ಒಟ್ಟು 78 ಕಡೆಗಳಲ್ಲಿ , 35 ದಾಸರು , 77 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನನ್ನ ಕರ್ಮವು ಬಂದು ಇನ್ನು ಬಾಧಿಸುತಿರೆ ಅನ್ಯರೇನ ಮಾಡುವರೈ ಪ ಕನ್ನೆ ಶಿರೋಮಣಿ ದ್ರೌಪತಿ ವರದನೆ ಎನ್ನ ಪಾಲಿಸೊವೋ ಪ್ರಸನ್ನ ರಂಗನಾಥ ಅ.ಪ ಭಿಕ್ಷಕ್ಕೆ ಬಂದಾಗ ಲಕ್ಷ್ಯವಿಡದೆ ಹೋಗಿ ಸಾಕ್ಷಿಯ ನಾಕಂಡೆನೈ ಪಕ್ಷಿ ವಾಹನನೆ ನೀರಕ್ಷಿಸಬೇಕಯ್ಯ ಸಾಕ್ಷಾತನೆಂತೆಂಬೊ ಮೋಕ್ಷಾಧಿಕಾರಿಯೆ 1 ದೋಷಕ್ಕೆ ಗುರಿಯಾದೆನೈ ಆಶೆಯ ಬಿಡಿಸಯ್ಯಾ ಶ್ರೀ ವೆಂಕಟರಮಣ ದೋಷರಹಿತ ಗುರುವು ದಾಸ ತುಲಸೀರಾಮ 2
--------------
ಚನ್ನಪಟ್ಟಣದ ಅಹೋಬಲದಾಸರು
ನರಹರಿಯೆ ಪಾಲಿಸೈ ಪ ನರಹರಿಯೆ ಪಾಲಿಸೈ ಕರಿವರದನೆ ಕಲುಷಾಂತಕವರ ಅ.ಪ ಕರಚರಣಗಳೆರಡರ ಪರಮೊದಗಿರೆ ಹರಿಹರಿ ನಿನಗಿದ ನೊರೆವೆಹುದೊ 1 ಭಜಿಪ ಭಜಕ ನಿಜದ್ವಿಜಗುಣಮಣಿ ಹಯಧ ಸಾರಥಿ 2 ಸಿರಿಧರ ಮುರಹರ ಮುನಿಜನ ಭಯ ಹರ ಕರುಣ ತುಲಸೀರಾಮಾ ಗುರುವೆ ತಾನಾದ 3
--------------
ಚನ್ನಪಟ್ಟಣದ ಅಹೋಬಲದಾಸರು
ನೀ ಕೊಟ್ಟಿದುಣುವಲ್ಲಿ ಭಕ್ತಿ ಹರುಷ ಪ ಶ್ರೀಕಾಂತ ನೀಡೆನಗೆ ಸಾಕು ಬೇಕೆನ್ನಿಸದೆ ಅ.ಪ. ನಾ ಬಲ್ಲೆನೆ ಎನ್ನ ಹಿತಾಹಿತಗಳ ಬಗೆಯ ನೀ ಬಲ್ಲ ಸರ್ವಜ್ಞ ನಮ್ಮ ಕ್ಷೇಮ ನೀ ಬಂಧು ಅನಿಮಿತ್ತ ಅನಂತ ಕಾಲಕ್ಕೂ ಆ ಬ್ರಹ್ಮಸ್ತಂಭಾಂತ ಸಂಸಾರಿ ಸರ್ವೇಶ 1 ಕಂಸಮರ್ದನ ಎನ್ನ ಸಂಶಯಗಳಿಯಯ್ಯ ಹಂಸ ಸದ್ಗುಣ ಪೂರ್ಣ ಪುರುಷ ಶ್ರೀಶ ಪರಿ ಹರಿಸಿ ನಿನ್ನ ಜ್ಞಾನವ ನೀಡೊ ಸ್ವಾಂಶಿಗಳ ಗುಣರೂಪ ಕ್ರಿಯದಿಂದ ದೇವ 2 ನಿತ್ಯ ಮಿತ್ರನೆ ನಮಗೆ ಅನುಗಾಲ ಸಲಹುವಿ ತಾಯಿಯಂತೆ ಬಿನಗು ದೈವಗಳಳಿವ ಜಯೇಶವಿಠಲ ನಿತ್ಯ ಮೂರ್ತಿ 3 ನೀನಿತ್ತ ಭೋಗಗಳು ನಿನಗೊಪ್ಪಿಸುವೆನೆನಲು ಏನು ಕಾರಣ ಬರದು ಆನಿವರದನೆ ಕೇಳೋ ಪ್ರಾಣಪತಿ ಜಯೇಶವಿಠಲನೆ ಕರುಣಾಬ್ಧಿ 4
--------------
