ಒಟ್ಟು 626 ಕಡೆಗಳಲ್ಲಿ , 89 ದಾಸರು , 535 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವರತ್ನ ಖಚಿತ ಮಾಣಿಕ್ಯದ ಮಂಟಪದಿನವವಿಧದ ಹಂಸತೂಲಿಕ ತಲ್ಪದಲಿಭುವನಮೋಹನ ಶ್ರೀಹರಿಪವಡಿಸಿರಲುಕವಿಗಳು ಪೊಗಳಿ ಪಾಡುವರು ಶ್ರೀಹರಿಯೆಏಳಯ್ಯ ಬೆಳಗಾಯಿತು 1ನಾಗಶಯನನೆ ಏಳು ನಾಗಾರಿವಾಹನನೆನಾಗಸಂಪಿಗೆ ಪಾರಿಜಾತವರಳುತಿದೆಬೇಗದಲಿ ಭಾಗೀರಥಿ ಉದಕವನೆ ತಂದುನಾಗಕನ್ನಿಕೆಯರು ಕಾದು ನಿಂತಿಹರುಏಳಯ್ಯ ಬೆಳಗಾಯಿತು 2ಅತ್ರಿ ವಸಿಷ್ಠ ಭಾರದ್ವಾಜ ಗೌತಮರುಸುತ್ತೆಲ್ಲ ಋಷಿಗಳು ಸ್ತೋತ್ರವನೆ ಮಾಡುತ್ತಮಿತ್ರೆರುಕ್ಮಿಣಿ ಭಾಮೆರಿಂದ ಸೇವಿಪ ಹರಿಗೆಮುತ್ತಿನಾರತಿ ಪಿಡಿದು ನಿಂದಿಹರು ಹರಿಯೆಏಳಯ್ಯ ಬೆಳಗಾಯಿತು 3ಲಕ್ಷ್ಮಿರಮಣನೆ ಏಳು ಪಕ್ಷಿವಾಹನ ಏಳುಕುಕ್ಷಿಯೊಳು ಜಗವನಿಂಬಿಟ್ಟವನೆ ಏಳುರಕ್ಷ ಶಿಕ್ಷಕ ಜಗದ್ರಕ್ಷಕನೆ ನೀ ಏಳುಈಕ್ಷಿಸಿ ಭಜಕರನುದ್ದರಿಸಲೇಳುಏಳಯ್ಯ ಬೆಳಗಾಯಿತು 4ಕಮಲಮಲ್ಲಿಗೆ ಜಾಜಿಕುಸುಮಮಾಲೆಗಳನ್ನುಕಮಲಾಕ್ಷಿಗರ್ಪಿಸುತ ಹರುಷದಿಂದಕಮಲನಾಭ ವಿಠ್ಠಲ ಸಲಹು ಸಲಹೆಂದೆನುತಕಮಲಭವೇಂದ್ರಾದಿಗಳು ಸ್ತುತಿಸುವರು ಹರಿಯೆಏಳಯ್ಯ ಬೆಳಗಾಯಿತು 5ಏಳು ಧೃವವರರೂಪ ಏಳು ನರಹರಿರೂಪಏಳುನಗಧರರೂಪಏಳಯ್ಯ ಹರಿಯೆಏಳಯ್ಯ ಬೆಳಗಾಯಿತು
--------------
ನಿಡಗುರುಕಿ ಜೀವೂಬಾಯಿ
ನಳಿನಜಾಂಡತಲೆಯದೂಗೆ |ಇಳೆಯು ನಲಿದು ಮೋಹಿಸುತಿರಲು ||ಕೊಳಲ ಪಿಡಿದು ಬಾರಿಸಿದನು |ಚೆಲುವ ಕೃಷ್ಣರಾಯನು ಪಪೊಳೆವ ಪೊಂಬಟ್ಟೆಯ ದಟ್ಟಿ |ಅಳವಡಿಸಿ ನೆಗಹಿನಿಂದ ||ಹಲವು ರನ್ನದುಂಗುರವಿಟ್ಟ |ಚೆಲುವ ಬೆರಳ ನಟಿಸುತ |||ಲಲಿತವಾಮಭಾಗತೋಳ-|ಲೊಲಿದು ಓರೆನೋಟದಿಂದ ||ಬಲದಪಾದಎಡಕೆ ಚಾಚೆ |ನಳಿನಪದಗಳೊಪ್ಪುತಿರಲು 1ಸೆಳನಡುವಿನೊಳಗೆ ಕತ್ತರಿ |ಕಳೆಯ ಸಂಚಿ, ಗಜುಗು ಚೀಲ ||ಬಿಳಿಯ ಮಣಿಯು ಗುಳ್ಳೆಗಳಿರಲು |ಮಲಯಜಾನು ಲೇಪನ ||ಜಲಜನೇತ್ರ ಕೌಸ್ತುಬಾಧಿ-|ಗಳದಿ ಸ್ವರಗಳೊಪ್ಪುತಿರಲು ||ಲಲಿತವೇಣುಕಲ್ಪನೆಯಲಿ ಗೋ-|ವಳರೆಲ್ಲರು ಕುಣಿಯಲು 2ಮಾರವಿ ದೇಸಿ ಗುರ್ಜರಿ ಭೈರವಿ |ಗೌರಿನಾಟಿಸಾವೇರಿ ಆಹೇರಿ ||ಪೂರವಿ ಕಾಂಬೋದಿ ಪಾಡಿ ದೇಶಾಕ್ಷಿ ಶಂ-|ಶಕರಾಭರಣ ರಾಗದಿ ||ಪೂರವಿ ಕಲ್ಯಾಣಿ ವಸಂತ ತೋಡಿ |ವರಾಳಿ ಗುಂಡಕ್ರಿ ಸಾರಂಗ ಸಾಳಗ ||---------------------ಸೋರಟ ಭೂಪಾಳಿ ಶ್ರೀ ರಾಗದಿಂದಲಿ 3ಹರುಷದಿ ಬಾರಿಸುವ ರವಕೆ |ಪುರದ ಸ್ತ್ರೀ ಜನರು ಎಲ್ಲ ||ಮರೆದು ಮಕ್ಕಳ ಮನೆಯ ಕೆಲಸ |ಮರೆದು ಹರಿಯ ಬಳಸಲು ||ಕರಿಯು ಮೃಗವುಕೇಸರಿಶರಭ|ಹರಿಣ ನವಿಲುಉರಗಮೋಹಿಸಿ ||ನೆರೆದು ಮರೆದು ಜಾತಿವೈರವ |ಸ್ವರವ ಕೇಳುತಿರಲು 4ಕರಗೆ ಗಿರಿಯ ಕಲ್ಲು ತರುಗ-|ಳೆರಗಿ ಪಕ್ಷಿ ತತಿಗಳಿರಲು ||ಸುರರುಸುಮನ ಸುರಿಯುತಿರಲು |ಧರೆಯು ಮುದದಿ ಕುಣಿಯುತಿರಲು ||ಶರಧಿಉಕ್ಕಿಸರಿತುಸೊಕ್ಕಿ |ಪುರರಿಪುವಿಧಿಪೊಗಳುತಿರಲು ||ವಿರಚಿಸಿದ ಪುರಂದರವಿಠಲ |ಮುರಲಿಗಾನ ಮಾಡಿದ 5
--------------
ಪುರಂದರದಾಸರು
ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿಧನ್ಯನಾದೆನು ಧರೆಯೊಳು ||ಇನ್ನು ಈಭವಭಯಕೆ ಅಂಜಲೇತಕೆ ದೇವಚೆನ್ನ ಶ್ರೀ ವೆಂಕಟೇಶಾ ಈಶಾ ಪಏಸುಜನುಮದಸುಕೃತಫಲವು ಬಂದೊದಗಿತೋಈ ಸ್ವಾಮಿ ಪುಷ್ಕರಣಿಯೊಳ್ನಾ ಸ್ನಾನವನು ಮಾಡಿವರಾಹದೇವರ ನೋಡಿಶ್ರೀ ಸ್ವಾಮಿ ಮಹಾದ್ವಾರಕೆಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿಲೇಸಿನಿಂದಲಿ ಪೊಗಳುತಆ ಸುವರ್ಣದ ಗರುಡ ಗಂಬವನು ಸುತ್ತಿ ಸಂತೋಷದಿಂ ಕೊಂಡಾಡಿದೆ ಬಿಡದೆ 1ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲುದಟ್ಟಣೆಯ ಮಹಾಜನದೊಳುಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂಗೆಟ್ಟು ಹರಿಹರಿಯೆನುತಲಿಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿಕಟ್ಟಂಜನಕೆ ಪೋಗುತಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆಸುಟ್ಟೆ ಎನ್ನಯ ದುರಿತವಾ-ದೇವಾ 2ಶಿರದಲಿ ರವಿಕೋಟಿ ತೇಜದಿಂದೆಸೆಯುವಕಿರೀಟವರಕುಂಡಲಗಳಕೊರಳಲ್ಲಿ ಸರವೈಜಯಂತಿವನಮಾಲೆಯನುಪರಿಪರಿಯ ಹಾರಗಳನುಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳವರನಾಭಿಮಾಣಿಕವನುನಿರುಪ ಮಣಿಖಚಿತಕಟಿಸೂತ್ರಪೀತಾಂಬರವಚರಣಯುಗದಂದುಗೆಯನು - ಇನ್ನು 3ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆಲಕ್ಷ್ಮೀಪತಿ ಕಮಲಾಕ್ಷನೆಅಕ್ಷತ್ರಯಅಜಸುರೇಂದ್ರಾದಿವಂದಿತನೆಸಾಕ್ಷಾಜ್ಜಗನ್ನಾಥನೇರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರಪೇಕ್ಷ ನಿತ್ಯತೃಪ್ತನೇಕುಕ್ಷಿಯೊಳಗಿರೇಳು ಭುವನವನು ಪಾಲಿಪನೆರಕ್ಷಿಸುವುದೊಳಿತು ದಯದಿ -ಮುದದಿ 4ಉರಗಗಿರಿಯರಸ ನಿನ್ನಚರಣನೋಡಿದ ಮೇಲೆಉರಗಕರಿವ್ಯಾಘ್ರ ಸಿಂಹಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದಪರಿಪರಿಯ ಭಯಗಳುಂಟೇಪರಮವಿಷಯಗಳ ಲಂಪಟದೊಳಗೆ ಸಿಲುಕಿಸದೆಕರುಣಿಸುವುದೊಳಿತು ದಯವಾಸ್ಮರಗಧಿಕ ಲಾವಣ್ಯಪುರಂದರವಿಠಲನೇಶರಣಜನ ಕರುಣಾರ್ಣವಾ ದೇವಾ 5
