ಒಟ್ಟು 98 ಕಡೆಗಳಲ್ಲಿ , 1 ದಾಸರು , 94 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಜೋ ರಂಗ ಜೋ ಮುದ್ದು ರಂಗ ಜೋ ಜೋ ಮಂಗಳ ಮೂರುತಿ ರಂಗ ಜೋ ಜೋ ಪ ದೇವ ಪಾರಿಜಾತ ಪುಷ್ಪವ ತಂದ ದೇವಕಿ ದೇವಿಯ ಮೋಹಕ ಕಂದ 1 ಮಾವ ಕಂಸನ ಶಿರವನು ತಂದ ಹಾವಿನ ಹಡೆÀ ಮೇಲಿ ಕುಣಿಯುತ್ತ ನಿಂದ 2 ಕಾವೇರಿ ತೀರದಿ ನೆಲೆಯಾಗಿ ನಿಂದ ದೇವ ರಂಗೇಶವಿಠಲ ಅತಿ ಮೋಹದಿಂದ 3
--------------
ರಂಗೇಶವಿಠಲದಾಸರು
ಜೋ ಜೋ ರಂಗಯ್ಯ ಜೋ ಜೋ ಕೃಷ್ಣಯ್ಯ ಮಲಗಯ್ಯ ಜೋ ಜೋ ಪ ಕಣ್ಣೇಕೆ ನೀನು ಮುಚ್ಚಲೊಲ್ಲೆಯೊ ರಂಗ ಬೆನ್ನು ಭಾರವಾಗಿರುವುದೇನೋ ದೇವ ಮಣ್ಣಿನೊಳು ನೀನಾಡಿ ಮೈ ನೋಯುವುದೇನೊ ಹೊನ್ನು ಕಶಿಪುವಿನ ಕರುಳ ಕಂಡಂಜಿದೆಯೇನೊ 1 ಚಿಣ್ಣ ನೀ ಧರೆಯನಳೆಯಲೇತಕೆ ಪೋದೆ ಗಣ್ಡುಗೊಡಲಿ ಪಿಡಿದು ಕೈಯಿ ಉಳುಕಿಹುದೇನೊ ಅನ್ನವ ಬಿಟ್ಟು ನೀ ಪರ್ನವೇತಕೆ ತಿಂದೆ ಬೆಣ್ಣೆಯ ಮೆದ್ದು ನಿನ ಹೊಟ್ಟೆ ನೊಯ್ಯುವದೇನೊ 2 ಬತ್ತಲೆ ತಿರುಗಿ ಮೈ ಬಿಸಿಯಾಗಿರುವದೇನೊ ಕತ್ತಿಯ ಪಿಡಿದು ತೇಜಿಯ ಹತ್ತಬೇಕೇನೊ ಹೊತ್ತಾಯ್ತು ಕಂದಯ್ಯ ಮಲಗೆಂದು ಯಶೋದೆ ಮುತ್ತಿಟ್ಟು ತೂಗಿದಳು ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ತಂದೆ ನೀನೆಂದು ನಾ ಬಂದೆ ರಕ್ಷಿಸೆಂದೆ ಪ ಮುಂದೆನ್ನ ಸಲಹುವ ಭಾರವು ನಿಂದೆ ಅ.