ಒಟ್ಟು 7317 ಕಡೆಗಳಲ್ಲಿ , 130 ದಾಸರು , 4853 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ಅಚ್ಯುತಾನಂತ ಗೋವಿಂದದುರುಳಹಿರಣ್ಯಕ ಅಸುರ ಅವತರಿಸಿದರೆ ಎಲ್ಲಿಪರಿಪರಿಯ ಲೋಕ ಪಾತಾಳ ಸ್ವರ್ಗವ ಗೆದ್ದುಪಡೆದು ಅವನ ಸತಿಯ ಸುರಪತಿಯು ಎಳೆತರಲುಅಲ್ಲಿ ಗರ್ಭದಲಿ ಪ್ರಹ್ಲಾದನಿಹನೆಂದುಹರಿಯೆ ಚಂಡಹಿರಣ್ಯಕ ಅಸುರ ದಂಡಿಸುವದುಷ್ಟಮರ್ದನ ದೂರಾತಿದೂರ ಜಗ-ಪರಿಪರಿಯಿಂದ ತುತಿಸುತ್ತ ಕರಗಳ ಮುಗಿಯೆಇತ್ತ ಸುರರೆಲ್ಲ ತಮ್ಮ ತತ್ತಸ್ಥಾನಕೆ ಪೋಗೆಒರೆದೊರೆದು ಪೇಳಿ ಬಹು ಬಗೆ ಬಗೆಯಿಂದಲಿನಮ್ಮ ಅಂತರ ತತ್ವ ನಿಶ್ಚಯವೆ ಇದು ಸರಿಅನ್ಯರಲ್ಲವು ನಾವು ಹಿತವರೆ ನಿನಗಿನ್ನುಭಿನ್ನ ದೇಹ್ಯವುನೋಡುಮುನ್ನಿಂದಲಿ ಇನ್ನುಬಾಧ್ಯ ಬಾಧಕ ಹರಿಯೆ ಸಾಧ್ಯ ಸಾಧನಕೆಹರಿಚಂಡಮಾರ್ಯರು ತಾವು ಚೆಲುವ ಬಾಲಕಿ ಕೇಳುಆವ ವಿಪರೀತವನೆ ಅಲ್ಲದ್ದು ನುಡಿದನುಏಸುಬಗೆಯಿಂದ ಉಪಾಯದಲಿ ಕೇಳಿದರುಈಸು ದಿನ ಇವ ಎನ್ನ ಸುತನು ಎಂದರಿದಿದ್ದೆನಾನಾ ಬಗೆಯಿಂದ ವಧೆಗೇನೇನು ಉಪಾಯಎಲ್ಲಿ ಪ್ರಹ್ಲಾದ ನಿನ್ನೊಡೆಯನು ಇನ್ನುಭುಂಗಿ ಭುಂಗಿಗೆ ಬ್ರಹ್ಮಾಂಡವೆಲ್ಲ ಗದ್ದರಿಸಿನ್ನುಬಿರಬಿರನೆ ಕಣ್ಣುಗಳ ಬಿಡುವುತ್ತ ಹೂಂಕರಿಸಿಕೆಡಿಸದೆ ತಾನಿತ್ತವರಸತ್ಯವೆಂದೆನಿಸಿಪರಿಪರಿಯಿಂದ ಸಿರಿದೇವಿಗೆಇದೆ ಸಮಯವೆಂದುಸಿರಿಅಜಭವಾದಿಗಳೆಲ್ಲಪರಿಪರಿಯಿಂದಸುರ ಋಷಿಪಿತೃ ಗಂಧರ್ವಕಂದ ಪ್ರಹ್ಲಾದನ್ನ ಮುಂದಕ್ಕೆ ಕರೆದು ನಿಮ್ಮಮೆಚ್ಚಿದೆನು ಪ್ರಹ್ಲಾದ ವರವ ಬೇಡೆಂದೆನಲುಆಗ ಪ್ರಹಲ್ಲಾದಗೆ ಕರಕಮಲಗಳಿಂದಹರಿಯೆ ಜಗಕಿನ್ನು ಇರತೋರಿನ್ನು ಪ್ರಹಲ್ಲಾದಜಯ ಜಯತು ಪ್ರಹ್ಲಾದವರದ ಜಗದಾಧಾರ
--------------
ಗೋಪಾಲದಾಸರು
