ಒಟ್ಟು 12179 ಕಡೆಗಳಲ್ಲಿ , 134 ದಾಸರು , 5885 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸಿ ಸುಖಿಸು ಮನವೆ ಗುರುರಾಜಾಚಾರ್ಯರ ಪ ಸ್ಮರಿಸು ಪರಿಮಳ ವಿರಚಿಸಿದ ಗುರು ವರರ ಕರುಣವ ಪಡೆದ ಶರಣರ ದುರಿತ ಉರಗಕೆ ಗರುಡನೆನಿಸಿದವರ ಸುಚರಿತೆಯ ಹರುಷದಿಂದಲಿ ಅ.ಪ ಇಳಿಯೋಳ್ ಶ್ರೀ ಸುರಪುರದಿ ಯಳಮೇಲಿ ಶ್ರೀ ವಿಠ್ಠಲಚಾರ್ಯ ರಿಹ ಜನ್ಮದಿ ಕುಸುಮೂರ್ತಿ ಗುರುಗಳ ಒಲಿಮೆ ಪಡೆದು ನಿತ್ಯದಿ ಗಳಿಸಿದ ಸುಪುಣ್ಯದಿ ಲಲನೆ ಜಾನಕಿ ವರ ಸುಗರ್ಭದಿ ಚಲುವ ಲಕ್ಷಣ ಗಳಲಿ ಜನಿಸಿ ಗೆಳೆಯರೊಡನಾಡುತಲೆ ಶಬ್ಧಾವಳಿ ಸುಶಾಸ್ರ್ತವ ಕಲಿತ ವರಪದ 1 ಮೆರೆವ ಘನ ವೈಭವದಿ ವೈರಾಗ್ಯಭಾಗ್ಯವೆ ಪಿರಿದೆಂಬೊ ಧೃಢಮನದಿ ವನಿತಾದಿ ವಿಷಯದಿ ತಿರುಗಿಸುತ ಮನವಿರದೆ ಸಿರಿವರ ತುರುಗವದನನ ಚರಣ ಪೂಜಿಯೊಳಿರಿಸಿ ಗುರುವರ ಮುಖದಿ ಶ್ರೀ ಮನ್ಮರುತ ಶಾಸ್ತ್ರದ ಶ್ರವಣಗೈದರ 2 ಚರಿಸಿ ಶಾಸ್ತ್ರವ ಬೋಧಿಸಿ ಪ್ರವಚನದಿ ಗುರುಗಳ ಕರುಣವ ಸಂಪಾದಿಸಿ ನೃಪಮಾನ್ಯರೆನಿಸಿ ಹರಿದಿನಾದಿ ವೃತ ಬಿಡದಾಚರಿಸಿ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ ಪರಮ ಮಹಿಮರ ಚರಣ ಯುಗಲವ 3
--------------
ಕಾರ್ಪರ ನರಹರಿದಾಸರು
ಸ್ಮರಿಸಿ ಸುಖಿಸೆಲೋ ಮಾನವಾ ಪ ಸರಸಿಜಾಸನ ಸತತ ನೆನೆವ ಹರಿನಾಮವನು ಅ.ಪ ಜವರಾಯ ಕಿಂಕರರ ಹಿಮ್ಮೆಟ್ಟಸಿದ ನಾಮ ಧ್ರುವರಾಯಗೊಲಿದ ಘನವು ಈ ನಾಮ ನವನೀತರೂಪದಿಂದ ಘನವ ತಾಳ್ದಿಹ ನಾಮ ಸುವಿಲಾಸದಿಂ ಪಾರ್ಥಗೊಲಿದಿರ್ಪನಾಮವನು 1 ಸನಕಾದಿ ಮುನಿಗಳು ಸತತ ಭಜಿಸುವ ನಾಮ ಅನಿಲಜಾತನಿಗೊಲಿದ ಪರಮನಾಮ ವನಚಾರಿಯಾಗಿದ್ದ ಶಬರಿಗೊಲಿದ ನಾಮ ವನಚರರ ಗರುವವನು ಮುರಿಯುವ ನಾಮ 2 ಪಾಂಚಾಲಿಗಕ್ಷಯದ ವರವನಿತ್ತಾ ನಾಮ ಪಾಂಚಜನ್ಯವ ಸಿರಿಯೊಳೆಸೆಯುತಿಹ ನಾಮ ವಂಚಕರ ಹೃದಯಗಳ ಭೇದಿಸುತ್ತಿಹನಾಮ ಚಂಚಲೆಯರುತ್ಸಾಹದಿಂ ಭಜಿಪ ನಾಮವನು 3 ದುರುಳದೈತ್ಯರ ಮನವ ಕದಡಿ ಕಲಕುವ ನಾಮ ಶರಣಾಗತಾವಳಿಯ ಪೊರೆಯುತಿಹನಾಮ ತರಳಪ್ರಹ್ಲಾದ ತಾ ಪಿತಗೊರೆವ ನಾಮವನು 4 ಮಾಂಗಿರೀ ವರಾಗ್ರದೊಳು ಮರೆಯುತಿಹ ಸಿರಿನಾಮ ಶೃಂಗಾರ ಶ್ರೀ ಪಾಂಡುರಂಗ ನಾಮ ಗಂಗಾಧರಾನುತ ಸುಖದಾತ ಶ್ರೀನಾಮ ಮಂಗಳಕರ ರಾಮದಾಸನುತ ನಾಮವನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸ್ಮರಿಸಿ ಸುಖಿಸೊ ನರನೆ - ಗುರುರಾಯರನನುದಿನ ಪ ಶರಣು ಜನರ‌ಘ ತರಿದು ಕರುಣದಿ ಚರಣ ಸರಸಿಜ ಹರುಷದಿಂದಲಿ ಅ.ಪ ನಳಿನ ಬಾಂಧವ ಕುಲದಿ ಅವತಾರ ಮಾಡಿದೆ ಇಳಿಜರಮಣನಾಜ್ಞದಿ ಕಲಿಯುಗದಿ ದ್ವಿಜರನು ಸಲಹಲೋಸುಗ ಜಗದಿ ಜನಿಸಿ ಗುರುಗಳ || ವಲಿಮೆಯನು ತಾಪಡೆದು ಕೊರಳಲಿ ತುಲಸಿ ಮಾಲೆಯ ಧರಿಸಿ ಹರಿಯನು ವಲಿಸಿ ಥಳ ಥಳ ಪೊಳೆವವ ಸ್ತಂಬದಿ ಕುಳಿತ ಶ್ರೀರಂಗವಲಿದ ದಾಸರ 1 ಮಾನಿನಿಯಳ ಮಾನರಕ್ಷಿಸಿದೆ ಶ್ರೀ ಪವ ಮಾನನಯ್ಯನ ಕರುಣವನು ಪಡೆದು ಸ್ತುತಿಸಿದಿ ವನು ಪಾಲಿಸಿ ಗುರು ಭವ ಕಾನನಕೆ ಕೃಶಾನುವೆನಿಸಿದ ಮಾನವಿ ಪುರ ನಿಲಯರನು ಅನುಮಾನವಿಲ್ಲದೆ ಮಾನಸದಿನೀ 2 ಶ್ರೀಮಧ್ವಾಚಾರ್ಯ ಸುಮತ ಶರಧಿಗೆ ಹಿಮ ಧಾಮನೆನಿಸಿ ನಿರುತ ಸೇವಿಪರಿಗೆ ಕಾಮಿತಾರ್ಥಗಳಿಗೆ ತ್ವರಿತ ನೀಡಿ ಶಿರಿವರ ಶಾಮಸುಂದರ ಸ್ವಾಮಿ ಪರನೆಂಬೊ | ಪ್ರೇಮದಿಂದಲಿ ಹರಿಕಥಾಮೃತ ಈ ಮಹಾಸುಗ್ರಂಥ ರಚಿಸಿದ ಹೇಮ ಕಶ್ಯಪ ತನಯರನುಜರ 3
--------------
ಶಾಮಸುಂದರ ವಿಠಲ
ಸ್ಮರಿಸಿದದರಘನನಾಶನ ಸ್ಮರಿಸಿದವರಘನಾಶಸ್ಮರನಯ್ಯನಂಘ್ರಿ ಯುಗ ಸರಸಿಜವ ಪೂಜಿಸುವಗುರು ವಿಜಯರಾಯರ ಚರಣಾಬ್ಜ ಸಾರಿದವದುರಿತಾಬ್ಧಿ ಮೀರಿದವ ಹರಿಪುರವ ಸೇರಿದವನೊ ಪ ಅಘ ಬಂಧ ಪರಿಹರ ಮಾಡುತಾ ಜನರು 1 ಇನಿತು ಜನಸಮುದಾಯದೊಳು ಯಿರುತಿರ್ದ ಇಭವರದ ನನುದಿನವು ಗಾಯನದಿ ಕೊಂಡಾಡಿ ಮನಮುಟ್ಟಿವಿನಯಾತಿಶಯದಲ್ಲಿ ಗುರುವರ್ಯರಾ ಸೇವೆ ಘನವಾಗಿ ಮಾಡಿ ಮುದದಿ ||ತನುವೆತ್ತಿ ವರಸರಿತ ತೀರದಾ ಅಣು ಬದರಿಜನ ಶ್ರೇಷ್ಠರೊಳು ಹರಿಯ ದಾಸ ಪೆಸರಲಿ ಬಂದುಘನ ಯಾದವಾದ್ರಿ ಪಟ್ಟಣದೊಳಗೆ ಯಿದ್ದು ಬಗೆ ಜನನಿ ಅನುಜಾತಿ ಸಹಿತ 2 ಕೆಲವು ದಿನ ಸಂಸಾರ ಗಲಭಿಯೊಳು ಯಿರುತಿರ್ದುಜಲದೊಳಗೆ ಅಂಬುಜವು ಮಿಳಿತವಾಗಿದ್ದ ತೆರಹಳಿದು ದುಷ್ಟಾಸಿಯನು ಕಳೆದು ಕಡು ಮಮತೆಯನು ಪುಳಕೋತ್ಸ ಮನದಿ ತಾಳಿ ||ಜಲದೊಳುತ್ತಮವಾದ ಭಾಗೀರಥೀ ಯಾತ್ರಿಛಲ ಭಕುತಿಯಿಂದಲಿ ಮಾಡಿ ಮೋದದಿ ಹರಿಯಹಲವು ಬಗೆ ಲೀಲೆಯನು ಹರುಷದಿಂದಲಿ ಯಿನ್ನು ತಿಳಿದು ಗುರು ಕರುಣ ಬಲದಿ 3 ಮೂರ್ತಿ ಮನದೊಳು ಕಂಡು ಸುಖವನಧಿಯಲ್ಲಿ ಲೋಲ್ಯಾಡಿಕೊಳುತ ||ಅಲ್ಲಿಂದ ತೆರಳಿ ಗಿರಿಯಲ್ಲಿದ್ದ ವೆಂಕಟನಸಲ್ಲುವಾ ಭಕುತರೊಳು ಸಲೆ ಶ್ರೇಷ್ಠನೆಂದೆನಿಸಿಮಲ್ಲ ಮರ್ದನನಾದ ಮುರಹರನ ಮಹಿಮೆ ಮನ ಬಲ್ಲನಿತು ವಿಸ್ತರಿಸುತ ಜನರು 4 ಈ ತೆರದಿ ಇಭವರದನಾತುಮದೊಳಗೆ ತಂದುಭೂತಳದ ಬಲು ವಿಧದ ತೀರ್ಥಕ್ಷೇತ್ರಗಳಲ್ಲಿಪ್ರೀತಿಯಿಂದಲಿ ಪರಮ ಪುರುಷನ್ನ ಧೇನಿಸುತ ಖ್ಯಾತಿ ಮಹಿಯೊಳಗೆ ಮೆರದು ||ವಾತಜಾತನ ಮತದ ವೊಳಗಿಪ್ಪ ವೈಷ್ಣವರತಾತನೆಂದೆನಿಸಿ ಸುಖವ್ರಾತದೊಳಗಿಡುವಲ್ಲಿಚಾತುರ್ಯದಿಂದ ಬಲುದಾತನೆನಿಸುತಲಿ ಭವತೀತರನ ಮಾಡಿ ಪೊರವ ಜನರು 5 ಆ ಬಗೆಯಲೀ ಕಮಲನಾಭ ಕರುಣಿಸಿ ಯಿವರಈ ಭುವನದೊಳು ಯಿಟ್ಟು ಜನರ ವುದ್ಧರಿಸುವಲೋಭದಿಂದಲಿ ಸಕಲ ಸಜ್ಜನರ ಸನ್ಮಾರ್ಗ ಲಾಭದೊಳು ಸೇರಿಸಿದನೊ ||ತ್ರ್ರಿಭುವನದೊಡೆಯನ್ನ ಕಥೆಯ ತಿಳಿಸುವ ಜನಕೆಶೋಭಿಸುವ ಗಾಯನದ ಸೊಬಗಿನಿಂದಲಿ ಕೇಳಿಶ್ರೀಭೂರಮಣ ವೊಲಿದು ಪಾಲಿಸುವನಾಮೇಲೆ ಶೋಭನ ಗತಿಯ ನೀವನೊ 6 ಕಲುಷ ವಾಕು ವುಪಜೀವರಿಗೆ ಏಕ ಮನದಿಂದಿರುವದೇ ಈ ಕಲಿಯುಗದಲಿಸಾಕಾರ ಗುಣಪೂರ್ಣ ಶ್ರೀನಿವಾಸನು ಬಿಡದೆ ಸಾಕುವನು ಸಮ್ಮೊಗದಲಿ ಜನರು 7 ದೇವಮುನಿ ನಾರದನು ಜೀವಿಗಳನುದ್ಧರಿಪಭಾವದಲಿ ಯಮಪುರಿಯ ದೇವನಲ್ಲಿಗೆ ಪೋಗಿಸಾವಧಾನದಿ ಸಕಲ ಸತ್ಕಾರಕೊಳಗಾಗಿ ನೋವು ಬಡವರನೀಕ್ಷಿಸಿ || ಸಾವಧಾನದಿ ಕೇಳಿ ಕಲಶಾರುಣೀ ಭಕ್ತ- ರಾವಳಿಯ ಸಲಹುವ ದೇವ ದೇವೇಶನನುತಾ ವದರಿ ಕೂಗಲಾ ಜೀವರೆಲ್ಲರು ಕೇಳಿ ಪಾವಿತ್ರವನೆಗೈದರೊ ಜನರು 8 ಭವ ಸಿರಿ ಚರಣಕೆ ಜನರು 9 ಸಿರಿ ತರಣಿ ಶರಧಿ ಶಯನನ ತೋರುವ ಜನರು 10 ದಾನವಾಂತಕ ದನುಜರನ್ನು ಸಂಹರಿಸುವಾಜ್ಞಾನಪೂರ್ಣನು ಗುಪ್ತ ತಾನಾಗಿ ಜಗದೊಳಗೆಹಾನಿ ವೃದ್ಧಿಂಗಳಿಗೆ ಹೊರಗಾಗಿ ಜೀವಿಗಳ ಮಾಣದಲೆ ಪರಿಪಾಲಿಪ ||ಕ್ಷೋಣಿಯೊಳು ಭಕುತರಘ ಹಾನಿಗೈಸುವ ಬಗಿಗೆಈ ನಿರುದ್ಧಕೆ ಯಿವರಧೀನ ಮಾಡಿದ ನಮಗೆವೇಣುಗೋಪಾಲ ವಿಠಲರೇಯ ತಾನೊಲಿದು ಸ್ವಾನಂದವನೆ ವುಣಿಸುವ ಜನರು 11
