ಒಟ್ಟು 14471 ಕಡೆಗಳಲ್ಲಿ , 133 ದಾಸರು , 7276 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ಸಲಹಯ್ಯ ಪುಣ್ಯನಾಮ ಶ್ರೀ ರಾಘವೇಂದ್ರ ಪೂರಿತಕಾಮ ನೇಮ ಶ್ಯಾಮ ಪರಮಗುಣ ರತ್ನಧಾಮ ಧ್ರುವ ವನಜಾಂತಕ ಕುಂದರದನ ಅನುಪಮ ಸುಂದರವದನ ಸದನ 1 ಕರುಣ ಶರಣ ಭರಣ ಭರಣ ಧರಣೋದ್ಧಾರಣ ಸ್ಪುರಣ ಕಿರಣದೊರಣ ಚರಣ ಅರುಣಾಂಬುಜಾಲಯರಮಣ 2 ವೀರಗುಣಗಂಭೀರ ಕ್ರೂರಾಸುರ ಸಂಹಾರ ಶೂರ ಜನ್ಮವಿದೂರ ಮಹಿಪತಿ ಧೀರ ಕೃಷ್ಣೊಡಿಯ ಉದಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಾಮಕೃಪಾಕರ ರಾಮ ದಯಾಪರ ರಾಮದಿವಾಕರ ರಾಮ ರಾಮ ಪ ದಶರಥನಂದನ ಋಷಿಕುಲ ಪಾವನ ದಶಶಿರಭಂಜನ ರಾಮ ರಾಮ ರಾಮ 1 ಜನಕನ ಜೀವನ ಮುನಿಗಣ ಪಾಲನ ಧನುಜನಿವಾರಣ ರಾಮ ರಾಮ ರಾಮ 2 ವಾಲಿಯ ಮರ್ಧನ ವಾಲಿಜ ರಕ್ಷಣ ಬಾಲ ಸುಪೋಷಣ ರಾಮ ರಾಮ ರಾಮ 3 ಅಜರಾಮರ ಸಿರಿಭಜಕರವರಹರಿ ಅಜಪಿತ ನರಹರಿ ರಾಮ ರಾಮ ರಾಮ 4 ಚನ್ನಿಗರಾಯನೆ ಚಿನ್ಮಯ ರೂಪನೆ ಚೆನ್ನಕೇಶವನೆ ರಾಮ ರಾಮ ರಾಮ 5
--------------
ಕರ್ಕಿ ಕೇಶವದಾಸ
ರಾಮಕೃಷ್ಣವಿಠಲ | ಪೊರೆಯ ಬೇಕಿವಳಾ ಪ ಸನ್ನುತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ. ಮೋದ ತೀರ್ಥರ ಮತದಿ | ಉದುಭವಿಸಿ ಇರುತಿರ್ಪಸಾಧು ಕನ್ನಿಕೆ ಇವಳಾ | ವೇದಾಂತ ವೇದ್ಯಾ |ಮೋದದಾಯಕನಾಗಿ | ಶ್ರೀಧರನೆ ತರತಮವಭೇಧ ಪಂಚಕ ತಿಳಿಸಿ | ಕಾದುಕೋ ಬಿಡದೆ 1 ಅಹಿಕ ಪಾರತ್ರಿಕದಿ | ಬಹುಸಖ್ಯಗಳ ಕೊಟ್ಟುಮಹಿತ ನಿನ್ನಯ ನಾಮ | ರೂಪಕ್ರಿಯ ಗುತಾಮವಿಹಿತ ಮಾರ್ಗದಿ ತುತಿಸಿ | ತವಚರಣಕರ್ಪಿಸುವಮಹಭಾಗ್ಯ ಇವಳೀಗೆ | ಓದಗಿಸೋ ಹರಿಯೇ 2 ಅಡಿಗಡಿಗೆ ಬರುತಿರ್ಪ | ಕಡುವಿಘ್ನ ಪರಿಹರಿಸೊಕಡುದಯಾ ಪರಿಪೂರ್ಣ | ಕರಿವರದ ಕೃಷ್ಣಾ ಬಡವಿಪ್ರಗೊಲಿದಂತೆ | ಭಕುತ ಜನ ಪರಿಪಾಲಪಿಡಿಯುವುದು ಕೈ ಇವಳ | ಬಾಲ ಗೋಪಾಲ 3 ಕಲಿಯುಗದಿ ಸಾಧನವು | ಬಲುಕಷ್ಟವೆನಿಸಿಹುದುಕಲಿಮಲಾಪಹಗಂಗೆ | ಪಿತನ ಚರಣಾಬ್ಜಾಓಲುಮೆಯಿಂ ಭಜಿಪರ್ಗೆ | ಭವಭಂಧ ಪರಿಹಾರಅಳವಡಿಸೊ ಇವಳೀಗೆ | ತವನಾಮಕವಚಾ 4 ಕೋವಿದರ ಪರಿಪಾಲ | ಪಾವಮಾನಿಯ ಪ್ರೀಯನೋವು ಸುಖ ದ್ವಂದ್ವಗಳ | ಸಮತೆಯಲಿಯುಂಬಾಭಾವವನೆ ಕರುಣಿಸುತ | ಭವವ ನುತ್ತರಿಸೆಂದುದೇವ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ರಾಮಕೋಟಿ ನಾಮಭಜನಾ ನೇಮದಿಂದ ಮಾಳ್ಪನು ಧನ್ಯ ಪ ಪ್ರೇಮಪಾಶದಿಂದಬಿಗಿದುಸ್ವಾಮಿಯನ್ನ ಹೃದಯದಿನೆನೆದು ಅ.ಪ ಶಂಭು ತನ್ನ ಮನದಿನಿತ್ಯ ಇಂಬಿನಿಂದ ಧ್ಯಾನಿಸುತ್ತ ಅಂಬಿಕೆಗನುಮೋದಿಸುತ್ತ ಸಂಭ್ರಮದಿಂದೊರೆದ ಸತ್ಯ1 ನೇಮದಿ ಕಾರ್ಯವನು ಬಗೆದು ಭೂಮಿಜಾತೆಯ ಕಂಡವಗೊಲಿದ 2 ಕರುಣಾಮೂರುತಿಯೊಲುಮೆವಡೆದು ಪರಮಪುಣ್ಯ ವಿಭೀಷಣ ಒರದ 3 ಭರತಭೂಮಿಯೊಳಗೆ ಜನಿಸಿ ಹರಿಯ ಭಕ್ತ ಗಣ್ಯರೆನಿಸಿ ಪುರಂದರ ಕನಕದಾಸರು ಕರುಣದೊರೆದ ಭವತಾರಕವಾ 4 ಸಾಸಿರನಾಮವ ಪಠಿಸಿ ವಾಸುದೇವನಿಗೆ ವಂದಿಸಿ ಭೂಸುರರಾನಂದಿಸುವ ಕೇಶವ ಜಾಜೀಶನ ತೋರ್ಪ 5
--------------
ಶಾಮಶರ್ಮರು
ರಾಮಚಂದಿರ ಶ್ಯಾಮಸುಂದರ ಪ್ರೇಮಸಾಗರಾ ಪ ಭೂಮಿಜಾತೆಯರಸ ಬಂಧುರ ಕೋಮಲಾಕರ ಶರಣಪಾಲಾ ಅ.ಪ ವೇದವಿದಿತಾ ಮೋದಭರಿತ ಶ್ರೀಧರಾಚ್ಯುತ ಭಾರ ನಿನ್ನದು 1 ಶಿಲೆಯ ಸತಿಯಗೈವ ಪಾದವ ತೊಳೆದ ಜನಕನು ಸುಲಭಮಾರ್ಗದಿ ಶಬರಿ ನಿನ್ನಯ ಜಲಜಪಾದ ಸೇವೆಗೈದಳು 2 ಕರುಣವೇ ಶರಣರ ಪರಮಸೌಭಾಗ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮಚಂದ್ರ ನೀ ದಯಮಾಡೊಪ್ರೇಮದಿಂದಲಿ ಹರಕೆಯ ನೀಡೋ ಪ ನಿನ್ನ ಜನುಮದ ದಿನವಿದು ನೋಡೊಘನ್ನ ತರದ ಸಂತೋಷ ನೀಡೊಬನ್ನವನ್ನು ನೀನಿಂತೀಡಾಡೊಮನ್ನಿಸಿ ಎನ್ನನು ದಯದಿ ಕಾಪಾಡೊ 1 ವನಿತೆ ಅಹಲ್ಯೆಯ ಶಾಪವ ಹರಿದೆದನುಜರುಪಟಳ ತಾಪವ ತರಿದೆಮನುಜರೆಲ್ಲರ ಧರ್ಮದಿ ಪೊರೆದೆಘನ ಸೌಖ್ಯವ ಭೋಗಿಸುವಂತಿರದೆ 2 ಕುಣಿಯುವದು ಮುದದಲಿ ಭಕ್ತರ ಗಡಣದಣಿಯದು ನೋಡೈ ಸೀತಾರಮಣಗುಣಿ ನೆ ಸುಖವಕೊಡು ಕರುಣಾಭರಣಮಣಿವೆ ಗದುಗಿನ ವೀರನಾರಾಯಣ 3
--------------
ವೀರನಾರಾಯಣ
ರಾಮಚಂದ್ರ ಪ್ರೇಮದಿ ಬಾ ಜನಕ ಪ ಕೋಮಲಾಂಗನೆ ಕಾಮಿತದಾತನೆ ಕರುಣಾವಾರಿಧಿ ರಾಮ 1 ಸಾರಸಾಕ್ಷನೆ ತೋರಿಸು ಚರಣವ ಪೂರೈಸೆನ್ನ ಮನ ಸುರಾಮ 2 ಶ್ರೀನಿವಾಸನೆ ಭವ ಕಾನನಾನಲಹನುಪಮ 3
--------------
ಪ್ರದ್ಯುಮ್ನತೀರ್ಥರು
ರಾಮಚಂದ್ರ ರಘುವೀರಾ ನಮೋ ನಮೋ ಪ ಶ್ಯಾಮಾಂಗ ಸುಕುಮಾರಾ ನಮೋ ನಮೋ ಕಾಮಿತಾರ್ಥದಾತಾರಾ ನಮೋ ನಮೋ ಓಂಕಾರ ಅ.ಪ ವಸಿಷ್ಟಾದಿಮುನಿ ತೋಷಿತ ನಮೋ ನಮೋ ನಿಶಚರೇಭ ಕುಲಕಾಲಾ ನಮೋ ನಮೋ ಶ್ರೀ ಬಾಲಾ 1 ನೀತಿಸುಗುಣಯುತಶೀಲಾ ನಮೋ ನಮೋ ಘನಲೀಲಾ 2 ಮಾರೀಚಾಂತಕ ವೀರಾ ನಮೋ ನಮೋ ಶ್ರೀಕಾರಾ 3 ಖ್ಯಾತ ಮೃದುವಾಕ್ ದೀಪ್ತಾ ನಮೋ ನಮೋ ಸಂತೃಪ್ತಾ4 ಪರಮ ಪುಣ್ಯಚರಿತ್ರಾ ನಮೋ ನಮೋ ಶ್ರೀಗಾತ್ರಾ 5 ಅರಿಕುಲ ನಾಶಕ ರಂಗಾ ನಮೋ ನಮೋ ಶ್ರೀರಂಗ 6 ದೇವ ದಿವಿಜನುತ ನಮೋ ನಮೋ ಶ್ರೀರಾಮಾ 7 ನಿತ್ಯ ಮುಕ್ತ ವನಮಾಲಾ ನಮೋ ನಮೋ ಭೂಪಾಲಾ8 ಮಾಂಗಿರೀಶ ಮಾಲಿಂಗಾ ನಮೋ ನಮೋ ಶ್ರೀರಂಗ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮಚಂದ್ರನು ಶೋಭಿಪನಿಂದು ಸದ್ಭಕ್ತಬಂಧು ಪ ಸಾರಸಾಕ್ಷನು ಸಾಮಜವರದನು ಭೂರಿಫಲಪ್ರದ ಭೂಮಿಜೆಯುತನು ಅ.