--------------
ಪುರಂದರದಾಸರು
ನಿನ್ನ ಧ್ಯಾನ ಶುಭಮೂಹೂರ್ತ ನಿನ್ನ ಭಜನ ಶುಭದಿನವು ಪನಿನ್ನ ನಾಮ ಜಯಕಾರವು ನಿನ್ನ ಸ್ಮರಣ ಶುಭತಿಥಿಯುನಿನ್ನ ಸ್ತುತಿಯೆ ಶುಭಕಾಲ ಅನ್ಯ ಎಲ್ಲಪುಸಿಮಾಧವದೇವಅಪನಿತ್ಯನಿರುಪಮ ನಿನ್ನ ನಿತ್ಯದಲ್ಲಿ ಪೊಗಳುವುದೆಉತ್ತಮ ಶುಭವಾರವುಚಿತ್ತಜಪಿತ ನಿನ್ನ ಚಿತ್ತದಲಿ ನೆನೆಯುವುದೆಅತ್ಯಧಿಕ ಪಕ್ಷಮಾಸವುಮೃತ್ಯುದೂರನೆ ನಿನ್ನ ಸತ್ಕಥೆಯನಾಲಿಪುದೆ ನಕ್ಷತ್ರ ಶುಭಕರಣವುಭಕ್ತವತ್ಸಲ ನಿನ್ನ ಭಕ್ತಿಯಿಂ ಪಾಡುವುದೆನಿತ್ಯಅಮೃತಯೋಗವು ನಿಜವು1ದಿವನಿಶೆಯ ಇಡದೊಂದೆಸವನೆ ನಿನ್ನರಸುವುದೆರವಿಚಂದ್ರ ಭೌಮ್ಯ ಒಲವುಭವಪರಿಹರ ಸಿರಿಧವ ನಿನ್ನ ಸಚ್ಚರಿತಕವಿಗುರುಸೌಮ್ಯ ಬಲವುಬುವಿಯರಸ ನಿನ್ನಸಮ ಸುವಿಲಾಸ ಲೀಲೆ ಕೇಳಾವುದಮಿತ ಶನಿಬಲವುಭುವಿಜಪತಿ ಭಕ್ತಿಯ ಭವಭವದಿ ರಾಹುಕೇತುನವಗ್ರಹಂಗಳ ಬಲವು ಗೆಲವು 2ಕರಿಧ್ರುವರ ಪೊರೆದ ತವಪರಮ ಬಿರುದುಗಳನ್ನುಸ್ಮರಿಸುವುದೆ ಭವದೂರವುಹರದಿಗಕ್ಷಯವಿತ್ತ ವರದ ನಿನ್ನಡಿ ದೃಢವುಸ್ಥಿರಶಾಂತಿ ಸುಖಸಾರವುಸುರಗಣಕೆ ಸೌಖ್ಯವನು ಕರುಣಿಸಿದ ನಿಮ್ಮ ಮೊರೆಪರಲೋಕ ನಿಜಸ್ವಾದವುವರದ ಶ್ರೀರಾಮ ನಿಮ್ಮ ಚರಣದಾಸತ್ವದೆವರಮುಕ್ತಿ ಕೈಸಾಧ್ಯವು ಸ್ಥಿರವು 3
--------------
ರಾಮದಾಸರು
ನಿನ್ನ ನಂಬಿದೆ ನೀರಜನಯನಎನ್ನ ಪಾಲಿಸೊಇಂದಿರೆರಮಣಪಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದಪನ್ನಗಶಯನ ನೀಪರಮಪುರುಷನೆಂದುಅ.ಪಹರಿಸರ್ವೋತ್ತಮನಹುದೆಂಬ ಬಾಲಕನಹಿರಣ್ಯಕಶಿವು ಪಿಡಿದು ಬಾಧಿಸಲು ||ನರಹರಿ ರೂಪಿಂದಲವನ ವಕ್ಷವ ಸೀಳ್ದೆಪರಮವಿಶ್ವಾತ್ಮಕನಹುದೆಂದು ಮೊರೆ ಹೊಕ್ಕೆ1ಪಾದವ ಪಿಡಿದು ನೀರೊಳಗೆಳೆದ ನಕ್ರನಬಾಧೆಗಾರದೆ ಕರಿಮೊರೆಯಿಡಲು ||ಆದಿ ಮೂರುತಿ ಚಕ್ರದಿಂದ ನಕ್ರನ ಕೊಂದವೇದಾಂತವೇದ್ಯ ಅನಾಥ ರಕ್ಷಕನೆಂದು 2ಇಳೆಗೊಡೆಯನ ತೊಡೆ ನಿನಗೇತಕೆಂದು ಆಲಲನೆಕೈ ಪಿಡಿದೆಳೆಯಲರ್ಭಕನ ||ನಳಿನಾಕ್ಷ ನಿನ್ನನೆದೆಯೊಳಿಟ್ಟು ತಪವಿರ್ದಬಲು ಬಾಲಕಗೆ ಧ್ರುವ ಪಟ್ಟಿಗಟ್ಟಿದನೆಂದು 3ಸುದತಿಗೌತಮಸತಿ ಮುನಿಶಾಪದಿಂದಲಿಪಢದಿ ಪಾಷಾಣವಾಗಿ ಬಿದ್ದಿರಲು ||ಮುದದಿಂದಲಾಕೆಯಮುಕ್ತಮಾಡಿದಯೋಗಿಹೃದಯ ಭೂಷಣ ನಿನ್ನ ಪದ ವೈಭವವ ಕಂಡು 4ಪರಮಪಾವನೆ ಜಗದೇಕಮಾತೆಯನುದುರುಳರಾವಣ ಪಿಡಿದು ಕೊಂಡೊಯ್ಯಲು ||ಶರಣೆಂದು ವಿಭೀಷಣ ಚರಣಕೆರಗಲಾಗಿಸ್ಥಿರಪಟ್ಟವನು ಕೊಟ್ಟ ಜಗದೀಶ ನೀನೆಂದು 5ಅಂಬರೀಷನೆಂಬನೃಪತಿದ್ವಾದಶಿಯನುಸಂಭ್ರಮದಿಂದ ಸಾಧಿಸುತಿರಲು ||ಡೊಂಬೆಯಿಂದದೂರ್ವಾಸಶಪಿಸಲಾಗಿಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು 6ಧರೆಯೊಳು ನಿಮ್ಮ ಮಹಿಮೆಯ ಪೊಗಳ್ವಡೆಸರಸಿಜೋದ್ಭವ-ಶೇಷಗಸದಳವು ||ಸ್ಮರಣೆಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತಪುರಂದರವಿಠಲ ಜಗದೀಶ ನೀನೆಂದು7
--------------
ಪುರಂದರದಾಸರು
ನಿನ್ನ ನಾಮದ ಸವಿ ಎಲ್ಲರರಿಯರಂತೆಬಲ್ಲವರೆ ಬಲ್ಲರಂತೆನಿನ್ನ ನಾಮದ ಸವಿ ಎಲ್ಲರರಿಯರಂತೆ ಪಸ್ಥಿರಪದವನುಭವಿ ಧ್ರುವನು ಬಲ್ಲನಂತೆಪರಮಕಂಟಕ ಗೆದ್ದವರಪ್ರಹ್ಲಾದ ನಾಮನೆಲೆ ತಿಳಿದನಂತೆಸ್ಥಿರಪಟ್ಟ ಪಡೆದಂಥ ವರವಿಭೀಷಣನುಸರಿಯಾಗಿ ನಾಮದ ಸವಿಯುಸುರಿದನಂತೆ 1ಅಂಬರೀಷನೆಂಬ ನೃಪನು ಬಲ್ಲನಂತೆಪರಮಪಾವನಪಾದಅಂಬುಜಾಕ್ಷಿಯಳಾದ ಅಹಲ್ಯೆ ಬಲ್ಲಳಂತೆಅಂಬುಜಾಕ್ಷನ ಪಾದಸಂಭ್ರಮದಸವಿಕುಂಭಿನಿಯೊಳುಕರಿತುಂಬಬಲ್ಲನಂತೆ2ಪರಮಜ್ಞಾನಿಯಾದ ವಿದುರ ಬಲ್ಲನಂತೆವರನಾಮದ ಸವಿತರುಣಿ ಪಾಂಚಾಲಿಯು ಅರಿತುಕೊಂಡಳಂತೆಪರಿಯಲಿಅವರಧರ್ಮಜನುನಿರುತ ನಾಮಾಮೃತ ಅರಿತುಸುರಿದನಂತೆ 3ತುಂಬುರಾದಿಮುನಿಸುರರು ಬಲ್ಲರಂತೆವಿಮಲನಾಮದ ಸವಿಅಂಬುಜಾಸನಕಂಡು ಪೊಗಳುತಿರುವನಂತೆಕುಂಭಿಜಾತೆಸಿರಿಅಂಬರೇಶನ ಸುತೆಎಂಬುವರು ನಿನ್ನ ಅಂದ ಬಲ್ಲರಂತೆ 4ಚರಣದೆಡೆಯಲ್ಲಿರ್ದ ಗರುಡ ಬಲ್ಲನಂತೆರಾಗರಹಿತನಾಗವರಹನುಮಂತನು ಪೂರ್ಣಬಲ್ಲನಂತೆಪರಿಯೇನಿರುವುದು ಅರಿತು ಭಜಿಪೆ ನಿನ್ನಕರುಣದೆನತು ತೋರು ರಾಮನಾಮದ ಸವಿ 5
--------------
ರಾಮದಾಸರು
ನಿನ್ನ ಮಹಿಮೆಯನಾರು ಬಲ್ಲರುಚಿನ್ಮಯಾತ್ಮಕನಂತರೂಪನೆಮುನ್ನೆ ಕಮಲಜ ನಿನ್ನ ನಾಭಿಯೊಳುನ್ನತೋನ್ನತದಿಘನ್ನ ತಪವಂಗೈದು ಕಾಣನುಇನ್ನು ಶ್ರುತಿಸ್ಮøತಿ ಅರಸಿ ಅರಿಯವುಪನ್ನಗೇಂದ್ರನು ಪೊಗಳಲರಿಯ ಪ್ರಸನ್ವೆಂಕಟನೆ 1ಹರಿಯೆ ತ್ರಿದಶರ ದೊರೆಯೆ ಭಕುತರಸಿರಿಯೆ ದಿತಿಜರರಿಯೆಅನವರತಮರೆಯದಿಹ ಅಜಹರಯತೀಶ್ವರರರಿಯರಿನ್ನುಳಿದಇರವು ಮನುಜ ನಾನರಿಯಲಾಪೆನೆಪೊರೆಯೊ ಬಿಡದೆ ಪ್ರಸನ್ವೆಂಕಟಗಿರಿಯರಸ ಜಗದೆರೆಯ ಸುರವರವರಿಯ ಮಾಸಹನೆ 2ನಾಗರಿಪುಗಮನಾಗಭೃತಶುಭನಾಗಪಾಕ್ಷಘನಾಗಮನಿಗಮನಾಗಪತಿ ವದನೈಕಸ್ತುತ ಸುಗುಣ ಗುಣಾರ್ಣವನೆನಾಗಹರಸಖ ನಾಗಘನಮಣಿನಾಗಗ್ರಸಿತಭಾ ನಾಗದ್ವಿಟಮುಖನಾಗಧರನುತ ನಾಗಮದಹ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ನೋಡಿರೆ ಯಶೋದೆಯ ಪುಣ್ಯಪಡೆದಿಹ್ಯಳೆಂಥ ಮಾನ್ಯ ಪಪೊಡವಿ ಈರೇಳನ್ನು ಒಡಲೊಳಿಟ್ಟವನನ್ನುತೊಡೆಮೇಲಾಡಿಸುವಳು ಅ.