ಜಯೇಶವಿಠಲ
ನೊಂದು ಬಳಲಿದೆ ದೇವ ಇಂದಿರೇಶ ಸರ್ವೇಶ ಶ್ರೀಶ ತಂದೆ ರಕ್ಷಿಸಿ ಸಲಹೊ ಶ್ರೀನಿವಾಸ ಪ ಕಂದರ್ಪಜನಕ ಕಾರುಣ್ಯವಾರಿಧಿ ದೇವ ಕಂಸಾರಿ ಶೌರಿ ಅ.ಪ ಸ್ನಾನಜಪತಪವ ನೇಮಗಳ ಬಿಟ್ಟೆ ಮೌನವನು ಬಿಟ್ಟೆ ದಾನಧರ್ಮವ ಕೊಡದೆ ಕೈಬಿಟ್ಟೆ ಶ್ರೀನಿವಾಸನ ಪೂಜೆನೇಮ ನಿಷ್ಠೆ ಮಾಡದಲೆ ಬಿಟ್ಟೆ ಶ್ವಾನ ಸೂಕರನಂತೆ ಹೊರೆದೆ ಹೊಟ್ಟೆ ಏನ ಪೇಳಲಿ ಪರರ ದ್ರವ್ಯಪಹರಿಸುತಿಹ ಹೀನ ಜನರ ಸಂಗಮಾಡಿ ಬಳಲಿ ಬರಿದೆ 1 ಹಿಂದಿನ ಪಾಪ ದುಷ್ಕರ್ಮ ಫಲವೋ ಇದು ನಿನ್ನ ಒಲವೊ ಸುಂದರಾಂಗನೆ ರಕ್ಷಿಸೆನ್ನ ಸಲಹೊ ಭವ ಕರೆ ಕರೆಯೋ ಭವಬಂಧ ಸೆರೆಯೊ ಇಂದಿರಾರಮಣ ಬಿಡಿಸೆನ್ನ ಪೊರೆಯೊ ಹಿಂದೆ ಮುಂದೆನಗೆ ಗತಿ ನೀನೆಂದು ನಂಬಿದೆ ದೇವ ಮಂದರೋದ್ಧಾರಿ ಮುಚುಕುಂದ ವರದನೆ ಸ್ವಾಮಿ 2 ಬಿಡುತಿಹೆನು ಬಾಯ ಸುಮನಸರವೊಡೆಯ ಬಿಡು ನಿನ್ನ ಮಾಯ ಕಮಲಸಂಭವ ಜನಕ ಬಿಡದೆ ಕಯ್ಯ ಪೊರೆಯುವದು ಶ್ರೇಯ ಕಮಲಾಕ್ಷ ನಮಿಸಿ ಮುಗಿಯುವೆನು ಕಯ್ಯ ಕಮಲ ಪತ್ರಾಕ್ಷ ಸುಜನರ ಕಲ್ಪತರುವೆ ಹೃ- ತ್ಕಮಲದಿ ಪೊಳೆವ ಶ್ರೀ ಕಮಲನಾಭ ವಿಠ್ಠಲ 3
--------------
ನಿಡಗುರುಕಿ ಜೀವೂಬಾಯಿ
ನೊಂದೆನಯ್ಯ ನಂದನಂದನ ಪ. ಹಿಂದು ಮುಂದನರಿಯದಿಂದು ತಂದೆ ನೀನೆ ರಕ್ಷಸೆಂದೇ ಅನನ್ಯಭಾವದೇ ಅ.ಪ. ನೋಡಲಿಲ್ಲ ನಿನ್ನಪದವ ಪಾಡಲಿಲ್ಲ ನಿನ್ನ ಗುಣವ ಮಾಡಲಿಲ್ಲ ನಿನ್ನ ಸೇವೆ ಮೂಢನಂದದಿ ದೂಡಿಸುಜನರ ಸಂಗವನ್ನು ಬೇಡಿ ಕೃಪಣರ ಕರುಣೆಯನ್ನು ಕಾಡುಹರಟೆಯಿಂದ ಕಳೆದೆನಕಟ ಕಾಲಮಂ1 ಉರಿವಕೊಳ್ಳಿಯನ್ನೆ ತುಳಿದೆ ಸುರಿದೆನೀರನುರಿಗೆ ಬರಿದೆ ಹಿರಿಯರುಕ್ತಿಯ ಮೀರಿನಡೆದೆ ಮೆರೆದೆ ಗರ್ವದೆ ಶರಣರನ್ನು ಜರಿದು ನುಡಿದೆ ಪರರ ಹಿಂಸೆಗೈದೆ ಮದದೆ ಪರಮಪಾಪಿಯಾದೆ ನಿನ್ನ ಸ್ಮರಣೆ ಮಾಡದೆ 2 ಅರಿತು ಅರಿಯದಾಚರಿಸಿದಂಥಾ ದುರಿತಗಳನು ಕುರಿತು ಕುರಿತು ಪರಿಪರಿಯೊಳೊರಲುತಿಹೆನು ಪರಮಪುರುಷನೇ ವರದನೆಂಬ ಬಿರುದು ನೆನೆದು ಶರಣುಬೇಡುವ ಕಂದನೆಂದು ಕರವಪಿಡಿದು ಪೊರೆಯೊ ಶೇಷಗಿರಿಯ ವರದನೆ3
