ಒಟ್ಟು 12179 ಕಡೆಗಳಲ್ಲಿ , 134 ದಾಸರು , 5885 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಳ್ಳೆಭ್ರಮಿಸಿ ಕೆಡಬೇಡವೋ ಹೇ ಮುಳ್ಳುಮನುಜ ಎಲ್ಲ ಮಿಥ್ಯೆಜಗದ ಬಾಳವ್ಯೋ ಪ ನಿಲ್ಲದಳಿಕೆ ಪೋಗ್ವುದಿದು ಜಲದಮೇಲಿನ ಲಿಖಿತತೆರದಿ ಪಾದ ದುರ್ಭವದ ಭಂಗವೋ ಅ.ಪ ಬಂಧುಬಳಗರೆಂಬರೆಲ್ಲರು ನಿನ್ನೊಳಿರುವತನಕ ತಿಂದು ಉಂಡು ಸೇವೆ ಮಾಳ್ಪರು ನೀನುಹೋಗುವಕಾಲ ಸಂದಿಸಲಾಗ ಆರುಬಾರರು ಹಿಂದೆ ಉಳಿವರು ಮಂದಗಮನೆ ಸತಿಯು ತನ್ನ ಮುಂದಿನ ಗತಿಗೆ ಅತ್ತುಕರೆದು ಮಿಂದು ಮುಟ್ಟುಚಟ್ಟು ತೊಳೆದು ಚಂದದ್ಹೋಳಿಗೆ ತುಪ್ಪ ಉಂಬಳು 1 ಜನರಗೋಣು ಮುರಿದು ಹಲವು ಹಂಚಿಕ್ಹಾಕಿ ಬಿಡದೆ ಬಿನುಗುಯೋಚನದನುದಿನವು ಶೋಧಮಾಡಿ ನಾನಾರೀತಿಯಲಿ ಗಳಿಸಿದ ಧನವು ನಿನಗೆ ಎರವು ಕನಿಕರಿಲ್ಲದೆ ಜವನದೂತರು ಹಣಿದು ಎಳೆದಾಡೊದೆಯುವಾಗ ಮನೆಯೊಳ್ಹೊಳಿದಳದೆ ಧನವು ಬಂದು ನಿನಗೆ ಸಹಾಯ ಮಾಳ್ಪುದೇನೋ 2 ಭೂಮಿಸೀಮೆ ತನ್ನದೆನುತ ಶಾಸನವ ಬರೆಸಿ ನೇಮವಿಲ್ಲದೆ ಕಷ್ಟಬಡುತ ನಿಜಸುಖವ ಮರೆದು ತಾಮಸದೊಳಗೆ ಮುಳುಗಿ ಕೆಡುತ ಪ್ರೇಮದೊರಲುತ ಭೂಮಿಗಧಿಕ ಭಕ್ತಜನರ ಪ್ರೇಮಮಂದಿರ ಸ್ವಾಮಿ ಶ್ರೀರಾಮ ಮುನಿದು ನೋಡಲಾಗ ಭೂಮಿ ಸೀಮೆ ಕಾಯ್ವುದೇನೋ 3
--------------
ರಾಮದಾಸರು
ಸೂತ್ರನಾಮಕಪ್ರಾಣ ಜಗತ್ರಾಣ ಸೂತ್ರನಾಮಕ ಜಗಸೂತ್ರನೆ ಹರಿಕೃಪಾ ಪಾತ್ರ ನೀನಹುದೋ ಸರ್ವತ್ರದಿ ನೀನೆ ಪ ದೇವಾ ನೀನಿಲ್ಲದಿರೆ ಜಗವೆಲ್ಲವು ತಾ ನಿರ್ಜೀವ ಜೀವ ಕೋಟಿಗಳೆಲ್ಲ ಕಾವ ಪಾವನಾತ್ಮಕ ಸಂಜೀವ ಲವಕಾಲ ಬಿಡದೆ ಎಮ್ಮೊಳಿರುವ ಭೋ ದೇವ ಅ.ಪ ಸಾಟಿ ಯಾರೆಲೆ ತ್ರಿಕೊಟಿರೂಪನೆ ನಿಶಾಚರ ಕುಲಕೆ ಕುಠಾರಿ ಅಜಾಂಡ ಖರ್ಪರದಿ ಸೃಷ್ಟಿಯೊಳು ಸಂಚಾರಿ ಪಟುತರ ತ್ರಿವಿಕ್ರಮ ಚಟುಲ ಮೂರುತಿ ಮನತಟದಲಿ ಭಜಿಸಿದ ಶ್ರೇಷ್ಠನೆ ನಿಜಪರಮೇಷ್ಠಿಪದವನು ತೊಟ್ಟು ಪಾಲಿಪೆ ನಿಂದು ಬ್ರಹ್ಮಾಂಡ ಪೊತ್ತು ಅಂದು ಜಗಭಾರ ವಹಿಸಿದೆಯೊ ದಯಾಸಿಂಧು ಎಂದೆಂದೂ 1 ಸರುವ ತತುವೇಶರ ವ್ಯಾಪಾರ ಧೀರ ನೀ ನಡೆಸೆ ಜಗಸಂಸಾರ ಕಾರಣನು ಜಗಕಾರ್ಯ ಕಾ ವೈರಾಗ್ಯ ಐಶ್ವರ್ಯ ನಿನ್ನಯ ಗುಣ ಸ್ವರೂಪತನುಕರಣೇಂದ್ರಿಯ ಕರ್ಮಫಲವನು ಜೀ ವರುಗಳಿಗುಣಿಪ ಅನಿಲರೂಪನೆ ತನುಗೋಳಕದಲಿ ನೀ ನೆಲ ಅಂದು ಸೃಷ್ಟಿಯೊಳು ಬಂದೂ ಪೊಂದಿ ಸರ್ವರೊಳು ನಿಂದು ಹಿಂದೂ ಇಂದೂ ಇನ್ನು ಮುಂದೂ ಕರುಣಾಸಿಂಧು ಎಂದೆಂದೂ 2 ಪ್ರಾಣಪ್ರಾತರ ಸಾಯಂಬೀತೆರ ಅಭಿಧಾನ ಗುಣಸ್ತವನ ಮಾಳ್ಪರೆಲ್ಲ ಸುರ ಗಣಾ ಮಣಿದು ಬೇಡುವರೆಲ್ಲ ಅನುದಿನಾ ಎಣೆಯುಂಟೆ ನೀನಮಿತ ಗುಣಗಣಾ ಶ್ರೀ ಮುಖ್ಯ ಪ್ರಾಣಾ ಜಗಬಂಧಕೆ ಮಹಾರಜ್ಜು ರೂಪ ನೀ ಚಿತ್ಸುಖಮಯ ವಪುಷ ಖಗಪ ಶೇಷ ಶಿವ ಶಕ್ರಾದೀ ಜಗ ಬದ್ಧವು ಕೇಶ ನಖಾಗ್ರ ಪರ್ಯಂತ ಚಿತ್ಸುಖ ಗಭೇದ ನೀ ಛಂದ ಶಾಸ್ತ್ರದಿ ತನು ತ್ವಗ್ರೋಮ ಉಷ್ಣಿಕ್ ಗಾಯತ್ರಿ ನರ ಮಾಂಸನುಷ್ಟುಪ್ ಅನುಷ್ಟಪು ಅಸ್ತಿಮಜ್ಜಾ ಜಗತೀ ಪಂಕ್ತಿ ಬೃಹತಿನಾಮಕ ಘನ್ನಾ ಉರಗಾದ್ರಿವಾಸ ವಿಠಲನ್ನ 3
--------------
ಉರಗಾದ್ರಿವಾಸವಿಠಲದಾಸರು
ಸೂನು ಪ ನಡೆದು ಬರಲು ಒಬ್ಬ ಮಡದಿಯುಕೊಡಿರಿ ಸ್ಥಳವು ಎಂದು ನುಡಿಯುತಲಿಗಡಿಬಿಡಿಯಲಿ ನಮ್ಮ ನಡುಮನೆಯೊಳು ಬಂದು ಇಂಥಕಡುಮುದ್ದು ಬಾಲನ ಪಡೆದು ತೋರಿದಳಂತೆ 1 ಮಾತೆ ಬಾಣಂತಿಯು ನವಜಾತ ಶಿಶುವು ಸದ್ಯೋಜಾತನ ನಿಶೇಷ ಧಾತ್ರಿಧರನಾಥಾಅತಿಶಯ ಥಂಡಿ ಪ್ರಾತಃಕಾಲವು ತವಸೀತವಾಗಿದೆ ಎಂದು ಭೀತಿ ಉಂಟಾಗಿದೆ 2 ಒಂದು ನಾಲಕು ದಿನ ಸಂಧಿಸಿ ಗುಡಿ ವೃಜದಿಂದ ಕರದಿ ತನ್ನ ಕಂದನ್ನೆತ್ತಿಇಂದಿರೇಶನ ಪ್ರಿಯೇ ಒಂದಿನಿತು ಧ್ಯಾನಮಂದಿರದೊಳು ಬಂದು ಚಂದ ತೋರಿದಳಂತೆ 3
--------------
ಇಂದಿರೇಶರು
ಸೂರ್ಯ ಪುತ್ರೀ |ತ್ರಿವಿಧ ತಾಪಂಗಳನು ಕಳೆವ ಶುಭಗಾತ್ರೀ ಪ ಕಾಳಕೂಟವ ಮೆದ್ದು ದೇವತತಿ ಸಲಹಿದಗುಕಾಲಾಖ್ಯ ಗರುಡಂಗು ಕಾಳ ಉರಗನಿಗೂ |ನೀಲಾಖ್ಯೆಯಂದದಲಿ ಪಂಚಗುಣದಿಂ ನ್ಯೂನಕಾಳಿಂದಿ ದೇವಿಯರಿಗಾ ನಮಿಪೆ ಸತತ 1 ಸಂಚಿತ ಸುಪಾಪಕ್ಕೆ ಅನುತಾಪವೆಂಬುವುದುಚಿಂತಿಸುವ ತತ್ವಗಳ ನಿರ್ಣಯಾದಿಗಳ |ಇಂತಪ್ಪ ಸತ್ಕರ್ಮ ಸಂತರಿಂ ತಿಳಿಸುತ್ತಚಿಂತಿಪುದೆ ಸತ್ತಪವು ಚಿತ್ತ ನಿಗ್ರಹವೆಂಬ 2 ಮೂರ್ತಿ ಕಾಣದಿಹ ಕಂಗಳಿನ್ನೇಕೇ 3 ಹರಿ ಕಥೆಯ ಕೇಳದವ ಬಧಿರನೇಸರಿ ಅವನುಹರಿಯೆ ನಿರ್ಮಾಲ್ಯ ಮೂಸದಿಂದ್ರಿಯ ವ್ಯರ್ಥ|ಹರಿಯ ನೈವೇದ್ಯಗಳ ರುಚಿಸದಿಹ ನಾಲಗೆಯುಹರಿಯಂಗ ಸ್ಪರ್ಶಿಸದ ಇಂದ್ರಿಯವು ವ್ಯರ್ಥ 4 ಮೂರ್ತಿ ಧ್ಯಾನಿಸದ ಮನಿಸಿನಿಂದ್ರಿಯ ವ್ಯರ್ಥಇನಿತು ದಶ ಕರಣಗಳ ವ್ಯಾಪಾರವಾ |ಗುಣಿಸಿ ತಪವೆಂದೆನುತ ಹರಿಯರ್ಪಣೆಂಬುವುದೆಘನ ತಪವು ಎಂದೆನುತ ಚಿಂತಿಪ ಸುಗಾತ್ರೀ 5 ಕಮಲ ದರ್ಶನವು ಎನಗೆಂದುಪರಿ ಪರಿಯ ಚಿಂತಿಸುತ ಚರಿಸಿ ಸತ್ತಪವಾ |ಹರಿಯ ದರ್ಶನ ಪಡೆದು ಹರಿಯನುಗ್ರಹದಿಂದಹರಿ ಮಡದಿ ನೀನಾಗಿ ಹರಿಗೆ ಪ್ರಿಯಳಾದೇ 6 ನಿತ್ಯ ಭಿನ್ನವಿಪೇ 7
--------------
ಗುರುಗೋವಿಂದವಿಠಲರು
ಸೂರ್ಯ ಮಂಡಲ ಮಧ್ಯವರ್ತಿ | ಕಾರ್ಯ- ಕಾರಣ ಪ್ರಕೃತಿಗಳಿಗೆ ಚಕ್ರವರ್ತಿ-ವಿಜ್ಞಾನ ಸ್ಫೂರ್ತಿ-ವಿರಾಟಮೂರ್ತಿ ಪ ಪಾದ ತುರ್ಯನಾಮಕ ಲೋಕ- ಮರ್ಯಾದಾ ಸ್ಥಾಪಕ ಮಾದೇವಿರಮಣ-ಶತಕೋಟಿ ಕಿರಣ-ತೋರೋ ತವ ಚರಣ 1 ಅಮಿತ ನಿರಕ್ಷರ ಕುಕ್ಷಿಗಳ್ ನಿತ್ಯ ಮಾಡುವ ತ- ಪ್ಪಕ್ಷಮಿಸಬೇಕಪ್ಪ-ನಾವು ನಿನಗೆ ಕಪ್ಪ 2 ಕಮಲ ಸಂಭವ ಹೃದ್ಯ ನ್ಯಾಯಧರ್ಮಯುಕ್ತ ನಿಗಮಾಂತವೇದ್ಯ ಚೋದ್ಯ 3 ಹಾರ ಕಿರೀಟ ಕೇಯೂರ ಮಕರಕುಂಡಲ ಧಾರಿ ಸ್ವರ್ಣಮಯಾಂಗ ಧೃತ ಶಂಖ ಚಕ್ರ-ಶಿಕ್ಷಿತ ಶುಕ್ರ-ಪರಿಹರಿಸು ವಕ್ರ4 ವೃಷ್ಟಿಯ ಕೊಟ್ಟು ಸಂತುಷ್ಟಿ ಪೊಂದಿಸು ಜಗ ಜಟ್ಟಿ ಶ್ರೀ ಗುರುರಾಮವಿಠ್ಠಲ ಸ್ವಾಮಿ ಶಿಷ್ಟ ಜನಪ್ರೇಮಿ-ಸರ್ವಾಂತರ್ಯಾಮಿ5
--------------
ಗುರುರಾಮವಿಠಲ
ಸೂರ್ಯಾಂತರ್ಗತ ನಾರಾಯಣ ಪಾಹಿ ಆರ್ಯ ಮಾರುತಿ ಪಂಚಪ್ರಾಣ ಪ ಭಾರ್ಯಳೆಂದೊಡಗೂಡಿ ಸರ್ವಜೀವರೊಳಿದ್ದು ವೀರ್ಯ ಕೊಡುತಲಿರ್ದ ಶರ್ವಾದಿ ವಂದ್ಯಾತಿಅ.ಪ. ದ್ರುಪದನ ಸುತೆ ನಿನ್ನ ಕರೆಯೆ ಅಂದು ಕೃಪಣ ವತ್ಸಲ ಶೀರೆ ಮಳೆಯೇ ಅಪರಿಮಿತವು ನೀರ ಸುರಿಯೆ ಸ್ವಾಮಿ ಕುಪಿತ ದೈತ್ಯರ ಗರ್ವ ಮುರಿಯೇ ಜನಸೋ ಜನರ ವಿಪತ್ತು ಕಳೆದೆ ಈ ಪರಿಯ ದೇವರನೆಲ್ಲಿ ಕಾಣೆನೊ ತಪನಕೋಟ ಪ್ರಕಾಶ ಬಲ ಉಳ್ಳ ಕಪಿಲರೂಪನೆ ಜ್ಞಾನದಾಯಕ 1 ಹೃದಯ ಮಂಟಪದೊಳಗೆಲ್ಲ ಪ್ರಾಣ- ದದುಭುತ ಮಹಿಮೆಯ ಬಲ್ಲ ಸದಮಲನಾಗಿ ತಾವೆಲ್ಲ ಕಾರ್ಯ ಮುದದಿ ಮಾಡಿಸುವ ಶ್ರೀನಲ್ಲ ಹದುಳ ಕೊಡುತಲಿ ಬದಿಲಿ ತಾನಿದ್ದು ಒದಗಿ ನಿನಗೆಲ್ಲ ಮದುವೆ ಮಾಡಿದ ಪದುಮಜಾಂಡೋದರ ಸುದತಿಯ ಮುದದಿ ರಮಿಸೆಂದು ಒದಗಿ ಬೇಡುವೆ 2 ಎನ್ನ ಬಿನ್ನಪವನ್ನು ಕೇಳೊ ಪ್ರಿಯ ಮನ್ನಿಸಿ ನೋಡೊ ದಯಾಳೋ ಹೆಣ್ಣಬಲೆಯ ಮಾತು ಕೇಳೂ ನಾನು ನಿನ್ನವಳಲ್ಲವೇನು ಹೇಳೋ ನಿನ್ನ ಮನದನುಮಾನ ತಿಳಿಯಿತು ಕನ್ಯಾವಸ್ಥೆಯು ಎನ್ನದೆನ್ನದೆ ಚೆನ್ನ ಶ್ರೀನಿಧಿವಿಠಲ ಪ್ರಾಯದ ಕನ್ನೆ ಇವಳನು ದೇವ ಕೂಡಿಕೊ 3
--------------
ಶ್ರೀನಿಧಿವಿಠಲರು
ಸೂಳಿನ್ನ ಪೊಗುವವ ಏನಾದೆಂತಾ ಹಾಳಾದಬಳಿಕ ಪುಣ್ಯ ಮೂಳನಾಯಾದ ಪ ಮೂತ್ರದ್ವಾರಕೆ ಮೆಚ್ಚಿ ಮಾತಾಪಿತರ್ವೈರ್ಯಾಗಿ ಪಾತ್ರಾಪಾತ್ರೆನದೆ ಕುಲಗೋತ್ರ ಧರ್ಮಳಿದ ಮಾತೃ ಭೂಮಾತೆಯ ಯಾತ್ರ ಸುದ್ದರಿಯದೆ ಧಾತ್ರಿಯೊಳ್ ಕೈಸೂತ್ರಗೊಂಬ್ಯಾದ1 ಸುಲಭದಿಂ ತನ್ನಯ ಕುಲನಾಶಗೆ ಅನ್ಯ ಕುಲಕೆ ಹವಣಿಪ ಮಾರಿಬಲೆಗೆ ಒಳಪಟ್ಟು ಕುಲ ವಿಧವಿಧ ಭಕ್ತಿಗಳನಗಲಿ ಬಲುಪಾಪಕೊಳಗಾಗಂಕತನ ಮಹ ಕೊಲೆಗೆ ಈಡಾದ 2 ಉತ್ತಮರ ಲಕ್ಷಿಸದೆ ಸತ್ಯಕ್ಕೆ ಮನಗೊಡದೆ ಮೃತ್ಯುರೂಪಿಣಿಮಾತೇ ಅತ್ಯಧಿಕವೆನುತ ಮರ್ತು ತನ್ನಯ ಸುಖವ ತೊತ್ತಾಗಿ ಪಾತಕಿಗೆ ನಿತ್ಯ ಮೈಲಿಗೆಹೊರುವ ಕತ್ತೆಯಂತಾದ 3 ಸಾರುತಿಹ್ಯವೇದ ಸುವಿಚಾರವಾದಗಳೆಲ್ಲ ತೂರಿ ಅಡಿವಿಗೆ ಅಟ್ಟಿ ಮೀರಿ ಮಹವಾಕ್ಯ ಘೋರನರಕಕೊಯ್ದು ಸೇರಿಸುವವತಾರಿ ಮಕ್ಕ ಮಾರಿ ಜಾರೆಗೆ ಬಿಡದೆ ಸೆರೆಯಾಳು ಆದ 4 ಮನ ಅವಳಿಗರ್ಪಿಸಿ ತನು ಅವಳಿಗೊಪ್ಪಿಸಿ ಧನವನಿತು ಅವಳ ಅಧೀನದಲ್ಲಿರಿಸಿ ಬಿನುಗರೊಳುಬಿನುಗೆನಿಸಿ ಕುಣಿಕುಣಿದು ಕಡೆಗೆ ಮಮ ಜನಕ ಶ್ರೀರಾಮನಡಿ ಕನಿಕರಕ್ಹೊರತಾದ 5
--------------
ರಾಮದಾಸರು
ಸೃಷ್ಟಿಗೀಶ ನಿನಗಿಷ್ಟು ದಯಬಾರದ್ಯಕೊ ಎಷ್ಟು ಬೇಡಲು ಎನ್ನ ಮೊರೆ ಕೇಳದಿರುವಿ ಪ ಕರಿರಾಜನ ಪೊರೆದೆಲೋ ನರಗೆ ಸಾರಥಿಯಾದಿ ತರುಣಿಯನುದ್ಧರಿಸಿ ಪರಿಶುದ್ಧಗೈದಿ ಪರಮಕುರುಣಿಯು ನೀನು ದುರಿತಕಾರ್ಯದಿಂ ನಾನು ನರಕಿಯಾಗ್ವುದನರಿತು ಅರಿಯದಂತಿರುವಿ 1 ಖುಲ್ಲದಾನವರೊದೆದು ಎಲ್ಲ ದೇವತೇರಿಗೆ ನೀ ನುಲ್ಲಾಸವನು ಕೊಟ್ಟು ಪುಲ್ಲನಾಭ ಹರಿಯೆ ಕ್ಷುಲ್ಲಕರ ಸಂಗದಿಂ ನಾ ಸಲ್ಲದಂತಾಗುವೆ ಕ ಣ್ಣಲ್ಲಿ ಕಂಡು ನೀ ಕಂಡಿಲ್ಲದಂತಿರುವಿ 2 ಮುನಿಶಾಪದಿಂ ನೃಪನ ಕನಿಕರದಿ ಕಾಯ್ದಿ ನಿಂ ತನುದಿನದಿ ಬಾಗಿಲವ ಘನವಾಗಿ ಕಾಯ್ದಿ ಶುನಕನಂದದಿ ನಾನು ದಿನದಿನಕೆ ಮತ್ತಿಷ್ಟು ಘನಪಾಪಿಯಾಗ್ವುದನು ಮನಕೆ ತರದಿರುವಿ 3 ವನವಾಸಗೈದಯ್ಯಾ ವಾನರನ ಸಲಹಿದಿ ದನುಜನನು ಸಂಹರಿಸಿ ದನುಜನನುಜಂಗೆ ಮಾಣದ ಪಟ್ಟವನು ಮೆಚ್ಚಿ ನೀ ಕೊಟ್ಟೆಯ್ಯಾ ಎನಗ್ಯಾಕೀದುರ್ಬವಣೆ ದೂರಮಾಡದಿರುವಿ 4 ಇನಿತೆಲ್ಲ ಯೋಚಿಸಲು ಘನ ಕುರಣಾನಿಧಿ ನೀನು ನಿನಗವರೆ ದಾಸರೆ ನಾನಲ್ಲವೇನು ಮನಸಿಜಪಿತ ನಿನ್ನ ವನರುಹಂಘ್ರಿಯ ನಂಬಿ ಮಣಿದು ಬೇಡುವೆ ಕಾಯೊ ತಂದೆ ಶ್ರೀರಾಮ 5
--------------
ರಾಮದಾಸರು
ಸೃಷ್ಟಿಗೊಡೆಯನೇ ನಿನ್ನ ದೃಷ್ಟಿಯಿಂದಲಿ ಎನ್ನ ಕಡೆ ನೋಡವಲ್ಲಿ ಪ ಘಟ್ಯಾಗಿ ನೀ ಗತಿಯೆಂದು ನಾ ನಂಬಿದರೆ ಸೊಟ್ಟಗಿಹ ಮೊಗವಟ್ಟವೇರುತಲಿದೆ ಇಷ್ಟಿಲ್ಲವೆಂದು ನೀ ಬಿಟ್ಟ ರಾಜವನಲ್ಲಾ ಕಟ್ಟುವೆನೋ ಇಟ್ಟು ಮನ ತವ ಪದದಿ ಬಿಡದೆ 1 ಅಷ್ಟ ಸೌಭಾಗ್ಯ ಮದವೆಷ್ಟೋ ಅದರಿಂದ ದಯ ದೃಷ್ಟಿ ಇಲ್ಲದೇ ನಯನ ಮುಚ್ಚಿ ತೆರೆಯುವುದೋ ಭ್ರಷ್ಟನೆಂದು ದೂರ ದೃಷ್ಟೀಲಿ ನೋಡಿದರೆ ಬಿಟ್ಟು ಕೊಡೊ ಭಕುತವತ್ಸಲನೆಂಬೋ ಬಿರುದು 2 ಇಟ್ಟು ನೋಡುವುದು ನಿನಗೆಷ್ಟು ಸುಖವೋ ಅಟ್ಟಿ ಬಹ ದುರಿತಗಳ ಮೆಟ್ಟಿನೀ ತುಳಿಯದಿರೆ ಬಿಟ್ಟು ಕೊಡೊ ಕರುಣಾಸಾಗರನೆಂಬೊ ಬಿರುದು 3 ಕೆಟ್ಟ ಜನ್ಮವ ಕೊಡು ಕನಿಷ್ಟದಿಂದಲಿತು ಹೊಟ್ಟೆಗನ್ನವು ದೊರೆಯದಂತೆ ಮಾಡೋ ಪುಟ್ಟಿ ಭಕುತಿ ಮಾತ್ರ ಥಟ್ಟನೆ ಕೊಟ್ಟು ಮನ- ದಿಷ್ಟ ಪೂರೈಸಿ ತವ ದಾಸನ ಮಾಡೋ 4 ಶ್ರೇಷ್ಠ ಸಾತ್ವೀಕನಾಗಿದ್ದರೆ ಹರಿ ನಿನಗೆ ಇಷ್ಟು ಬಾಯ್ದೆರದು ನಾ ಬೇಡಲ್ಯಾಕೊ ಕೆಟ್ಟ ಪಾಪಿಷ್ಟನಾದುದಕೆ ಶ್ರೀ ಹನುಮೇಶ ವಿಠಲನೇ ತವ ಚರಣ ತೋರಿಸಲಿ ಬೇಕೊ 5
--------------
ಹನುಮೇಶವಿಠಲ
ಸೃಷ್ಟಿಯೊಳಗೆಲ್ಲ ದುಷ್ಟರ ಪ್ರಭೆಯಾಗಿ ನಿಷ್ಠರುದೋರದಂತಾದರು ಮಾ ಧ್ರುವ ಭ್ರಷ್ಟರು ಬೂಟಿಕಿ ಶಿಷ್ಠರೆ ಕೈಕೊಂಡು ನಿಷ್ಠರಿಗಾಟ್ಲಿ ತಂದರು ಮಾ ತುಟ್ಟಿಲೆ ಮಿಸುಕದೆ ಗುಟ್ಟಿಲಿದ್ದವರ ಬಟ್ಟೆಗ್ಯಳದಿನ್ನು ತಾಹರು ಮಾ ಹೊಟ್ಟೆಯೊಳು ಹೊಕ್ಕು ಕಟ್ಟಲೆ ಕುಳಿತಿನ್ನು ನೆಟ್ಟ ನೇರಿಷ್ಟ ನೇಮಿಸುರು ಮಾ ಇಟ್ಟ ತೊಟ್ಟವರನು ಕೆಟ್ಟದೃಷ್ಟಿಲೆ ನೋಡಿ ದಿಟ್ಟತನದಿ ಪ್ರಾಣಕೊಂಬರು ಮಾ 1 ಕೊಟ್ಟು ಹಣಹೊನ್ನು ಇಟ್ಟದ್ದು ಬೇಡಲು ಕುಟ್ಟಿ ಅವನಬಾಯಿ ಹಾರರು ಮಾ ತುಟ್ಟಿಲೆ ವಂದಾಡಿ ಹೊಟ್ಟಲೆ ವಂದಿಟ್ಟು ನೆಟ್ಟನೆ ಘಾಸಿಮಾಡರು ಮಾ ಗಂಟುಳ್ಳವರ ಕಂಡು ಕಟ್ಟಿದಂಡಗಳನ್ನು ನಷ್ಟತನದಿ ಹೊಟ್ಟೆ ಹೊರುವರು ಮಾ ಬಟ್ಟಿಲೆ ತೋರಲು ಬಿಟ್ಟಿಯ ಹಿಡಿದಿನ್ನು ಹೆಟ್ಟಿ ಅವನ ಮುಂದೆ ನಡೆಸುರು ಮಾ 2 ಶುದ್ದಿಯು ಇಲ್ಲದೆ ರಾಜ್ಯಾಧಿಪತಿಗಳು ಇದ್ದು ಇಲ್ಲದಂತಾದರು ಮಾ ಮಂದಮತಿಗಳು ಅಂದಣವೇರಿನ್ನು ಬುದ್ಧಿವಂತರೀಗ್ಹೀನತಂದರು ಮಾ ಮುದ್ರಾಧಾರಿಗಳೆಲ್ಲ ಕ್ಷುದ್ರದೃಷ್ಟಿಯು ಮಾಡಿ ಕ್ಷುದ್ರತನದಿ ಕೆಡುತಿಹರು ಮಾ ಸಿದ್ಧಸಾಧಕರೆಲ್ಲ ಗುದ್ದನೇ ಹೊಕ್ಕರು ಇದ್ದರೆ ಬುದ್ಧಿಹೀನರು ಮಾ 3 ಉಳಿಯಮುಟ್ಟಿದ ದೈವ ಉಳಿಯದೇ ಹೋದವು ಉಳಿಗಾಲ ವಿಲ್ಲದಂತಾಯಿತು ಮಾ ತಿಳಿವಳಿಕುಳ್ಳವರೆಲ್ಲ ತಲೆಮುಸಕ್ಹಾಕಿನ್ನು ಕಳ್ಳರೆ ಸಾಜರು ಆದರು ಮಾ ಒಳ್ಳೆಯವರ ನುಡಿ ಎಳ್ಳಷ್ಟು ಮಾಡುತ ಸುಳ್ಳರು ನಿಜನುಡಿವೆಂಬುರು ಮಾ ಉಳ್ಳವರು ಖಳಬುದ್ಧಿ ಕೈಕೊಂಡು ಇಳೆಯೊಳು ಧರ್ಮವ ಜರೆದರು ಮಾ 4 ಸಾಧುಸಜ್ಜನರೆಲ್ಲ ಭೇದವ ಅಡಗಿಸಿ ಮೇಧಿನಿಯಲು ಗುಪ್ತರಾದರು ಮಾ ಇದ್ದರ ಘನಸುಖ ಸಿದ್ಧರ ನೆರೆಯಲಿ ಬುದ್ಧಿಹೀನರು ತಾವು ಅರಿಯರು ಮಾ ಸದ್ಗುರು ಕೃಪೆಯಿಂದ ಸದ್ಬ್ರಹ್ಮದ ನೆಲೆಯ ಸತ್ ಶಿಷ್ಯಮಹಿಪತಿ ತಿಳಿದನು ಮಾ ಎಂದಿಗೆ ಬೇಡಿನ್ನು ದುರ್ಜನರ ಸಂಗವು ತ್ರಾಹಿ ತ್ರಾಹಿ ತ್ರಾಹಿ ಎಂದನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೃಷ್ಟೀಶ ಕೃಪೆದೋರಿದ ಬಾಲನಮಾನನಷ್ಟವ ಜಾರಿಸಿದ ಪ ನ್ಯಾಯಕೆ ಪೋಪಕಾಲದಿ ಪುಟ್ಟಯಾಖ್ಯನ ಸ್ವಪ್ನದಲಿ ತಾಂ- ಬಿಟ್ಟು ಬನ್ನಿರಿಯೆನುತಪೇಳ್ದಾ ಅ.ಪ ಎಲ್ಲಾರ ನಿನ್ನೊಳಗೆ ಸೇರಿಸಿ ಮುಂದೆ- ಉಲ್ಲಾಸಕೊಡುವೆ ನಿನಗೆ ಕಲ್ಲಿನಂದದಿ ಮೌನಧರಿಸುತ- ಖುಲ್ಲಮನುಜರ ಸಂಗವರ್ಜಿಸಿ ನಿಲ್ಲಿಸು ಮನವನೆನುತಲಿ 1 ಗುರುತು ಕಾಣುವದೆಂದಿಗೆ ಪರಮ ತಿರುಮಂತ್ರಾರ್ಥ ಅಷ್ಟಾ- ಕ್ಷರಿಯ ಜಪತಪಧ್ಯಾನಮಾಡುವ ದೊರಯದೆಂದಿಗು ಕೀರ್ತಿ ಎನುತಲಿ 2 ಮತಧರ್ಮಜ್ಞಾನಿಗಳು ಪೇಳಿರುವಂತ ಮತಶಾಸ್ತ್ರವೀಕ್ಷಿಸದೆ ಸತತದೂಷಣೆಗೈದು ಸುಜನರ - ಕ್ಷಿತಿಯ ಭೋಗವನಂಬಿ ಗರ್ವದಿ ಹಿತವತಪ್ಪಿಸಿ ಕರವಪಿಡಿಯುತ 3 ಸ್ಥಿರವಲ್ಲಕಾಯವೆಂದು ಸಾತ್ವಿಕಶೃತಿಯೊ- ಳಿರುವ ಸತ್ಯ ನೋಡೆಂದು ನಿರುತಬೋಧಿಸಿ ಜನನಮರಣವ ತರಿದು ಎನ್ನನೆ ಯಜಿಸು ಯೆನುತಲಿ- ಹರಸಿ ಮೋಕ್ಷವನಿತ್ತ ಆರ್ಯನು 4 ಬಿಟ್ಟು ಸತಿಸುತರೆಲ್ಲರ ಎನ್ನೊಳುಮನವ ನಿಟ್ಟುನಂಬಿದಭಕ್ತರ ಬಿಟ್ಟುಕೊಡೆನಾನೆಂದು ಹೃದಯಾ- ಧಿಷ್ಟಿತನು ತಾನಾಗಿ ಅಭಯವ ಇಷ್ಟಶ್ರೀಗುರುರಂಗನೀಕ್ಷಿಸಿ 5
--------------
ರಂಗದಾಸರು
ಸೇರಿ ಬದುಕುವೆ ನಮ್ಮ ಸ್ವಾಮಿಯಂಘ್ರಿಯನುಭೂರಿ ದೋಷಗಳನ್ನು ಬಯಲ ಮಾಳ್ಪುದನು ಪನಿರ್ಗುಣದ ರೂಪವದು ನಿಲುಕದೆಂದಿಗೂ ಮನಕೆದುರ್ಗುಣದ ಪುಂಜಕ್ಕೆ ದೊರಕುವುದೆ ಹುಡುಕೆಅರ್ಗಳದ ವೃತ್ತಿಗಳಲಾಳಿ ಮುಳುಗಿರಲಿದಕೆಮುಗ್ಗಿ ಮೋಹಿಪ ನಾನು ಮಥಿಸಲಿನ್ನೇಕೆ 1ಸಗುಣಮೂರ್ತಿಯ ನೋಡೆ ಸ್ಥಿರದಿ ಬುದ್ಧಿಯು ನಿಲದುಅಗಣಿತದ ವಾಸನೆಯೊಳತಿಬದ್ಧವಡೆದುಬಿಗಿ ಭದ್ರವಾಗಿರಲು ಬಹು ಕರ್ಮವೆಳೆದೆಳೆದುಬಗೆಯದನು ನೆರೆ ನೋಡಿ ಬಿಟ್ಟದನು ಜರೆದು 2ಧ್ಯಾನಿಪರು ಧ್ಯಾನಿಸಲಿ ಧೈರ್ಯದಲಿ ಬ್ರಹ್ಮವನುಜ್ಞಾನಿಗಳು ತಿಳಿಯಲಾ ಗೂಢ ತತ್ವವನುಮಾನರಹಿತರು ಹರಿಗೆ ಮಾಡಲಾ ಕರ್ಮವನುನಾನೊಂದನೊಡಬಡೆನು ನೋಡಿ ಕಠಿಣವನು 3ವೇದಶಾಸ್ತ್ರಗಳೋದಿ ವಾದಿಸಲಿ ವಾದಿಗಳುಸಾಧಿಸಲಿ ಸ್ವರ್ಗವನು ಸಕಲ ಶ್ರೌತಿಗಳುಬೋಧಿಸಲಿ ಪರರಿಂಗೆ ಬಹುತತ್ವಭೇದಿಗಳುಮಾಧವನಿಗೆರಗುವದೆ ಮತವೆನಗೆ ಕೇಳು 4ಪಾದಪದ್ಮವನಂಬಿ ಪಡೆದರಮಿತರು ಗತಿಯ ಓದಿದವರೈದಿದರು ವಾಸನೆಯ ಬಗೆಯಕಾದು ರಕ್ಷಿಪುದಂಘ್ರಿ ಕೊಡುವುದಮಿತದ ಸಿರಿಯವಾದಿಸದೆ ನಂಬಿದೆನು ವಿಧಿಜನಕನಡಿಯ 5ಇದು ತಾನೆ ಲೋಕಗಳನೆಲ್ಲವಾಳುವ ದೊರೆಯುಇದು ತಾನೆ ಯೋಗಿಗಳಿಗಿದಿರಾದ ಬಗೆಯುಇದು ವಿಷಯದೊಳಗಿರುವರೆಬ್ಬಿಸುತ್ತಿಹ ಸುಧೆಯುಇದನೆ ನಾನಂಬಿದೆನು ಯಾಕೆ ಕರೆಕರೆಯು 6ತರುಬಿ ನಿಂದಿದೆ ಲೋಕ ತತ್ಪಾದಪದ್ಮವನುಹೊರೆಯುತಿಹುದಾ ಜನವ ಹೊಣೆಯಾಗಿ ತಾನು ತಿರುಪತೀಶ್ವರ ನನಗೆ ತೋರ್ದನೀ ಮತಿಯನ್ನುವರದೇಶ ನನಗೊಲಿದವೊಡೆಯ ವೆಂಕಟನು 7ಓಂ ತೀರ್ಥಪಾದಾಯ ನಮಃ
--------------
ತಿಮ್ಮಪ್ಪದಾಸರು
