ಒಟ್ಟು 15585 ಕಡೆಗಳಲ್ಲಿ , 137 ದಾಸರು , 6785 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸಾದ್ರಿ ವಿಠಲ | ನೀನೆ ಪೊರೆ ಇವಳಾ ಪ ಗಾನಲೋಲನೆ ಕೃಷ್ಣ | ದೀನಮಂದಾರಅ.ಪ. ಕಲುಷ ಕರ್ಮದಿನೊಂದು ಇಳೆಯೊಳಗೆ ಮಧ್ವಮತಜಲಧಿಯಲ್ಲುದಿಸಿಹಳೊ | ಜಲಜಾಕ್ಷ ಹರಿಯೇಒಲವಿನಿಂದಿವಳನ್ನು | ಸಲಹಲ್ಕೆ ಪ್ರಾರ್ಥಿಸುವೆಕಲಿಮಲಾಪಹ ಕೃಷ್ಣ | ಚೆಲುವ ಮಾರುತಿಯೇ 1 ಮೂರ್ತಿ | ಪಾರ್ಥ ಸಾರಥಿಯೇ 2 ಪತಿ ಸೇವೆಯಲಿ | ಎರಗಲೀಕೆಯ ಮನಸುದುರಿತ ದುಷ್ಕøತ ಹರವು | ಗುರು ಸೇವೆ ಎಂದೆಂಬಅರಿವಿತ್ತು ಈಕೆಯನು | ಸಾಧನದಲಿರಿಸೋ 3 ಜಿಹ್ವೆ | ಶ್ರೀ ಪುರುಷೋತ್ತಮಾನಿರುಪಾದಿಕ ಹಿರಿಯರ | ಚರಣ ಸೇವೆಗೆ ಮನವುತ್ವರೆಗೊಳ್ಳುವಂತೆಸಗೂ | ಶಿರಿ ವೆಂಕಟೇಶಾ 4 ಕರಿವರದ ಧ್ರುವವರದ | ತರಳೆ ದ್ರೌಪದಿವರದಕರುಣಾಳು ನೀನೆಂದು | ಮೊರೆ ಬಿದ್ದು ಪೇಳ್ವೆಕರುಣೆಯನು ಪೊರೆ ಎಂಬ | ಬಿನ್ನಪವ ಸಲಿಸಯ್ಯಶಿರಿಯಿಂದ ವಂದ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀಪತಿಯ ನೈವೇದ್ಯ ಕೊಡುವದು ಧೂಪದಾಂತರ ಭೂಮಿಶೋಧನ ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ಸೂಪ ಅನ್ನವು ಅಗ್ನಿಕೋಣದಿ ಆ ಪರಮ ಅನ್ನವನು ಈಶಾ ನ್ಯಾಪೆಯಾಲೇಹಗಳ ನೈರುತದಲಿ ಇಟ್ಟು ತಥಾ 1 ವಾಯುದಿಶದಲಿ ಉಪಸುಭೋಜ್ಯವು ವಾಯಸಾನ್ನದ ಮಧ್ಯ ಘೃತಸಂ ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು ಬಾಯಿಯಿಂದಲಿ ದ್ವಾದಶ ಸ್ತುತಿ ಗಾಯನದಿ ನುಡಿಯುತಲಿ ಈ ಕಡೆ ಆಯಾ ಅಭಿಮಾನಿಗಳು ದೇವತೆಗಳನು ಚಿಂತಿಸುತ 2 ಓದನಕ ಅಭಿಮಾನಿ ಶಶಿಪರ ಮೋದನಕ ಅಭಿಮಾನಿ ಭಾರತಿ ಆದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ ಸ್ವಾದುಕ್ಷೀರಕ ವಾಣಿ ಮಂಡಿಗಿ ಲೀ ದ್ರುಹಿಣನವನೀತ ಪವನಾ ದಾದಧಿಗೆ ಶಶಿವರುಣ ಸೂಪಕೆ ಗರುಡ ಅಭಿಮಾನಿ 3 ಶಾಕದಲಿ ಶೇಷಾಮ್ಲ ಗಿರಿಜಾ ನೇಕನಾಮ್ಲದಿ ರುದ್ರಸಿತದಲಿ ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ ಈ ಕಟು ಪದಾರ್ಥದಲಿ ಯಮ ಬಾ ಹ್ಲೀಕ ತಂತುಭದಲ್ಲಿ ಮನ್ಮಥ ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ 4 ಕೂಷುಮಾಂಡದ ಸಂಡಿಗಿಲಿ ಕುಲ ಮಾಷದಲಿ ದಕ್ಷ ಪ್ರಜಾಪತಿ ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ ಈ ಸುಫಲ ಷಡ್ರಸದಿ ಪ್ರಾಣ ವಿ ಶೇಷ ತಾಂಬೂಲದಲಿ ಗಂಗಾ ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ 5 ಸಕಲ ಭಕ್ಷ್ಯಗಳಲ್ಲಿ ಉದಕದಿ ವಿಶ್ವ ಮೂರುತಿ ಮುಖದಲೀ ನುಡಿ ಅಂತಿಲೀ ಶ್ರೀ ಕೃಷ್ಣ ಮೂರುತಿಯ ನಖ ಚತು ಪದಾರ್ಥದಲಿ ಆ ಸ ಮ್ಯಕು ಚತುರವಿಂಶತಿ ಅಭಿಮಾ ನಿಕರ ಚಿಂತಿಸಿ ಸರ್ಪಿ ಸಹ ಶ್ರೀ ತುಳಸಿಯನು ಹಾಕಿ6 ಕ್ಷೀರ ದÀಧಿ ಕರ್ಪೂರ ಸಾಕ ರ್ಜೀರ ಪನಸ ಕಪಿಥ್ಥ ಪಣ್ಕದ ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ ಪೂರ ಶಂಖದಿ ಉದಕ ಓಂ ನಮೊ ನಾರೆಯಣಾ ಅಪ್ಟಾಕ್ಷರವು ತನ ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ7 ಸೌರಭೀ ಮಂತ್ರದಲಿ ಪ್ರೇಕ್ಷಿಸಿ ಮೂರೆರಡು ಮೊದಲಾಗಿ ಶಂಖವು ಅಂತಿಮಾಡಿ ತಥಾ ಪೂರ್ವ ಆಪೋಶನವು ಹೇಳಿ ಅ ಪೂರ್ವ ನೈವೇದ್ಯವು ಸಮರ್ಪಿಸಿ ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ 8 ಪೂಗ ಅರ್ಪಿಸಿದಂತರದಿ ಅತಿ ಬ್ಯಾಗದಲಿ ಲಕ್ಷ್ಯಾದಿ ನೈವೇ ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ ಸಾಗಿಸೀ ಶ್ರೀ ಹರಿಯ ಸಂಪುಟ ದಾಗ ನಿಲ್ಲಿಸಿ ವೈಶ್ವದೇವವು ಸಾಗಿಸೀ ಶ್ರೀ ವಿಜಯವಿಠಲನ ಧೇನಿಸುತ ಮುದದಿ9
--------------
ವಿಜಯದಾಸ
ಶ್ರೀಪತಿಯೆ ನಿನ್ನ ಒಲುಮೆಯೊಂದಿರಲಿಕ್ಕೆತಾಪಗಳಾವೆನಗೆ ಮಾಡುವವೊ ಪ ಪಾಪಿಯಂತೆದೆನ್ನ ಕೈಯನು ಬಿಡಬೇಡಗೋಪಾಲನೆ ಎಲ್ಲಕ್ಕೂ ಕರ್ತೃ ನೀನಲ್ಲವೆ ಅ.ಪ. ಭಾರ ಹೊತ್ತವನೆಂಬಅಂಶವನರಿಯದೆ ವ್ಯರ್ಥ ಬಳಲಿದೆನೊ 1 ಅಪಶಕುನಗಳು ಆ ವಿಘ್ನಗಳೆಲ್ಲವೂವಿಪರೀತ ಕಾಲವು ಉಪದ್ರವಂಗಳುಕೃಪೆಯಿಂದ ಪರಿಣಾಮಗೊಳ್ಳವೆಂದೆಂದಿಗೂಕೃಪೆಯ ಮಾಡಯ್ಯ ನೀ ಭಕ್ತವತ್ಸಲನೆ 2 ಯೋಚಿಸುವವ ನಾನು ಯೋಜಿಸುವ ನೀನುತೋಚದು ಗತಿಯೆಂದು ಚಿಂತಿಸುತಿರಲುಸೂಚನೆಗೊಡದೆ ಪರಿಹರಿಸಿ ಪೊರೆಯುವಿನಿಗಮಗೋಚರ ನಿನ್ನ ಕಾರುಣ್ಯವನರಿಯನೋ 3 ಅಂಬುಜಾಕ್ಷನೆ ನಿನ್ನ ನಂಬಿದ ಜನರನುಬೆಂಬಿಡದೆ ಕಾಯುವ ನೀ ಕೃಪಾಳೋತುಂಬ ಒಲುಮೆಯನೀಯೊ ನಿತ್ಯದಿ ಭಕ್ತಕು ಟುಂಬಿಯೆ ಗದುಗಿನ ವೀರನಾರಾಯಣ 4
--------------
ವೀರನಾರಾಯಣ
ಶ್ರೀಪತೀ-ಎನಗೇನು ಗತೀ ನನಗಾಗಲಿ ನಿನ್ನಲಿ ರತೀ ಪ ಚಪಲ ತನದಿ ಬಹು ಕಪಟಭಕುತಿನಟಿಸಿ ಗುಪಿತ ದೋಷಿಯು ಆದೆ ಅ.