ಒಟ್ಟು 42 ಕಡೆಗಳಲ್ಲಿ , 24 ದಾಸರು , 39 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮೀರಜ ಹನುಮ ಎನ್ನ ಪ್ರಾಣಾಪದಕಾ ಪ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ1 ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ 2 ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ ಅಬುಧಿಯನು ವೇಗ ಬಂಧಿಸಿದೆ ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ 3 ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ ನೀ ತಡೆಯದೆ ಪೋಗಿ ಮೈರಾವಣನ ಮುರಿದೆ ಕೋತಿಗಳೊಳಗೆ ನೀ ಮೆರೆದೆ ವೇದ ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ 4 ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ ಆಲಸÀಗೈಸದಲೆ ದಾಟಿಸಿದೆ ಬಲು ಛಲವಾ ವಾಲಯದಲಿ ಮಾಡಿ ವೈರಿದಳವನು ಗೆಲುವಾ ಕಾಳಗದೊಳು ನಿನ್ನ ಬಲವ ಕೊಂಡಾಡಿದವರು ಮೂಲೋಕದೊಳಗೆ ಸವಿಯದು ಬಲು ಚೆಲುವಾ 5 ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ ಸತತದಲಿ ಕಾಪಾಡು ಎನುತ ಪಾದವ ಪಿಡಿದೆ ಮತಿಯಲಿಡು ಎಂದು ಬೇಡಿದೆ ಅಭಯವ ಚತುರ ಫಲದಾಯಕನೆ ದಯಮಾಡು ಬಿಡದೆ 6 ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ ಇಂಪಾಗಿ ಮಾಡುವ ಅಂಜನೆಯನಂದನಾ ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ7
--------------
ವಿಜಯದಾಸ
