ಒಟ್ಟು 1909 ಕಡೆಗಳಲ್ಲಿ , 109 ದಾಸರು , 1493 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೀಪವಿದ ಬೆಳಗುವೆನು ದೇವ ನೀ ನೋಡುವ್ಯಾಪಿಸಿದ ತಿಮಿರವನು ಪರಿಹರಿಸಿ ರಂಜಿಸುವ ಪಸಕಲ ದೇವಾತ್ಮಕದ ತಿಲ ತೈಲವಾಗಿರಲುಅಕಲುತ ವರ್ತಿುಂ ಮಿಳಿತವಾಗಿ ಪ್ರಕಟವಾಗಿರುವಗ್ನಿ ಪ್ರಭೆಯೊಡನೆ ಸ್ಫುಟವಾಗಿಮುಖ ಸಮೀಪದಿ ಮೂರು ಲೋಕಗಳ ಬೆಳಗುತಿಹ 1ಜ್ಞಾನವೇ ಗೋಘೃತವು ಮೂರ್ತಿಗಳೆ ವರ್ತಿಗಳುನೀನಿದಕೆ ಮೂಲ ಕಾರಣವಸ್ತುವೂಸಾನುಕೂಲದಿ ಗುಣಗಳೊಂದಾಗಿ ಚಿತ್ತಿನೊಳುಲೀನವಾಗಿರೆ ನಿರ್ಮಲಾಕೃತಿಯ ತಾಳಿರುವ 2ಎನ್ನ ಜೀವವೆ ದೀಪ ನಿನ್ನ ಪಾದವೆ ಬ್ರಹ್ಮಭಿನ್ನ ಭಾವವನುಳಿದು ಪೂರ್ಣರೂಪದಲಿನಿನ್ನೊಳಗೆ ನಿಲಿಸೆನ್ನ ಪುಣ್ಯತಮವೆಂದೆನಿಪಸ್ವರ್ಣಮಯ ತಿರುಪತಿಯ ವಾಸ ವೆಂಕಟರಮಣ 3 ಓಂ ಸಚ್ಚಿದಾನಂದವಿಗ್ರಹಾಯ ನಮಃ
--------------
ತಿಮ್ಮಪ್ಪದಾಸರು
ದುಃಖವಿಲ್ಲವೋ ಪರಮಾತ್ಮನಿಗೆ ಲಿಂಗದ ದೇಹದದುಃಖವಿಲ್ಲವೋ ಪರಮಾತ್ಮನಿಗೆ ಪ್ರತ್ಯಗಾತ್ಮನಿಗೆದುಃಖವುಂಟೆ ನಿಜ ನಿರ್ಲಿಪ್ತಗೆಮಿಕ್ಕ ಥಳಥಳ ಸಾಕ್ಷಿಬ್ರಹ್ಮಂಗೆಪ ಜಲದೊಳು ಹೊಳೆವ ಇಂದುವಿಂಗೆಜಲದ ಕಂಪವು ಹೊಳೆವುದೇ ಪೂರ್ಣಚಂದ್ರಗೆಆ ಪರಬ್ರಹ್ಮಂಗೆ ಹೊಳೆಯಲು ಲಿಂಗದಿಲಿಂಗದ ಗುಣಗಳು ಕೆಲವನು ತಿಳಿಯಲು ಪುಣ್ಯಾತ್ಮನಹೆ 1 ಪರಿ ಆತ್ಮಂಗೆ ಲಿಂ-ಗಾದಿ ಜನ್ಮವೊಂದುಗುಡೆ ಕಷ್ಟಪಡುವಿಕೆಲಿಂಗವೆ ಅಳಿಯಲು ನಿತ್ಯಾತ್ಮನುತಭಂಗವ ಕಳದೇ ಚಿದಾನಂದ ಬ್ರಹ್ಮನಹನು 2
--------------
ಚಿದಾನಂದ ಅವಧೂತರು