ಹರಿಯೆ ಎನಗಾರು ಗತಿಯೊ ನೀನಲ್ಲದೆ ಪ.ಹಿಂದಿನಾಪತ್ತು ಮರೆತೆಇಂದುಮಾಯದಿ ಬೆರೆತೆಒಂದುಗೂಡಿದವುಅಘಮುಂದಿನರುಹಿಲ್ಲ1ಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬುವಿಗಡಕಾವನ ತಡೆ ತಗಲು ಬಿತ್ತೊ ರಂಗಾ2ಅತ್ತಿತ್ತ ಸುತ್ತುವನಕ ಹೊತ್ತು ಹೋಯಿತು ಯಮನಮುತ್ತಿಗೆ ಬಿದ್ದಾಗ ಮತ್ತಾರಿಲ್ಲೊ ಸ್ವಾಮಿ 3ಅಜ್ಞಾನೆಂಬಹಿ ಕಚ್ಚಿ ಯಜೆÕೀಶ ನಿನ್ನಂಘ್ರಿಸಂಜÕವಿಲ್ಲದೆ ದು:ಖ ಮಗ್ನನಾದೆನಲ್ಲೊ 4ಶ್ರೀ ಪ್ರಸನ್ವೆಂಕಟೇಶ ತಾಪತ್ರಯವಿನಾಶನೀ ಪಾಲಿಸಯ್ಯ ವಿಶ್ವವ್ಯಾಪಕ ಸ್ವಾಮಿ 5
--------------
ಪ್ರಸನ್ನವೆಂಕಟದಾಸರು
ಹರಿಯೆ ಗತಿಯೆನ್ನಿರೈ ಶ್ರೀನರಹರಿಯೆ ಶರಣೆನ್ನಿರೈ ಪ.ಹರಿಪಾದಕಮಲವ ನಂಬದ ಮೂಢನು ಮನುಜನಲ್ಲದನುಜಶ್ರೀಹರಿಚರಿತಾಮೃತ ಕೇಳದೆ ಗರ್ವಿಪ ನರನು ಪಾಮರನÀು 1ಹರಿಯ ಬಂಟರ ಅನುಸರಣೆಗಳ ಪರಿತ್ಯಾಗಿ ವೃದ್ಧಗೂಗಿಹರಿಮಹಿಮೆಯ ಹೊಗಳಾಡದ ಮಾತಿನ ಮುಖನು ಮಂಡೂಕನು 2ಕೃಷ್ಣಗೆ ಪ್ರಿಯವ್ರತ ದಾನಕೆ ವಿಮುಖಾದ ಧನಪನವ ಕುಣಪಕೃಷ್ಣಾಕೃತಿಯ ಬಹಿರಂತದಿ ನೋಡದ ಜಾಣನವ ಕೋಣ 3ಕೃಷ್ಣಗೆ ನಮಿಸದೆಸತಿಸುತರೊಳು ಭೂರಿತುಷ್ಟ ಹಿತನಷ್ಟ ಶ್ರೀಕೃಷ್ಣನವರ ಕಂಡೆರಗದ ವಿಷಯದಭೋಗಿಭವರೋಗಿ4ಗೋವಿಂದ ಸರ್ವೋತ್ತಮನಿರೆ ಬೇರೆಂಬಜ್ಞಾನಿ ಮದ್ಯಪಾನಿಗೋವಿಂದನೊಳು ವಿಶ್ವಾಸಿಲ್ಲದ ಭಕ್ತಿಯ ಧೀರ ಶುದ್ಧಜಾರ5ಗೋವಿಂದ ತೀರ್ಥ ಪ್ರಸಾದÀವ ನರಿಯದ ಬಲ್ಲನೆ ಕಳ್ಳನುಗೋವಿಂದನೊಪ್ಪದ ಮತವಿಡಿದವ ಮಹಿಗೆಕಕ್ಕಸರಕ್ಕಸ6ಪ್ರಸನ್ನ ಮೂರುತಿ ವಿಧಿಭವವಂದ್ಯನ ಅರ್ಚಕ ಧನ್ಯರೆ ಮಾನ್ಯರುಪ್ರಸನ್ನವೆಂಕಟಪತಿ ಕಂಡುಂಡಾ ಭಕ್ತಿಯಾಸಕ್ತರೆ ಮುಕ್ತರು 7
--------------
ಪ್ರಸನ್ನವೆಂಕಟದಾಸರು
ಹರಿಯೆಗತಿಸಿರಿವಿರಿಂಚಿ ಶಿವರಿಗೆನರ -|ಹರಿಯೆಗತಿಸುರಪತಿ ಸುರರಿಗೆಪರುಕುಮಣಿದೇವಿಯ ಶಿಶುಪಾಲಗೀವೆನೆಂದು |ರುಕುಮ ಸಂಭ್ರಮಿಸಲು ಕೃಷ್ಣ ಬಂದು ||ಸಕಲ ರಾಯರುಗಳು ಸನ್ನದ್ಧರಾಗಿರೆ |ರುಕುಮಿಣಿದೇವಿಯ ವರಿಸಿ ಆಳಿದನಾಗಿ 1ಹಯ್ಯಾಸನೆಂಬವ ವೇದವ ಕದ್ದೊಯ್ಯೆ |ಹಯಗ್ರೀವನಾಗಿ ಹರಿಯವನ |ಕಾಯವ ಖಂಡಿಸಿ ಅಜಗೆ ವೇದವನಿತ್ತು |ಕಾಯ್ದ ಕರುಣಿ ಕಮಲಾಕ್ಷನೆ ದೈವವೆಂದು 2ಭಸುಮಾಸುರನಿಗೊಂದಸಮದ ವರವಿತ್ತು |ತ್ರಿಸೂಲಧರನು ಓಡಿ ಬಳಲುತಿರೆ |ಬಿಸಜಸಂಭವನಯ್ಯ ಭಸುಮಾಸುರನನು |ಭಸುಮವ ಮಾಡಿ ಭಕ್ತನ ಪಾಲಿಸಿದನಾಗಿ 3ಸುರಪನ ರಾಜ್ಯವ ಬಲಿಯಾಕ್ರಮಿಸಲು |ಹರಿಯೆ ದಾನವ ಬೇಡಿ ನೀನವನ ||ಧರೆಯಈರಡಿ ಮಾಡಿ ಪಾತಾಳಕೆ ಮೆಟ್ಟ |ಸುರಪಗೆ ರಾಜ್ಯವನಿತ್ತು ಸಲಹಿದನಾಗಿ 4ಸುರ - ಭೂಸುರರನು ಅಸುರ ಬಾಧಿಸುತಿರೆ |ಹರಿಯವತರಿಸಿ ನೀನಸುರರನು ||ಶಿರಗಳ ಚಂಡಾಡಿ ಸುರರ ಭೂಸುರರನುಪೊರೆಯುತ್ತಲಿಪ್ಪ ನಮ್ಮ ಪುರಂದರವಿಠಲ 5
--------------
ಪುರಂದರದಾಸರು
ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ |ದುರಿತಪರ್ವತ ಖಂಡಿಪುದು ವಜ್ರದಂತೆ ಪ.ಮೇರು ಸುವರ್ಣದಾನವ ಮಾಡಲು ಪುಣ್ಯ |ನೂರು ಕನ್ಯಾದಾನವ ಮಾಡಲು ||ಧಾರಿಣಿಯೆಲ್ಲವ ಧಾರೆಯ ನೆರೆಯಲು ||ನಾರಾಯಣ ಸ್ಮರಣೆಗೆ ಸರಿಬಹುದೆ ? 1ಹತ್ತುಲಕ್ಷ ಗೋದಾನ ಮಾಡಲು ಪುಣ್ಯ - |ವ್ರತಗಳಅನುದಿನ ಆಚರಿಸಲು ||ಶತಕೋಟಿ ಯಜÕನ ಮಾಡಲು ಲಕ್ಷ್ಮೀ - |ಪತಿನಾಮ ಸ್ಮರಣೆಗೆ ಸರಿಯೆನ್ನಬಹುದೆ 2ಗಂಗೆ ಕಾಳಿಂದಿ ಗೋದಾವರಿ ಕಾವೇರಿ |ತುಂಗಭದ್ರೆಯಲಿ ಸ್ನಾನವ ಮಾಡೆ ||ಮಂಗಳಮೂರುತಿ ಪುರಂದರವಿಠಲ |ರಂಗನ ಸ್ಮರಣೆಗೆ ಸರಿಯೆನ್ನಬಹುದೆ ? 3
--------------
ಪುರಂದರದಾಸರು
ಹಲವನು ಯೋಚಿಸಲೇನು ಫಲ ಬರಿ |ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ |ಸಲಿಲದಿ ಮುಳುಗಿದರೇನು ಫಲ ||ಜಲಜಾಕ್ಷನ ಪದದೊಲುಮೆಯಿಲ್ಲದೆನರ|ಬಲಯುತ ತಾನೆನಲೇನು ಫಲ1ಪರಸತಿ ಪರಧನದಾಸೆಯೊಳಿರ್ಪನು |ಸುರನದಿಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ2ಕಾಣದೆ ಕುಣಿಯೊಳು ಬಿದ್ದಾನೆಯು ಬಲು |ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ |ಜ್ಞಾನಿಯು ತಾನೆನಲೇನು ಫಲ3ಧೂರ್ತತನದಿ ಹಣ ಗಳಿಸುತ ಲೋಭದಿಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ |ಅರ್ತಿಯೊಳೆಸಗಿದರೇನು ಫಲ4ಪತಿಯನು ವಂಚಿಸಿರೂಪಮಾರುವಸತಿ|ವ್ರತಗಳ ಮಾಡಿದರೇನು ಫಲ ||ರತಿಪತಿಪಿತಗೋವಿಂದನ ನೆನೆಯದೆ |ಗತಿಯನುಬಯಸಿದರೇನು ಫಲ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹಲವು ಬ್ರಾಹ್ಮಣ ಮಂದಿಗಳಿಗಶನವನಿಕ್ಕಿಸಲಹುವೆಯನುದಿನ ತಳೆದು ಖ್ಯಾತಿಯನು1ನಳಿನನೇತ್ರನೆ ನಿನ್ನ ಪಾದದರ್ಶನದಿಂದಹಲವು ಜನ್ಮದ ದೋಷ ನಾಶವಾಯ್ತದೆಂದು2ಅನ್ನಬ್ರಹ್ಮನುಉಡುಪಿಕೃಷ್ಣನೆಂದೆನಿಸಿದೆಸ್ವರ್ಣಬ್ರಹ್ಮನು ತಿರುಪತಿ ಶ್ರೀನಿವಾಸ3ನಾದಬ್ರಹ್ಮನು ಪಂಢರೇಶ ವಿಠಲರಾಯ-ನೆನ್ನಿಸಿ ಮೆರೆªÀಗೋವಿಂದದಾಸರ ಪ್ರೀತ್ಯ4xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹಸೆಗೆ ಬಾರೊ ಕುಸುಮನಯನ ಕುಶಲದಿಂದಲಿ ಬೇಗನೆಶಶಿಮುಖಿಯರ್ ಕರೆವರು ನಿನ್ನ ವಸುಧೆಪಾಲ ರಾಮನೊಪಅಸಮ ವೀರನನೆ ಗೆಲಿದು ಪಶುಪತಿಯ ಬಿಲ್ಲಮುರಿದುಕುಸುಮಬಾಲೆ ಕೊರಳೊಳ್ ಧರಿಸಿವಸುಧೆಸುತೆಯಕರವಪಿಡಿದು1ಕುಶಲದೀ ನಗುನಗುತಾ ಪಸರಿಸುವಿ ಮಂಟಪಕೆ ಹಸೆಗೆಧರಣಿ ಪಾಲರ್ ಲಜ್ಜೆವೆರಸಿ ಮೆರೆವ ಕೀರ್ತಿ ವಿಬುಧರೊಲಿಸೆದುರುಳದೈತ್ಯ ಕ್ರೋಧವರಿಸಿ ಸುರರುರಗದಲ್ಲಿನಿಂದುಹರುಷದಿ ಸುಮ ವರ್ಷವನ್ನು ಕರೆಯುವರೈ ಸರಸದೀ2ಜನಕರಾಯ ಹರುಷದಿಂದ ಜನಕೆ ಓಲೆ ಬರೆಯೆ ಕಂಡುಘನದಿ ದಿಬ್ಬಣ ಕೂಡಿ ಬಂದ ಜನಕ ಜನನಿಯರಿಗೆ ನಮಿಸಿಅನುನಯದಿಂ ಮನ ಓಲೈಸಿ ದನುಜಾಂತಕ ಗೋವಿಂದನೇ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಹಾಳು ಮಾಡಿದ ಹನುಮ ಸಾಲು ವನಗಳ |ಧಾಳಿ ಕೊಟ್ಟನಿತರ ಜನಕೆ |ಕೇಳಲಿದನು ದನುಜನೆಂದು ಪಚರರು ಪೇಳಲವನು ಖತಿಯ |ಲಿರುವ ದಳವ ಕಳುಹಲದನು ||ತರಿದ ಭಯವಬಡದೆ ಮುಂದಕೆ |ಚರಣವಿಡದೆ ಬಹು ಸಮರ್ಥ 1ಹರಿಜಿತ ಬಲು ಭರದಿ ಬರಲು |ಥರವು ಸಿಗುವದಿವನ ವಶಕೆ ||ಮೂರೇಳು ಮುಖನ ಕಾಂಬುವೆನೆನುತ |ಕರವಮರೆದ ಮರುತ ಕುವರ 2ದಾನವ ಪತಿಯಲ್ಲಿ ಪೋಗಿ |ಏನು ಯೋಚನೆಯನ್ನು ಮಾಡದೆ ||ತಾನು ಗಂಭೀರ ಸ್ವರದಿ ಪೇಳ್ದ |ಪ್ರಾಣೇಶ ವಿಠ್ಠಲನ ಮಹಾತ್ಮೆಯನ್ನು 3
--------------
ಪ್ರಾಣೇಶದಾಸರು
ಹಿಗ್ಗುವೆಯೇಕೊ - ಏ ಮನುಜಾಹಿಗ್ಗುವೆಯೇಕೊ ಅಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವಅಗ್ನಿಯೊಳಗೆ ದಗ್ಧವಾಗುವ ದೇಹಕೆ ಅಪಸತಿ ಪುರುಷರು ತಮ್ಮ ರತಿಕ್ರೀಡೆಗಳ ಮಾಡೆಪತವಾದಿಂದ್ರಿಯ ಪ್ರತಿಮೆಯ ದೇಹಕೆ 1ತೋರುವುದೊಂಬತ್ತು ದಾರಿಯ ಮಲವಾದನೀರಿಲ್ಲದಿದ್ದರೆ ನಾರುವ ದೇಹಕೆ 2ಆಗದ ಭೋಗದ ಆಗು ಮಾಡುತಲಿಪ್ಪರೋಗಬಂದರೆ ಬಿದ್ದು ಹೋಗುವ ದೇಹಕೆ 3ನರರ ಸೇವೆಯಮಾಡಿ ನರಕ ಭಾಜನನಾಗಿಮರಳಿ ಮರಳಿ ಹುಟ್ಟಿ ನರಳುವ ದೇಹಕೆ 4ಪುರಂದರವಿಠಲನಚರಣ ಕಮಲಕೆಎರಗದೆ ಇರುತಿಪ್ಪ ಗುರುವಿನ ದೇಹಕೆ 5
--------------
ಪುರಂದರದಾಸರು
