ಒಟ್ಟು 773 ಕಡೆಗಳಲ್ಲಿ , 95 ದಾಸರು , 684 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರವಣ ಮಂಗಳನೀವುದೊ ಎನ್ನ ಕರ್ಣಗಳಿಗಾ- ನಂದ ಕೊಡುವುದು ಶರಣ ಜನರಿಗೆ ಬಂದ ದುರಿತಗಳ್ಹರಣ ಮಾಡುವುದು 1 ಭರಣ ಭೂಷಿತನಾದ ಲಕ್ಷ್ಮೀರಮಣ ನೀಲಾ- ವರಣ ನಿನ್ನ ಝಣ ಝಣಂದಿಗೆ ನಾದ ನೂಪುರ ಚರಣಕ್ವಂದಿಸುವೆ 2 ಕಮಲನಾಳದಿ ಪುಟ್ಟಿದಾತನ ಜನನಿ ಪತಿ ಜಗಜ್ಜನಕ ನಿನ್ನ ವನಜಪಾದಕೆ ನಮಿಸುವೆನೊ ಈ ಮನವು ನಿನ್ನಲ್ಲಿ 3 ನಿಲಿಸಿದರೆ ನಾ ನಿನ್ನ ನಾಮವ ನೆನೆಸಿದರೆ ಫÀಲಫಲಿಸಿ ಬಾಹೋದು ಒಲಿಸುವನು ವೈಕುಂಠಪತಿ ನೀ ಮನಸು ಮಾಡುವರೆ 4 ಘನಮಹಿಮ ಗಾಂಧಾರಿ ಸುತರನು ಹನನ ಮಾಡಿದ ಪವನ ಪ್ರಿಯನೇ ಜನುಮ ಜನುಮದಿ ನಿನ್ನ ಬಿಡೆ ನಾ ಜಗದ ವಲ್ಲಭನೆ 5 ಪತಿ ನಿನ್ನ ಸುಂದರಾಂಗವನು ತೋರದಲೆ ಭವ ಭಂಗ ಬಿಡಸುವು- ದ್ಯಾತಕೋ ಶ್ರೀರಂಗ ಪೇಳಿನ್ನು 6 ಚಕ್ರದಂದದಿ ತಿರುಗೊ ಎನಮನ ಚಕ್ರಧಾರಿಯೆ ನಿನ್ನ ಕಾಣದೆ ಶಕ್ರಸುತನ ಸಖನೆ ದಯಮಾಡ್ಹಕ್ಕಿವಾಹನನೆ 7 ಅನ್ನದಾತನು ಇರಲುಕಾಣದೆ ಅನ್ಯರಿಗೆ ಬಾಯ್ತೆರೆಯಲ್ಯಾತಕೆ ಪನ್ನಗಾದ್ರಿಶಯನ ನೀ ಸಲಹೆನ್ನ ಶ್ರೀಹರಿಯೆ 8 ಸರ್ವಗುಣ ಸಂಪನ್ನ ಸರ್ವೋತ್ತಮನೆ ಸರ್ವ ವ್ಯಾಪಾರಗಳನು ಸರ್ವಕಾಲದಿ ನಡೆಸುತಿರುವ ಸರ್ವರಾಧಾರಿ 9 ವರಮಹಾಲಕ್ಷ್ಮೀಪತಿಯೆ ವಾರಣವರದ ನಿನ್ನ ಸುರ ವಿರಿಂಚನಾ ಹರನು ವೀಣಾ- ಪಾಣಿನಾರದ ಬರಿದೆ ನಮಿಸುವರೆ 10 ಪರಮ ಕರುಣಾಶರಧಿ ಎನ್ನ ದುರಿತಗಳ ನೀ ದೂರ ಮಾಡುವೆ ಬಿರುದು ನಿನ್ನದÀು ಬಿಡದೆ ಭೀಮೇಶಕೃಷ್ಣ ಸಲಹೆನ್ನ 11
--------------
ಹರಪನಹಳ್ಳಿಭೀಮವ್ವ
ಶ್ರೀ ಕೃಷ್ಣವೇಣಿ ಕಲ್ಯಾಣೀ ಪಂಕಜಾಸನ ಸ್ವೀಕೃತ ಬುಧ ಶ್ರೇಣೀ ನೀ ಕೃಪೆÉಯಿಂದ ಮಹಾಕೃತು ಹರಿಯ ನಿ ಜಾಕೃತಿ ತೋರ್ದೂರಿಕೃತ ದುರಿತೇ ಪ ಸುಜನ ಮಾತೆ ಶಮಲ ಸಂಕೂಲ ನರ್ಧೂತೆ ಸುಮನಸ ಜನ ಸನ್ನುತೆ ಸನ್ಮೋದ ದಾತೆ ವಿಮಲ ಸದ್ಗುಣ ಸಂಭೃತೆ ನಮಿಸುವೆ ತ್ವತ್ಪದÀ ಕಮಲಯುಗಳಿಗನು ಪಮ ಸುಂದರೆ ಭ್ರಮೆಗೊಳಿಸುವ ದುರ್ಮಮ ಕಳೆದು |ಸೋ ತ್ತಮರ ಪದಾಬ್ಜಕೆ ಭ್ರಮರನೆನಿಸಿ ಮಾರಮಣನ ದುಹಿತ್ರೆ 1 ಮದಗಜಯಾನೆ ಪಿಕಗಾನೆ ಉಭಯಾನೆ ಮಾನಿನಿ ಮದನಾರಿ ಜಟಜಸೊನೆ ಪಾಪೌಘದಹನೆ ಮುದವ ಕೊಡು ಎಮಗೆ ನಿ ೀನೆ ಮದಡನರನು ಒಂದು ದಿನ ಮಜ್ಜನವ ವಿಧಿಸೆ ಶರೀರದಿ ಹುದುಗಿದ ಪಾಪಗಳುದುರಿಸಿ ಕಾಲನ ಸದನವ ಹೋಗಗೊಡದುದಧಿ ಮಥನ ಪದ ಪದುಮವ ತೋರ್ಪೆ 2 ನೀಲ ಪುನತ ಹೃತ್ಕುಮುದಾ ಭೇಶೇ ಅನುದಿನ ಪೂರೈಸೇ ಜನನಿಯೆನ್ನ ದುರ್ಗುಣವೆಣಿಸದೆ | ಮಾ ತನು ಲಾಲಿಸು ಸುಹೃದ್ವನರುಹದಲಿ ಶ್ರೀ ವನತೆಯರಸ ಜಗನ್ನಾಥ ವಿಠಲನ ಅನವರತ ನಿಲಿಸು ಘನ ಮಾಂಗಲ್ಯೇ 3
--------------
ಜಗನ್ನಾಥದಾಸರು
ಶ್ರೀ ಧ್ರುವಚರಿತ್ರೆ ಪದ ಭಜ ಭಜ ಭಜ ಶ್ರೀ ಗಣರಾಜ ತ್ಯಜ ತ್ಯಜ ತ್ಯಜ ತಾಮಸ ಬೀಜ ಪ ಶಂಕರ ಪುತ್ರ ಶುಭಂಕರ ವರನಿಜ ಪಾದ ಸರೋಜ 1 ಲಂಬೋದರ ಪೀತಾಂಬರಧರ ಕರು ಣಾಂಬುಧಿ ವರ ದೇವ ಮಹೀಜ 2 ಶ್ರೀಶಾನಂತಾಜದ್ರೀಶ ವರಾನ್ವಿತ ದಾಸ ಸುವೃತ ಮಾನಸ ಪೂಜ 3 ಆರ್ಯಾ ರಾಜ ಸುಪೂಜಿತ ರಾಜ ರಾಜ ನೃಪ ರಾಜ್ಯ ಮಾಡುತಾ ಇರುತಿಹನು ದುರ್ಜನ ಪುರುಷರ ತರ್ಜನ ಮಾಡುವ ಸಜ್ಜನ ಆತ್ಮಾರಿಂಗ್ಯತಿ ಪ್ರಿಯನು 1 ದೀನ ಬಂಧು ಬಹುದಾನವಂತ ಉ ಪಾದ ಎಂಬುವ ಹೆಸರು ಮಾನಿತರೊಳಗತಿ ಮಾನಯುಕ್ತರು ಮಾನಿನಿಯರು ಇಬ್ಬರು ಇಹರು2 ಸುರಚಿ ಗಣ್ಯಳು ಪಟ್ಟದರಸಿ ಸುನೀತಿಯು ವಿರಸದಿ ಆರಸಗ ನಿಷ್ಟ್ರಿಯಳು 3 ಮುತ್ತಿನಂಥ ವರಪುತ್ರರಿಬ್ಬರು ಉತ್ತಮನೆಂಬ ಸುರುಚಿಪುತ್ರಾ ಉತ್ತಮ ಗಣ್ಯ ಗುಣೋತ್ತಮ ಧ್ರುವನು ಮತ್ತ ಸುನೀತಿಗೆ ತಾ ಪುತ್ರಾ 4 ಮಂದಿರದೊಳಗೆ ವಸುಂಧರೇಶನು ಛಂದದಿ ತಾ ಸುಖದಿಂದಿರಲು ಒಂದಿನದಲಿ ಬಹುಸುಂದರಸಭಿಯಲ್ಯಾ ನಂದದಿ ಬಂದು ತಾ ಕುಳಿತಿರಲು 5 ಶ್ಲೋಕ ಕೂಡಿಸಿತಾ ತೊಡಿಯಲ್ಲಿ| ಮುದ್ದಿಸಿದಾ ಸಭಿಯಲ್ಲಿ | 1 ಛಂದ ನೋಡಿ ಧ್ರುವನು ತಾ ಹರುಷದಿಂದಲಿ ಓಡಿ ಬಂದನು ರಾಜ ಸಭಿಯಲಿ ಕೂಡಬೇಕು ತಾ ಎಂದು ತೊಡಿಯಲಿ ಇಂದು ಮನದಲಿ 1 ನಾಥ ಭೂಮಿಪಾ ನೋಡಿ ಬಾಲನ ಪ್ರೀತಿಯಿಂದಲ್ಯೊಂದು ಮಾತನಾಡನು ತಾತ ಸುತಗೆ ಬಾಯೆಂದು ಕರೆಯನು ಆತ ಧ್ರುವನು ತಾ ಅನಾಥನಾದನು 2 ಆಗ ಸುರುಚಿ ಬಾಲನ್ನ ನೋಡುತಾ ಬ್ಯಾಗನುದರದಲ್ಲಿ ಬಹಳ ಗರ್ವಿತಾ ಯೋಗ್ಯವಲ್ಲ ಕೂಡಲಿಕ್ಕೆ ತೊಡಿಯಲಿ ಹೀಂಗ ದುಷ್ಟ ಮಾತುಗಳು ಬಾಯಲ್ಲಿ 3 ಪದ ಬಾರದೊ ಧ್ರುವಾ ನಿನಗೆ ಸಿಂಹಾಸನ ಪದವಿ ಬಾರದೊ ಧ್ರುವಾ ನಿನಗೆ ಸಾರಸಿಂಹಾಸನವು ಪ ಏರ ಬೇಕೆಂಬುವಂಥಾ ಘೋರತನವ ಬಿಡು ಅ.ಪ ಅನ್ಯಳ ಮಗನೊ ನೀ ಯನ್ನಲಿ ಜನಿಸಿಲ್ಲಾ ಚೆನ್ನಿಗ ಉತ್ತುಮಾಗಿನ್ನ ನೀ ಸರಿಯೇನೋ 1 ಇಂದಿನಾ ಮನೋರಥಾ ಎಂದಿಗಾವುದಲ್ಲಾ ಕಂದ ಸುನೀತಿಯಾ ಮುಂದ ಕೂಡಾಲಿ ಪೋಗೊ 2 ಇಚ್ಛಿ ಮಾಡಾದಿರೋ ಹೆ ಚಿನ್ನಾ ಶ್ರೀ ವತ್ಸನಾರಾಧನಿ ಮಾಡಿಲ್ಲಾ 3 ವೀರ ಸಿಂಹಾಸನ ಏರಬೇಕಾದರೆ ವಾರಿಜನಾಭ ನಾರಾಧನಿ ಮಾಡೊನೀ 4 ` ಚೆನ್ನಿಗಾನಂತಾದ್ರೀಶ್ನ ' ನೀ ಪೂಜಿಸಿ ಯೆನ್ನಲ್ಲಿ ಪುಟ್ಟಾದೆ ಉನ್ನತ ಪದವಿಯು 5 ಶ್ಲೋಕ ಅತ್ಯಂತ ಘೋರತರ ವಾಕ್ಯಗಳನ್ನು ತಾಳಿ ಸಂತಪ್ತನಾದ ಮನದಲ್ಲಿ ಸುನೀತಿ ಬಾಲಾ ಪುತ್ರನ್ನ ನೋಡಿ ಪಿತ ಸುಮ್ಮನೆ ಕೂತನಾಗಾ ತಾತನ್ನು ಬಿಟ್ಟು ನಡದಾ ಧ್ರುವ ತಾನು ಬ್ಯಾಗಾ 1 ಶ್ವಾಸೋಚ್ಛ್ವಾಸವು ಬಾಯಿಲಿಂದ ಬಿಡುತಾ ಕಣ್ಣಿಂದ ನೀರ ಹೋಗುತಾ ಸೂಸು ಬಾಹುವ ದು:ಖದಿಂದ ಮರಗಿತಾ ರೋದನಾ ಮಾಡುತಾ ಬಂದಾ ತೀವ್ರದಿ ತಾಯಿ ಸನ್ನಿಧಿಯಲ್ಲಿ ಆಳುತಾಗ ತುಟಿ ಬಿರಿಗಿಸಿ ಬಂದಾ ಕಂದನ ಮುಂದ ಕುಳ್ಳಿರಿಸಿ ಸತಿ ಕೇಳ್ಯಾಳು ವಿಚಾರಿಸಿ 2 ಪದ ಕಂದ ನೀ ಬ್ಯಾಗ ಹೇಳೊ ಎಲ್ಲೊ ನಿನಗೆ ಇಂದು ಬಡಿದವರ್ಯಾರು ನಿನಗೆ ಪ ಎಂದು ಪೋಗದಲೆ ತನಯ ನೀನು ಇಂದು ಪೋಗಿದ್ದಿಯೊ ದಾರ ಮನಿಗೆ 1 ಘೋರತರ ದು:ಖವೇನೊ ಈ ಪರಿ ನೀರ ತುಳಕುವ ಕಣ್ಣುಗಳಿಗೆ 2 ಏನಂತ ಪೇಳಲಿ ಸ್ವಲ್ಪ ಇಲ್ಲಾ `ಅನಂತಾದ್ರೀಶನ ' ದಯವು ನಮಗೆ 3 ಪದ ತನಯನ ಕೇಳಲು ಹೀಂಗೆ ಪೌರಜನರು ನುಡದರಲ್ಯಾಗೆ ಅರುಚಿನುಡಿಗಳ ಲ್ಹ್ಯಾಂಗೆ ಆ ಸುರುಚಿ ನುಡಿದಳ್ಹಾಂಗೆ 1 ಕೇಳಿದಳೀ ಪರಿವಾಣಿ ಮನ ಪನ್ನಗ ವೇಣಿ ಸಾಗರ ಬಿದ್ದಳು ತರುಣಿ ತಾ ಕೂಗುತ ಕೋಕಿಲವಾಣಿ 2 ಒಡಲೊಳು ಕಿಚ್ಚುರದಂತೆ ಬಹು ಮಿಡುಕೊಳು ತಾಮನದಂತೆ ನಡುಗುತ ಹಿಮ ಹೊಡದಂತೆ ತಾ ನುಡು(ಡಿ)ವಳು ಕರುಣಾದಂತೆ 3 ಏನು ಮಾಡಲಿ ಇನ್ನಯ್ಯೋ ಬಹು ದೀನಳಾದೆ ನಯ್ಯಯ್ಯೊ ಮಾನದ ಪತಿಯೆನ ಕಾಯೊ ಗುರು ಮಾನಸ ದು:ಖವ ತಿಳಿಯೋ4 ಶರಣು ಕೇಳು ದೇವೇಶಾಯನ್ನೊಳು ಕರುಣಾಬಾರದೆ ಲೇಶಾ ಚರಣಕೆರಗುವೆನು ಶ್ರೀಶಾ ಮರಣ ಕುಡಾ`ನಂತದ್ರೀಶ' 5 ಛಂದ ನಾರಿ ಸುರುಚಿಯಾ ಮಾತು ಮರಿಯದೆ ಘೊರ ದು:ಖದಾಪಾರ ತಿಳಿಯದೆ ನೀರ ಧಾರಿಯ ಕಣ್ಣಲ್ಯುದುರುತಾ ಧೈರ್ಯ ಭಾವ ತಾ ಬಿಟ್ಟಳು ಸರುತಾ 1 ಸುಂದರಾಂಗಿಯು ನೊಂದು ಮನದೊಳು ಕಂದಧ್ರುವನ ತಾ ಮುಂದ ನುಡದಳು ಬಂದ ತಾಪವ ಸಹಿಸಬೇಕಯ್ಯಾ ಇಂದು ಮನಸಿನಾ ಕೋಪ ತಾಳಯ್ಯಾ 2 ಕೇಳು ಬಾಲನೆ ರಾಜಯನ್ನನು ಭಾಳ ತುಚ್ಛವ ಮಾಡುತಿಹನು ಭಾಳ ಲಜ್ಜದಿ ಸುನೀತಿ ಭಾರ್ಯಳೆಂದು ಹೇಳಲಿಕ್ಕೆ ನಾಚುತಿಹನು 3 ಯನಗ ಪುತ್ರ ನೀನಾದ ಕಾರಣಾ ನಿನಗ ಮಾಡುವಾ ಅರಸು ನಿರ್ಘೃಣಾ ಕನಸಿಲಿಲ್ಲವೊ ಯನಗ ಹಿತಕರು ತನಯ ವೈಯಲಿಲ್ಲವೊ ಯನ್ನದೇವರು 4 ಮಿಥ್ಯವಲ್ಲವೊ ಸುರುಚಿ ನುಡಿಗಳು ಸತ್ಯ ವಾದ ಮಾತುಗಳು ನುಡಿದಳು ಪಥ್ಯವೆ ಸರಿ ಪರಮ ನಿನಗಿವೆ ಪೊತ್ತುಗಳಿಯದೆ ಪೋಗರಣ್ಯಕೆ 5 ಗುರ್ವನುಗ್ರಹ ಶಿರಸಿ ಗ್ರಹಿಸೈಯ್ಯಾ ಶರ್ವಸಖಗ ನೀ ಪೂಜಿಮಾಡಯ್ಯಾ ಪೂರ್ವದಲ್ಲಿ ನಿನ್ನ ಮುತ್ಯ ಮಾಡಿದಾ ಸಾರ್ವಭೌಮ ಆಧಿಪತ್ಯ ಏರಿದಾ 6 ಇಂದಿರೇಶನಾ ಬ್ರಹ್ಮ ಪೂಜಿಸಿ ಮುಂದ ಏರಿದಾ ಸತ್ಯಲೋಕ ನೇಮಿಸಿ ಕಂದ ಭಜಿಸು ನೀ ಛಂದದಿ ಧ್ರುವಾ ಮುಂದ ಕೇಶವಾನಂದ ಸುರಿಸುವಾ 7 ಶ್ಲೋಕ ಜನನಿಯಾಡಿದ ವಾಕ್ಯವು ಕೇಳಿ ಆಗಾ ಮನಿ ಆಸಿಯು ಬಿಟ್ಟು ನಡದಾನು ಬ್ಯಾಗಾ ಘನಾರಣ್ಯಕೆ ಪೋಗಲು ಶೋಕಸಿಂಧು ಸಿಂಧು 1 ಆರ್ಯಾ ಇಂದಿರೇಶನಾ ಸುಂದರ ಗುಣಗಳ ಬಂದಾಕ್ಷಣಹೀಗೇಂದು ನುಡದನು ಕಂದಗ ಮುನಿ ಆ ಸಮಯದಲಿ 1 ನಿಲ್ಲೆಲೊ ಬಾಲಕ ಬಲ್ಲಿದರಣ್ಯದಿ ನಿಲ್ಲದೆ ಪೋಗುತಿ ಎಲ್ಲಿಗೆ ನೀ ಯೆಲ್ಲಿಂದ ಬಂದಿ ನೀ ಫುಲ್ಲಲೋಚನ ಯೆಲ್ಲ ಬಳಗ ಬಿಟ್ಟಿಲ್ಲಿಗೆ ನೀ 2 ಕಂದ ಬಿಟ್ಟ ನೀ ಬಂದ ಕಾರಣಾ ಇಂದು ತಾಯಿ ತಂದೆಗಳೆಲ್ಲ ಸುಂದರಾನನಾ ಛಂದದಿ ನುಡಿನೀ ಮಂದಿರ ವೃತ್ತಾಂತಗಳೆಲ್ಲಾ 3 ಶ್ರೇಷ್ಠನಾರದ ನೀ ಅಷ್ಟುಲೋಕವಾ ದೃಷ್ಟಿಲಿ ನೋಡುವಿ ಇಷ್ಟರಿಯಾ ಕೆಟ್ಟ ಮಾತು ಆದುಷ್ಟ ಮಳಾಯಿಯು ಎಷ್ಟು ನುಡದಳೊ ಯನಗÀಯ್ಯಾ4 ಏನು ಪೇಳಲಿ ನಾನು ಮುನೀಶ್ವರ ಮಾನ ಗೇಡಿ ಮಾಡಿದಳೆನ್ನಾ ಮಾನ ಹೋಗಿ ಅಪಮಾನಿತನಾಗಿ ಕಾನನ ಶೇರಿದೆ ನಾ ಮುನ್ನ 5 ಮಾನಪಮಾನಗಳೆನಾದರೂ ಸರಿ ಧ್ಯಾನಕ ತರಬಾರದು ನೀನು ನಾನಾ ಲೀಲಿಯಾ ಮಾಡುವ ಬಾಲಕಗೇನು ಚಿಂತೆ ಕೇಳರೆ(ಳುವೆ?) ನಾನು 6 ಶಾಂತನಾಗು ಗುಣವಂತ ಬಾಲ ನಿ ನ್ನಂತರಂಗ ಚಿಂತಿಯು ಬಲ್ಲೆ ಚಿಂತಿಸಿ ಬಂದ್ಯೋ ನೀ ಸತತ ಸುಖ ಭಗವಂತನನೆ ಬ(ರ?) ಬೇಕಂತಿಲ್ಲೆ 7 ಎಂಥವರಿಗೆ ಭಗವಂತ ದೊರಕ ನಿ ನ್ನಂಥ ಬಾಲನಾ ಗತಿಯೇನು ಕಾಂತನಯನ ಶ್ರೀಕಾಂತ ದೊರಕ ಛೀ ಭ್ರಾಂತಿ ಬಿಟ್ಟು ತ್ವರ ನಡಿ ನೀನು 8 ಪದ ನಡಿನಡಿ ನಡಿ ಧ್ರುವಾನೆ ತಿರುಗಿ ಮನಿಗೆ ನಡಿ ನಡಿ ನಡಿ ದೊಡ್ಡ ಅಡವಿಯು ಸೇರಾದೆ ಹುಡುಗ ಬುದ್ಧಿಯನು ಬಿಡು ತಡಮಾಡದೆ ಪ ಅಂಬಕಗಳಿಗೆ ತಾನು ತೋರಾನು ಪೀ ತಾಂಬರಧರ ದೇವಾನು ಅಂಬುಜನಾಭನ ನಂಬಿ ಭಜಿಸುವಂಥ ಹಂಬಲ ಬಿಟ್ಟು ವಿಳಂಬನ ಮಾಡದೆ 1 ಕಾಲಾವಲ್ಲವೋ ಬ್ಯಾಡಯ್ಯ ವಿಗ(ಹಿ?)ತವಾದ ಕಾಲಕೆ ತಪ ಮಾಡಯ್ಯ ಕಾಲಕಾಲಕೆ ಸ್ತನ ಪಾಲನುಂಬುವ ಸಣ್ಣ ಬಾಲ ಈ ವಚನ ಬಿಟ್ಟು ಕಾಲಗಳಿಯದೆ 2 ದೇಶದೇಶವ ತಿರುಗಿ ಬಹಳ ಕಾಸೋಸಿ ಇಂದಲೆ ಮರುಗಿ ಕ್ಲೇಶಾದಿ `ಅನಂತಾದ್ರೀಶ' ದೊರಕ ಘಾಸಿ ನೀ ಆಗದೆ 3 ಆರ್ಯಾ ಮುನಿಯ ವಚನ ನೃಪತನಯ ಕೇಳಿ ಬಹುವಿನಯದಿಂದಲಿ ಹೀಗೆಂದಾ ಘನದು:ಖದಿ ಯನ್ನ ಮನಿಗೆ ಪೋಗಲಿಕ್ಕೆ ಮನಸುವಲ್ಲದು ವಲ್ಲೆಂದಾ 1 ಪದ ಮನಿಗೊಲ್ಲೆ ವಲ್ಲೆ ಮುನಿರಾಯಾಪ ಬಹುತಲ್ಲಣಗೊಳು ತಿಹ(ಹೆ?)ನೈಯ್ಯಾ ಅ.ಪ ಶೋಣೀತ ವಸ್ತ್ರನೆ ಪಾಣಿವಿನಾದಿತ ವೀಣಾಧರ ಕೇಳಯ್ಯ 1 ದುಷ್ಟಮಳಾಯಿಯ ಕೆಟ್ಟಮಾತು ಒಂದಿಷ್ಟು ಸಹಿಸಲಾರೈಯ್ಯ 2 ದೀನದಯಾಳುವೆ ಮಾನಗಳಿದು ಮು ನ್ನೇನು ಉಳಸಲಿಲ್ಲೈಯ್ಯ 3
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ಪಾರ್ವತೀದೇವಿ ಗೌರಿ ದೇವಿಗೆ ಸಖಿ ತಾರೆ ಆರುತಿಪ ಮುನಿಜನ ವಂದಿತೆ ಮನದಭಿ ಮಾನಿಯೆ | ಗಣಪತಿ ಷಣ್ಮುಖ ಜನನಿ ದೇವಿಗೆ 1 ಶಂಕರಿ ಭಕ್ತಸುಶಂಕರಿ ದೈತ್ಯ ಭ ಯಂಕಾರಿಯಾದ ಶಶಾಂಕ ಮುಖಿಗೆ 2 ಪತಿ ಸಹ ನೇಮದಿ ಪಠಿಸುವ ಹೈಮಾವತಿಗೆ 3
--------------
ಶಾಮಸುಂದರ ವಿಠಲ
ಶ್ರೀ ಭಾರತೀ ದೇವಿಯ ಸ್ತೋತ್ರ ಪಾಲಿಸೆನ್ನನು ಪವಮಾನನ ರಾಣಿ ಪಾಲಿಸೆನ್ನ ಸುಗುಣಾಲಯ ಶ್ರೀಹರಿ ಲೀಲೆ ತಿಳಿಸಿ ಭವಜಾಲವ ಹರಿಸೆ ಪ ಮಾತರಿಶ್ವÀ ಸತಿ, ಪ್ರೀತಿಲಿ ಹರಿಪದ ದೂತನೆನಿಸಿ, ಅನಾಥನ ಪೊರಿಯೆ 1 ವಿದ್ಯುನ್ನಾಮಕೆ ವಿದ್ವಜ್ಜನಪಾ - ದದ್ವಯ ಸೇವಿತ ಬುದ್ಧಿಯ ನೀಡೆ 2 ಲಿಂಗನಿವಾಸಿ ವಿಲಿಂಗಗೈಸಿ ಯನ್ನ ರಂಗನ ಪದದಲಿ ಭೃಂಗನ ಮಾಡಿ3 ಜನನಿಯೆ ನಿನ್ನಯ ತನಯಗೆ ಙÁ್ಞನದ ಸ್ತನವನಿತ್ತು ಪೊರೆ ಹನುಮನರಸಿಯೆ 4 ಶರಣಾಗತಜನ ಪೊರೆಯುವ ಕರುಣಿಯ ವರದೇಶ ವಿಠಲನ ಚರಣವ ತೋರೆ 5
--------------
ವರದೇಶವಿಠಲ
ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ ಆ ಮಹಾತತ್ವ ತಾರತಮ್ಯಗಳ ತಿಳಿದು ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ ಪ ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ ಅಕ್ಷರಿ ಎನೊ ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ | 1 ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು ಸೀರ್ಮುಟ್ಟಿ ಪೋಗಿ ನಾಗನ ಗೆದ್ದು ಅರಗಿನ ಅರ್ಮನೆಯ ದಾಟಿ ವನದೊಳಗೆ ಹಿಡಂಬನ ಶಾ ರಿರ್ಮುರಿದು ಸೀಳಿ ಬಿಸಟು ಕಿರ್ಮೀರ ದನುಜರ ಸದೆದು ಪೂತಂದು ಸು- ಶರ್ಮಕನ ಬಿಗಿದು ಕಣದೊಳಗೆ ದುಶ್ಯಾಸನನ ನಿರ್ಮಳಾತ್ಮಕನ ಭಜಿಸಿರಯ್ಯಾ | ಅಯ್ಯಾಯ್ಯಾ 2 ಹರಿಯೆ ಪರನೆಂದು ಬೊಬ್ಬಿಕ್ಕಿ ವಾದಿಗಳೆದೆ ಬಿರಿಯೆ ದು:ಶಾಸ್ತ್ರಜ ಜರಿಯೆ ದುರ್ಮತಗಳು ಪರಿಯ ಬಿಡದು ಠಕ್ಕೆ ಮೆರೆಯೆ ಧರೆಯೊಳಗೆ ಈ ಪರಿಯೆ ಮುನಿಗಾರು ಸರಿಯೆ ಪೊರೆಯ ಭಕ್ತರಿಗೆ ಸುಧೆ ಗರಿಯೆ ಜ್ಞಾನ ಮಾರ್ಗಾಂಕುರಿಯೆ ವೇದದ ಸಾರ ನೆರಿಯೆ ರಿಪುಕಾಲ ಮದಕರಿಗೆ ಕೇಸರಿಯೆ ಒಪ್ಪುವ ಭಜಿಸಿರಯ್ಯಾ | ಅಯ್ಯಯ್ಯಾ 3 ಅಜನಾಗಿ ಮುಂದೆ ಪಸರಿಸಿ ಬೆಳೆದು ಹರುಷದಲಿ ತ್ರಿಜಗವನು ನಿರ್ಮಾಣವನು ಮಾಡಿ ಒಂದೊಂದು ಸೃಜಿಸುವನು ಚಿತ್ರವಿಚಿತ್ರ ಗುಣಗಣವುಳ್ಳ ಇವನೆಂದು ವೇದಗಳು ಸಾರುತಿವೆ ಕುಜನಮತವನೆ ಪಿಡಿದು ಪುಸಿಯಿದು ಎಂದೆನ್ನದೆ ಭಜಿಸಿ ಗುರುಪಥವಿಡಿದು ಸಂದೇಹವನೆ ತೊರೆದು ಸುಜನರ ಶಿರೋಮಣಿಯಯ್ಯ | ಅಯ್ಯಾಯ್ಯಾ4 ಜಾತಿ ಸಂಕರವಾಗಿ ಜಾತಿ ಧರ್ಮವ ತೊರೆದು ಜಾತವೇದ ಸಯಜ್ಞ ಇಲ್ಲದಿದರೆ ವನಜ ಸಂ ಮೌಕ್ತಿದಮಣಿ ನುಡಿದ ಕರುಣದಲಿ ದ್ವಿ ಜಾತರನ ಉದ್ಧರಿಸ ಪೋಗೆನಲು ಜಯ ತನೋ ಜಾತ ಪುಟ್ಟಿದನು ಇಳಿಯೊಳಗೆ ಮಧ್ಯಗೇಹರ ಜಾತನಂ ಭಜಿಸಿರಯ್ಯ | ಅಯ್ಯಯ್ಯಾ | 5 ಇಳಿಯೊಳಗೆ ಬಲವಂತನಾದ ಮತ ಮಧ್ವಮತ ಸುಲಭವಾಗಿಹುದು ಸುಲಭರಿಗೆ ಕಮಲಕೇತಪನ ಹೊಳಪು ಹೊಳೆದಂತೆ ವಿಕಸಿತಾ ಮಾಡಿ ಸುಜ್ಞಾನ ಜಲಧಿಯೊಳಗಾಡಿಸುವುದು ಮಲತು ನಿಂತಿರ್ದ ಹರಿನಾಮ ದಂಡವಾ ಗುರುಕುಲತಿಲಕನಂ ಭಜಿಸಿರಯ್ಯಾ | ಅಯ್ಯಯ್ಯಾ |6 ದುರವಾದಿಗಳ ಗಂಡ ಗಜದಭೇರುಂಡ ಸಂ ಕರಣ ಪ್ರಾಣವನರದು ದುರ್ಮಾಯಿ ಮಿಥ್ಯದ ಕುಹಕ ಮುರಿದು ಉರಹಿ ಅರಿಗಳಂಗದ ಚರ್ಮ ಸುಲಿದು ಭೇರಿಗೆ ಹಾಕಿ ಹರಿಸೆ ಓಂಕಾರ ಮಣಿಯಂ ಭಜಿಸಿಯ್ಯಾ | ಅಯ್ಯಯ್ಯಾ 7 ಗುರುಕರುಣ ಪಡೆದ ಮಾನವನೆ ಸರ್ವಕೃತಾರ್ಥ ಗುರುಕರುಣ ಪಡೆಯದಿದ್ದವನ ಜನ್ಮವೇ ವ್ಯರ್ಥ ಉರಗ ಉಪವಾಸ ತಂತ್ರ ಕರಿ ಕರುಣತಿಪ್ಪುವದು ಗುರು ದಯಾಕರನಾಗೆ ಹರಿವೊಲಿದು ಸಲಹುವನು ಪಾದವ ನಂಬಿರೈಯ್ಯ | ಅಯ್ಯಯ್ಯಾ 8 ಪದ್ಧತಿಯ ಕೇಳಿ ಶುದ್ಧಾತ್ಮರಿದು ವರಗುರು ಮಧ್ವ ದುಗ್ಧಾಬ್ಧಿಯನು ಕಟಿದ ನವ ನವನೀತ ಮುದ್ದೆಯನು ತೆಗೆದು ನವವಿಧ ಭಕುತಿರಸದಿಂದ ಮೆದ್ದು ಸದ್ಭಾವದಲಿ ಸದ್ವೇಷ್ಣವರಾಗಿ ಮೃತ್ಯುವಿನ ಗೋನಾಳಿ ಒದ್ದು ಕಾಲನ ಮೀರಿ ವೈಕುಂಠಪುರ ಸಾರಿ ಸಿರಿ ಪಾದದ್ವಯವ ಭಜಿಸಿರಯ್ಯಾ ಅಯ್ಯಯ್ಯ 9
--------------
ವಿಜಯದಾಸ
ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣುವಾಮಾಂಕಸದನಿ ಪ. ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ ವಿನುತೆ ಹೇ ಸೋಮ ಸಹೋದರಿಅ.ಪ. ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹನಯನೆ 1 ಕಳೇವರ ಕೊಳುತಲಿಹಲವು ವಿಧಾರ್ಚನೆಗಳಲಿ ಪತಿಯನುಒಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದಬಲುಸುಖಜಲನಿಧೆ ಸಲಹೆ ನಮಿಸುವೆ 2 ಹೇಮಾಂಬರ ಚಾರು ಶ್ರೋಣಿಅಮಿತ ಸುಗುಣೆ ಶೋಭಿತ ಅಬ್ಜಸದನೆತಮಹಾರಿ ಗೋಪಾಲವಿಠಲನರ್ಧಾಂಗಿಯೆಸಮರೂಪ ಸಮಕಾಲ ಸಮದೇಶ ವ್ಯಾಪುತೆರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-ಶಮಲವಳಿದು ಹೃತ್ಕಮಲದಿ ಹರಿತೋರೆ 3
--------------
ಗೋಪಾಲದಾಸರು
ಶ್ರೀ ಮುಖ್ಯ ಪ್ರಾಣದೇವರ ಸ್ತೋತ್ರ ಪಾಲಿಸಯ್ಯಾ ಶ್ರೀ | ಪ್ರಾಣರಾಯ | ಪಾಲಿಸಯ್ಯಾ ||ಪಾಲಿಸಯ್ಯಾ ಶ್ರೀ ಲೋಲನ ಭೃತ್ಸನೆ |ವಾಲಯದಲಿ, ಮಹದುರಿತವ ತರಿದು ಪ ಶರಣು ಪೊಕ್ಕವರ ಸಲಹುವನೆಂದು |ವರವೇದಂಗಳು ಸಾರುತಲಿಹವೊ 1 ಶಿಶುವಿನ ತಪ್ಪೆಣಿಸದೆ ಆ ಜನನಿಯು |ಬಿಸುಟದೆ ತ್ಪರದಿಂ ಕರುಣ ಮಾಳ್ಪವೋಲ್ 2 ಶ್ರೀಶ ಪ್ರಾಣೇಶ ವಿಠಲನ ದಾಸಾಗ್ರಣಿ |ನೀ ಸದಾ ಕರುಣ್ಯುಪೇಕ್ಷ ಮಾಡದೇ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ | ಚಾರುತರ ಯುಗ್ಮಪದ ರಂಜನಾಸುರ ಸಂ | ಹಾರ ಸುರ ಜನ ಪಾಲ ಪರಮಾನಂದ ಸಾ | ಕಾರನಲಿದುಪ್ಪವಡಿಸಾ ಹರಿಯೇ ಪ ಹರಿವೇಗ ಮಂಮೀರ್ವ ಹರಿಗಳೇಳಂಗಳದಲಿ | ಹರಿಯಾಗ್ರಜನನಿಂದ ಹರಿಪದದೊಳಗ ಜವದಿ ಹರಿವುತಿಹ ಝಗ ಝಗಿಪ ಹರಿಮಯದ ರಥದೊಳಗ | ಹರುಷಾದೊಳಡರ್ದು ಬಳಿಕಾ || ಹರಿದಿಕ್ಕಿ ಲಿಂದೊಗೆದು ಹರಿಜಗಳ ವಿಸ್ತರಿಸಿ | ಹರಿಯುಮೊದಲಾದವರ ಹರಿಸಿ ತೇಜವ ಜಗಕ | ಪರಿ ಹರಿಸಿ ಉದಿಸಿದಹರಿಯು ನರಹರಿಯೆ ಉಪ್ಪವಡಿಸಾಹರಿಯೇ1 ಪವನಜ ಖಗರಾಜ | ಭಜಿಪಧ್ರುವದ ಶಶಿರಾನುಜ ಭಿಷ್ಮಾ ತನ್ನ ಆ | ತ್ಮ ಜರಿತ್ತ ರಿಕ್ಷಪತಿ ರಜನೀಶ ವಾನ್ನರ | ಧ್ವಜ ವಿಧುರ ಅಂಬರೀಷಾ || ದ್ವಿಜ ಪುಂಡಲೀಕ ಪದ್ಮಜ ಮುಖ್ಯರಾದ ನಾ | ಶುಕ ಉದ್ಧವ ಬಲಿ ಜಯ ವಿಜಯರ ಕೂಡಿ | ಸುಜನರೈ ತಂದ | ರಂಬುಜ ಪದಕ ನಮಿಸೆ ವಾ | ರಿಜನಾಭ ಉಪ್ಪವಡಿಸಾ ಹರಿಯೇ 2 ಪಾಕ ಶಾಸನ ಅಗ್ನಿ ಆಕಾಳ ನೈಋತಿರ | ತ್ನಾಕರ ಪ್ರಭಂಜನಪಿ ನಾಕಿವರ ಕೌಬೇರ | ನಾಕೆರಡು ದಿಕ್ಕಿನವರೇಕೋ ಭಾವದಲಿಂದ ನಾಕ ಪುರಗಜ ಅಜಮಹಾ ಕೋಣ ಮನುಜ ಮಕ | ಹಾಕುರಂಗಂದಣವು ಗೋಕುಲೆಂದ್ರನು ಇಂತು | ವಾಹನ ವಿವೇಕದೇರಿ ಬಂದಿದೆ | ಲೋಕೇಶ ಉಪ್ಪವಡಿಸಾ ಹರಿಯೇ3 ಶ್ರೇಷ್ಠ ಕಶ್ಯಪ ಋಷಿ ವಶಿಷ್ಠ ಗಾರ್ಗೇಯ ತಪೋ | ನಿಷ್ಠ ವಿಶ್ವಾಮಿತ್ರ ಸೃಷ್ಠಿಯೊಳ ಜಲದ ಸಂ | ದಷ್ಟ ವರುಣನ ಗರ್ವ ಭಷ್ಟ ಮಾಡಿದಗಸ್ತಿ | ಅಷ್ಟಾದಶ ಧ್ವಯ ಬಾರಿ ಸೃಷ್ಟಿರ ಚನೆಯ ಕಂಡ | ತುಷ್ಟ ಬಕದಾಲ್ಪ್ಯ ಉತ್ಕøಷ್ಟ ಸನಕಾದಿಗಳು | ದೃಷಮಾನಿಸರಾಗಿ ಮುಟ್ಟಿಸ್ತುತಿ ಸುತಲಿದೇ | ಕೃಷ್ಣ ನೊಲಿ ದುಪ್ಪವಡಿಸಾ ಹರಿಯೇ 4 ವರ ವಾಮ ದೇವಾತ್ರಿ ಪರಮಗಾಲ ವನುಸೌ | ಭರಿಯ ಕೌಡಿಣ್ಯ ಸುಖ ಭರಿತ ಕೌಸಿರ ಮತಿ | ಪರಿಪೂರ್ಣ ಜಯಾಮುನೀರ್ವರು ಭರತರುಸುಗುಣ ಶರಧಿ ವೈಶಂ ಪಾಯನಾ|| ಸುರಪುರೋಹಿತ ಮಹಾ ಸುರರ ವಂಶಾವಳಿಯು | ತರಣಿಜ ಬುಧಾದಿಗಳ | ಕರದೊಳು ಸುಫಲವಿರಿಸಿ ಹರುಷಾದಲಿ ನಿಂದಿದೆ || ಪರಬೊಮ್ಮ ಉಪ್ಪ ವಡಿಸಾ ಹರಿಯೇ 5 ಡಮರುಧರ ಜಡೆಯೊಳಗ ಸಮುಲ್ಲಾಸದಲಿ ಮೆರೆವ ಅಮರ ನದಿ ಪಾಪಹರ ಸಮಕೃಷ್ಣ ವೇಣಿ ಸು | ವಿಮಲ ಗೋದಾವರಿ ಕುಮುದ್ವತಿ ಕಾವೇರಿ | ಶ್ರಮಹಾರಿ ತುಂಗ ಭದ್ರಿ || ಯಮುನಿ ಫಲ್ಗುಣಿ ಮಹೋತ್ತಮ ಸರಸ್ವತಿ-ಕಪಿಲ | ನರ್ಮದಿ ಮೊಲಾಗಿ ಅಮಲಗ್ರೋದ ಕವ | ಕ್ರಮದಿಂ ಕೊಂಡು ನದಿ ಚಮು ಬಂದಿದೇ ಪೊರಗ | ಕಮಲಾಕ್ಷ ಉಪ್ಪವಡಿಸಾ ಹರಿಯೇ6 ದಾರುಣೀ ಚರರಾದಾ ಚಾರುಗೋ ಬ್ರಾಹ್ಮಣರು | ಸಂರಕ್ಷಣೆಯ ಮಾಳ್ವ ಧೀರಯ ಯಾತಿ | ಮೇರು ಸಮ ಹರಿಶ್ಚಂದ್ರ ವೈರಾಟ ಪತಿಜನಕ | ಆರಾಯ ನಳ ನಹುಷನು || ಶೂರ ಹಂಸಧ್ವಜನು ಸಾರಿ ವಿಷ್ಟಕ್ಸೇನ | ವೀರ ಪಾಂಚಾಲನ - ಕ್ರೂರ ಚಂದ್ರಹಾಸ ಮ | ಯೂರ ಧ್ವಜ ಪ್ರಮುಖರಾರತದಿ ಬಂದರಿದೆ | ಕಾರುಣನೆ ಉಪ್ಪಾವಡಿಸಾ ಹರಿಯೇ 7 ವಾರಿಯೋಳ್ ನಡೆವಹತೇರಗಜ ಶೃಂಗರಿಸಿ | ಏರಿಬಂದಿಳಿದು ಮಹಾ ವೀರ ಭಟರೋಗ್ಗೀನೊಳು | ಬಾರಿ ಬಾರಿಗೆ ನಿಮ್ಮ ಚೀರುತ ಬಿರುದಂಗಳನು ಭೂರಿಜನ ಸಚಿದಣಿಸುತಾ || ಪಾರವಿಲ್ಲದ ಪಟಹ ಭೇರಿ ನಿಸ್ಸಾಳತಹ | ಳಾರವರಿದು ಊದುತಲಿ ಈ ರೀತಿ ನೃಪರದಳ | ಚಾರುವಾಲಗವ ಮನವಾರಗುಡುತಿದೆ ಪರಮ ಶೌರಿ ವಲಿದು ಪ್ಪವಡಿಸಾಹರಿಯೇ 8 ಕೇಣವನು ಗೊಳ್ಳದಿಹ ಜಾಣ ಕಲೆಯಿಂದ ಗೀ | ರ್ವಾಣ ಸ್ತ್ರೀಯರು ನೃತ್ಯ ಮಾಣುತಲಿ ಬರೆಕರದಿ | ವೀಣೆಯನು ತಾಂ ಪಿಡಿದು ವಾಣಿ ತುಂಬರ ಸುಪ್ರ ವೀಣನಾರದ ಗಣಪನು || ಶ್ರೇಣಿಯಿಂ ತೊಡಗೂಡಿ ತ್ರಾಣದಿಂದಲಿ ನಾಮ | ವಾಣಿಯಲಿ ವಚಿಸುತಿದೆ ಕಾಣಲ್ಕೆ ನಿಂದಿದೆ | ಏಣಾಂಕನುಜೆ ಮುಗಿದು ಪಾಣಿಯನು ಗುರು ಮಹಿಪತಿ ಪ್ರಾಣನೊಲಿದುಪ್ಪವಡಿ ಸಾ ಹರಿಯೇ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಲಕ್ಷ್ಮೀದೇವಿಯ ಸ್ತೋತ್ರ ಭಾಗ್ಯವೆ ಪಾಲಿಸೆನ್ನಗೆ ಭಾರ್ಗವಿ ಜನನಿ ಪ ಭಾಗ್ಯವೆ ಪಾಲಿಸು ಭಾರ್ಗವಿ, ಕಮಲಜ ಭಾರ್ಗಾದ್ಯನಿಮಿಷ ವರ್ಗಸೇವಿತೆ ಅ.ಪ ಹರಿಸರ್ವೋತ್ತಮ ಗುರುಸುಖತೀರ್ಥರು ಹರಫಣಿ ವಿಪಶಕ್ರಾದಿಗಳು ತರತಮ ಭೇದ ಮೂರೆರಡು ಸತ್ಯ ವೆಂ - ದರಿತು ಮನದಿ ಬಲು ಹರುಷ ಬಡುತಲಿಹ 1 ಕಾಮಕ್ರೋಧಗಳ ಗೆಲಿದು ಸತತನಿ - ಷ್ಕಾಮ ಭಕ್ತಿಯಲಿ ಮನವುಬ್ಬಿ ರಾಮ ರಾಮ ಎಂದ್ ಪ್ರೇಮದಿ ಪಾಡುತ ರೋಮಾಂಚಿತ ತನುವಿಲಿನರ್ತಿಪ ಸೌ 2 ದುರ್ಜನ ಸಂಗ ವಿವರ್ಜಿಸಿ ನಿರುತದಿ ಸಜ್ಜನಸಂಗಸುಖವ ಬಯಸಿ ಅರ್ಜುನಸಖನ ಪದಾಬ್ಜಧ್ಯಾನ ದೊಳು ಗರ್ಜಿಸುತಲಿ ನಿರ್ಲಜ್ಜನೆನಿಪ ಸೌ 3 ನಾನುನನ್ನದೆಂಬೊಹೀನ ಮತಿಯ ಕಳೆ - ದೆನು ಮಾಡುತಿಹಕರ್ಮಗಳ ಶ್ರೀನಿವಾಸನ ಪ್ರೇರಣೆ ಎಂದು ಸ - ದಾನುರಾಗದಲಿ ಅರ್ಪಿಸುತಿಹ ಸೌ 4 ಸೂಸುವ ಭಕ್ತಿ ವಿರಕ್ತಿ ಙÁ್ಞನಧನ ರಾಶಿಯ ಕೋಟ್ಟೀಭವಸುಖದ ಆಶೆಬಿಡಿಸಿ ವರದೇಶ ವಿಠಲನ ದಾಸರ ದಾಸರ ದಾಸ ನೆನಿಪ ಸೌ 5
--------------
ವರದೇಶವಿಠಲ
