ಒಟ್ಟು 14471 ಕಡೆಗಳಲ್ಲಿ , 133 ದಾಸರು , 7276 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರಗಡದಿನ್ನೀಶೇಷ ವಿಠಲ ಪೊರೆ ಇವನ ಪ ನಿರುತ ತವ ಚರಿತೆಗಳ | ಸ್ಮರಿಸುತ್ತ ಭಕ್ತಿಯಲಿಮರುತಾಂತರಾತ್ಮ ತವ | ಚರಣಕರ್ಪಿಪನ ಅ.ಪ. ಭವ | ಬಂಧದೊಳು ಸಿಲ್ಕಿ ಬಹುನೊಂದವಗೆ ಕರುಣದಲಿ | ಕುಂದನೆಣೆಸದಲೇಮಂದ ಹಾಸವ ಬೀರಿ | ಸಂಧಿಸೋ ಸಂತೋಷಇಂದಿರಾರಾಧ್ಯ ಪದ | ಮಂದರೋದ್ಧಾರೀ 1 ಉತ್ತಮ ಸುಸಂಸ್ಕøತಿಯ | ಪೊತ್ತು ಜನಿಸಿಹನಿವನುಮತ್ತೆ ದಾಸರ ಕರುಣ | ಪಾತ್ರನಿರುವಾಅರ್ಥಿಯಲಿ ದಾಸತ್ವ | ಪ್ರಾರ್ಥಿಸುತ್ತಿಹಗೆ ನಾ-ನಿತ್ತಿಹೆನೊ ಅಂಕಿತವ | ಸುಪ್ತೀಶನಾಜ್ಞಾ2 ಮೋದ ತೀರ್ಥರ ತತ್ವ | ವಾದಾನುವರ್ತಿ ಇವಭೋಧಿಸೀ ಪರತಮವ | ಭೇದ ಪಂಚಕನಆದರದಿ ಕೈ ಪಿಡಿದು | ಉದ್ಧರಿಸ ಬೇಕೆಂದುವೇದ ವೇದ್ಯನೆ ನಿನ್ನ | ಪ್ರಾರ್ಥಿಸುವೆ ಹರಿಯೇ 3 ಶ್ರವಣ ಮನಕಾನಂದ | ಭುವನ ಪಾವನವೆನಿಪತವಮಹಿಮೆ ಪೊಗಳಲ್ಕೆ | ಕವನ ಶಕ್ತಿಯನೂನೀವೊಲಿದು ಅಭಿವೃದ್ಧಿ | ಗೈವುದಿವನಲಿಯೆಂದುಪವನಾಂತರಾತ್ಮ ಬಿ | ನ್ನವಿಪೆನೋ ದೇವಾ4 ಭಾವಕ್ರಿಯೆ ದ್ರವ್ಯದೊಳು | ಅದ್ವಿತಿಯ ನೀನೆಂಬಭಾವದನುಭವವಿತ್ತು | ನೀ ವೊಲಿಯೊ ಇವಗೇಕಾವರನ್ಯರ ಕಾಣೆ | ಗೋವರ್ಧನೋದ್ಧರನೆಕೋವಿದರ ಒಡೆಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರಗಿರಿವಾಸನ ಅರಮನೆ ಸೊಬಗನೆ ದೊರೆಗಳು ನೋಡಿ ಶಿರಗಳ ತೂಗುತ ಬೆರಗಾಗಿಪ. ಛÀತ್ರ ಚಾಮರ ರಾಜ ಪುತ್ರರು ಚಂದಾಗಿಅಚ್ಚಮುತ್ತುಗಳ ಅಲವುತಅಚ್ಚಮುತ್ತುಗಳ ಅಲವುತಬ್ಯಾಗ ಹೊಕ್ಕರು ಚಿತ್ತಜನೈಯ್ಯನÀ ಅರಮನೆಯೊಳಗೆ 1 ತಾರಾಪತಿಗಳಂತೆ ತೋರುತಲೈವರುಥೋರ ಮುತ್ತುಗಳ ಅಲವೂತಥೋರ ಮುತ್ತುಗಳ ಅಲವೂತ ಹೊಕ್ಕರುವೀರಕೃಷ್ಣಯ್ಯನ ಅರಮನೆ ಬ್ಯಾಗ2 ಪಚ್ಚದ ಪಾವಟಿಗೆ ರತ್ನ ಹಚ್ಚಿದ ಚೌಕಟ್ಟುಅಚ್ಚಮುತ್ತುಗಳ ಅಲವುತಅಚ್ಚಮುತ್ತುಗಳ ಅಲವುತ ಹೊಕ್ಕರುಚಿತ್ತಜನಯ್ಯನ ಅರಮನೆ ಬ್ಯಾಗ 3 ಪಕ್ಷಿ ವಾಹನನರಮನೆ ದಕ್ಷಿಣ ದ್ವಾರದಿಲಕ್ಷಣವುಳ್ಳ ವನಿತೆಯರುಲಕ್ಷಣವುಳ್ಳ ವನಿತೆಯರು ತೆರೆದ ಬಾಗಿಲೊಳು ನಕ್ಷತ್ರದಂತೆ ಹೊಳೆಯುತ4 ಎಡಬಲ ಶ್ರೀತುಳಸಿಗಿಡಗಳು ಅಲವುತ ಕಡಲಶಯನನ ಅರಮನೆ ಒಳಹೊಂದಿಕಡಲಶಯನನ ಅರಮನೆ ಒಳಗಿನ್ನುನಾರಿಯರು ನೆರೆದರು 5 ಗಂಧದ ಥಳಿ ಕೊಟ್ಟು ಚಂದುಳ್ಳ ಅಂಗಳಕಹಂದರಗಳ್ಹಾಕಿದ ಇಂದಿರೇಶನರಮನೆಇಂದಿರೇಶನ ಅರಮನೆಯೊಳಗೆಬಂದುನಾರಿಯರು ನೆರೆದರು 6 ಚಂದ್ರನಂತೊಪ್ಪುತ ಚಂದಾಗಿನಿಂತತಂದೆ ರಾಮೇಶನ ಅರಮನೆ ತಂದೆ ರಾಮೇಶನ ಅರಮನೆ ವೃಂದಾವನಕೆಹೊಂದಿ ನಾರಿಯರುನೆರೆದರು ಬೆರಗಾಗಿ 7
--------------
ಗಲಗಲಿಅವ್ವನವರು
ವರಗುರು ತಂದೆ ಮುದ್ದು ಮೋಹನದಾಸರೆಗಿತ್ತರು ಲೇಸ ಪರಮ ಸಂಭ್ರಮದೊಳಿವರ ಸಹವಾಸ ಕರುಣಿಸಿದನು ಶ್ರೀಶ ಪ ರಾಗ ದ್ವೇಷಾದಿಗಳಿವರೊಳಗಿಲ್ಲ ಪಾಮರರಿವರಲ್ಲ ಶ್ರೀ ಗುರುಗಳೆನಗಿವರೆಂದು ಸ್ತುತಿಪನಲ್ಲ ಲಾಲಿಪುದೆನಸೊಲ್ಲ 1 ಶುಭ ಚರಿತೆಯನು ಜ್ಞಾನಿಗಳೆಂಬುದನು ಖುಲ್ಲ ಜನ ನಿಂದಿಸಿದರಾಗುವದೇನೊ ಅರಿಯೆನಯ್ಯ ನಾನು 2 ಪಾದ ಸರಸಿರುಹಕೆ ಭ್ರಮರರೆನಿಸುವ ಗುಣಯುತರ ಕುಜನಗಳೇನು ಬಲ್ಲರಯ್ಯ ಇವರ ಮಹಿಮಂಗಳ ವಿವರ 3 ಕರಿಗಿರಿಯೆಂಬ ವರಕ್ಷೇತ್ರದಲ್ಲಿ ವರುಷಂಪ್ರತಿಯಲ್ಲಿ ಹರಿದಾಸೋತ್ತಮ ಧರಣಿಸುರರನಲ್ಲಿ ಬಲು ಸೇವಿಪರಲ್ಲಿ 4 ಇಷ್ಟದೈವ ಅಪವರ್ಗಪ್ರದನೆಂಬ ಶ್ರೀ ನರಹರಿಯೆಂಬ ದಿಟ್ಟ ಶ್ರೀ ರಂಗೇಶವಿಠಲನ ಬಿಂಬಾಕೃತಿಯ ಸದಾ ಕಾಂಬ 5
--------------
ರಂಗೇಶವಿಠಲದಾಸರು