ಹಿಡಿರಂಗ ಜವಳಿಕೊಡು ಉಡುಗೊರೆಪಾಲ್ಗಡಲ ಶಯನಭೂಪತಿ ಗುಡುಗೊರೆ ಪ.ತಟಿತ್ತಾ ಸರಸವುಳ್ಳಪಟ್ಟಾವಳಿಧೋತರದಟ್ಟಿತ ವಾಗಿದ್ದ ಬಿಡಿಮುತ್ತುದಟ್ಟಿತವಾಗಿದ್ದ ಬಿಡಿ ಮುತ್ತು ಮುತ್ತಿನಕಂಠಿಮಠದವರಿಗೆ ಕೊಟ್ಟ ಉಡುಗೊರೆ 1ಬಟ್ಟು ಗೋಲಂಚಿನಧಿಟ್ಟಾದ ಧೋತರಬಟ್ಟಿಗುಂಗುರ ಉಡದಾರಬಟ್ಟಿಗುಂಗುರ ಉಡದಾರ ಶೂರಪಾಲಿಕಟ್ಟಿಯವರಿಗೆ ಕೊಟ್ಟ ಉಡುಗೊರೆ 2ಹತ್ತು ಬಟ್ಟಿಗೆ ತಕ್ಕಮುತ್ತಿನ ಉಂಗುರಮತ್ತೆ ಎಲೆ ಅಡಕೆ ನಡುವಿಟ್ಟುಎಲೆ ಅಡಕೆ ನಡುವಿಟ್ಟು ಇವರಮನೆಜೋಯಿಸರಿಗೆ ಕೊಟ್ಟ ಉಡುಗೊರೆ 3ಅಕ್ಕ ಕೊಲ್ಹಾಪುರಮುಖ್ಯ ಪಂಢರಾಪುರಚಿಕ್ಕ ಸಾತಾರೆ ಪುಣೆಯವಚಿಕ್ಕ ಸಾತಾರೆ ಪುಣೆಯವ ಪೈಠಣ ಶಾಲುಮುಖ್ಯ ಗಲಗಲಿಯವರಿಗೆ ಉಡುಗೊರೆ 4ಕಂಕಣವಾಡಿ ಮುಂದೆಡೊಂಕಾಗಿ ಹರಿದಾಳುವಂಶಿಯ ಜೋಡು ನಡುವಿಟ್ಟುವಂಶಿಯ ಜೋಡು ನಡುವಿಟ್ಟು ಗಲಗಲಿಯಮುತೈದೆಯರಿಗೆಲ್ಲ ಉಡುಗೊರೆ 5ಅಧ್ಯಾಪಕ ಜನರೊಳುವಿದ್ವಾಂಸರಿಗೆಲ್ಲಶುದ್ಧ ರತ್ನದಲಿ ರಚಿಸಿದಶುದ್ಧ ರತ್ನದಲಿ ರಚಿಸಿದ ಉಂಗುರವಿದ್ವಾಂಸರಿಗೆಲ್ಲ ಉಡುಗೊರೆ 6ನಾಲ್ಕು ಸಾವಿರ ಉಂಗುರಅನೇಕ ಬಗೆ ಶಾಲುಈ ಕಾಲದಲೆ ತರಿಸೇವಈ ಕಾಲದಲೆ ತರಿಸೇವ ರಮಿಯರಸುಕೊಟ್ಟ ಅನೇಕ ಜನರಿಗೆ ಉಡುಗೊರೆ 7
--------------
ಗಲಗಲಿಅವ್ವನವರು
ಹಿಂದಿನ ಬವಣೆಗಳೆಲ್ಲ ಆಗಲೆ ಮರೆದೆಯೇನೊ |ಇಂದುಬಂದ ಭಾಗ್ಯವು ನಿಜವೆ ವೆಂಕಟತಂದೆ?ಪತಲೆಗೆ ಹುಲಗಲ ಹೂವಕಟ್ಟಿತುರುಗಳ ಕಾಯುತಲಿದ್ದೆ |ಹಲವು ರತ್ನದ ಮುಕುಟ ಈಗ ಇಟ್ಟಿಹೆನೆಂದು 1ಒಪ್ಪಿಡಿಅವಲಕ್ಕಿಯನು ಒಪ್ಪದಿಂದ ಸವಿದೇ ಸವಿದೆ |ತಪ್ಪದೆ ಪಂಚಾಮೃತ ಉಂಡು ಸೊಕ್ಕಿದೆನೆಂದು 2ಭಾಗ್ಯವು ಬಂದರೆ ಭಕ್ತರನು ಮರೆವರೆ ಸೌ-|ಭಾಗ್ಯವಂತ ನೀನುಪುರಂದರವಿಠಲ3
--------------
ಪುರಂದರದಾಸರು
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು
ಹುಚ್ಚು ಮಾಡಿದ ಎನ್ನ ಗುರುವುಈ ಹುಚ್ಚನರಿವೊಡೆ ಸಚ್ಚರಿತರಿಗರಿವುಪಆಶ್ರಮ ಧರ್ಮವು ಹೋಯ್ತುನಿರಾಶ್ರಮವೆಂಬುದು ನಿಜವಾಯ್ತುಕುಶ್ರಮಗಳು ನಾಶವಾಯ್ತುಜೀವಭ್ರಮೆಯೆಂಬುದು ಖಿಲವಾಯ್ತು1ಸ್ನಾನವು ಮನದಿಚ್ಛೆಯಾಯ್ತು ಸಂಧ್ಯಾದಿಜಪವೆಲ್ಲ ಮರತೇಹೋಯ್ತುಮೌನವೆಂಬುದು ಬಹಳವಾಯ್ತು ಗುರುತಾನೆಎಂದೆಂಬ ಧ್ಯಾನವುಪೂರ್ಣವಾಯ್ತು2ಕುಲಗಳೆಂಬುವು ಕಾಣದಾಯ್ತುಕುಲಛಲಗಳು ಮರತೇಹೋಯ್ತುಹೊಲೆ ಶುದ್ಧಗಳು ಬರಡುನುಡಿಯಾಯ್ತುನಿಶ್ಚಲನಿಜಾನಂದವೆಂಬುದೇ ಸತ್ಯವಾಯ್ತು3ಭೇದಾಭೇದವು ಮಾಯವಾಯ್ತುಹಾಳುವಾದಗಳು ಕೇಳದಂತಾಯ್ತುಸಾಧುಸಂಗವ ಬಿಡದಂತಾಯ್ತುಸುವಾದವಮಾಡಿ ಸುಖಿಸುವಂತಾಯ್ತು4ದಯೆ ನಿರ್ದಯೆಗಳ ತೊರೆದಾಯ್ತುಭಯ ನಿರ್ಭಯಗಳು ಅದೃಶ್ಯವಾಯ್ತುಜಯಾಪಜಯಗಳು ಕಾಣದಾಯ್ತು ಸ್ವಕ್ಷೇಮಪರಕ್ಷೇಮಗಳ ವಿಚಾರ ಹೋಯ್ತು5ಕೋಪ ತಾಪವು ಶಮವಾಯ್ತುತಾಪತ್ರಯದಬಿತ್ತು ಮೊಳೆಯದಾಯ್ತುಯೋಗ ವಿದ್ಯೆಯ ಹರಿತವಾಯ್ತುನಿರ್ವಾಣವಾಗಿ ಎಲ್ಲ ಇಂತಾಯ್ತು6ಇಂತಹ ಹುಚ್ಚನು ಎನಗೆ ಕವಿಯಿಸಿನಿರಂತರ ಚಿಂತೆಯ ನೆನ್ನ ಪಾಲಿಗಿರಿಸಿಅಂತರಂಗದಿ ತಾನೆ ನೆಲೆಸಿ ಚಿಂತಾಯಕಚಿದಾನಂದ ತಾ ಬೆರೆಸಿ7
--------------
ಚಿದಾನಂದ ಅವಧೂತರು
ಹೆಂಡತಿ ಎಂಬ ದೇವರನು ನಂಬಿಹನಣ್ಣಹೆಂಡತಿಯೆ ದೇವರೆಂದು ಕೆಡುತಿಹನಣ್ಣಪತಲೆಗೆ ತಾನೆರೆಯುವುದೆ ಮಂಗಲ ಸ್ನಾನವಣ್ಣಬಲು ವಸ್ತ್ರವುಡಿಸುವುದೆ ಅಭಿವಸ್ತ್ರವಣ್ಣಎಲೆಗೊಪ್ಪು ಮೊದಲಾಗಿಡುವುದೇ ಆಭರಣವಣ್ಣಹಲವು ಪರಿಮಳ ಲೇಪನವೇ ಗಂಧವಣ್ಣ1ನಾನಾ ದಂಡೆಯ ಹಾರವ ಮುಡಿವುದೆ ಪುಷ್ಪವಣ್ಣನಾನಾ ಬಹುಮಾನ ಮಾಡುವುದೆ ಧೂಪವಣ್ಣನಾನಾಪರಿಉಣಿಸುವುದೆ ನೈವೇದ್ಯವಣ್ಣನಾನಾ ಸಂತಸಪಡಿಸುವುದೆ ದೀಪವಣ್ಣ2ನೆನೆದೂಳಿಗ ಮಾಡುವುದೆ ಪ್ರದಕ್ಷಿಣವಣ್ಣಮುನಿಸುವಳ ತಿಳಿಸುವುದೆ ಸಾಷ್ಟಾಂಗವಣ್ಣಇನಿತು ಪೂಜೆಯ ಮಾಡಿ ತಿರುಗೊಂದು ಭವವಣ್ಣಚಿನುಮಯ ಚಿದಾನಂದ ನಿನಗೆ ದೊರೆಯನಣ್ಣ3
--------------
ಚಿದಾನಂದ ಅವಧೂತರು