೋಧೆಯಲಿ ದುರ್ಬುದ್ಧಿಗೆ ಬುದ್ಧಿಯು ಬಹುದೆ3
--------------
ಚಿದಾನಂದ ಅವಧೂತರು
ಶ್ವಾಸಮಾನಿಯೆ ನಿನ್ನ - ಆಶ್ರಯಿಸಿರುವವನಕೋಶದೊಳಿರುವಂಥ - ದೋಷಗಳಳಿಯೋ ಪ ಹಂಸೋಪಾಸನೆಯಿಂದ | ಶಂಸಿಸಿ ಹರಿಪದಪಾಂಸುವ ಧರಿಸುವನೇ ||ವಿಂಶತ್ಯೇಕವು ಸಾ | ಹಸ್ರದಾರುನೂರುಹಂಸ ಮಂತ್ರ ಗಳ್ಜಾಪಕಾ 1 ಶ್ವಾಸೋಚ್ಛ್ವಾಸಾಶ್ರಯ | ಕೋಶಗತಗಳಾದದೋಷಗಳನೆ ಕಳೆದೂ ||ವಾಸರ್ವಾಸರಕ್ಷಯ | ದೋಷಕಾರಣ ಕ್ರಿಮಿನಾಶವ ಗೈಯ್ಯುವುದೋ 2 ಪತಿ ನಿನ್ನಅಣತಿಯಿಂ ಸುರರೂ ||ತ್ರಾಣ ಪೊಂದುತ ಜಗ ತ್ರಾಣರಾಗಿಹರಯ್ಯಪ್ರ್ರಾಣ ಭಕ್ತನ ಪೊರೆಯೋ 3 ಮೊರೆ ಹೊಕ್ಕಿರುವನನ್ನ | ಪೊರೆವಂಥ ಸಂಪನ್ನಮರಳಿ ಅನ್ಯರ ಕಾಣೆನೋ |ಮರುತ ಪ್ರಾಣಗಳೊಡೆಯ | ನಿರುತಿಹೆನೀನೆಂದುಅನು ಮೊರೆಯನಿಡುವೆನೋ 4 ನೊಂದಿಹ ಶರಣನ್ನ | ಚಂದದಿ ಸಲಹಯ್ಯನಂದ ಕಂದನ ದೂತನೋ ||ಸುಂದರ ಗುರು ಗೋ | ವಿಂದ ವಿಠ್ಠಲ ಭಕ್ತಮಂದಾರ ಸುರ ತುರುವೇ 5
--------------
ಗುರುಗೋವಿಂದವಿಠಲರು
ಶ್ವೇತಗಿರಿನಿವಾಸ ಕೇಶವ ನೀಡೆನಗೆ ಮುದವಾ ಪ ಭೂತಳದಿ ಪ್ರಖ್ಯಾತವಾದ ಶ್ವೇತಗಿರಿನಿವಾಸಯನ್ನ ಪೊರಿಯೊ ದೇವಾ ಅ.ಪ ಪಾಥೋರುಹ ಭಜಿಪ ಸತತ ಸೀತ ಲಕ್ಷ್ಮಣ ರಘು ನಾಥನು ಸಂಚರಿಸಿದಂಥ 1 ಸಪ್ತಋಷಿಗಳಿರುವ ಕೃಷ್ಣಾ ಚೋತ್ತರ ವಾಹಿನಿಯ ಸ್ನಾನ ಕ್ಷೇತ್ರಕಾಶಿಗಿಂತ ಫಲದಿ ಉತ್ತಮವೆಂದೆನಿಸಿದಂಥ 2 ಶ್ರೀಮನೋಹರ ನಿಮ್ಮಯ ಪದ ತಾಮರಸವ ಪೂಜಿಸಲು ಸೂತ್ರಾಮ ಲೋಕದಿಂದ ಬರುವ ಕಾಮಧೇನು ಚರಿಸಿದಂಥ 3 ಅಷ್ಟತೀರ್ಥಂಗಳಿರುವ ಶ್ರೇಷ್ಠಸ್ಥಾನವೆಂದು ತಿಳಿದು ನಿಷ್ಠೆಯಿಂದ ಸೇವಿಸುವರ ಭೀಷ್ಠಗಳನ್ನು ಸಲಿಸುವಂಥ 4 ಶ್ವೇತರಾಜ ತಪವಗೈದು ಪೂತವಾದ ಪದವಿ ಪಡೆದ ಆ ತರುವಾಯದಲಿ ಗಿರಿಯು ಶ್ವೇತನಾಮದಿಂದ ಮೆರೆಯೆ 5 ಅಂದವಾಗಿ ತಿಳಿದು ಭಕುತಿ ಯಿಂದ ಶೇವಿಪ ಮನುಜಗೆ ಭವ ಬಂಧ ಬಿಡಿಸ್ಯಾನಂದ ಗರಿವ 6 ತುಂಗಗಿರಿಯ ಸ್ಥಾನದಲ್ಲಿ ಶೃಂಗನೆಂಬ ಋಷಿಯು ತಪದಿ ಮಂಗಳ ಪ್ರದ ಕಾರ್ಪರನರ ಸಿಂಗನೊಲಿಸಿ ವರವ ಪಡೆದ 7
--------------
ಕಾರ್ಪರ ನರಹರಿದಾಸರು
ಷಟ್ಪದಿ ಕೂಟವಾಳುವ ಶ್ರೇಷ್ಠ ಶಾರದೆ | ಕೈಟ ಭಾರಿಯ ಭಕ್ತಿ ವೃಕ್ಷವ| ನಾಟಿ ಹೃದಯದಿ ಬೆಳಸೆ ಶುಭಗುಣ ಖಣಿಯೆ ಮಂಗಳೆಯೆ 1 ಪೋಲ್ವ ಮೂಢನ | ಭಾರ ನಿನ್ನದೆ ದೀನ ವತ್ಸಲೆ ಯೆ| ಶುಭಮರ್ಮ ಕಳಿಸುತ | ಶ್ರೀನಿವಾಸನ ಭಕ್ತಿ ಜ್ಞಾನವಿರಕ್ತಿ ಕೊಡಿಸಮ್ಮ 2 ವೇಣಿ ವೀಣೆಯ | ಗಾನ ನುಡಿಸುವ ಜಾಣೆ ವಿಧಿಮನ ಹಾರಿ ಕೋಮಲೆಯೆ | ಶೂನ್ಯ ಮೂರು ರೂಪಳೆ | ಸಾನುರಾಗದಿ ವಲಿದು ಹರಿಪಥ ಸಿಗಿಸಿ ಪೊರೆಯಮ್ಮ 3 ರಮ್ಯರೂಪಗಳಿಂದ ನಾ ನಾ | ರಮ್ಯಸೃಷ್ಟಿಗಳಿಗನುವಾಗುತ ಹರಿಯ ಸೇವಿಸಿದೆ | ನುಡಿಸಿ ಕರಿಸುವಿ | ಯಮ್ಮ ಜಗದಿ ಸರಸ್ವತೀಯಂತೆಂದು ವಿಪಮಾತೆ 4 ಮಾಯ್ಗಳ ಗೆಲ್ವ ಬಗೆ ತೋರು | ಮಾತೆ ಯೆನಿಸಿಹೆ ವಿಕಟ ಜಗದವತಾರ ವರ್ಜಿತೆ ಶರಣು ಶ್ರೀ ಸೊಸೆಯೆ 5 ಕೃತಿ ಸುತೆಸು | ಮಧ್ವಶಾಸ್ತ್ರದಲಿ ಮನದಕು| ಬುದ್ದಿಗಳ ಕಡಿಸಿ ಪ್ರಸಿದ್ಧಿಯ ನೀಡಿ ಸಾಕಮ್ಮ | ಪದ್ಮನಾಭನ ವೇದ ಸಮ್ಮತಿ | ಯಿಂದ ಪಾಡುತ ಭಾಗ್ಯವಾಹುದೆ | ಎಂದಿಗಾದರು ನೀನೆ ಮನದಲಿ ನಿಂತು ನುಡಿಸದಲೆ 6 ವಿನೋದ ಗೊಷ್ಠಿಯ | ಹಾದಿ ಹಿಡಿದವಿವೇಕಿ ನಾನಲೆ ಕೇಳು ವಿಪತಾಯೆ | ಮಾಧವನು ಸಿಗನಮ್ಮ | ಆದರದಿ ಸಾರಿದೆನು ಕವಿಜನಗೇಯೆ ವಿಧಿಜಾಯೆ 7 ನೀರಜ ರುದ್ರರ ಬಿಂಬೆ ಭಕ್ತರ | ಸ್ತಂಭೆ ಶಾಂಭವಿ ವಂದ್ಯೆ ನಿತ್ಯದಿ | ಉಂಬೆ ಸುಖಗಳನೂ | ಸಾರ ಕೈಗೊಡಿಸಮ್ಮ ಸಮೀರ ಗ್ಹೇಳುತಲಿ 8 ಭೃತ್ಯ ನಿತ್ಯ ಭಕ್ತಳೆ | ವಿತ್ತ ವನಿತಾ ವ್ಯಾಧಿ ಹರಿಸುತ ಚಿತ್ತ ಶುದ್ಧಿಯನು | ಸಪ್ತ ಶಿವಗಳ ಮರ್ಮ ಬೇಗನೆ ವತ್ತಿ ಮಿಥ್ಯಾಜ್ಞಾನ ತಿಮಿರವ ಭಕ್ತಿ ಭಾಸ್ಕರಳೆ 9 ಸುಖಗಳನುಂಬೆ ಭುಜಿವಿದಿ| ತಳಿಹೆ ಪತಿತೆರದ್ವಿಶತ ಕಲ್ಪಗಳಲ್ಲಿ ಸಾಧನೆಯು | ಶಾಪವ ಶ್ಯಾಮಲಾಶಚಿ | ಗಳಿಗೆ ದ್ರೌಪತಿ ಇಂದ್ರ ಸೇನಾಕಾಳಿ ಚಂದ್ರಾಖ್ಯೆ 10 ನಿಂತು ಶಶಿಯಿಲ್| ಭೂತ ಗುಪಚಯವಿತ್ತು ಸೃಷ್ಠಿಯ ಕಾರ್ಯಗನುವಾಹೆ | ಪತಿ ನಿನಗಹುದಮ್ಮ ಕೊರತೆಯು | ಯಾತರಿಂದಲು ಯಾವಕಾಲುಕು ಇಲ್ಲರಯಿ ನಿನಗೆ 11 ಕವಚ ತೊಡಿಸುತ | ಶ್ರೀನಿವಾಸನಭಕ್ತನಿಚಯಕ್ಕೆ ಕೈಮುಗಿದು ಆನತಾಮರಧೇನು ಮುಖ್ಯ | ಪ್ರಾಣಮಂದಿರನಾದಶುಭಗುಣ ಪೂರ್ಣಪೂರ್ಣಾನಂದ ತದ್ವನ ಬಾದರಾಯಣಗೆ 12 ದೈನ್ಯ ದಿಂದಸಮರ್ಪಿಸುತ ಪವಮಾನರಾಯನ ಕರುಣವೆಲ್ಲೆಡೆ ಅನ್ಯ ವಿಷಯವ ಬೇಡದಂದದಿ ಮಾಡುತಲಿಯನ್ನ | ಜ್ಞಾನ ಭಕ್ತಿ ವಿರಕ್ತಿ ಸಂಪದ | ನೀನೆ ನೀಡುತ ಸಲಹೆ ಕೃತಿಸುತೆ | ನೀನೆ ಸಾಸರಿ ನಮಿಪೆ ಬೃಹತೀಖ್ಯಾತ ಭಾರತಿಯೆ 13 ಸೇರಿ ತಾಂಡವ ಮಾಡಿ ಪಾದ ಪಂಕಜವ ಸೂರಿ ಸಮ್ಮತ ವೇದ ಗಾನದಿ | ಸಾರಿ ಸಾರಿಸೆ ಸೇರು ವದನದಿ | ನೀರ ಜಾಕ್ಷನ ಸೊಸೆಯೆ ಶುಚಿಶತಿ ನಮಿಪೆ ಭೂಯಿಷ್ಠ 14
--------------
ಕೃಷ್ಣವಿಠಲದಾಸರು