--------------
ನಂಜನಗೂಡು ತಿರುಮಲಾಂಬಾ
ಪಚ್ಚೆಯು ಬಂತೀಗ-ಶ್ರೀಪುಲಿಗಿರಿ ಪಚ್ಚೆಯ ನೋಡಿ ಬೇಗ ಪ ಮುಚ್ಚುಮರೆಯಿಲ್ಲದಚ್ಚುತ ನೆಂಬುವ ಅ.ಪ ಕೈಗೆ ಸಿಕ್ಕುವದಲ್ಲವೈತ-ಕ್ಕಡಿಯಲ್ಲಿ-ತೂ ಗಿನೋಡುವದಲ್ಲವೈ ಯೋಗಿ ಹೃದಯದಲ್ಲಿ ಭಾಗವತರೊಳನುರಾಗದಿಮೆರೆಯುವ 1 ಬೆಲೆಯ ಕಟ್ಟುವದಲ್ಲವೈ ಈ ಪಚ್ಚೆಯ ನೆಲೆಯಕಂಡವರಿಲ್ಲವೈ ನಲಿದು ಧ್ಯಾನಿಪರಿಗೆ-ಒಲಿದು ತೋರುವ ದಿವ್ಯ ಜಲಧರವರ್ಣದ ಜಲಜಾಕ್ಷನೆಂಬುವ 2 ಗಿರಿಯೊಳು ನೆಲೆಯಾಗಿಹ ವರದವಿಠಲ ಧೊರೆವರದನೆಂದೆಸರಾದ 3
--------------
ಸರಗೂರು ವೆಂಕಟವರದಾರ್ಯರು
ಪಾದಗಳಂ ನಂಬಿದೆನಾಂ ಶ್ರೀಧರಾಚ್ಯುತಗೋವಿಂದ ಪ ಮಧ್ಯೆದೊಳಾದರದಿ ಕುಣಿಯುತಿರುವಅ.ಪ ಅಳೆದು ಮೂರಡಿಯಿಂದ ಜಗವ ಬಲಿಯ ಪಾತಾಳಕ್ಕೆ ತುಳಿದು ಲಲನೆಗಂಗೆಯ ಪೆತ್ತು ಮಂಗಳಗಳನು ಭಕ್ತರಿಗೀವ ಶುಭದಾ 1 ಧನುವ ಮೆಟ್ಟಿಮುರಿದು ಮೊಳಲಸದಾನಂದದೊಳಿರುವ 2 ಗರಡುದೇವ ನಿತ್ಯಪೊತ್ತ ಸಿರಿಯು ಸದಾ ಒತ್ತುತಿರುವ ಪರಮಪಾವನ ಹೆಜಾ ಜಿಯ ವರದನೆನುತ ನಾರದನೆನೆವ 3
--------------
ಶಾಮಶರ್ಮರು
ಪುರುಷಾರ್ಥ ಪ ವರದ ಅಭೀಷ್ಟೆಯ ಕರದು ಎನಗೆ ನೀ ವರದನೆಂಬೊ ನಿನ್ನ ಬಿರುದನ ರಕ್ಷಿಸು ಅ.ಪ ಅಜನ ಜನಕನÀಲ್ಲಿ ಇರುವಿಯೊ ವಿಜನ ದೇಶದಲ್ಲೀ ಸುಜನರು ಇದ್ದಲ್ಲಿ ಬರುವೆಯೊ ಭಜನೆಮಾಡುವಲ್ಲೀ ಸುಜನರ ತಾಪಕೆ ವ್ಯಜನನು ನೀನೂ ಸುಜನಕಲ್ಪತರು ಕುಜನಕುಠಾರಾ 1 ನಂದನಂದನನೂ ಅವನಿನ್ನ ಬಂಧನದೊಳಗಿಹನೂ ಅಂಧನಾಗಿ ನಾನೂ ಸಂಸೃತಿ ಬಂಧನದೊಳಗಿನ್ನೂ ನೊಂದೆನು ಬೆಂದೆನು ಬಂದೆನು ನಿನ್ನಲಿ ಕಂದನ ಲಾಲಿಸು ಒಂದಿನ ಬಿಡದೆ 2 ಮರೆತೆನು ನಾನಿನ್ನಾ ಅವಗುಣ ಮರೆತು ಪಾಲಿಸು ಮುನ್ನಾ ಪರತರಗುರು ನಿನ್ನಾ ಹೊರತು ಗತಿ ಗುರುತತಿಲ್ಲ ಮುನ್ನಾ ಅರಿತು ಅನಂತಾದ್ರಿ ನಿರತನ ತೋರಿಸು ಮೋದ ಪುರನಿರತ ಸದ್ಗುರುವೆ 3
