ಒಟ್ಟು 15585 ಕಡೆಗಳಲ್ಲಿ , 137 ದಾಸರು , 6785 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಾಂಭವಿ ದಯಮಾಡೆ ಸಿಟ್ಟು ಬಿಡು | ಮುನಿಯದೆ ಎನ್ನ ಕೂಡ |ಕೋಪವು ಮಾಡಬೇಡ ಎನಗಾರ |ಕರುಣ ದೃಷ್ಟಿಲಿ ನೋಡ ಪ ಮೂರ್ತಿ 1 ರಜ ತಮ ಸಂಗದಲಿ ನಾ ಕೆಟ್ಟೆ | ನಿನ್ನ ಸ್ಮರಣೆಯ ಬಿಟ್ಟೆ | ಕಾಮ ಕ್ರೋಧದಲಿ ಬಹು ಸುಟ್ಟೆ |ತಿಳಿಯದು ನಿನ್ನ ಗುಟ್ಟೇ 2 ಮನಸಿಗೆ ತರದಿರೆ ಎನ್ನ ದೋಷ |ಮಾಡೆನ್ನ ದುರಿತವಿನಾಶಾ |ಕಲಿಕಾಲಸುತನಾ ಭವಪಾಶಾ | ಭಜಿಸುವೆ ನಿನ್ನ ಮಹೇಶಾ 3
--------------
ಭೀಮಾಶಂಕರ
ಶಾಂಭವಿ ಶೈಲಜೆ ಅಂಬಿಕೆ ದೇವಿ ಅಂಬುರು ಹಾಸನೆ ಪಾಲಿಸು ಪ್ರೇಮದಿ ಪ ಅಕ್ಷಯ ರಾಕ್ಷಸನಾಶಿನಿ ಯಕ್ಷಸುಪೋಷಿಣೆ 1 ದಿವ್ಯಸ್ವರೂಪೆ ಭವ್ಯಕಲಾಪೆ ಸ್ತವ್ಯ ಸ್ವರೂಪಿಣಿ ಗರ್ವ ವಿದಾರಿಣೆ 2 ಪಾಲಿಸು ಶಂಕರಿ ಗೌರಿ 3 ಪ್ರೇಮದಿ ಸ್ವರ್ನಸುಗಾತ್ರಿ 4 ಧ್ಯಾನವಗೈಯುವೆ ಧೇನುಪುರೀಶೆ 5
--------------
ಬೇಟೆರಾಯ ದೀಕ್ಷಿತರು
ಶಾರದಾವರ ಪ ಸಾರಿ ಸಂನ್ನುತಿಪ್ಪಾ | ವರವ ನೀಯೆನ್ನಪ್ಪಾ ಅ.ಪ ಪರ ಕಷ್ಟ ಪರಿಸೊ | ಇಷ್ಟಾರ್ಥ ಪಾಲಿಸೊ 1 ಭಾರವೊಪ್ಪಿಸಿದೆನು | ಪಾರಗಾಣಿಸಿದನು 2 ಮರೆಯ ಹೊಕ್ಕೆನೂ | ವರಕವಿತ್ವವನ್ನೂ | ಮೆರೆಯಿಸಿ ಇರಿಸೆನ್ನಾ ಸತ್ಕೀರ್ತಿ | ಸ್ಥಿರ ಸದಾನಂದಾರ್ತಿ 3
--------------
ಸದಾನಂದರು
ಶಾರದೆ ನಿನ್ನ ಪಾದವ ಆರಾಧಿಸುವೆವುವಾರಿಜ ಭವಕ್ಕೆ ಸೇರಿಸು ಹರಸು ಪ. ನಿತ್ಯ ಭಜಿಸುವೆವುಸಚ್ಚಿದಾನಂದನ ಚಿತ್ತದಿ ನಿಲ್ಲಿಸ1 ರಂಭೆ ನಮ್ಮಯ ಹೃದಯ ಅಂಬರದೊಳು ನಿಂತುಅಂಬುಜನಾಭನ ತುಂಬಿಸು ಮನದಿ2 ಅರಿಷಿಣ ಕುಂಕುಮ ಬೆರೆಸಿದ ಪರಿಮಳಸರಸದಿ ಕೈ ಕೊಂಡು ಅರಸಿಯರ ಗೆಲಿಸ 3 ಅತ್ತಿ ಹೂವಿನಸೀರೆ ಮುತ್ತಿನಾಭರಣವಅರ್ಥಿಲೆ ಕೈ ಕೊಂಡು ಮಿತ್ರೆಯರ ಗೆಲಿಸ4 ಪತಿ ಸೌಭಾಗ್ಯವ ರಚಿಸಲುಶೀಘ್ರದಿ ತೋರಿಸೆ ಕುಗ್ಗದೆ ನಮಗೆ 5 ಪತಿ ನಿತ್ಯ ರಾಮೇಶನ ತತ್ವವ ರಚಿಸುವೆ ಸತ್ಯವ ನುಡಿಸೆ ಶಾರದಾದೇವಿ6