ಪ ಧರೆಯಭಾರವ ತಾಕಳೆಯಬಂದು ಕಾರುಣ್ಯಸಿಂಧು ನರರೂಪವ ಧರಿಸುತ್ರ ನಿಂದು ಕೋದಂಡವ ಪಿಡಿದು ದುರುಳ ದೈತ್ಯರ ಶಿರವನೆ ತರಿದು ಪರಿಪರಿ ವಿಧದಲಿ ಶರಣರಿಗೊಲಿಯುತ ದುರಿತ ಸಂಕುಲವ ಪರಿಹರಿಸಿ ಪೊರೆವ ಶ್ರೀ 1 ಸೂರ್ಯಸುತನ ಸೈನ್ಯದವರ ಸುಮನಸರ ಧೈರ್ಯದಿಂ ಸಮರಗೈದವರ ವೀರಾಧಿವೀರರ ಕಾರ್ಯವ ಸಾಧಿಸಿದಾ ವಾನÀರರ ಪಾರವಶ್ಯರನು ಪರಮೇಷ್ಠಿಯಿಂದ ಧಾರೆಯನೆರೆದಮೃತದಿ ಬದುಕಿಸಿದ ಶ್ರೀ 2 ಘನವಂತ ವಿಭೀಷಣಂಗೆ ಅನುವನು ತೋರಿ ಸಾರಿ ಅನುಜಾತ ಭಕುತಂಗೆ ಅನುಗ್ರಹಬೀರಿ ಆನಂದವೇರಿ ಜನನಿಯರಾಶೀರ್ವಚನವ ಪಡೆದು ಸನುಮತದಿಂ ಪುರಜನರೊಲುಮೆಯೊಳು ದಿನಕರಪ್ರಕಾಶ ಜಾನಕಿನಂದ ಜಾಜೀಶ್ರೀಶ ಶ್ರೀ 3
--------------
ಶಾಮಶರ್ಮರು
ರಾಮಚಂದ್ರನೆ ನಿನ್ನ ನಾಮಮೃತವು ಎನ್ನ ನಾಲಿಗೆಯೊಳು ನಿಲಿಸು ಪ ದಾನವಾಂತಕ ನಿನ್ನ ಧ್ಯಾನ ಬಿಡದೆ ಇತ್ತು ದೀನ ರಕ್ಷಕ ಹರಿ ಜಾನಕಿ ರಮಣನೆ ಅ.ಪ ಕ್ಷೀರವಾರಿಧಿ ಶಯನ ಶ್ರೀ ಹರಿಯನು ಸ್ಮರಿಸುತ ಧ್ಯಾನವ ಮಾಡಿ ಭಕುತಿಲಿ ನಾರದ ಹರ ಬ್ರಹ್ಮಾದಿ ಋಷಿ ಗಂಧರ್ವರು ಸುರರೆಲ್ಲರು ಕೂಡಿ ಮಾರಮಣನ ಕೊಂಡಾಡುತ ಸ್ತೋತ್ರವ ಮಾಡಿ ಪಾರುಮಾಡು ಜಗದೀಶನೆ ಎನುತಲಿ ತವಕದಿ ಶ್ರೀ ಭೂರಮಣನು ದೀನರ ನುಡಿಗಳ ಕೇಳುತ ಆಲೋಚಿಸುತಲಿ ಬೇಗದಿ ಭೂನಾಥನ ಮನೆಯೊಳಗವತರಿಸುವೆ ಎನ್ನುತವರಿಗೆಲ್ಲಾಭಯವ ನೀಡಿದ 1 ದಶರಥನುದರದಿ ಜನಿಸಲು ನಾಲ್ವರು ಅಂದು ಯಾಗಕೆ ಕೌಶಿಕನಲ್ಲಿ ವಿದ್ಯೆಗಳನ್ನು ಕಲಿಯುತ ಬಂದು ಶಶಿಮುಖ ಜಾನಕಿ ಕರಪಿಡಿದನು ತಾನಂದು ಅಯೋದ್ಯದಿ ಎಸೆವ ಸಿಂಹಾಸನವೇರುವ ಸಮಯದಿ ಬಂದು ರಸಕಸಿ ಮಾಡಲು ಕೈಕೇಯಿಯು ತಾ ಶಶಿಮುಖ ಸೀತೆಯ ಒಡಗೂಡುತಲಿ ಬಿಸಿಲು ಗಾಳಿಮಳೆಯೊಳು ವನಚರಿಸುತ ಸತಿಯು ಬೇಡೆ ಮಾಯಮೃಗವ ಬೆನ್ನಟ್ಟಿದ 