ಪ. ಮಾತು ಮಾತಿಗೆ ನಾ ನಿನ್ನ ನೆನೆವೆ ಸ್ಮರಿಸುತಿರುವೆ ಜ್ಞಾತಿ ಬಾಂಧವರ ಮತ್ಸರ ಮರೆವೆ ಮಾತಾಪಿತರುಗಳ ಸೇವೆಗೈವೆ ಈ ತನು ನಿನ್ನ ಚರಣಕರ್ಪಿಸಿರುವೆ 1 ಸಾಧನವೇನೆಂಬುದ ನಾನರಿಯೆ ಕೇಳೊ ದೊರೆಯೆ ಮಾಧವ ನಿನ ನಾಮವೆಂದಿಗೂ ಮರೆಯೆ ವೇದಬಾಹಿರರೊಡನಾಡಿ ಮೆರೆಯೆ ಕಾದುಕೋಯೆನ್ನನೆಂಬೆನು ಶ್ರೀಹರಿಯೆ 2 ನಾ ನಿನ್ನ ಕಾಡಿ ಬೇಡುವುದಿಲ್ಲ ದೂರುವನಲ್ಲ ಜ್ಞಾನ ಮಾತುರವಿತ್ತು ಕಾಯಬೇಕಲ್ಲ ನೀ ನನ್ನ ಸಲಹೊ ಲಕ್ಷ್ಮೀ ನಲ್ಲ ಶ್ರೀನಿವಾಸ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ತಾರೊ ನಿನ್ನಯ ಕರವಾರಿಜವನು ಕೃಷ್ಣ ಸಾರಿ ಬೇಡಿಕೊಂಬೆ ಮುರಾರಿ ದಯಮಾಡಿಪ ಮಾರಮಣನೆ ಸಂಸಾರ ಶರಧಿಯೊಳೀಸ ಲಾರದೆ ಬಳಲುತ ಚೀರೂತಲಿರುವೆ ಅ.ಪ ದಾರಾ ಪುತ್ರರೆನಗೆ ದಾರಿ ತೋರುವರೆಂದು ಮಾರ ಜನಕನೆ ಕೇಳೊ ಮೋರೆ ತೋರದೆ ಅವರು ಜಾರಿಕೊಂಡರಯ್ಯ ಭೂರಿ ಬಳಗದವರ್ಯಾರು ಬಾರರೊ ದೇವ 1 ಧಾರುಣಿ ಧನ ಧಾನ್ಯ ಹೇರಳವಾಗಿದೆ ಜೀವ ಹಾರಿ ಹೋಗುವಾಗ ಯಾರಿಲ್ಲವಯ್ಯ ಕೋರಿ ಭಜಿಪೆ ನಿನ್ನ ಬಾರಿ ಬಾರಿಗೆ ನಾನು ಕ್ಷೀರ ವಾರಿಧಿವಾಸ ವೀರ ಮಾರುತೀಶ 2 ಘೋರಾಂಧಕಾರದಿ ಮೇರೆಯು ಕಾಣದೆ ಮಿತಿ ಮೀರಿದ ಭಯದಿಂದ ಗಾರು ಪಡುತಿಹೆನೊ ಕಾರುಣ್ಯನಿಧಿಯೆ ನೀ ಪಾರು ಮಾಡದಿರೆ ಮತ್ತ್ಯಾರು ಕೇಳುವರೆನ್ನ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ತೆರಳಿ ಪೋದರಿಂದು ಪರಮ ಪದವನರಸುತ ಪ ಸಿರಿ ಶೇಷದಾಸಾರ್ಯರು ಅ.ಪ. ಸಿರಿಯುಕ್ತ ರಕಾಕ್ಷಿ ವರುಷ ಭಾದ್ರಪದಸಿತ ವರಪೌರ್ಣಿಮಾ ಸಹಿತವಾದ ಕವಿವಾರದಿ ಸರು ನಿಶಿಯೊಳು ಶತತಾರ ನಕ್ಷತ್ರ ಬರುತಿರೆ ನರಹರಿಯ ಚರಣಕಾಂಬ ಕಡು ತವಕದಿಂದ 1 ತಂದೆ ಮುದ್ದುಮೋಹನ ದಾಸವರ್ಯರಿಂದ ಕುಂದುರಹಿತನಾದ ಪ್ರಾಣನಾಥವಿಠಲ- ನೆಂದು ಅಂಕಿತೋಪದೇಶವನು ಕೈಕೊಂಡು ಬಂಧುರವಾದನೇಕ ಪದಗಳನು ರಚಿಸಿ 2 ದಾಸವೃತ್ತಿಯ ಕಂಡು ದೇಶ ದೇಶವ ಸುತ್ತಿ ಕರವ ನೀಡದೆ ಲೇಸು ಮಾಡುತಲಿ ಸಚ್ಛಿಷ್ಯರಿಗೆ ತತ್ತ್ವೋಪ- ದೇಶವನು ಪರಮ ಸಂತೋಷದಿಂದಗೈದು 3 ಆಶಪಾಶವ ತೊರೆದು ಮೀಸಲು ಮನರಾಗಿ ವಾಸುದೇವನ ನಾಮ ಸೋಸಿನಿಂದ ಭಜಿಸಿ ಸಾಸುವೆಯಷ್ಟಾದರಾಯಾಸವನುಪಡದೆ ಈ ಶರೀರ ವಿಶ್ವೇಶನಾಧೀನವೆಂದು 4 ಅಂಗೋಪಾಂಗವ ಮರೆದು ನಿಸ್ಸಂಗಯುತರಾಗಿ ಕಂಗಳನು ಮುಚ್ಚುತ ಭಂಗವಿಲ್ಲದ ಸುಖವ ಹಿಂಗದೆ ಕೊಡುವಂಥ ಮಂಗಳನ ಶ್ರೀ ರಂಗೇಶವಿಠಲನಂತರಂಗದಿ ನೋಡುತ5
--------------
ರಂಗೇಶವಿಠಲದಾಸರು
ದಡಿಗ ಮಾನವನೆ ಪ ಸೂನು ಹೆಡತಲೆಯಲಿ ನಗುವ ಅ.ಪ. ಬಾಲನು ನಾನು ಭಾಗ್ಯಶಾಲಿಯೆನುತ ನಿತ್ಯ ಲೀಲ ವಿನೋದವೆಂಬ ಜಾಲದೊಳು ಸಿಲುಕಿ ಕಾಲವ ಕಳೆದು ಮಾಲೋಲನ ಮರೆತಂಥ ಮಾನವ ಪಶುಪಾಲನಾದವ ನಿನಗೆ 1 ತಾಸು ತಾಸಿಗೆ ನೀನು ಲೇಸಾಗಿ ಭುಂಜಿಪೆ ಬೇಸರಿಲ್ಲವೊ ನಿನಗೆ ರಾಸಿ ಭೋಗಗಳಲಿ ಕಾಸುವೀಸವ ಕೊಡೆ ಹರಿದಾಸರಾದವರಿಗೆ ದೋಷಕಾರಿಯೆನಿಸಿದ ಹೇಸಿಕೆ ಮನದವನೆ 2 ಕಡುಪ್ರಿಯರೆಂದೆನಿಸುವ ಮಡದಿ ಮಕ್ಕಳು ಎಂಬ ಬೆಡಗು ತೋರುವ ಮೋಹ ಮಡುವಿನೋಳ್ಬಿದ್ದು ಒಡೆಯ ಶ್ರೀ ರಂಗೇಶವಿಠಲರೇಯನ ಪಾದ ಜಡಜವ ನಂಬದೆ ನೀ ಕೆಡಬೇಡ ಮನುಜ 3
--------------
ರಂಗೇಶವಿಠಲದಾಸರು
ದಂತಿವದನ ವಿಘ್ನದಂತಿನಿಚಯಕೆ ಹರಿ ದಂತಿವರದನ ಪ್ರಪೌತ್ರ ವಿನಂತಿಯ ಕೇಳೊ ಪ ಕಂತುವೈರಿಯ ಪುತ್ರ ಪರಮ ಪವಿತ್ರ ಕಳತ್ರ 1 ಸಾದರಲಿ ನಿನ್ನಾರಾಧಿಸುವೆ ಮುನ್ನ ನೀ ದಯದಿ ವಿಘ್ನ ನಿವಾರಿಸೊ ಮೋದಕ ಪ್ರಿಯಾ 2 ರಂಗೇಶವಿಠಲನ ರಾಗದಿಂ ಪಾಡುತ ಮಂಗಳ ಮೂರುತಿಯೆ ಉತ್ತಂಗ ಪ್ರಭಾವ 3
--------------
ರಂಗೇಶವಿಠಲದಾಸರು
ದಧಿ ಕಡೆವ ವೇಳೆಗೆ ಪ ಮಧುವೈರಿ ಬಂದನದಕೋ ಸಂಗಡಿಗರೊಂದಿಗೆ ವಿಧವಿಧ ರಾಗದಿ ಕೊಳಲನೂದುತ ತಾನು ಅ.ಪ. ಅರಳೆಲೆ ಮಾಗಾಯಿ ಕಿರುಗೆಜ್ಜೆ ಪಾಗಡ ಪರಿ ಪರಿಯಾಭರಣಗಳಿಟ್ಟು ಕಿರುನಗೆ ಮುಖದ 1 ವಾರಿಜನೇತ್ರನು ಓರೆನೋಟದಿ ಸಕಲ ನಾರೀಮಣಿಗಳ ಮನಸೂರೆಗೊಳ್ಳುತಲಿ 2 ಬಾಲನಂದದಿ ತಾನು ಲೀಲೆಯ ತೋರುತ ಮಾಲೋಲನು ಆಗ ಬೆಂಣೆ ಕೊಡೆನ್ನುತಲಿ 3 ಏನು ಪುಣ್ಯ ಯಶೋದೆ ತಾನು ಮಾಡಿರ್ದಳೊ ಶ್ರೀನಿಧಿ ಕೃಷ್ಣನು ಸಾನುರಾಗದಲಪ್ಪಿದ 4 ಮುಟ್ಟಿ ಭಜಿಸುವರಘ ಸುಟ್ಟು ಸಲಹು ದಿಟ್ಟ ಶ್ರೀ ರಂಗೇಶವಿಠಲ ನಲಿಯುತ 5
--------------
ರಂಗೇಶವಿಠಲದಾಸರು
ದುಷ್ಟ ಮನುಜ ಕೇಳೊ ನೀ ಬಲು ಭ್ರಷ್ಟನಾದೆಯಲ್ಲೋ ಪ ಎಷ್ಟು ಪೇಳಿದರೇನು ನಿನಗೆಳ್ಳಿ- ನಷ್ಟಾದರು ಮತಿ ಬರಲಿಲ್ಲ ಅ.ಪ ಶುದ್ಧ ವೈಷ್ಣವನೆಂಬೀ ನೀನು ನಿ- ಷಿದ್ಧ ಕೂಳನು ತಿಂಬೀ ಬುದ್ಧಿಪೂರ್ವಕವಾಗಿ ನಮ್ಮ ಅನಿ ರುದ್ಧನ ನಾಮದ ನೆನೆಯದಲಿರುವಿ 1 ಬಾಯೊಳು ಬಹುನೀತಿ | ಬೊಗಳುವೆ ಹೇಯ ಕರ್ಮದಿ ಪ್ರೀತಿ ಮಾಯವಾದಿಯನುತವನು ಪೊಗಳುವೆ ಕಾಯಕ್ಲೇಶ ನಿನಗಾಗದಿರದು 2 ಭಂಗ ಹೋಗದೆ ಬಾಳೊ | ಮುಂದಕೆ ಭಂಗಿಕೋರನೆ ಕೇಳೊ ರಂಗೇಶವಿಠಲನ ಮೊರೆಹೊಗು ನಿನ ದುರಿ- ತಂಗಳು ಪೋಪವು ಮಂಗನಾಗಬೇಡ 3
--------------
ರಂಗೇಶವಿಠಲದಾಸರು
