ಒಟ್ಟು 9381 ಕಡೆಗಳಲ್ಲಿ , 133 ದಾಸರು , 5307 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟೇಶ ಶ್ರೀ ವೆಂಕಟೇಶ ಪಾಲಿಸುಕಿಂಕರನ ವೆಂಕಟೇಶ ಪ.ಸುವರ್ಣಮುಖರಿಲಿ ಶಿವನುತಪಾದಾಬ್ಜಸುವರ್ಣಗಿರಿ ವೆಂಕಟೇಶನವ್ಯಚಂದನ ಮೃಗನಾಭಿ ಚರ್ಚಿತಗಾತ್ರಅವ್ಯಾಕೃತನೆ ವೆಂಕಟೇಶ 1ಹಲವಪರಾಧಿ ನಾ ಭೂರಿದಯಾಳು ನೀನೆಲೆಗೆ ನಿಲ್ಲಿಸು ವೆಂಕಟೇಶಬಲು ತಮ ತುಂಬಿದ ಭವದಿ ಕರುಣಶಶಿಬೆಳಗು ಬೆಳಗು ವೆಂಕಟೇಶ 2ತಂದೆ ತಾಯಿ ನೀನೆಸಖಸಹೋದರ ನೀನೆಹಿಂದೆ ಮುಂದೆ ನೀ ವೆಂಕಟೇಶಹೊಂದಿದ ಬಂಟನ ಕಂದಾಯ ನಡೆಸಯ್ಯಕುಂದನಾಡದೆ ವೆಂಕಟೇಶ 3ಸಾಕು ನೀ ಸಾಕದಿದ್ದರೆ ಬಿಡು ನಾ ಬಿಡೆಜೋಕೆ ಬಿರುದು ವೆಂಕಟೇಶನೀ ಕೈಯ ಜರಿದರೆಕಾಕುಮಾಡುವರೆನ್ನಪೋಕವೃತ್ತರು ವೆಂಕಟೇಶ4ನಂಬಿದೆ ನಂಬಿದೆ ನಂಬಿದೆ ನಿನ್ನಪಾದದಿಂಬಿನೊಳಿಡು ವೆಂಕಟೇಶಬಿಂಬ ಮೂರುತಿ ಪ್ರಸನ್ವೆಂಕಟೇಶಪ್ರತಿಬಿಂಬಕ್ಕರುಹು ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ವೆಂಕಟೇಶನ ಮಹಿಮೆಯ ಹೊಗಳುವಕಿಂಕರಧನ್ಯನಯ್ಯಪ.ಇಳೆಯ ಭಕ್ತರ ನೋಡಿದ ವೈಕುಂಠದಿಂದಿಳಿದು ಶ್ರೀಸಹಿತ ಬಂದಸಲೆ ಸುವರ್ಣಮುಖರಿಯ ತೀರವಒಲಿದು ನಿಂತನು ತಿಮ್ಮ್ಮಯ್ಯ 1ಭೂವರಾಹ ಸ್ವಾಮಿಯ ಸನ್ನಿದಶ್ರೀವತ್ಸಲಾಂಛನಿಹಶ್ರೀವಿಮಾನಸಹಿತ ದೇವಾಧಿದೇವ ತಾನಿಲ್ಲಿ ನಿಂತ 2ಸ್ವಾಮಿ ಪುಷ್ಕರಿಣಿಯೆಂಬ ತೀರ್ಥದನಾಮದ ಮಹಿಮೇನೆಂಬೆಆ ಮಹಾ ದುಷ್ಕøತವು ಸ್ನಾನದನೇಮದಲ್ಲೋಡುವುದು 3ರಾಜಾಧಿರಾಜನಿತ್ಯಉಪಚಾರಪೂಜೆ ಲೋಕಾರ್ಥದೊಳು ತಾಮೂಜಗಕಾನಂದವವರಕರುಣಾಜಲಧಿ ಕೊಡುವ 4ನಿತ್ಯಸ್ವಾರಿಗೈದುವಸುರಋಷಿಮೊತ್ತದಿ ಚರಿಪದೇವಮತ್ತೆ ಆ ಲಕ್ಷ್ಮಿಯ ಕೂಡ ಮುನಿವದೊಂದರ್ತಿಯ ಬುಧರು ನೋಡಿ 5ನುಡಿವ ಸಾವಿರ ಪೇರ್ಗಂಟೆ ಉಬ್ಬುಬ್ಬಿಹೊಡೆವರ್ಯೊಡೆ ಜಾಗಟೆಬಡಿವ ಕರಡೆ ಭೇರಿಯು ಮುಂದೆ ಉಗ್ಗಡಿಪ ಸಾಮಗಾನವು 6ಚಿತ್ರವರ್ಣದ ಸತ್ತಿಗೆ ಸಾಲ್ಗಳುಸುತ್ತಲು ಕೈ ದೀವಿಗೆಉತ್ತಮ ವಾಹನವೇರಿ ವಿಶ್ವದಕರ್ತಬಂದನು ಉದಾರಿ7ಉದಯ ತೋಮಾಲೆ ಸೇವೆ ಪುಳುಕಾಪುಮೊದಲಾದ ದಿವ್ಯಸೇವೆಒದಗಿದವಸರಂಗಳು ನೈವೇದ್ಯಮೃದುಭಕ್ಷ್ಯವರಪೊಂಗಲು8ಅತಿರಸ ಮನೋಹರವುದಧ್ಯನ್ನಅತಿರುಚಿ ಅನ್ನವಾಲವುಕ್ಷಿತಿಯ ಮೇಲಿಹ ಭಕ್ತರು ಶ್ರೀಲಕ್ಷ್ಮೀಪತಿಗೆ ಅರ್ಪಿಸುತಿಹರು 9ಹೂವಿನಂಗಿಯ ತೊಡುವಮೃಗಮದಲಾವಣ್ಯ ತಿಲಕಿಡುವಕಾವನಂತರ ತೇಜವ ಗೆಲ್ಲುವಸಾವಿರ ಹೆಸರ ದೇವ 10ತಪ್ಪದೆ ನುಡಿವಂದನು ಮುಡಿಪಿನಕಪ್ಪವೆಣಿಸಿ ಕೊಂಬನುಚಪ್ಪನ್ನ ದೇಶಸ್ತರು ಬಂದು ಸಮರ್ಪಣೆ ಮಾಡುವರು 11ಕೊಟ್ಟ ವಾಕ್ಯಕೆ ತಪ್ಪನು ವರಭಯವಿಟ್ಟು ಸಾಕುತಲಿಪ್ಪನುಇಷ್ಟಾರ್ಥದಾತನಯ್ಯ ವಿಶ್ವದಶಿಷ್ಟರೊಡೆಯ ತಿಮ್ಮಯ್ಯ 12ಕಿರೀಟ ಕುಂಡಲವಿಟ್ಟನು ತಿಮ್ಮಯ್ಯಕರುಣ ನೋಟದ ಚೆಲ್ವನುಅರಿಶಂಖವನು ಧರಿಸಿದ ಹಾರಕೇಯೂರ ಕೌಸ್ತುಭದಲೊಪ್ಪಿದ 13ತೋಳಬಂದಿಯು ಕಂಕಣಮುದ್ರಿಕೆಕೀಲುಕಡಗಒಡ್ಯಾಣನೀಲಮಾಣಿಕ ಪಚ್ಚದ ಮುತ್ತಿನಮಾಲೆಗಳಿಂದೊಪ್ಪಿದ 14ಮಣಿಮಯ ಕವಚ ತೊಟ್ಟ ಗಳದಲಿಮಿನುಗುವಾಭರಣವಿಟ್ಟಕನಕಪೀತಾಂಬರವು ಕಟಿಯಲ್ಲಿಅಣುಗಂಟೆಗಳೆಸೆದವು 15ರನ್ನದಂದುಗೆಯನಿಟ್ಟಿಹ ಪಾದಕೆಪೊನ್ನಹಾವುಗೆಮೆಟ್ಟಿಹಘನ್ನ ದೈತ್ಯರ ಸೋಲಿಪ ಬಿರುದಿನಉನ್ನತ ತೊಡರಿನಪ್ಪ 16ದಿನಕೆ ಸಾವಿರ ಪವಾಡ ತೋರುವಜನಕೆ ಪ್ರತ್ಯಕ್ಷ ನೋಡಘನಶಾಮ ತಿರುವೆಂಗಳ ಮೂರ್ತಿಯಮನದಣಿಯೆ ಹೊಗಳಿರೆಲ್ಲ 17ಭೂವೈಕುಂಠವಿದೆಂದು ಸಾರಿದಭಾವಿಕ ಭಕ್ತ ಬಂಧುಶ್ರೀ ವಾಯುಜಾತ ವಂದ್ಯ ಶ್ರೀನಿವಾಸಗೋವಿಂದ ನಿತ್ಯಾನಂದ 18ಸೇವಕಜನರಪ್ರಿಯಅರುಣರಾಜೀವಲೋಚನ ತಿಮ್ಮಯ್ಯದೇವಶಿಖಾಮಣಿಯು ಬ್ರಹ್ಮಾದಿದೇವರಿಗೆ ದೊರೆಯು 19ಕಶ್ಚಿಜ್ಜೀವನೆನ್ನದೆ ನನ್ನನುನಿಶ್ಚಯದಲಿ ಹೊರೆವನುಆಶ್ಚರ್ಯಚರಿತ ನೋಡಿ ಶರಣರವತ್ಸಲನ ಕೊಂಡಾಡಿ 20ಆರಾಶ್ರಯಿಲ್ಲೆನಗೆ ದ್ರಾವಿಡವೀರನೆ ಗತಿಯೆನಗೆಭೂರಿಪ್ರಸನ್ವೆಂಕಟಪತಿ ಸುಖತೀರಥವರದ ನಮೊ 21
--------------
ಪ್ರಸನ್ನವೆಂಕಟದಾಸರು
ವೇಗದಿ ಪಿಡಿ ಎನ್ನ ಕೈಯ್ಯಾ ಪಆಗಾಮಿಸಂಚಿತಭೊಗಗಳುಳ್ಳಭವ-ಸಾಗರದಲ್ಲಿ ಬಿದ್ದೆ ವೇಗದಿ ನೀ ಬಂದು ಅ.ಪಭಾವದ್ರವ್ಯ ಕ್ರಿಯಾದ್ವೈತ ಇದರನು-ದೇವರೆಂದನುದಿನ ಭಾವಿಸಿದೆನ್ನನು 1ಅಶನವಸನಕಾಗಿ ನಾಪರಅಸಮ ನಿನ್ನಯಪಾದಬಿಸಜಭಜಿಸದೆವಸುಮತಿಯೊಳು ಬಲು ಹಸನಗೆಟ್ಟೆನ್ನನು 2ಸರಿಯನೀಸೀಪರಿ ಧೆರೆಯೊಳು ಪಾಲಿಸು 3
--------------
ಗುರುಜಗನ್ನಾಥದಾಸರು