--------------
ವೇಣುಗೋಪಾಲದಾಸರು
ಸ್ಮರಿಸು ಗುರು ಸಂತತಿಯನು ಮನವೇ ಪ ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ಅ.ಪ. ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ ಪರಮೇಷ್ಠಿ ತತ್ಸುತರು ಸನಕಾದ್ಯರಾ ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ ಕೈವಲ್ಯ ಯತಿವರರ 1 ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ ಸೂನು ಸುತಪೋರಾಜ ವರಕುಮಾರಾ ಅಚ್ಯುತ ಪ್ರೇಕ್ಷರಂಘ್ರಿಗಳ ಆ ನಮಿಪೆನನವರತ ಭಕ್ತಿ ಪೂರ್ವಕದೀ 2 ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ ಪ್ರೋಚ್ಚಾಬ್ಜನಾಭ ನರಹರಿ ಮಾಧವಾ ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ ತೋಚ್ಛಾಟನವಗೈದ ಜಯತೀರ್ಥ ಗುರುವರರ 3 ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ 4 ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು ಭಿಕ್ಷುಗಳ ಜಗನ್ನಾಥ ಗುರುಗಳನಾ 5 ಮೂರ್ತಿ ವಿ ಶ್ರೀನಾಥ ಗುರುವರರ ಕರಕಮಲಜಾತ ವಿ ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ 6 ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ 7 ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ ವಾರಿಧಿ ರಾಘವೇಂದ್ರಾರ್ಯರಾ ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ ಜಗತೀತಳದಿ ಪ್ರಸಿದ್ಧ ಸುಮತೀಂದ್ರರ 8 ಸಾಧುಜನಸನ್ನುತ ಉಪೇಂದ್ರರಾಯರ ವೇದ ವೇದಾಂಗ ಚತುರ ವಾದೀಂದ್ರ ಯತಿಯಾ ದ್ಯಾದಾನಾಸಕ್ತ ವರದೇಂದ್ರ ಯತಿವರರ 9 ರಾಮವೇದವ್ಯಾಸರಂಘ್ರಿ ಕಮಲಗಳ ಹೃ ತ್ತಾಮರಸದೊಳು ಪೂಜಿಸಿದ ಬಗೆಯನ್ನು ಧೀಮಂತರಿಗೆ ತಿಳಿಸಲೋಸುಗದಿ ನವರತ್ನ ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ 10 ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ ಭವ ಗೆದ್ದಾ ಸುಬೋಧ ಸುಜನೇಂದ್ರರಾ ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ 11 ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ ತ್ಪರಿಹಾರಗೈಸುವುದು ಗುರುಗಳ ಸ್ಮರಣೇ ಪರಮ ಸೌಖ್ಯವನೀವದಾದಾವ ಕಾಲದಲಿ ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ12 ನವ ವೃಂದಾವನ
--------------
ಜಗನ್ನಾಥದಾಸರು