ದುರಿತ ಗಜಕೇಸರಿಯೆ ತ್ರಿಲೋಕದ ದೊರೆಯೆ ನಿನಗಾರು ಸರಿಯೆ ಭಾಗ್ಯದ ಸಿರಿಯೆ | ಕರುಣವ ಮಾಡಿ ಪರಿಯಲಿ ಸಾರಂಗ | ಧರನೆ ಧರಣಿಧರ ವರ ಪರಿಯಂತಾ ಪ ಭೂಮಿಯೊಳಗೆ ಉತ್ತಮ ನೆಲಾ ನೀಡೆಂದು | ಹೇಮ ಮುನೀಶ್ವರ ಕಾಮಿಸಿ ಹರಿಪಾದ | ನೀ ನೇಮ ನಿತ್ಯದಲ್ಲಿ | ತಾ ಮನೋರಥನಾಗಿ || ಸಾಮಜವರದನ ನಾಮವ ನೆನೆಯಲು | ಹೇಮ ತೀರಥದೊಳು | ತಾ ಮನಗೊಂಬ ನಾಮನೆ ಪಡೆದು 1 ಮಂಗಳಾಂಗಿಯೇ ಬರಲು ರಂಗರಾಯನು ಸಾ | ರಂಗಶರವೇಪಿಡಿದುಶೃಂಗಾರಮಯದಿಂದ | ಬಂಗಾರ ರಥ ತು | ರಂಗಗಳ ಸಮೇತ ಭುಜಂಗಶಯನನಾಗಿ ಕಂಗೊಳಿಸುತ್ತಲೂ | ತುಂಗ ಮಹಿಮ ವಿಹಂಗಾದಿಗಳಿಂದ ಕೈಕೊಳ್ಳುತ್ತಿಂಗಿತದಲಿ ನೀಲಾಂಗ ನಿರ್ದೋಷಾ 2 ಜಯ ಕುಂಭಘೋಣನಿಲಯಾನೆನೆಸುವ ಉ | ಭಯ ಕಾವೇರಿ ನಿವಾಸಾ | ಭಯ ಕೃದ್ಭಯನಾಶ | ತ್ರಯ ಗುಣವಿರಹಿತಾ ವಿಯದ್ಗಂಗಾನದಿ ತಾತಾ | ಜಯ ಜಯವೆನುತಿರೆ ಪ್ರಿಯನಾಗಿ ಕೇಳುತಾ | ನಯನ ಮೀತಾರ ಪಾಲಯಪಾವನದೇವಾ | ದಯಮುಖ ಹರಾ ವಿಜಯವಿಠ್ಠಲಪರಾ 3
--------------
ವಿಜಯದಾಸ
ದುರಿತಕೋಟಿಗಳ ತಾಂ ಪರಿಹರಿಸುವುದಕೆ ಪ ಪಾತಕ ಗೃಹ ಬೃಂದ ಬಂಧನದ ಮಂತ್ರ ಮಾತೆಯಂದದಿ ಪಾಲಿಸುತ್ತಲಿಹ ಮಂತ್ರ1 ಮುದವ ಕರುಣಿಸುವ ಮಂತ್ರ ನಿರ್ಮಲ ಮನವನಾಗಿಸುವ ಮಂತ್ರ 2 ಸತ್ವಗುಣವನು ಪೆರ್ಚಿಸುತ್ತಲಿಹ ಮಂತ್ರ ಬಿಡದೆ ಜೊತೆಯೊಳಿಹ ಮಂತ್ರ 3 ಶಂಕರ ಪದ್ಮಪಾದ ಲಕ್ಷ್ಮೀಯರು ಮಂತ್ರ ಸರ್ವ ಸಾಧನವು 4 ಧೇನುಪುರ ಕೃಷ್ಣ ವಿಷ್ಣುವಿಗೆ 5
--------------
ಬೇಟೆರಾಯ ದೀಕ್ಷಿತರು
ದುರ್ಯೋಧನ ಮಹರಾಜನೆ | ಅ ನಾರ್ಯ ಜನರ ಕಲ್ಪಭೂಜನೆ ಪ ನಿರ್ಹೇತುಕ ದ್ವೇಷ ಮಾಡುವೆ | ಹಾ ಹಾ ಅ.ಪ ಹರಿಭಕ್ತಿಗೆ ಮಾನಭಂಗ ಮಾಡಲಾಪೆಯ ದುರುಳ ಘೋಷಯಾತ್ರೆಯ ಜ್ಞಾಪಿಸಿಕೊ ದುಷ್ಟ 1 ಜಲದೊಳು ಮುಳುಗಿ ಸ್ವಬಲವನೆಬ್ಬಿಸುವೆನೆಂ ದೆಲೆ ಭೀಮಗೇಕಿದಿರಾದÀಯ್ಯ ನೀನು 2 ಶ್ರೀಪ ಗುರುರಾಮ ವಿಠಲಗೆ ದೂರನೆ | ಹಾ ಹಾ 3
--------------
ಗುರುರಾಮವಿಠಲ
ದೂರಕ್ಕೆ ದೂರನೆಂದು ಹೆರೆ ಸಾರಲಿ ಬೇಡಸಾರಿಗೆ ಸಾರಿ ನಮ್ಮ ಕೃಷ್ಣನ್ನ ಸಾರಿರೈಯ ಪ ಅನಂತ ಜನುಮದೊಳೊಂದೆ ಜನುಮಅನಂತ ಕ್ಷಣದೊಳಗೊಂದೆ ಕ್ಷಣಅನಂತ ನಾಮದೊಳೊಂದೇ ನಾಮವಮುನಮುಟ್ಟಿ ನೆನೆದರೆ ಬೆನ್ಹತ್ತಿ ಬಿಡನೈಯ 1 ಅನಂತರೂಪದೊಳೊಂದೆ ರೂಪಅನಂತ ಗುಣದೊಳಗೊಂದೆ ಗುಣಅನಂತ ಜೀವರೊಳಗಾವನಾದರುಂ ಕನಸಿಲಿ ನೆನೆದರೆ ಋಣಿಯಾಗಿಪ್ಪನೈಯ 2 ಒಂದೆ ಹೂವು ಒಂದೆ ಫಲವೊಂದೆಬಿಂದು ಜಲವೊಂದೆ ತುಳಸಿಒಂದೇ ವಂದನೆಯೊಂದೆ ಪ್ರದಕ್ಷಿಣೆಒಂದನರ್ಪಸಿದೊಡಂ ಕುಂದದಾನಂದವೀವನೈ 3 ಹರಿ ಚಿನ್ಹಾಂಕನ ಹರಿದಿನದುಪವಾಸನೆರೆಯೂಧ್ರ್ವ ಪುಂಡ್ರ ತುಳಸಿಮಾಲೆಹರಿಯುತ್ಸವ ಸೇವೆ ಹರಿದಾಸರ ಸಂಗದುರಿತಾಬ್ಧಿಗೆ ಕುಂಭಸಂಭವನಲ್ಲವೆ 4 ಹರಿಪಾದ ತೀರ್ಥವು ಹರಿಯ ನಿರ್ಮಾಲ್ಯವುಹರಿ ಆರತಿ ಧೂಪ ಶೇಷಂಗಳುಹರಿಯ ಪ್ರಸಾದ ಶಂಖೋದಕ ಪ್ರತ್ಯೇಕದುರಿತ ರಾಸಿಗಳನ್ನು ಸೋಕಲು ಸುಡದೆ 5 ಒಮ್ಮೆ ಪಾಡಿದಡಂ ಒಮ್ಮೆ ಪೊಗಳಿದೊಡಂಒಮ್ಮೆ ಬೇಡಿದಡಂ ಒಮ್ಮೆ ನೋಡಿದಡಂಒಮ್ಮೆ ಸಾರಿದಡಂ ಮತ್ತೊಮ್ಮೆ ಕರೆದಡಂನಮ್ಮಾತನಿವನೆಂದು ಕೈಯ ನೀಡುವನೈಯ 6 ತನ್ನಲ್ಲಿಪ್ಪನಾಗಿ ದೂರನಲ್ಲ ನರಹೊನ್ನು ಬೇಡ ಲಕುವಿರಮಣಗೆ ಅನ್ಯವ್ಯಾತಕ್ಕೆ ಈ ಪರಿಪೂರ್ಣಾನಂದಗೆನಿನ್ನವನೆಂದರೆ ತನ್ನನೀವನು ಕೃಷ್ಣ7
--------------
ವ್ಯಾಸರಾಯರು
ದೃಢಚಿತ್ತದೊಳಗೆನ್ನ ಒಡೆಯನೀತಗೆ ಮುನ್ನ ಪಡಿಯೆನಿಪರಿನ್ನುಂಟೆ ಪೊಡವಿಯಲ್ಲಿ ಜನವಾರ್ತೆಯನೆ ಕೇಳಿ ವನಿತೆಯೊಳು ಖತಿತಾಳಿ ಇನಿತು ಕಾಡಿದ ಚಾಳಿಯೊರೆವೆ ಕೇಳಿ ಮಡಿವಳನ ನುಡಿಗಾಗಿ ಕಡುಮೂರ್ಖ ತಾನಾಗಿ ಅಡವಿಗಟ್ಟುವರೇನೆ ಮಡದಿಯನ್ನೆ ಧರ್ಮಪತ್ನಿಯುಮಂತು ಪೂರ್ಣಗರ್ಭವನಾಂತ ಅರ್ಧಾಂಗಿಯನ್ನುಳಿದ ನಿರ್ದಯಾತ್ಮ ದಯೆಯೆಂಬುದಿವನಲ್ಲಿ ತೋರದಿಲ್ಲಿ ಪ್ರಿಯರಾರು ಮತ್ತಿವಗೆ ಧಾತ್ರಿಯಲ್ಲಿ ಭಯವಿಲ್ಲ ಮಾತಿನೊಳು ನಯವದಿಲ್ಲ
--------------
ನಂಜನಗೂಡು ತಿರುಮಲಾಂಬಾ
ದೃಷ್ಟಿಯೊಳಗೆ ದೃಷ್ಟಿ ನಿಂತಿತು | ನೋಡಲಿನ್ನು ದೃಶ್ಯ ನಷ್ಟವಾಯಿತು | ಕಷ್ಟವೆಲ್ಲ ಕಡೆಗೆ ಸಾರಿ | ಅದೃಷ್ಟವನ್ನು ಮೀರಿ ನಿಂದು ನಿಷ್ಠೆಯಲ್ಲಿ ತುಷ್ಟಿಯಾಯ್ತು ನೀ ನೋಡು ಸಖಿಯೆ ಪ ಐದು ಮಂದಿ ಅಗಲಿ ಹೋದರೆ | ಐದಕೈದು ಕೂಡಿ ಬಂದು ಕೂಡದಾದರೆ | ಐದರೊಳಗೆ ನೋಡಲಿನ್ನು || ಐದು ಐದು ತಾನೆ ಅಲ್ಲ | ಐದನೇದರಲ್ಲಿ ನಿಂತೆನೇ | ನೀ ಕೇಳಿದೇನೆ ? 1 ಕರ್ಮವೆಲ್ಲ ಕಾಣದಾಯ್ತು | ಧರ್ಮವೊಂದು ಸರ್ವಕಾಲ ತೂಗಿ ನಿಂತಿತು |ಶರ್ವನಲ್ಲದಿನ್ನು ಮತ್ತೆ | ಉರ್ವಿಯಲಿ ಪೇಳದಾಗಿ ಪರ್ವತಾಗ್ರ ಭೂಮಿ ಒಂದು ನಿರ್ವಿಕಾರ ತೋರಿತಲ್ಲಾ 2 ಹಿಂದೆ ಎಂದು ಕಂಡಿದಿಲ್ಲ | ಈ ಸೋಜಿಗವನ | ಮುಂದೆ ದಾರಿಗುಸುರಲೀಗತೀ | ತಂದೆ ಭವತಾರಕನ | ಹೊಂದಿದವರ ಕೇಳಿದೇನೆ | ಎಂದು ಎಂದು ಹೀಗೆಂಬರೆ | ನೀ ಬಲ್ಲಿಯೇನೇ 3
