ಒಟ್ಟು 2117 ಕಡೆಗಳಲ್ಲಿ , 117 ದಾಸರು , 1524 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುತಿಸಲೆನ್ನೊಶವೆ ನಿನ್ನ ಶ್ರೀ ಗುರುರನ್ನ ಪ ತುತಿಸಲೆನ್ನೊಶವೆ ನಿ -ನ್ನತುಳ ಮಹಿಮ ಮಹಾ ಮತಿವಂತ ಜನರು ಸು - ಮತಿಗೆ ಸಿಲ್ಕದ ನಿನ್ನ ಅ.ಪ ಸ್ಮರಿಪ ಜನರ ಸುರ ತರು ಪಾಪಕಾಂತಾರ ನರ ಸಮ ಸಜ್ಜನ | ಶರಜನಿಚಯ ದಿನ ಪಾದ | ಸರಸಿಜ ಭಜಿಸುವ ಪರಮ ಭಕ್ತರ ಕುಮುದ | ವರ ನಿಚಯಕೆ ಸುಧಾ - ಪರಮ ಕರುಣಿಯು ಎಂದು ನಿನ್ನಯ ಪಾದ ಮೊರೆಯ ಪೊಕ್ಕೇನೊ ನಾನಿಂದು ನೀನೆ ಎನ್ನ ಮೊರೆಯ ಲಾಲಿಸು ಎಂದು ಬಿನ್ನೈಸಿದೆ ಪರಮಕೃಪಾಕರ ಪೊರೆಯೊ ಅನಾಥ ಬಂಧೂ 1 ದಯಕರ ನಿಜ - ಭಕ್ತಾ | ಮಯ ಹರ ಸುಖಸಾರಾ ಶ್ರಯವಾಗಿ ಸಂತತ | ನಯದಿಂದ ನಿಜಜನ ಭಯಕರ ಭವಹರ | ಜಯ ಜಯ ಜಯದಾತ ಜಯ ವಿಜಯಾತ್ಮಜ | ಜಯಕುಲ ದಿಗ್ವಿಜಯ ಜಯ ಕಾಲದಲಿ ನಿಜ | ಹಯಗ್ರೀವಮೂರ್ತಿಯ ದಯದಿಳೆಯೊಳು ಜನಿಸೀ | ಜನ್ಮದಿ ಮೂರ್ತಿ ತ್ರಯ ಪಾದವನೆ ಭಜಿಸಿ - ಧರಿಯೊಳು ಕ್ಷ - ತ್ರಿಯ ಕುಲದೊಳು ಜನಿಸಿ ಯುಧಿ ಭೀಮ - ಶಯನನಿಂದ ಹತನಾಗ್ಯಭüಯ ಸ್ಥಾನವನೆ ಬಯಸಿ 2 ಭೂಸುರ ವರನಾಗಿ | ಕಾಶ್ಯಪಿ ಸ್ಥಳದಲ್ಲಿ ವಾಸಮಾಡಿ ಶಿರಿ ವ್ಯಾಸ ಕೃಷ್ಣ ಪಾದೋ - ಪಾಸನ ಮಾಡುತ | ವ್ಯಾಸಮುನಿ ಆಗಿ ಭಾರ | ತೀಶ ಪ್ರತೀಕವ ವಾಸವಾಸರ ಸ್ಥಾ - ಪಿಸಿ ಯಂತ್ರೋದ್ಧಾರಾ ಶ್ರೀಶ ಮಧ್ವಮುನಿಯಾ - ಸ್ಥಾಪಿಸಿ ಅಲ್ಲಿ ವಾಸವ ಮಾಡಿ ತಾನೂ - ಪುರಂದರ ದಾಸರಾಯರಿಗೆ ಇನ್ನು - ಸುಮಂತ್ರೋಪ - ಅನುದಿನ ವಾಸಮಾಡಿದಿ ನೀನು 3 ಕ್ಷೋಣಿತಳದಿ ಕುಂಭ | ಕೋಣನಗರದಲ್ಲಿ ಕ್ಷೋಣಿದೆವೋತ್ತುಮ | ವೀಣವೆಂಕಟನಾಮಾ - ಕ್ಷೀಣಬಲ ಙÁ್ಞನ ತಾಣ | ಗೊಡದೆ ನಿನ್ನ ಜಾಣತನದಿ ನರ | ಮಾಣವಕನಂತೆ ಪಾಣಿ ಭಿಕ್ಷಾನ್ನವಾ | ಟಾಣಿ ಮಾಡುತ ನೀನು ಕ್ಷೋಣಿಪ ಮನಿಗೆ ಬಾರೇ - ನಿನ್ನ ವೀ - ಶುಭ ಲ - ಕ್ಷಣ ಬ್ಯಾರೆ ಬ್ಯಾರೇ ಇರಲು ನಿನ್ನ ಕ್ಷಣ ಬಿಡದಲೆ ಜನ ಮಣಿದು ನಮಿಸುತಿರೆ 4 ಜನಪ ನಿನ್ನಯ ಮಹ | ಘನ ಚರ್ಯವನೆ ನೋಡಿ ದಿನದಿನದಲಿ ಬಹು | ವಿನಯಪೂರ್ವಕ ಪಾದ ವನಜ ಸೇವಕÀನಾಗಿ |ತನು ಮನ ಧನ ಧಾನ್ಯ ಘನ ನಿನಗರ್ಪಿಸಿ | ನಿನ ಸಂಗವಾಗಲೂ ಜನುಮ ಇಲ್ಲೆಂಬುವ | ಘನ ಙÁ್ಞನ ಭಕುತಿಯ ಮನದಲ್ಲಿ ಯೈದುತಲೆ - ತಾನು ನಿತ್ಯ ಅನುಮಾನ ಮಾಡದಲೆ - ಇರಲು ಅವನ ಘನಸುಖ ರೂಪದಲ್ಲೆ - ಇರುವಂತೆ ಮನಪೂರ್ತಿ ಕರುಣಸಿದ್ಯನುಪಮ ಚರಿತಲ್ಲೆ 5 ಸತ್ಯನಾಮಕ ಸುತ | ಮೃತ್ಯುನಿಂದಲಿ ತಾನು ಸತ್ತುಪೋದ ವಾರ್ತೆ | ಬಿತ್ತರಿಸೆ ಲೋಕದಿ ಉತ್ತುಮ ನೀನಾಗ | ಸತ್ಯ ಸಂಕಲ್ಪವ ಗೊತ್ತು ತಿಳಿದು ಅವನ | ಮತ್ತೆ ಈ ಲೋಕಕ್ಕೆ ತತ್ಕಾಲದಲಿ ತಂದು | ಉತ್ತುಮ ಭಾರ್ಯಳ ಜತ್ತು ಮಾಡಿದ ವಾರ್ತೆಯಾ - ಕೇಳೀ ಶೈವ - ರುತ್ತುಮನಾತ್ಮಜನಾ - ಇವಾನಂತೆ ಸತ್ಯವೆಂದು ಪೇಳಿ ಮತ್ತೆ ಪೊರೆದ್ಯೊ ಜೀಯಾ 6 ಇನತೆ ಮೊದಲಾದ | ಫನತರ ನಿನ ಮಹಿಮೆ ನಿತ್ಯ | ಅನಿಮಿಷ ಮುನಿಜನ ಮನಕೆ ಸಿಲ್ಕದೆ ವೃಂದಾ - |ವನದಲಿ ನೀ ನಿಂತು ವನುತೆ ಸುತ ಧನ | ಧಾನ್ಯ ಮೊದಲಾದ ಅನುದಿನ ಸಲಿಸುತ್ತ ಜನರ ಪಾಲಿಸೊಗೋಸುಗಾ - ಹರಿಯು ನಿನಗೆ ಜನುಮಾವನಿತ್ತನೀಗ - ಅದಕೆ ನಿನ್ನ ಅನುದಿನ ತವಪಾದ ವನಜ ನಂಬಿದೆ ವೇಗ 7 ರಕ್ಷಿಸೋ ನೀ ಎನ್ನ | ಲಕ್ಷ್ಮೀರಮಣ ದೂತ ಮೋಕ್ಷಾದಿ ಪುರುಷಾರ್ಥ - | ಪೇಕ್ಷ ಪ್ರದಾಯಕ ಲಕ್ಷ ಜನರೊಳೆನ್ನ | ವೀಕ್ಷಿಸಿ ಪರಜನಾ - ಪೇಕ್ಷಾ ಮಾಡದಂತೆ | ಲಕ್ಷ್ಮೀಶ ನಾತ್ಮಜ ಭಿಕ್ಷಾನ್ನ ಬೇಡೋದು | ಲಕ್ಷಣವೇನಿದು - ಪೇಕ್ಷಾ ಮಾಡದೆ ನೀ ಎನ್ನಾ - ಕಾಯಲಿಬೇಕು ವಿಕ್ಷೀಸಿ ಙÁ್ಞನವನ್ನಾ - ಭಕುತಿ ಇತ್ತು - ರಕ್ಷಿಸು ಎಂದೆ ನಿನ್ನಾ ಇದೆ ಒಂದಾ ಪÉೀಕ್ಷೆ ಪೂರ್ತಿಸೊ ಕಲ್ಪವೃಕ್ಷ ನೀ ಎನಗೆ ಇನ್ನ 8 ಕಿಟಿಜ ಸರಿದ್ವರ | ತಟ ಕೃತ ಮಂದಿರ ಚಟುಲ ಮಧ್ವಮುನಿ | ಪಟು ಶಾಸ್ತ್ರದಿಂದಲಿ ಕುಟಿಲ ದುರ್ವಾದಿಗ | ಳ್ಥಟನೆ ಮುರಿದು ನಿಜ ಘಟನೆ ಮಾಡಿ ಪ್ರತಿ | ಭಟರಿಲ್ಲದಲೆ ನೀನು ಧಿಟನಾಗಿ ತ್ರಿಜಗದಿ - ಮೆರೆಯುತ ಶಠÀಜನರನು ತ್ವರದಿ - ಮರಿದು ಙÁ್ಞನಿ ಕಟಕ ಸುಪಾಲನದಿ ಪಟೋ ಎನಿಸಿ ಧಿಟಗುರು ಜಗನ್ನಾಥ ವಿಠಲನ್ನ ಭಜಿಸಿದೆ 9
--------------
ಗುರುಜಗನ್ನಾಥದಾಸರು
ತುಳಸಿಯ ಸೇವಿಸಿ ಪ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆ ಯೆಂಬನಿತರೊಳು ಮಾಡುವಳು ಯಾತಕನುಮಾನವಯ್ಯ ಅ.ಪ. ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ | ಪದುವನಾಭನು ತಾನು ಉದುಭವಿಸಿ ಬರಲಂದು | ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ || ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು | ಒದಗಿ ಸುಜನರು ತಮ್ಮ ಸದನದಲಿ ನಿತ್ಯ ತಿಳಿದು ವೃಂದಾವನ ರಚಿಸಿದರೈಯ1 ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ | ಕಾಲ ಮೀರದೆ ಸರ್ವ ನದನದಿಗಳಮರಗಣ | ಮೂರತಿಯು ವಾಲಯವಾಗಿಪ್ಪುದು || ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು | ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ | ಧರಿಸಿದ ಮನುಜ ಕಾಲನಾಳಿಗೆ ಶೂಲನೊ2 ಉದಯದೊಳಗೆದ್ದು ನೀರೆರೆದು ಮಜ್ಜನಗೈದು | ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು | ತದನಂತರದಲಿ ಭಜನೆ || ವದನದೊಳು ಗೈಯೆ ಧರೆಯೊಳಗಿದ್ದ ಸರ್ವವದ | ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ | ಜನ್ಮಗಳಘವ ತುದಿ ಮೊದಲು ದಹಿಪುದಯ್ಯ3 ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ | ಆವವನ ಮನೆಯಲ್ಲಿ ಹರಿದಾಸರಾ ಕೂಟ | ಪಾವಮಾನಿಯ ಮತದೊಳು || ಆವವನು ಕಾಂತ್ರಯವ ಕಳೆವ ನಾವಲ್ಲಿ | ವಾಸುದೇವ ಮುನಿ ದೇವಾದಿಗಣ ಸಹಿತ | ಭಾವಿಸಿರಿ ಭಾವಙ್ಞರು 4 ಕಂಡರೆ ದುರಿತಕ್ಕೆ ಕೆಂಡವನು ಬೀರುವುದು | ಕೊಂಡಾಡಿದರೆ ಪುಣ್ಯವ ಪರಿಮಿತವುಂಟು ಮೈ-| ಜನನವಿಲ್ಲ ಸಲೆ ದಂಡ ವಿಟ್ಟವ ಮುಕ್ತನೊ || ಚಂಡಾಲ ಕೇರಿಯೊಳು ಇರಲು ಹೀನಯವಲ್ಲ | ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು | ಯೋಗ್ಯ ಫಲ ಕಂಡವರಿಗುಂಟೆ ಅಯ್ಯ5 ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ | ಸ್ತೋತ್ರವನೆ ಮಾಡುತ್ತ ದಿವ್ಯಾವಾಗಿಹ ತ್ರಿದೊಳ | ತುಂಬಿ ವಿತ್ತಾದಿಯಲಿ ತಾರದೆ || ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ | ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ - | ತರಬೇಕು ಹೊತ್ತು ಮೀರಿಸಲಾಗದೊ6 ಕವಿ ಮಂಗಳವಾರ ವೈಥೃತಿ ವ್ಯತೀಪಾತ ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ ಇವುಗಳಲಿ ತೆಗೆಯಾದಿರಿ ನವವಸನ ಪೊದ್ದು ಊಟವ ಮಾಡಿ ತಾಂಬೂಲ- ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ ಕೊಂಡಾಡುತಿರಿ ದಿವಸಗಳೊಳಯ್ಯ 7 ದಳವಿದ್ದರೇ ವಳಿತು ಇಲ್ಲದಿದ್ದರೆ ಕಾಷ್ಟ ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು ತೊಳೆ ತೊಳೆದು ಏರಿಸಲಿಬಹುದು ತುಳಸಿ ಒಣಗಿದ್ದರೂ ಲೇಶದೋಷಗಳಲ್ಲಿ ತುಳಸಿ ವಿರಹಿತವಾದ ಪೂಜೆಯದು ಸಲ್ಲದು ಮಾಡಿ ಜಲಜಾಕ್ಷನರ್ಚಿಸಿರೈಯ್ಯ 8 ಸದನ ಹೊಲೆಮಾದಿಗರ ಸದನ ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ ನೆಲೆಯ ನಾ ಕಾಣೆನಯ್ಯ9 ಸತಿ ಪ್ರಹ್ಲಾದ ನಾರದ ವಿಭೀಷಣನು ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು ವಿವರವನು ತಿಳಿದರ್ಚಿಸಿ ತವಕದಿಂ ತಂತಮ್ಮ ಘನ ಪದವನೈದಿದರು ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು ನೀಗಿ ಭವದೊರರಾದರೈಯ 10 ಉದಯಕಾಲದೊಳೆದ್ದು ಆವನಾದರು ತನ್ನ ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ ಸ್ತೋತ್ರಮಾಡಿದ ಕ್ಷಣಕೆ ಮದ ಗರ್ವ ಪರಿಹಾರವೊ ಇದೆ ತುಳಸಿ ಸೇವಿಸಲು ಪೂರ್ವದ ಕಾವೇರಿ ನದಿಯ ತೀರದಲೊಬ್ಬ ಭೂಸುರ ಪದಕೆÉ ವ್ಯೋವ ಸಿರಿ ಪ್ರಿಯಳಾದ ಮದನತೇಜಳ ಭಜಿಸಿರೈದು 11
--------------
ವಿಜಯದಾಸ
ತೂಗಿರೆ ಶ್ರೀ ರಂಗವಲಿದ ದಾಸಾರ್ಯರ ತೂಗಿರೆ ಜಗನ್ನಾಥರಾಯರ ಪ ತೂಗಿರೆ ಭಾಗಣ್ಣ ಗುರುವರನುಗ್ರಹಪಾತ್ರ ಭಾಗವತ್ತೋತ್ತಮರ ತೂಗಿರೆ ಅ.ಪ ಘನ ಸುಜ್ಷಾನ ಸದ್ಭಕುತಿ | ಗುಣದಿ ಬಂಧಿತವಾದ ಅನಿಲಮತವೆಂಬ ತೊಟ್ಟಲದಿ ವನಜನಾಭನ ಧ್ಯಾನ ಯೋಗ ನಿದ್ರೆಯ ಮಾಳ್ಪ ಕನಕ ಶಯ್ಯಾತ್ಮಜರ ತೊಗಿರೆ 1 ಸಾರಥಿ ಪದ್ಮಮಿತ್ರಜಗಾದ ಮದ್ರದೇಶಾಧಿಪರ ತೂಗಿರೆ ವೃದ್ಧಾಶ್ರವಾರ್ಯರ ಸದ್ಮನದಿ ಶಿಶುವಾಗಿ ಉದ್ಭವಿಸುವರ ತೂಗಿರೆ 2 ಧಾಮ ಪದಾರ್ಹರ ಪ್ರೇಮವ ಪಡೆದವರ ತೂಗಿರೆ ಶ್ರೀಮನ್ ಮಾನವಿಯಲ್ಲಿ ನೇಮದಿ ಭಜಿಪರ ಕಾಮಿತ ಕೊಡುವವರ ತೂಗಿರೆ 3
--------------
ಶಾಮಸುಂದರ ವಿಠಲ
ತೆರಳಿದರು ವೈಕುಂಠ ಪುರದರಸನ ಚರಣಾಬ್ಜ ಸೇವಿಸಲು ನರಸಿಂಹದಾಸರು ಪ ಜವಹರುಷದಿಂದ ಪಾರ್ಥಿವ ಮರುಷ ಮಾರ್ಗಶಿರ ಅಪರ ಪಕ್ಷದ ಪಪ್ಠಿ ಭೌಮವಾರ ದಿವದಿ ಪ್ರಾತಃಕಾಲ ಸಮಯದಲಿ ಶ್ರೀ ಲಕ್ಷ್ಮೀ ಕಮಲ ಧೇನಿಸುತ ಸಂತೋಷದಲಿ 1 ವರಹತನಯಾತೀರ ಪ್ರಾಚಿದಿಗ್ಬಾಗದಲಿ ಸುಕೃತ ಛಾಗಿಯೆಂಬಾ ಪುರವರದಿ ತತ್ವ ತತ್ವೇಶರೊಳು ಲಯವರಿತು ಪರಮ ಪುರುಷನ ದಿವ್ಯ ನಾಮಗಳ ಸ್ಮರಿಸುತಲಿ 2 ಭವ ಅನಂ ತರಸನ ಜಠರದಿ ಜನಿಸಿ ಬಂದೂ ಪುರಂದರ ದಾಸರಂಘ್ರಿಗಳ ಸ್ಮರಿಸುತ ಜಗನ್ನಾಥ ವಿಠಲನೊಲುಮೆಯ ಪಡೆದು 3
--------------
ಜಗನ್ನಾಥದಾಸರು
ತೆರಳಿಪೋದರು ವಿಠ್ಠಲಾರ್ಯರಿಂದು ಮುರಹರನ ಚರಣವನು ಸ್ಮರಿಸುತಲಿ ಹರಿಪುರಕೆ ಪ ಸುರಪುರದಿ ಜನಿಸಿ ದೇವಾಂಶರೆಂದೆನಿಸಿದರು ಪುರುಹೂತನಂತೆ ಸಕಲೈಶ್ವರ್ಯದಿಂ ಗುರುರಾಘವೇಂದ್ರರೊಲಿವರಿಗೆ ಪಾತ್ರರೆಂದೆನಿಸಿ ನರಯಾನದಲಿ ಕುಳಿತು ಮೆರೆದರತಿ ವೈಭವದಿ1 ಬಂದ ಶಿಷ್ಯರಿಗೆ ನಿರುತ ಅನ್ನೋದಕವನಿತ್ತು ತಂದೆಯಂತೆ ಸಲಹಿ ಪ್ರೀತಿಯಿಂದ ಮಂದಹಾಸದಿ ಶಾಸ್ತ್ರಮರ್ಮಗಳ ಪೇಳಿಬುಧ ರೆಂದೆನಿಸಿದಂಥ ಮಹಾಮಹಿಮರಾನಂದದಲಿ2 ಭಾಗವತ ಪುರಾಣವ ಜನಕೆ ಅತಿಹಿತದಿ ಪೇಳಿ ದುಷ್ಕøತವ ಕಳೆದು ಗತಿಯೆಂದು ನಂಬಿದ ಭಕುತ ಜನಕೆಧರ್ಮಪ ದ್ಧತಿಗಳನು ಪೇಳುತ ಪ್ರತಿಮರೆಂದೆನಿಸಿ 3 ಭೂತಲದಿ ಜನಿಸಿ ಬಹು ಖ್ಯಾತಿಯನು ಪಡೆದು ನರ ನಾಥರಿಂದಲೆ ಮಾನ್ಯರಾಗಿ ಮೆರೆದು ಪ್ರೀತಿಯಿಂ ಭಜಿಪ ಶಿಷ್ಯೋತ್ತಮರನುದ್ದರಿಸಿ ಪತಿ ಬಳಿಗೆ ಪೋಗುವಾ ತುರದಿ4 ಮೋದದಿಂ ಪಿಂಗಲ ಸಮಾ ಮಾಘವದಿ ಪಂಚ ಮೀ ದಿನದಿ ಆದಿವಾರ ಸ್ವಾತಿಯೋಳ್ ಶ್ರೀದಕಾರ್ಪರ ನಾರಶಿಂಹ ವಿಠ್ಠಲನ ಪದ ಸಾದರದಿ ಧೇನಿಸುತ ಮೇದಿನಿಯ ತ್ಯಜಿಸಿ 5
--------------
ಕಾರ್ಪರ ನರಹರಿದಾಸರು
ತೊರೆದು ಜೀವಿಸಬಹುದೆ ಗುರು ನಿಮ್ಮ ಚರಣವ ಪ. ಬರಿಯ ಮಾತಲ್ಲವಿದು ಜರಿದು ನುಡಿವೆ ಕರಕರೆಗೊಳಿಸದೆ ಕಾಯಬೇಕಿನ್ನು ಗುರು ಅ.ಪ. ಅತಿಶಯ ಮಹಿಮೆಯ ಹಿತದಿಂದ ತೋರಿದ ಪಿತನಂತೆ ಪೊರೆಯುವಚ್ಯುತ ದೂರ ಪದವೀವ ಮತಿವಂತರೆ ನಿಮ್ಮ ಕ್ಷಿತಿಯೊಳಗಲಲಾರೆ1 ನೀತಿಯ ಬೋಧಿಪ ಖ್ಯಾತಿ ಶ್ರೀ ಗುರುಗಳೆ ದೂತರಾದವರನು ಈ ತೆರ ಮಾಳ್ಪರೆ ಪಾತಕರಹಿತರೆ ಪ್ರೀತಿಯ ತೋರಿರಿ2 ಬಂದಿರಿ ಮಮತೆಲಿ ಕಂದರಂದದಿ ತಿಳಿದು ಇಂದಿರೇಶನ ತತ್ವಾವೃಂದಗಳರುಹುತ ಮಂದಿಗಳಿಗೆ ಆನಂದವನೆ ತೋರ್ದಿರಿ 3 ಎಲ್ಲಿ ಭಕ್ತರು ಕರಿಯೆ ಅಲ್ಲಿಗೆ ಬರುವ ಗುರುವೆ ಇಲ್ಲಿ ನಿಮ್ಮ ಹೊರತು ಇಲ್ಲವು ಇನ್ನೊಂದು ಒಲ್ಲೆನು ಈ ಜಗದ ನಿಲ್ಲದ ವಸ್ತುಗಳು 4 ಗೋಪಾಲಕೃಷ್ಣವಿಠ್ಠಲ ತಾ ಪರಿಪರಿ ಲೀಲ ವ್ಯಾಪ್ತ ಶ್ರೀ ಗುರು ಸಹ ಶ್ರೀಪತಿ ಹೃದಯದಿ ತೋರ್ಪಂತೆ ಕೃಪೆ ಮಾಡಿ ಕಾಪಾಡಬೇಕೊ ದೊರಿ 5
--------------
ಅಂಬಾಬಾಯಿ
ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಕೈಯ ಮುಗಿದೊಮ್ಮೆ | ಕೈ ... ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಮನದಲಿನ್ನೊಮ್ಮೆ ಧ್ರುವ ಪುಣ್ಯಕ್ಷೇತ್ರವಹುದಿದು ಸಾರವಾಡಗ್ರಾಮ | ಸಾ... ಕಣ್ಣಾರೆ ಕಂಡು ಯಾತ್ರೆಗೆ ಬಾಹುದು ಬ್ರಹ್ಮಸ್ತೋಮ | ಬಾ... ಸಣ್ಣ ದೊಡ್ಡವರಿಗೆಲ್ಲ ಭಾಸುದು ಸಂಭ್ರಮ | ಭಾ... ದಣಿವು ಹಿಂಗಿ ದೋರುತಿಹುದು ಆನಂದೊಬ್ರಹ್ಮ 1 ಧರೆಯೊಳಧಿಕವಾದ ಕ್ಷೇತ್ರವಿದೆ ಕಾಶಿ | ಕ್ಷೇ... ಹರಿಯುತಿಹುದು ನೋಡಿ ಙÁ್ಞನ ಗಂಗೆಯು ಸೂಸಿ | ಙÁ್ಞ... ಸ್ಮರಣಿಯಿಂದ ಹರಿ ಸೇವ್ಯಾಹುದು ಪಾಪದರಾಶಿ | ಪಾ... ಗುರು ವಿಶ್ವೇಶ್ವರ ತಾರಿಸುತಿಹ ಕರುಣಿಸಿ 2 ಸರ್ವ ತೀರ್ಥ ಮಿಂದ ಫಲ ಬಾಹುದಿಲ್ಲೆ ನೋಡಿ | ಬಾ... ಪೂರ್ವ ಕರ್ಮಾದಿಗಳೆಲ್ಲ ಹೋದವಿಲ್ಲೆ ನೋಡಿ | ಹೋ... ಸರ್ವರು ಅರಿತು ನೀವು ಇದೆ ಯಾತ್ರೆಯ ಮಾಡಿ | ಇ... ನಿರ್ವಾಣ ಪರ್ವಣೀಯ ಫಲ ಬಾಹುದು ಕೈಗೂಡಿ3 ಪುಣ್ಯಗೈದ ವಿಶ್ವನಾಥ ಸತಿಸಹಗೂಡಿ | ಸ... ಜನುಮಾಂತ್ರದ ದೋಷಗಳದಿಲ್ಲೆ ನೋಡಿ | ಗ... ಘನ ಸುಖ ಪಡೆದುನುಮಾನ ಈಡ್ಯಾಡಿ | ಈ... ವರ್ಣಿಸಲಾಗುದು ಸ್ತುತಿ ಸ್ತವನ ಪಾಡಿ 4 ಮನವಿಟ್ಟು ಕೇಳಿ ಸ್ತುತಿ ಭಾವ ಭಕ್ತಿಯಿಂದ | ಭಾ... ಪುಣ್ಯಗೈತೆನ್ನ ಜೀವ ಅನುಭವದಿಂದ | ಅ... ಉನ್ಮನವಾಗಿ ದೋರಿತು ಬ್ರಹ್ಮಾನಂದ | ದೋ... ಧನ್ಯವಾದ ಮಹಿಪತಿ ಗುರು ಕೃಪೆಯಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ತ್ರಾಹಿ ತಾರಕಬ್ರಹ್ಮ ಸಾಯೋಜ್ಯತ ತ್ರಾಹಿ ಅನಾಥ ಬಂಧು ಸಾಕ್ಷಾತ ತ್ರಾಹಿ ದೀನಾನಾಥ ತ್ರಾಹಿ ತ್ರಾಹಿ 1 ಮಾಡಲರಿಯೆ ನಾನಿಮ್ಮ ನಿಜಸ್ತುತಿ ಹಿಡಿಯಲರಿಯೆ ದೃಢ ಸದ್ಭಕ್ತಿ ಪೊಡವಿಯೊಳು ನಾ ಮೂಢಮಂದಮತಿ ಕೂಡಿಕೊಂಬೊ ದಯಮಾಡೋ ಶ್ರೀಪತಿ 2 ಮೊದಲಿಗಾಡುವ ಬಾಲಕವೃತ್ತಿ ತೊದಲುನುಡಿ ತಾಯಿಗತಿ ಪ್ರೀತಿ ಇದೆ ಪರಿಯಲೊಪ್ಪಿಸಿಕೊಂಬ ಸ್ತುತಿ ಮೇದಿನಿಯೊಳು ನಿಮ್ಮ ಖ್ಯಾತಿ 3 ಆಡಿಸಿದಂತೆ ಆಡುವೆ ನಾ ನುಡಿ ನಡೆಸಿಕೊಂಬುದು ಸನ್ಮತ ಮಾಡಿ ಕೊಡುವಂತೆ ಮಾನ್ಯ ಸಂತರೊಡಗುಡಿ ಮಾಡೊ ದಯ ನಿಮ್ಮಭಯನೀಡಿ 4 ತ್ರಾಹಿ ತ್ರಾಹಿಯೆಂಬೆ ತನು ಮನರ್ಪಿಸಿ ತ್ರಾಹಿಯೆಂಬೆ ಶಿರಸಾಷ್ಟಾಂಗ ನಮಿಸಿ ಕಾಯೊ ಮಹಿಪತಿಯ ಕರುಣಿಸಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಶ್ರೀಗುರುನಾಥ ತ್ರಾಹಿ ತ್ರಾಹಿ ಎಂದವನಪರಾಧ ನೋಡದೆ ನೀ ಕಾಯಿ ಧ್ರುವ ಪತಿತಪಾವನೆಂಬ ಬಿರುದು ನಿನಗೆ ಎಚ್ಚರಿಲ್ಲೆ ಪ್ರತಿದಿನ ಮೊರೆ ಇಡಲಿಕ್ಕೆ ಮತ್ತಿದೆ ಸೋಜಿಗವಲ್ಲೆ ಅತಿ ಸೂಕ್ಷ್ಮ ಸುಪಥವರಿಯಲಿಕ್ಕೆ ನಾ ಏನು ಬಲ್ಲೆ ಹಿತದಾಯಕ ನನ್ನ ದೀನ ದಯಾಳು ನೀನೆವೆ ಅಲ್ಲೆ 1 ತಪ್ಪಿಲ್ಲದೆ ನಿನ್ನ ಮೊರೆಯ ಹೋಗುವರೇನೊ ಏ ಶ್ರೀಪತಿ ಒಪ್ಪಿಸಿಕೊಳ್ಳದಿದ್ದರಹುದೆ ಜಗದೊಳು ನಿನ್ನ ಖ್ಯಾತಿ ಕೃಪೆಯುಳ್ಳ ಸ್ವಾಮಿ ನಿನ್ನದೆ ಸಕಲ ಸಹಕಾರ ಸ್ಥಿತಿ ಅಪರಾಧ ಕ್ಷಮೆ ಮಾಡಿ ಸಲಹಬೇಕೆನ್ನ ಶ್ರೀಗುರುಮೂರ್ತಿ 2 ಅನಾಥ ಬಂಧು ನೀ ಎಂದಾಡುತಿರಲಿ ಅನಾದಿಯಿಂದ ನ್ಯೂನಾರಿಸದೆ ಬಾರÀದೆ ಬಿರುದಿಗೆ ತಾ ಕುಂದು ಅನುದಿನ ಅನುಕೂಲ ಮುನಿಜನರಿಗೆ ನೀ ಬ್ರಹ್ಮಾನಂದ ದೀನ ಮಹಿಪತಿ ಸ್ವಾಮಿ ಭಾನುಕೋಟಿತೇಜ ನೀ ಪ್ರಸಿದ್ಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರ್ಯಕ್ಷಾಂಶ ಸಂಭೂತ | ಅಕ್ಷೋಭ್ಯ ಕರಜಾತಕುಕ್ಷಿಯೊಳಗೆ ಖ್ಯಾತ | ಟೀಕಾರ್ಯರೆಂಬಾತ ಪ ಮರುತ ಮತಾಬ್ಧಿ ಸೋಮ | ಹರಿಗುಣ ಗಣಸ್ತೋಮಬರೆದು ವಿಬುಧಸ್ತೋಮ | ಪೊರೆದ ನಿಸ್ಸೀಮಾ ಅ.ಪ. ಎರಗೋಳ ಗುಹೆಯಲ್ಲಿ | ಮರುತ ಮತ ಗ್ರಂಥದಲಿನಿರುತ ಬಹು ಆಸಕ್ತ | ಟೀಕೆಗಳ ಕರ್ತಾ 1 ವೃಷಭದಾಕೃತಿ ಧರಿಸಿ | ಅಸುಪತಿಯ ಸೇವಿಸೀಎಸೆವ ಗ್ರಂಥಗಳ್ಹೊತ್ತು | ಜನ್ಮ ಸ್ಮøತಿ ಪೊತ್ತೂ 2 ಭೋಗಿ ಆವೇಶಿತನೆಯೋಗಿ ಕುಲ ಕಮಲಾಪ್ತ | ಮಾಯಿ ಮತ ಹರ್ತಾ 3 ವೇನ ಮತ ದುಧ್ರ್ವಾಂತ | ಕಳೆಯಲ್ಕೆ ಸುಧೆ ಗ್ರಂಥಜ್ಞಾನ ಸೂರ್ಯನೆ ಇತ್ತೂ | ಕಳೆದೆ ಆಪತ್ತೂ4 ಗೋವುಗಳ ಪಾಲ ಗುರು | ಗೋವಿಂದ ವಿಠಲದೇವ ಗುಣಗಳ ಜಾತ | ಬರೆದ ವಿಖ್ಯಾತಾ 5
--------------
ಗುರುಗೋವಿಂದವಿಠಲರು
