ಒಟ್ಟು 65 ಕಡೆಗಳಲ್ಲಿ , 36 ದಾಸರು , 61 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿಕೊಳ್ಳಿ ಕರುಣವ ಬೇಡಿಕೊಳ್ಳಿ ವೈರಿಯನು ಚಂ- ಕರುಳ ತೆಗೆವುದ ಪ. ಭಯದಿ ನಡುಗಲು ಕೌರವಾನುಜರನು ಕೆಡಹಿ ರಿಪು ವೀರರೆದೆ ಝಲ್ಲೆನಲು ರಂಗದಿ ಹಾರಿ ಕುಣಿವುತ ಗದೆಯ ಕೈಕೊಂಡಾರುಭಟಿಸುವ ಸಿಂಹನಂದದಿ ಧೀರ ರುದರಾವತಾರ ಸಂಗರ ಧೀರ ಖಳ ಪರಿವಾರ ದಹನನ 1 ಘೋರರೊಂದಾಗೆಸೆದ ಪೂರ್ವದ ಕ್ರೂರ ವಾಗ್ಬಾಣಗಳ ತಿರುಹಿಸಿ ದಾರಧರ್ಷಕ ನೀಚನನು ಕೈ ದೋರಿ ಕರೆವುತ ಕಾಳಗಕೆ ಸುರ ವೈರಿಗಳ ಕಳೆಗುಂದುವಂದದಿ ಚೀರಿ ಚಪ್ಪಳಿಸುತ್ತ ಖಳನನು ಧಾರುಣಿಯ ಮೇಲಪ್ಪಳಿಸಿ ಬಹು ಧೀರತನದಿಂದೆಡೆಯ ಬಗೆವದ 2 ಅಪರಿಗಣ್ಯ ಗುಣಾಬ್ಧಿದನುಧಿಪಹಜಾನ ಮನದಲ್ಲಿ ನೆನೆವುತ ಪಂಕಜವ ನೋಡುತ ಕಪಟ ಸದೆದೆ ದೇವನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪಡೆದಲ್ಲದೆ ಮಿಗಿಲು ಬರಲರಿಯದು ಎಡೆ ಬಿಡದೆ ಎಲೆ ಮನವೇ ಏಕೆ ಬಳಲುವಿ ವೃಥಾ ಪ ವನನಿಧಿಯೊಳು ಪೊಕ್ಕು ಸಲಿರೆಡಿ ನೋಡಿದರೂ ಭರದಿ ಬಲುಭಾರವನು ಹೊರಲಿ ಬೆನ್ನಿಲಿ ಧರಗೆ ತಲೆಯನ್ನು ಬಾಗಿ ತಾನು ಯೋಚನೆ ಮಾಡಿ ಪರಿ ಪರಿಯಲಿ ಭಯಂಕರ 1 ಬಡವನೆಂದ್ಹೇಳ ಭರಬಾಗಿಲಲಿ ನಿಂದಿರಲು ದೃಢದಿ ವೈರಿಗಳ ಖಂಡಿಸಲು ಮುದದಿ ಅಡವಿ ಸಂಚರಿಸುತಲಿ ಹಾರೈಸಿ ಹುಡುಕಿದರು ಕಡು ಕಳ್ಳತನ ಕಲೆತು ಕಂಡಕಡೆ ತಿರುಗಿದರು 2 ಬರಿಯ ಬತ್ತಲು ನಿಂತು ನರರಿಗ್ಹೊಂನವ ತೋರಲು ತುರಗವನ್ನೇರಿ ಧರಣಿಯನು ಪಾಲಿಸಲಿ 'ವರ ಹೆನ್ನೆಪುರನಿಲಯ ನರಹರಿಯು ಮಾಡಿದ್ದ ಬರಿದೆ ಚಿಂತಿಸಿ ನೀನು ಭಾಗ್ಯವದರಿಂದೇನು 3
--------------
ಹೆನ್ನೆರಂಗದಾಸರು
ಪರಾಕು ಜೀಯ ವೆಂಕಟರಾಯ ಪರಾಕು ಸರ್ವೋದ್ವøಕ್ತ ನೀನೊಬ್ಬ ಸಾಕು ಉಕ್ತಿಯ ಕೇಳಬೇಕು ಪಾಲಿಸು ಸಾಕು ಪ. ಇಂದಿರಾವರ ದೀನ ಬಂಧು ನಿನ್ನ ಪಾದಾರ- ವಿಂದವೆ ಶರಣವೆಂದು ಹೊಂದಿದೆನಿಂದು ಮಂದ ಭಾವನೆಯ ಕುಂದು ಕ್ಷಮಿಸು ಯೆಂದು 1 ಕಾಲ ಶುಭ ಲೀಲೆಯರಸವೆಂಬ ಪಾಲ ಕುಡಿಸುತೆನ್ನನು ಪಾಲಿಸು ಪದ್ಮ ಲೋಲ ನಿನ್ನಣುಗನನ್ನು ಕೈಪಿಡಿದಿನ್ನು 2 ತಡೆಯದೆ ಸಕಲಾರ್ಥ ಕೊಡುವೆ ಶ್ರೀ ವೆಂಕಟಾದ್ರಿ ಒಡೆಯ ನೀನೊಲಿದಿರಲು ವೈರಿಗಳನ್ನು ಕೆಡವುತ ಸುಖ ಲಾಭವು ಸಿದ್ಧವಾಗಿಹವು 3
--------------
ತುಪಾಕಿ ವೆಂಕಟರಮಣಾಚಾರ್ಯ
ಪಾದ ಸಲಹವೆ ಬಿಡಲಾರೆ ಕಲಿತ ಕಲ್ಮಶವನ್ನು ಸುಲಭಾದಿ ಓಡಿಸು ಪ ಅಂದು ಆ ಕರಿರಾಜ ಸರಸಿಲಿವಂದಿಸಿದಾ ಪಾದ ಪಾದ 1 ನಾರಿಯು ನಿನ್ನ ನೆನದಾ ಮಾತ್ರದಿ ಶೀರಿಯ ಮಾಳೇಗರದಾ ಪಾದ 2 ಕಮಲನಾಭ ನೀನು ದೇವರ ದೇವ ಸುಮನಸರೊಡೆಯನು ಅಮಿತ ಮಹಿಮೆ ತೋರಿ ಭ್ರಮೆಯ ಹರಿಸು 3 ಆರು ವೈರಿಗಳು ಮಿತಿಮೀರಿರುವರು ಕೇಳು ನೀರಜಾಕ್ಷಯನ್ನನಾರು ಕಾಯುವರೊ ಧೀರ ನೀನೇ ಪೇಳು 4 ಪೊರೆಯದೆ ಬಿಡದಿರು ಶಿರಿನುತಚರಣವನ್ನು ತೋರು ನರಸಖ ನಿನ್ನಯ ಕರುಣವ ಬೀರು 5
--------------
ಸಿರಿವತ್ಸಾಂಕಿತರು
ಪಾರ್ವತೀದೇವಿಯ ಸ್ತುತಿ (ಮಂಗಳೂರು ಮಂಗಳಾದೇವಿ) ಮಹಾಮಾಯೆ ದಯದೋರೆಲೆ ತಾಯೆ ಪ. ಸದರದೊಳೆಬ್ಬಿಸುತಿದಿರಾದ ಮದನಾಂಬಾ ಮುದ ದಾಯಿ ಶುಭಪದದಾಯಿ 1 ದೇವತೆಗಳ ಸೇರಿರುವಾ ಮನೋಹರ ತನುವಾಗಿ ನಿಕರ ಮಹಿಷಾಸುರನಾ ಮೃಗಪತಿಗಮನಾ 2 ಖಂಡ್ಯಧಾರೆಯೊಳ್ದಿಂಡರಿದೂ ಖಂಡಿಸುತಾ ರಣ ಮಂಡಲದಿ ಬ್ರಹ್ಮಾಂಡ ನಿದಾನಿ 3 ತ್ರಿಗುಣಜಮಲವು ದಾನವಾರಿಗಳ ಮಾನಿಸಿ ದಿತಿಜರ ಹಾನಿಗೊಳಿಸುವದು ಹರಿಪರವು ಮಹಭರವು ಮನದಿರವೂ 4 ರಕ್ಷಿಸು ಪುರುಕರುಣಿ ಕ್ಷಮೆಯಿಂದಂ ಭರಣಿ ಖೂಳ ವೈರಿಗಳನೇಳದಂತೆ ಪಾತಾಳಕೆ ಕೆಡಹಿಸು ಮಮ ಜನನಿನೀಲ ಮೇಘ ನಿಭ ವೆಂಕಟರಾಜನ ಲೋಲಕಟಾಕ್ಷಸದಾಕರುಣಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಪೊರೆಯಲಿದು ಸಮಯ ಗೋವಿಂದ ದೇವ ಶರಣರಕ್ಷಕ ನೆಂಬ ಬಿರುದು ಮೆರೆದ ಮುಕುಂದ ಪ ಬಂಧನದ ಭವದೊಳಗೆ ನಾನೊಂದು ದಿನ ಸುಖವನರಿಯೆ ಮಂದ ಮತಿಯಲಿ ತೊಳಲಿ ಕಂದಿಕುಂದಿ ಮುಂದು ಗಾಣದೆ ಯಮನ ಬಂಧದೊಳು ಸಿಲುಕಿದನು ಮಂಧರಧರ ಕರುಣಸಿಂಧು ನೀ ಬಂದು 1 ಘೋರ ತಾಪವು ಬಂದು ಸಾರಿ ಎನ್ನನು ಮುಸುಕೆ ಭೋರ ನುರಿಯಲಿ ಬಳಲಿ ಚೀರಿಹಾರಿ ದುರಿತ ವಾರಿಧಿಯೋಳ್ ಬಿದ್ದು ಬಾಯಾರಿ ಮೊರೆಯಿಡುವೆ ನರಕಾರಿ ದಯತೋರಿ 2 ತಂಡತಂಡದಿ ವೈರಿಗಳು ಕೂಡಿ ಕಾಯದೊಳು ಅಂಡುಗೊಂಡೆನ್ನಳೆದು ತಂದು ಕೊಂಡು ಹಿಂಡು ಖಂಡವನು ಸುಟ್ಟುರುವಿ ನುಂಗುವರೆನುತ ಕಂಡು ಕೊಂಡಾನು ಸಾರಿದೆನಿಂದು ಬಂದು 3 ತರಳತನ ದಾಯಸದÀಲಿ ನೊಂದೆ ಮುನ್ನಬಲು ತರುಣಿಯರ ಸಂಗದಲಿ ಮರುಳಾದೆನು ಜರೆಬಂದು ಮುಸುಕಿ ಕಣ್ಗಾದೀ ಪರಿಯಭವ ಶರಧಿಯೊಳು ಮುಳುಗಿ ಮೊರೆಯಿಡುವ ಚಿನ್ಮಯನೆ 4 ಹಿಂಗದಿದು ಭಯವ ಪೇಳಲು ತೀರದೆನಗೆ ಶ್ರೀ ರಂಗನಿನ್ನಧೀನ ಜನವರಿಯಲೂ ಮಂಗಳಾತ್ಮಕ ವಾಯುಜನ ಕೋಣೆ ಲಕ್ಷ್ಮೀಶ ನಿನ್ನ ಡಿಂಗರಿಗನ ಕಾಯ್ವುದೀಗ ಸಮಯ ಕೃಪಾಳೋ 5
--------------
ಕವಿ ಪರಮದೇವದಾಸರು
ಬಂದದ್ದನುಭವ ಮಾಡ್ವೆ ಕಂದನಾಗಿರುವೆ ತಂದೆ ನಿನ್ನಯ ದಯವೊಂದಿರಲಿ ಹರಿಯೆ ಪ ಮಂದಿ ಮಕ್ಕಳು ಎನ್ನ ಕುಂದಿಟ್ಟು ಜರೆಯಲಿ ಬಂಧು ಬಾಂಧವರೆಲ್ಲ ನಿಂದಿಸಿ ನುಡಿಲಿ ಬಂಧನವು ಬಿಡರಿರಲಿ ಎಂದೆಂದು ಮರೆಯದಂತೆ ಇಂದಿರೇಶ ನಿಮ್ಮ ಧ್ಯಾನವೊಂದೇ ಎನಗಿರಲಿ 1 ಭೂಪತಿಗಳೆನ್ನೊಳ್ಕೋಪಮಂ ತಾಳಲಿ ತಾಪಬಡಿಸಲಿ ಮಹಪಾಪಿವನೆನುತ ತಾಪತ್ರಯ ಬಿಡದಿರಲಿ ಪಾಪಲೋಪನೆ ಜಗ ದ್ಯ್ಯಾಪಕನೆ ನಿನ್ನ ಧ್ಯಾಸಪರೂಪ ಎನಗಿರಲಿ 2 ಕಂಡಕಂಡಂತೆ ಜನರು ಭಂಡನೆಂದೆನ್ನಲಿ ತಂಡತಂಡದಿ ಕಷ್ಟ ಅಂಡಲೆದು ಬರಲಿ ಹೆಂಡರು ಸೇರದೆ ಗಂಡನೆಲ್ಲೆಂದೆನಲಿ ಪಂಢರೀಶ ನಿನ್ನ ಪದೆನ್ನ ಮಂಡೆಮೇಲಿರಲಿ 3 ಎತ್ತ ಪೋದರು ಜನರು ಹತ್ರ ಬಡಿಯಲಿ ಎನಗೆ ವಿತ್ತಕೊಟ್ಟೊಡೆಯರು ನಿತ್ತರಿಸದೊದಿಲಿ ಮುತ್ತಿಕೊಂಡ್ವೈರಿಗಳು ಕುತ್ತಿಗೆ ಕೊಯ್ಯಲಿ ಚಿತ್ತಜಪಿತನಿನ್ನ ಭಕ್ತ್ಯೊಂದೆನಗಿರಲಿ 4 ಪೀಡಿಸಲಿ ಬಡತನವು ಕಾಡಿಸಲಿ ದಾರಿದ್ರ್ಯ ಓಡಿಸಲಿ ಪೊಡವಿಪರು ನಾಡ ಬಿಟ್ಟೆನ್ನ ನೋಡಲಿ ಮುನಿದೆನ್ನ ನಾಡದೈವಗಳೆಲ್ಲ ಬೇಡೆನೆ ಶ್ರೀರಾಮ ನಿನ್ನಡಿ ಬಲೊಂದೆನಗಿರಲಿ5