ಪ. ಬಟ್ಟೆ ನೋಡಲು ಬಹು ಛಂಧ-ಮೇಲೆ ಘಟ್ಟಿ ಬಣ್ಣದ ಕಾವಿ ಶಾಟಿ ಹಾಗೆ ಪಟ್ಟೆಮಡಿಗಳ ಭಾರೀ ಥಳಕೊ-ಬಹಳ ದಟ್ಟ ತುಳಸೀಸರಗಳ ಹೊಳಪೂ ಆಹಾ ಸೃಷ್ಠಿಗೊಡೆಯನೆ ಎನ್ನ ಕೆಟ್ಟ ತನಗಳನ್ನು ಎಷ್ಟೆಂದು ಬಣ್ಣಿಪೆ ನಿಟ್ಟ ನೆನೆಯದೆ ಪರರ ದೃಷ್ಟಿನೋಡುತ ಹಿಗ್ಗಿ ಅಟ್ಟಹಾಸದಿ ಕುಣಿದು ಮಾನವ ನನಗೇ 1 ವೇದ ವಾದಗಳೇನು ಕಾಣೆ-ಶುದ್ಧ ಸಾಧು ಕರ್ಮಗಳೊಂದು ಇಲ್ಲ-ಜನರ ಮೋದಗೋಸುಗವೇನೆ ಎಲ್ಲ_ಕಾಮ ಕ್ರೋಧವ ನಿಬಿಡಿತೇನೇ ಬಿಚ್ಚೆಹೃದಯಾ ಆಹಾ ಮಧ್ವರಾಯರ ಶಾಸ್ತ್ರ ಗ್ರಂಥ ಸಹ ತಿಳಿಯದೆಲೆ ಸಿದ್ಧ ಸಾಧಕನಂತೆ ಸಾಧುಲಿಂಗವ ತೋರಿ ಮುಗ್ಧಗೈಯ್ಯುತ ಮಂದಿ ಮೆದ್ದು ಪಕ್ವಾನ್ನಗಳ ಗೆದ್ದುಕೊಳ್ಳುವೆ ಬಹಳ ದಕ್ಷಿಣೆ ಬಹುಮಾನ 2 ನೇಮನಿಷ್ಠೆಗಳಾಟ ಹೊರಗೆ-ಗೃಹದಿ ಪ್ರೇಮವಿಲಾಸ ಆಟ ಕೂಟಜನ ಸ್ತೋಮರೆಲ್ಲವ ನುಡಿವ ನೀತಿ ಖ್ಯಾತಿ ಕಾಮುಕನಾಗಿ ಚರಿಸಿದೆ ಜಗದೀ ಆಹಾ ಹೇಮದಾಸೆಗೆ ಸೂಳೆ ಪ್ರೇಮವ ತೋರ್ಪಂತೆ ಕಾಮಿತಪ್ರದ ನಿನ್ನ ನಾಮ ಸವಿಯನುಣ್ಣದೆ ತಾಮಸರಿಗೆ ಉಪದೇಶ ನೀಡುತ ಸತ್ಯ- ಭಾಮೆಯರಸ ನಿನಗೆ ದೂರನಾದೆನಲ್ಲಾ 3 ಹಾಡಿಹಾಡುವೆ ಎತ್ತಿ ಸುತ್ತ ಜನರು ನೋಡಿ ಹಿಗ್ಗುತ ಬಾಪು ಬಾಪು ನುಡಿಗೆ ಹಾಡಿನಲ್ಲಿಹ ಸವಿಯುಣ್ಣ ದೇನೆ ಆಡಿ ಆಡಿಪೆ ಶಿರವ ಜ್ಞಾನಿಯಂತೆ ಆಹಾ ಕೇಡು ಚಿಂತಿಸಿ ಪರರ ಸ್ವಾರ್ಥಗೋಸುಗನಿತ್ಯ ಕಾಡಿ ಬೇಡುತ ಜನರ ದೂಡುತಿಹೆ ಸಂಸಾರ ಪ್ರೌಢ ಭಕ್ತರ ಗೋಷ್ಠಿಕೂಡಿ ಭಜಿಸದ ಎನ್ನ ಗಾಢ ಡಂಭಕೆ ಜಗದಿ ಈಡು ಕಾಣಿಸು ಸ್ವಾಮಿ4 ಭಾರಿ ಶಾಲುಗಳನ್ನೆ ಹೊದ್ದು-ನಿತ್ಯ ಕೇರಿಕೇರಿ ಪುರಾಣಗಳನ್ನು ಮೆದ್ದು-ಹಾರಿ ಹಾರುತ ತತ್ವರಾಶಿ ನುಡಿದು-ಊರು ಜ- ನರಮುಂದೆ ಪಾಂಡಿತ್ಯ ತೋರ್ಪೆ ಆಹಾ ತೋರಿ ತೋರುವೆ ಪರಮವೈರಾಗ್ಯ ಭಕ್ತಿಯ ದೂರಿ ದೂಡುವೆ ಪರರ ಹುಳುಕುಗಳನು ಎತ್ತಿ ಪಾರುಗಾಣದ ಕರುಣ ತೋರದಿದ್ದರೆ ಇನ್ನು 5 ಗುಡಿಗೆ ಹೋಗುವೆ ನಾನು-ನಿತ್ಯ ಅಲ್ಲಿ ಬೆಡಗು ಸ್ತ್ರೀಯರ ಹುಡುಕುವುದೇನೆ ಕೃತ್ಯ ದೃಢಭಕುತಿಯನು ಮಾಡಲೊಲ್ಲೆ ಸತ್ಯ-ನ ಮಡದಿ ಮಕ್ಕಳಿಗಿಲ್ಲ ಭೃತ್ಯಾನುಭೃತ್ಯಾ ಆಹಾ ಹುಡುಕೀ ನೋಡಿದಾಗ್ಯೂ ವಿರಕ್ತಿ ಭಕ್ತಿಗಳಿಲ್ಲ ಬಿಡಲು ಪೊರೆಯೆ ಪುರಾಣಶಾಸ್ತ್ರಗಳನ್ನು ನಿತ್ಯ ಎನ್ನ ಅನಾದಿ ನೀ ಕಲಿಸದಿದ್ದರೆ ಈಗ 6 ದೊಡ್ಡ ಪಂಡಿತ ನಾನೆಂಬ ಹೆಮ್ಮೆ-ಶುದ್ಧ ದಡ್ಡನೆಂಬುದ ಬಲ್ಲೆ ಮನದಿ-ಹಾಗೂ ಅಡ್ಡ ಬೀಳೆನು ಭಕ್ತ ಗಣಕೆ ಸುಳ್ಳು ವೊಡ್ಡುತವರನು ಹಳಿದೂ-ಕುದಿದೇ ಮನದೀ ಆಹಾ ದುಡ್ಡುಗೋಸುಗ ಬಹಳ ದೊಡ್ಡ ದಾಸನು ಎನಿಸೀ ಹೆಡ್ಡಮಂದಿಯ ಮುಂದೆ ದೊಡ್ಡ ಭಾಷಣ ಮಾಳ್ವೆ ಗುಡ್ಡದೊಡೆಯನೆ ಭಕ್ತಜಿಡ್ಡುಲೇಶವು ಕಾಣೆ ದೊಡ್ಡ ನಾಮವ ಹಾಕಿ ಸಡ್ಡೆ ಮಾಡದೆ ತಿರಿವ 7 ಕಚ್ಚಿ ಬಿಡದಿಹ ತುಚ್ಛ ಕಲಿಯು-ಬಹಳ ಮೆಚ್ಚಿ ಬಂದಿಹ ನವನು ಬಿಡುವನೇನು ಇಚ್ಛೆ ನನ್ನದು ನಡೆಯದೇ ನೊಂದು ತುಚ್ಛ ವಿಷಯದಿ ಸೆಳೆದು ಸೆಳೆಯುತಿಹನು ಆಹಾ ಇಚ್ಛೆಯಿಂದಲಿ ಜಗವ ಸೃಜಿಸಿ ಪಾಲಿಪಲೀಲೆ ಹಚ್ಚಿಕೊಂಡಿಹ ನಿನಗೆ ನನ್ನ ಪಾಲಿಪುದೇನು ಹೆಚ್ಚು ಕಾರ್ಯವೆ ಜೀಯ ಮುಚ್ಚಿಕೊಂಡಹ ನಿನ್ನ ಸ್ವಚ್ಛ ಬಿಂಬವ ತೊರಿ ಮೆಚ್ಚಿ ಕೊಡದಿರೆ ಜ್ಞಾನ 8 ಶ್ವಾಸಮತದಲಿ ಜನ್ಮ ವಿತ್ತೆ-ವಿಜಯ ದಾಸರ ಪ್ರಿಯ ಮೋಹನ್ನ ಪರಂಪರೆಯ ದಾಸನೆನಿಸಿ ಯೆನ್ನ ಮೆರೆಸಿ ಹೀಗೆ ದೋಷಿಗೈವುದು ಥರವೆ ಶ್ರೀಭಕ್ತಪ್ರಿಯ ಆಹಾ ವಾಸುದೇವನೆ ತುರ್ಯಲೇಸು ದೃಷ್ಟಿಯ ಬೀರೆ ನಾಶವಾಗದೆ ದೋಷ ಭಾಸವಾಗದೆ ಜ್ಞಾನ ಕಾಸುಬೀಡೆನು ಹಿರಿಯ ದಾಸರ ಗುಣ ನೋಡಿ ಲೇಸು ನೀಡೆಂತೆಂಬೆ ಶ್ರೀಕೃಷ್ಣವಿಠಲಾ9
--------------
ಕೃಷ್ಣವಿಠಲದಾಸರು
ಶ್ರೀಪಾದರಾಜ ಪಾಲಿಸೊ ಕೈಪಿಡಿದೀ ಭವದ ಕೂಪಾರದಿಂದ ದಾಟಿಸೋ ಪ ಕಾಪಾಡೆಲೊ ಕರುಣಾ ಪಯೋನಿಧೆ ಭೂಪಚಂದ್ರ ಗಿರಿ ಪಾಪಗಳನ್ನು ಕಳದಿರುವೆ ಮದ್ಗುರುವೆ ಕರಮುಗಿವೆ ಭಜಕರ ಸುರತರುವೇ ಅ.ಪ ಮೇದಿನಿ ಪಾಲಪೂಜಿತ ವಿದ್ವಜ್ಜನವಿನುತ ಮೇದಿನಿ ಜಾತ ಪ್ರದಾತ ಮೋದಮುನಿಯ ಸುಮತೋದಧಿಚಂದಿರ ವಾದಿ ಮದಗಜ ಮೃಗಾಧಿಪ ಕವಿಜನಗೇಯ ಶುಭ ಕಾಯ ಧೃವರಾಯ ಆಶ್ವರ್ಯ ಚರ್ಯ1 ವಿಪ್ರಹತ್ಯಾದಿ ದೋಷಗಳನ್ನು ಕಳೆಯುವ ಮಹಿಮೆಯನು ಕ್ಷಿಪ್ರ ಶಂಖೋದಕ ಸಂಪ್ರೋಕ್ಷಿಸಿ ಬಲು ಕಪ್ಪುವಸನವನು ಸುಪ್ರಕಾಶಿಸಿದ ಮಹಿಮಾ ಶುಭನಾಮ ಜಿತಕಾಮಾ ಯತೆ ಸಾರ್ವಭೌಮ 2 ವಿಭುದೇಂದ್ರ ಸಹಿತ ಛಾತ್ರಾ ನಿಮ್ಮನ್ನು ಕೇಳಲು ಸೂ- ಸರ್ವಾತಿಶಯದಿಸ- ಮುಖಗೀತಾನಾಮದಿ ಪ್ರಖ್ಯಾತ 3 ಮೃಷ್ಟಾನ್ನ ಕೊಡುವೊ ಮಹಿಮೆಯ ಕೃಷ್ಣಗರ್ಪಿಸಿದ ಪಷ್ಠಿಶಾಕಯುತ ಮೃಷ್ಟಾನ್ನ ದ್ವಿಜ ತುಷ್ಟಿಗೈಸುವಿರಿ ನಿರುತ ಗುಣಭರಿತ ಪ್ರಖ್ಯಾತ ಪಾವನ ತರ ಚರಿತ 4 ಜಗದೊಳು ಸನ್ಮಾನ್ಯ ಚರಿಸಿ ಸತ್ಕರ್ಮವ ಘಳಿಸುವ ಪುಣ್ಯ ಶರಣುಜನಕೆ ಸುರತರುವೆಂದೆನಿಸುತ ಧರೆಯೊಳು ಮೆರೆಯುವ ಶಿರಿಕಾರ್ಪರ ಶುಭನಿಲಯ ಸುರಗೇಯ ಗುರುರಾಯ ನರಹರಿಗತಿ ಪ್ರೀಯ 5
--------------
ಕಾರ್ಪರ ನರಹರಿದಾಸರು
ಶ್ರೀಪಾದರಾಯ ನಿಮ್ಮ | ಆಪಾದ ಮೌಳಿ ಭಜಿಪಾಪಾಪಿಯಾದರು ಅವ | ಪಾಪವನೆಲ್ಲ ಕಳೆವಾ ಪ ಧೃತ - ಶ್ರೀಪತಿಯೊಲಿಮೆಯ | ಪ್ರಾಪಿಸುತೆನ್ನನುವ್ಯಾಪುತ ದರ್ಶಿಯ ಮಾಡೊ ಮಹಾತ್ಮಾ ಅ.ಪ. ವಾರಿಧಿ ಭವ ತರಣ ||ಕೀರುತಿ ತವ ಸ್ಮರಣ | ಬಾರಿಬಾರಿಗೆ ಶ್ರವಣಸೂರೆಗೊಂಬುವ ನರನ | ಸಾರಿ ಉದ್ಧರಿಪೆ ಅವನಾ ||ಧೃತ - ವಾರವಾರಕೆ ನಿನ ಪರಿವಾರದಲಿಡುಸೂರಿ ಸುವರ್ಣರ ಕರಜ ಉದಾರಾ 1 ಮೋದ ಮಾಧವ ಪ್ರಿಯ ನಿನಪಾದವ ನಂಬಿದೆ | ಬುಧ ಜನ ವಂದ್ಯಾ 2 ಚಾರು ಚರಿತೆಯ ನಾನಾಪರಿಪರಿಯಲಿ ಗಾನಾ | ವಿರಚಿಸಿ ಜನರ ಅಜ್ಞಾನಾ ||ಹರಿಸಿ ಅವರಿಗೆ ಜ್ಞಾನಾ |ಭರಣ ಪಾಲಿಸಿ ಕರುಣಬೀರಿದೆ ಸುಸಾಧನ | ಗುರು ಪರಮ ಪಾವನಾ ||ಧೃತ - ಗುರುಗೋವಿಂದ ವಿಠಲನ | ಚರಣವ ಭಜಿಸುವವರಧೃವ ಮೂರುತಿ | ನಿರುತದಿ ಕೀರ್ತಿ 3
