ಒಟ್ಟು 36 ಕಡೆಗಳಲ್ಲಿ , 24 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಭಾರತೀಶಜಯ ಜಯಭಾರತೀಶಜಯಜಯಭಾರತೀಶಜಯತುಜಯ ರಾಘವಾಂಘ್ರಿಪಾದಕಮಲಭೃಂಗನೆ ನಮಿಪೆಜಯಭಾರತೀಶಜಯತುಪಜಯಭಾರತೀಶಜಯಜಯ ಭೀಮ ಹನುಮನೆಭಯವ ಪರಿಹರಿಸಿ ಪೊರೆಯೈಜಯ ಮಧ್ವಮುನಿರಾಯಗುರುಮಧ್ವಮುನಿರಾಯಗುರುವೆ ಪಾಲಿಸು ಜಯ ಜಯ ಅ.ಪತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದುಸೀತೆಗುಂಗುರವನಿತ್ತುಮಾತೆಯಾಜೆÕಯ ಕೊಂಡುಘಾತಿಸಿದೆ ರಕ್ಕಸರದೂತ ರಾವಣನ ಕಂಡುಭೀತಿಯಿಲ್ಲದೆ ಜನಕ-ಜಾತೆಯಳ ಕಳುಹೆನಲುಆತ ಕೋಪದಿಂದಲಿ ತನ್ನದೂತರಿಂದಲಿ ವಾಲ-ವಗ್ನಿಯಲಿ ದಹಿಸಿರೆನೆಆ ಪುರವ ದಹಿಸಿ ಮೆರೆದೆ 1ದ್ವಾಪರದಿ ಶ್ರೀಕೃಷ್ಣನಂಘ್ರಿ ಸೇವಕನಾಗಿಪಾಪಿ ಜರೆಸುತನ ಸೀಳಿದ್ರೌಪದಿಯ ನುಡಿಕೇಳಿಪಾಪಿ ಕೀಚಕನನ್ನುಕೋಪದಿಂ ಕೊಂದ ಮಹಿಮಾಪಾಪಿ ದುರ್ಯೋಧನಾದಿಗಳ ಸಂಗಡ ಕಾದಿಸೋತು ಓಡಲು ದುರುಳನುನೀತಿ ಬಿಡದಲೆ ಗದೆಯಏಟಿನಿಂದವನ ತೊಡೆಘಾತಿಸುತಲವನನಳಿದೆ 2ಮಧ್ವಮತದವರನುದ್ಧರಿಸ ಬೇಕೆಂದೆನುತಮಧ್ಯಗೇಹರಲಿ ಜನಿಸಿಶುದ್ಧ ಶಾಸ್ತ್ರಗಳನುದ್ಧರಿಸುತ ಜಗದೊಳಗೆ ಪ್ರ-ಸಿದ್ಧನೆಂದೆನಿಸಿ ಮೆರೆದೆಮುದ್ದು ಕೃಷ್ಣನ ಪೂಜೆಶ್ರದ್ಧೆ ಬಿಡದಲೆ ಮಾಡಿಉದ್ಧರಿಸಿ ಸಜ್ಜನರನುಮುದ್ದು ಕಮಲನಾಭ-ವಿಠ್ಠಲಗರ್ಪಿತವೆಂದೆಮಧ್ವಮುನಿರಾಯ ಜಯತು 3
--------------
ನಿಡಗುರುಕಿ ಜೀವೂಬಾಯಿ