--------------
ಅನಂತಾದ್ರೀಶರು
ಪೂರ್ಣರೂಪನೆ ಎನ್ನ ಪೂರ್ಣ ಮನದಲಿ ನಿಂತು ಪೂರ್ಣಗೊಳಿಸಭಿಲಾಷೆಯ ಪ. ಪೂರ್ಣ ಚಂದ್ರನ ಕಾಂತಿ ಪೂರ್ಣಧಿಕ್ಕರಿಸುವೊ ಪೂರ್ಣ ಪ್ರಕಾಶ ಹರಿಯೆ | ನೀ ಪೊರೆಯೊ ದೊರೆಯೆ ಅ.ಪ. ಪೂರ್ಣಕಾಮನೆ ಸ್ವಾಮಿ ಪೂರ್ಣ ಆನಂದ ಸಂ- ಪೂರ್ಣ ಗುಣಗಣನಿಲಯನೆ ಪೂರ್ಣ ಭಕ್ತರದಾತ ಪೂರ್ಣ ಲಕ್ಷ್ಮೀಶಪ್ರೀತ ಪೂರ್ಣಭೋಧರ ವರದನೆ ಪೂರ್ಣ ಪ್ರಕಾಶ ನಿನ್ನ ಕಾಣದೆಲೆ ಕಂಗೆಡುವೆ ಪಾದ ನೀಡೋ 1 ಚಕೋರ ಪೂರ್ಣಚಂದ್ರನೆ ಭಕ್ತಿ ಪೂರ್ಣ ಶರಧಿಗೆ ಚಂದ್ರನೆ ಪೂರ್ಣ ಬಾಧೆಯಪಡುವೆ ಪೂರ್ಣಗೈಸೆನ್ನಭವ ಪೂರ್ಣಚಂದ್ರನೆ ತಾಪಕೆ ಪೂರ್ಣ ನಂಬಿರುವೆನೊ ಪೂರ್ಣದಯವನೆಗರೆಯೊ ಪೂರ್ಣ ಕೃಪೆ ಚಂದ್ರಿಕೆ ಈಗಲೇ | ಬೀರೆನ್ನ ಮೇಲೆ 2 ಪೂರ್ಣಚಂದ್ರನ ವಂಶ ಪಾವನವಗೈಯಲು ಪೂರ್ಣ ಯದುಕುಲದಿ ಜನಿಸಿ ಪೂರ್ಣ ಯುದ್ಧದಲಿ ಗೆಲಿಸಿ ಪೂರ್ಣ ರಾಜ್ಯವನಿತ್ತೆ ಪ್ರಾಣಿ ಹೃದ್ಗುಹವಾಸಿ ಪೂರ್ಣ ಶ್ರೀ ವೆಂಕಟೇಶ | ಶ್ರೀ ಶ್ರೀನಿವಾಸ 3 ಪೂರ್ಣತತ್ವಗಳಿಗೆ ಪೂರ್ಣ ಶಕ್ತಿಯನಿತ್ತು ಪೂರ್ಣಗೊಳಿಸಿದೆ ಸೃಷ್ಟಿಯ ಪೂರ್ಣತತ್ವಾಧಿಪತಿ ಪ್ರಾಣದೇವನ ಪ್ರಿಯ ಪೂರ್ಣ ಭಕ್ತರ ರಕ್ಷಕ ಪೂರ್ಣ ಮನೋರಥದಾತ ಜೀವನಂತರ ವ್ಯಾಪ್ತ ಜ್ಞಾನ ವಿಜ್ಞಾನದಾತ | ಸುಜನರಿಗೆ ಪ್ರೀತ 4 ಪೂರ್ಣ ಭೂಮಂಡಲಕೆ ಪೂರ್ಣ ಪ್ರಭು ನೀನೆಂದು ಪೂರ್ಣಬೋಧರು ನುಡಿವರೊ ಪೂರ್ಣ ದೇವತೆಗಳು ಪೂರ್ಣ ನಿನ್ನನು ಭಜಿಸಿ ಪೂರ್ಣ ಪದ ಪಡೆದಿರುವರೊ ಪೂರ್ಣ ಹರಿ ಗೋಪಾಲಕೃಷ್ಣವಿಠ್ಠಲ ಎನ್ನ ಪೂರ್ಣ ಇಚ್ಛೆಯನೆ ಸಲಿಸೊ | ನೀ ಮನದಿ ನೆಲಸೊ5
--------------
ಅಂಬಾಬಾಯಿ
