ಒಟ್ಟು 9952 ಕಡೆಗಳಲ್ಲಿ , 132 ದಾಸರು , 5277 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವಿರಲಿ ವ್ಯಾಸ ದಯವಿರಲಿಕೈವಲ್ಯಪತಿ ನಮಗೆ ಕರುಣೆ ಮಾಡೊ ಪೂರ್ಣ ಪಚಲ್ವರಾಯರ ಮನೆಯ ಕುಲದೈವ ವ್ಯಾಸನುಬಲರಾಮ ಪಾದವ ತೊಳೆದನು ಪೂರ್ಣಬಲರಾಮಪಾದತೊಳೆದು ಪ್ರಾರ್ಥಿಸಿದನುಹಲವು ಪದಾರ್ಥ ಕೈಕೊಳ್ಳೊ ಪೂರ್ಣ 1ತಂದೆ ವ್ಯಾಸ ಮುನಿಗೆ ಗಂಧ ಅಕ್ಷತೆ ಪುಷ್ಪಚಂದದ ತುಳಸಿಜಲದಿಂದ ಪೂರ್ಣಚಂದದ ತುಳಸಿಜಲದಿಂದ ಬಲರಾಮನುಗೋವಿಂದ ಗರ್ಪಿಸಿದ ಹರುಷದಿ ಪೂರ್ಣ 2ಸತ್ಯವತಿಯ ಮಗನ ಮುತ್ತು ರತ್ನದ ವಸ್ತಲಕ್ಷ ಸೂರ್ಯರ ಬೆಳಕಿಲೆ ಪೂರ್ಣಲಕ್ಷ ಸೂರ್ಯರ ಬೆಳಕಿಲೆ ಉಚಿತವಅರ್ಥಿಲೆ ರಾಮೇಶ ಕೈಕೊಳ್ಳೊ ಪೂರ್ಣ 3
--------------
ಗಲಗಲಿಅವ್ವನವರು
ದಯೆಮಾಡಿ ಸಲಹಯ್ಯ ಭಯನಿವಾರಣನೆ |ಹಯವದನ ನಾ ನಿನ್ನಚರಣನಂಬಿದೆ ಕೃಷ್ಣಪಕ್ಷಣಕ್ಷಣಕೆ ನಾ ಮಾಡಿದಂಥ ಪಾಪಗಳೆಲ್ಲ |ಎಣಿಸಲಳವಲ್ಲಷ್ಟು ಇಷ್ಟು ಎಂದು ||ಫಣಿಶಾಹಿ ಅವಗುಣವ ನೋಡದೇಚರಣಸ್ಮ-ರಣೆಯ ಮಾಡುವಂಥ ಭಕುತಿಯನಿತ್ತು 1ಕಂಡ ಕಂಡ ಕಡೆಗೆ ಪೋಪ ಚಂಚಲಮನಸುಲಂಡತನದಲಿ ಬಹಳ ಭ್ರಷ್ಟ ನಾನು ||ಭಂಡಾಟದವನೆಂದು ಬಹಿರಂಗಕೆಳೆಯದೆ |ಕೊಂಡಾಡುವಂಥ ಭಕುತಿಯನಿತ್ತು ಸಲಹಯ್ಯ 2ಜಾತಿಧರ್ಮವ ಬಿಟ್ಟು ಅಜಮಿಳನು ಇರತಿರಲು |ಪ್ರೀತಿಯಿಂದಲಿ ಮುಕುತಿಕೊಡಲಿಲ್ಲವೆ ||ಖ್ಯಾತಿಯನುಕೇಳಿಮೊರೆಹೊಕ್ಕೆ ದಯಾನಿಧಿಯೆ -ಬೆ-|ನ್ನಾತು ಕಾಯಯ್ಯ ಶ್ರೀ ಪುರಂದರವಿಠಲ 3
--------------
ಪುರಂದರದಾಸರು
ದಾಟು ಭವಾಟವಿಯನ್ನು ಮನುಜ ನೀದಾಟು ಭವಾಟವಿಯನ್ನುಕೈಟಭಾಂತಕನಾಮಪಾತಕರೊಡಗೂಡಿನೀಟಾಗದಂದದ ಪಾಟಿಯ ಕೇಳಿನ್ನು ಪ.ಹೆಣ್ಣೆಂಬ ಹೆದ್ದೋಳ ತಿರುಗುತಿವೆ ಬಲುಪುಣ್ಯಮಾರ್ಗವ ನಡಿಗುಡವುಬಣ್ಣ ಬಣ್ಣದ ಮೃತ್ಯುಗಳೆಂಬ ಹೆಬ್ಬುಲಿಕಣ್ಣಲಿ ಕಂಡರೆ ಬಿಡವುಸಣ್ಣಮಕ್ಕಳು ನೆಂಟರಿಷ್ಟ ನರಿಗಳರ್ಥಪೆಣ್ಣಿನ ನಾತಕೆ ಓಡ್ಯಾಡುವುವುಹಣ್ಣುಕಾಯಿಗಳೆಲ್ಲ ವಿಷಮಯವಾಗಿಹ ಅರಣ್ಯದ ಖಳರೆಂಬ ಗಿಡವು 1ಆರಿಂದ್ರಿಯ ಕಳ್ಳರೆಂಬ ಕಾಮವೆಂಬಚೋರನಾಯಕನುಪಟಳವುಭೂರಿಕಾಲದ ಧರ್ಮವೆಂಬ ದ್ರವ್ಯವೆಲ್ಲಸೂರ್ಯಾಡಿಸುಲಕೊಂಬ ಹಯವುಮೂರು ಬಗೆಯಿಂದ ಸುಡುತ ಕಂಗೆಡಿಸುವದಾರುಣತರ ದಾವಾನಳವುಚೀರುವ ನಿಂದಕ ಝಲ್ಲಿಕದುಶಾಸ್ತ್ರ ನಿಸ್ಸಾರ ಘೂಕಗಳ ರವವು 2ಅಡ್ಡಡ್ಡ ಬಂದು ಅಜ್ಞಾನ ಕಾಳೋರಗವೆಡ್ಡುಗೊಳಿಸಿ ಕಚ್ಚುತಿವೆದೊಡ್ಡೆಂಟು ಮದವೆಂಬೊ ಮದ್ದಾನೆ ಎದೆಯೆಂಬಗುಡ್ಡದೊಳಗೆ ಸುತ್ತುತಿವೆಹೆಡ್ಡನೆಂದು ಚುನ್ನವಾಡಿ ಮನೋಬುದ್ಧಿಗಡ್ಡದ ಕಪಿ ಕಾಡುತಿವೆ 3ಜನ್ಮಮರಣ ಹಸುತೃಷೆಜರಾವ್ಯಾಧಿಯೆಂಬುಮ್ಮಳಿಕೆಯ ಪೊರೆಯುಂಟುಹಮ್ಮುಮಮತೆ ಎಂಬ ತಲೆಹೊರೆ ಭಾರಾಗಿಒಮ್ಮೆಗಿಳಿಯಲಿಲ್ಲ ಗಂಟುಸ್ವರ್ಮಂದಿರವೆ ಹೆಬ್ಬೆಟ್ಟನಾಯಕನರ್ಕಕಮ್ಮರಿಗಳು ಇಪ್ಪತ್ತೆಂಟುಸನ್ಮಾನ ರಾಗಭೋಗಗಳೆಂಬ ಬಯಲಾಸೆಯ ಮೃಗತೃಷ್ಣೆಯ ನಂಟು 4ಅಲ್ಲಿಗಲ್ಲಿಗೆ ಸುಖದು:ಖನೆಳಲುಬಿಸಲಲ್ಲಿಗಲ್ಲಿಗೆ ಪ್ರಿಯತರುವುಬಲ್ಲಿದರಿಂದಾಹ ಭಯದಂತೆ ಸೂಚಿಪಕಲ್ಲುಕೊಳ್ಳಗಳ ನಿರ್ಝರವುಕೊಲ್ವಾರಿನೃಪದೂತರೆಂಬ ಸೂಕರಮೋಹÀಹಲ್ಲೊಳಗಘಕೂಪದಿರವುಕ್ಷುಲ್ಲಕ ಪಿಸುಣರೆಂಬುವ ಋಕ್ಷಬಿಡಾಲಹೊಲ್ಲನಖಿಗಳ ಸಂಚರವು 5ಈಷಣತ್ರಯಯಂತ್ರ ಏಳು ಪ್ರಾಕಾರದಿದ್ವೇಷಿಗಳಿದ್ದ ದುರ್ಗಗಳುದೂಷಣ ಸ್ತುತಿ ಎಂಬ ಕಾಕಪಿಕೋಕ್ತಿ ಪ್ರದೋಷದ ಮಳೆ ಮಂಜುಗಳುನೈಷಧನುಂಡು ಕೊಬ್ಬಿದ ಇಂದ್ರಿಯಗೋಳಕಮೂಷಕಗಳಿಹ ಬಿಲಗಳುದೋಷ ದುರ್ವಾರ್ತೆ ದುರಿತವೆಂಬ ಕ್ರವ್ಯಾದಘೋಷಣ ಭಯಂಕರಗಳು 6ಈ ರೀತಿಕಾಂತಾರದಾಟುವ ಧೀರಗೆಮಾರುತಿ ಮತ ಪಕ್ಷ ಬೇಕುನಾರಾಯಣನೆ ಸರ್ವೋತ್ತಮನೆಂದೆಂಬತೋರ ಗಧಾಯುಧ ಬೇಕುಘೋರಾದ್ವೈತ ಕಕ್ಷವ ಛೇದಿಸುವ ಸುಕುಠಾರ ತತ್ವಗಳಿರಬೇಕುಸಾರಜÕಜನಪ್ರಭು ಪ್ರಸನ್ವೆಂಕಟಕೃಷ್ಣನಾರಸಿಂಹನಸ್ಮøತಿಬೇಕು7
--------------
ಪ್ರಸನ್ನವೆಂಕಟದಾಸರು
ದಾಟುವೆನೆಂದರೆ ದಾಟು ಹೊಳೆಯುಕೈಟಭಾಂತಕ ಭಟರಿಗೆ ಭವಜಲವು ಪ.ಪೂರ್ವಯಾಮದಿ ಹರಿಗುಣಕರ್ಮನಾಮನಿರ್ವಚನದಿ ಕೀರ್ತನೆ ಮಾಡುವ ಮಹಿಮಉರ್ವಿಯ ಮೇಲಿದ್ದು ಒಲಿಸಿಕೊಂಡನು ಸುರಸಾರ್ವಭೌಮನ ಸೀತಾರಾಮನ 1ಜಲದಲಿ ಮಿಂದೂಧ್ರ್ವ ತಿಲಕಿಟ್ಟು ನಲಿದುತುಲಸಿಕುಸುಮಗಂಧ ಅಗ್ರದ ಜಲದಿನಳಿನೇಶನಂಘ್ರಿಗರ್ಪಿಸಿ ಸಹಸ್ರನಾಮಾವಳಿಯಿಂದ ಧೂಪದೀಪಾರತಿ ಬೆಳಗಿ 2ಪರಮಾನು ಯೋಗಾವಾಹನೆ ವಿಸರ್ಜನೆಯುಸ್ಮರಣೆ ವಂದನೆ ಪ್ರದಕ್ಷಿಣೆ ನರ್ತನವುವರಗೀತಪಠಣೆ ಭಾಗವತಾ ಶ್ರವಣವುತ್ವರಿಯದಿ ಭೂತಕೃಪೆಯಲ್ಲಿ ಮನವು 3ಗುರುಪಾದಪದ್ಮದಿ ಬಲಿದು ವಿಶ್ವಾಸಗುರುಕೃಪೆಯಿಲ್ಲದ ಪುಣ್ಯ ನಿಶ್ಯೇಷಗುರುಬೆನ್ನಟ್ಟಿದ ಕರಿಗಡ್ಡಹಾಸ ಹಾಸಗುರುಗಳ ಮರೆದು ಕಳೆಯನೊಂದುಶ್ವಾಸ4ಈಪರಿಹರಿಪುರ ದಾರಿಯ ತೊಲಗಿಕಾಪುರುಷರುಭವಮಡುವಲಿ ಮುಳುಗಿಆಪತ್ತು ಪಡುವರ ನೋಡಿ ಬೆರಗಾಗಿಶ್ರೀ ಪ್ರಸನ್ವೆಂಕಟಪತಿ ನಕ್ಕನಾಗಿ 5
--------------
ಪ್ರಸನ್ನವೆಂಕಟದಾಸರು
ದಾನವನ ಕೊಂದದ್ದಲ್ಲ ಕಾಣಿರೊ |ನಾನಾ ವಿನೋದಿ ನಮ್ಮ ತೊರವೆಯ ನರಸಿಂಹ ಪ.ಅಚ್ಚ ಪ್ರಹ್ಲಾದನೆಂಬ ರತ್ನವಿದ್ದ ಒಡಲೊಳು |ಬಿಚ್ಚಿ ಬಗಿದು ನೋಡಿದನಿನ್ನೆಷ್ಟು ಇದ್ದಾವೆಂದು 1ನಂಟುತನ ಬೆಳೆಯಬೇಕೆಂದು ಕರುಳ ಕೊರಳೊಳು |ಗಂಟುಹಾಕಿಕೊಂಡನೆಷ್ಟು ಸ್ನೇಹಸಂಬಂಧದಿಂದ 2ಸಿರಿಮುದ್ದು ನರಸಿಂಹ ಪ್ರಹ್ಲಾದಪಾಲಕ |ಉರಿಮೋರೆ ದೈವ ನಮ್ಮಪುರಂದರವಿಠಲ3
--------------
ಪುರಂದರದಾಸರು
ದಾರಿ ಏನಿದಕೆ ಮುರಾರಿ - ನೀ ಕೈಯ ಹಿಡಿಯದಿದ್ದರೆ-|ದಾರಿ ಏನಿದಕೆ ಮುರಾರಿ? ಪಕಷ್ಟ-ಕರ್ಮಂಗಳ ಎಷ್ಟಾದರು ಮಾಳ್ಪೆ |ಎಷ್ಟಾದರೂ ನುಡಿದೆ ಗುರುಹಿರಿಯರ ||ದುಷ್ಟರ ಸಂಗವ ಬಹಳ ಮಾಡಿದರಿಂದ |ಶಿಷ್ಟರ ಸೇವೆಯೆಂದರಾಗದೆನಗೆ 1ಪರರ ದೂಷಣೆ ಪರಪಾಪಂಗಳನೆಲ್ಲ |ಪರಿಪರಿಯಲ್ಲಿ ಆಡಿಕೊಂಬೆ ನಾನು ||ಹರಿನಾಮಾಮೃತವ ಹೇಳದೆ ಕೇಳದೆ |ಹರಟೆಯಲ್ಲಿ ಹೊತ್ತುಗಳೆದೆ ನಾ ಹರಿಯೆ 2ಪಾತಕಕರ್ಮಗಳ ಮಾಡಿದಜಾಮಿಳಗೆ |ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ? ||ನೂತನವೇಕಿನ್ನುಸೂರ್ಯಮಂಡಲ |ರೀತಿಯಾದನು ಸಿರಿಪುರಂದರವಿಠಲ 3
--------------
ಪುರಂದರದಾಸರು
ದಾರಿ ಯಾವುದಯ್ಯ ವೈಕುಂಠಕೆದಾರಿ ತೋರಿಸಯ್ಯಾ ಪದಾರಿ ಯಾವುದಯ್ಯಾ ದಾರಿ ತೋರಿಸು ಆಧಾರ ಮೂರುತಿ ನಿನ್ನಪಾದಸೇರುವುದಕ್ಕೆಅ.ಪಬಲುಭವದನುಭವದಿ ಕತ್ತಲೆಯೊಳುಬಲು ಅಂಜುತೆ ನಡುಗಿ ||ಬಳಲುತ ತಿರುಗಿದೆ ದಾರಿಯ ಕಾಣದೆಹೊಳೆಯುವ ದಾರಿಯ ತೋರೊ ನಾರಾಯಣ 1ಪಾಪವ ಪೂರ್ವದಲಿ ಮಾಡಿದುದಕೆಲೇಪವಾಗಿರೆಕರ್ಮಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆಶ್ರೀಪತಿ ಸಲಹೆನ್ನ ಭೂಪ ನಾರಾಯಣ 2ಇನ್ನು ನಾ ಜನಿಸಲಾರೆ ಭೂಮಿಯ ಮೇಲೆನಿನ್ನ ದಾಸನಾದೆನೊ||ಪನ್ನಗಶಯನ ಶ್ರೀಪುರಂದರವಿಠಲಇನ್ನು ಪುಟ್ಟಿಸದಿರೊ ಎನ್ನ ನಾರಾಯಣ 3
--------------
ಪುರಂದರದಾಸರು
ದಾರಿಯ ತೋರೊ ಮುಕುಂದ - ಹರಿ-|ನಾರಾಯಣ ಗೋವಿಂದ ಪಬಂದೆನು ಬಹುಜ್ಮನದಲಿ -ನಾ-|ಬಂಧನದೊಳು ಸಿಲುಕುತಲಿ ||ಮುಂದಿನದಾವುದು ಪಯಣ -ತೋರೊ-|ಇಂದುನೀ ಇಂದಿರೆರಮಣ1ಗತಿಯಿಲ್ಲದವರಿಗೆ ನೀನೆ -ಸದ್-|ಗತಿಯೆಂದು ಸ್ತುತಿಮಾಡಿದೆನೊ ||ಗತಿಯೆಂದು ನಂಬಿದೆ ನಿನ್ನ |ಸತುವ ತೋರು ನರಹರಿಯೆ ಗೋವಿಂದ 2ಮಡವಿನೊಳಗೆ ಧಮುಕಿದೆನೆ -ಇನ್ನು-ಕಡಹಾಯಿಸುವರ ನಾ ಕಾಣೆ ||ಹಡೆದ ತಾಯಿ - ತಂದೆ ನೀನೆ -ಕೈ-|ಹಿಡಿದು ಸಲಹೊ ಎನ್ನೊಡೆಯ ಮುರಾರಿ 3ಮಿಕ್ಕಿ ಬರುವ ಹೊಳೆಯೊಳಗೆ -ನಾನು-|ಸಿಕ್ಕಿದೆ ನಡುನೀರೊಳಗೆ ||ಕಕ್ಕುಲಾತಿನಿನಗಿರದೆ |ಭಕ್ತವತ್ಸಲ ನೀ ದಯಮಾಡೋ 4ಕುಕ್ಷಿಯೊಳಗೆ ಇಂಬಿಟ್ಟು -ಎನ್ನ-|ರಕ್ಷಿಸಿ ಸಲಹಬೇಕು ||ಅಕ್ಷಯಅನಂತ ಮಹಿಮನೆ - ನೀನು |ಪಕ್ಷಿವಾಹನನೆಪುರಂದರವಿಠಲ5
--------------
ಪುರಂದರದಾಸರು
ದಾರೊ ನೀ ಚಿನ್ನ ದಾರೊಕಾರು ರಾತ್ರಿಯೊಳೆಮ್ಮಾಗಾರಕೆ ಬಂದೆ ಪ.ಇಕ್ಕಿದ ಕದಗಳಿಕ್ಕ್ಯಾವೊ ನಿದ್ರೆಉಕ್ಕೇರಿ ಕಣ್ಣು ಮುಚ್ಚ್ಯಾವೊ ನಮ್ಮತಕ್ಕೈಸಿ ಕೊಂಬುವೆ ನೀ ಕಳ್ಳ ಚಿಕ್ಕಮಕ್ಕಳಾಟವಿದಲ್ಲೊ ಚೆಲುವ 1ಆಗ ಗೋಪಾಲನಂತಿದ್ದೆ ನೀಬೇಗಚಟುಲರೂಪನಾದೆ ಮತ್ತೀಗೆಮ್ಮ ನಲ್ಲರಂತೈದೆ ಕೋಟಿಪೂಗಣೇರ ಹೋಲುತೈದೆ ನೀ ಹೌದೆ 2ಸಪ್ಪಳಿಲ್ಲದೆ ಕೂಡು ಕಾಣೊಕೇಳಿಬಪ್ಪರಿನ್ನಾರಾರು ಕಾಣೊ ಪ್ರಾಣಕಪ್ಪವ ನಿನಗಿತ್ತೆ ಇನ್ನು ಕಾಯೊಶ್ರೀಪ್ರಸನ್ವೆಂಕಟ ಜಾಣ ಪ್ರವೀಣ 3
--------------
ಪ್ರಸನ್ನವೆಂಕಟದಾಸರು
ದಾಸನ ಮಾಡಿಕೋ ಎನ್ನ - ಇಷ್ಟುಗಾಸಿಮಾಡುವುದೇಕೆ ದಯದಿ ಸಂಪನ್ನಪದುರುಳಬುದ್ದಿಗಳೆಲ್ಲ ಬಿಡಿಸೋ - ನಿನ್ನಕರಣ ಕವಚವೆನ್ನ ಹರಣಕ್ಕೆ ತೊಡಿಸೋ ||ಚರಣದ ಸೇವೆಯ ಕೊಡಿಸೋ - ಅಭಯ-ಕರಮೇಲಿನಕುಸುಮಶಿರದ ಮೇಲಿರಿಸೋ1ದೃಢಭಕ್ತಿಯಿಂದ ನಾ ಬೇಡಿ - ನಿನ್ನಅಡಿಯೊಳೆರಗುವೆನಯ್ಯಅನುದಿನಪಾಡಿ ||ಕಡೆಗಣ್ಣೊಳೇಕೆನ್ನ ನೋಡಿ ಬಿಡುವೆಕೊಡು ನಿನ್ನಪರಭಕ್ತಿಮನ ಮಡಿ ಮಾಡಿ2ಮೊರೆಹೊಕ್ಕವರಕಾವಬಿರುದು ನೀನುಕರುಣದಿ ರಕ್ಷಣೆ ಮಾಡೆನ್ನ ಪೊರೆದು ||ದುರಿತರಾಶಿಗಳೆಲ್ಲ ತರೆದು ಒಡೆಯಪುರಂದರವಿಠಲನೆ ಹರುಷದಿ ಕರೆದು 3
--------------
ಪುರಂದರದಾಸರು
ದುರಿತವಾರಿವಾಹ ಜಂಝಾನಿಳ ಶರಣುಆಗಾಮಿಸಂಚಿತಅಖಿಳಕರ್ಮದೂರಈಷಣತ್ರಯದೂರ ಇಳೆಯೊಳಗೆ ಪುಣ್ಯಅಧ್ಯಾತ್ಮ ಅಮಿತ ಗೋಪ್ಯತತ್ವವಿಚಾರಕಾಮಾದಿ ಷಡುರಿಪುಗಳನ ಗೆಲಿದು ಹೃದಯಭುವನಮಂಡಲಾಧಿಪ ಕವಿಗಳ ಶಿರೋರತುನ
--------------
ಗೋಪಾಲದಾಸರು
