ಒಟ್ಟು 59 ಕಡೆಗಳಲ್ಲಿ , 28 ದಾಸರು , 58 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಸನ್ನ ಶ್ರೀ ವರಾಹ ಆದಿವರಾಹ ಸಾರ ಆದರದಿ ಶರಣಾದೆ ಭೂದರ ವರಾಹನೇ ವಿಧಿ ಶ್ರಧ್ಧೇಶ ವಂದ್ಯ ಬದರಶೇಖರ ಮುಖ ಸುರವಿನುತ ವಾಂಛಿತದ ಮೋದಚಿನ್ಮಯ ಭೂವರಾಹ ಯಜÉ್ಞೀಶ ಪ ಅದ್ವಿತೀಯನು ನೀನೇ ಪದುಮಜಾಂಡದ ಒಡೆಯ ಪದುಮಭವನೊಳಿದ್ದು ಭುವನಗಳ ಸೃಜಿಸಿ ಕೃತಿ ನಡೆಸುತ್ತ ಒದಗುವಿ ಸುಖಜ್ಞಾನ ಬಲಪೂರ್ಣ ಹರಿಯೇ 1 ಅಂದು ಸ್ವಾಯಂಭುವ ಮನು ವೇನಗರ್ಭನಲಿ ಬಂದು ನಮಿಸಿ ಭಿನ್ನಹವ ಮಾಡೆ ವಿಧಿ ಹೇಳಿದ ಜನಾದರ್Àನ ಯಜ್ಞಪರಮಾತ್ಮ ಶ್ರೀದ ಭದ್ರದ ಈಜ್ಯ ಪೂಜ್ಯ ನೀನೇ ಎಂದು 2 ಸ್ವಾಯಂಭುವ ಸಾಮ್ರಾಟ್ ಪೇಳಿದ ಮಹಾ ಈ ಭೂಮಿ ಇರುವುದು ಉದ್ಧರಿಸಿ ಸ್ಥಾನವ ತನ್ ಪ್ರಜೆಗಳಿಗೆ ಒದಗಿಸಬೇಕು ಎಂದ 3 ಇರುವುದಕೆ ಸ್ಥಳ ಪ್ರಜೆಗಳಿಗೆ ಒದಗಿಸಲು ಪರಮೇಷ್ಟಿರಾಯ ತನ್ನ ಹೃದ್ ವನಜದಿ ಸುಪ್ರಕಾಶಿಪ ಪರಮ ಪೂರುಷ ನಿನ್ನನ್ನು ಪರಮಾದರದಲ್ಲಿ ಧ್ಯಾನಿಸಿದನು 4 ಮಹಿಶಿರಿಕಾಂತ ನಿನ್ನನು ಧ್ಯಾನಿಸುತಲಿದ್ದ ಬ್ರಹ್ಮನ ಮೂಗಿಂದ ಹರಿ ಅನಘ ನೀನು ವರಾಹ ಮರಿ ಅಂಗುಷ್ಟ ಮಾತ್ರ ಪ್ರಮಾಣದಿ ಬಹಿರ್ಗತನು ಆದಿಯೋ ಚಿದಾನಂದರೂಪ 5 ಒಂದೇ ಕ್ಷಣದಿ ಗಜಮಾತ್ರ ವರ್ಧಿಸಿದಿಯೋ ಅದ್ಭುತ ಈ ರೂಪ ಕಂಡು ಅಲ್ಲಿ ಇದ್ದ ಮರೀಚಿ ಪ್ರಮುಖ ವಿಪ್ರರು ಮನು ಮೊದಲಾದವರು ಬಹು ಬೆರಗಾದರಾಗ 6 ಸೂಕರ ರೂಪ ಕಂಡಿಲ್ಲ ಎಲ್ಲೂನು ಇದು ಮಹಾಶ್ಚರ್ಯ ಗಂಡ ಶಿಲಾವೋಲ್ ಕ್ಷಣ ಮಾತ್ರದಲಿ ಚಂಡ ಈ ಕ್ರೋಡವು ದೊಡ್ಡದಾಗಿಹುದು 7 ಸೂಕರ ರೂಪವ ನೋಡುತ್ತ ಮುನಿಗಳು ತರ್ಕಿಸಿ ಮೀಮಾಂಸ ಮಾಡೆ ಅನಿಮಿತ್ತಬಂಧು ಹರಿ ಒಲಿದು ಬಂದಿರುವಿ ಎಂದು ವನಜಸಂಭವ ಸಂತೋಷ ಹೊಂದಿದನು 8 ಮಹಾವರಾಹ ರೂಪನೇ ವಿಭೋ ನೀನು ಮಹಾಧ್ವನಿಯಲಿ ಗರ್ಜಿಸಿದಿ ಆಗ ಆ ಹೂಂಕಾರವು ದಿಕ್ಕು ವಿದಿಕ್ಕುಗಳ ಮಹಾಂಬರವ ತುಂಬಿತು ಪ್ರತಿಧ್ವನಿಯಿಂದ9 ಅಪ್ರತಿ ಮಹಾಮಹಿಮ ಉರುಪರಾಕ್ರಮ ನೀನು0 ಅಂಬುಧಿಯೊಳು ಲೀಲೆಯಿಂದಲಿ ಪೊಕ್ಕು ಸುಪವಿತ್ರತಮ ನಿನ್ನ ದಂಷ್ಟ್ರದ ಮೇಲಿಟ್ಟುಕೊಂಡು ಕ್ಷಿಪ್ರದಲಿ ನೀರಮೇಲ್ ತಂದಿ ಭೂಮಿಯನು 10 ನೀರೊಳಗಡೆ ತಡೆದ ಆದಿದೈತ್ಯನ ಕೊಂದು ನೀರಮೇಲ್ ಇರಿಸಿದಿ ಭೂಮಿಯ ಎತ್ತಿ ಸರಸಿಜೋದ್ಭವ ಮುಖ್ಯಸುರಮುನಿ ವೃಂದವು ಕರಮುಗಿದು ಸ್ತುತಿಸಿದರÀು ಕೃತಜ್ಞ ಭಕ್ತಿಯಲಿ 11 ಎಂದು ಜಯಷೋಷವ ಮಾಡಿ ಮುದದಿ ಸುತಪೋನಿಧಿಗಳು ಸ್ತುತಿಸಿ ನಮಿಸಿದರು ವೇದವೇದ್ಯನೇ ಸೂಕರರೂಪ ನಿನ್ನನ್ನ 12 ಅಖಿಳ ಮಂತ್ರದೇವತಾ ದ್ರವ್ಯಾಯ ಸರ್ವಕೃತವೇ ಕ್ರಿಯಾತ್ಮನೇ ವೈರಾಗ್ಯ ಭಕ್ತ್ಯಾತ್ಮಜಯಾನುಭಾವಿತ ಜ್ಞಾನಾಯ ವಿದ್ಯಾ ಗುರುವೇ ನಮೋ ನಮಃ13 ಈ ರೀತಿ ಇನ್ನೂ ಬಹುವಾಗಿ ಸ್ತುತಿಸಿದರು ಹರಿ ವರಾಹನೇ ಭೂದರ ಧರೋದ್ಧಾರ ನರಸುರರು ಶುಚಿಯಿಂ ಪಠಿಸಿ ಎಲ್ಲರೂ ಕೇಳೆ ಸುಪ್ರಸನ್ನನು ಆಗಿ ಭದ್ರÀವನು ಈವಿ 14 ಅನತೇಷ್ಟಪ್ರದ ಭೂವರಾಹ ಹಯಗ್ರೀವ ಶ್ರೀಶ ನರಸಿಂಹ ವಿಧಿತಾತ ನಮಸ್ತುಭ್ಯಂ ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ 15 -ಇತಿ ಪ್ರಥಮ ಅಧ್ಯಾಯ ಪೂರ್ಣಂ - ದ್ವಿತೀಯ ಅಧ್ಯಾಯ ಹಿರಣ್ಯಾಕ್ಷ ಸಂಹಾರ ಆದರದಿ ಶರಣಾದೆ ಭೂದರ ವರಾಹನೇ ವಿಧಿ ಶ್ರದ್ಧೇಶ ವಂದ್ಯ ಬದರಶೇಖರ ಮುಖ ಸುವಿನುತ ವಾಂಛಿತದ ಮೋದ ಚಿನ್ಮಯ ಭೂವರಾಹ ಯಜÉ್ಞೀಶ À ಜ್ಞಾನಸುಖ ಭೂಮಾದಿ ಗುಣಪೂರ್ಣ ನಿರ್ದೋಷ ಪೂರ್ಣಬಲ ಹರಿ ಯಜ್ಞಮೂರುತಿ ವರಾಹ ಹನನ ಮಾಡಿ ಆದಿದೈತ್ಯನ ನೀರಿಂದ ಕ್ಷೋಣಿಯ ನಿನ್ ದಂಷ್ಟ್ರ ಮೇಲಿಟ್ಟು ತಂದಿ 1 ಭೂಮಿ ಉದ್ಧರಿಸಲು ಮಾತ್ರವಲ್ಲದೇ ಆ ಹೇಮಾಕ್ಷ ಅಸುರನ್ನ ಸಂಹಾರ ಮಾಡೆ ನೀ ಮಹಾಕ್ರೋಡರೂಪವÀ ಪ್ರಕಟಿಸಿದಿ ವಿಭೋ ಅಪ್ರಾಕೃತ ಚಿನ್ಮಯ ವಪುಷ 2 ಏಕದಾ ಬ್ರಹ್ಮನ ಸುತರು ಸನಕಾದಿಗಳು ಏಕಾತ್ಮ ಶ್ರೀ ವಿಷ್ಣುಲೋಕಕ್ಕೆ ಬರಲು ದಿಗ್ವಾಸಸ ಶಿಶುರೂಪ ಆ ಮುನಿವರರ ಲೆಕ್ಕಿಸದೆ ತಡೆದರು ದ್ವಾರಪಾಲಕರು 3 ಜಯವಿಜಯರೆಂಬುವ ಆ ದ್ವಾರಪಾಲಕರಿಗೆ ಮಾಯೇಶ ಹರಿ ಪ್ರಿಯತರ ಮುನಿಶ್ರೇಷ್ಠರು ಈಯಲು ಶಾಪವ ಆ ವಿಷ್ಣು ಪಾರ್ಷದರು ದೈತ್ಯಜನ್ಮವ ಹೊಂದಿದರು ಪತನವಾಗಿ 4 ಪತಿ ಕಶ್ಯಪ ಮುನಿ ಅಹ್ನೀಕದಲಿ ಇರಲು ದಿತಿ ದೇವಿ ಬಂದು ಅಪತ್ಯಕಾಮದಲಿ ಸಂಧ್ಯಾಕಾಲದಿ ಇಚ್ಛಿಸಿ ನಿರ್ಬಂಧಿಸಿ ವಿಧಿ ವಿರುದ್ಧದಲಿ 5 ಸುತಪೋನಿಧಿ ಕಶ್ಯಪ ತೇಜೋಲ್ಬಣದಿ ದಿತಿದೇವಿ ಜಠರದಲಿ ವಿಷ್ಣುಪಾರ್ಶದರು ಪತಿತ ಆ ಜಯವಿಜಯರು ಪ್ರವೇಶಿಸಿದರು ಆ ಆದಿದೈತ್ಯನು ಸಹ ಮೊದಲೇ ಅಲ್ಲಿ ಹೊಕ್ಕಿದ್ದ 6 ಅಬ್ಧಿಯಿಂ ನೀ ಭೂಮಿ ಎತ್ತೆ ತಡೆದು ಹತ - ನಾದ ಆ ದೈತ್ಯನು ಅಬ್ಜದೋದ್ಭವನು ಶ್ರೀದ ನಿನ್ ಪಾರ್ಶದನು ಆವಿಷ್ಟನಾದ 7 ಆದಿ ಹೇಮಾಕ್ಷನೊಳು ವಿಷ್ಣು ದ್ವಾರಪ ವಿಜಯ ದಿತಿದೇವಿ ಅವರ ಸುತ ಹಿರಣ್ಯಾಕ್ಷನೆಂದು ಉದಿಸಿದನು ಅಣ್ಣ ಜಯ ಹಿರಣ್ಯಕಶಿಪು ಸಹ ಅತಿಪರಾಕ್ರಮಯುತನು ಲೋಕಕಂಟಕನು 8 ಗದೆ ಹಿಡಿದು ಹಿರಣ್ಯಾಕ್ಷ ದಿಗ್ವಿಜಯ ಮಾಡಿ ಭೀತಿ ಪಡಿಸಿದ ದೇವತಾ ಜನರನ್ನೆಲ್ಲ ಅತಿಬಲಯುತನಿವ ಧರೆಯ ಸೆಳಕೊಂಡು ಉದಧಿಯೊಳು ಹೊಕ್ಕನು ಆರ್ಭಟಮಾಡುತ್ತ 9 ಸುರರು ನಿನ್ನಲಿ ಮೊರೆ ಇಡಲು ವರಾಹ ಹರಿ ನೀನು ನೀರೊಳು ಲೀಲೆಯಿಂದಲಿ ಪೊಕ್ಕು ಆ ದೈತ್ಯ ಹಿರಣ್ಯಾಕ್ಷನ ಸಹ ಯುದ್ದ ಮಾಡಿದಿಯೋ 10 ಸುರವೃಂದ ಕ್ಷೇಮಾರ್ಥ ಪದುಮಜ ಪ್ರಾರ್ಥಿಸಲು ಕರದಿಂದ ಹೊಡೆದು ಆ ದೈತ್ಯನ ಕೊಂದು ಧರೆಯನುದ್ಧರಿಸಿ ನೀ ಮೇಲೆತ್ತಿ ತಂದಿಯೋ ಉರುಪರಾಕ್ರಮ ಭಕ್ತವತ್ಸಲ ಕೃಪಾಳೋ 11 ವರಾಹ ಹರಿ ನಿನ್ನ ಕೃತಜ್ಞ ಮನದಿ ಸನ್ನಮಿಸಿ ಸ್ತುತಿಸಿದರು ಉದಾರ ವಿಕ್ರಮ ಹಿರಣ್ಯಾಕ್ಷನ್ನ ನೀನು ಕೊಂದ ನಿನ್ನಯ ಕ್ರೀಡಾ ವರ್ಣಿಸಲಶಕ್ಯ 12 ಕಮಲಾರಮಣ ಶ್ವೇತವರಾಹ ಮೂರುತಿ ನಮೋ ಶಾಮಚಾರ್ವಾಂಗ ನಮೋ ಭೂವರಾಹ ಬ್ರಹ್ಮ ಪವಮಾನರಿಂದಲಿ ಸದಾ ಪೂಜ್ಯನೇ ಸ್ವಾಮಿ ಕರುಣಾಂಬುಧಿಯೇ ಶರಣು ಮಾಂಪಾಹಿ 13 ಕೂರ್ಮ ಕ್ರೋಢ ನರಸಿಂಹ ವಾಮನ ರೇಣುಕಾದೇವಿಯ ಸುತ ರಾಮಚಂದ್ರ ಬುದ್ಧ ಕಲ್ಕಿ ವ್ಯಾಸ ಹಯಗ್ರೀವ ಆನಮಿಪೆ ಅವನೀಶ ಭೂ ಶ್ರೀಶ ಪಾಹಿ 14 ವರಾಹ ನಮೋ ಸದಾನಂದಮಯ ಜಗಜ್ಜ£್ಮÁದಿ ಕರ್ತ ನಿರ್ದೋಷ ಗುಣಪೂರ್ಣ ಅನಿಷ್ಟ ಪರಿಹರಿಸಿ ವರ್ಧಿಸುವಿ ದಯದಿ 15 ಶ್ಯಾಮ ಅರಿಶಂಖಧರ ಅಭಯ ಸದ್ವರಹಸ್ತ ಭೂಮಿಧರ ಸರ್ವವಾಂಛಿತ ಸಿದ್ಧಿದಾತ ಭೂಮ ನಿರ್ಮಲ ಕೋಲ ರೂಪ ಸರ್ವೋತ್ತಮನೇ ಮನ್ಮನದಿ ಸರ್ವದಾ ಹೊಳೆಯೋ ಕರುಣಾಳು 16 ಗುರು ಗುರೋರ್ಗುರು ಗುರೋರ್ಗುರುವಿನ ಗುರು ಶ್ರೀ ರಾಘವೇಂದ್ರ ಗುರುರಾಜ ಲಾತವ್ಯ ಋಜುವರ್ಯ ಮಧ್ವ ವಾರಿಜಾಸನ ಸರ್ವಹೃದ್ವನಜ ಅಂತಸ್ಥ ವರಾಹ ನಮೋ ಶರಣು 17 ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸ ಅನತೇಷ್ಟಪ್ರದ ಭೂವರಾಹ ಹಯಗ್ರೀವ ಶ್ರೀಶ ನರಸಿಂಹ ವಿಧಿತಾತ ನಮಸ್ತುಭ್ಯಂ ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ 18 -ಇತಿ ದ್ವಿತೀಯ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ ಪ. ಬಂದೆ ಬಂದೆ ಗೋವಿಂದ ಗೋವಳ ಬಾಂಧವ ಭಕ್ತವತ್ಸಲಇಂದಿರೇಶ ಶ್ರೀ ವೆಂಕಟ ನಿನ್ನ ಸಂದರುಶದಕೆ ಸಾಗಿ ನಾನಿಲ್ಲಿ ಅ.ಪ. ನಡೆದು ನಡೆಸುತ ನುಡಿದು ನುಡಿಸುತಅಡಿಗಡಿಗೆ ಕಾಪಾಡುತಒಡನೆ ಆಡುತ ಬಿಡದೆ ಕ್ಷಣವನುಸಡಗರದಿ ಕರೆತರಲು ನಾನಿಲ್ಲಿ 1 ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರಗುಪ್ತ ಗುಣಗಣಪೂರ್ಣನೆಪ್ರಾಪ್ತ ನೀನೆನಗಾಗಬೇಕೆಂದುವ್ಯಾಪ್ತಿ ನಿನ್ನದು ಹುಡುಕುತಲಿ ನಾ2 ಒಂದು ರೂಪದಿ ನಿಂದು ಎನ್ನಲ್ಲಿಚೆಂದದಿಂ ಕರೆತಂದೆ ಇಲ್ಲಿಒಂದರಿಯೆ ನಿನ್ನ ವಂದಿಸುವ ಬಗೆಬಂದೊದಗೊ ನೀನೆನ್ನ ವದನಕೆ 3 ಬಂದೆ ಬಂದೆ ನೀ ಬಂದಂತೆ ಕರ-ತಂದುದಕೆ ಫಲ ನೀನೆ ಬಲ್ಲೆಸಂದರುಶನ ನಿನಗೆ ನೀ ಮಾಳ್ಪಂದವನು ನೋಳ್ಪಾತುರದಿ ನಾ 4 ಏನು ಕೊಡಲಿಲ್ಲ ಏನು ಬೇಡಲಿಲ್ಲಏನು ಪಡೆಯಲೊ ಕರುಣಿಯೆನೀನು ಕೊಟ್ಟ ಸ್ವಾತಂತ್ರ್ಯದ ಫಲನಿನಗೆ ಅರ್ಪಿಸಬೇಕೆನುತ ಇಲ್ಲಿ 5 ರಕ್ಷಶಿಕ್ಷಕ ಮೋಕ್ಷದಾಯಕಸೂಕ್ಷ್ಮ ಘನ ಮಹಾವ್ಯಾಪಕಕುಕ್ಷಿಯೊಳು ಜಗದ್ಭರಿತ ಪೂರಿತಅಕ್ಷಯಫಲದಾಯಕ 6 ನಮೋ ನಮೋ ನಾಗಾರಿವಾಹನನಮೋ ನಮೋ ಸುರಸುಪ್ರಸನ್ನನೆನಮೋ ನಮೋ ಗೋಪಾಲವಿಠಲನಮಿಪ ಭಕ್ತರ ಸಲಹುವನೆಂದು 7
--------------
ಗೋಪಾಲದಾಸರು
ಬಾರವ್ವ ಮಹÀಭಾಗ್ಯದಭಿಮಾನಿ ಶ್ರೀಹರಿ ನಿಜರಾಣೀ ಪ ಸಾರಿದೆ ನಿನಪಾದನೀರಜಯುಗ ಮನೋ - ವಾರಿಜದಲಿ ನೀ ತೋರುತ ಲಕುಮಿ ಅ.ಪ ಅಖಿಲಾಗಮವಿನುತೆ ಎನ್ನಯ ಮಾತೆ ಸಕಲಸುರಗೀತೆ ನಿಖಿಲಾ ತ್ರಿಜಗದ್ವ್ಯಾಪ್ತೆ ಪ್ರಖ್ಯಾತೆ ಸಂಪತ್ಪ್ರದಾತೇ ನಖಮುಖ ಮಾತ್ರದಿ ವಿಖನಸಆಂಡದ ಅಖಿಲವ್ಯಾಪಾರವ ಸುಖದಲಿ ಮಾಡುವಿ 1 ಇಷ್ಟಾರ್ಥವ ಸಲಿಸಿ ಎನ್ನನು ಪೊರೆಯೇ ಕೊಲ್ಹಾಪುರÀ ಶಿರಿಯೆ ಅಷ್ಟ್ಟದಾರಿದ್ರÀ್ಯಗಳನು ನೀ ತರಿಯೆ ಈ ಕ್ಷಣ ಸುಖಸುರಿಯೇ ಅಷ್ಟಪÀÀದೋದರ ಅಷ್ಟಮೂರ್ತಿನಿನ್ನ ದೃಷ್ಟಿಯಿಂದ ಮಹಶ್ರೇಷ್ಟನಾಗಿಹನೇ 2 ಕ್ಷೀರಾವಾರಿಧಿಯೊಳು ಸಂಜಾತೆ ಮಾರನ್ನ ಮಾತೆ ಅ - ಪಾರಾಮಹಿಮಾಳೆ ಸುರಸನ್ನುತೆ ಜಗದೊಳಗೆ ಖ್ಯಾತೆ ವಾರವಾರಕೆ ದುರಿತಾರಿ ನಿನ್ನಯ ಪೂಜೆ ಚಾರುಮನದಿ ಮಾಳ್ಪೆ ಧೀರೆ ಉದಾರೆ 3 ವಾಸವಾಗೆನ್ನಾ ಮನೆಯೊಳಗಿನ್ನಾ ಪಾಲಿಸೆ ಇದನನ್ನಾ ವಾಸವಾದಿ ಸುರರಾಸೆಯ ಪೂರ್ತಿಸಿ ಈಶರ ಮಾಡಿದಂತೆ ಈ ಸಮಯದಿ ಎನ್ನ 4 ನಗೆಮೊಗ ಚೆನ್ನೆ ಸುಪ್ರಸನ್ನೆ ಸುರನಿಕರರನ್ನೆ ಮಗುವಿನ ಮಾತೆಂದು ನಗುತ ನೀ ಇನ್ನೆ ಬಾ ಬರುವದು ಘನ್ನೆ ನಗಹರ ಸುರಪನ ಮಗನನ ಸಖ ಗುರು ಜಗನ್ನಾಥ ವಿಠಲ ಸಮ್ಮೊಗವಾಗಿ ಬೇಗ ನೀ 5 ಶಿರಿದೇವಿ ನಿನ್ನ ಚರಣ ಸರಸಿಜಯುಗಕೆ ಶಿರದಿ ನಮಿಪೆ ಸತತ ಸರಸಿಜಾಂಬಕೆ ಸರಿಯಾರು ನಿನಗೀ ಸರಸಿಜಭವಾಂಡದೊಳು ಸgಸಿಜಾಕ್ಷಗೆ ದೇಶಕಾಲಗಳಿಂದ ಸರಿಯಾಗಿ ನಿತ್ಯದಲಿ ಪರಿಪರಿಸೇವಾದಿಂದ ಹರಿಯಾ ಮೆಚ್ಚಿಸಿ ಪರಮಾದರದಿಂದ ಪತಿಗನುಕೂಲ - ಪರಳಾಗಿ ಸೃಷ್ಟಿಗೆ ಮೂಲಕಾರಣಳೆನಿಸಿ ಪರಮೇಷ್ಟಿ ಮೊದಲಾದಾನಂತಜೀವರನ್ನ ಅರಿತು ಯೋಗ್ಯಾಯೋಗ್ಯತೆಯನ್ನನು - ಸರಿಸಿ ಸೃಜಿಪ ಶಕ್ತಿ ನಿನಗುಂಟು ನೀ “ಯಂ ಯಂ ಕಾಮಯೆ ತಂ ತಮುಗ್ರಂ ಕೃಣೋಮಿ” ಎಂತ ಶ್ರುತಿ ಸಾರುತಿದೆ ಶಿರಿ ನಿನ್ನ ಕಟಾಕ್ಷದಿ ಸಕಲೈಶ್ವರ್ಯಗಳು ಪರಿಪರಿ ವಿಧದಿಂದ ಒದಗುತಿಪ್ಪವು ಹರಿಕೃಪೆ ನಿನ್ನೊಳಗೆಂತಿಹುದೋ ಅರಿಯಾರು ಎಂದಿಗು ಬೊಮ್ಮಾದಿಸುರರು ನರರೇನು ಬಲ್ಲರಮ್ಮ ನಿನ್ನ ಮಹಿಮೆಯ ಶಿರಿಮಾನಿ ಎನ್ನ ನೀನು ಕರುಣದಿಂದಲಿ ನೋಡಿ ಹರಿಮೂರ್ತಿಯನ್ನೇ ತೋರೆ ಹರಿಣಲೋಚನೆ ಹರಿದಾಸಜನರೊಡೆಯ ಗುರುಜಗನ್ನಾಥವಿಠಲನ್ನ ಇರವು ತೋರಿಸಿ ಎನ್ನ ಪೊರೆಯಮ್ಮ 6
--------------
ಗುರುಜಗನ್ನಾಥದಾಸರು
ಬೋಧ ಸದ್ಗುರು ಜಿತಮದನ ಪ ಬಾದರಾಯಣ ವೈದೇಹಿ ಚರಣಾಬ್ಜಾ ರಾಧಕ ನಮಿಪೆ ಸನ್ಮೋದವಿತ್ತು ಕಾಯೊ ಅ.ಪ. ಶ್ರೀ ಮಧ್ವ ಮತವಾರಿಧಿ ಸೋಮ | ದ್ವಿ ಜ ಸನ್ನುತ ಗುಣಧಾಮಾ ಕಾಮಿತಜನ ಕಲ್ಪಭೂಜ ವಿಬುಧ ಸು ಪ್ರೇಮ ಸಂಯಮಿಕುಲೋದ್ಧಾಮ ದಯಾಂಬುಧೇ ಗೋಮಿನೀವಲ್ಲಭನ ಪದಯುಗ ತಾಮರರಸಗಳನನುದಿನದಿ ಬಿಡ ದೇ ಮನಾಬ್ಜದಿ ಭಜಿಸುತಿಪ್ಪಮ ಹಾ ಮಹಿಮ ತುತಿಸಿಬಲ್ಲನೆ 1 ದೀನಜನರ ಬಂಧು ನಿನ್ನಾ | ಪಾದ ಕಾನೆರಗುವೆ ಸುಪ್ರಸನ್ನಾ ದಾನ ಮಾನಗಳಿಂದ ಜ್ಞಾನಿಜನರಿಗೆ ಮ ಹಾನಂದ ಬಡಿಸುತ ಸಾನುರಾಗದಿ ನಿತ್ಯಾ ಶ್ರೀ ನಿಕೇತನ ಪರಮ ಕಾರು ಣ್ಯ ನಿವಾಸ ಸ್ಥಾನನೆನಿಪ ಮ ಹಾನು ಭಾವ ಭಗವತ್ಪದಾಂಭೋ ಜಾನುಗರೊಳೆನ್ನೆಣಿಸಿ ಪಾಲಿಸು 2 ಸತ್ಯಪ್ರಿಯರ ಕರಕಮಲ | ಜಾತ ನಿತ್ಯ ನಿರ್ಜಿತ ಘೋರ ಶಮಲಾ ಚಿತ್ತಜಪಿತ ಜಗನ್ನಾಥ ವಿಠಲನ ಚಿತ್ತಾನುವರ್ತಿಗಳಾಗಿ ಸಂಚರಿಸುತಾ ಅತ್ಯಧಿಕ ಸಂತೋಷದಲಿ ಪ್ರತ್ಯರ್ಥಿಗಳಿಗುತ್ತರಿಸಿ ಮಿಗೆ ಪುರು ಷೋತ್ತಮನೆ ಪರನೆಂದು ಡಂಗುರ ವೆತ್ತಿ ಹೊಯ್ಸಿ ಕೃತಾರ್ಥನೆನಿಸಿದ 3
--------------
ಜಗನ್ನಾಥದಾಸರು
ಬ್ರಹ್ಮದೇವರ ಸ್ತೋತ್ರ* ಮಟ್ಟತಾಳ ಕಂಬು ವಿಹಂಗ ಗಮನ ವಿಭುವೆನಂಬಿದವರ ಪೊರೆವ ವ್ಯಾಸವಿಠಲ ನೀ-ನೆಂಬುವರನ ನಂಬಿದ ನೀಚನ ಮರಿಯಾದಿರು 2 ತ್ರಿವಿಡಿತಾಳ ಜಿಹ್ವೆ ನುಡಿಯದುಸವಿಯದ ನಾನಾ ರಸವನುಂಡು ಬಹುಕಾಲಸವೆದು ಪೋದವು ನಟ್ಟ ಮನವು ಇನ್ನು ತಿರಗದುತವ ವಿಸ್ಮøತಿಯಲಿಂದ ಭೂ ವನದೊಳಿದ್ದ ಮಾ-ನವರ ಚರಿಯದಲಿ ಕೋಪವೆ ತಗ್ಗದುಎವೆ ಇಡುವಿನಿತು ಕಾಲವಾದರು ಪೂಜಾವಿವರದಲ್ಲಿಗೆ ಚಿತ್ತವು ನಿಲ್ಲದು ಭವವಿದೂರನೆ ಕೇಳುಕವಲ ಬುದ್ಧಿಯಲಿಂದ ನವನವ ರೂಪದ ಯುವತಿಯರನಿವಹದ ಅನುಭವ ದ್ವಿವಿಧವಿಂದಿಗೇ ಕಾ-ಯವ ನೋಡಲಿದ್ದಂತೆ ಇಲ್ಲದಂತೆಧ್ರುವದಲಿ ನುಡಿವೆ ಎನ್ನವಗುಣವಿನ್ನೊಂದುಭವಸಾಗರವ ದಾಟಿಸುವ ಜ್ಞಾನಿಗಳ ಪ್ರೀತಿಯನೆ ತ-ಗ್ಗುವಂತೆ ಚತುರ ತೋರುವೆಇವುಗಳಿಂದಾಗುವ ಜನನ ಬಾಧಿಯ ಬಲ್ಲೆಜೀವರಲ್ಲಿ ಹೀನ ಜನ್ಮವ ಬರುವದು ಬಲ್ಲೆಸ್ಥಾವಿರಾಯ ವ್ಯಾನಾದಿ ನೆಗುವವು ಪುಣ್ಯಾಖ್ಯಗಿರಿಗೆಪವಿಯಂಬದನುಗಾಲ ಪಠಿಸಬಲ್ಲೆಪವನನಂತರ್ಯಾಮಿ ಶ್ರೀವ್ಯಾಸವಿಠಲ ಇಂಥಅವಿವೇಕ ಮನುಜಂಗೆ ಆವಗತಿಯಾಗುವದೊ 3 ಅಟ್ಟತಾಳ ಅನ್ಯಾಯ ನಡತಿಗಳ ಚರಿಸುತಲಿಪ್ಪಮನುಜಾಧಮನಿಗೆ ಮಹಿಯೊಳಗೆ ವಿಪ್ರಜನ್ಮವ ನೀನಿತ್ತದಾವ ಬಗೆಯ ಕಾಣೆಇನ್ನೀಗ ಮಾಡುವ ಅನ್ಯಾಯ ನಡತಿಯುತಣ್ಣನ ಕಿಡಿಯಂತೆ ತತ್ಕಾಲಕಿಪ್ಪದುಘನ್ನ ಬವಣೆ ಮುಂದೆ ಅನುಭವವೇ ನಿಜಪನ್ನಗ ಶಯನ ಶ್ರೀ ವ್ಯಾಸವಿಠ್ಠಲ ಸುಪ್ರಸನ್ನ ವದನ ದೇವ ನಿನ್ನ ಪಾದವೆ ಗತಿ 4 ಆದಿತಾಳ ಪಾದ ಚೆನ್ನಾಗಿ ಪೊಂದಿಸಿನಿನ್ನವನಿವನೆಂದು ಮನುಜರಿಂದ ನುಡಿಸಿನಿನ್ನ ಕೀರ್ತನೆಯ ವದನದಿಂದ ಪೇಳಿಸಿಇನ್ನು ಈ ಬಗೆ ಮಾಳ್ಪರೆ ಘನ್ನದಯಾಂಬುಧೇಮನ್ನ ವಾಚ ಕಾಯದಿ ಅನ್ಯಾಯ ಪೆಚ್ಚಿಸದೆಎನ್ನ ಬೆಳವಿಗೆಯಂತೆ ಬೆಳಸದಂತೆ ಮಾಡಿದೆಮನ್ನಣಿಸುವ ಜನರಿಂದ ಮಾಂದ್ಯವ ಮಾಡಿಸಿದೆಸನ್ಯಾಯವಲ್ಲ ಧೊರಿಯೆ ನಿನ್ನ ಚಿತ್ತವೊ ಸ್ವಾಮಿಸನ್ಮುನಿಗಣ ಪ್ರೀಯ ವ್ಯಾಸವಿಠ್ಠಲರೇಯಾನಿನ್ನವರವನೊ ನಿನ್ನ ಸರಿ ಬಂದ ಬಗೆ ಮಾಡೊ 5 ಜತೆ ವೇಣುಗೋಪಾಲ ದಾಸರ ಮನ ಮಂದಿರಾ |ಪ್ರಾಣ ನಿನ್ನದೊ ವ್ಯಾಸವಿಠ್ಠಲ ಗೋಪಾಲಕೃಷ್ಣ ||
--------------
ವ್ಯಾಸವಿಠ್ಠಲರು
ಭಜನಗೈವ ನಿನ್ನ ದÉೀವಿ ಭುಜಗಭೂಷರಾಣಿಯ ಪ ಭುಜಗಭೂಷರಾಣಿಯೆ ಭೂಜಗತಾಲವೇಣಿಯೆ ಅ.ಪ. ಕಾಲಕಾಲ ಚಿತ್ತ ಕುಮುದ ಬಾಲ ಚಂದ್ರಮಂಡಲೆ ಬಾಲ ಚಂದ್ರಮಂಡಲೆ ವಿಲೋಲ ನೀಲಕುಂಡಲೆ 1 ಚಂಡಶೂಲ ಖಂಡನೈಕ ಚಂಡಶೂಲಧಾರಿಣಿ ಚಂಡಶೂಲಧಾರಿಣಿ ಪ್ರಚಂಡ ಪ್ರಾಣಹಾರಿಣಿ 2 ದೇವಿ ದೇವಿ ಸುಪ್ರಸನ್ನೇ ಭಾವನೈಕ ಗೋಚರೆ ಭಾವನೈಕೆ ಗೋಚರೆ ಸ್ವಭಾವ ಭಾವಿ ಭಾಸುರೆ 3 ಪಂಕಸಕ್ತ ಭಕ್ತಚಿತ್ತ ಸಂಕಟ ಪ್ರಮಾಥಿನೀ ಸಂಕಟ ಪ್ರಮಾಥಿನೀ ಶುಭಕರಾರ್ತಿ ನಾಶಿನೀ4 ಮಾನಿನಿ ಧೇಪುರ ನಿವಾಸಿನೀ 5
--------------
ಬೇಟೆರಾಯ ದೀಕ್ಷಿತರು
ಮದನ ಜನಕ ಮುದ್ದುರಂಗ ನಿತ್ಯ ಹೃದಯದೊಳಗೆ ಭಜಿಸುವರಂತರಂಗ ಪ ಅಜ ಭವನ ಮಿತ್ರ ಸರ್ವೇಶ ನಿನ್ನ ಕ್ಲೇಶ ನಾಶ ಮಜಡ ನೆನಗೆ ನೀ ನುಡಿಸ ಕೊಡು ಸುಜನ ಸೇವಿತ ನರಹರಿ ಲಕ್ಷ್ಮೀಶ 1 ದಯವ ನೀ ಎನ್ನೊಳುಬೀರೋ ನಿನ್ನ ಸ್ವಯಂ ಮೂಲ ನಿಜದ ಮೂರ್ತಿಯನೀಗ ತೊರೋ ಭಯಗಳನೆಲ್ಲವ ತೋರೋ ಚೆಲ್ವ ನಯವಿದ ಸರ್ವ ಸದ್ಗುಣ ನಿಧಿ ಬಾರೋ 2 ಪರಮ ಪಾವನಮೂರ್ತಿ ನಿನ್ನ ಸಿರಿ ಚರಣ ಕೆರಗುವೆ ನಾ ಮುನ್ನ ಕರುಣದಿ ಸಲಹೋ ನೀ ಎನ್ನ ನಿತ್ಯ ಪೊರೆವ ಚಿಪ್ಪಳಿ ಗೋಪೀವರ ಸುಪ್ರಸನ್ನ 3
--------------
ಕವಿ ಪರಮದೇವದಾಸರು
ಮನ್ನಿಸೊ ಶ್ರೀ ವೆಂಕಟೇಶ ಮಂಜುಗುಣಿಪುರ ವಾಸ ಪ. ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ ಅ.ಪ. ದೇಶದೇಶದಿಂದ ಬಂದ ಜನರಿಗೆ ಮುದದಿಂದ ಲೇಸಿನ ವರನನೀವೆ ನಿರುತ ಕಾವೆ ಭಾಸುರ ಮೋಹನವೇಷ ಭಾನುಕೋಟಿಸುಪ್ರಕಾಶ ಶ್ರೀಸತಿಯ ಪ್ರಾಣೇಶ ಶ್ರೀ ಶ್ರೀನಿವಾಸ 1 ವಾರಿಧಿಯೊಳಗಾಡಿದೆ ಗಿರಿಯ ಬೆ[ನ್ನ] ಲೆತ್ತಿದೆ ಭಾರವಹ ಧರೆಯ ತಂದೆ ದೈತ್ಯನ ಕೊಂದೆ ದುರುಳ ಬಲಿಯನು ಮೆಟ್ಟಿ ದೈತ್ಯನೃಪರನೆ ಕುಟ್ಟಿ ತರುಣಿಗಭಯವನಿತ್ತೆ ತರುವ ಕಿತ್ತೆ 2 ಪುರದ ನಾರಿಯರನು ಪಂಥದಿ ಗೆಲಿದೆ ನೀನು ವರ ಕಲ್ಕಿಯಾಗಿ ತುರಗವನೇರಿ ಮೆರೆದೆ ವರದ ಪ್ರಸನ್ನ ಹಯವದನ ವೆಂಕಟರಾಯ ಪೊರೆಯೊ ಎಂದೆಂದೂ ಎನ್ನ ಪುರುಷರನ್ನ 3