ಷಟ್ಪದಿ ಭೃಂಗ ದಿವಿಜ ಲಲಾಮ ಶುಭಗುಣ ಸಾಂದ್ರ ಗುರುವರನೇಸೇರಿಹೆನು ತವಶಿಷ್ಯ ಕೋಟಿಲಿ ಬೀರಿ ಕರುಣಾ ದೃಷ್ಟಿ ಶ್ರುತಿ ಭಂಡಾರ ಸೂರೆಯ ಮಾಡ್ವ ಹಾ ಹಾ ಕಾರದಿಂ ತಪಿಪ 1 ಬಾಲ ನೆನ್ನಯ ಶಿರವ ನಿಮ್ಮಯ ಶೀಲಕರದಿಂ ಭೂಷಿಸುತ ಕವಿತಾ ಲತಾಂಗಿಯ ತಾಂಡವಾಡಿಸಿ ಚಂದ್ರಮೌಳಿನುತಕಾಳಿಮನಕುಮುದೇಂದು ಜಗಸಂ ಚಾಲಕ ಪ್ರಭು ಮುಖ್ಯ ಪ್ರಾಣಗುಪಾಲಿಸುತ ಸತ್ತಾದಿ ಸಕಲವ ಪೊರೆದು ಮೆರವಂಥಾ 2 ಪತಿ ಮಾ ವಂದ್ಯ ನಿರುಪಮ ನಾರಸಿಂಹನುಅಂದು ನಿಮ್ಮನು ಕಾಯ್ದ ತೆರಪೊರೆ ಶ್ರೀ ಸುಧೀಂದ್ರ ಸುತ 3 ಏನಿದೇನಿದು ನಿಮ್ಮ ಮಹಿಮೆಯಮಾನವರಿಯಲು ಸುರರಿಗಾಗದುಮಾನವರ ಪಾಡೇನು ಶಿರತೂ ಗುತಿಹ ಫಣಿರಾಜಮಾನ್ಯ ಸುರ ಋಷಿ ಕರುಣ ಬಲವೋಮೇಣ್ಪರಿಸರನ ಕೃಪೆಯೊ ಕಾಣೆನುದಾನಿ ನರಹರಿ ವರದ ಫಲವೋ ಮೊತ್ತವೇ ಯೆಂಬೆ 4 ಜಂಭಾರಿ ಮೇಣಾಬಾಲ ಸುಬ್ರಹ್ಮಣ್ಯನೋ ಶಂಕಿಪುದು ಸುರನೀಕಾ 5ಸೂಕ್ಷ್ಮಮತಿಗಳೆ ಪೇಳಿ ಸರ್ವಾಧ್ಯಕ್ಷನವತಾರವನು ಯಾವ ಸುಲಕ್ಷಣ ಭಕುತಗೇನೆ ಮಾಡಿಹ ನಮ್ಮಗುರುವ ಬಿಡೆಪಕ್ಷ ವಹಿಸದೆ ಪೇಳಿ ಯಾವನು ಲಕ್ಷ್ಯ ಮಾಡದೆ ಕಷ್ಟ ಮಾತೆಯಕುಷಿಯಂ ಬಂದಿಹನು ಮುಮ್ಮುಡಿ ನಮ್ಮ ನುದ್ಧರಿಸೆ 6 ವ್ಯಾಜ ವಿಲ್ಲದಲೆದೈತ್ಯ ಪಿತತಾನಿತ್ತ ಬಾಧೆಗೆ ನಾಥ ನರಹರಿ ಬಂದುದಚ್ಚರಿಯಂತೆ ಭಾವಿಸೆ ಭಕ್ತವತ್ಸಲ ಬಿರುದು ಪೊಳ್ಳೆಬಿಡೆ 7 ಸತಿ ಸಂಹಾರ ಕಾಟವು ಮತ್ತೆ ಯತಿ ಯಂತಾಗೆ ಹಾಗೆಯೆನಿಂತಿರಲು ವೃಂದಾವನದಿ ಕಾಡುವರು ಶಿಷ್ಯಗಣಾ 8 ಸತಿಯ ಬೇಕೆಂದೊಬ್ಬ ನೀಡೈ ಸುತನ ದಂಪತಿ ವ್ಯಾಜ್ಯ ಹರಿಸಿರಿಜತನ ಮಾಡಿಸಿ ವೇತನವ ಹರಿಸಿನ್ನು ವ್ಯಾಧಿಗಳಪಥನ ವಾಯಿತು ಕೂಳುಕೊಡಿಸೈ ಸತತ ವೀತೆರ ಬಯಕೆ ವ್ರಾತದಿಸುತಪ ನೀನೆಂತಾಗೆ ಕುಪಿತನು ಬಲ್ಲ ಬತ ಹರಿಯೇ 9 ತಿರುಗುತಲಿಹರು ತಮ್ಮಯ ಹೀನ ನಡತೆಗಳಿಂದ ಸ್ತ್ರೀಯರು ವಿಧಿಯ ನಡೆಸುವರು ಚೆನ್ನ ಔಷಧ ವಿಹುದು ನಿನ್ನಲಿ ಹಣ್ಣಿನಾಶಯ ತೋರಿನೀ ಭವ ಹುಣ್ಣುವಳಿಯುವೆ ಎಷ್ಟು ಕರುಣಿಯೊ ಗುರುವೆ ಶರಣೆಂಬೆ 1 ಕಳತ್ರ ವೆಲ್ಲವನೆಂತೆನಲು ಬಲು ಹುಚ್ಚುತನವ ರ್ಣಿಸಲು ಮಿಕ್ಕುದುದಾಉಕ್ತಿ ಭಜಿಸುವಗೇನು ಪೇಳ್ವುದು ಮುಕ್ತಿಕರಗತ ವೇಕೆ ಸಂಶಯ ಶಾಸ್ತ್ರ ಭಾಗ್ಯವೆ ಸಾಕು ಕರುಣಿಸಿ ನಮಿಪೆ ಭೂಯಿಷ್ಠ 11 ಸೂತ್ರ ಖರೆ 12 ಪ್ರೀತಿತಮ ಇವನಂಥ ದಾತನ ಗ್ರಂಧ ನಿಚಯವ ಭೋಜ್ಯ ಕಿಡುತಲಿ ಸುತ್ತಿಗೆದ್ದಲು ಹುಳಕೆ ಮೆಚ್ಚುವ ನೇನು ಪಯ ಸುರಿಯೆಪುತ್ರರಿಗೆ ಮದ್ದಿಕ್ಕಿ ಪಿತನಿಗೆ ಮತ್ತೆ ಭೋಜನ ವಿಕ್ಕೆ ಬಹುಸುಪ್ರೀತಿ ಯಾದಂತಾಯ್ತು ಹರಿಹರೀ ಪಾಹಿಮಾಂ ಪಾಹೀ 13 ಶುಂಠನಾದರು ಪಠಿಸೆ ನಮ್ಮಯ ಕಂಠದಿಂ ಬಂದಂಧ ನುಡಿವೈಕುಂಠ ರಮಣನ ಕಾಂಬ ಪಂಡಿತ ನೆನೆಸಿ ಧರೆಯೊಳಗೆಕಂಟಕವ ನಿರಿದು ಭವದಲಿ ವಿಷ ಕಂಠ ಗಾತಪ್ರಿಯ ತನ್ನಯಭಂಟನನು ಮಾಡಿಕೊಳಲೆಂತೆಂದೆನ್ನ ಹರಿಸಿ ಪೊರೆ 14 ಏಳಿರೇಳಿರಿ ಸಂತ ಮಿತ್ರರೆ ಕೇಳಿ ಕೇಳಿದುದೆಲ್ಲ ನೀಡುವಪಾಲಕನು ಶ್ರೀ ರಾಘವೇಂದ್ರನು ಇಲ್ಲ ಮೆರೆಯುತಿರೆಕೇಳಿ ಭವಸುಖ ಮತ್ತೆ ಭವದಲಿ ಬೀಳುವರೆ ವಿಜ್ಞಾನ ಯಾಚಿಸಿಕೊಲ್ಲಿರೀ ಸಂಸಾರ ಬೀಜವ ಕಲಿಯು ಎಷ್ಠರವ15ನಾಲ್ಕುಶತ ಐವತ್ತು ವರುಷವೆ ವೋಲಗವ ಕೈಕೊಂಬ ಮುಂದಿವಅಲಸವ ಮಾಡಿದೆಡೆ ಸುರತರು ಬಿಟ್ಟತೆರವೇನೆಜಾಲ ಮಾತುಗಳೇಕೆ ಮುಂದಿನ ಶೀಲ ಮಾರ್ಗವ ನೋಡ್ವ ಜಾಣನುಪಾಲಿಸೈಧೋರೆ ಕೆಟ್ಟೆ ಕೆಟ್ಟೆನು ಎನ್ನ ಕೈ ಕೊಡುವ 16 ಏಕೆ ಭಯ ನಮಗಿನ್ನು ನರಕದ ಏಕೆ ಕಳವಳ ಅಶನ ವಸನÀಕೆಏಕೆ ಸಂಶಯ ಜ್ಞಾನ ವಿಶಯದಿ ಪಿಡಿಯೆ ಗುರುವರನೆನೂಕಿ ವಿಷಯದಿ ಬಯಕೆ ಬೇಗನೆ ಬೇಕು ಎನ್ನುತ ಜ್ಞಾನ ನಿಧಿಗಳಹಾಕಿ ದಂಡವ ಪಾಹಿ ಗುರುವರ ಪಾಹಿ ಯೆಂತೆನ್ನ 17 ಭುಕ್ತಿ ಹಾಗೆ ವಿರಕ್ತ ಭಕ್ತಿಯು ಭಕ್ತ ವೃಂದಕೆ ಭ್ರಷ್ಟ ಬಿಟ್ಟವನು 18 ಜಯ ಜಯವು ಗುರುಸಾರ್ವಭೌಮಗೆಜಯ ಜಯವು ಮಂತ್ರಾಲಯಸ್ಥಗೆಜಯ ಜಯವು ವಿಜಯೀಂದ್ರ ಪೌತ್ರಗೆ ವ್ಯಾಸರಾಜನಿಗೆಜಯ ಜಯ ಪರಿಮಳಾ ಪ್ರದಾತಗೆ ಜಯಜಯವು ಖಂಡಾರ್ಥ ನೀಡ್ದಗೆಜಯ ಜಯವು ಸಶರೀರ ಬೃಂದಾ ವನದಿ ಸೇರ್ದವಗೇ 19 ಜಯ ಜಯವು ಬಾಹ್ಲೀಕ ರಾಯಗೆ ಜಯ ಜಯವು ಶ್ರೀ ಸತ್ಯಸಂಧಗೆಜಯ ಜಯವು ಪ್ರಹ್ಲಾದರಾಜಗೆ ಶಿಷ್ಯ ವತ್ಸಲ್ಯಗೆಜಯ ಜಯವು ಶ್ರೀ ರಾಘವೇಂದ್ರಗೆಜಯ ಜಯವು ಮಂಗಳವ ಸುರಿಪಗೆಜಯ ಜಯವು ಜಯ ಮುನಿಯ ಪ್ರೀಯಗೆ ನಮ್ಮ ಗುರುವರಗೆ 20 ಮಾನನಿಧಿ ಜಯತೀರ್ಥ ರಾಯರಘನ್ನ ಹೃದಯಗ ವಾಯು ವಂತರಶ್ರೀ ನಿಲಯ ಶ್ರೀ ಕೃಷ್ಣವಿಠಲ ಪ್ರೀಯ ಗುರುರಾಜನಾನು ಪಾಮರ ಬಾಲ ನುಡಿಗಳ ನೀನೆ ತಿದ್ದುತ ಮನ್ನಿಪುದು ನಾನಿನ್ನ ದಾಸರ ದಾಸನೆಂದು ಸ್ವೀಕರಿಸು ಶರಣು 21
--------------
ಕೃಷ್ಣವಿಠಲದಾಸರು
ಷಷ್ಠಿಯ ದಿವಸ (ಶ್ರೀ ವೆಂಕಟೇಶನ ಅವಭೃಥ ಸ್ನಾನ) ರಂಭೆ :ಸಖಿಯೆ ಕೇಳೀಗ ಸಲುಗೆವಂತಳೆ ಮುಕುತಿದಾಯಕ ಮೂಲಪುರುಷಗೆ1 ಭೇರಿಶಬ್ದವು ನಗಾರಿಘರ್ಜನೆ ಮೌರಿತಾಳವು ಮೃದಂಗಶಬ್ದವು 2 ಉದಯಕಾಲದಿ ಒದಗಿ ಭಕುತರು ಪದುಮನಾಭನ ಪಾಡಿ ಪೊಗಳ್ವರು3 ಭೂರಿಮಂಗಲಕರದ ಶಬ್ದವು ಸೇರಿ ಕಿವಿಯೊಳು ತೋರುವುದಲ್ಲೆ4 ನಿದ್ದೆಬಾರದು ನಿಮಿಷಮಾತ್ರಕೆ ಎದ್ದು ಪೇಳೆಲೆ ಏಣಲೋಚನೆ5 ಸುಮ್ಮನೀನಿರು ಸುಳಿಯಬೇಡೆಲೆ ಎಮ್ಮುವುದು ನಿದ್ರೆ ಏನ ಪೇಳಲಿ6 ಬೊಮ್ಮಸುರರಿಗು