ಒಟ್ಟು 334 ಕಡೆಗಳಲ್ಲಿ , 51 ದಾಸರು , 284 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಪನ್ನಗಶಯನ ಪ ಚೆನ್ನ ಪಾದಂಗಳಲಿ ಚಿನ್ನದಾ ಕಡಗರುಳಿಹನ್ನೆರಡು ನಿರುಗೆಗಳ ಹೊನ್ನ ಪೀತಾಂಬರಕೆರನ್ನಮಯದೊಡ್ಯಾಣವನ್ನು ಸುತ್ತಿದ ನಡುವುಚನ್ನ ಪದಗಳ ಮುಟ್ಟುವನ್ನಕ್ಕ ವನಮಾಲೆ 1 ನನ್ನೀಯಿಂದೆಸೆವ ಕಂಪನ್ನ ಕೌಸ್ತುಭದೆದೆಯುಕನ್ನಿಕೆಯು ಲಕ್ಷುಮಿಯ ಚಿಹ್ನ ಧರಿಸಿದ ವಕ್ಷಘನ್ನ ಚಕ್ಕರ ಶಂಖ ಸನ್ನೆ ಕೌಮೋದಕಿಯುಕನ್ನೈದಿಲೆಯ ವಿಡಿದ ಇನ್ನಂತು ನಾಲ್ಕೈಯು 2 ಪನ್ನೀರು ಬೆರೆತು ಬಾವನ್ನ ಕಂಪಿನ ಮೈಯುಬೆನ್ನಗಲ ಹೆಗಲು ದುಂಡನ್ನ ತೊಳಗುವ ಕೊರಳುಕನ್ನವುರ ಕುಂಡಲಂಗಳನ್ನು ಧರಿಸಿದ ಕಿವಿಯುಜೊನ್ನ ಪಸರಿಪ ನಗೆಯ ಮನ್ನಿಸುವ ಕೆಂದುಟಿಯು 3 ಮುನ್ನೂರು ಕೋಟಿ ರವಿ ಸನ್ನಿಭದ ಚೆಲ್ವ ಮೊಗಕನ್ನೀಲ ಕಣ್ಣು ಚಂದನ್ನ ಎಳಸಿನ ಮೂಗುಉನ್ನತದ ಹಣೆಮೇಲೆ ಸೊನ್ನಿ ಕತ್ತುರಿ ತಿಲಕಸೊನ್ನ ಮುಕುಟವ ಧರಿಸಲಿನ್ನುಳಿದ ಕರಿಗುರುಳು 4 ಮಾನವ ನಾನು ಇನ್ನೆಂತು ಬಣ್ಣಿಸುವೆನಿನ್ನ ಕೃಪೆಯಿಲ್ಲದಿದನೆನ್ನಲಪ್ಪುದೆ ದೇವಚನ್ನ ಗದುಗಿನ ವೀರನಾರಾಯಣನೆ ಮಣಿವೆ 5
--------------
ವೀರನಾರಾಯಣ
ಇಂದು ಭಕ್ತರು ಬಂದರೆಂದು ಗೋವಿಂದ ತಾ ನಲೆದಾಡಿದ ಗೋಪಾಲ ತಾ ನಲೆದಾಡಿದ ಪ. ಹರಿಯು ಆಡಿದ ಮಾತು ದೊರೆ ಧರ್ಮನು ಕೇಳಿಕರುಣಾಳು ನಿಮ್ಮ ಕೃಪೆಯಿಂದ ಕರುಣಾಳು ನಿಮ್ಮ ಕೃಪೆಯಿಂದಪರಮ ಆಶೀರ್ವಾದ ಇರಲುಂಟು1 ಮುತ್ತಿನ ಮಂಚದ ಹತ್ತಿಲೆ ಸಾಲಾಗಿಮತ್ತ ಪಾಂಡವರು ಕುಳಿತರುಮತ್ತ ಪಾಂಡವರು ಕುಳಿತರು ಹರುಷದಿಭಕ್ತವತ್ಸಲನ ಮುಖನೋಡಿ 2 ಹಸಿರು ಪಚ್ಚವ ಬಿಗಿದ ಕುಸುರು ಸಿಂಹಾಸನದೇಶಕೆಲ್ಲ ಬೆಳಕು ಎಸೆಯುತದೇಶಕೆಲ್ಲ ಬೆಳಕು ಎಸೆವೊ ಸಿಂಹಾಸನದಿವಸುಧಿಪಾಲಕರು ಕುಳಿತರು 3 ಇಂದ್ರಾದಿಗಳು ಮುನಿವೃಂದ ಸಹಿತಾಗಿ ಬಂದು ಒಂದೆ ಮನದಲೆ ಕುಳಿತರು ಒಂದೆ ಮನದಲೆ ಕುಳಿತರು ದೇವಕಿನಂದನ ನೋಡಿ ಹರುಷಾಗಿ 4 ರನ್ನ ಮಾಣಿಕ ಬಿಗಿದ ಹೊನ್ನಮಂಚಕೆಹೊಂದಿ ಕನಿ ಸುಭದ್ರೆ ದ್ರೌಪದಿಕನಿ ಸುಭದ್ರೆ ದ್ರೌಪದಿ ಕುಳಿತರುಚನ್ನ ಕೃಷ್ಣಯ್ಯನ ಮುಖನೋಡಿ5 ಚಿತ್ರ ವಿಚಿತ್ರದ ರತ್ನಗಂಬಳಿ ಮ್ಯಾಲೆಪುತ್ರರ ಸಹಿತ ಹರುಷದಿಪುತ್ರರ ಸಹಿತ ಹರುಷದಿ ಕುಳಿತರು ಭಕ್ತವತ್ಸಲನ ಮುಖ ನೋಡಿ 6 ಸಾಲು ದೀವಿಗೆಯಂತೆ ಬಾಲೆಯರುಕುಳಿತಾರೆ ಬಾಲರ ಸಹಿತ ಹರುಷದಿಬಾಲರ ಸಹಿತ ಹರುಷದಿ ರುಕ್ಮಿಣಿ ನಿಂತಿಹಳು ಲೋಲ ರಾಮೇಶನ ಮುಖನೋಡಿ7
--------------
ಗಲಗಲಿಅವ್ವನವರು
ಇಂದು ಶೇಖರ ರಕ್ಷಿಸೋ ಎನ್ನ ತಂದೆ ಶಂಕರ ಹಿಂದೆ ಪೊಂದಿದ ದೇಹದ ಮತ್ತಿಂದು ಹಿಡಿಯುತ ಪ ಹಿಂದೆ ಬಿಸುಟೊಡಲು ಮರು ಕೊಳಿಸಿ ಸಾರಿ ಬಂದುದು ತಂದೆ ತಾಯಿಯ ಗಣನೆ ಉರ್ವಿಸಿಕವನು ಮೀರಿತು ಅಂದು ಮೊದಲು ಜನನೀಸ್ತನವನುಂಡು ಪಾಲಸವಿದುದು ಇಂದು ಕಂದು ಗೊರಳನೆ 1 ಕಾಲ ಬಾಲವನಿತೆ ಬಾಳು ಬದುಕಿನೊಳಗೆ ತೊಳಲಿ ಬಳಲಲು ಕಾಯದೊಳಗೆ ಮುಸುಕಲು ಕೊಳುವೋದೆ ಯಮಗೆ ಶೂಲ ಪಾಣಿ ನೀಲಕಂಠನೆ 2 ಎನ್ನದಾನದೆಂಬ ಹಮ್ಮವಶದಿ ಸುಮ್ಮನೆ ಹೊನ್ನು ಹೆಣ್ಣು ಮಣ್ಣು ಮೂರು ತನ್ನದೆಂದು ನಂಬುತ ಬನ್ನ ಬಟ್ಟು ಸಾಯುತ ಭವದಶರಧಿ ಬೇಗೆಯನ್ನು ಈಸಲಾರೆನೋ 3 ಸಿಂಧು ತೆರೆಯೊಳು ಮಂದ ಗಜವು ಕುಣಿಯೋಳ್ ಬಿದ್ದು ಏಳಲಾರದಂದದಿ ಇಂದ್ರಜಾಲದೊಳಗೆ ಸಿಲುಕಿಮಂದಗೆಟ್ಟು ನೊಂದೆನೋ 4 ದುರಿತ ಮರಣ ಕಾಲದೊಳಗೆ ನಾಮಸ್ಮರಣೆ ಯಾದಗುವಂದದಿ ತರಣಿ ತಮವ ಕಡಿಸಿ ಧರೆಯ ಬೆಳಗುವಂತೆ ಹೃದಯದಿ ಕರುಣದಿಂದಲಿ ನಿರುತಸಲಹೋ ಇಕ್ಕೆರಿ ಅಘೋರೇಶಲಿಂಗನೆ 5
--------------
ಕವಿ ಪರಮದೇವದಾಸರು
ಇದು ಹೊನ್ನು ಹೂವುಗಳ ತಾರತಮ್ಯ ಪ ಇದು ಬಾಹ್ಯ ಅದು ಅಂತರಂಗಿಗೆ ರಮ್ಯ ಅ.ಪ ಹೊನ್ನಿನಿಂದಾಗುವುದು ಹೂವಿನಿಂದಾಗುವುದು ಹೊನ್ನು ಹೂವೆರಡಯ್ಯ ಬಣ್ಣ ಒಂದೇ ಹೊನ್ನು ಹೂವೆರಡಕ್ಕು ಬಣ್ಣ ಒಂದಾಗವೋ ನಿನ್ನ ಕೃಪೆಯೆಂಬ ರೇಕುಗಳಾಗಬೇಕೋ 1 ಹೊನ್ನು ಭೂಲೋಕಕ್ಕೆ ಹೂವು ಪರಲೋಕಕ್ಕೆ ಹೊನ್ನಿನಾ ಹೂವುಗಳು ಇಹಪರಕೆ ದಾನ ಹೊನ್ನುಳ್ಳವರಿಗೆಲ್ಲ ಹೂ ಹೊನ್ನುವಿಲ್ಲ ತಾನಿಲ್ಲ ಹೊನ್ನ ಹೊರುವುದಸಾಧ್ಯ 2 ಹೊನ್ನ ಕಾವುದಸಾಧ್ಯ | ಹೊನ್ನುಳ್ಳ ನರರಿಗೆ [ಮ] ಗಳಿಲ್ಲ ಹೊನ್ನುಳ್ಳ ಮನುಜ ಪಾತಕಗಳನು ಕಲಿಯುವ ಹೊನ್ನಿಲ್ಲದಾತರಿಗೆ ಹೂವೊಂದು ದೊರಕಿದೊಡೆ ಅನ್ನ ನಿದ್ರಾ ಪಾನ ಸೌಖ್ಯಂಗಳುಂಟಯ್ಯ 3 [ಹೊನ್ನುಳ್ಳವಸದಾ ಹೊನ್ನಿ ನೊಡನೆಕಲ್ಳ್ವೆ] ಹೊನ್ನಿಲ್ಲದಾತ ಶ್ರೀರಾಮಕೃಷ್ಣರ ಕಲೆವ ಹೊನ್ನಿಂದ ಬೆಣ್ಣೆತಾಂ ಸುಣ್ಣವೆನಿಪುದು ಜಗದಿ ಹೊನ್ನಿಲ್ಲದಾತಂಗೆ ಸುಣ್ಣವೇ ಬೆಣ್ಣೆ 4 ಹೊನ್ನಕೇಳನು ನಮ್ಮ ಮಾಂಗಿರಿಪುರವಾಸ ಹೊನ್ನಿಂಗೆ ಬದಲು ಭಕ್ತಿಯಹೂವ ಕೇಳ್ವುದು ಹೊನ್ನ ದಾನವಮಾಡಿ ಹೂವ ಹರಿಗರ್ಪಿಸಿರಿ ಇನ್ನಾವ ವರಗಳನ್ನು ಬೇಡ ಬೇಡಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇದ್ದಿದ್ದೊಮ್ಮೆ ಇಂಥಾ ಕಷ್ಟ ಏನು ತಂದ್ಯೋ ಹರಿಯೆ ಪೊರೆಯಬೇಕೆಂದು ನುತಿಸುವವಗೆ ಪ ಮಧ್ಯಾಹ್ನಕ್ಕೆ ಮನೆಯ ಒಳಗೆ ಮುದ್ದಿಗೆ ಗತಿಯಿಲ್ಲಾ ವಿದ್ಯಾರ್ಥಿಗಳು ಇಷ್ಟರು ಬಂದರೆ ಇಷ್ಟೂ ಅನ್ನವಿಲ್ಲಾ ಎಂದು ಹೋಗುವೆನು ಎಲ್ಲಿಗೇನೆಂದರೆ ಎಲ್ಲಿ ಏನಿಲ್ಲಾ ಬದ್ಧ ಕಂಕಣವ ಕಟ್ಟಿಕೊಂಡು ನಿನ್ನ ಪಾದವೆ ಗತಿ ಯೆಂದಿರುವೆ ಇಷ್ಟು 1 ಭಿಕ್ಷಕೆ ಬಂದವರಿಗೆ ನೀಡಲು ಹಿಡಿ ಭತ್ತಕೆ ನೆಲೆಯಿಲ್ಲಾ ಕುಕ್ಷುಂಬರರಾಗಿ ಗೃಹಕೆ ಬಂದವರಿಗೆ ಕೂಳಿಗೆ ಗತಿಯಿಲ್ಲಾ ತುಚ್ಛ ಕುಬುದ್ಧಿ ತುಂಟರ ಕೂಡ ಉಪೇಕ್ಷೆ ಮಾಡ್ವರಲ್ಲಾ ಲಕ್ಷ್ಮೀರಮಣ ಶ್ರೀ ರಘುಕುಲ ತಿಲಕ ನೀ ರಕ್ಷಕನೆಂದಾ ಪೇಕ್ಷೆಯಲಿರುವನಿಗೆ 2 ಅತಿಥಿ ಆಭ್ಯಾಗತರು ಬಂದರೆ ಪೂಜಿಸೊ ಅಧಿಕಾರವು ಇಲ್ಲ ಸುತರು ಹಿತರು ಕೂಡುಂಬುವ ಸಂತತ ಸುಖವು ಕಾಣಲಿಲ್ಲ ಹಿತವರುದಾರಿಲ್ಲ ಪತಿ 'ಹೊನ್ನೆ ವಿಠ್ಠಲ’ ಪರಮ ಪುರುಷ ಕೃಷ್ಣಾ 3
