ಒಟ್ಟು 40875 ಕಡೆಗಳಲ್ಲಿ , 138 ದಾಸರು , 10069 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಪಾವನ್ನನಾಮ ಭಳಿರೆ ಸಂಗರ ಭೀಮ ಸರಸಗುಣಾಭಿರಾಮ ತರಣಿವಂಶ ಲಲಾಮ ತಾರಾನಂದನ ಪ್ರೇಮ ಪರಿಪೂರ್ಣಧಾಮ ಪಟ್ಟಾಭಿರಾಮ ಪ. ಚಿಕ್ಕಪ್ರಾಯದಲಿ ಬಲುರಕ್ಕಸಿಯನು ಸೀಳಿ ತಾಕಲದೆ ಕಾಲ್ಪೆಣ್ಗೈದು ರಾಜಮೌಳಿಯ ಬಿಲ್ಲ ಗಕ್ಕನೆ ಖಂಡ್ರಿಸಿ ಕೈವಿಡಿದು ಸೊಬಗನುಕ್ಕುವ ಜಾನಕಿಯ ಧಿಕ್ಕರಿಸುತ ಪೋಗಿ ದಿತಿಯ ಕೈಕೆಯ ಮಾತು ದಕ್ಕಲೆನುತ ಪೋಗಿ ದಂಡಕಾರಣ್ಯವ ಭೂರಿ ದಾನವಹಿಂಡ ಚಕ್ಕಂದದಲಿ ಕೊಂದ ಜಾಣ ನೀನಹುದೊ 1 ಭುವನೇಶ ಶಬರಿಯ ಪೂಜೆಯ ಕೈಕೊಂಡು ಪವನಾತ್ಮಜನ ಕಂಡು ಬರಹೇಳಿ ರವಿಯ ಸೂನನ ಕಾಣಿಸಿಕೊಂಡು ತವಕದಿಂ ವಾಲಿಯ ಹವಣರಿಯದಸುವ ಕೊಂದು ಪ್ಲವಗ ಬಲವನು ಕೂಡಿ ಬಲು ಸಮುದ್ರವ ಬಂಧ- ನವ ಮಾಡಿ ಕುಂಭಕರ್ಣ ರಾವಣನ ಸಂಹಾರ ಮಾಡಿ ಲಂಕಾರಾ ಜ್ಯ ವಿಭೀಷಣಗಿತ್ತು ಅವನಿಜೆಸಹ ಪುಷ್ಪಕವನೇರಿ ನಡೆದೆ 2 ಸುರರೆಲ್ಲ ಪೂಮಳೆಗರೆಯೆ ಸುಗ್ರೀವಾದಿ ವರರಾವಣರ ಸೇನೆ ಬೈಲಾಗಿ ನೀ ನಡೆಯೆ ಶೃಂ- ಗಾರವಾದ ಸಾಕೇತಪುರಕೆ ಭರದಿ ಬಂದು ನಿರುತ ಸೌಖ್ಯದಲಿ ನಿಂದು ಸಿರನೆಲೆವಿನಯದಿ ಚಿನ್ಮಯನಾ ಗಿರಿಯ ಶುಭಕರ್ಣವೊ(?) ಸೀತಾಲಕ್ಷ್ಮಣ ಭರತಶತ್ರುಘ್ನಯಿರೆ ಹನುಮನ ಸೇವೆ ದಿವ್ಯಸಿಂಹಾಸನವೇರಿ ಧರೆ ಆಳಿದ ಪರಿಣಾಮದಿ ಹಯವದನ ರಾಮ3
--------------
ವಾದಿರಾಜ
