ಒಟ್ಟು 1685 ಕಡೆಗಳಲ್ಲಿ , 106 ದಾಸರು , 1252 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದ್ವಾದಶನಾಮ ಸ್ತುತಿ ನಿನ್ನ ನೋಡಿ ಧನ್ಯನಾದೆನು ಶ್ರೀರಂಗನಾಥ ಪ ನಿನ್ನ ನೋಡಿ ಧನ್ಯನಾದೆ ಪನ್ನಗಶಯನ ರಂಗ ಮನ್ನಿಸಿ ರಕ್ಷಿಸು ಎನ್ನ ಮುನ್ನಜನ್ಮ ಬಾರದಂತೆ ಅ.ಪ. ಅರ್ಚ ಶೇಷಶಯನ ಲಕ್ಷ್ಮಿಗೆರಗಿ ಕೇಶವ ನಿಮ್ಮ ಸ್ತುತಿಸುವೆ 1 ಆದಿಸೃಷ್ಟಿಯಲ್ಲಿ ಬ್ರಹ್ಮನ ನಾಭಿಕಮಲದಲ್ಲಿ ಸೃಷ್ಟಿಸಿ ವೇದಸಾರವಾದ ಪ್ರಣವ ಓದಿ ಪೇಳಿದ ನಾರಾಯಣ 2 [ಆರ್ತಿ]ಯಿಂದ ಅಜನು ನಿಮ್ಮ ಮೂರ್ತಿಗಾಗಿ ತಪವ ಮಾಡೆ ಮಧುವೈರಿ ಮಾಧವಾ 3 ಪ್ರಣವಾಕಾರ ವಿಮಾನದಲ್ಲಿ ನಾಲ್ಕು ವೇದಶೃಂಗವಿರಲು [ವಿಷ್ಣು] ಪರವಾಸುದೇವರಿಂದ ಬಂದ ಶ್ರೀಗೋವಿಂದ 4 ಸತ್ಯಲೋಕದಲ್ಲಿ ನಿಂತು ನಿತ್ಯಪೂಜೆಯನ್ನು ಗ್ರಹಿಸಿ ಮತ್ತೆ ಇಕ್ಷ್ವಾಕುಗೊಲಿದ ವಿಶ್ವಮೂರುತಿ ವಿಷ್ಣುವೇ 5 ಸರಯು ತಮಸ ತೀರಮಧ್ಯದಿ ಹರಿಯೆ ನಿಮ್ಮನಿರಿಸಿ ದೊರೆಯು ಪರಮಪುರುಷನಿಂದ ಪೂಜೆ ಗ್ರಹಿಸಿದ ಮಧುಸೂದÀನ 6 ರಾಜ್ಯಾಭಿಷೇಕ ಕಾಲದಲ್ಲಿ ರಾಮಚಂದ್ರರು ರಾಕ್ಷಸೇಂದ್ರಗೆ ಕೊಡಲು [ರಾಜ್ಯವ] ಕಾವೇರಿ ಮಧ್ಯದಿನಿಂದು ತ್ರಿಜಗವಳೆದ ತ್ರಿವಿಕ್ರಮ 7 ಫಾಲ್ಗುಣ ಮೀನ ಉತ್ತರ ಫಲ್ಗುನೀ ನಕ್ಷತ್ರದಲ್ಲಿ ಬಾಲನಾಗಿ ಚಂದ್ರಪುಷ್ಕರಿಣಿ ತೀರದಿ ನಿಂದ ವಾಮನ 8 ಜಾಮಾತನೆನಿಸಿ ಗ್ರಹಿಸಿ[ದ] ಶ್ರೀದೇವಿ ಸಹಿತ ಶ್ರೀಧರ 9 ಮಳೆಯನಿಟ್ಟು ಧ್ವಜವಕಟ್ಟಿ ಸುರರ ಕರದು ಯಾಗವ ಮಾಡಿ ಯಾತ್ರದಾನದ [ತಳೆದ] ಹೃದಯವಾಸ ಹೃಷಿಕೇಶವ 10 ವೀರ ಮರುದಿನದಿ ಜಟಾಶೋಧಕರ ಮಂಟಪದಿ ನಿಂದು (?) [ಧೀರ] ಮುದುಕಿಗೊಲಿದು ದಧ್ಯಾನ್ನವ ಉಂಡ ಶ್ರೀಪದ್ಮನಾಭ 11 ನಾಲ್ಕು ದಿವಸದಲ್ಲಿ ನಾಗವೈರಿಯನ್ನು ಏರಿಬಂದು ಕಲ್ಪವೃಕ್ಷವು ಸರ್ಪವಾಹನ ಏರಿದ ದಾಮೋದರ 12 ಆರು ದಿವಸದಲ್ಲಿ ವರಿಯೂರಿಗೆ ಹೋಗಿ ನಿಮ್ಮ ಸಂತೈಸಿ ಮಾಲೆಧರಿಸಿದ ಸಂಕರ್ಷಣ 13 [ಮಾರನೆ] ದಿವಸದಲಿ ಚೂರ್ಣಾಭಿಷೇಕವನು ಧರಿಸಿ ವಾಸುದೇವ 14 ಎಲ್ಲೇಕೆರೆಗೆ ಪೋಗಿ ಭೂಮಿಯೆಲ್ಲ ನೋಡಿ ಹರುಷದಿಂದ ಅ[ಲ್ಲೆ] ತೇಜಿಯನೇರಿ ತೇರಿನೆದುರೆ ಪೇರಿಬಿಟ್ಟ ಪ್ರದ್ಯುಮ್ನ 15 ಪಂಗುನ್ಯತ್ತರವು ಬರಲು ಉಂಗುರವನು ಬೇಡಿತಂದು ಅನಿರುದ್ಧ 16 ತಿಂದ ಪಂಜಿನಪ್ರಹಾರ ಹರುಷದಿಂದ ಪುರುಷೋತ್ತಮ 17 ಪತ್ನಿಯೊಡನೆ ಪ್ರೇಮಕಲಹ ಅರ್ತಿಯಿಂದ ಮಾಡುತಿರಲು ವಿಷ್ಣು ಚಿತ್ತರ ವಾಕ್ಯದಿಂದ ಅರಸಿಗೇರಿದಾ ಅಧೋಕ್ಷಜಾ 18 ಮಂದರೋದ್ಧರ ತನ್ನ ಇಂದಿರೆಸಹಿತವಾಗಿ ಬಂದು ಗೋರಥವನೇರಿ ನಾಲ್ಕುಬೀದಿ ಮೆರೆದ ನಾರಸಿಂಹ 19 ವಾರಿಜಾಕ್ಷ ರಥವನಿಳಿದು ಕಾವೇರಿಯಲ್ಲಿ ತೀರ್ಥವಿತ್ತು ದರ್ಪಣದ ಗೃಹದಿ ನಿಂದ ಅರ್ತಿಯಿಂದ ಅಚ್ಚುತ 20 ಸಪ್ತ ಆವರಣವೆಲ್ಲ ಶಬ್ದವಿಲ್ಲದೆ ಸುತ್ತಿ ಬಂದು ಭಕ್ತ ಭಾಷ್ಯಕಾರರಿಗೊಲಿದ ದುಷ್ಟಮರ್ದನ ಜನಾರ್ಧನ 21 ಪೃಥವಿಯೊಳಗಾಶ್ಚರ್ಯವಾದ ಪ್ರತಿಯಿಲ್ಲದ ಪಲ್ಲಕ್ಕಿಯೇರಿ ಅತಿಶಯದಿಂದ ಬಂದ ಉರಗಶಯನ ಉಪೇಂದ್ರ 22 ಅಂದು ಸುರರ ಛಂದದಿಂದ ಮಂದಿರಕ್ಕೆ ಕಳುಹಿ ರಂಗ ಬಂದು ಭಕ್ತರ ಪಾಪ[ವ] ಪರಿಹರಿಸಿದಾ ಶ್ರೀಹರಿ 23 ಅಷ್ಟು ಚರಿತ್ರೆಯನ್ನು ಕೇಳಿ ಕಟ್ಟಿದ ಕಂಕಣವ ಬಿಚ್ಚಿ ಶ್ರೇಷ್ಠವಾದ ಸ್ಥಾನದಲ್ಲಿ ಮಂತ್ರಿ ಸಹಿತನಿಂದ ಶ್ರೀಕೃಷ್ಣ 24 ದಕ್ಷಿಣಗಂಗೆಯಾಗಿ ನಿಂದು ಭಕ್ತನ ದ್ವೀಪವನ್ನು ನೋಡುತ ಮುಕ್ತಿಮಾರ್ಗವನ್ನು ತೋರಿದ ಭಕ್ತವತ್ಸಲ ವೆಂಕಟರಂಗ 25
--------------
ಯದುಗಿರಿಯಮ್ಮ
ಧನವಗಳಿಸಬೇಕೆಂಥಾದು | ಈ | ಜನರಿಗೆ ಕಾಣಿಸದಂಥಾದು ಪ ಹರಿಹರ ಬ್ರಹ್ಮಾದಿಗಳೆಲ್ಲ | ಹೌದಹುದಹುದೆಂಬಂಥಾದು ಅ.ಪ ಕೊಟ್ಟರೆ ಹತ್ತಿರದಂಥಾದು | ತನ್ನ ಬಿಟ್ಟು ಹೊರ ಹೋಗದಂಥಾದು || ಬಿಚ್ಚಿದ ಗಂಟನು ಬಯಲೊಳಗಿಟ್ಟರೆ | ಮುಟ್ಟಬಾರದಾರಿಂಥಾದು 1 ಕರ್ಮವು ಬಾರದಂಥಾದು | ಜನರೋರ್ವರು ತೋರಿಸದಂಥಾದು | ನಿರ್ಮಲವಾದ ಮನಸಿಗೆ ದಾನ | ಧರ್ಮವ ಮಾಡಿಸುವಂಥಾದು 2 ಮರವನು ತಾರದಂಥಾದು | ನಿಜದರಿವಿನೊಳಗೆ ಇರುವಂಥಾದು |ಗುರು ಭವತಾರಕ ಭಜಕರ ಕಣ್ಣಿಗೆ | ತೊರಹಿಲ್ಲದೆ ತುಂಬಿದಂಥಾದು 3
--------------
ಭಾವತರಕರು
ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು¥ತಂದೆತಾುಯ ಸೇವೆ ಮಾಡಿಪುಂಡಲೀಕನ ಭಕ್ತಿಗೊಲಿದುಚಂದ್ರಭಾಗಾ ತೀರದಲ್ಲಿಬಂದು ನಿಂತ 'ಠ್ಠಲನ ಕಂಡು 1ವೆಂಕಟೇಶ ಅಲ್ಲಿರುವಶಂಖಚಕ್ರ ಪಿಡಿದ ಕರವಟೊಂಕದ ಮೇಲಿಟ್ಟುಕೊಂಡುನಿಂತು ಇಲ್ಲಿ 'ಠಲನಾದ 2ಕಡಗೋಲಿಂದ ಗಡಿಗೆ ಒಡೆದುತುಡುಗು ಮಾಡಿದ್ಹುಡುಗ ಬಂದಉಡುಪಿಯಲ್ಲಿ ಕೃಷ್ಣನಾಗಿಓಡಿಬಂದಿಲ್ಲಿ 'ಠಲನಾದ 3ಎಷ್ಟು ಜನ್ಮದ ಸುಕೃತವೊ ಶ್ರೀ-ಕೃಷ್ಣ 'ಠಲರೂಪದಿಂದಭಕ್ತಜನರಿಗಾಲಿಂಗನಭೆಟ್ಟಿ ಕೊಡುತ ನಿಂತುಬಿಟ್ಟ 4ಅನ್ನಬ್ರಹ್ಮ ಉಡುಪಿಯಲ್ಲಿಚಿನ್ನ ಬ್ರಹ್ಮ ಬೆಟ್ಟದಲ್ಲಿಸಣ್ಣ ತುಳಸಿಮಾಲೆ ಸಾಕುನಾದಬ್ರಹ್ಮ ಭೂಪತಿ'ಠಲಗೆ 5ಗಲಗಲಿ ವಾಸಸ್ಥ ಶ್ರೀ ಪಾಂಡುರಂಗ
--------------
ಭೂಪತಿ ವಿಠಲರು
ಧರಣೆಯನಾಳ್ವ ಪಾರ್ಥಿವರಿಂಗೆ ಪ್ರಜೆಗಳು ಬೇಡವಾಯ್ತು ವರಹದ ಮೇಲಣಾಸೆಯಿಂದ ರಹಿತರ ಬಡಿವುದಾಯ್ತು ಪ ರಾಜ್ಯಕೆ ದಂಡ ಹಾಕಿದರು ತೀರಿತೆಲ್ಲಿ ಪ್ರಜೆಗಳ ಬಾಳು ನಜರು ಕೊಡುವುದಾಯ್ತು ತೆರತೆರುವುದರಿಂದ ವರಹಕೊಂಡು ಬಂದು ಏರೆಯ ರೂಪಾಯಿಗಳನು ಎತ್ತಿ ದಂಡಿಗೆ ಕೊಡುವುದಾಯ್ತು 1 ಮತ್ತೆ ಸೇನಭೋಗರು ಶಿರಸ್ತೆದಾರರು ಸಾವಿರ ಸಾವಿರ ವೆತ್ತಿ ಜನಕೆ ಬೆದುಕಮಾಳ್ವ ಕರಣಿಕರಿಗೆ ಪತ್ತು ನೂರು ಮೂರು ಸಾವಿರವೆಂದು ದಂಡವನುಕಟ್ಟಿ ವಿತ್ತವನ್ನು ಸೆಳೆದರದುವೆ ಬಿತ್ತು ಬೇರೆ ಪ್ರಜೆಗಳ ಮೇಲೆ 2 ಸೂಳೆ ಮಾಲೆಯರನು ಕರೆಸಿ ಜನಕೆ ಸಾವಿರದಂಡಕಟ್ಟಿ ಕೂಳತಿನಲು ಬಿಡದೆ ತರುಬಿವಾಲೆ ಮೂಗುತಿ ನಾಣ್ಯಗೊಂಡು ಬೀಳು ಕೊಟ್ಟು ಮನೆಗೆ ಅಂಗಡಿ ಸಾಲುವಳಿಗೆಯರನು ಕಾಲನಂತೆ ದಣಿಸಿ ರೊಕ್ಕದ ಜಾಳಿಗೆಯನು ಕೊಂಡು ಮೆರೆವ 3 ಸುಲಿಗೆಯಾಗ ದುಳಿಯಲಿಲ್ಲ ಬೆಳೆದ ಬೆಳೆಯ ನುಣ್ಣಲಿಲ್ಲ ಹೊಳಲ ಸುಟ್ಟು ಬಿಟ್ಟುದೆಲ್ಲ ಕುಲಕೆ ಪಶುಗಳುಳಿಯಲಿಲ್ಲ ತಲೆಯ ಚಂಬುಹಾರಿತಲ್ಲ ಜನರು ಸತ್ತು ಹೋದುದೆಲ್ಲ ಮಲೆತ ರಿಪುಗಳನ್ನು ಕುಟ್ಟಿ ಪ್ರಜೆಗಳ ಕಾಯ್ದು ಕೊಳ್ಳಲಿಲ್ಲ 4 ತಿರುಕರಿಂಗೆ ಸುಖಿಗಳಿಂಗೆ ಹರುವೆ ಸೊಪ್ಪುಮಾರ್ವರಿಂಗೆ ತರುಣಿಯರನು ಬಿಟ್ಟು ತಲೆಯ ಹೆರೆಸಿ ಕೊಂಡಲೆಗಳರಿಂಗೆಗೆ ಹಿರಿದು ಕಿರಿದು ಎಂದು ಬಿಡದೆ ಮರುತ ಸುತನ ಕೋಣೆಲಕ್ಷ್ಮಿ ಯರಸ ರುದ್ರರೂಪಧರಿಸಿ ಜನರಿಗಿನಿತು ಮಾಡಿದ 5
--------------
ಕವಿ ಪರಮದೇವದಾಸರು
ಧರೆಯನಾಳುವನೊಬ್ಬ ದೊರೆ ಜೈಶೀಲನಾ ಹರದಿ ಮಂಜುಳೆಯಿರಲು ಮಕ್ಕಳಿಗಾಗಿ ಮರುಗುತ ಸೊರಗಿರಲು ಈ ಪರಿಯ ನೋಡುತ ಹರನು ಬ್ಯಾಗ ತಾ ತಿಳಿದವರ ಮನ ತಿರುಕನಂದದಿ ಬರಲು ಧಾನ್ಯವ ಕರೆದು ನೀಡಿದರೊಲ್ಲದಾಗಲೆ ತಿರುಗಿ ಪೋದನೆ ಉರಗಭೂಷಣ ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗಿಯರು ಬ್ಯಾಗ 1 ನಂದಿವಾಹನನ ಪೂಜಿಸಿ ಫಲಗಳ ಬೇಡೆ ಕಂದನಿಗಾಯುಷ್ಯವು ಐದರಾ ಮ್ಯಾಲ್ ಹ- ನ್ನೊಂದು ವರುಷವೆನಲು ವರ ನೀಡುತಿರಲು ಮಂಜುಳೆಯು ಗರ್ಭವನೆ ಧರಿಸಲು ಬಂಧುಗಳು ಹೂ ಮುಡಿಸಿ ಪರಮಸಂಭ್ರಮದಿ ಸೀ- ಮಂತ ಮಾಡಲು ತುಂಬಿತಾ ನವಮಾಸವಾಗಲೆ 2 ಜಾತವಾಗಲು ನಾಮಕರಣ ಮಾಡುತ ಚಂದ್ರಶೇಖರ- ನೆಂದ್ಹೆಸರಿಡುತ ಜಾವಳ ಜುಟ್ಟು ಪ್ರೀತಿಂದುಪನಯನ ಮಾಡುತ ವಿದ್ಯೆಗಳ ಕಲಿಸುತ ಆತಘದಿನಾರ್ವರುಷ ಬರುತಿರೆ ಪ್ರೀತಿಯಿಂದ್ಹಣಕೊಟ್ಟು ಕಾಶಿಯಾತ್ರೆಗೆನುತಲಿ ಕಳುಹೆ ಬ್ಯಾಗನೆ3 ಒಂದಾಗಿ ಅಳಿಯ ಮಾವಂದಿರು ಬರುತಿರೆ ಕಂಡಿಳಿದರು ತೋಟವ ಗೆಳತಿಯರು ಬಂದು ಹೂವಿಗೆ ಆಟವಾಡುತಲಿ ಕೋಪಿಸೆ ಒಂದಕ್ಕೊಂದು ಮಾತಾಡೆ ರಾಜ ನಂದನೆಯು ತಾ ನೊಂದುಕೊಳ್ಳದೆ ನಂದಿವಾಹನನರಸಿ ದಯವಿರಲೆಂದು ನಡೆದಳು ಮಂದಿರಕೆ 4 ಬಂದ ರಾಜನ ಮಗಳಿಗೆ ನಿಬ್ಬಣವು ಕರೆ- ತಂದರಸುಕುಮಾರನ ಧಾರೆಯನೆರೆದು ಮಂಗಳ ಸೂತ್ರವನು ಬಂಧನವ ಮಾಡಿದ- ರÀಂದದಿಂದಲಿ ಲಾಜಹೋಮವ ಬಂಧುಗಳ ಸಹಿತುಂಡು ಭೌಮವ ಚೆಂದದಿಂದಲಿ ಸುತ್ತಿಸಾಡ್ಯವ ಅಂದಿನಿರುಳಲಾನಂದವಾಗಿರೆ 5 ಸತಿಪತಿಯರು ಭಾಳ ಹಿತದಿಂದ ಮಲಗಿರೆ ಅತಿ ಹಸಿವೆನಗೆನಲು ಲಡ್ಡಿಗೆ ತಂದು ಘೃತ ಬಟ್ಟಲೊಳು ಕೊಡಲು ತಿಂದಿಡಲು ಮುದ್ರಿಕಾ ಸತಿ ಸಹಿತ ಸುಖನಿದ್ರೆಲಿರೆ ಪಾ- ರ್ವತಿಯು ಬಂದಾ ಖದ್ರುದೇವಿಸುತ ಬರುವನೆಂದ್ಹೇಳೆ ಕಳಸವ ಅತಿಬ್ಯಾಗದಿ ತುಂಬಿಟ್ಟಳುರಗವ 6 ಅತ್ತೆ ಕಾಶಿಗೆ ಪೋಗಿ ಅಳಿಯ ಮಾವಂದಿರು ಕ್ವಾಷ್ಟನ ಕರೆದು ತಂದು ಕುಳಿತಿರಲಾಗ್ವಿಚಿತ್ರ- ಭೂಷಿತಳು