ಹೊಟ್ಟೆ ಎಲೆ ಹೊಟ್ಟೆ ಭ್ರಷ್ಟ ನಿನಗಾಗಿ ಜಗದೊಳು ನಾ ಕೆಟ್ಟೆ ಪ ಜನರ ಗೋಣು ಮುರಿದೆ ನಿನಗಾಗಿ ಪರರಿಗ್ಹಾನಿ ಬಯಸಿದೆ ನಿನಗಾಗಿ ಮಾನಹೀನಾದೆನು ನಿನಗಾಗಿ ಮಾಣದ ಅಪವಾದ ಕ್ಷೋಣಿಯೊಳ್ಹೊತ್ತು ನಾ ಕ್ಷೀಣಿಸುತಿರುವೆನು ಗೇಣ್ಹೊಟ್ಟೆ ನಿನಗಾಗಿ 1 ಬಹು ಸುಳ್ಳನಾಡಿದೆ ನಿನಗಾಗಿ ಮಹ ಕಳ್ಳನೆನಿಸಿದೆ ನಿನಗಾಗಿ ತೊರೆದೊಳ್ಳೆಗುಣವ ನಿನಗಾಗಿ ಗುರು ತಳ್ಳಿಬಿಟ್ಟೆನು ನಿನಗಾಗಿ ತಿಳಿಯದೆ ಕೆಟ್ಟೆನು ಇಳೆಯೊಳು ತಿರುಗುತ ಕಳವಳಿಸುತಲತಿಲೊಳ್ಳೊಟ್ಟಿ ನಿನಗಾಗಿ 2 ನಿನ್ನ ನಂಬಿ ಮರೆದೆ ರಾಮನಾಮ ನಿನ್ನ ನಂಬಿ ತೊರೆದೆ ನಿತ್ಯನೇಮ ನಿನ್ನ ನಂಬಿ ಪಡೆಯದ್ಹೋದೆ ಕ್ಷೇಮ ನಿನ್ನ ನಂಬಿ ಬಿಟ್ಟೆನು ಅತಿಶ್ರಮ ನಿನ್ನಿಂದ ಮತಿಗೆಟ್ಟೆ ನಿನ್ನಿಂದ ವ್ಯಥೆಪಟ್ಟೆ ನಿನ್ನಿಂದ ಗತಿಗೆಟ್ಟೆ ಸತತ ಭುವನದೊಳು 3
--------------
ರಾಮದಾಸರು
ಆರು ಬದುಕಿದರಯ್ಯಹರಿನಿನ್ನ ನಂಬಿತೋರೋ ಈ ಜಗದೋಳಗೆ ಒಬ್ಬರನು ಕಾಣೆ ಪಕಲಹಬಾರದ ಹಾಗೆ ಕರ್ಣನನು ನೀ ಕೊಂದೆಸುಲಭದಲಿ ಕೌರವರ ಮನೆಯ ಮುರಿದೆ ||ನೆಲನ ಬೇಡಲು ಪೋಗಿ ಬಲಿಯ ತಲೆಯನು ತುಳಿದೆಮೊಲೆಯನುಣಿಸಲು ಬಂದ ಪೂತನಿಯ ಕೊಂದೆ 1ಕರಪತ್ರದಿಂದ ತಾಮ್ರಧ್ವಜನ ತಂದೆಯನುಕೊರಳ ಕೊಯಿಸಿದೆ ನೀನು ಕುಂದಿಲ್ಲದೆ ||ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆಅರಿತು ನರಕಾಸುರನ ಹೆಂಡಿರನು ಬೆರೆದೆ 2ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆಗರುಡವಾಹನ ನಿನ್ನ ಚರಿಯವರಿಯೆ ||ದೊರೆಪುರಂದರವಿಠಲ ನಿನ್ನನ್ನು ನಂಬಿದರೆತಿರುಪೆಯಾ ಹುಟ್ಟಲೊಲ್ಲದು ಕೇಳೊ ಹರಿಯೆ 3
--------------
ಪುರಂದರದಾಸರು
ಎನ್ನ ಪಾಲಿಸು ಪರಮಕಾಯ ರಘುರನ್ನ ರಾಮನ ಪ್ರಿಯ ಗುರುಮಧ್ವರಾಯ ಪ.ಅಂಜನಿ ಆತ್ಮದಲಿ ಬಂದು ರಾಮನಪಾದಕಂಜವಿಡಿದೆ ಕಡಲ ಲಂಘಿಸಿದೆ ಗೋಷ್ಪದದಿಪಂಜು ಬೆಳಗಿದೆ ನಿಶಾಚರನ ಪಟ್ಟಣವಳಿದೆಕಂಜಾಕ್ಷಿಯಳ ತುಷ್ಟಿಗೈದೆ ಗಡಾಸಂಜೀವ ತಂದು ಕಪಿಬಲವ ರಕ್ಷಿಸಿದೆ 1ಕುರುಕುಲಾಧಮನು ಬಲುಸೊಕ್ಕಿ ಸಂಗರಭಟರನೆರಹಿ ಪಾರ್ಥರ ಬಲವ ಗೆಲುವೆನೆಂದವನ ಭರಮುರಿದೆ ಮಹರಥಿಕರೆದೆ ಹರಿದೆ ಅಸಹಾಯ ಶೂರಸರಿಯಾರು ನಿನಗಸಮಧೀರ ಭಾಪುಕರುಣಾಸಾಗರ ಉದಾರ ಅಜಪದದಧಿಕಾರ 2ಏಕವಿಂಶತಿಮಾಯಿ ರಚಿತ ಭಾಷ್ಯವ ಜರಿದೆಶ್ರೀಕಾಂತನ ನಾಮಾಮೃತವ ಭಕ್ತರಿಗೆರೆದೆಭೂಕನಕ ವಧು ವಿಷಯಕಾಂಕ್ಷೆಗಳ ಮೇಲೊದೆದೆಲೋಕಕೊಬ್ಬನೆ ಗುರುವೆ ಮೆರೆದೆ ವಿಶ್ವೇಶ ಪ್ರಸನ್ನವೆಂಕಟೇಶನಂಘ್ರಿವಿಡಿದೆ 3
--------------
ಪ್ರಸನ್ನವೆಂಕಟದಾಸರು
ಒಂದೇ ಕೂಗಳತೆ | ಕೈಲಾಸಕ್ಕೆ |ಒಂದೇ ಕೂಗಳತೆ ಪಬಾಲ ಮಾರ್ಕಾಂಡೇಯ ಕಾಲಪಾಶದಿ ಸಿಕ್ಕಿ |ಗೋಳಿಟ್ಟು ಸ್ತುತಿಸಲಾ ನೀಲಕಂಧರನಾ ||ಶೂಲಪಾಣಿಯು ಕಲ್ಲ ಲಿಂಗದಿ ಮೈದೋರಿ |ಕಾಲನ ಮುರಿದೆತ್ತಿ | ಬಾಲನ ಸಲಹಿz À 1ಶಿವನ ಅರ್ಧ ಪ್ರಹರದಿ ಒಲಿಸಿಕೊಳ್ಳುವೆನೆಂದು |ಪವನಾತ್ಮಜನು ಗದೆಯನಂಬರಕ್ಕೆಸೆದು ||ಭುವನದಿ ಸ್ತುತಿಸುತ್ತ ಶಿರಒಡ್ಡಿನಿಂದಿರೆ |ತವಕದಿಂದೈತಂದು ಶಿವನು ಭೀಮನ ಕಾಯ್ದ 2ಚರರನಟ್ಟಿದನೇ ರತ್ನಾಂಗದ ಶಿವನಿಗೆ |ಕರೆಯ ಪೋದನೇ | ಕನ್ಯನೆಂಬ ಚಂಡಾಲ ||ಬರದೋಲೆ ಕಳುಹಿಸಿ ಕೊಟ್ಟಾಳೆ ನರ್ಮದೆ |ಸ್ಮರಿಸಿದಾಕ್ಷಣ ಗೋವಿಂದನಸಖಬರುವರೇ 3
--------------
ಗೋವಿಂದದಾಸ
ಚಿತ್ತಿಟ್ಟು ನಮಿಸುವೆ ನಿಮ್ಮ ಮೂಲಚೈತ್ಯದಲಿಹ ಚೆನ್ನಿಗ ಬಲ ಹನುಮ ಪ.ಮೊದಲೆ ರಾಮರ ಭಟನಾಗಿ ಅಂದುಪದ್ಮದೇವಿಯ ಚರಣಕೆ ತಲೆಬಾಗಿಮುದದಿ ಮುದ್ರಿಕೆಯ ನೀ ಕೊಟ್ಟೆ ಬಲುಮದ ಸೊಕ್ಕಿದಸುರನ ಪುರವನೆ ಸುಟ್ಟೆಚೂಡಾಮಣಿಯ ತಂದಿಟ್ಟೆ ಬಲು ಹರುಷವ ಕೊಟ್ಟೆ 1ಕೊಬ್ಬಿದ ಕುರುಪತಿ ಬಲದಿ ಪೊಕ್ಕುಬೊಬ್ಬೆಯನಿರಿದು ಶೂರರ ಶಿರ ಹರಿದೆಆರ್ಭಟವನು ತೋರಿದೆ ಬಲುದುರ್ಬುದ್ಧ್ಯ ದುಶ್ಯಾಸನನ್ನೋಡಲ್ಬಗಿದೆ ಖಳರ ಹÀಲ್ಲುಮುರಿದೆಮಪುರಕೆ ಕಳುಹಿದೆ 2ಪರಮಪುರುಷ ಹರಿಯೆಂದು ಮಿಕ್ಕಸುರರುಈತನ ದಾಸಾಂಕಿತರಹುದೆಂದುಅರುಹಿದೆಶ್ರುತಿಇತಿಹಾಸಅಹಿಗಿರಿಯ ಪ್ರಸನ್ವೆಂಕಟೇಶನ ದಾಸ ತುಂಗಾತೀರವಾಸನೆ ಸಲಹೊ ಮುಖ್ಯೇಶ 3