ವೇಣುಗೋಪಾಲವಿಠಲದಾತಮಹಾಪ್ರಭುವೆಸಾಧು ಜೀವರ ಸೃಜಿಸಿದುದಕೆ ಫಲವೇನಿಲ್ಲ ಬಾಧೆ ತಂದಿತ್ತ ಬಳಿಕಚಿಂತ್ರಣಿಯ ವೃಕ್ಷ ವಿಷಾದಕಾರಣ ಎಲ್ಲಿ ಚಿಂತಿಪರು ಸಂತರುಗಳುಬಿತ್ತಿ ಬೀಜವ ಬೆಳೆಸಿ ಕೊಯ್ಯಕುಳಿತವಗೆ ಮಾರುತ್ತರವು ಭಿರಿಯಲ (?)ಆವ ಜನುಮದಲಿಂದ ಸಾವವೊ ಅರಿಯೆ ನೋವು ಮೊಳಕಿನ್ನು ಬಹಳಪ್ರಾರ್ಥಿಸಿದೆ ನಿನ್ನ ಭಕುತನ ಅರ್ತಿಯನ್ನು ಮನದಲಿ ಸ್ಫೂರ್ತಿ ಆರದರಿಂದಲಿ
--------------
ಗೋಪಾಲದಾಸರು
ವೈರಾಗ್ಯದಾವಾಗ್ನಿ ಉರಿಯು ಛಟಿಛಟಿಸಿತುಸರ್ವಪ್ರಪಂಚವೆಲ್ಲವ ಅಟ್ಟಟ್ಟಿ ಸುಟ್ಟಿತುಪಸತಿಸುತರು ಎಂಬ ಹೆಮ್ಮರವೀಗ ಸುಟ್ಟವುಪಿತೃ ಮಾತೃವೆಂಬ ಪಲ್ಲವ ಕರಿಕಿಟ್ಟಿತುಹಿತವೆಂಬ ಬಳ್ಳಿಗಳು ಅನಿಲ ಪುಟ್ಟವಿಟ್ಟವುಅತಿಭಾಗ್ಯವೆಂದೆಂಬ ಸಿಂಗಾರ ಹೊಗೆಯಿಟ್ಟವು1ಏಸೋ ಬಂಧುಗಳೆಂಬ ಧ್ರುಮವು ಶಿಖಿಸೋಂಕಿದವುಕ್ಲೇಶವೆಂದೆಂಬ ಕರಡವು ಭುಗಿ ಭುಗಿ ಲೆಂದವುವಾಸಗಳೆಂದೆಂಬಕುಡಿಕಿಡಿಯಾಗಿ ಉದುರಿದವುಆಸೆ ಎಂಬ ಫಲ ವಹ್ನಿಗಾಹಾರವಾದವು2ಘನಭ್ರಾಂತಿ ಎಂಬ ಪಕ್ಷಿಗಳು ಹಾರಿಹೋದವುಮನೆಯೆಂಬ ಗೂಡುಗಳು ನಿಗಿನಿಗಿಯಾದವುಬಿನುಗುಚಿಂತೆ ಎಂಬ ಹರಿಣ ಮುಗ್ಗರಿಸಿದವುಮನಸಿಜನ ಕ್ರೋಧವೆಂಬ ಕಳ್ಳರು ಸತ್ತಿಹರು3ಅಷ್ಟಮದದಾನೆ ಎಂಬುವು ಅಡವಿಯ ಹಿಡಿದವುತುಚ್ಛವಿಷಯಗಳೆಂಬ ನರಿಗಳೋಡಿದವುದುಷ್ಟಗುಣವೆಂದೆಂಬ ದುರ್ಜನ ಮೃಗವು ಚಲ್ಲಿದವುಕಷ್ಟ ತಾಪತ್ರಯದ ಕತ್ತಲು ಹರಿಯಿತು4ಇಂತು ಪ್ರಪಂಚವೆಂಬೀ ವೈರಾಗ್ಯದಾವಾಗ್ನಿಯಂತೆ ಧಗಧಗನೆ ಝಗಝಗನೆ ಸುಡುತಲಿಚಿಂತಯಕ ಚಿದಾನಂದ ಉರಿಯು ಅಖಂಡವಾಗಿಶಾಂತರೆಂಬರ ಮುಕ್ತರುಗಳ ಮಾಡಿತ್ತು5
--------------
ಚಿದಾನಂದ ಅವಧೂತರು
ವ್ಯರ್ಥ ಕೆಟ್ಟೆಯೋ ಸಂಸಾರವನು ನಂಬಿಕಾಣೆನೋ ಜನರನು ಯಡ್ಡೆಸಾರ್ಥಕವಾಗುವಮಾರ್ಗಕಾಣಲಿಲ್ಲನರಜನ್ಮಕೆ ಬಂದು ಗೊಡ್ಡೆಪಹಿರಿಯರನಂಜಿಯೋ ಹೆಂಡತಿ ಕಿವಿಯೊಳುಲೊಟಕೆಯ ಹಾಕುವ ಮಂದಿದುರುಳಯಮದೂತರು ತಾವೀಗ ಬಂದರೆಹಾಕುವವರು ನಿನಗೆ ಭಂಗಿ1ದಾನಕೆ ಇಲ್ಲವು ಧರ್ಮಕೆ ಇಲ್ಲವುಹೆಂಡತಿಯಾದರೆ ಬಡವಿಏನು ಎಂಬೆಯೋ ಯಮದೂತರವರಿಗೆಹೇಳಲೋ ನೀನೀಗ ಬಡವಿ2ಹೆಂಡತಿ ಮರುಕಕೆ ಬಗ್ಗಿ ಬಗ್ಗಿಯೇ ನೋಡ್ವೆಮೋರೆಯ ಬಣ್ಣಕೆ ಮೆಚ್ಚಿಭಂಟರು ಯಮದೂರತು ಬರಲು ಏನಹೇಳುವೆಯಲೆ ಹುಚ್ಚಿ3ಹೆಂಡತಿ ಮಕ್ಕಳು ಬುದ್ಧಿಯ ಹೇಳುವರುವಳ್ಳಿತಾಗಿ ನೀನೀಗ ಕೇಳೋಕೆಂಡವನುಗುಳುತ ಯಮದೂತರೊಯಿದರೆಬಿಡಿಸಿಕೊಳ್ಳಹೇಳೋ4ಹೆಂಡಿರು ಮಕ್ಕಳು ಹಿತರೆಂದು ನಂಬಲುಕೆಡುವೆ ನೀನೀಗ ಕಂಡ್ಯಾಚೆನ್ನ ಚಿದಾನಂದ ಸದ್ಗುರುವನು ನಂಬುಕಡೆಹಾಯಿದು ಹೋಗುವಿ ಕಂಡ್ಯಾ5