ದಂಡವ್ಯಾತಕಯ್ಯ ಹರಿ ಹರಿ ದಂಡವ್ಯಾತಕಯ್ಯ ಪ ದಂಡವ್ಯಾತಕಯ್ಯ ಪಾಂಡುಪಕ್ಷ ಮಹ ಪಾದ ಮರೆಯ ಬಿದ್ದವರಿಗೆ ಅ.ಪ ಭಾರನಿನ್ನದೆಂಬ ಭಕ್ತರ ಭಾರವಹಿಸಿಕೊಂಬ ಪಾರಕರುಣಾನಿಧಿ ಧೀರ ನಿನ್ನ ಪಾದ ಸೇರೆ ಭಜಕರಿಗೆ ಧಾರುಣಿ ಜನರ 1 ಅಜಾಮಿಳನಂತ್ಯದಿ ತವನಾಮ ನಿಜವಾದೊಂದಕ್ಷರದಿ ಮಜೆದು ಗೆಲಿದು ಕಷ್ಟ ನಿಜಪದ ಪಡೆದದ್ದು ನಿಜವನರಿತು ನಿಮ್ಮ ಭಜಿಸುವ ಜನರಿಗೆ 2 ಸಿಂಧುಶಯನನೆನಲು ಅನ್ಯರ ಬಂಧುವೆ ಕರುಣಾಳು ಮಂದರಪರ್ವತ ಮಂದಿರ ಶ್ರೀರಾಮ ಪಾದ ವಂದಿಸಿ ಸುಖಿಪರಿಗೆ 3
--------------
ರಾಮದಾಸರು
ದತ್ತವಧೂತ ಶ್ರೀ ಗುರು ಸಾಕ್ಷಾತ ನಿತ್ಯವಾಗಿಹ್ಯ ನಿಜ ನಿರ್ಗುಣನೀತ ಪ ನಿರ್ಗುಣ ನಿಶ್ಚಲ ಗಗನಾಕಾರ ಸುಗುಣದಲಿ ತಾನೆ ಸಹಕಾರ 1 ಸಹಕಾರನಹುದು ಸದ್ಗುರುನಾಥ ಬಾಹ್ಯಾಂತ್ರದಲಿ ತಾನೆ ಪ್ರಖ್ಯಾತ 2 ಪ್ರಖ್ಯಾತನಹುದು ತ್ರಿಗುಣರಹಿತ ಮುಖ್ಯಮುನಿಗಳಿಗೆ ಮೋಕ್ಷ ಸುದಾತ 3 ದಾತನಹುದು ತ್ರೈಲೋಕ್ಯದೊಳೀತ ಈತನೆ ವಿಶ್ವದೊಳಗೆ ದೈವತ 4 ದೈವತನಹುದು ದೇವಾದಿಗಳಾತ್ಮ ಮೂರ್ತಿ ಶ್ರೀಹರಿ ಸರ್ವಾತ್ಮ 5 ಹರಿ ಸರ್ವಾತ್ಮನಾಗಿಹ ನಿಜಪೂರ್ಣ ಪರಿಪರಿ ಆಗುವ ಅಗಣಿತಗುಣ 6 ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಮಪ ನಿರ್ಧಾರ 7 ನಿರ್ಧಾರನು ನಿಜನಿಷ್ಟರಪ್ರಾಣ ಸಾಧಕರಿಗೆ ಸದ್ಗತಿ ಸಾಧನ 8 ಸಾಧನದೊಡೆಯನಹುದು ಶಾಶ್ವತ ಆದಿದೇವ ಸಕಲಾಗಮ ಪೂಜಿತ 9 ಪೂಜಿತ ಬ್ರಹ್ಮಾದಿಗಳ ಕೈಯ ಮೂಜಗದೊಳು ರಾಜಿಸುತಿಹ 10 ರಾಜಿಸುತಿಹ ತಾ ರಾಜರಾಜೇಂದ್ರ ಸುಜನರ ದೃಷ್ಟಿಯೊಳಿಡದಿಹ ಸಾಂದ್ರ 11 ಸಾಂದ್ರವಾಗಿಹನು ಸಾರ್ವಭೌಮ ಇಂದ್ರಾಧಿಕÀರೊಂದಿತ ಮಹಿಮ 12 ಮಹಿಮನಹುದು ಮುನಿಜನ ಮಂದಾರ ಧ್ಯಾಯಿಸುವರ ನಿಜ ಸಾಕ್ಷಾತಾರ 13 ಸಾಕ್ಷಾತಾರ ಶ್ರೀಗುರು ಜಗದೀಶ ಮೋಕ್ಷಾಧಿಕರಿಗಳಾತ್ಮ ಉಲ್ಹಾಸ 14 ಉಲ್ಹಾಸವೆ ನಿಜ ವಸ್ತುವೆ ತಾನು ಕಲ್ಪದ್ರುಮ ನಿಜ ಕಾಮಧೇನು 15 ಕಾಮಧೇನುವಾಗಿ ರಕ್ಷಿಸುವ ಬ್ರಹ್ಮನಿಷ್ಠರ ಹೃದಯದಲಿ ಭಾಸಿಸುವ 16 ಭಾಸುವ ಭಾಸ್ಕರಕೋಟಿ ಪ್ರಕಾಶ ಋಷಿ ಮುನಿಗಳ ನಿಜಮಾನಸ ಹಂಸ 17 ಹಂಸನಾಗಿ ವಿಶ್ವಂಭರಿತ ಸೂಸುವ ಸರ್ವಾಂತ್ರಲಿ ಅನಂತ 18 ಅನಂತ ಕೋಟಿ ಬ್ರಹ್ಮಾಂಡನಾಯಕ ಅನುಭವಿಗಳಿಗೆ ದೋರುವ ಕೌತುಕ 19 ಕೌತುಕದೋರಿದ ಕರುಣದಲ್ಯನಗೆ ಜೀವಪಾವನಗೈಸಿದ ಜಗದೊಳಗೆ 20 ಜಗದೊಳು ಸ್ತುತಿಸುವೆನು ಅನುದಿನ ಶ್ರೀಗುರು ದತ್ತವಧೂತ ಪೂರ್ಣ 21 ಪೂರ್ಣ ಸ್ಮರಿಸುವೆನು ಮನದೊಳು ನೋಡಿ ಪುಣ್ಯ ಪ್ರಭೆಯ ನಿಜ‌ಘನ ಒಡಗೂಡಿ22 ಒಡಗೂಡಿದ ನಿಜಾನಂದದ ಗತಿಯು ಕ್ಷಿತಿಯೊಳು ಕೊಂಡಾಡಿದ ಮಹಿಪತಿಯು 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಧಿವಾಮನ ವಿಠಲ ಉದ್ಧರಿಸೊ ಇವನ ಪ ಅಧಿ ಭೂತ ಅಧ್ಯಾತ್ಮ ಅಧಿದೈವಗತ ದೇವವಿಧಿ ಜನಕ ವಿಶ್ವಾತ್ಮ ಮಧು ಮಥನ ಹರಿಯೆ ಅ.