--------------
ಪ್ರಸನ್ನವೆಂಕಟದಾಸರು
ಮಧ್ವರಾಯಾ-ಗುರು-ಮಧ್ವರಾಯಾಮಧ್ವರಾಯಾ-ಗುರು-ಮಧ್ವರಾಯಾ ಪರಾಮಾವತಾರದೊಳೊಮ್ಮೆ ಮಧ್ವರಾಯಾಆ ಮಹಾ ಹನುಮನಾದೆ ಮಧ್ವರಾಯಾ ||ವಾಮಮುಷ್ಟಿಲಿ ರಾವಣನ ಗೆಲಿದೆ ಮಧ್ವರಾಯಾ ||ಕಾಮಿತಾರ್ಥಸುರರಿಗಿತ್ತೆ ಮಧ್ವರಾಯಾ1ಕೃಷ್ಣಾವತಾರದೊಳೊಮ್ಮೆ ಮಧ್ವರಾಯಾದುಷ್ಟಕುಲಕೆ ಭೀಮನಾದೆ ಮಧ್ವರಾಯಾ ||ಕುಟ್ಟಿದೆ ಕೌರವರನೆಲ್ಲ ಮಧ್ವರಾಯಾ - ಶ್ರೀ -ಕೃಷ್ಣನ ಪ್ರೀತಿಯ ಪಡೆದೆಯೊ ಮಧ್ವರಾಯಾ 2ಧರೆಯೊಳು ಯತಿಯಾಗಿ ಜನಿಸಿದೆ ಮಧ್ವರಾಯಾಗುರುವ್ಯಾಸರ ಹಿತವ ಪಡೆದೆ ಮಧ್ವರಾಯಾದುರುಳಮಾಯಿಮತವ ಮುರಿದೆ ಮಧ್ವರಾಯಾಪುರಂದರವಿಠಲನ ದಾಸನಾದೆ ಮಧ್ವರಾಯಾ3
--------------
ಪುರಂದರದಾಸರು
ವಂದಿಸಿದರ ಕಾವೆ ವರವನೀವೆ ಅಹಿಪವೀಂದ್ರಭವಸುರರಗುರುಮಧ್ವಮುನಿರಾಯಪ.ಒಂದೊಂದುಶ್ರುತಿಸ್ಮøತಿಗೆ ಬಹ್ವಾರ್ಥಗಳ ಪೇಳದೆಒಂದೆರಡು ತತ್ವವಿಸ್ತರವ ಪೇಳಿದೆಒಂದು ಮೂರವತಾರದಲ್ಲಿ ಹರಿಯನೆ ಒಲಿಸಿಒಂದು ನಾಲ್ಕರ ಭೇದ ನಿಜರಿಗರುಹಿದೆಯ 1ಒಂದೈದು ರಿಪುವರ್ಗ ನಿಗ್ರ್ರಹವ ಮಾಡಿಸಿದೆಒಂದಾರು ತ್ರಿಗುಣಿಸಿದ ಮತವ ಮುರಿದೆಒಂದೇಳು ಮದವ ಕಾಲಲಿ ಮೆಟ್ಟಿ ಹರಿಪುರಕೆಒಂದೆಂಟು ಭಕುತಿಪಥ ತೋರ್ದೆ ವೈಷ್ಣವರಿಗೆ 2ಒಂದು ಒಂಬತ್ತು ಹರಿಯವತಾರ ಕಥೆ ರಚಿಸಿಒಂದು ಹತ್ತೇಂದ್ರಿಯದ ಗೆಲವ ಕಳಿಸಿಒಂದು ಹನ್ನೊಂದು ಸ್ತೋತ್ರದಿ ಕೃಷ್ಣನ ಮೆಚ್ಚಿಸಿದೆಒಂದು ಹನ್ನೆರಡು ತತ್ವದಾಗ 3ಒಂದು ಹದಿಮೂರು ಭುವನಗಳಲ್ಲಿ ನೀ ವ್ಯಾಪ್ತಒಂದು ಹದಿನಾಲ್ಕು ದ್ವಿಗುಣಿಸಿದ ಮ್ಯಾಲೇಳೊಂದಿದ ಸದ್ಗ್ರಂಥಗಳ ನಿರ್ಮಿಸಿ ಬುಧರಿಗಿತ್ತೆಒಂದು ಹದಿನೈದು ಗುಣದ ಲಕ್ಷಣಾಂಗ 4ಒಂದು ಹದಿನಾರೆಂಟು ತತ್ವ ಸಿದ್ಧಾಂತದಲಿಒಂದು ಹದಿನೇಳು ಪರ್ವಮೋಹಕ ಬಿಡಿಸಿದೆಒಂದು ಮನದಿಂದ ಶಿರಿ ಪ್ರಸನ್ನವೆಂಕಟ ಕೃಷ್ಣನಒಂದೊಂದು ಗುಣಕೆ ಅನಂತ ವ್ಯಾಖ್ಯಾನ 5
--------------
ಪ್ರಸನ್ನವೆಂಕಟದಾಸರು
ವೀರ ಬಂದ ವೀರ ಬಂದಘೋರಹಮ್ಮುಎಂಬ ದಕ್ಷನತೋರ ಶಿರವರಿಯಲೋಸುಗಪಭಯನಿವಾರಣವೆಂಬ ಕಾಸೆಯನೆ ಹೊಯ್ದಜಯಶೇಖರನೆಂಬ ವೀರ ಕಂಕಣಕಟ್ಟಿನಿಯತ ಸಾಹಸವೆಂಬ ರತ್ನ ಮುಕುಟವಿಟ್ಟುಸ್ವಯಂ ಸೋಹಂ ಎಂಬ ಕುಂಡಲವ ತೂಗುತ1ಆಡಲೇನದ ಶುದ್ಧವೆಂಬ ಭಸಿತವಿಟ್ಟುರೂಢಿಯ ಸತ್ಪವೆಂದೆಂಬ ಹಲಗೆಯಾಂತುಇಡಾಪಿಂಗಳವೆಂಬ ಪಾವುಗೆಗಳ ಮೆಟ್ಟಿಗಾಢ ಧೈರ್ಯವೆಂಬ ಖಡುಗ ಝಳಪಿಸುತ2ಒಂದೊಂದೆ ಹೆಜ್ಜೆಯನಂದು ಪಾಲಿಸುತಾಗಹಿಂದೆಡಬಲ ನೋಡದೆ ಮುಂದು ನಿಟ್ಟಿಸಿಛಂದಛಂದದಲಾಗುವಣಿ ಲಗುವಿನಿಂದಬಂದನು ಬಹು ಶೂರಧೀರ ಮಹಾವೀರ3ದಾರಿ ಊರುಗಳನೆ ಧೂಳಿಗೋಂಟೆಯ ಮಾಡಿಆರಾಧರೇನು ಶಿಕ್ಷಿಸುವೆನೆಂದೆನುತಭೇರಿಕರಡಿ ಸಮ್ಮೇಳಗಳೊಡಗೂಡಿಕಾರಣವಹ ಯಜÕಮಂಟಪದೆಡೆಗಾಗಿ4ಸುಷುಮ್ನವೆಂದೆಂಬ ಬಾಗಿಲ ಮುರಿಯುತ ಆಸಮಯದಿ ಬಂದ ಅಸುರರ ಕೊಲ್ಲುತಭೇಸರಿಸುವ ದೊರೆ ದೊರೆಗಳನಿರಿಯುತದ್ವೇಷರೆನಿಪ ಷಡುರಥಿಕರ ಕಟ್ಟುತ5ಅಷ್ಟಸಿದ್ಧಿಗಳೆಂಬ ದಿಕ್ಪಾಲಕರ ನಟ್ಟಿಭ್ರಷ್ಟ ಮೋಹವದೆಂಬ ಯಮನ ಹಲ್ಮುರಿದೆತ್ತಿನಷ್ಟಮನವೆಂಬ ಬೃಗುವಿನ ಮೀಸೆಯ ಕಿತ್ತುಶಿಷ್ಟಶಿಷ್ಟರನು ಎಲ್ಲರ ಕೆಡೆಮೆಟ್ಟಿ6ಹಮ್ಮುತಾನಾಗಿರುತಹಉನ್ಮತ್ತದಕ್ಷನ ಶಿರವನು ತರಿಯುತಲಾಗಗಮ್ಮನೆ ತ್ರಿಕೂಟ ಯಜÕಕುಂಡದೊಳುಸುಮ್ಮನಾಹುತಿಯಿಟ್ಟು ಸುಲಭದಲಿ ನಲಿಯುತ7ಪಾಪರೂಪನಾದ ಜೀವದಕ್ಷನನುಈ ಪರಿಯಲಿ ಕೊಂದು ನಾಟ್ಯವಾಡಲುಭಾಪುರೇ ಎಂದು ಸಾಧು ಪ್ರಮಥರು ಹೊಗಳಲುತಾಪಹರನಾಗಿ ಶಾಂತಿಯ ಹೊಂದುತ8ನಿರುಪಮನಿತ್ಯನಿರಾಳನೆ ತಾನಾಗಿಪರಮೇಶಪರವಸ್ತುಪರತರವೆಯಾಗಿಭರಿತ ಚೇತನ ಪ್ರತ್ಯಗಾತ್ಮನೆ ತಾನಾಗಿನಿರುತ ನಿತ್ಯಾನಂದ ಚಿದಾನಂದಯೋಗಿ9
--------------
ಚಿದಾನಂದ ಅವಧೂತರು