ಧನ್ಯನಲ್ಲವೇ ಅವನು ಧನ್ಯನಲ್ಲವೆ ಪ ಪನ್ನಗಾರಿ ಧ್ವಜನ ಮಹಿಮೆಯನ್ನು ಪೊಗಳುತಿರುವ ನರನು ಅ.ಪ. ಅರುಣ ಉದಯದಲ್ಲಿ ಎದ್ದು ದುರಿತದೂರವನ್ನು ಸ್ಮರಿಸಿ ಹರುಷದಿಂದ ಶೌಚ ಕರ್ಮ ಅರಿತು ನಿರುತ ಚರಿಸುವರನು 1 ಸತ್ಯಮತದ ಪದ್ಧತಿಯನು ಚಿತ್ತವಿಟ್ಟು ಆಚರಿಸುತ ಭೃತ್ಯನೆಂದು ಪೇಳಿಕೊಳುವ ನಿತ್ಯ ತೃಪ್ತನಾದವರನು2 ಸಿರಿಯುತ ರಂಗೇಶವಿಠಲ ಸರುವ ದೇವರೊಡೆಯನೆಂದು ಸ್ಥಿರದಿ ನಂಬಿ ಅವನ ಪಾದ ಮರೆಯ ಹೊಕ್ಕ ಜಾಣ ನರನು 3
--------------
ರಂಗೇಶವಿಠಲದಾಸರು
ಧರಾ ರಮಣ ಸ್ವಾಮಿ ಪುಷ್ಕರಿಣೀ ತೀರದೊಳಿರುತಿಹನೆ ಪ ವರಾಹರೂಪದಿ ಹಿರಣ್ಯಾಕ್ಷನ ಸಂಹರಿಸಿದವ ನೀನೆ ಭೂಧರನೇ ಅ.ಪ. ನೀನಲ್ಲದೆ ಭಕುತರ ಮಾನದಿಂ ಪೊರೆವರಿನ್ಯಾರು ಪೇಳೊ ಮೊರೆಯ ಕೇಳೊ | ದಯಾಳೊ 1 ಪಾದ ನಂಬಿದೆನೊ ಸ್ವಾಮಿ ಶ್ರೀಭೂಮಿ ನಿಷ್ಕಾಮಿ 2 ಏಸು ಜನುಮದ ಪಾಪರಾಸಿಗಳಳಿದು ಹೋದವೆಲ್ಲ ಶ್ರೀಶ ನಿನ್ನ ಸಂದರ್ಶನದಿಂದ ರಂಗೇಶವಿಠಲ ಭೊಲೋಲ 3
--------------
ರಂಗೇಶವಿಠಲದಾಸರು
ಧ್ಯಾನ ಮಾಡಿರೊ ರಂಗಯ್ಯನ ಪ ಗಾನ ವಿಲೋಲನ ದೀನಾರ ಪೊರೆವೊನ ಅ.ಪ. ಮೀನ ರೂಪವ ತಾಳಿ ದಾನವಾಖ್ಯನ ಸೀಳಿ ಮಾನವ ಪೊಂದಿದ ಜಾಣ ರಂಗೈಯ್ಯನ 1 ಕೂರ್ಮ ತಾನಾಗಿ ಗಿರಿಯ ಬೆನ್ನಲಿ ಪೊತ್ತು ಸುರರನ್ನೆ ಪೊರೆದ ಗಂಭೀರ ರಂಗೈಯ್ಯನ 2 ವರಾಹ ರೂಪದಿ ಕೋರೆಯ ಕೊನೆಯಲಿ ಧರಣಿಯನೆತ್ತಿದ ಶೂರ ರಂಗೈಯ್ಯನ 3 ನರಹರಿ ರೂಪದಿ ಘೋರ ದೈತ್ಯನ ಸೀಳಿ ತರಳನ ಸಲಹಿದ ಕರುಣಿ ರಂಗೈಯ್ಯನ 4 ಪುಟ್ಟ ಹಾರುವನಾಗಿ | ದಿಟ್ಟ ಬಲಿಗೆ ಒಲಿದು ಕೊಟ್ಟ ವರಗಳ ದಿಟ್ಟ ರಂಗೈಯ್ಯನ 5 ಪರಶು ಪಿಡಿದು ಭೂವರರ ಗೆಲಿದು ಭೂ ಸುರರನ್ನೆ ಸಲಹಿದ ಧೀರ ರಂಗೈಯ್ಯನ6 ಮಾನವ ರೂಪದಿ ದಾನವಾಂತಕನಾಗಿ ದೀನರ ಪೊರೆದ ಸುಜ್ಞಾನಿ ರಂಗೈಯ್ಯನ 7 ಕಂಸನ ವಂಶ ನಿರ್ವಂಶಾಕೋಸುಗ ಯದು ವಂಶದೊಳು ತಾನು ಜನಸಿದನು ಹಿಂಸೆ ಮಾಡುತಲಿರ್ದ ಹಂಸ ಡಿಬಿಕರನ್ನು ಧ್ವಂಸ ಮಾಡಿದ ಮುರಧ್ವಂಸಿ ಕೃಷ್ಣಗೆ 8 ಸತಿಯರ ವ್ರತದಿಂದ ಪತಿತರಳಿಯದಿರೆ ಗತಿ ತೋರದೆ ಭವಕಾತರಿಸೆ ಅತಿ ನಗ್ನದಿ ಬಂದು ವ್ರತಭಂಗ ಮಾಡಿದ ಸಿರಿ ಕಂಠÀನುತನಾದ ಸಿತವಾಹನ ಸಖನ 9 ವೇದ ಬಾಹಿತರನ್ನು ಭೂದೇವಿ ಧರಿಸದೆ ಮಾಧವ ಪೊರೆಯೆಂದು ಮೊರೆಯಿಡಲು ಚದುರತನದಿ ಸತಿಯ ಕುದುರೆಯ ಮಾಡಿತಾ ಕೊಂಡ ಕದನದಿ ಕೊಂದವನ 10 ಮಂಗಳ ಮಹಿಮನ ಶೃಂಗಾರ ಪ್ರಿಯನ ಅಂಗಜಾರಿಯ ಧನುರ್ಭಂಗನ ಅಂಗಳದೊಳು ಮೂರ್ಲೋಕಂಗಳ ತೋರಿದ ತುಂಗ ವಿಕ್ರಮನಾದ ರಂಗೇಶವಿಠಲನ 11
--------------
ರಂಗೇಶವಿಠಲದಾಸರು
ನರಹರಿ ದೀನದಯಾಳೊ ನರಹರಿ ಪ ನರಹರಿ ಕಾಯೊ ನೀಯೆನ್ನ | ಮಹಾ ದುರಿತಂಗಳ ಮರಿಯೊ ಮುನ್ನ | ಆಹ ಪರಮ ಭಕುತಿಲಿ ನಿನ್ನ ಚರಣಾರಾಧನೆ ಮಾಳ್ಪೆ ವರಭಯ ಹಸ್ತವೆನ್ನ ಸಿರದಲಿಡುತಲಿ ಅ.ಪ. ಹಿಂದೆ ಪ್ರಹ್ಲಾದದೇವನಂದು | ಪಿತನ ಬಂಧನದೊಳು ಸಿಲ್ಕಿ ಬಹುನೊಂದು | ತಾನು ಸಂಧ್ಯಾಕಾಲದೊಳಾಗ ನಿಂದು ನಿನ್ನ ಒಂದೇ ಮನದಿ ಸ್ತುತಿಸೆ ದಯಸಿಂಧು | ಆಹ ಮಂದಮತಿಯ ಹಿರಣ್ಯಕನುದರವ ಬಗೆದು ಛಂದದಿ ಕರುಳ ಮಾಲೆಯ ಧರಿಸಿದ ಧೀರ 1 ಕಂದು ಕೊರಳನಂತರ್ಗತದೇವ | ಸಕಲ ವೃಂದಾರಕ ವೃಂದವ ಕಾವ | ಭಕುತ ಸಂದಣಿಗೆ ಬೇಡಿದನೀವ | ಭವ ಬಂಧನವೆಂಬ ವಿಪಿನಕೆ ದಾವ | ಆಹ ಎಂದಿಗೆ ನಿನ್ನಯ ಸಂದರುಶನವೀವೆ ಮಂದಮತಿಯಾದೆನ್ನ ಮುಂದಕೆ ಕರೆಯೊ 2 ನೊಂದೆ ಸಂಸಾರದೊಳು ಮಾಲೋಲ | ಕರುಣ ದಿಂದ ನೋಡೆನ್ನ ದೀನಜನಪಾಲ | ದಿವ್ಯ ಸುಂದರ ಮೂರುತಿಯೆ ಗೋಪಾಲ | ಪವನ ವಂದಿತ ಶ್ರೀ ರಂಗೇಶವಿಠಲ | ಆಹ ಬಂದೆನ್ನ ಹೃದಯಮಂದಿರದಿ ನೆಲೆಯಾಗಿ ನೀ ನಿಂದು ಸಲಹೋ ಎನ್ನ ಕುಂದುಗಳೆಣಿಸದೆ 3
--------------
ರಂಗೇಶವಿಠಲದಾಸರು
ನಾರಾಯಣ ತನ್ನ ನಂಬಿದ ಭಕುತರ ಕಾರುಣ್ಯದಿ ಕಾವ ಪ ಮಾರುತಿ ಸಹಿತನಾಗಿ ತಾನೀ ಶರೀರದೊಳಿಹ ದೇವ ಅ.ಪ ಅನಿರುದ್ಧನು ತಾ ಸಕಲ ಚರಾಚರ ಸೃಷ್ಟಿಯ ಗೈವ ವನಧಿಶಯನ ಪ್ರದ್ಯಮ್ನನು ಬ್ರಹ್ಮಾಂಡವ ಪಾಲಿಸುವ ತ್ರಿನಯನನಂತರ್ಗತ ಸಂಕರ್ಷಣ ತಾನು ಲಯವನು ಗೈವ ವಾಸುದೇವ ಸುಜೀವರಿಗೆ ಮೋಕ್ಷವನೀವ 1 ನರಸಿಂಹ ರೂಪದಿ ಹರಿಯು ಭಕುತ ಪ್ರಹ್ಲಾದನ ಕಾಯ್ದ ಸಿರಿ ರಾಮನು ತಾನಾಗಿ ಬಂದು ದಶಶಿರನ ಭಂಜಿಸಿದ ದುರುಳ ಕಂಸನ ನಿಗ್ರಹಿಸಲು ಯದು ವಂಶದೊಳುದಿಸಿ ಬಂದ ಪರಾಶರಾತ್ಮಜನಾಗಿ ವರವೇದ ವಿಭಾಗವ ಗೈದ 2 ವರಾಹ ನರಹರಿರೂಪವ ತಾ ಕೊಂಡ ಇಚ್ಛೆಯಿಂದಲಿ ವಟುವಾಗಿ ಕೊಡಲಿಯ ಪಿಡಿದ ಪ್ರಚಂಡ ಸಿರಿ ಕೃಷ್ಣ ದಿಗಂಬರನಾಗಿ ಕಂಡ ಸ್ವಚ್ಛ ಅಶ್ವವೇರಿದ ರಂಗೇಶವಿಠಲ ಬಿನಗು ದೈವರ ಗಂಡ 3
--------------
ರಂಗೇಶವಿಠಲದಾಸರು
ನೀನಲ್ಲದಿನ್ನಾರು ಸಲಹುವರೊ ಎನ್ನ ಪ ನಾನು ನನ್ನದು ಎಂಬ ದುರಭಿಮಾನಿಯನ್ನಅ.ಪ. ಶ್ರೀಮದಾಚಾರ್ಯರ ಪುಸ್ತಕ ಭಂಡಾರವನು ಪ್ರೇಮದಿಂ ಧರಿಸುತ ವೃಷಭನಾಗಿರ್ದು ಚರಿಸಿ ಕಾಮಪಿತನೊಲಿಮೆಯಿಂ ಮರಳಿ ಜನಿಸಿ ಗುರುಗಳ ಆ ಮಹಾಭಾಷ್ಯವರುಹಿದ ಜಯತೀರ್ಥ ಗುರುವೆ 1 ಬಾಲತನದಲಿ ಸಕಲ ಲೀಲೆಗಳ ತೊರೆದು ಕಾಲುಂಗುಟಾಗ್ರದಿ ನಿಂದು ತಪವಗೈದು ಶ್ರೀಲೋಲನ ಮೆಚ್ಚಿದಂಥ ಧೀರ ದೈವ ಭೂ- ಪಾಲನಂಶದ ಶ್ರೀಪಾದರಾಜ ಗುರುವೆ2 ಪಿತನ ಮತ ಧಿಕ್ಕರಿಸಿ ಶ್ರೀಪತಿಯೆ ಪರನೆಂಬ ಮತಿಪÉೂಂದಿ ಶಿಶುತನದಲಿ ನರಹರಿಯ ಒಲಿಸಿ ಅತಿಹಿತನಾದ ಪ್ರಹ್ಲಾದದೇವನಂಶದಿಂ ಕ್ಷಿತಿಯೊಳುದ್ಭವಿಸಿದ ವ್ಯಾಸರಾಜ ಗುರುವೆ 3 ಈ ಧರೆಯೊಳೆಸೆಯುತಿಹ ಉಡುಪಿಯೊಳು ನೆಲಸಿರ್ಪ ಯಾದವ ತೀರ್ಥಾಯ ಪದ ಸರಸಿರುಹ ಭೃಂಗ ಮೋದ ತೀರ್ಥಾರ್ಯರ ಪದಕರುಹನಾದಂಥ ಸೋದೆಯೊಳ್ರಾಜಿಸುವ ವಾದಿರಾಜ ಗುರುವೇ 4 ಕಂತುಜನಕನಿಗತ್ಯಂತ ಪ್ರಿಯನಾದ ಮತಿ ವಂತನಾ ವ್ಯಾಸಮುನಿಯೆ ನೀನಾಗಿ ಬಂದು ಸಂತಸದಲಿ ಸಾಧು ಜನರಿಷ್ಟ ಪೂರೈಸುತ ಮಂತ್ರಾಲಯದಿ ಮೆರೆವ ರಾಘವೇಂದ್ರ ಗುರುವೆ 5 ಜಲಜಭವನೂರುಭವನಂಶದಲಿ ಜನಿಸಿ ಕಲಿಯುಗದಿ ಹರಿನಾಮವೆ ಗತಿಯೆಂದು ಸಾರಿ ಹಲವು ಪದ ಸುಳಾದಿಗಳ ರಚಿಸಿ ಸಜ್ಜನರ ಕಲುಷಗಳ ಕಳೆದ ಪುರಂದರದಾಸರಾಯ 6 ಸಕಲ ಋಷಿಗಳ ಸಂಶಯವ ಪರಿಹರಿಸಿ ವೇದ ಉಕುತಿಗಳಿಂದ ಹರಿಯೆ ಪರನೆಂದು ಸ್ಥಾಪಿಸಿ ಭಕುತಿ ವೈರಾಗ್ಯನಿಧಿ ಭೃಗುಮುನಿಯೆಂದೆನಿಸಿದ ಮುಕುತಿಪಥ ತೋರಿಸಿದ ವಿಜಯದಾಸರಾಯ 7 ಸೂತ್ರ ಪುರಾಣಗಳ ರಚಿಸೆ ದಾಸತ್ವವಹಿಸಿ ಸಕಲ ಗ್ರಂಥಗಳ ಬರೆದು ಶ್ರಿಶಗರ್ಪಿಸುತ ಲೇಸು ಜಗಕೆಗೈದಂಥ ಗ ಣೇಶಾವತಾರಿ ಗೋಪಾಲದಾಸರಾಯ 8 ಸಿರಿ ರಂಗೇಶವಿಠಲನ ಕಾಂಬ ತೃಷೆಯಲಿ ಹರಿಗೆ ಹರಿಕಥಾಮೃತಸಾರ ಪಾನಗೈಯಲಿತ್ತ ನರಹರಿಯ ಕೃಪಾಪಾತ್ರ ಸಹ್ಲಾದನಂಶದ ಗುರುವರ ಶ್ರೀ ಜಗನ್ನಾಥದಾಸರಾಯ 9
--------------
ರಂಗೇಶವಿಠಲದಾಸರು