ಒಟ್ಟು 24701 ಕಡೆಗಳಲ್ಲಿ , 138 ದಾಸರು , 9090 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೆ ಸಖಿ ಪೋಗಿ ರಾಸ ಕ್ರೀಡೆಯಾಡುವ ಪ ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ಅ.ಪ ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು ಮಾಡಿದ್ದಾಯಿತು ಮೂರು ನಿಮಿಷ ಅವನ ಮರೆಯಲಾಗದಾಯಿತು ಬೀರುತಿರುವ ಮೋಹಜಾಲ ಸಡಲದಾಯಿತು 1 ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು ಯಾವನಾದರೇನು ಇವನ ಕ್ಷಣವು ಕಾಣದೆ ಜೀವನ ಕಳೆಯುವುದೆ ದೊಡ್ಡ ಭಾರವಾಯಿತು 2 ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ ಬಹಳ ನಾಚುವ ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ಮಲಯ ಮಾರುತ ತಾ ತಲೆಯನಾಡುವ 3 ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ ಬಾಧಿಸುತಿಹ ಭವದ ತಾಪವಡಗಿದಂತಿದೆ ಮಾದರಿಫಲ ರಾಸಕ್ರೀಡೆ ತೋರುವಂತಿದೆ 4 ಸಕಲ ಲೋಕನಾಥನೀತನೆಂದು ತಿಳಿಯಿತು ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ಭಕುತಿ ಹರಿದು ಎನ್ನ ವiನ ಪ್ರಸನ್ನವಾಯಿತು 5
--------------
ವಿದ್ಯಾಪ್ರಸನ್ನತೀರ್ಥರು
ಬಾರೆ ಸಖಿ ಪೋಗೋಣ ಬಾಯೆದ್ದು ಪೋಗೋಣ ಬಾ ಪ ಶೆಳೆಯ ಬ್ಯಾಡ ಸೀರೆನುಡುವೆ ಕರವಬಿಡೊ ಕೈಯ್ಯ ಮುಗಿವೆ ಪ್ರಾಣ ಪ್ರೀಯಾ ಅ.ಪ. ಚಪಲಮುಖಿಯೆ ಚಪಲವಾಗಿದೆ ನಿಲ್ಲದೆ ಹೋಗೋಣ ಪ್ರಿಯಚಾಪಲ್ಯರಹಿತ ಪೂರ್ಣ ಚಲ್ವ ನಿಲ್ಲೋ ನಿಲ್ಲೋ ನಿಲ್ಲದೇ ಪ್ರಿಯಾ1 ಮದನ ಬಾಣಕೆ ಬೆದರಿ ಬಂದೆ ಕುದುರೆನೇರಿ ಬೇಗ ಮದನನಯ್ಯ ಬದರಿವಾಸಿ ಪದರಬಿಡೊ ಪ್ರಿಯಾ2 ದುಂಡುಮುಖಿಯೆ ಗುಂಡುಕುಚವ ಕಂಡು ಮನವ ನಿಲ್ಲದು ಬೇಗ ಕೋದಂಡಪಾಣಿ ತಂದೆವರದಗೋಪಾಲವಿಠ್ಠಲದಂಡ ಪುರುಷ 3