2 ಶಶಿಮುಖ ಸೀತೆಯ ದಶಶಿರನೊಯ್ಯಲು ಕೇಳಿ ದಶರಥಸುತ ಅರಸುತ ಬಲು ಶೋಕವ ತಾಳಿ ಚಿಂತಿಸಿ ಎಸೆವ ಗಿರಿ ಗುಹೆಗಳ ಹುಡುಕಲು ಮಾರುತಿ ನೋಡಿ ಮುದ್ರಿಕೆ ವಸುಧೆ ತನಯಳಿಗರ್ಪಿಸೆ ಆಕೆಯು ಮುದ ತಾಳಿ ಚೂಡಾಮಣಿ ಕೊಡಲು ಶ್ರೀ ರಘುವೀರನು ಸೇತುವೆ ಕಟ್ಟುತ ಕ್ರೂರ ಖಳರನು ಸಂಹರಿಸಿದ ಕಮಲ-ನಾಭ ವಿಠ್ಠಲ ಅಯೋದ್ಯದಿ ಮೆರೆಯುವ 3
--------------
ನಿಡಗುರುಕಿ ಜೀವೂಬಾಯಿ
ರಾಮಚಂದ್ರನೇ ಪರದೈವನೋ ನಮ್ಮ | ಶಾಮ ಸುಂದರ ಕೃಷ್ಣ ಪರದೈವನಯ್ಯ ಪ ರಾಮಭಕ್ತ ನಿದ್ದೆಡೆಗಾಗಿ ಯದುಕುಲ | ಸ್ವಾಮಿಯ ಶರಣನು ಬಂದ ಕೀರ್ತಿಸುತ | ಪ್ರೇಮದಲೀರ್ವರ ಭಕ್ತಿಯವಾದವು | ನೇಮದಿ ಬೆಳೆಯಿತು ಕೇಳಿ ಸಜ್ಜನರು1 ಚಿಕ್ಕ ತನದಿ ತಾಟಿಕೆಯನು ಕೊಂದು ಮುನಿಮುಖ | ಅಖರದಲಿ ಕಾಯದನಾರು ಹೇಳಯ್ಯ | ಠಕ್ಕಿಸಿ ಬಂದ ಪೂತನಿಅಸುಹೀರಿಜ | ನಕ್ಕಭಯ ನಿತ್ತ ಕೃಷ್ಣ ನೋಡಯ್ಯ2 ಚರಣ ಸೋಕಿಸಿ ಶಿಲೆ ಹೆಣ್ಣವ ಮಾಡುತ | ಹರಧನು ಮುರಿದವ ನಾರು ಹೇಳಯ್ಯಾ | ಮರಗಳಾದವರ ನುದ್ಧರಿಸುತ ಕಂಸಾ | ಸುರಧನು ಹಬ್ಬವ ಗೆದ್ದ ರಂಗೈಯ್ಯಾ3 ನೆರದಿಹ ದೇವ ದಾನವರೋಳುದ್ದಂಡದಿ | ಧರಣಿ ಜೆಯ ತಂದನಾರು ಹೇಳೈಯ್ಯಾ | ವರಚೈದೈ ಘೋಷರ ಭಂಗಿಸಿ ರುಕ್ಮಿಣಿ | ಕರವಿಡಿದೊಯ್ದಿದ ಕೃಷ್ಣ ನೋಡಯ್ಯಾ 4 ವನದೊಳು ಹಣ್ಣವ ನಿತ್ತಂ ಶಬರಿಗೆ | ಚಿನುಮಯ ಪದವಿತ್ತ ನಾರು ಹೇಳಯ್ಯಾ | ಅನುವರದಲಿ ದ್ರೌಪದಿಯ ಶಾಕದಳ | ವನೆ ಕೊಂಡು ಸುಖವಿತ್ತ ಕೃಷ್ಣ ನೋಡಯ್ಯಾ5 ಜಲ ನಿಧಿಯೊಳಗ ಸೇತುಗಟ್ಟಿಸಿ ವಾನರ | ದಳನಡಿಸಿದ ವೀರನಾರು ಹೇಳಯ್ಯಾ | ಗಳಿಗಿಯೊಳರಿಯದಂದದಿ ಮಧುರ ಜನ | ನೆಲೆಮಾಡಿ ನೀರೋಳಗಿಟ್ಟ ರಂಗೈಯ್ಯಾ6 - ಅಪೂರ್ಣ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮತಾರಕ ಮಂತ್ರ ಜಪಿಸಿ | ಸರ್ವಕಾಮಗಳ ಪಡೆದವನೆ ನಮಿಸಿ | ಬೇಡ್ವೆಕಾಮದುಷ್ಟಗಳ ಪರಿಹರಿಸಿ | ಹೃದ್‍ಧಾಮೆ ಹರಿ ತೋರೊ ಕರುಣಿಸೀ ಪ ಗಜ ಅಜಿನ ಧರಿಸಿ | ಮತ್ತೆಕರ್ಪರವ ಕೈಯಲ್ಲಿ ಇರಿಸಿ | ನೀನುಅಪವಿತ್ರ ಅಶಿವ ನೆಂದೆನಿಸೀ | ವರಮಸಫಲ ಶಿವ ಅಮಂಗಳವ ಹರಿಸೀ 1 ಪರಮ ಸದ್ಭಾಗವತ ಮೂರ್ತೇ | ಲಕ್ಷ್ಮೀನರಹರಿಯ ಆಣತಿಯ ಪೊತ್ತೇ | ವಿಷಯನಿರತರನು ಹರಿವಿಮುಖ ಶಕ್ತೆ | ಕಾಯೊಹರ ಸದಾಶಿವ ಭಾವ ಮೂರ್ತೇ 2 ತಪದಿಂದ ಹರಿಯೊಲಿಸೆ ನೀನು | ಹತ್ತುಕಲ್ಪ ಲವಣಾಂಭುದಿಯಲಿನ್ನು | ಗೈದೆತಪ ಉಗ್ರದಲಿ ಪೇಳ್ವುದೇನು | ನೀನು`ತಪ` ನೆಂದು ಕರೆಸಿದೆಯೊ ಇನ್ನು 3 ಶುಕಿಯಾಗಿ ಬಂದ ಅಪ್ಸರೆಯ | ಕೂಡ್ಡಅಕಳಂಕ ವ್ಯಾಸಾತ್ಮ ಧೊರೆಯ | ಮಗನುಶುಕನಾದೆ ಶಿವನೆ ಇದು ಖರೆಯ | ನುತಿಪೆಪ್ರಕಟ ಭಾಗವತಕ್ಕೆ ಧೊರೆಯ 4 ಮಾರುತನು ನಿನ್ನೊಳಗೆ ನೆಲಿಸಿ | ಗೋಪ್ಯದೂರೆಂಬ ನಾಮವನೆ ಧರಿಸಿ | ಇರಲುದೂರ್ವಾಸನೆಂಬ ಕರೆಸಿ | ಮೆರೆವಭೂ ಭೃತರ ಮಾನವನೆ ಕೆಡಿಸಿ 5 ಪತಿ ಸಂಗ ರಹಿತೆ | ಎನಿಸೆಭಾರತಿಯ ದೇಹದಲಿ ಜಾತೆ | ಇರಲುಪ್ರಾರಬ್ಧ ಭೋಗಿಸುವ ಮಾತೆ | ಎನಿಸಿವೀರ ಅಶ್ವತ್ಥಾಮ ಕೃಪೆ ಜಾತೆ 6 ಧಾಮ ಈಶಾನ್ಯದಲಿ ಇದ್ದು | ನಿನ್ನವಾಮದಲಿ ವಾಸುದೇವಿದ್ದು | ನೀನುವಾಮದೇವನ ಪೆಸರು ಪೊದ್ದು | ಧರಿಪೆಸ್ವಾಮಿ ಪೂಜಕನೆಂಬ ಮದ್ದು 7 ಕಾಲಾತ್ಮ ನಿನ್ನೊಳಗೆ ನೆಲಸಿ | ಪ್ರಳಯಕಾಲದಲಿ ಜಗವ ಸಂಹರಿಸಿ | ನಿನ್ನಕಾಲಾಖ್ಯ ನೆಂತೆಂದು ಕರೆಸಿ | ಮೆರೆವಲೀಲಾತ್ಮ ನರಹರಿಯು ಎನಿಸಿ 8 ಶಫರ ಹರಿದ್ವೇಷಿಗಳು ಎನಿಪ | ದೈತ್ಯತ್ರಿಪುರಸ್ಧರನು ಸಂಹರಿಪಾ | ಶಿವನೆವಪು ಧರಿಸಿ ಅಘೋರ ನೆನಿಪಾ | ಗೈದಅಪವರ್ಗದನ ಸೇ5ರೂಪ 9 