ಒಟ್ಟು 928 ಕಡೆಗಳಲ್ಲಿ , 96 ದಾಸರು , 645 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಸಾಯಿ ಸ್ತುತಿಗಳು ಪಾತಕ ಪರಿಹರ ನಿತ್ಯನಿರ್ಮಲ ನಾಮ ಭಾವುಕಪ್ರೇಮ ಪ ನುತ್ಯು ದಯಾಕರ ಶಂಕರ ಸುಖಂಕರ ಭೃತ್ಯ ಮನೋರಮ ನಿರ್ಜಿತಕಾಮ ಅ.ಪ ಶಾಂತಸ್ವಭಾವ ಪರಮಪ್ರಭಾವ ದಾಂತ ಕೃಪಾಕರ ಭವಪರಿಹಾರ ಮಂತ್ರಸುಧಾರ್ಣವ ಶೀತಳಭಾವ ಭ್ರಾಂತಿವಿದೂರ ಪುಣ್ಯಶರೀರ 1 ಅಗಣಿತ ಗುಣಗಣ ಸತ್ವ ನಿರೂಪಣ ಜಗದಾನಂದದಾ ವೂದಿ ಪ್ರಸಾದ ನಿಗಮಾಗಮಗಣ ವಿನಮಿತ ಚರಣ ನಗಜಾನಂದದ ಮಾಂಗಿರಿವರದ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಹಯಗ್ರೀವ ಮಂತ್ರಸ್ತೋತ್ರ ಜ್ಞಾನ ಬಲಾನಂದಾದಿ ಸರ್ವಗುಣ ವಾರಿನಿಧಿ ಅನಿಷ್ಟಹರ ಇಷ್ಟಪ್ರದ ಹಯಗ್ರೀವ ಅನಘ ಸನ್ನುತ ಸೇವ್ಯ ಘನ ದಯಾಂಬುಧೇ ನಮೋ ಗುರುಗ ಲಕ್ಷ್ಮೀಶ ಪ ಕಮಲಾಸನ ಋಷಿಯು ಗಾಯತ್ರಿಛಂದಸ್ಸು ಅಮಲಾಷ್ಟಾಕ್ಷರ ಮಂತ್ರ ದೇವತೆ ಹಯಾಸ್ಯ ಸೋಮ ಮಂಡಲ ಸ್ಥಿತನು ಅಕಳಂಕ ಕಾಂತಿಮಾನ್ ಅಮೃತ ತನ್ನಯ ಸ್ವರೂಪ ಕಿರಣ ಸುರಿಸುವನು 1 ನಾಶರಹಿತನು ಅವ್ಯಯ ನಿತ್ಯೋ ನಿತ್ಯಾನಾಮ ಅಂಡ ಬಹಿರಂತರದಿ ಎಲ್ಲೂ ಪುಸ್ತಕ ಚಿನ್ಮುದ್ರೆಯು ಶಂಖಾಕ್ಷ ಮಾಲಾಧರ ಕಾಶಿಸುತಿಹ ತುರಗ ವದನ ಸರ್ವಜ್ಞ2 ಪೂರ್ಣ ಜ್ಞಾನಾತ್ಮನು ಪೂರ್ಣ ಐಶ್ವರ್ಯಾತ್ಮ ಪೂರ್ಣ ಪ್ರಭಾತ್ಮನು ಪೂರ್ಣ ತೇಜಾತ್ಮಾ ಪೂರ್ಣಾನಾನಂದಾತ್ಮನು ಪೂರ್ಣ ಶಕ್ತ್ಯಾತ್ಮನು ಪೂರ್ಣ ಗುಣನಿಧಿ ಸದಾ ನಿರ್ದೋಷ ಈಶ 3 ಪ್ರತಿವಾದಿ ಜಯಪ್ರದನು ಸರ್ವ ವಿದ್ಯಾದಾತ ಬುದ್ದಿ ಸ್ಥೈರ್ಯ ಸತ್ಜ್ಞಾನ ವರ್ಚಸ್ಸು ಈವ ಮುಕ್ತ್ತಿಸಾಧನೆ ಅಪರೋಕ್ಷಜ್ಞಾನವನಿತ್ತು ಸಾಧು ಅಧಿಕಾರಿಗಳ ಯೋಗಕ್ಷೇಮ ವಹಿಪ 4 ಏಕದಶÀ ಶತÀ ಸಹಸ್ರಾನಂತ ರೂಪನೇ ಸ್ವಗತ ಭೇದ ವಿಲ್ಲದ ಸುಪೂರ್ಣ ಸ್ವತಂತ್ರ ಶ್ರೀಕದಶ ವಿಧಿಪಿತ ಪ್ರಸನ್ನ ಶ್ರೀನಿವಾಸ ನಮೋ ವ್ಯಾಂ ಕಪಿಲದತ್ತÀ ವರಾಹಹಯಗ್ರೀವ 5 ಶ್ರೀ ಮಧ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಕರ ಅಷ್ಟಾಕ್ಷರ ಮಂತ್ರ ಗುಣವಾರಿನಿಧಿ ಅನಘ ಉತ್ತಮಮಹಾ ಪ್ರಭುವೆ ನಿನಗೆ ನಮೋ ಶ್ರೀಕರ ನಾರಾಯಣನೆ ಶರಣು ಪ ಉತ್ತಮೋತ್ತಮಗುತ್ತ ಮೋತ್ತ ಮೋದೀತ ಚೇತನಾಚೇತನರಿಗುತ್ತಮಾಶ್ರಯನು ಉತ್ತಮ ಉಮೇಶಾದಿ ಭಾರತಿಗುತ್ತಮ ವಾಯು ಆತಗುತ್ತಮೆ ಸಿರಿಗೆ ಉತ್ತಮೋತ್ತಿಷ್ಠ 1 ಶ್ರೀ ಎಂದರೆ ಜ್ಞಾನಸುಖಪೂರ್ಣೆ ಲಕ್ಷ್ಮಿಸ್ಥ ಕ ಎಂದರಾನಂದಶತ ಸುಖಾಂತಸ್ಥ ರ ಎಂದರೆ ಸ್ವರತ ಸುಖಪ್ರದ ಸುಖಾಶ್ರಯನು ಇಂದಿರೇಶನೆ ಎನಗೆ ಸೌಭಾಗ್ಯವೀಯೊ 2 ಸ್ವಾಹಾ ಆತ್ಮನು ಸ್ವವಶ ಸರ್ವವಶಿ ಶ್ರೀಪನು ಹರಿ ಹಂಸ ನಿರ್ದೋಷ ಬ್ರಹ್ಮ ನಾರಾಯಣ ಅಹರ್ನಿಶಿ ಈ ರೀತಿ ನಿನ್ನ ಸ್ಮರಿಸುವ ಜನಕೆ ನಿಖಿಳ ಐಶ್ವರ್ಯವೀವೆ 3 ಕಂಬು ಅರಿ ಶಂಖನಿಧಿ ಪದ್ಮನಿಧಿ ದಿವ್ಯ ಹಸ್ತಗಳಲಿ ಶೋಭಿತವಾಗುಂಟು ದ್ರವ್ಯ ಹಾಟಕ ರತ್ನ ಧನ ಕೊಡುವ ಕರಗಳು ದೇವಿ ಶ್ರೀ ಹ್ರೀ ಸಹ ಗರುಡಾಂಶಸಂಸ್ಥ 4 ಮೀನಾದಿರೂಪ ತ್ವದ್ ಮಸ್ತಕಾದ್ಯಂಗದಿ ಇನಗಮಿತದೀಪ್ತ ಆಭರಣ ಜ್ವಲಿಸುತಿವೆ ಶ್ರೀನಿವಾಸನೆ ಸ್ವರ್ಣವರ್ಣ ನಮೋ ಶರಣು 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಗೋಪಾಲ ಕೃಷ್ಣಾತ್ಮಕ ಶ್ರೀರಾಮ ಭಜನೆ ರಾಮ ರಾಮ ಜಯರಾಮ ಪರಾತ್ಪರ | ನೌಮಿ ಪದಾಂಬುಜ ಶ್ರೀರಾಮಸೋಮ ಕುಲೋದ್ಭವ ಭೂಮ ಗುಣಾರ್ಣವ | ಕಾಮ ಪಿತನೆ ಶ್ರೀಕೃಷ್ಣ 1 ಖೂಳರ ಬಾಧೆಗೆ ಸುಜನರು ಮೊರೆಯಿಡೆ | ಪಾಲುಂಬುಧಿ ಶಯ ಶ್ರೀರಾಮಪಾಲಿಪೆನೆಂದ್ವರ ಪಾಲಿಸಿದನು | ಪಾಲಾಂಬುಧಿಶಯ ಶ್ರೀಕೃಷ್ಣ 2 ದಶಮುಖ ದೈತ್ಯನು ಲೋಕವ ಬಾಧಿಸೆ | ದಶರಥಗುದಿಸಿದ ಶ್ರೀರಾಮವಸುಧೆಯ ಭಾರವ ನೀಗುವೆನೆಂ | ದ್ವಸುದೇವ ಸುತನಾದ ಶ್ರೀಕೃಷ್ಣ 3 ಅನುಜರು ಲಕ್ಷ್ಮಣ ಭರತ ಶತೃಘ್ನರ | ಅನುಮೋದಿಸುತಲಿ ಶ್ರೀರಾಮಅನುಜನು ತಾ ಬಲರಾಮನಿಗಾಗುತ | ಅನುಜೆಯಳೊಂದಿಗೆ ಶ್ರೀಕೃಷ್ಣ4 ಶಿಶುತನ ಲೀಲೆಯ ದಶರಥಗೇ | ಕೌಸಲ್ಯಗೆ ತೋರಿದ ಶ್ರೀರಾಮಶಿಶುತನ ಲೀಲೆ ಯಶೋದೆಗೆ ನಂದೆಗೆ | ಸಂತೋಷವು ಶ್ರೀಕೃಷ್ಣ 5 ಯಾಗವ ರಕ್ಷಿಸೆ ಕರೆದೊಯ್ದನು | ಆ ಗಾಧಿಜ ನಿನ್ನನು ಶ್ರೀರಾಮಬಾಗುತ ಬಂದ ಕ್ರೂರನು ಧನು | ರ್ಯಾಗಕೆ ಒಯ್ದ ನಿನ್ನ ಶ್ರೀಕೃಷ್ಣ 6 ಮಾರ್ಗದಿ ಮಂತ್ರಗಳುಸುರಿದ ಮುನಿ | ನೈರರ್ಗಳದೀ ಶ್ರೀರಾಮಗರ್ಗಾಚಾರ್ಯನು ಭೋದಿಸೆ ಮಂತ್ರವ | ನಿರ್ಗಮಿಸಿದೆಯೋ ಶ್ರೀಕೃಷ್ಣ 7 ಪ್ರಥಮದಲಾಹುತಿ ಇತ್ತೆಯೊ ಕ್ರತುವಿಗೆ | ದಿತಿಜೆಯ ತಾಟಕಿ ಶ್ರೀರಾಮದಿತಿಜೆಯು ಪೂಥಣಿ ಅಸುವನು ಹೀರಿದೆ ಪ್ರಥಮದಿ | ಕವಳಕೆ ಶ್ರೀಕೃಷ್ಣ 8 ಅಸುರ ಸುಬಾಹುವನಳಿಯುತಲಬ್ದಗೆ | ಎಸೆದೆ ಮಾರೀಚನ ಶ್ರೀರಾಮ |ಉಸಿರನು ಹೀರಿದೆ ತೃಣವರ್ತನ ನೀ | ಅಸುರ ಶಕಟನ ಅಳಿದೆಯೊ ಶ್ರೀಕೃಷ್ಣ 9 ಚಾರು ಸುಂದರನೇ ಶ್ರೀರಾಮತೋರಿದೆ ವದನದಿ ವಿಶ್ವವ ಮಾತೆಗೆ | ಚಾರ್ವಾಂಗನೆ ಶ್ರೀಕೃಷ್ಣ 10 ವರಪದ ಶಿಲೆ ಸೋಕಲಹಲ್ಯಾ | ಶಾಪ ವಿಮೋಚನೆ ಶ್ರೀ ರಾಮವರಳೆಳೆಯುವಾಗ ಮಣಿಗ್ರೀವರ | ಶಾಪ ವಿಮೋಚನೆ ಶ್ರೀಕೃಷ್ಣ 11 ವ್ಯಾಕುಲರಾಗಿದ್ದಾ ಋಷಿಕುಲ ನಿ | ರಾಕುಲರಾದರು ಶ್ರೀರಾಮಗೋಕುಲವೂ ತವ ಲೀಲೆಗಳಿಂ ನಿ | ರಾಕುಲ ವಾಯಿತು ಶ್ರೀಕೃಷ್ಣ 12 ವೃಂದಾರಕ ವೃಂದವ ಸಲಹಿದನೂ | ಸುಂದರ ಮೂರುತಿ ಶ್ರೀರಾಮವೃಂದಾವನ ವೃಂದವ ಸಲಹೆ ದು | ರ್ವೃಂದವನಳಿದನು ಶ್ರೀಕೃಷ್ಣ 13 ಭಾಮಿನಿ ಸೀತೆಯ ಸ್ವಯಂವರ ನೇಮದಿ | ಪ್ರಾಣಿ ಗ್ರಹಣ ಶ್ರೀರಾಮಭೈಷ್ಮೀ ರುಕ್ಮಿಣಿ ಸ್ವಯಂವರ ನೇಮದಿ | ಪಾಣಿ ಗ್ರಹಣ ಶ್ರೀಕೃಷ್ಣ 14 ಭಾರ್ಗವನೂ ತಾ ನೊಂದೆಂಬುದ ನೈ | ರರ್ಗಳ ತೋರ್ದನು ಶ್ರೀರಾಮ |ವಾಕು ಸಲಿಸೆ ಬಹು ಪತ್ನಿಯರಾಳಿದ |ಏಕ ಮೇವ ತಾ ಶ್ರೀಕೃಷ್ಣ 15 ಏಕಮೇವ ತಾನೇಕ ಪತ್ನಿತ್ವವ | ಲೋಕಕೆ ತೋರಿದ ಶ್ರೀರಾಮ |ವಾಕು ಸಲಿಸೆ ಬಹು ಪತ್ನಿಯರಾಳಿದ | ಏಕಮೇವ ತಾ ಶ್ರೀಕೃಷ್ಣ 16 ರಾಜ್ಯವ ಬಿಟ್ಟನ ರಾಜ್ಯವ ಸಾರ್ದ ನಿ | ರ್ಲಜ್ಜರ ಸದೆಯಲು ಶ್ರೀರಾಮರಾಜ್ಯವ ಕಟ್ಟಿ ಸ್ವರಾಜ್ಯವ ಮಧುರೆಲಿ ನಿ | ರ್ಲಜ್ಜರ ಹನ ಶ್ರೀಕೃಷ್ಣ 17 ಭಂಜನ ಶ್ರೀಕೃಷ್ಣ 18 ದಂಡಕ ವನದಲಿ ಪುಂಡರ ದಂಡಿಸೆ | ದಂಡವ ಪಿಡಿದನು ಶ್ರೀರಾಮ |ಮಂಡೆಯ ಪಿಡಿದು ಕಂಸನ ಶಿರ | ಚೆಂಡಾಡಿದನು ಶ್ರೀಕೃಷ್ಣ 19 ಶಬರಿಯ ಭಕ್ತಿಗೆ ಎಂಜಲ ಮೆ | ದ್ದಬುಜಾಂಡೋದರ ಶ್ರೀರಾಮ |ಕುಬುಜೆಯ ಭಕ್ತಿಗೆ ವಕ್ರವ ತಿದ್ದಿದ | ಅಬುಜಾಂಡೋದರ ಶ್ರೀಕೃಷ್ಣ 20 ಕಾಯ ಛೇದ ಉ | ಪಾಯದ ಗೈದೆಯೊ ಶ್ರೀಕೃಷ್ಣ 21 ವಾಹನ ಗೈಯುತ | ಮೋಕ್ಷವನಿತ್ತನು ಶ್ರೀಕೃಷ್ಣ 22 ಸೀತೆಯ ಕಳಕೊಂಡ್ವೆಥೆಯನೆ ನಟಸಿದ | ಪೃಥ್ವೀಪತಿಯು ಶ್ರೀರಾಮಕೌತುಕ ತೋರಿದ ನಾರದಗೇ ಬಹು | ಪತ್ನಿಯರಲ್ಲಿ ಶ್ರೀಕೃಷ್ಣ 23 ಮಾಯಾ | ವೈಭವ ಪೊಗಳಿರಿ ಶ್ರೀಕೃಷ್ಣ 24 ಜೋಡಿಸಿ ಬಹು ಸೈನ್ಯವ ಹೂಡಿದ | ರಾವಣ ಸಂಗರ ಶ್ರೀರಾಮಜೋಡಿಸಿ ಬಹು ಸೈನ್ಯವ ಜರೆ ಜನು | ಹೂಡಿದ ಯುದ್ಧವ ಶ್ರೀಕೃಷ್ಣ 25 ಮುರ ನಬಕರು ಮಡಿದರು | ದೇವ ನೀ ಬಾಣವ ಬಿಡೆ ಶ್ರೀಕೃಷ್ಣ 26 ಸೀತೆಯನಗ್ನಿ ನಿವೇಶವ ಗೈಸುತ | ಪೂತಳು ಎನಿಸಿದ ಶ್ರೀರಾಮ |ಕೌತುಕಳು ವೇದ್ವತಿಯಳ ನೀ | ನಾಂತೆಯೊ ಶ್ರೀ ವೆಂಕಟ ಕೃಷ ್ಣ 27 ಪ್ರಥಮಾಂಗನು ಮಾರುತನಿಂ | ಪೃಥ್ವೀ ಭಾರವನಿಳುಹಿದೆ ರಾಮ |ಪ್ರಥಮಾಂಗನು ಭೀಮನಿಂ | ಪೃಥ್ವೀ ಭಾರವನಿಳುಹಿದೆ ಕೃಷ್ಣ 28 ಭರತನಿಂ ವಾರ್ತೆಯ ಕಳುಹಿ | ಭರತನ ಉಳುಹಿದೆ ಶ್ರೀರಾಮ |ಅರದಿ ರವಿ ಮರೆ ಮೌಡುತ ನೀ | ನರನನು ಉಳುಹಿದೆ ಶ್ರೀಕೃಷ್ಣ 29 ಸೀತೆಯ ಸಹ ಪುರಿ ಕೋಸಲೆಗೆ ನೀ | ಮಾತುಳಹಲು ಬಂದೆ ಶ್ರೀರಾಮ |ನೀತರು ನರಕನಿಂದಾ ತರುಣಿಯರ | ಪ್ರೀತಿಲಿ ತಂದೆಯೊ ಶ್ರೀಕೃಷ್ಣ 30 ಪಟ್ಟವಗಟ್ಟಲಯೋಧ್ಯಾಪುರಿಲಿ | ಶಿಷ್ಟರ ಸರ್ವರ ಮಾಡಿದೆ ರಾಮಪಟ್ಟ ಭದ್ರ ಪ್ರಭು ದ್ವ್ಯಷ್ಟಸಾಸಿರ ಪ | ತ್ನ್ಯಷ್ಟರನಾಳಿದೆ ಶ್ರೀಕೃಷ್ಣ 31 ಕುಶಲವರ್ಹ ಸುಳೆಗಳಾ ಮಗೆ | ಅಸಮ ಸಾಹಸಿಗಳ್ ಶ್ರೀರಾಮ |ಶಿಶುಗಳ್ಕøಷ್ಣಗೆ ಗಣನೆಗಸಾಧ್ಯವು | ಅಸಮ ಸಾಹಸಿಗಳ್ ಶ್ರೀಕೃಷ್ಣ 32 ರಾಜ್ಯ ಸುಭೀಕ್ಷವು ಪತಿವ್ರತೆರೆಲ್ಲರು | ವ್ಯಾಜ್ಯ ರಹಿತ ಸ್ವರಾಜ್ಯದಿ ಶ್ರೀರಾಮಪರ್ಜನ್ಯವರ್ಷಿಸಿ ರಾಜ್ಯ ಸುಭಿಕ್ಷವು | ಆರ್ಜವರು ಪ್ರಜೆ ರಾಜ್ಯದಿ ಕೃಷ್ಣ 33 ಪಾಲನ ಪಾಲನ ಶ್ರೀಕೃಷ್ಣ 34 ಭಕ್ತಲಿ ರಾಮನ ಚರಿತೆಯ ಕೇಳಿ | ಮುಕ್ತಿದನು ಕೃಷ್ಣಾತ್ಮಕ ರಾಮಭಕ್ತಿಯಿಂದಾಲಿಸೆ ಭಾಗವತಾ ಕಥೆ | ಮುಕ್ತಿದನು ಗುರು ಗೋವಿಂದ ವಿಠಲ 35
--------------
ಗುರುಗೋವಿಂದವಿಠಲರು
ಶ್ರೀನಿವಾಸ ಸುಗುಣೈಕ ನಿಧೆ ಶ್ರೀಮಾನಸಹಂಸ ದಯಾಜಲಧೆ ಪ ತೋಯಸನ್ನಿಭಕಾಯ-ಮನೋಜನಿಕಾಯ ಮಾಪಮಧುರಾಲಾಪ ನಿಧಾಯಹೃದಿಧ್ಯಾಯಾಮಿಹರೆ 1 ವಿಗ್ರಹ ಮಖಿಳಶುಭಗ್ರಹಣಂ ಮದನುಗ್ರ ಹಾರ್ಥಮದಿ ತಿಷ್ಠವಿಭೋ ಸಮರ್ಯಾಂ ಸ್ವೀಕುರುಭೋ 2 ಪಾದ್ಯಾಘ್ರ್ಯಾಚಮನಾದ್ಯಮಖಿಳ ಜಗ- ದಾದ್ಯಕಲ್ಪಿತಂ ಭವದರ್ಥಂ ಸುಖೋಷ್ಣಮಿದಂ 3 ನಿಸ್ತುಲಕಾಂಚನವಸ್ತ್ರಮಲಂಕುರು ಕಸ್ತೂರಿತಿಲಕಂ ಸುಮುಖೋ ಕೌಸ್ತುಭರತ್ನ ಮಜಸ್ತುತಮಂಡನ ಮಸ್ತುತನೌಗುಣ ಭೂಷಣತೇ 4 ಮಂದಾರಕಾ ಮಾಲ್ಯಾಕಲಿತಂ ಮಲಂಕುರುಸನ್ನಿಹಿತಂ 5 ಗಂಧರ್ವಾಮರ ವಂದಿತ ಮಲಯಾ ಗಂಧಲೇಪನ ಮಾಕಲಯಾ ಧೂಪಂ ಜಿಘ್ರಹರೇ 6 ತಾಪತ್ರಯ ಪರಿತಾಪನಿವಾರಣಂ- ತಾಪಸಮಾನಸದೀಪ ಹರೇ ರೂಪಾಲೋಕಯ ಶ್ರೀನೃಹರೇ 7 ಮಂತ್ರತಂತ್ರ ಯಂತೃಣಮೂರ್ತೇ ಸುಮಂತ್ರಪುಷ್ಪಂ ಸ್ವೀಕುರುಹೇ 8 ವಿಚಿತ್ರದಂತ ಚಾಮರಯುಗಳಂ ಶ್ರೋತ್ರಮಿತ್ರ ತೋರ್ಯತ್ರಿಕಮಾಕಲಯಾತ್ರ ಭೋಗಾಮಧಿರಾಜ ಕಳಂ 9 ಪಾಯಸಮತಿಹೃದ್ಯಂ ಮಧುನಾಸ್ವೀಕುರು ನೈವೇದ್ಯಂ 10 ಶಿಶಿರಾಂಬುಪಿಬಾಮಲ ಘನಸಾರಂ ಬಹುಮನ್ವಸ ಕರ್ಪೂರಂ 11 ಪರಿವಾರ ವಿಭೋ ಕರ್ಪೂರಾರ್ತಿಕಮಂಗೀಕುರುಭೋ 12 ಕುಕ್ಷಿಭುವನ ಸಂರಕ್ಷಿತ ಸೇವಕ ಪಕ್ಷಪ್ರದ ಕ್ಷಿಣಮನುವಾರಂ ಪಕ್ಷಿಗಮನನಿಜ ವಕ್ಷೋಧೃತ ಶುಭಲಕ್ಷಕರೋಮ ನಮಸ್ಕಾರಂ13 ಸಾಗರತನಯಾಯಾಗವಿಹಿತ ಭೂಭಾಗದೇಯ ನೀಳಾ ಸಹಿತಂ ಕುರುಲಸಿತಂ14 ಆರಾಧನಮ ಪಜಾಯತಮುಪಚಾರಮಿಷೇಣ ಮಯಾ ಚರಿತಂ ನಾರಾಯಣ ಚರಣಾರಾಧನಮಿತಿ ಕಾರುಣ್ಯೇನ ಕ್ಷಮಸ್ಸೇದಂ 15 ಚರಣಾಗತ ಜನಭರಣಾಲಂಕೃತ ಹರಿಣಾರ್ಯದ್ರಿ ನಿಕೇತನ ತೇ ಚರಣಾರಾಧನ ಕರಣಾಂಚಿತಮಿತಿ ವರದ ವಿಠಲಗೀತಂ ತನುತೇ 16
--------------
ಸರಗೂರು ವೆಂಕಟವರದಾರ್ಯರು
ಶ್ರೀನಿವಾಸಸುಗುಣೈಕನಿಧೆ ಶ್ರೀ ಮಾನಸಹಂಸ ದಯಾಜಲಧೇ ಪ ಕಾಯ ಮಾಪಮಧುರಾಲಾಪ ತೋಯಜಾಕ್ಷ ಪೃಥುಳಾಯತಪಕ್ಷ ನಿ ಧಾಯ ಹೃದಿಧ್ಯಾಯಾಮಿ ಹರೆ 1 ವಿಗ್ರಹಮಖಿಳಶುಭಗ್ರಹಣಂ ಮದ ನುಗ್ರಹಾರ್ಥಮದಿತಿಷ್ಠವಿಭೋ ಉಗ್ರಮುಖ ವಿಬುಧಾಗ್ರ್ಯಪೂಜಿತ ಸ ಮಗ್ರ ಸಮರ್ಯಾಂ ಸ್ವೀಕುರುಭೋ 2 ದಾದ್ಯ ಕಲ್ಪಿತಂ ಭವದರ್ಥಂ ಸದ್ಯಂಬುನಿಮೇಜ್ಯ ಸುಖೋಷ್ಣಮಿದಂ3 ಕಸ್ತೂರಿತಿಲಕಂ ಸುಮುಖೋ ಕೌಸ್ತುಭರತ್ನಮಜಸ್ತುತಮಂಡನ ಮಸ್ತುತನೌಗುಣ ಭೂಷಣತೇ 4 ಮಂದಾರಕಾ ಮಾಲ್ಯಾಕಲಿತಂ ಗದ ಬಂಧುರ ಸುಗಂಧಿ ತುಳಸಿಕಾ ಬೃಂದಮಲಂಕುರು ಸನ್ನಿಹಿತಂ 5 ಗಂಧರ್ವಾಮರ ವಂದಿತ ಮಲಯಾ ಗಂಧಲೇಪನಮಾಕಲಯಾ ಗಂಧವಾಹನುತ ಗಂದವತೀ ಗುಣ ಬಂಧುರ ದೂಪಂ ಜಿಘ್ರಹರೇ 6 ತಾಪಸ ಮಾನಸ ದೀಪಹರೇ ರೂಪಾಲೋಕಯ ಶ್ರೀನೃಹರೇ 7 ಮಂತ್ರಪೂತಮುಖ ಯಾತ್ರಾಧಾರ ಸು ಮಂತ್ರಪುಷ್ಪಂ ಸ್ವೀಕುರುಹೇ 8 ಛತ್ರಮಿದಂ ಭುವನತ್ರಯನಾಥಸ ವಿ ಚಿತ್ರದಂತ ಚಾಮರಯುಗಳಂ ಯಾತ್ರ ಭೋಗಾ ಮದಿರಾಜಕಳಂ 9 ಮಧುಮಧುರಿಮ ಪಾಯಸಮತಿಹೃದ್ಯಂ ಮಧುನಾಸ್ವೀಕುರು ನೈವೇದ್ಯಂ 10 ಬಿಂಬಾಧರಮಿಂದುಬಿಂಬವದನ ಶಿಶಿ ರಾಂಬುಪಿಬಾಮಲಘನಸಾರಂ ತಂಬಹುಮನ್ವಸ ಕರ್ಪೂರಂ 11 ಕಾರ ನಿಭೃತ ಪರಿವಾರ ವಿಭೋ ನೀರಾಜನಮತಿತಾರಾಯಿತ ಕ ರ್ಪೂರಾರ್ತಿಕಮಂಗೀಕುರು ಭೋ 12 ಪಕ್ಷ ಪ್ರದಕ್ಷಿಣಮನುವಾರಂ ಪಕ್ಷಿಗಮನನಿಜವಕ್ಷೋಧೃತಶುಭ ಲಕ್ಷಕರೋಮನಮಸ್ಕಾರಂ13 ಸಾಗರತನಯಾಯಾಗವಿಹಿತ ಭೂ ಭಾಗಧೇಯನೀಳಾಸಹಿತಂ ಭೋಗಿಶಯನಮನುರಾಗ ಪರಿಷ್ಕøತ ಮಾಗಮಗೋಚರ ಕುರುಲಸಿತಂ14 ಆರಾಧನಮಪಜಾಯತಮುಪ ಚಾರಮಿಷೇಣ ಮಯಾಚರಿತಂ ಕಾರುಣ್ಯೇನ ಕ್ಷಮಸ್ಸೇದಂ 15 ಹರಿಣಾರ್ಯದ್ರಿ ನಿಕೇತನ ತೇ ಚರಣಾರಾಧನ ಕರಣಾಂಚಿತಮಿತಿ ವರದವಿಠಲಗೀತಂ ನುತೇ 16
--------------
ವೆಂಕಟವರದಾರ್ಯರು