ಪವಿಲಸಿತಮಹಿಮನ ಕಳೆಯ ತಿಳಿಯಲು ವೇದಬಲುವಿಧ ಪೊಗಳುತ ನೆಲೆಯುಗಾಣದಘನಕಳವಳಗೊಳುತಿಹ್ಯವಭವನ ದೆಸೆಯಿಂಸುಲಭದೆತ್ತಿ ತನ್ನ ಮೊಲೆಯನುಣಿಸುವಳೀಕೆ 1ಭುಜಗಭೂಷನು ತನ್ನ ನಿಜಪದವನುದಿನಭಜಿಸಿ ಬೇಡಲು ಕಾಣರಜಸುರಮುನಿಗಣಸುಜನಗುಣಾಂತರಂಗ ತ್ರಿಜಗವ್ಯಾಪಕನನಿಜವನು ಮನದಣಿ ಕಂಡು ಹಿಗ್ಗಿದಳೀಕೆ 2ಸೀಮರಹಿತಮಹಿಮ ನಾಮರೂಪಿಲ್ಲದ ನಿಸ್ಸೀಮ ಸುಗುಣಸುಖಧಾಮ ಭೂಮಿಜೆಪತಿಸ್ವಾಮಿ ಶ್ರೀರಾಮನ ವಿಮಲದಾಟದಲಿಭೂಮಿಯೊಳ್ಮಿಗಿಲಾದಾನಂದೊಳಿಹÀಳೀಕೆ 3
--------------
ರಾಮದಾಸರು
ನೋಡುವ ಬನ್ನಿರಯ್ಯ ಪಕಾವೇರಿಯ ಭವಹಾರಿಯ |ಮುಕ್ತಿಕಾರಿಯ ನೋಡುವ ಬನ್ನಿರಯ್ಯ ಅ.ಪಮಾತೆಯ ನುತಜನಜಾತೆಯ ಹರಿಮನಃ |ಪ್ರೀತೆಯ ಭುವನವಿಖ್ಯಾತೆಯ ||ನೀತಿಯುನ್ನತಕರದಾತೆಯ ಶಿವನ ಸಂ-|ಭೂತೆಯ ನೋಡುವ ಬನ್ನಿರಯ್ಯ 1ಬಂದು ಸಕಲ ಮುನಿವೃಂದ ನೆರರೆಯೆ ವಿೂಯ-|ಲಂದು ನಾರದಮುನಿ ಪೊಗಳುತಿರೆ ||ಸಂದೇಹವಿಲ್ಲ ನೋಡಿದಡೆ ಮುಕುತಿಯಹು-|ದೆಂದರೆ ಮುಳುಗಲದೇತಕಯ್ಯ? 2ಅರ್ಕಚಂದ್ರವಹ್ನಿಪುಷ್ಕರದೊಳು ಮಿಂದು |ಚಕ್ರತೀರ್ಥದೊಳಗೋಲಾಡಿ ||ಗಕ್ಕನೆ ಸದ್ಗತಿಯಹುದೆಂದು ಮನೆಗಳ |ಕಕ್ಕುಲತೆಯ ಬಿಟ್ಟು ನಡೆಯಿರಯ್ಯ 3ಕಂಡರೆ ಸಕಲಪಾತಕಪರಿಹಾರ, ಪಡೆ-|ದುಂಡರೆ ದುರಿತ-ದುರ್ಜನ ದೂರವು ||ಕೊಂಡಾಡಿದವರಿಗನಂತ ಫಲವು ನೀ-|ರುಂಡರೆ ಭವಬಂಧ ಮೋಕ್ಷವಯ್ಯ 4ಗಂಗೆ-ಯಮುನೆಗೆ ಹೋದಡೆ ಮೂರೈದುದಿ-|ನಂಗಳಿಗಹುದು ಮುಕುತಿಯೆಂದಡೆ ||ಹಿಂಗದೆ ಕಾವೇರಿಯ ನೋಡಿದಾಕ್ಷಣ ಪಾ-|ಪಂಗಳಿರದೋಡಿ ಪೋಪುವಯ್ಯ 5ಯಾಗಾದಿ ಸ್ವರ್ಗಯೋಗದಿ ಪೊಕ್ಕು ಕಾಶಿಯೊಳು |ಆಗಲೆ ತನುವ ಬಿಡಲು ಮುಕುತಿ |ಭೋಗಿಶಯನನ ದಿನದಲಿ ಕಾವೇರಿಗೆ |ಹೋಗಿ ಮಿಂದವರಿಗಿದೇ ಗತಿಯಯ್ಯ 6ಕಾವೇರಿಯ ಗಾಳಿ ಸೋಕಿದ ದೇಶದೊ-ಳಾವಾವ ಮನುಜರು ಸುಕೃತಿಗಳೇ ||ಕಾವೇರಿಯ ತೀರವಾಸಿಗಳಿಗೆ ಮಕ್ತಿಆಹೋದು ಸಂದೇಃವಿಲ್ಲವಯ್ಯ 7ಆವಾವ ಜನ್ಮಕರ್ಮಂಗಳು ಸವೆವರೆಕಾವೇರಿಯ ಕಾಡು ಸುಖಬಾಳಿರೈ ||ಶ್ರೀವರ ಸ್ವಾಮಿ ಶ್ರೀಪುರಂದರವಿಠಲನಸೇವೆಯೊಳನುದಿನವಿಪ್ಪುದಯ್ಯ 8
--------------
ಪುರಂದರದಾಸರು