ಬಾಲಚಂದ್ರನ ರೂಪಾ ಭಯನಿವಾರಣ ನೋಡೋ ಬಾಲೆಯರೆಲ್ಲರು ಬಂದು ಕಾದಿರುವಾ ಲೊಲಾನವನ್ನು ಕಂಡು ಹೇಳಲು ನಾ ಬಂದೆ ಆಲಯಕ್ಕೆ ನೀ ಬಾ ಹಸೆಗೇಳೋ ಸೋಬಾನೆ 1 ಪನ್ನಂಗಶಯನ ಬಾರೊ ಚನ್ನಕೇಶವನಲ್ಲ ದಿನ್ನು ಬೇಕಾದ ಹೆಸರನ್ನು ಪಡೆದಿರುವೆ ಕನ್ನೆ ಸೀತೆಗೆ ಕೊಟ್ಟ ಹೊನ್ನವುಂಗರ ಕೊಡುವೆ ಬಿನ್ನಾಣದಿಂದ ಹಸೆಗೇಳೋ ಸೋಬಾನೆ 2 ಸುದತಿಯರೈವರು ಕದಳಿಹುವ್ವಿನ ಪೀಠ ಹದಮಾಡಿ ಕುಂತಿರುವರದೆ ಹೇಳಬಂದೆ ಮದನ ಜನಕ ಹಸೆಗೊದಗಿ ಅಲ್ಲಿನ ದಿವ್ಯ ಚದುರತನವನೋಡೊ ಹಸೆಗೇಳೋ ಸೋಬಾನೆ 3 ಋಷಿಗಳೆಲ್ಲರು ಜ್ಞಾನದೋಯ ಹಾಸನದೊಳೂ ಬಿಸಜಾಕ್ಷಿವರದನೆ ಗುರುವು ತುಲಸಿರಾಮಾ ಪಶುಪತಿಯಾದೆಯಾ ಹಸೆಗೇಳೋ ಸೋಬಾನೆ 4
--------------
ಚನ್ನಪಟ್ಟಣದ ಅಹೋಬಲದಾಸರು
ಭಜನೆ ಶ್ರೀ ರಾಮ ಭಜನೆ ಆಮ್ನಾಯ ವಿಸ್ತರ | ಭೂಮಾ ಗುಣಾರ್ಣವಶ್ರೀ ಮನ್ನಾರಾಯಣ | ರಾಮ್ ರಾಮ್ ರಾಮ್ ಪ ಶ್ರೀಶನೇ ವಿಭುದೇಶನೇ ||ಅಸುರಿ ವೃಷಹರ | ಶೇಷಾದ್ರಿ ಮಂದಿರಶ್ರೀ ಮನ್ನಾರಾಯಣ | ರಾಮ್ ರಾಮ್ ರಾಮ್ ಅ.ಪ. ಪೃಥ್ವಿಧರಾಧರ | ಸತ್ಯ ಮನೋಹರಭಕ್ತಾರ್ತಿ ಪರಿಹರ | ರಾಮ್ ರಾಮ್ ರಾಮ್‍ನಿತ್ಯನೇ ನಿರ್ಲಿಪ್ತನೇ ||ಶಕ್ತ್ಯಾದಿ ರೂಪಧರ | ಆಪ್ತರೊಳಗೆ ವರಭೃತ್ಯರ್ಗ ಭೀಷ್ವದ | ರಾಮ್ ರಾಮ್ ರಾಮ್ 1 ದಾನವ ಧ್ವಂಸನೆ | ಆನಂದ ಪೂರ್ಣನೆಆನಂದ ಮುನಿನುತ | ರಾಮ್ ರಾಮ್ ರಾಮ್‍ಶ್ರೀ ನಿಧೇ ಕರುಣಾಂಬುಧೇ ||ಮಾನುನಿ ವರದನೆ | ಮೌನಿಯ ಕಾಯ್ದನೆಜ್ಞಾನ ಸುಗಮ್ಯನೆ | ರಾಮ್ ರಾಮ್ ರಾಮ್ 2 ಈಶಾಹಿ ವಂದ್ಯನೆ | ವಾಸಿಷ್ಠ ಕೃಷ್ಣನೆವಸುದೇವ ತನಯನೆ | ರಾಮ್ ರಾಮ್ ರಾಮ್‍ಈಶನೇ ವರದೇಶನೇ ||ದಶಾಸ್ಯ ಕುಲವನ | ಕೃಶಾನು ಎನಿಪನೆದಾಶರಥಿüಯೆ ಪಾಹಿ | ರಾಮ್ ರಾಮ್ ರಾಮ್ 3 ಕಾಯ ಸೂರ್ಯ ವೀರ್ಯದಾತಪ್ರೇರ್ಯ ಪ್ರೇರಕ ಪಾಹಿ | ರಾಮ್ ರಾಮ್ ರಾಮ್ 4 ನೀರದ ನಿಭಕಾಯ | ವಾರಿಜಾಕ್ಷಿಗೆ ಪ್ರಿಯನಾರಿ ಚೋರಾರಿಯೆ | ರಾಮ್ ರಾಮ್ ರಾಮ್‍ಧೀರನೆ ಗಂಭೀರನೇ ||ಮೂರು ಲೋಕಗಳಲ್ಲಿ | ಆರುಂಟು ನಿನ್ನ ಸರಿಕಾರುಣ್ಯ ಮೂರುತಿ | ರಾಮ್ ರಾಮ್ ರಾಮ್5 ಪತಿ | ನಂಬೀದ ಭಕ್ತರಬೆಂಬಿಡದಲೆ ಕಾವ | ರಾಮ್ ರಾಮ್ ರಾಮ್ 6 ಜಗ ಪ್ರಾಣನೊಳಗೆ ಇದ್ದು | ಜಗವನ್ನು ಸೃಜಿಸುವಿಜಗದೇಕ ಕಾರಣ | ರಾಮ್ ರಾಮ್ ರಾಮ್‍ಪ್ರಾಣನೇ ಜಗತ್ತ್ರಾಣನೇ ||ಅಗಜೆ ಪತಿಯೊಳಿದ್ದು | ಜಗವೆಲ್ಲ ಲಯಿಸುವಿಜಗದೇಕ ಕಾರಣ | ರಾಮ್ ರಾಮ್ ರಾಮ್ 7 ಪ್ರಾಣನೀತಾನುಜ | ಪ್ರಾಣದಾತೃ ಹರಿಪ್ರಾಣಂಗೆ ಪ್ರಾಣನೆ | ರಾಮ್ ರಾಮ್ ರಾಮ್‍ಪ್ರಾಣನಾ ಆಲಿಗಂನಾ ||ನೀನಾಗಿ ಮಾಡಿ ಅವಗೆ | ಸಾಷ್ರ್ಣಿ ಮುಕ್ತಿಯನಿತ್ತೆಕಾಣೆ ಕಾರುಣ್ಯ ಕೆಣೆ | ರಾಮ್ ರಾಮ್ ರಾಮ್ 8 ಅಂಜನಿ ಸುತನಾಗಿ | ಕಂಜಸಖನಿಗ್ಹಾರ್ದಸಂಜೀವ ಧರ ಧರ | ರಾಮ್ ರಾಮ್ ರಾಮ್‍ದೈತ್ಯನಾ ಪ್ರಭಂಜನಾ ||ಸಂಜೆಯ ಚರರನು | ಭಂಜಿಸಿ ಅರ್ಪಿಸಿದಸಂಜೀವರಾಯ ಪಿತ | ರಾಮ್ ರಾಮ್ ರಾಮ್ 9 ಪತಿ | ಪದ್ಮಾಸನನ ಪಿತಪದ್ಮನಾಭನೆ ಪಾಹಿ | ರಾಮ್ ರಾಮ್ ರಾಮ್‍ರುದ್ಧನೇ ಅನಿರುದ್ಧನೇ ||ಮುದ್ದಿನ ಮೊಗದವ | ಗೆದ್ದು ಕುಜನ ತತಿಸದ್ಮದೊಳಗೆ ತೋರೊ | ರಾಮ್ ರಾಮ್ ರಾಮ್ 9 ಇಂದಿರೆ ರಮಣನೆ | ಚಂದಿರ ವದನನೆಮಂದರೋದ್ಧಾರಿಯೆ | ರಾಮ್ ರಾಮ್ ರಾಮ್‍ಸುಂದರಾ ಬಹು ಸುಂದರಾ ||ಕಂದರ್ಪ ಕೋಟಿ ಬಹು | ಸುಂದರ ಗುರು ಗೋ-ವಿಂದ ವಿಠಲ ಪಾಹಿ | ರಾಮ್ ರಾಮ್ ರಾಮ್10
--------------
ಗುರುಗೋವಿಂದವಿಠಲರು
ಭಜನೆಯ ಪದ ಭಕ್ತ ವತ್ಸಲ ಸ್ವಾಮಿ ಭಯನಿವಾರಣ ದೇವ ಭರದಿಂದ ಬಂದುದ್ಯಾಕೆ ಪೇಳಯ್ಯಾ ಪ ಭಾರ ಹೊತ್ತು ಬಂದೆಯಾ ಕೋರೆದಾಡಿಗಳಿಂದ ಧಾರೂಣಿ ಎತ್ತೀ ತಂದು ಭಾರ ವಾಯಿತೆಂದು ಬಂದೆಯಾ 1 ಬಾಲಕಾನಾ ನುಡಿಯ ಕೇಳಿ | ಬೇಗದಿಂದಾ ಬಂದೆಯಾ ದುರುಳನ್ನ ಕೊಂದು ಕರುಳ ಮಾಲೆಯಧರಿಸಿ ನೀ ತರಳಗಭಯವಿತ್ತು ಬಂದೆಯಾ2 ಬಲಿಯ ದಾನಾಬೇಡಿ ನೀನು ಕೊಡಲಿ ಪಿಡಿದೂ ನಿಂತೆಯಾ ಮಡದಿಯಾ ಕದ್ದವನ ಬಿಡದೆ ಬೆನ್ನಟ್ಟಿಕೊಂಡು ಸಡಗರದಲಿ ನೀ ಬಂದೆಯಾ 3 ಮಧರೇಲಿ ಹುಟ್ಟಿ ಮಲ್ಲಾರ ಮಡುಹೀ ಮಾವ ಕಂಸನ ಕೊಂದು ಬಂದೆಯಾ ಆನಂದಿಂದಿಲ್ಲಿ ಬಂದೆಯಾ 4 ವಸನಾ ವಿಲ್ಲದೆ ನೀನು ಪಶುವನ್ನೇರಿಕೊಂಡು ವಸುಧೆಯ ಒಳಗೆಲ್ಲಾ ತಿರುಗೀದೆಯಾ ನೀ ಬಂದೆಯಾ5 ಕರಿಯಾ ಮೊರೆಕೇಳಿ ನೀ ತ್ವರಿತಾದಿಂದಾ ಬಂದೆಯಾ ಮ ಕರಿವರದನೆಂದೆನಿಸಿಕೊಂಡೆಯಾ 6 ಕಷ್ಟ ಪಡುವಾ ಜನರ ಕಂಡು ಕಡುದಯದಿಂ ಬಂದಿಯಾ ಪಕ್ಷಿವಾಹನನೇ | ಲಕ್ಷಮಿರಮಣನೆ | ಕಟಾಕ್ಷವನೇ ಬೀರುವಿಯಾ 7 ಹತ್ತವತಾರವ ಎತ್ತಿ ಬೇಸತ್ತು ನೀ ಮತ್ತೆ ನೀನಿಲ್ಲ ಬಂದಿಹೆಯಾ ಬರುವರು ಕಂಡೆಯಾ 8 ಲಕ್ಷ್ಮಿ ಇಲ್ಲದೆ ನಾನಿರೆನೆನುತಲಿ ವೈಕುಂಠ ಬಿಟ್ಟು ಬಂದೆಯಾ ಭಕ್ತಾರ ಸಲಹಲು ಬಂದಿಹೆಯಾ 9 ಹುಡುಕೀಕೊಂಡಿಲ್ಲೇ ಬಂದಿಹೆಯಾ 10 ಪಾಪನಾಶಿನಿ ಸ್ನಾನ ಮಾಡೋರು | ನಿನ್ನ ಧ್ಯಾನ ಬೇಡೋರು ಮನದಿಕ್ಷ್ಟಾರ್ಥಗಳ ಸಲಿಸಲು | ಆತೂರದಿಂದಲಿ ಬಂದೆಯಾ 11 ರೀತಿಗಳಿಂದ ಸೇವಿಸುವರು ನಿನ್ನ ಕೆರಂಡಾಡುವರು 12 ಬಳಿ ಬಂದಿಹರು ಬೇಡುತಾ ನಿಂದಿಹರೂ13 ಪಡುತಲಿ ಬಂದಿಹರು ಸಂತಯಿಸಬೇಕೆನುತ ಬಂದಿಹೆಯಾ14 ಬಳಿ ಬಂದಿಹರೂ ಬೀಸಾಡಲೂ ಬಂದಿರುವಿಯಾ 15 ಬಂದಿಹರೂ ನಿನಗೊಂದಿಸುವರೂ 16 ಹೆಜ್ಜೆಗೆ ನಿನ್ನ ವಂದಿಸುತಲೀ ಬಾಷ್ಟಗಳ ಸುರಿಸುವರೂ 17 ನಲಿಯುವರೂ ಕುಣಿ ದಾಡುವರೂ 18 ದೋಬಿಕೊಳ್ಳುತ ನೀ ನಿಂತಿರುವೇ ಯಲ್ಲಾನುಕಸಕೊಂಡು ಕಳುಹುವಿಯೇ 19 ತೀರೀತೆಂದು ತಿಳಿಯುತಲೀ ಧನ್ಯರಾದೇವೆನುತ ತೆರಳುತಿಹರೂ 20 ಮೇಲಾದ ಭಕ್ಷಗಳ ಬಡಿಸುವೋರು
--------------
ರಾಧಾಬಾಯಿ
ಭೂಷಣವಿದು ಭೂಷಣ ಕೇಶವಧ್ಯಾನ ಪಭೂಷಣವದನಾ ವಿಭೀಷಣ ಧರಿಸುತೆನಾಶರಹಿತ ಪೌರುಷವಾಂತ ಧರಣಿಯೊಳು ಅ.