ಒಟ್ಟು 2264 ಕಡೆಗಳಲ್ಲಿ , 110 ದಾಸರು , 1592 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಾಮುಂಡೇಶ್ವರಿ ಚಾಮೇಂದ್ರನೃಪನನ್ನು ಪ್ರೇಮದಿಂ ರಕ್ಷಿಸಮ್ಮ ಪ ಜೀಮೂತಶ್ಯಾಮಳೆ ಕೋಮಲಶುಭಗಾತ್ರೆ ಕಾಮಿತ ಫಲದಾಯಕಿ ಕಲ್ಯಾಣಿ ಅ.ಪ. ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರ ಸನ್ನಳಾಗಿ ನೃಪನ ರನ್ನದ ಸಿಂಹಾಸನವೇರಿಸಿ ಎನ ಗುನ್ನತೋನ್ನತವಾದಾನಂದವನಿತ್ತೆ 1 ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂ ದಾನಂದವನೈದಿ ನಾಯಕಮಣಿಯಂದದಿಂ ನರನಾಥರ್ಗೆ ನಾಥನಾಗಿ ನಲಿಯುತ್ತಲಿರಲಿ ಸದಾ2 ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದು ಕರುಣಾರಸವೆರಸಿ ಪೊರೆವೆ ನಾರಾಯಣದಾಸನ ಬಿನ್ನಪವ ತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ಚಾಮುಂಡೇಶ್ವರಿ ಚಾಮೇಂದ್ರನೃಪನನ್ನುಪ್ರೇಮದಿಂ ರಕ್ಷಿಸಮ್ಮ ಪಜೀಮೂತಶ್ಯಾಮಳೆ ಕೋಮಲಶುಭಗಾತ್ರೆಕಾ'ುತ ಫಲದಾಯಕಿ ಕಲ್ಯಾಣಿ ಅ.ಪ.ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರಸನ್ನಳಾಗಿ ನೃಪನರನ್ನದ ಸಿಂಹಾಸನವೇರಿಸಿ ಎನಗುನ್ನತೋನ್ನತವಾದಾನಂದವನಿತ್ತೆ 1ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂದಾನಂದವನೈದಿನಾಯಕಮಣಿಯಂದದಿಂ ನರನಾಥರ್ಗೆನಾಥನಾಗಿ ನಲಿಯುತ್ತಲಿರಲಿ ಸದಾ 2ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದುಕರುಣಾರಸವೆರಸಿಪೊರೆವೆ ನಾರಾಯಣದಾಸನ ಬಿನ್ನಪವತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ಚಾರು ಚರಣವ ಸಾರಿದೆ ಶರಣ ಮಂದಾರ ಕರುಣವ ಬೀರಿ ಭವವನಧಿ ತಾರಿಸು ತವಕದಿ ಸೂರಿ ಸುಧೀಂದ್ರ ಕುಮಾರ ಉದಾರ ಪ ಪಾದ ವನರುಹ ಧ್ಯಾನ ಪ್ರಣವನ ಸ್ತವನ ಅರ್ಚನೆ ಮಾಳ್ಪ ನಾನಾ ಜನರ ವಾಂಛಿತವೀವಗುಣ ಪೂರ್ಣ ಜ್ಞಾನ ಧನಪ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ನೀ ಪ್ರತಿದಿನದಿ ದಣಿಸುವುದು ಘನವೆ ಗುರುವೆ ಪಾವನತರ ಚರಿತ 1 ಪಾದ ಕೀಲಾಲಜ ಮಧುಪಾ ಬಾಲಕನ ಬಿನ್ನಪವ ಲಾಲಿಸೋ ಮುನಿಪ ತಾಳಲಾರೆನೊ ತಾಪತ್ರಯದ ಸಂತಾಪ ಕೇಳೋವಿಮಲಜ್ಞಾನ ಶೀಲ ಸ್ವರೂಪ ಭೂಲಲನಾಧವ ಕೋಲನಂದನಾ ಕೂಲಗವರ ಮಂತ್ರಾಲಯ ನಿಲಯ 2 ಕಲಿಕಲ್ಮಷವಿದೂರ ಕುಜನ ಕುಠರಾ ನಳಿನಾಕ್ಷ ವಿಮಲ ಶ್ರೀ ತುಲಸಿಯ ಹಾರ ಗಳ ಸುಶೋಭಿತ ಕಮಂಡಲ ದಂಡಧರಾ ಜಲಧಿ ವಿಹಾರಾ ಸುಲಲಿತ ಕರುಣಾಂಬುಧಿಯೆ ಜಗನ್ನಾಥ ವಿ ಠಲನೊಲಿಮೆಯ ಪಡೆದಿಳೆಯೊಳು ಮೆರೆದಾ 3
--------------
ಜಗನ್ನಾಥದಾಸರು
ಚಿತ್ತಾಭಿಮಾನಿ ನೀನು ಮತ್ತೆ ನಾ ಬಲಗೊಂಡು ದುಷ್ಟವಿಷಯಕ್ಕೆ ಎರಗುವÀ ಮನವನ್ನು ಅಚ್ಚುತನ ಚರಣದಲಿ ಇರಿಸುವೆ1 ಮನದಭಿಮಾನಿಯೆ ಇವನ ನಾ ಬಲಗೊಂಡು ದುರುಳ ವಿಷಯಕೆ ಎರಗುವ ಮನವನ್ನು ನರಹರಿಯ ಚರಣದಲಿ ಇರಿಸುವೆ 2 ಅಚ್ಚುತನೆ ನಾ ನಿನ್ನ ಹೆಚ್ಚು ಬೇಡೋದಿಲ್ಲ ಕಷ್ಟಕಾಲದಲ್ಲಿ ಹರಿಯೆಂಬ ಸ್ಮರಣೀಯೊ ರಕ್ಷಿಸೋ ಲಕ್ಷ್ಮೀರಮಣನೆ 3 ನರಹರಿಯೆ ನಾ ನಿನ್ನ ಹಿರಿದ ಬೇಡೋಳಲ್ಲ ಸರ್ವಕಾಲದಲಿ ಹರಿಯೆಂಬೋ ಸ್ಮರಣೀಯ ಕರುಣಿಸೋ ಲಕ್ಷ್ಮೀರಮಣನೆ 4 ಪಾಲ್ಗಂಜಿಯೆಂದರೆ ಅರಗಂಜಿಯಾಹೋದೆ ಲಕ್ಷ್ಮೀರಮಣಗೆ ಎಂಟುಗುಣಳುಂಟೆಂದರೆ ಮೇಲಿದ್ದ ಗುಣಗಳಡಗೋದೆ 5 ಪಂಚಕನ ದೇಹದಲಿ ನಿಂತೆರಡು ಪಕ್ಷಿಗಳು ಸಂತತ ದುಃಖಿ ಸುಖಿಯೊಬ್ಬ ಜೀವಗೆ ನಿಂತು ಸುಖ ದುಃಖ ಕೊಡುತಿತ್ತು 6 ಪಂಚಮೂರುತಿ ಹರಿಯ ಅಂತರಂಗದಿ ಇಟ್ಟು ಸಂತತ ಸ್ವಪ್ನ ಸುಷುಪ್ತಿ ಏರಿಸುವ ಪ್ರಾರ್ಥಿಸಿ ಪ್ರಾಜ್ಞರಿಗೆ ಸರಿಯೆಂಬೆ7 ಈ ಜಾಗ್ರದವಸ್ಥೆಯಲಿ ನಾನಾವಿಧ ಕರ್ಮಗಳ ಪ್ರೇರಿಸಿ ಸಕಲ ಶ್ರೀಕಾರ ಮಾಡುವೊ ಸ್ವಾಮಿ ಶ್ರೀಹರಿಗೆ ಶರಣೆಂಬೆ 8 ನಡೆವುದು ನಿನ್ನ ಯಾತ್ರೆ ನುಡಿವುದು ನಿನ್ನ ನಾಮಸ್ಮರಣೆ ಅಡಿಯಿಡೋದೆಲ್ಲ ಹರಿಯಾತ್ರೆ ಗುರುಪೂಜೆ ಸ್ಮರಣೇಯ ಪಾಲಿಸೋ ಲಕ್ಷ್ಮೀರಮಣನೆ 9 ವಿಷ್ಣುಭಕ್ತಿಯಿಲ್ಲದೋರ ಹತ್ತಿರ ನಾನಿರೆ ಎಚ್ಚರಿತು ಮಾಡೆ ಗೆಳೆತನವ ಅವರ ಕಂಡರೆ ನಾನು ಕಿಚ್ಚ ಕಂಡಂತೆ ಕೊಲ್ಲಿಸುವೆ 10 ಹರಿಭಕ್ತಿಯಿಲ್ಲದೋರ ಹತ್ತಿರಲಿ ನಾನಿರೆ ಅರೆಘಳಿಗೆ ಮಾಡಿ ಗೆಳೆತನವ ಅವರ ಕಂಡರೆ ತಾನು ಉರಿಯ ಕಂಡಂತೆ ತೊಲಗುವೆ 11 ಕಾಶೀಪಟ್ಟಣ ಶ್ರೀ ವಾಸುದೇವರು ಭೂಮಿ ಹರಿದಾಸರು ಕಟ್ಟಿಸಿದ ಸ್ಥಳದಲ್ಲಿ ಹರಿಯ ನಿಜದಾಸಗೆ ವಿಶ್ವನಾಥನೆಂತೆಂಬೊ ಪೆಸರುಂಟು 12 ಹರಿದಾಸರ ಒಳಗೆ ಪರಮ ವೈಷ್ಣವನ್ಯಾರೆ ಕಿರಿಯ ಕೆಂಜೆÉಡೆಯ ಮಕುಟನೆ ಅಜನ ಸುತನಾ ಶಿವನು ಹರಿದಾಸಕಾಣೆ ಹುಸಿಯಲ್ಲ13 ಗುಣಮಣಿಧಾಮಗೆ ಮಣಿದೊಮ್ಮೆ ಇಕ್ಕದೆ ಹಲವು ದೈವಗಳ ಭಜಿಸಿದ ಪಾಪಿ ನೀನು ಮಣಿಮಂತ ಹೋದಗತಿಗ್ಹೋಗ್ವೆ 14 ಎದ್ದು ತಮಸಿಗೆ ಉರುಳುವೊ ಪಾಪಿ ನೀ ಅದ್ವೈತ ಹ್ಯಾಗೆ ಬಿಡದ್ಹೋದಿ 15 ಅಳಿದ್ಹೋಗೊ ಶರೀರವನು ನರಹರಿಗೆ ಸರಿಯೆಂಬೆ ಬಿಡದೆ ತಮಸಿಗೆ ಉರುಳವೊ ಪಾಪಿ ನೀ ಚಲಹವನು ಹ್ಯಾಗೆ ಬಿಡದ್ಹೋದಿ 16 ನಾಶ್ವಾಗೊ ಶರೀರವನು ವಾಸುದೇವಗೆ ಸರಿಯೆಂಬೆ ಹೇಸದೆ ತಮಸಿಗೆ ಉರುಳವೊ ಪಾಪಿ ನೀ ವಾಸನೆ ಹ್ಯಾಗೆ ಬಿಡದ್ಹೋದಿ 17 ಈ ಸೃಷ್ಟಿಯೊಳಗೆ ಅಚ್ಚುತಗೆ ಸರಿಯುಂಟೆ ಮೆಚ್ಚಿ ನೀ ಮನವೆ ಕೆಡಬೇಡ ಅಲ್ಲಿತ್ತಾರಾ(ಅಲ್ಲದ?) ಎಲೆಯ ಒತ್ತಿ ಹಿಂಡಿದರೆ ರಸವುಂಟೆ 18 ಭೂಮಿಯೊಳಗೆ ಶ್ರೀರಾಮನಿಗೆ ಸರಿಯುಂಟೆ ಮಾನುನೀ ಮನವೇ ಕೆಡಬೇಡ ಅಲ್ಲಿತ್ತಾರಾ(ಅಲ್ಲದ?)ಎಲೆಯ ಒತ್ತಿ ಹಿಂಡಿದರೆ ರಸವುಂಟೆ 19 ಭೂಮಂಡಲದೊಳಗೆ ರಂಗಗೆ ಸರಿಯುಂಟೆ ಅಂದು ನೀ ಮನವೆ ಕೆಡಬೇಡ ಅಲ್ಲಿತ್ತಾರಾ (ಅಲ್ಲದ?) ಎಲೆಯ ಒತ್ತಿ ಹಿಂಡಿದರೆ ರಸವುಂಟೆ 20 ವಿಷ್ಣು ಸರ್ವೋತ್ತಮನೆಂದು ಇಟ್ಟರೆ ಮುಂಡಿಗೆಯ ಮುಟ್ಟಲಂಜಿದನೆ ಪರವಾದಿ ಪರವಾದಿ ತತ್ವದ ಬಟ್ಟೇನೂ ಕಾಣದಿರುತಿದ್ದ21 ಹರಿಸರ್ವೋತ್ತಮನೆಂದು ಇರಿಸಿದರೆ ಮುಂಡಿಗೆಯ ಹಿಡಿಯಲಂಜಿದನೆ ಪರವಾದಿ ಪರವಾದಿ ತತ್ವದ ವಿವರವನು ಕಾಣದಿರುತಿಹ 22 ಅರಣ್ಯದ ಅಡವೀಲಿ ಗೋಡೇನು ಹಾಕಿದರೆ ಯಾರು ಕೂಲೀನಕೊಡುವೋರು ಸಂಕರನ ಮತವನು ಮಾಯದಿಂ ಮೆಚ್ಚಿ ಕೆಡಬ್ಯಾಡ 23 ಅತ್ತಿಹಣ್ಣಿನಂತೆ ಮಿಥ್ಯವಾದಿಮತ ಬಿಚ್ಚಿನೋಡಿದರೆ ಕ್ರಿಮಿರಾಶಿ ಮಧ್ವರಾಯರ ಮತ ಮುತ್ತಿನ ಸರವ ತೆಗೆದಂತೆ 24 ಆಲಹಂಣೀನಸಂತೆ ಮಾಯಾವಾದಿಮತ ಸೀಳಿ ನೋಡಿದರೆ ಕ್ರಿಮಿರಾಶಿ ಮಧ್ವರಾಯರ ಮತ ಹೂವ್ವಿನ ಸರವ ತೆಗೆದಂತೆ 25 ಭಾಗವತ ಅರ್ಥಸಾರವೆಲ್ಲವ ತಿಳಿದು ಹೇಳಿದನೆ ತತ್ವ ಕಥೆಗಳ ಜ್ಞಾನ ಭಕ್ತಿವೈರಾಗ್ಯವ ಈವನೆ ನಮ್ಮ ಹಯವದನ 26
--------------
ವಾದಿರಾಜ