ವೀರ ಹನುಮ ಬಹುಪರಾಕ್ರಮ - ಸುಜ್ಞಾನವಿತ್ತುಪಾಲಿಸಯ್ಯ ಜೀವರುತ್ತಮ ಪರಾಮದೂತನೆನಿಸಿಕೊಂಡಿನೀ - ರಾಕ್ಷಸರವನವನೆಲ್ಲ ಜಯಿಸಿ ಬಂದೇ ನಿ ||ಜಾನಕಿಗೆ ಉಂಗುರವಿತ್ತುಜಗತಿಗೆಲ್ಲ ಹರುಷವಿತ್ತುಜಾತಿಮಣಿಯ ರಾಮಗಿತ್ತುಲೋಕದಿ ಪ್ರಖ್ಯಾತನಾದೆ 1ಗೋಪಿಸುತನಪಾದಪೂಜಿಸಿ - ಗದೆಯ ಧರಿಸಿ |ಕೌರವರ ಬಲವ ಸವರಿಸಿ ||ದ್ರೌಪದಿಯ ಮೊರೆಯಕೇಳಿಕರುಣದಿಂದ - ತ್ವರದಿ ಬಂದುಪಾಪಿ ಕೀಚಕನನು ಕೊಂದುಭೀಮಸೇನನೆನಿಸಿಕೊಂಡೆ 2ಮಧ್ಯಗೇಹನಲಿ ಜನಿಸಿ ನೀ - ಬಾಲ್ಯದಲ್ಲಿಮಸ್ಕರಿಯ - ರೂಪಗೊಂಡೆ ನೀ ||ಸತ್ಯವತಿಯ ಸುತನ ಭಜಿಸಿ |ಸಮ್ಮುಖದಲಿ ಭಾಷ್ಯ ಮಾಡಿಸಜ್ಜನರನು ಪಾಲಿಸಿದ - ಪುರಂದರವಿಠಲನ ದಾಸ 3
--------------
ಪುರಂದರದಾಸರು
ಶರಣು ಹರಿಯಶರಣಗ್ರೇಸರನೆ ಹನುಮ ಭೀಮ ಮಧ್ವಚಿನ್ನ ತಪುತಕಾಯ ನೊಸಲಲಿನ್ನು ಊಧ್ರ್ವಪುಂಡ್ರ ತುಲಸಿಚಿನ್ನದೊಂಟಿ ಚೌಕಳಿ ಮೋಹನ್ನಸರ ಕಿರೀಟಧಾರಿಮಧ್ಯಗೇಹ್ಯ ನೋಂಪಿ ಅಭಿವೃದ್ಧಿ ಆದದ್ದು ಕಂಡುಮೂರು ಅವತಾರದಲಿ ಮೂರು ಮೂರು ಭಕುತಿಯಿಂದ
--------------
ಗೋಪಾಲದಾಸರು
ಶ್ರೀವ್ಯಾಸರಾಜರು105ಪಾಲಿಸೋ ಯತಿರಾಜ ಪಾಲಿಸೋಪಾಲಿಸೋ ಮುನಿ ವ್ಯಾಸ ರಾಜ | ಜಗ -ತ್ತಲ್ಲಿ ನಿನ್ಮಹಿಮೆ ಸುಭ್ರಾಜ | ಅಹ |ಕಾಲಲ್ಲಿ ಶರಣಾದೆ ಶ್ರೀಲೋಲಪ್ರಿಯ ನಿನ್ನಆಳೆಂದು ಗಣಿಸಿ ಪಾಲಿಪುದೆನ್ನ ಪ್ರತಿಕ್ಷಣ | ಪಾಲಿಸೋ | ಪದಿನಪ ಸುತೇಜ ಬ್ರಹ್ಮಣ್ಯ | ತೀರ್ಥಮುನಿಸಾರ್ವಭೌಮರ ದಿವ್ಯ |ಚಾರುವನರುಹಕರದಿಂದ ಉದಯ | ಇನ್ನುಏನೆಂಬೆ ನಿನ್ನ ಪ್ರಾಬಲ್ಯ | ಅಹ |ದೀನ ವತ್ಸಲ ನಿನ್ನ ಶರಣು ಹೊಕ್ಕೆನು ನಾನುಎನ್ನ ಭಾಗ್ಯೋದಯ ತವ ಕಾರುಣ್ಯದಿ ಇನ್ನು 