ಒಟ್ಟು 6899 ಕಡೆಗಳಲ್ಲಿ , 128 ದಾಸರು , 4614 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಘವೇಂದ್ರ ಯತಿಸಾರ್ವಭೌಮ ದುರಿ ತೌಗಘದೂರ ತೇ ನಮೋ ನಮೋ ಪ ಮಾಗಧರಿಪು ಮತಸಾಗರ ಮೀನ ಮ ಮಾಘ ವಿನಾಶಕ ನಮೋ ನಮೋ ಅ.ಪ. ಶ್ಲಾಘಿತ ಗುಣಗಣ ಸೂರಿಪ್ರಸಂಗ ಸ ದಾಗಮಜ್ಞ ತೇ ನಮೋ ನಮೋ ಮೇಘ ಶ್ಯಾಮಲ ರಾಮಾರಾಧಕ ಮೋಘ ಬೋಧತೇ ನಮೋ ನಮೋ 1 ತುಂಗಭದ್ರ ಸುತರಂಗಿಣಿ ತೀರಗ ಮಂಗಳಚರಿತ ಶುಭಾಂಗ ನಮೋ ಇಂಗಿತಜ್ಞ ಕಾಳಿಂಗ ಮರ್ದ ಯದು ಪುಂಗವ ಹೃದಯ ಸುಸಂಗ ನಮೋ ಸಂಗಿರ ಚಿಹ್ನಿತ ಶೃಂಗಾರಾನನ ತಿಂಗಳ ಕರುಣಾಪಾಂಗ ನಮೋ ಗಾಂಗೇಯ ಸಮಾಭಾಂಗ ಕುಮತ ಮಾ ತಂಗ ಸಿಂಗ ಶಿತ ಪಿಂಗ ನಮೋ 2 ಶ್ರೀ ಸುಧೀಂದ್ರ ಕರಜಾತ ನಮೋ ನಮೋ ಭೂಸುರ ನುತ ವಿಖ್ಯಾತ ನಮೋ ದೇಶಿಕ ವರ ಸಂಸೇವ್ಯ ನಮೋ ನಮೋ ದೋಷವಿವರ್ಜಿತ ಕಾವ್ಯ ನಮೋ ಕ್ಲೇಶಿತಜನ ಪರಿಪಾಲ ನಮೋ ನಮೋ ಭಾಸಿತ ಕರುಣಾಶೀಲ ನಮೋ ವ್ಯಾಸ ರಾಮ ಪದ ಭಕ್ತ ನಮೋ ನಮೋ ಶಾಶ್ವತ ಕರುಣಾಸಕ್ತ ನಮೋ 3 ಮಣಿ ಸಂ ಭಾವಿತ ಮಹಿಮ ಪಾಲಯ ಮಾಂ ಸೇವಾಪರ ಸರ್ವಾರ್ಥಪ್ರದ ವೃಂ ದಾವನ ಮಂದಿರ ಪಾಲಯ ಮಾಂ ಮಾರ್ಗಣ ಭುಜಗ ವಿನಾಯಕ ಭಾವಜ್ಞ ಪ್ರಿಯ ಪಾಲಯ ಮಾಂ ಕೇವಲ ನತಜನ ಪಾವನರೂಪ ಸ ದಾ ವಿನೋದಿ ಹೇ ಪಾಲಯ ಮಾಂ 4 ಸನ್ನುತ ಮಹಿಮ ಜಗನ್ನಾಥ ವಿಠಲ ಸನ್ಹಿತ ಮಾನಸ ಜಯ ಜಯ ಭೋ ಚಿಹ್ನಿತ ದಂಡಕಮಂಡಲ ಪುಂಡ್ರ ಪ್ರ ಪನ್ನೆ ಭಯಾಪಹ ಜಯ ಜಯ ಭೋ ಮಾನ್ಯ ಮಹಾತ್ಮ ಪ್ರಸನ್ನ ವದನ ಕಾ ರುಣ್ಯ ಪ್ರಯೋದಧೆ ಜಯ ಜಯ ಭೋ ಧನ್ಯ ಕ್ಷಮಾಸಂಪನ್ನ ಬುಧಜನ ಶ ರಣ್ಯ ಸದಾರ್ಚಿತ ಜಯ ಜಯ ಭೋ 5
--------------
ಜಗನ್ನಾಥದಾಸರು
ಶಿಶುವಿನ ಯಾತಕ ದೂರವಿರೆ| ನಿಶಿದಿನ ನೋಡಲು ಮಾತವರಿದವಾ| ಮರಳನೆ ಮಾಡುವರೆ ಪ ಅತಿ ಮೋಹದಿಂದಲಿ ಮೊಲೆಯನು| ಬಾಯೊಳಗಿಟ್ಟರೆ ಸೇವಿಸನು| ಮಿಲೆ ಯಿಲ್ಲದ ಪಾಲ್ಮೊಸರನು| ಕುಡಿಯಲು ತಕ್ಕವನೆ 1 ಪರಿಪರಿಯಿಂದಲಿ ಮುಂದಕೆ ಕರೆದರೆ|ಸರಕನೆ ಹೆಜ್ಜಿಡನು| ಹರಿ ನಿಮ್ಮುಡುಗೆಯ ಸೆಳೆದು ಕೊಳುತಲಿ| ಮರವನೆ ಏರುವನೆ 2 ಸುರಜನ ಪಾಲಕ ಮಹಿಪತಿ ನಂದನ|ಜೀವನ ಮೂರುತಿಯಾ| ಕುರುಪಿಡಬಹುದೆನೆ ಮಾನವನೆಂದು| ಲೀಲೆಯ ದೋರುತಿಹ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗಣಪತಿಗೆ ವಂದಿಸಿ ಕೆಳದಿಯ ಪುರದಭೋಗಮಂದಿರ ರಾಮೇಶ್ವರನ ರಂಭೋಗಮಂದಿರ ರಾಮೇಶ್ವರನ ಸನ್ನುತಿಸುತರಾಗದಿ ಪಾಡಿ ಪೊಗಳುವೆ ರಂ1 ವಾಣಿ ಪುಸ್ತಕ ವೀಣಾಪಾಣಿ ಪನ್ನಗನಿಭವೇಣಿ ಕಲ್ಯಾಣಿ ಶುಕ ರಂ-ವಾಣಿ ಶುಕವಾಣಿ ಬೊಮ್ಮನರಾಣಿ ಸನ್ಮತಿಯ ಕರುಣಿಸು ರಂ 2 ಧೃವ ಅಟ್ಠ ರೂಪಕ ಏಕತಾಳವು ಝಂಪೆತ್ರಿವಡೆ ತಾಳಗಳೊಡಂಬಡಲು ರಂ-ತ್ರಿವಡೆ ತಾಳಗಳೊಡಂಬಡೆ ಹೊಸ ಹರೆಯದಯುವತಿಯರೊಲಿದು ಹಾಡಿದರು ರಂ 3 ಗಂಗಾಧರ ಜಯ ಗೌರೀಪ್ರಿಯ ಜಯಅಂಗಜಹರ ಜಯವೆನುತ ರಂ-ಜಯವೆನುತಲಂಗನೆಯರುಪೊಂಗೋಲ ಪೊಯಿದು ಪಾಡಿದರು ರಂ 4 ಕಪ್ಪುಗೊರಳ ಜಯ ಸರ್ಪಭೂಷಣ ಜಯಮುಪ್ಪುರವನು ಜಯಿಸಿದವನೆ ರಂ-ಜಯಿಸಿದನೆ ಜಯವೆಂದುಒಪ್ಪದೆ ಪಾಡುತಾಡಿದರೆ ರಂ5 ದಿಮಿದಿಮಿ ದಿಮಿಕೀಟ ತಕಕಿಟನ ಕಕಿಟಕ್ರಮದಿ ನರ್ತಿಸುತಬಲೆಯರು ರಂ-ಅಬಲೆಯರು ಚಿನ್ನದ ಕೋಲಪ್ರಮುದದೊಳಾಡುತೊಪ್ಪಿದರು ರಂ6 