ಪರಮಪುರುಷ ನಿನಗೆ ಪ ಅನಾದ್ಯನಂತ ಕಾರಣ ಸರ್ವತ್ರ ತುಂಬಿರುವಗೆ ಅ.ಪ ಬಲಿಯ ದಾನವ ಬೇಡುವ ಕಾಲದಿ ನೆಲನಯೀರಡಿಯ ಗೈದು ತಳತಳಿಸುವ ದಿವ್ಯ ಪದದಿ ಚೆಲುವ ಗಂಗೆಯ ಪಡೆದವನಿಗೆ 1 ಅನೇಕ ಪಾದಗಳೆಂದು ನಿನ್ನ ಅನುತಿಹವು ಶ್ರುತಿ ತತಿಗಳು ಅವಧಿಕಾರಿಯಾದ ಮೂಢ ನಾನು ಅಲ್ಪಮತಿಯು ಸ್ವಾಮಿಯೇ 2 ಮೌನಿ ಸತಿಯಳ ಶಾಪ ಬಿಡಿಸಿದ ಪಾದಕ್ಕೆ ವನಜದಳವ ಪೋಲ್ವ ಚೆಲುವ ಪಾದಕ್ಕೆ ದನುಜರಿಪು ಗುರುರಾಮ ವಿಠಲ ಪಾದಕ್ಕೆ 3
--------------
ಗುರುರಾಮವಿಠಲ
ಪರಮಪುರುಷ ಪಾಲಿಪುದೈ ಸರಸಿಜಾಕ್ಷ ಸರ್ವರಕ್ಷ ಪ ಮಗುವಾದ ಧ್ರುವನು ಅಗಣಿತಗುಣ ನಿನ್ನನು ಹಗಲಿರುಳೂ ಮೃದುಪದವಂ ಬಿಗಿದಪ್ಪುತ ಧ್ಯಾನಿಸೆ 1 ಯೋಗಿಜನಾನಂದಕನೆ ಬೇಗದಿ ಮೈದೋರುತಲಿ ಭಾಗವತಪ್ರಿಯಪದವಂ ರಾಗದಿತ್ತೆ ಜಾಜೀಶ 2
--------------
ಶಾಮಶರ್ಮರು
ಪರಮಪುರುಷ ಯದುಕುಲೇಶ ಶರಧಿ ಮಂದಿರವಾಸ ಶ್ರೀಶ ಪ ಪರಮ ಹರುಷದಿಂದಲೀಗ ಉರುಟನೆಯ ಮಾಡುವೆನು ಅ.ಪ. ನೀಲಮೇಘ ವರ್ಣ ನಿನ್ನ ಬಾಲಶಶಿಯ ಪೋಲುವಂಥ ಫಾಲವನ್ನು ತೋರುಬೇಗ ಕುಂಕುಮವ ಹಚ್ಚುವೆನು 1 ವಾರಿಜಾಕ್ಷ ಮಾರಜನಕ ವಾರಿನಿಧಿ ಗಂಭೀರ ಸುಗುಣ ತೋರು ನಿನ್ನ ಚರಣಗಳನು ಅರಿಸಿನವ ಹಚ್ಚುವೆನು 2 ಸುಂದರಾಂಗ ಮಂದಹಾಸ ಕುಂದರನೆ ಸಿಂಧುಶಯನ ಕಂಧರವ ತೋರು ಬೇಗ ಗಂಧವನು ಹಚ್ಚುವೆನು 3 ಕುಸುಮ ನೇತ್ರ ಕುಸುಮಪೀಠ ಸ್ತೋತ್ರ ಪಾದ ಕುಸುಮ ಮಾಲೆ ಹಾಕುವೆನು 4 ಚಾರು ಚರಿತ ಕರಿಗಿರೀಶ ಆರತಿಯ ಬೆಳಗುವೆನು ತೋರು ತವ ಮುಖಾರವಿಂದ 5
--------------
ವರಾವಾಣಿರಾಮರಾಯದಾಸರು
ಪರಮಪುರುಷ ಶ್ರೀ ರಾಮನ ಪದಯುಗ ಸಿರಿರಮಣ ನಿಜದಾಸನೆಂದೆನಿಸಿದ ವರ ಕದರುಂಡಲಿ ಹನುಮಂತ ಪ. ಒಂದೇ ಮನದಲಿ ತಂದೆ ನಿನ್ನಡಿಗಳ ಪೊಂದಿದೆ ಸಲಹೈ ಹನುಮಂತ ಕುಂದುಗಳೆಣಿಸದೆ ಕಂದನ ತೆರದಲಿ ಎಂದೆಂದಿಗು ಪೊರೆ ಹನುಮಂತ 1 ವಾರಿಧಿ ದಾಟುತ ಸೇರುತ ಅರಿಪುರ ಧಾರುಣಿಜೆಯ ಕಂಡೆ ಹನುಮಂತ ನಾರಿಚೋರನಪುರ ಸೇರಿಸಿ ಅನಲಗೆ ಸೇರಿದೆ ರಾಮನ ಹನುಮಂತ 2 ಕೃಷ್ಣನ ಸೇವಿಸಿ ದುಷ್ಟರ ಕೊಲ್ಲುತ ಮೆಟ್ಟಿದೆ ಖಳರನು ಹನುಮಂತ ದಿಟ್ಟತನದಿ ಸಾಮ್ರಾಜ್ಯವಾಳಿ ಜಗ- ಜಟ್ಟಿ ಎಂದೆನಿಸಿದೆ ಹನುಮಂತ 3 ಮಿತಿಯಿಲ್ಲದ ಅತಿಖತಿ ಮತಗಳನು ಹತಗೈಸುತ ನೀ ಹನುಮಂತ ಪ್ರತಿ ಗ್ರಂಥಗಳನ್ನು ಸ್ಥಾಪಿಸಿ ಸುರರಿಗೆ ಅತಿ ಹಿತ ತೋರಿದೆ ಹನುಮಂತ 4 ಇಷ್ಟ ಫಲಪ್ರದ ತುಷ್ಟಿಬಡಿಸೊ ನೀ ಕೊಟ್ಟೀಗಭಯವ ಹನುಮಂತ ದಿಟ್ಟ ನಿನ್ನಡಿಗಳ ಭಜಿಸುವೆ ಗೋಪಾಲ ಕೃಷ್ಣವಿಠ್ಠಲ ಪ್ರಿಯ ಹನುಮಂತ5
--------------
ಅಂಬಾಬಾಯಿ
ಪರಮಯೋಗಿಯ ನೋಡಿರೊ ನೀವೆಲ್ಲರು | ಪರಮಯೋಗಿಯ ನೋಡಿರೊ || ಪರಮಯೋಗಿಯ ನೋಡಿ ಪ್ರೀತಿವಂತರಾಗಿ | ನಿರಯವ ಕಳೆದು ಆನಂದ ಬೇಡುವರೆಲ್ಲ ಪ ವಾನರ ವೇಷವಾಗಿ ಪರ್ವತ ಸೇರಿದಾ | ಭಾನುನಂದನ ಮನೋಬಯಕಿಯ ಸಲ್ಲಿಸಿ || ಏನೆಂಬೆ ಬಲು ಒಂದು ರೂಪವಾಗಿ ತೋರಿ | ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ 1 ವಿಷವನುಂಡು ಮೂರು ಲೋಕದೊಳಗೆ ಮೆರೆದು | ಅಸುರ ಬಕನ ಸೀಳಿ ಧರಿಗೆ ಬಿಸುಟು | ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು | ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ2 ಯತಿಯಾಗಿ ಜನಿಸಿ ಸುವಾಕ್ಯವ ಬಯಸಿ | ಮತಿಹೀನ ಜನರ ಶಾಸ್ತ್ರವ ಖಂಡಿಸಿ || ತುತಿಸಿದ ಭಕ್ತರ್ಗೆ ಗತಿಯ ಕೊಡುವ ಪ್ರಾಣ- ನಿತ್ಯ ಪರಮ 3
--------------
ವಿಜಯದಾಸ