ವರದ ವೆಂಕಟ ಶ್ರೀನಿವಾಸ ಪ ಕರುಣದಿ ಪಿಡಿಯೊ ಎನ್ನ ಶೇಷಗಿರೀಶಾಅ.ಪ. ಘೋರ ಭವದಿ ನೊಂದೆನು ಇಂದು ಭಾರ ನಿನ್ನದು ಎಂದು ಸಾರಿ ಬೇಡಿದೆ ನಿನಗೆ ಭಕ್ತಬಂಧು ದೂರಮಾಡಲು ಬೇಡ ಕರುಣಾ ಸಿಂಧು ವಾರಿಜಾಸನ ವಂದ್ಯ ನೀರಜನಯನನೆ ಶರಣರ ಪೊರೆಯುವ ಸುರ ದ್ರುಮನೆ ಪರಿಪರಿ ಭವಣೆಯ ತರಿಮಹಿದಾಸನೆ ಚರಣ ಸೇವಕರ ಸೇವಕನೆನಿಸೊ ಶ್ರೀಶನೆ ದುರುಳ ಅಸುರನ ಶಿರವ ತರಿದು ತರಳ ಪ್ರಹ್ಲಾದನ ಪೊರೆದೆ ಎಂದು ಸುರರು ಪೊಗಳವುದನ್ನು ತಿಳಿದು ಭರದಿ ಬಂದು ಶಿರವ ನಮಿಸುವೆ ನಿಂದು 1 ಸಿರಿ ಅಜಭವಾದಿ ವಂದಿತ ಚರಣ ಪರಿಮಿತಿಯಿಲ್ಲದ ಗುಣ ಗಣ ಪೂರ್ಣ ನೀರಜ ಭವಾಂಡೋದಯಕೆ ಕಾರಣ ದುರಿತ ಹರಣ ಕ್ರೂರಜನ ಕುಠಾರ ದೇವನೆ ಗರುಡಗಮನ ಭೀಮರೂಪನೆ ಅರಗಳೆಣಿಸದೆ ಪೊರೆಯಂ ಬೇಗನೆ ಕರವ ಮುಗಿದು ಸಾರಿ ಬೇಡುವೆ ಕರಿಯ ತೊಡರನು ತರಿದು ನಕ್ರನ ಶಿರವ ಸೀಳಿದ ಕರುಣಿ ಕೃಷ್ಣನೆ ಸೀರೆ ಪಾಲಿಸಿ ಪೊರೆದ ದಾತನೆ ಮರಳಿ ಬರುವ ಭವವ ಬಿಡಿನೊ ರಂಗನೆ 2 ನಂಬಿದವರ ಕಲ್ಪವೃಕ್ಷ ನಂಬದವರ ಕಲುಷಕೆ ಶಿಕ್ಷಾ ಇಂಬಾಗಿ ಸರ್ವತ್ರ ಸುಜನರ ರಕ್ಷಾ ತುಂಬಿದ ವೈಭವದಿ ಮೆರೆಯೊ ದಕ್ಷಾ ಕಂಬುಕಂಠನೆ ನಿನ್ನ ನಂಬಿದೆ ಅಂಬರದಲಿ ಕಾಣೆಂದು ಬೇಡಿದೆ ಬಿಂಬನ ನಾಮನುಡಿಸೆಂದು ಕೇಳಿದೆ ಶಂಬರವೈರಿ ನಿನ್ನ ಚರಣವ ಸಾರಿದೆ ಶಂಭುವಂದಿತ ತುಂಬುರ ಪ್ರಿಯ ನಂಬಿ ಭಜಿಸುವೆ ತುಂಬು ಮನದೊಳು ಅಂಬುಜಾಕ್ಷನೆ ಜಯತೀರ್ಥ ಮುನೀಂದ್ರ ಬೆಂಬಲವಾಯುಗ ಶ್ರೀ ಕೃಷ್ಣವಿಠಲಾ 3
--------------
ಕೃಷ್ಣವಿಠಲದಾಸರು