--------------
ಹೆನ್ನೆರಂಗದಾಸರು
ಇಂದ್ರಮಾಣಿಕ ಬಿಗಿದ ಹೊಸ ಕುಂದಣದಾರತಿನೆತ್ತಿ ಶಚಿದೇವಿ ಆರತಿನೆತ್ತಿ ಇಂದ್ರಾಧಿಪತಿಯ ಚರಣಕೆ 1 ಹೊನ್ನ ಹರಿವಾಣದಲಿ ಹೊಸ ಕುಂದಣದಾರತಿನೆತ್ತಿ ಸೌಪರ್ಣಿ ಉಮಾದೇವಿ ಉಮಾದೇವಿ ಆರತಿನೆತ್ತಿ ಬ್ರಹ್ಮಾಂಡ ಒಡೆದ ಚರಣಕೆ 2 ಇಂತು ಹಯವದನನ ಎಂತು ನಾ ಪೊಗಳುವೆ ಸಂತೋಷದಿಂದ ಸುರರೆಲ್ಲ ಸುರರೆಲ್ಲ ಪಾಡಿದರು ಕಾಂತೇರಿಗೆಲ್ಲಾತನುವೆಂದು(?) 3
--------------
ವಾದಿರಾಜ
ಇಂದ್ರರೊ ದೇವೇಂದ್ರರೊಚಂದ್ರನಂತೆ ಹೊಳೆಯುತ ಬಂದರೈವರು ಪ. ರಾಮ ಪಾಂಡವರಿಗೆ ಕ್ಷೇಮಾಲಿಂಗನಕೊಟ್ಟುಪ್ರೇಮದಿ ಕೈಯ ಹಿಡಿದನುಪ್ರೇಮದಿ ಕೈ ಹಿಡಿದು ಮಾತಾಡಿದಸ್ವಾಮಿ ಸನ್ನಿಧಿಗೆ ಬರಬೇಕು 1 ನೊಸಲಲ್ಲೆ ಕಸ್ತೂರಿ ಎಸೆವುತ ಸಂಪಿಗೆಕುಸುಮದ ಮಾಲೆ ಅಲವುತ ಕುಸುಮದ ಮಾಲೆ ಅಲವುತ ಪ್ರದ್ಯುಮ್ನವಸುಧಿಪಾಲಕರ ಕರೆದನು2 ದುಂಡು ಮುತ್ತುಗಳಿಟ್ಟು ಪೆಂಡೆ ಸರ ಹಾಕಿಪುಂಡರೀಕಾಕ್ಷ ಕುಳಿತಿದ್ದಪುಂಡರೀಕಾಕ್ಷ ಕುಳಿತಿದ್ದ ಚರಣಕ್ಕೆಪಾಂಡವರು ಬಂದು ಎರಗಿದರು3 ರನ್ನ ಮಾಣಿಕ ಬಿಗಿದ ಹೊನ್ನ ಮಂಚದ ಮೇಲೆ ಪನ್ನಂಗಶಯನ ಕುಳಿತಿದ್ದಪನ್ನಂಗಶಯನ ಕುಳಿತಿದ್ದ ಚರಣಕ್ಕೆಸುಭದ್ರೆ ಬಂದು ಎರಗಿದಳು 4 ಮಿಂಚಿನಂತೆ ಹೊಳೆಯುತ ಪಂಚಬಾಣನಪಿತ ಮಂಚದ ಮೇಲೆ ಕುಳಿತಿದ್ದಮಂಚದ ಮೇಲೆ ಕುಳಿತಿದ್ದ ಚರಣಕ್ಕೆಪಾಂಚಾಲೆ ಬಂದು ಎರಗಿದಳು5 ಸೂಸು ಮಲ್ಲಿಗೆ ಹೂವ ಹಾಸಿದ ಮಂಚದಿವಾಸುಕಿಶಯನ ಕುಳಿತಿದ್ದವಾಸುಕಿಶಯನ ಕುಳಿತಿದ್ದ ಚರಣಕ್ಕೆಆಶೇಷ ಜನರೆಲ್ಲ ಎರಗಿದರು6 ಸ್ವಾಮಿ ರಾಮೇಶನು ಕ್ಷೇಮ ಕುಶಲವ ಕೇಳಿಬ್ರಾಹ್ಮಣರ ದಯವು ನಿಮಗುಂಟು ಬ್ರಾಹ್ಮಣರ ದಯವು ನಿಮಗುಂಟು ಎನುತಲೆಸ್ವಾಮಿ ಶ್ರೀಕೃಷ್ಣ ನುಡಿದನು7
--------------
ಗಲಗಲಿಅವ್ವನವರು
ಇಷ್ಟೇಕೆ ಎನ್ನ ಮೇಲೆ ಈ ಸಿಟ್ಟು ಹರಿಯೆ ಸೃಷ್ಟಿಗೆ ನೀ ಕರ್ತನಾಗಿ ಶ್ರೀನಿವಾಸಧೊರಿಯೆ ಪ ಇನ್ಯಾರು ಹರಿ ಎನಗಿನ್ನು ಈ ಜಗದೊಳಗೆ ಎನ್ನ ದೂರು ಯಾರಿಗೆ ಮೊರೆಯಿಡಲಿ ಎನಗೆ ಮನ್ನಿಸಿ ದಯಮಾಡಿ ಸುಮತಿಯ ನೀ ತಂದು ಕೈಯನ್ನೇ ಹಿಡಿದು ಇನ್ನು ಈಗ ರಕ್ಷಿಸದಲೆ 1 ಸಕಲ ಜೀವ ರಕ್ಷಕÀನು ಸಾಧುಜನ ಪೋ- ಷಕನು ಸಕಲ ಲೋಕಗಳೆಲ್ಲ ಸಲಹುತಿಹನೊ ಅಕಳಂಕ ಮಹಿಮ ಶ್ರೀ ಆದಿದೇವರ ದೇವ ಭಕುತ ವತ್ಸಲನೆಂಬ ಬಿರುದು ನಿನ್ನಲ್ಲಿ 2 ಇಂದು ಮಾಡಿದ ಪಾಪಗಳು ಇಂದು ಪರಿಹಾರ ಮಾಡಿ ಎನ್ನ ಮುಂದೆ ಧನ್ಯನ ಮಾಡಿ ಮುಕ್ತಾನಂತೆನಿಸಿ ತಂದೆ ' ಹೊನ್ನಯ ವಿಠಲ’ ದಯಮಾಡಿ ಸಲಹದಲೆ 3
--------------
ಹೆನ್ನೆರಂಗದಾಸರು
ಉತ್ಸವದಲಾಹ್ನಿಕವ ಕಡು ಜನರು ಕೇಳಿರಯ್ಯ ಪ. ಅರುಣ ಉದಯದೊಳೆದ್ದು ಆ ದ್ವಾರಪಾಲಕರುಭರದೆ ಘಂಟೆ ಸುವಿಘ್ನ ಮಾಡೆತರತರದ ಹರಿದಾಸರು ತಾಳ ಮೇಳಗಳಿಂದಪರಿಪರಿಯ ಗಾನ ಪಾಡೆ ತ್ವರಿತ ವಾದ್ಯಗಳಿಂದ ತರುವಾಯ ಭೋರಿಡೆ ಮುರಹರನುಪ್ಪವಡಿಸೆತರುಣ ಯತಿಗಳು ಎದ್ದು ಸ್ನಾನ ಜಪಗಳ ಮಾಡಿನಿರುತ ಶಂಖ ಭ್ರಮಣೆ ಮಾಡೆ ನೀಟಾಗಿಒಪ್ಪುತಿಹ ಉಡುಪಿಯ ಶ್ರೀಕೃಷ್ಣನ 1 ಘೃತ ನೆನೆಕಡಲೆಯುಶುದ್ಧಾದ ಪಾಲ್ಮೊಸರು ಶುಂಠಿ ಸಕ್ಕರೆಲಡ್ಡಿಗೆತಂದ ನೈವೇದ್ಯವ ಸವಿದು ತಾ ಪೂಜೆ ಮಾಡಿಸಿಕೊಂಬ 2 ಪದ್ಮನಾಭಗೆ ಬೇಗ ಪುರುಷಸೂಕ್ತದಭಿಷೇಕಮುದದಿಂದ ಮಾಡಿದ ಬಳಿಕವಿಧಿಯ ಪೂರ್ವಕವಾಗಿ ಅಗಿಲು ಗಂಧ ತುಲಸಿಮಾಲೆಅಧಿಕವಾಗಿ ಸಮರ್ಪಿಸಿ ಒದಗಿದ್ದ ಶುಂಠಿ ಬೆಲ್ಲ ಒಳಿತಾದ ಅನ್ನ ಸೂಪದಧಿ ಕ್ಷೀರ ಕದಳಿಫಲವು ಮುರಮರ್ದನನುಚೆಲುವ ತಾ ಹಂಸಪೂಜೆಯ ಕೊಂಬ ತದನಂತರದಲಿ ಮೃತ್ತಿಕೆಯ ತಾ ಗಣಿಯಕಟ್ಟಿಸಿಕೊಂಬ 3 ದಧಿ ದಿವ್ಯ ಮಧು ಸಕ್ಕರೆ ಸೀಯಾಳವು ಇಂ-ದಿರೇಶಗೆ ಬೇಗ ಶಿರದ ಮೇಲ-ಭಿಷೇಕ ಮುದದಿಂದ ಮಾಡಿದ ಬಳಿಕತಿರುಗಿ ನೈವೇದ್ಯವನು ತೀವ್ರದಿಂದಲೆ ಸ-ಮರ್ಪಿಸಿ ಚೆಲುವ ಮಂಗಳಾರತಿಯಿಂದಪಂಚಾಮೃತದ ಪೂಜೆಗೊಂಬ 4 ಜಲಜನಾಭಗೆ ಉಷ್ಣಜಲವ ತಂದ್ಹದ ಮಾಡಿಲಲಿತವಾಗಿ ಎರೆಯುತಒಳಿತಾದ ಹೆಸರ್ಹಿಟ್ಟಿನಲಿ ಒರೆಸಿ ಮೈಯನೆತೊಳೆದು ಸುಲಭಗೆ ಪಾಲನುಣಿಸಿ ಬಳಿಕಬಾಲಉಡಿಗೆಯಿಟ್ಟು ಬಹುನೈವೇದ್ಯವನರ್ಪಿಸಿಚೆಲುವ ಉದ್ವಾರ್ಚನೆ ಪೂಜೆಚೆಂದಾಗಿ ಮಾಡಿಸಿಕೊಂಬ 5 ಮಧ್ವ ಸರೋವರಜಲವು ಹೊಳೆವÀ ಚಿನ್ನ ಕಲಶÀದಲಿಶುದ್ಧದಲಿ ಶೋಧಿಸಿ ತುಂಬಿಸಿಬದ್ಧ ಘಂಟೆನಾದದಲಿ ಬಹುಬೇಗದಲಿಬಂದು ಸನ್ನಿಧಿಯಲಿ ಪೂಜಿಸಿವಿಧುರಥನೆ ಶಂಕರಥನೆ ಪುರುಷಸೂಕ್ತÀದಭಿಷೇಕಮುದದಿಂದ ಮಾಡಿದ ಬಳಿಕ ಸಜ್ಜಿ ಘೃತದೋಸೆ ಬೆಣ್ಣೆ ಸಾರು ನೈವೇದ್ಯವ ಸವಿದು ಚೆಲುವಮಂಗಳಾರತಿಯಿಂದ ಮುದದಿ ತೀರ್ಥಪೂಜೆಗೊಂಬ 6 ಉರು ಪದಕಾಭರಂಣಗಳು ಉನ್ನಂತತೋಳ್ಬಂದಿಕರಮುದ್ರೆ ಕಂಕಣಗಳು ಚರಣಾರವಿಂದಗಳಿಗೆ ಚಾರುಚಿನ್ನದ್ಹಾವಿಗೆಕಿರುಗೆಜ್ಜೆ ಕಾಲಲಂದುಗೆವರ ಪೀತಾಂಬರ ಕಟಿಗೆ ವಡ್ಯಾಣ ನೇವಳ ಇಟ್ಟುನಿರುತ ಸುವರ್ಣದ ಕವಚವುಕೊರಳ ಕೌಸ್ತುಭಹಾರ ಕೋಮಲ ಸುವರ್ಣಕುಂಡಲಸಿರಿಮೂರುತಿ ಸಣ್ಣ ನಾಮ ಶಿರದ ಜಾವಳ ಜಡೆ ಕಡಗೋಲು ನೇಣುಸಹಿತ7 ದಧಿ ಶುಂಠಿ ನಿಂಬೆರಸ ತಕ್ರಜಗದೇಕ ಸವಿದ ಪರಿಯ 8 ಬಗೆಬಗೆಯ ಮಂಗಳಾರತಿ ಬಾರಿಬಾರಿಗೆ ಮಾಡಿ ಚಾ-ಮರ ದರ್ಪಣಗಳೆಸೆಯೆ ನಗೆಮುಖದ ಕೃಷ್ಣ-ನಂಘ್ರಿಗೆ ಷೋಡಶ ಪೂಜೆಯ ಮಾಡಿಮುಗಿಸಿ ಗುರುರಾಯ ಬರಲುಹನುಮಂತದೇವರಿಗೆ ಹಸನಾದ ಭಕ್ಷ್ಯಭೋಜ್ಯಅನುದಿನದಲರ್ಪಿಸಿ ಪೂಜಿಸಿಮುನಿ ಮಧ್ವರಾಯರಿಗೆ ಮುದದಿಂದಲರ್ಪಿಸಿ9 ಅರಳು ಆರಚ್ಚು ಬೆಲ್ಲವುಆ ಕಾಲದಲರ್ಪಿಸಿ ಪೂಜಿಸಿ ಕರಣದಲಿ ನೋಡಿ ನಗುವ 10 ಪುಟ್ಟ ಕೃಷ್ಣರಾಯರಿಗೆ ಹೊನ್ನ ಕವಚವ ತೊಡಿಸಿಇಟ್ಟ ರನ್ನದ ಕಿರೀಟವುದಿಟ್ಟಾದ ಪದಕಂಗಳು ದಿವ್ಯಮುತ್ತಿನ ಸರಕಟ್ಟಿದ್ದ ಪೂಮಾಲೆ ಎಸೆಯೆಶ್ರೇಷ್ಠವಾದ ಧೂಪದೀಪ ಶ್ರೀಪತಿಗೆ ದೋಸೆ ಬೆಣ್ಣೆಗಟ್ಟುರುಳಿ ನೈವೇದ್ಯವು ಕಟಕಟನೆಶುಂಠೀಕಷಾಯುಂಡು ಬಾಯಿ ತೊಳೆದುತಟ್ಟನೆ ರಾತ್ರಿ ಪೂಜೆಯಗೊಂಡು ತಾ ಪಲ್ಲಕ್ಕಿಯೇರಿ ಬರುವ11 ಅರಳು ಬಹುಕೊಬರಿ ಚೂರುಗಳು ಆ ಕಾಲದಲಿ ಸೂಸಿ ಪೂಜಿಸೆ ಕರುಣದಲಿ ನೋಡಿ ನಗುವ 12 ಧೀರನಿಗೆ ಚತುರ್ವೇದ ದಿವ್ಯಶಾಸ್ತ್ರಪುರಾಣ ಚೆಲುವಗಷ್ಟಕ ಗೀತವುಭೇರಿಮೌಳಿ ಮೌಳಿವಾದ್ಯಮೌಳಿಮೌಳಿ ಚಕ್ರವಾದ್ಯತಾರತಮ್ಯದ ಸರ್ವವಾದ್ಯಗಳೆಸೆಯೆತಾರಿ ಸೇವೆಯ ಮಾಡಿ ಸ್ವಾಮಿ ವೀಳ್ಯ ಮಂತ್ರಾಕ್ಷತೆ ಕಾರುಣ್ಯದಲಿಬೆರೆಸಿ ಮಾರಜನಕಗೆ ಏಕಾಂತ ಸೇವೆಯ ಮಾಡಿ ನವಮಾರಜನಕನ ಹಂಪೂಜೆಯ ಜಾಗ್ರತೆಯಲಿ ನೋಡಿ ನಗುವ 13 ಹಡಗಿನಿಂದಲಿ ಬಂದು ಕಡಲ ತಡಿಯಲಿ ನಿಂದುಬಿಡದೆ ಯತಿಗಳ ಕೈಯ ಬಿಂಕದಿ ಪೂಜೆಗೊಂಬಆದಿ ಕೃಷ್ಣನ ಆಹ್ನಿಕವನು ಆಧಾರದಲಿಓದಿವಿನೋದದಲಿ ಪಠಿಪ ಜನರಿಗೆಆಧಿವ್ಯಾಧಿಗಳಟ್ಟಿ ಬಹು ಭಾಗ್ಯಗಳ ಕೊಡುವಮಾಧವನ ಕೃಪೆಯಿಂದಲಿವಾದಿರಾಜರಿಗೊಲಿದು ವಚನ ಶುದ್ಧೋಕ್ತದಲಿ ಹೇಳುವ ಜನರಿಗೆಬರುವ ದುರಿತವ ಕಳೆದು ಮೇಲಾಗಿ ರಕ್ಷಿಸಿಕೊಂಬ ಹಯವದನ 14
--------------
ವಾದಿರಾಜ
ಉದ್ದಾಳಿಕನ ಕಥೆ ಪಾಶಾಂಕುಶ ಧರನೆ ಕರಿಣಿಸೊ ಮತಿಯ 1 ಮಾನಿನಿಕುಲಕೆ ಕಟ್ಟಾಣಿ ಕರುಣಿಸೆ ಮತಿಯ2 ಮನೋಹರನೆ ನಿಜಮತಿಯ 3 ಅಂಬರ ಮೇಲಾದಷ್ಟದಿಕ್ಪಾಲಕರು ಪುಣ್ಯಕಥೆಯ 4 ಓಣ್ಯೊಳು ಚೆಲ್ಲಿದ ಅಣಿ ಮುತ್ತಾರಿಸಿ ನೂಲಿಗೆ ಪೋಣಿಸಿದಂತೆ ಯೋಗಿಗಳರಸುದ್ದಾಳಿಕನ ಕಥೆಯನು ಹೇಳುವೆ ಚರಿತೆಯ ಮಾಡಿ5 ವೇದವೇದಾಂತ ಪಾರಗನು ಧರ್ಮ ಪತ್ನಿ 6 ಸುತಜನಿಸಿದ ಉದ್ದಾಳಿಕ ಮಾಡಿದ ಕ್ರಮದಿಂದ 7 ಮೌಂಜಿಯ ಕಟ್ಟಿ ನಡೆದರು ಪರಗತಿಗೆ 8 ನಾಲ್ಕು ವೇದಗಳ ಘನತಪವನಕಾಗಿ ನಡೆದ 9 ನಿಂದು ಬೆಳಗುವ ಜ್ಯೋತಿಯಂತೆ ಸಂದವರುವತ್ತು ಸಾವಿರವು 10 ಪಟ್ಟಣದಿ ರಾಜ್ಯವಾಳುವನು 11 ಕನ್ಯಾದಾನವು ಭೂದಾನ ರಾಜ್ಯವಾಳುವನು 12 ಹೆತ್ತ ತಾಯಿ ಮಕ್ಕಳಗಲರೆಂದೆದಿಗು ಬತ್ತದೆ ಕರೆವ ಧೇನುಗಳು ದೇಶದೊಳಗೆ 13 ಪುಣ್ಯಸಾಧನರು ಸಜ್ಜನರು ಧರ್ಮಗಳಾ ದೇಶದೊಳಗೆ 14 ಬಡವರಿಲ್ಲಿ ಚಾರರುಂಟು ದೇಶದೊಳಗೆ 15 ಧರ್ಮವ ನಡೆಸಿ ರಾಜ್ಯವಾಳುವನು 16 ಮಕುಟವೆಂದೆನಿಸಿ ಪಟ್ಟದರಸಿಯಲ್ಲದನ್ಯತ್ರ ನೋಡೇಕ ಪತ್ನಿಯ ವ್ರತವ ನಡೆಸಿದನು17 ಸಂತೋಷದೋರಲು ಹುಟ್ಟಿದಳ್ ಚಂದ್ರಾವತಿಯು 18 ಹೊನ್ನಿನ ರಾಸಿ ಸುವರ್ಣದ ಬೆಟ್ಟವು ಕನ್ಯಾದಾನದ ಹೆಬ್ಬೆಳಸು ಮಾಣಿಕವೆ ಸಂತಾನ 19 ನಡೆಯೋಳು ದಟ್ಟಡಿಯಿಡುತ ಕಡುಲಾಲಿಕೆ ಬಾಲಲೀಲೆ 20 ಬಡವಾದಾಳೆಂದು ಕಡುಹರುಷದಲಿ ಹಿಗ್ಗಿದರು 21 ಅಕ್ಷರಾಭ್ಯಾಸವ ಮಾಡಿಸಿ ಕುಮಾರಿಗೆ ನರ್ತನ ಗೀತವ ಕಲಿಸಿ ಪುತ್ರಿಗಭ್ಯಾಸ ಮಾಡಿಸಿದ 22 ಯೌವನವು ತೋರಿದವು ಆಲಯವನೆ ಕಟ್ಟಿಸಿದ 23 ಪುತ್ರಿಯ ಸೇವೆಗೆ ಇಟ್ಟನೆ ಭೂಪಾಲ ಹತ್ತುಸಾವಿರ ಕೆಳದಿಯರ ಸುತ್ತಲು ಪ್ರಾಕಾರ ಎಸೆದವು ರಕ್ಷೆಗೆ ಇಟ್ಟನೆ ದ್ವಾರಪಾಲಕರ24 ಮುನಿಕೌಶಿಕನು ನೋಡುತಲಿ 25 ಸತ್ಯಲೋಕ ತಪೋಲೋಕವ ಚರಿಸುತ್ತ ಹೊಕ್ಕ[ನೆ] ಯಮ ಲೋಕವನು ಜೀವಿಗಳ ತಾಕಂಡ 26 ತೃಣದ ಮೂಲಾಗ್ರದಿ ನಡುಗುತಿಪ್ಪರ ಕಂಡು ಬ[ಳಿ] ಯಲ್ಲಿ ನಿಂತು ಮಾತಾಡಿ ತಿಳಿದು ಹೇಳುವುದು ಎನ್ನೊಡನೆ 27 ಜಗದೊಳಗೆ ಎಮಗೆ ಪತನಕ್ಕೆ ಬಿದ್ದೆವೆಂದೆನಲು 28 ಕಾಣಿಸುವ ದೌಹಿತ್ರರು ಮುನಿಯು ಕೇಳಿದನು 29 ಹೆಣ್ಣನೊಲ್ಲದೆ ಅರಣ್ಯವ ಚರಿಸುವ ಉನ್ನಂತ ತಪಸೀಲಿದ್ದ ತಿಳಿದು ಹೇಳುವುದು 30 ಪುತ್ರಸಂತಾನವ ಪಡೆದು ವಿಸ್ತಾರವಾಗಿ ಹೇಳುವುದು 31 ಭೋರನಲ್ಲಿಂದ ತೆರಳಿದನಾಗಲೆ ಮುನಿ ಅರಣ್ಯವ ಚರಿಸುತಲೆ ತಪೋವನವ 32 ಕರವಿಡಿದು ಕರೆ ತಂದನಾಗ ಬರವೇನೆಂದು ಕೇಳಿದನು 33 ಯಮ ಲೋಕವನು ಅತ್ಯಂತ ನರಕಕೈದುವರು 34 ಆಲಸÀ್ಯವಿಲ್ಲದೆ ಬೀಳ್ಪರು ಪತನಕ್ಕೆ º
--------------
ಹೆಳವನಕಟ್ಟೆ ಗಿರಿಯಮ್ಮ
ಋಣವ ಮಾಡಿದ ಪಾಪ ರುಜುವಾಗಲೀಸದುಹಣ ಹೊನ್ನಕೊಡೆ ಪುಣ್ಯಹೃದಯರು ಒಲಿದು ಪನಿತ್ಯ ಕರ್ಮವು ತಾನೆ ನಿಂತಿತು ಸೂತಕಸುತ್ತಿಕೊಂಡಿರೆ ಮನಸಿಗೆ ತೀರುವನಕಾ 1ರಾಮಾಯಣ ಪಾರಾಯಣ ನಿಂತಿತೂುೀ ಮಹಾಚಿಂತೆ ತಾನಿದಿರಿಡೆ ಬಲಿತೂ 2ಧನವ ಸಂಗ್ರ'ಸಲು ತಿರಿದುಕೊಂಬವನಲ್ಲಕಣುಗೆಡಿಸಲು ಬಂದ ಕಪಟ'ದಲ್ಲ 3ಪರಲೋಕ ಹಾನಿಯ ಭಯದಿಂದ ಬಂದೆನುಕರ'ಡಿದೆನ್ನನು ಕಾಯಬೇಕಿನ್ನೂ 4ನಿಷ್ಕøತಿುಲ್ಲದ ನೀಚ ಪಾತಕ'ದು'ಷ ಸಹಸ್ರದಿಂ ನಾಶವಾಗುವದು 5ುೀ ದುಃಖವಭಿಮಾನದಿಂ ಬಂದುದಿದನೀಗಬೀದಿಯೊಳರಸುವೆ ಬಿಡುವಂತೆ ಬೇಗ 6ದುಡ್ಡು ದುಗ್ಗಾಣಿಯಾದರು ಸಾಕು ಬೇಗದಿಅಡ್ಡಿಯ ಮಾಡದಪ್ಪಣೆಗೊಡಿ ದಯದಿ 7ಬೇಳುವೆಯನು ಮಾಡಿ ಬೆದರಿಸುವವನಲ್ಲಶ್ರೀಲಕ್ಷ್ಮೀಪತಿ ಬಲ್ಲ ಸದ್ಗುರು ಬಲ್ಲ8ಕಾಶಿಗೆ ಹೋಗಬೇಕಾಗಿದೆ ುೀ ಕೊಳೆನಾಶವಾಗದೆ ಗಂಗೆ ನನಗೆ ತೋರುವಳೆ 9ನೀಕರಿಸುವರಿಂದ ನಿರ್ವೇದ ದೊರಕಿತು ಹಾಳಾದುದುುೀ ಕಲುಷವದೆಂದಿಗಳಿವದೊ ತೊಳದು 10ಚಿಕ್ಕನಾಗಪುರದಿ ವಾಸುದೇವಾರ್ಯಗುರುಪಕ್ಕನಪ್ಪಣೆಯ ಕೊಟ್ಟ ಕಾರಣ ಬಂದೆ 11
--------------
ತಿಮ್ಮಪ್ಪದಾಸರು