--------------
ಗುರುಗೋವಿಂದವಿಠಲರು
ಶ್ರೀಪುರುಷೋತ್ತಮತೀರ್ಥರು ಯೋಗಿಗಳರಸ ಟೀಕಾಚಾರ್ಯರೆ ನಿಮ್ಮ ಪಾದಬಾಗಿ ಭಜಿಸುವನರಗೆ ಪಾಪ ನಿರ್ಲೇಪ ಪ ಖಗವರ ವಹನನಕಾಗಿನಿ ತೀರಗ ವರ ಜಯಗುರುವೇ ಅ.ಪ. ಅಕ್ಷಯ ಫಲವೀವಾ |ಲಕ್ಷುಮಿ ನಾರಾಯಣನ | ಕುಕ್ಷಿಯೋಳೀಕ್ಷಿಸುವ |ಧೃತ - ಲಕ್ಷ್ಯವಿಲ್ಲದೆ ಗಿರಿ ಪಕ್ಷ ತರಿವ ಪರಪಕ್ಷಕೆ ಕರ್ಕಶ ಕುಲಿಶಾ 1 ದಶಮತಿ ಗ್ರಂಥಗಳಾ | ವೃಷಭ ಜನ್ಮದಿ ಪೊತ್ತುಅಸುವ ನೀಗುತ ಭೂಸುರ ಕುಲದಿ ಉದ್ಭವಿಸಿವಿಷಯ ಮೋಹವ ತ್ಯಜಿಸೀ | ಅಸಮ ಮಹಿಮ ಹರಿಯಾಒಸೆದು ಸೇವಿಸೆ ತುರಿಯಾ | ಆಶ್ರಮ ವಹಿಸೀ |ಧೃತ - ಬಸುರಲಿ ಬೊಮ್ಮನ ಪ್ರಸವಿಸಿದವನನುಸರ್ವೇಶ ನೆನುತಲಿ ಸಾರಿದ ಮಹಿಮಾ 2 ಜವನನ ಭಯನಾಶಾ | ಭುವನ ಪಾವನ ಸುಧೆಯಾಅವನಿ ಸುರರಿಗುಣಿಸೀ | ಕ್ಲೇಶವ ಹರಿಸೀ |ಅವನಿಜಾವಲ್ಲಭನಾ | ಮಾವನ ಕೊಂದವನಾಶಿವನ ಮೋಹಿಸಿ ಕೆಡಿಸಿ ಉಳಿಸೀದನಾ |ಧೃತ - ಪವನನ ಪ್ರಿಯ ಗುರು ಗೋವಿಂದ ವಿಠಲನನವ ನವ ಗ್ರಂಥದಿ ನುತಿಸಿದ ಮಹಿಮಾ3
--------------
ಗುರುಗೋವಿಂದವಿಠಲರು
ಶ್ರೀಮಧ್ವ ಚಿತ್ತಮಂದಿರನೆ ನಿನ್ನಯ ಚರಣತಾಮರಸ ನೆರೆ ನಂಬಿದೆ ಪ ಕಾಮ ಕ್ರೋಧಗಳನ್ನು ಕಡಿದು ನಿನ್ನಯ ದಿವ್ಯನಾಮಾಮೃತವನುಣಿಸೋ ಸ್ವಾಮಿ ಅ.ಪ. ಪರ ನಾರಿಯರಮೋರೆ ಬಣ್ಣವನೆ ನೋಡಿಆರು ಇಲ್ಲದ ವೇಳೆ ಕಣ್ಣು ಸನ್ನೆಯಲವಳಕೋರಿದ್ದು ಇತ್ತು ಕೂಡಿವಾರಿಜನಾಭ ನಿನ್ನಾರಾಧನೆಯ ಮರೆದುಧಾರುಣಿಗೆ ಭಾರಾಗಿ ಅಶನ ಶತ್ರುವಾದೆ 1 ಉಪರಾಗ ಮೊದಲಾದ ದಶಮಿ ದ್ವಾದಶಿ ದಿನದಿಉಪೇಕ್ಷೆಯನು ಮಾಡಿ ಜರಿದೆ |ಉಪಕಾರವೆಂದು ನಿಜವೃತ್ತಿ ಪೇಳಿದರೆನಗೆಅಪಕಾರವೆಂದು ತಿಳಿದು |ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆತಪವೃದ್ಧರನ್ನು ಜರಿದೆ |ಸ್ವಪನದೊಳಗಾದರೂ ವೈರಾಗ್ಯ ಬಯಸದಲೆಕಪಟ ಮನುಜರೊಳಗಾಡಿ ನಿನ್ನ ಮರೆದೆನೊ ಸ್ವಾಮಿ 2 ಭೂಸುರರು ಚಂಡಾಲ ಜಾತಿಯನ್ನದೆ ಬಲುಹೇಸಿಕಿಲ್ಲದಲೆ ತಿರಿದೆ | ಆಶಾಪಾಶಕೆ ಸಿಲುಕಿ ಕಂಡಕಂಡಲಿ ತಿಂದುದೋಷರಾಶಿಯನು ತರುವೆ |ಆ ಸತೀ ಸುತರ ಸಲಹುವೆನೆಂದು ಪರಿಪರಿವೇಷವನು ಧರಿಸಿ ಮೆರೆವೆ |ವಾಸುಕೀ ಶಯನ ವಸುದೇವ ತನಯನೆ ನಿನ್ನದಾಸನೆನಿಸದಲೆ ಅಪಹಾಸ ಮಾನವನಾದೆ 3 ಹರಿದಾಸರಲ್ಲಿ ಒಂದರಘಳಿಗೆ ಕುಳಿತರೆಶಿರವ್ಯಾಧಿಯೆಂದ್ಹೇಳುವೆ |ದುರುಳ ದುರ್ವಾರ್ತೆಗಳ ಪೇಳಲು ಹಸಿತೃಷೆಯಮರೆದು ಆಲಿಸಿ ಕೇಳುವೆ |ತರುಣಿ ತರಳರು ಎನ್ನ ಪರಿಪರಿ ಬೈದರೆಪರಮ ಹರುಷವ ತಾಳುವೆ |ಗುರು ಹಿರಿಯರೊಂದುತ್ತರವನಾಡಲು ಕೇಳಿಧರಿಸಲಾರದಲೆ ಮತ್ಸರಿಸುವೆನೊ ಅವರೊಳಗೆ 4 ನಾ ಮಾಡಿದಪರಾಧಗಳನೆಣಿಸಿ ಬರೆವುದಕೆಭೂ ಮಂಡಲವೆ ನೆರೆ ಸಾಲದೊ | ಸೀಮೆಯೊಳಗುಳ್ಳ ದುರ್ಮತಿಯೆಲ್ಲ ಕೂಡಲುಈ ಮತಿಗೆ ಆದು ಪೋಲದೋಹೋಮ ಜಪತಪವು ಇನ್ನೆಷ್ಟು ಮಾಡಲು ಪಾಪಸ್ತೋಮ ಎಂದಿಗು ವಾಲದೊ |ಸಾಮಜ ವರದ ಮೋಹನ್ನ ವಿಠ್ಠಲ ನಿನ್ನ |ನಾಮವೊಂದಲ್ಲದೆ ಪ್ರಾಯಶ್ಚಿತ್ತವ ಕಾಣೆ5
--------------
ಮೋಹನದಾಸರು
ಶ್ರೀಮಾಧವ ಪಾದವ ಸಂತತ ಮನದಿ ನೇಮದಿ ಧ್ಯಾನಿಸು ನೀ ಪ ಪ್ರೇಮಮೂರ್ತಿಯನೆನೆವರಾರಾದರೇನಯ್ಯ ಸ್ವಾಮಿತಾನವರನು ಸರ್ವತ್ರ ಸಲಹುವನು ಅ.ಪ ಮದಗಜವನುಸರದಿ ಮೊಸಲೆಯನು ತಾನು ಅಧಿಕ ಕಷ್ಟವ ಗೊಳಸೆ ಪದುಮನಾಭ ನೀನೆ ಪೊರೆಯಬೇಕೆನ್ನಲು ಮುದದಿಂದಲೊದಗುತ್ತ ಸೌಖ್ಯವ ತೋರಿದೆ 1 ತರಳನಾದ ಧ್ರುವನು ಪ್ರಹ್ಲಾದನು ಶರಣೆಂದು ಮೊರೆವೋಗಲು ಸರಸಿಜಾಕ್ಷ ಶ್ರೀಶ ತ್ವರಿತದಿಂದಲಿ ಬಂದು ಕರುಣದಿ ಕರೆದೆತ್ತಿಕೊಂಡು ಮುದ್ದಾಡಿದ 2 ಮಾನಿನಿ ದ್ರೌಪದಿಯು ತನ್ನಯ ಘನ ಮಾನಭಂಗದ ಕಾಲದಿ ದೀನರಕ್ಷಕ ಕೃಷ್ಣ ದಾನವಾರಿಯೆನೆ ಸಾನುರಾಗದಿಂದಲಕ್ಷಯ ವರವಿತ್ತ3 ಅಜಮಿಳ ಬಹುಪಾಪದಿ ಮೆರೆಯುತಲಿದ್ದು ನಿಜಸುಖ ಮರೆತಂತ್ಯ ಕಾಲದಿ ಬಜಬಜಿಸುತಮಗನನು ಹೆಸರೆತ್ತಲು ಭಜನೆಯಾಯ್ತು ನಾರಾಯಣ ನಾಮವು 4 ವಿದುರನುಧ್ದವನರ್ಜುನ ಕುಚೇಲನು ಮೊದಲಾದ ಭಕ್ತರೆಲ್ಲ ಹೃದಯದಿ ಬಚ್ಚಿಟ್ಟು ನಿರುತ ಪೂಜೆಯ ಮಾಡೆ ಪದವಿಯಿತ್ತು ಕಾಯ್ದ ಜಾಜಿಯೀಶನ5
--------------
ಶಾಮಶರ್ಮರು
ಶ್ರೀಯತಿವೃಂದ ಸ್ತೋತ್ರ ಯತಿಗಳ ಸತತ ಸಂಸ್ತುತಿಸುವೆ ಅತಿತ್ವರಿತದಲಿ ದುರಿತಗಳ ತರಿವೆ ಪ ಮೋದತೀರ್ಥಾದಿ ಸುಬೋಧೇಂದ್ರ ಪರಿಯಂತ ಮೋದದಿಂದವರ ಶ್ರೀಪಾದಕ್ಕೆ ನಮಿಪೆ 1 ಅಜನಪಿತನಪಾದ ಭಜಿಸುವ ಭಕುತ ನಿಜವಾಗಿ ಪಾಲಿಪ ಸುಜನೇಂದ್ರ ತೀರ್ಥ 2 ಆನತಜನ ಪಾಪಕಾನನದಹಿಪ ಕೃ ಶಾನನಂತಿಪ್ಪ ಸುಙÁ್ಞನೇಂದ್ರ ತೀರ್ಥ 3 ದುರ್ಮತಧ್ವಂಸ ಸದ್ಧರ್ಮ ಸಂಸ್ಥಾಪಕ ಕರ್ಮಂದಿವರ ಸುಧರ್ಮೇಂದ್ರ ತೀರ್ಥ 4 ಅಗಣಿತಮಹಿಮ ಮೂಜಗದೊಳು ಪ್ರಖ್ಯಾತ ನಿಗಮಾಗಮಜ್ಞ ಶ್ರೀ ಸುಗುಣೇಂದ್ರ ತೀರ್ಥ 5 ಸಸುಪ್ರಸಿದ್ಧ ಮುನಿ ವಿಪ್ರಸಮೂಹವ ಕ್ಷಿಪ್ರದಿಪಾಲಿಪ ಸುಪ್ರಙÉ್ಞಂದ್ರಾಖ್ಯ 6 ಶ್ರೀಶ ಪದಾರ್ಚಕ ಸುಕೃತೀಂದ್ರ 7 ಮೂಲೋಕ ವಿಖ್ಯಾತ ಶ್ರೀಲೋಲನಂಘ್ರಿ ಕೀ - ಲಾಲಜಮಧುಪ ಸುಶಿಲೇಂದ್ರ ಮುನಿಪ 8 ವರದೇಶ ವಿಠಲನ ಪರಿಪರಿ ಪೂಜಿಪ ಪರಮಹಂಸರ ಪಾದಕ್ಕೆರಗಿ ಬಿನ್ನೈಪೆ 9
--------------
ವರದೇಶವಿಠಲ