ಪೊಗಳತೀರದು ತಿಮ್ಮರಾಯನ ಮಹಿಮೆ ದೊಡ್ಡಿತು7 ನಿನ್ನೆ ದಿವಸದ ನಿದ್ರೆವಿಹುದೆಲೆ ಕಣ್ಣಿಗಾಲಸ್ಯ ಕಾಂಬುವದಲ್ಲೇ8 ಬಣ್ಣಿಸುವದೆಲೆ ಬಹಳವಿಹುದಲೆ ಪನ್ನಗವೇಣಿ ಪವಡಿಸೆ ನೀನು9 ಏಳು ಏಳಮ್ಮ ಅಲಸ್ಯವ್ಯಾತಕೆ ಕಾಲಿಗೆರಗುವೆ ಹೇಳಬೇಕಮ್ಮ10 ಜಯಜಯ ವಾಧಿಶಯನ ಜಯಜಯ ದೈತ್ಯವಿನಾಶ ಜಯಜಯ ಶ್ರೀನಿವಾಸ1 ಗಂಧಕಸ್ತೂರಿಪುಣುಗಚಂದನಪನ್ನೀರುಗಳ ಹೊಂದಿಸಿ ತೋಷದಿ ಮಂದರಧರಗೆ2 ಆಕಾಶರಾಯನ ಮಗಳು ಹರುಷದಿಂದೊಡಗೂಡಿ ಶ್ರೀಕರ ವೆಂಕಟಪತಿಯು ಸರಸವಾಡಿ3 ಮಾಧವ ಸಹಿತಲಿ ಸಾದರದಿಂದಲಿ ಸರಸವಾಡಿ4 ಬಡನಡು ಬಳುಕುತಲಿ ಎಡಬಲದಲಿ ಸುಳಿದು ಕಡಲೊಡೆಯಗೆ ಲಕ್ಷ್ಮಿ ಚೆಲ್ಲಿದಳಾಗ5 ಛಲದಿ ಪದ್ಮಾವತಿಯು ಜಲಜನಾಭನ ಮೇಲೆ ಒಲವಿನಿಂದಲಿ ಬಂದು ಚೆಲ್ಲಿದಳಾಗ6 ಭರದಿ ಶ್ರೀದೇವಿಯು ಸರಸಿಜಮುಖದಲ್ಲಿ ಪರಮ ಸುಸ್ನೇಹದಿ ಬೆರಸಿದಳಾಗ7 ಭೂದೇವಿ ಭುಲ್ಲವಿಸಿ ಮಾಧವನ ಮುಖದೊಳಗೆ ಮೋದದಿಂದಲಿ ಬಂದು ಚೆಲ್ಲಿದಳಾಗ8 ಸುತ್ತುಮುತ್ತಲು ಇವರ ಆರ್ತಿಯಿಂದಲಿ ಹರಿಯು ವೃತ್ತಕುಚವ ನೋಡಿ ಚೆಲ್ಲಿದನಾಗ 9 ಝಣಝಣಾಕೃತಿಯಿಂದ ಮಿನುಗುವಾಭರಣದ ಧ್ವನಿಯ ತೋರುತ ಬಲು ಸರಸವಾಡಿ10 ಓಕುಳಿಯಾಡಿದ ನೀರಾನೇಕಭಕ್ತರು ಮಿಂದು ಏಕಮಾನಸರಾಗಿ ಪೊರಟರು ಕಾಣೆ11 * * * ಆಡಿದರೋಕುಳಿಯ ಶರಣರೆಲ ಆಡಿದರೋಕುಳಿಯಪ. ಕಾಡುವ ಪಾಪವ ಓಜಿಸಿ ಹರಿಯೊಳ- ಗಾಡಿ ನಿತ್ಯಸುಖ ಬೀಡಿನ ಮಧ್ಯದಿ1 ಅಬ್ಬರದಿಂದಲಿ ಉಬ್ಬಿ ಸಂತೋಷದಿ ಒಬ್ಬರ ಮೈಗಿನ್ನೊಬ್ಬರು ಚೆಲ್ಲುತ 2 ಚೆಂಡು ಬುಗರಿನೀರುಂಡೆಗಳಿಂದಲಿ ಹಿಂಡು ಕೂಡಿ ಮುಂಕೊಂಡು ಪಿಡಿಯುವರು3 ಸುತ್ತುಮುತ್ತ ಒತ್ತೊತ್ತಿ ಮುತ್ತಿ ಜಲ- ವೆತ್ತಿ ಚಿತ್ತತನುನೆತ್ತಿಗೆ ಸೂಸುತ್ತ4 ರಂಭೆ : ನಾರಿ ಕೇಳೀಗ ಭೂರಿಭಕುತರು ಶ್ರೀರಮಾಧವ ಸಹಿತ ಬಂದರು1 ಭಾವ ಶ್ರೀಹರಿ ಪ್ರತಿರೂಪದೋರುತ ದೇವ ತಾನೆ ನಿದ್ರ್ವಂದ್ವನೆನ್ನುತ 2 ಹೇಮಖಚಿತವಾದಂದಣವೇರಿ ಪ್ರೇಮಿಯಾಗುತ ಪೊರಟು ಬರುವನು 3 ವಲ್ಲಭೆಯರ ಕೂಡಿ ಈ ದಿನ ಫುಲ್ಲನಾಭನು ಪೊರಟನೆತ್ತಲು4 ಊರ್ವಶಿ : ನಾರಿ ನೀ ಕೇಳಿದರಿಂದ ಈಗ ಭೂರಿಭಕುತರಾನಂದ ಶ್ರೀರಮಾಧವ ಮಿಂದ ನೀರಿನೊಳಾಡುತ್ತ ಓರಂತೆ ತುಳಸಿಮಾಲೆಯ ಧರಿಸುತ್ತ ಭೇರಿಡಂಕನಗಾರಿಶಬ್ದ ಗಂ- ಭೀರದೆಸಕವ ತೋರಿಸುತ್ತ ವೈ- ಯಾರದಿಂದಲಿ ರಾಮವಾರ್ಧಿಯ ತೀರದೆಡೆಗೆಲೆ ಸಾರಿ ಬಂದರು1 ವರದಭಿಷೇಕವ ರಚಿಸಿ ಬಕು- ತರ ಸ್ನಾನವನನುಕರಿಸಿ ಭರದಿಂದ ಪೂಜಾಸತ್ಕಾರ ಸೇವೆ ಕೈಗೊಂಡು ತ್ವರಿತದಿ ನಗರಾಂತರಕನುವಾದನು ಬರುತ ದಿವ್ಯಾರತಿಗೊಳ್ಳುತ ಚರಣ ಸೇರಿದ ಭಕ್ತರಿಷ್ಟವ ನಿರುತ ಪಾಲಿಸಿ ಮೆರೆವ ಕರುಣಾ- ಕರ ಮನೋಹರ ಗರುಡವಾಹನ2 ರಂಭೆ : ಸರಸಿಜಾನನೆ ಈ ಸೊಲ್ಲ ಲಾಲಿಸೆ ಕರವ ಮುಗಿಯುತ್ತಕೈಯ ತೋರುತ1 ಪರಮಪುರುಷ ಗೋವಿಂದ ಎನುತಲಿ ಹೊರಳುತುರಳುತ ಬರುವದೇನಿದು2 ಊರ್ವಶಿ :ಅಂಗದಾಯಾಸವೆಲ್ಲವನು ಪರಿ- ಭಂಗಿಪ ಸೇವೆಯೆಂಬುದನು ಅಂಗಜಪಿತಚರಣಂಗಳ ರಜದಲಿ1 ಹೊಂಗಿ ಧರಿಸಿ ಲೋಟಾಂಗಣ ಎಂಬರು ರಂಗನಾಥನ ಸೇವೆಗೈದ ಜ- ನಂಗಳಿಗೆ ಭಯವಿಲ್ಲವದರಿಂ- ದಂಗವಿಪ ಲೋಲೋಪ್ತಿ ಕೋಲಾ- ಟಂಗಳನು ನೀ ನೋಡು ಸುಮನದಿ2 ಕೋಲು ಕೋಲೆನ್ನಿರೊ ರನ್ನದ ಕೋಲು ಕೋಲೆನ್ನಿರೊಪ. ಪಾಲಾಬ್ಧಿಶಯನ ನಮ್ಮಾಲಯಕೆದ್ದು ಬಂದ ಲೀಲೆಗಳಿಂದ ಜನಜಾಲಗಳೆಲ್ಲರು1 ಗುಂಗಾಡಿತಮನನ್ನು ಕೊಂದು ವೇದವ ತಂದು ಬಂಗಾರದೊಡಲನಿಗಿಟ್ಟನು ನಮ್ಮ ದೇವ2 ಅಡ್ಡಿಮಾಡದೆ ಸುರವಡ್ಡಿಗೆ ಸುಧೆಯಿತ್ತು ಗುಡ್ಡೆಯ ಬೆನ್ನಿಲಿ ಧರಿಸಿದ ನಮ್ಮ ದೇವ3 ರೂಢಿಯ ಕದ್ದನ ಓಡಿಸಿ ತನ್ನಯ ದಾಡೆಯಿಂದಲೆ ಸೀಳ್ದ ಕಾಡವರಾಹನಮ್ಮ4 ಸಿಂಗನ ರೂಪತಾಳಿ ಹೊಂಗಿ ಕಂಬದಿ ಬಂದು ಬಂಗಾರಕಶ್ಯಪುವಂಗವ ಕೆಡಹಿದ5 ಗಿಡ್ಡನಾಗುತ ಕೈಯೊಡ್ಡಿ ದಾನಕೆ ಮನ- ಸಡ್ಡಿಮಾಡದೆ ಮೇಣು ದೊಡ್ಡವನಾದನಮ್ಮ6 ಕಾಮಧೇನುವಿಗಾಗಿ ಕಾರ್ತವೀರ್ಯನ ಕೊಂದು ಭೂಮಿಯ ಬುಧರಿಗೆ ಪ್ರೇಮದಿನಿತ್ತನಮ್ಮ7
--------------
ತುಪಾಕಿ ವೆಂಕಟರಮಣಾಚಾರ್ಯ
ಷೋಡಶೋಪಚಾರ ಪೂಜೆಪೂಜಿಸುವೆನನವರತ ಪರಮ ಪುರುಷನನುನೈಜ ಮೂರ್ತಿಯನೀಗಲಭಿಮುಖಿಸಿ ನಿರ್ಗುಣದಿ ಪಹೃದಯಕಾಶಿಯಲಿಪ್ಪ ಜ್ಞಾನಗಂಗೆಯ ಮಿಂದುಮೃದುತರದ ಸತ್ವಗುಣವೆಂಬ ನಿತ್ಯಕರ್ಮವ ಮಾಡಿಒದಗಿ ಶಮೆದಮೆಯೆಂಬ ನಿತ್ಯಕರ್ಮವ ಮಾಡಿಮುದದಿಂದ ಪರಮಾತ್ಮನಿಹ ಮಂದಿರಕೆ ಬಂದು1ಧ್ಯಾನಪ್ರಣವ ಮಂಟಪದಲ್ಲಿ ಕನಕಮಯ ಪೀಠವನುತನುಕರಣಮನಃಪ್ರಕೃತಿ ಯೆಂಬ ನೆಲೆಗಳನುಅನುಕೂಲದಿಂ ರಚಿಸಿ ಸಚ್ಚಿದಾನಂದನನುಮನದಲ್ಲಿ ಧ್ಯಾನವನು ಬಳಿಕೀಗ ಮಾಡುವೆನು2ಆವಾಹನ-ಆಸನ-ಪಾದ್ಯದೇಶಕಾಲಾತೀತ ಪರಿಪೂರ್ಣನಾಗಿರುವವಾಸುದೇವನನೊಮ್ಮೆಯಾವಾಹಿಸುವೆನುಆಸನವನೀವೆ ಸರ್ವಾಧಾರವಸ್ತುವಿಗೆದೋಷರಹಿತನ ಪಾದಗಳ ತೊಳೆವೆನೊಲವಿನಲಿ 3ಅಘ್ರ್ಯ-ಆಚಮನ-ಮಧುಪರ್ಕಬೆಲೆರಹಿತಗಘ್ರ್ಯವನು ನೆರೆಕೊಟ್ಟು ಕರಗಳಿಗೆಸಲಿಲದಿಂ ಶುದ್ಧನಿಗೆ ಶುದ್ದಾಚಮನವಸಲಿಸಿ ಮಧುಪರ್ಕವನು ಕ್ಷೀರಸಾಗರಗಿತ್ತುವಿಲಯಾದಿ ಪಂಚಪದಗೆರೆದು ಪಂಚಾಮೃತವ 5ಸ್ನಾನ-ವಸ್ತ್ರಸ್ಮರಿಸಿದರೆ ಸಂಸಾರಮಲವಳಿವ ಮಹಿಮನಿಗೆಸುರನದಿಯ ಪಡೆದವನಿಗಭಿಷೇಕಗೊಳಿಸಿನಿರತ ದಿಗ್ವಸ್ತ್ರನಿಗೆ ವರದುಕೂಲವನುಡಿಸಿಕರಣ ಪ್ರೇರಕನಿಗುಪವೀತದುಪಚಾರದಲಿ 5ಆಭರಣಅಷ್ಟವಿಧಗಂಧವನು ಅಷ್ಟಮದ ರಹಿತನಿಗೆನಿಷ್ಠೆುಂ ಭಕ್ತಿರಸದಿಂದ ಹದಗೊಳಿಸಿಅಷ್ಟ ವಿಧಮೂರುತಿಗೆ ಮುಟ್ಟ ಲೇಪವ ಮಾಡಿದುಷ್ಟಮದವನು ಕುಟ್ಟಿ ದಿವ್ಯ ಕುಂಕುಮವಿಟ್ಟು 7ಪುಷ್ಪ-ಧೂಪ-ದೀಪ-ನೈವೇದ್ಯ-ತಾಂಬೂಲಪರಿಪರಿಯ ಪುಷ್ಪಗಳ ನಿರ್ವಾಸನಗೆ ತಿಮಿರಹರಪ್ರಭಗೆ ಧೂಪದೀಪಂಗಳನು ಬೆಳಗಿಪರಿಪೂರ್ಣಕಾಮನಿಗೆ ಷಡುರಸಾನ್ನವನಿತ್ತುಪರಮ ಮಂಗಳಗೆ ತಾಂಬೂಲದುಪಚಾರದಲಿ 8ಕೋಟಿಸೂರ್ಯಪ್ರಭಗೆ ಕೋಟಿವರ್ತಿಗಳುಳ್ಳಮೀಟಾದ ಮಂಗಳಾರತಿಯ ಪಿಡಿದೆತ್ತಿಕೋಟಿ ಮೂವನ್ಮೂವರೂರ ಪುಷ್ಪವ ಚಂದ್ರಜೂಟಸಖ ತಿರುಪತಿಯ ವೆಂಕಟನ ಪದಕಿತ್ತು 9ಓಂ ಶ್ರೀಶಾಯ ನಮಃ
--------------
ತಿಮ್ಮಪ್ಪದಾಸರು
ಸಂಕರ್ಷಣನ ರಾಣಿ ವೀರದುರ್ಗೆ ಕಿಂಕರರ ಪಾಲಿಸು ಖೂಳ ಜನ ಸಂಹಾರಿ ಪ ಅಮಿತ ಸದ್ಗುಣರಾಶಿ ಕುಜನಾರಿ ಸುಗನಾಪ್ತೆ ಕಾಯೆ ತಾಯೆ ಅ.ಪ ಮನದ ಖಳರಾ ಭೀತಿ ಬಹು ವೇಗ ಕೇಳಮ್ಮ ಪ್ರಣಿತ ಜನರ ಪಾಲೆ ಕೊಲ್ಲೆ ಅವರ ತನುಮನದಿ ನೆಲೆಸಿದ್ದು ಅನುದಿನವು ಪೊರೆ ನಮ್ಮ ಗುಣಪೂರ್ಣ ನಿನ್ನ ಪತಿಧ್ಯಾನ ಒದಗಿಸಿ ನಲಿಯೆ 1 ಪತಿವ್ರತವು ನೀ ಧರಿಸಿ ಪತಿವೈರಿಗಳ ಅರಿವೆ ಪತಿಹಿತರ ಕಾವ ಕಂಕಣವ ಕಟ್ಟಿ ಪತಿ ಪ್ರೀತಿಪಡಿಸುವೆ ವೀರವ್ರತ ದೀಕ್ಷೆಯಲಿ ಪತಿತಪಾವನೆ ನೀನೆ ಕಾವಲಮ್ಮಾ ನಮಗೆ2 ಕಲಿಯಲ್ಲಿ ಖಳಕೂಟ ಬಲು ಪ್ರಬಲ ಅತಿಕ್ರೂರ ಉಳಿಯಲೀಯರು ದೇವಿ ಸುಜನರನ್ನು ಬಲುಹೀನರೆಂತೆಂದು ಬಲು ಬಾಧೆಪಡಿಸುವರು ಪ್ರಳಯಗೈಸವರನ್ನು ಪಾಲಿಸು ನಿನ್ನವರ 3 ಜ್ಞಾನಮನ ತನುಕರಣ ಆಲಯದ ಅರಿಗಳ ಆಸಕ್ತಚಾರಿಗಳ ಬಿಡದೆ ಮಡುಹಿ ಆನಂದಮುನಿ ತಾಯೆ ಜಯೇಶವಿಠಲನ ಆನಂದ ನಿಜಕರುಣ ಬೆರಿಸಮ್ಮ ನಮ್ಮಲ್ಲಿ 4
--------------
ಜಯೇಶವಿಠಲ
ಸಕಲ ದಿವಿಜಾರಾಧ್ಯ ಚರಣ ಪ ಕಂದರ್ಪ ಕೋಟಿ ಮೋಹನ್ನ ಕಾಯಾ | ಕಂಸ ಚಾಣೂರ ಮರ್ದನಕಾಲಿಯ ವಿಷಕಲಿಲ ಸಲಿಲಯಾನಕಲಪ್ರಾಣ ಗೋಗೋಪ ಜೀವನಾ | ಈಯ್ಯಾ ಈಯ್ಯಾ || ಗೋಕುಲದಿ ಗೋಪಿಯರ ಮನೆಗಳಲಿ ಗೋರಸ ಚೌರ್ಯ ಸಂಪನ್ನಾ |ಮಧುರ ಮುರಲಿ ನಿನಾದದಿಂದ ಮೋಹಿಪ್ಪ ||ಮೌನಿಗಳ ಮಾನಸಗಳಲ್ಲಿ | ಸಸ ಸಾನಿಸಾನಿ ನಿಸನಿ |ನಿಸನಿ ಸಾಸನಿನಿ ಸರಿಗರಿ ಮಗಗರಿಸ ನಿಧನಿಧ ನಿಧಪಮ || ಧಿಕ್ಕತಾ ಧಿಕ್ಕತಾ ಧಿಮಿ ಧಿಮಿಕಿತಾ ಧಿಮಿಕಿತಾ ಗಿಕಿಟ ತೋಂ |ಗಿಕಿಟ ತೋಂ ಗಿದಿಗದಿಗ ಥೈಯಾ ಥೈಯಾ || ಪರಿ ನಂದನಂಗಳದಲ್ಲಿ ಕುಣಿಕುಣಿದಾಡುವ ಶ್ರೀವಿಠ್ಠಲನಪಾದಾಂಬುಜದ ಭಜನದಿಂದೆ ತರಿಸುವೆನೆಂದು ಪಾಡುವೆನುಗೀತ ಪ್ರಬಂಧ ಬರೆಹಗಾರ ರುಕ್ಮಾಂಗದನು ||
