ಒಟ್ಟು 1018 ಕಡೆಗಳಲ್ಲಿ , 100 ದಾಸರು , 812 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ ಚಿಂತಿಸು ಹರಿಯ-ಮುರಾರಿಯ ಪ ಮಾಯಾ ಯುಗಳನು-ಮನವೇ ಅ.ಪ. ಸ್ಮರವಿರಿಂಚಿನಯ ಪಿತನ-ಗೌರೀವರ-ಪುರಹೂತರಿಗೆ ತಾತನೆ ರತಿದೇವಿ-ಸರಸತಿಯರ ಮಾವನ-ಶ್ರೀರಮಣನ ಸರಸಿಜಾಸನಿಗೆ ಕರುಣೀಸುವೇದವ ಗಿರಿಯ ನೆಗೆಹಿ ವಿಶ್ವಂಭರೆಯ ದಾಡೆಯೊಳೆತ್ತಿ ತರಳಗಭಯವನಿತ್ತು ಮೂರಡಿ ಧರೆಯ ಬೇಡುತ ದುರುಳ ರಾವಣಹರಣ ನೀಲಾಂ- ಬರನ ಯದುವರ ತುರಗವಾಹನ1 ನಿಗಮಾಂತ ಗೋಚರನ-ನಿತ್ಯಾನಂದ-ಸುಗುಣಗಣಾರ್ಣವನ ಸಜ್ಜರಿಗೆ-ಸುಗತಿಯಪಾಲಿಪನ ಸುರಪಾಲನ ನಿಗಮಚೋರನ ಕೊಂದು ನಗವ ಬೆನ್ನೊಳು ಪೊತ್ತು ಜಗವನುದ್ಧರಿಸಿ ನರಮೃಗದರೂಪವ ತಾಳಿ ಜಗವ ನಳೆದನ ಭೃಗುಜ ಶಾಖಾ ಮೃಗವ ವಧಿಸಿ ಹಲ ನೇಗಿಲನು ಪಿಡಿದುಗುರು ಕೊನೆಯಿಂ ನಗುವನೆ ನೆಗಹಿದ-ನಿಗಮನುತ ಕಲಿಯುಗದ ವೈರಿಯ 2 ಪೂಜೆಯಕೊಂಬನ ಕುಂಭಜ ಶಾಪ-ಕಲುಷವ ಕಳೆದನ-ವ್ಯಾಘ್ರಾಚಲ ದಲಿನಿಂತು ಭಕ್ತರ ಸಲಹುವ ಕಾರುಣ್ಯನಿಲಯ ಸಜ್ಜನ ಮನೋನಿಲಯ ಶ್ರೀನಿವಾಸನ ಜಲಜಬಾಂಧವ ಕುಲಪವಿತ್ರನ ಜಲಜನೇತ್ರನ ಜಲಜ ಗಾತ್ರನ ವಿಲಸಿತಾಂಬುಜ ಮಾಲಭಕ್ತರಿಗೊಲಿವ ಶ್ರೀವರದಾರ್ಯ ವಿಠಲನ 3
--------------
ಸರಗೂರು ವೆಂಕಟವರದಾರ್ಯರು
ಮನಾ ಮನಾ ಘನಾ ಘನಾ ಎನುತಿದೆ ಲೋಕರಿಯದೆ ಖೂನ ಧ್ರುವ ಮನದಾವದು ಎಂದರಿಯದೆ ಖೂನ ಘನದಾವವೆಂದರಿಯದು ಧ್ಯಾನ ಧ್ಯಾನ ಮೋನ ಯಾತಕದೇನ ಅನುಭವರಿಯದೆ ಮರುಳಜನ 1 ಮೂಲದಲಿಡದೆ ಠಾವಿಲಿ ಮನ ಜ್ಯಾಲವ್ಯಾತಕೆ ಬರೇ ಮಾತಿನ ಕೀಲ ತಿಳಿಯದೆ ಸದ್ಗುರು ಜ್ಞಾನ ನೆಲಿಯುಗೊಂಬುದೆ ನಿಜಸಾಧನ 2 ಮನದಲಿ ಮನಸಿನ ತಿಳಿವದು ಬಿಟ್ಟು ಜನವನ ತಿರುಗುದೆ ಕೆಟ್ಟು ಮನೋನ್ಮನದೊಳಗಿದೆ ಘನಗುಟ್ಟುದೀನ ಮಹಿಪತಿ ಗುರು