ಪರಮಹಂಸ ಪರಿವ್ರಾಜಕ ಗುರುವರ್ಯ | ಶಿರಬಾಗುವೆ ಆರ್ಯ ಪ ಚರಣಕಮಲ ನೆರೆನಂಬಿಹೆ ನಾನಿನ್ನು | ಭಜಕರ ಸುರಧೇನು ಅ.ಪ ಪುರುಷೋತ್ತಮ ಯತಿಕರ ಸರಸಿಜ ಜಾತ | ಜಗದೊಳಗೆ ಪುನೀತ ಅರಿಷಡ್ವರ್ಗವ ದೂರಗೈದ ಧೀರ | ಶರಣರಿಗಾಧಾರ ತರಣಿ ಸದೃಶ ಸುವಿರಾಜಿತ ಶುಭಗಾತ್ರ | ಪಾವನ ಚರಿತ್ರ ನಿರುತ ನಿಮ್ಮ ಸಂಸ್ಮರಿಸುವ ನರಧನ್ಯ | ಭುವಿಯೊಳು ಸನ್ಮಾನ್ಯ 1 ವ್ಯಾಸರಾಯ ಕರಪೂಜಿತ ಶ್ರೀ ಚರಣ | ನಿಗಮಾಗಮ ನಿಪುಣ ಶ್ರೀ ಸಮೀರಮತ ಸ್ಥಾಪಕ ಧುರೀಣ | ಸುಜ್ಞಾನಿವರೇಣ್ಯ ಭೂಸಿತ ಸದ್ಗುಣ ಸುಮಲಾಭರಣ | ಶರಣ ಸಂಜೀವನ ಭಾಸುರ ಸೂರ್ಯಾಂಶಜ ಯತಿಕುಲರತ್ನ | ಭೂಸುರ ಸನ್ಮಾನ್ಯ 2 ಯೋಗಿವರ್ಯ ಕರುಣಾಕರ ಗುಣನಿಲಯ | ಶುಭನಾಮಧೇಯ ನಾಗಶಯನ ಶ್ರೀ ಕರಿಗಿರಿನಿಲಯನ್ನ | ಪೂಜಿಪ ಗುರುರನ್ನ ಶುಭ ಚರಿತ | ದೂರೀಕೃತದುರಿತ ಬಾಗಿ ದೈನ್ಯದಲಿ ಬೇಡುವೆ ತವಚರಣ | ಭಕ್ತಿಯನುದಿನ 3
--------------
ವರಾವಾಣಿರಾಮರಾಯದಾಸರು
ಪರಮಾತ್ಮ ದಿವ್ಯಚರಣಾ ಭಜಿಸುವೆವು ಜ್ಞಾನ ಪೂರ್ಣ ನೀ ತೋರ್ಪುದಯ್ಯ ಕರುಣಾ ತಾಪ ಹರಣಾ ಆನಂದ ರೂಪ ತಾಣಾ ನಾರಾಯಣಾತ್ಮಪೂರ್ಣ ನಿನ್ನಿರವೇ ಜಗವಿದೆಲ್ಲ ನಿನ್ನರಿವೇ ಜೀವರೆಲ್ಲಾ ನಿನ್ನಿಂದೆ ಸುಖವಿದೆಲ್ಲಾ ನೀನೆ ಇದೆಲ್ಲಾ ದೇವಾ ನೀ ಸತ್ಯ ನಿರ್ವಿಕಾರ ನೀನಾತ್ಮರೂಪಸಾರಾ ನೀ ಪರಮ ಮೋಕ್ಷತಾಣಾ ಮರೆತಿರಲು ಜೀವ ನಿನ್ನ ದೊರೆಯುವುದೆ ಶಾಂತಿ ನಿನ್ನ ಪರಿತಾ¥ಬಿಡುತ ಮುನ್ನಾ ತಿರುಗುವನೋ ಜನ್ಮ ಜನ್ಮ ಗುರು ಶಂಕರಾರ್ಯ ನಿನ್ನ ಶರಣುಹುದೆ ಶಾಂತಿತಾಣ ನೀ ಸರ್ವರಾತ್ಮಪೂರ್ಣ
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಮಾತ್ಮನ ನೆನೆಯಲು ಬೇಕು ಪರತರಸುಖವನು ಪಡೆಯುವನಿದರಿಂ ದುರಿತಗಳೆಲ್ಲವ ನೀಗಲು ತಾ ಪ ಮೊದಲನೆ ಕಾರ್ಯವು ಜೀವರೆಲ್ಲರಿಗೆ ಇದು ಬಲು ಸುಲಭವು ಸಾಧನಗಳಲೀ ಪದುಮನಾಭನನು ನೆನೆಯದಿರುವವ ಅಧಮನು ಜಗದಿ ವ್ಯರ್ಥ ಜೀವಿಸುವ 1 ಎಲ್ಲ ವೇದಗಳು ಎಲ್ಲ ಶಾಸ್ತ್ರಗಳು ಎಲ್ಲ ಸಾಧನೆಗಳು ಆತನ ಪ್ರಾಪ್ತಿಗೆ ಬಲ್ಲವರಿಂದಲಿ ತಿಳಿದು ವಿಚಾರಿಸಿ ನಿಲ್ಲದೆ ಸಾಧನೆ ಕೈಕೊಳ್ಳುವುದು 2 ಕೇಳುವದೈ ಪರಮಾತ್ಮನ ತತ್ವವ ತಿಳಿವುದು ತನ್ನೊಳು ತಾನೇ ನಿರುತಾ ಪೇಳಲೇನು ಧ್ಯಾನಿಸುವುದಾತನ ಮೇಳವಿಸುವದೈ ಜೀವನ್ಮುಕುತಿ 3 ನಾರಾಯಣನೇ ಪರಮಗತಿಯು ಈ ನರಜನ್ಮಕೆ ಬಂದಿರೆ ಲಾಭವಿದೇ ಅರಿತು ಇದನು ತಾ ಸಾಧನೆ ಮಾಳ್ಪುದು ಗುರುಶಂಕರನಾ ಬೋಧಸಾರವಿದು 4
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಮಾತ್ಮನೆ ನೀ ಸರಿ ಎಂದು ಕರಗದ ತಮದಲ್ಲಿ ಸೇರುವದೆ ಪ ಜೀವ ಪರಮಾತ್ಮಗೆ ಭೇದವ ಆವಾವ ಕಾಲಕ್ಕೆಯಿಲ್ಲವೆಂದು ದೇವನ ಬಳಿಗೆ ನೀ ದೂರಾಗಿ ಈ ವಸುಧೆಯೊಳು ಬದುಕುವರೆ 1 ಭೇದ ಜೀವಕೆ ಜೀವ ಎಂದಿ ಗಾದರು ಇಲ್ಲವೆಂದು ನುಡಿದು ಈ ದುರಾಚಾರದಲ್ಲಿ ನಡೆದು ಮಾದಿಗನಂತೀಗ ಮಾರ್ಮಲಿದು2 ಜಡ ಪರಮಾತ್ಮ ಜಡ ಜಡಕೆ ಜಡ ಜೀವಕೆ ಅಭೇದವೆಂದು ಕಡುಗರ್ವದಿಂದಲಿ ಉಚ್ಚರಿಸಿ ಮಡಿದು ನರಕಕ್ಕೆ ಉರುಳುವರೆ 3 ಅರಸಿನ ಬಳಿಗೆ ತೋಟಿಗ ಬಂದು ಅರಸೆ ನೀನೆ ನಾನೆಂದಡೆ ಉರವಣಿಸಿ ಕೊಲ್ಲಿಸಿ ಅವನ ಶೆರಿಯ ಹಾಕದೆ ಮನ್ನಿಸುವನೆ 4 ದಾಸನ ದಾಸನು ಎಂದು ಏಸು ಜನ್ಮಕೆ ಅಹುದೆಂದು ದ್ವೇಷವು ತೊರೆದು ನೆನಿಸಿದರೆ ಮೀಸಲಾಗಿಡುವ ವಿಜಯವಿಠ್ಠಲಾ 5
--------------
ವಿಜಯದಾಸ
ಪರಮಾತ್ಮನೆ ಪರಿಪೂರ್ಣನೆ ವರವೇಂಕಟರಮಣನೆ ರಾಮ ಪ ಪೊರೆಯೋ ಸದಾ ಭಕ್ತ ಸುಪ್ರೇಮ ಅ.ಪ ನಿತ್ಯತೃಪ್ತ ನಿರ್ಮಲಾತ್ಮ ಸತ್ಯಮೂರ್ತಿ ಷಡ್ಗುಣಭರಿತ ಭೃತ್ಯವರ್ಗ ಸಂರಕ್ಷಣ ಶಕ್ತ ಪ್ರತ್ಯಕ್ಷ ಪಾವನ ಚರಿತ 1 ನಿನ್ನ ಮಹಿಮೆಯನ್ನು ಪೊಗಳೆ ಪನ್ನಗೇಶನಿಂದಲಸದಳ ಇನ್ನು ನಾನು ಪೊಗಳಲಪ್ಪನೆ ಸನ್ನುತಾಂಗ ಸದಯರಂಗ2 ಮುನಿಗಳಿಂದ ಪೂಜೆಗೊಂಬ ಘನಗುಣಾತ್ಮ ನಿನ್ನ ಯಾಜಿಪೆ ಅಣುಗನಿಂದಲಾಗಲಹುದೆ ತನುಮನ ಪೊರೆ ಆನಂದ3 ಉಣ್ಣಲಿಡಲಿದೆಲ್ಲ ನಿನ್ನದೊ ಇನ್ನದೇನ ತಂದು ಕೊಡಲೊ ಮನ್ನಿಸುವುದೊ ಹೆಜ್ಜಾಜಿಯ ಚನ್ನಕೇಶವ 4
--------------
ಶಾಮಶರ್ಮರು
ಪರಮಾನಂದ ಕರುಣಾಸಿಂಧು ವರವ ನೀಡಲು ಭಕುತಬಂಧು ಪ ಪರಮಚರಿತ ದುರಿತರಹಿತ ಪೊರೆಯೊ ಪ್ರಥಮಜನರ ಪ್ರೀತ ಸ್ಮರಿಪೆ ನಿರುತ ಸುರಗಣನುತ ಮೊರೆಯೊ ಕೇಳೆಲೊ ವರಪ್ರದಾತ 1 ಉರಗಭೂಷ ಭಜಕಪೋಷ ದುರಿತನಾಶ ಸುಜನವಾಸ ವರಮಹೇಶ ತ್ರಿ ಜಗದೀಶ ಪೊರೆ ಪ್ರಕಾಶ ತ್ರಿಪುರನಾಶ 2 ನಿಗಮವಿನುತ ಭಗವದ್ಭಕ್ತ ಸುಗುಣವಿಖ್ಯಾತ ಜಗನ್ನಾಥ ಜಗಜೀವಿತ ಶ್ರೀರಾಮ ಪ್ರೀತ ಈಗೆನ್ನಂತರಂಗ ಪಾಲಿಸೊ 3
--------------
ರಾಮದಾಸರು
ಪರಮಾನಂದದೊಳಿರುವ ಪರಿಯನರಿ ಗರುವ ಬೇಡ ಹೇ ಮನಸಾ ಪ ಸಿರಿವರ ನಾರಾಯಣ ನಾಮಾಮೃತ ನರಘಳಿಗೆಯು ಮರೆಯದೆ ನೆನೆ ಮನಸಾಅ.ಪ ಇಂದಿರೆಯರಸನ ಸುಂದರ ಚರಣಗ ಳಂದದ ಶ್ರೀ ತುಳಸಿಯ ದಳದಿ ಚಂದದೊಳರ್ಚಿಸಿ ಕುಂದದ ಭಕುತಿಯೊಳಾ ನಂದದೊಳಿರು ಹೇ ಮನಸಾ 1 ಸಿರಿ ರಾಮನ ಮಂಗಳ ಮೂರ್ತಿಯ ಘನ ಕೊರಳೊಳು ಹಾರಗಳರ್ಪಿಸುತ ಪರಿಪರಿ ಪರಿಮಳ ಪುಷ್ಪಗಳಿಂದಲಿ ಕರುಣಾಕರನನರ್ಚಿಸು ಮನಸಾ2 ಸರ್ವಾಂತರ್ಗತ ಜಗದುದರನ ನೀ ನಿರ್ಮಲ ಪೀಠದಿ ಕುಳ್ಳಿರಿಸಿ ಸರ್ವಷಡ್ರಸೋಪೇತ ಸುಭೋಜನ ಸರ್ವಾತ್ಮನಿಗರ್ಪಿಸು ಮನಸಾ 3 ಸುಫಲ ಕ್ಷೀರ ತಾಂಬೂಲಗಳರ್ಪಿಸಿ ಸಫಲಗೊಳಿಸು ಜನ್ಮವ ಮನಸಾ ಅಪಾರಮಹಿಮನ ಗುಣಗಳ ಕೀರ್ತಿಸಿ ಕೃಪಾನಿಧಿಯ ನಮಿಸೆಲೊ ಮನಸಾ 4 ಅಗಣಿತ ಮಹಿಮನಿಗಾರ್ತಿಗಳರ್ಪಿಸಿ ಮಿಗೆ ಭಕ್ತಿಲಿ ನಮಿಸೆಲೊ ಮನಸಾ ಸುಗುಣಮಣಿಯು ರಘುರಾಮವಿಠಲ ನಿ ನ್ನಗಲದೆ ಹೃದಯದಲಿಹ ಮನಸಾ5
--------------
ರಘುರಾಮವಿಠಲದಾಸರು
ಪರಮಾನುಗ್ರಹ ಮಾಡು -ಈ ತರಳನ ದಯದಿಂ ನೋಡು ಪ ನರಹರಿ ನೀನಲ್ಲವೆ ಕರುಣಾಳು ಅ.ಪ ಅನ್ನ ಸೇರಲಿಲ್ಲವಂತೆ -ಮಲಗಿ ನಿನ್ನಿಂದಲಿ ಹೀಗಿಹನಂತೆ ಘನ್ನಮಹಿಮ ನಿನ್ನವರಿಗೆಲ್ಲ -ಈ ಬನ್ನ ನ್ಯಾಯವೆ ಪ್ರಸನ್ನ ನೃಸಿಂಹ 1 ತುಡುಗಾಟಗಳಾಡಿ ಬಳಲಿ -ಈ ಹುಡುಗ ಮನೆ ಮನೆಯ ತೊಳಲಿ ಕಡುಭೀತಿಯ ಹೊಂದಿರುವ ನಾವು ನಿ- ನ್ನೊಡವೆಯಲ್ಲವೆ ಒಡೆಯ ನರಹರಿಯೆ 2 ಔಷಧ ಪಥ್ಯಗಳೇಕೆ -ನಿ ರ್ದೋಷ ನೀನೊಳಗಿರಲಿಕ್ಕೆ ಶೇಷಶಯನ ಗುರುರಾಮವಿಠಲ ಪÉೂೀಷಿಸುವನು ನೀನೆ ನೀನೆ ನಿಜ3
--------------
ಗುರುರಾಮವಿಠಲ
ಪರಮೇಶ್ವರಿ ಪಾರ್ವತಿಸತಿ ವರದೆ ಶ್ರೀವನದುರ್ಗಾ ಪ. ತರುಣಾರುಣಶತಕೋಟಿ ಕರುಣಾನನೆ ಮಾಂ ಪಾಹಿ ಅ.ಪ. ಜಗದ್ಭರಿತೆ ಜನಾರ್ದನಿ ಜಗದೇಕ ಶರಣ್ಯೆ ನಿಗಮಾಗಮಶಿರೋರತುನೆ ಮಿಗೆ ಕೈಯುಗಮಂ ಮುಗಿವೆಯಗಜೆ ಶ್ರೀಜಗದಂಬಿಕೆ 1 ಸದಾನಂದೆ ಸರೋಜಾಕ್ಷಿ ಸದಾವಳಿಸನ್ನುತೆ ತ್ರಿದಶಾರ್ಚಿತೆ ತ್ರಿಗುಣಾತ್ಮಕಿ ಸದಯೆ ಹೃದಯೆ ಮುದದಿಂ ಪದನಂಬಿದೆ ಪದುಮಾಲಯೆ2 ವಿರಾಜಿಸುವ ವಿಶ್ವೋತ್ತಮ ವರಚಿತ್ರಪುರೇಶ್ವರಿ ಹರಿಲಕ್ಷ್ಮೀನಾರಾಯಣಿ ಕರುಣಾಭರಣೆ ಶರಣೋದ್ಧರಣೆ ಶ್ರೀಚರಣಾಂಬುಜೆ3
--------------
ತುಪಾಕಿ ವೆಂಕಟರಮಣಾಚಾರ್ಯ