ಸ್ಮರಿಸು ಮನವೆ ಶ್ರೀಹರಿಯಚರಣ ಕಮಲಯುಗವರಿಯಾ ಮೂರುಲೋಕದ ನಿಜಧೊರಿಯ ಮರೆಯದಿರು ನರಹರಿಯ ಧ್ರುವ ತಂತು ಪಿಡಿದನುದಿನ ಚಿಂತಿಸೊ ಕಂತಿಪಿತನ ನಿತ್ಯ ನಿಜಾನಂದ ಘನ ಸಂತತ ನೆರಿಯ ಪೂರ್ಣ 1 ಕರ್ತು ಶ್ರೀ ಸದ್ಗುರುವಿನ ಗುರ್ತುಮಾಡಿಕೊ ನಿಧಾನ ನಿತ್ಯ ನಿಜಾನುಸಂಧಾನ ಪ್ರಾರ್ಥಿಸೋ ಪರಮಾತ್ಮನ 2 ಇಹ್ಯ ಪರಾನಂದಘನ ಬಾಹ್ಯಾಂತ್ರ ಸದೋದಿತನ ಧ್ಯಾಯಿಸೋ ನೀ ಪರಿಪೂರ್ಣ ಮಹಿಪತಿ ಪ್ರಾಣನಾಥನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮರಿಸುವ ನರನೇ ಧನ್ಯ ಸನ್ಮಾನ್ಯ ಪ ಸ್ಮರಿಸುವರಿಗೆ ಸುರತರುಕಲ್ಪ ವಿಭರಾಮ ಪುರದಿ ಶ್ರೀಹರಿ ಧ್ಯಾನಪರ ಶ್ರೀ ಕೃಷ್ಣಾಚಾರ್ಯರ ಅ.ಪ ಭರತ ಭೂಮಿಯೊಳವತರಿಸಿ ದೇವಾಂಶದಿ ಪುರುಹೂತನಂತೆ ಗಜಾಂತ ವೈಭವದಿಂದ ಮೆರೆಯುತ ತಮ್ಮಯ ಚರಣಾರಾಧಕರನು- ದ್ದರಿಸಲೋಸುಗದಿ ಸಂಚರಿಸುತ ಮುದದಿ ಸಂದರುಶನದಿಂಧಾಘವ ಕಳೆದು ಬಲು ಕರುಣದಲಿಷ್ಟಾರ್ಥವ ಗರಿದು ಬಹು ಶರಣು ಜ- ನರ ಪೊರೆವ ಭೂಸುರರೊಳು ಮರುತ ಮತಾಬ್ಧಿ ಚಂದಿರನೆನಿಸಿದವರ 1 ವರ್ಣಿಸಲೊಶವಲ್ಲ ಚರಣಯುಗ್ಮಾರಭ್ಯ ಶಿರಪರಿಯಂತರ ಗುರುಗಳಾಕೃತಿಯನ್ನು ನಿರುತ ಧ್ಯಾನಿಪರಿಗೆ ಪರಮ ಮಂಗಳವೀವ ಪರಿಶೋಭಿಸುವ ರತ್ನಾಭರಣದಿಂದೋಪ್ಪುವ ಸ್ವರ್ಣತುಲಸಿ ಮುಕ್ತಹಾರ ಭೂಷಿತ ಕಂಧರ ಸುಂದರವಾದ ಮುಖದೊಳು ಮಂದಸ್ಮಿರ ಕಸ್ತೂರಿಯಂತೆ ಪರಿಮಳಾನ್ವಿತ ಶರೀರ ಮಂತ್ರಾಲಯ ಗುರುರಾಘವೇಂದ್ರರ ಕರುಣಾಸುಪಾತ್ರರ2 ಚಿರಕಾಲ ಶೇವಿಪ ಪರಮ ವಂಧ್ಯರಿಗೆಲ್ಲ ವರಪುತ್ರ ಸೌಖ್ಯವ ಕರುಣಿಸುವರು ಸತ್ಯ ಅಪರಿಮಿತ ಮಹಿಮರೆಂದರಿಯದೆ ಇವರನ್ನು ಜರಿಯಲಾಕ್ಷಣದಲಿ ಅರಿತು ಭೀಕರವಾದ ಉರಗರೂಪವ ತೋರುತ ತ್ಯಜಿಸಿ ಮತ್ತೆ ನಿಜರೂಪದಿಂದಿರುತ ನೋಳ್ಪರಿಗತ್ಯಾಶ್ಚರ್ಯ ಸದ್ಗುಣ ಭರಿತ ಕಾರ್ಪರ ನರಹರಿಯ ಪರೋಕ್ಷದಿ ನಿರುತ ಸುಖಿಪರಂಘ್ರಿ 3
--------------
ಕಾರ್ಪರ ನರಹರಿದಾಸರು
ಸ್ಮರಿಸುವರ ಪಾಲಿಪ ಬಿರುದು ಭಕುತರ ಪೊರೆವ ಕರುಣಿಯೆಪ ಪರಿಪರಿವಿಧದಲಿ ಪರಿತಪಿಸುವರನು ಕರವಿಡಿದುದ್ಧರಿಸುತ ಸಂತೈಸುವ ಉರಗಾದ್ರಿವಾಸ ವಿಠ್ಠಲ ಸಂತೈಸು ಚರಣಕಮಲಗಳಿಗೆರಗಿ ಭಿನ್ನೈಸುವೆ1 ಮಂದಮತಿಯು ನಾನೆಂದು ವಂದಿಪರ ಬಂಧನ ಕಳೆಯುತ ಮುಂದೆ ಗತಿಯು ತೋರಿ ತಂದೆ ವೆಂಕಟೇಶ ವಿಠ್ಠಲ ಭಕುತರ ಸಂದಣಿ ಪೊರೆಯುವರೆಂಬ ಬಿರುದು ದೇವ 2 ಆಶಾಪಾಶಗಳಿಗೊಳಗಾಗಿಹ ಮನ- ದಾಸೆ ಪೂರೈಸುತ ನೀ ಸಲಹೈ ಗುರು ವಾಸುದೇವ ವಿಠ್ಠಲ ಹರಿ ಭಕುತರ ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ 3 ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ ಒದಗಿದ ಪಾಪದಿ ಹೆದರÀುತಲಿದೆ ಮನ ಪದುಮಜಾಂಡ ಸೃಜಿಸಿದ ಪರಮಾತ್ಮನಿ- ಗದ್ಭುತವೇ ಪಾಮರರನು ಪೊರೆವುದು 4 ಮಣಿದು ಬಿನ್ನೈಸುವೆ ಪವನಮತವÀ ತೋರಿ ಬಿನಗು ಬುದ್ಧಿಗಳ ಗಮನಕೆ ತಾರದೆ ಕಮಲನಾಭ ವಿಠ್ಠಲ ತವ ಕರುಣದಿ ಮನದ ಕ್ಲೇಶಗಳ ಕಳೆದು ಉದ್ಧರಿಸುತ 5
--------------
ನಿಡಗುರುಕಿ ಜೀವೂಬಾಯಿ
ಸ್ಮರಿಸುವರಘಹರ ರಾಘವೇಂದ್ರ ಗುರುಆರುಮೊರೆ ಇಡುವೆನು ತವಪದದಲ್ಲೀ ಪ ಸುರತರು ನಿನ್ನನು | ನಿರುತದಿ ನುತಿಸುವವರವನೆ ಕರುಣಿಸು | ಗುರು ರಾಘವೇಂದ್ರ ಅ.ಪ. ಕೃತ ಯುಗದೊಳು ತಾ | ಮುನಿ ಕಶ್ಯಪನಸುತನಲಿ ಮೋದದಿ | ಸುತನಾಗಿ ಜನಿಸುತ |ಪಿತನತಿ ಬಾಧೆಗೆ | ಅಳುಕದೆ ಮನ್ಮಥಪಿತನಧಿಕೆಂದು ಬಹು | ಸಾರಿದೆ ಗುರುವರ 1 ಜನಪ ಪ್ರತೀಪನ | ಸುತ ವರನೆನಿಸುತಜನಿಸುತ ಪ್ರೀತಿಲಿ | ದ್ವಾಪರದಲ್ಲೀ |ಘನಬಲ ಬಾಹ್ಲೀಕ | ನೆನಿಸುತ ನೀನೂಅನಿರುದ್ಧ ಮೂರ್ತಿಯ | ಸೇವಿಸಿ ಮೆರೆದೆ 2 ನ್ಯಾಯಾ ಮೃತ ಚಂ | ದ್ರಿಕೆಗಳ ರಚಿಸುತಮಾಯ ಮತವನು | ಪರಿಪರಿ ಜೆರೆಯುತ |ಕಾಯ ಜನಯ್ಯನ | ಕೀರ್ತಿಯ ಬೀರುತತೋಯಜಾಕ್ಷ ಹರಿ | ಅಧಿಕೆಂದು ಸಾರಿದೆ 3 ಸಂಗವ ತೊರೆದು | ಸುಧೀಂದ್ರರ ಕರಜನೆತಂಗಾತೀರದಿ | ಮಂತ್ರಾಲಯದಲಿ |ಮಂಗಳ ಮಹಿಮನ | ಧ್ಯಾನವ ಗೈಯುತತುಂಗ ವಿಕ್ರಮ ಹರಿ | ಪರನೆಂದು ಸಾರಿದೆ 4 ವಾತನ ಮತ ವಿ | ಸ್ತರಿಸಿದ ಧೀರನೆದ್ವೈತ ದುಂದುಭಿಯ | ಮೊಳಗಿಸಿದಾತನೆ |ದೂತರ ಪ್ರಿಯ ಗುರು | ಗೋವಿಂದ ವಿಠಲನಪ್ರೀತಿಲಿ ಭಜಿಸುವ | ದಾಸಾಗ್ರಣಿಯೇ 5
--------------
ಗುರುಗೋವಿಂದವಿಠಲರು
ಸ್ಮರಿಸುವುದು ಗುರು ಸಂತತಿಯನೂ ಪ ನಿತ್ಯ | ಗುರುವರ್ಯ ಸಂತತಿಯ ಹರಿಕರುಣವೂ ದೊರಕಿ | ಸರ್ವ ಆಮಯ ಹರವು ಪರಮ ಪುರುಷಾರ್ಥಕ್ಕೆ ವರ ಮಾರ್ಗವೆಂದೆನಿಪ ಸದ್ಭಕ್ತಿ ಜ್ಞಾನಪ್ರದವು ಅ.ಪ. ಆದಿ ಮೂರುತಿ ಹಂಸ | ಪಾದಾನುವರ್ತಿ ವಿಧಿಆದಿವಿಧಿ ಸುತರು ಸನ | ಕಾದಿ ಪದ ಪದ್ಮಗಳಮೋದದಿಂ ಭಜಿಪ ದೂ | ರ್ವಾಸ ತತ್ಕರಜ ಸುಜ್ಞಾನ ನಿಧಿಗಳ ಪಾದವ ||ಆದರದಿ ಗರುಡವಾಹನ ತೀರ್ಥ ಕೈವಲ್ಯರಾದರಿಸಿ ಜ್ಞಾನೇಶ ತತ್ಕರಜ ಪರತೀರ್ಥಪಾದಾಬ್ಜ ಸೇವಿಸುವ ಸತ್ಯ ಪ್ರಾಜ್ಞ ಕರಜ ಪ್ರಾಜ್ಞ ತೀರ್ಥರು ಯತಿಗಳ 1 ಅಚ್ಯುತ ಮಾಧವ ತೀರ್ಥ | ಆಕ್ಷೋಭ್ಯ ತೀರ್ಥರೂತತ್ಕರಜ ಪರವಾದಿ | ಗಜಸಿಂಹ ಜಯತೀರ್ಥಯತಿಗಳಾ ವಿದ್ಯಾಧಿ | ರಾಜ ಸತ್ಕವೀಂದ್ರರು ವಾಗೀಶ ರಾಮಚಂದ್ರ 2 ಅತ್ಯಂತ ಮಹಿಮರೆನೆ | ವಿಭುದೇಂದ್ರ ವಿದ್ಯೆನಿಧಿಮತ್ತವರ ಕರಜಾತ | ರಘುನಾಥ ರಘುವರ್ಯಭೃತ್ಯ ವೇದವ್ಯಾಸ | ತೀರ್ಥ ವಿದ್ಯಾಧೀಶ ವೇದನಿಧಿ ಸತ್ಯವ್ರತರ ||ಸತ್ಯನಿಧಿ ಸತ್ಯನಾಥಾಖ್ಯ ಸತ್ಯಾಭಿನವಸತ್ಯ ಪೂರ್ಣಾಖ್ಯ ಯತಿ | ಸತ್ಯ ವಿಜಯಾರ್ಯ ವರಸತ್ಯ ಪ್ರಿಯ ತೀರ್ಥಾಖ್ಯ | ಸತ್ಯ ಬೋಧಾಖ್ಯಮಹ ಸತ್ಯ ಸಂಧಾಖ್ಯ ಮುನಿಯ 3 ಸತ್ಯವರ ಸತ್ಯಧರ್ಮಾಖ್ಯ ಸತ್ಯಸಂಕಲ್ಪಸತ್ಯ ಸಂತುಷ್ಟಾಖ್ಯ | ಸತ್ಯ ಪರೆಯಣ ತೀರ್ಥ ಸತ್ಯ ಕಾಮಾಖ್ಯ ಯತಿ | ಸತ್ಯೇಷ್ಟ ಕರಜರೆನೆ ಸತ್ಯ ಪರಾಕ್ರಮ ತೀರ್ಥರ || ಸತ್ಯ ವೀರಾಖ್ಯಯತಿ | ಸತ್ಯಧೀರಾಖ್ಯರಂತತ್ಕರಜ ಶಿರಿಸತ್ಯ | ಜ್ಞಾನಾಖ್ಯ ಅಗ್ನ್ಯಂಶದುಸ್ತಿಮಿರ ಮಾಯ್ಮತದ | ಮಾರ್ತೆಂಡರೆಂದೆನಿಪ ಶಿರ ಸತ್ಯ ಧ್ಯಾನಾಖ್ಯರ4 ನಿತ್ಯ ಗುರು ಗೋವಿಂದ ವಿಠಲ ತಾ ಪೊರೆವ ಸತ್ಯ 5
--------------
ಗುರುಗೋವಿಂದವಿಠಲರು
ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿಪ ಪೊರೆಯೊ ಎನ್ನನು ಜೀಯಾ ತವ ಮಹಿಮ ವರ್ಣಿಸ ಲರಿಯ ಮುರಹರಪ್ರೀಯಾ ಅಧ ಮಾಧಮನ ಮಮ ಪರಿಯ ನೀ ಬಲ್ಲೆಯ್ಯಾ ತೋರಯ್ಯಾ ದಯ ವರದ ಚರಿತೆಯ ಅರುಹುವದಕೆ ಪರವಾಕ್ಯರಣಿಯನು ಪಾಲಿಸಿ ನಿರುತ ಹರಿಗುರು ಚರಣದಲಿ ರತಿ ತ್ವರಿತ ಕರುಣಿಸು ರಾಘವೇಂದ್ರನೆ ಪ ಹಿಂದೆ ಕೃತಯುಗದಲಿ ಪ್ರಹ್ಲಾದ ನಾಮದಿ ತಂದೆ ಹಿರಣ್ಯಾಕ್ಷನಲಿ ಸರ್ವೋತ್ತಮನು ಹರಿ ದ್ವಂದ್ವ ಕರ್ಮವನಲಿ ಅರ್ಪಿಸಲು ಮಹದಾ ನಂದ ಪೊಂದುವರಲ್ಲಿ ಎಂದು ಪೇಳುತಿರೆ ಮಂದ ದೈತ್ಯವನಂದ ಮಾತಿಗೆ ಬಂಧನಾದಿಗ ಳಿಂದ ಶಿಕ್ಷಿಸೆ ಬಂದ ದುರಿತವನಂದು ಕಳೆದಾ ಕಂದನನು ಹರಿಪೊರೆಯೆ ದಿತಿಜನು ಒಂದೂ ತಿಳಿಯದೆ ಮಂದಿರ ಗೋವಿಂನೆಲ್ಲಿಹ ನೆಂದು ಕೇಳುತ ಮಂದರರೋದ್ಧಾರ ನಿಲ್ಲದಿಹ ಸ್ಥಳ ವಂದೂ ಇಲ್ಲವೂ ಎಂಂದು ಸಾರಿದೆ ತಂದು ತೋರಿಸು ಸ್ತಂಭದಲಿ ತವ ಇಂದಿರಾಪತಿಯೆಂದು ಗರ್ಜಿಸೆ ಕಂದನಾಡಿದ ಮಾತುಗಳನು ನಿಜ ವೆಂದು ನರಹರಿ ಪೊರೆದೆ 1 ಶ್ರೀಶನಾಜ್ಞೆಯ ವಹಿಸಿ ದ್ವಿತೀಯಾವತಾರದಿ ವ್ಯಾಸರಾಯನು ಎನಿಸಿ ಬ್ರಹ್ಮಣ್ಯರÀಲಿ ಸ ನ್ಯಾಸವನು ಸ್ವೀಕರಿಸಿ ಸರ್ವಜ್ಞ ಶಾಸ್ತ್ರಾಭ್ಯಾಸವನು ಪೂರೈಸಿ ವ್ಯಾಸತ್ರಯ ರಚಿಸಿ ದೇಶದೇಶಗಳನ್ನು ಚರಿಸುತ ಆ ಸಮಸ್ತ ಕುವಾದಿಗಳ ಮತ ನಾಶಗೊಳಿಸಿ ರ ಮೇಶ ಶ್ರೀ ವೆಂಕಟೇಶನನು ಬಹುದಿನವು ಪೋಜಿಸಿ ವಾಸಿಸುತ ಗಜರಾಮ ಪುರಧಾಧೀಶರಾಯನ ಕುಹಯೋಗವ ಪುರಂದರ ದಾಸರಿಂದೊಡಗೂಡಿ ಕೃಷ್ಣನುಪಾಸನೆಯ ಭಕ್ತಿಯಲಿ ಗೈಯುತ ವಾಸುದೇವನ ಶಿಲ್ಪ ಶಾಸ್ತ್ರದ ಶಾಸನಕೆ ಪ್ರತಿಯಾಗಿ ನಿಲ್ಲಿಸಿ ತೋಷಿಸಿದ ಸೌಭಾಗ್ಯ ವೈಭವ 2 ಪದುವ ಸಂಭವ ಜಾತ ಶ್ರೀ ರಾಘವೇಂದ್ರ ಸು ಪದವ ಪಡೆದ ಪ್ರಖ್ಯಾತ ಜಯತೀರ್ಥ ಮುನಿಕೃತ ಸುಧೆಗೆ ಪರಿಮುಳ ಗ್ರಂಧ ರಚಿಸಿ ಮೆರೆದಾತ ಬಧಿರ ಮೂಕಾಂಧ ವ್ಯಂಗ್ಯರು ವಿಧ ವಿಧಿದ ಘನರೋಗಗ್ರಸ್ತರು ಸದಯ ನೀಗತಿಯೆಂದು ಸೇವಿಸೆ ತ್ರಿದಶ ಭೂರುಹದಂತೆ ಸಲಹುವಿ ಕುಧರ ತೀರದಿ ಮೂಲ ರಘುಪತಿ ಪದವ ಪೂಜಿಸುತಲಿ ಸಜೀವದಿ ಮುದದಿ ವೃಂದಾವನ ಪ್ರವೇಶಿಸಿ ಪದುಮನಾಭ ಶ್ರೀ ಶಾಮಸುಂದರ ಮಧು ವಿರೋಧಿಯನು ಧ್ಯಾನಿಸುತ ಶಿರಿ ಸದನನು ವಲಿಸುತ್ತ ಕರುಣಾ ನಿಧಿಯು ಭಜಕರ ಪೊರೆವ ಮಹಿಮೆಯ 3
--------------
ಶಾಮಸುಂದರ ವಿಠಲ
ಸ್ಮರಿಸುವೆನು ಸದ್ಭಕ್ತಿಯಲಿ ಶ್ರೀರಾಮನ ಗುಣಧಾಮನ ಸಿರಿವಿರಿಂಚಾದ್ಯಮರಗಣ ಸಂಸ್ತುತ್ಯನ ಸಂತೃಪ್ತನಾ ಪ ಆದಿಯಲಿ ಝಷನಾಗಿ ನಿಗಮವ ತಂದನ ಮುನಿವಂದ್ಯನ ಭೂಧರಾಧರ ದಿವಿಜರಿಗೆ ಸುಧೆಗರೆದನ ಸುರವರದನ ಕಾದು ಕಿಟರೂಪದಲಿ ಭೂಮಿಯ ತಂದನ ಗುಣವೃಂದನ ಬಾಧಿಸಿದ ರಕ್ಕಸನ ತರಿದು ಪ್ರಲ್ಹಾದನ ತಾ ಪೊರೆದನ 1 ತುಳಿದನ ಅವಗೊಲಿದನ ಕೊಡಲಿ ಪಿಡಿದಾ ಕ್ಷತ್ರಿಕುಲ ವಿರಾಮನ ಭೃಗು ರಾಮನ ಮೃಡನೊರದಿ ಯುನ್ಮತ್ತ ದೈತ್ಯರು ಬಾಧಿಸೆ ಧರಿ ಪ್ರಾರ್ಥಿಸೆ ಜಡಜ ಪೀಠಾದ್ಯಮರರಾ ಮೊರೆ ಕೇಳ್ದನ ಧರೆಗಿಳಿದನ 2 ದಶರಥನ ಸತಿಯುದರದಲಿಯವತರಿಸಿದ ಮುದಗರಿಸಿದ ಬಿಸರುಹಾಪ್ತನ ವಂಶವನು ಉದ್ಧರಿಸಿದ ಮೈಮರಸಿದ ದಶದಿಶೆದಿ ಸುರರೆಲ್ಲ ಪೂಮಳೆಗರೆದರು ಸುಖಸುರಿದರು ಅಸಮಲೀಲೆಯ ತೋರ್ದರಘುಕಲಚಂದ್ರನ ಸುಖಸಾಂದ್ರನ 3 ಗಾಧಿಸುತನಧ್ವರವ ಕಾಯ್ದ ಸಮರ್ಥನ ಜಗಕರ್ತನ ವೇದಧನು ಮೊದಲಾದ ಕಲೆಗಳ ತಿಳಿದನ ಮುನಿಗೊಲಿದನ ಹಾದಿಯಲಿ ಶಿಲೆಯಾದ ಅಹಲ್ಯಳ ಪೊರೆದನ ಸಿರಿವರದನ ಮೋದದಲಿ ಹರಧನು ಮುರಿದ ಗಂಭೀರನ ಬಹುಶೂರನ 4 ಜನಕಭೂಪತಿ ತನುಜಳೆನಿಸಿದಸೀತೆಯ ಭೂಜಾತೆಯಾ ಘನಹರುಷದಲಿ ವಲಿಸಿಕರವನು ಪಿಡಿದನ ಯಶಪಡೆದನ ದನುಜರುಪಟಳತೋರಲಾಕ್ಷಣ ಸೀಳ್ಪನ ಸುರರಾಳ್ದನ ತನಗೆ ತಾನೇ ಸೋಲಿಸಿದ ಜನಮೋಹನ ಖಗವಾಹನ 5 ಜನಕನಾಜ್ಞವ ಪಾಲಿಸಿದ ದಯವಂತನ ಅಘಶಾಂತನ ಅನುಜಸತಿಸಹ ಪುರದಿ ತಾಪೊರಮಟ್ಟನ ಅತಿಧಿಟ್ಟನ ವನದಿ ಬಹು ಮುನಿಗಳ ಕಾರಾರ್ಚಿತನಾದನ ಸುಪ್ರಸಾದನ ಅನುಜ ಭರತಗೆ ದಯದಿ ಪಾದುಕೆ ಕೊಟ್ಟನ ಸಂತುಷ್ಟನ 6 ಮನುಜರಂದದಿ ಸತಿವಿಯೋಗವತೋರ್ದನ ಕುಜನಾರ್ದನ ವನಿತೆಯಂಜಲ ಫಲಗಳನು ತಾಮೆದ್ದನ ಶ್ರುತಿಸಿದ್ಧನ ದನುಜರಿಪು ಹನುಮಂತನನು ಸಾರೆ ಗರೆದನ ಕರುಣಿಸಿದನ ವನಜ ಸಖಸುತನೊಡನೆ ಸಖ್ಯವ ಮಾಡ್ಡನ ವರನೀಡ್ಡನ 7 ಲೀಲೆಯಿಂದಲಿ ತಾಳ ಮರಗಳ ಸೀಳ್ದನ ನೆರೆಬಾಳ್ದನ ವಾಲಿಯನು ಸಂಹರಿಸಿದತಿಬಲವಂತನ ಶ್ರೀಕಾಂತನ ಮೇಲೆನಿಪ ರಕ್ಕಸರನೆಲ್ಲರ ತುಳಿದನ ಅಸುಸೆಳೆದನ ಶ್ರೀಲತಾಂಗಿಯ ಕ್ಷೇಮವಾರ್ತೆಯ ಕೇಳ್ದನ ಮುದತಾಳ್ದನ 8 ಗಿರಿಗಳಿಂದಲಿ ಶರಧಿಯನು ಬಂಧಿಸಿದನ ಸಂಧಿಸಿದನ ಹರಿಗಳೆಲ್ಲರ ಕೂಡಿಲಂಕೆಯ ಸಾರ್ಧನ ರಣದಿರ್ದನ ಉರುಪರಾಕ್ರಮಿ ರಾವಣನ ಶಿರಕಡಿದನ ಹುಡಿಗೆಡೆದನ ವರವಿಭೀಷಣ ಭಕ್ತಗಭಿಷೇಚಿಸಿದನ ಪೋಷಿಸಿದನ 9 ಸಿರಿಸಹಿತ ಪುಷ್ಪಕವನೇರಿದ ಚಲುವನ ಅತಿ ಪೊಳೆವನ ತ್ವರದಿಶೃಂಗರಿಸಿದ ಅಯೋಧ್ಯಕೆ ಬಂದನ ಅಲ್ಲಿ ನಿಂದನ ಭರತ ಪ್ರಾರ್ಥಿಸಲಾಕ್ಷಣದಿ ಮೊರೆ ಕೇಳ್ದನ ಧರಿಯಾಳ್ದನ ಸರಸಿಜಾಸನ ಪ್ರಮುಖರಾರ್ಚನೆ ಕೊಂಡನ ಕೋದಂಡನ 10 ಮರುತಸುತನಿಗೆ ಅಜನ ಪದವಿಯನಿತ್ತನ ಬಹುಶಕ್ತನ ಚರಣಸೇವಕ ಜನಕಭೀಷ್ಟದಾತನ ವಿಖ್ಯಾತನ ನಿರುತ ಸನ್ಮುನಿಹೃದಯ ಮಂದಿರ ವಾಸನ ಜಗದೀಶನ ಸ್ಮರಣೆ ಮಾತ್ರದಿ ದುರಿತರಾಶಿಯ ತರಿದನ ಸುಖಗರೆವನ 11 ದೇವಕೀ ವಸುದೇವ ಸುತನೆಂದೆನಿಪನ ಜಗಕಧಿಪನ ಮಾವನನು ಸಂಹರಿಸಿ ಶಕಟನ ಕೊಂದನ ಆನಂದನ ಗೋವು ಕಾಯುತ ಗಿರಿಯ ಬೆರಳಲಿ ಆಂತನ ಬಹುಶಾಂತನ ಗೋವ್ರಜದಿ ಗೋಪಿಯರ ವಸನವ ಕಳೆದನ ಅಹಿತುಳಿದನ 12 ಲೋಕನಾಥನು ಪಾರ್ಥಸಾರಥಿಯಾದನ ಸುಪ್ರಮೋದನ ನೇಕ ಪರಿಭಗವತ್ಸುಗೀತೆಯ ಪೇಳ್ದನ ತಮಸೀಳ್ದನ ಆ ಕುರು ಕುಲವ ತರಿದ ಪಾಂಡವ ಪ್ರಾಣನ ಸುಪ್ರವೀಣನ ಆಕುರುಪ ಭೀಷ್ಮನಿಗೆ ಮುಕ್ತಿಯ ಕೊಟ್ಟನ ಅತಿಶ್ರೇಷ್ಟನ 13 ಕಪಟನಾಟಕ ನಗ್ನರೂಪದಿ ನಿಂತನ ನಿಶ್ಚಿಂತನ ತ್ರಿಪುರದಲಿ ಜಲಜಾಕ್ಷಿಯರ ವ್ರತ ಭÀಂಗನ ನಿಸ್ಸಂಗನ ಕೃಪಣವತ್ಸಲ ತುರಗವೇರಿ ತಾನಡೆದನ ಅಸಿಪಿಡಿದನ ಅಪರಿಮಿತ ಬಹುಕ್ರೂರ ಯವನ ವಿಘಾತನ ಪ್ರಖ್ಯಾತನ 14 ಈ ವಿಧದಿ ಬಹುಲೀಲೆ ಗೈವ ಸುಚರಿತನ ಜಗಭರಿತನ ಭಾವಶುದ್ಧಿಲಿ ಭಜಿಸುವವರಘಕಡಿವನ ಗತಿಕೊಡುವನ ಪಾವಮಾನಿ ಮತಾನುಗರ ಕರಪಿಡಿವನ ಭವತಡೆವನ ದೇವತತಿ ಸದ್ವಿನುತ ವರದೇಶ ವಿಠಲನ ನಿಷ್ಕುಟಿಲನ 15
--------------
ವರದೇಶವಿಠಲ