ಶ್ರೀನಿವಾಸಾರ್ಯರ ಶೃಂಗಾರ ಗುಣಂಗಳಆನೆಂತು ವರ್ಣಿಸುವೆನು ಪ ದಾನವಾಂತಕ ಹರಿಯ ಮಾನಸಾರ್ಚನೆ ಮಾಳ್ಪಮಾನಿಸಾ ವೇಷಧರರ ಇವರ ಅ.ಪ. ನಿರ್ಜರ ಪತಿಯ ಚಿತ್ತ ಸಂಪಾದಿಸುವರಮತ್ತು ಗಜವೆಂಬ ದುರ್ವಾದಿಗಳನೇ ಮುರಿದು ಹತ್ತು ದಿಕ್ಕಿಲಿ ಮೆರೆವರ ಇವರ 1 ಪಾದ ಅಂಗಾರ ಕರಮುಟ್ಟಿ ಪಾಲಿಸುತ್ತಿಹರ ||ವರ ಮಂತ್ರಾಕ್ಷತೆಯನ್ನಿತ್ತು ಮುದದಿಂದ ಪಾ-ಮರರನ್ನೆ ಪೊರೆವರ ಇವರ2 ಲಕ್ಷ್ಮೀಪತಿ ಶ್ರೀನಿವಾಸಾರ್ಯರೆಮ್ಮನು ಬಿಡದೆ ರಕ್ಷಿಸಲೆಂತೆಂಬೆನೊಅಕ್ಷರ ಪುರುಷ ಅಪ್ರಾಕೃತನ ತೋರಿ ಮದ ಮತ್ಸರವ ಬಿಡಿಸೆಂಬೆನೊ ||ಸೂಕ್ಷ್ಮಾಂಬರಧರ ಮೋಹನ ವಿಠಲನಈ ಕ್ಷಣದಿ ತೋರಿಸೆಂಬೆನೊ ನಾನು 3
--------------
ಮೋಹನದಾಸರು
ಶ್ರೀಪತಿಯ ನೈವೇದ್ಯ ಕೊಡುವದು ಧೂಪದಾಂತರ ಭೂಮಿಶೋಧನ ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ಸೂಪ ಅನ್ನವು ಅಗ್ನಿಕೋಣದಿ ಆ ಪರಮ ಅನ್ನವನು ಈಶಾ ನ್ಯಾಪೆಯಾಲೇಹಗಳ ನೈರುತದಲಿ ಇಟ್ಟು ತಥಾ 1 ವಾಯುದಿಶದಲಿ ಉಪಸುಭೋಜ್ಯವು ವಾಯಸಾನ್ನದ ಮಧ್ಯ ಘೃತಸಂ ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು ಬಾಯಿಯಿಂದಲಿ ದ್ವಾದಶ ಸ್ತುತಿ ಗಾಯನದಿ ನುಡಿಯುತಲಿ ಈ ಕಡೆ ಆಯಾ ಅಭಿಮಾನಿಗಳು ದೇವತೆಗಳನು ಚಿಂತಿಸುತ 2 ಓದನಕ ಅಭಿಮಾನಿ ಶಶಿಪರ ಮೋದನಕ ಅಭಿಮಾನಿ ಭಾರತಿ ಆದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ ಸ್ವಾದುಕ್ಷೀರಕ ವಾಣಿ ಮಂಡಿಗಿ ಲೀ ದ್ರುಹಿಣನವನೀತ ಪವನಾ ದಾದಧಿಗೆ ಶಶಿವರುಣ ಸೂಪಕೆ ಗರುಡ ಅಭಿಮಾನಿ 3 ಶಾಕದಲಿ ಶೇಷಾಮ್ಲ ಗಿರಿಜಾ ನೇಕನಾಮ್ಲದಿ ರುದ್ರಸಿತದಲಿ ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ ಈ ಕಟು ಪದಾರ್ಥದಲಿ ಯಮ ಬಾ ಹ್ಲೀಕ ತಂತುಭದಲ್ಲಿ ಮನ್ಮಥ ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ 4 ಕೂಷುಮಾಂಡದ ಸಂಡಿಗಿಲಿ ಕುಲ ಮಾಷದಲಿ ದಕ್ಷ ಪ್ರಜಾಪತಿ ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ ಈ ಸುಫಲ ಷಡ್ರಸದಿ ಪ್ರಾಣ ವಿ ಶೇಷ ತಾಂಬೂಲದಲಿ ಗಂಗಾ ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ 5 ಸಕಲ ಭಕ್ಷ್ಯಗಳಲ್ಲಿ ಉದಕದಿ ವಿಶ್ವ ಮೂರುತಿ ಮುಖದಲೀ ನುಡಿ ಅಂತಿಲೀ ಶ್ರೀ ಕೃಷ್ಣ ಮೂರುತಿಯ ನಖ ಚತು ಪದಾರ್ಥದಲಿ ಆ ಸ ಮ್ಯಕು ಚತುರವಿಂಶತಿ ಅಭಿಮಾ ನಿಕರ ಚಿಂತಿಸಿ ಸರ್ಪಿ ಸಹ ಶ್ರೀ ತುಳಸಿಯನು ಹಾಕಿ6 ಕ್ಷೀರ ದÀಧಿ ಕರ್ಪೂರ ಸಾಕ ರ್ಜೀರ ಪನಸ ಕಪಿಥ್ಥ ಪಣ್ಕದ ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ ಪೂರ ಶಂಖದಿ ಉದಕ ಓಂ ನಮೊ ನಾರೆಯಣಾ ಅಪ್ಟಾಕ್ಷರವು ತನ ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ7 ಸೌರಭೀ ಮಂತ್ರದಲಿ ಪ್ರೇಕ್ಷಿಸಿ ಮೂರೆರಡು ಮೊದಲಾಗಿ ಶಂಖವು ಅಂತಿಮಾಡಿ ತಥಾ ಪೂರ್ವ ಆಪೋಶನವು ಹೇಳಿ ಅ ಪೂರ್ವ ನೈವೇದ್ಯವು ಸಮರ್ಪಿಸಿ ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ 8 ಪೂಗ ಅರ್ಪಿಸಿದಂತರದಿ ಅತಿ ಬ್ಯಾಗದಲಿ ಲಕ್ಷ್ಯಾದಿ ನೈವೇ ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ ಸಾಗಿಸೀ ಶ್ರೀ ಹರಿಯ ಸಂಪುಟ ದಾಗ ನಿಲ್ಲಿಸಿ ವೈಶ್ವದೇವವು ಸಾಗಿಸೀ ಶ್ರೀ ವಿಜಯವಿಠಲನ ಧೇನಿಸುತ ಮುದದಿ9