--------------
ಗಲಗಲಿಅವ್ವನವರು
ಶಾರದೆಯೇ ಕರುಣಾವಾರಿಧಿಯೇ ಪ ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ಅ. ಪ. ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನ ಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ 1 ಪರಮಪಾವನ ಚರಿತ್ರೆ ನೀ ಗತಿ ಜಗಕೆ ಮಿತ್ರೆ 2 ಅಜನ ಪಟ್ಟದ ರಾಣಿ ಅಬುಜ ಪಲ್ಲವ ಪಾಣಿ ವಿಜಯವಿಠ್ಠಲನ ಸೊಸೆ ಮುದ್ದುವಾಣಿಯೆ 3
--------------
ವಿಜಯದಾಸ
ಶಾರದೇ ಮಜ್ಜನನಿಯೆ - ಶಾರದೇ ಪ ಶಾರದೆ ಶರಣೆಂಬೆ ನಿನ್ನ | ಚರಣನೀರಜ ದ್ವಂದ್ವಕೆ ಯನ್ನ | ಆಹಕಾರುಣ್ಯದಲಿ ಹೃದಯ | ವಾರಿಜದೊಳು ಮೆರೆವಮಾರಮಣನ ದಿವ್ಯ | ಮೂರುತಿ ತೋರಿಸು ಅ.ಪ. ವಾಣಿ ನಿಲ್ಲ್ವುದು ಎನ್ನ ವದನಾ | ದಲ್ಲಿನೀ ನುಡಿಸೇ ಹರಿ ಗಾನಾ | ಕರವೀಣೆ ನುಡಿಪಂತೆ ಯೆನ್ನಾ | ದೇಹವೀಣೆ ನುಡಿಸೇ ನೀ ಮುನ್ನಾ | ಅಹವೇಣಿ ಮಾಧವನಾದ | ಶ್ರೀನಿವಾಸನ ಕಾಂಬಜ್ಞಾನಾನು ಸಂಧಾನ | ಮಾಣದೆ ಎನಗೀಯೇ 1 ಅಜ್ಞರೊಳಾಗ್ರಾಣಿ ನಾನು | ಇಂಗಿತಜ್ಞಳೆ ನಾ ಪೇಳ್ವುದೇನೂ | ಆಭಿಜ್ಞರೊಳಿರಿಸುವುದಿನ್ನೂ | ಸರ್‍ವಜ್ಞರ ಮತ ತಿಳಿಸಿನ್ನೂ | ಆಹವಿಜ್ಞಾನ ಸುಸಖ ಬ್ರಹ್ಮ | ಯಜ್ಞಾನೆ ಜಗಕೆಂಬಸುಜ್ಞಾನ ಸುಖವಿತ್ತು | ಪ್ರಾಜ್ಞನ ಕಾಣಿಸೇ 2 ವ್ರತನೇಮ ಉಪವಾಸ ಒಂದೂ | ಮಾಡಿಕೃತಕೃತ್ಯನಲ್ಲಮ್ಮ ಬಂಧೂ | ಕೃತಿಪತಿಯೆ ಎನಗೆ ಗತಿ ಎಂದೂ | ದ್ವಂದ್ವಕೃತಿಗಳ ನರ್ಪಿಪ ಸಂದೂ | ಆಹಹಿತದಿ ತಿಳಿಸಿ ಗುರು | ಗೋವಿಂದ ವಿಠಲನಸುತನಾಗಿ ಮೆರೆವಂಥ | ಚತುರಾಸ್ಯ ಪ್ರಿಯರಾಣಿ 3
--------------
ಗುರುಗೋವಿಂದವಿಠಲರು
ಶಾರದೇಂದುಮುಖಿ ನೀರಜನಯನಳೆ ಬಾರೆಲೆ ಬಾಗಿಲ ತೆಗಿಯಲೆ ಭಾಮೆ ಪ ಯಾರಯ್ಯ ಬಾಗಿಲ ಹೊರಗೆ ನಿಂತಿರುವನು ಜಾರ ಪುರುಷನಂತೆ ತೋರುವೆ ನೀನು ಅ.ಪ ಜಾರನಾದರೆ ನಿಂಗೆ ಜಾರನಲ್ಲವೆ ಮೀನಾ ಕಾರ ಧರಿಸಿರುವ ಹರಿಯಲೆ ಭಾಮೆ ಮೀನನಾದರೇ ಬಲು ಮೌನದಲಿರದಂತೆ ಮಾನವರಂತೆ ಮಾತು ಯಾವುದೋ ನಿನಗೆ 1 ಮಂದರಗಿರಿಯ ಬೆನ್ನಿಂದ ಧರಿಸಿರುವ ಅಂದ ಕೂರ್ಮನಲ್ಲವೇನೆ ಭಾಮೆ ಕೂರ್ಮ ನೀನಾದರೆ ಕೂಪದೊಳಿರುವುದೆ ಧರ್ಮವೆಂಬುವುದನು ಮರೆತೆಯಾ ನೀನು 2 ನೀಲವೇಣಿಯೆ ಕೇಳೆ ಕೋಲರೂಪದಿ ಬಂದು ಕ್ಷಿತಿ ತಂದೆನೆ ಭಾಮೆ ಪೋತರೂಪನೇ ನಿಜ ಧಾತ್ರಿಯ ಭೇದಿಸಿ ಗಾತ್ರ ರಕ್ಷಣೆ ಮಾಡು ಹೋಗೆಲೊ 3 ಸ್ತಂಭ ಭೇದಿಸಿ ರಿಪು ಡಿಂಭನ ಕಾಯಲು ಜಂಭದಿ ಖಳನನು ಕೊಂದೆನೇ ಭಾಮೆ ಸ್ಥಂಭ ಭೇದಿಸಿದ ನಾ ನಂಬುವುದಿಲ್ಲವೊ ಡಂಭದಿ ಬಾಗಿಲು ಭೇದಿಸಿ ಬಾರೊ 4 ವಾಮನನೆಂದು ವಟುರೂಪದಿ ಬಂದು ಸಾರ್ವ ಭೌಮನಲ್ಲಿ ಭೂಮಿ ಬೇಡಿದೆ, ಭಾಮೆ ವಟುರೂಪನಾದರೆ ಕುಟಿಲಾಕ್ಷಿಯರಲಿಂಥ ಚಾಟುವಚನಗಳು ಯಾಕೆಲೊ 5 ದುರುಳನೃಪರ ಪರಿಹರಿಸಿದ ಭೃಗುಮುನಿ ವರಕುಲಜಾತ ಶ್ರೀ ರಾಮನೇ ಭಾಮೆ ಮುನಿವರಸುತನಾಗಿ ಸ್ವನಿಯಮಗಳ ಬಿಟ್ಟು ವನಿತೆಯರಲ್ಲಿಂಥಾ ಸರಸವೆ ನಿನಗೆ 6 ದಶರಥ ನೃಪತಿಯ ಮನೆಯೊಳವತರಿಸಿ ದಶಶಿರರನು ಕೊಂದ ರಾಮನೆ ಭಾಮೆ ಪರ ಕಾಮಿನಿಯರೊಳಿಂಥಾ ಪ್ರೇಮ ಮಾಡುವುದುಂಟೆ ಯೋಚಿಸೊ ನೀನು 7 ನೀರಜಾಕ್ಷಿ ಕೇಳೆ ಜಾರಚೋರತೆಯಲ್ಲಿ ಸಿರಿ ಕೃಷ್ಣನೇ ಭಾಮೆ ಚೋರನಾದ ಮೇಲೆ ಸೇರಿಸುವುದು ಹೇಗೆ ಭಾರಿ ಆಭರಣಗಳಿರುವುವೊ 8 ಮುಗ್ಧೆ ಕೇಳೆ ಇದಬದ್ಧವಲ್ಲದೆ ಅತಿ ಶುದ್ಧನಾದ ಬುದ್ಧರೂಪನೆ ಬುದ್ಧರೂಪನೆ ನಿನ್ನ ನಡತೆಯ ಕೇಳಲು ಶುದ್ಧಿಯು ಲೋಕಪ್ರಸಿದ್ಧವು9 ಸರಸಿಜಮುಖಿ ವರತುರಗವನೇರಿದ ನೃಪರ ಗೆಲ್ವ ಕಲ್ಕಿಯೇ ಭಾಮೆ ದುರುಳ ಜನರು ಇಲ್ಲಿ ಸೇರುವುದಿಲ್ಲವೊ ತರಳೆಯರಲಿ ದುಷ್ಟ ಕಾರ್ಯವೇ ಪೋಗೊ10 ಪರಿ ಸರಸವನಾಡುವ ನಾಮಗಿರಿ ನರಹರಿ ರೂಪ ರಮಾ ರಮೇಶರು ವಿಹರಿಪ ಬಗೆಯನು ಸ್ಮರಿಸುವ ಸುಜನರ ಪರಮಪುರುಷ ಹರಿ ಪೊರೆವುದು ನಿಜ 11
--------------
ವಿದ್ಯಾರತ್ನಾಕರತೀರ್ಥರು