ವರದರಾಜ ಪಾಲಿಸೆನ್ನ ಧರಣಿಯೊ- ವರದರಾಜ ಪಾಲಿಸೆನ್ನ ಪ ಕಾಂತೆಯ ಕಾಂತಿಯೊಳಿರುವೆ ನಿನ್ನಯ ಭಾವವರಿಯದ ರಸಿಕರಾರಿಹರು ಪರಮ ಪುರುಷ ನಿನ್ನ ಚರಣ ಸೇರಿದ ಭಕ್ತ ಜನರೆಲ್ಲ ರಸಿಕರಾಗಿಹರು 1 ದ್ವಿಜವರರಿಗಿಷ್ಟವ ಪಾಲಿಸಿರುವಿ ಅಜನ ನೀನೆಂದು ತೋರಿಸುವಿ ಯಜ್ಞಭೋಜನವನ್ನು ಮಾಡುತಿರುವಿ 2 ಚೇತನಾಚೇತನಗಳಿಗೆ ಶ್ರೇಷ್ಠನರಸೂತ ರಾಜೇಶ ಹಯಮುಖ ನಿನ್ನ ವಾತವಿಧಿ ಹರ ಮುಖ್ಯರು ಭಜಿಸುತಲಿ ನಿತ್ಯ ಮುಕ್ತರಾದರು ಎಂದೊರೆಯುವುದು ಶ್ರುತಿಯು 3
--------------
ವಿಶ್ವೇಂದ್ರತೀರ್ಥ
ವರದರಾಜ ವಿಠಲ | ಪೊರೆಯ ಬೇಕಿವನಾತರಳತವದಾಸ್ಯಕ್ಕೆ | ಮೊರೆಯನಿಡುತಿಹನಾ ಪ ಜನಿತ ಜನಿತ ಸಂಸ್ಕಾರಗಳನೀನಾಗಿ ಕಳೆಯುತಲಿ ಮಾನನಿಧಿ ಸಲಹೋ 1 ತೈಜಸನೆ ಓಲೆಯಲಿ | ಯೋಜಿಸಿದ ಅಂಕಿತವಾಮಾಜದಲೆ ಇತ್ತಿಹೆನೊ | ವಾಜವರ ವದನಾಮಜಗಜ್ಜನ್ಮಾದಿ | ಬ್ರಾಜಿಷ್ಣುಕರಿವರದಓಜಸವನಿತ್ತಿವಗೆ | ನೀ ಜಯನ ಬೀರೋ 2 ಲೌಕಿಕದಿ ಅಭಿಮಾನ | ತೋಕನಿಗೆ ನೀ ಬಿಡಿಸಿಏಕಮೇವನೆ ನಿನ್ನ | ಏಕಮಾನಸದೀ |ಪ್ರಾಕೃತಸುಗೀತೆಯಲಿ | ಝೇಂಕರಿಪ ಸುಕೃಪವಮಾಕಳತ್ರನೆ ಈಯೋ | ಲೋಕೈಕ ಮೂರ್ತೇ 3 ಪತಿ | ಭೂಮಗುಣಪೂರ್ಣಸೋಮಧರ ಮಧ್ಯ ಸತ್ | ಶ್ರೀ ಮಧ್ವ ಮತದೀಕ್ಷೆಕಾಮನಕೆ ತವದಾಸ್ಯ | ಸ್ವಾಮಿ ಕರುಣಿವುದೋ 4 ಪಾವಮಾನಿಗೆ ಪ್ರೀತ | ಭಾವಜಾರಿಯ ತಾತದಾವಗ್ನಿ ಬಹು ಪೀತ | ಗೋವಗಳರತ್ರಾತಗೋವತ್ಸದನಿಗೆ ಹಸು | ಧಾವಿಸೀ ಪೊರೆವಂತೆತಾವಕನ ಪೊರೆಯೊ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರದವಿಠಲ ದೇವನ ಪೊರೆಯವುದಾನರನ ಪ ಬಂದ ವಿಭೀಷಣನ ಚಂದದಿ ಸಲಹಿದನು 1 ಅಜಮಿಳಗೊಲಿದನ ಕುಜನರ ತರಿದನ ಸುಜನರನಾಳಿದನ ವಿಜಯನ ರಥಸೂತನ 2 ಗಂಗೆಯ ಪಡೆದವನ ರಥಾಂಗವ ಪಿಡಿದವನ 3 ಖ್ಯಾತ ಪಾದಾಂಬುಜನ ಸೇತುವಿಧಾತನ 4 ರಾಮನ ಜಗದಭಿರಾಮನ ದೈತ್ಯ ವಿ ರಾಮನ ಭಜಕನಾ ರಾಮನ ದಶರಥ ರಾಮನ ಸೀತಾ ರಾಮನ ಗುಣಧಾಮನ 5 ಪಂಕಜನೇತ್ರನ ಪರಮ ಪವಿತ್ರನ ಶಂಕರ ನುತಿ ಪಾತ್ರನ ವೆಂಕಟರಮಣನ ಕಿಂಕರ ಶರಣನ ಸಂಕಟಹರ ನಾಮನ6