--------------
ರುಕ್ಮಾಂಗದರು
ಸಕಲ ಸದ್ಗುಣಪೂರ್ಣ ಶ್ರೀನಿವಾಸ ವಿಕಸಿತ ಕಮಲವದನ ಮಕರ ಕುಂಡಲಮಣಿ ಮಕುಟ ಕೌಸ್ತುಭಾ ಹಾರ ಅಖಿಳ ಜಗದಾಧಾರ ಅಂಬುಜಾಕ್ಷ ಸಿರಿ ನಲ್ಲ ನಿನ್ನ ಸಮಾನ ರಿಲ್ಲವೆಂಬುದ ಸರ್ವ ಶ್ರುತಿ ತತ್ವವ ಬಲ್ಲ ಬುಧರಿಂದರಿದು ಸೊಲ್ಲಸೊಲ್ಲಿಗೆ ತ್ರಿಜಗ ಪಾದ ಪಲ್ಲವವÀ ನಂಬಿದೆನು 1 ಚಕ್ರ ಶಂಖಾಬ್ಜಧರ ವಿಕ್ರಯ ವಿರಾಟರೂ- ಪಾ ಕ್ರಾಂತ ಸಕಲ ಭೂಚಕ್ರವನ್ನು ಶಕ್ರಗೊಲಿದಿತ್ತತಿಪರಾಕ್ರಮ ತ್ರಿವಿಕ್ರಮನೆ ಶುಕ್ರ ಶಿಷ್ಯನಿಗಧಿಕ ಶುಭವ ಪಾಲಿಸಿದಿ 2 ಜಯ ಜಯ ಜಗನ್ನಾಥ ಜಾನಕೀವರ ಸರ್ವ ಭಯ ನಿವಾರಣ ಭಕ್ತ ಕಲ್ಪತರುವೆ ಲಯದೂರ ಲಾವಣ್ಯ ಚಯಮಮಾಲಯದಲ್ಲಿ ದಯವಾಗು ಜ್ಞಾನ ಸುಖಮಯ ವೆಂಕಟೇಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಕಲಸುಖ ಸಂತೋಷ ಸುಲಭದಲ್ಯಾಹುದು ಭವಭವಯದ ನಾಶ 1 ಕರೆಸುವದಾನಂದ ಹರುಷ ಹರಿಸುವದು ಕಲಿಮಲಕಲುಷ ಪರಿಶೋಷಿಸುವದು ಮಹಾಪಾತಕ ದೋಷ 2 ಸ್ವಹಿತ ಸಾಧನದಸು ಉಪದೇಶ ಬಾಹ್ಯಂತ್ರ ದೋರುವ ಪ್ರಕಾಶ ಮಹಿಪತಿಗಿದೆ ನಿತ್ಯಾನುಭವದುಲ್ಲಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ 1 ರವಿಕೋಟಿ ತೇಜನೀತ ಸಂವಿತ ಸುಖ ಸಾಕ್ಷಾತ ಪವಿತ್ರ ಪ್ರಣವನೀತ ಹಂಸನಾಥ 2 ಯತಿ ಮುನಿವಂದಿತ ಪಿತಾಮಹನ ಪಿತ ಅತಿಶಯಾನಂದನೀತ ಹಂಸನಾಥ 3 ಸನ್ಮಾತ್ರ ಸದೋದಿತ ಉನ್ಮನ ವಿರಹಿತ ಚಿನ್ಮಯನಹುದೀತ ಹಂಸನಾಥ 4 ಅನುದಿನ ಸಾಕ್ಷಾತ ಘನಗುರು ಶ್ರೀಕಾಂತ ಹಂಸನಾಥ 5 ವಿಶ್ವ ವ್ಯಾಪಕನೀತ ವಿಶ್ವರೂಪ ನಿರ್ಮಿತ ವಿಶ್ವಾತ್ಮನಹುದೀತ ಹಂಸನಾಥ 6 ಇಡದು ತುಂಬಿಹನೀತ ಮೂಢಮಹಿಪತಿ ದಾತ ಒಡಿಯನಹುದೀತ ಹಂಸನಾಥ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಕಲಾರ್ಥಕಿದೆ ಸುಖ ಸಾಧಿಸಿನ್ನು ನೋಡಿ ಭಕುತಿ ಭಾವದಿಂದ ಸದ್ಗುರು ಸೇವೆಯ ಪೂರ್ಣಮಾಡಿ ಧ್ರುವ ಭಾವವಿಟ್ಟು ನೋಡಿ ಖೂನ ದೇವದೇವೇಶನ ಕಾವ ಕರುಣನೇ ತೋರುತಿಹ್ಯ ತಾ ನಿಧಾನ 1 ನೋಟ ನಿಜಮಾಡಿ ನೋಡಿ ನೀಟ ನಿಜ ಧ್ಯಾನ ಘಾಟ ತಿಳಿದವರಿಗಿದೆ ಗುರುಕೃಪೆಙÁ್ಞನ 2 ಸವಿದುಣ್ಣಬೇಕು ಇದೇ ಸವಿ ಸವಿಯಿಂದ ಆವಾಗ ಮಹಿಪತಿಗಿದೆ ನೋಡಿ ಬ್ರಹ್ಮಾನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು