ಒಟ್ಟು 42 ಕಡೆಗಳಲ್ಲಿ , 23 ದಾಸರು , 42 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಸಾರ ಸಾಗರವನುತ್ತರಿಸುವಡೆಕಂಸಾರಿ ನಾಮವೊಂದೇ ಸಾಕು ಮರುಳೆ ಪ ಯತಿಯಾಗಬೇಡ ನೀ ವೈರಾಗ್ಯವನೆ ಪಿಡಿದುಸತತ ವ್ರತವ ಮಾಡುವೆನೆಂಬ ಹಮ್ಮು ಬೇಡಶ್ರುತಿಸ್ಮøತಿಯರಿತು ನಡೆವೆನೆಂಬ ಚೇಷ್ಟೆಯು ಬೇಡರತಿಪತಿಪಿತನ ನಾಮವೊಂದೆ ಸಾಕು ಮರುಳೆ 1 ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡಅನುದಿನವು ನೀರೊಳಗೆ ಮುಳುಗಿ ನಡುಗಲು ಬೇಡವನಜನಾಭನ ನಾಮ ನೆನೆ ಕಂಡ್ಯ ಮರುಳೆ 2 ತೀರ್ಥಯಾತ್ರೆಯ ಮಾಡಿ ಬಹುವಿಧದಲಿ ಬಳಲಿ ಕೃ-ತಾರ್ಥನಾದೆನೆಂಬುವ ಹೆಮ್ಮೆ ಬೇಡಪಾರ್ಥಸಾರಥಿ ಕಾಗಿನೆಲೆಯಾದಿಕೇಶವನಕೀರ್ತನೆಯ ಮಾಡಿ ಮುಕುತಿಯ ಹೊಂದು ಮರುಳೆ 3 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ಹಿತದಿ ಜೀವಿಸು ಬಾಲೆ ಪತಿಯ ಪ ಸೇವಾನುಕೂಲೆ ಕ್ಷಿತಿಯೊಳಗೆ ಪತಿವ್ರತಾ ಧರ್ಮನಿರತಳೆನಿಸಿ ಬಹುಸುತರ ಪಡೆದು ಅ.ಪ ರತಿಪತಿಪಿತನಿಗೆ ಪ್ರತಿಮೆಗಳೆನಿಸುವ ಅತಿಥಿಗಳ ಸಂತತ ಸುಶೇವಾ- ರತಳು ಬಹು ಗುಣವತಿಯಳೆನಿಸುವ 1 ಗುರುಜನರಿಗೆ ಸದಾ ಶಿರಬಾಗಿ ನಡೆಯುತ ಹರುಷದಲಿ ಹರನರಸಿಯಳ ಪದ ಸರಸಿಜದಿ ಮನವಿರಿಸಿ ಪೂಜಿಸಿ 2 ಶರಣು ಜನಕೆ ಸುರತರುವೆನಿಪ ಕಾರ್ಪರ ಸಿರಿಮನೋಹರ ನರಹರಿಯ ಶುಭ ಚರಣಯುಗಲವ ಸ್ಮರಿಸುತನುದಿನ 3
--------------
ಕಾರ್ಪರ ನರಹರಿದಾಸರು