--------------
ತಂದೆವರದಗೋಪಾಲವಿಠಲರು
ಬಾರೆ ಸಖಿ ವಾರಿಜ ಮುಖಿ ಬಾರೆ ಬಾರೆ ಸಖಿ ಬಾರೆ ಕೋಪಿಸೋರೆ ಹೀಗೆ ಯಾರುಪದೇಶವುಮುರಾರಿಯ ಮುಖ್ಯ ಬಲರಾಮನ ಸಖಿಯೆಬಾರೆ ಬಾರೆ ವಾರಿಜ ಮುಖಿಯೆ ಪ. ಪುಟ್ಟ ಸುಭದ್ರಾ ನಿನಗೆ ಸಿಟ್ಯಾಕ ಒದಗಿತಇಟ್ಟ ಮುದ್ರಿಗಳು ತಡವಾಗಿಇಟ್ಟ ಮುದ್ರಿಗಳು ತಡವಾಗಿ ಮುಯ್ಯವಇಷ್ಟು ಹೊತ್ತನಾಗೆ ತರಬಹುದೆ 1 ಕೇಳೆ ಸುಭದ್ರಾ ಮುಯ್ಯಾ ಕಾಳ ರಾತ್ರಿಲೆ ತಂದುಭಾಳ ಕೋಪಿಸುವ ಬಗಿ ಹೇಳಭಾಳ ಕೋಪಿಸುವ ಬಗಿ ಹೇಳ ಮುತ್ತಿನ ತೋಳುತಾಯಿತವ ಕೊಡುವೆನ 2 ಧಿಟ್ಟ ಸುಭದ್ರಾ ಮುಯ್ಯಾ ಇಷ್ಟೊತ್ತ್ತಿನಾಗ ತಂದು ಸಿಟ್ಟು ಮಾಡಿದ ಬಗಿ ಹೇಳಸಿಟ್ಟು ಮಾಡಿದ ಬಗಿ ಹೇಳ ಮುತ್ತಿನ ಕಟ್ಟಾಣಿ ಕೊಡುವೆ ನಿನಗಿನ್ನು3 ಲೋಕನಾಯಕಿ ಕೃಷ್ಣ್ಣಿ ಕೋಪವ್ಯಾ ಕೊದಗಿತಹಾಕಿದ ಮುದ್ರಿ ತಡವಾಗಿ ಹಾಕಿದ ಮುದ್ರಿ ತಡವಾಗಿ ಮುಯ್ಯವ ಈ ಕಾಲದೊಳಗೆ ತರಬಹುದೆ4 ಕೆಂಡದಂಥವಳ ಗುಣ ಕಂಡೇವ ಸಭೆಯೊಳು ಚಂಡಿತನವನೆ ಬಿಡು ಕೃಷ್ಣಿಚಂಡಿತನವನೆ ಬಿಡು ಕೃಷ್ಣಿ ಮುತ್ತಿನ ದಂಡೆ ಕೊಡುವೆ ಬಿಡುಕೋಪ5 ಬೆಂಕಿಯಂಥವಳ ಗುಣ ಶಕ್ಯವೆ ವರ್ಣಿಸಲು ಶಂಕರಾದ್ಯರಿಗೆ ವಶವಲ್ಲಶಂಕರಾದ್ಯರಿಗೆ ವಶವಲ್ಲ ಮುತ್ತಿನ ವಂಕಿಯ ಕೊಡುವೆ ನಿನಗಿನ್ನು 6 ಸತಿಯು ಸುಭದ್ರೆ ನೀನು ಯತಿಯ ಬೆನ್ಹತ್ತಿದಾಗ ಅತಿಭೀತಿ ಎಲ್ಲಿ ಅಡಗಿತ್ತಅತಿಭೀತಿ ಎಲ್ಲಿ ಅಡಗಿತ್ತ ನಾವುನಿನ್ನ ಪತಿವ್ರತ ತನವ ಅರಿವೆನೆ7 ಮಿತ್ರೆಯರು ನಾವೆಲ್ಲ ತುಪ್ಪಅನ್ನವನುಂಡುಪುತ್ರರ ಸಹಿತ ಸುಖನಿದ್ರೆಪುತ್ರರ ಸಹಿತ ಸುಖನಿದ್ರೆ ಗೈವಾಗ ಮತ್ತ ನೀ ಮುಯ್ಯ ತರಬಹುದೆ8 ಲೋಲ ರಾಮೇಶನು ಹಾಲು ಅನ್ನವನುಂಡುಬಾಲರ ಸಹಿತ ಸುಖನಿದ್ರೆಬಾಲರ ಸಹಿತ ಸುಖನಿದ್ರೆ ಗೈವಾಗಮ್ಯಾಲೆ ಮುಯ್ಯ ತರಬಹುದೆ9
--------------
ಗಲಗಲಿಅವ್ವನವರು
