ಒಟ್ಟು 110 ಕಡೆಗಳಲ್ಲಿ , 46 ದಾಸರು , 103 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನ್ಯಧರ ದೂರ್ವಾಸ ಪ್ರಮುಖ ಮುನಿ ಸ ನ್ಮಾನ ಕರುಣಿ ವಿಲಾಸ ಶ್ರೀ ಶ್ರೀನಿವಾಸ ಪ ಎನ್ನವಗುಣ ಸಹಸ್ರವೆಣಿಸದೆ ನಿನ್ನವರೊಳಗೆಣಿಸಿ ಅನುದಿನ ಮನ್ಮನಾಲಯದೊಳು ನೆಲಸು ಮೈ ಗಣ್ಣನನುಜ ವರಾಭಯ ಶ್ರೀಕರ ಅ.ಪ. ಕಾಮಿತಪ್ರದಕೋಲಾ ಅಂಜನಾಧಿರÀ ಧಾರ ಧಾಮ ಭೂಮಿ ವಿಲೋಲಾ ಶಂಖಣನೃಪವರದ ಹೇಮ ಲೋಚನ ಕಾಲಾ ದ್ವಿಜ ಮಹಿಳೆಯುಳುಹಿದ ಶಾಮಲಾಂಗ ಸುಶೀಲಾ ವೆಂಕಟ ಕುಲಾಲ ಭೀಮಗೊಲಿದ ಮಹಾಮಹಿಮನೆ ಪಿ ತಾಮಹನ ನಾಸೋದ್ಭವನೆ ವಿಯ ಜಾಮಾತ ಕಟಿಸು ತ್ರಾಮಸುತಸೂತ ಪ್ರಮೋದಾಸು ಧಾಮ ಸೌಖ್ಯ ಪ್ರದವರಾಹ ತ್ರಯೀಮಯನೆ ಪ್ರಣತಾರ್ತಿಹರ ಬಲ ಸದನ ಸಹಸ್ರನಾಮ ಸಾಮಜಪತಿ ಪೋಷಕ ರಿಪುವನ ಧೂಮಧ್ವಜ ವಿಧಿಭ ಸೇವಿತ ವ್ಯೋಮಾಳಕಸಖ ಸರ್ವಜ್ಞರ ಮಾಮನೋಹರ ಮನ್ನಿಪುದೆಮ್ಮ 1 ದೀನಜನ ಮಂದಾರ ದೇವಕಿಸುತ ಜಗ ತ್ರಾಣ ಗುಣ ಗಂಭೀರ ಪೃಥ್ವೀಶ ತೋಂಡ ಮಾನವರದ ಉದಾರ ಲುಬ್ದಕನ ವಿಷ್ವ ವೈನತೇಯ ವರೂಥ ಖಳ ಸ್ವ ರ್ಭಾನುವಿನ ತಲೆಗಡಿದು ರವಿಶಶಿ ಕವಿ ಶನಿಗಳ ಶ್ರೇಣಿಯಲಿ ಮಾನಿಗಳ ಮಾಡ್ಡ ಮ ಕಲಿಮಲಾಪಹಾರಿ ಕೃ ಶಾನುಸಖ ಸಂಪೂಜ್ಯ ಸುಮನಸ ಧೇನು ಶರಣ ಜನರ್ಗೆ ಸಂತತ ಆ ನಮಿಸುವೆ ನಳಿನಜಪಿತ ನಿ ನಿರವದ್ಯ ನಿರುಜ ಬ್ರ ಹ್ಮಾಣಿ ಸುರನಿಕರ ನಿಲಯನುಸಂ ಧಾನಕೆ ಕೊಡು ಬಹುವಿಧಕರ್ಮ 2 ಸೇವ್ಯ ದಾರವಿಂದ ಮಹಂತಾ ಸತ್ವಾದಿ ತ್ರಿಗುಣವಿ ದೂರ ದಿತಿಜ ಕೃತಾಂತಾ ಗುಣರೂಪ ಪಾರಾ ವಾರ ವಿಗತಾದ್ಯಂತಾ ಶ್ರೀ ಭೂಮಿಕಾಂತಾ ಕಮಠ ವರಹ ಕ ಕಶಿಪು ವಿದಾರಣನೆ ಭಾ ಗೀರಥಿಯ ಪದನಖದಿಪಡದಂಗಾರ ವರ್ಣನೆ ಭೃಗುಕುಲೋದ್ಭವ ವಾರಿನಿಧಿಬಂಧನ ವನೌಕಸ ವಾರ ಪೋಷಕ ನಂದಗೋಪ ಕು ಮಾರ ತ್ರಿಪುರ ವಿದೂರ ತುರಗವನೇರಿದ ಜಗನ್ನಾಥವಿಠಲ ಸಾರುವೆ ತವÀ ಪದಪಂಕಜ ಜಂ ಭವ ಭಯ ತಾರಕ ನಿನ್ನವರೊಳು ತತ್ವ ವಿಚಾರಕೊಡು ಚಿರಕಾಲದಲಿ 3
--------------
ಜಗನ್ನಾಥದಾಸರು
ತಾಯಿ ಪಾಲಿಸು ಎನ್ನ ದಯದಿ ಗಾಯತ್ರಿದೇವಿ ಸಿದ್ಧಿಯನಿತ್ತು ಸಲಹಾ ಸಾವಿತ್ರಿ ಪ ಪಾವನ ಸುಚರಿತ್ರೆ ಮಾಯೆ ತ್ರಿಜಗಸ್ತೋತ್ರೆ ಕಾಯೆ ಸಿದ್ಧಿಸಿ ಎನ್ನ ಕಾಯಾ ಮಂಗಲಗಾತ್ರೆ ಅ.ಪ ಸಾರಸಾಕ್ಷಿಯೆ ದಯಾಪಾರಾವಾರಳೆ ನಿನ್ನ ಚಾರುಚರಿತಂಗಳು ಸಾರುವೆ ನಿಜಮಂತ್ರ ಮೂರುಲೋಕದ ಸೂತ್ರಧಾರಿ ನೀ ನಿಜ ಓಂ ಕಾರಿ ಕರುಣಿಸಿ ಸುತನ ಗಾರುಮಾಡದೆ ಪೊರೆ ಅ ಪಾರ ಮಹಿಮಳೆ ಬಾರಿಬಾರಿಗೆ ಸೇರಿ ನಿನ್ನಪಾದ ವಾರಿಜಕೆ ನಾ ಸಾರಿ ಬೇಡುವೆ ಧೀರಳೆ ಸುವಿ ಚಾರಿ ನಿಜಸುಖ ತೋರು ಬೇಗನೆ 1 ಮನುಮುನಿಗಳಿಗೊಲಿದು ಘನಸುಖಸಾಮ್ರಾಜ್ಯ ವನು ಕೊಟ್ಟು ಸಲಹಿದಿ ಕನಿಕರದೊಡನೆ ಮಿನುಗುವ ಶತಕೋಟಿದಿನ ಕರಪ್ರಭಾಮಯೆ ಅನುಪಮುನಿಜಜ್ಞಾನವನು ನೀಡು ಬೇಗನೆ ಚಿನುಮಯಾತ್ಮಳೆ ಘನಕೆ ಘನ ನಿನ್ನ ವರರುಹಂಘ್ರಿಯ ನೆನೆವೆನನುದಿನ ಜನನಿ ಅಣುಗನ ಕೊನೆಯಜಿಹ್ವೆಯೊಳ್ ಪ್ರಣಮ ಬರಿಯಮೈ ಮಣಿವೆ ಕಲ್ಯಾಣೆ 2 ಪನ್ನಂಗಧರ ಸುರಸನುತ ಶ್ರೀರಾಮ ಸುನ್ನತ ಮಹಿಮಂಗಳನ್ನು ಬಲ್ಲವಳೆ ಅನ್ನ ಪೂರ್ಣೆಯೆ ಉಮೆ ಪನ್ನಂಗವೇಣಿಯೆ ಮನ್ನಿಸು ಬಡವನ ಬಿನ್ನಪ ಕರುಣೆ ಭಿನ್ನವಿಲ್ಲದೆ ನಿನ್ನ ಬೇಡುವೆ ಉನ್ನತೋನ್ನತ ಪದವನಿತ್ತು ಧನ್ಯನೆನಿಸೌ ಎನ್ನ ಮನದಿಷ್ಟವನ್ನು ಪಾಲಿಸಿ ವಿಮಲ್ಹøದಯೆ 3
--------------
ರಾಮದಾಸರು
ತಿರುಪತಿ ಯಾತ್ರೆಯ ಮಾಡಿ ತಿರುಪತಿ ಪ ತಿರುಪತಿಯಾತ್ರೆಯ ಮಾಡಿ ಮನದ ದುರಿತಪಾಪಗಳನೀಡಾಡಿ ಆಹ ಸ್ಮರಕೋಟಿ ತೇಜನ ದರುಶನಲಾಭವು ದೊರಕಿದ ಸುಜನರ ಚರಿತೆಯ ಕೇಳುತ್ತ ಅ.ಪ ಸುಟ್ಟು ಹೋಗುವದಿದು ಚಂದ ಮೆಟ್ಟು ಮೆಟ್ಟಿಲನೇರುವ ವೃಂದ ಜನ ಸೃಷ್ಟಿಗೊಡೆಯ ಗೋವಿಂದ ಆಹಾ ದಿಟ್ಟಮನದಿ ಪರಮೇಷ್ಠಿಪಿತನ ಪಾಡಿ ಗಟ್ಯಾಗಿ ಗೋವಿಂದ ಗೋವಿಂದನೆನುವರು1 ಗಾಳಿಗೋಪುರವನ್ನೆ ದಾಟಿ ಭಕ್ತ- ರಾ ಮಂಟಪಕೆ ಉಂಟೆ ಸಾಟಿ ತಾಳ ಮೇಳದವರ ಗಲಾಟೀಯಿಂದ ಶೋಭಿಪ ಪವನನಕೋಟಿ ಕೇಳಿ ನೋಡುತ್ತ ಭಕುತಿಸೂರ್ಯಾಡುತ್ತ ಮಹಿಮೆ ಕೊಂ- ಡಾಡುತ್ತ ಪಾಡುತ್ತ ಕುಣಿವ ಸಜ್ಜನರೆಲ್ಲ 2 ಸ್ವಾಮಿ ಪುಷ್ಕರಣಿಯ ಸ್ನಾನ ಮಾಡಿ ಆ ಮಹವರಹದೇವರನ್ನ ಕಾಮ- ಧೇನೆಂಬ ಶ್ರೀ ಗುರುಗಳನ್ನ ನೋಡಿ ಆ ಮಹಾ ಅಶ್ವತ್ಥರಾಜನ್ನ ಸ್ತುತಿಸಿ ನೇಮದಿ ದಿಗ್ಗಾವಿ ಆಚಾರ್ಯರಿಗೆ ನಮಿಸಿ ಶ್ರೀಧರನಾಲಯ ದ್ವಾರಕ್ಕೆ ಪೋಗಲು 3 ಮೂರು ದ್ವಾರಗಳನ್ನೆ ದಾಟಿ ಮು- ರಾರಿಯ ಗುಡಿಸುತ್ತ ಕೋಟೆಯಲ್ಲಿ ಸಾರುವ ಭಕುತರ ಭೇಟಿಯಿಂದ ಅ- ಪಾರ ಜನುಮದ ಪಾಪಮೂಟೆ ಪೋಗಿ ಬೇಗದಿ ವಿಮಾನ ಶ್ರೀನಿವಾಸನ ನೋಡಿ ಸಾಗರಶಯನನ ದರುಶನ ಕೊಡುಕೊಡು ಎಂದು 4 ಕೊಪ್ಪರಿಗೆಯು ಮನೆಯಂತೆ ಹಣ ತಪ್ಪದೆ ಸುರಿಯುವರಂತೆ ನ- ಮ್ಮಪ್ಪ ವೆಂಕಟಸ್ವಾಮಿಯಂತೆ ತಪ್ಪನಾಡುವರ ಶಿಕ್ಷಿಪನಂತೆ ಆಹಾ ಕ್ಷಿಪ್ರದಿ ಶ್ರೀಧರನಪ್ಪಣೆಯಂದದಿ ಅಪ್ರಮೇಯನ ಸೇವೆಗೊಪ್ಪುವ ಸುಜನರು 5 ಹೇಮದ್ವಾರದಿ ನಿಂತ ಜನರು ನಮ್ಮ ಸ್ವಾಮಿ ಶೃಂಗಾರ ನೋಡುವರು ಶ್ರೀನಿ- ವಾಸನೆ ಸಲಹು ಎಂಬುವರು ಪಾಹಿ ಪಾಹಿ ಶ್ರೀಪತಿ ಎನ್ನುತಿಹರು ಶ್ರೀಶ ಗೋವಿಂದ ಗೋವಿಂದ ಗೋವಿಂದ ಮಾಧವ ಮಾತುಳಾಂತಕ ದೇವ ಮಾತು ಲಾಲಿಸು ಎಂದು6 ಚರಣದಂದಿಗೆ ಗೆಜ್ಜೆವಲಿಯೆ ಪೊನ್ನ ಸರಪಳಿ ಪಾಡಗ ನಲಿಯೆ ಒಳ್ಳೆ ಜರದ ಪೀತಾಂಬರ ಹೊಳೆಯೆ ಪಟ್ಟೆ ವರವಲ್ಲಿ ಹೊಳೆಯುತ್ತ ಮೆರೆಯೆ ಆಹ ಸರಗಳು ವಲಿಯುತ್ತ ಪದಕಂಗಳ್ಹೊಳೆಯುತ್ತ ಉರದಲ್ಲಿ ಶ್ರೀದೇವಿ ಇರುವ ವೈಭವ ನೋಡಿ7 ವರಶಂಖು ಚಕ್ರ ಹಸ್ತದಲಿ ದಿವ್ಯ ಸಿರದಿ ಕಿರೀಟ ಮೆರೆಯುತಲಿ ಪಟ್ಟೆ ತಿಲುಕ ಕಸ್ತೂರಿ ಹೊಳೆಯುತಲಿ ಥಳ ಥಳ ಹೊಳೆವ ಮುಖಕಾಂತಿಯಲಿ ಅಹ ಕಡೆಗಣ್ಣ ನೋಟದಿ ಜಗವಮೋಹನ ಮಾಳ್ಪ ಅಗಣಿತ ಮಹಿಮನ ಸುಗುಣವ ಪಾಡುತ್ತ 8 ಕರುಣಿಗಳರಸನೆ ದೇವ ತನ್ನ ಶರಣು ಹೊಕ್ಕವರನ್ನೆ ಕಾವ ತನ್ನ ಭಜಕರಿಗಭಯವ ನೀವ ಇನ್ನು ಸರಿಯುಂಟೆ ಶ್ರೀರಮಾದೇವ ಅಹ ಪರಿಸರನೊಡೆಯನ ನಿರುತದಿ ಧ್ಯಾನಿಸಿ ದುರಿತಗಳಳಿದು ಸದ್ಗತಿಯ ಪಡೆವರೆಲ್ಲ 9 ಕಾಲಹರಣ ಮಾಡದಂತೆ ತ್ರಿ- ಧಾಮನ ಸ್ಮರಿಸುವ ಚಿಂತೆಯಲ್ಲಿ ಆಲಸ್ಯ ತೊರೆದಿಹರಂತೆ ಶ್ರೀನಿ- ವಾಸನೆ ಇದಕ್ಹೊಣೆಯಂತೆ ಅಹ ಕಾಲಕಾಲಕೆ ತಕ್ಕ ಲೀಲೆಯ ತೋರುವ ಪಾದ ಧ್ಯಾನಿಪ ಸುಜನರು 10 ಹತ್ತವತಾರದ ಹರಿಯು ತನ್ನ ಭಕ್ತರು ಸ್ತುತಿಸುವ ಧ್ವನಿಯ ಕೇಳಿ ಚಿತ್ತದಿ ನಲಿಯುವ ಪರಿಯು ಸುರರು ವಿಸ್ತರಿಸುವ ದಿನಚರಿಯು ಅಹ ಭಕ್ತರ ಸ್ತುತಿಸಲು ಮತ್ತವರಿಗೊಲಿಯುವ 11
--------------
ನಿಡಗುರುಕಿ ಜೀವೂಬಾಯಿ
ತೋರಬಾರದೆ ನಿಮ್ಮ ಚರಿತೆಯನು ನರರೊಳು ನಗೆಗೀಡು ಮಾಡದ ಹಾಗೆ ಪ. ಕಲ್ಲೊಳು ಕಾಂತೆಯ ಮಾಡಿದವನೆಂ- ದೆಲ್ಲರು ಜಗÀದೊಳು ಪೇಳುವರು ಅಲ್ಲಿ ಮಾಡಿದ ಹಾಗೆ ಇಲ್ಲಿ ತೋರಿಸಿದರೆ ಬಲ್ಲಿದನೆನ್ನೊಡೆಯ ದೊಡ್ಡವನೆಂದು ಸಾರುವೆ 1 ಅಹಹ ಕುಬುಜೆಯಳ ತನುವನ್ನೆತ್ತಿ ಮಹಿಯೊಳು ಯುವತಿಯ ಮಾಡಿದೆಯೆಂಬರು ಬಹು ಪರಾಕ್ರಮವನ್ನು ಈಗ ತೋರಿಸಿದರೆ ಅಹುದೋ ಎನ್ನೊಡೆಯ ದೊಡ್ಡವನೆಂದು ಸಾರುವೆ 2 ನೀನೆ ಗತಿಯೆಂದು ಬಂದ ಭಕ್ತನ ಕ- ಣ್ಣುನವ ತಿದ್ದಿ ನಿಜವ ತೋರಿಸಯ್ಯ ದೀನದಯಾಳು ಹೆಳವನಕಟ್ಟೆ ರಂಗಯ್ಯ ದಾನಿ ಎನ್ನೊಡೆಯ ದೊಡ್ಡವನೆಂದು ಹೊಗಳುವೆ 3
--------------
ಹೆಳವನಕಟ್ಟೆ ಗಿರಿಯಮ್ಮ
ತೋರುವ ದೃಶ್ಯವ ಕಾಂಬುವ ನಯನಕ | ಸಾರಿಯ ಮನವನು ನೋಡುವ ಬುದ್ಧಿಗೆ | ನಿತ್ಯ ನಿರಂಜನ ವಸ್ತುವೆ | ವಿಶ್ವಭರಿತನೆಂದು | ಸಾರುವ ಶೃತಿಯಿಂದಾತ್ಮ ಪ್ರಚೀತಿಯ | ಭವ | ವಾರಿಸಿ ಚಿತ್ಸುಖಲಿರಿಸಿದ ಮಹಿಪತಿ | ಸದ್ಗುರು ಜಯ ಜಯತು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ | ಙÁ್ಞನಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ | ಸಿರಿ | ಪ್ರಾಣೇಶ ಕುಣಿಯುವನಯ್ಯಾ ಅಯ್ಯಯ್ಯಾ ಪ ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ | ಶರೀರದಿಂದಲಿ ಅಷ್ಟಕೇತ್ರಗಳ ಪುಟ್ಟಿಸಿ | ವರದೇಶ ವೈಕುಂಠದಲ್ಲಿಟ್ಟನು ಸಪ್ತ | ಪಿರಿಸಹಿತ ತೀರ್ಥರಾಜಾ || ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ | ಇರುತಿಪ್ಪವಲ್ಲಿ ಮಿಗಿಲಿದಾದಕೆ ಅತಿಶಯವೊ | ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ | ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ 1 ತರಣಿಸುತೆ ಮಾನಸೋತ್ತರ ಶೈಲದಲಿ ಕುಳಿತು | ವರರಾಜ ತೀರ್ಥ ಮಾಧವನ ಸಾರುವೆನೆಂದು | ಭರದಿಂದ ತಪವು ಮಾಡೆ ಸರಸಿಜೋದ್ಭವನೊಲಿದು | ವರವಿತ್ತ ಮುಂದೆ ನೀನು ಧರೆಯೊಳು ಕಾಳಿಂ || ದ ರಾಯಗೆ ಕುವರಿ ಎನಿಸಿ ಮಹಾಸರತಿಯಾಗಿ ಪೋಗಿ | ಸಿರಿ ಮಾಧವನ ಚರಣ | ನೆರೆ ಮೆರೆದಳೈಯ್ಯಾ ಅಯ್ಯಾ ಅಯ್ಯಾ ಅಯ್ಯಾ 2 ತುರುಗಮ ನೆವದಿಂದ ಅರವತ್ತು ಸಾವಿರ ಸ | ಗರನ ಕುಲದವರು ಕಪಿಲಾಖ್ಯಾ ಹರಿ ಮುನಿಯಿಂದ | ಉರಿದು ಪೋಗೆನಲಾಗಿ ಭಗೀರಥ ಭೂಪತಿ ಉಗ್ರ | ಧುರಧಿ ತಪವನ್ನೆ ಮಾಡೇ | ಹರಿ ನಿರೂಪವ ತಾಳಿ ಗಿರಿಗಹ್ವರವನೊಡದು | ಸಿರಿ | ಚರಣದೆಡೆಯಲ್ಲಿ ನಿಂದು ಯಮುನೆ ವಡಗೊಡಿ ಬಾ | ಮರವಾದವಳಂದು ಅಯ್ಯ ಅಯ್ಯಾ ಅಯ್ಯಾ3 ಸರಸ್ವತಿಯ ಬೆರೆದು ತ್ರಿವೇಣಿ ಸಂಗಮವೆಂದು | ಕರಿಸಿಕೊಂಡಿತು ವಿಕರ ಸೋಮೇಶ್ವರನ ತನಕ | ಪರಮೇಷ್ಠಿಯಿಲ್ಲಿಗೈತಂದು ಬೊಮ್ಮಾಂಡವನು | ಸರಿ ಮಾಡಿ ತೊಲಗಲಾಗೀ || ಸುರರು ಶಿರದೂಗುತಿರೆ | ವರರಾಜತೀರ್ಥ ಮಹಾಭಾರವಾಗಲು ಇದಕೆ | ಸರಿ ಮಿಗಿಲು ಇಲ್ಲೆನುತ ಪೊಗಳಿ ಕರದರು ಮಹ | ವರದ ಪ್ರಯಾಗವೆಂದಯ್ಯಾ ಅಯ್ಯಾ ಅಯ್ಯಾ 4 ಪುರವೈರಿ ನಟಣೆ ಪೂ ತುಲಸಿ ಸುರಪತಿ ವೈಶ್ವಾ | ನರನು ತಿಲ ಹೋಮ ಯಮರಾಯಕಿಂಚಿತು ದಾನ | ನಿಋರುತಿತ ಪೈತೃಕಕರ್ಮ ವರುಣ ಜಲದಾನಸ್ತುತಿ | ಮರುತ ಭೂತನು ಕುಬೇರ || ಅರಗಳಿಗೆ ವಸತಿ ಈ ವಟನಿಕಟ್ಟಿಯಲಿಯಿದ್ದು | ಪರಿಪರಿಯಿಂದಲಿ ಒಲಿಸಿ ಮಾಧವನಿಂದ | ಪುರಷಾರ್ಥ ಪಡೆದು ಸುಖಿಸಿದರು ಸಮಸ್ತ ಬಗೆ | ಅರಿತು ಕೊಂಡಾಡಿ ಜನರೈಯ್ಯ ಅಯ್ಯಾ ಅಯ್ಯಾ5 ಎರಡೊಂದು ಮೂರು ಕುಲದ ಮಧ್ಯ ನಿಂದು | ಕರ್ತಾರಿಯೊಳಗೆ ಮಿಂದು ಸತ್ಕರ್ಮವನೆಸಗಿ ಭೂ | ಸುರರ ಮೆಚ್ಚಿಸಿ ಮನದಿ ಪಾಪಗಳ ಉಚ್ಚರಿಸಿ | ಕರಣ ನಿರ್ಮಲಿನರಾಗಿ | ವಿಪ್ರ ಚಂಡಾಲ || ಪರಿಯಂತ ವಪನವೆ ಮುಖ್ಯವೆಂದು ತಿಳಿದು | ಚರಿಸಿದರೆ ಅನಂತ ಜನ್ಮಕ್ಕೆ ಮಹಾಸೌಖ್ಯ | ಬರಿದೆ ಆಗದು ಕಾಣಿರೈಯ್ಯ ಅಯ್ಯ ಅಯ್ಯಾ6 ಧರೆಯ ಮೇಲೆ ಬಿದ್ದ ಶಿಶುಗಳ ತಂದು ಮುಂಡಣವ | ಉರುತರ ಬುದ್ದಿಯಿಂದ ಮಾಡಿಸಲಿ ಬೇಕು ವಿ | ಸ್ತರಿಸುವೆನಯ್ಯಾ ಯೌವನ ವಾರ್ಧಿಕರಿಗೆ ನಿಜ | ವರನಾರಿಯರಿಗೆ ವೇಣಿ ಸರಿ ಎನ್ನಿ ಸಾತ್ವೀಕ || ಪುರಾಣದಲಿ ಪೇಳಿದ ಎರಡು ಭುಜದಲಿ ತಪ್ತ ಚಕ್ರ | ವಿರಹಿತರಾಗಿ ಬರಲು ಷಣ್ಮುತ ಜನಕ ಗತಿಯಿಲ್ಲ ಮತಿಯಿಲ್ಲ | ಸ್ಥಿರವಾಕ್ಯ ಲಾಲಿಪುದು ಅಯ್ಯಾ ಅಯ್ಯಾ ಅಯ್ಯಾ 7 ಎರಡೈದು ತುರಗ ಕೃತು ಮೊದಲಾದ ತೀರ್ಥಗಳು | ಪರಿಪರಿ ದೇವ ಮುನಿಗಳು ನಾಮದಲಿ ಉಂಟು | ಪರಮಭಕುತಿಯಿಂದ ಮಜ್ಜನಾದಿಯ ಮಾಡೆ | ಪರಲೋಕ ಕರತಳದೊಳು || ಇರುತಿಪ್ಪದು ನಿತ್ಯಾ ಪ್ರಯಾಗರಾಜನ | ಸ್ಮರಣೆ ಮಾಡಿದ ಮನುಜನು ಆವಾವಲ್ಲ್ಯಾದರು ಇರಲು | ಮಾಧವ ವೊಳಗೆ ಮೊಳೆವ | ದರುಶನವ ಕೊಡುತಲಯ್ಯ ಅಯ್ಯಾ ಅಯ್ಯಾ 8 ಅರುಣೋದಯಲೆದ್ದು ಶುದ್ಧಾತ್ಮರಾಗಿ | ಪರಿಪರನೆಂಬೊ ಙÁ್ಞನದಲಿ ಹಾಡಿಪಾಡಿದವರ | ದುರಿತ ರಾಸಿಗಳ ದಹಿಸಿ ನಿಂ | ದಿರದೆ ಸಂತರ ಕೊಡಿಸಿ || ಮೊರೆವುತಿಪ್ಪುದು ಗಡಾ ಸಿದ್ದಾರ್ಥ ಕ್ಷೇತ್ರವಿದು | ನೆರೆನಂಬಿ ಮಾನವನು ಮಾನಸದಲಿ ಭಜಿಸಿ | ಸಿರಿ ವಿಜಯವಿಠ್ಠಲ ಕರುಣವುಳ್ಳವನಿಗೆ | ದೊರಕುವದು ದೊರಕುವದಯ್ಯಾ ಅಯ್ಯಾ ಅಯ್ಯಾ 9
--------------
ವಿಜಯದಾಸ
ನಡುನೀರೊಳಗೆ ಕೈಯ್ಯ ಬಿಡುವುದೆ ಸಿರಿನಲ್ಲ ಕಡೆ ಹಾಯಿಸದೆ ಮೋಸ ಕೊಡುವುದು ತರವಲ್ಲ ಪ. ನಾನಾ ವಿಧದ ನೀಚಯೋನಿಗಳನು ದಾಟಿ ಮಾನುಷೋತ್ತಮ ಮಧ್ವಮತದಿ ಪುಟ್ಟಿ ನೀನೆ ಮುಕ್ತಿದನೆಂಬೊ ಜ್ಞಾನವಂತರ ಭೇಟಿ ನಾನೈದಬೇಕೆಂದು ಧ್ಯಾನಗೊಂಡಿಹೆನೆಂದು 1 ವೇದ ವಿಹಿತಕರ್ಮವಾದರು ಕ್ರಮವಾಗಿ ಸಾಧಿಸಲಿಲ್ಲ ಸಂತತಿಗಳಿಲ್ಲ ಪಾದ ಪದ್ಮ ಪರಾಗ ಮೋದಾನುಭವದಿ ಶುಭೋದಯಗೊಳಲಿಲ್ಲ 2 ಕೆಲವು ಕಾಲವ ಬಾಲ್ಯದಲಿ ಕಳೆದೆನು ಮತ್ತೆ ಲಲನೇರ ಮೋಹದಿ ಬಳಲಿದೆನು ಬಲವು ಕುಂದುತ ದೇಹ ಗಳಿತವಾಗುವುದಿನ್ನು ನಳಿನಾಕ್ಷ ಪದಪದ್ಮ ನೆಳಲನೈದದ ಮುನ್ನು 3 ಮೂರೊಂದು ಪುರುಷಾರ್ಥ ತೋರುವ ಪುರುಷ ಶ- ರೀರವ ಕರುಣಿಸಿದವನೆ ನೀನು ಮೂರಾರು ವಿಧ ಭಕ್ತಿ ಸಾರುವ ತಿಳಿಸಿ ಕಂ ಪಾದ ಪರಿಯಂತ 4 ಸಂಚಿತಾಗಾಮಿ ದುಷ್ಕøತಗಳನಳಿಸಿ ಪ್ರಾ ಪಂಚಿಕ ಭೋಗ ಪೂರಣಗೊಳಿಸಿ ಪಂಚಭೌತಿಕ ಹರ ವಂಚನೆ ಮಾಡದೆ ಶ್ರೀ ವಿ ರಿಂಚಿವರದ ದೇವ ವೆಂಕಟೇಶ ನೀ ಕರುಣಿಸು 5
--------------
ತುಪಾಕಿ ವೆಂಕಟರಮಣಾಚಾರ್ಯ
ನಿತ್ಯ ಪ ಭಾರತಿ ಭಾಸ್ವರಕಾಂತೆ ನಿನ್ನ ಸಾರುವೆ ಸತತ ನಿಶ್ಚಿಂತೆ ಆಹಾ ವಾರಿಜಸಮಪಾದ ತೋರಿಸು ಮಮ ಸುಹೃ - ನಿತ್ಯ ಗಾರುಮಾಡದೆ ಜನನಿ ಅ.ಪ ಹರಿಯ ಪಟ್ಟದ ನಿಜರಾಣಿ ಎನಗೆ ಹರಿಯ ತೋರಿಸೆ ಹೇ ಕಲ್ಯಾಣಿ ನಿನಗೆ ಕರುಣಿಯೆ ಕೋಕಿಲವಾಣಿ ಆಹಾ ಹರಿಹರಾದ್ಯನಿಮಿಷ ಕರಕಮಲಪೂಜಿತೆ ವರಭಾಗವತರಗ್ರೇಸಳೆಂದು ನಮಿಸುವೆ 1 ಮೂರೇಳು ತತ್ತ್ವಾಭಿಮಾನಿ ಎನಿಸಿ ಮೂರಾರು ಭಕುತಿಯಿಂದಲಿ ನೀ ಸತತ ಮೂರು ಜೀವರೊಳು ಪ್ರೇರಣಿಯಾಗಿ ಮೂರೊಂದು ಮೊಗನ ಕಲ್ಯಾಣಿ ಆಹಾ ಮೂರು ಬಗೆಯ ಜನಕೆ ಮೂರು ವಿಧದಿ ಗತಿ ಮೂರು ಕಾಲಕೆ ಇತ್ತು ಮೂರುಮಾಡುವಿ ದೇವಿ 2 ಮಾತರಿಶ್ವನ ಪಾದಕಮಲ ಯುಗಕೆ ನೀತಷಟ್ಟದಳೆ ನಿರ್ಮಲ ಮನಸು ಆತುರದಲಿ ಮಾಡು ವಿಮಲೆ ನಮಿಪೆ ಕಾತರಭವಶ್ರಮಶಮಲಾ ಆಹಾ ಜಾತರೂಪೋದರತಾತ ಶ್ರೀ ಗುರುಜಗ - ನ್ನಾಥವಿಠಲಗೆ ನೀ ದೂತನೆನಿಸು ಎನ್ನ 3
--------------
ಗುರುಜಗನ್ನಾಥದಾಸರು
ನಿತ್ಯ ಶಾರದಾ ಕೊಡು ಎನಗೆ | ಸಾರುವೆ ನಾ ನಿನ್ನ ಪ ಪುಂಡರೀಕ ನಯನೆ ಪುಂಡರೀಕನ ರಾಣಿ ಪುಂಡರೀಕ ಚರ್ಮಾಂಬರ | ಪುಂಡರೀಕನಾಥನುತೆ ಪುಂಡರೀಕವೆ ನಮಗೆ 1 ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ | ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ | ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ 2 ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ | ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯವಿಠ್ಠಲನಲ್ಲಿಕೌಂಶಿಕದವನ ಮಾಡು3
--------------
ವಿಜಯದಾಸ
ನಿನ್ನ ಚಿತ್ತ ನಿನ್ನ ಚಿತ್ತ ನಿನ್ನ ಚಿತ್ತವೋ ಪ. ಬನ್ನ ಬಡಿಸಬೇಡವಿನ್ನು ಭಯವ ಬಿಡಿಸಿ ಕಾಯೊ ಎನ್ನ ಅ.ಪ. ಘನ್ನ ಮನಸು ಮಾಡಿ ಈಗ ಎನ್ನ ಸಲಹಿದರೆ ಜಗದಿ ನಿನ್ನ ಕೀರ್ತಿಯು ಉನ್ನತದಲಿ ಮೆರೆವುದಿದೆಕೊ ಬನ್ನ ಬಡಿಸಬೇಡವಿನ್ನು ಘನ್ನಮಹಿಮ ಕೇಳು ಸೊಲ್ಲ ಇನ್ನು ಸುಮ್ಮನಿರಲು ಸಲ್ಲ ಘನಮಹಿಮನೆ 1 ಬುದ್ಧಿ ಭ್ರಮೆಯಿಂದ ನಾನು ಪೊದ್ದಿರುವ ಭಯವ ಬಿಡಿಸಿ ನಿದ್ದೆಯಲಿ ತಿಳಿಸಿದ್ವಾರ್ತೆ ಶುದ್ಧಗೊಳಿಸುತ ಮುದ್ದುಕೃಷ್ಣ ಅಭಯ ತೋರಿ ಉದ್ಧರಿಸಿದರೆ ಎನ್ನ ಶ್ರದ್ಧೆಯಿಂದ ನಿನ್ನ ಕೀರ್ತಿ ಮಧ್ವಮತದಿ ಸಾರುವೆನು2 ಬೆದರಿಸುವ ಪರಿಯದೇನು ಬದಿಗನಾಗಿ ಅರಿಯದೇನು ಹೃದಯದಲ್ಲಿ ನಿಂತ ಮೇಲೆ ಎನ್ನದಿನ್ನೇನು ಪದುಮನಾಭ ನಿನ್ನ ನಂಬಿ ಪದೋಪದಿಗೆ ನೆನೆಸುತಿರಲು ವಿಧ ವಿಧದಿ ಪರಿಕಿಸುವ ವಿಧವನರಿಯೆ ಪದುಮೆಯರಸ3 ಉಡಲು ಉಣಲು ಆಸೆಯಿಲ್ಲ ತೊಡಲು ಇಡಲು ಮಮತೆಯಿಲ್ಲ ಎಡದ ಬಲದ ನೆಂಟರಭಿಮಾನವಿಲ್ಲವು ಎಡರು ಬರಲು ಭಯವು ಇಲ್ಲ ಬಿಡಲು ದೇಹ ಅಂಜಿಕಿಲ್ಲ ನಡುವೆ ಕರೆವುದುಚಿತವಲ್ಲ ಮೃಡನ ಸಖನೆ ಕೇಳೊ ಸೊಲ್ಲ 4 ನಿರ್ದಯವನು ಮಾಡಲಿಕ್ಕೆ ಮಧ್ಯಮಧಮಳಲ್ಲವಿನ್ನು ಮಧ್ವಮುನಿಯ ಮತದಿ ಜನಿಸಿ ಶುದ್ಧ ಭಾವದಿ ಶುದ್ಧ ಸಾತ್ವಿಕರು ತಂದೆ ಮುದ್ದುಮೋಹನ ಗುರುಗಳಿಂದ ಪೊದ್ದಿ ದಾಸ್ಯರೀಗ ಜಗದಿ ಬದ್ಧ ಕಂಕಣಧರಿಸಿ ಮೆರೆವೆ 5 ಒಡೆಯ ನೀನು ಎನ್ನ ಧರೆಗೆ ಬಿಡದೆ ತಂದು ಜನ್ಮವಿತ್ತು ಬಿಡದೆ ಕಾಯ್ವ ಗುರುಗಳನ್ನು ಅಗಲಿಸುತ್ತಲಿ ಅಡಿಗಡಿಗಭಯವ ತೋರಿ ಪಿಡಿದು ಕೈಯ್ಯ ಸಲಹದಿರಲು ಅಡಿಗಳಾರದಿನ್ನು ನಾನು ಪಿಡಿಯೆ ಕಡಲಶಯನ 6 ನಾಥರಾರು ಎನಗೆ ಇಲ್ಲ |ಅ- ನಾಥಗಳನ್ನು ಮಾಡಿ ನಿನ್ನ ಮೂತಿ ತಿರುಹಿ ಸಲಹದಿರಲು ಪಾತಕಲ್ಲವೆ ಪಾತಕಾದಿ ದೂರನೆಂಬೊ ಖ್ಯಾತಿ ಸಟೆಯದಾಯ್ತು ಈಗ ನೀತಿಯರಿತು ಪೊರೆಯದಿರಲು ಜಾತರಹಿತ ಜಗದಿ ಸಲಹು 7 ದಾಸತನದಿ ಮೆರೆವೊದೊಂದು ಆಸೆಯಿಲ್ಲದಿನ್ನು ಬೇರೆ ಆಸೆಯೊಂದು ಇಲ್ಲ ಕೇಳು ನಾಶರಹಿತನೆ ಪಾಶಕರ್ಮ ಹರಿಸಿ ನಿನ್ನ ದಾಸಳೆಂದು ಮೆರೆಸೆ ಜಗಕೆ ಈಶನೆಂದು ನಿನ್ನ ಮೆರೆಸಿ ಆಸೆ ಪೂರೈಸಿಕೊಂಬೆ 8 ಮೃತ್ಯುವಿಗೆ ಮೃತ್ಯುವಾಗಿ ತುತ್ತುಮಾಡಿ ಜಗವ ನುಂಗಿ ಮತ್ತೆ ಬ್ರಹ್ಮಾಂಡ ಸೃಜಿಸಿ ಪೆತ್ತು ಜೀವರ ಭಕ್ತ ಜನಕೆ ಬಂದ ಎಡರು ಮೃತ್ಯುಗಳನು ಕಾಯ್ದ ದೇವ ಮೃತ್ಯು ಮೃತ್ಯು ಶರಣು ನೃಹರಿ ಮೃತ್ಯು ಹರಿಸಿ ಕಾಯೊ ಶೌರಿ9 ಬಿಡಲಿಬೇಡ ಕೈಯ್ಯ ಇನ್ನು ಬಿಡದೆ ಕಾಯೊ ಶರಣು ಶರಣು ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲಾತ್ಮಕ ಕಡೆಗೆ ನಿನ್ನ ಪಾದಸೇವೆ ಬಿಡದೆ ಕೊಡುವ ದೃಢವ ಬಲ್ಲೆ ಕರವ ಪಿಡಿಯೊ 10
--------------
ಅಂಬಾಬಾಯಿ
ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ ಇನ್ನೊಂದಿಹವೆಂಬನ್ಯ ಪಥವಳಿದು ಉನ್ಮನಿಯೊಳು ಘನಸುಖ ಅನುಭವಿಸುತ ಧ್ರುವ ಕಂಗಳ ಕೊನೆಯ ಮೆಟ್ಟಿ ಮುಂಗಡಿಯಲಿಹ ಮಂಗಳಾತ್ಮಕನ ನೋಡಿ ಲಂಘಿಸಿ ಮೂಲಸ್ಥಾನವ ತುಂಗ ವಿಕ್ರಮನ ಸಂಗ ಸುಖವನರಿದು ಅನುದಿನ ಇಂಗಿತವಾಗಿ ನೀ ಗಂಗೆಯೊಳು ಜಲ ಬೆರೆದಾ ಸುಸಂಗದಿ 1 ನಾನು ನಾನೆಂಬದಳಿದು ನಿನ್ನೊಳು ನೀನೆ ಏನೆಂದು ತಿಳಿದು ನೋಡು ಆನಂದೋ ಬ್ರಹ್ಮದಾಟವು ತಾನೆ ತಾನಾಗಿ ತನುವಿನೊಳು ತೋರುವದು ಘನಗುರುವಚನಾನುಭವದಲಿ ಸೇವಿಸಿ ಸ್ವಾನುಭವದ ಸುಖದಲಿ ಲೋಲ್ಯಾಡುತ 2 ಮರೆದು ಮಾಯದ ಮಾಟವ ಅರಿತು ನೋಡು ಬೆರೆದು ದಾಂಟಿ ತ್ರಿಕೂಟವ ತೋರುವ ದಿವ್ಯಭಾವವ ತಾರಕಗುರು ಸಾರುವ ಕರುಣ ನೋಟವ ಅರವಿನೊಳಿರು ಮಹಿಪತಿ ಗುರುಪಾದದಿ ಪರಮಾನಂದದಿ ಸುಖ ಸೂರ್ಯಾಡುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀ ಮುನಿದು ಇಳೆಯೊಳಗೇ| ಸುರಮುನಿ ಜನಪಾಲನ ಮನದಲಿ ಬಂದದಿ ನೆರೆಯದೇ ಸಾರುವದೀಗ ಪ ನಿನ್ನಯ ಒಪ್ಪುವ ಮಾರ್ಗವ ನೋಡುತ| ಮುಚ್ಚನು ಕುಡಿಗಂಗಳ ಯವಿಯಾ| ಪನ್ನಗವೇಣೀ ನಿನ್ನವಿಯೋಗ ದುಗುಡದೀ| ಕುಳಿತನುಡಗಿ ಅವಯವ ಸೋಹ್ಯಾ 1 ನಿನ್ನ ಕಾಣುವೆ ನೆಂಬಂಥ ವಾಣಿಯಲೆದ್ದು ಲಜ್ಜಿಸಿ ಹಿಂದಕ ಕಾಲೆಳೆದಾ| ಘನ್ನ ವಿರಹ ತಾಪದ ದೆಶೆಯಿಂದಲಿ ಕಿಡಿ ಕಿಡಿ ಜ್ವಾಲಾಂಗನು ಆದಾ 2 ಕಪಟದಿ ಬಂದು ನೋಡುವೆ ನಿನ್ನೆನುತಲಿ ಯಾಚಕ ರೂಪತಾಳಿದನು| ವಿಪುಳಾಂಗ ತಾಳಲಾದರದೇ ನಿನ್ನ ಕುವರಿಯ ತೊರೆಂದೆ ಚಂದನು ಶರಧಿಯನು3 ದಿನದೊಳಗರಗಳಗಿ ಗಮಿಸದು ಯನುತಲಿ ವನದೋಳು ಪೋಗಿ ಹೊತ್ತುಗಳೆವಾ|ಮನಿ ಮನಿ ಪೊಕ್ಕು ಗೋಕುಲದಲಿ ನಿನ್ನನು ಅರಸುತಿಹನು ಪಾವನ ದೇವಾ4 ಕ್ಷತ್ರೀಯರು ನಿಷ್ಠುರರೆಂದು ನಿನ್ನಮ್ಯಾಲಿನ ಕೋಪದಿ ಕಂಡ ವೃತವಳದಾ| ಅತಿತವನೋಡದೇ ತಾನಾಗಿ ಬಂದನು ಹಯವೇ ನೋಡೆ ಜೀವನ ಜಗದಾ 5 