ದೂತ ಸಂವಾದ ದೇವಿಯೊಡನಾದುದು ಪ್ರೀತಿಯಲಿ ಕೇಳಿರೆಲ್ಲದಾತೆ ಶುಂಭನ ಯುದ್ಧಕೆತಾಯೆಂದಟ್ಟಿ ಮಾತ ಮುಗಿಸಿದಳಲ್ಲಪತೆರೆಕಣ್ಣ ಮುಚ್ಚಿದ್ದಿ ಯಾಕೆ ಕಾಡೊಳಗಿರುವೆ ಕೇಳೆಲೆ ಮಹಾದೇವಿಪುರುಷರು ನಿನಗಾರು ಓರ್ವಳೆ ಮಾತಾಡು ಕೇಳೆಲೆ ಮಹಾದೇವಿಕರೆಯಲು ಬಂದೆ ಹಿಮಾಚಲಕೆ ನಿನ್ನ ಕೇಳೆಲೆ ಮಹಾದೇವಿಅರಸ ಶುಂಭನ ದೂತ ಸುಗ್ರೀವ ನಾನೀಗ ಕೇಳೆಲೆ ಮಹಾದೇವಿ1ಕಣ್ಣ ತೆರೆದು ನುಡಿದಳು ದೇವಿ ಖಳನಿಗೆ ಕೇಳೆಲೋ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವನಿನ್ನಧಿಕಾರವದೇನು ಶುಂಭನಾರು ನೀನಾರು ಕೇಳೆಲೊ ಸುಗ್ರೀವನನ್ನಗೊಡವೆಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವ2ನಂಬೆನ್ನ ಮಾತನು ಕಪಟವೇನಿಲ್ಲ ಕೇಳೆಲೆ ಮಹಾದೇವಿಶುಂಭನ ಭಾಗ್ಯ ಹೇಳಲಿಕಳವಲ್ಲ ಕೇಳೆಲೆ ಮಹಾದೇವಿತುಂಬಿವೆ ಮನೆಯೊಳು ದಿವ್ಯ ರತ್ನವು ಕೇಳೆಲೆ ಮಹಾದೇವಿಶುಂಭಗೆ ನೀನು ಕಡೆರತ್ನ ದೊರಕಲು ಕೇಳೆಲೆ ಮಹಾದೇವಿ3ಕರುಣದಿ ಕಪಟವಿಲ್ಲದಲೆ ನೀನು ಕೇಳ್ವೊಡೆ ಕೇಳೆಲೋ ಸುಗ್ರೀವಇರಬಾರದು ಸುಮ್ಮಗಿದ್ದುದನಾಡಿವೆವು ಕೇಳೆಲೋ ಸುಗ್ರೀವಪುರುಷರು ಇಂದಿನವರೆಗಿಲ್ಲ ನಾ ಸ್ವತಂತ್ರ ಕೇಳೆಲೋ ಸುಗ್ರೀವಪುರುಷರಿಗೋಸ್ಕರ ನಾನು ತಪವನು ಮಾಡುವೆ ಕೇಳೆಲೋ ಸುಗ್ರೀವ4ಶುಂಭನು ಶೀಘ್ರದಿ ಕರೆತಾರೆಂದನು ನಿನ್ನ ಕೇಳೆಲೆ ಮಹಾದೇವಿಶುಂಭನ ಭಾಗ್ಯ ದೊರಕಿದಡೆ ನೀ ಕೃತಾರ್ಥೆ ಕೇಳೆಲೆ ಮಹಾದೇವಿಶುಂಭಗೆ ನಿನಗೆ ಸಕ್ಕರೆ ಹಾಲು ಬೆರೆತಂತೆ ಕೇಳೆಲೆ ಮಹಾದೇವಿಶುಂಭಗೆ ಚಾಕರ ನಿನಗೆ ಚಾಕರ ನಾನು ಕೇಳೆಲೆ ಮಹಾದೇವಿ5ಮಾಡಬಾರದ ಪ್ರತಿಜೆÕಯ ಮಾಡಿಹೆನು ಕೇಳೆಲೋ ಸುಗ್ರೀವಆಡಲಿ ಏನ ಅದೃಷ್ಟಹೀನೆಯು ಕಂಡ್ಯಾ ಕೇಳೆಲೋ ಸುಗ್ರೀವಖಾಡಾ ಖಾಡಿಯಲಿ ಜಯಿಸಿದವನೆ ಭರ್ತನೆಂದೆನೆ ಕೇಳೆಲೋ ಸುಗ್ರೀವಕೂಡಿ ಬರುವೆ ಮಾಡಿದ ಭಾಷೆಯ ಹುಸಿಯದೆ ಕೇಳೆಲೋ ಸುಗ್ರೀವ6ಕರೆಯಲು ಬಿಗಿಯಲು ಬೇಡವೆ ನೀನೀಗ ಕೇಳೆಲೆ ಮಹಾದೇವಿಥರಥರ ಸಾಲು ಸಾಲಿನ ಛತ್ರಿ ನಿನ್ನವು ಕೇಳೆಲೆ ಮಹಾದೇವಿಇರುವನು ನೀ ಹೇಳಿದಂತ ಶುಂಭನು ಕೇಳೆಲೆ ಮಹಾದೇವಿದೊರೆವುದು ನಿನಗೆ ತ್ರೈಭುವನದರಸುತನ ಕೇಳೆಲೆ ಮಹಾದೇವಿ7ಕಂಡುದಿಲ್ಲವೋ ಈವರೆಗೆನ್ನ ಜಯಿಸಿದವರನ್ನು ಕೇಳೆಲೋ ಸುಗ್ರೀವದಿಂಡುಗಡೆದರು ಎನ್ನೆದುರು ನಿಂತವರೆಲ್ಲ ಕೇಳೆಲೋ ಸುಗ್ರೀವಗಂಡನ ಪಡೆದಿರೆಶುಂಭಜಯಿಸುವನೆನ್ನ ಕೇಳೆಲೋ ಸುಗ್ರೀವಗಂಡನಾವನಿಲ್ಲದಿರೆ ಏನ ಮಾಡುವೆ ಕೇಳೆಲೋ ಸುಗ್ರೀವ8ಚಾರ್ವಾಕರ ಮಾತಾಡಲು ಬೇಡ ಕೇಳೆಲೆ ಮಹಾದೇವಿಬರ್ವಳು ನಿನ್ನ ಮಾತಿಗೆಶುಂಭಬಹನೇ ಕೇಳೆಲೆ ಮಹಾದೇವಿಉರ್ವಿಗೆ ಕರ್ತನ ಎದುರಿಗೆ ನೀ ನಿಲ್ಲುವೆಯ ಕೇಳೆಲೆ ಮಹಾದೇವಿಗರ್ವವ ಮಾಡಲು ಮುಂದಲೆ ಹಿಡಿದೊಯ್ವರು ಕೇಳೆಲೆ ಮಹಾದೇವಿ9ಎನ್ನ ಪ್ರಾರಬ್ಧವು ಇದ್ದಂತೆ ಆಗುವುದು ಕೇಳೆಲೋ ಸುಗ್ರೀವನಿನ್ನ ಮೇಲೇನು ಮಾತಿಲ್ಲವೋ ಕೇಳೆಲೋ ಸುಗ್ರೀವಎನಗೆ ಹಿತಕಾರಿ ನೀನು ಅಹಿತ ನಾನೇ ಕೇಳೆಲೋ ಸುಗ್ರೀವಇನ್ನು ಮಾತಾಡಬೇಡವೋ ಕರೆತಾನಡಿ ಕೇಳೆಲೋ ಸುಗ್ರೀವ10ಇಂತು ವಿಳಾಸ ಮಾತನಾಡಿಯೆ ಖಳನನು ಕಳುಹಿದಳು ಪರಾಂಬೆಎಂತು ಹೇಳ್ವನೋ ಶುಂಭನಾವಾಗ ಬರುವನೋ ಎನುತಲಿ ಜಗದಂಬೆಚಿಂತೆ ಹರಿಪೆ ಸುರರನು ಶುಂಭನನುಕಟ್ಟಿಎನುತಲಿ ಸರ್ವಾಂಬಚಿಂತಯಕ ತಾನಾದ ಚಿದಾನಂದ ಕರುಣೆಯು ಬಗಳಾಂಬ11
--------------
ಚಿದಾನಂದ ಅವಧೂತರು
ದೂರ ನೋಡುವುದುಚಿತವಲ್ಲವೋವಾರವಾರಕೆ ಬಿಡದೆ ತುತಿಪೆ |ಮೀರಿದವನೆ ನಾ ನಿನಗೆ ಪವನ ಪರಾಮಚಂದ್ರನ ಸೇವೆಯ ನಿ-ಷ್ಕಾಮದಿಂದ ಮಾಡಿ ಬಹಳ |ತಾಮಸಜನಂಗಳ ತಂದೆನೀಂ ಮಹಾ ಸಮರ್ಥನೆಂದೇ ||ನೀ ಮನೆಯಿಲ್ಲದವನು ಎಂದೆನೆ | ಕೋತಿರೂಪಈ ಮುಖವು ಹೀಗೆ ಅಂದೆನೆ | ನಗವ ಪೊತ್ತಿಭೂಮಿಯೊಳಗೆ ಕಠಿಣನೆಂದೆನೆ | ಹನುಮನೆ 1ಪೊಕ್ಕು ರಣಕೆ ಹೆಜ್ಜೆಯ ಹಿಂದಕೆಯಿಕ್ಕದೆ ಭುಜವ ಚಪ್ಪರಿಸಲಾಗ |ನಕ್ಕವರ ಬಲ ಹುರಿದು ಹೋಯಿತು |ಅಕ್ಕಟಕ್ಕಟಾ ನೀ ವೀರನೆಂದೇ ||ರಕುತವ ಕುಡಿದ ನೀಚನೆಂದೆನೇ | ತಿಂದು