--------------
ವಾದಿರಾಜ
ಮರುಗದೇ ನಿಂತಿಹುದೆ ಮನವು ನಿನ್ನಾಅರಿಯದಪರಾಧ ತಾನಳಿಸುತಿರಲೆನ್ನ ಪನೆರೆಯವರ ಮೈಸಿರಿಯ ನೋಡಿ 'ರಿಯರ ನಡೆಯಮರೆತು ಧನದಲಿ ಮತಿಯನಳಿದೆಯಾಕರಕೊಂಡು ನರತತಿಯ ಕೆಣಕಿುವರ ಸಹನೆಯಪರಿಪಾಕದಿಂ ನೋಡಿ ಬಂದ ಪೀಡನೆಯ 1'ತವರೆಂಬಂತಿರುವ 'ಂಸೆಯನಾಳೋಚಿಸುತ ಜೊತೆಯೊಳಾರೋಗಿಸುತ ಜಾರಿ ನಿಲ್ಲುತಸತಿ ಸುತಾದ್ಯರ ಭೋಗಸಾಧನವ ಕೆಡಿಸುತ್ತಪತಿತರಿಂದರಸುತ್ತ ಪಿಡಿಸಲು[ಕಾ]ಯುತ 2ಪಾದುಕಾರ್ಚನೆಯನ್ನು ಪಾಲಿಸಿದ ಬಗೆಯನುಬೋಧಿಸುತ ಚಿತ್ತವನು ಬೆದರಿಸುವದೆನೀ ದಯಾಸಾಗರನು ನೀಚರುಪಹತಿಯನುಸಾದರದಿ ಬಿಡಿಸಿನ್ನು ಸಾಕು ಮುನಿಸನು 3ಕಾಲ ದೇಶವ ಕಂಡು ಕಾಪಥವ ಕೈಕೊಂಡುಬಾಳಿದರಳು ಕೂತುಂಡು ಭಕ್ತಿ ಮುಂಕೊಂಡುಊಳಿಗವ ಬೆಸಗೊಂಡು ಊರೊಳಗೆ ತಿರುಕೊಂಡುಬಾಲ ಇರಲರಿದಾಡುಬಡಿಯೆ 'ಡುಕೊಂಡು 4ಮಂಗಳಾರ್ತಿಯ ಸೇವೆ ಮಾಣುತಿಹುದೇಗೈವೆಕಂಗಳಿಗೆ ನೀ 'ಭುವ ಕಾಣಿಸಿದೆ ಸುಖವೆತಿಂಗಳೆನಿತಾದರುವೆ ತಿರಿದೂಳಿಗಕೆ ತರುವೆಸಂಗಿನವರೊಳಗಿರುವೆ ಸತತವೆಲೆ ಗುರುವೆ 5ತಪ್ಪಿಗನುಸಾರವಾಗಿ ತಿಳಿಯೆ ಶಿಕ್ಷಿಪೆಯಾಗಿಒಪ್ಪದ ಪದವ ನೀಗಿಪೊಳಿತಾಗಿತೆಪ್ಪಗೂಳಿಗಕಾಗಿ ತಗುಲಿಸುವೆ ನೀನಾಗಿಸುಪ್ರಸನ್ನತೆಯಾಗಿ ಸುಖಬಡುವರಾಗಿ 6ದುರುಳರಹುದಹುದಿವರು ದೂರಿಗೊಳಗಾದವರುಚರಣಾಬ್ಜ ಸೇವಕರು ಚಾರುಮತಿಯವರುದುರಿತ ಶತವಡಿಸಿದರು ದಾಟುವರು ನಿನ್ನವರುಕರುಣಾಬ್ಧಿ ನೀನಿದಿರುಗಾಣೆ ಸುಖಮಯರು7ಸೆರೆಯ ಪರಿಹರಿಸಿನ್ನು ಸುಖಿಸು ಸದ್ಭಕ್ತರನುಗುರು ಸುತರ ಚರಣವನು ಕಂಡು ಬದುಕುವೆನುಬರಿದೆ ಬೇಡುವೆ ನಾನು ಪಾಲಿಸುವ 'ಭು ನೀನುಶರಣಾಗತಪ್ರಿಯನು ಶಾಂತಿದಾಯಕನು 8ಧರೆಯ ಜನರಜ್ಞತೆಯ ದ'ಸಿ ನಿಜ ಸದ್ಗತಿಯಕರೆದೀವ ಗುರುರಾಯ ವಾಸುದೇವಾರ್ಯಕರುಣ ನಾಗನಗರಿಯ ಸ್ಥಿರಗೈದು ಸುವಸತಿಯಒರೆದೆ ಭವ'ಜಯ ವೇದಾಂತಪದ್ಧತಿಯ 9
--------------
ವೆಂಕಟದಾಸರು
ಮಾರ ಪ. ಮಧುರೆಗೆ ಪೋಗಿ ನಮ್ಮ ಮರೆದ ಅಲ್ಲಿಇದಿರಾದ ಖಳರನು ಜರಿದಕದನಕರ್ಕಶನೆಂಬ ಬಿರುದ ತೋರಿ ತನ್ನಪದಕೆರಗಿದವರ ಪೊರೆದ 1 ಕಂದರ್ಪಕೋಟಿಯ ಗೆಲುವ ಇವಸೌಂದರ್ಯದಿಂದತಿ ಚೆಲುವನಂದನ ಕಂದ ಭಕ್ತರಿಗೊಲಿವ ಇವನಂದನ ಮುನಿವೃಂದಕೆ ಸಲುವ 2 ಕೊಡುವನು ಬೇಡಿದ ಫಲವ ಇವಬಿಡ ಸಖಿ ಖಳರೊಳು ಛಲವಒಡಂಬಡಿಸಿ ರಿಪುವ ಗೆಲುವನೆಂದುಮೃಡ ಬಲ್ಲನಿವನ ಕೌಶಲವ3 ಇಂಥ ಭವದ ದುರಂತ ಬಲುಸಂತಾಪವನುಂಬ ಭ್ರಾಂತಅಂಥಾ ಹರಿಯೊಳೆನ ಪಂಥಸಲ್ಲಸಂತತ ನಿನಗೆ ನಿಶ್ಚಿಂತ 4 ಇನ್ನಾದರೆ ಸುಪ್ರಸನ್ನ ನಮ್ಮಚೆನ್ನಿಗ ಹಯವದನನ್ನವರ್ಣಿಸಿ ವರ್ಣಿಸಿ ನಿನ್ನವನ ತಾರೆಹೆಣ್ಣೆತೋರೆ ಬೇಗದಿ ಅವನ 5
--------------
ವಾದಿರಾಜ
ಮೋತಂಪಲ್ಲಿ ಪ್ರಾಣದೇವರ ಸ್ತೋತ್ರ ಏನು ಕರುಣವೊ ನಿನಗೆ ಮೋತಪಲ್ಲಿಶಾ ||ದೀನ ದ್ವಿಜಗೊಲಿದು ಬಂದಿಲ್ಲಿ ನಿಂತೇ ಪ ವಿಪ್ರವರ ತಪಗೈಯ್ಯೆ | ನೀನೊಲಿದು ಅವನಿಗೆಕ್ಷಿಪ್ರದಿಂ ಕಿಂಪುರುಷ | ಖಂಡದಿಂಧ್ಹೊರಟೂ |ಅಪ್ರತಕ್ರ್ಯೊರು ಸ | ದ್ಗುಣ ಪೂರ್ಣ ಹರಿದೂತಸುಪ್ರಸನ್ನನು ಆಗಿ ಬಂದಿಲ್ಲಿ ನಿಂತೇ 1 ಸುಜನ ಜನರಂದೂ 2 ಪಾದ | ಪದ್ಮಯುಗವಾ ||ದ್ವಿಜಗುರೂ ಪ್ರಾಣಪತಿ | ತೈಜಸನು ತಾನಾಗಿ |ಭಜಕರಿಗೆ ಪೇಳಿದನು | ಸ್ವಪ್ನ ಸೂಚಿಸುತಾ 3 ಭಿನ್ನವಾಗಿದ್ದಂಥ | ಅಂಗಗಳ ಜೋಡಿಸುತನನ್ನೆಯಿಂ ತೈಲವನು | ಪೂಸೆನ್ನುತಾ |ತನ್ನ ಸದನದ ಕದವ | ನಾಲ್ವತ್ತು ಮತ್ತೊಂದುದಿನ್ನ ತೆಗೆಯದೆ ಲವಣ | ವ್ರತ ಮಾಳ್ಪುದೆಂದಾ 4 ಸದನ | ಕದ ತೆಗೆಯುತಿರಲೂ |ನೇಮ ಮೀರಿದ ಫಲವು | ತೋರುವನೊ ಎಂಬಂತೆಕೀಮು ರಕ್ತವ ಸ್ರವಿಸೆ | ವಕ್ಷದಲಿ ಕಂಗಳಲೀ 5 ತಪ್ಪು ತಪ್ಪೆಂದವನು | ದವಡೆಯನೆ ತಟ್ಟುತ್ತಅರ್ಪಿಸಲು ತನುಮನವ | ಭಕುತಿಯಿಂದಾ |ವಪ್ಪಿಕೊಳ್ಳುತ ಹನುಮ | ಸ್ವಪ್ನದಲಿ ಪೇಳಿದನುಅರ್ಪಿಸುವುದಲ್ಲಿಲಿ | ಶಾಲಿಗ್ರಾಮಗಳಾ6 ಹರಿಮಹಿಮೆ ಕೊಂಡಾಡಿ | ಬರದಂತೆ ತಾವ್ ಮಾಡಿನರಸಿಂಹ ವಸುದೇವ | ಸುತ ಶಾಲಿಗ್ರಾಮಗಳಾ |ಸ್ಥಿರಪಡಿಸಲಲ್ಲಿಲಿ | ಕರುಣದಿಂದಲಿ ದಿವ್ಯವರ ರೂಪದಿಂ ನಿಂತೆ | ಗುರು ಮಾರುತೀಶಾ 7 ಮಾಸ | ಎಂಟೈದನೇ ದಿನದಿನೆಂಟರೆಲ್ಲರು ಸೇರಿ | ಬಹು ಉತ್ಸವಗಳಾ |ಭಂಟರಾಮರ ನಿನಗೆ ಉಂಟು ಮಾಡಲು ಭಕ್ತಕಂಟಂಕಗಳ ನೀಗಿ | ವಾಂಛಿತವ ನೀನೇ 8 ಗುರುಗೋವಿಂದ ವಿಠಲ | ಪರಮ ಸೇವಕ ಹನುಮಪರಿ ಪರೀಯಲಿ ನಿನ್ನ | ಚರಣ ಯುಗ್ಮಗಳಾ |ಪರಮ ಭಕ್ತಿಲಿ ಸೇವೆ | ನೆರೆ ಮಾಳ್ಪ ಸುಖವಿತ್ತುಪರಮ ಪುರುಷನ ಕಾಂಬ | ವರ ಮಾರ್ಗ ತೋರೋ 9
--------------
ಗುರುಗೋವಿಂದವಿಠಲರು
ರಾಮ ನಿನ್ನ ಭಜನೆಗೈಯುವೆ ಕಾಮಾರಿಮಿತ್ರ ರಾಮ ನಿನ್ನ ಭಜನೆಗೈಯುವೆ ಪ ರಾಮ ನಿನ್ನ ಭಜನೆಯನ್ನು ಪ್ರೇಮದಿಂದ ಮಾಳ್ಪ ಜನಕೆ ಕಾಮಿತಾರ್ಥವಿತ್ತು ಸುಖವ ಪ್ರೇಮದಿಂದಕರುಣಿಸುವವನೆ 1 ಜಾನಕಿಯರಮಣ ನಿನ್ನ ಧ್ಯಾನಮಾಳ್ಪೆನಯ್ಯ ಸತತ ಸಾನುರಾಗದಿಂದ ಸಲಹು ಭಾನುವಂಶ ಜಲಧಿಚಂದ್ರ 2 ಇಂದಿರೇಶ ನಿನ್ನ ಪಾದವಿಂದು ಪೂಜೆಗೈವೆ ನಾನು ತಂದೆ ಸಲಹೊ ರಾಗದಿಂದ ಸುಂದರಾಂಗ ಸುಪ್ರಸನ್ನ 3 ಹಾರ ಕುಂಡಲಾದಿಭೂಷ ಚಾರುಮಕುಟಧರಸುಶೋಭ ಸಾರಸಾಕ್ಷ ರವಿಜವರದ ತೋರೋ ಮುಖವ ರಾಘವೇಂದ್ರ 4 ರಾವಣಾದಿ ಸಕಲದನುಜ ಜೀವಹರಣ ರಘುಕುಲೇಶ ಪಾವಮಾನಿ ಪೂಜಿತಾಂಘ್ರಿ ಧೇನುಪುರನಿವಾಸ ದೇವ 5
--------------
ಬೇಟೆರಾಯ ದೀಕ್ಷಿತರು
ವೆಂಕಟ ಬಾರೋ ರಿಪುಸಂಕಟ ಬಾರೊ ಕಿಂಕರಿಗೊಲಿದ ನಿಶ್ಶಂಕ ಬಾರೋ ಪ ಪೊಂದೇರಿನೊಳಗೆ ಭೂಮಿ ಇಂದಿರೆಗೂಡಿ ಚೆಂದದಿಂದಲೊಪ್ಪುತಿಹ ಇಂದುವದÀನ ಮಂದರೋದ್ಧಾರನೆ ಮಹಾನಂದ ಮೂರುತಿ ಪಾದ ವಂದಿಪನೆಂದು 1 ಲೌಕೀಕ ವಿಲಕ್ಷಣ ಅನೇಕ ಏಕ ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ ಪ್ರಾಕೃತ ರಹಿತಗಾತ್ರ ಲೋಕಪಾವನ ಶೋಕ ಮೂಲ ನಾಶನ ವಿಶೋಕ ಜನಕ 2 ಅಂಗ ಅಂಗೀ ಭಾವದಿಂದ ಅಂಗದೊಳಿದ್ದು ಸಂಗಡ ತಿರುಗುವೊ ನೀಲಾಂಗ ನಿಸ್ಸಂಗ ಭೃಂಗ ಜಗದಂತೆ- ರಂಗ ರಂಗರಾಜ ಸುಖಸಂಗ ಅನಂಗ 3 ಆಪ್ತಕಾಮ ಅಮೃತಾಂಗ ಗುಪ್ತಮಹಿಮ ತಪ್ತಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ ತೃಪ್ತ ತೃಣ ಬೊಮ್ಮಾದಿ ನಿರ್ಲಿಪ್ತವಾಸ ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲ 4 ಅಗಣಿತ ಬಂಧು ಅಗನಾಗ ಧಾರಕನೆ ನಾಗ ಭಂಜನ ಆಗಸದಂಗಾಂಗುಷ್ಟದಿಂದ ಪೆತ್ತನೆ ಆಗಲೀಗಲೆನ್ನದಲೆ ಸಾಗಿ ಬೇಗದಿ5 ನಿರ್ದೋಷ ವಸ್ತು ನೀನೆಂದು ನಿರ್ಧಾರ ಮಾಡೆ ಪೊದ್ದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳು ಭದ್ರ ಫಲದಾಯಕ ಸಮುದ್ರಶಯನ ಮಧ್ಯಜೀವಿ ವಂದ್ಯ ಸುಪ್ರಸನ್ನ ಮೋಹನ್ನ 6 ಜೀವಾಭಿಮಾನಿ ಗಿರೀಶ ದೇವ ದೇವೇಶ ಜೀವರಾಶಿಗಳ ಸ್ವಾಭಾವ ಪ್ರೇರಕ ಜೀವನನಾಗಿ ನಮ್ಮ ಕಾವುತಲಿಪ್ಪ ರಾ- ಜೀವ ನಯನ ವಿಜಯ ವಿಠ್ಠಲ ಪೂರ್ಣ 7