--------------
ರಾಮದಾಸರು
ಬಲಗೊಂಬೆ ಚೆನ್ನರಾಯ ಭಕ್ತರ ಪ್ರಿಯ ಪ ವೇದ ವಾದಗಳಲ್ಲಿ | ಕಾಡುವ ಜನರಲ್ಲಿಓದುವ ವಿದ್ಯೆಗಳಲ್ಲಿ | ವಾದವ ಗೆಲಿಸಯ್ಯ 1 ಆರು ವೈರಿಗಳಲ್ಲಿ | ಅಷ್ಟ ಗಜಂಗಳಲ್ಲಿಮೂರು ಏಳರಲ್ಲಿ | ಮುಂದೆ ನೀ ಗೆಲಿಸಯ್ಯ2 ಪರಮ ಭಕ್ತಿಯೊಳ್ನಿನ್ನ | ಚರಣಕೆರಗುವೆ ಮುನ್ನಸಿರಿಯ ಪಾಲಿಪ ಚೆನ್ನ | ವರದ ಕೇಶವ ರನ್ನ3
--------------
ಕನಕದಾಸ
ಬೂದಿಯ ಹಚ್ಚಿರೊ ಶುದ್ಧ ವೈಷ್ಣವರಿದ- ರಾದಿಯ ತಿಳಿಯಲು ಕೇಳಿ ಬಲ್ಲವರು ಪ ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ ಮೂಲ ಮಂತ್ರಂಗಳ ಜಪಿಸುವ ಬೂದಿ ಮೂಲಾಧಾರವ ತೋರುವ ಬೂದಿ ಕಾಲ ಕರ್ಮಂಗಳ ಕಡಿವಂಥ ಬೂದಿ 1 ಏಳು ಸುತ್ತಿನ ಒಳಗೆ ಇರುವಂಥ ಬೂದಿ ಏಳು ವೈರಗಳನ್ನು ಕಳೆವಂಥ ಬೂದಿ ಏಳು ಅಗಳ ದಾಟಿ ಹಾರುವ ಬೂದಿ ಬ- ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ 2 ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ ಕುಂಭಕದೊಳಗದ ಇರಿಸುವ ಬೂದಿ ಸಂಭ್ರಮದಿ ಅರಸನ ಗೆಲುವಂಥ ಬೂದಿ ಅಂಬರಕಾಗಿಯೆ ಲಂಬಿಪ ಬೂದಿ 3 ಪಂಚಾಗ್ನಿಯಿಂದಲೆ ಬೆಂದಿಹ ಬೂದಿ ಪಂಚತತ್ವಂಗಳನು ಗೆಲುವಂಥ ಬೂದಿ ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ ವಂಚಿಸಿಕೊಳ್ಳದೆ ಧರಿಸುವ ಬೂದಿ 4 ಆರು ವೈರಿಗಳನ್ನು ತೂರುವ ಬೂದಿ ಆರು ಭಾವಗಳನ್ನು ಬೇರಿಟ್ಟ ಬೂದಿ ಆರು ಭ್ರಮೆಗಳನ್ನು ಕಡಿದಿಟ್ಟ ಬೂದಿ ಆರಿಗೂ ತೋರದೆ ಹಾರುವ ಬೂದಿ 5 ಅಷ್ಟಮದಂಗಳ ಕಟ್ಟುವ ಬೂದಿ ದುಷ್ಟಾತ್ಮರನ್ನು ಅಟ್ಟುವ ಬೂದಿ ಕುಟ್ಟೆ ಹಿಡಿವ ಬೀಜಕಿಟ್ಟಿಹ ಬೂದಿ ಭ್ರಷ್ಟಕರ್ಮಗಳನ್ನು ಸುಟ್ಟಂಥ ಬೂದಿ 6 ಸಕಲ ಋಷಿಗಳೆಲ್ಲ ಧರಿಸುವ ಬೂದಿ ತ್ರಿಕರ್ಣ ಶುದ್ಧದಿ ತುಂಬಿದ ಬೂದಿ ಮಕರಕುಂಡಲಧರ ಮರುಳಹ ಬೂದಿ ಸಖನಹ ವರಾಹತಿಮ್ಮಪ್ಪ ಬೂದಿ 7
--------------
ವರಹತಿಮ್ಮಪ್ಪ