ಪರಮಪಾವನ ಪರಬ್ರಹ್ಮ ಸದಾಶಿವನಿರುಪಮನಿತ್ಯಮಂಗಲ ಮಹಿಮಾ ||ಸರಸಿಜೋದ್ಭವ ಸುರಮುನಿ ವೃಂದೋವಂದಿತಪರಕೆ ಪರನೆಂದು ಪೊಗಳಿದೆನಲ್ಲದೆ |ತೀರಕ ಜಂಗಮನ ದಸೆಯಿಂದ ಪೊಡ................................. ಬಾಣನ ಕಾಯ್ದ ಸ್ಥಿರದಿ ತಾಳಿದನಂದನ | ಚರಾಚರ | ಗರ್ವಿಗೆ ಗರ್ವಾದನಂದೆನಲ್ಲನಿನಗೆ ತಿರುಕ ಜಂಗಮನೆಂದೆನೆ1xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಎತ್ತ ನೋಡಿದಲತ್ತತ್ತ ಪಿಡಿದಿಹ ಚಿತ್ಪ್ರಭೆಬೆಳಗು ಭಾನವು ಭಾಸವು ಚಿತ್ತಕೆ ಚೈತನ್ಯವಾದಚಿನ್ಮಯ ಶಿವ ಪ್ರತ್ಯಗಾತುಮನೆಂದು ಪೊಗಳಿದೆ-ನಲ್ಲದೆ.......................| ಚಂದ್ರನಕಳೆನೆತ್ತಿಲಿಟ್ಟವನೆಂದೆನೆ |ಗಂಗೆಯ ಜಲಪಾತ ತಾಳಿದನೆಂದೆನೆ |ಕಲ್ಪನೆ ಮನದ ವೃತ್ತಿಗಗೋಚರನಂದೆನಲ್ಲದೆ ನಿನಗೆ2ನಮಃ ನಿಜಘನತೇಜಃ ಪುಂಜ ರೂಪನಾಮದಿನೆ | .....................................ನಾಮ ರೂಪಕನೆಂದೆನೆ || ಕರ್ಮನೇಮ ನೈಷ್ಠಿಕನೆಂದೆನೆಸಿಂಧಾಪುರದ ಸೀಮೆ ಕರ್ಣಿಕನೆಂದೆನೆ | ಗಿರಿಗೆನಿಜಧಾಮದ ಏಕನೆಂದು ಪೊಗಳಿದೆನಲ್ಲದೆ |ನಾಮರೂಪಕನೆಂದೆನೆ3
--------------
ಜಕ್ಕಪ್ಪಯ್ಯನವರು
ಪರಾನ್ನವೇತಕೆ ಬಂತಯ್ಯ - ಎನಗೆಇಂದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಪರಾನ್ನವೇತಕೆ ಬಂತಯ್ಯ ? ಪ.ಪರಾನ್ನವೇತಕೆ ಬಂತು ಪರಮೇಷ್ಟಿಜನಕನ |ಪರನೆಂದು ತಿಳಿಸದೆ ಪರಗತಿ ಕೆಡಿಸುವ ಅಪಸ್ನಾನ ಮಾಡಿಕೊಂಡು - ಕುಳಿತು ಬಹು |ಮೌನದಿಂದಿರಲೀಸದು ||ಶ್ರೀನಿವಾಸನ ಧ್ಯಾನಮಾಡದೆ ಮವಿದು |ತಾನೆ ಓಡುವದು ಶ್ವಾನನೋಪಾದಿಯಲಿ 1ಜಪವ ಮಾಡುವ ಕಾಲದಿ - ಕರೆಯ ಬರೆ |ವಿಪರೀತವಾಗುವುದು ||ಸ್ವಪನದಂತೆ ಪೊಳೆದು ನನ್ನ ಮನಕೆ ಬಲು |ಸುಪಥವ ತಪ್ಪಿಸಿ ಅಪಗತಿ ಕೊಡುವಂಥ 2ಪ್ರಸ್ಥದ ಮನೆಯೊಳಗೆ - ಕರೆಯದೆ ಪೋಗಿ |ಸ್ವಸ್ಥದಿ ಕುಳಿತುಕೊಂಡು ||ವಿಸ್ತಾರವಾಗಿ ಹರಟೆಯನೆ ಬಡಿದು ಪ್ರ |ಶಸ್ತವಾಯಿತು ಎಂದು ಮುಸ್ತಕ ತಿರುವುವ 3ಯಜಮಾನನು ಮಾಡದ - ಪಾಪಂಗಳ |ವ್ರಜವು ಅನ್ನದೊಳಿರಲು ||ದ್ವಿಜರು ಭುಂಜಿಸಲಾಗಿಅವರ ಉದರದೊಳು ||ನಿಜವಾಗಿ ಸೇರುವುದು ಸುಜನರು ಲಾಲಿಸಿ 4ಮಾಡಿದ ಮಹಾಪುಣ್ಯವು - ಓದನಕಾಗಿ - |ಕಾಡಿಗೊಪ್ಪಿಸಿ ಕೊಡುತ |ರೂಢಿಗಧಿಕನಾದ ಪುರಂದರವಿಠಲನ |ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ 5
--------------
ಪುರಂದರದಾಸರು