ದಯಲುಂಟು3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನುವಂಶ ಜಲಧಿಜಾತೆ ಸೀತೆ ಪೊರೆಯೆ ಜಾನಕಿ ಘನ ಪುಣ್ಯವಿನಯೆ ದಿವ್ಯರೂಪೆ ಜನನಿ ಭಾಮಿನಿ ಪ ರಾಮಚಂದ್ರ ಭಾಸಮಾನ ಹೃದಯ ಕುವಲಯೆ ಕಾಮದಗ್ಧ ದನುಜನಯನ ಕಾಲರೂಪಿಣಿ 1 ಲಕ್ಷ್ಮಣಾದಿ ಭಕ್ತಪಾಲೆ ನಿತ್ಯರೂಪಿಣಿ ಚಿತ್ತದಲ್ಲಿ ನೆಲಸು ದೇವಿ ತತ್ವಭೂಷಿಣೆ 2 ಆದಿಶಕ್ತಿ ಭೇದರಹಿತೆ ಮೋದದಾಯಕಿ ಮಾಧವಾಂಘ್ರಿ ಯುಗಳ ಸೇವೆಯನ್ನು ಕರುಣಿಸು 3 ಭೂಮಿತನಯೆ ಭೂಮ ಮಹಿಮೆ ಕಾಮಿನೀ ರಮೆ ಸಾಮಜಾಕರೋರು ಯುಗಳೆ ರಾಮ ಸುಂದರಿ4 ಪಂಕಜಾದಿ ಕುಸುಮಲೋಲೆ ಶಂಕರೀಪ್ರಿಯೆ ಅಂಕದಲ್ಲಿ ಪೊರೆಯೆ ಮಾತೆ ಪಂಕಜಾನನೆÀ 5
--------------
ಬೇಟೆರಾಯ ದೀಕ್ಷಿತರು
ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ ನೆರೆನಂಬಿದವ ಧನ್ಯನೊ ಪ ಧರೆಯೊಳಗೆ ರಘುವರನ ಶೇವಿಸಿ ಶರಣು ಜನರನು ಪೊರೆವುದಕೆ ಭೂಸುರಗಣದಿ ರಾಜಿಸುವ ರಾಯಚೂರ ಪುರದ ಕೋಟೆಯೊಳಿರಲು ಬಂದಿಹ ಅ.ಪ ಬಹುಭರದಿವಾರಿಧಿ ಲಂಘಿಸಿ ಹರಿಭಟನೆಂದು ತಿಳಿಸಿ ತ್ವರದಿ ರಾಮನಿಗರ್ಪಿಸಿ ಧೀರನೆ ಸುರವಿನುತ ತವ ಪರಿಮಳವಿರಚಿಸಿದ ಗುರುವರರ ನೋಡಿದೆ 1 ಗೋವಿಂದನಂಘ್ರಿಯ ಭಜಿಸಿ ಮನದಿ ಭಾವಿಸಿ ನಂದಸುತನಿಗರ್ಪಿಸಿ ಪ್ರಥಮಾಂಗನೆನಿಸಿ ಸಮರ್ಥ ತವಪದ ಕೊಂದಿಸುವೆ ಮನ ಮಂದಿರದಿ ಯದುನಂದನನ ಪದದ್ವಂದ್ವ ತೋರಿಸು 2 ಪುಟ್ಟಿಯತಿರೂಪವನೆಧರಿಸಿ ಕ್ಷಿತಿಯೊಳಗಖಿಲ ದುರ್ಮತಗಳೆಂಬುವ ಮೇಘತತಿಗೆ ಮಾರುತನೆನಿಸಿ ಪ್ರತಿಪಾದ್ಯನೆಂದು ತಿಳಿಸಿ ಸುಖ ತೀರ್ಥರೆನಿಸಿ ಅತಿಹಿತದಿ ಸತ್ಪಥವ ತೋರಿದಿ ಅತುಳ ಮಹಿಮನೆನುತಿಸುವೆನು ಸತತ ಪಾಲಿಸೋ 3 ತನುಮರೆಯಲು ಧುರದಿ ಜೀವನವಿತ್ತಕಾರಣದಿ ವನಜನಾಭನು ದಯದಿ ತನ್ಮೂರ್ತಿ ಸಹಿತದಿ ತಟಿತ್ಕೋಟಿ ಸೇವಕಜನರ ಸಲಹುವಿ ಕೊಳುತಲಿ ಮೆರೆವದೇವನೆ 4 ಶಿರದಿ ಮುಕುಟ ಮಂಡಿತ ಮೂರ್ತಿ ದರುಶನವನೆ ಕೊಳ್ಳುತ ವಿಸ್ತರ ಮಂಟಪದಿರಾಜಿತ ಸುರಪೂಜಿತ ಕÀರುಣ ಶರಧಿಯೆ ಪೊರೆವದೆನ್ನನು ಶರಣು ಜನರಘ ಕರುಣವ ಪಡೆದ ಧೀರನೆ 5
--------------
ಕಾರ್ಪರ ನರಹರಿದಾಸರು
ಮರುದಂಶ ಮಧ್ವಮುನಿರನ್ನ ನಿನಗೆಸರಿಗಾಣೆ ಜಗದೊಳಗೆ ಸರ್ವರೊಳು ಪೂರ್ಣ ಪ. ಹಿಂದೆ[ರಾಮರು] ಮುಂದೆ ಬಂಟನಾಗಿ ನೀ ನಿಂದೆಚಂದ್ರದ್ರೋಣದ ಗಿರಿಯ ತಂದೆ ದನುಜರ ಕೊಂದೆ[ಎಂದೆಂದಿಗಳಿವಿಲ್ಲದ]ಬ್ರಹ್ಮ ಪದವಿಗೆ ಸಂದೆಇಂದ್ರಾದಿ ಸುರರುಗಳ ತಂದೆ ಸ್ವಾಮಿಇಂದೆಲ್ಲರಿಗೆ ನೀನು ಗುರುವೆನಿಸಿ ನಿಂದೆ 1 ಕೌರವ ಬಲವ ತರಿದೆ ಕೀಚಕನ ಕುಲವ ಮುರಿದೆಒರ್ವನೆ ಬೇಸರದೆ ಷಡ್ರಥಿಕರನು ಗೆಲಿದೆಉರ್ವಿಯೊಳು ಭುಜಬಲದಿ ಭೀಮನೆನಿಸಿ ಮೆರೆದೆ ಹರಿಯ ಕಿಂಕರರ ಪೊರೆದು ಈಗಸರ್ವವನು ತೊರೆದು ಶಾಸ್ತ್ರಾಮೃತವಗರೆದೆ 2 ದುರುಳವಾದಿಗಳೆನಿಪ ಘನತಾಮಸಕೆ ದಿನಪಸಿರಿಯರಸ ಹಯವದನಪದಕಂಜಯುಗಮಧುಪಗುರುಮಧ್ವಮುನಿಪ ನಿರ್ಲೇಪ ಶುದ್ಧಸ್ಥಾಪ ವರ-ವಿದ್ಯಾಪ್ರತಾಪ ಭಾಪುರೆಪರಮಪಾವನರೂಪ ಭಳಿರೆ ಪ್ರತಾಪ 3
--------------
ವಾದಿರಾಜ
ಮರೆತಿರಲಾರೆ ಪ್ರಿಯನ ಮಾರನಯ್ಯನ ಪ ಇರುಳು ಹಗಲು ಅನುಸರಿಸಿ ತಿರುಗುತಲಿ ಸುರತ ವಾರ್ತೆಗಳನಾಡಿಸುತ ನಲಿಸುತಿಹನ ಅ.ಪ ಎನಗೆ ಬೇಕಾದುದ ತನಗೆ ತಾ ಕೊಡುತಲಿ ಮನಕೆ ಹರುಷವ ಕೊಡುವನ ತ್ರಿಲೋಕ ಸುಂದರನ 1 ಎನ್ನ ನೋಡುತಲಿ ಹಿಗ್ಗುತಲಿರುವನ ಕಣ್ಣಲಿ ಕಾಣದ ಘಳಿಗೆ ಯುಗವಾಗಿರುವುದೆಲೆ 2 ಪ್ರೇಮದಿ ಬಿಗಿದಪ್ಪುತ ಮುದ್ದಿಸಿ ಲಾಲಿಪನ 3 ಚದುರನ ಸರಸವು ವಿಧ ವಿಧ ಲೀಲೆಗಳ 4 ಜನುಮ ಜನುಮಕು ಇವನೆ ಪ್ರಿಯನಾಗಿರ- ಅನುದಿನ 5 ಅವನಿಲ್ಲದ ಸೌಖ್ಯವು ನರಕಕ್ಕೆ ಸಮ ಸವಿಯಾಗದು ಅಮೃತವು ವಿಷವಾಗುವುದೆಲೆ ಮನಕೆ 6 ಬೆರೆವ ಸುಖಕೆ ಇನ್ನು ಸರಿಯಾವುದೆ ಜಗದೊಳು 7
--------------
ಗುರುರಾಮವಿಠಲ
ಮರೆಯದೆ ಶ್ರೀಹರಿಯಮನದಲಿ ಸ್ಮರಿಸೊ ಗುರುಹಿರಿಯರ ಅನುಗ್ರಹವನು ಗಳಿಸೊ ಪ ಇಂದಿರೆ ರಮಣನ ಅನುದಿನ ಮಂದರ ಧರನಾ 1 ಬಗೆ ಬಗೆಯಲಿ ಶ್ರೀ ಭಗವಂತನ ಪಾದ ಯುಗವನು ನೆರೆನಂಬಿಯಿ-----ಎಂದೆಂದೂ 2 ಪರಿಪರಿ ನವವಿಧ ಭಕ್ತಿಯು ಸಾಧಿಸಿ ಪರ ಬ್ರಹ್ಮ ಪರಮಾನಂದನ 3 ಶರಧಿಶಯನನ ಶಾಂತ ನಿಧಾನನ ಅರವಿಂದ ನಯನನ ಹರಿಗೋವಿಂದನಾ 4 ದಿನಕರ ಕೋಟಿತೇಜ ವಿಲಾಸನ ಮಾನವ ರಕ್ಷಕನಾ 5 ಚಿತ್ತವು ಚಲಿಸದೆ ಚಿನ್ಮಯ ರೂಪನ ನಿತ್ಯಾನಂದನ ನಿಗಮಗೋಚರನಾ 6 ಭಾವಜನಯ್ಯನ ----- ಭಾವನಕೊಲಿದ ಜನ ಹೃದಯದಿ ಕುಣಿದಾಡುವ ನಾ7 ಜ್ಞಾನಾನಂದನ ಜ್ಞಾನಿಗಳರಸನ ಧೇನು ಪಾಲಕ ಜಗದೀಶನ ಮುಕುಂದನ 8 ಮಾಧವ ಮುನಿ ಗೋವಂದ್ಯನ ಶರಣರ ಪೊರೆವಾ ಬಿರುದಿರುವ ದೇವನಾ 9 ಇನಕುಲ ಭೂಷಣನ ವಿಶ್ವಲೋಕೇಶನ ದನುಜಾಂತಕ ಶ್ರೀ ದಾಮೋದರನಾ 10 ಪಾಂಡವ ಪಕ್ಷಕನ ಪರಮಾಣು ರೂಪ ಬ್ರಹ್ಮಾಂಡನಾಯಕ ಕೋದಂಡಧರನ ಇಂದೂ 11 ವಾರಿಧಿ ಬಂಧನ ವೈದೇಹಿ ತಂದನ ಮೀರಿದ ರಕ್ಕಸರ ಮದಿಸಿದವನಾ 12 ಪನ್ನಗ ಶಯನ `ಹೆನ್ನ ವಿಠ್ಠಲನ ' ಉನ್ನತ ಚರಿತನ ಇನ್ನು ಹರುಷದಲಿ 13
--------------
ಹೆನ್ನೆರಂಗದಾಸರು
ಮರೆಯುವರೆ ಮರೆಯುವರೆ ರಾಮರಾಯಾ | ಗುರುಗಳಾರಾಧನೆಗೆ | ಶಿರಿವಾರದೊಡೆಯಾ || ಪರಿವಾರ ಸಹಿತಾಗಿ ತೆರಳುವದು ನಿಶ್ಚಯಿಸಿ ಬರೆವದಕೆ ಕಾಗದವು ಸಿಗದ್ಹೋಯಿತೆ | ಭರದಿ ಬರಬೇಕೆಂದು | ಕರೆಕಳುಹದಕೆನ್ನ | ಚರನೋರ್ವ ನಾದರು ದೊರೆಯದಾದನೆ ಅಕಟ 1 ಕ್ರೋಧ ವಿರಹಿತರಾದ ಸಾಧುವರ್ಯರ ಸಮಾರಾಧ | ನೆಗೆ ನಾ ಭಾರವಾದೆನೇನೈ | ಆದರವು ತಗ್ಗಿತೇ | ಯುಗ್ಮಪಾದಪಶುವಾದಿನೇ 2 ಗುರುಕರುಣವೆಗ್ಗಳದ ಗರುವಿಕೆಯೋ ಕಾರ್ಪರ ನರಸಿಂಹರರ್ಚಕರಮೋಕ್ಷ ಬಲವೋ ಪರಮ ಸತ್ಪುರುಷರುಪದೇಶ ಶ್ರವಣದ ಮದವೋ | ಹರಿಕಥಾ ಪಾನದ ಹಂಕಾರವೋ 3 ಇರಬೇಕು ಸರ್ವದಾ ಸಕಲರಲಿ ಸಮದೃಷ್ಟಿ ಹಿರಿಯರಾದವರಲ್ಲಿ ಏಕನಿಷ್ಟಿ | ನಿರುತದಲ್ಲಿ ಸದ್ಗೋಷ್ಟಿ ಪರನಾಗಿ ಮನಮುಟ್ಟಿ ಹರಿಪಾದಸ್ಮರಿಪರಿಗೆ ಕೈವಲ್ಯಷಟ್ಟಿ 4 ಶ್ರೀ ಶಾಮಸುಂದರನ ದಾಸಕೂಟಸ್ಥರೊಳು ನಾ ಸಲ್ಲದವನೆಂದು ಧೃಡವಾಯಿತೇ | ಭೂಸುರವೇಷದಲಿ ಎಂದು ಉದಾಸೀನ ಮಾಡಿನ್ನು 5
--------------
ಶಾಮಸುಂದರ ವಿಠಲ
ಮರೆವರೇನಯ್ಯಾ ಮಧವ ಮಮತೆ ತೋರಯ್ಯ ಪ ತೊರೆವರೆನೋ ಕರುಣಿ ನೀನು ನಿರುತ ಶರಣರ ಹೃದಯ ಭಾನು ಪೊರೆಯುವ ಬಿರುದನೆ ಅಪಯಶ ಪಡೆವರೆ 1 ದ್ರುವನಂದದಿ ನಾ ತಪವಾಚರಿಸವೆ ಭವಸಾಗರ ದಾಟುವ ಪರಿಯರಿಯದೆ ಸುವಿಮಲ ಮಾನಸದೊಲುಮೆ ಕೊಡೆಂಬನ 2 ಪ್ರಹ್ಲಾದನ ವೊಲು ನಿನ್ನಿರವರಿಯದೆ ಆಹ್ಲಾದವ ನಿತ್ಯನುವಿಂ ಕೊಳ್ಳದೆ ಈ ಕ್ಲೇಶದಿ ತೊಳಲುತ ಹರಿಸೆಂಬನ 3 ಬಲಿಯಂದದಿ ದಾನವ ಕೊಡಲಾರದೆ ಛಲದಿಂ ನಿನ್ನಯ ಪದಯುಗ ಪಿಡಿಯದೆ ಒಲಿಯುತ ತರಳನ ಸಲಹೆಂದೆಂಬನ 4 ಎಲ್ಲವ ಪಡೆಯಲು ಪುಣ್ಯವ ಗಳಿಸಿರೆ ಬಲ್ಲಿದ ನಿನ್ನಯ ಹಂಗಿರಲಿಲ್ಲವು ಎಲ್ಲರ ಬಂಧು ಜಾಜೀಶಾ ಎಂಬನ 5
--------------
ಶಾಮಶರ್ಮರು
ಮಲಗು ಮಲಗಯ್ಯ ಹನುಮ ಕಲಿಭಂಜನ ಭೀಮ ಜಲಧಿ ಅಲವಬೋಧನಾಮಾ ಜೋ ಜೋ ಪ ತ್ರೇತೆಯಲಿ ರಾಮದೂತನಾಗಿ ನೀ ಬಂದು ಭೀತಿಯಿಲ್ಲದೆ ಲಂಕೆಯ ದಹಿಸಿದೆಯೊ ಅಂದು ಸೀತೆಯಿತ್ತಂಥ ಚೂಡಾಮಣಿಯನು ತಂದು ಪ್ರೀತಿಪಡಿಸಿದೆ ರಾಮನ ನೀ ದಯಾಸಿಂಧು 1 ದ್ವಾಪರಾಂತದಲಿ ಭೀಮನಾಗಿ ನೀ ಬಂದೆ ಪಾಪಿ ಕೀಚಕ ದುಶ್ಶಾಸನಾದ್ಯರ ಕೊಂದೆ ಸಿರಿ ಕೃಷ್ಣನ ಪಾದಕೆರಗಿ ನಿಂದೆ ಭಾಪು ಭಾಪುರೆಂದೆನಿಸಿಕೊಂಡೆ ಅವನಿಂದೆ 2 ನಾನೆ ದೇವರೆಂಬ ಮತವನು ಹೆಮ್ಮೆಯಿಂದ ದಾನವರೀ ಕಲಿಯುಗದಲಿ ಪೊಗಳೆ ಮುದದಿಂದ ನೀನವತರಿಸಿ ಮಧ್ವಮುನಿ ಪೆಸರಿನಿಂದ ಹೀನ ಮತವ ಮುರಿದೆಯೊ ವಾಗ್ಭಾಣಗಳಿಂದ 3 ಏಕಾದ್ಯಶ ಕರ್ಮಗಳ ಶ್ರೀ ಹರಿಗರ್ಪಿಸಿ ಆತನನು ನೀ ಬಹು ಸಂತೋಷವನುಪಡಿಸಿ ಜಾತರಹಿತನಾಗೆನುತ ಆಶಿಷವ ವಹಿಸಿ ವಾತಸುತ ಕುಳಿತಿಹೆ ಯಂತ್ರೋದ್ಧಾರನೆನಿಸಿ 4 ಕಂಗಳನು ಮುಚ್ಚಿ ಜಪಮಾಲೆಯನು ತಿರುಗಿಸುತ ರಂಗೇಶವಿಠಲನ ತಾನದೊಳು ಸ್ಮರಿಸುತ ಹಿಂಗೇಕೆ ಕುಳಿತಿಹೆ ಮಲಗೇಳಯ್ಯ ದಾತ ತುಂಗ ವಿಕ್ರಮ ನೀನು ತ್ರಿಭುವನದಿ ಪ್ರಖ್ಯಾತ 5
--------------
ರಂಗೇಶವಿಠಲದಾಸರು
ಮಹಾಲಕ್ಷ್ಮಿ ಇಂದಿರೇ ಪಾಲಿಸು ಕಮಲಮಂದಿರೆ ಪ ಇಂದಿರೆ ಇಂದುನಿಭಾಸ್ಯೆ - ಗುಣ - ವೃಂದ ಶೋಭಿತೆ ಶುಭಗಾತ್ರೆ - ಆಹಾ ಇಂದು ಶೇಖರಸುರವಂದಿತಪಾದ ದ್ವಂದಾರವಿಂದಳೆ ಮಂದಸ್ಮಿತಾನನೆ ಅ.ಪ ಅರುಣದಿಂದೊಪ್ಪುವ ಚರಣ ಯುಗಳಾ - ಭರಣ ಭೂಷಿತ ಯೋಗಿಶರಣಾ ನಿಜ ಶರಣರ್ಗೆ ರನ್ನದರ್ಪಣಾಭವ - ಅರಣತಾರಣಕಾರಣ - ಆಹಾ ಶರಣು ಪೊಕ್ಕೆನು ದೇವಿ ಚರಣಕಮಲಯುಗ ವರಣಿಸಲಳವಲ್ಲ ಕರುಣಿಸು ನೀ ಎನ್ನ 1 ಶ್ರುತಿನುತವಿತತಸÀಚ್ಚರಿಯೆ ಸದಾ- ನತÀರ ಸಂತೈಪೊದಾಶ್ಚರಿಯೆ ನಿನ್ನ ಸ್ತುತಿಸಿದವಗೆ ಮಹಾ ಶಿರಿಯೆ ಮತ್ತೆ ನಿರಯ ಅಹಾ ಸತತ ನಿನ್ನಲಿ ಮನೋರತಿನಿತ್ತು ಶೋಕದ ವ್ರತತಿ ಖಂಡಿಸಿ ಸುಖತತಿಯ ಪಾಲಿಸು ದೇವೀ 2 ಜಗಕೆ ಸೃಷ್ಟಿಸ್ಥಿತಿನಾಶಕಾರಿ ಬಗೆ ಬಗೆ ಭವನದಲ್ಲಿ ಕ್ಲೇಶ-ಹರಸಿ ಸುಗಮದಿಂದ ಪರಿತೋಷ-ಬಡಿಸಿ ನಗಿಸುವಿ ಎನ್ನಭಿಲಾಷಾ ಅಹಾ ನಗೆಮುಖದಲಿ ಗುರು ಜಗನ್ನಾಥ ವಿಠಲನ್ನ ನಿತ್ಯ ಸೊಗಸಾಗಿ ಇರುತಿಪ್ಪಿ 3
--------------
ಗುರುಜಗನ್ನಾಥದಾಸರು
ಮಹಿಷಿ ಎನಿಸಿಹಳೇ ಪ ವಸುದೇವ ಭಗಿನಿ ಕೈಕೆಯೀ ಉದರದಲಿಅಸುವ ನೀಧರಿಸುತ್ತ ಅವತರಿಸುತಾ |ವಸುಧೆಯೊಳು ಸುಗುಣ ಗಣಯುತೆಯು ನೀನಾಗಿಪೆಸರಾಂತೆ `ಭದ್ರೆ` ಎಂದೆನುತ ಅವನಿಯಲೀ 1 ಪಿತನು ನಳನೆಂಬನಿಗೆ ಪ್ರೀತಿಯಲಿ ನೀ ಪೇಳ್ದೆಹಿತವು ಶ್ರೀ ಹರಿಗೆಂದು ನುತಿಸುವ ಸುಕರ್ಮ |ಅತಿಶಯದೆ ಪೂಜೆಯಿಂದಧಿಕದಲಿ ಶ್ರೀ ಹರಿಯುನುತಿಗೆ ಪ್ರೀತಿಸುವನೆಂದೊರೆದೆ ಭಕುತಿಯಲೀ2 ಹರಿನಾಮ ಸ್ಮರಿಸುತ್ತ ಹರಿ ಚರಣ ನಮಿಸುವರದುರಿತರಾಶಿಗಳಿರದೆ ಪರಿಹಾರವೆನುತಾ |ಒರೆಯುತೀಪರಿ ನಮನ ಭಕ್ತಿಗೇ ಪ್ರಾಶಸ್ತ್ಯಪರಿಪರಿಯ ಪೇಳಿಹಳೆ ನಮಿಪೆ ನಿನ್ನಡಿಗೇ3 ಈ ಪರಿಯ ತಪಗೈದು ದ್ವಾಪರದ ಯುಗದಲ್ಲಿಶ್ರೀ ಪತಿಯ ದರ್ಶನದಿ ತಾಪತ್ರಯ ಕಳೆದೂ |ಆ ಪರಮ ಪುರುಷನ್ನ ಕೈ ಪಿಡಿದ ಮಹ ಭದ್ರೆಕಾಪುರುಷನಾದೆನ್ನ ಪಾಪ ಪರಿಹರಿಸೇ 4 ಭದ್ರಾಣಿ ಪತಿಗಿನ್ನು ಕಾದ್ರವೇಯನು ಮತ್ತೆಆದ್ರಿ ಮಂದಿರ ತಂದ ಅವಿಕಾರಿ ವಿಪಗೇ |ಸಿದ್ಧೈದು ಗುಣದಿಂದ ಹೀನಳೆಂದೆನಿಸುತ್ತಭದ್ರ ಗುರು ಗೋವಿಂದ ವಿಠಲ ಪ್ರಿಯೆ ಪಾಹೀ 5
--------------
ಗುರುಗೋವಿಂದವಿಠಲರು
ಮಾತರಿಶ್ವ ಮಹಾರಾಯಾ ನಿನ್ನ ದೂತನಾದೆನೊ ಪೊರಿ ಜೀಯಾ ಪ ಪುರುಹೂತ ಪ್ರಮುಖ ಸುರ ವ್ರಾತವಿನುತ ಶಿರಿನಾಥನ ನಿನ್ನೊಳು ಪ್ರೀತಿಲಿ ತೋರಿಸಿ ನೀತ ಜ್ಞಾನವಿತ್ತು ಮಾತು ಲಾಲಿಸೊ ಎನ್ನ ಮಾತೆಯ ತೆರದಿ ಅ.ಪ ಪ್ರಾಣಾದಿ ಪಂಚರೂಪಕನೆ ಜಗ ತ್ರಾಣ ಭಾವಿ ವಿರಿಂಚನೆ ಮಾಣದೆ ತವ ರೂಪ ಕಾಣಿಸೊ ಮನದಲ್ಲಿ ಪಾಣಿಯುಗವ ಮುಗಿವೆ ಕ್ಷೀಣಪಾಪನ ಮಾಡೊ ರೇಣು ಭಜನೆಯ ಗೈದು ಸರ್ವದ ವೀಣೆ ಪಿಡಿದತಿ ಗಾನ ಮಾಡುತ ಜಾಣನೆನಿಸಿ ಕ್ಷೋಣಿ ಪಾಲಿಪೆ 1 ಮೂಲರಾಮನ ಪಾದಕಮಲಾ ಯುಗಕೆ ನೀಲಷಟ್ಟದ ವರಬಾಲಾ ವಾಲಿಯಾನುಜ ಕಪಿ ಜಾಲಪಾಲಕನನ್ನು ಆಲಿಸಿ ಭೂಮಿಜ ಲೋಲರಾಮನ ಮೈತ್ರ್ಯ ಪಾಲಿಸೀ ಶರಧಿಯನು ನೀನೆ ಲೀಲೆಯಿಂದಲಿ ದಾಟಿ ಸೀತೆಗೆ ಬಾಲರೂಪದಿ ರಾಮವಾರ್ತೆಂiÀi ಪೇಳಿ ವನವನು ಹಾಳುಮಾಡಿದಿ 2 ಪಾತಕÀ ರಾವಣ ಮಗನಾ ರಣದಿ ಘಾತಿಸಿ ಯಮಗಿತ್ತವನಾ ತಾತಗುರು ಜಗನ್ನಾಥವಿಠಲ ನಿಜ ಪೋತನಾಗಿ ಜಗದಿ ಖÁ್ಯತಿಯ ಪಡೆದಿ ರೀತಿ ಏನಿದು ನಿನ್ನ ಪದಯುಗ ದೂತನಾಲ್ಪರಿವ ಮಾತನು ಯಾತಕೇ ಕಿವಿ ಕೇಳದೋ ಕಪಿ ನಾಥ ಪಾಲಿಸೊ ಎನ್ನ ತಾತಾ 3
--------------
ಗುರುಜಗನ್ನಾಥದಾಸರು
ಮಾತು ಮನ್ನಿಸೊ ಪರಮಾತಮಾ ಮುದದಿಂದ ಮಾತು ವೈದವನಲವ ಮಾತುರದೊಳು ಗೆದ್ದು ಮಾತಿಯ ಸೆರೆ ಪ್ರೇಮಾತುರ ಭೇದಿಸಿದ ಮಾತುರಪತಿ ಚಿನ್ಮಾತುರ ತೋರೋ ಪ ಸೂಕರ ಘೂಕಾ ಮನಕಾಶಾ ಕಾಕಕಂಕಾ ದನ ಕತ್ತೆ ಮೊದಲಾದ ಜನ ಕಲಿಯುಗದೀ ತನಕೆ ಆದzಕಿನ್ನು ಮನಕಾನಂದವ ಕಾಣೆ ದಿನ ದಿನ ಕಾಂಚನಾಶಿಯಿಂದ ಘನಕಾಮ ಬದ್ಧನಾದೆ ಕನಕಾಂಬುಜ ಭವಜನಕ ಜಗತ್ಪತಿ ಜನ ಕಥೆಯಿಂದ ಭ ವನಕತಿ ಮೋಹಿಸಿ ಧನಕವಿಯೆನಿಸಿದೆ ಎನ್ನ ಕಡೆ ಮೊಗವಾಗು 1 ಸನಕಾದಿ ವಂದ್ಯ ತ್ರಿಭುವನಕಾದಿ ಮೂಲವೆನಿಸಿ ವನಕಾಯಿದ ಕಾರುಣ್ಯರತುನಕಾರ ಪೂರ್ಣನೀತಾ ಘನಕಾಯ ಒಂದಾರೆ ಸಾಧನಕಾಧಾರವಾದೊ ಪಾ ವನ ಕಾಲಾ ತೊರೆದು ಜೀವನ ಕಾದುಕೊಂಡೆನಯ್ಯಾ ಇನಕರ ತೇಜಾ ತುಹಿನಕರ ಚರಣನೆ ಚನ ಕತ್ತಲೆ ನಾಶನ ಕರಿವರದಾ 2 ಜನಕಾ ವನಿಕಾ ನಾಭಾ ಕಾಣಿಸಿದೆ ಮುನಿ ಜನಕಾಶ್ಚರ್ಯರಾಗೆ ವಾಗೆ ಅನನಕಾಮರಿ ತೂಗೆ ವಂ ಚನೆ ಕಾಠಿಣ್ಯ ಪಾಪಕಾನನಕಾನಳನೆ ಜಾ ವನ ಕಾಟ ಬಿಡಿಸಿ ಈಮ್ಮನ ಕಾದಂತಯ್ಯಾ ನನಕೂಡ ಹಾಕು ದುಷ್ಟನದೊಟ್ಟಿ ಸ ಜ್ಜನ ಕರ್ಮದಲಿ ಸೋಭನ ಕಡೆಯಲಿ ಇಡು ಕವನಕೆ ದಾಸನ ಕರವಿಡಿಯೊ 3
--------------
ವಿಜಯದಾಸ
ಮಾಧವ ಕಮಲ ಪಾ ದವ ತೋರಿಪಾಲಿಸೋ ಬಾಲಗೋಪಾಲ ಪ ದಿವಿಜೇಶ ವನಜಸಂಭವ ನಿತ್ಯನೇಮ ರಾ ಧೆವಲ್ಲಭ ಸಂಗೀತ ಲೋಲಾ ಅ.ಪ ನೆಂಬುದು ನಿಜವೆಂಬುದ ತೋರೋ ಅಂಬುದ ಶ್ಯಾಮರೋಲಂಬನಂದದೆ ಪಾ ದಾಂಬುಜಯುಗಳವ ನಂಬಿದೆನಯ್ಯ 1 ತಂದೆ ಕರೆಯಲೈತಂದೆ ಕರಿಯು ಕೂಗೆ ಒಂದು ನಿಮಿಷಾರ್ಧದಿ ಬಂದೆ ಕೃಪಾಳು ಇಂದಿರೆಯರಸ ಗೋವಿಂದ ಮಾಂಗಿರಿರಂಗ ಮಂದರಧರ ಬಾರೆಂದು ಬೇಡುವೆನಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್