ಪ. ವಿದ್ಯಾಯುಗಳನಿತ್ತು ಮಧ್ವಮತ ದೀಕ್ಷೆಯಲಿಶ್ರದ್ಧೆ ಬುದ್ಧಿಯ ನೀಯೊ ಮಧ್ವಾಂತರಾತ್ಮಾ |ಕೃದ್ಧಖಳರ್ಹಾವಳಿಯ ಒದ್ದು ಪೋಷಿಸುತಿಪನಶುದ್ಧಗೈವುದು ಮನವ ಸಿದ್ಧಜನ ವಂದ್ಯಾ 1 ತಾರತಮ್ಯ ಜ್ಞಾನ ಮೂರೆರಡು ಭೇದಗಳವಾರ ವಾರಕೆ ತಿಳಿಸಿ ಪೊರೆಯಬೇಕೋ |ಸಾರತಮ ನಿನ್ಹೊರತು ಆರು ಕಾಯುವರಯ್ಯಪೋರಗಿಹ ದುರಿತಾಳಿ ಪಾರುಮಾಡೈದೇವ 2 ಕಾರಣಿಕ ಕರುಣಾಬ್ಧಿ ತಾರೇಶ ಶ್ರೀ ಹರಿಯೆನೀರ ಜಾಸನವಂದ್ಯ ನೀರಜಾಕ್ಷಾ |ತಾರಕನು ಕುಭವ ಕೂಪಾರ ದಾಟಿಸಲುಧೀರ ಗುರು ಗೋವಿಂದ ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ ನಯದಿ ಬೇಡುವೆ ಭಕುತಜನ ಪ್ರೇಮಿ ಮಮ ಸರ್ವಸ್ವಾಮಿ ಪ ಸವಿನಯದಿ ಪ್ರಾರ್ಥಿಸುತ ಬೇಡುವೆ ಸುಮನರಸರ ಪ್ರಿಯ ಚಿತ್ಸುಖಪ್ರದ ಅಮಿತ ವಿಕ್ರಮ ಅಪ್ರಮೇಯನೆ ರಮೆಯರಮಣನೆ ರಕ್ಷಿಸೆನ್ನನು ಅ.ಪ ತೀರ್ಥ ಕ್ಷೇತ್ರಗಳನು ಚರಿಸುತಲೆ ಶ್ರೀ ಹರಿಯಗುಣ ಸ- ತ್ಪಾತ್ರರಿಂದನವರತ ತಿಳಿಯುತಲೆ ಶ್ರೋತ್ರಿಯನ ಸಂಗದೊಳು ನಲಿಯುತ್ತಾ ಮನನಲಿದು ನಿನ್ನಯ ಕೀರ್ತನೆಗಳನುದಿÀನದಿ ಕೀರ್ತಿಸುತ ಪಾರ್ಥಸಾರಥೆ ನಿನ್ನ ಪೊಗಳುತ ರಾತ್ರಿ ಹಗಲೆಡಬಿಡದೆ ಸ್ತುತಿಪರ ಗಾತ್ರಮರೆಯುತಲವರ ಸೇವಿಪ ಸಾರ್ಥಕದ ಸೇವೆಯನೆ ನೀಡೈ 1 ಗೋಕುಲಾಪತಿ ಹರಿಯೆ ಗೋವಿಂದ ನೀ ಕಡಿಯೋ ಬಂಧ ನೂಕಿ ಉದ್ಧರಿಸೆನ್ನ ಭವದಿಂದ ಕಾಕುಮತಿಗಳ ಬಿಡಿಸು ದಯದಿಂದ ನೀ ಪೊರೆಯದಿರಲು ಯಾತಕೀ ನರದೇಹ ಮುಕುಂದ ಮಾತುಮಾತಿಗೆ ನಿನ್ನ ಸ್ಮರಿಸದ ಮಾತುಗಳ ಫಲವೇನು ಕೇಶವ ಮದನ ಜನಕ ಮಾಧವ ಮುರಮರ್ದನ ಹರೇ 2 ಕರುಣಿಗಳೊಳು ದೇವನಿನಗೆಣೆಯೆ ದಯ ಮಾಡು ಹರಿಯೆ ಕರಿಯ ಪೊರೆದವನಲ್ಲೆ ನರಹರಿಯೆ ಕರೆಕರೆಯ ಸಂಸಾರ ಇದು ಖರೆಯ ಇದರೊಳಗೆ ಬಳಲಿದೆ ಕರೆದು ರಕ್ಷಿಪುದೆಂದು ಮೊರೆ ಇಡುವೆ ಕಮಲ ಮುಖಿ ಶ್ರೀ ಭೂಮಿ ಸಹಿತದಿ ಕಮಲನಾಭ ವಿಠ್ಠಲನೆ ಭಕುತರÀ ಮಮತೆಯಲಿ ಕೈ ಪಿಡಿದು ಪೊರೆಯುವ ಮನ್ಮಥನ ಪಿತ ಮನ್ನಿಸುತ ಪೊರೆ 3
--------------
ನಿಡಗುರುಕಿ ಜೀವೂಬಾಯಿ
ದಯಮಾಡಿ ಸಲಹಯ್ಯ ಭಯನಿವಾರಣನೆಹಯವದನ ನಿನ್ನ ಚರಣ ನಂಬಿದೆನೊ ಜೀಯ ಪ. ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗÀಳನುಎಣಿಸಲಳವಲ್ಲ ಅಷ್ಟಿಷ್ಟುಯೆಂದುಫಣಿಶಾಯಿ ನೀನೆನ್ನ ಅವಗುಣಗಳೆಣಿಸದೆನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ 1 ಕಂಡ ಕಂಡ ಕಡೆಗೆ ಪೋಪ ಚಂಚಲ ಮನವುಪಿಂಡ ತಿಂಬಲ್ಲಿ ಬಹು ನಿಷ್ಠ ತಾನುಭಂಡಾಟದವನೆಂದು ಬಯಲಿಗೆ ತಾರಣಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ 2 ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯವಾತಜನ ಪರಿಪಾಲ ಶ್ರೀರಂಗವಿಠಲ 3
--------------
ಶ್ರೀಪಾದರಾಜರು