--------------
ಚಿದಾನಂದ ಅವಧೂತರು
ವ್ಯಾಪಾರವೆನಗಾಯಿತುಶ್ರೀಪತಿಯ ಪಾದಾರವಿಂದ ಸೇವೆಯೆಂಬ ಪಹರಿಕರುಣವೆಂಬಂಗಿಗುರುಕರುಣಮುಂಡಾಸುಹರಿದಾಸರ ದಯವೆಂಬ ಒಲ್ಲಿ ||ಪರಮಪಾಪಗಳೆಂಬ ಪಾಪೋಸವನೆ ಮೆಟ್ಟಿದುರುಳಾತ್ಮರಾದವರ ಎದೆ ಮೇಲೆ ನಡೆವಂಥ 1ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿನಾಲಗೆಯೆಂಬ ಲೆಕ್ಕಣಿಕೆ ||ಶ್ರೀಲೋಲನ ದಿವ್ಯನಾಮವೆಂಬುವ ಲೆಕ್ಕಶೀಲದಿ ಬರೆದು ಶ್ರೀಹರಿಗೆ ಒಪ್ಪಿಸುವಂಥ 2ನುಡಿನುಡಿಗಾನಂದ ಬಾಷ್ಪ ರೋಮಾಂಚನಮುಡುಪಿನೊಳಗೆ ಇಟ್ಟ ಕೈಜೀತವು ||ಕಡಿಮೆ ಸಂಬಳಕೆಲ್ಲ ಮುಕ್ತಿಸಾಧನವನ್ನುಕೊಡುವ ತೆರನಂತೆ ಚೀಟಿ ಬರೆಸಿಕೊಟ್ಟ 3ಹಿಂದಿನ ಸಂಸಾರ ಆಗಮನದ ಭಯಎಂದೆಂದಿಗದರ ಚಿಂತೆಯು ಬಿಟ್ಟಿತು ||ಮುಂದಿನ ಸಂಸಾರ ಸ್ಥಾನ ಭಾರಕೆಲ್ಲಸಂದಾಯವನು ಮಾಡಿ ಕತಬಿ ಹರಿಸಿಕೊಟ್ಟ 4ಕಂಡಕಂಡವರ ಕಾಲುಗಳಿಗೆರಗಿ ನನ್ನಮಂಡೆದಡ್ಡುಗಟ್ಟಿ ಬಳಲಿದೆನೊ ||ಪುಂಡರೀಕಾಕ್ಷಶ್ರೀಪುರಂದರವಿಠಲನುಕಂಡು ವೀಳೆಯ ಕೊಟ್ಟು ತನ್ನ ಸೇವೆಗೆ ಇಟ್ಟ 5
--------------
ಪುರಂದರದಾಸರು
ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ ಪವಿಶೇಷ ಙ್ಞÕನ ಭಕ್ತಿ ಲೇಸಾಗಿ ಸಲಿಸಯ್ಯಾ ಅ.ಪದಾಸನಾಮಕದ್ವಿಜದೇಶಮುಖನ ಮನಿ-ಕೂಸಾಗಿ ಜನಿಸಿದೆ ಭೂಸ್ಪರ್ಶವಿಲ್ಲದೆ 1ಶ್ರೀಪಾದರಾಯರು ಈಪರಿನಿನ್ನನುಕಾಪಾಡಿ ನವವರ್ಷ ಭೂಪತಿ ಮಾಡಿದರೋ 2ವಸುದೇವ ಸುತನನ್ನು ಸುಸಮಾಧಿಯಲಿ ಪಡೆದೆ 3ಕಲೆಯಂತೆ ದಿನದಿನದಲಿ ವೃದ್ಧನಾದೆ ನೀ 4ಚಂಪಕತರುಮುಖ್ಯ ಕಂಪಿತ ನದಿಯುತಪಂಪಾಕ್ಷೇತ್ರದಿ ಮಹಾ ಸಂಪತ್ತಿನಿಂದಿದ್ದೆ 5ತರ್ಕಿಸಿ ಯಂತ್ರಸ್ಥ ಚಕ್ರದಿ ಬಂಧಿಸಿದೆ 6ಮಧ್ವರಾಯರ ತಂದು ಸಿದ್ಧಮಾಡಿ ಇಟ್ಟೆ 7ಮಂದಜನಕೆÀ ಸುಧಾ ಛಂದಾಗಿ ಇದರರ್ಥಪೊಂದದೆಂದು ನೀನು ಚಂದ್ರಿಕೆ ರಚಿಸಿದೆ 8ಇನಿತೆ ಮಹಾಮಹಿಮೆ ಘನವಾಗಿ ಜನರಿUಅನುಭವ ಮಾಡಿಸಿದೆ ಅನುಪಮ ಚರಿತನೆ 9ಶುಭಮಯ ಸ್ಥಳದಲ್ಲಿ ಅಭಯನಾಗಿ ನಿಂತೆ ನೀ 10ಛಂದದ ನವಶುಭವೃಂದಾವನದೊಳಿದ್ದೆ 11ಇಂದುನಿಮ್ಮಯಪಾದಪೊಂದಿ ಎನ್ನಯವೃಜಿನ-ವೃಂದ ಪೋದವು ಅರ್ಕನಿಂದ ತಿಮಿರದಂತೆ 12ವಂದಿಸಿ ಬೇಡುವೆ ನಂದದಿ ಸಲಹಯ್ಯ 13ಇಂದುರಕ್ಷಕರಿಲ್ಲವೆಂದು ನಿನ್ನನು ಸಾರ್ದೆ14ಯಿಂದ ಕರೆದು ಕಾಯೋ ನಂದಾದಾಯಕ ನೀನೆ 15ದೃಷ್ಟಿ ಪಾಲಿಸೊ ಸರ್ವೋತ್ಕøಷ್ಟ ಮಹಿಮ ನೀನೆ 16ಮಾತು ಲಾಲಿಸೊ ನಿಜತಾತ ನೀನೆ ಸೀತಾ -ನಾಥ ಗುರುಜಗನ್ನಾಥವಿಠಲನಾಣೆ 17