ಶಿಖರಪುರ ದಾಸಾರ್ಯ ವಂಶದಿ ಶಶಿಯಂತೆ ಉದಿಸಿದ ಶ್ರೀನಿವಾಸಾರ್ಯರೆಂಬ ಪ್ರಚಲಿತ ನಾಮದ ದಾಸಾರ್ಯರ ಚರಿತೆ ಗುರುಗಳ ದಯದಿಂದ ಅರಿತಷ್ಟು ಪೇಳುವೆ ಬುಧ ಜನರು ನಿಷ್ಕಪಟ ಭಾವದಿಂದಲಿ ಕೇಳಿ ಸಿರಿಗುರುತಂದೆವರದಗೋಪಾಲವಿಠ್ಠಲನ ಭಕ್ತರೊಳಗಿವರೊಬ್ಬರು ಕಾಣಿರೊ 1 ಶ್ರೀ ರಮೇಶಕೃಷ್ಣನು ತನ್ನ ಪರಿವಾರ ಸಹಿತಾಗಿ ಓಲಗದಿ ಕುಳಿತಿರಲು ಸಾವಧಾನದಿ ತಾನು ಶ್ರೀದೇವಿ ಋಷಿಯಾಜ್ಞೆಯಿಂದಲಿ ಬಂದು ಶಿರಬಾಗಿ ಧರಣಿಯೊಳು ಭಾಗವತರ ಮಹಿಮೆತಿಳಿದು ಸಾಧನೆಗೈಯ್ಯಬೇಕೆಂಬ ಕುತೂಹಲದಿಂದ ದೇವಾಂಶರ ಬಿಡದೆ ಅವತಾರ ಮಾಡಿದ ಪವಿತ್ರವಂಶದಿ ಬಹುಕಾಲ ಪುತ್ರಾಪೇಕ್ಷೆಯಿಂದಲಿ ಶ್ರೀನಿವಾಸನ ಸೇವೆಗೈದ ಮಾತೆ ಶ್ರೀ ರುಕ್ಮಿಣೀದೇವಿ ಪಿತ ರಾಘವೇಂದ್ರರ ಉದರದಿಂದಲಿ ಜನಿಸಿ ಬಾಲತ್ವ ಕೆಲಕಾಲ ಕಳೆದು ತದನಂತರದಿ ಭೂವೈಕುಂಠಪುರದಲ್ಲಿ ದ್ವಿಜತ್ವವನೆ ಪಡೆದು ಲೌಕಿಕ ವಿದ್ಯೆಗಳನೆಲ್ಲ ಕಲಿಸಿ ಬಳಿಕ ಸಂಗೀತ ವಿದ್ಯೆಯ ಸಾಧನಕೆ ಮಿಗಿಲೆಂದು ಸಾಧಿಸಿ ಬಿಡದೆಲೆ ಪ್ರಾವೀಣ್ಯತೆಯ ಪಡೆದು ಅತಿ ಗೌಪ್ಯದಿಂದಲಿ ಶಿರಿಗುರು ತಂದೆವರದಗೋಪಾಲವಿಠ್ಠಲನ ಸ್ತುತಿಸಿ ಮನದಿ ಅತಿ ಹಿಗ್ಗುತಲಿರ್ದ ಬಗೆ ಕೇಳಿ 2 ಗುರು ಕಾಳಿಮರ್ದನ ಕೃಷ್ಣಾಖ್ಯದಾಸರ ಸಹವಾಸದಿಂದಲಿ ಲೌಕಿಕದಿ ಹುರುಳಿಲ್ಲವೆಂಬ ಮರ್ಮವ ತಿಳಿದು ಮನದಿ ವಿಚಾರಿಸುತಿರಲು ಕಾಲವಶದ ಸೋತ್ತುಮ ರಾಜ್ಯದಿ ಸ್ವರೂಪ ಕ್ರಿಯೆಗಳಾಚರಣೆಗೆ ಮನಮಾಡುತಲಿಹ ಓರ್ವ ದ್ವಿಜನ ಮರ್ಮವ ತಿಳಿಯದೆ ನಿಂದಿಸುವ ಮನವ ಮಾಡೆ ಶ್ರೀವದ್ವಿಜಯರಾಯರುತಮ್ಮ ವಂಶಜನಿವನೆಂದು ಶ್ರೀಮತ್ ರಾಘವೇಂದ್ರ ಮುನಿಗೆ ಬಹು ವಿಧ ಪ್ರಾರ್ಥಿಸಿ ಫಲ ಮಂತ್ರಾಕ್ಷತೆಯನಿತ್ತು ಧ್ಯಾನಕ್ಕೆ ತೊಡಗಿಸಿ ಶ್ರೀಮದ್ ಭಾವಿ ಸಮೀರ ಪದರಜವೇ ಬಹು ಭಾಗ್ಯವೆಂದು ಧೇನಿಪ ಭಕ್ತವರ್ಯರಾದ ತಂದೆವರದಗೋಪಾಲ ವಿಠಲದಾಸರಾಯರ ಪದಪದ್ಮಂಗಳಿಗೊಪ್ಪಿಸಿ ಅಪರಾಧಗಳನ್ನೆಲ್ಲ ದೃಷ್ಟಿ ಮಾತ್ರದಿ ದಹಿಸಿ ಫಣಿಗೆ ಮೃತ್ತಿಕೆ ತಡೆದು ಗುರುಗಳನೆ ಅರುಹಿ ನಿಜ ಮಾರ್ಗದಿಂದ ಶಿರಿಗುರುತಂದೆವರದಗೋಪಾಲವಿಠ್ಠಲನ ಕರುಣಿ ಪಡೆವ ಮಾರ್ಗವನೆ ಪಿಡಿದರು ಜವದಿ 3 ಭವದೊಳು ಬಳಲುವ ಭೌತಿಕ ಜೀವಿಗಳ ಬಹು ಬೇಗದಿಂದಲಿ ಉದ್ಧರಿಸಲೋಸುಗ ಬೋಧಮುನಿ ಕೃತ ಗ್ರಂಥಸಾರವ ಬೋಧಿಪ ಮುನಿಗಳ ದರ್ಶನಗೋಸುಗ ಪೊರಟ ಸಮಯದಲಿ ಶ್ರೀಗುರು ವಾದಿರಾಜ ಮುನಿವರ್ಯ ತನ್ನಯ ಪುತ್ರನ ಮೊರೆಕೇಳಿ ಶ್ರೀಲಕ್ಷ್ಮೀಹಯವದನನ ಮೂರ್ತಿಯ ಪ್ರಾರ್ಥಿಸೆ ರೌಪ್ಯಪೀಠ ಪುರವಾಸಿ ಶ್ರೀಕೃಷ್ಣನ ಕರದಿ ಶೋಭಿಪ ವಸ್ತುವಿನ ಪುರದಿ ಸ್ವಪ್ನದಿ ಬಂದು ತಂದೆವರದವಿಠ್ಠಲನೆಂಬ ಅಂಕಿತವನಿತ್ತು ಅದೇ ಸುಂದರ ರೂಪವ ತೋರಿ ನೈಜಗುರುಗಳ ದ್ವಾರಾ ಭಜಿಸೆಂದು ಬೋಧಿಸಿದ ನಂತರದಿ ಬಹು ಸಂಭ್ರಮದಿಂದಲಿ ಉಬ್ಬುಬ್ಬಿ ತನ್ನ ತನುಮನಧನ ಮನೆ ಮಕ್ಕಳನೆಲ್ಲ ನಿನ್ನ ಚರಣಾಲಯಕೆ ಅರ್ಪಿತವೆಂದು ಅರ್ಪಿಸಿ ಗುರುಗಳ ದ್ವಾರಾ ಸಿರಿಗುರು ತಂದೆವರದಗೋಪಾಲಗೆ ಸದಾ ಧೇನಿಸುತ ಮೈಮರೆತಿರ್ದನೀ ದಾಸವರ್ಯ 4 ಪಾದ ಕರವ ಮುಗಿದು ಸ್ವಾಮಿ ಶ್ರೀಗುರುರಾಜಾತ್ವದ್ದಾಸವರ್ಗಕೆಸೇರಿದ ಬಾಲಕ ದಾಸನೀತಾ ಕರುಣದಿಂದಲಿ ಜವದಿ ಕರುಣ ಕಟಾಕ್ಷದಿ ಈಕ್ಷಿಸಿ ಉದ್ಧರಿಸಬೇಕೆಂದು ಬಹುವಿಧ ಪ್ರಾರ್ಥಿಸಲು ಪರಮ ಕರುಣಾನಿಧಿ ಋಜುವರ್ಯ ಶ್ರೀ ವಾದಿರಾಜಾರ್ಯ ತನ್ನ ಹಂಸರೂಪಿಣಿ ಶ್ರೀ ಭಾವೀ ಭಾರತಿಯಿಂದೊಡಗೂಡಿ ಬಹು ಆನಂದದಿಂದಲಿ ಪಂಚ ಬೃಂದಾವನ ರೂಪದಿ ಮೆರೆವ ತನ್ನಯ ರೂಪವ ತೋರಿ ತುತಿಸಿಕೊಂಡು ಬಹು ಆನಂದಭರಿತರಾಗಿ ಬಹು ಬೇಗ ಸಾಧಿಸುವ ಗೈಸಲೋಸುಗ ಶಿರಿಗುರು ತಂದೆವರದಗೋಪಲವಿಠಲನ ಪ್ರಾರ್ಥಿಸಿ ಸಕಲ ಉತ್ಸವಗಳ ತೋರಿ ಶ್ರೀಮದ್ವಿಶ್ವೇಂದ್ರರ ದ್ವಾರಾ ತವ ಪಾದರೇಣು ಫಲ ಮಂತ್ರಾಕ್ಷತೆಯನಿತ್ತು ಬಗೆಯನೆಂತು ವರ್ಣಿಸಲಿ ಪಾಮರ ನರಾಧಮನು ನಾನು 5 ಕೇವಲ ಲೌಕಿಕ ಜನರಂತೆ ಆಧುನಿಕ ಪದ್ಧತಿಗನುಸರಿಸಿ ದಿನಚರ್ಯವನೆ ತೋರುತಲಿ ಭಾರತೀಶನ ಪ್ರಿಯವಾಗಿಹ ಕರ್ಮಗಳನೊಂದನೂ ಬಿಡದೆ ತಿಳಿದು ಮನದಿ ಮಾಡುತಲಿ ಮಂಕುಗಳಿಗೆ ಮೋಹಗೊಳಿಸಿ ಮಮಕಾರ ರಹಿತನಾಗಿ ದಿನಾಚರಣೆಗೈದು ಶ್ರೀ ಶುಕಮುನಿ ಆವೇಶಯುತರಾದ ಸದ್ವಂಶಜಾತ ಶ್ರೀಕೃಷ್ಣನ ಸೇವೆಗೋಸುಗ ಅವತರಿಸಿದ ವಾಯುದೇವ ಪೆಸರಿನಿಂದಲಿ ಶೋಭಿಪ ಕುಲಪುರೋಹಿತರ ಬಳಿಯಲಿ ಬಹು ವಿನಯದಿಂದಲಿ ಶ್ರೀ ನಿಜತತ್ವಗಳ ಮರ್ಮಗಳ ಕೇಳಿಕೊಂಡು ಮನದಿ ವಿಚಾರಿಸಿ ದೃಢೀಕರಣ ಪೂರ್ವಕ ಪಕ್ವವಾದ ಮನದಿಂದಲಿ ಶ್ರೀಶಶ್ರೀ ಮಧ್ವಮುನಿ ಶ್ರೀಗುರುಗಳ ಕರಣವನೆ ಕ್ಷಣಕ್ಷಣಕೆ ಬಿಡದೆ ಸ್ಮರಿಸುತಾನಂದ ಭಾಷ್ಯೆಗಳ ಸುರಿಸುತ ಭಾಗವತರ ಸಮ್ಮೇಳನದಿ ತತ್ವಗಳ ವಿಚಾರಿಸುತ ಶ್ರೀ ದಾಸಾರ್ಯರಾ ಉಕ್ತಿಗಳ ಆಧಾರವನೆ ಪೇಳುತಲಿ ಮನದಿ ಗುರುಗಳ ಸನ್ನಿಧಿಗೆ ಅರ್ಪಿಸಿ ತತ್ವದ್ವಾರ ತಿಳಿದುಪೂರ್ಣ ಸಾಧನವಗೈದು ಶ್ರೀ ಪ್ರಲ್ಹಾದ ಬಲಿ ಮಾಂಧಾತ ಕರಿರಾಜ ಶಿಬಿಮೊದಲಾದ ಚಕ್ರವರ್ತಿಗಳಲಿ ಬಹುಬೇಗ ಸಾಧನವ ಗೈದರು ಇವರಾರೊ ನಾ ಕಾಣೆ ಶಿರಿ ಗುರುತಂದೆವರದ-ಗೋಪಾಲವಿಠಲನ ಆಣೆ 6 ಸತಿ ವತ್ಸರ ವತ್ಸರ ಸತಿ ಮಾಯಾ ಶುಭ ದಿನದಿ ಸಂಖ್ಯಾ ಕಾಲದಿ ಪ್ರಥಮ ಯಾಮವೆಮಿಗಿಲೆಂದು ಮನದಿ ಲಯ ಚಿಂತನೆಯ ಬಿಡದೆ ಮಾಡುತದೇವತೆಗಳ ದುಂದುಭಿ ವಾದ್ಯಗಾಯನಗಳ ರಭಸದಿಶ್ರೀ ಲಕುಮಿ ದೇವಿಯ ಸೌಮ್ಯ ದುರ್ಗಾ ರೂಪಕೆನಮೋ ನಮೋ ಎಂದು ಶಿರಿಗುರುತಂದೆವರದಗೋಪಾಲ ವಿಠಲನಪುರಕೆ ಪುಷ್ಪಕ ವಿಮಾನ ರೋಹಿಣಿಯನೆ ಮಾಡಿನಲಿನಲಿದಾಡುವ ತೆರಳಿ ಪೋದಾರಿವರು 7 ಜತೆ :ಸತಿದೇವಿ ರಮಣನ ಭಕ್ತನೇ ನಿನ್ನಯಸುಖತನವೆಂದಿಗೂ ಕೊಡಲೆಂದು ಬೇಡಿಕೊಂಬೆಸಿರಿಗುರುತಂದೆವರದಗೋಪಾಲ ವಿಠಲನಿಗೆ 8
--------------
ಸಿರಿಗುರುತಂದೆವರದವಿಠಲರು
ಶಿವ ಕರುಣಿಸಯ್ಯ ಚಂದ್ರಶೇಖರ ನೀನೆನ್ನೊಳೊಲಿದು ಪ ತಾಪ ಹರಣ ಮಾಡು ನಿನ್ನ ದಿವ್ಯಚರಣಗಳಿಗೆ ನಮಿಪೆನುರಗಾಭರಣ ಶರಣು ಶರಣು ಶರಣು ಅ.ಪ. ಕಾಳಭೈರವ ಶಂಭು ಶಂಕರ ಗಿರಿಜೆಯಾಣ್ಮಕೇಳು ಕೇಳು ನಿನ್ನ ಕಿಂಕರಹೂಳಿ ಷಡ್ರಿಪುಗಳನು ಮನದಲಿಊಳಿ ನಿಜಜ್ಞಾನವನು ಸಜ್ಜನರೋಳಿಯಲಿ ನಿಲಿಸುತ್ತ ನಿತ್ಯದಿಬಾಳಿ ತಾಳಿ ಎನುವಂತೆ 1 ನಂಟನಯ್ಯ ಭಕ್ತ ಜನಕೆ ಇನ್ನು ಮಿತಿಯುಂಟೆ ನಿನ್ನಯ ಕರುಣಲಹರಿಂಗೆಎಂಟು ದಿಕ್ಕನು ಸುಡುವ ವಿಷವನುಕಂಠದಲಿ ಧರಿಸಿ ಜಗತ್ತಿನಕಂಟಕವನು ಪರಿಹರಿಸಿದಂಥಬಂಟ ನೀನೈ ಮಹಾದೇವಾ 2 ಮೂರು ಊರುಗಳನು ಸಂಹಾರಾಮಾಡಿ ಉಳಿಸಿದಿಘೋರ ಸಂಕಟದಿಂದ ಜಗಪೂರಸೂರಿ ಬೊಮ್ಮನ ಮತ್ತೆ ಗದುಗಿನವೀರನಾರಾಯಣನ ಕೂಡಿನಾರಿ ಸತಿಯನಸೂಯಳನ್ನುದ್ಧಾರ ಮಾಡಿದ ರೀತಿಯಲ್ಲಿ 3
--------------
ವೀರನಾರಾಯಣ
ಶಿವ ಮೋಹಿನಿ ವನಮಾಲಿನಿ ಲಲನಾಮಣೀ ಜನನೀ ಪ ಜಯತು ಜಯತು ಜಯತು ಅ.ಪ ಅಂಬಾ ಶಶಿಬಿಂಬಾ ಜಗದಂಬಾ ಮೃದುಳಾಂಬಾ ಲಂಬೋನ್ನತ ಕುಂಭಸ್ಥಲೇ ಶುಂಭಾಸುರ ಡಿಂಬಾ 1 ಸ್ವರ್ಣಾಂಬಿಕೆ ಸ್ವರ್ಣೇಶ್ವರಿ ಸ್ವರ್ಣೋಪಮವದನೆ ಸ್ವರ್ಣಗೌರಿ ಸ್ವರ್ಣಶಿವೆ ಸ್ವರ್ಣಪ್ರಿಯೆ ದಯಾಕರೆ2 ಮಂಗಳಕರ ಮಾಂಗಿರೀಶ ರಂಗಾನುಜೆ ಲಲಿತೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶಿವ ಶಿವ ಶಿವ ಎನ್ನಿರೊ - ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ಪ ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ - ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ 1 ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ - ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ 2 ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ3 ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ - ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 4 ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 5 ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ಎನ್ನಿರೊ6 ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ಎನ್ನಿರೊ7
--------------
ಕನಕದಾಸ
ಶಿವ-ಪಾರ್ವತಿ ಅಗಜೆ ನಿನ್ನೊಗತನಕೆ ಜಗ ನಗುವುದೇ ನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ ಪ ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡ ತೊಟ್ಟ ತೊಗಲುಡುಗೆ ತಲೆಯೋಡು ಕೈಯ ಭೂತೇಶ ಬಲು ಸಿಟ್ಟಿನವನಂಗಸಂಗ ಬಯಸಬಹುದೆ 1 ಆರುಮೊಗದವನೊಬ್ಬ ಆರ್ತಜನು ಮೊಲೆಪಾಲು