ಬಾರೆಂದು ಹಸೆಗೆ ಕರೆವೆÀನು ಕ್ಷೀರಾಬ್ಧಿಶಯನನೆ ಸಾರಸನಯನನೇ ಪ. ಕ್ಷೀರಾಬ್ಧಿಜಾವರ ಮೇರುಗಂಭೀರನೆ ನೀರಜಭವಪಿತ ಮಾರಹರಾರ್ಚಿತ ಚಾರುನೀರದಗಾತ್ರ ಪರಮ ಪವಿತ್ರ ಅ.ಪ ಧರಣೀಸುರರ ಮೊರೆಗಳನಾಲಿಸಿ ಧರೆಯೊಳಗವತರಿಸಿ ನರರೂಪಧರಿಸಿ ಧರಣಿಪ ದಶರಥತರಳನೆಂದೆನಿಸಿ ಧರೆಯ ಭಾರವನಿಳಿಸಿ ಕರುಣಿಸು ಮನವೆರಸಿ 1 ಅಸುರೆ ತಾಟಕಿಯ ಅಸುವನಳಿದು ದುಷ್ಟ ನಿಶಿಚರರನು ಸದೆದು ಅನುಜನೊಡಗೊಂಡು ಕುಶಿಕನಂದನನ ಕ್ರತುವನು ತಾ ಕಾಯ್ದು ಅಸಮ ಶೂರನೆನಿಸಿ ಅಮರರ ಮನತಣಿಸಿ 2 ಶಿಲೆಯ ಶಾಪವಕಳೆದು ಲಲನೆಯ ಪೂಜೆಗೊಲಿದು ಬಲುಹಿನಿಂದಲೆ ಬಂದು ಹರಧನು ಮುರಿದು ಲಲನೆ ಜಾನಕಿಯ ನಲವಿನಿಂ ಕೈಪಿಡಿದು ಬಲುಗರ್ವಿತ ಭಾರ್ಗವ ಮದಮುರಿದೆ ಸಲಹೆನ್ನ 3 ಈಶವಿನುತ ಶ್ರೀ ಶೇಷಾಚಲ ನಿಲಯನೆ ದಾಸರಮನದೊಳು ವಾಸವಾಗಿಹನೇ ವಾಸವಾದ್ಯಮರ ಪೋಷಕನೆನಿಸಿಹನೆ ಭಾಸುರವದನನೆ ಶ್ರೀಸತೀಸದನನೆ ನೀಂ ನಲಿದು 4
--------------
ನಂಜನಗೂಡು ತಿರುಮಲಾಂಬಾ
ಬಾರೈ ನಂದನ ಕಂದನೆ ನೀರಜನೇತ್ರ ಪ ನೀಲಮಣಿ ಮಂಟಪದ ಮೇಲೆ ಮಾಣಿಕ್ಯಕಲಶ ಜಾಲು ಜಲ್ಲರಿ ರತ್ನ ನೀಲಪೀಠಕೆ ನೀ 1 ಮುತ್ತಿನಾಕ್ಷತೆಗಳ ನೆತ್ತಿಯಲಿಡುವೋಲು ಸುತ್ತಭೂಸುರರೆಲ್ಲರಸುತ್ತ ಬಾರೆನ್ನುವರು 2 ಶೃಂಗಾರಶೀಲನೆ ಸಂಗೀತಲೋಲನೆ ರಂಗನಾಯಕಿಸಹಿತ ತುಂಗಪೀಠಕೆ ನೀ 3 ಅಂಗನೆಯರು ಕೂಡಿ ಮಂಗಳಗಾನ ಪಾಡಿ ರಂಗ ಬಾರೆನ್ನುವರು ಮಾಂಗಿರಿನಿಲಯ4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾರೈ ನಿನ್ನ ಮುದ್ದು ಮೊಗವನು ತೋರೈ ಯದುಕುತಿಲಕ ಎಂ-ದೋರಂತೆ ಮುದ್ದಿಸಿ ಯಶೋದೆÉ ಕುಮಾರನ ಬಾಯೆಂದಳೈ ಪ. ಥೈ ಥೈ ಥೈ ಥೈ ಥೈಯಿಥೈಯಿ ಥೈಯಿ ಥೈಯಿ ಥೈಯಿಥೈ ಥೈ ಥೈಯೆಂದು ಕೃಷ್ಣನ ಪಾಡಿದಳೆ1 ಕೃಷ್ಣ ನಿನ್ನ ಮಕ್ಕಳಾಟಿಕೆ ಕಷ್ಟರಿಗೆ ಕಾಲಕೂಟವಾಯಿತುದುಷ್ಟದೈತ್ಯ ಮತ್ತ ಮಾತಂಗಗಳಟ್ಟುವ ಸಿಂಹದ ಮರಿಯೆ 2 ದೀಪ್ತೋಷ್ಣ ಕಿರಣನು ಬರೆ ಕತ್ತಲೆಯತ್ತಲೆ ಪೋಪುದುಮತ್ತಿತ್ತ ಸುತ್ತಮುತ್ತಸುಳಿವುದೆ ಚಿತ್ತಜನ ಪೆತ್ತ ಹರಿಯೆ 3 ಚೆಂದದ ನಿನ್ನ ಚೆಲ್ವ ಸಿರಿಮೊಗದಂದವನು ತನಗಿಲ್ಲವೆಂದುಕಂದಿಕುಂದಿದಳಿಂದಿರೆ ಮರುಳಾಗಿ ಕಂದ ನಿನ್ನ ಹೊಂದಿ ನಿಂದಳೊ 4 ಇಂಥ ಸಿರಿಹಯವದನ ನಿನ್ನಂಥದೇವನು ದಾವನುಪಂಥವೇ ನಿನ್ನಗೂಡೆ ಗುಣಮಣಿತಿಂತಿಣಿಯಂತೆ ನೀನು 5
--------------
ವಾದಿರಾಜ
ಬಾರೈಯ್ಯಾ ಗೋವಿಂದಾ | ಕೀರ್ತನೆಗೆ ಮುಕುಂದಾ | ಬೀರುತ ನಿಮ್ಮ ಮಹಿಮೆ ಸ್ವಾನಂದ ಪುರದಿಂದಾ ಪ ಕೋಂಡಾಡುವಂತೆ ಕೀರ್ತಿ ನೀಡಬೇಕು ನಿಜಸ್ಪೂರ್ತಿ | ಮಂಡೀಸಿ ಭಕ್ತರಂಗಾ ಹೇಳುವೆ ನಿಮ್ಮ ವಾರ್ತೆ 1 ವೈಕುಂಠ ಯೋಗಿವರಿಯಾ ಸ್ಥಳಸುರ ಮುನಿರಾಯಾ | ನೀ ಕರಿಸಿ ಪಾಡುವಲ್ಲಿ ಇಹನೆಂದೆ ನಿಶ್ಚಯಾ 2 ಕಂದನ ತೊದಲು ಮಾತಾ ಕೇಳಿ ಹಿಗ್ಗುವಂತೆ ಮಾತಾ | ತಂದೆ ಮಹಿಪತಿ - ಸ್ವಾಮಿ ಬಲವಾಗೋ ಶ್ರೀ ಕಾಂತಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೊ ನಂದನಂದನ ಅರವಿಂದಲೋಚನ ಪ ಅರವಿಂದಲೋಚನ ಭವಬಂಧ ಮೋಚನ ಅ.ಪ ದುರುಳ ದುರ್ಯೋಧನನ ಅನುಜ ಕರದಿ ಎನ್ನ ಸೀರೆ ಪಿಡಿದು ಭರದಿ ಎಳೆಯುವ 1 ಅರಿಯದಂತೆ ಇರುವರೆಲ್ಲ ಕಿರಿಯ ಜನಗಳು ಹರಿಯೆ ಕರುಣಾನಿಧಿಯೇ ಎನ್ನ ಮೊರೆಯ ಕೇಳಲೊ 2 ಕಾಮ ಜನಕ ನಾಮಗಿರಿ ಶ್ರೀ ಸ್ವಾಮಿ ನರಹರೆ ಹೇಮಕಶಿಪು ತನುಜನಂತೆ ಪ್ರೇಮದಿ ಸಲಹೆಲೊ 3
--------------
ವಿದ್ಯಾರತ್ನಾಕರತೀರ್ಥರು
ಬಾರೊ ನೀ ಭಕುತರ ಸುರಧೇನು ಪ ಕರಗಳ ಮುಗಿವೆನು ಅ.ಪ. ಮೂರು ಲೋಕದ ದೊರೆ ನೀನಾಗಿರೆ ನೀರಿನೊಳೀಪರಿಯಾಟವು ತರವೆ ಕೂರುಮ ರೂಪದಾಕಿಟಿ ನರಮೃಗದಾ ಕಾರನೆನುತ ಪರಿಹಾಸವ ಮಾಳ್ಪರು 1 ಪೋರ ನಗುತ ಬಲಿಯನು ವಂಚಿಸಿ ಮೀರಿದ ಕೋಪದಿ ಮಾತೆಯನಿರಿದು ನಾರಿಯ ನೀಗುತ ಮಾವನ ಕೊಂದು ಜಾರಿದ ವಸನದ ರಾಹುತನೆಂಬರು2 ವಾರಿಧಿಯೊಳು ನಿನಗಾಟವು ಸಲ್ಲದು ಕೋರಿದ ಕೊಡುವೆನು ಬಾರೆನ ದೊರೆಯೆ ವಾರಿಜಾಭನೆ ಕರೆ ಕರೆ ಮಾಡದೆ ಶ್ರೀರಂಗೇಶವಿಠಲನೆ ಬೇಗದಿ 3