ಪಾದಕಂಡು ಪಾವನಾದೆನು ಶ್ರೀಗಿರಿಯ ನಿಲಯನಪಾದಕಂಡು ಪಾವನಾದೆನು ಪಪಾದಕಂಡು ಪಾವನಾದೆನುಮಾಧವನ ಪ್ರಸಾದ ಪಡೆದೆನುಹಾದಿಗಾಣದೆಪರಮದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇದಿನಿಯೊಳು ಜನುಮ ತಾಳಿಭೇದಮತದ ಹಾದಿಬಿಟ್ಟು ಅ.ಪನೀಲಬಣ್ಣದೊಪ್ಪುವ ಸುಂದರ ಶುಭಕಾಯಇಂದಿರೆಲೋಲತ್ರಿಜಗಮೋಹನಾಕಾರ ಕೊರಳಪದಕಮಾಲಕೌಸ್ತುಭಮುಕುಟಮಣಿಹಾರ ರತ್ನದುಂಗುರಕಾಲೊಳ್ಹೊಳೆಯುವ ಗೆಜ್ಜೆಸರಪಳಿಶೀಲವೈಷ್ಣವ ನಾಮ ಪಣೆಯಲಿಕಾಳರಕ್ಕಸಕುಲಸಂಹಾರನಪಾಲಸಾಗರಕನ್ನೆವರನಪಾಲಮೂಲೋಕಸಾರ್ವಭೌಮನಮೇಲು ಭೂವೈಕುಂಠದಲ್ಲಿ 1ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣಪಟ್ಟ ರತ್ನದ ನಡುವಿಗುಡಿದಾರ ವರ್ಣಿಸುವರಾರುಸೃಷ್ಟಿಯೊಳಗೀತ ಮೀರಿದವತಾರ ಇನಕೋಟಿ ಪ್ರಭಾಕರಬಿಟ್ಟು ವೈಕುಂಠ ಇಹ್ಯಕೆ ಸಾಗಿಬೆಟ್ಟದ ಮೇಲೆ ವಾಸನಾಗಿಕೊಟ್ಟು ವರಗಳ ಮೂರು ಜಗಕೆಶೆಟ್ಟಿಯಂದದಿ ಕಾಸುಕೊಳ್ಳುವದುಷ್ಟಭ್ರಷ್ಟ ಶಿಷ್ಟರೆಲ್ಲರಇಷ್ಟದಾಯಕದಿಟ್ಟ ದೇವನ 2ಒಂದೆ ಮನದಲಿ ಸಕಲ ಸೇವಕರು ಭಯಭಕುತಿಯಿಂದಬಂದು ಹರಕೆಯ ತಂದು ನೀಡುವರು ತುಂಬರನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರುಹೊಂದಿ ಭಜಿಸುತ ಸಪ್ತಋಷಿಗಣಬಂದು ಇಳಿವರು ಬಿಡದೆಅನುದಿನವಂದ್ಯ ನಿಗಮಾದಿಬಂಧು ಭಜಿಪರಕಂದುಗೊರಳಾದಿ ಬ್ರಹ್ಮಸುರರಿಂಗಂಧಪರಿಮಳಕುಸುಮದ್ರವ್ಯಗಳಿಂದ ಸೇವೆಯ ಗೊಂಬದೇವನ 3ಉದಯಕಾಲದಿ ಬಾಲನವತಾರ ಮಧ್ಯಾಹ್ನಕಾಲದಿಸದಮಲಾಂಗ ಯೌವನಾಕಾರಸುಸಂಧ್ಯಾಕಾಲದಿಮುದುಕನಾಗಿ ಕಾಂಬ ಮನೋಹರ ಬಹುಮಹಿಮಗಾರಪದುಮವದನ ಮದನನಯ್ಯಪದುಮವತಿಯ ಪ್ರಾಣಪ್ರಿಯಒದಗಿಬಂದ ಭಕುತಜನರನುಸುದಯದಿಂದ ಕರೆದು ಪ್ರಸಾದಮುದದಿ ನೀಡುತ ಕೃಪೆಯದೋರಿಸದಮಲಸಂಪದವನೀವನ 4ತೀರದೀತನ ಲೋಕಶೃಂಗಾರ ಏರಿ ನೋಡಲುಪಾರಗಿರಿತುದಿ ಗಾಳಿಗೋಪುರ ಮುಂದೆ ನಡೆಯಲುದಾರಿಯಲಿಕೊಳ್ಳಏಳು ವಿಸ್ತಾರ ಪರಮಪರತರತೋರುವ ಮಹ ಗುಡಿಯು ಗೋಪುರದ್ವಾರ ಚಿನ್ನದ ಕಳಸ ಬಂಗಾರಗಾರುಮಾಡದೆ ದಾಸಜನರನುತಾರತಮ್ಯದಿ ಪೊರೆಯಲೋಸುಗುಸೇರಿಧಾರುಣಿ ವೈಕುಂಠವೆನಿಸಿದಧೀರವೆಂಕಟ ಶ್ರೀಶ ರಾಮನ 5
--------------
ರಾಮದಾಸರು