ಗುಮಾನ ಆರದು ಇನ್ನ್ಯಾಕೆಹರಿನಾಮದ ಬಲವೊಂದಿರಲಿಕ್ಕೆ ಪಸ್ವಾಮಿಮಾಧವನ ಪ್ರೇಮಪಡೆದು ಮಹನಾಮಮೃತದ ಸವಿಯುತಲಿರುವರ್ಗೆ ಅ.ಪರೊಚ್ಚಿಗೆದ್ದು ಮಾಡುವುದೇನೋ ಜನಸ್ವಚ್ಛದಿ ಒಡಗೂಡಿದರೇನೋಮೆಚ್ಚಿ ಕೊಡುವಫಲ ಇವರೇನೋ ಅತಿಹುಚ್ಚ ನೆಂದರಾಗುವುದೇನೋನಿಶ್ಚಲಚಿತ್ತದಿ ಅಚ್ಯುತಾನಂತನಬಚ್ಚಿಟ್ಟು ಮನದೊಳು ಉಚ್ಚರಿಸುವರಿಗೆ 1ಸತಿಸುತರಿವರಿಂದ್ಹಿತವೇನೊ ತನ್ನಪಿತಮಾತೆ ಮುನಿದರೆ ಕೊರತೇನೋಅತಿಸಂಪತ್ತಿನಿಂದ ಗತಿಯೇನೋ ಈಕ್ಷಿತಿಜನ ಮೆಚ್ಚಲು ಬಂತೇನೋರತಿಪತಿಪಿತನಂ ಅತಿ ಗೂಢತ್ವದಿಸತತದಿ ನುತಿಸುವ ಕೃತಕೃತ್ಯರಿಗೆ 2ಭೂಮಿಪ ಕೋಪಿಸಲಂಜುವರೆ ಈತಾಮಸರಿಗೆ ತಲೆ ಬಾಗುವರೇಭೂಮಿ ದೈವಗಳ ಬೇಡಿದರೆ ಮನಕಾಮಿತವನ್ನು ಪೂರೈಸುವರೇಕಾಮಿತಾರ್ಥನೀಗಿ ಮಹಾಮಹಿಮನನೇಮದಿ ಪಠಿಪ ಶ್ರೀರಾಮದಾಸರಿಗೆ 3
--------------
ರಾಮದಾಸರು
ದೇವಕಿಯುದರ ಸಂಜಾತನೆ ತ್ರುವಿಕಾವನ ಪಿತ ಕಮಲಾಕ್ಷನೆ ತ್ರುವಿಶ್ರೀ ವೈಭವಸಚ್ಚಿದಾನಂದ ತ್ರುವಿಭಾವಕಿಗೋಪಿಯ ಕಂದನೆ ತ್ರುವಿ......... ತ್ರುವಿ1ಮಧುರೆಯೊಳುದಿಸಿದ ಮಹಿಮನೆ ಜೋ ಜೋಯದುಕುಲ ತಿಲಕ ಯಾದವರಾಯ ಜೋ ಜೋ ||ಮಧುಕೈಟಭ ಮುರಮರ್ದನ ಜೋ ಜೋಚದುರನಾಗಿ ತುರುಗಳ ಕಾಯ್ದೆ ಜೋ ಜೋ 2ಗೋಕುಲಪಾಲಕ ಗೋವಿಂದ ತ್ರುವಿಶ್ರೀ ಕುಚಕುಂಕುಮಾಂಕಿತ ಕೃಷ್ಣ ತ್ರುವಿ ||ಪಾಕ ಶಾಸನ ಮುಖ್ಯ ಸುರವಂದ್ಯ ತ್ರುವಿಲೋಕವೀರೇಳ ಪೆತ್ತಾತನೆ ತ್ರುವಿ ........... ತ್ರುವಿ 3ಶ್ರುತಿಚೋರ ಸಂಹಾರಕ ದೇವ ಜೋ ಜೋಜತನದಿ ಸುರರಿಗಮೃತವಿತ್ತೆ ಜೋ ಜೋ ||ಕ್ಷಿತಿಯ ಕದ್ದೊಯ್ದನ ಸೀಳ್ದೆ ನೀ ಜೋ ಜೋಮತಿಯುತ ಬಾಲಕನತಿ ರಕ್ಷ ಜೋ ಜೋ 4ಕ್ಷಿತಿಯ ಈರಡಿಗೆಯ್ದ ವಾಮನ ತ್ರುವಿಯತಿವಂಶ ಜನನಭಾರ್ಗವರೂಪ ತ್ರುವಿ ||ಕ್ರತುವ ರಕ್ಷಕ ಕಾಕುತ್ಸ್ಥನೆ ತ್ರುವಿರತಿಪತಿಪಿತಸುರನುತ ಕೃಷ್ಣ ತ್ರುವಿ ......... ತ್ರುವಿ5ಗೋಪಿಕಾನಂದ ಮುಕುಂದನೆ ಜೋ ಜೋಭೂಪರೊಳ್ಕಾದಿ ಬಳಲಿದನೆ ಜೋ ಜೋಶ್ರೀ ಪುರುಷೋತ್ತಮ ನರಸಿಂಹ ಜೋ ಜೋಅಪಾರ ಮಹಿಮಾರ್ಣವ ದೇವ ಜೋ ಜೋ........ಜೋ ಜೋ 6ಮಣ್ಣೊಳಗಾಡಿ ನೀ ಬಂದೆಯ ತ್ರುವಿಬೆಣ್ಣೆಯ ಬೇಡೆ ಬಯ್ದೆನೆ ಕಂದ ತ್ರುವಿಕಣ್ಣ ದೃಷ್ಟಿಗೆ ಕರಗದ ಕಂದ ತ್ರುವಿಚಿಣ್ಣಸುಮ್ಮನೆ ಇರು ಶ್ರೀ ಕೃಷ್ಣ ತ್ರುವಿ ............ ತ್ರುವಿ7ತಾರಕ ಸತಿವ್ರತಹಾರಕ ಜೋ ಜೋವಾರಣ ಹಯವೇರಿ ಮೆರೆದನೆ ಜೋ ಜೋ ||ಸಾರಿದವರ ಸಂತೈಸುವ ಜೋ ಜೋಶ್ರೀ ರಮಾಕಾಂತ ಶ್ರೀ ಕೃಷ್ಣನೆ ಜೋ ಜೋ.......ಜೋ ಜೋ 8ಶರಣಾಗತ ವಜ್ರಪಂಜರ ತ್ರುವಿಕರುಣಾಕರ ಕಮಲಾಕ್ಷನೆ ತ್ರುವಿ ||ಧರಣಿಧರಶಾಯಿ ಶ್ರೀವರ ತ್ರುವಿ ||ವರದ ಶ್ರೀ ಪುರಂದರವಿಠಲನೆ ತ್ರುವಿ ........... ತ್ರುವಿ 9
--------------
ಪುರಂದರದಾಸರು
ನೀನಾರವ ಪೇಳೆನ್ನ ಕಣ್ಣ ಮುಚ್ಚುವೆ |ಮೌನಗೊಂಡರಿಯದಂತಿಪ್ಪ ಮಗುವೆ ಪಅತಿ ಚೆಲುವಿಗೆ ರತಿಪತಿಪಿತನೊ-ನೀ |ಶ್ರುತಿಸಕಲಾನ್ವುಯ ಸನ್ನುತನೊ ||ಚತುರ್ದಶ ಭುವನವನಾಳಿದನೋ-ನೀ |ಶತತಪ್ಪುಗಳನೆಣಿಸಿದವನೊ?1ವರಗೋಕುಲಕೊಪ್ಪವ ದೊರೆಯೊ-ನೀ |ಕರಿವೈರಿಯ ಮದಪರಿಹಾರಿಯೊ ||ಗಿರಿಯನುದ್ಧರಿಸಿದ ನಖರುಚಿಯೊ-ನೀ |ಮುರದೈತ್ಯನ ಮಡುಹಿದ ಸಿರಿಯೊ? 2ಮಂಗಳ ಶೋಭನ ಮಣಿಖಣಿಯೊ-ನೀ |ಹಿಂಗದೆ ಸ್ತುತಿಪರ ಗತಿದಾನಿಯೊ-ಗೋ-||ಪಾಂಗನೆಯರ ಪ್ರಾಣದ ಧನಿಯೊ-ನೀ |ಸಿಂಗರ ಸೊಬಗಿನ ಶ್ರೀಪತಿಯೊ 3ಆಪತ್ತಿಗೆ ನೆನೆವರ ಗೋಚರನೊ-ನೀ |ಪಾಪಸಂಹಾರ ಪುರುಷೋತ್ತಮನೊ ||ಚಾಪದಿಂದಸುರರ ಗೆಲಿದವನೊ-ಸಾಂ-|ದೀಪನ ಮಗನ ತಂದಿತ್ತವನೊ? 4ಬೆಸಗೊಂಡಳುಗೋಪಿನಸುನಗುತ-ಆಗ |ಯಶೋದೆಗೆ ಚತುರ್ಭುಜ ತೋರಿಸುತ ||ಅಸುರಾರಿಯ ಕಂಡು ಮುದ್ದಿಸುತ ನೀ ||ಶಿಶುವಲ್ಲ ಪುರಂದರವಿಠಲೆನುತ 5
--------------
ಪುರಂದರದಾಸರು
ವಿಠ್ಠಲನಾಮ ಸ್ಮರಣೆಯನನುದಿನಬಿಟ್ಟಿರಲಾಗದು ಮನವೇಪದುಷ್ಟ ವಚನವನು ಜಿಹ್ವೆಯೊಳೆಂದಿಗುಪಠಿಸಲು ಬೇಡವೋ ಮನವೇಅ.ಪಧಾರುಣಿಯೊಳುನರಶಾರೀರದಿ ಬಂದುಕ್ರೂರ ಕೃತ್ಯಗಳ ಮಾಡದಿರುಘೋರಪಾಪಿ ಅಜಾಮಿಳನನು ಕಾಯ್ದಾನಾರಾಯಣನನು ಮರೆಯದಿರೂ1ತಿಳಿದು ತಿಳಿದು ನೀ ಮರುಳನಾಗದಿರುಕಲಿಸಂಸಾರದಿ ಸುಖವಿಲ್ಲಾಹಳುವದಿ ಧ್ರುವನಿಗೆ ಒಲಿದ ಮಹಾತ್ಮನಸ್ಮರಿಸೈ ಕುಶಲದ ಮಾತಲ್ಲಾ2ಕಾಲನ ಬಾಧೆಗೆ ಸಿಲುಕುವ ಕಾರ್ಯವಮೇಲು ಉಲ್ಲಾಸದಿಂದೆಸಗದಿರೂಬಾಲ ಪ್ರಹ್ಲಾದನ ಪಾಲ ನರಸಿಂಹನಲೀಲೆಯೊಳಾದರು ಮರೆಯದಿರೂ3ದುಃಖ ಸಂತೋಷಕೆ ಹಿಗ್ಗದೆ ಕುಗ್ಗದೆರಕ್ಕಸ ವೈರಿಯ ಧೇನಿಪರೆದುಃಖಿಸೆ ದ್ರೌಪದಿ ಸೆರಗಿಗಕ್ಷಯವಿತ್ತರುಕ್ಮಿಣಿಯರಸನು ಪೊರೆವಖರೆ4ವ್ರತನಿಷ್ಠೆಗಳೆಂಬ ನೇಮವಿದ್ಯಾತಕೊವ್ಯಥೆಯೊಂದೆದೆಯೊಳಗಿರುತಿರಲುರತಿಪತಿಪಿತಗೋವಿಂದನ ಧ್ಯಾನದಿನುತಿಸಲು ಸುಲಭ ಸಾಯುಜ್ಯಗಳೂ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ವೃಥಾ ಭವದಿ ಮೆರೆದೆರಥಚರಣಧರನ ಸ್ಮøತಿಯನೆ ಮರೆದೆ ಪ.ಸತಿಸುತರೆನ್ನವರತಿಶಯ ಗೃಹಧನಪತಿಯು ನಾನೆಂಬೊ ಮಮತೆವಿಡಿದುರತಿಪತಿಪಿತನಂಘ್ರಿರತಿ ಲೇಶವಿಲ್ಲದೆಸತತ ಯಮಪುರದ ಪಥವನೆ ಪಿಡಿದು 1ಅತಿಥಿಗಳೊಲ್ಲದೆ ಯತಿಪೂಜೆಯಿಲ್ಲದೆಪೂತಿ ಮಲಭಾಂಡ ಭರಿತನಾಗಿಚತುರ್ಮುಖನಯ್ಯನ ವ್ರತವ ಬಿಸುಟು ಅನ್ಯಪತಿತ ಮಾರ್ಗವ ಪೊಂದಿ ಹತಭಾಗ್ಯನಾಗಿ 2ಮಿತಮನರಹಿತ ದುರ್ಮತಪಂಡಿತನಾಗಿಪ್ರತಿಬೊಮ್ಮರಕ್ಕಸೋನ್ನತನೆನಿಸಿಅತಿಪ್ರಾಜÕಶಾಸ್ತ್ರದೇವತೆ ಪ್ರಸನ್ವೆಂಕಟಪತಿಯನೆ ಬಿಟ್ಟಿನ್ನಿತರವ ಭಜಿಸಿ 3
--------------
ಪ್ರಸನ್ನವೆಂಕಟದಾಸರು
ಶರಣು ಶರಣು ಶೇಷಗಿರಿವರದ ದೇವಶರಣು ಶರಣು ಲಕ್ಷ್ಮೀವರ ಮುದದಶರಣಾಗತ ಭಯಸಂಹಾರ ಕಾರಣಕರುಣ ಕರಣ್ಯನಂತಕಿರಣಘವಾರಣ ಸುವಾರಣಉದ್ಧರಣಜಹರನುತಚರಣಪ.ಕೃತಸೇವ್ಯಾಮಲ ಅವ್ಯಾಕೃತಗಾತ್ರ ದೇವಪೃಥುರಾಜಪಾಲಾಂಬುಜಾಯತ ನೇತ್ರಯತಿ ಹೃದಯ ಗುಹ್ಯಾಂಗೀಕೃತೋತ್ತುಂಗಹೃತಕ್ಷಿತಿ ಜಾತ ಸತಿಪ್ರತತಿಗೃಹೀತಾವಿತಥÀಶ್ರುತಿಸ್ಮøತಿಗೀತ ಪ್ರೀತ ರತಿಪತಿಪಿತನೆ1ಸೋಮಕುಲಾಬ್ಧಿ ರಾಕಾಸೋಮಕಾಶ ದೇವಸಾಮಜಪಕ್ಷ ಸುರಸ್ತೋಮ ಪೋಷಕಕಾಮಿತಾರ್ಥಪ್ರದಾತ ಸ್ವಾಮಿತೀರ್ಥಧಾಮತ್ರಿಧಾಮ ಸುಮನಸಾಮೋದಪ್ರೇಮಧಿ ಶ್ರೀಮತ್ನಾಮ ನಿಸ್ಸೀಮ 2ಹನುಮನಿಮೇಷ ಋಷಿಗಾನಪ್ರಿಯ ದೇವಸನಕಸನಂದನ ಸನಾತನಧ್ಯೇಯಮಣಿಮಯಕನಕಭೂಷಣಾಂಕ ಭೂಮುನಿಜನ ಧ್ಯಾನ ಲೀನ ಅಣುರೇಣು ಪೂರ್ಣಪ್ರಸನ್ನವೆಂಕಟನಗಪಾ ಪುನಃಪುನಾನುದಿನ 3
--------------
ಪ್ರಸನ್ನವೆಂಕಟದಾಸರು
ಶ್ರೀ ವಿಷ್ಣುಮಹಿಮೆ ಸಂಕೀರ್ತನೆ ಸರ್ವದಾ ವಿಸ್ಮøತಿಯನೀಗಿಮಾಡಿ ವೈಷ್ಣವರುಪ.ಪುಣ್ಯಮಾರ್ಗವನರಿಯದ ಮೂಢರಿಗೆಉನ್ನತಕುಟಿಲಪಾಮರಮನುಜರಿಗೆಘನ್ನ ಸಾಧನವಿದೆ ಮತ್ತೊಂದು ಕಾಣೆಪುಣ್ಯಶ್ಲೋಕನ ವಾರ್ತೆ ಕೀರ್ತನೆಯ ಪಠನೆ 1ಜನ್ಮ ಮರಣವಿಲ್ಲ ಅವ ಜೀವನ್ಮುಕ್ತಧನ್ಯ ವಿಶುದ್ಧಾತ್ಮ ನಿಜ ಹರಿಭಕ್ತಚಿನ್ಮಯಾಚ್ಯುತನ ಚಾರಿತ್ರ್ಯವಿಸ್ತರವವರ್ಣವರ್ಣಂಗಳಿಂದೆ ಪಾಡಿ ನಲಿಯುತ 2ಧರ್ಮ ಸುಮಾರ್ಗವರ್ಜಿತ ಕಲಿಯುಗದಿನಿರ್ಮಲಮನ ಹೊಂದಲೀಸದ ಭವದಿಧರ್ಮಪ್ರಭು ಶ್ರೀ ಹರಿಗುಣಕೀರ್ತನೆಉಮ್ಮಯದಲಿ ಮಾಡುವುದು ಹರಿಪ್ರಾರ್ಥನೆ 3ನಿರುತ ವಿಶುದ್ಧಾಂತರಾತ್ಮ ಶ್ರೀಹರಿಗೆಗುರುಸುಖತೀರ್ಥರ ತೀರ್ಥಜೀವರಿಗೆಹರಿಹರಿಹರಿಎಂದು ಕೂಗಿ ಬಾಳ್ವರಿಗೆ4ಅಘೋರ ಯಮಮಾರ್ಗ ನರಕ ಶ್ರೀಮದ್ಗರುಡಧ್ವಜ ನಾರಾಯಣಾಪವರ್ಗರಾಮ ರಾಮ ರಾಮ ರಾಮ ರಾಮನೆಂಬನಾಮಪಾಠಕರಿಗೆ ಸ್ವಪ್ನದಿ ವಜ್ರ್ಯ 5ಹೃದಯದಿ ಹರಿರೂಪ ಮುಖದಿ ಸದ್ಗಾನಉದರದಿ ನೈವೇದ್ಯ ಶಿರದಿ ನಿರ್ಮಾಲ್ಯಸುದರ್ಶನಶಂಖಾಂಕಿತ ಭುಜದವರಿಗೆಪದ್ಮನಾಭನ ನಾಮಕೀರ್ತನೆಕೈವಲ್ಯ6ಶತಕೋಟಿ ರಾಮಾಯಣ ಕೀರ್ತನೆ ಹನುಮಂತಯತಿ ಶುಕಾಚಾರ್ಯ ಭಾಗವತಶಾಸ್ತ್ರಸತತ ನಾರದದೇವ ಮುನಿತತಿ ನೃಪರೆಲ್ಲರತಿಪತಿಪಿತನ ಪೊಗಳಿ ಮುಕ್ತಾಗಿಹರು 7ಕಲಿಕಾಲದಲಿ ಕೇಶವಗೆ ಪ್ರಿಯ ಕೀರ್ತನೆಲಲಿತಸಾಧನವೆನಿಪುದೀ ಕೀರ್ತನೆಬಲುಶ್ರುತಿಮಥಿತಾರ್ಥಸಾರವೆ ಕೀರ್ತನೆಹುಲುಮಾನವರಿಗೆ ದೂರವು ಹರಿಕೀರ್ತನೆ 8ಭವರೋಗಭೇಷಜಹರಿನಾಮಕೀರ್ತನೆಭವವಾರ್ಧಿಪೋತ ಭವಾಟವಾಗ್ನಿಭವವಿಧಿಕೀರ್ತಿತಪದ ಪ್ರಸನ್ವೆಂಕಟಭವನದಾಸರು ಸವಿದುಂಬಾಮೃತವು 9
--------------
ಪ್ರಸನ್ನವೆಂಕಟದಾಸರು
ಸತತಕಲ್ಯಾಣಅಚ್ಯುತಭಟರಿಗೆರತಿಪತಿಪಿತನಂಘ್ರಿರತ ಮಹಾತ್ಮರಿಗೆ ಪ.ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲಕ್ರೋಧ ನೃಪಭಯವಿಲ್ಲ ಕಾಕುಮತಿ ಇಲ್ಲಖೇದಮನಕಿಲ್ಲ ಖಿನ್ನತೆಯು ಮುಖಕಿಲ್ಲಶ್ರೀಧವನ ನವ ಭಕುತಿಶೀಲ ಜೀವರಿಗೆ 1ಅರಿಗಳೆ ಸಖರಕ್ಕು ಅತಿವಿಷ ಅಮೃತವಕ್ಕುಉರಗಪೂಮಾಲೆಯಕ್ಕು ಉರಿ ತಣ್ಣಗಕ್ಕುಶರಧಿಗೋಷ್ಪದವಕ್ಕು ಶರಘಾತ ಬೆಂಡಕ್ಕುನರಹರಿಯ ನಾಮವನು ನಂಬಿ ತುತಿಪರಿಗೆ 2ಪಾಪ ತಾಪಗಳ್ಗೋಟ ಪರಿದುಬಹ ಎಡರ್ಗೋಟಆಪತ್ತುಗಳಿಗೋಟ ಆಲಸ್ಯಕೋಟಕೋಪದಾರಿದ್ರ್ರ್ಯಕೋಟ ಕಲಿವ್ಯಸನ ಮದಕೋಟಶ್ರೀ ಪ್ರಸನ್ವೆಂಕಟನ ಭಜಿಪ ಭಕ್ತರಿಗೆ 3
--------------
ಪ್ರಸನ್ನವೆಂಕಟದಾಸರು
ಸೊಡ್ಡುಡಂಬಕಅವನಿಭಾರಂಗೆ ಸೊಡ್ಡುಸೊಡ್ಡು ಭಕುತಿಹೀನ ಹೆಡ್ಡಂಗೆ ಸೊಡ್ಡು ಪ.ಶುದ್ಧ ಸಾತ್ವಿಕಗುರುಮಧ್ವಮತವ ಬಿಟ್ಟುಬದ್ದಡ್ಡ ದಾರಿಯವಿಡಿದಗೆ ಸೊಡ್ಡುಮದ್ಯಘಟಕೆ ಮನವಿಟ್ಟು ಪೀಯೂಷವನೊದ್ದು ಕಳೆದ ಹೊಲೆ ಮಾನಿಸಗೆ ಸೊಡ್ಡು 1ಜಗದೆರೆಯನ ಜಗದಾಕಾರ ಸಟೆಯೆಂದುಬಗುಳ್ವ ಬಾಯೊಳು ಹೊಡೆ ಮಗುಳೆ ಸೊಡ್ಡುಅಘಹರನಾಳಿಗಾಳಾಗಿ ದೊರೆಯೆ ತಾನೆಂಬಗೆ ನಗೆಗೇಡಿನಾ ಮಾತೆ ಸೊಡ್ಡು 2ಶ್ರುತಿಸ್ಮøತಿಗಳವಡದನಂತಗುಣಗೆ ದುರ್ಮತಿಯಲ್ಲಿ ನಿರ್ಗುಣೆಂದವಗೆ ಸೊಡ್ಡುರತಿಪತಿಪಿತನಲ್ಲದನ್ಯ ಸರ್ವೋತ್ತಮತ್ವಕೆ ನಿರಯದಂಧತಮದ ಸೊಡ್ಡು 3ಹರಿಗೆ ಮನುಭವವಿಧಿಯೆಂದೊಕ್ಕಣಿಪಗೆಚಿರಕ್ಲೇಶ ಭವಯಾತ್ರೆಲಂಜು ಸೊಡ್ಡುಒರೆದೊರೆದಖಿಳಾಗಮಾರ್ಥವ ತಿಳಿದೇನುಹರಿಯೊಪ್ಪದಾ ನರಖರನಿಗೆ ಸೊಡ್ಡು 4ಪರಮಭಾಗವತರಾಚರಣೆಗೆ ಅಸೂಯಕ್ಕವರಗ್ರಂಥಚೋರಗೆ ಶಿರದಿ ಸೊಡ್ಡುಸಿರಿಪತಿ ಪ್ರಸನ್ವೆಂಕಟೇಶನ ಭಟರ ಕಂಡ್ಹರುಷಲ್ಲದವಗೆ ಮೂಗಲಿ ಸುಣ್ಣ ಸೊಡ್ಡು 5
--------------
ಪ್ರಸನ್ನವೆಂಕಟದಾಸರು
ಹಲವನು ಯೋಚಿಸಲೇನು ಫಲ ಬರಿ |ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ |ಸಲಿಲದಿ ಮುಳುಗಿದರೇನು ಫಲ ||ಜಲಜಾಕ್ಷನ ಪದದೊಲುಮೆಯಿಲ್ಲದೆನರ|ಬಲಯುತ ತಾನೆನಲೇನು ಫಲ1ಪರಸತಿ ಪರಧನದಾಸೆಯೊಳಿರ್ಪನು |ಸುರನದಿಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ2ಕಾಣದೆ ಕುಣಿಯೊಳು ಬಿದ್ದಾನೆಯು ಬಲು |ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ |ಜ್ಞಾನಿಯು ತಾನೆನಲೇನು ಫಲ3ಧೂರ್ತತನದಿ ಹಣ ಗಳಿಸುತ ಲೋಭದಿಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ |ಅರ್ತಿಯೊಳೆಸಗಿದರೇನು ಫಲ4ಪತಿಯನು ವಂಚಿಸಿರೂಪಮಾರುವಸತಿ|ವ್ರತಗಳ ಮಾಡಿದರೇನು ಫಲ ||ರತಿಪತಿಪಿತಗೋವಿಂದನ ನೆನೆಯದೆ |ಗತಿಯನುಬಯಸಿದರೇನು ಫಲ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