ಶ್ರೀರಂಗ ರಂಗನಾಥ ಎನ್ನ ಕಣ್ಗಾಳೆದುರು ನಿಂತಿದಂತಿದೆ ಪ ವಜ್ರಮಾಣಿಕದ ಕಿರೀಟವನಿಟ್ಟು ಪ್ರಜ್ಜಲಿಸುವ ಹಣೆಯ ಕಸ್ತೂರಿಬಟ್ಟು ವಜ್ರದ ಕರ್ಣಕುಂಡಲ ಅಳವಟ್ಟು ಸಾಜದ ಅಧರಚಂದವಿನ್ನೆಷ್ಟು 1 ಕಬ್ಬುಬಿಲ್ಲನು ಪೋಲ್ವ ಪುಬ್ಬಿನ ಚಂದ ಅಬ್ಜದಂತೆಸೆವಾ ನಯನದಾನಂದ ಕುಸುಮವ ಪೋಲುವ ನಾಸಿಕದಂದ ಕದಪು ಹೊಳೆಯುತ್ತ ಬಂದ 2 ಕಂಠದೊಳಗೆ ಇಟ್ಟ ಕೌಸ್ತುಭಮಣಿಯು ಎಂಟು ಪದಕಗಳನಳವಡಿಸಿದ ಅಣಿಯು ಗಂಟೆ ಗೆಜ್ಜೆವುಡಿದಾರದ ಫಣಿಯು ಸಂಧ್ಯರಾಗವ ಪೋಲ್ವ ಪೀತಾಂಬರದಣಿಯು 3 ಶಂಖಚಕ್ರವು ಗದೆ ಆಭಯಹಸ್ತಗಳು ಪಂಕಜಮುಖಿ ಇರುವ ವಕ್ಷಸ್ಥಳವು ಶಂಕರನಪಿತನ ಪಡೆದ ನಾಭಿದಳವು ಶಂಕೆ ಇಲ್ಲದ ಕಣಕಾಲಿನ ಹೊಳವು 4 ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು ಕುಂದಣದ ಪಾಡಗವನಳವಟ್ಟು ಚಂದದಿಂ ವಜ್ರದಾವುಗೆಯ ಮೆಟ್ಟು ತ [ಬಂದ] ಗಂಗೆ ಪಡೆದನಖಾಪಂಕ್ತಿಗಳೆಷ್ಟು5 ವಜ್ರಾಂಕುಶ ಧ್ವಜರೇಖೆಗಳಿಂದ ಪದ್ಮಪಾದದ ಕೆಂಪುಗಳು ಬಹುಚಂದ ಹೊದ್ದಿದ ಭಕ್ತರ ಪಾಪವನೆಲ್ಲ ಒದ್ದು ಮುಕ್ತಿಯನೀವ ಮುದ್ದು ಶ್ರೀ ವೆಂಕಟಕೃಷ್ಣ 6
--------------
ಯದುಗಿರಿಯಮ್ಮ
ಶ್ರೀರಂಗ ಬಾರನೆ ಪ. ಕರೆದರಿಲ್ಲಿ ಬಾರನೆ ಕಾಂತೆ ಮುಖವ ತೋರನೆ ಮಧುರ ಪುರದ ಅರಸನೆ ಕೂಡಿ ಎನ್ನ ರಮಿಸನೆ ಅ.ಪ . ಮುನಿಸು ಮನದಲ್ಲಿಟ್ಟನೆ ಮೋಹವನ್ನು ಬಿಟ್ಟನೆಮನದಿ ಛಲವತೊಟ್ಟನೆ ಮನೆಗೆ ಬಾರದೆ ಬಿಟ್ಟನೆ 1 ಎಂತು ನಂಬಿ ಇದ್ದನೆ ಎಂತು ಗುರುತು ಮರೆತನೆಪಂಥವ್ಯಾತಕೆ ಕಲಿತನೆ ಕಾಂತೇರÀ ಕೂಡಿ ಮೆರೆದನೆ 2 ಸೋಳಸಾಸಿರ ಗೋಪಿಸಹಿತ ಜಲದಲಾಡಿ ಪೋದನೆಸೆಳೆದು ಒಬ್ಬಳ ಒಯ್ದನೆ ಚೆಲುವ ಹಯವದನನೆ 3
--------------
ವಾದಿರಾಜ
ಶ್ರೀರಂಗ ಯಾತ್ರೆಯನು ಮಾಡಿಬಾರೆಂದೆನ್ನ ಈ ರೀತಿಯನುವ ಮಾಡಿದೆಯ ಸ್ವಾಮಿ ಪ ಕಾರುಣ್ಯನಿಧಿಯೆ ವೇಲಾಪುರಾಧೀಶ್ವರನೆ ಆರುಣ್ಯದೊಳು ಕೆಡಹಿದೆಯ ಸ್ವಾಮಿ ಅ.ಪ ದಾರಿಯನು ತೋರಲೈತಂದ ಶ್ರೀವೈಷ್ಣವನು ಸೇರಿಸಿದ ನೀಯಡವಿಯಸ್ವಾಮಿ ಕಾರುಗತ್ತಲೆ ಸುರಿವ ಮಳೆಯ ಸಿಡಿಲಿನ್ನೆಲ್ಲಿ ಸೇರುವೆನು ಈ ಗಿರಿಯೊಳೂ ಸ್ವಾಮಿ 1 ನಾರಿ ಮಕ್ಕಳು ಭೃತ್ಯರೆಲ್ಲಿ ಪೋದರೋ ಯೇನು ಕಾರಣಬಂದೆನಯ್ಯ ಸ್ವಾಮಿ ಭೂರಮಣ ತ್ರಿಭುವನಾಧಾರ ನೀ ನಲ್ಲದಿ ನ್ನಾರು ಕಾವರೆನ್ನನು ಸ್ವಾಮಿ 2 ಘುಡಿಘುಡಿಸುತಲಿವೆ ಪುಲಿ ಕರಡಿ ಸುತ್ತಲು ಭೋ ರಿಡುತಲಿವೆ ಭಕ್ಷಿಸುವಡೇ ಸ್ವಾಮಿ ಬಿಡದೆ ಕರಿಗಳು ಕೂಗಿ ಕಂಗೆಡಿಸುತಲಿವೆ ಇದೇ ಕಡೆಗಾಲವಾಯಿತೆಲ್ಲೋ ಸ್ವಾಮಿ 3 ನಡೆವರೆಡೆಗಾಣೆ ಇಲ್ಲಿರುವುದಾಗ ದಾಗದು ಕಷ್ಟ ಬಡುವುದಕೆ ಗುರಿಯಾದೆನೇ ಸ್ವಾಮಿ ಎಡಬಲಕ್ಕೊಲೆಯೆ ಕಪ್ಪು ಕಲ್ಲು ಮುಳ್ಳುಗಳಿದೆಕೋ ಒಡೆಯ ಕೈವಿಡದೆ ಸಲಹು ಸಲಹೋ ಸ್ವಾಮಿ 4 ಒಂದೆಸಗಲೇಳಡಸಿತೆಂದು ಪೇಳುವ ನುಡಿಗೆ ಸಂದು ಬಸವಳಿದೆನೆಲೋ ಸ್ವಾಮಿ ಇಂದು ಸಂಧ್ಯಾ ಗಾಯತ್ರಿ ಕರ್ಮವುಳಿದುದರ ವಿಂದಾಕ್ಷ ಸುಮ್ಮನಿಹರೇ ಸ್ವಾಮೀ 5 ಎಂದೆಂದು ಮಾತನಾಡುವನಾಥರಕ್ಷಕನೆ ಬಂದುದೀಗೇನು ಸಿರಿಯು ನಿನಗೇ ಬಂಧನವ ಬಿಡಿಸು ದುರ್ಮರಣದಲಿ ಕೊಲ್ಲದಿರು ತಂದೆ ವೈಕುಂಠ ರಮಣಾ ಸ್ವಾಮೀ 6
--------------
ಬೇಲೂರು ವೈಕುಂಠದಾಸರು
ಶ್ರೀರಂಗನಾಥ ನಂಬಿದೇ ನಿನ್ನ ನಾನೇ ಅನಾಥ ಪ ಅನಾಥರಕ್ಷಕ ಎನ್ನಾ ಪ್ರೀತಿಯಿಂದಲೆ ಕಾಯೊ ಲೋ ಕನಾಥನೆಂದು ಬಂದು ನಂಬಿದೆ ನಿನ್ನ ಅ.ಪ ನಿಮ್ಮ ರಘುಪತಿ ನಿಮ್ಮ ವಿಭೀಷಣಗೆ ಕೊಡಲು ತಾಮುನ್ನಾ ಶ್ರೀರಂಗಕ್ಷೇತ್ರದಿ ನೆಲಸಿ ಸಂತೋಷದಿ ಧರ್ಮವರ್ಮಾದಿ ಚೋಳೇಂದ್ರ ಪೂಜಿತಪಾದ 1 ಕಂದ ಪ್ರಹ್ಲಾದ ಕರೆಯೆ ಕಂಬದಿಂದಲೆ ಬೇಗ ಬಂದು ಅವನ ತಂದೆಯನು ಸಂಹರಿಸಿದೆ ಕಂದನ ಕಾಯ್ದ ಗೋವಿಂದ ರಕ್ಷಿಸೊ ಎನ್ನ 2 ಅಜಮಿಳ ಕರೆಯೆ ಆಪತ್ತಿಗೆ ಬಂದು ನೀನೊದಗೆ ನಿಜಸ್ಮರಣೆ ಮಾತ್ರದಲವನ ದುರಿತವೆಲ್ಲವ ಕಳೆದು ನಿಜ ಪಾದವನಿತ್ತೆ ಕರುಣದಿಂದಲೆ ರಂಗ 3 ಕಂದ ಧ್ರುವ ತಾನು ಅಡವಿಯಲಿ ನಿಂತು ತಪವನು ಚಂದದಿ ಮಾಡಲು ಬಂದು ಸೇವೆಯನಿತ್ತೆ ಆ ನಂದಪದವನಿತ್ತ ಸುಂದರಾಯನೆ ನೀನು 4 ಅರ್ಕಸುತನಾಗ ನಿಮ್ಮನ್ನು ಸೇರಿ ಸೌಖ್ಯವ ಬೇಗ ಮಾಡೆ ಸೊಕ್ಕಿದ ವಾಲಿಯನೊಂದು ಬಾಣದಿಂ ಕೊಂದು ಮರ್ಕಟಗೆ ರಾಜ್ಯವನಿತ್ತ ರಂಗಯ್ಯ ನೀನು5 ಮಕರಿ ಕಾಲ್ಪಿಡಿಯೆ ಮತಂಗಜ ನಿಮ್ಮನು ಕರೆಯೆ ನಕ್ರವ ಕೊಂದು ಚಕ್ರದಿ ಅತಿವೇಗದಿಂ ಕರಿಯ ರಕ್ಷಿಸೆ ಬಂದೆ ಕರುಣದಿಂದೆ 6 ಭವಕೆ ನಾ ಬೆದರಿ ಬಂದೆನೊರಂಗ ಕಾಯೋ ನೀ ಭವದಿ ಈಶಣತ್ರಯವನ್ನು ಬಿಡಿಸಿ ನಿನ್ನಯ ಪಾ ದವಾಸವ ಮಾಡಿಸೊ ವಾಸುಕಿಶಯನನೆ 7 ಆರುಜನ ಕಳ್ಳರು ಎನ್ನಲಿ ಸೇರಿ ಬಾಧಿಸುತಿಹರು ದೂರಮಾಡವರನ್ನು ಸೇರಿಹೃದಯದಲ್ಲಿ ಶ್ರೀನಿವಾಸನೆ ನಿಮ್ಮ ಪಾದದೊಳಿರಿಸೆನ್ನ 8
--------------
ಯದುಗಿರಿಯಮ್ಮ
ಶ್ರೀರಂಗನಾಥನ ಸೇವೆಯ ಮಾಡಿರೈ ಸದಾ ಪ ಅಡಿಗಳ ಭಜಿಪರ ಎಡರು ಕಳೆವುದಕೆ ವಡವಾಟಲಿ ತಾ ಬಿಡದೆ ನೆಲೆಸಿಹನ 1 ಶರಣುಪೊಕ್ಕವರ | ಕರುಣದಿಂದ ಲಘು | ಹರಣಗೈವ ರಥ | ಚರಣಧಾರಿ ಪದ 2 ಕಷ್ಟ ಕಳೆದು ಸುಖ | ಕೊಟ್ಟು ಪೊರೆವ ಹರಿ 3 ಪ್ರಥಮಮಾಸದಲಿ | ಶಿತ ಸುಪಕ್ಷದಲಿ ತಿಥಿ ದಶಮಿಯಲಿ | ರಥವೇರಿ ಬರುವಹರಿ 4 ನೇಮದಿ ತನ್ನಯ | ನಾಮಧ್ಯಾನಿಪರ ಕಾಮಿತಗರೆಯುವ | ಶಾಮಸುಂದರ 5
--------------
ಶಾಮಸುಂದರ ವಿಠಲ