ಪಾಲಿಸು ನಿಜಮತಿ ಗಜವದನ ಶೀಲ ಪಸುಜನಸುರಮುನಿಗಣ ಸನ್ನತಭಜಿಸುವೆ ತವಚರಣ ಮೂಷಕವಾಹನ ಅ.ಪಹಿಮಸುತೆತನಯ ಕರುಣಾಂತರಂಗಸುಮನಸರೊಂದಿತ ವರಶುಭಾಂಗಕೋಮಲಹೃದಯ ಸುವಿದ್ಯಪ್ರದಾಯಕವಿಮಲಜ್ಞಾನ ಮಾಡೆಲೊ ಕರುಣ 1ಪರಮಚರಿತ ದಯ ಭೂತಗಣೇಶಶರಣು ಸತ್ಯರ ಅವಿದ್ಯ ನಾಶಕರುಣಗುಣಾರ್ಣವ ಪರತರ ಪಾವನಸ್ಮರಿಸಿ ಬೇಡುವರ ಶೋಕವಿದೂರ 2ಸರಸಸಂಗೀತ ನಿಗಮಾದಿ ವೇದಶರಣರೊಲಿವ ಮಹ ನಿರುತ ಸುವಾದಕರುಣಿಸು ವರದ ಶ್ರೀರಾಮನಚರಣನೆರೆನಂಬಿ ಪೊಗಳುವ ಸ್ಥಿರ ಚಿತ್ತ ಜ್ಞಾನವ 3
--------------
ರಾಮದಾಸರು
ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತಕಾಲಭೈರವ ನುತಿಪೆ ನಾ ಸತತಕಾಲಕಲ್ಪಿತ ಲೀಲೆಯರಿತು ಸು-ಶೀಲತನವನು ಮೆರೆಯಲೋಸುಗಸ್ಥೂಲಸೂಕ್ಷ್ಮಾಕೃತಿಯ ಧರಿಸಿದಮೂಲಿಕಾ ಶ್ರೀನಿವಾಸ ಭೈರವ 1ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ-ವೀರ ಶ್ರೀರಾಮನ ಸೇತು ನೋಡುತ್ತಧರೆಯ ಸಂಚರಿಸುತ್ತ ಬರುತಿರೆಮಿರುಪ ಶೇಷಾಚಲ ನಿರೀಕ್ಷಿಸಿಭರದಿ ಗಿರಿಮೇಲಡರಿ ಶ್ರೀಶನಚರಣಕಾನತನಾಗಿ ಸ್ತುತಿಸಿದೆ 2ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿಇರಿಸಿ ಮೆರೆಸಿದೆ ಕೀರ್ತಿಕರವಲ್ಲಿತ್ವರಿತದಿಂ ನೀನೆಲ್ಲ ದೇಶದಪರಿಪರಿಯ ಕಾಣಿಕೆಯ ತರಿಸುತಹರಿಯ ದರುಶನಗೈವ ಮೊದಲೆಹರುಷದಿಂದಲಿ ಪೂಜೆಗೊಂಬುವೆ 3ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿಧರಿಸಿ ಮೃದುತರವಾದ ವಾಕ್ಯದಲಿಕರೆಸಿ ಒಬ್ಬೊಬ್ಬರ ವಿಚಾರಿಸಿಸರಸದಿಂದಲಿ ಪೊಗಳಿಕೊಳ್ಳುತನರರ್ಗೆ ಸೋಂಕಿದೆ ಭೂತಪ್ರೇತದಭಯಗಳನು ಪರಿಹರಿಸಿ ಪಾಲಿಪೆ 4ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪಖ್ಯಾತ ವೆಂಕಟಪತಿಗೆ ಸಖಿಯಷ್ಪಖ್ಯಾತಿಯಿಂ ದೊರೆಯಿದಿರಿನಲಿ ಸಂ-ನಿಧಿಸನ್ನುತನಾಗಿ ಮೆರೆದಿಹೆಓತು ಕರುಣದೊಳೊಲಿದು ಪಾಲಿಪದಾತಲಕ್ಷ್ಮೀನಾರಾಯಣಾಪ್ತನೆ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪೊಗಳಲೆನ್ನಳವೆ ನಿನ್ನ ಗುರುಗಳ ರನ್ನಪೊಗಳಲೆನ್ನಳವೆ ನಿನ್ನಗಣಿತಮಹಿಮೆಯವಸುಧೆಯ ಮೇಲೇಸೊ ಅಸುರರು ಪುಟ್ಟಿ ತ್ರಿ-ಕಂಜಮಿತ್ರನ ಸುತನೊಡನೆ ಸಖ್ಯವ ಮಾಡಿವಾನರನಿಕರವ ನೆರಹಿ ಸೇತುವೆಕಟ್ಟಿಕೃಷ್ಣನ ಸೇವೆಗೋಸುಗವೆ ಕುಂತಿಜನಾಗಿವೀರರಾಯರನೆಲ್ಲ ಸೆರೆಯನಾಳುವಂಥನಡುರಣದಲಿ ಬಂದು ಘುಡುಘುಡಿಸುತನಿಂದುಮಾಯಿಗಳುಹೆಚ್ಚಿ ಮಹಿಯೆಲ್ಲ ವ್ಯಾಪಿಸೆದಶಉಪನಿಷತ್ತುಗಳಿಗೆ ಟೀಕವಮಾಡಿವಾಲುಕ ಮುಷ್ಟಿ ಅಷ್ಟವು ದಿಗ್ವಿಜಯ ರಾಮ-ಮೂರ್ಹತ್ತು ಎರಡು ಲಕ್ಷಣವುಳ್ಳ ಕಾಯನೆಆನಂದತೀರ್ಥ ನಿಜಾನಂದಚರಿತ ಪಂ-
--------------
ಗೋಪಾಲದಾಸರು