--------------
ಭಾವತರಕರು
ದೇವ -ದೇವತಾ ಸ್ತುತಿ ಬ್ರಹ್ಮದೇವರು 352 ವಂದಿಸುವೆ ಜಗದ್ಗುರುವೆ ಮಂದಜಾಸನ ಬ್ರಹ್ಮ ನಂದಿವಾಹನಶೇಷಗರುಡರ ತಂದೆ ಸುಗುಣೋದ್ದಾಮ ಪ. ಚತುರವದನ ಶ್ರೀಹರಿಯ ಪ್ರಥಮ ಪುತ್ರ ವಿಧಾತ್ರ ಸತತ ಭಕ್ತಿಯೋಗೀಶಿರೋರತುನ ವಾಣೀಕಳತ್ರ ನೂರುಕಲ್ಪ ತಪವಗೈದ ಸಾರಋಜುಗಣೇಶ ಪಾರಮಾರ್ಥಜ್ಞಾನನಿಧಿ ಗಂಭೀರ ಸತ್ತ್ವವಿಲಾಸ 2 ಶ್ರೀ ಲಕ್ಷ್ಮೀನಾರಾಯಣನ ದಾಸಜನವರೇಣ್ಯ ವಾಸವಾದಿ ನಿರ್ಜರೌಘಪೋಷಕಾಗ್ರಗಣ್ಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ದೇವ ಗುರುಸ್ತುತಿ ಅಂಗವೇ ಶ್ರೀ ಮಹಾಂಗಿರೀಶ ಲಿಂಗವಾದುದು ಸಂಗ ಸುಖದ ದುರಿತವೆಲ್ಲ ಹಿಂಗಿ ಪೋದುದು ಪ ನಿರ್ಮಲಾತ್ಮ ಗುರುಕಟಾಕ್ಷ ಮರ್ಮಸಿಕ್ಕಿತು ಕರ್ಮ ಹರಿದು ಜ್ಞಾನಜ್ಯೋತಿ ಬೆಳಕು ಮಿಕ್ಕಿತು ಧರ್ಮ ತತ್ವದಮೃತವೆಂಬ ಶರಧಿಯುಕ್ಕಿತು ಪ್ರೇಮದಿಂದ ಪ್ರಕಟವಾದ ಬ್ರಹ್ಮ ದಕ್ಕಿತು 1 ಮಾಯೆಯಿಂದ ಮಮತೆಯೆಲ್ಲ ಸತ್ಯವಾದುದು ನ್ಯಾಯಪಥವ ತಿಳಿಯೆ ಸರ್ವ ಮಿಥ್ಯವಾದುದು ಸಾಯುತೊಡನೆ ಹುಟ್ಟುವುದರ ಭೀತಿಪೋಪುದು ಕಾಯದೊಳಗೆ ದಿವ್ಯಜ್ಯೋತಿ ಪಥ್ಯವಾದುದು 2 ಪರಶಿವಾತ್ಮಲಿಂಗವೆನ್ನ ಮನಕೆ ಸಾರಿತು ತುಂಬಿ ತುಳುಕಿ ಬೀರಿತು ಪರಮಾನಂದರಸದ ಲಹರಿ ಉಕ್ಕಿ ಹರಿಯಿತು 3
--------------
ಭಟಕಳ ಅಪ್ಪಯ್ಯ