ಚಿಂತ್ರವೇಲಿನಿಲಯ ಭಾರತಿ ಕಾಂತನೆ ಪಿಡಿಕೈಯಾ ಪ ಅಂತರಂಗದಲಿ ಚಿಂತಿಪರಘುÀಕುಲಧ್ವಾಂತದಿವಾಕರ ಸಂತತ ಸ್ಮರಿಸುವೆಅ.ಪ ಲಂಘಿಸಿ ವಾರಿಧಿಯ ಶ್ರೀರಾಮಾಂಗುಲಿ ಮುದ್ರಿಕೆಯ ಅಂಗನಿಗೆ ಕೊಟ್ಟು ಮಂಗಳಾಂಗ ರಘು ಪುಂಗವಗೆ ಕುಶಲ ಸಂಗತಿ ತಿಳಿಸಿದ 1 ಇಂದು ಕುಲದಿ ಜನಿಸಿ ಕುಂತಿಯ ಕಂದ ಭೀಮನೆನಿಸಿ ನಿಂದು ರಣದಿಕುರು ವೃಂದವ ಮಥಿಶ್ಯಾನಂದ ಸುತನೊಲಿಮೆ ಛಂದದಿ ಪಡೆದಿಹ 2 ಮೇದಿನಿಯೊಳು ಜನಿಸಿ ಬಹುದು ರ್ವಾದಿಗಳನು ಜಯಿಸಿ ಮೋದಮುನಿಯೆನಿಸಿ ಭೇದವ ಬೋಧಿಸಿ ಸಾಧು ಜನಕೆ ಬಲು ಮೋದವ ಗರಿದಿ 3 ಶೇಷದಾಸರಿಗೊಲಿದಿ ಅವರಭಿಲಾಷೆಯ ಪೂರ್ತಿಸಿದಿ ಪೋಷಿಸೆನ್ನ ಕರುಣಾ ಸಮುದ್ರ ಭವ ಕ್ಲೇಶವ ಕಳೆಯಾ ಗಿರೀಶ ಮುಖವಿನುತ4 ಭೀತರನ್ನು ಪೊರಿವಿ ಭಜಕರ ಪಾತಕವನು ಕಳೆವಿ ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗ ನಾಥನ ಪರಮ ಪ್ರೀತಿಪಡೆದಿಹ 5
--------------
ಕಾರ್ಪರ ನರಹರಿದಾಸರು
ಚೂಡನಾಥೇಶ ನೋಡು ಕರುಣದಿ ಎನ್ನ ಪ ಮಾಡಿ ಸಲಹೊ ಮನ್ಮಥ ಸಂಹರನೆ ಅ.ಪ ಸೀತಾಪತಿನಾಮಾತಿಶಯವನತಿ ಪ್ರೀತಿಲಿ ಗೌರಿಗೆ ನೀ ತಿಳುಹಿಸಿದೆ 1 ಕುಪಥಗಳ ಬಿಡಿಸಿ ಸುಪಥವ ತೋರೊ 2 ಧರೆಯೊಳು ನೂತನಪುರದಿ ನೆಲೆಸಿರುವ ಗುರುರಾಮವಿಠಲಗೆ ಪರಮಮಿತ್ರನೆ 3
--------------
ಗುರುರಾಮವಿಠಲ
ಚೆನ್ನಕೇಶವದೇವರಾಯಇನ್ನು ಸುಖಿಪೆನೆಂತೆನಗೆ ಅನ್ಯಥಾ ಗತಿಯಿಲ್ಲ ಪ. ಅನುದಿನ ಸಂದಣಿಸೆ 1 ಉಡುವಾಸೆ ನುಡಿವಾಸೆ ಬೇಡುವಾಸೆ ಕೊಡುವಾಸೆಒಡಲ ತುಂಬಬೇಕೆಂಬ ಆಸೆಕೊಡದವನ ಬಡಿದು ಜಡಿವಾಸೆ ಬಿಡದಿರಲು 2 ಹಯವದನನೆ ದೇವ ನಿನ್ನ ನೆನೆಯದಿದ್ದೀಮನಕೆಭಯವೆಲ್ಲಿಹುದು ಜಗನ್ನಾಥ ನಿನ್ನದಯವನೆ ಬೀರಿ ನಿರ್ದಯನನ್ನುದ್ಧರಿಸೊ 3
--------------
ವಾದಿರಾಜ
ಚೆಲ್ವೇರಾರತಿಯ ತಂದೆತ್ತಿರೆ ಪ ಹುಟ್ಟಿದಳಾ ಕ್ಷೀರಸಾಗರದಲಿ ಸ- ಮಸ್ತ ಜನರಿಗೆ ಸುಖವ ನೀಡುತ ಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನ ಪಟ್ಟದರಸಿ ಮುದ್ದು ಮಾಲಕ್ಷ್ಮಿಗೆ 1 ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ- ನಿಟ್ಟ ್ವಜ್ರದ ಬುಗುಡಿ ವೈಯಾರದಿಂದ ತಿದ್ದಿ ಬೈತಲು ಜಡೆಬಂಗಾರ ರಾಗಟೆ ಪದ್ಮನಾಭನ ರಾಣಿ ಮಾಲಕ್ಷ್ಮಿಗೆ 2 ವಾಲೆ ಸರಪಳಿ ಚಳತುಂಬು ಚಿನ್ನದ ಸರಿಗೆ ಮೋಹನ್ನಮಾಲೆ ಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ ಚೆನ್ನಾರ ಚೆಲುವೆ ಶ್ರೀ ಮಾಲಕ್ಷ್ಮಿಗೆ 3 ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರ ನಳಿತೋಳಿನಲಿ ನಾಗಮುರಿಗೆ ವಂಕಿ ಕಮಲ ದ್ವಾರ್ಯ ಹರಡಿ ಕಂಕಣನಿಟ್ಟು ಕಳೆಯ ಸುರಿವ ಚೆಲ್ವೆ ಮಾಲಕ್ಷ್ಮಿಗೆ 4 ಗರುಡವಾಹನನ್ಹೆಗಲಿಳಿದು ಶ್ರೀನಾಥನ ಹರಡಿ ಕಂಕಣ ಕರವ್ಹಿಡಿದುಕೊಂಡು ಮುಡಿದ ಮಲ್ಲಿಗೆ ಪಾರಿಜಾತಗಳುದುರುತ ನಡೆದು ಬರುವೊ ಮುದ್ದು ಮಾಲಕ್ಷ್ಮಿಗೆ 5 ಪಾದದಿ ರುಳಿ ಗೆಜ್ಜೆ ನಾದ ಝೇಂಕರಿಸುತ ಆದರದಿಂದೆನ್ನ ಮನೆಗೆ ಬಂದು ಶ್ರೀಧರ ಭೀಮೇಶಕೃಷ್ಣನೆದೆಯ ಮ್ಯಾಲ್ವಿ- ನೋದದಿ ಕುಳಿತಿದ್ದ ಮಾಲಕ್ಷ್ಮಿಗೆ 6
--------------
ಹರಪನಹಳ್ಳಿಭೀಮವ್ವ
ಚೌತಿಯ ದಿವಸ ರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ- ಮೌರಿ ರಭಸದಿ ಲಕ್ಷ್ಮೀಕಾಂತ ಭೂರಿ ವೈಭವದಿ ಪೊರಟನೆತ್ತ ಯಾವ ಕಾರಣವೆಂದು ಪೇಳೆಲೆ ಸತ್ಯ 1 ಊರ್ವಶಿ : ದೇವಿ ಕೇಳೆಲೆ ಸುಮ್ಮಾನದಿಂದ ಕುಲ- ದೇವರ ಪೂಜೆಗೋಸುಗ ಬಂದ ಪಾವನಮೂರ್ತಿಯಾದುದರಿಂದ ನಮ್ಮ ಕಾವನು ಕರುಣಾಕಟಾಕ್ಷದಿಂದ2 ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ- ನ್ನಾಥನಿಗ್ಯಾವ ಕುಲವು ಕಾಣೆ ರೀತಿಯನರುಹಬೇಕೆಲೆ ಬಾಲೆ ಸರ್ವ ಚೇತನಾತ್ಮನ ನಾಟಕದ ಲೀಲೆ3 ಊರ್ವಶಿ : ಪಾಂಡವರಾಯುಧಗಳನ್ನೆಲ್ಲ ಪೊತ್ತು- ಕೊಂಡ ಕಾರಣದಿ ಪೂಜೆಗಳೆಲ್ಲ ಕಂಡು ಪೊಗಳಲು ಕವಿಗು ಸಲ್ಲ ಇನ್ನು ಪುಂಡರೀಕಾಕ್ಷನವನೆ ಬಲ್ಲ4 ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ- ಭೋಜನಾಭನು ತಾಕ್ಷ್ರ್ಯನ ಮೇಲೆ ರಾಜಬೀದಿಯೊಳ್ ಬರುವದೇನೆ ಇಂಥ ಸೋಜಿಗವೇನು ಪೇಳೆಲೆ ಜಾಣೆ5 ಊರ್ವಶಿ : ಪಟಹ ಡಿಂಡಿಮವಾದ್ಯರವದಿಂದ ತಂ- ಬಟೆನಿಸ್ಸಾಳರವದಿ ಬರುವ ಚಂದ ಸಟೆಯಲ್ಲ ಕೇಳು ಕರುಣದಿಂದ ನಮ್ಮ ಕಟಕ ರಕ್ಷಿಸಲು ಬರುವ ಗೋವಿಂದ6 ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ- ಗಲಭೆಗಳಿಂದ ಪೋಗುವದೇನೆ ನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ- ಜಲಜನಾಭನ ಮಹಿಮೆಯ ಜಾಣೆ7 ಊರ್ವಶಿ :ಚಾಪಲನೇತ್ರೆ ಚೌತಿದಿನದಿ ಕೆರೆ- ದೀಪವೆಂದೆನುತ ಭಕ್ತರು ಮುದದಿ ಶ್ರೀಪರಮಾತ್ಮ ವಿಲಾಸದಿ ಭಕ್ತ- ರಾಪೇಕ್ಷೆಗಳನು ಸಲ್ಲಿಸುವಂದದಿ8 ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ- ಸ್ತೋಮ ಜೇನುಂಡೆ ಬಿರುಸು ಮಿಗಿಲು ವ್ಯೋಮಕೇಶಗಳ ಪೊಗಳತೀರದು ಸರಿ ಭೂಮಿಯೊಳ್ ಕಾಣೆನೆಂಬಂತಾದುದು9 ಅಮಮ ಇದೇನೆ ಇಂದಿನ ಲೀಲೆ ಜನ- ರಮರಿಕೊಂಡಿಹರೇನಿದು ಬಾಲೆ ಸಮವಿಲ್ಲ ಇಂತೀ ವೈಭೋಗಕ್ಕೆಲೆ ನ- ಮ್ಮಮರಾವತಿಗಿಂತಧಿಕ ಬಾಲೆ10 ಊರ್ವಶಿ : ಸಾರ್ಥಕಾಗುವದು ಜನ್ಮವು ಕಾಣೆ ಸಕ- ಲಾರ್ತಿ ಹರಣವಾಗ್ವದು ಜಾಣೆ ಕೀರ್ತಿತರಂಗಮಾಗಿಹುದೇನೆ ಶೇಷ- ತೀರ್ಥವೆಂದರೆ ಕೇಳಿದು ಪ್ರವೀಣೆ11 ರಂಭೆ : ಏಸು ದೊಡ್ಡಿತೆ ಕೇಳಲೆ ಬಾಲೆ ಅನಂ- ತಾಸನದಂತೆ ಮರೆವುದಲ್ಲೇ ನಾಸಿರ ದೀಪಸೋಪಾನದಲೆ ಮಹಾ- ಶೇಷನಿಹನು ಮಧ್ಯದೊಳಿಲ್ಲೇ12 ಊರ್ವಶಿ : ಕರುಣಾಕರನು ನಮ್ಮೆಲ್ಲರನು ನಿತ್ಯ ಪೊರೆಯಲೋಸುಗ ಬಂದನು ತಾನು ಸುರುಚಿರ ಮಂಟಪವೇರಿದನು ಭೂ- ಸುರರಿಂದ ವೇದಘೋಷವ ಕೇಳ್ವನು13 ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮ ಸೃಷ್ಟಿಗೆ ಪೊಸತಾಗಿಹುದು ಕಾಣೆ ಕಟ್ಟಿಸಿದವನು ಪುಣ್ಯೋತ್ತಮನು ಪರ- ಮೇಷ್ಠಿ ಜನಕನ ಕೃಪೆಯಿನ್ನೇನು14 ಭಜಕರ ಮುಖದಿಂದೆಲ್ಲ ತಾನು ಭೂ- ಭುಜನಾಗಿ ನಡೆಸುವನಿದನೆಲ್ಲನು ನಿತ್ಯ ಸಾಕಾರವನು ತೋರಿ ತ್ರಿಜಗವನೆಲ್ಲ ರಕ್ಷಿಸುತಿಹನು15 ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ- ದೊಡೆಯ ಪೊರಡುವ ಕಾಲದಿ ಭಾರಿ ಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥ ಕಡು ಬೆಡಗನು ಉಸುರೆಲೆ ಬಾಲೆ16 ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮ ತನುವಿಗೆ ಸೋಂಕಲದನೆಲ್ಲವ ಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ- ಧ್ವನಿಯೆಸಗಿದರು ಕೇಳಿದರಂದವ17 ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು- ಬರುವನು ವೇದನಿನಾದದಲಿ ವರರತ್ನ ಖಚಿತ ಮಂಟಪದಲ್ಲಿ ನಿಂತ ನಿರವದಿ ಸುಖದಾಯಕನಲ್ಲಿ18 ಶರಣರ ಪಾಪ ಮನಕೆ ತಾರ ದುಡಿದ ವರ ಭೇರಿಗೆರೆವ ಬಿಸಿನೀರ ವರಲಕ್ಷ್ಮೀನಾರಾಯಣಧೀರ ಸುರು- ಚಿರ ಸಿಂಹಾಸನವೇರಿದ ವೀರ19
--------------
ತುಪಾಕಿ ವೆಂಕಟರಮಣಾಚಾರ್ಯ
ಚ್ಚಂದಿರವದನೆ ಶಾರದೆ ಪ ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ ಅ.ಪ. ಸಿತಾಬ್ಜಾಸನೆ ಸುಖದಾಯಕಿ ಸುರ ನಾಥಾರಾಧಿತೆ ವಿಶ್ವನಾಯಕೀ ವೀತದುರಿತೆ ಶಿವ ಮಾತೆ ಸದ್ಗುಣಮಣಿ ವಾಗ್ದೇವಿ ಮಾತೆ 1 ಕೋಕಿಲವಾಣಿ ಕವಿಸೇವಿತೆ ಎನ್ನ ವಾಕು ಲಾಲಿಸೆ ಮನಿವಂದಿತೆ ತೋಕನೆಂದು ಸುವಿವೇಕ ಬುದ್ಧಿಯನಿತ್ತು ವಾಕು ಮನ್ನಿಸು ತಾಯೆ 2 ಪಾತಕಿಗಳೊಡನಾಡಿ ನಾ ನಿನ್ನ ಪೋತಾಬ್ಜಪದ ಭಜಿಸದ್ಹೋದೆ ನಾ ಪಾತಕವೆಣಿಸದೆ ಸೀತಾರಮಣ ಜಗ ನ್ನಾಥವಿಠ್ಠಲನಘ್ರಿ ಗೀತಾಮೃತವನುಣಿಸು 3
--------------
ಜಗನ್ನಾಥದಾಸರು
ಛಲಾವ್ಯಾಕೊ ನಿನಗೆ ಎನ್ನಲಿ ಪ ಛಲಾವ್ಯಾಕೊ ಕೋಲಾಚಲವೇಂಕಟ ಫಲಾ ನೀಡಿ ನೀ ಭಲಾನೆನಿಸೊ ದೇವಾ ಅ.ಪ ಧರಾತಳದಿ ಭೂಧರಾಗ್ರಮಂದಿರ ಪರಾವರೇಶನೆ ದರಾರಿಕರಶೂರ 1 ರಮಾವರನೆ ತವ ಸಮಾನರಾಗಿಹ ಸುಮಾನಸಾರ್ಕರ ಕ್ಷಮಾತಳದಿ ಕಾಣೆ 2 ಕುಲಾಲಕೃತ ಮೃತ್ ಕಲಾಪಧರಮಹಾ ಉಲಾಯುಗಾತ್ಮಜ ಬಲಾರಿಸುತಸುಖ 3 ಶತ್ರುಬವರದೊಳು ವೃತ್ರಾರಿತನಯನ ಮಿತ್ರಾನ ತೋರಿ ಪೊರೆದ್ಯೊ ಶತ್ರುಹನನದೇವ 4 ತಕ್ಷಣದಲಿ ಸಾಸಿರಾಕ್ಷ ತನಯನ ಪೊರೆದಿ 5 ಭರ್ಮಾನಸ್ತ್ರದ ನಿಜ ಮರ್ಮವರಿತು ನೀ ಧರ್ಮಾಪೌತ್ರನ ಕಾಯ್ದಿ ಸುಧರ್ಮನಾಮಕ ನಿನಗೆ 6 ದಶಾಸ್ಯ ಮುಖಮಹನಿಶಾಚರೇಶರ ದಶಾಕಳದ ಮಹಾ ದಶಾವತಾರನೆ 7 ವಟಾದ ಎಲೆಸಂಪುಟಾದಲೊರಗುಂ - ಗುಟಾವ ನುಂಬುವ ದಿಟಾ ವಿಶ್ವೋದರ 8 ದಾತಾ ಗುರುಜಗನ್ನಾಥ ವಿಠಲ ನಿಜ ದೂತಾಪಾಲಕನೆಂದು ಖ್ಯಾತಾನಾಗಿಹ ನಿನಗೆ 9
--------------
ಗುರುಜಗನ್ನಾಥದಾಸರು
ಜಗಕೆ ಶಾಂತಿಯನೀವ ಜಗನ್ನಾಥನೇ | ನಿನ್ನ ಬಗೆಯರಿತ ಸುಜನರಿಗೆ ಕ್ಲೇಶವಿನ್ನುಂಟೇ ಪ. ನಾನಾ ಇಂದ್ರಿಯಗಳಿಗೆÀ ನೀನೇ ಪ್ರೇರಕನಾಗಿ ನಾನಾ ವಿಧ ಸುಖದುಃಖ ತಗಲಿಸುತ ಮನಕೇ ಜ್ಞಾನವಂತರ ಹೃದಯ ವಾಸನಾಗಿರುತಿರ್ದು ಮಾನಿತರ ಬಳಲಿಸುವ ಕಾರಣವದೇನೈ 1 ಭೂಸುರÀರ ಮನಕ್ಲೇಶ ನಾಶಗೈಸುತ ಸತತ ಪೋಷಿಸೆಲೊ ಸ್ವಾಮಿ ಸಂತೋಷವಿತ್ತು ನಾಶರಹಿತನೆ ಭಕ್ತರಾಶೆ ಪೂರೈಪ ಗುಣ ರಾಶಿ ನಿನ್ಹೊರತಿಲ್ಲ ಅಬುಜಜಾಂಡದೊಳೂ2 ಮನಕೆ ಶಾಂತಿಯ ನೀಡೋ ಮಾಧವನೆ ಮಮತೆಯಲಿ ಮನದ ಅಭಿಮಾನಿಗಂತರ್ಯಾಮಿ ಸ್ವಾಮಿ ಚಿನುಮಯನೆ ಗೋಪಾಲಕೃಷ್ಣವಿಠ್ಠಲ ಪ್ರೇಮಿ ಘನ ಗುರುಗಳಂತರ್ಯಾಮಿಯೆ ಮಧ್ವನಾಥಾ3
--------------
ಅಂಬಾಬಾಯಿ
ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ಪ ಭಗವಂತನೆಂಬ ಆಗಸದಲಿ ಪಸರಿಸಿದಅ.ಪ. ಚತುರಾಸ್ಯ ವಾಣಿ ಈರ್ವರು ಬೀಜ ಚಿತ್ಪ್ರ ಕೃತಿ ಪೃಥವಿ ಕರ್ಮವು ಬೇರು ತ್ರಿಗುಣತ್ವ - ವು ಕ್ಷಿತಿ ಜಲಾನಲ ವಾಯು ಗಗನ ಶಾಖೆಗಳಿಂದಕೆ ಶತಕಿರಣ ಉಪಕೊಂಬೆಯೆನಿಸಿ ಕೊಂಬವು ಇದಕೆ 1 ಅಹಂಕಾರ ಬಲದಿಂದ ಅಭಿವೃದ್ಧಿ ಐದುವುದು ಕುಸುಮ ತನ್ಮಾತ್ರ ರಸದಿ ಸಹಿತವಾರ ಪ್ರವೃತ್ತಿ ನಿವೃತ್ತಿ ಕರ್ಮಫಲ ಅಹರಹರ್ ಭುಂಜಿಪವು ತನ್ನಾಮ ಜೀವಖಗ 2 ನಾನು ನನ್ನದು ಎಂಬ ನೀಡ ದ್ವಯಗಳಿದಕೆ ಹೀನ ವಿದ್ಯಾದಿ ಪಂಚಕವೆ ಸರ್ಪಗಳಲ್ಲಿ ಶ್ರೀನಿಧಿ ಜಗನ್ನಾಥವಿಠಲ ಸಂರಕ್ಷಕನು 3
--------------
ಜಗನ್ನಾಥದಾಸರು
ಜಗನ್ನಾಥ ಸಮುದ್ರ ತೀರದಿ ಜಗನ್ನಾಥ ಸಮಗ್ರ ಸೇವೆಯ ಕೊಡುವಾತ ಪ ಸಮರ್ಥ ಫಲ್ಗುಣ ರಥಸೂತ ಸಮಸ್ತಲೋಕವ ಪೊರೆವಾತ ಅ.ಪ ಬಲಭದ್ರಾನುಜೆಯರನೊಡವೆರಸಿ ಜಲನಿಧಿ ಮಧ್ಯದಿ ದ್ರೋಣದಿಂದಿಳಿಸಿ ಒಲಿದು ವೈಕುಂಠಕೆ ಅವದಿರ ಕಳಿಸಿ ಸಲೆ ನಿಂದೆಯಾ ಜಗನ್ನಾಥನೆಂದೆನಿಸಿ 1 ಪಾಂಡವರಕ್ಷಕ ನೀಲಾಂಗಾ ಪುಂಡರೀಕಾಂಬಕಾ ಮದನಾಂಗಾ ಅಂಡಜವಾಹನ ರಿಪುಮದಭಂಗ ಕಂಡೆ ನಿನ್ನನಾ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಗನ್ನಾಥದಾಸರ ಸ್ತೋತ್ರ ಅಂಬುಜಾಕ್ಷಿ ಸ್ತಂಭದಿಹನ್ಯಾರೇ - ಸಾರೇ ಪ ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ - ನೀರೇ ಅ.ಪ ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ 1 ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ 2 ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ - ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ 3
--------------
ಕಮಲಪತಿವಿಠ್ಠಲರು