ಕಾರಿ ಕಡುಮುನಿದು ಕಂಡರೆ ಸೇರರು ಊರಿಗುಪಕಾರಿ ಒಡಲಹರಕ ಗಜಮುಖನು ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ 2 ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ ಭುವನದೊಳಗಾವಲ್ಲಿ ಕಾಣೆನಿನ್ನು ಕವಿಜನಗಳೇನೆಂದು ಬಣ್ಣಿಸಿದರೊ ತಿಳಿಯೆ ಭವದೂರ ಶ್ರೀದವಿಠಲರಾಯ ಬಲ್ಲ 3
--------------
ಶ್ರೀದವಿಠಲರು
ಶಿವಕನ್ಯೇ ಗುಣರನ್ನೇ ಪ ತವಪದ ಪದುಮವ | ಜವದಲೆ ತೋರಿಸುಅ.ಪ. ಕಾಲಕೆ ಮಾನಿಯೆ | ಓಲೈಸುವೆ ಪದಕೀಲಾಲಜವನು | ಪಾಲಿಸು ಎನಗೇ 1 ಪವನ ಮತಾನುಗ | ರವನೆಂದೆನಿಪಗೆಭವ ಪರಿಹಾರಿಕ | ನವ ಭಕುತಿಪ್ರದೆ 2 ಮುಕುತಿಗೆ ಮಾರ್ಗವ | ಭಕುತಿಗೆ ಆಕರೆವ್ಯಕುತಿಯಗೈ ಹರಿ | ಭಕುತಿಗಳೆನ್ನಲಿ 3 ಸ್ತವ ಪ್ರಿಯ ನರಹರಿ | ಸ್ತವನವ ಗೈಯ್ಯುವಹವಣೆಯ ತೋರಿಸು | ಭವನಿಗೆ ಜನನಿಯೆ 4 ಗೋವ ಕಾವ ಗುರು | ಗೋವಿಂದ ವಿಠಲನಭಾವದಿ ತೋರಿಸು | ನೀ ಒಲಿದೆನಗೆ 5
--------------
ಗುರುಗೋವಿಂದವಿಠಲರು
ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು ಪ ಶಿವ ಶಿವ ಎಂಬೊ ಎರಡಕ್ಷರವು ಭವರೋಗಕೆ ಇದು ಮೂತೌಷಧವು ಜವನಾಳ್ಗಳ ಭಯ ಲವಲೇಶವಿಲ್ಲವು ಇದು ಸತ್ಯವು 1 ಪಾತಕ ಪಹರಿನಿತು ಪೋತ ಮಾರ್ಕಂಡೇಯಗಾಯುವ ನೀಡಿತು ಭೂತೇಶನ ಪದವಾರಿಜ ಧ್ಯಾನದಿ ಧನ್ಯರಾಗಿರೋ 2 ಹರನ ದಿವ್ಯಪದವಾರಿಜ ಧ್ಯಾನ ಪರ ಚರ ಮುಕುತಿ ಪಥಕೆ ಸೋಪಾನ 3
--------------
ಶಾಮಸುಂದರ ವಿಠಲ
ಶಿವನಾ ಭವನಾ ಮನವೇ ನೀನೆನೆ ಗಿರಿಜಾಧವನಾ ಪ ತಿರ್ಪ ಕೈಲಾಸ ಮಂದಿರನಾ | ಕಂ ದರ್ಪನ ಗರ್ವದ ದರ್ಪವ ಮುರಿದಿಹ | ಕರ್ಪುರ ಗೌರವನಾ |1 ಕೆಂಜೆಡೆಯೊಳು ನಂದಿಷನಿಯಳಿಟ್ಟಿ ಹನಾ | ಸಲೆ| ಕುಂಜರ ಚರ್ಮವ ನುಟ್ಟಿಹನಾ | ತೇಜ | ಪುಂಜರ - ಸಂಜಯ ಕಂಜ ಬಾಂಧವ ಶಶಿ ರಂಜಿತ ಮೌಳೀಯನಾ || 2 ಇಹಪರ ದಾಯಕ ಚಿನುಮಯನಾ | ಗುರು ಭವ | ಮಹಿಮೆಯ ಹೊಗುಳುವನಾ ||3
--------------
ಕಾಖಂಡಕಿ ಶ್ರೀ ಕೃಷ್ಣದಾಸರು