ಅಚ್ಚ ಮುತ್ತಿನ ನಿಚ್ಚಳ ಸುಲಿಪಲ್ಲಒಚ್ಚೇರೆಗಣ್ಣು ಬಾಲೆಯರು ರಂ-ಬಾಲೆಯರು ಸಂಭ್ರಮದಿ ಮೈಮೆಚ್ಚುತ ಕೋಲನಾಡಿದರು ರಂ 7 ಭೃಂಗ ಕುಂತಳದ ಮತಂಗಜ ಗಮನದರಂಗುದುಟಿಯ ರಮಣೆಯರು ರಂರಮಣಿಯರು ಸೊಬಗನಾಂತುಹೆಂಗಳು ಪಾಡುತೊಪ್ಪಿದರು ರಂ8 ಜಲಜಗಂಧದ ನಳಿತೋಳ್ಗಳ ರಿಂಕಿದನೆಲೆಮೊಲೆಗಳ ತುಂಬಿಗುರುಳ ರಂಕರುಳ ಪದ್ಮಿನಿಯರುಚಳಕದಿ ಪಾಡುತಾಡಿದರು ರಂ9 ಪೊಂಬೊಗರಿಯ ತೆರದಿ ತುಂಬಿದ ಕುಚಗಳಬಿಂಬಾಧರದ ಕಂಬುಗಳದ ರಂಬಿಂಬಾಧರದ ಕಂಬುಗಳದ ಪದ್ಮಿನಿಯರುಸಂಭ್ರಮದಿಂದ ಪಾಡಿದರು10 ತೆಳುವಸುರಿನ ಕೊಬ್ಬಿದ ಕುಚಯುಗಳದಕಲಹಂಸಗತಿಯ ಮೋಹನದ ರಂಮೋಹನದ ಚಿತ್ತಿನಿಯರುಒಲಪಿನಂ ಪಾಡುತಾಡಿದರು ರಂ11 ಚಿನ್ನದ ಲತೆಯಂತೆ ಚೆನ್ನಾಗಿ ಬಳುಕುವಸನ್ನುತಾಂಗದ ಶಂಖರವದ ರಂರವದ ಶಂಖಿನಿಯರುಚೆನ್ನಾಗಿ ಪಾಡುತಾಡಿದರು ರಂ 12 ಅಪಳ್ಗಣ್ಣ ಮಂದಗತಿಯ ಮದಗಂಧದಶರೀರದ ಕೊಬ್ಬಿದ ಕೊರಳ ರಂಕೊರಳಿನ ಹಸ್ತಿನಿ(ಯರು)ತರುಣಿಯರೊಲಿದು ಪಾಡಿದರು ರಂ 13 ಸಿರಿಮೊಗದೊಳು ಬೆಮರೊಗೆಯೆ ಮೇಲುದುಜಾರೆ ಕರದ ಕಂಕಣ ಝಣರೆನಲು ರಂಕರದ ಕಂಕಣ ಝಣಝಣಝಣಝಣರೆನೆತರಳೆಯರ್ಪಾಡುತಾಡಿದರು ರಂ14 ದುಂಡುಮುತ್ತಿನ ಹಾರವಲುಗಲು ವಜ್ರದಕುಂಡಲಗಳು ನರ್ತಿಸಲು ರಂನರ್ತಿಸಲಂಗನೆಯರತಂಡ ಸಂಭ್ರಮದೊಳಾಡಿದರು ರಂ 15 ಕರುಣಸಾಗರ ಜಯ ಕರಿಚರ್ಮಾಂಬರ ಜಯವರದ ರಾಮೇಶ ಜಯವೆಂದು ರಂ-ವರದ ರಾಮೇಶ್ವರ ಪಾರ್ವತಿ ಜಯವೆಂದುಹರುಷದಿ ಕೋಲನಾಡಿದರು 16
--------------
ಕೆಳದಿ ವೆಂಕಣ್ಣ ಕವಿ
ಶ್ರೀನಿವಾಸ ಸಲಹೋ ನಮ್ಮ ಶ್ರೀನಿಧಾನ ಚರಣನೆ ಪ ಧ್ಯಾನ ನಿರತಮೌನಿಜನರ ಮಾನಸಾಬ್ಜಹಂಸನೆ ಅ.ಪ. ನಕ್ರಮುಖದಿ ಸಿಕ್ಕಿದಿಭನನಕ್ಕರಿಂದ ಪೊರೆದನೆ ಚಕ್ರಧರ ತ್ರಿವಿಕ್ರಮಾದಿ ಚಕ್ರಭೊಗಿ ಶಯನನೇ 1 ಬಿಟ್ಟು ನಿನ್ನ ಭ್ರಷ್ಟನಾಗಿ ಕೆಟ್ಟೆಜನ್ಮ ಜನ್ಮದೆ ಹುಟ್ಟಿ ಹುಟ್ಟಿ ಕಷ್ಟಪಟ್ಟೆ ಕೃಷ್ಣ ನಿನ್ನ ನಂಬಿದೆ 2 ಶರಣ ಜನರ ಪೊರೆವನೆಂಬ ಬಿರುದು ಧರಿಪನಲ್ಲೆಲಾ ಹರಿಣ ಹರಣಧರದೊಳಿರುವ ಕರುಣಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ಸಕಲವೆಲ್ಲವು ಶಿವನ ಲಿಂಗದೊಳಗಡಗಿದುದು ಲಿಂಗವೆ ಮಾಲಿಂಗವಾಗಿ ತೋರುವುದು ಪ ಭಕುತಿಕರು ಮಮತೆಯೊಳು ಸ್ಥಾಪಿಸಿಯೆ ಅರ್ಚಿಸಲು ಸುಕೃತಫಲವನು ಅಳೆವ ಕೊಳಗವನು ಕಾಣೆ ಅ.ಪ ಆ ಮಹಾ ಸಹಸ್ರನಾಮದೊಳಗತ್ಯದಿಕ ಸೊಮೇಶನೆಂದೆಂಬ ಸ್ವಾಮಿಯನು ಕಂಡು ಸೋಮವಾರದ ದಿವಸ ಸಾಮರುದ್ರವ ಜಪಿಸಿ ನೇಮದಿಂ ಪೂಜಿಸಲು ಕಾಮಿತದ ಫಲವು 1 ಇನ್ನೇನ ವರ್ಣಿಸುವೆ ಈಶ ನಿನ್ನಯ ಮಹಿಮೆ ಉನ್ನಂತವಾಗಿ ಜಗದೊಳು ಚರಿಸಿತು ಪನ್ನಗೇಶನ ಬಲದ ಪಶ್ಚಿಮದ ದೆಸೆಯೊಳ್ ಪ್ರ- ಸನ್ನವಾದನು ಸೋಮನಾಥನೆಂದೆನುತ2 ಪಾದ ಪ್ರತ್ಯಕ್ಷವಾಗಿಯೆ ಸೋಮೇಶನೆಂದೀಗ ತಾ ಮೆರೆದುದು ಭುಕ್ತಿ ಮುಕ್ತಿಯನಿತ್ತು ಪ್ರೇಮದಿಂ ಸಲಹುತ್ತ ಕಾಮಿತಾರ್ಥವನೀವ 3 ಲೋಕೋಪಕಾರಕ್ಕೆ ಸೋಮೇಶ ನೀ ಬಂದೆ ಗೋಕರ್ಣ ಶ್ರೀಶೈಲ ಕಾಶಿ ರಾಮೇಶ್ವರವು ಬೇಕೆಂಬುದಿಲ್ಲಿನ್ನು ಎನ್ನ ಭೀತಿಯ ಗಿರಿಯ ಕುಲಿಶ ನೀನು ಜಗದೀಶ 4 ಜೋಕೆಯೊಳು ಮನದೊಳಗೆ ಅಡಗಿಸಿಯೆ ಭಜಿಸಿದರೆ ಯಾಕೆ ಮನದೊಳು ಬಿಡುವೆ ಶಿವನಾಮವನು ನೀನು ಏಕೆ ಕಡೆಯಲಿ ಕೆಡುವೆ ಮರುಳು ಜೀವನವೆ 5 ಸಡಗರದಿ ಸರ್ವವೂ ನಿನ್ನಲ್ಲಿ ಅಡಗಿದುದು ಜಡೆಯೊಳಗೆ ಅಡಗಿದುದು ಪೊಡವಿಗುತ್ತಮ ನದಿಯು ಉಡುಪತಿಯು ಅಡಗಿದನು ಊಧ್ರ್ವ ಫಣೆಯೊಳಗೆ ಪಿಡಿಯೊಳಗೆ ಅಡಗಿದುದು ವೇದ ಮೃಗರೂಪಾಗಿ 6 ಕಿಚ್ಚು ಅಡಗಿತು ಅವನ ಅಚ್ಚ ಹಣೆಗಣ್ಣಿನೊಳು ಮುಚ್ಚಿ ತೆರೆವಕ್ಷಿಯೊಳು ಮೂಜಗದ ಬೆಳಕು ಬಿಚ್ಚಿಟ್ಟಿ ವಿಷಕಂಠದೊಳು ಲೋಕವನು ಎಚ್ಚರಿಪ ಮಂತ್ರಗಳು ಬಾಯೊಳಗಡಗಿದುದು 7 ಶುದ್ಧ ಸ್ಫಟಿಕ ಥರದ ಕಾಯಕಾಂತಿಗಳುಳ್ಳ ಬದ್ಧುಗೆಯ ದಾರದಂದದಿ ಉರಗನೊಪ್ಪುಗಳು ಉದ್ದಿಶ್ಯವಾಗಿ ಭಜಿಸಿದ ಭಕ್ತರುಂಡಗಳು ತಿದ್ದಿಟ್ಟಿ ಆಭರಣ ತಿರಿಶೂಲಧರಣ 8 ಪುಲಿಕರಿಯ ಪೊಳವುಗಳು ನಳನಳಿಪ ವಸನಗಳು ಹೊಳೆವ ಮುಖತೇಜಗಳು ನಳಿನನೇತ್ರಗಳು ನಲಿವಗಣ ಕೋಟಿಗಳ ಮಧ್ಯದೊಳು ಕೈಲಾಸ ಇಳಿದು ಬಂದನು ನಮ್ಮ ಬಳಿಗೆ ಸೋಮೇಶ 9 ನಾಸಿಕದಿ ಕೌಮಾರಿಗವಧಿಯಾಗಿಹ ಸ್ಥಳ ವಿ- ಶೇಷವಾಗಿಹ ಶುದ್ಧ ರೌಪ್ಯಪುರದೊಳಗೆ ಭೂಸುರೋತ್ತಮಗೊಲಿದು ಭೂರಿಭಾಗ್ಯವನಳೆದು ವಾಸವಾದೆಯೊ ಜಗದೀಶ ಸೋಮೇಶ 10 ಭಾಳನೇತ್ರನೆ ನೀಲಕಂಠ ಶೂಲಾಸ್ಥಿಧರ ಕಾಲರುದ್ರ ವ್ಯಾಳಭೂಷ ಸರ್ವೇಶ ಲಾಲಿಸೈ ಬಿನ್ನಪವ ಪಾಲಿಸೆನ್ನನು ಬೇಗ ಬಾಲಕನು ಅಲ್ಲವೇ ಭಕ್ತಸುರಧೇನು 11 ಸಾರಿ ನೋಡಿರೊ ಮೂರು ಲಿಂಗವನು ನೀವೀಗ ಧಾರುಣಿಯಳೊಂದು ಶಿವಲಿಂಗವನು ಬೇಗ ಮೇರುವಿಗೆ ಸಮವಾದ ಹೇಮವನು ವಿಪ್ರರಿಗೆ ಧಾರೆಪೂರ್ವಕವಾಗಿ ಇತ್ತ ಫಲ ಒದಗುವುದು 12 ಶಿವನ ಪೂಜೆಯೆ ಭಕ್ತಿ ಶಿವನ ಪೂಜೆಯೆ ಮುಕ್ತಿ ಶಿವಮಂತ್ರವೆ ಶಕ್ತಿ ಶಿವನೆ ಪರಶಕ್ತಿ ಶಿವನಾಮವನು ಭಜಿಸಿ ಸಿರಿಯ ಪಡೆದನು ಹರಿಯು ಶಿವನ ಮರೆಯದೆ ಭಜಿಸು ಇಹಪರವ ಸೃಜಿಸು13 ನಿನ್ನನೇ ನಂಬಿದೆನು ಉನ್ನತಾನಂತೇಶ ಮನ್ನಿಸಿ ದಯದೋರು ಚಂದ್ರಮೌಳೀಶ ಇನ್ನು ಭಯವಿಲ್ಲೆನೆಗೆ ಹರಸೆನ್ನ ಸೋಮೇಶ ಎನ್ನೊಡೆಯ ಶ್ರೀಕೃಷ್ಣ ವರಾಹತಿಮ್ಮಪ್ಪ 14
--------------
ವರಹತಿಮ್ಮಪ್ಪ
ಸಿದ್ಧಬಸವ ಪ್ರಸಿದ್ಧನ ಮಹಿಮೆಯ ಕೇಳಿರಿ ನೀವಿನ್ನು |ವಿದ್ಯಾ ಬುದ್ಧಿ ಧನ ಧಾನ್ಯವನು ಸಿದ್ಧಿಸುವವಿನ್ನೂ ಪ ಶಿವನ ಅಪ್ಪಣೆ ತೆಗೆದುಕೊಂಡು ಶಿವಕಂಚಿಯೊಳಗೆ |ಪಾವನ ಚರಿತ ಬ್ರಾಹ್ಮಣನಲ್ಲಿ ಪುಟ್ಟಿದನು ಬೇಗ ||ದಿವಸ ದಿವಸಕೆ ಬೆಳೆದನು ಬಿದಗಿ ಚಂದ್ರಮನ ಹಾಗೆ |ಜಾವ ಜಾವಕೆ ಶಿವನ ಧ್ಯಾನವ ಮಾಡುವ ಮನದೊಳಗೆ 1 ಮುಂಜಿ ಮಾಡಿಸಿಕೊಂಡನು ಸಿದ್ಧನು ಮದುವೆಯಾಗಲಿಲ್ಲ |ರಂಜಿಸುತಿಹನು ಸೂರ್ಯನಂತೆ ತೋರುವ ಜಗಕೆಲ್ಲ ||ಬಂಜೆ ಒಬ್ಬಳು ಇದ್ದಳು ಆಕೆಗೆ ಮಗನ ಕೊಟ್ಟನಲ್ಲ |ಸಂಜೆ ಹಗಲು ಕಾಣದ ಕುರುಡಗ ಕೊಟ್ಟನು ಕಣ್ಣುಗಳ 2 ತಂದೆ ತಾಯಿಗೆ ಹೇಳಿದನಾಗ ಪೋಗುವೆ ನಾನೆಂದು |ಕಂದ ನಮ್ಮನು ಬಿಟ್ಟು ಪೋಗುವದುಚಿತವೆ ನಿನಗೆಂದು ||ಅಂದ ತಾಯಿಗೆ ವಂದಿಸಿ ಹೇಳಿದ ಮಗನಾಗುವೆನೆಂದು |ಸಂದೇಹವು ಬೇಡೆಂದು ಪೇಳುತ ತೆರಳಿದ ದಯಾಸಿಂಧು 3 ಮಹಾಶಿವಾಲಯ ಕಂಡನು ಸಿದ್ಧನು ದೇಶ ತಿರುಗುತಲಿ |ಆ ಸೀಮೆಯಲಿ ಹಳ್ಳದ ನೀರು ನಿರ್ಮಲ ನೋಡುತಲಿ ||ಆಸನ ಹಾಕಿ ಕುಳಿತನು ಶಿವನ ಧ್ಯಾನವ ಮಾಡುತಲಿ |ಆ ಸಮಯದಿ ಬಂದನು ಕರಣಿಕ ಹೊಲಗಳ ನೋಡುತಲಿ 4 ಉದ್ದಂಡ ಸಂತತಿ ಆಗಲಿ ಇನ್ನು 5 ನಿನ್ನಯ ಪೂಜೆಯ ಮಾಡುವದ್ಹೇಗೆ ಹೇಳೋ ನಮಗೀಗ |ಮನ್ನಿಸಿ ಅವಗೆ ಪೇಳಿದ ಸಿದ್ಧ ಪುರುಷನು ತಾ ಬೇಗ ||ಸಣ್ಣ ಬಿಂದಿಗೆಯನಿಟ್ಟು ದ್ವಿಜರ ಪಾದೋದಕವೀಗ |ಸಂಖ್ಯೆಯಿಲ್ಲದ ಕೊಡಗಳ ಹಾಕಲು ತುಂಬದು ಎಂದೀಗೆ 6 ಅಂದಿಗೆ ಉಂಟು ಇಂದಿಗೆ ಇಲ್ಲ ಎನಲಾಗದು ನೀನು |ಸಂದೇಹವಿಲ್ಲ ಆಶ್ವೀನ ವದ್ಯ ದ್ವಿತೀಯದ ದಿನವು ||ಇಂದಿಗೆ ಕರಣಿಕ ವಂಶದವರು ಮಾಡುತಾರೆ ಇನ್ನೂ |ಮುಂದಕೆ ತೆರಳಿ ಕೊಳಕೂರಕೆ ಬಂದ ಸಿದ್ಧ ತಾನು 7 ಗಾಣಿಗರ ಮನೆಯೊಳಗಿದ್ದು ಗಾಣಾ ಹೂಡಿದನು |ಪ್ರಾಣ ತೊಲಗಿದ ಹೆಣ್ಣುಮಗಳಿಗೆ ಪ್ರಾಣವನಿತ್ತಾನು ||ಗೋಣಿಯೊಳಗೆ ಹೊಲಿದು ನದಿಯಲಿ ಪಾಚ್ಛಾ ಹಾಕಿದನು |ಕಾಣಿಸದಂತೆ ಬೇಗನೆ ಹೊರಗೆ ಹೊರಟು ಬಂದಾನು 8 ಹೆಸರು ನಿನ್ನದು ಏನು ಎಂದು ಪಾಚ್ಛಾ ಕೇಳಿದನು |ಹೆಸರು ನನಗೆ ಬಸವನೆಂದು ಕರೆತಾರೆ ಇನ್ನು ||ಪಶು ನೀನಾದರೆ ಸೊಪ್ಪಿಯ ಬೇಗ ತಿನಬಾ ಎಂದನು |ನಸು ನಗುತಲಿ ಸೊಪ್ಪಿಯ ತಿಂದು ಡುರಕಿ ಹೊಡೆದಾನು 9 ಗೊಂಬಿಗೆ ವಸ್ತಾ ಸೀರೆಯನುಡಿಸಿ ಸಿಂಗಾರ ಮಾಡಿದನು |ರಂಭೆಗೆ ಸರಿ ಈ ಹೆಣ್ಣು ಮಗಳಿಗೆ ಮದುವ್ಯಾಗೋ ನೀನು ||ಅಂಬುಜ ಮುಖಿ ಬಾರೆಂದು ಕರೆದನು ಸಿದ್ಧ ಮುನೀಶ್ವರನು |ತುಂಬಿದ ಬಸುರೊಳು ಮಗನ ಪಡೆದಳು ವಂಶಾದೆ ಇನ್ನು 10|| ನೇಮವ ಮಾಡಿ ಕೊಳಕೂರದಿ ಇರುವೆನು ನಾನೆನುತ |ಈ ಮಹಿಮೆಯೊಳಗೆ ಭೀಮಾ ದಕ್ಷಿಣವಾಹಿನಿ ಮಹಾಕ್ಷೇತ್ರ ||ಗ್ರಾಮಸ್ಥರನು ಕರೆದು ಹೇಳಿದನು ಅಡಗುವೆ ನಾನೆನುತ |ನೀವು ಮಾತ್ರ ನಾವಿದ್ದ ಸ್ಥಳವನು ನೋಡಬೇಡೆನುತ 11 ಕಲಿಕಾಲವನು ಕಂಡು ಸಿದ್ಧನು ಅದೃಶ್ಯನಾದನು |ತಿಳಿದು ಭಕ್ತಿ ಮಾಡಿದವರಿಗೆ ವರಗಳ ಕೊಡುತಿಹನು ||ಸುಳಿವನು ಕಣ್ಣಿಗೆ ಸತ್ಪುರುಷರಿಗೆ ಸಿದ್ಧ ಬಸವ ತಾನು |ಹಲವು ಹಂಬಲ ಮಾಡಲು ಬೇಡರಿ ಇರುವೆ ನಾನಿನ್ನೂ 12 ಹನ್ನೆರಡು ನುಡಿ ಸಿದ್ಧನ ಸ್ತೋತ್ರವ ಕೇಳಿದವರಿಗೆ |ಮುನ್ನ ಮಾಡಿದ ಪಾಪವು ನಾಶಾಗಿ ಹೋಗುವದು ಬೇಗ ||ಧನ್ಯನಾಗುವ ಕೀರ್ತಿ ಪಡೆಯುವ ಲೋಕದ ಒಳಗ |ಚನ್ನಾಗಿ ಶ್ರೀಪತಿ ಗುರುವಿಠ್ಠಲನು ಒಲಿವನು ತಾ ಬೇಗ 13
--------------
ಶ್ರೀಪತಿ
ಸಿಂಧು ಶಯನ ಬಾರೆಲೋ - ಮಂದರೋದ್ಧಾರೀಇಂದಿರೆಯರಸ ಮುಕುಂದನೇ ಪ ಮಾಧವ ಹೇ ದಯಾಂಬುಧೆ - ವಂದಿಸುವೆ ತ್ವತ್ಪಾದ ದ್ವಂದ್ವಕೇ ಅ.ಪ. ಹೃದಯ ಮಧ್ಯದಿ ಮಂಟಪಾ - ಬುಧ ಜನ ವಂದ್ಯಸಿದ್ಧವಾಗಿಹುವು - ಮಾಧವಾ |ಸಿದ್ಧ ಸಾಧನ ಪವನ - ಉದಾನಾದಿಗಳೆಲ್ಲಹೆದ್ವಾರಗಳ ಕಾದಿಹರೋ ||ಮಧು ವಿರೋಧಿಯೆ ನಿನ್ನ ಪದ - ಸದ್ವನಜ ಕೀರುತಿ ಸುಧೆಯ ಸವಿಯುವಮುದವ ಕರುಣಿಸು ಶ್ರೀದ ನರಹರಿ - ಹೃದಯ ಸದನಕೆ ವದಗಿ ಬೇಗ 1 ಚಿತ್ತ ಸಿಂಹಾಸನವೂ - ಚಿತ್ತ ಜನಯ್ಯಾಸ್ತೋತ್ರ ರತುನ ಖಚಿತವೂ ||ಉತ್ತಮ ಮತಿ ಸುದತೇರೂ - ಛತ್ರಿ ಚಾಮರಗಳಎತ್ತಿ ಬೀಸುತಲಿಹರೋ ||ಕೃತ್ತಿವಾಸನ ಸಖನೆ ಪರಮ ಸು - ಹೃತ್ತಮೋತ್ತಮ ಚಿತ್ಸುಖ ಪ್ರದಚಿತ್ತವಿಸು ಚಿತ್ತಾಖ್ಯ ಪೀಠಕೆ - ಸತ್ಯಕಾಮ ಶರಣ್ಯ ಶಾಶ್ವತ 2 ಭವ ಪಿತ ತೋಯ ಜಾಕ್ಷನೆ -ದಾಯ ನಿನ್ನದು ಎನ್ನ ಗತಿಗೇ ಪ್ರೇರ್ಯ ಪ್ರೇರಕ ಶ್ರೀಗುರು - ಗೋವಿಂದ ವಿಠಲನೆ ಕಾಯೊ ಬೇಗ 3
--------------
ಗುರುಗೋವಿಂದವಿಠಲರು