--------------
ವಿಜಯದಾಸ
ವೆಂಕಟಾಚಲವಾಸ ಪಂಕಜಪ್ರಿಯಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ ಕಿಂಕರಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿಪರರನನುಸರಿಸುವೆನೆ ಸಿರಿರಮಣನೆ ನಿನ್ನ ಕರುಣೆಯುಳ್ಳೆ ಪರಸಿರಿಯ ಬಯಸುವೆನೆ 1 ಧರಣಿಯನಾಳುವ ದೊರೆಯ ಕುಮಾರನು ತಿರಿಕೆಯ ಬೇಡುವನೆ ಸುರತರುವಿನ ತಂಪುನೆರಳೊಳು ಕುಳಿತು ತಾ ಗರಿಕೆಯನರಸುವನೆ 2 ಸಾರನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪಧೀರನುಕೊಳಚೆಯನೀರಿಗೆಜರಿಯುವನೆ 3 ಕ್ಷೀರಾಬ್ಧಿ ಮಥಿಸಿದ ಶೂರನಿನ್ನವನಿಗೆ ನೀರು ಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದರವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವ ನರನಿಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲು ತಾ ಮಳೆಯೊಳು ನೆನೆಯುವದೆ ಇಳೆಯೊಳು ಪುಲಿಗಿರಿನಿಲಯನ ದಾಸರ ಬಲುಹು ಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶ ನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗಮಗೋಚರ ಕೇಳು ಜಗವ ತೂಗುವನಿಗೆ ಮಗುವತಿ ಘನವಹುದೆ ಜಗದಘಹರಣ ಎನ್ನಘವ ನೀಗಲು ನಿನ್ನ ಬಗೆಗೆ ದುರ್ಘಟವಹುದೆ 8 ಪರಮಾತ್ಮ ಪರಿಪೂರ್ಣ ಪರವಸ್ತು ನೀನೆಂದು ಮರೆಹೊಕ್ಕೆ ಕಾಯೊ ಎನ್ನ ವರಸುಗುಣಾಕರವರದವಿಠಲಪುಲಿಗಿರಿದೊರೆಸುಪ್ರಸನ್ನಾ 9
--------------
ವೆಂಕಟವರದಾರ್ಯರು
ವೆಂಕಟಾಚಲವಾಸ-ಪಂಕಜಪ್ರಿಯ ಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ-ಕಿಂಕರ ಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿ ಪರರನುಸರಿಸುವನೆ ಪರ ಸಿರಿಯ ಬಯಸುವನೆ 1 ತಿರುಕೆಯಬೇಡುವನೆ ಸುರತರುವಿನತಂಪು ನೆರಳೊಳು ಕುಳಿತುತಾ ಗರಿಕೆಯನರಸುವನೆ 2 ನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪ ಧೀರನು ಕೊಳಚೆಯ ನೀರಿಗೆ ಜರಿಯುವನೆ 3 ಕ್ಷೀರಾಬ್ಧಿಮಥಿಸಿದ ಶೂರನಿನ್ನವನಿಗೆ ನೀರುಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣನಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವನರಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲುತಾಮಳೆ ಯೊಳುನೆನೆಯುವುದೆ ಬಲುಹುಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗೆಮಗುವತಿ ಘನವಹುದೆ ದುರ್ಘಟವಹುದೆ 8 ಮೊರೆಹೊಕ್ಕೆ ಕಾಯೊ ಯನ್ನ ವರಸುಗಣಾಕರ ವರದವಿಠಲ ಪುಲಿಗಿರಿ ದೊರೆ ಸುಪ್ರಸನ್ನಾ 9
--------------
ಸರಗೂರು ವೆಂಕಟವರದಾರ್ಯರು