--------------
ಗುರುಜಗನ್ನಾಥದಾಸರು
ವ್ಯಾಸೋಕ್ತಿಯನುಸರಿಸಿ ಹತ್ತು ಅವತಾರವನುಶ್ರೀಶ ಮಾಡಿದ ದಿನದ ಕ್ಲಪ್ತಿಯಂ ಬರೆವೆ ಸಂ- |ತೋಷದಿಂ ಕೇಳ್ಪುದೆಲ್ಲರು ಪೊರೆವ ಹರಿಯು ಅಭಿ-ಲಾಷೆ ಪೂರೈಸಿ ಬಿಡದೇ ಪಕೃತಯುಗಪ್ರಭವಮಧು ಶುದ್ಧ ಪ್ರತಿಪದಜಲಧಿಸುತವಾರ ರೇವತೀ ವಿಷ್ಕಂಭ ಹಗಲು ಸಂ-ಯುತ ಹನ್ನೆರಡು ಘಳಿಗೆಗವತರಿಸಿಶ್ರೀ ಮತ್ಸ್ಯ ಹತಮಾಡಿ ತಮನೆಂಬನಾ ||ಚತುರಾಸ್ಯವೈವಸ್ವತರಿಗೊಲಿದು ಮೆರೆದ ನೀಕ್ಷಿತಿಯೊಳಗೆ ಮತ್ತಾಯುಗದಿಕೂರ್ಮರೂಪದಿಂಚ್ಯುತರಹಿತನವತಾರ ಮಾಡಿ ಮಾಡಿದ ಕಾರ್ಯ ಮತಿವಂತರಿಗೆ ಪೇಳೂವೆ 1ವಿಭವಾಬ್ದ ಜ್ಯೇಷ್ಠ ಶುಕ್ಲದ್ವಿತೀಯಬುಧವಾರಶುಭದ ರೋಹಿಣಿ ಋಕ್ಷ ಧೃತಿ ಯೋಗ ದಿವದಲ್ಲಿತ್ರಿಭುವನೇಶ್ವರ ನಾಲ್ಕು ಘಳಿಗೆಗುದಿಸಿಯಮೃತಕೃತುಭುಜರಿಗುಣಿಸಿ ಕರುಣದಿಂ ||ಅಭಯವಿತ್ತನ್ಯರನು ದಣಿಸಿ ಧರಿಸಿದನು ಜಲ-ಜಭವಾಂಡ ಮಂದರಾದ್ರಿಯ ಬೆನ್ನಮ್ಯಾಲಿಂದಸುಭುಜಾಹ್ವಯನ ಚರಿತೆ ಸ್ಮರಿಸೆ ಕ್ಲೇಶಹ ಮತ್ತೆ ನಭಗವಹನಾ ಯುಗದಲಿ 2ಶುಕ್ಲ ಸಂವತ್ಸರದಶುಭಮಾಘ ಮಾಸದಲಿಶುಕ್ಲ ಪಕ್ಷದ ಸಪ್ತಮೀ ಭಾನುವಾರದಲಿಅಕ್ಲೇಶಪ್ರದ ಅಶ್ವಿನೀ ಸಾಧ್ಯಯೋಗದಲಿ ಶುಕ್ಲಶೋಣಿತ ವಿದೂರ ||ಶುಕ್ಲಾಂಬರಧರ ಕಿಟಿರೂಪದಿಂದವತರಿಸಿಹಕ್ಲಾಸುರ ಹಿರಣ್ಯಶನ ತರಿದುತ್ವರತನ್ನಒಕ್ಲಾದವರ ಪೊರೆದ ಹಗಲೆಂಟು ಘಳಿಗೆಯೊಳು ಶುಕ್ಲಾಂಗಆ ಯುಗದಲಿ 3ಆಂಗಿರಸವೆಂಬ ಸಂವತ್ಸರದ ವೈಶಾಖತಿಂಗಳದಿಸಿತಪಕ್ಷಚತುರ್ದಶೀ ಶನಿವಾರತುಂಗಸ್ವಾತಿಪರಿಘದಿವಾಷ್ಟ ವಿಂಶತಿ ಘಳಿಗೆಗಾಂಗೇಯಗರ್ಭನೊರವು ||ಸಂಘಟನೆವಾಗಲಾ ಸಮಯದೊಳು ಸ್ತಂಭದಿಂಸಂಗರಹಿತಹರಿಘುಡಿಘುಡಿಸುತಲಿ ಉದಿಸಿನರಸಿಂಗಾಹ್ವಯದಿಹೇಮಕಶ್ಯಪನ ತರಿದು ತರಳಂಗೆ ಸನ್ಮುದವಿತ್ತನೂ4ತ್ರೇತಾಯುಗದಲದಿತಿ ದೇವಿ ಭಕುತಿಗೆ ಮೆಚ್ಚಿಧಾತಾಬ್ದ ಭಾದ್ರಪದಸಿತಪಕ್ಷದ್ವಾದಶೀಖ್ಯಾತಿ ವಿಷ್ಣುಭ ಶುಕ್ರ ಧೃತಿ ಹತ್ತೈದು ಘಟಗೆಪೋತಭಾವದಿ ದಿವವಲಿ ||ತಾಂ ತಾಳಿ ಅವತಾರವಂ ತ್ರಿವಿಕ್ರಮನಾಗಿಭೂತಲಾಗಸವಳೆದು ವೈರೋಚಿನಿಯ ತುಳಿದುಪ್ರೀತಿಪಡಿಸುತ ಶಕ್ರನಂ ಸ್ವರ್ನದಿಯ ಪಡೆದ ಈತಗೆಣೆಯಾರೊ ಜಗದಿ 5ಅದೆ ಯುಗದಲಿ ಪ್ರಮಾಥಿಯೆಂಬ ಸಂವತ್ಸ-ರದಲಿ ವೈಶಾಖ ಶುದ್ಧ ತೃತೀಯೆ ಸುಕರ್ಮ ಯೋ-ಗದಲಿ ರೋಹಿಣಿಮಂದಹನ್ನೊಂದು ಘಟರಾತ್ರಿಯೊದಗುತಿರೆಭೂಪತಿಗಳಾ ||ವಧೆಗೆ ವಿಪ್ರರ ವೃಂದವನು ಪೋಷಣೆಯ ಮಾಡು-ವದಕೆ, ಜಮದಗ್ನಿಯಿಂದವತರಿಸಿ ರಾಮ ನಾ-ಮದಲಿ ಪರಶುವ ಧರಿಸಿ ಈ ಧಾತ್ರಿಯೊಳು ಬಹು ಮೆರೆದಮತ್ತು ಆ ಯುಗದಲಿ 6ತಾರಣೆಂಬಬ್ಧ ಮಧುಮಾಸ ಶುಕ್ಲ ನವಮಿಯಆರನೇ ತಾಸು ದಿವದಲಿ ಪುನರ್ವಸು ಚಂದ್ರವಾರ ಶೂಲೆಂಬ ಯೋಗದಲಿ ದಶರಥನೃಪತಿಹಾರೈಸಿದುದಕೆ ಒಲಿದು ||ಶ್ರೀರಾಮನಾಮದಿಂದವತರಿಸಿ ದೈತ್ಯ ಪರಿವಾ-ರ ರಾವಣನ ಸಂಹರಿಸಿ ವಿಭೀಷಣಗೊಲಿದುವಾರಿಜೋದ್ಭವಮುಖ ದಿವೌಕಸರಿಗಾನಂದ ತೋರಿಸಿದ ಸೀತಾಪತಿ 7ಮೂರನೇ ಯುಗ ವಿರೋಧೀ ಶ್ರಾವಣವದಿ ಅ-ರ್ಧರಾತ್ರಿಯೊಳಷ್ಟಮೀ ರೋಹಿಣೀವಜ್ರಬುಧವಾರದಲಿ ಅಜನ ಬಿನ್ನಹಕೊಪ್ಪಿ ಕೃಷ್ಣಾವತಾರವನು ತಾಳಿ ಧರೆಗೆ ||ಭಾರವಾಗಿದ್ದ ಕಂಸಾದಿ ಖಲವೃಂದ ಸಂ-ಹಾರಮಂ ಗೈದು ಪಾಂಡವರ ಪೋಷಿಸಿವಿಪ್ರಗೋ ರಕ್ಷಣೆಯ ಮಾಡಿ ಧರ್ಮವಂ ಸ್ಥಾಪಿಸಿದ ಶ್ರೀರಮಣ ಮಧ್ವಸದನ 8ಕಲಿಖರಾಬ್ಧಾಷಾಢ ಶುದ್ಧ ದಶಮಿ ವಿಶಾಖನಳಿನಸಖವಾರ ಶುಕ್ಲಾಹ ಯೋಗ ದಿವಾಷ್ಟಘಳಿಗೆಯೊಳು ಜನನೆಂಬ ದೈತ್ಯನಲ್ಲವತರಿಸಿ ಬಲುದುರ್ಮತಿಯ ಪ್ರೇರಿಸಿ ||ಕಳೆಗೆಡಿಸಿ ಬುದ್ಧಾವತಾರವೆಂದೆನಿಸಿ ಶಿವ-ಗೊಲಿದು ತ್ರಿಪುರವ ಕೆಡಿಸಿ ಸಜ್ಜನರ ಸಂಶಯವಕಳದು, ಕರುಣಾಂಬುಧಿಯ ಮಹಿಮೆಯಂತಿಳಿಯಲಸದಳಮಾವಿಧಿಗೆ ಎಂದಿಗೂ 9ದನುಜಪತಿ ಯುಗ ದುರ್ಮುಖಾ ಮಾರ್ಗಶಿರ ಶುದ್ಧಶನಿವಾರ ದ್ವಿತೀಯೆ ಪೂರ್ವಾಷಾಢ ವೃದ್ಧಿ ಮೂ-ರನೆ ಘಳಿಗೆ ದಿವದ ಕಲ್ಕ್ಯವತಾರದಿಂಮ್ಲೇಂಛರನು ಸದೆದು ಭೂ ದಿವಿಜರಾ ||ಘನಮೋದ ಪಡಿಸಿ ವಾಜಿಯನೇರಿ ಮೆರೆದಾಡಿಅನಿಮಿಷರ ಕೈಯ್ಯ ಪೂ ಮಳೆಯಂಗರಿಸಿಕೊಂ-ಡನಘ ಬಲ್ಲವರಿಗಲ್ಲಲ್ಲೆ ಇರುತಿಹನುಪ್ರಣತಜನಕಾಮಧೇನೂ 10ಈ ಪರಿಯಲಚ್ಯುತನ ಅವತಾರ ಚರಿತೆ ಸಂ-ಕ್ಷೇಪದಿಂ ವಿರಚಿಸಿದೆ ಸದ್ಭಕ್ತಿಯಿಂದಿದನುಪಾಪಿಗಳಿಘೇಳದಲೆ ಕಾಲತ್ರಯದಿ ಪಠಸೆ ತಾಪತ್ರಗಳ ಕಳೆದು ||ಈ ಪೊಡವಿಯೊಳಗೆ ಬಹುಮಾನ ಮಾಡಿಸಿ, ತಂದೆ-ಯೋಪಾದಿ ಕ್ಷಣ ಬಿಡದೆ ಸಲಹಿ ಪ್ರಾಂತಕೆ ತನ್ನಆ ಪರಂಧಾಮ ವೈದಿಸುವನತಿ ಕರುಣಾಳು ಶ್ರೀಪ ಪ್ರಾಣೇಶ ವಿಠಲಾ 11
--------------