ಹೃದ್ಯ ಹರಿಸೇವೆಂi5Àು ಗೈವಾ | ಮನದಿಬದ್ಧ ದ್ವೇಷಿಗಳೆಂದು ಕರೆವಾ | ದೈತ್ಯಕ್ರುದ್ಧರ ತಪಕೆ ಸದ್ಯ ವರವಾ | ಇತ್ತುಸಧ್ಯೋಜಾತನೆನಿಸಿ ಮೆರೆವ 10 ಹರಿಯಂಗ ಸೌಂದರ್ಯ ನೋಡಿ | ನೋಡಿಪರಮಾನಂದವನೆ ಗೂಡೀ | ಇಂಥಹರಿಪದ ದೊರಕೆ ಚಿಂತೆ ಗೂಡಿ | ಅತ್ತೆಹರುಷದಿ ಊರು ಸುತ ಪಾಡಿ 11 ಊರು ನಾಮಕ ರುದ್ರನಿಂದ | ಜಾತಕಾರಣ ಔರ್ವಭಿಧದಿಂದ | ಕರೆಸಿಉರ್ವರಿತ ರೋದನದಲಿಂದ | ಮೆರೆದೆಮಾರಾರಿ ಔರ್ವಭಿಧದಿಂದ 12 ವಿಷಯದಲಿ ಆಸಕ್ತರಾದ | ಮುಕ್ತಿವಿಷಯಕೆ ಬಹುಯೋಗ್ಯರಾದ | ಜನರವಿಷಯಾನುಕಂಪಿತನು ಆವ | ರುದ್ರಹಸನಾಗಿ ರೋದಿಸಿದಗಾಢ 13 ಕಮಲಾಕ್ಷಿ ದಕ್ಷಸುತೆ ತನ್ನ | ದೇಹವಿಮಲಯೋಗಾಗ್ನಿಯಲಿ ಭಗ್ನ | ಮಾಡಿಹಿಮದಾದ್ರಿ ಯೊಳಗೆ ಉತ್ಪನ್ನ | ವಾಗೆವಿಮಲ ಶಿವಗೊಂಡ ವ್ರತ ಕಠಿಣ 14 ಆದ್ಯಕಾಲದಲಿಂದ ಊಧ್ರ್ವ | ರೇತಬುದ್ಧಿಮಾಡುತ ತಪವು ಶುದ್ಧ | ಗೈದುಸಿದ್ಧನಾಗಿರುತಿರಲು ರುದ್ರ | ಕೇಳಿಊಧ್ರ್ವ ನೆಂಬಭಿಧಾನ ಪೊದ್ದ 15 ಕಾಮಹರ ತಪದಿಂದಲೆದ್ದು | ಬಹಳಪ್ರೇಮದಲಿ ಅದ್ರಿಸುತೆ ಮುದ್ದು | ಮಾಡಿಕಾಮಲಂಪಟನೆಂಬ ಸದ್ದು | ಗಳಿಸಿನಾಮ ಲಂಪಟ ನೆಂದು ಪೊದ್ದು 16 ಹರಪೊತ್ತ ಹನ್ನೆರಡು ನಾಮ | ದಿಂದಹರಿಮುಖ್ಯನಿಹನೆಂಬ ನೇಮ | ತಿಳಿದುಹರನ ಪೂಜಿಸೆ ಈವ ಕಾಮ | ನೆಂದುಗುರು ಗೋವಿಂದ ವಿಠ್ಠಲನ ನೇಮ17
--------------
ಗುರುಗೋವಿಂದವಿಠಲರು
ರಾಮದುರ್ಗದ ಪರಮ ಪೂಜ್ಯ ಆಚಾರ್ಯರನುನೇಮದಿಂದ ಸ್ಮರಿಸೊ ಮನುಜಾಕಾ'ುತಾರ್ಥವ ಕೊಟ್ಟು ಪ್ರೇಮದಿಂದ ಕ್ಕೆಪಿಡಿದುಸನ್ಮಾರ್ಗ ತೋಗಿಸುವರರು ಅವರು ಪಮಧ್ವಮತದೊಳು ಜನಿಸಿ ಸಚ್ಛಾಸ್ತ್ರಗಳನೋದಿ ಪ್ರಸಿದ್ಧಪಂಡಿತರಾಗಿ ಶುದ್ಧ ಆಚರಣೆ ಸದ್ದೈರಾಗ್ಯಸದ್ಭಕ್ತಿ ಸುಜ್ಞಾನ ಪೂರ್ಣರಾಗಿದುಡ್ಡಪ್ಪ ದೊಡ್ಡಪ್ಪ ಧಡ್ಡಪ್ಪರೆನ್ನದೆ ಸರ್ವಸಮದ್ಟೃ ಇಟ್ಟು'ದ್ಯಾರ್ಥಿಗಳಿಗೆಲ್ಲ ಅನ್ನವಸ್ತ್ರವ ಕೊಟ್ಟು ಗುರುಕುಲನಡಿಸಿದ ಋಗಳವರು 1ಸ್ನಾನಸಂಧ್ಯಾನ ಜಪಿತಪ ಅನುಷ್ಠಾನ ಅಗ್ನಿಹೋತ್ರವನಡಿಸುತ ಧ್ಯಾನಮೌನವು ಸದಾ ರಾಮನಾಮ ಸ್ಮರಣೆಪಾಠಪ್ರವಚಿನ ಪುರಾಣ ದಾನಧರ್ಮವು ದಿವ್ಯ ಸಂತಾನಸಂಪತ್ತು ರಾಜಮನ್ನಣೆ ಪಡೆದರು ಕ್ಷಣ ವ್ಯರ್ಥಕಳೆಯದೆ ವ್ಯರ್ಥಮಾತಾಡದೆ ದಿನಚರಿ ನಡಿಸಿದರು ಕಡೆತನರ 2ಘನವೈಯ್ಯಾಕರಣಿ ಗರ್ವವು ಎಳ್ಳೆಷ್ಟು ಇಲ್ಲಾ'ನಯ ಪೂರ್ಣಸ್ವಭಾವ ಹಣಹೆಣ್ಣು ಮಣ್ಣಿನಾಶೆಯುಪೂರ್ಣಬಿಟ್ಟವರು ಜನ'ತದಿ ಸತತ ನಿಂತರುಧನ ಮಾನ ಮರ್ಯಾದೆಗಳಿಗಾಗಿ ಎಂದೆಂದೂ ಧಡಪಡ-ಮಾಡಲಿಲ್ಲಾ ಗುಣನಿಧಿ ಭೂಪತಿ 'ಠ್ಠಲನ ಭಜನೆಯಾಕುಣಿಕುಣಿದು ಮಾಡುವ ಪರಮ ಭಾಗವತರು 3ಗಲಗಲಿ ನರಸಿಂಹಾಚಾರ್ಯರು
--------------
ಭೂಪತಿ ವಿಠಲರು
ರಾಮದೂತ ರಮ್ಯಚರಿತ ಸ್ವಾಮಿಹನುಮನೆ ಪ ಕಾಮಿತಫಲದಾತ ನಮ್ಮ ಕಾವನು ನೀನೆ ಅ.ಪ ಆಶಸಮುದ್ರವನ್ನು ದಾಟಿ ಮೋಸಗಾರರಂ ನಾಶಗೊಳಿಸಿ ದಾಶರಥಿಯ ತೋಷ ಪಡದೆ ನೀಂ 1 ತರುಣಿ ದ್ರೌಪದಿ ದೇವಿಯ ತಾತ್ಪರಿಯ ನಡೆಸಿದೆ 2 ಕಲಿಯುಗದಲಿ ಹುಲುದನುಜರಗೆಲಿದೆ ಗುರುವರ ಜಲಜನೇತ್ರ ಗುರುರಾಮವಿಠ್ಠಲನ ಕಿಂಕರ 3
--------------
ಗುರುರಾಮವಿಠಲ
ರಾಮದೂತನಪಾದ ತಾಮರಸವ ಕಂಡ ಆ ಮನುಜನೆ ಧನ್ಯನು ಪ. ಸೋಸಿಲಿ ಹರಕೆಗಳ ಸಲಿಸುವರೊ ಏಸು ಮಮತೆಯಿಂದವರ ಕಷ್ಟಗಳನು ಘಾಸಿ ಪಡಿಸದಲೆ ಪರಿಹರಿಪ ವೆಂಕಟನ 1 ಎಷ್ಟೆಂದು ಪೊಗಳಲೊ ದಿಟ್ಟ ಮೂರುತಿ ನಿನ್ನ ಉತ್ಕøಷ್ಟ ರೂಪ ಲಾವಣ್ಯಗಳಾ ಇಷ್ಟ ಮೂರುತಿ ಶ್ರೀ ಶ್ರೀನಿವಾಸ ಧೊರೆ ಶ್ರೇಷ್ಟ ಭಕ್ತರನೆಲ್ಲ ಪೊರೆವ ವೈಕುಂಠಪತಿ2
--------------
ಸರಸ್ವತಿ ಬಾಯಿ