ಬಂದು ನೋಡುತಲಿ ನಿಂದು ಥಟ್ಟನೆದ್ದು ತಾ ತಿರುಗಿ ಪೋಗೆನ್ನ ಪಟ್ಟದರಸಿವನಲ್ಲವೆನುತಲಿ ಹೆತ್ತಜನಕ ನೀ ಅನ್ನಕ್ಷೇತ್ರವ ಇಟ್ಟು ನಡೆಸೀಗ್ವೀಳ್ಯಗಳ ಕೊಡುವುದು 7 ತಂದು ಭೋಜನಮಾಡುತ ಕುಳಿತಿರಲಾಗ ತಂದು ವೀಳ್ಯವ ಕೊಡುತ ಮುಖ ನೋಡಿ ನಗುತ ಸಂದೇಹಿಲ್ಲದೆ ಎನ್ನಪತಿ ಹೌದೆಂದು ನುಡಿದಳು ಬಂದು ಜನರು ನಿಂದು ಗುರುತೇನೆಂದು ಕೇಳಲು ತಂದು ತೋರಿದುಂ(ದಳುಂ?) ಗುರವ ಜನರಿಗೆ 8 ನಿನ್ನ ಗುರುತು ಏನ್ಹೇಳೆನ್ನಲು ಸಭೆಯೊಳು ಪನ್ನಂಗದ ಕಳಸವನು ತೆಗೆಯಲು ಬಾಯಿ ರನ್ನ ಮುತ್ತಿನ ಸರವು ಆಗಿರಲು ಉರಗವು ಕನ್ನೆಯರು ಹರಸ್ಹಾಕೆ ಕೊರಳಿಗೆ ಮನ್ನಿಸುತ ಮಹಾರಾಜ ಮಗಳನು ಚಿನ್ನದಾಭರಣಗಳು ಉಡುಗೊರೆ ತನ್ನಳಿಯಗುಪಚಾರ ಮಾಡುತ 9 ಸತಿಪತಿಯರು ತಮ್ಮ ಪಿತರ ಅಪ್ಪಣೆಗೊಂಡು ರತುನದಂದಣವೇರಲು ಮಾರ್ಗದಿ ಗೌರೀ- ವ್ರತ ಮಾಡಿ ನಡೆತರಲು ಪಿತಗ್ಹೇಳಿ ಕಳುಹಲು ಸುತನು ಬಂದರಮನೆಗೆ ಭಾಗೀ- ರಥಿಯು ಮಾತುಳ ಮಡದಿ ಸಹಿತ ಹಿತದಿ ಬಂದೆರಗಿದರೆ ಸೊಸೆಮಗ ಅತಿಹರುಷದಿಂದಪ್ಪಿ ಕೇಳುತ 10 ದಾವ ಪುಣ್ಯದ ಫಲದಿಂದ ನಿನ್ನರಸನ ಪ್ರಾಣ ಪಡೆದಿಯೆನಲು ಮಂಗಳಗೌರಿ ದೇವಿ- ದಯವಿರಲೆಂದು ಹೇಳಲು ಶ್ರೀಗೌರಿಕಥೆಯನು ಕಾಮಿತವನದೊಳಗೆ ದ್ರೌಪದಿಗ್ಹೇಳಿದನು ಭೀಮೇಶಕೃಷ್ಣನು ಮಾಡಿದರೆ ಮುತ್ತೈದೆತನಗಳ ಬೇಡಿದಿಷ್ಟಾರ್ಥಗಳ ಕೊಡುವೋಳು ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗಿಯರು ಬ್ಯಾಗ 11
--------------
ಹರಪನಹಳ್ಳಿಭೀಮವ್ವ
ಧರ್ಮವೆಂದೆನಿಪ ಮಾರ್ಗವನು ಬಿಟ್ಟುಕರ್ಮವೆಂದೆನಿಪ ಕಾನನವ ಪೊಕ್ಕುದುರ್ಮಾರ್ಗದಲಿ ನಡೆದವಗೆ ಘೋರವ್ಯಾಧಿಕರ್ಮಪಾಕದಲಿ ಸಾರುತಿದೆ ಜಗದಿ ಪ ಹರಿಹರ ವಿಭೇದಗೈದವಂಗೆ ದಂತಚ್ಯುತವುಗುರುದೈವಗಳ ನಿಂದೆಗೈದವಗೆ ಉನ್ಮದವುಪರಸತಿಯ ಕಾಮಿಸಿದವಗೆ ಪಾಂಡು ರೋಗವುಕೆರೆಗಳನು ಒಡೆಸಿದಾತಗೆ ಶೀತಜ್ವರವುಹಿರಿಯರನು ಜರಿದವಗೆ ಪೀನಾಶಿ ರೋಗವುಧರೆಯನಳಿಸಿದವಗೆ ಸರ್ವಾಂಗ ಪರಿಶ್ವೇತವುಪುರ ಅಗ್ರಹಾರ ಕೆಡಿಸಿದವಗೆ ರಾಜರೋಗವೆಂದುಅರಿವುದು ಸಕಲ ಜನರು 1 ಕಥೆ ಪುರಾಣಗಳ ಹಳಿದವಗೆ ಕಾಸಶ್ವಾಸಮತಭೇದವನು ಮಾಡಿದವಗೆ ಮೂಲವ್ಯಾಧಿಪಿತಮಾತೆಯರ ಸಲಹದವಗೆ ಗಂಡಾಮಾಲೆಯತಿಗಳನು ನಿಂದಿಸಿದವಗೆ ಸನ್ನಿಪಾತ - ಪರಸತಿಯರಿಗೆ ಅಳುಪಿದಾತಗೆ ಮೂತ್ರ ಕೃಚ್ರಪತಿವ್ರತೆಯರ ಪೀಡಿಸಿದವಗೆ ಅತಿಸಾರಮತಿಗೇಡಿ ಮೂರ್ಖನಿಗೆ ಕ್ಷಯರೋಗ - ಇದುಕ್ಷಿತಿಯೊಳಗೆ ಸಿದ್ಧಾಂತ 2 ಶಿಶು ಹತ್ಯೆ ಗೈದವಗೆ ಕುಕ್ಷಿಶೂಲೆಪಶುಗಳನು ಮರ್ದಿಸಿದವಗೆ ಪ್ರಮೇಹವುಉಸಿರಲೇಕಿನ್ನು ಸ್ವಾಮಿದ್ರೋಹಿಗೆ ಬಹುಮೂತ್ರಪುಸಿಯನಾಡುವ ಪುರುಷಗೆ ರಕ್ತ ಕಾಳಿಹಸಿದವರಿಗನ್ನವಿಕ್ಕದವಗೆ ಆಮ್ಲಪಿತ್ತವೃಷಭವನು ಒದ್ದವಗೆ ಬಿಗರುವಾತಮುಸುಕುವುದು ವಿಶ್ವಾಸಘಾತಕಗೆ ನರರೋಗಪುಸಿಯಲ್ಲವಿದು ಕೇಳಿ ಜನರು 3 ಕೊಟ್ಟು ಭಾಷೆಯ ತಪ್ಪಿದವಗೆ ಉಪಜಿಹ್ವೆಕೊಟ್ಟು ತುಪ್ಪಿದವಗೆ ಕರಕಂಪನಕೊಟ್ಟರೂ ಕೊಡಲಿಲ್ಲವೆಂಬವಗೆ ಉದರರೋಗಕೊಟ್ಟವರಿಗೆರಡು ಬಗೆವಗೆ ಮೇಹರೋಗಅಷ್ಟಮದದಿಂದ ಮೆರೆವವಗೆ ಬೆರಗಿನ ರೋಗಬಟ್ಟೆಯೊಳು ಮುಳ್ಳು ಹರಡಿದವಗೆ ನೇತ್ರವ್ಯಾಧಿಹುಟ್ಟುವುದು ಕಂಕಣ ಕಂಟಕಗೆ ಕುಷ್ಠರೋಗಕಟ್ಟಿಟ್ಟ ಬುತ್ತಿ ಇದು4 ಕರ್ಮ ಬಲ್ಲವರಾರುಎಂದು ಮಂದಮತಿಗಳಾಗಿ ಕೆಟ್ಟಳಿಯದಿರೆಹಿಂದಣದೆಲ್ಲವೂ ಬಹದೆಂಬುದಕೆ ಸಾಕ್ಷಿಇಂದು ಕಣ್ಣೆದುರೆ ಜಗದೊಳಗೆ ತೋರುತಿಹುದಿಗೊಚಂದದಲಿ ತಾಯಿ ಮಗುವಿಗೆ ಮೊಲೆಯ ಹಾಲುಣಿಸುವಂದದಲಿ ಉಣಿಸಿದಲ್ಲದೆ ಬಿಡದು ಮರೆಯದಿರಿಕಂದರ್ಪಪಿತ ಸೊಂಡೆಕೊಪ್ಪದಾದಿಕೇಶವನಮುಂದರಿತು ಭಜಿಸಿ ಮುಕ್ತಿಯ ಪಡೆಯಿರಣ್ಣ5
--------------
ಕನಕದಾಸ
ಧುಮ್ಮಸಾಲೆನ್ನಿರ್ಯೋ ಶ್ರೀ ಗುರುವಿನ ಬಳಗವೆ ಧುಮ್ಮಸಾಲೆನ್ನಿ ಸದ್ಗುರುವಿನ ಬಳಗವೆ ಧ್ರುವ ಗುರುವಿನ ಬಳಗವೆಂದು ಗುರುತುವಿಟ್ಟು ನೋಡಿರ್ಯೋ ಅರುಹಿನೊಳು ಮುಣಗಿ ಪರಮಸುಖ ಸೂರ್ಯಾಡಿರ್ಯೋ ಗರ್ವಿನಾಹರಿಗೆ ಬಿಟ್ಟು ಹರಿದುಹೋಗ ಬ್ಯಾಡಿರ್ಯೋ ಪರ್ವಣಿದೆ ಗುರುಕರುಣ ಪಡೆದು ಪೂರ್ಣಕೂಡಿರ್ಯೋ 1 ಧುಮ್ಮಸಾಲೆನ್ನಿರ್ಯೋ ಬೆರದು ಬ್ರಹ್ಮ ಸುಖವ ಸಮ್ಯಙÁ್ಞನದಿಂದ ದೂರಮಾಡಿ ಭವದು:ಖವ ನಿಮ್ಮ ನಿಮ್ಮೊಳು ನೋಡಿ ಘನ ಕೌತುಕವ ಹ್ಯಮ್ಮಿಯೊಳಗಾಗಿ ನೀವು ಹೋಗಬ್ಯಾಡಿ ಹೋಕುವ 2 ಕಣ್ಣದ್ಯರದು ನೋಡಿರ್ಯೊ ಚಿನ್ನುಮಯ ರೂಪವ ಭಿನ್ನವೆಲ್ಲದ್ಯದೆ ತನ್ನೊಳು ಸಮೀಪವ ಪುಣ್ಯ ಹಾನಿ ಮಾಡಿಕೊಂಡು ಹಿಡಯಬ್ಯಾಡಿ ಕೋಪವ ಕಣ್ಣ ದ್ಯರಸಿಕುಡುವ ಹಚ್ಚಿ ಗುರು ತಾನ ದೀಪವ 3 ನಮ್ಮ ನಿಮ್ಮ ದ್ಯಾವರೆಂದು ಹೊಯಿದಾಡಬ್ಯಾಡಿರ್ಯೋ ಬೊಮ್ಮನ ಪಡದ ಪರಬ್ರಹ್ಮನೊಬ್ಬ ನೋಡಿರ್ಯೋ ಇಮ್ಮನಕ ಹೋಗದೆ ಒಮ್ಮನವ ಮಾಡಿರ್ಯೋ ಸುಮ್ಮನೆ ಸುವಿದ್ಯದೊಳು ಬೆರದು ನಿಜಗೂಡಿರ್ಯೋ 4 ಸುಗ್ಗಿಯೋ ಸುಗ್ಗಿಯೋ ಸುಙÁ್ಞನದ ಲಗ್ಗಿಯೋ ಭಾಗ್ಯವಿದೆ ನೋಡಿ ಭಕ್ತಿ ಙÁ್ಞನ ವೈರಾಗ್ಯಯೋ ಬಗ್ಗಿ ನಡವ ಸಾಧುಸಂತ ಜನರಿಗಿದು ಯೋಗ್ಯಯೋ ಹಿಗ್ಗಿ ಹರುಷಪಡುವ ಮಹಿಪತಿಯ ನಿಜ ಸ್ರಾಘ್ಯಯೋ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧುಮ್ಮಸಾಲೆಯ ನೋಡಿ ಧುಮ್ಮಸಾಲೆಯಾ ಪ ಧುಮ್ಮಸಾಲೆಯ ನೋಡಿ ಘಮ್ಮವಾದ ಪ್ರಾಣಿಗಳು | ತಮ್ಮ ಸುದ್ದಿ ತಮಗಿಲ್ಲಾ ಹಮ್ಮಿನಿಂದಲಿ | ಧಿಮ್ಮಹಿಡಿದು ಭವದೊಳು ಸುಮ್ಮನೆವೆ ಕೆಟ್ಟು ಹೋದ | ಗ್ಯಾದರೆಯು ಪರಬೊಮ್ಮನಾಮ ನೆನೆಯಿರೋ 1 ವಿದ್ಯೆಯಿಂದ ವಾದಿಸುತ ಮುದ್ದಿಯಿಂದ ಕಣ್ಣು ಮುಚ್ಚಿ | ಸದ್ಯ ಶಕ್ತಿ ಯೌವನದಿ ಗುದ್ದಿ ಹೆಟ್ಟು ತಾ | ಪರಿ ನಿಜ | ಬುದ್ಧಿ ಹೋಗಾಡಿಸಿ ಅನಿರುದ್ಧನನ ಮರೆತಿರೋ 2 ಒಂದು ಕವಡಿಯಲಾಭ ತಮಗೆ ಹೊಂದದಿದ್ದರೆ ಸರಿ | ಬಂದು ನಿಂದು ಒಳ್ಳೆವರಾ ನಿಂದೆ ಮಾಡುತಾ | ಇಂದು | ಕೂಪ ಲಿಟ್ಟರೋ 3 ಉಡಗಿ ಬಿಟ್ಟು ಹುಡಿಯಹಚ್ಚಿ ಜಡಿಯಬಿಟ್ಟು ಸಿದ್ಧಗಾಗಿ | ಪೊಡವಿಲಿನ್ನು ಲಾಭಾ ಲಾಭಾ ನುಡಿಯ ಹೇಳುವಾ | ತುಡುಗರಿಗೆ ಹೋಗಿಕಾಲ ವಿಡಿದು ಗೋಂದಲ್ಹಾಕುವರು | ಕಡಲಶಯನನ ಭಜಿಸದೆವೆ ಅಡಲು ಬಿಟ್ಟು ಹೋದರೋ 4 ಸಿರಿಯ ಸುಖಗೀಪರಿ ಪರಿಯ ವೃತ ತಪದಿಂದಾ | ಚರಿಸಿ ನೋಡು ಕಣ್ಣು ವಿದ್ದು ಕುರುಡರಾದರೋ | ಗುರುಮಹಿಪತಿ ಸ್ವಾಮಿ ಚರಣ ನಂಬಿಯಚ್ಚರದಿ | ನಿರಪೇಕ್ಷ ಭಕ್ತಿಯಿಂದಾ ತರಣೋಪಾಯ ನೋಡರೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧ್ಯಾನದ ತುತೂರಿ ಹಿಡಿಯೊ ಸಾಗರ ಶಾಯಿಯೆ ಮೂಜಗ ಧಣಿಯೆಂದು ಜಾಗಟೆ ಡÀಣ್ ಡಣ್ ಬಡಿಯೊ ಪ ಅನುದಿನ ಮನಮುಟ್ಟು ನೆನೆಯುವ ಭಕ್ತರ ಮನದೆಣಿಕೆಯನು ನೀಡುವ ಕನಿಕರದಿಂ ಕಾಪಾಡುವ ಜನಕಜೆವಲ್ಲಭ ತನ್ನವರನು ಬಿಟ್ಟು ಕ್ಷಣ ಅಗಲಿರೆನಾ ವನಜನಾಭನೆಂದು 1 ಎಡೆಬಿಡದೊಡತೊಳ ಧೃಢದಿಂ ಭಜಿಪರ ಕಡುದಯಾದೃಷ್ಟಿಯಿಂ ನೋಡುವ ಸಡಗರದವರೋಳಾಡುವ ಮೃಡವಂದಿತ ತನ್ನಡಿಯ ದಾಸರ ಕರಪಿಡಿದು ಬಿಡದೆ ಕಾಯ್ವ ಸಡಗರದೊಡನೆಂದು 2 ನರಹರಿ ಚರಣವ ಪರಿಪರಿ ಸ್ಮರಿಪರ ದುರಿತರಾಸಿ ದೂರ ಮಾಡುವ ಬರುವ ಸಂಕಟ ನಿವಾರಿಸುವ ಜರಾಮರಣ ದೂರಮಾಡಿ ಪರಮ ಪರತರ ಸಿರಿಸೌಭಾಗ್ಯ ಕರುಣಿಪ ಸ್ಥಿರವೆಂದು 3 ಚಿತ್ತಜತಾಪನ ಸಚ್ಚರಿತವನು ನಿತ್ಯ ಬಿಡದೆ ಕೊಂಡಾಡುವರ ಭಕ್ತ ಜನರ ನೋಡಿ ಬಾಗುವರ ಮೃತ್ಯುಬಾಧೆ ಗೆಲಿ ಸತ್ಯಾನಂದವ ನಿತ್ತು ಪೊರೆವ ಹರಿ ಸತ್ಯ ಸತ್ಯವೆಂದು 4 ದೀನರಾಪ್ತನಾದ ಧ್ಯಾನಮೂರುತಿ ತನ್ನ ಧ್ಯಾನಿಸುವರ ಬೆಂಬಲಿಸುವ ಮಾನದಿಂದ ಭವಗೆಲಿಸುವ ಏನು ಬೇಡಲಾನಂದ ದೀಯ್ವನು ಪ್ರಾಣೇಶ ಶ್ರೀರಾಮ ದೇವ ದೇವನೆಂದು 5
--------------
ರಾಮದಾಸರು
ನಗಬಹುದು ನೀ ಮುಗುಳು ನಗೆಯಾ ಗುರುರಾಯಮಿಗೆ ಕಂಡು ದೇಹಾಭಿಮಾನಿಗಳ ಬಗೆಯಾ ಪತನ್ನ ತಾನರಿಯಲೀಸದ ಮಾಯೆಗೊಳಗಾಗಿಅನ್ಯರೇತೋಜಾತಮಾದ ದೇಹವ ನೋಡಿತನ್ನಿಂದ ತಾ ಕಾಣಪಡುತಿಹುದಿದಲ್ಲವೆಂದೆನ್ನಲಾರದೆ ದೋಷದಿಂದಾಉನ್ನತದ ಮಾಂಸ ರಕ್ತಾಸ್ತಿಮಲ ಮೂತ್ರಂಗಳಿನ್ನೆನೆದುನಾರುವ ನವದ್ವಾರ ಮಾರ್ಗದಿಂತನ್ನ ಮರಸುವದೇಹವೆತನ್ನದೆಂದು ಮರೆದುಣ್ಣುರಿವಾತಗಳ ಕಂಡೂ ಮಾಯೆ ಭಾಪೆನ್ನುತ್ತ ಬೆರಳೊಲದು ಕೊಂಡು ಬಗೆಗಂಡೂ 1ಬಿಟ್ಟ ಮನೆ ಜನ ಧನಂಗಳಲಿ ಮತ್ತೂ ಮನವನಿಟ್ಟು ವಾಂತ್ಯಾಶನವನುಂಬ ನಾಯಂದದಲಿಪಟ್ಟಣಂಗಳಲಿ ತಿರುಗುತ ಪರರ ಬಾಧಿಸುತಕೆಟ್ಟ ಬುದ್ಧಿುಂದ ಧೃತಿಗುಂದಿಕೊಟ್ಟಪುದು ಕರ್ಮವೆಂಬುದ ಮರೆತು ಗೇಣುದ್ದಹೊಟ್ಟೆ ಬಟ್ಟೆಗೆ ದೈನ್ಯ ಬಟ್ಟು ಮೂಢತೆುಂದಕೆಟ್ಟೆನಿನ್ನಾರು ರಕ್ಷಿಪರೆಂದು ಚಿಂತಿಸುವಹೊಟ್ಟೆಹೊರಕರನು ನೋಡುತ್ತಾ ಕಟಕಟಾಕೆಟ್ಟರಿವರೆಂದು ಹಾಸ್ಯವನು ಮಾಡುತ್ತಾ 2ತಾನಾತ್ಮನೆಂಬುದನು