ಪ್ರಾಣೇಶದಾಸರು
ಶಂಕರ ಶಂಭು ಮಹೇಶ ದಿಗಂಬರ |ಕಿಂಕರನುತಿಪಾತ್ರಾ || ಸತ್ಪಾತ್ರಾ ||ಶಂಕರ ಅಂಬಾ ಮನೋಹರ ಶುಭಕರವೆಂಕಟಪತಿಮಿತ್ರಾ | ವಿಚಿತ್ರಾ 1ನಿತ್ಯಾನಂದ ನಿರಾಮಯ ನಿರುಪಮ |ಮೃತ್ಯುಂಜಯಮೂರ್ತಿ|| ಸುಮೂರ್ತಿ ||ನಿತ್ಯತೃಪ್ತ ನಿರಾಶ್ರಯ ನಿರ್ಮಲ |ಸತ್ಯಂ ಜಯಕೀರ್ತಿ | ಸುಕೀರ್ತಿ 2ಹಿಮಕರ ಶೈಲ ನಿವಾಸ ಸುರಾಸುರ |ನಮಿತ ಶೋಕಹಾರೀ ||ಉದಾರಿ||ಪ್ರಮಥಾಧಿಪ ಪರಮೇಶಪರಾತ್ಪರ|ಡಮರು ಬಾಲಧಾರಿ | ಪುರಾರಿ 3ಚಂದಿರಧರ ಅಘವೃಂದ ವಿನಾಶನ |ವಂದಿಸುವೆನು ದೇವಾ || ಮಹದೇವಾ ||ಮಂದರಧರಗೋವಿಂದನ ದಾಸಗೆ |ಚಂದದಿ ವರವೀವಾ | ಸಂಜೀವಾ 4
--------------
ಗೋವಿಂದದಾಸ
ಶಂಬರಾರಿಯತಾತಸಲಹೊ ಶ್ರೀನಾಥಶಂಭು ವಿರಂಚೇಶ ಶ್ರೀ ವೆಂಕಟೇಶ ಪ.ದಶರಥಸಂಜಾತ ದಶಶಿರಹರ್ತವಸುಧೆತಸ್ಕರಛೇತ ವಸುಮತಿಪ್ರೀತಬಿಸಜಾಕ್ಷಿಯಾಪತ್ತ ಬಂಧು ಸಮರ್ಥಪಶುಪಾರಿವೃತಶಕ್ತಿಪರಿಹಾರಕರ್ತ1ಪಾರಿಜಾತಕೆ ವಜ್ರಿ ಪರಾಭವಕಾರಿಕ್ರೂರ ಖಳವೈರಿಕುಲದಸಂಹಾರಿಚಾರುಮಹಿಮಶೌರಿಚಿರಾನಂದೋದಾರಿಸಾರಭೃತ್ಯುಪಕಾರಿ ಸುಕಳಜಗಧಾರಿ 2ಸ್ವಾಮಿ ಪುಷ್ಕರವಾಸ ಶ್ರೀ ಶ್ರೀನಿವಾಸಸೋಮಾರ್ಕಸಂಕಾಶ ಸುರಜನಕೋಶಭೂಮಿಭಾರವಿನಾಶ ಬುಧಪರಿತೋಷಪ್ರೇಮಪೂರಿತಹಾಸ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ಶರಣು ಆತ್ಮಕ ಸರ್ವತೋಮುಖ ಶರಣು ಸರ್ವಲೀಲಾತ್ಮಕಶರಣುಗುರುಚಿದಾನಂದ ವಿಗ್ರಹ ಶರಣು ಸುರಮುನಿ ಪಾಲಕಪರೂಪು ಹರ ನಿರ್ಲೇಪಘನಚಿದ್ರೂಪರೂಪವಿರೂಪಕತಾಪನಾಶಕ ಪೋಷ ಭಕ್ತಕೃತಪರಾಧಿ ಪವಿತ್ರಕದೀಪ ಹೃದಯ ಸಭಾಸ ಉನ್ಮನ ದೀಪ್ಯಮಾನ ಮಹಾತ್ಮಕಭೂಪ ಸುರಮುನಿ ಸಿದ್ಧರಕ್ಷಕ ಭುವನದಧಿಪತಿ ರಕ್ಷಕ1ಪ್ರಣವಪುರುಷ ಪರೇಶಪಾವನ ಪ್ರಣತಸುಜನಪರಾವರ ಮರಣರಹಿತ ನಿಜ ನಿಶ್ಚಲಾತ್ಮಕ ಗುಪ್ತ ಮೂರುತಿ ಗುರುವರಎಣಿಸಬಾರದನಂತ ಲೋಕಕೆ ಏಕನಾಥದಿವಾಕರಅಣಿಮ ಮಹಿಮಾಷ್ಟಾಂಗ ಯೋಗಗಳಳವಿಗೊಡದ ಪ್ರಭಾಕರ2ಎರಡು ಮೂರಾರೆಂಬವೆಲ್ಲವ ಎಣಿಸೆ ಏಳೈದೆಂಬವಪರಿವಿಡಿಯ ನಾಲ್ಕೆಂಟು ನವದಶ ಪರಿಪರಿಯ ವಿಕಾರವಹರಿಹರ ಬ್ರಹ್ಮಮರೇಂದ್ರರು ಹರಿವರಿಯದ ಸ್ವಭಾವವಬೆರಸದಿಹ ಚಿದಾನಂದ ಮೂರ್ತಿಯ ಭೇದವಿರಹಿತ ಚಿತ್ಪ್ರಭಾ3
--------------
ಚಿದಾನಂದ ಅವಧೂತರು