ದೇವ ತ್ರಾಹಿ ಗೋಪಾಲಕೃಷ್ಣ ದೇವ ತ್ರಾಹಿ ಪ ದೇವ ತ್ರಾಹಿ ದಯಯಾ ವನಚತುರ ನಿರಾವರಣಾಖಿಲ ಭಾವಭರಿತ ನಿಜಪಾವನ ಭಕ್ತಜನಾವಳಿಸಂವೃತ ಭಾವಜಜನಕ ಅ.ಪ ನಿರ್ಗುಣ ನಿರುಪಮ ದುರ್ಗಮಗುಣಗಣ ನರ್ಗಳಾವಾಸನಾ ನಿರ್ಗಮಹೇತ್ವಪವರ್ಗದ ಕೃಷ್ಣಾ 1 ಇಂದಿರಾ ಮುನಿ ಮನೋಮಂದಿರ ವಿನತಾ ನಂದನವಾಹನ ಕುಂದರದನ ಕುರು ನಂದನ ಸೇನಾ ವೃಂದನಿಷೂದನ ನಂದನ ಕೃಷ್ಣಾ 2 ಅರ್ಜುನಪಾಲಕ ದುರ್ಜನಶಿಕ್ಷಕ ಸಜ್ಜನರಕ್ಷಕ ಭರ್ಜಿತಕರ್ಮ ಸುದುರ್ಜಯ ಮೋಕ್ಷದನಿರ್ಜರ ತಿರುಪತಿ ನಿರ್ಜಿತ ವೆಂಕಟಕೃಷ್ಣ 3
--------------
ತಿಮ್ಮಪ್ಪದಾಸರು
ದೇವ ದೇವತೆಗಳ ಸ್ತುತಿ ಆವ ಕಾರ್ಯಕೂ ಮುಂಚಿನ ಪೂಜೆ ನಿಮ್ಮತಾಯಿ ತಂದೆಯು ಕಲಿಸಿದ ಪೂಜೆ ಪ ಜಾತಕರ್ಮಕೆ ನಾಮಕರಣಕೆ ಚೌಲಕೆಸಾತಿಶಯಾಕ್ಷರ ಪ್ರಾರಂಭಕೆನೂತನ ವಿದ್ಯಾರಂಭಕೆ ಮುಂಜಿಗೆಯಾತಕೂ ಶ್ರೀ ಗಣಪತಿ ಜಯ ಜಯವೆಂದೂ 1 ಮದುವೆಗೆ ಋತುಶಾಂತಿಗೆ ಸೀಮಂತಕೆಮುದದಿಂದ ಜನನವ ಬರೆವುದಕೆಸದಮಲ ಯಜ್ಞಾರಂಭಕೆ ಸಮರಕೆಮೊದಲೇ ಶ್ರೀ ವಿಘ್ನೇಶ್ವರ ಜಯ ಜಯವೆಂದೂ2 ಪರ ಉಪಕಾರಕೆಜ್ಞಾನಮಾರ್ಗಕೆ ಗಾನಕೆ ಗೀತೆಗೆನಾನಾವಿಧ ಸುವ್ರತ ತೀರ್ಥಯಾತ್ರೆಗೆನೀನೆ ಗತಿ ಗಣಪತಿ ಜಯ ಜಯವೆಂದೂ 3 ಕೆರೆ ಕಾಲುವೆ ಕೂಪಗಳ ವಿಸ್ತಾರಕೆಸುರಗೃಹ ರಥ ಉತ್ಸವ ಪೂಜೆಗೆಸರಸ ಸರೋವರಗಳ ನಿರ್ಮಾಣಕೆಸಿರಿ ಗಣಪತಿ ಪಾವನಮೂರ್ತಿ ಜಯವೆಂದೂ 4 ಹರ ನಿಮ್ಮ ಪೂಜಿಸಿ ಪುರಮೂರ ಜಯಿಸಿದಗರುಡಗೆ ಅಮೃತವು ಸಿದ್ಧಿಸಿತುವರರಾಮಚಂದ್ರ ನಿಮ್ಮಡಿಯ ಪೂಜಿಸಿ ದಶಶಿರನ ಗೆಲಿದನೆನೆ ಗಣಪತಿ ಜಯವೆಂದೂ 5 ದ್ವಾಪರಯುಗದಲಿ ಧರ್ಮರಾಯನು ನಿಮ್ಮನೇ ಪೂಜಿಸಿ ಕೌರವರ ಗೆಲಿದಾಭೂಪರ ಜೈಸಿ ತುರಗವ ತಂದ ಸಾಂಬನುಶ್ರೀಪತಿನುತ ಗಣಪತಿ ಜಯ ಜಯವೆಂದೂ6 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮಮೋಹದ ಪುತ್ರ ಪಾವನತರಗಾತ್ರವರದ ಶ್ರೀ ಗಣಪತಿ ಜಯ ಜಯ ಜಯವೆಂದೂ 7
--------------
ಕೆಳದಿ ವೆಂಕಣ್ಣ ಕವಿ
ದೇವ ದೇವತೆಗಳ ಸ್ತುತಿ 1 ಅಂಬ ಕಟಾಕ್ಷಿಸೆ ಅಂಬಅಂಬ ಪರಾಂಬ ಬಗಳಾಂಬ ಪ ಮಧು ಕೈಟಭಾರಿಯೆ ಮಹಿಷಾಸುರೇಶ್ವರಿಯೆಕದನ ಶುಂಭಾಂತಕಿ ಕರುಣಾ ಕೃಪಾಕಟಾಕ್ಷೆ1 ಪರಮ ಪಾವನದೇವಿ ಪಂಡಿತ ಜನ ಸಂಜೀವಿಶರಣ ಜನರ ತಾಯಿ ಸುಧಾ ಶರಧಿ ಸಂಭಾವಿ2 ನಾರಾಯಣಿ ಭದ್ರೇ ನರಸಿಂಹಿಣಿ ರೌದ್ರಿವಾರಾಹಿ ಕಾಳಿಯೆ ಗೌರಿ ಉಮಾಮಹೇಶ್ವರಿ ಶಂಕರಿ 3 ನಿತ್ಯ ನಿಗಮ ಸ್ತುತ್ಯ ಚಿದ್ರೂಪೇನಿತ್ಯ ನಿರ್ವಿಕಾರಿ ನಿಂದಕಜನಸಂಹಾರಿ 4 ಚಿದಾನಂದಾವಧೂತೇ ಚಿನ್ಮಯ ಬಗಳ ಪ್ರಖ್ಯಾತೇಬೋಧ ಸದ್ಗುರುನಾಥೇ ಭಕ್ತವಿಲಾಸ ಪ್ರೀತೆ 5
--------------
ಚಿದಾನಂದ ಅವಧೂತರು
ದೇವ ನೀನಹುದೋ ದೇವರದೇವ ನೀನಹುದೋ ಪ ದೇವ ರಿಪುವನದಾವ ದುರಿತಾಖ್ಯನಾವ ನಮಿತರ ಕಾವ ಕರುಣಸಂಜೀವ ಜಿತಪೂರ್ಣಕಾಮ ಅ.ಪ ದೇವಕಿಯಲ್ಲವತರಿಸಿ ಗೋಕುಲವನ್ನು ಪಾವನವನ್ನು ಮಾಡಿ ಮಡುಹಿ ಮಾವನ ಮಧು- ರಾವನಿಯನುಗ್ರಸೇನಗಿತ್ತು ದೈತ್ಯಾಳಿಯ ಸವರಿ ಜೀವ ಸಖನಾಗಿ ಪಾಂಡವರಿಗೆ, ಪಾರ್ಥ ಸೇವೆಯಲಿ ಸಂದು ಕೀಲಿಸಿ ಕೌರವರನ್ನು ಭೂವರನ ಹಯಮೇಧಕೊಲಿದು ಬಂದಾ 1 ಧರ್ಮರಾಜನ ಯಜ್ಞತುರಗ ರಕ್ಷೆಗೆ ಕೃತ- ವರ್ಮಜರು ಕೂಡಿ ನಡಸಿ ನೀಲಾಂಕನ ಮರ್ಮವರಿತು ಸೋಲಿಸಿ ಹಂಸಧ್ವಜರನ್ನು ಮಾಮಳಿದಡರಿ ಕರ್ಮವಶದಿಂದ ಬಭ್ರುವಾಹನನ ಕೈಯ ದುರ್ಮರಣವಾದ ವಿಜಯ ಕರ್ಣರನು ನಿತ್ಯ ನಿರ್ಮಳಿಕನಹುದೊ 2 ಮುಂತೆ ನಡೆದರ್ಜುನಿಯ ಗೂಡಿ ತಾಮ್ರಧ್ವ ಜಂ ತುಡುಕಿ ಬರೆ ದ್ವಿಜನಾಗಿ ಶಿಖಿ ದಂತಿಪುರಕೆ ಬಂದರಸನ ಹಯಮೇಧ- ಮಂ ಪಾಲಿಸಿ ತ್ರಿಜಗವನು ಪಾಂಡವರಿ- ಗಿತ್ತೊಲಿದು ಸುರಪುರವ ಪೊರೆವ ಲಕ್ಷ್ಮೀಕಾಂತ ನೀನಹುದೋ 3
--------------
ಕವಿ ಲಕ್ಷ್ಮೀಶ
ದೇವ ಹನುಮಶೆಟ್ಟ | ರಾಯ ಜಗಜಟ್ಟಿ ಪರಮೇಷ್ಟಿ ಪ ಪಾವನಚರಿತ ಸಂಜೀವನ ಗಿರಿಧರ ಪಾವಮಾನಿ ಕರುಣಾವಲೋಕನದಿ ನೀ ನಲಿಯುತಲಿ ಸದಾವಕಾಲ ತವ ತಾವರೆ ಪದಯುಗ ಸೇವೆಯ ಕರುಣಿಸೊ ಅ.ಪ ವಾನರ ಕುಲನಾಯಕ | ಜಾನಕಿಶೋಕ ನಿವಾರಕ ಕಾನನ ತೃಣಪಾವಕ | ಹೀನ ಕೌರÀವ ನಾಶಕ | ಸನ್ಮಾನಿ ತಿಲಕ ಆನಂದತೀರ್ಥನಾಮಕ | ಕ್ಷೋಣಿಯೊಳಗೆ ಎಣೆ | ಗಾಣಿ ಪಿಡಿದು ಪೊರೆ ಗೀರ್ವಾಣ ವಿನುತ ಜಗತ್ಪ್ರಾಣ ಕಲ್ಯಾಣ ಮೂರುತಿ 1 ಮರುತನಂದನ ಹನುಮ | ಪುರಹರರೋಮ ಪರಮಪುರುಷ ಶ್ರೀ ಭೀಮಾ ಕರುಣಸಾಗರ ಜಿತಕಾಮ | ಸದ್ಗುಣ ಭೌಮ ಪರವಾದಿ ಮತವ ನಿರ್ನಾಮ ಗರಿಸುತ ಪಾಲಕ ಜರಿಜ ವಿನಾಶಕ || ದುರಿತ ವಿಮೋಚಕ ಸುರತರು ಭಾರತಿವರ ಮರಿಯದೆ ಪಾಲಿಸೊ ನಿರುತ ಮಮ ಚರಿತ 2 ಧಿಟ್ಟ ಶಾಮಸುಂದರ ವಿಠಲ ಕುವರ ದುಷ್ಟರಾವಣ ಮದಹರ ಜಿಷ್ಣುಪೂರ್ವಜ ವೃಕೋದರ | ರಣರಂಗಶೂರ ಶಿಷ್ಟ ಜನರುದ್ಧಾರ | ನಿಷ್ಟೆಯಿಂದ ಮನಮುಟ್ಟಿ ನಿನ್ನಪದ ಥಟ್ಟನೆ ಪಾಡುವ ಶ್ರೇಷ್ಠ ಸುಜನರೋಳ್ | ಇಟ್ಟು ಸಲಹೊ ಸದಾ ಸೃಷ್ಟಿಮಂಡಲದಿ | ಪುಟ್ಟಗ್ರಾಮ ಬಲ್ಲಟಿಗಿವಾಸ 3
--------------
ಶಾಮಸುಂದರ ವಿಠಲ