ಕೇಳಿದ್ದುದೃಷ್ಟಾನುಮಾನಂಗಳಿಂ ನಂಬಿಗೆಯೆುಲ್ಲದದರಲ್ಲಿಮಾನಾವಮಾನಂಗಳಿಂ ಹರುಷ ಶೋಕಾದಿಹೀನಬುದ್ಧಿಗಳ ಮಾಡುತ್ತಾಜ್ಞಾನಮಾರ್ಗದಲಿ ವಿಶ್ವಾಸವಿಲ್ಲದೆ ತನ್ನ ಕಾಣಲಾರದೆ ಭೇದ ಬುದ್ಧಿುಂ ವ್ರತತೀರ್ಥಸ್ನಾನಾದಿುಂದ ಮುಕುತಿಯ ಪಡೆಯಬೇಕೆಂಬಮಾನವರ ಭ್ರಾಂತಿಯನು ತಿಳಿದೂ ಇವರ್ಗಳಿಗೆಸ್ವಾನುಭವವಿಲ್ಲೆಂದು ಸಮತೆಯಲಿ ನಿಂದೂ 3ರಾಗವನು ಬಿಡಲಾರದಾಶಾಪಿಶಾಚಕೊಳಗಾಗಿ ಸತ್ಸಂಗ ಸತ್ಕಥೆಯ ಕೇಳಿಕೆಗಳನುನೀಗಿ ಧನಿಕರೊಳಿಚ್ಚಿತವನಾಡಿ ಸದ್ಧರ್ಮತ್ಯಾಗಿಯಾಗ್ಯನೃತಕ್ಕೆ ಪೊಕ್ಕೂಹೀಗೆ ತಿರುಗುತ ಪರಾನ್ನಾದಿ ಭೋಗಕ್ಕಾಗಿಕಾಗೆಯಂದದಲಲ್ಲಿಗಲ್ಲಿಗೆ ಸದ್ಗತಿುೀವಯೋಗ ಮಾರ್ಗವ ಬಿಟ್ಟುಭ್ರಾಂತರಾದಿರಿ ಮಹದ್ರೋಗಿಗಳ ಕಂಡು ಬೆಸಗೊಂಡು ಇವರ್ಗೆ ಭವರೋಗ ಬಿಡದೆಂದು ನಿಜಪದದಲ್ಲಿ ನಿಂದೂ 4ಇಂತರಿವ ಜನರಲ್ಲಿ ನಿಂತು ಸನ್ಮತಿುತ್ತುಚಿಂತೆಗಳ ಬಿಡಿಸುತ್ತಲಂತರಾತ್ಮಕನಾಗಿಸಂತಗೋಪಾಲಾರ್ಯ ಗುರುವರ್ಯನಾಗಿ ವೇದಾಂತದರ್ಥವನು ಬೋಧಿಸುತಾಅಂತವಿಲ್ಲದ ನಿಜವ ತೋರಿ ಪಾಲಿಸಿ ಮುದವಂತಾಳ್ದು ಸಕಲ ಸಂಶಯಗಳನು ಪರಿಹರಿಸಿಶಾಂತರಾದಿರಿ ಮೋಹಹೋುತ್ತು ನಿತ್ಯ ಸ್ವಾತಂತ್ರ್ಯವಾುತು ಗೆದ್ದಿರೆನುತಾಸಂತತಾನಂದಕನುಗೈದು ಕೈ ಹೊುದೂ 5
--------------
ಗೋಪಾಲಾರ್ಯರು
ನಗುವರಲ್ಲವೊ ರಂಗ ನಾಚಿಕೆ ಇಲ್ಲವೊನಿನಗೆ ಹಗೆಯ ಮಾಡಿದವಳ ಬಗೆಯ ಕಾಣೆರಂಗ ಪ. ಅನ್ಯಾಯ ನ್ಯಾಯವೆಂಬುದಿನ್ನು ನೀ ಅರಿಯೆಲೊಮನ್ನೆಯಳ ವೀಳ್ಯ ಹಿಡಿದೆಯಲ್ಲೊನೀ ಹಿಡಿದೆಯಲ್ಲೊ ರಂಗ1 ಭರದಿ ಕೋಪಿಸಿ ಭೀಷ್ಮ್ಮೆ ತಿಳುವಳಿಕೆ ನಿನಗಿಲ್ಲಹರದೆಯರಿಬ್ಬರು ಎನಗೆ ಸರಿಯರಲ್ಲಎನಗೆ ಸರಿಯರಲ್ಲ ಭೀಷ್ಮ್ಮೆ ದೂರುವರೇನೆ2 ಹೀಂಗೆ ಯಾರೂ ನಗರೇನ ಭೀಷ್ಮ್ಮೆಇರುವೆಗಿಂತ ಕಡಿ ಮಾಡಿದೆಲ್ಲಎನ್ನ ಕಡಿಮಾಡಿದೆಲ್ಲ 3 ಅತಿ ಕೋಪದಿಂದ ಭೀಷ್ಮೆ ಸ್ಮøತಿಯಿಲ್ಲ ನಿನಗಿನ್ನುಸತಿಯರಿಬ್ಬರು ಎನಗೆ ಸರಿಯರಲ್ಲಎನಗೆ ಸಮರಲ್ಲ4 ಅಕ್ಕ ತಂಗಿಯರೆಂಬೊ ದಿಕ್ಕಿನ ಮೂಲೆಗೆ ಬೆಕ್ಕಿನಕಿಂತ ಕಡಿ ಮಾಡಿದೆಲ್ಲೊಎನ್ನ ಮಾಡಿದೆಲ್ಲೊ ರಂಗಾ 5 ವಾರಿಜಾಮುಖಿ ಎನಗೆ ಯಾರು ಹಿರಿಯರು ಹೇಳೆನಾರಿಯರಿಬ್ಬರು ಎನಗೆ ಪೊರರಲ್ಲಎನಗೆ ಪೊರರಲ್ಲ್ಲ 6 ಹುಡುಗಿಯರೆಂಬುವನುಡಿಯ ಕೇಳುತ ಭೀಷ್ಮಿಕಡುಹರುಷ ಬಡುತಲೆ ಮನದೊಳಗೆತನ್ನ ಮನದೊಳಗೆ7 ಕೃಷ್ಣನ ಮಡದಿಯರು ಎಷ್ಟು ಗುಣವಂತರೆಂದುಅಷ್ಟ್ಟೂರಕ್ಕಿಂತ ಮೊದಲೆ ಮದಿವ್ಯಾದೆನಿಮ್ಮನ್ನು ಮದುವ್ಯಾದೆ8 ಸಿಟ್ಟು ಬಿಟ್ಟಿಬ್ಬರು ಕೃಷ್ಣ ನಮ್ಮವನೆನ್ನಿಧಿಟ್ಟಿ ರಾಮೇಶ ಸಕಲೇಷ್ಟವೆನ್ನಿಸರ್ವೇಷ್ಟವೆನ್ನಿ9
--------------
ಗಲಗಲಿಅವ್ವನವರು
ನಡತೆಯನೆಣಿಸಿದರೆ ಗುಣವೇನು ತೃಣಕುಕಡೆಯಾಗುವಲ್ಲಿ ಸಂದೇಹವಿಲ್ಲ ಪನೀನು ಹಿಂದೆಗೆಯೆ ಕಣ್ಣು ಕಾಣದೆಂಬೆಯಲ್ಲೋ ುೀಗಕಾಣು ಕಿಮಿಂದ ರೂಪ ಜಾಣೆಯ ಮಗನೆ 1ಕೇಳು ಮೂಗಿನಿಂದಾ ನುಡಿಯ ತಾಳು ಗಂಧವ ಬಾುಂದಾಹೇಳು ಮಾತ ಕಣ್ಣಿನಿಂದಾ ಕೂಳುಗೊಂಬೆ 2ನಡೆಯೊ ಕೈುಂದ ಕಾಲಿಂ ಪಿಡಿಯೊಗುದದಲುಣ್ಣೋ ಪಡೆಯೊ ನೀನುಪಸ್ಥೆಯ ಬಿಟ್ಟಾನಂದವಾ 3ವಾಕಿನಿಂ ವಿಸರ್ಗವನ್ನು ಸೋಕಿಸೊ ಸ್ಪರ್ಶವ ನೀನುತಾಕದೊಲ್ ತ್ವಗಿಂದ್ರಿಯವ ಕಾಕಿ ಮನವೆ 4ಜೀವನು ಕುರುಡನೇನೊ ಪ್ರಾಣಗಳ್ [ಕೊ]ರಡುಗಳೇನೊಯಾವಗವು ನೀನೊರ್ವ ಬಾಳುವೆಯೇನೊ 5ಕಾದಿ ಮನೆಗೆ ಕೇಡು ತಾ ದರಿದ್ರತೆಗೆ ಬೀಡುಸಾಧುವಾಗಿ ನಮ್ಮೊಳಾಡು ಕೆಡಬೇಡ ನೋಡು 6ಹತ್ತು ದಾರಿಯೊಳಾಡುವೆ ಗೊತ್ತಿಗೆ ನೀನಿಲ್ಲದಿರೊಮತ್ತನಾಹೆ ಕೆಣಕಲು ಸತ್ತವನಂತೆ 7ನಿನ್ನ ಹತ್ತಿರೆ ದೈವವು ಬನ್ನ ಬಡಿಸಲೆಮ್ಮನುಕಣ್ಣುಗಾಣದೆ ಸೇರಿಸಿತು ಕಾಲಗತಿುಂದಾ 8ತಿರುಪತೀಶನೊಲವನು ಸರಸದಿಂ ಸಾಧಿಪ ನೀನುತೊರೆಯಲೆಮ್ಮ ತಿಳಿದುದು ಜಾಣುಮೆ ತಾನು 9ಕಂ||ಕರಣಗಳಾಡಿದ ಮಾತನು ಹರುಷದಿ ಕೇಳುತ್ತ ಜೀವ ತನು ಸಹ ಮನಮಂ ಪರಿಪರಿ ವಿಧದಲಿ ಬೋಧಿಪ ಪರಿುಂ ದೂಸಿದನಾಗ ನಾಚುವ ತೆರದಿಂ
--------------
ತಿಮ್ಮಪ್ಪದಾಸರು
ನಡೆದು ಬಾರಯ್ಯ ಕೃಷ್ಣ ನಡೆದು ಪ ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ ರಕ್ಷಿಸುವಾತನೆಂದು ವಕ್ಷಸ್ಥಳದಿ ಶ್ರೀಮಾ- ರೀಕ್ಷಕನುಳುಹಿದಂತಕ್ಷದಿ ನೋಡುತಧೋಕ್ಷಜ ಹರಿಯೆ 1 ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ- ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ ಕರಿ ಸರ್ವೋತ್ತಮ ಹರಿಯೆ 2 ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ ಶೂರ ಸುತಗೆ ಸುಕುಮಾರನೆನಿಸಿದಂಥ ಅ- ಸಮೀರಜ ಭವ ಸುರ ನಾರದಪ್ರಿಯನೆ ಉದ್ಧಾರಮಾಡು ಎನ್ನನು 3 ಧ್ವಜ ವಜ್ರಾಂಕುಶ ಪಾದಭಜಕರೆನಿಸುವಂಥ ಸುಜನರ್ವಂದಿತನಾದ ಕುಜನ ಕುಠಾರಿಯೆ ನೀ ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ ನಿಜವಾಗಿ ನೋಡೆನ್ನ ರಜತಮ ಕಳೆಯುವ 4 ಕಡಲಶಯನನಾದ ಉಡುರಾಜ್ವದನ ಬಿಟ್ಟು ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು ಕೊಡು ವರಗಳ ಪೊಡವಿ ಪಾಲಿಪನೆ 5
--------------
ಹರಪನಹಳ್ಳಿಭೀಮವ್ವ
ನಂದಪುತ್ರನ ಆಜ್ಞೆಯಿಂದಲುದ್ಧವ ಬ್ಯಾಗ ಬಂದು ಗೋಕುಲ ಹೊಕ್ಕಾನಂದದಿಂದಲಿ 1 ಬಾಲನ್ವಾರ್ತೆಯ ಕೇಳೆಶೋದ ಗೋಪನು ಕೊಂ- ಡಾಡಿ ಗುಣಗಳ ಮನಕೆ ತಾಳಿದರ್ಹರುಷವ 2 ತಾಪ ಬಿಡದಲೆ ಅಗಲಿ ಶ್ರೀಪತಿ ಕಾಣದೆ ಸಂತಾಪದಿಂದಿರೆ 3 ಸತಿಯರೆಲ್ಲರು ಗೋಪಿಸುತನ ಪಾಡುತ ದಧಿಯ ಮಥಿಸಿ ಕದವನೆ ತೆಗೆಯೆ ರಥವ ಕಂಡರು 4 ದಾವ ಕಾರಣ ನಮ್ಮ ಭಾವಭಕ್ತಿಗೆ ಸ್ವಾಮಿ ತಾನೆ ಬಂದಾನೋ ತನ್ನಕ್ರೂರನ ಕಳಿಸ್ಯಾನೊ 5 ಭದ್ರೆರೆಲ್ಲರೂ ಕೂಡಿ ಎದ್ದು ಬರುತಿರೆ ಮಧ್ಯಮಾರ್ಗದಿ ಅಲ್ಲುದ್ಧವನ ಕಂಡರು 6 ಕಾಂತೇರೆಲ್ಲರು ಕೂಡೇಕಾಂತ ಸ್ಥಳದಲ್ಲಿ ನಿಂತು ಕಂತುನಯ್ಯನು ಲಕ್ಷ್ಮೀಕಾಂತ ಕ್ಷೇಮವೆ 7 ಇಂದಿರೇಶನ ಬಿಟ್ಟಗಲಿ ವ್ರಜದೊಳು ಕಾಲ ಹಿಂದೆ ಕಳೆವೋದ್ಹ್ಯಾಗಿನ್ನ ್ಹಗಲು ಇರುಳನೆ 8 ಮುಂದೆ ಕಾಣದೆ ನೇತ್ರ ಅಂಧಕರಂದದಿ ಮು- ಕ್ಕುಂದನಿಂದಲಿ ರಹಿತರೆಂದಿಗಾದೆವೊ 9 ತೊಡಿಗೆ ಬಂಗಾರ ಶಿರದಿ ಮುಡಿವೊ ಮಲ್ಲಿಗೆ ದೇಹ- ಕ್ಕುಡಿಗೆ ಭಾರವೊ ಬಿಟ್ಟು ಪೊಡವಿಗೊಡೆಯನ 10 ಉದ್ಧವ ನಾವು ಜಾಳು ಸ್ತ್ರೀಯರು ಒಲ್ಲದೆ ಕಾಳಿಮರ್ದನ ಕಾಲಲೊದ್ದು ಪೋದನು 11 ಜಾರಸ್ತ್ರೀಯರುಯೆಂದು ನಗದಿರುದ್ಧವ ಬಿಗಿದ ಮೋಹಪಾಶದಿ ಈ ವಿಚಾರ ಮಾಡಿದ 12 ಬಲೆಯಗಾರಗೆ ಸಿಕ್ಕು ಬಳಲಿದಾಕ್ಷಣ ಅದರ ಕೊ- ರಳ ಕೊಯ್ಯದೆ ಅವಗೆ ಕರುಣ ಬರುವುದೆ 13 ಎಷ್ಟು ಹೇಳಲೊ ಅವನ ಗಟ್ಟಿಯೆದೆಗಳ ಒಲ್ಲದೆ ಬಿಟ್ಟು ನಮ್ಮನು ಮಧುರಾಪಟ್ಟಣ ಸೇರಿದ 14 ಭ್ರಮರಕುಂತಳೆ ಒಂದು ಭ್ರಮರಕಾಣುತ ಬ್ಯಾಡ ಕಮಲನಾಭನ ವಾರ್ತೆ ಕಿವಿಗೆ ಸೊಗಸದು 15 ಮದನಮೋಹನ ಹೋಗಿ ಮಧುರಾಪುರಿಯಲಿ ಅಲ್ಲಿ ಚÉದುರೆರಿಂದಲಿ ಅವಗೆ ಸೊಗಸು ಸಮ್ಮತ 16 ಕ್ರೂರನೆನ್ನದೆ ಇವಗಕ್ರೂರನೆನುತಲಿ ದಾರ್ಹೆಸರಿಟ್ಟರೋ ನಮಗೆ ತೋರಿಸೊ ಅವರನು 17 ಯಾತಕ್ಹೇಳುವಿ ಅವನ ವಾರ್ತೆ ಸೊಗಸದು ಹರಿಯು ಪ್ರೀತಿ ವಿಷಯನು ನಮಗೆ ಘಾತಕನೆನಿಸಿದ 18 ಜಲನ ಭೇದಿಸಿ ಹಯನ ಕೊಂದು ವೇದವ ಹ್ಯಾಗೆ ಹರಣ ಮಾಡಿದ 19 ಕ್ಷೀರ ಮಥನವ ಮಾಡಿ ಸ್ತ್ರೀಯರೂಪದಿಂದಸುರರ ಮೋಹಿಸಿದ್ವಂಚನೆ ನಮಗೆ ಪೂರ್ಣ ತಿಳಿಸಿದ 20 ಭೂಮಿ ಬಗಿದನು ತನ್ನ ಕ್ವಾರೆಯಿಂದಲಿ ನಮ್ಮನ್ನು ಸೀಳಿ ಪೋದರೆ ಇನ್ನೀ ಘೋರ ತಪ್ಪುವುದು21 ಕಂದ ಕರೆಯಲು ಕಂಬದಿ ಬಂದು ಸಲಹಿದನೆಂದು ನಂಬಿ ಕೆಟ್ಟೆವೊ ಇನ್ನಿವನ ಹಂಬಲ ಸಾಕಯ್ಯ 22 ಕೊಟ್ಟ ದಾನವ ಬಲಿಯ ಕಟ್ಟಿ ಪಾಶದಿಂದವನ ಮೆಟ್ಟಿದ ಪಾತಾಳಕಿಂಥಾಕೃತ್ಯಮರುಂಟೇನೊ 23 ಕೊಡಲಿ ಕೈಯ್ಯೊಳು ಪಿಡಿದು ಹಡೆದ ಮಾತೆಯ ಶಿರವ ಕಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 24 ಬಂದ ಸತಿಯಳ ಮೋರೆ ಅಂಗ ಕೆಡಿಸಿದ ತ- ನ್ನಂಗನೆ ಕಾಣದೆ ತಿರುಗಲೆಮಗೆ ಸನ್ಮತ 25 ಪತಿಯ ಸುತರನೆ ಬಿಟ್ಟೆವಶನ ವಸನವ ಅಗಲಿದ್ವಸುನಂದನಗೆ ನಮ್ಮೆಲ್ಲರುಸುರು ಮುಟ್ಟಲ್ಯೊ 26 ಬೌದ್ಧರೂಪದಿ ಸ್ತ್ರೀಯರ ಲಜ್ಜೆಗೆಡಿಸಿದನೆಂಬೊ ಸುದ್ದಿ ಬಲ್ಲೆವೊ ನಾವಿಲ್ಲಿದ್ದವರುದ್ಧವ 27 ಕಲಿಯ ಮನಸಿರೆ ಇವಗೆ ಕಲ್ಕ್ಯನೆಂಬೋರೊ ಕತ್ತಿ ಪಿಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 28 ಬ್ಯಾಡವೆನುತಲಿ ಅವಗೆ ಬೇಡಿಕೊಂಡೆವೊ ಗಾಡಿಕಾರನು ನಮ್ಮ ನೋಡದ್ಹೋದನು 29 ನಮ್ಮ ವಚನವ ಹೋಗಿ ಮನ್ನಿಸುದ್ಧವ ಪನ್ನಂಗಶಯನನ ಪಾದಕ್ಕಿನ್ನು ನಮಿಸೆವೊ 30 ಬಿಟ್ಹ್ಯಾಗಿರುವೊಣೋ ಭೀಮೇಶಕೃಷ್ಣನ ನಮ್ಮ ದೃಷ್ಟಿಗೆ ತೋರಿಸೊ ಮುಕ್ತಿ ಕೊಡುವೊ ದಾತನ31