ಶರಣು ನಿತ್ಯಾನಂದ ಸದ್ಗುಣ ಸಾಂದ್ರ, ನಿನ್ನ |ಚರಣಕಮಲಂಗಳಿಗೆ ಶ್ರೀ ವರದೇಂದ್ರ ಪನಿನ್ನ ನಂಬಿದ ದಾಸರನವನಿಯೊಳು ಇಂಥ |ಬನ್ನಪಡಿಸುವುದುಚಿತವೆ ದಯಾಳು ||ಅನ್ಯರುಂಟೇ ನೀವಲ್ಲದುದ್ಧರಿಸಲು ಪ್ರ |ಪನ್ನ ಪೋಷಕ ಯನ್ನಬಿನ್ನಪಕೇಳು 1ನರರ ಪಾಡಿಸದಿರೊ ಯತಿರಾಯಾಹರಿ|ಸ್ಮರಣೆ ಮಾಡಲು ಮನಕೊಡುಜೀಯ||ಕರಕರೆ ಭಾವದೊಳಗೊಂದುಪಾಯ ಕಾಣೆ |ಹರಿಸಿ ಕ್ಲೇಶವಮೋದತೋರಿಸಯ್ಯ 2ಧರೆಗೆ ಪ್ರಸಿದ್ಧ ಪುಣ್ಯಾಲಯವಾಸ ಕಾಯೊ |ನೆರೆನಂಬಿದವರನ್ನ ರವಿಭಾಸ ||ಹರಿದಾಸರ ಕಾಡುವರನ್ನಾ ಭಾಸ ಮಾಡೊ |ಗುರುಪ್ರಾಣೇಶ ವಿಠಲನ್ನ ನಿಜದಾಸ 3
--------------
ಪ್ರಾಣೇಶದಾಸರು
ಶರಣು ಮುನಿಪಮಣಿಯೆ ಸುಮತೀಂದ್ರಕರುಣಾಮೃತದ ಖಣಿಯೆಶರಣೆಂದವರಿಗೆ ವರಚಿಂತಾಮಣಿಯೆಧರೆಯ ಮೇಲಿನೊಬ್ಬ ದೊರೆ ನಿನಗೆಣೆಯೆ ಪ.ಸಂತತ ಸೇವಕ ಸಂತರಿಗೊಲಿದೀಗಸಂತತಿ ಸಂಪದವಿತ್ತೆ ಬೇಗಶಾಂತ ಶುಭಗುಣ ವಸಂತನೆಂಬೊ ಕೀರ್ತಿ ವಿಶ್ರಾಂತಿಯಮಿತ ದಿಗಂತಕೆ ವಾರ್ತಿ 1ತಾಳ ತಮ್ಮಟೆಕಂಬುಕಾಳೆ ಬಿರುದುಬುಧಮೇಳದಿಂ ಶಿಷ್ಯ ಜನಾಲಯಕೆ ಸಾಲದೀವಿಗೆಯೊಳು ಮಾಲಿಕೆ ಗ್ರಹಿಸಿ ಆಂದೋಳಿಕಿಳಿದು ಬಂದು ಪಾಲಿಪೆಅವರ2ಶ್ರೀಗುರು ಪ್ರಸನ್ನವೆಂಕಟಾಚಲವಾಸ ರಾಮನಪಾದನಿಶಿದಿನಾರ್ಚಿಸುವೆ ಸಂತೋಷಸಾಂದ್ರಋಷಿಯೋಗೀಂದ್ರರಕರಬಿಸಜಜ ಯೋಗೀಂದ್ರಸುಶರಧಿ ಸಂಭವಶಶಿಸುಮತೀಂದ್ರ3
--------------
ಪ್ರಸನ್ನವೆಂಕಟದಾಸರು
ಶರಣು ಶರಣು ಜಯ ಮುನಿರಾಯ ಸ್ವಾಮಿಶರಣಾಗತ ತಾತ್ವಿಕ ಪ್ರಿಯ ಪ.ಶ್ರೀ ಮಧ್ವಗುರು ದಯವನು ಪಡೆದು ಅದೇ ಮಹಿಮನ ಮನೆಯೊಳು ಬಂದುನೇಮದಿ ತುರ್ಯಾಶ್ರಮ ಬಲಿದೆ ಈಭೂಮಿಗಿಂದ್ರನಪರಿ1ಅಶ್ರುತ ಪ್ರಭೆ ಬುಧರೊಳು ಬೀರಿ ನಾನಾ ಶ್ರುತಿಯರ್ಥ ಪ್ರಕಟದೋರಿಶಾಶ್ವತಕ್ಷಾದಿ ತ್ರಿಪ್ರಮಾಣವ ನಿಜಾಶ್ರಿತರಿಗೆ ಪೇಳಿದೆ ಅನುವ 2ವೇದಾಂಬುಧಿಯೊಳು ಸುಧೆದೆಗೆದೆ ರಾಮಪಾದಕರ್ಪಿಸಿ ಬುಧಜನಕೆರೆದೆಕೈದುಗಳಂತೆ ಪ್ರಮೇಯಾರ್ಥವಿಡಿದೆ ಜಯನಾದದಿಂ ದುರ್ವಾದಿಗಳನ್ಯೆಚ್ಚಿದೆ 3ಮರುತಮತದ ವಿಬುಧರ ನೆರಹಿಸಿಮೂರೇಳರಿ ಬಲವ ಜರಿದಟ್ಟಿದೆಅವರಬಿರುದು ಸೀಳಿದೆ ಈ ಧರೆಯ ವೈಷ್ಣವರಭಯವ ಕಳೆದೆ4ಈ ಕ್ಷೋಣಿಯೊಳು ಪ್ರತಿವರ್ಜಿತನೆ ಶ್ರೀಅಕ್ಷಯಪ್ರಜÕ ಕೃಪಾನ್ವಿತನೆಅಕ್ಷೋಭ್ಯತೀರ್ಥರ ತನಯನೆವಿಶ್ವಕುಕ್ಷಿಪ್ರಸನ್ನವೆಂಕಟಪ್ರಿಯನೆ5
--------------
ಪ್ರಸನ್ನವೆಂಕಟದಾಸರು