ತಿಂದಿರಕ್ಕಸಿಯನು ಕೂಡಿದನೆಂದೆನೇ | ಒಡಲ ಬಾಕಸೊಕ್ಕು ನಿನಗೆ ಬಹಳವೆಂದೆನೇ | ಭೀಮನೇ 2ತಿಳಿದು ಪ್ರಾಣೇಶ ವಿಠಲನಿಚ್ಛೆ |ಇಳೆಯೊಳುದಿಸಿ ಹಲವು ಮತವ ||ನೆಲಕೆವೊರಿಸಿ ಮರುತ ಮತವ |ನಿಲ ಹಾಕಿದ ಗುರುಗಳೆಂದೇ ||ತುಳುವರಲ್ಲಿ ಪುಟ್ಟಿದೆಯೆಂದೆನೇ | ಬಹಳ ಗುಗ್ಗರಿಮೆಲಿದ ಭೂತ ಮಗುವು ಎಂದೆನೇ |ಭಾರತೀಶಸಲಹೋ ಬಿಡದತಿಮ್ಮನೆಂದರೆ | ಮಧ್ವನೇ 3
--------------
ಪ್ರಾಣೇಶದಾಸರು
ದೂರಹವು ದೂರಹವು ದುರಿತಗಳೆಲ್ಲಕ್ರೂರ ಸ್ತಂಭಿನಿ ಬಗಳೆ ಸ್ಮರಣೆ ಮಾತ್ರದಲಿಪಕಳ್ಳರಡಕಟ್ಟಿದಲ್ಲಿ ಕಾರಾಗೃಹದಲ್ಲಿಗುಲ್ಲಾದ ಸ್ಥಳದಲ್ಲಿಘನಗಾಳಿಯಲ್ಲಿಎಲ್ಲ ರೋಗಗಳಲ್ಲಿ ಚಿಂತೆಗಳು ಮುತ್ತಿದಲ್ಲಿಬಲ್ಲ ಬಗಳೆಯ ಸ್ಮರಣೆ ನಾಲಗೆಗೆ ಬರಲು1ಮಾರಿದುರ್ಗಿಯಲ್ಲಿ ಮಹಾಗ್ರಹವು ಹಿಡಿದಲ್ಲಿಮಾರಣವು ಮುಟ್ಟಿದಲ್ಲಿ ಮಹಾಕಾರ್ಯದಲ್ಲಿಊರು ಮುತ್ತಿದಲ್ಲಿ ವಸ್ತು ಹೋಗಿದ್ದಲ್ಲಿಕಾರಣ ಬಗಳೆ ಸ್ಮರಣೆ ನಾಲಗೆಗೆ ಬರಲು2ಮಳೆಯೊಳು ಸಿಕ್ಕಿದಲ್ಲಿ ಸಾಯ್ವಸಮಯದಲ್ಲಿಹೊಳೆಯೊಳು ಮುಳುಗಿದಲ್ಲಿ ಹೊಲ ಬೆಳೆಯದಲ್ಲಿ ಬ-ಹಳದಾರಿದ್ರ್ಯದಲ್ಲಿ ಬೇಗೆ ಸುತ್ತಡಸಿದಲ್ಲಿಬಲು ಚಿದಾನಂದ ಬಗಳೆ ಸ್ಮರಣೆ ನಾಲಗೆಗೆ ಬರಲು3
--------------
ಚಿದಾನಂದ ಅವಧೂತರು
ದೆಕ್ಕಬುಕ್ಕ ಇಕ್ಕಬೇಕು ಅಂಬನ ಮನದಅಕ್ಕರವು ತೀರುವತನಕಪಕೊರಳಿಗೆ ಬೀಳಬೇಕು ಅಂಬನ ಎದೆಯಸೆರಗ ಹಿಡಿದು ಎಳೆಯಬೇಕು ಅಂಬನಕರುಳನೀಗ ಪೀಕಬೇಕು ಅಂಬನ ಉಟ್ಟನಿರಿಗೆ ಜಗ್ಗಿ ಬೀಳಬೇಕು ಅಂಬನ1ತೊಡೆಯ ಮೇಲೆ ಹೊರಳಬೇಕು ಅಂಬನ ಮುಸುಕಹಿಡಿದು ಎಳೆಯಬೇಕು ಅಂಬನಕಡಿಯಬೇಕು ಗಲ್ಲವನ್ನು ಅಂಬನ ಸ್ತನವಹಿಡಿದು ಕುಡಿಯ ಬೇಕು ಅಂಬನ2ಓಡಿ ಬಂದು ಅಪ್ಪಬೇಕು ಅಂಬನ ಕುದುರೆಮಾಡಿ ಹೆಗಲನೇರಬೇಕು ಅಂಬನಓಡಬೇಕು ಒಡನಮುಟ್ಟಿ ಅಂಬನ ಸಾಕ್ಷಿಗೂಢ ಚಿದಾನಂದ ಬಗಳಾಂಬನ3
--------------
ಚಿದಾನಂದ ಅವಧೂತರು