ಸ್ಮರಿಸೆಲವೋ ಸ್ಮರಿಸೆಲವೋ ಮನವೇ | ನಿರುತದಿ ಗುರುಮಹೀಪತಿ ಪಾದಾ ಪ ಆದ್ಯಾತ್ಮದಘನ ವಿದ್ಯೆಯ ಸಾಧಿಸಿ | ಸಿದ್ಧರ ನಡುವೆ ಪ್ರಸಿದ್ಧರಾದವರ 1 ನೆಟ್ಟನೆ ಶರಣರ ಪುಟ್ಟಿಸಿರಧಿಕಾ | ಬಿಟ್ಟುಪದೇಶವ ಕೊಟ್ಟು ಸಾಕುವರಾ 2 ಧಾರುಣಿಯೊಳು ಸಂಸಾರ ಮಾಡಿದರ | ಸಾರಸಜಲದಂತೆ ರಚಿಸಿದರಾ 3 ಯೋಗಧಾರುಣದಿ ಸಾಗಿಪದಿನಗಳು | ಭಾಗವತಾಗ್ರಣಿ ಎನಿಪಶ್ರೀಗುರುಪಾದಾ4 ವಿತ್ತಜನರು ತಂದಿತ್ತರೆ ಹಿಡಿಯದೆ | ನಿತ್ಯವ್ಯಯವ ಪವಡಿಸುತಿಹರವರಾ5 ಯುಕ್ತದಿ ವಿಷಯಾಸಕ್ತಿಯತ್ಯಜಿಸಿ | ವಿ ರಕ್ತಿ ಬೆಳಿಸಿ ಸುಮುಕ್ತಿ ಪಡೆದವರಾ 6 ಸ್ವಸ್ಥದಿ ನಾಲ್ಕು ಅವಸ್ಥೆಯ ಮೀರಿ | ಸ ಮಸ್ತರಲಿ ನಿಜ ವಸ್ತು ಕಂಡವರಾ7 ಕಾಖಂಡಕಿ ಸ್ಥಳ ಶ್ರೀಕರವಂದ್ಯೆ | ನಿ ರಾಕರಿಸದೆ ಅಂಗೀಕರಿಸಿದರಾ 8 ಎಂದೆಂದಿಗೂ ಹೊರಗೊಂದಿನ ಹೋಗದೆ | ಮಂದಿರದೊಳಗಾನಂದದಲಿಹರಾ9 ತಾಪತೃಯದಾ ಭವಪರಿಹರಿಸುತ | ತಾಪೋರೆದನು ಗುರು ಶ್ರೀಪತಿಗುರುಪಾದಾ 10 ಅಂಕಿತ-ಗುರುಶ್ರೀಪತಿ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ಮರಿಸೊ ಮನವೇ ಹರಿಯ ನರಹರಿಯ ಅರಸಾಗ್ಯಾಳುವ ಸಿರಿಯ ಧ್ರುವ ಕರಿಯ ಕೇಳಿದ ಮೊರಿಯ ನೀನರಿಯ ಸುರರ ಬಿಡಿಸಿದ ಸರಿಯ ಧರೆಯೊಳಗಿದು ಖರಿಯ ಯುಗಮೊರಿಯ ಹೊರೆವನು ತಾ ಪರೋಪರಿಯ 1 ಸರ್ವದೈವಕೆ ಹಿರಿಯ ಮುರ ಅರಿಯ ಹರ ಹೃದಯದಲಿ ಪರಿಯ ಸ್ಮರಿಸುವದೀ ಪರಿಯ ದುರಿತ ಕರುಣಕಿಲ್ಲೀತನ ಸರಿಯ 2 ಸೆರಗವಿಡಿದು ಹರಿಯ ಪರಿಪರಿಯ ಅರಿಯೋ ನವವಿಧ ಪರಿಯ ಶರಣಾಗತರ ಸಿರಿಯ ಸುರವರ್ಯಾ ತರಳಮಹಿಪತಿ ದೊರೆಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮರಿಸೊ ಮಾನವನೆ ಗುರುಚರಣ ಅಂತ: ಕರಣ ಶುದ್ಧಿಯಲಿ ಮರೆಯದೆ ಪ್ರತಿದಿನ ಪ ದುರಿತ ಘನತತಿ ಮರುತ ಶ್ರೀ ರಘುದಾಂತ ತೀರ್ಥರ ಕರಜ ಶ್ರೀ ರಘುವೀರ ತೀರ್ಥರ ಚರಣಯುಗಲವ ಹರುಷದಿಂದಲಿ ಅ.ಪ ಧರೆಯೋಳ್ ಸುಂದರ ಸುರಪುರದಿ ಜನಿಸಿ ಗುರು ವಿಠ್ಠಲಾರ್ಯರ ಚರಣಾನುಗ್ರಹದಿ ವರ ಶಬ್ದ ಶಾಸ್ತ್ರವ ತ್ವರದಿ ಕಲಿತು ತುರಿಯಾ ಶ್ರಮವನೆ ಸ್ವೀಕರಿಸಿ ಗುರುಮುಖದಿ ಮರುತ ಶಾಸ್ತ್ರವನರಿತು ಧರ್ಮದೊಳಿರುತ ವಿಷಯದಿ ವಿರತಿಯಲಿ ಅನವರತ ಪ್ರವಚನ ನಿರತ ಸದ್ಗುಣ ಭರಿತ ಪಾವನ ಚರಿತರಂಘ್ರಿಯ 1 ಹೇಮಾಲಂಕೃತ ರತ್ನನಿಚಯಯುಕ್ತ ಹೇಮ ಮಂಟಪದಿ ಸುಂದರ ಶುಭಕಾಯಾ ಶ್ರೀ ಮನೋಹರ ಕವಿಗೇಯಾ ಬ್ರಹ್ಮ ವ್ಯೋಮ ಕೇಶಾದಿ ನಿರ್ಜರಗÀಣಶೇವ್ಯಾ ಭೂಮಿ ಸುರಜನ ಸ್ತೋಮಕನುದಿನ ಕಾಮಿತಾರ್ಥವ ಗರಿವ ಸೀತಾರಾಮರಂಘ್ರಿಯ ತಾಮರಸವನು ನೇಮದಿಂದರ್ಚಿಪರ ಶುಭಪದ2 ಪರಿಶೋಭಿಸುವ ಕಾಷಾಯ ವಸ್ತ್ರ ವರನಾಮ ಮುದ್ರಾಲಂಕೃತ ತನುಸಿರಿಯ ಗುರು ಅಕ್ಷೋಭ್ಯರ ಶುಭಚರಿಯ ಗ್ರಂಥ ವಿರಚಿಸಿದರು ನವರತುನ ಮಾಲಿಕೆಯ ಧರಣಿಯೊಳು ಸಂಚರಿಸುತಲಿ ಬಲು ಕರುಣದಿಂದಲಿ ಶರಣು ಜನರಘ ಭವ ಭಯಹರಣ ಗುರುವರ ಚರಣಯುಗಲವ3 ವಿನುತ ಸಮೀರ ಕೃತ ಸಾರಶಾಸ್ತ್ರವನೆ ಬೋಧಿಸುತ ಸಜ್ಜನರ ಘೋರ ಸಂಸೃತಿ ಭಯದೂರ ಮಾಡಿ ತೋರಿ ಸನ್ಮಾರ್ಗ ದೀಪಿಕೆಯ ಸುಸಾರ ಸೇರಿದವರಘ ದೂರ ಪರಮೋದಾರ ಗುಣ ಗಂ- ಸೂರಿಜನ ಪರಿವಾರನುತ ಜಿತ- ಮಾರ ಶ್ರೀ ರಘುವೀರ ತೀರ್ಥರ 4 ಶೇಷಾಚಲದಿ ಶಿಷ್ಯಗಣದಿ ಬಂದ ಶ್ರೀ ಸತ್ಯ ಪ್ರಮೋದ ತೀರ್ಥರ ಸ್ವರ್ಣೋತ್ಸವದಿ ತೋಷಬಡಿಸುತ ನಿರ್ಭಯದಿ ಉಪನ್ಯಾಸ ಮಾಡಿದರು ವೀಶಗಮನ ಸುರೇಶ ಭಕುತರ ಸಿರಿ ನರಕೇಸರಿಗೆ ಪ್ರಿಯದಾಸ ಕೊಡಲಿವಾಸ ಕರ್ಮಂದೀಶರಂಘ್ರಿಯ 5
--------------
ಕಾರ್ಪರ ನರಹರಿದಾಸರು