ಭಾರ ನಿನ್ನದು ದೇವಾ ಭಕುತ ಸಂಜೀವಾ ಪ ದೂರ ನೋಡದೆ ಪೊರೆಯೊ ದುರಿತಗಳ ತರಿಯೊ ಅ.ಪ. ಮೂರನೆ ಗುಣದಿಂದ ಮತ್ತನಾಗಿ ಬಹಳ ಮೂರು ವಿಧ ವಿಷಯದಲಿ ಮಗ್ನನಾದೆ ಮೂರುಖಾಗ್ರೇಸರಿಗೆ ಮುಂದಾವಗತಿಯೈಯ ಮೂರಾವತಾರವುಳ್ಳ ಮರುತಾತ್ಮಜನೆ 1 ಆರು ಮೂರರ ದ್ವಾರದ ಸ್ಥಿರದ ಮನೆಯೊಳಗೆ ಆರು ವೈರಿಗಳು ಕಂಡಾವಾಗಲೂ ಆರು ಬಿಡಿಸದ ಬವಣೆ ಬಡಿಸುತಲೈದಾವರೆ ಆರೆರಡು ಪೆಸರುಳ್ಳ ಅಂಜನಾತ್ಮಜನೆ 2 ಪಂಚೇಂದ್ರಿಯಗಳು ಕೂಡೆ ಪರಿಪರಿ ಬಗೆಯಿಂದ ಪಂಚಮಹಾ ಪಾತಕಕೆ ಎಳೆಯುತಾರೆ ಪಂಚಕಷ್ಟಕೆ ಗುರಿಯು ಆಗಲಾರೆನು ಪ್ರಾಣ ಪಂಚಪದಕವೇ Pದರುಂಡಲಗಿ ಹನುಮಯ್ಯ 3
--------------
ಕದರುಂಡಲಗಿ ಹನುಮಯ್ಯ
ಮರೆಯದಿರೆಲೊ ಮನುಜಾ ಮಾಧವನನ್ನು ಮರೆಯದಿರೆಲೋ ಶುದ್ಧ ಮರುಳೆ ಮಾತನು ಕೇಳು ಪರಿಪರಿಯಲಿ ನಮ್ಮ ಪೊರೆವ ಕಾರುಣಿಕನ ಪ. ತನ್ನ ಸೇವೆಗೆ ಸಾಧನವಾಗಿಹ ದೇಹ- ವನ್ನು ಪಾಲಿಸಿದವನ ಯಿನ್ನು ನೀ ತಿಳಿಯದೆ ಅನ್ಯ ದೈವಗಳನ್ನು ಮನ್ನಿಸಿ ಮನದಣಿದನ್ನ ನಾಯಕನನ್ನು 1 ಹಸ್ತ ಪಾದಾದಿಗಳ ಕೊಟ್ಟದರಿಂದ ವಿಸ್ತರಿಸಿರುವಾನಂದ ತೋರುವ ಸುರ ಮಸ್ತಕ ಮಣಿಯನು ಮರೆತು ಮೂಢರ ಸೇರಿ ಬಸ್ತಕನಂತೆ ನಿರಸ್ತನಾಗದೆಯೆಂದು 2 ಮನೆಯಲಿ ನಿಲಿಸಿರುವ ವಾಕ್ಕಾಯಕರ್ಮ ಮನದಲಿ ತುಂಬಿರುವ ನಮ್ಮಯ ಸರ್ವ ವನು ತನಮನ ತಾನೆ ನೆನೆದು ಪಾಲನೆ ಗೈವ ವನಜನಯನ ಲಕ್ಷ್ಮಿಯಿನಿಯನ ಮಹಿಮೆಯ 3 ದುರಿತರಾಶಿಯನರದು ದುರ್ ಹೃದಯರ ತರಿದು ಕಾಲಿಂದಲೊದೆದು ಸಿರಿ ಸಹಿತವಾಗಿ ನಮ್ಮಲ್ಲಿರುವನ ಸರ್ವಾಮಯ ಹರ ಪದದಲ್ಲಿ ಭಾರವಿರಿಸು ವಿಚಾರಿಸು 4 ಬಿಡು ಬಿಡು ಭ್ರಾಂತಿಯನು ಮುರಾಂತಕನ- ಲ್ಲಿಡು ನಿನ್ನ ಚಿಂತೆಯನು ಕಡಿವನು ವೈರಿಗಳ ಕೊಡುವನು ಶುಭಗಳ ಒಡೆಯ ವೆಂಕಟಪತಿ ತಡಿಯ ತೋರುವನೆಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ಯಾತಕೆನ್ನ ಮೇಲಿನ್ನು ಪಂಥ ಸಾಕೊ ಶ್ರೀಕಾಂತ ಪ. ಘೋರ ಷಡ್ವೈರಿಗಳಾರುಭಟಿಗಳನ್ನು ದೂರಗೈದರೆ ನಿನ್ನ ಮಂದಿರವನು ಸಾರಿಸಿ ಶುಚಿಗೈವನಿಂದಿರಾ- ವರ ಬಾರೊ ಭಕ್ತ ಕುಮುದ ಚಂದಿರಾ ಶ್ರುತಿ ಸಾಗರಾ ಲೋಕೈಕ ಸುಂದರಾ 1 ವ್ಯರ್ಥವಾಗಿ ಬಹಿರರ್ಥದಿ ಮಾನಸ ವರ್ತಿಸದಿರೆ ನಿನ್ನ ನೋಡುವೆ ಬಹ- ಳರ್ಥಿಯಿಂದಲಿ ಪಾಡಿ ಪೊಗಳುವೆ ಮೋಹ ಕಾರ್ಥ ಶಾಸ್ತ್ರವ ದೂರ ದೂಡುವೆ ಪುರು- ಷಾರ್ಥದಾಯಕ ನಿನ್ನ ಕೂಡುವೆ 2 ಪತಿಯೆಂದು ಸಂಭ್ರಮಗೊಂಬೆನು ಭೂ- ಪತಿಯಲಿ ನೀನಿಹೆಯೆಂಬೆನು ಸಮ ರತಿಯಿಂದ ಪುರುಷ ಸುಖವುಂಬೆನು ಭಕ್ತಿ ಸತಿಯರ ಭರವನಿಂತು ಕಾಂಬೆನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಲೋಕನೀತಿಯ ಪದಗಳು 448 ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡುನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳುಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗ ಪ್ರ-ಸನ್ನ ಮೂರುತಿಯಾಗುರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನುಭೂಸುರರಿಗಿತ್ತು ಮನ್ನಿಸು ಉದಾರನಾಗುಮನ್ನೆಯರೆಲ್ಲರು ಬಂದುನಿನ್ನನೋಲೈಸಲೆಂದು ಅಪರ್ಣೆಪರಿಸಿದಳು 1 ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚಕೋಟಿ ಗಜದಾನ ಶತಕೋಟಿಯಶ್ವದಾನಗಳಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-ರೀಟ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿಧಾಟಿಯಾಗಿರುವನಾಗುಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿಜೂಟ ಭಕ್ತನಾಗು 2 ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗುಪೆತ್ತವರ ನೋಡಿ ನಲಿವುತ್ತಿರಲು ಭೂಸುರರುಮುತ್ತಿನಕ್ಷತೆಯನಾಂತುಪೃಥ್ವಿಯ ವೊಳಗೆಲ್ಲಾ ಸ-ರ್ವೋತ್ತಮ ಪುರುಷನಾಗೆನುತ್ತಮಸ್ತಕದಿ ತಳಿವುತ್ತ ಪರಸಿದರು 3 ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-ಗೇಂದ್ರ ನೀನಾಗುಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗಇಂದಿರೆ ಪರಸಿದಳು4 ಧೀರನಾಗುದಾರನಾಗು ಸೂರಿಜನವಾರಕೆ ಮಂ-ದಾರನಾಗು ಸಂಗರ ಶೂರನಾಗು ವೈರಿ ಜ-ಝ್ಝೂರನಾಗು ಮಣಿಮಯ ಹಾರನಾಗುವೀರಾಧಿವೀರ ನೀನಾಗುಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗುಕಾರುಣ್ಯಸಾಗರನಾಗು ಕಾಮಿತಫಲಿದನಾಗುಶ್ರೀ ರಾಮೇಶನಪಾದಾಬ್ಜ ವಾರಿಜ ಭಕ್ತನಾಗೆಂದುಶಾರದೆ ಪರಸಿದಳು5
--------------
ಕೆಳದಿ ವೆಂಕಣ್ಣ ಕವಿ
ವಶವಲ್ಲದೀ ಮನದ ದೆಸೆಯಿಂದೆ ನಾ ಬಲು ದೆಸೆಗೆಟ್ಟು ಬಳಲುವೆ ಕುಸುಮಾಕ್ಷ ಕಣ್ದೆರೆಯೊ ಪ ನಶಿಪ ಪ್ರಪಂಚ ಭ್ರಮಿಸಿ ಹಸಗೆಡಿಸಿ ನಿಜಧ್ಯಾನ ಪಶುವಿನಂತೆನ್ನನು ದಿಸೆದಿಸೆಗೆಳಿಪುದು ಅ.ಪ ಭುವಿಪರನೊಲಿಸರೆಲವದಿ ಭೂಮಿಯ ಪಡೆದೆ ಸವ ಜೋಡಿ ನೂಕಿತ್ತು ಜವದಿ ಕಟ್ಟುವುದು ಬುವಿಯೊಳು ಮಿಗಿಲೆನಿಸುವ ತೆರೆ ಮೇಲ್ಮಾಡಿ ಭವನ ರಚಿಸಿ ಕೋಟಿದ್ರವ್ಯಗಳಿಗಳುವುದು 1 ಮದುವ್ಯಾಗಿ ಪದ್ಮಿನಿಯ ವದನದೊಳ್ವದನಿಕ್ಕಿ ಮದನಕದನದಿ ಸುಖಿಸುವುದೊಂದು ಫ¼ಗಿ ಸದನ ಮುರಿದು ಸಂ ಪದವೆಲ್ಲ ತನ್ನಗೆ ಒದಗಿಬರಲೆನ್ನುವುದು 2 ತಡೆಯದೆ ವೈರಿಗಳ ಕಡುಕೋಪದಿಂ ತಂದು ಪಿಡಿದು ಕಂಬಕೆ ಕಟ್ಟಿ ಸುಡಿಸುವುದೊಡನೆ ಕಡುಗಲಿತನದಿಂದ ಪೊಡವಿಪರ ಸದೆಬಡಿದು ಪೊಡವಿ ಗೆಲಿದು ಒಂದೇ ಕೊಡೆಯಿಂದಾಳುವುದು 3 ಯಾತ್ರೆ ಮಾಡುವುದೊಮ್ಮೆ ಕ್ಷೇತ್ರದೊಳಗೆ ಕೂತು ನೇತ್ರಮಂ ಬಂಧಿಸಿ ಸ್ತೋತ್ರ ಮಾಡುವುದು ಮೂತ್ರದ್ವಾರದೆ ಬಂದ ಸೂತ್ರದ ಕಾಯಕ್ಕೆ ಧಾತ್ರಿ ಸೊನ್ನೆಂದೊಮ್ಮೆ ಖಾತ್ರಿ ಮಾಡುವುದು 4 ಯಾತರ್ಹಲವು ಪರಿಮಿತಿಯಿಲ್ಲದ್ಯೋಚಿಸಿ ಖತಿ ತಾಳಲಾರೆ ಅತಿಭ್ರಷ್ಟಮನದ ದುರ್ಮತಿ ನಿವಾರಿಸು ಗತಿ ನೀಡೆನಗೆ ಕೃಪೆಯಿಂ ಹಿತಭಕ್ತ ಶ್ರೀರಾಮ 5
--------------
ರಾಮದಾಸರು
