ನನ್ನ ಕರ್ಮವು ಬಂದು ಇನ್ನು ಬಾಧಿಸುತಿರೆ
ಅನ್ಯರೇನ ಮಾಡುವರೈ ಪ
ಕನ್ನೆ ಶಿರೋಮಣಿ ದ್ರೌಪತಿ ವರದನೆ
ಎನ್ನ ಪಾಲಿಸೊವೋ ಪ್ರಸನ್ನ ರಂಗನಾಥ ಅ.ಪ
ಭಿಕ್ಷಕ್ಕೆ ಬಂದಾಗ ಲಕ್ಷ್ಯವಿಡದೆ ಹೋಗಿ
ಸಾಕ್ಷಿಯ ನಾಕಂಡೆನೈ
ಪಕ್ಷಿ ವಾಹನನೆ ನೀರಕ್ಷಿಸಬೇಕಯ್ಯ
ಸಾಕ್ಷಾತನೆಂತೆಂಬೊ ಮೋಕ್ಷಾಧಿಕಾರಿಯೆ 1
ದೋಷಕ್ಕೆ ಗುರಿಯಾದೆನೈ
ಆಶೆಯ ಬಿಡಿಸಯ್ಯಾ ಶ್ರೀ ವೆಂಕಟರಮಣ
ದೋಷರಹಿತ ಗುರುವು ದಾಸ ತುಲಸೀರಾಮ 2