--------------
ರಂಗೇಶವಿಠಲದಾಸರು
ಬಾರೊ ನೀಯನ್ನಮನಿಗೆ ಗೋಪಾಲಕೃಷ್ಣ ಪ ಅಂದದಿ ಚಂದದಿ ಆಡುತ ಪಾಡುತ ಧಿ ಮಿಧಿಮಿಯನ್ನುತ ದಿನ ದಿನ ಕುಣಿಯುತ 1 ಅಂದುಗೆ ಗೆಜ್ಜೆಗಳಿಂದ ಶೋಭಿತನಾಗಿ ಮಂದಾರ ಕೂಡಿಕೊಂಡು ಗಜಗು ಭೊಗರಿಯಾಡುತ 2 ಬಾಲಕನಾಗಿ ನೀ ಲೀಲೆಯ ತೋರುತ ಲಾಲಿಯ ನಾಡುವ ಬಾಲಕರ ಕೂಡ 3 ಕುಡಿಯಲು ನಿನಗೆ ಕೊಡುವೆನು ನೊರೆಹಾಲ ಹುಡುಗರ ಕೂಡಿಕೊಂಡು ಶಿಡಿಗುಡಿನಾಡುತ 4 ಪತಿ ಹೆನ್ನೆ ವಿಠಲ 5
--------------
ಹೆನ್ನೆರಂಗದಾಸರು
ಬಾರೊ ಬಾರೊ | ಕರುಣಾಕರ ರಂಗನೆ ಬಾರೊ ||ತೋರೊ ತೋರೊ ಚರಣಾರ ವಿಂದವನೆ ಪ ಇಂದಿರೆ ರಮಣನೆ ಬಾರೊಸಿಂಧು ಶಯನ ಅರವಿಂದ ನಯನ | ಎನ್ನ ತಂದೆ ತಾಯಿ ಬಾರೊ 1 ಸರ್ಪಶಯನ ಬಾರೊ | ಕಂದರ್ಪನಯ್ಯಾ ಬಾರೋಶೂರ್ಪಕರ್ಣ ಪ್ರಿಯ ಭ | ಕ್ತಾರ್ಪಿತಾಲ್ಪಕೊಳ್ವ ಬಾರೋ2 ದೋಷ ದೂರ ಬಾರೊ | ಮಧ್ವೇಶ ವದಗಿ ಬಾರೋಶ್ರೀಶ ಮುದ್ದು ಮೋಹಾಭಿಧ | ಗುರು ಗೋವಿಂದ ವಿಠ್ಠಲ ಬಾರೋ 3
--------------
ಗುರುಗೋವಿಂದವಿಠಲರು
ಬಾರೊ ಬಾರೊ ಬಾರೊ ಶ್ರೀಹರಿ ಭಕ್ತರಾಧಾರಿ ಪ ನಿಗಮವನ್ನು ಅಜಗಿತ್ತೆ ನಗವ ಬೆನ್ನಲಿ ಪೊತ್ತೆ ನೆಗಹಿ ಧರಣಿಯನು ಇತ್ತೆ ಮಗುವ ಪೊರೆದೆ ಸುಗುಣ ಹರಿಯೆ 1 ಪದದಿ ಗಂಗೆಯನ್ನು ಪಡೆದೆ ಬುಧರಿಗೊಲಿದು ಕೊಡಲಿ ಪಿಡಿದೆ ಸುದತಿ ನೆವದಿ ಖಳರ ಬಡಿದೆ ಒದಗಿ ಅಕ್ಷಯವಿತ್ತೆ ಹರಿಯೆ 2 ದುರಳ ತ್ರಿಪುರರನ್ನು ಗೆಲಿದೆ ಭರದಿ ಯವನ ಬಲವ ಮುರಿದೆ ಗರುಡಾಚಲದಿ ನಿಂತು ಭಕ್ತರ ಪೊರೆವ ಲಕ್ಷ್ಮೀಕಾಂತ ಹರಿಯೆ 3
--------------
ಲಕ್ಷ್ಮೀನಾರಯಣರಾಯರು