ಕುವಲಯ ಲೋಚನೆ ಕೂಡಿದ ನಿಮ್ಮಿರ್ವರ ಹಾಸ್ಯದ ಮುಖವನು| ಜವದೀ ಅವನಿಲಿ ಕಂಡೆನು ಧನ್ಯಧನ್ಯಾದೆನು ಮಹಿಪತಿ ಸುತ ಪ್ರಭುವಿನ ದಯದೀ6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ ದೀನದಯಾಳು ನೀನೆ ಹರಿಯೆ 1 ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ ಅತಿ ಹರುಷದಲಿ ಬಂದೆನೊ ಹರಿಯೆ 2 ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವದು ಎನಗೆ ಹರಿಯೆ 3 ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ 4 ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ 5 ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ ಸಾರುವದು ತಿಳಿದುಕೊಳ್ಳೊ ಹರಿಯೆ 6 ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ 7 ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ 8 ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ಪ್ರಾಣವ ಹರಿಯೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ಸಜ್ಜನರ ಬಂಧು ಪ ಕರಿಮರಿಬಳಗ ಬಂದೊದಗಿದರೇನು ಪರಿಪರಿ ಕ್ಲೇಶವ ಬಿಡಿಸಲಿಲ್ಲ ಹರಿ ನೀನೆ ಗತಿಯೆಂದರೆ ಆ ಕ್ಷಣದಲ್ಲಿ ಕರಿಬಂಧನ ಪರಿಹರಿಸಿದೆ ಕೃಷ್ಣ 1 ಪಿತರು ಮಾತೆಯರಿದ್ದರೇನು ಸುತರಾಪತ್ತಿಗೊದಗಲಿಲ್ಲ ಗತಿ ನೀನೆಂದರೆ ಧ್ರುವ ಪ್ರಹ್ಲಾದರಿ- ಗ್ಹಿತ ಮಾಡಿದೆ ಶ್ರೀಪತಿ ಪರಮಾತ್ಮ 2 ವಲ್ಲಭರೈವರಿದ್ದರೇನು ವಸನ ದ್ರೌಪದಿಗುಡಿಸಲಿಲ್ಲ ಫುಲ್ಲಾಕ್ಷನೆ ಗತಿಯೆಂದರೆ ನೀ ತಡ- ವಿಲ್ಲದಲಕ್ಷಯ ನೀಡಿದೆ ದೊರೆಯೆ 3 ಮನೆಧನ ಧಾನ್ಯಗಳಿದ್ದರು ಧನಂಜಯ- ನ್ವನವಾಸಗಳನು ಬಿಡಿಸಲಿಲ್ಲ ವನಜಾಕ್ಷನೆ ವಾರಣಾವತಿ ದೊರೆತನ ವಿನಯದಿ ಕೊಟ್ಟಿದ್ದಿಂದಿರಾಪತಿಯೆ 4 ಭವ ಘೋರ ದುರಿತ ಯಮಬಾಧೆಗಳ ತಪ್ಪಿಸುವೋರಿಲ್ಲ ಶ್ರೀರಮಣನೆ ಭೀಮೇಶಕೃಷ್ಣನೆಂದು ಸಾರುವರಿಗೆ ಕರುಣಾವಾರಿಧಿ ಹರಿಯೆ 5
--------------
ಹರಪನಹಳ್ಳಿಭೀಮವ್ವ
ನೀವೆಲ್ಲ ಪರಮಾತ್ಮನೆ ಏಳಿ ಸಾರುವೆ ಈ ನುಡಿ ಕೇಳಿ ಪ ತುಂಬಿಹ ಜಗವನು ನಿಮ್ಮೊಳಗಿರನೇ ಅಲೋಚಿಸಿರೀನುಡಿಯಾ ನಂಬಿರಿ ಶ್ರುತಿಶಿರ ಸಾರಿತು ಪರಮನು ಹೃದಯದ ಗುಹೆಯೊಳಗಿರುವಾ ಕಾಂಬನು ಗುಹೆಗಳ ಕಳೆದುಳಿದಾ ನಿಜ ಸಂಪೂರ್ಣಪದವೇ ಪರಾನಂದಾ 1 ಸ್ಥೂಲದೇಹಮೊದಲಾಗಿಹ ಗುಹೆಗಳ ನೈದನು ಕಳೆಯಲು ಉಳಿವಾ ಮೂಲರೂಪ ಪರಮಾತ್ಮನೆ ತಾನೆಂ ದರಿಯುತ ತಿಳಿಯಿರಿ ನಿಜವಾ ತಿಳಿಯಿರಿ ನಿರುತದಿ ನೀವೇ ಆ ಪದ ಮಾಯಾ ಶಂಕರಾರ್ಯ 2
--------------
ಶಂಕರಭಟ್ಟ ಅಗ್ನಿಹೋತ್ರಿ