ಸೇರಿ ಸುಖಿಸು ಮಾನವ ಗುರು ಚರಣ ಸರೋಜವ ಪ ಸೇರಿದ ಶರಣರ ಘೋರ ಪಾತಕವೆಂಬ ವಾರಿಧಿ ಭವಕೆ ಸಮೀರ ಜಗನ್ನಾಥ ಸೂರಿವರ್ಯ ದಾಸಾರ್ಯರಂಘ್ರಿಯನು 1 ತಾರತಮ್ಯವ ತಿಳಿಯದೆ ಕಲಿಯುಗದಿ ಮುಕ್ತಿ- ದಾರಿಕಾಣದೆ ಭವದಿ ಬಿದ್ದ ಜ- ನರುದ್ಧಾರ ಮಾಡಲು ದಯದಿ ಬ್ಯಾಗವಾಟದಿ ನರಸಿಂಗಾಖ್ಯ ವಿಪ್ರಗಾರ ದೋಳುದ್ಭವಿಸಿ ಚಾರು ಕಥಾಮೃತ ಸಾರವ ಧರೆಯೋಳು ಬೀರಿದಂಥವರ 2 ಮೇದಿನಿಯೊಳು ಚರಿಸಿ ವಾಕ್ಯಾರ್ಥದಿ ಬಹು ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ ಬೋಧ ಮತಾಬ್ಧಿಗೆ ಶಶಿನೃಪ ಮಾನ್ಯರೆನಿಸಿ ಶ್ರೀದ ಪ್ರಹ್ಲಾದನನುಜ ಸಹ್ಲಾದರೆ ಇವರೆಂದು ಸಾದರ ಬಿಡದ ಪಾದಪಂಕಜಾರಾಧಕರಿಗೆ ಸುರಪಾದರೆನಿಪರ 3 ಕ್ಷೋಣಿ ವಿಬಂಧ ಗಣದಿ ಸೇವೆಯಗೊಂಡು ಮಾನವಿ ಎಂಬ ಕ್ಷೇತ್ರದಿ ಮಂದಿರ ಮಧ್ವ ಸ್ಥಾಣುವಿನೊಳು ಮುದದಿ ಕಾರ್ಪರವೆಂಬ ಕಾನನದಲ್ಲಿ ಕೃಷ್ಣವೇಣಿ ಕುಲದಿ ಮೆರೆವ ಶ್ರೀನಿಧಿ ನರಪಂಚಾನನಂಘ್ರಿಯುಗ ಧ್ಯಾನದಿ ಕುಳಿತ ಮಹಾನುಭಾವರನು 4
--------------
ಶ್ರೀನಿಧಿವಿಠಲರು
ಸೇರಿದರೇನು ಫಲ ಪ ಅಕ್ಕರೆಯಿಲ್ಲದ ರಕ್ಕಸಿ ಯುದರದಿ ಮಕ್ಕಳು ಜನಿಸಿದರೇನು ಫಲ ದುಃಖಿಪಜನರನು ಲೆಕ್ಕಿಸದಾತನ ಒಕ್ಕಲುತನದಿಂದೇನು ಫಲ 1 ಜನಿಸಿದ ಮಕ್ಕಳುಜೀವಿಸದಿದ್ದರೆ ಜನನೀಜನಕರಿಗೇನು ಫಲ ಕನಸಿಲಿ ಕಾಣುವ ಧನಕನಕಂಗಳ ನಂಬಿದ ಜನರಿಗೇನು ಫಲ 2 ಅರಿಯದೆಕೊಂಡವಗೇನು ಫಲ ಹಿರಿಯವನಾಗಿರಲೇನು ಫಲ 3 ಗಂಡನ ದೂರುತ ಮಿಂಡನ ಸೇರುವ ಹೆಂಡತಿಯಿರಲೇನು ಫಲ ಹೆಂಡಿರ ಮಕ್ಕಳ ದಂಡಿಸದಾತನ ಗಂಡಸುತನದಿಂದೇನು ಫಲ 4 ಸಿಂಗರಿಸಿದರೇನು ಫಲ ಪುಣ್ಯದಿಂದೇನು ಫಲ5
--------------
ಸರಗೂರು ವೆಂಕಟವರದಾರ್ಯರು
ಸೇರಿದೆನು ಸೇರಿದೆನು ಜಗದೀಶನನರಕಜನ್ಮದ ಭಯವು ಎನಗೆ ಇನಿತಿಲ್ಲ ಪ ಮೂರ್ತಿ ಗಾತ್ರ ಕೃಷ್ಣನ ಮುಂದೆ1 ಹಸ್ತಗಳು ಮಂಟಪಶುದ್ಧಿಯನು ಮಾಡುತಿವೆಮಸ್ತಕವು ಹರಿಚರಣಕೆರಗುತಿದೆಕೋವಿಸ್ತಾರವಾದ ಪ್ರದಕ್ಷಿಣೆಯ ಮಾಡುತಿದೆಕಸ್ತೂರಿತಿಲಕವನು ಮೂಗು ಆಘ್ರಾಣಿಸುತಿದೆ 2 ಹರಿನಾಮಸ್ಮರಣೆಯನು ನುಡಿಯುತಿದೆ ಎನ್ನ ಜಿಹ್ವೆಹರಿಭಕುತಿ ಸುಧೆಯ ಪಾನಗಳಿಂದಲಿಹರಿಪ್ರೀತಿಯಾಗಿದೆ ನೋಡಿದರೆನ್ನ ದೇಹಸಿರಿಕೃಷ್ಣರಾಯನ್ನ ಮನಮಂದಿರದಿ ಕಂಡೆ 3
--------------
ವ್ಯಾಸರಾಯರು