ಬಾರೊ ಬಾರೊ ರಂಗ-ಬಾರೊ ನಮ್ಮನೆಗೆ ಪ ಬೋರನ್ಹಾಕುವೆ ನಡೆಮುಡಿಯ ನಿಮ್ಮಡಿಗೆ ಅ.ಪ ಪರಿಮಳಾಂಬುವಿನಿಂದ-ಪದವ ತೊಳೆಯುವೆನೊ ವರಗಂಧಾಕ್ಷತೆಯನು-ಭರದಿ ಧರಿಸುವೆನೋ 1 ಹೊಸಪಟ್ಟೆಯನು ತಂದು-ಹೊಂದಿಸಿ ರಾಜಿಸುವೆ ಕುಸುಮದಿಂದರ್ಚಿಸಿ ಕೂಡೆ ಸಂತಸವ 2 ಕುಂಕುಮಾಗಿಲು ದಿವ್ಯ ಗುಗ್ಗುಲಹೊಗೆಯ ಬಿಂಕದಿಂದರ್ಪಿಸುವೆನು ಭೋಗಿಸಯ್ಯಾ 3 ಮೇಲೆ ಸದ್ಭಕ್ಷ್ಯ ತಾಂಬೂಲವರ್ಪಿಸುವೆ ಲಾಲಿತ ಮಹಮಂಗಳಾರತಿಯೀವೆ 4 ಬಿಡದೆ ಸಾಷ್ಟಾಂಗವ ನಿಡುವೆ ರಮೇಶ ಪೊಡವಿಯೊಳ್ ಮಹದೇವಪುರದ ಶ್ರೀಹರಿಯೆ5
--------------
ರಂಗದಾಸರು
ಬಾರೊ ಭಕ್ತರ ಮನಮಂದಿರಕೆ | ಶ್ರೀ ರಮಣ ಪ್ರಯಾಗವೇಣಿ ಮಾಧವರಾಯಾ ಪ ಅಂಬುಧಿ ಚರನೆ ಬಾರೊ | ಅಂಬುಧಿ ಮಥನ ಬಾರೊ | ಅಂಬುಜಾಕ್ಷಿಯ ತಂದ ರ | ಕ್ತಾಂಬು ಪಾನನೆ ಬಾರೊ | 1 ಅಂಬುಪೆತ್ತವನೆ ಬಾರೊ | ಅಂಬುಧಿ ತೊಲೆಗಿನ | ಅಂಬುಧಿ ಬಂಧನ ಬಾರೊ | ಅಂಬೆ ಕಾಯ್ದವನೆ ಬಾರೊ | 2 ಅಂಬಾರ ಪುರಾಲಯ ನ | ರಾಂಬು ಹಯಗಮನ ಪೀ ತಾಂಬರ ವಿಜಯವಿಠ್ಠಲ | ಎಂಬ ವೆಂಕಟರಾಯ ಬಾರೊ |3
--------------
ವಿಜಯದಾಸ
ಬಾರೊ ಭಾಗ್ಯದ ನಿಧಿಯೆ, ದಯಾಂಬುಧಿಯೆ ಪ ಸಾರಿದವರ್ಗಿತ್ತೆ ಸುಧೆವಾರಿಜಾರಿ ಕೌಮುದಿವಾರಿಜಧರ ಮುದದಿಸಾರಸ ಹೃದಯದಿಕೇರಿ ಕೇರಿಯಲಿ ಶೃಂಗಾರದಿ ಮೆರೆವ ಅಪಾರ ದಯಾನಿಧಿ ಅ ಪಾದ ಸಾರಥಿ ಪರ ರವಿಜನ ನೀ ಸೋಲಿಸಿತ್ರಿಜಗ ವಿಜಯ ವೇಷ ವಿಜಯಗಿತ್ತು ಮೆರೆದೆವಿಜಯ ಮೂರುತಿಯೆ 1 ದಶಶಿರ ಸಂಹರದಶರೂಪದಲಿ ಖಳದಶನ ಮೂರುತಿಯೆಂದುಹೆಸರು ಹೇಳುವರು2 ಪದುಮನಾಭ ಪದ್ಮೇಶ ಪದುಮಮಾಲಿ ಪದ್ಮಾಕ್ಷಪದುಮ ಪಾಣಿ ಪದ್ಮಾಂಘ್ರಿ ಪದುಮಸಖ ತೇಜಿಪದುಮ ಕಲ್ಪದಿ ನಾಭಿ ಪದುಮದಿ ಚತುರ್ಮುಖಪದುಮ ಜನ ಪಡೆದು ಪದುಮಜಾಂಡವಡೆದಿಪದುಮ ಪೀಠನ ಹೃತ್ಪದುಮದಿ ನಿನ್ನಪದುಮ ತೋರುತ ಬಾರೊ ಕಾಗಿನೆಲೆಯಾದಿಕೇಶವಹದುಳದಿಂದ ಬಾರೊ ಭಾಗ್ಯದ ನಿಧಿಯೆ 3
--------------
ಕನಕದಾಸ