ಶರೀರ ಜರಿಯಬೇಡಾ | ಬೆರಿಯಬೇಡಾ | ಸ್ಥಿರವಿದ್ದ ಕೈಯಲಿ ಗುರು ಶರಣವ ಹೊಕ್ಕು | ತಾರಿಸೋ ಭವದಿಂದ ನೀ ಮರಳು ಜೀವವೇ ಪ ಲೋಕದೊಳು ವಾರಿಜೋದ್ಭವ ನಿನ್ನ ಜನ್ಮ ಕೊಟ್ಟು | ನೂಕಲಾಗ ತಾಯಿ ಗರ್ಭದೊಳಾವರಿಸಿ ತಾನು ಧರಿಸಿ | ರೇಖೆ ರೂಪ ಲಾವಣ್ಯ ಅವಯವಂಗಳಿಂದ | ಸಾಕಾರವಾಗಿ ಸುಂದರೆನಿಸಿ ವರನೆನಿಸಿ | ಬೇಕಾದ ವಿದ್ಯವನು ಸರ್ವ ಸಂಪಾದಿಸಲು | ತಾ ಕಾರ್ಯವಾಗಿ ಅಭ್ಯಾಸದಿಂದಾ ಧ್ಯಾಸದಿಂದಾ | ವಾಕ್ಪಟುದಲಿ ಸಮರ್ಥನೆಂಬನಾಮ ಪಡೆದು | ಪ್ರಖ್ಯಾತವಾದೆ ಈ ಕಾಯದಿಂದ 1 ಸ್ನಾನವನು ಮಾಡಿ ತ್ರಿಕಾಲ ಸಂಧ್ಯಾನ ವಿಧಿಯನು | ಮೌನ ಜಪಗಳವನು ತಪಗಳನು | ಸ್ವಾನುಭಾವ ಸೂರ್ಯಾಡಲಾಗಿ ನೇಮವನುಷ್ಠಾನ ಮೊದಲಾದ | ಧ್ಯಾನ ಧಾರಣವನು ಕಾರವನು | ಜ್ಞಾನ ಭಕ್ತಿ ವೈರಾಗ್ಯ ಶಮದಮ ಕರುಣನು ದಿನಮಾಳ್ಪಾ | ಕರ್ಮ ನೈಮಿತ್ಯವಾದಾ ನಿತ್ಯವಾದಾ | ತಾನು ತನ್ನ ಉದ್ಧರಿಸಿಕೊಳಲಿಕ್ಕೆ ಭಾವದಿಂದಾ | ಮಾನುಭಾವg ದಯ ಪಡೆವುದರಿಂದಾ 2 ತಾನು ಕುಣಿಯಲಾರದೆ ಅಂಕಣವು ಡೊಂಕು ಎಂದು | ಹೀನೋಯಿಸಿ ನುಡಿವ ನಟ ವೇಷಿಯಂತೆ | ನೀನು ನೀಟ ನಡಿಯದ್ಹೋಗಿ ದೇಹ ಕಶ್ಮಲವೆಂದು | ಜ್ಞಾನ ರಹಿತನಾಗಿ ಹಳಿವುದು ಉಚಿತ ಇದು ಪ್ರಾಚೀತ | ಈ ನಾಲ್ಕೆರಡು ವೈರಿಗಳ ದಂಡಿಸದೇ ಬರಿದೇ | ಹೀನ ವೈರಾಗ್ಯವಾ ಶಣಸಬೇಡಾ ದಣಿಸಬೇಡಾ | ಕಾನನದ ಹುತ್ತಮ್ಯಾಲ ಬಡಿದರೇನು ವರಗಿರುವಾ | ಆ ನಾಗದರ್ಪಗುಂದದು ಕಂಡಾ 3 ಪರಿಪರಿ ಮುಮ್ಮುಳಿ ವಳಗಾಗಿ ಜೀವಿಸುವ | ತೆರನಂತೋಯಂದು ಚಿಂತಿಸಬಹುದು ಸುರಿಸಬಹುದು | ನೂರು ಭಂಡಿಗಳ ತÀುಂಬಿ ಬಂದರೇನು ತಾ | ಧರೆಯೊಳು ಸೂಲ ತಾ ಹಾವುದೊಂದೇ ನೋವುದೊಂದೇ | ಬರೆದ ಬರಹವೇ ಪಣಿಯಾಲಿದ್ದಪರಿ ತಪ್ಪದೈ | ವರ ಕೂಡಿ ಕೊಟ್ಟಡವಿ ಮಾಡುವದೇನು ನೋಡುದೇನು | ಪರಿ | ಪಡಿ ನೀನು 4 ಸಾಕ್ಷರಾವೆಂಬ ಮೂರಕ್ಷರವ ಬರೆದು ತಾ | ರಾಕ್ಷಸಾವೆಂಬುದೇ ಅರ್ಥವಹುದು ಅನರ್ಥ ವಹುದು | ಪರಿ ವಳಿತು ಹೊಲ್ಲೆ | ಪಕ್ಷದ್ವಯಕ ಬಾಹುದು ಮಾಡಿದಾಂಗ ಕೂಡಿದಾಂಗ | ರಕ್ಷಿಸೆಂದು ಮಹಿಪತಿಸುತ ಜೀವನಾದಿ ವಿಶ್ವಾ | ಭವ ಹಿಂಗು ಬ್ಯಾಗ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು