ಒಟ್ಟು 64 ಕಡೆಗಳಲ್ಲಿ , 23 ದಾಸರು , 59 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರಿವರ ನೋಡಿರೊ | ಗುರು ವಿಜಯ |ದಾಸರಿವರ ಪಾಡಿರೋ ಪ ವ್ಯಾಸರಾಜ್ಞೆಯಲಿಂದ | ವ್ಯಾಸ ಕಾಶಿಗೆ ಪೋಗಿ |ಶ್ರೀಶಾನುಗ್ರಹದಲಿ | ಭಾಸಿಸೀ ಮೆರೆದಂಥ ಅ.ಪ. ಎರಡನೆ ಯುಗದೊಳಗೆ | ಸುರಲೀಲ | ವರಕಪಿ ಎಂದೆನೆಸಿ |ಶಿರಿ ರಾಮಚಂದ್ರನ್ನ | ಚರಣ ಸೇವಕರಾಗಿಸುರ ವಿರೋಧಿಗಳ ಬಹಳ ಸಂಹರಿಸಿದ 1 ಯಾದವರಲಿ ಜನಿಸಿ | ನಿಕಂಪಾಖ್ಯ | ಶ್ರೀದಕೃಷ್ಣನ ಭಜಿಸಿ |ಮಾಧವ ಗೆದುರಾಂತ | ದೈತ್ಯರ ಸದೆಬಡಿದುಯಾದವೇಶನ ಪದ | ಕರ್ಪಿಸಿ ಮೆರೆದಂಥ 2 ಪುರಂದರ ದಾಸರ | ವರ ಗೃಹದಲಿ ಇದ್ದುಹರಿಚರಿತೆ ಶ್ರವಣದಿ | ವಿಪ್ರನಾಗ್ಯುದೀಸಿದ 3 ಮಧ್ವಪತಿಯ ನಾಮದಿ | ಭೃಗ್ವಂಶದಿ | ಮುದ್ದು ಮಗನೆನಿಸಿಮಧ್ವೇಶ ಹರಿಪಾದ | ಶ್ರದ್ಧೆಯಿಂದಲಿ ಭಜಿಸಿಮಧ್ವರಾಯರ ಮತ | ತುತಿಸಿ ಮೋದಿಸಿದಂಥ 4 ಚೀಕನಪರಿ ಕ್ಷೇತ್ರದೀ | ದಾಸಪ್ಪನು | ಆ ಕೂಸಮ್ಮನ ಉದರದಿಬೇಕಾಗಿ ಜನಿಸುತ್ತ | ಪ್ರಾಕು ಪ್ರಾರಬ್ದವನೇಕ ಬಗೆಯಲಿ ಉಂಡ | ಮಾಕಳತ್ರನ ಕಂಡ 5 ಪುರಂದರ | ದಾಸರೂಪಿಯಲಿಂದ |ಸೂಸಿ ಶಾಸ್ತ್ರವ ಮಧ್ವ | ಭಾಷ್ಯಾನು ಸಾರದಿ |ಭಾಷೆ ಕನ್ನಡದಲ್ಲಿ | ಮೀಸಲೆನಿಸಿ ಪೇಳ್ದ 6 ಧ್ಯಾನೋಪಾಸನೆ ಕರ್ಮವ | ಯೋಗ್ಯರಿಗೆ | ಗಾನಗೈದಿಹ ಸುಜ್ಞಾನೀ | ಮಾನ್ಯ ಮಾನದ ದುಷ್ಟ | ಗಾನಕೆ ಮನ ಕೊಡದೆಮೌನಿಯಾಗುವ ಮಾರ್ಗ | ದಾನವ ಮಾಡೀದ 7 ಸ್ವಪ್ನದಲ್ಲೆನಗವರೂ | ದರ್ಶನದಿ | ಕೃಪ್ಪೆಯಲನುಗ್ರಹಿಸಿ |ಅಪ್ಪಾರ ಮಹಿಮರು | ತಪ್ಪದೆ ತ್ರಯ ಬಾರಿಒಪ್ಪಿ ತೀರ್ಥವನಿತ್ತು ಕಳುಹಿದ ಮಹಾಂತ 8 ವತ್ಸರ ಕಾರ್ತೀಕ | ಸಿತ ದಶಮಿ | ಆವಗುರುವಾಸರದಿಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಂಡು ಸುಯೋಗದಿ ಪೊರಟಂಥ 9
--------------
ಗುರುಗೋವಿಂದವಿಠಲರು
ನಿನ್ನ ಮನಸಿಗೆ ಬಂತೆ ಪ್ರಾಣನಾಥಾ ಚಿಣ್ಣನೆಂದು ನೋಡದಲೆ ಕರಿಯಲಟ್ಟಿದೆ ವೇಗ ಪ ಸಾಕಿದೆನು ನಿನ್ನ ದಾಸನೆಂದು ತಿಳಿದು ವಿ- | ವೇಕದಿಂದಲಿ ಉಪನಯನ ಮಾಡೀ | ಲೋಕದೊಳಗೆ ಬೆಳಸಿ ಮುದುವೆಯ ಮಾಡಿ ಅ- ನೇಕ ತೀರ್ಥಯಾತ್ರೆ ತಿರುಗಿದವನಾ ಇಂದೆ 1 ಉದ್ಧಾರವಾಗುವೆನು ಕುಲಕೋಟಿ ಸಹಿತೆಂದು ಪದ್ದಿಟ್ಟುಕೊಂಡಿವೈ ಈ ತರಳನ ಸುದ್ದಿ ತಿಳಿಯಗೊಡದೆ ವಿಯೋಗ ಮಾಡಿಸಿದೆ ಇಂದು 2 ಪಾದ ಭಜಿಸುವರಿಗೆ ಭಾಗ್ಯ ಹೆಚ್ಚುಗೊಡದಿಪ್ಪನೆಂದು ಬಿರುದು ಧರಿಸಿ ನಿಚ್ಚ ಮೆರೆವಾ ಮಹಿಮ ವಿಜಯವಿಠ್ಠಲರೇಯ ಅಚ್ಚ ಭಕುತರ ಪ್ರಿಯ ವೈಕುಂಠಕೆ ಇಂದೆ 3
--------------
ವಿಜಯದಾಸ
ನೋಡಿದ್ಯಾ ಗುರುರಾಯರ ನೋಡಿದ್ಯಾ ಪ ನೋಡಿದ್ಯಾ ಮನವೆ ನೀನಿಂದು - ಕೊಂ - ಡಾಡಿದ್ಯ ಪುರದಲ್ಲಿ ನಿಂದು - ಆಹಾ ಮಾಡಿದ್ಯ ವಂದನೆ ಬೇಡಿದ್ಯ ವರಗಳ ಈಡು ಇಲ್ಲದೆ ವರ ನೀಡುವೊ ಗುರುಗಳ ಅ.ಪ ಸುಂದರ ತಮ ವೃಂದಾವನದಿ ತಾನು ನಿಂದು ಪೂಜೆಯ ಕೊಂಬ ಮುದದಿ - ಭಕ್ತನೀ ನಂದ ನೀಡುವೆನೆಂದು ತ್ವರದಿ ಇಲ್ಲಿ ಬಂದು ನಿಂತಿಹನು ಪ್ರಮೋದಿ ಆಹಾ ಹಿಂದಿನ ಮಹಿಮವು ಒಂದೊಂದೆ ತೋರುವಾ ಮಂದಜನರ ಹೃ - ನ್ಮಂದಿರಗತರನ್ನ 1 ದೂರದಿಂದಲಿ ಬಂದ ಜನರ - ಮಹ ಘೋರ ವಿಪತ್ಪರಿಹಾರಾ - ಮಾಡಿ ಸಾರಿದಭಿಷ್ಟವು ಪೂರಾ - ನೀಡಿ ಪಾರುಮಾಡುವ ತನ್ನ ಜನರಾ - ಆಹಾ ಆರಾಧಿಸುವರ ಸಂ -ಸಾರವಾರಿಧಿಯಿಂದ ಸೂರಿ ಕೊಡುವೊರನ್ನ 2 ಪಾದ - ಯುಗ ಸತ್ಯಪೂರ್ವಕದಿ ನಂಬೀದ - ನಿಜ ಭೃತ್ಯನಪೇಕ್ಷಮಾಡೀದ - ಕಾರ್ಯ ಸತ್ಯಮಾಡುವ ಪೂಜ್ಯಪಾದ - ಆಹಾ ಮತ್ರ್ಯಾದಿ ಸುರರೊಳು - ಎತ್ತ ನೋಡಿತಗಿನ್ನು ಉತ್ತುಮರಾರಯ್ಯ - ಭತ್ಯವತ್ಯಲರನ್ನ 3 ಅಂತರದಲಿ ತಾನು ನಿಂತು ಜನ ಸಂತತ ಕಾರ್ಯಗಳಿಂತು - ಮಾಡಿ ಕಂತುಪಿತಗೆ ಅರ್ಪಿಸ್ಯಂತು ತಿಳಿಸ ದಂತೆ ಎಮ್ಮೊಳಗಿರೊವೊ ತಂತು - ಆಹಾ ಸಂತತ ಕರ್ಮಗಳಂತು ಮಾಡುತ ಜೀವ ರಂತೆ ಗತಿಯು ತಾ ಪ್ರಾಂತಕ್ಕೆ - ನೀಡುವರ 4 ಅಗಣಿತ ಮಹಿಮವಗಾಧಾ - ಬಹು ಸುಗುಣನಿಧಿ ಮಹಾ ಭೋಧ - ನಾನು ಪೊಗಳುವದೇನು ಸಮ್ಮೋದ - ತೀರ್ಥ ಮೊದಲಾದ ಸುರರ ಪ್ರಮೋದ - ಆಹಾ ಮೊಗದಿಂದ ಶ್ರೀಗುರು ಜಗನ್ನಾಥ ವಿಠಲ ಸಂ ಮೊಗನಾದ ಕಾರಣ ಜಗದಿ ಮೆರೆವೊರನ್ನ 5
--------------
ಗುರುಜಗನ್ನಾಥದಾಸರು
ನೋಡು ನೋಡು ಜೀವನೆ ನೀ ನಿನ್ನಯ ನಿಜರೂಪವಾ ತಿಳಿದು ನಲಿದು ಜ್ಞಾನಪಥದಿ ಆನಂದವ ಹೊಂದು ನೀ ಪ ಅಮರನಾದ ಆತ್ಮ ನೀನು ಆನಂದದ ನಿಧಿಯೇ ನೀ ಅರಿತು ಇದನು ನಿನ್ನ ಮನದಿ ಶಾಂತರೂಪನಾಗು ನೀ 1 ನಾನೆನ್ನುವ ಅನಿಸಿಕೆಯದು ಅಡಗಲು ತಾನುಳಿಯುವಾ ತೋರಿಕೆಯನು ಮೀರಿದಾ ನಿರ್ವಿಕಲ್ಪ ನೋಡು ನೀ ಶ್ರವಣ ಮನನ ನಿದಿಧ್ಯಾಸ ಸಾಧನೆಗಳ ಮಾಡುತಾ ತಿಳಿವುದಾತ್ಮರೂಪ ನಾನೆ ಎಂದು ನಿನ್ನ ಮನದಲಿ 2 ಮನದೊಳಗೀಪರಿಯಾ ದೃಢತರದಲಿ ನಿಶ್ಚಿತಮಾಡೀ ದೇಹ ಮನಸು ಬುದ್ಧಿಗಳಿವು ನಾನಲ್ಲೆಂದರಿಯುತ ತೋರಿ ಅಡಗುತಿರುವ ಜಗವು ಕನಸೇ ಎಂದರಿತು ನೀ ಪರಮಸತ್ಯ ಆತ್ಮರೂಪ ನಾನಿಹೆನೆಂದರಿತುಕೋ 3 ಪ್ರೇಮರೂಪ ನೀನೆ ಎಂದು ಸಾರಿ ಪೇಳ್ದ ಜ್ಞಾನವ ಆ ಮಹಾತ್ಮಶಂಕರಗುರುರಾಜನ ನುಡಿ ತಿಳಿಯೋ ನೀ 4
--------------
ಶಂಕರಭಟ್ಟ ಅಗ್ನಿಹೋತ್ರಿ
ನೋಡೆಲೊ ಎನ್ನ ಕರುಣದಿ ಹರಿ ಮಾಡೊ ಉದ್ಧಾರ ಬೇಗದಿ ಪ ರೂಢಿಯೊಳು ಮುಖ ಮಾಡಿ ಪರರನು ಮಾಧವ ಅ.ಪ ಸೃಷ್ಟಿಯೊಳೆನ್ನ ನೂಕಿ ಯಾತಕೆ ಬಿಟ್ಟಿ ಬೇಸರ ಮಾಡುವಿ ಕೆಟ್ಟಹೊಟ್ಟೆಯ ಕೊಟ್ಟು ವಿಧವಿಧ ಭ್ರಷ್ಟನೆನಿಸುವುದೇನಿದಭವ 1 ಜ್ಞಾನಶೂನ್ಯನ ಮಾಡೀಭವಕೆ ನೀನೆನೂಕಿದೆ ಮತ್ತಾರೆಲೊ ಏನುಕಾರಣ ಪಾಪಿಯೆಂದೆನ್ನ ಹೀನದೃಷ್ಟಿಲಿ ನೋಡ್ವೆ ದೇವ 2 ಏನು ಸ್ವಾಧೀನ ಕೊಟ್ಟದ್ದೆನ್ನಗೆ ನೀನೆ ನ್ಯಾಯವು ಪೇಳಯ್ಯ ನೀನೆ ಸಕಲ ಸ್ವತಂತ್ರ ಎನಗೆ ಜ್ಞಾನ ಪಾಲಿಸಿ ಪೊರೆ ಶ್ರೀರಾಮ 3
--------------
ರಾಮದಾಸರು
ಪಾರ್ವತಿ ದೇವಿ ಉಮಾ - ನಿನಗೆ ಸರಿಯಾರೇಕಮ್ಮಗೋಲ್ವೈರಿಯ ಪ್ರೇಮ ಪಾತ್ರಳಾದ ಪ ಆಡೂವ ನುಡಿಗಳ - ಜೋಡಿಸಿ ಹರಿಯಲಿಮಾಡೀಸು ಸತ್ಸಾಧನಾ ||ಬೇಡಿಕೊಂಬೆನು ದೇವಿ - ರೂಢಿಗೊಡೆಯನ ತಡಮಾಡದೆ ತುತಿಪಂಥ - ಜೋಡಿಸು ಮನಾ 1 ಸುರಪಾದಿ ದೇವತೆ ಕರಗಳ ಜೋಡಿಸಿಶರಣೆಂದು ಪೇಳುವರೇ ||ಹರ್ಯಕ್ಷ ಯಕ್ಷನ ಈಕ್ಷಿಸಿ ಬರುತಿರೆಹರಿ ಪೇಳೆ ಸುರಪಗೆ ಬೋಧಿಸಿದೆ 2 ಸತಿ - ವ್ಯತ್ಯಸ್ತ ಮನವನುಸತ್ಯಾತ್ಮನಲಿ ನಿಲಿಸೇ ||ಅರ್ಥೀಲಿ ಹರಿಯ - ಅತ್ಯರ್ಥ ಪ್ರಸಾದಕ್ಕೆಪಾತ್ರನೆಂದೆನಿಸಿ - ಪಾಲಿಸೇ 3 ಪ್ರಾಣಂಗೆ ಪ್ರಾಣನ - ಗಾನ ಮಾಡಲು ಗುಣಶ್ರೇಣಿಗಳ ಜೋಡಿಸೇ ||ಗಾನ ವಿನೋದಿ - ಪ್ರ - ದಾನ ಪುರೂಷನಮಾಣದೆನಗೆ ತೋರಿಸೇ 4 ಹಿಮಗಿರಿಸುತೆತವ - ವಿಮಲಪದಾಬ್ಜಕೆನಮಿಸುವೆ ನೀ ಪಾಲಿಸೇ ||ಅಮಿತಾರ್ಕ ನಿಭ ಗುರು ಗೋವಿಂದ ವಿಠಲನಕಮನೀಯ ಪದ ಕಾಣಿಸೇ 5
--------------
ಗುರುಗೋವಿಂದವಿಠಲರು
ಪಾಹಿ ಪಾಹಿ ಮೋಹನ್ನರೆ | ಲೋಹಲೊಷ್ಟ ಸಮೇಕ್ಷಣ ಪ ಪಾದ ಸೇವೆ | ವಿಹಿತದಿ ನೀಡೆನಗೆ ಅ.ಪ. ಪಾದ | ಬಂಡುಣಿಯಂದದಲೀಮಾಂಡವ್ಯರಾಗಿರುವಾಗ | ಚಂಡತಪ ಮಾಡಿದಿರಿ 1 ಗಾಣಿಗನುದರದೀ | ಜನಿಸುತ ಪೂರ್ವದೀಧನ ಬಹುಗಳಿಸುತ | ಜನುಮವ ನೂಕಿದಿರಿ2 ಗಳಿಸಿದ ಧನವನೂ | ಲಲನೆಗೂ ಪೇಳದೇಮಲಿನ ದೇಹವನೀಗಿ | ಕಳೆದಿರಿ ಪ್ರಾರಬ್ಧವ 3 ಸತಿಸುತ ಬಂಧು ಜನ | ಗತಿತಪ್ಪಿ ಭ್ರಾಂತರಾಗೀಅತಿ ಅತಿ ವ್ಯಥೆಯಿಂದ | ಪಾಥೇಯವ ಕಾಣಲಿಲ್ಲ 4 ಚಿನಿವಾರ ನೂದರದೀ | ಪುನರಪಿ ಜನಿಸಲೂಜನನಿಯು ಅನುವನು | ಕಾಣದಲೆ ಚಿಂತಿಸಿದಳ್ 5 ಆರ್ತಳಾಗುತ ಚಕ್ರ | ತೀರ್ಥವ ಪೊಗಲೂ ಬರೇಪಾರ್ಥ ಸಖನ ಭಕ್ತ | ಆರ್ತೆಯನು ತಡೆದರು 6 ಆಕೆಯ ಶಿಶು ಸಹಾ | ಸಾಕುವೆನೆನುತಲೀಶ್ರೀಕರ ವಾಕ್ಯವಿತ್ತು | ಭೀಕರವ ತಪ್ಪಿಸಿದ 7 ವಿಜಯರಾಯರು ಬಂದೂ | ನಿಜಸತಿ ಮಡುವಿನೊಳ್‍ತೇಜಸ್ಸಿನಿಂ ಮೆರೆವಂಥ | ದ್ವಿಜಸುತನರ್ಪಿಸಿದರ್ 8 ಮೋಹನ ಬಾಲನಿಗೆ | ಮೋಹನ ವಿಠಲನಾಮೋಹದಂಕಿತವಿತ್ತು | ಮಾಹಿತಾಂಘ್ರಿ ನೆನೆಸಿದರ್ 9 ಮುಂಜಿ ಮದುವೆ ಮಾಡೀ | ಹಂಜರದಿ ನಿಲಿಸುತಾಕಂಜಾಕ್ಷನಂಘ್ರಿಯನು | ಅಂಜಾದಲೆ ಭಜಿಸೆಂದರ್10 ಚಿನಿವಾರತನದಿಂದ | ಧನವನು ಗಳಿಸಿದಾಜನುಮ ಪೂರ್ವದಸ್ಮøತಿ | ಮನದೊಳು ನೆನೆದೆಯೋ11 ಗಾನವ ಮಾಡುತಲೀ | ಗಾಣಿಗತನಯರನೂಕಾಣುತಲೀ ಪೇಳಿದೆಯೊ | ಧನವಿಟ್ಟ ಸ್ಥಳವನು 12 ಗುರುಗಳ ಕರುಣಿಯಿಂ | ಹರಿದೆಯೊ ಅಪಮೃತೀನೆರೆದಿದ್ದ ಜನರುಗಳ್ | ಅರೀಯರು ಸೋಜಿಗವ 13 ಮೋದ ತೀರ್ಥರ ಮತ | ಸಾಧಿಸಿದೆ ಜಗದೊಳು14 ಪವನಾಂತರಾತ್ಮ ಗುರು | ಗೊವಿಂದ ವಿಠಲನಾಪಾವನಾ ಸ್ಮರಣೆಯಿಂ | ಭವವನು ಕಳೆದೆಯೋ 15
--------------
ಗುರುಗೋವಿಂದವಿಠಲರು
ಬರಬಾರದಾಗಿತ್ತು ಬಂದೆನಯ್ಯಾ ಪ ಕರೆತರಲು ಬಂದುದಕೆ ಫಲವೇನೊ ದೇವಾಅ.ಪ ತರಳತನದಲ್ಲಿ ಎನ್ನ ಕರಣಗಳು ಮಾಡಿದ ಪರಿಪರಿಯ ಕ್ರೀಡೆಗಳ ಫಲವೇನೊ ಎನಗೆ ದುರುಳ ಸಂಗದೊಳಿದ್ದು ಹರುಷದಿಂದಲಿ ಎನ್ನ ಆಯುವನು ಕಳೆದೆ1 ಸತಿಸುತರು ಹಿತರಿವರು ಎನಗೆಂದು ಉಬ್ಬುಬ್ಬಿ ಮಿತಿ ಇಲ್ಲದಾ ಕಾರ್ಯಗಳನೆ ಮಾಡೀ ಗತಿಯೇನು ಮುಂದು ಹಿತವು ಯಾವುದು ಎಂದು ಮತಿಗೆಟ್ಟಮೇಲೆನಗೆ ಗೊತ್ತಾಗುವುದೆಂತೋ 2 ಶ್ವಾನ ಸೂಕರಗಳು ಸ್ವೇಚ್ಛೆಯಿಂದಲಿ ಚರಿಸಿ ತನ್ನ ಪರಿವಾರವನೆ ತಾ ಪೊರೆಯುತಿಹವೋ ಎನ್ನ ಸತಿಸುತರುಗಳ ಉದರಪೋಷಣೆಗಾಗಿ ಹೀನಸೇವೆಯಿಂದ ಉಪಜೀವಿಸಲು ಬಹುದೆ 3 ತನುಬಲವು ಇದ್ದಾಗ ಕೋಣನಂದದಿ ತಿರುಗಿ ಜ್ಞಾನ ಕರ್ಮಗಳನ್ನು ಆಚರಿಸದೇವೆ ಧನ ವನಿತೆ ಮೋಹಕೆ ಕೊನೆಮೊದಲು ಇಲ್ಲದೆ ಮನವೆಲ್ಲವನು ನಾನು ಹೊಲೆಗೆಡಿಸಿದಮೇಲೆ4 ವಿಕಳಮತಿಯನು ಹರಿಪ ಅಕಳಂಕ ಹರಿಭಕ್ತ- ರಕುಟಿಲಾಂತಃತರಣ ದೊರೆತು ಎನ್ನ ಸಕಲಾಪರಾಧಗಳ ಕ್ಷಮಿಸುವರ ಸಂಗ ನೀ ಕರುಣಿಸದಿದ್ದ ಮೇಲೆ ಶ್ರೀ ವೇಂಕಟೇಶಾ 5
--------------
ಉರಗಾದ್ರಿವಾಸವಿಠಲದಾಸರು
ಬಾಧಕರೊಳು ಬದ್ಧನು | ಮಧುಸೂದನ ಭಕ್ತಿಗೆ ದೃಢವಿಲ್ಲದವನು ಪ ಧರೆಯೊಳು ನೋಡಲು ಕೊಳಲುಂಟು ಕೊಡಲುಂಟು | ಹರಿಪರದೈವೆಂದು ಹೇಳುವನು | ದುರಿತವು ಬಂದಡೆ ನೀಚದೈವಂಗಳಿ | ಗೆರಗಿ ಕೊಂಡಾಡುವ ಸಂದೇಹಿ ಆತ್ಮಾ 1 ನಾನಾ ಶಾಸ್ತ್ರವನೋದಿ ಕಾಂಚನದಾಶೆಗೆ | ನೃಪರ ವಾಲ್ಗೈಸುವನು | ಈ ನಿಖಿಳದ ವೃತ ಜಪ ತಪವನು ಮಾಡೀ | ನಾನೆಂಬ ಹಮ್ಮಿಲಿ ಪರರನು ಹಳಿವಾ 2 ವಾಸುದೇವ ಸರ್ವಯಂಬುವ ದೇವರ | ದಾಸರ-ಸೂಯದಿ ಬಾಳುವನು | ಲೇಸಾಗಿ ಗುರುವರ ಮಹಿಪತಿಸ್ವಾಮಿಯ | ಧ್ಯಾಸವಿಲ್ಲದೆ ವಣಡಂಬದಲ್ಲಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭೂರಮಣ ರಘುರಾಮ ವಿಠ್ಠಲನೆ ನೀನಿವಳಭೂರಿ ಕರುಣದಲಿಂದ ಕಾಪಾಡಬೇಕೊ ಪ ಆರು ಇಲ್ಲವೊ ಗತಿಯು ನಿನ್ಹೊರತು ಶ್ರೀಹರಿಯೆಸಾರಿ ನಿನ್ನಯ ಪಾದವಾರಾಧಿಸುತ್ತಿಹಳಾ ಅ.ಪ. ತಾರತಮ್ಯ ಜ್ಞಾನ ಪಂಚಭೇದವನರುಹಿಪಾರು ಮಾಡೀಭವದ ಪರಿತಾಪವಾನೀರೇರುಹಾನಯನ ಕಾರುಣ್ಯ ಮೂರುತಿಯೆಪ್ರೇರಕನೆ ಜಗಕೆಲ್ಲ ಸರ್ವಾಂತರಾತ್ಮ 1 ಪತಿ ಸೇವೆಯಲಿ ಭಕುತಿ ಅತಿಶಯದಿ ಹರಿ ಭಕುತಿಮತಿಯು ತತ್ವಾರ್ಥಗಳ ಗ್ರಹಿಸುವಲಿ ರತಿಯೂಸತತ ವಿಷಯಾದಿಗಳು ನಶ್ವರವು ಎಂದೆನುತಮತಿಯಿತ್ತು ಇವಳೀಗೆ ಪಾಲಿಪುದು ವೀರಕುತಿ2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೆಕೀಚಕಾರಿ ಪ್ರೀಯ ಮೋಚಕನು ನೀನೇ |ಚಾಚಿ ಶಿರ ನಿನ್ನಡಿಗೆ ಯಾಚಿಸುವೆ ಶ್ರೀಹರಿಯೆಪಾಚ ಕಾಂತರ್ಯಾಮಿ ಕರ್ಮನಾಮಕನೆ 3 ಭವ ಬಂಧ ಕತ್ತರಿಸೊ ಹರಿಯೆ 4 ಕೃತ್ತಿವಾಸನ ತಾತ ಉತ್ತಮೋತ್ತಮ ದೇವಪುತ್ರಮಿತ್ರನು ನೀನೆ ಸರ್ವತ್ರ ಭಾಂಧವನೆ |ಪುತ್ರಿಯನು ಸಲಹೆಂದು ಪ್ರಾರ್ಥಿಸುವೆ ನಿನ್ನಡಿಗೆಆಪ್ತ ಗುರುಗೋವಿಂದ ವಿಠಲ ಮಮ ಸ್ವಾಮೀ 5
--------------
ಗುರುಗೋವಿಂದವಿಠಲರು
ಮನಸಿನನುತಾಪವನು _ ಪರಿಹರಿಸು _ ಹರಿಯೇ ಪ ವನಜ ನಾಭನು ನೀನೇ ಮನದ ಪ್ರೇರಕನಲ್ಲವೇ ಅ.ಪ. ಅನುದಿನದಿ ಧನವನಿತೆ _ ಎಂತೆಂಬ ಕಾನನದಿ ಮನಸು ಮಾಡೀ ಬಹಳ _ ಶ್ವಾನನಂದದಿ ತಿರಿದೇ ಕನಸಿಲಾದರು ನಿನ್ನ _ ಧ್ಯಾನವನು ಮಾಡದೆಲೆ ಮನುಜ ಪಶುವೆನಿಸಿದೆನು _ ದೀನವತ್ಸಲ ಸ್ವಾಮಿ 1 ಸಂಸಾರ ವೆಂಬುವುದು _ ಹಿಂಸೆರೂಪವೆಸಿದ್ಧ ಹಂಸರೂಪಿಯ ಮರೆತ _ ಸಂಶಯಾತತಜನಕೆ ಧ್ವಂಸ ಗೈಸಿ ವಿಷಯ _ ವಾಸನೆಯ ತರಣಿಯನು ಶೌರಿ _ ದಾಸನೆನ್ನನು ಮಾಡಿ2 ಜ್ಞಾನ ತಿರುಳನು ತಿಳುಹಿ _ ಧ್ಯಾನಬಗೆಯನು ಅರುಹಿ ಮಾನಾಭಿಮಾನವನು _ ನಿನಗೆ ಸಮರ್ಪಿಸಿ ಸು ಜ್ಞಾನಿಗಳ ಸಹ ಶ್ರೀ ಕೃಷ್ಣವಿಠಲನ ನಿತ್ಯ ಗಾನದಲಿ ಮೆಚ್ಚಿಸುವ ಭಾಗ್ಯ ಶೀಲನ ಮಾಡೀ 3
--------------
ಕೃಷ್ಣವಿಠಲದಾಸರು
ಮಾಡಲೋ ಹರಿಪಾದ ಭಜನಿ| ಮನವೇ ನೀ| ಪಾತಕ ಓಡಿಸಿ ಕಳೆವದು| ಕಾಡಿಗೆ ಕೊಂಡಾ ವಾಡಬನಂತೆ ಪ ಸಿಕ್ಕದು ನರದೇಹಲಿಂದು|ಜನಿಸಿ ಬಂದು| ಪುಕ್ಕಟೆ ನೀಗುವದು ಕುಂದು| ಅಕ್ಕರದಲಿ ವಿಷಯಕ್ಕೆಳಿಸುತಾ|ಭವ| ದಿಕ್ಕಲು ಸಾರುತ ಠಕ್ಕಿಸಿ ಕೊಂಬರೆ 1 ಸಂತರ ಸಹವಾಸ ಮಾಡೀ|ಕರುಣ ಬೇಡಿ| ಅಂತರ ಸುಖವನು ಕೂಡಿ| ತಂತು ವಿಡಿದು ನಿಶ್ಚಿಂತದಿ ಘನ|ವಿ| ಶ್ರಾಂತಿ ಪಡೆದು ಅನಂತನ ಪಾಡುತ2 ಭಕುತಿಯ ಸವಿಸಾರವೆಲ್ಲಾ|ಬಲ್ಲವನೇ ಬಲ್ಲಾ| ಮುಕುತಿಯೊಳಗೆ ಸುಖವಲ್ಲಾ| ಪ್ರಕಟದಿ ಮಹಿಪತಿ ಮಗುವಿಗೆ ಭೋಧಿಸಿ| ತಗಬಗಿ ಬಿಡಿಸಿದ ನಗೆ ಮೊಗದಿಂದ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುನಿದಳ್ಯಾತಕ ನೀರೇ ಪಾರ್ವತಿ ಮಾಡಸವರತಿ ಪ ತಾಪ ಮಿಡಿಯಲಿ ದೇಹ ಕೆಡುವ ದಿದೆಂದು | ಜಡಿಯಲ್ಲಿ ಗಂಗೆಯ ಭರಿಸಿದ | ನಾರು ಧರಿಸಿದ ಈ ದುಗುಡ ತಪ್ಪೇನಿಂದು 1 ಇಂದು ವದನೆಯನ್ನಾ ಪದಕನು | ಅದಾಶೇಷನು ಅವನ ಮುಂದಲೆಯೊಳು | ತಾನೊಂದು ಬಗೆದಳು |2 ಎನಗೆ ನಿನಗೆ ಎರಡ್ಯಾಕೆಂದು | ಆಲಿಂಗನಲಿಂದು | ಅರ್ಧ ತನುವನೆ ನೀಡಿ | ಸಾರಥಿ ಘನ ಕರುಣವ ಮಾಡೀ | 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯೇನು ಕರುಣಾಳೋ ದೇವವರೇಣ್ಯ ಯೇನು ಭಕುತರಧೀನನೋ ಪ ಕನ್ನಯ್ಯ ಧ್ಯಾನವಿತ್ತ ನಾರಾಯಣಾ ಅ.ಪ. ಅನಂತಾನಂತ ಜನುಮದಲ್ಲಿ ಅನ್ನೋದಕ ಕಾಣದಿದ್ದ ದರಿ ದ್ರನ್ನ ಕರವನೆ ಪಿಡಿದು ಮೃಷ್ಠಾನ್ನ ಭೋಜನ ಮಾಡಿಸಿ ಒಡನೆ ತಿರುಗೂವ ಕನ್ನಿ ಸಂಕಲ್ಪ ಕೆದುರುಗಾಣದೆ ಘನ್ನ ಮೂರುತಿ ಕೇಶವಾ 1 ಪಾವನವ ಮಾಡಿದನು ಬಲು ಕೃ ಪಾವಲೋಕನ ಪರಮ ಸೂರ್ಯರ್ ರಾವಣಾಸುರ ಮರ್ದನಾ ಕವಿ ಮನ್ನಿಸಿ ತಪ್ಪನೆಣೆಸದೆ ದೇವ ಜಗತ್ರಯ ಜಿತ ಕರಣ ವಸುದೇವ ದೇವಕೀನಂದನಾ2 ದೋಷರಾಶಿಯೊಳಿದ್ದು ಅನುದಿನ ಮೋಸಗೊಳಿಸುವ ಭವವನಧಿ ಮಧ್ಯ ಈಶ ಕಡಕಾಣಲಾರದೆ ಕ್ಲೇಶದಲಿ ಸಂಚರಿಸುತ್ತಿಪ್ಪ ಮಾನೀಶ ಪಶುವನು ನೋಡಿ ವೇಗದಿ ಲೇಸು ಕೊಡುವೆನೆಂದು ಆನಂದ ದಾಸರೊಳಗಿದ್ದ ನರಹರೀ 3 ಡಂಬಕಾ ಭಕುತಿಯನೆ ಬಿಡಿಸೀ ವೆಂಬೋದೆ ನಿರ್ಮಲ ಮಾಡೀ ಪಾದ ಇಂಬು ಬಯಸುವ ಸುಖವೆ ಪಾಲಿಸಿ ಪೊಂಬುಡೆಧರ ಗೋವಿಂದಾ 4 ಜಪತಪಾನುಷ್ಠಾನ ನಾನಾ ವುಪವಾಸ ವ್ರತದಾನ ಧರ್ಮಗ ಳಪರಿಮಿತವಾದ ಯಾಗ ಕನ್ಯಾದಾನ ನಾನಾಲೋಚನ ಸ್ವಪನದಲಿ ಕಾಣಿಸುವ ತಾನೆ ಕೃಪಣರಿಗೆ ವಲಿದಲ್ಲದೆ ಬಿಡ ಚಪಲ ವಿಜಯವಿಠಲಾ5
--------------
ವಿಜಯದಾಸ
ರಾಯ ಬಾರೋ ತಂದೆ ತಾಯಿ ಬಾರೋ ನಮ್ಮ ಕಾಯೊ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ ಪ ಭಾಸುರ ಚರಿತನೆ ಭೂಸುರ ವಂದ್ಯನೆ ಶ್ರೀ ಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ ಶ್ರೀ ಸುಧೀಂದ್ರಾರ್ಯರ ವರಪುತ್ರರೆನಿಸಿದ ದೇಸಿಕರೊಡೆಯ ರಾಘವೇಂದ್ರರಾಯ ಬಾರೋ 1 ವಂದಿಪ ಜನರಿಗೆ ಮಂದಾರ ತರುವಂತೆ ಕುಂದಾದಭೀಷ್ಟೆಯ ಸಲಿಸುತಿಪ್ಪ ರಾಯ ಕುಂದದಾಭೀಷ್ಟ ಸಲಿಸುತಿಪ್ಪ ಸರ್ವಜ್ಞ ಮಂದನಮತಿಗೆ ರಾಘವೇಂದ್ರ ರಾಯ ಬಾರೋ 2 ಆರು ಮೂರೇಳು ನಾಲ್ಕೆಂಟು ಗ್ರಂಥ ಸಾರಾರ್ಥ ತೋರಿಸಿದೆ ನ್ಯಾಯದಿಂದ ಸರ್ವರಿಗೆ ರಾಯ ಬಾರೋ ಸೂರಿಗಳರಸನೆ ರಾಘವೇಂದ್ರಾ ರಾಯ ಬಾರೋ 3 ರಾಮ ಪಾದಾಂಬುಜ ಸರಸಭೃಂಗ ಕೃಪಾಪಾಂಗ ಭ್ರಾಮಕ ಜನರ ಮಾನಭಂಗ ರಾಯ ಬಾರೋ ಭ್ರಾಮಕಜನ ಸನ್ಮಾನಭಂಗ ಮಾಡೀದಾ ಧೀಮಂತರೊಡೆಯನೆ ರಾಘವೇಂದ್ರಾ ರಾಯ ಬಾರೋ4 ಭೂತಳಾಧಿಪನಾ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದ ಮಹಿಷಿಯಾ ರಾಯ ಬಾರೋ ಪ್ರೇತತ್ವ ಕಳೆವ ಮಹಿಷಿಯಾ ಶ್ರೀಜಗ ನ್ನಾಥ ವಿಠ್ಠಲನಾ ಪ್ರೀತಿಪಾತ್ರಾ ರಾಯ ಬಾರೋ 5
--------------
ಜಗನ್ನಾಥದಾಸರು