1ಕರುಣಿ ಸುಶಾಂತ ಸುವರ್ಣ | ವರ್ಣತೀರುಥಕರ ಕಂಜೋತ್ಪನ್ನ | ಸುಸ್ಥಿರ ವರಭಕ್ತಿವಿಜ್ಞಾನ| ಸಂ-ಪನ್ನ ಶ್ರೀ ಪಾದಾರ್ಯರನ್ನ | ಅಹ |ಸೇರಿ ಸೇವಿಸಿ ವಾದಿಕರಿಪಂಚಾನನಾದಸೂರಿಸಜ್ಜನನುತ ವ್ಯಾಸ ಮುನೀಂದ್ರ2ಮಾಲೋಲ ಕೃಷ್ಣಸುಪ್ರಿಯರು |ನಿತ್ಯಕಾಳೀಶ ನಿಮ್ಮೋಳ್ ಪ್ರಚುರರು | ಮತ್ತುವ್ಯಾಳೇಶ ಅಂಶ ಸಂಯುತರು | ಎಂದುಹೇಳೋರು ಹೀಗೆ ವಿಬುಧರು | ಅಹ |ಕೀಳುವಿಷಯದಿ ಎನ್ ಮನ ಸೋಲದೇ ಹೊರಒಳಗಿಪ್ಪ ಹರಿರೂಪ ವ್ಯಾಳೆ ವ್ಯಾಳೆಗೆ ತೋರು 3ದ್ವಾಸಪ್ತತಿ ಸºಸ್ರ | ನಾಡಿತತ್ರಸ್ಥರೂಪಸಮೀರ| ಅವನವಿಂಶತಿ ಮೇಲೇಳು ನೂರು | ಪ್ರತಿಮನೀ ಸ್ಥಾಪಿಸದಿಯೋ ಹೇ ಧೀರ | ಅಹಈ ಸಮಸ್ತ ಹನುಮರೂಪ ಒಂದೊಂದರೊಳ್ಶತರೂಪ ಸ್ಮರಣೀಯ ಶ್ರೀಶ ಸಾಸಿರ ನಾಮ 4ಸಾತ್ಯವತೀಯ ವೇದಾರ್ಥ | ಅರಿತುಮಧ್ಯಗೇಹನು ವಿವರಿಸಿದ | ಆಗಜಯರಾಯ ತತ್ ಟೀಕೆ ಬರೆದ | ಈಗವ್ಯಾಸರಾಯನು ವಿವರಿಸಿದ | ಅಹಮಿಥ್ಯಾ ತತ್ವವ ಪೇಳ್ದ ಮಾಯ್‍ಗಳ ಬಾಯ್ ಮುಚ್ಚಿನಿತ್ಯಸುಖವನೀವ ತತ್ವ ಬೋಧಿಸಿದಿ5ಮಾರ್ತಾಂಡಕತ್ತಲೆ ಕಳೆವ | ತರ್ಕತಾಂಡವ ದುಸ್ತರ್ಕ ತರಿವ |ಬಂಡುಮಿಥ್ಯಾವಾದಿಗಳ ದುರ್ಮತವ | ತುಂಡುತುಂಡುಮಾಡಿದ ನ್ಯಾಯಾಮೃತವ | ಅಹಕೊಂಡಾಡಳಲವೇ ಚಂದ್ರಿಕಾಈವಆಹ್ಲಾದವಬ್ರಹ್ಮಾಂqದೊಡೆಯನ ಅಮೃತ ಪ್ರಸಾದವ 6ಪ್ರಣವಮಂತ್ರದಿ ಲಕ್ಷ್ಮೀರಮಣ | ಎಂಟುವರ್ಣ ಮಂತ್ರದಿ ಶ್ರೀರಮಣ | ವಿಷ್ಣುಷಡ್ವರ್ಣದಲ್ಲಿ ಸತ್ಯಾರಮಣ ಹಾಗೂವರ್ಣ ಸರ್ವದಿ ರಮಾ ರಮಣ | ಅಹಧ್ವನಿ ವರ್ಣ ಪ್ರತಿಪಾದ್ಯ ಸತ್ತಾದಿದಾತಅನುತ್ತಮಹರಿರೂಪಗುಣಕ್ರಿಯಾ ಹಾಡಿದಿ7ಭೂಪನ ಹರಿಯಾಸನವ ನೀ ಏರ್ದಿ | ಏರಿನೃಪವರನಪಮೃತ್ಯು ತರಿದಿ | ಯತಿತಪಸ್ವಿಗಳಿಗೆ ಪಾಠ ಪೇಳ್ದಿ | ಸರ್ವವಿಭುದರಿಂದಲಿ ಪೂಜ್ಯನಾದಿ | ಅಹ |ಗೋಪಾಲ ಅಸುಪಾಲನ್ನೊಲುಮೆ ನಿನ್ನಲ್ಲೆಷ್ಟೋಶ್ರೀಪನ ದಾಸವೃಂದಬ್ಜ ಕೂಟಕೆ ಸೂರ್ಯ 8ನರಸಿಂಹ ಗೋಪಾಲ ಕೃಷ್ಣ | ಯಜÕವರಾಹಪಟ್ಟಾಭಿರಾಮನ್ನ | ಬಹುಪರಾಶರ್ಯಾದಿ ರೂಪನ್ನ |ನಿತ್ಯನಿರುತ ಸಂಪೂಜಿಪ ಘನ್ನ | ಅಹವರಭಕ್ತಾಗ್ರಣಿ ನೀನು ಸರಸಿಜಾಸನ ಪಿತ'ಪ್ರಸನ್ನ ಶ್ರೀನಿವಾಸ' ನ್ನೊಲಿಸೋ ಎನಗೆಜೀಯ9 ಪ|| ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಹೇ ದಯಾಬ್ಧೇ ಪಾಲಿಸೆನ್ನನು | ಶ್ರೀದ ಹನುಮಂತ ಪಭೂಧವಜ ನದಿಯಲ್ಲಿ ನಿಂತಾ ಕಾಳೀಕಾಂತ ವೀತಚಿಂತಾ ಅ.ಪ.ರಾವಣಾನುಜನಂತೆ ಮತ್ತಾ ಶೈಲಸುತನಂತೆ |ದೇವತೆಗಳೀಶನಂತೆ ದೇವತೆಗಳಂತೆ ||ಆವವಿಕ್ರಮಪಾರ್ಥನಂತೆ ಕಾದಿ ಬಿದ್ದಾ ಕಪಿಕುಲದಂತೆ |ತಾವರೆಯಸಖಸೂರ್ಯನಂತೆ ತತ್ಸುತ ಸುಗ್ರೀವನಂತೆ 1ಭೂವರಾಧಿಪ ಧರ್ಮನಂತೆ ದ್ರೌಪದಿಯಂತೆ |ಭೂವಿ ಬುಧಸುತನಂತೆ ರಾಕ್ಷಸಿಯಂತೆ ಫಣಿಯಂತೆ ||ಆ ವಿರಾಟರಾಯನಂತೆ ಪಾರ್ವತಿಯ ನಾಥನಂತೆ |ನೀ ವಿಜಯನಾಗಲು ಸಹಿಸದಲೆ ಕೋಪಿಸಿದ ಧೃತರಾಷ್ಟ್ರನಂತೆ ||ಮೋದದಿಂದ ನಿನ್ನ ಪಡೆದಾ ಮಧ್ಯಗೃಹನಂತೆ |ಆದರದಿ ಹರಿಪೂಜೆ ಮಾಳ್ಪಾಸೂರಿಜನರಂತೆ ||ಆ ದಿನ ಕಡಲಲ್ಲಿ ಮುಳುಗಿ ಪೋಗುತ್ತಿದ್ದಾ ನಾವೆಯಂತೆ |ಪಾದಹಿಡಿದಾ ಕಾಳೀಸರ್ಪನ ಕಾಯ್ದ ಪ್ರಾಣೇಶ ವಿಠ್ಠಲನಂತೆ 3
--------------
ಪ್ರಾಣೇಶದಾಸರು