--------------
ವೆಂಕಟವರದಾರ್ಯರು
ವರದೇಂದ್ರ ಮುನಿಪ ದಿಕ್ಷತಿಗಳಂತೆ ಪರಮ ಸಂಭ್ರಮದಿ ರಾಜಿಸುವ ನೋಳ್ಪರಿಗೆ ಪ ಸುರರಾಜನಂತೆ ಭೂಸುರಗಡಣ ಮಧ್ಯದಲಿ ಮೆರೆವ ದುರ್ವಿಷಯಕೆ ಪಾವಕಾ ನಿರುತ ಸದ್ಧರ್ಮ ಶಿಕ್ಷಿಸುವಲ್ಲಿ ವರದಂಡ ಧರನಂತೆ ಇರುವ ದಿಗ್ವಜಿಯಿಸುವ 1 ಜ್ಞಾನಾದಿ ಗುಣದಿ ರತ್ನಾಕರನೆನಿಸಿ ಕುಮತ ಪಾನೀಯಧರಗಳಿಗೆ ಪವಮಾನನೆನಿಪ ದೀನಜನರಿಗೆ ಧನದ ವೈರಾಗ್ಯ ತಪದಲಿ ಕೃಶಾನು ಕೇತನ ತೆರದಲೊಪ್ಪುವನಜಸ್ರ 2 ಸೂರಿಕುಲವರಿಯ ವಸುಧೀಂದ್ರರಾಯ ಕರಸ ರೋರುಹದಿ ಜನಿಸಿ ಪರಮೋತ್ಸಹದಲಿ ಶ್ರೀರಾಮ ವ್ಯಾಸ ಜಗನ್ನಾಥ ವಿಠಲನ ಚರ ಣಾರವಿಂದರ್ಚನೆಯ ಪಡೆದು ಸಂತೋಷಿಸುವ3
--------------
ಜಗನ್ನಾಥದಾಸರು
ವರದೇಂದ್ರ ಯತಿ ಚಕ್ರವರ್ತಿ ನಿರಂತರ ವರಣಿಸುವೆ ನಿಮ್ಮ ಕೀರ್ತಿ ಪರಮ ಕರುಣಿ ನಿಮ್ಮ ಚರಣಕಮಲಯುಗ ಕ್ಕೆರಗಿ ಬೇಡುವೆ ವರವಾ ಎಮ್ಮನು ಪೊರೆವಾ ಪ ನತಜನಬಂಧು ನೀನೆಂದೂ | ತಿಳಿದು ನತಿಸಿದೆ ಗುಣಗಣಸಿಂಧು ಪ್ರತಿಗಾಣೆ ನಿಮಗೆ ಸುವ್ರತಿ ವರ ಪ್ರಣತ ಕಾ ಮಿತ ಕಲ್ಪತರುವೆ ನಿರ್ಜಿತಮಾರಮಾರ್ಗಣ ಕ್ಷಿತಿಪರಿಗೆ ಪ್ರತಿದಿನದಿ ಪರಮಾದ್ಭುತವೆನಿಸುವುದು ನಿಮ್ಮದಾನ ಪ್ರತತಿ ಸಾಂಪ್ರತ ಮಧುರವಚನಾ ಶಾಸ್ತ್ರ ಪ್ರವಚನಾ1 ಮರುತ ಮತಾಂಬುಧಿ ಚಂದ್ರಾ | ಚಾಮಿ ಕರವರ್ಣಸರಸ ರವೀಂದ್ರ ಪರವಾದಿತಿಮಿರ ಭಾಸ್ಕರ ವಸುಧೀಂದ್ರ ಸ ದ್ಗುರು ಕರಸಂಜಾತ ನಿರುಪಮ ನಿರ್ಭೀತಾ ಖರಮಥನ ಪದಕೋನದ ಮಧುಕರ ಕೃಪಾಕರ ಕರವ ಪಿಡಿದುದ್ಧರಿಸುವುದು ಭೂ ಸುರ ಕುಲೋತ್ತಂಸಾ ನಮೋ ಪರಮಹಂಸಾ 2 ಕಲಿತ ಸುಂದರ ಮಂದಹಾಸಾ ಹೇ ನಿ ಷ್ಕಲುಷ ಸುತತ್ವ ವಿಲಾಸಾ ಗಳಿತಾ ಘಸಂಘನಿಶ್ಚಲ ಜಗನ್ನಾಥ ವಿ ಠಲನೊಲಿಮೆಯ ಪಡೆದಿಳಿಯೊಳು ಚರಿಸುವ ಭಳಿರೆ ಪ್ರತಿಯೋಗಿಗಳೆನಿಪ ಕಂ ಕಲಭಕೇಸರಿ ನಿಮ್ಮ ದಾಸರೊಳೊಲಿದು ಪಾಲಿಪುದನವರತ ಎನ್ನ ನಂಬಿದೆನೋ ನಿನ್ನ 3