ಸುರಾಸುರಾರ್ಚಿತ ಸರೋಜಲೋಚನ ಸರಾಗದಿಂದೆನ್ನನೀಕ್ಷಿಸೈ ಪರಾಪರೇಶನೆ ಪರಾತ್ಪರನೆ ನೀ ಪರಾಕುಮಾಡದೆ ಪಾಲಿಸೈ ಪ ವಿರಾಜಮಾನ ಸುವಿರಾಜವಾಹನ ವಿರಾಟ್ಪುರುಷ ವಿಶ್ವಂಧರ ಕರಾರವಿಂದದಿ ಕರಾದಿಗಳ ಪಿಡಿ ಧರಾತಿಮರ್ದನ ಧುರಂಧರ 1 ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ ಧರಾಮರರ ಬಹುಪರಾಭವವ ಬಲು ಸರಾಗದಲಿ ನಿರ್ವಾಪಣ 2 ಜರಾಮರಣಗಳ ನಿರಾಕರಿಸಿ ವಸುಂಧರಾಭರಣ ಗುಣಭೂಷಣ ಸುರಾರಿಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ 3 ಶಿರೀಷ ಕುಸುಮದ ಸರಿಸುಕೋಮಲಶರೀರ ನಿನ್ನದು ಈ ಪರಿ ಸಿರಿಯುದರದೊಳೇ ಸಿರಿಯಧರಿಸಿದ ಪರಿಯದೆಂತುಟೋ ಕೇಳ್ ಹರಿ 4 ಪಯೋಧಿತನಯಾ ವಯೋಸುರೂಪನೆ ದಯಾನಿಧೇ ಧರ್ಮಾತ್ಮನೆ ದಯಾರಸದಿ ಹೃತ್ಪಯೋಜಮಧ್ಯದಿ ನಿಯಾಮಿಸುವ ನಿರ್ಮಾಯನೆ 5 ವರೇಣ್ಯ ಸಜ್ಜನ ಶರಣ್ಯ ಪುಲಿಗಿರಿಯರಣ್ಯ ಮಧ್ಯವಿರಾಜಿತ ಹಿರಣ್ಮಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ 6 ವ್ಯಾಘ್ರನೆಂಬುವತ್ಯುಗ್ರ ದೈತ್ಯನಂ ನಿಗ್ರಹಗೈದ ಮಹಾತ್ಮನೆ ಶೀಘ್ರದಿ ಭಕ್ತಾನುಗ್ರಹಮಾಳ್ಪ ಸುರಾಗ್ರಗಣ್ಯ ಪುಣ್ಯಾತ್ಮನೆ 7 ಸುರರು ನರರು ನಿನ್ನರಿಮೆಯನರಿಯದೆ ನಿರುತವು ಸನ್ನುತಿಗೈವರೆ ಪರಮಪುರುಷ ಸುಖಕರ ನೀನೆನ್ನುತ ಪರಿಪರಿ ನಿನ್ನನೆ ಪೊಗಳ್ವರೆ 8 ಮೂಜಗ ಮಾಡುವ ಪೂಜೆಯಿಂದ ನೀನೀ ಜಗದಲಿ ಒಲಿದಿರ್ಪೆಯ ಮೂಜಗ ಪೂಜಿಪ ವ್ಯಾಜದಿಂದ ನಿಜಪೂಜೆಯ ನೀ ಕೈಗೊಂಬೆಯ 9 ನಿಜಪದದೊಳು ನೀನಜಭವ ಮುಖಸುರವ್ರಜಗೋಚರನಾಗಿಲ್ಲವೈ ಸುಜನರ ಪೊರೆಯವ ನಿಜಮತಿಯಿಂದಲಿ ತ್ರಿಜಗಕ್ಕೆ ಗೋಚರನಾಗಿಹೈ10 ನಿತ್ಯತೃಪ್ತ ನೀನತ್ಯುತ್ತಮ ನಿಜಭೃತ್ಯನಮತ್ರ್ಯನು ಮೋದದಿ ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ 11 ಧರಣಿಯೊಳುರುತರ ಮೆರೆಯುವ ಫಣಿಭೂ ಧರದೊಳು ನಿರುತವು ಭಕ್ತರ ಸಿರಿವಲ್ಲಭ ವರದ ವಿಠಲ ಕರುಣಾಕರ 12
--------------
ವೆಂಕಟವರದಾರ್ಯರು
ಸ್ತ್ರೀರೂಪಿ ಶ್ರೀ ಗಾಯತ್ರೀ ನಾಮಕನ ಸ್ತೋತ್ರ ಶ್ರೀಗಾಯತ್ರೀ - ನಮಸ್ತುಭ್ಯಂ - ಗತಿಪ್ರದೇಉ- ದ್ಗೀಯೇಕಪದೇ - ದ್ವಿಪದೇ | ತ್ರಿಪದೇ - ಚತುಷ್ಪದೇ ಪದೇ ಪ ನಾಗಹ - ರಥಿಕಾ - ನಾಗಶಯನಾ - ಹಿರಣ್ಯಾ ವರ್ಣಾಗಗನಮಣಿ ಕೋಟಿ ಭಾಸಮಾನಾ - ಭಕ್ತ ಶರಣ್ಯಾನೀಗುವ ಭವರೋಗವ | ಹೃತ್ಕಮಲದಿ ತೋರುವಬಾಗುವ ಜನ ಕಾಯುವ | ಶ್ರೀ ಹರಿ ಮುದ ಬೀರುವ ಅ.ಪ. ಜ್ಯೋತಿರ್ಮಯಾವೂ - ಮಂಡಲದಿಂ - ತವರೂಪಜ್ಯೋತಿಯಲಿ ಮುಸುಕಿಹುದು - ಭಕ್ತಗದೂನೀ ತೋರ್ವುದು - ಮಹ ಮಹಿಮನೆ - ಹೇ ಪೂರ್ಣಈ ತೋಕನ ಸ್ವಾರೂಪಿಕ - ಜ್ಞಾನಧನ ಪ್ರಾಪಕ ಸನ್ನುತ ಚರಣಭೌತಿಕ ವಿಶರಣ ಧನ | ಪಾಲಿಸು ಸುಮನಾ 1 ವೇದಮಾತೆಯೇ - ಆದಿಕತ್ರ್ರೇ ಗುಣಾಪಾರೇಮೋದ ದಕ್ಷಿಣ ಪಕ್ಷೇ - ಪ್ರಮೋದ ಉತ್ತರ ಪಕ್ಷೇಭೇದಾದಿರಹಿತೇ - ಆವಯವಾದಿಯಲಿ - ಸುಮಹಾರೇಭೋದಿಪೆ ಬ್ರಹ್ಮಾದಿಗೆ ಕಪಿ | ಲಾದಿ ರೂಪಿ ಹರೇ ದ್ರುತ - ಕಾದುಕೋ | ಅಭಯಕರೇ | ಪುಸ್ತಕ ಭೂಷಿತ ಕರೆಸಾಧುಗಳಘಗಳ್ಹರೇ- ಕಾಯುವುದೆನ್ನ ಶ್ರೀಹರೇ 2 ಭೂತೇಶ ಶ್ವೇತ ದ್ವೀಪಾದಿ ಪದದ್ರುತ - ಗೇಯ ಗುರು ಗೋವಿಂದ ವಿಠಲ | ಸೂರ್ಯನೋಳ್ದೇಯ ನೆಲ ಗಾಯ ಕರ್ಮಾಯ ಪಟಲ | ಪರಿಹರಿಸುವ ವಿಠಲ3
--------------
ಗುರುಗೋವಿಂದವಿಠಲರು
ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ ಕಾಮಿತಾರ್ಥವನೀವ ಕರುಣಿ ಭೂದೇವಿ ಪ ಹರಿಯ ಪಾದದಲುದಿಸಿ ಹರಿಗೆ ವಧುವೆನಿಸಿ ಹರಿಗೆ ಸುತೆಯನು ಇತ್ತು ಹಿರಿಯಳಾದೆ ಹರಿನಾಮ ಕೀರ್ತನೆಯ ಹೊರೆವ ಧಾರುಣಿ ನಿನ್ನ ಮೊರೆಹೊಕ್ಕೆ ಮರೆಯದಿರು ಕರುಣದೋರೆನಗೆ 1 ಕ್ಷಮೆ ದಮೆಯು ಶಾಂತ ಸದ್ಗುಣವೊಪ್ಪುವಳೆ ನಿನಗೆ ಭ್ರಮೆಬಟ್ಟು ಭೂಭುಜರು ಕಡಿದುಕೊಳುತಿಹರು ಅಮಿತ ಮಹಿಳೆ ನಿನ್ನ ನಿಜವ ಬಲ್ಲವರಾರು ತಮಗೆ ಋಣವಿದ್ದುದನು ಕೊಂಡೊಯ್ವರಲ್ಲದೆ 2 ಚಿನ್ನ ಭಂಡಾರಗಳು ನಿನ್ನೊಡಲೊಳೊಪ್ಪಿದವು ಉನ್ನಂತ ರತುನಗಳು ನಿನ್ನೊಳಡಗಿಹವು ಅನ್ನ ಪಾನಂಗಳಿಗೆ ಬೀಜ ಮೂಲವೆ ನೀನು ನಿನ್ನ ಮರೆತಿಹ ಜನಕೆ ಮುನ್ನ ಸುಖವುಂಟೆ 3 ಒಬ್ಬ ರಾಯನ ಗೆಲುವೆ ಒಬ್ಬ ರಾಯನಿಗೊಲಿವೆ ಒಬ್ಬನಿಗೆ ಮೈಯ ನೀನು ಕೊಡುವೆ ಒಬ್ಬರಾದರು ನಿನ್ನ ನಿಜದಿ ಬಾಳ್ದಪರಿಲ್ಲ ಗರ್ಭಜಾತನ ಹರಿಯ ಕೈಯ ಕೊಲಿಸಿದೆಲಾ 4 ಅಂಬುಧಿಯೆ ವಸನಗಳು ಕುಂಭ ಕುಚಗಳೆ ಗಿರಿಯು ಸಂಭ್ರಮದ ನದಿ ಕಾಲುವೆ ನಿನ್ನ ಬೆವರುಗಳು ಎಂಭತ್ತನಾಲ್ಕು ಲಕ್ಷ ಜೀವರಾಶಿಗಳೆಲ್ಲ ತುಂಬಿಕೊಂಡಿರುತಿಹುದು ಅಂಗೋಪಾಂಗದಲಿ 5 ಮೂಢನಾದೆನು ನಿನ್ನ ಬೇಡಿಕೊಂಬರೆ ಮನದಿ ರೂಢಿ ದೇವತೆಯೆ ಮಾಡು ದಯವನು ನೀನು ಮನದಭೀಷ್ಟವನೆಲ್ಲ ಪಾಡು ಪಂಥವು ಬೇಡ ಪಡೆದ ಮಗನೊಡನೆ 6 ನಂಬಿದೆನು ನಾ ನಿನ್ನ ಕುಂಭಿನಿಯೆ ಕೈವಿಡಿದು ಇಂಬಾದ ಪದವಿಯನು ಸಂಭ್ರಮದಿ ಕೊಡುತ ಬೆಂಬಡದೆ ವರಾಹತಿಮ್ಮಪ್ಪ ಕರುಣದಲಿ ಹಂಬಲಿಪ ತೆರದಿಂದ ಸಲಹುವುದು ಜಗದಿ 7
--------------
ವರಹತಿಮ್ಮಪ್ಪ
ಹರನಕುಮಾರನ ಚರಣಕಮಲಗಳಿಗೆರಗಿ ಶಾರದೆಗೆ ವಂದಿಸುತ ಶರಧಿಶಯನಗೆ ಸೆರಗೊಡ್ಡಿ ಬೇಡಿಕೊಂಬೆ ಶರಧಿಸುತÉಯ ಕತೆಗ್ವರವ 1 ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೆ ಇಕ್ಷುಚಾಪದವನ ಪಡೆದ ಮೋಕ್ಷದಾಯಕಳೆ ಮಾಲಕ್ಷುಮಿ ಕರುಣಾಕ- ಟಾಕ್ಷದಿ ನೋಡಬೇಕೆನ್ನ 2 ಶ್ರಾವಣಮಾಸದಿ ಮೊದಲ ಶುಕ್ಕುರುವಾರ ಮಾ- ಧವನರಸಿ ಮಾಲಕ್ಷ್ಮಿ- ದೇವೇರ ಮಹಿಮೆ ಕೊಂಡಾಡುವೋದೀ ಕಥÉ ಕಿವಿಗೊಟ್ಟು ಕೇಳೋದು ಜನರು 3 ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ ಮಡದಿ ಮಕ್ಕಳ ಸಹಿತಾಗಿ ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ ಬಿಡದೊಂದು ಮನೆಯ ತಿರುಗುತಲಿ 4 ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳು ಹಸುಗೂಸುಗಳು ಮನೆತುಂಬ ಅಶನ ವಸನವಿಲ್ಲ ಹಸಿದ ಮಕ್ಕಳಿಗ್ಹಾಲು ಮೊಸರು ಅನ್ನವು ಮೊದಲಿಲ್ಲ5 ಅತಿಗುಣವಂತರು ಗತಿಯಿಲ್ಲ ಗ್ರಾಸಕ್ಕೆ ಮಿತಭೋಜನವ ಮಾಡುವರು ವ್ರತ ನೇಮ ನಿಷ್ಠೆ ನಿರುತ ದರಿದ್ರವನು ಶ್ರೀಪತಿ- ಸತಿ ದಯದಿ ನೋಡಿದಳು 6 ಒಂದು ದಿನದಿ ಬಂದ ಮಂದಿ ಮಂದಿರದಲ್ಲಿ ಚೆಂದಾದ ಸುಣ್ಣ ಸಾರಣೆಯು ರಂಗವಲ್ಲಿ ಚಿತ್ರ ಬಣ್ಣಕಾರಣೆ ಮಣಿ- ಮುಂದೆ ತೋರಣ ಕಟ್ಟುತಿರಲು 7 ಮನೆಮನೆಯಲ್ಲಿ ಮಾಲಕ್ಷ್ಮಿದೇವಿಯರ ಚಟ್ಟಿಗೆ ಬರೆವು- ದನು ತಾ ಕಂಡು ಇದು ಏನು ನೋವಿ (ನೋಂಪಿ?) ಎನಗೆ ಹೇಳಬೇಕೆಂದು ಘನ ಭಕ್ತಿಯಿಂದ ಕÉೀಳಿದನು 8 ಕ್ಷೀರಸಾಗರದಲ್ಲಿ ಹುಟ್ಟಿದ ಮಾಲಕ್ಷ್ಮಿದೇವಿ ದೇವರ ಪಟ್ಟದರಸಿ ಶ್ರಾವಣಮಾಸ ಸಂಪತ್ತು ಶುಕ್ಕುರುವಾರ ನಾವು ಪೂಜೆಯ ಮಾಡಬೇಕು9 ಎನಗೊಂದು ಚಟ್ಟಿಗೆ ಬರೆದುಕೊಟ್ಟರೆ ಎನ್ನ ಮನೆಯಲ್ಲಿ ಇಟ್ಟು ಪೂಜೆಪೆನು ವಿನಯದಿಂದ್ಹೇಳಿಕೊಂಡರೆ ಒಂದು ಚಟ್ಟಿಗೆ ಬರೆದÀುಕೊಟ್ಟರು ಬಲಗೈಲಿ 10 ಸಿರಿದೇವಿಚಟ್ಟಿಗೆ ಹಿಡಿದು ಗೋಪಾಳಕ್ಕೆ ಹೋದನು ಮನೆ ಮನೆಯಲ್ಲಿ ಗೂಡೆ ಅಕ್ಕಿ ಬ್ಯಾಳೆ ಬೆಲ್ಲತುಪ್ಪವ ತಂದು ನೀಡೋರು ಹಿಡಿ ಹಿಡಿರೆಂದು 11 ಕುಸುಮ ಮಲ್ಲಿಗೆ ಪತ್ರಫಲಗಳು ಪೂಜಾ ಸಾಧನ ಪದಾರ್ಥಗಳು ಆದಿಲಕ್ಷ್ಮಿದಯ ಆದಕಾರಣದಿಂದ ಆದರದಿಂದ ಕೊಡುವರು 12 ತಂದ ಪದಾರ್ಥ ತನ್ನ್ಹೆಂಡತಿ ಕರೆದು ಮುಂದಿಟ್ಟು ವಾರ್ತೆಗಳ ಹೇಳಿದನು ಇಂದು ಪೂಜೆಯ ಮಾಡು ಆ- ನಂದವ ಕೊಡುವಳು ನಮಗೆ13 ಕಬ್ಬು ಬಿಲ್ಲ್ಹಿಡಿವೋ ಕಾಮನ ಮಾತೆ ಮಾಲಕ್ಷ್ಮಿ ಉರ್ವಿಯೊಳುತ್ತಮಳೀಕೆ ಹಬ್ಬದೂಟಕÉ ಹೇಳಿ ಬಂದೆ ಬ್ರಾಹ್ಮಣಗÉ ಮ- ತ್ತೊಬ್ಬ ಮುತ್ತೈದೆಗ್ಹೇಳೆಂದ14 ಚಿಕ್ಕಸೊಸೆ ಎಣ್ಣೆ ಕುಂಕುಮ ಕೈಯಲ್ಲಿ ತಕ್ಕೊಂಡು ನಡೆದಳ್ಹಾದಿಯಲಿ ಚೊಕ್ಕ ಚಿನ್ನದ ಗೊಂಬೆಯಂಥ ಮುತ್ತೈದೆ ತಾ ಗಕ್ಕನೆ ಬಂದು ಕೇಳಿದಳು 15 ಹುಡುಗಿ ನೀ ಎತ್ತ ಪೋಗುವಿಯೆ ನಿಮ್ಮನೆಯೆಲ್ಲೆ ಅಡಿಗೆಯೇನೇನು ಮಾಡುವರು ಹಿಡಿದೆಣ್ಣೆ ಕುಂಕುಮ ಕೊಡುವೋದಿನ್ನ್ಯಾರಿಗೆ ಕೊಡಬಾರದೇನೆ ನೀಯೆನಗೆ 16 ದಾರಾದರೇನಮ್ಮ ದಾರಿ ನೋಡದ ಮುಂಚೆ ನೀನೇ ಬಾ ನಮ್ಮ ಮಂದಿರಕÉ ಹೇಳಿ ಮುತ್ತೈದೆಗೆ ಹಿಗ್ಗಿಲೆ ಬಂದತ್ತೆ ಮಾವನ ಮುಂದರುಹಿದಳು 17 ಮನೆಯ ಸಾರಿಸಿ ಸುಣ್ಣ ಕಾರಣೆ ರಂಗೋಲಿಯ ಬರೆದು ಬಾಗಿಲಿಗೆ ಬಣ್ಣವನು ಎರೆದು ಕೊಂಡೆಲ್ಲರು ಬ್ಯಾಗ 18 ಕಮಲ ಕ್ಯಾದಿಗೆ ಕಬ್ಬು ಕದÀಳಿ ಕಂಬವು ಬಾಳೆಗೊನೆ ಕಟ್ಟಿ ಚಿತ್ರ ಮಂಟಪವ ನಡುವ್ಯ್ಹಾಕಿ ಪದ್ಮ ಪೀಠಗಳ 19 ಚಟ್ಟಿಗೆಯೊಳಗಕ್ಕಿ ಐದು ಫಲವ ತುಂಬಿ ಮುತ್ತೈದೇರೆಲ್ಲ ನೆರೆದು ಕಟ್ಟಿದರ್ ಕೊರಳ ಮಾಂಗಲ್ಯ ಮಾಲಕ್ಷ್ಮಿ ಪ್ರತಿಷ್ಠೆ ಮಾಡಿದರು ಸಂಭ್ರಮದಿ 20 ಅರಿಷಿಣ ಕುಂಕುಮ ಗಂಧ ಬುಕ್ಕಿ ್ಹಟ್ಟು ಗೆಜ್ಜೆ- ವಸ್ತ್ರವು ಪಾರಿಜಾತ ಸಂಪಿಗೆಯು ಮುಡಿಸಿ ಮಲ್ಲಿಗೆದಂಡೆ ಒಡೆಸೆ ತೆಂಗಿನಕಾಯಿ ಉಡಿ ತುಂಬುತ್ತತ್ತಿ ಫಲಗಳು 21 ಭಕ್ಷ್ಯಶಾವಿಗೆ ಪರಮಾನ್ನ ಚಿತ್ರಾನ್ನ ಸಣ್ಣಕ್ಕಿ ಶಾಲ್ಯಾನ್ನ ಸೂಪಗಳು ಚಕ್ಕುಲಿ ಗಿಲಗಂಜಿ ಚೆಂದ ಚಿರೋಟಿ ಹಪ್ಪಳ ಸಂಡಿಗೆ ಆಂಬೊಡೆಗಳು22 ಘೃತ ಕ್ಷೀರ ಸಕಲ ಪಕ್ವಾನ್ನ ಮಂಡಿಗೆ ಬೀಸೋರಿಗೆ ಗುಳ್ಳೋರಿಗೆಯು ಚಂದ್ರನಂತ್ಹೊಳೆವೊ ಶಾವಿಗೆಯ ಫೇಣಿಯು ದಿವ್ಯ ಬುಂದ್ಯ ಬುರುಬುರಿ ಅನಾರಸವು23 ಬೇಕಾದ ಬೇಸನ್ನು ಬಿಳಿಯದಳಿಯದುಂಡೆ (?) ಮೋತಿಚೂರು ಚೂರ್ಮಲಾಡು
--------------
ಹರಪನಹಳ್ಳಿಭೀಮವ್ವ
ಹರಿಯೆ | ಕರುಣ ವಾರಿಧಿಯೆ | ಧೊರೆಯೇ |ವರ ಚರಣ ಸೇವೆಯನು ಕೊಡು ಹರಿಯೇ ಪ ಗಾಂಗೇಯ | ಶರದಿ ಸೆಣೆಸಲು ಅಂದುಸರಸದಲಿ ನೀ ಅವನ | ಪೊರೆಯಲಿಲ್ಲವೆ ಎಂದು 1 ದುರುಳ ದುಶ್ಯಾಸನ | ಸೀರೆ ಸಭೆಯಲಿ ಸೆಳೆಯೇತರಳೆ ಪಾಂಚಾಲೆ | ಓಲೆ ಕಳುಹಿದಳೆ ಹರಿಯೆತರುಳೆ ಕೈಗಾಯ ಬೇಕೆಂದು | ನಿನ್ನ ಧೊರೆಯೇಎರಳಾಕ್ಷಿಗಕ್ಷಯ್ಯ | ವಸನಿತ್ತೆ ಹರಿಯೇ 2 ಅಂದು ಬಲತಾಯಿ ಬಾಲಕನ | ತೊಡೆಯಿಂದ ನೂಕೇ |ಬಂದು ಕಾನನಕೆ ತಪಗೈದ | ತರಳನನು ಕಾಯ್ದೇ |ಇಂದು ನಾ ಮಾಡಿದಪರಾಧ | ವೇನಯ್ಯ ಹರಿಯೇ |ಕಂದನಪರಾಧ ಎಣಿಸುವಳೆ | ತಾಯಿ ಧೊರೆಯೇ3 ಗೌತಮರ ಮಡದಿಯನು | ಕಾಯಲಿಲ್ಲವೆ ಹರಿಯೆಔತಣವ ಕೊಟ್ಟು ಬರ | ಹೇಳಿದಳೆ ಧೊರೆಯೇ ||ವೀತಶೋಕನೆ ಎನ್ನ | ಮೊರೆ ಕೇಳಿಸದೆ ಹರಿಯೇಔತಪ್ರೋತ ನೀನೆಲ್ಲವನು | ತಿಳಿದಿರುವೆ ಧೊರೆಯೇ 4 ಬಲಿಯ ಯಾಚಿಸುತ | ನೀ ಅವನ ವಂಚಿಸಿದಿ ಹರಿಯೆತಲೆ ಬಾಗಲಲಿ ನಿಂದು | ನೀ ಅವನ ಪೊರೆದೆ ಧೊರೆಯೆಸಲೆ ಬೀದಿ ಬೀದಿಯಲಿ | ನಾ ಕೀರ್ತಿಸುವೆ ಹರಿಯೇಬಲು ದಯಾಪರ ಗುರು | ಗೋವಿಂದ ವಿಠಲೆಂದು ಧೊರೆಯೆ 5
--------------
ಗುರುಗೋವಿಂದವಿಠಲರು
ಹಲವು ಸಂಭ್ರಮಗಳಿಂ ಮನೆ ಕಟ್ಟಿದೀ ದೇವ ಪ ನೆಲೆಗೆಡಿಸಿ ಅದನಿಂದು ಕೆಡಹುತಿರುವೀ ಅ.ಪ ಪ್ರಾರಬ್ಧಕರ್ಮವೆಂತೆಂಬ ಹಳ್ಳವ ತೋಡಿ ಆರು ಜನ ಕೆಲಸಗಾರರನಲ್ಲಿ ಕೂಡಿ ಮೀರಿ ಮಾಯೆಯ ಭಾರಿ ಕಲ್ಕೆಸರುಗಳ ಹೂಡಿ ಭಾರಿನೆಲಗಟ್ಟು ರಚಿಸಿದರೊಂದುಗೂಡಿ 1 ಎಲುವಿನ್ಹಂದರ ಹರಹಿ ಬಲಿದ ಮಾಂಸದ ಗೋಡೆಗಳ ಮೇಲೆ ಚೆÀಲುವ ಚರ್ಮ ಹೊದ್ದಿಸಿ ಜಲರಕ್ತ ಕಾಲ್ವೆಗಳ ಹರಿಸಿ | ಸ್ವಚ್ಛತೆಯಿರಿಸಿ ಬಲುಉಸಿರುಬಲದಿಂದಲದ ಚಲನಗೊಳಿಸಿ 2 ಐದು ಇಂದ್ರಿಯಗಳೇ ದ್ವಾರ ಕಿಟಕಿಗಳಾಗೆ ಐದುಬಗೆ ವಿಷಯಗಳು ಆಹಾರವಾಗೆ ವೈದು ಯಮಪುರಿಗೆ ತಲ್ಪಿಸÀಲುಣಿಸನಿದನುಂಡು ಐದಿದುದು ನರಕಕೂಪಕೆ ಜೀವದಂಡು 3 ಕ್ಷೇತ್ರಜ್ಞ ನೀನು ನಿನ್ನಯ ಕಣ್ಣಮುಂದಿಂತು ಗಾತ್ರದಲಿ ವಾಸಿಪ ಜೀವನು ನಿನ್ನ ಮರೆತು ಕ್ಷೇತ್ರಘಾತಕಕಾರ್ಯವೆಸಗುತಿರಲಂದಂದೆ ನೇತ್ರ ಹಸ್ತಗಳ ಛೆÉೀದಿಸದೆ ಉಳುಹಿದೆಯೆಂತು 4 ಸರ್ವಸ್ವತಂತ್ರನೀ ಜೀವ ಪರತಂತ್ರನವ ಗರ್ವ ಅಜ್ಞಾನ ಅಂಧತೆಗಳಲಿ ಸಿಲುಕಿ ಸರ್ವ ದುಷ್ಕರ್ಮಗಳ ನಡೆಸಿ ಕೆಡಸಿಹನಿದನು ಸರ್ವದಾ ಕ್ಷಮಿಸಿ ಪೊರೆ ರಘುರಾಮವಿಠಲ 5
--------------
ರಘುರಾಮವಿಠಲದಾಸರು
ಹೇಮವತಿಯ ತೀರವಾಸನೇ | ನಾರಸಿಂಹಪ್ರೇಮದಿಂದ ಕಾಯೋ ಬೇಗನೇ ಪ ನಾಮಮಾತ್ರ ಸಲಹುತಿರುವ | ಸ್ವಾಮಿ ನಿಮ್ಮ ಕಂಡು ಭಜಿಸೆಕಾಮಿತಾರ್ಥವಿತ್ತು ಪೊರೆವೆ | ಕಾಮ ಜನಕ ಕಮಲನಾಭ ಅ.ಪ. ಭವದೊಳಾನು ಬಳಲಿ ಬಂದೆನೋ | ಭವ್ಯರೂಪಿಹವಣೆ ತಿಳಿಸಿ ಭವವ ಕಳೆಯಲೋಪವನ ಮತದಿ ಉದಿಸಿಹೇನು | ಭುವನ ಧರಿಸಿ ಮೆರೆಯುವಾನರವಿಯ ಕಂಡು ಹಾರಿದವನ | ಪವನರಾಯನ ಕಾಣೆ ನಾನು 1 ತನುವು ಮನವು ಧನದ ಆಶೆಯೂ | ಪೋಗಲಿಲ್ಲಘನ ಸುಜ್ಞಾನ ಭಕ್ತ್ಯಿ ಭಾವವೂಕನಸಿಲಾದರೊಮ್ಮೆ ಎನ್ನ | ಮನಸ್ಸು ನಿಮ್ಮ ಚರಣ ದ್ವಂದ್ವವನಜದಲ್ಲಿ ನೆಲೆಸಲಿಲ್ಲ | ಅನಘ ನೀನೇ ದಯವ ಬೀರೊ 2 ವನಧಿ ಹರಿಯೆ | ಗುರು ಗೋವಿಂದ ವಿಠ್ಠಲಾನೆ 3
--------------
ಗುರುಗೋವಿಂದವಿಠಲರು
( ನಿಂದಾಸ್ತುತಿ) ಬಹುಲೋಭಿಯೋ ನೀನು ಮುರಹರ ಪ ವರವೇನನೀವೆಯೆನಗೆ ವಿಹಿತದಿ ಪೊರೆ ಮಂದಾರ ಅ.ಪ ಹಾಸಿಕೊಳ್ವ ವಾಸುಕಿಯ ಬೀಸಿ ಬರುವ ಗಾಳಿ ಕುಡಿವ ವಾಸುದೇವನೆ ವಾಹನನ ಪನ್ನಗಾಸನನಾಗಿರುವನಲ್ಲವೆ 1 ಹೆಂಡತಿಯಾಗಿರುವ ಸಿರಿಯಂ ಕಂಡಕಂಡರ ಮನೆಗೆ ಕಳುಹಿ ಮಂಡಿಸುತ್ತ ಭಕ್ತರ ಗೃಹದೊಳುಂಡುಂಡು ತಣಿಯುತಿರುವೆ 2 ವ್ಯಯ ಮಾಡದೆ ಕೈಯಕಾಸ ನಯದಿಂದಲೆ ನಡೆದುಕೊಂಡು ಜಯ ಜಯ ಧಾರಾಳಿಯೆನಿಪ ಜೀಯ ಜನಾರ್ಧನ ಜಾಜಿಕೇಶವ3
--------------
ಶಾಮಶರ್ಮರು