ಪಶೇಷಶಯನನಾಮ ಭೂಷಣದೋಷರಹಿತ ಶಿರೋಧಿ ಭೂಷಣಶ್ರೀಶ ವಿಠ್ಠಲನಾಮ ಭೂಷಣಶೇಷಫಣಿಮಣಿಧೃತ ಭೂಷಣ1 ಕರಯುಗಗಳ ಭೂಷಣ ಹರಿಪೂಜೆಯುಶಿರಕೆ ವಂದನೆ ಭೂಷಣಹರಿಪಾದದರ್ಶನ ವರನೇತ್ರಭೂಷಣವರಕ್ಷೇತ್ರಸಂಚಾರ ಚರಣಕೆ ಭೂಷಣ 2 ಹರಿಯ ಚರಿತೆಯು ಕರ್ಣಭೂಷಣಹರಿತುಳಸಿ ನಾಸಿಕಕೆ ಭೂಷಣಹರಿಯ ಕೊಂಡಾಡುವುದೆ ರಸನೆಗೆ ಭೂಷಣಹರಿಯ ಭಜನೆಯು [ಜಿಹ್ವಾಭೂಷಣ] 3 ಧರೆಯೊಳು ಜನಿಸಿದ ಮಾನವರಿಗೆಹರಿನಾಮವೆ ಭೂಷಣಾಸಿರಿರಮಣನಾಮ ಕಿರೀಟವಯ್ಯವರದನೆಂಬುವನಾಮ ವರಕರ್ಣಾಭರಣವು 4 ಗಂಗಾಜನಕನೆಂಬ ನಾಮವೆ ಅಂತರಂಗಕೆ ಮಣಿಭೂಷಣಾರಂಗನೆಂಬುವ ನಾಮ ಹಸ್ತಸಿಂಗರದ ಪೀತಾಂಬರವು ತಾಮಾಂಗಿರೀಶನ ನಾಮ ಮಂಗಳಕರ ಭೂಷಣವೈ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂಗಳಾರತಿಯೆತ್ತಿ ಪಾಡಿರೆ ರಂಗನಾಥನ ನೋಡಿರೇ ಪ. ಅಂಗನಾಮಣಿಯನ್ನು ಸಲಹಿದ ಪಾಂಡುರಂಗನ ಭಜಿಸಿರೆ ಅ.ಪ. ನೆರೆದಸಭೆಯೊಳು ಸೆರಗನೆಳೆಯಲು ತರಳೆಭೀತಿಯ ತಾಳಲು ದುರುಳನೆರಿಗೆಯ ಸೆಳೆಯಲು ಶರಣು ನೀನೇ ವರದನೆನ್ನಲು ವರವನಿತ್ತಗೆ ಭರದೊಳು ಕರಣವಾರ್ಧಿಗೆ ಮುದದೊಳು 1 ಅಕ್ಷಯಾತ್ಮಕ ರಕ್ಷಿಸೈ ಶ್ರೀವತ್ಸ ದೀನಳ ಮಾನಮಂ ಕಮ ಲಾಕ್ಷ ಬೇಡುವೆ ದೈನ್ಯದಿಂ ರಕ್ಷನೀನೆನೆ ಚಪಲಾಕ್ಷಿ ಆಕ್ಷಣಂ ರಕ್ಷಿಸಿದೈ ಕರುಣದಿಂ ಅಕ್ಷಯಪ್ರದಾನದಿಂ 2 ನಿತ್ಯನಿರ್ಮಲ ನಿರ್ವಿಕಲ್ಪ ನಿತ್ಯತೃಪ್ತನ ಭಜಿಸಿರೆ ಭಕ್ತ್ಯಧೀನನ ಬೇಡಿರೆ ಸತ್ಯವಿಕ್ರಮ ಶೇಷಶೈಲ ನಿಕೇತಗೆ ಜಯವೆನ್ನಿರೇ ಚಿತ್ತಶುದ್ಧಿಯ ಪಡೆಯಿರೇ 3
--------------
ನಂಜನಗೂಡು ತಿರುಮಲಾಂಬಾ
ಮಂದರಧರ ಗೋವಿಂದ ಮುಕುಂದ ಸ ನಂದವಂದ್ಯನೆ ಲಾಲಿಸೋ ಪ ಕುಂದರದನ ಶರದಿಂದುವದನ ಮುಚು ಕುಂದ ವರದನೆ ಪಾಲಿಸೋ ಅ.ಪ ಸಾರಸಭವನುತ ಸಾರಚರಿತ ಸಂ ಸಾರಪಯೋನಿಧಿ ಪಾರದನೆ ವಾರಿಧಿ ಶಾರೀರ ವಿಹಾರ ವಿಶಾರದನೆ 1 ಪಾಶ ವಿಮೋಚನ ಪಟುಚರಿತ ವಿನುತ ಕೇಶವ ಸದ್ಗುಣ ಗಣಭರಿತ 2 ಧರೆಯೊಳು ಶ್ರೀ ಪುಲಿಗಿರಿಯೊಳು ನೆಲೆಸಿಹ ಶರಣರ ಸಲಹುವ ಶ್ರೀಧರನೆ ಚಕ್ರಧರ ವರನೆ 3
--------------
ವೆಂಕಟವರದಾರ್ಯರು