ಎಚ್ಚರಿಕೆಚ್ಚರಿಕೆ ಮನವೆ ಇನ್ನು | ಎಚ್ಚರಿಕೆಚ್ಚರಿಕೆ ಯಮನ ಪುರದ ಬಾಧೆ ಪ ಕಿಚ್ಚನಾದರು ಕೇಳಿ ದುಶ್ಚಿಂತನ ಬಿಡು ಅ.ಪ ಗಂಡ ಅತ್ತೆ ಮಾವ ಮೈದುನರ ಬೈವರ | ಖಂಡ ತುಂಡನೆ ಮಾಡಿ ಖಂಡವ ಕೊಯಿದು | ಕಂಡದೊಳಗೆ ಬೇಯ್ಸಿ ದಿಂಡುಗೆಡಹಿ ಕಟ್ಟಿ | ಮಂಡೆಯ ಒಡೆದು ಡಂಡದಿ ಶಿಕ್ಷಿಸಿ | ಹಿಂಡಿ ಹಿಪ್ಪೆಯ ಮಾಡಿ ಕೊಂಡೊಯ್ದು ಅಗ್ನಿಯ ಕುಂಡವ ಹೋಗಿಸುವರೊ-ಎದೆಯ ಮೇಲೆ | ಗುಂಡನೆ ಹೊರಿಸುವರೊ-ಬಾಯೊಳಗೆ | ಕೆಂಡವ ಸುರಿಸುವರೊ-ಕೋಟಿ ಜನ್ಮ ಚಂಡಾಲ ಯೋನಿಯಳಿಟ್ಟು ಬಾಧಿಸುವರೊ 1 ಉತ್ತಮ ಗುರು ಹಿರಿಯರುಗಳ ಬೈವರ | ತಿತ್ತಿಯ ಸುಲಿದು ಕತ್ತರಿಪ ಬಾಚೆಯ ತಂದು | ಕೆತ್ತಿ ಶರೀರಕ್ಕೆ ಹತ್ತೊ ನೀರನೆ ಚೆಲ್ಲಿ | ನೆತ್ತಿಯ ಕೊರೆದು ಖಾರವನೊತ್ತಿ ಹಾವಿನ ಹುತ್ತವ ಹೊಗಿಸಿ ವಿಷವನಿತ್ತು ಕೈ ಕಾಲು | ಕಿತ್ತು ಹೊಟ್ಟೆಯ ಕೊಯ್ವರೊ ಬೊಬ್ಬಿರಿ | ಯುತ್ತುರುಳು ಹಾಕುವರೊ ಬೆನ್ನೊಳಗೇ | ಎತ್ತಿ ಕರುಳ ತೆಗೆವರೊ ದೊಡ್ಡ ಬೆಟ್ಟ | ಹತ್ತಿಸಿ ತಲೆಕೆಳಗಾಗಿ ನೂಕಿಸುವರೊ 2 ಪರಧನ ಪರಸತಿ ಪರನಿಂದೆಗೆಳೆವರ | ಮರುಳುವ ಮರಳಿನೋಳ್ ಹೊರಳಿಸಿ ಅಸ್ಥಿಯ | ಮುರಿದು ಮುಟ್ಟಿಗೆ ಮಾಡಿ ಉರೆದ ಗುಂಡಿಗೆ ಸೀಳಿ | ಜಿಹ್ವೆ ಕೊರೆದು ತೈಲದೊಳಗೆ | ಅರಿವೆಯೆದ್ದಿ ಮೈಗೆ ಉರಿಯ ಸುತ್ತಲಿಕ್ಕೆ | ಉರವಣಿಸು ಕುಣಿಸುವರೊ-ಹೆರೆದಂಬಿಗೆ | ಗುರಿಮಾಡಿ ನಿಲಿಸುವರೊ ಉಕ್ಕಿನ ಕಂಭ | ಕ್ಕೊರಗಿಸಿ ನಿಲಿಸುವರೊ ಶೂಲಕೆ ಹಾಕಿ | ಎರಡು ಕಾಲೆಳೆದು ಕಾವಲಿ ಮೇಲೆ ನಿಲಿಸೀರೊ 3 ಹೆಣ್ಣುಮಾರಿ ಹೊನ್ನು ಕಟ್ಟಿದ ಮನುಜರ | ತುಂಬಿ | ಸುಣ್ಣದೊಳಗೆ ಹೂಳಿ ಜನ್ಮ ಕಳೆದು ಶಿರ | ವಣ್ಣಿಕಲ್ಲನೆ ಆಡಿ ಇನ್ನು ಉಕ್ಕಿನ ಕಾದ- | ಎಣ್ಣೆಯ ಸುರಿದು ನೀರನ್ನೆರದು ನರಮಾಂಸ- | ಉಣ್ಣೆಂದು ತಿನಿಸುವರೊ-ತಿತ್ತಿಯನಿಕ್ಕಿ | ಹಣ್ಣಣ್ಣು ಮಾಡುವರೊ-ಅಸೀಪತ್ರಾ- | ರಣ್ಯವ ಹೊಗಿಸುವರೊ-ಕ್ಷುಧೆಯೆನ್ನೆ | ತುಂಬಿ ಕುಟ್ಟಿ ಮೆಲ್ಲಿಸುವರೊ4 ವಾಸುದೇವನ ವಾಸರದಲ್ಲಿ ಉಂಬರ | ಹಾಸುಗಲ್ಲಿನ ಮೇಲೆ ಬೀಸಿ ಅಪ್ಪಳಿಸಿ ಆ- | ಕಾಶಕ್ಕೊಗೆದು ಖಡ್ಗ ರಾಸಿಯೋಳ್ ಬೀಳಲು | ಕೇಶ ಪಿಡಿದು ಕೆಡಹಿ ಘಾಸಿಸಿ ಬಾಯೊಳು | ತುಂಬಿ | ನಾಸಿಕ ಕೊಯ್ಸುವರೋ-ಕೀಸಿಸಿ ಗೂಟ | ಹೇಸದೆ ಬಡಿಸುವರೊ ಹಂದಿಯಂತೆ | ಈ ಶರೀರ ಸುಡಿಸವರೊ-ತಮಸಿನೊಳು | ಏಸು ಜನ್ಮಕೆ ಗತಿಯಲ್ಲವೆನಿಸುವರೊ 5 ಎಲ್ಲ ಒಂದೇ ಎಂಬ ಪಂಚ ಮಹಾಪಾತಕಿಯ | ಹಲ್ಲನ್ನು ಮುರಿದು ಗಂಟಲ ಶೀಳಿ ಅಂಗುಳಿಗೆ | ಮುಳ್ಳನ್ನು ತಂದೂರಿ ತಪ್ತ ಲೋಹದ ಮೇಲೆ | ಕುಳ್ಳಿರಿಸಿ ಕೊಡಲಿಯೊಳ್ ಎಲ್ಲವನು ಕಡಿದು | ಕೊಲ್ಲ ಬಡಿದು ಅಂಬಿನಲಿ ಚುಚ್ಚಿ ರಕ್ತ- | ಚೆಲ್ಯಾಡಿ ಬಗೆಯುವರೊ-ಉರಿಯ ಕೊಂಡ- | ದಲ್ಲಿ ಮುಳುಗಿಸಿಬಿಡವರೊ-ಹೊತ್ತು ಒಯ್ದು | ಕಲ್ಲುಗಾಣಕೆ ಹಾಕುವರೋ-ಕುಂಭೀಪಾಕ | ದಲ್ಲಿ ಕುದಿಸಿ ಬೇಯ್ಸಿ ಬೆಂಡು ಮಾಡುವರೊ6 ಒಂದು ನೋಡಿದರೊಂದು ಅಧಿಕ ಪಾಪಗಳಿವೇ- ನೆಂದು ಪೇಳಲಿ ಎನಗೊಂದಾದರಳವಲ್ಲ | ಹಿಂದಿನ ದುರ್ವಾರ್ತೆ ಮರೆದು ಮುಂದಾದರು | ನಂದತೀರ್ಥರ ಪಾದಾನಂದದಿ ಭಜಿಸಿ ಪು | ರಂದರನನು ಸರಿಸಿ-ವಿಜಯವಿಠ್ಠಲ | ನ್ಹೊಂದಿ ಪತಿಕರಿಸಿ-ಮುಕ್ತಿ ಮಾರ್ಗ- | ವಿಂದು ಆಶ್ರಿಯಿಸೊ ಗೋವಿಂದನ ಸ್ತುತಿಸಿ | 7
--------------
ವಿಜಯದಾಸ
ಎಂಥಾ-----------ಈಗ ಪಿಡಿಯೊ ಎನ್ನ ಕೈಯ್ಯ ಬೇಗ ಅನಂತಾ ಭಗವಂತಾ ಶ್ರೀಕಾಂತಾ ಜಗದಂತ ....... ಪ ಒಂದೊಂದು ದಿನವು ಎಂಬುದು ಒಂದೊಂದು ಯುಗವು ಆಗಿ ಬೆಂದು ಬಹಳ ಬೇಸರದಿಂದ ತಂದೆ ----------ಬಂದೀ ಕಂದನೆಂದು ಕರುಣದಿಂದ ---------ಗೋವಿಂದ ನಂದ ಮುಕುಂದಾ ಶ್ರೀ ಮಂದರಧರ 1 ಮಕ್ಕಳು ಮರಿಗಳು ಎಲ್ಲಾ ------ಕಾಣದ ದೇವಾ ಶುಷ್ಕ ಭೂತರಾಗಿ ಇನ್ನು ಸುಖವು ಕಾಣದೆ ---ನೆಗೊಂಡು ಬಹಳಘೋರ ನಾ ಬಡುವದು ಕಂಡು ನಿಕ್ಕಾಸಲಾರದೆ ನಿನ್ನ ಮೊರೆಯ ಹೊಕ್ಕ ಕಾಯಯ್ಯ ನೀನೆ --------- ಶ್ರೀ ಲೋಕನಾಯಕ ಹರಿಯೆ 2 ಮನಸು ನಿನ್ನ ಧ್ಯಾನವು ಬಿಟ್ಟು ತಿರಸೂ? ಚಿಂತನೆಗೊಳಗೆ ಆಗಿ ಕನಸಿನಲ್ಲಿ ಕಾಣೋನಿಲ್ಲಾ ಕಾಯದ ಸುಖವೆಂಬಾದಿನ್ನು ಅನಿಮಿತ್ತ ಬಂಧು ಕೃಷ್ಣ ಹರಿ 'ಹೊನ್ನ ವಿಠ್ಠಲ' ರಾಯ ಮನಸಿಜನಯ್ಯ ಮೋಹನ್ನ ನಿಧಾನಾ ಸುರಧೇನು ಸದ್ಗುಣಪೂರ್ಣ 3
--------------
ಹೆನ್ನೆರಂಗದಾಸರು
ಎಂಥಾದರು ಬಂದರು ಚಿಂತೇ ಇಲ್ಲಾ ಪಂಥವು ಸರಿಯಲ್ಲಾ ಪ ಚಿಂತೆ ಎಂದೆಂಬುದೆ ಮನಸಿನ ರೋಗಾ ಸಂತಸ ಸಂತ್ಯಾಗ ಎಂಥೆಂಥ ಮಿಂಚುವ ದೇಹವಿದೀಗ ಕೃಂತನ ವಿಧಿಭಾಗ ಎಂತಲ್ಲಿ ನೆಲೆಸಿ ಹವಣಿತ ರೋಗಾ ಸಂತತ ಜಡ ಬೀಗಾ ನೀ ನೆನ್ನೊ 1 ಹಿತಾಹಿತವೆಂದಿಗೂ ಕೈಶೇರಿಲ್ಲಾ ಕೃತಿಪತಿ ತಾ ಬಲ್ಲಾ ಮತಿಗೆಟ್ಟು ಸತಿಯೇ ಗತಿಯೆಂದೆಲ್ಲಾ ಸುತಮೋಹ ಬಿಡಲಿಲ್ಲಾ ಮಿತಿಮೀರಿ ಪಣ ಭಂಡಾರದೊಳೆಲ್ಲಾ ರತಸುಖರೆ ಡಿಲ್ಲಾ ಕೇಸರಿ ಸುಖಗುರಿ ಮುರಿಯಲು ಧೃತಿಗೆಟ್ಟು ಬಳಲುವ ಸಂಗತಲ್ಯಾರು ತಿಳಿಯೋ 2 ನೀರಿನ ಬುದ್ಬುದ ಪರಿಸಂಸಾರಾ ದುಃಖದ ಆಗಾರಾ ಶ್ರೀರಾಮ ಮಂತ್ರದ ಸಾರಾ ನಿಜ ಸೌಖ್ಯದ ದ್ವಾರಾ ಶೇರಿ ಹಣ ಹೊನ್ನು ಹೆಂಣ ವಿಚಾರಾ ಗಂಜಾಸಮ ತಾರಾ ನಿಜಸುಖವನು ಪಡೆಯೇ 3
--------------
ನರಸಿಂಹವಿಠಲರು
ಎದೆ ಒಡೆದು ಏಕೆ ನೀ ಹೆದರುತಿ ಮನವೆ ಪಾದ ಭಜನೆ ಹೃದಯದಲಿರೆ ಪ ಅಖಿಲ ಜನಗಳ ಪೊರೆವ ಹರಿಯು ಕರ್ತನಾಗಿರಲು ಸಕಲ ಜಗಬೋಧಗುರು ಸನ್ನಿಧಿ ಇರಲೂ ಸಕಲ ಬ್ರಹ್ಮಾದಿ ದೇವತೆ ಬಂಧು ಬಳಗಿರಲು ನಿಖಿರವಿಲ್ಲದೆ ಚಿತ್ತ ನೀನು ಈ ಪರಿಯಿಂದಾ 1 ಮುದದಿಂದ ಶ್ರೀ ಲಕ್ಷ್ಮೀ ಮಹಾತಾಯಿ ತಾ ----- -----ದಮಲ ಜ್ಞಾನಿಗಳ ಸಂಬಂಧ ವಿರಲೂ ಕುದುರೆಯಂದದಿ ಮನಸು ಕ್ರೂರರಾರ್ವರಕೂಡಿ ಒದರಿ ಪರಿಪರಿಯಲ್ಲಿ ಚಿಂತೆಯೊಳಗಾಗಿ 2 ಪರಮಾತ್ಮ ಪರಬ್ರಹ್ಮ ಪರಲೋಕ ಬಾಂಧವನು ಪರಿಪರಿಯ ಷೋಷಿಸುವ ಭಾರಕನು ಇರಲು ಅರಿತು ನೀ ಚನ್ನಾಗಿ ಹರಿ ಹೊನ್ನ ವಿಠ್ಠಲನ ಸ್ಮರಣೆಯಲಿ ನಿರುತ ಇರೆ ಸಕಲ ಸಂಭ್ರಮವು 3
--------------
ಹೆನ್ನೆರಂಗದಾಸರು