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ ರಾಜೀವ ಚರಣದ ಸೇವೆಯ ಪಾಲಿಸು ಕೋವಿದರೊಡನೆ ಪ ಸಮಸ್ತಲೋಕ ವಂದಿತೆ ಸಂತತ ಮತ್ತೆ ತಾಮಸ ಜ್ಞಾನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ ರೋಮ ರೋಮ ಗುಣ ಭರಿತೆ ರಾಮನ್ನ ಪದ ನಾಮವನ್ನು ನಾ ಮರೆಯದಂತೆ ನೀ ಮನಸು ಕೊಡು ಹೇಮಾಂಬರೆ ಕಾಂಚಿದಾಮೆ ಅಮಮ ನಿ- ವನಧಿ ಸೋಮೆ ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ ಕಾಮೆ ಸುರಸಾರ್ವಭೌಮೆ 1 ಚಂದನ ಗಂಧಲೇಪಿನೀ ಚತುರವಾಣೀ ಮಂದಹಾಸಗಮನೀ ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ ಸಿಂಧುತನಯೇ ಕಲ್ಯಾಣಿ ಇಂದಿರೆ ಪದ್ಮಮಂದಿರೆ ಕಂಬು ಕಂಧರೆ ಸರ್ವಸುಂದರೆ ಮಾಯೆ ಬಂದೆನು ಕರುಣದಲಿಂದ ನೋಡು ಶತ - ಕಂಧರÀರಿಪು ಸುಖಸಾಂದ್ರ ನಿರಾಮಯೆ ಹಿಂದಣ ಕಲ್ಮಷ ವೃಂದಗಳೋಡಿಸಿ ನಿಂದೆ ನಮೋನಮೋ ಯೆಂದೆ 2 ನಿತ್ಯ ಸಲ್ಲಾಪೆ ಅನ್ನಂತಾನಂತ ರೂಪೆ ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ- ವನ್ನು ಹರಹಿ ಹಿರಣ್ಯಗರ್ಭಾದಿ- ಅನುದಿನ ಧನ್ಯನ ಮಾಳ್ಪಳೆ ಅನ್ಯರಿಗೆ ಕಾರ್ಪಣ್ಯ ಬಡದಂತೆ ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ 3
--------------
ವಿಜಯದಾಸ
ಶ್ರೀ ವಾಯುದೇವರು ಕಾಯೊ ಹನುಮರಾಯ ನಿನ್ನ ಕಾಯ ಮನದಿ ನಮೋ ಪ ಭಾರತೀಶ ಕೃಪಾಸಮುದ್ರನೆ ವಾರಿಜಜಾಂಡದಿ ಸರ್ವಜೀವರೊಳಿದ್ದು ಮೂರೇಳು ಸಾಸಿರ ನೂರಾರು ಜಪಗಳ ಇರುಳು ಹಗಲು ನರಹರಿಗೆ ಅರ್ಪಿಪ ಸುರ 1 ಮಾತರಿಶ್ವಪ್ರಖ್ಯಾತ ಮಹಿಮನೆ ವಾತ ಪ್ರಭಂಜನ ಸತತ ಎನ್ನನು ಅತಿ ಹಿತದಿ ನೀ ಸಲಹುವೆ ಪ್ರತತ ಶ್ರೀ ನೃಹರಿಯ ಪ್ರಥಮಾಂಗನೆ ದಣಿ 2 ಸತ್ಪಾತ್ರ ಮಾಡೆನ್ನ ಸೂತ್ರಸುಖ ಸಿತಗಾತ್ರ ಪವಿತ್ರನೆ ಮಾತ್ರಾಕರಣನಿಯಂತೃ ಮಹಂತನೆ ಚಿತ್ರ ಪುರುಷ ಮಾಕಳತ್ರನ ತೋರಿಸೊ 3 ದೇವಜನನುತ ಭಾವಿ ಬ್ರಹ್ಮನೆ ಕಾವ ಕರುಣಿಯೆ ಪವಮಾನ ನಮೋ ನಮೋ ಭಾವುಕರೊಡೆಯ ಶ್ರೀದೇವಿ ಶಾಂತಿಯ ಪತಿ ದೇವವರೇಣ್ಯನನಿರುದ್ಧನ ತೋರಿಸೊ 4 ಶುದ್ಧ P್ಪರುಣಾಬ್ಧಿ ನಮೋ ನಮೋ ಶುದ್ಧ ಭಕ್ತ್ಯಾದಿ ಸಂಪತ್ತು ಎನಗಿತ್ತು ಉದ್ಧರಿಸೊ ಎನ್ನ ಶ್ರದ್ಧೇಶ ಮುಖ್ಯಪ್ರಾಣ ಪದ್ಮೆ ಕೃತೀಶ ಪ್ರದ್ಯುಮ್ನಗೆ ಪ್ರಿಯತಮ 5 ಜ್ಞಾನಬಲರೂಪ ಹನುಮ ನಮೋ ನಮೋ ಜ್ಞಾನಸುಖಮಯ ಜಾನಕೀಶನ ದೂತ ಇನನ ಸುತನಿಗೆ ವಿಭೀಷಣನಿಗೆ ರಾಮ ತಾನೂ ಒಲಿದ ನೀನೊಲಿದ ಕಾರಣದಿ 6 ಕಾಂತ ಕೃಷ್ಣನೇಕಾಂತ ಭಕ್ತಾಗ್ರಣಿ ಅಂತಕ ಸುಜನರ ಸಂತತ ಪೊರೆವ ಧನಂಜಯಗೊಲಿದನೆ 7 ಪಂಚಭೇದ ಪ್ರಪಂಚ ಸತ್ಯವಿ ರಿಂಚಿಪಿತನೆ ಸ್ವತಂತ್ರ ಸರ್ವೋತ್ತಮ ಚಿಂತಿಸೆ ಭಕ್ತಿಯಿಂ ಮಿಂಚುಪೊಲ್ ತೋರಿ ನಿ ರಂತರ ನಿಜಸುಖವೀವನೆಂದೆಯೊ ಮಧ್ವ 8 ಶ್ರೀಶ ಚಿನ್ಮಯ ದೋಷದೂರನು ವ್ಯಾಸ ಸುಖಮಯ ಪ್ರಸನ್ನ ಶ್ರೀನಿವಾಸ ಭಾಸಿಪ ನಿನ್ನಯ ಹೃತ್ಸರಸಿಜದಲಿ ದಾಶರಥಿಯ ಮುಖ್ಯ ದಾಸವರ್ಯನೆ ನಮೋ 9
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವೆಂಕಟಾಚಲ ನಿವಾಸ ನಿನ್ನ ಸೇವಾನುಸೇವಕರ ದಾಸಾ ಎನಿಸಿ ಜೀವಿಸುವ ನರಗೆ ಆಯಾಸಾ ಯಾಕೆ ಶ್ರೀವರನೆ ಕೊಡು ಎಮಗೆ ಲೇಸಾ 1 ಕಂಸಾರಿ ಪ್ರಭು ನಿನ್ನ ದಿವ್ಯ ನಾಮ ಒದಗಲು ಜಿಹ್ವೆಗೆನ್ನಾ ದೋಷ ಸೀಮೆಗಾಣದಿದ್ದರೆನ್ನ ಸ್ವಾಮಿ ನೀ ಮರೆಯಲಾಗದು ಸುಪ್ರಸನ್ನ 2 ನೀಚ ಯೋನಿಗಳಲ್ಲಿ ಬಂದೆ ಇನ್ನು ನಾಚಿಕಿಲ್ಲವೊ ಎನಗೆ ತಂದೆ ನೀನೆ ಮೋಚಕನು ಬಿನ್ನಪ ವಿದೆಂದೆ ಸವ್ಯ ಸಾಚಿಸಖ ಕೈಪಿಡಿಯೋ ತಂದೆ 3 ನಾನೊಬ್ಬನೇ ನಿನಗೆ ಭಾರವಾದೆ ನೇನೊ ಸಂತತ ನಿರ್ವಿಕಾರ ಎನ್ನ ಹೀನತ್ವ ನೋಡಲ್ಕಪಾರ ಚಕ್ರ ಪಾಣಿ ಮಾಡಿದಿರೆನ್ನ ದೂರ 4 ಕಂಡ ಕಂಡವರಿಗಾಲ್ಪರಿದು ಬೇಡಿ ಬೆಂಡಾದೆ ನಿನ್ನಂಘ್ರಿ ಮರೆದು ದಿಟ ತೊಂಡವತ್ಸಲನೆಂಬ ಬಿರುದು ಕಾಯೊ ಪುಂಡರೀಕಾಕ್ಷ ನೀನರಿದು 5 ಈ ಸಮಯದೊಳೆನ್ನ ತಪ್ಪ ನೋಡಿ ನೀ ಸಡಿಲ ಬೇಡುವರೇನಪ್ಪ ನಿನ್ನ ದಾಸರ್ಪೆಸರ್‍ಗೊಳಲು ಬಪ್ಪಾ ದೋಷ ನಾಶವಾಗೋದು ತಿಮ್ಮಪ್ಪ 6 ಕಾಮಾದಿಗಳ ಕಾಟದಿಂದ ನಿನ್ನ ನಾ ಮರೆದೆ ಸಚ್ಚಿದಾನಂದ ಎನ್ನ ಈ ಮಹಾ ದೋಷಗಳ ವೃಂದ ನೋಡದೆ ನೀ ಮನ್ನಿಸೆನ್ನ ಮುಕುಂದ 7 ನೀ ಪಿಡಿದವÀರ ಸಹಸ್ರಾರ ಸುಜನ ಪಾಪಾಟವಿಗೆ ಸುಕುಠಾರಾ ಜಗ ದ್ವ್ಯಾಪಕನೆ ಎನ್ನ ಸಂಸಾರ ಘೋರ ಕೊಪದಿಂದೆತ್ತಯ್ಯ ಧೀರ 8 ಸಿಂಧೂರ ರಾಜ ಪರಿಪಾಲ ಕೋಟಿ ಕಂದರ್ಪ ಲಾವಣ್ಯ ಶೀಲ ಧರ್ಮ ಮಂದಾರ ಭೂಜಾಲಪಾಲ ಯೋಗಿ ಸಂದೋಹ ಹೃತ್ಕುಮುದ ಶೀಲಾ 9 ಶಿವನ ವೈರಿಯ ಕೊಂದ ಶಕ್ತ ಪುಣ್ಯ ಶ್ರವಣ ಕೀರ್ತನ ನಿನ್ನ ಭಕ್ತಾ ಜನರ ಭವದೊಳಗೆ ದಣಿಸುವುದು ಯುಕ್ತವೇನೊ ಭುವನ ಪಾವನ ನಿತ್ಯಮುಕ್ತ 10 ಶ್ರೀಕರ ಶ್ರೀಮದಾನಂತ ನಿಖಿಳ ಲೋಕೈಕನಾಥ ನಿನ್ನಂಥ ಸಖರ ನಾ ಕಾಣೆನೆಲ್ಲಿಯೂ ಮಹಂತಾ ಎನ್ನ ನೀ ಕಾಯೋ ಕಂಡ್ಯ ಭೂಕಾಂತಾ 11 ಕರ್ಮ ಚಿತ್ರತ್ವಗ್ರಸನ ಕಾಯ ಕರಣ ಮನಹಂಕಾರ ಘ್ರಾಣಾ ಬುದ್ದಿ ಚರಣ ಪಾಯೂಪಸ್ಥ ನಯನಜಾತ ಉರುಪಾಪ ಕ್ಷಮಿಸು ಶ್ರೀ ರಮಣಾ 12 ಅನಿಮಿತ್ತ ಬಂಧು ನೀಯೆನ್ನ ಬಿಡುವು ದನುಚಿತವೋ ಲೋಕಪಾವನ್ನ ಚರಿತ ಮನ ವಚನ ಕಾಯದಲಿ ನಿನ್ನ ಪಾದ ವನಜ ನಂಬಿದೆ ಸುಪ್ರಸನ್ನಾ 13 ನೀನಲ್ಲದೆನಗೆ ಗತಿಯಿಲ್ಲ ಪವ ಮಾನವಂದಿತ ಕೇಳೋ ಸೊಲ್ಲ ಎನ್ನ ಜ್ಞಾನೇಚ್ಛೆ ಕ್ರಿಯಂಗಳೆಲ್ಲಾ ನಿನ್ನ ಧೀನವಲ್ಲವೆ ಲಕ್ಷ್ಮೀನಲ್ಲಾ 14 ಪ್ರಾಚೀನ ಕರ್ಮಾಂಧ ಕೂಪದೊಳಗೆ ಯೋಚಿಸುವ ನರರ ಸಂತಾಪ ನಿನಗೆ ಗೋಚರಿಸದೇನೋ ಬಹುರೂಪ ವೆಂಕ ಟಾಚಲನಿಲಯ ಪಾಹಿ ಶ್ರೀಪಾ 15 ಯಾಕೆ ದಯ ಬಾರದೆನ್ನಲ್ಲಿ ನರಕ ನಾಕ ನರಕ ಭೂ ಲೋಕಂಗಳಲ್ಲಿ ಚರಿಸಿ ನಾ ಕಷ್ಟಪಟ್ಟ ಬಗ್ಗೆ ನೀ ಬಲ್ಲಿ ವೀತ ಶೋಕ ಕೊಡು ಭಕುತಿ ನಿನ್ನಲ್ಲಿ 16 ಬನ್ನ ಬಡಿಸುವರೇನೋ ಬಿಡದೆ ನಾನು ಮುನ್ನ ಮಾಡಿದ ಪಾಪ ಕೆಡದೆ ನೀ ಪ್ರ ಪನ್ನ ವತ್ಸಲನೆಂದು ನುಡಿದೆ 17 ತಾಪತ್ರಯಗಳಿಂದ ನೊಂದೆ ಮಹಾ ಪಾಪಿಷ್ಠರಲ್ಲನ್ನ ತಿಂದೆ ಇನ್ನು ಆಪರೇತೇಶ್ವರನ ಮುಂದೆ ಪೋಗಿ ನಾ ಪೇಕೊಳಲೇನು ತಂದೆ 18 ದೇಹ ಸಂಬಂಧಿಗಳ ಸಹಿತವಾಗಿ ನಾ ಹೊಂದಿದೆನು ಲೋಕಮೋಹಿತ ಎನ್ನ ಮೋಹಿಪ್ರದು ನಿನ್ನಗೇನು ವಿಹಿತ ಹೃದಯ ಬಾಹಿರಂತರದಿ ಸನ್ನಿಹಿತ 19 ಪೋಗುತಿದೆ ದಿವಸ ಕಮಲಾಕ್ಷ ಪರಮ ಅಪರೋಕ್ಷ ಎನಗೆ ಹೇಗಾಗುವುದೊ ಸುರಾಧ್ಯಕ್ಷ ದುರಿತ ನೀನು ಕಾಮಿತ ಕಲ್ಪವೃಕ್ಷ 20 ಗತಿಯಾರು ನಿನ್ನುಳಿದು ದೇವ ರಮಾ ಸಂಜೀವ ಎನ್ನ ಸತಿಸುತರ ಅನುದಿನದಿ ಕಾವ ಭಾರ ಸತತ ನಿನ್ನದು ಮಹಾನುಭಾವ 21 ದೊಡ್ಡವರ ಕಾಯ್ವುದೇನರಿದು ಪರಮ ದಡ್ಡರನು ಕಾಯ್ವದೇ ಬಿರುದು ಎನ್ನ ಗುಡ್ಡದಂತಹ ಪಾಪ ತರಿದು ಕಾಯೋ ವಡ್ಡಿ ನಾಯಕ ಸಾರೆಗರದೊ 22 ಜ್ಞಾನಿಗಳು ನೀಚರಲಿ ಕರುಣಾ ಮಾಡ ರೇನೋ ಬಿಡುವರೇ ರಥಚರಣ ಪಾಣಿ ಭಾನು ಚಂಡರವಿಕಿರಣ ಬಿಡದೆ ತಾನಿಪ್ಪನೆ ರಮಾರಮಣ23 ಆಡಲ್ಯಾತಕೆ ಬಹಳ ಮಾತಾ ಪರರ ಬೇಡಲಾರೆನೋ ಜಗತ್ರಾತಾ ಹೀಗೆ ಮಾಡುವರೇ ಕೆಳೆನ್ನ ಮಾತ ನೀನೆ ನೀಡೆನಗೆ ಪುರುಷಾರ್ಥ ದಾತಾ 24 ಬೇಡಲೇತಕೆ ಬಹಳ ಮಾತಾ ಎನ್ನ ಕೇಡು ನಿನ್ನದಲ್ಲೇ ಬಲಿದೌತ ಪಾದ ಬೇಡಿಕೊಂಬುವೆ ನಾನನಾಥ ದೂರ ನೋಡಲಾಗದು ಪಾರ್ಥಸೂತ 25 ನಿತ್ಯ ಬಿಡದೆ ಶಾರದೇಶನ ನುತಿಪ ಭಕ್ತ ಜನರ ಪಾರ ಸಂತೈಸುವುದು ಮಿಥ್ಯವಲ್ಲ ಶ್ರೀರಮಣ ಸಾಕ್ಷಿದಕೆ ಸತ್ಯಾ 26 ಪರಿಯಂತ ಶಯನ ಪ್ರಣತಾರ್ತಿ ಹರನೆಂಬೊ ಅಂಕಾ ಕೇಳಿ ಮಣಿದ ನಿನ್ನಂಘ್ರಿಗೆ ಶಶಾಂಕಾ ಭಾಸ ದಣಿಸಲಾಗದು ನಿಷ್ಕಳಂಕಾ27 ಕಾರ್ತವೀರ್ಯಾಜುನನ ಕೊಂದ ಭವ್ಯ ಕೀರ್ತಿ ನಿನ್ನಾನಂದ ವೃಂದ ಸತತ ಕೀರ್ತಿಸುವ ನರರ ಬಹುಕುಂದ ನೋಡ ದಾರ್ತನ್ನ ಪೊರೆಯೊ ಗೋವಿಂದ 28 ದಯದಿಂದ ನೋಡೆನ್ನ ಹರಿಯೆ ಜಗ ನ್ಮಯನೆ ಜ್ಞಾನಾನಂದ ವೃಂದ ಸಿರಿಯೆ ಮನಾ ಭಯದೂರರಿನ್ನೊಬ್ಬರರಿಯೇ 29 ನರಸಿಂಹ ನಿನ್ನುಳಿದು ಜಗವ ಕಾಯ್ವ ಪರಮೋಷ್ಠಿ ರಾಯನು ನಗುವ ನಿತ್ಯ ನಿರಯಾಂಧ ರೂಪದೊಳು ಹುಗಿವಾ 30 ದಾಸ ದಾಸರ ದಾಸನೆಂದು ಬಿಡದೆ ನೀ ಸಲಹೋ ಎನ್ನನೆಂದೆಂದೊ ನಿನ್ನ ನಾ ಸೇವಿಸುವೆ ಕೃಪಾಸಿಂಧು ಎಮ್ಮನು ದಾಸಿಸದÀನಿಮಿತ್ತ ಬಂಧೂ 31 ಎಂದೆಂದು ನೀ ಬಡವನಲ್ಲ ನಿನ್ನ ಮಂದಿರದೊಳಗೆ ಬಲ್ಯಲ್ಲಾ ಚಿದಾ ನಂದ ನೀ ಭಕ್ತ ವತ್ಸಲ್ಲಾ 32 ಕಾಮಿತಪ್ರದನೆಂಬ ಬಿರಿದು ಕೇಳಿ ನಾ ಮುದದಿ ಬಂದೆನೋ ಅರಿದು ಎನ್ನ ತಾಮಸ ಮತಿಗಳೆಲ್ಲ ತರಿದು ಮಮ ಸ್ವಾಮಿ ನೋಡೆನ್ನ ಕಣ್ದೆರದು33 ಹಿತವರೊಳು ನಿನಗಧಿಕರಾದ ತ್ರಿದಶ ತತಿಗಳೊಳು ಕಾಣೆನೋ ಪ್ರಮೋದ ನೀನೆ ಗತಿಯೆಂದು ನಂಬಿದೆ ವಿವಾದವ್ಯಾಕೊ ಪತಿತಪಾವನ ತೀರ್ಥಪಾದ 34 ಮಡದಿ ಮಕ್ಕಳು ತಂದೆ ತಾಯಿ ಎನ್ನ ಒಡಹುಟ್ಟಿದವರ ನೀ ಕಾಯಿ ಲೋಕ ದೊಡೆಯ ನೀನಲ್ಲದಿನ್ನಾರೈ ಎನ್ನ ನುಡಿ ಲಾಲಿಸೋ ಶೇಷಶಾಯಿ 35 ಅನುಬಂಧ ಜನರಿಂದ ಬಪ್ಪ ಕ್ಲೇಶ ವನುಭವಿಸಲಾರೆ ಎನ್ನಪ್ಪ ಉದಾ ಸೀನ ಮಾಡಿ ದಯಮಾಡದಿಪ್ಪರೇನೋ ಘನ ಮಹಿಮ ಫಣಿರಾಜತಲ್ಪ 36 ಹದಿನಾಲ್ಕು ಲೋಕಂಗಳನಾಳ್ವ ಬ್ರಹ್ಮ ಮೊದಲಾದವರು ನಿನ್ನ ಚಲ್ವನಖದ ವಿಧಿಸಲಾಪೆನೆ ನಿನ್ನ ಸಲ್ವಾ 37 ಧನ ಧಾನ್ಯ ಪಶು ಪತ್ನಿ ಗೇಹ ಜನನೀ ಜಾಮಾತ ಸಖ ನೇಹ ಅನುಜ ತನುಜಾಪ್ತವರ್ಗದಿಂದಾಹ ಸೌಖ್ಯ ನಿನಗರ್ಪಿಸಿದೆ ಎನ್ನ ದೇಹಾ 38 ನೀನಿತ್ತ ಸಂಸಾರದೊಳಗೆ ಸಿಲುಕಿ ನಾನೊಂದೆ ಕರೆ ನಿನ್ನ ಬಳಿಗೆ ಚರಣ ಧ್ಯಾನ ದೊರಕಲು ಭವದಿ ಮುಳುಗೆ ನಿನ್ನ ಕಾಣದಿರಲಾರೆನರ ಘಳಿಗೆ 39 ಸಲುಗೆ ಬಿನ್ನಪವ ನೀ ಕೇಳೋ ಎನ್ನ ಬಲು ದುರುಳತನವ ನೀ ತಾಳೋ ನೀನೆ ನೆಲೆಯಲ್ಲದೆನಗಾರು ಪೇಳೋ ಎನ್ನ ಕುಲದೈವ ಬಹುಕಾಲ ಬಾಳೋ40 ಸಾಂದೀಪ ನಂದನನ ತಂದ ನಂದ ಭವ ವೃಂದ ಕಳೆದು ಎಂದೆಂದು ಕುಂದದಾನಂದವೀಯೋ ಇಂದಿರಾರಮಣ ಗೋವಿಂದ41 ತೈಜಸ ಪ್ರಾಜ್ಞ ತುರಿಯಾ ಎನ್ನ ದುಸ್ವಭಾವವ ನೋಡಿ ಪೊರೆಯದಿಹರೆ ನಿಸ್ಪøಹ ನಾನಿನ್ನಂಘ್ರಿ ಮೊರೆಯ ಪೊಕ್ಕೆ ಅಸ್ವತಂತ್ರನ ಕಾಯೋ ಪಿರಿಯಾ42 ಇಹಪರದಿ ಸೌಖ್ಯ ಪ್ರದಾತ ನೀನೆ ಅಹುದೋ ಲೋಕೈಕ ವಿಖ್ಯಾತ ಮಹಾ ಮಹಿಮ ಗುಣಕರ್ಮ ಸಂಜಾತ ದೋಷ ದಹಿಸು ಸಂಸಾರಾಬ್ದಿ ಪೋತಾ 43 ಲೋಕಬಾಂಧವನೆಂಬ ಖ್ಯಾತಿಯನ್ನು ನಾ ಕೇಳಿದೆನು ಖಳಾರಾತಿ ಮನೋ ಶೋಕ ಮೋಹಾಜ್ಞಾನ ಭೀತಿ ಬಿಡಿಸು ಶ್ರೀ ಕರಾರ್ಚಿತ ಸ್ವಯಂ ಜ್ಯೋತಿ44 ಒಂದು ಗೇಣೊಡಲನ್ನಕಾಗಿ ಅಲ್ಪ ಮಂದಭಾಗ್ಯರ ಮನೆಗೆ ಪೋಗಿ ದೈನ್ಯ ದಿಂದ ಸತ್ಕರ್ಮಗಳ ನೀಗಿ ಕಂದಿ ಕುಂದಿದೆನೋ ಸಲಹೋ ಲೇಸಾಗಿ45 ಪಾತಕರೊಳಗಧಿಕ ನಾನಯ್ಯ ಜಗ ತ್ಪಾತಕವ ಕಳೆವ ಮಹಾರಾಯ ನಿನ್ನ ದೂತನಲ್ಲವೆ ಜೀಯ ಜಗ ನ್ನಾಥ ವಿಠ್ಠಲ ಪಿಡಿಯೋ ಕೈಯಾ 46
--------------
ಜಗನ್ನಾಥದಾಸರು
ಶ್ರೀ ವ್ಯಾಸರಾಜರು ಏಸು ಮಹಿಮ ನೋಡೋ | ಶ್ರೀ ವ್ಯಾಸಮುನಿಯು ತಾನೂ ಪ ದಾಸಜನರ ಹೃದ್ದೊದ್ದೋಷ ಕಳೆದು ಸಂ | ತೋಷ ಕೊಡುವ ದೊರೆ ಅ.ಪ. ರಾಮಾಚಾರ್ಯರ ಗೃಹದಿ | ಭೂಮಿ ಸೋಕದೆ ಪುಟ್ಟಿಪ್ರೇಮದಿಂದಲಿ ಪುರು | ಷೋತ್ಮ ತೀರ್ಥರ ಗುಹದಿಯಾಮ ಯಾಮಕೆ ಪಾಲು | ಆಮಹಾಮುನಿ ಕೂಡೆಸೀಮೆ ಮೀರಿದ ತೇಜ | ಕೋಮಲ ಕಾಯನು 1 ಪೂರ್ಣ ಬೋಧರ ಪೀಠ | ಬ್ರಹ್ಮಣ್ಯರಿಂಗೊಂಡುಭವಾರ್ಣ ತಾರಿಸುವಂಥ | ನ್ಯಾಯ ಗ್ರಂಥವ ಮಾಡಿಕರ್ಣ ರಹಿತನ ಸುಶಯ್ಯನ ಮಾಡಿಕೊಂಡಅರ್ಣ ಸಂಪ್ರತಿಪಾದ್ಯ | ಕೃಷ್ಣನ್ನ ಮೆರೆಸೀದ 2 ಸುಜನ ಕುಮುದ ಚಂದ್ರ | ನಿಜಭಕ್ತ ಪರಿಪಾಲ ಪರಿವ್ರಾಜಾಕಾಚಾರ್ಯ | ವಿಜಯ ನಗರಿಲಿ ನೆಲೆಸೀಅಜನನಯ್ಯನ ನಾಮ | ಭಜನೆ ಪ್ರಾಕೃತದೊಳುನಿಜಜನ ಕೊರೆಯುತ | ಅಜೇಯನೆನಿಸಿದಂಥ 3 ಮಿಥ್ಯಾಮತವಗೆದ್ದು | ತಥ್ಯಾವು ಜಗವೆಂದುಸ್ತುತ ಶ್ರೀಹರಿಯ ಸರ್ವೋತ್ತುಮನೆನುತಸತ್ಯವು ಪಂಚ ಭೇದ | ನಿತ್ಯವು ತಾರತಮ್ಯಭೃತ್ಯರು ಬ್ರಹ್ಮ ದೇವತೆಗಳೆಂದೊರೆದ 4 ಪುರಂದರ | ದಾಸರೆಂದೆನಿಸೀದ 5 ಅಹಿಪರ್ವತಾಧೀಶ | ಅಹಿತಲ್ಪನ್ನಾಸೇವೆವಿಹಿತದಿ ದ್ವಿಷಡಾಬ್ದ | ಬಹುಗೈದು ಅರಸಿನಕುಹುಯೋಗವಾರಿಸಿ | ಮಹಿಯ ಸುರರಿಗೆಲ್ಲಸಹಸ್ರಾರು ಗ್ರಾಮಗಳ್ | ಜಹಗೀರುಗಳನಿತ್ತ 6 ಛಂದದಿಂದಲಿ ನವ | ವೃಂದಾವನಕೆ ಬಂದುವೃಂದಾವನದಿ ನಿಂದು | ಇಂದೀವರಾಕ್ಷನುನಂದ ಕಂದ ಗುರು ಗೋ | ವಿಂದ ವಿಠಲನ ಹೃನ್‍ಮಂದಿರದಲಿ ನೋಡಿ | ನಂದವ ಪಡುತಿರ್ಪ7
--------------
ಗುರುಗೋವಿಂದವಿಠಲರು
ಶ್ರೀ ಸರಸ್ವತೀ ತಾ ಸುಮತೀ ಭವತೀ ಭಾರತಿ ಪ. ವಾಣೀ ವೀಣಾಪುಸ್ತಕಪಾಣಿ ಪಂಕಜಾಂಘ್ರಿಯುಗೇ ಫಣಿವೇಣಿ ಮಂಜುಳವಾಣಿ ಏಣಾಂಕವದನೆ ಶುಭಗುಣಶ್ರೇಣಿಗೀರ್ವಾಣಿ ಜನನಿ 1 ದೂರೆ ಶುಭ್ರಾಂಬರೆಧಾರೇ ಸಾರಸಭವ ಹೃತ್ಸರಸವಿಹಾರೇ ಧೀರೇ ಚತುರೆ ಕರಪಲ್ಲವ ಚತುರೇ 2 ವರದೇ ರಸನದೆ ನಿಂತವಸರದೇ ಸರಸದಿನುಡಿ ನಿಜಗುಣದಿ ಸೂನೃತೆ ವ್ರತದಿ ವರಶೇಷಾದ್ರಿನಿಕೇತನನಂಘ್ರಿಯ ಮರೆಯದೆ ಭಜಿಸುವೆ ತೆರದಿಂ ಕುಡುವರಮಂ 3
--------------
ನಂಜನಗೂಡು ತಿರುಮಲಾಂಬಾ