--------------
ಜಗನ್ನಾಥದಾಸರು
ವರದೇಂದ್ರ ವರದೇಂದ್ರ ವರದಾಯಕ ಗುರು | ವರಗುಣಸಾಂದ್ರ ಪ ಪಾವನ ಚರಿತ ವೃಂದಾವನ ಮಂದಿರ ಕೋವಿದ ಜನ ಸುಸೇವಿತ ಸದಯ1 ಕಾಲಾಷಾಯಾಂಬರ | ಭೂಷಿತ ಎನ್ನಯ ದೋಷಗಳೆಣಿಸದೆ ಪೋಷಿಸು ಸತತ 2 ಕಠಿಣ ಭವಾಂಬುಧಿ ಘಟಜ ಕುಟಿಲಮತ ವಿಟಿಪಿ ಕುಠಾರಿ ಉತ್ಕಟ ಸನ್ಮಹಿಮ 3 ನತ ಸುರಕ್ಷಿತಿರುಹ | ಜಿತ ರತಿಪತಿ ಶರ ಮತಿವರ ದಶಮತಿ ದುರಿತವಾರಿಧಿ ವಿಭು 4 ಹೇಮೋದರ ವಿತ ಶಾಮಸುಂದರನ ಪ್ರೇಮಪಾತ್ರ ಪುಣ್ಯಧಾಮ ಮಹಾತ್ಮ 5
--------------
ಶಾಮಸುಂದರ ವಿಠಲ
ವರದೇಶ ವಿಠಲರಾಯಾ ಗುರು ವರದೇಂದ್ರರ ಪ್ರೀಯಾ ಮರಿಯದೆ ನೀಯನ್ನ ಕೈಯ್ಯಾ ಪಿಡಿದು ಪೊರೆಯಬೇಕು ಜೀಯಾ ಪ ಒಂದು ದಿನ ನಿನ್ನ ಮನದಲಿ ನೊಂದು ನುಡಿದ ಯನ್ನ ಮಂದನ್ನ ಮಾಡಿದ್ಯೊ ಇನ್ನ ನಿನ್ನ ಸುಂದರ ಮೂರುತಿ ತೋರೆಲೋಘನ್ನ 1 ಏನು ತಿಳಿಯೆ ಮೂಢ ತನದಿ ನಾ ಹೀನಭವದಿಗಾಢ ಮಾನವ ಜನರೊಳಕ್ರೀಡಾ - ಪರನಾ ಜ್ಞಾನಕಳಿಯೊ ಪ್ರೌಢ 2 ಹರಿಪರಜನಸಂಗ ಮಾಡದೆ ನರರೊಳಗಾದೆನು ಮಂಗ ಸುರವರ ಸಹಿತಾಂತ ರಂಗ - ದೊಳು ವರದೇಶ ವಿಠ್ಠಲರಂಗ 3
--------------
ವರದೇಶವಿಠಲ
ವರದೇಶವಿಠಲರ ಹಾಡು ದಾಸರಾಯರ ದಿವ್ಯ ಚರಣ ಭಜಿಸಿ |ಶ್ರೀಶ ಪ್ರಾಣೇಶ ದಾಸಾರ್ಯ ಗುರುವರ್ಯ ಪ ಪಾದ ಭಜಿಪ ಸದ್ಭಕ್ತರ |ಏಸು ಜನ್ಮದ ಪಾಪರಾಶಿ ಪರಿಹರ ವೋ ||ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು |ಲೇಶ ಸಂಶಯವಿಲ್ಲ ಆಲಸವು ಸಲ್ಲ 