--------------
ಹರಪನಹಳ್ಳಿಭೀಮವ್ವ
ನದಿಗಳ ಸ್ತೋತ್ರ ಕಾವೇರಿ ಕಲುಷ ಸಂಹರಳೆ ಕಾವೇರಿ ಪ ವಿಧಿ ಸುತೆ ನಮ್ಮ | ಕಾವುದು ಬಿಡದಲೆ ಅ.ಪ. ಅಮಿತಾಭ ಕವೇರ ನೃಪನು | ಪುಣ್ಯಶಮದಮದಿಂದಯುತನು | ಸಾರಿಹಿಮನಗ ತಪ್ಪಲುಗಳನು | ದಿವ್ಯಸಮಶತದಶ ವರ್ಷಗಳನು | ಆಹಸುಮನ ಸೋತ್ತಮನಾದ | ಬೊಮ್ಮನ ಧೇನಿಸಿಅಮಮಸುಘೋರವು | ವಿಮಲ ತಪವ ಗೈದ 1 ಬೊಮ್ಮ | ಅಚ್ಚ್ಯುತ ಮಾಯ ತನ್‍ಇಚ್ಛೆಯ ಸುತೆ ನಿನ | ಮೆಚ್ಚು ಪುತ್ರಿಯಹಳು 2 ಸ್ಮರಣೆ ಮಾತ್ರದಿ ವಿಷ್ಣುಮಾಯಾ | ದಿವ್ಯತರುಣಿ ರೂಪದಿ ಬ್ರಹ್ಮರಾಯ | ನೆದುರುಕರವ ಮುಗಿದು ಪೇಳು ಜೀಯಾ | ಎನೆಬರೆದನಾ5ದು ಕವೇರ್ಕನ್ಯಾ | ಆಹಸರಿತು ರೂಪದಿ ಮೋಕ್ಷ | ವg್ವ5ರ ವಹುದು ನೀಸರುವ ತೀರಥ ಮಯಿ | ಪರಿವುದು ಈ ಪರಿ 3 ಎರಡು ಅಂಶವು ನಿನಗಿಹುದೂ | ಒಂದುಸರಿತಾಗಿ ಪ್ರವಹಿಸುವೂದು | ಮತ್ತೆತರುಣಿ ರೂಪದಿ ಪತ್ನಿಯಹುದು | ಮುನಿವರ ಕುಂಭ ಸಂಭವಗಹುದು | ಆಹಕರೆಸಿ ಲೋಪಾಮುದ್ರೆ | ಮೆರೆವುದು | ಪತಿವ್ರತೆಶಿರೋಮಣಿ ಎನಿಸಿ ನೀ | ಮೆರೆವುದು ಭುವಿಯಲ್ಲಿ 4 ವರವಿತ್ತು ಮರೆಯಾಗೆ ಅಜನು | ನೃಪವರ ಸುತೆಯೊಡನೆ ಪೊರಟನು | ಕಾಲಕರ ಮರತನದಿ ಕಳೆದಾನು | ಮುಂದೆವ್ಯೆರಾಗ್ಯದಿಂ ಪೇಳಿದಾನು | ಆಹಪರಿಶುದ್ಧನಿಹೆ ನಿನ್ನ | ದರುಶನ ಮಾತ್ರದಿಪರಮ ನಿಷ್ಕಾಮದ | ಕರ್ಮವನೆಸಗುತ್ತ 5 ಹರಿಧ್ಯಾನದೊಳು ಬಲುರತ | ನಿರೆನರಪತಿ ಹರಿಲೋಕ ಗತ | ನಾಗೆತರುಣಿ ಕಾವೇರಿಯು ಸ್ಥಿತ | ಘೋರವರ ತಪವನ್ನು ಗೈಯ್ಯುತ್ತ | ಆಹಇg5ರಲೀ ಪರಿ ಪರಿ ಪರಿ ಬೇಡಿದಳ್ 6 ಸರಿದ್ರೂಪಳಾಗಿನ್ನು ಪರಿದೂ | ಹರಿಶರಣರ ಪಾಪವ ತರಿದೂ | ಮತ್ತೆಸರುವರ ತಾಪವ ಕಳೆದೂ | ಇನ್ನುಸರಿತು ಗಂಗಾದಿಗೆ ಹಿರಿದೂ | ಆಹವರ ಕೀರ್ತಿಯಿಂದಲಿ | ಮೆರೆಯುತ ಲೋಕೋಪಕರಳೆನಿಸಿ ಪ್ರವಹಿಸಿ | ಶರಧಿಯ ಸೇರ್ವಂಥ 7 ಸ್ಮರಣೆ ಮಾತ್ರದಿ ಪಾಪನಾಶಾ | ಮಾಳ್ಪಗಿರಿಯುಂಟು ಸಹ್ಯ ಆದ್ರೀಶ | ಅಲ್ಲಿತರು ರೂಪಮಲಕ ದೊಳ್ವಾಸಾ | ನಿನ್ನಚರಣ ಕಮಲವ ವಾಣೀಶಾ | ಆಹವಿರಜೆ ಪುಣ್ಯದ ಜಲ | ವರ ಕಂಬುವಿಲಿ ತುಂಬಿಎರದಭಿಷೇಚಿಸೆ | ಪರಿವುದದರ ಸಹ 8 ವರ ದತ್ತಾತ್ರೇಯ ನೆಂದೆನಿಸಿ | ತವಶಿರ ಸ್ಥಾನದಲ್ಲಿ ವಾಸೀಸಿ | ಎನ್ನಶರಣರ ಅಘಗಳ ಹರಿಸೀ | ನಿನ್ನವರ ದಕ್ಷಗಂಗೆಂದು ಕರೆಸೀ | ಆಹವರ ತವೋತ್ಸಂಗದಿ | ಶಿರವಿಟ್ಟು ಮಲಗುತ್ತಸರಿದ್ವರಳೆನಿಸುತ್ತ | ಮೆರೆಸುವೆ ನಿನ್ನನು 9 ಮಂಗಳ ಜಪತಪ ಸ್ನಾನ | ಮಿಕ್ಕಗಂಗಾದಿ ತೀರ್ಥಾನುಷ್ಠಾನ | ನಾಲ್ಕ್ಯುಗಂಗಳೊಳಗೆ ಮಾಳ್ಪ ನಾನಾ | ಕರ್‍ಮಂಗಳ್ತವೋತ್ಸುಂಗ ಶಿರಸ್ಥಾನ | ಆಹಮಂಗಳಾಮಲಕ ಜಲಂಗಳಿಗ ಸಮ ಕ-ಳೆಂಗಳ್ಷೋಡಶಕ್ಕೊಂದಂಗ ಸರಿ ಬರೆದು 10 ದಾತ | ತನ್ನಕಾಮಂಡುಲಿನೊಳ್ ನಿನ್ನ ಧೃತ | ಆಹನೇಮದಿಂದೊಂದಂಶ | ಲೋಪಾ ಮುದ್ರೆಯು ಆಗಿಆ ಮಹ ಮುನಿಯನ್ನ | ಪ್ರೇಮದಿ ವರಿಸುವೆ 11 ವರವಿತ್ತು ಮರೆಯಾಗೆ ಹರಿಯು | ಅತ್ತವರ ಮುನಿ ತಪಸಿನ ಧಗೆಯು | ಕಂಡುಸುರಜೇಷ್ಠ ಅವನೆದುರು ಹೊಳೆಯು | ಆಗಬರೆದನು ಜೀವನ ಧೊರೆಯು | ಆಹಹೊರಲಾರದವ ತಾನು | ವರ ಸನ್ಯಾಸದಿ ಮನವಿರಸಿರುವುದು ನಿರಾ | ಕರಿಸುತ್ತ ಪೇಳ್ದನು 12 ಚಕ್ರಧರ | ತುಂಬಿದ ಮನದಿಂದಹಂಬಲಿಸಿ ಕೈಗೊಂಡು | ಬೆಂಬಿಡದೆ ಸಲಹುವ 13 ಮುನಿವರಗಸ್ತ್ಯನು ಅಜನ | ಮಾತಮನವಿಟ್ಟು ಕೇಳುತ್ತ ವಚನ | ಪೇಳ್ದಅನುಕೂಲ ಭಾರ್ಯಳಾಳ್ವುದನ | ಯೋಗಅನುಕೂಲಿಸುವುದೆಂಬ ಹದನ | ಆಹವನಜ ಗರ್ಭನು ತನ್ನ | ತನುಜೆಯ ಸುಕನ್ಯಾಮಣಿಯ ಕಾವೇರಿಯ | ವಿನಯದಿ ವರಿಸೆಂದ 14 ನಗ ಶೃಂಗದಿರಿಸುತ್ತಮಿಗೆ ಚೆಲ್ವ ಸರಿತಾಗಿ | ಪೋಗಲನುಗ್ರಹಿಸು 15 ಮೋದ ತಾಳುತ್ತಸುಗುಣೆಯ ಬೆಸಸೀದ | ನಗು ಮುಖದಿಂದಲಿ 16 ಹೊರ ಮುಖಳಾದಳ್ ಕಾವೇರಿ | ಮುನಿವರನ ಸತ್ಕರಿಸಲು ನಾರಿ | ದ್ವಿಜವರ ಪೇಳೆ ಬ್ರಹ್ಮಗನುಸಾರಿ | ಆಕೆವರಗಳ ಬೇಡಲು ಭಾರಿ | ಆಹಸುರಜೇಷ್ಠ ನ್ವೊರೆದಂತೆ | ವರಗಳ ನೀಯಲುಸುರಕನ್ಯಾಮಣಿಯಾಗ | ವರಿಸಿದಳಾ ಮುನಿಯ 17 ವಾಹನ ಪತ್ನಿ ಸೇರಿ | ಶಿರಿಕಂಸಾರಿ ಗರುಡನ್ನ ಏರಿ | ಕ್ರತುಧ್ವಂಸಿ ಉಮಾ ನಂದಿ ಏರಿ | ಇಂದ್ರಶಂಸಿ ಸೈರಾವತನೇರಿ | ಆಹಸಾಂಶರು ಯೋಗ್ಯ ನಿರಂಶರು ಸೇರಿ ಪ್ರ-ಶಂಸನ ಗೈಯುತ್ತ ವೈವಾಹ ನಡೆಸಿದರ್ 18 ಮದುವೆ ವೈಭವ ಪೇಳಲಾರೆ | ಜಗದುದಯಾದಿ ನಡೆಪರಿಹಾರೆ | ಹರಿಮುದ ಪೊಂದಲಿನ್ನೆದುರ್ಯಾರೆ | ಎಲ್ಲರ್ವೊದಗಿ ಆಶೀರ್ವದಿಶ್ಯಾರೆ | ಆಹವಿಧ ವಿಧ ದುಡುಗೊರೆ | ಅದ ಪೇಳಲಳವಲ್ಲಅದುಭುತ ಜರುಗಿತು | ಉದ್ವಾಹ ಕಾರ್ಯವು 19 ಗಮನ | ಮತ್ತೆಕಾವೇರಿ ಸಹ ಮುನಿ ಹಿಮನ | ಕೇಳ್ಕೆಭಾವಿಸುತಲ್ಲೆ ಕೆಲದಿನ | ಆಹಆವಾಸಿಸಿರೆ ಋಷಿ | ಸಾರ್ವರ ಮನ ತಿಳಿದುಆಹ್ವಾನ ವಿತ್ತಳು | ಸಹ್ಯಾದ್ರಿ ಸನಿಯಕ್ಕೆ 20 ಗಮನ | ಆಹಇಂಬಿಟ್ಟನ್ನೊಂದಂಶ | ಲೋಪಾಮುದ್ರೆಯು ಕುಂಭಸಂಭವ ಸಹ ಸಹ್ಯ ಅದ್ರಿಗೆ ಗಮಿಸಿದಳ್ 21 ಉತ್ತರ ಹಿಮನಗ ಬಿಡುತ | ವನಸುತ್ತುತ ವಿಂಧ್ಯ ಮೀರುತ್ತ | ಹಾಂಗೆಉತ್ತಮ ಸಹ್ಯಾಚಲೇರುತ್ತ | ಅಲ್ಯುನ್ನತ್ತ ಬ್ರಹ್ಮಗಿರಿ ಸಾರುತ್ತ | ಆಹಉತ್ತಮ ಕ್ಷೇತ್ರದಿ ಜತ್ತಾಗಿ ಕಮಂಡಲಒತ್ತಟ್ಟಿಗಿರಿಸುತ್ತ ಪತ್ನಿಗೆ ಬೆಸಸಿದರ್ 22 ಕಾಲ ಮುದದಿ ಕರಕದಿಂದಅದುಭೂತವೆನೆ ಸರಿದ್ವರಳಾಗಿ ಪ್ರವಹಿಸು 23 ಪರಿ ಕಾಲ ಸಮೀಪವಾಗಲು ಸುರಪ 24 ಹರಿ ಮನೋಭಾವಾನು ಸಾರಿ | ಮಳೆಗರೆಯಲನ್ಯತರುವ ಸಾರಿ | ಶಿಷ್ಯರುಗಳಾಶ್ರಯಿಸಲು ಮೀರಿ | ಕುಂಡಸರುವೆ ತೀರಥಗಳು ಉಸುರಿ | ಆಹಪರ್ವ ಕಾಲವು ಇದು | ಪೊರಮಡು ಕಾವೇರಿಪರಿವೆವು ನಿನ ಪಿಂತೆ | ತೀರ್ಥಗಳಗ್ರಣಿಯೆ 25 ವಿಧಿ ಬಂದ ಹಂಸವನೇರಿ | ಆವಮುದದಿಂದ ವನಗಳ್ ಸಂಚಾರಿ | ಇನ್ನುಅದುಭೂತಾಮಿತ ತೀರ್ಥ ಗಿರಿ | ಕಂಡುಒದಗಿ ಕರಕದ ಜಲ ಭಾರಿ | ಆಹಮುದದಿ ಮೀಯುತ ಜಪ ಅದುಭೂತಾಷ್ಟಾಕ್ಷರಪದುಮ ಸಂಭವ ಹರಿಧ್ಯಾನದಿ ರತನಾದ 26 ಮಂದ ಮಾರುತ ಬೀಸೆ ವಿಮಲ | ಧಾತ್ರಿಗಂಧ ವೆಂದೆನುತಲಿ ಬಹಳ | ಮುದದಿಂದೆಚ್ಚರಗೊಂಡು ಕಂಗಳ | ಮುಂದೆಸುಂದರಾಮಲಕಾ ಕೃತಿಗಳ | ಆಹಎಂದು ಕಾಣದ ದೃಶ್ಯ | ವೆಂದೆನುತಲಿ ಮನದಿಂದ ಧೇನಿಸೆ ಅದು | ಛಂದದಿ ಮರೆಯಾಯ್ತು27 ಸಿರಿ ಹರಿಯು | ಸಿರಿವತ್ಸಾಂಕಿತನು ಬಾಹು ದ್ವಿದ್ವಯು | ಇಂದಮೆಚು5Àೂಪವ ತೋರೆ ವಿಧಿಯು | ಆಹ |ಸಚ್ಚರಿತೆಯ ಪಾಡೆ | ನಿಚ್ಚಳಾಮಲಕದಉಚ್ಚರೂಪವ ಕಂಡು | ಅರ್ಚಿಸಿದನು ಬಹಳ 28 ಗಾತ್ರ ಪಾದ | ಬಿಸಜಗಳ್ವಂದಿಸಿಬಿಸಜ ಸಂಭವ ಗೈದ | ಅಸಮ ಸಂಪೂಜೆಯ 29 ಧಾತಾ ಸ್ವ ಕುಂಡಿಕಾಸ್ಥಿತ | ವಿಮಲ ತೀರ್ಥವು ವಿರಜೆಯಿಂ ಹೃತ | ಶಂಖಪೂರ್ತಿಸಿ ಪೂಜಾ ಪದಾರ್ಥ | ಪ್ರೋಕ್ಷಿಸಿಪೂತಾತ್ಮಾಮಲಕದಿ ಸ್ಥಿv5 ಆಹಶ್ರೀ ತರುಣೀಶನ | ದತ್ತಾತ್ರೇಯನ ರೂಪಖ್ಯಾತ ಪೂಜಿಸುತಿರಲಶರೀರ ವಾಕ್ಕಾಯ್ತು 30 ಪರಿ ಗೈಯ್ಯುವ ಭಾಮಾ ಮಣಿಕುರಿತು ಪೇಳಿತು ವಾಣಿ ನೇಮ | ನೀನುಶರಧೀ ಸೇರುವ ಮನೋ ಕಾಮಾ | ಆಹಪರಿಪೂರ್ಣವಹುದೀಗ | ವರ ತುಲಾಪರ್ವದಿಶರತ್ಕಾಲ ಮುಕ್ತಿದ | ಪರಿವುದು ಕಾವೇರಿ31 ತತುಕ್ಷಣ ಮುನಿಯ ಕಮಂಡ್ಲು | ದೊಳುಸ್ಥಿತ ಸರ್ವ ತೀರ್ಥಮಾನಿಗಳೂ | ಪೇಳೆತುತುಕಾಲ ಕವೇರ ತನುಜಳೂ | ಶೀಘ್ರಉತು ಪತ್ತಿ ತಾಳಿ ಪರಿದಾಳೂ | ಆಹಇತರ ತೀರಥಗಳು | ಸರಿತು ರೂಪದಿ ಹಿಂದೆಅತಿ ತ್ವರೆಯಲಿ ಪ್ರವ | ಹಿತರಾಗಿ ಪೋದರು 32 ಋಷಿವರ್ಯ ಸ್ನಾನವ ಮಾಡಿ | ಪರಿಕ್ಷಿಸಲಾಗ ವಿಸ್ಮಯ ಕೂಡಿ | ಶಿಷ್ಯರಿಗುಸರಲಾಕ್ಷೇಪದ ನುಡಿ | ಅವರುಸಿರಿದರ್ ಮಳೆಯ ಗಡಿಬಿಡಿ | ಆಹರಸ ರೂಪದಲಿ ಪರಿವ | ಅಸಮ ಪತ್ನಿಯ ಕೂಗೆಋಷಿಗೆ ಶಾಂತಿಯ ಸೊಲ್ಲ | ಒಸೆದು ಪೇಳಿದಳವಳೂ 33 ಸುರವರ ಪೂಜ್ಯ ಧಾತ್ರಿಯು | ಇನ್ನುತರುವು ಆ ಮಲಕದ ಬಳಿಯು | ತೀರ್ಥವರ ಶಂಖ ಸಂಜ್ಞಿತ ತಿಳಿಯು | ಇಲ್ಲಿವಿರಜೆಯ ದೊಂದಿಹ ಕಳೆಯು | ಆಹವರ ನಭೊ ಗಂಗೆಯು | ಸರಿ ಸಹ್ಯಾಮಲಕವುವರಣಿಸಲಳವಲ್ಲ | ಸರಿದ್ವರ ಮಹಿಮೆಯ 34 ಕೈವಲ್ಯ | ದಾತನ ಒಲಿಮೆಯು 35 ಗಂಗಾನದೀಗಗಳು ತಮ್ಮ | ಪಾಪಹಿಂಗಿಸಲೋಸುಗವಮ್ಮ | ತುಲಾಮಂಗಳ ಮಾಸದಲಮ್ಮ | ಒಂದುತಿಂಗಳಿಹರಿಲ್ಲಿ ಸಂಭ್ರಮ್ಮಾ | ಆಹಗಂಗೆ ದಕ್ಷಿಣಾಖ್ಯೆ | ಮಂಗಳೆ ಜನಗಳಘಂಗಳ ಕಳೆಯುತ್ತ | ತುಂಗೋಪಕಾರಿಯೆ 36 ಕಾವೇರಿ ಪ್ರವಹಿಸಿ ಭರತ | ವರ್ಷಪಾವಿಸುತಿಹಳು ತಾ ನಿರುತ | ಬಂದುಸೇವಿಸೂವರ ಪಾಪ ತ್ವರಿತ | ದೂರಗೈವಳೆಂಬುವದೆ ನಿಶ್ಚಿತ | ಆಹಈ ವಿಧ ಮಹಿಮೆಯ ಓವಿ | ಪಾಲಿಸಿದನು |ಶ್ರೀವರ ಶ್ರೀ ಗುರು | ಗೋವಿಂದ ವಿಠಲಯ್ಯ 37
--------------
ಗುರುಗೋವಿಂದವಿಠಲರು