--------------
ವಿಜಯದಾಸ
ಶ್ರೀಪರಿಕಲ್ ನರಸಿಂಹ ಸ್ತೋತ್ರ ನರಸಿಂಹ ಪರಿಕಲ್ ನರಸಿಂಹ | ಗೌರೀಶಾದ್ಯಮರರಿಗೀಶ | ಆಹ | ಅಮಿತ ಪೌರುಷ ಸ್ವಜನತೇಷ್ಟಪ್ರದನೆ ನಮೋ ಅಮಲೂರು ಗುಣಗಣಾರ್ಣವ ಜಯ ಜಯತು ಪ ಸರ್ವೋರು ನಿಜ ಶಕ್ತಿಮಂತ | ಸದಾ ಸರ್ವತ್ರವ್ಯಾಪ್ತ ಅನಂತ | ಜಗತ್ ಸೃಷ್ಟ್ಯಾದಿಗಳಿಗೇ ನೀ ಕರ್ತ | ವಿಷ್ಣು ಸರ್ವತೋಮುಖ ಮೃತ್ಯುಹಂತ || ಆಹ || ಶ್ರೋತವ್ಯಮಂತವ್ಯ ಧ್ಯಾತವ್ಯವಿಭು ನೀನು ವ್ಯಕ್ತನಾದಿಯೋ ಸ್ತಂಭದಲಿ ಭೃತ್ಯಗೋಲಿದು 1 ಮೂಲಾಧಾರಾರಭ್ಯಲೂಧ್ರ್ವ | ವಾಗಿ ತಲೆಯ ಪರ್ಯಂತದಿ ನಿಲುವ | ಬಲು ಸುಲಲಿತಸ್ತಂಭದಂತಿರುವ | ನಾಡಿ ಯಲ್ಲಿ ಉರದೇಶದಿ ಪೊಳೆವ ||ಆಹ|| ಜ್ಯೋತಿರ್ಮಯನೆ ಪಾಪತಿಮಿರಾರ್ಕ ನೀ ಎನ್ನ ಪ್ರತಿಕ್ಷಣ ಪಾಲಿಸೋ ಶ್ರೀಲಕ್ಷ್ಮೀರಮಣ 2 ವಿಧಿ ಭವೇಂದ್ರಾದಿಗಳಿಂದ | ಪ್ರಹ ಲ್ಲಾದ ಶ್ರೀವ್ಯಾಸಮುನೀಂದ್ರ | ಮಂತ್ರಾ ಸದ್ಮಸ್ಥ ಶ್ರೀ ರಾಘವೇಂದ್ರ | ದಾಸ ವೃಂದ ಸುಜನರುಗಳಿಂದ ||ಆಹ || ಸೇವಿತ ಪೂಜಿತ ಸ್ತುತ್ಯ ಸಂಭಾವಿತ ||ಪಾಲಿಸೋ.......... 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಮತೇ ಶ್ರೀ ಭಾಷ್ಯಕರಾಯನೇ [ಮಾಮವ] ದೇವಾ ಕರುಣಿಸು ಮಹರಾಯನೇ ಪ ಮಂತ್ರ ರಹಸ್ಯದಿ ಜ್ಞಾನ ತ್ರಯಂಗಳ ನಿಂತು ನೀ ಕೃಪೆ ಮಾಡಿದೇ ಅ.ಪ [ವರ]ತತ್ವದುಯ್ಯಾಲನಾಡಿದೆ ಭರಗೈದು ಬಂದಿಲ್ಲಿ ಪರತತ್ವವನು ಗೂಡಿದೇ 1 ಸಿರಿಮಾತೇ [ಮೂಲಕ] ಹರಿಯಾಜ್ಞೆಯನುಗೊಂಡು ಪರಮಭಕ್ತರಿಗೆಲ್ಲಾ ಪ್ರತ್ಯಕ್ಷವಾದಂಥಾ ಪರಮಪದವಿ ಮಾಡಿದೇ 2 ಯದುಶೈಲವಾಸದೊಳಧಮರಾದವರಿಗೆ ಸುಧೆಯ ಸುರಿದು ತೋರಿದೆ ಸದುಪಾಯದಿಂ ಬಂದು ಸರ್ವಸ್ವತಂತ್ರದೊ ಳಿದು ನೋಡೆನುತ ಸಾರಿದೆ 3 ಪರಕಾಲಗುರು ಸರ್ವತಿರುಮಳಿಶಯ್ಯಾಳ್ವಾರೆಂ ಬೆರುಮಾನರಡಿಯಾದೆನೈ ಗುರುಕುಲದೊಳಗೆನ್ನ ಕರೆದಿತ್ತ ಹರಿನಾಮ ನುಡಿಯದೆ ನಾ ಹೋದೆನೈ 4 ಅದ್ವೈತ ಕುಲವನ್ನು ಪರಿಶೋಧಿಸಿ ಬಿಟ್ಟು ಶ್ರೀ ಮದ್ರಾಮಾನುಜಾಚಾರ್ಯನೇ ಮದ್ಗುರುವಾದ ಶ್ರೀತುಲಶೀರಾಮದಾಸ [ರೈ ದಾಸಕುಲತೂರ್ಯರೈ] 4
--------------
ಚನ್ನಪಟ್ಟಣದ ಅಹೋಬಲದಾಸರು
ಶ್ರೀಮನೋಹರ ನಿನ್ನ ನಾಮವೇ ಯೆನ್ನುಸಿರು ಕ್ಷೇಮ ನಾಡಿಗಳಲ್ಲಿ ತಿರುಗುತಿರಲಿ ಪ ಕಾಮಾದಿ ಷಡ್ವರ್ಗವ್ಯಾಪನೆಯನೋಡಿಸುತ ಪ್ರೇಮದಿಂ ಹೃತ್ಪದ್ಮದಲಿ ತೋರು ಸತತ ಅ.ಪ ಪ್ರಾಪಂಚಿಕರ ಮನವು ವಿಷಯಗಳಿಗೆಳೆವಂತೆ ಪಾಪಹರ ನಿನ್ನೊಳಗೆ ಯನ್ನ ಮನವಿರಲಿ ತಾಪತ್ರಯಂಗಳಿಗೆ ತನಯನನು ಸಿಲುಕಿಸದೆ ಕಾಪಾಡಿಕೋ ಸ್ವಾಮಿ ದಾಸಾನುದಾಸನಂ1 ಕನಸು ಎಚ್ಚರ ನಿದ್ದೆ ಎಂಬವಸ್ಥೆಗಳಲ್ಲಿ ದಿನಕರಪ್ರಭು ಮೂರ್ತಿಯವತಾರ ತೋರಿ ಅನುನಯದಿ ಪದಯುಗವ ಶರಣು ಹೊಂದುವ ಪರಿಯ ಕನಿಕರದಿ ಕರುಣಿಸೈ ಕಮಲನಯನ 2 ಕಫವಾತ ಪಿತ್ಥಗಳ ವಿಕೃತಿಗಳು ಬಾರದೆಲೆ ಅಪರಿಮಿತ ಸುಂದರಾನಂದ ನೀಡಿ ಸಫಲಮಂತ್ರವ ನುಡಿಸಿ ಕೃಪೆಯಿಂದ ಕೈಪಿಡಿದು ಸುಪಥದಿಂ ನದಿದಾಟಿ ಸೇರಿಸಿಕೊ ಅಡಿಗೆ 3 ಹರಿಹರೀ ಹರಿಯೆಂಬೆ ತಾಯಿ ತಂದೆಯೆ ಗುರುವೆ ದೊರೆಯೆನೀ ಸೋದರನು ಸಖನು ಬಂಧೂ ಧರಣೀಧರ ಸರ್ವತ್ರ ಬೆಂಬಿಡದೆ ಸಹಕರಿಸಿ ಪೊರೆವುದೈ ಭವನಾಶ ಹೆಜ್ಜಾಜಿ ಶ್ರೀಶಾ 4
--------------
ಶಾಮಶರ್ಮರು
ಶ್ರೀಯತಿವರ ನಮಿಪರ ಸುರತರುವೆ | ಮಮಗುರುವೆ | ನಿರುತದಿ ಭಕುತರ ಪೊರೆವೆ ಅ.ಪ ದಯಾಸಾಂದ್ರ ರಾಘವೇಂದ್ರ | ಸುರುಚಿರಮಂತ್ರಾಲಯೇಂದ್ರ | ಜಯಯತಿವರ ನಮಿಪರ ಸುರತರುವೆ 1 ಭಾಸುರಾಂಗ ಜಿತಾನಂದ | ರಘುವರಪದಮಲಭೃಂಗ | ಜಯಯತಿವರ ನಮಿಪರ ಸುರತರುವೆ 2 ಶ್ರೀಸುಧೀಂದ್ರವರಕುಮಾರ | ಶ್ರೀಶಕೇಶವಾಂಘ್ರಿರುಚಿರ | ಜಯಯತಿವರ ನಮಿಪರ ಸುರತರುವೆ 3
--------------
ಶ್ರೀಶ ಕೇಶವದಾಸರು
ಶ್ರೀರಾಘವೇಂದ್ರರ ಸ್ತೋತ್ರ ವಿನಯಾದಿಂದಲಿ ನಮಿಸುವೆನಾ ವೃಂದಾ ವನದಿ ರಾಜಿಪ ರಾಘವೇಂದ್ರ ಗುರವಿನ ಪ ದುರಿತವಾರಣ ಪಂಚಾನನನ ನರ - ಹರಿರೂಪಸ್ತಂಭದಿ ಪ್ರಕಟಗೈಸಿದನ ಹರಿಭಕ್ತಾಗ್ರಣಿಯೆಂದೆನಿಪನ ನಾರ - ದರ ಉಪದೇಶಗರ್ಭದಿ ಕೈಕೊಂಡಿಹನ 1 ಸಿರಿವ್ಯಾಸತೀರ್ಥರೆನಿಪನ ಪುರಂ - ದರ ದಾಸಾರ್ಯರಿಗು ಪದೇಶ ಗೈದವÀನ ವರಚಂದ್ರಿಕಾ ರಚಿಸಿದನ ದುಷ್ಟ ಪರಮಾದ್ರಿಗಳಿಗೆ ಕುಲಿಶನೆನಿಪನ 2 ಶ್ರೀ ಸುಧೀಂದ್ರ ಕರಾಬ್ಜಜನ ದಿವ್ಯ ಭಾಸುರ ಪರಿಮಳ ಗ್ರಂಥ ಕರ್ತರನ - ಮೀಸಲ ಮನದಿ ಭಜಿಪರನ ದೋಷ - ನಾಶನ ಗೈಸಿ ಪೋಷಿಸುವ ಶಕ್ತರನ3 ವರಮಂತ್ರ ಸದ್ಮನಿಲಯನ ಶ್ರೀ - ಗುರು ಮಧ್ವಮತ ದುರಂಧರದೆನಿಸುವನ ಹರಿಪ್ರೀತಿ ಪೂರ್ಣಪಾತ್ರರನ ಈ ಧರಿಯೊಳು ಬಹುಪರಿ ಮೆರೆವ ಮುನಿಪನ 4 ತುಂಗಭದ್ರಾತೀರವಾಸನ ಶುಭ ಮಂಗಲಚರಿತ ಕಮಂಡಲಧರನ ರಂಗವರದೇಶ ವಿಠಲನ ಪದ ಭೃಂಗ ಯತಿಕುಲ ಕಂಜಾರ್ಕ ಸನ್ನಿಭನ 5
--------------
ವರದೇಶವಿಠಲ
ಶ್ರೀರಾಘವೇಂದ್ರರು ಸಂತಜನರ ಪ್ರಿಯ ಸಂತತಕರುಣಿಸು ಮಂತ್ರಾಲಯ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ಪ ಬಾಗಿವಂದಿಪೆ ದಯಾಸಾಗರ ನಿಜಯತಿ ರಾಘವೇಂದ್ರ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 1 ಜ್ಞಾನಕವಚ ತೊಟ್ಟು ಕ್ಷೋಣಿಯೊಳ್ ಅವತರಿಸಿದಿ ಜ್ಞಾನಶರಧಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 2 ಮೇದಿನ್ಯುದ್ಧರಿಸಿದಿ ವೇದವೇದಾಂತದ ಸ್ವಾದವರಿದು ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 3 ವಾದಿಮತರ ಕುವಾದ ಮುರಿದು ಸು ಮಂತ್ರಮೂರ್ತಿ ಗುರುನಾಥ 4 ಜಗದೊಳಗನುಪಮ ಭಗವದ್ಭಕ್ತಿ ಘನ ಮಿಗಿಲೆನಿಸಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 5 ನಿತ್ಯ ನೆನಿಪ ನಿಜ ತತ್ತ್ವದಾದಿ ಜಗ ಕುತ್ತರಿಸಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 6 ಸತ್ಯವಾದ ಪರಮಾರ್ಥಪಥದಿ ನಿಂತು ನಿತ್ಯದಾಡಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 7 ಪೃಥ್ವಿಯೊಳು ನಿಮ್ಮ ಭಕ್ತಜನರ ಬಿಡ ಗುರುನಾಥ 8 ಕೂಡಿಸಿ ದ್ವಿಜವೃಂದಾಡುತಲನುದಿನ ಮಂತ್ರಮೂರ್ತಿ ಗುರುನಾಥ 9 ನಿರುತ ಭೂಸುರಗಣಕ್ಹರುಷವಿತ್ತು ಸದಾ ಮಂತ್ರಮೂರ್ತಿ ಗುರುನಾಥ 10 ಬೇಡಿದವರಿಗೆ ಬೇಡಿದ ವರಗಳ ಮಂತ್ರಮೂರ್ತಿ ಗುರುನಾಥ 11 ಗಾಢಮಹಿಮೆ ತೋರಿ ರೂಢಿಜನರ ಕಾ ಪಾಡ್ಹಿದ್ಹಿತದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 12 ಧರೆಯೊಳು ನರಹರಿ ಶರಣಜನರ ಕೂಡಿ ಮಂತ್ರಮೂರ್ತಿ ಗುರುನಾಥ 13 ಮುಳುಗಿರ್ದ ಪುಣ್ಯಮಯದಿಳೆಯನು ನಿಮ್ಮೊಳು ಗುರುನಾಥ 14 ಧರ್ಮಗೆಟ್ಟಿಳಗೆ ಸದ್ಧರ್ಮ ಬಿತ್ತಿದಿ ಸ್ಥಿರ ಮಂತ್ರಮೂರ್ತಿ ಗುರುನಾಥ 15 ಸಾಧಿಸಿ ಮಹ ತಪದಾದಿ ಮೂರ್ತಿಯಿಂ ಮಂತ್ರಮೂರ್ತಿ ಗುರುನಾಥ 16 ನಿಗಮಾತೀತನೊಳ್ ಬಗೆಬಗೆಯಾಟವ ಮಂತ್ರಮೂರ್ತಿ ಗುರುನಾಥ 17 ಮಂಗಳಮೂರ್ತಿಯ ಕಂಗಳಿಂದ ಕಂಡು ಭವ ಮಂತ್ರಮೂರ್ತಿ ಗುರುನಾಥ 18 ತುಂಗನಿವಾಸ ಮಹ ಮಂಗಳಾಂಗ ಸುಜ ಮಂತ್ರಮೂರ್ತಿ ಗುರುನಾಥ 19 ನಿತ್ಯ ನಿಮ್ಮಪಾದ ಭಕ್ತಿಯಿಂ ಭಜಿಸಲು ಮಂತ್ರಮೂರ್ತಿ ಗುರುನಾಥ 20 ಮುಕ್ತಿದಾಯಕ ಜಗದಾಪ್ತ ಶ್ರೀರಾಮನಂ ಮಂತ್ರಮೂರ್ತಿ ಗುರುನಾಥ 21
--------------
ರಾಮದಾಸರು
ಶ್ರೀಶ ಶ್ರೀ ಕೇಶವನೆ ಬಾ ಪರುಮ ಪುರುಷ ಶೇಷರಾಯನ ಮುಕುಂದ ಶರಣರಾನಂದ ಪ ಭೂಸುರರು ನಡೆಮುಡಿದು ಪೂರ್ಣಕುಂಭವು ವೇದ ಓಲಗ ಛತ್ರ ಚಾಮರ ದಿಮಿಗೆ ಅ.ಪ ಸುತ್ತಿಬರುತಿಹ ದನುಜ ವೃಂದವೆಲ್ಲವ ತರಿದು ಮುತ್ತಿನಂಥಾ ತನುವು ಧೂಳಾಗಿರುವುದೋ ಒತ್ತುತೆಣ್ಣೆಯ ನಿನಗೆ ಮತ್ತೆಬಿಸಿನೀರೆರೆದು ಕತ್ತುರಿಯ ಹಣೆಗಿಟ್ಟು ನುಡಿಯನುಡಿಸುವೆನೋ 1 ಸರಸಿ ಪೀತಾಂಬರ ಶಿರಕೆ ಮಣಿಯಳವಡಿಸಿ ಕೊರಳಿನೊಳುಹಾಕಿ ತುಳಸೀಮಾಲೆಯ ಕರಕೆ ಕಂಕಣ ಶಂಖ ಚಕ್ರಗಧೆಯಾ ಕಮಲ ದೊರೆನಡುವಿಗೊಡ್ಯಾಣ ಸಿರಿಪದಕೆ ಕಡಗ 2 ಅಂಗಕ್ಕೆ ಶ್ರೀಗಂಧ ಅಗರುಚಂದನ ಧೂಪ ಮಂಗಳದ ದೀಪವೂ ಮಂತ್ರಪುಷ್ಪ ಶೃಂಗಾರ ಮೂರ್ತಿಗೆ ಕನ್ನಡಿಯು ಬೀಸಣಿಗೆ ಸಂಗೀತ ನರ್ತನವು ಸ್ತುತಿಸೇವೆಯೂ 3 ವಸುಮತೀಪಾಲನೆಯ ಸತತ ನೀಗೈಯುತ್ತ ಹಸಿದು ಬಳಲುತ್ತಿರುವೆ ಕೃಷ್ಣಪರಮಾತ್ಮ ಬಿಸಿಯಹೋಳಿಗೆ ತುಪ್ಪ ಹಸುನಿನಾ ಬಿಸಿಹಾಲು ಮೊಸರು ಶಾಲ್ಯನ್ನ ಫಲಪಾನಕದ ಸುಖಹೀರಿ 4 ಶ್ರೀದೇವಿ ಭೂನೀಳ ಇವರೊಡನೆ ತೃಪ್ತಿಯಂ ಶ್ರೀಧರ ಮೂರುತಿ ಹೃದಯ ಕಮಲದಲಿ ಕೂಡೋ ಸಾದರದಿ ಕರ್ಪೂರ ತಾಂಬೂಲವನು ಸದಿಯೋ ಮೋದದಿಂದಾರತಿಯ ಬೆಳಗುವೆನೋ ರಂಗಾ 5 ಜಯತು ಜಗದಾಧಾರ ಪುಷ್ಪಾಂಜಲಿಯೊಧೀರ ಜಯ ಸಾಧು ಹೃದ್ಭಾಸ ಹೆಜ್ಜಾ ಜಿವಾಸ ಜಯತು ಮಂಗಳ ನಾಮ ಶ್ಯಾಮಂಗೆ ಪ್ರಣಾಮ ಜಯತು ಕರುಣಾಸಿಂಧು ಜಯಭಕ್ತ ಬಂಧು 6
--------------
ಶಾಮಶರ್ಮರು