1 ಮರುತ ಮತ ತತ್ವಗಳ ಥೆರೆಗಳಿಂಸೂಸುತ |ಧರಣಿ ದ್ವಿಜರಿಗೆ ರಾಮನಾಮ ಮೃತ ||ನಿರುತ ಭಜಿಸಲು ಜ್ಞಾನ ವೈರಾಗ್ಯ ತರಮಣಿಯ |ಹರಿಭಕುತಿ ಧೇನುವಂ ನೀಡ್ವ ಪಾಲ್ಗಡಲೆನಿಪ 2 ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ |ಅಜ್ಞಾನ ತಿಮಿರವನು ದೂರೋಡಿಪ |ಸೂಜ್ಞರೆಂಬುವ ತಾವರೆಗಳರಳಿಸುವಂಥ |ಅಜ್ಞ ಕುಮುದಗಳ ಬಾಡಿಸುವ ಭಾಸ್ಕರ ನೆನಿಪ 3 ನಮಿತ ಜನ ಭವತಾಪ ಕಳೆದು ಸದ್ಭಕ್ತಿಯಿಂ |ಬಮಿತ ಆಹ್ಲಾದವನು ಬೀರುವಂಥ ||ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ |ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ 4 ದಾಸ ಕುಲತಿಲಕ ಪ್ರಾಣೇಶರಾಯರ ಕವನ |ಶ್ರೀಶ ಕಥೆಗಳ ರಾಶಿ ಮೀಸಲಾಗಿರಲು |ಆಸು ಭಕ್ತರಿಗೆ ಸಂತೋಷಗೊಳಿಸಲು ಸರ್ವ |ದೇಶದಲಿ ಮೆರಿಸಿ ಸತ್‍ಕೀರ್ತಿಯನು ಪಡೆದಂಥ 5 ಈ ಗುರುಗಳ ಪಾದಕ್ಕೆರಗಿದ್ದ ಶಿರಧನ್ಯ |ಈ ಗುರುಗಳೀಕ್ಷಿಸಿದ ನೇತ್ರ ಧನ್ಯ ||ಈ ಗುರುಗಳ ವಾಣಿ ಕೇಳಿದ ಕಿವಿಧನ್ಯ |ಈ ಗುರುಗಳನು ಮನದಿ ನೆನೆವ ನರಧನ್ಯ 6 ರಾಗ ದ್ವೇಷಾದಿಗಳ ಗೆದ್ದು ಸದ್ಭಕ್ತಿಯಂ |ಶ್ರೀಗುರು ಪ್ರಾಣೇಶ ಭಜಕರೆನಿಪ |ನಾಗ ಪರ್ಯಂಕ ವರದೇಶ ವಿಠಲನ ಪ್ರಿಯಯೋಗಿ ವರದೇಂದ್ರ ಮುನಿಗಳ ಪಾದಭೃಂಗ 7
--------------
ಶ್ರೀಶಪ್ರಾಣೇಶವಿಠಲರು
ವರಲಕುಮಿ ಕರುಣಿಸೌ ಕರುಣಾಕರಳೆ ಎನ್ನೊಳು ಪ ಮರೆಹೊಕ್ಕ ದಾಸರ ದಾರಿದ್ರ್ಯ ಖಂಡಿಸು ಪರಮಪಾವನೆ ನಿನ್ನನರಸಿ ಬೇಡುವೆನವ್ವ 1 ಗರುವಕ್ಕೆ ಬಾರದ ಸಿರಿಯ ಕರುಣಿಸಿ ಮತ್ತೆ ಹರಿಸ್ಮರಣೆ ಸೌಭಾಗ್ಯ ವರ ಪಾಲಿಸೆನ್ನವ್ವ 2 ಕ್ಷೇಮ ಪಾಲಿಸು ತಾಯಿ ಕಾಮಿತ ಜನ ಮಹ ಪ್ರೇಮಮಂದಿರೆ ಶ್ರೀರಾಮನರ್ಧಾಂಗಿಯೆ 3
--------------
ರಾಮದಾಸರು
ವರವಾಮನಾಕಾರ ಪರಮಕರುಣಾಸಾರ ಶರಣಜನಮಂದಾರ ಭಯವಿದೂರ ಶತಯಾಗ ಸಹಜಾತ ದಿತಿಜಾಳಿ ಘನವಾತ ಶತಪತ್ರದಳನೇತ್ರ ಚಾರುಗಾತ್ರ ಕಶ್ಯಪಾತ್ಮಜಯೋಗ ವಶ್ಯ ಸದ್ಗುಣಭೂಷ ನಿತ್ಯ ಮಾಧುರ್ಯವಾಗ್ವಿಹಿತ ಭೇದರಹಿತ ಅನಂತ ಕಲ್ಯಾಣಗುಣಾಪ್ರಮೇಯ ಸನಕಾದಿ ಮುನಿನಿಕರವಂದ್ಯ ಚರಣ ಮನ್ಮೋಹನಾಂಗ ಪರಿಪಾಹಿರಂಗ
--------------
ನಂಜನಗೂಡು ತಿರುಮಲಾಂಬಾ
ವರ್ಣಿಸಲರಿಯೆ ನಿನ್ನ | ವರ್ಣಿಸಲರಿಯೆ ಗು | ಣಾರ್ಣವ ಹರಿಯೆ ಸೂ | ವರ್ಣ ಗಿರೀಶ ಸು | ಗಮನ ರಂಗಾ ಪ ಕುಂಡಲ ಮಿನುಗುವ ಹಸ್ತ ಕಂಕಣ ಬೆರಳುಂಗರ | ಕೌಸ್ತುಭ ಕಂಬು ಸೂದರು | ಶನ ಭುಜಕೀರ್ತಿ ಭೂ | ಷಣವಾದ ಶಿರ ಉರುವ ಒಪ್ಪಲು ಕಿಂ | ಕಿಣಿ ಕನಕಾಂಬರವ ಪೂಸಿದ ಗಂಧ | ಪುನುಗು ಜವ್ವಾದಿಯಿಂದೆಸೆವ ಸುರತರುವೆ 1 ಕಾಂಚಿದಾಮ ಥಳಿ | ಥಳಿಸುವ ಪದಕ ನ್ಯಾ | ತುಂಬಲು ಸೂಸುತಿರೆ ದಂತಾ | ಮಾತಾರಗಿಳಿಯಂತೆ ಶೋಭಿಸಿ | ಕಪೋಲ ಸುತ್ತಲು ಬೆಳಗುವ ಕಂಗಳ ನಾಸಕಾಂತಿ | ಸಿರಿ ತಿರುವೆಂಗಳಾ2 ಕಟಿ ಕರ ಎರಡೇಳು ಲೋಕ ಜಠರದೊಳಡಗಿರೆ | ಕರಿ ಪಲ್ಲಿನಂತೆ ಸುಂದರ ಜಂಘೆ ಗುಲ್ಫ ವಿ | ಪಾದ ನಖ ಪರಿ ಪರಿ ರೇಖೆಗಳ ಕಾಲಿಂದಿಗೆ | ನಿತ್ಯ ಮಂಗಳಾ 3 ನಿರಯ ತ್ತಮ ಜನ ಮನೋರಥ | ಗಮ ಸಿದ್ಧಾಂತನೆ ವಿ | ಕ್ರಮದಾನವ ಹರ | ಕೋಟಿ ಪ್ರಕಾಶಾ | ವೆಂಕಟೇಶಾ | ಅಪ್ರಾಕೃತ | ಪ್ರಮೆಯಭರಿತನಾದ | ಕುರುವಂಶ ವಿನಾಶಾ 4 ಭೂಗೋಳದೊಳಗಿದರಾಗಮ ತಿಳಿ | ದುರಗ ಗಿರಿ ಯಾತ್ರಿಗೆ | ಭೋಗದಾಶೆಯ ಬಿಟ್ಟು | ವೇಗದಿಂದಲಿ ನಿಜ | ಭವ ಸಾಗಿ ಬರಲು ಚನ್ನಾಗಿ ಜ್ಞಾನವ ನೀವುತ್ತ ಸಾಕುವಂಥ | ಶ್ರೀ ಗುರು ವಿಜಯವಿಠ್ಠಲ ಭಕ್ತರ ದಾತಾ5
--------------
ವಿಜಯದಾಸ