ಒಟ್ಟು 41 ಕಡೆಗಳಲ್ಲಿ , 17 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗನಾಕುಲ ಶಿರೋಮಣಿ ಶ್ರೀಮಾ |ಶೃಂಗಾರವನಧಿಗರುಡಧ್ವಜೆಮಂಗಳಾದೇವಿ ಹಸೆಗೇಳು ಪಕ್ಷೀರಸಾಗರಕನ್ಯಾವಿಧಿ|ಮಾರಾಂತಕ ಶಕ್ರಕರಾರ್ಚಿತೆ ||ವಾರಿಜಸದನೆ ಸಿರಿದೇವಿ |ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು 1ಭಾರತಿಪಾರ್ವತಿ ಶಾಮಲ ಮುಖ |ನೂರು ಸುರರರಸಿಯರೆಲ್ಲರು ||ಮೀರಿಧರುಷದಲಿ ಪದಪಾಡಿ | ಹಸೆಯಬರೆದಿಹರೆಲೆ ನಾರಾಯಣನ ರಾಣೀ || ಹಸೆಗೇಳು 2ಋಷಿಗಳು ವೇದ ಪುರಾಣಗಳುಪ |ನಿಷದ್ವಾಕ್ಯಗಳಿಂದ ತುತಿಸುವರು ||ವಸುಧೆಗಾನಂದ ಪಡಿಸಲು |ಶುಭಕುಂದರದನೆಆಸಿತಕುಂತಲೆಯೇ ಹಸೆಗೇಳು 3ಕಡೆಗಣ್ಣಿನ ನೋಟದಿ ಲೋಕವ |ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ ||ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆಕೃತಿ|ಯೊಡತಿ ಜಯಮಾಯಾ ಹಸೆಗೇಳು 4ಪ್ರಾಣೇಶ ವಿಠಲನೊಳು ದ್ವೇಷಿಪ |ಹೀನರ ಸಂಹರಕೋಸುಗ ಶರ ||ಪಾಣಿಯಾಗಿಹಳೆಶ್ರುತಿವೇದ್ಯೆ | ಶ್ರುತಿವೇದ್ಯೆ ದೇವದೇವಿಕಅಹಿವೇಣಿಶುಕವಾಣಿ | ಹಸೆಗೇಳು 5
--------------
ಪ್ರಾಣೇಶದಾಸರು
ಏನಮಾಡಿದರೆನ್ನ ಭವಹಿಂಗದು |ದಾನವಾಂತಕ ನಿನ್ನ ದಯವಾಗದನಕ ಪಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |ಹರಿನಿನ್ನ ಕರುಣಾ ಕಟಾಕ್ಷವಿರದನಕ1ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |ಅತಿ ಶೀಲಗಳನೆಲ್ಲ ಮಾಡಿ ದಣಿದೆ ||ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |ರತಿಪತಿಯ ಪಿತ ನಿನ್ನ ದಯವಾಗದನಕ 2ದಾನವನು ಮಾಡಿದೆನು ಮೌನವನು ತಾಳಿದೆನು |ಙ್ಞÕನ ಪುರುಷಾರ್ಥಕ್ಕೆ ಮನವೀಯದೆ ||ಶ್ರೀನಾಥ ದಯಪೂರ್ಣ ಪುರಂದರವಿಠಲನ |ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ 3
--------------
ಪುರಂದರದಾಸರು
ಒಂದೇ ನಾಮದೊಳಡಗಿದುವೊ ಆ -ನಂದದಿಂದುಸುರುವಅಖಿಳ ವೇದಗಳುಪಒಂದೇ ನಾಮವು ಪ್ರಹ್ಲಾದನ ಕಾಯ್ತು - ಮ -ತ್ತೊಂದೆ ನಾಮವೆ ಅಜಮಿಳನ ಸಲಹಿತು ||ತಂದೆ ತಾಯಿಯ ಬಿಟ್ಟ ಕಂದ ಧ್ರುವರಾಯಗಾ -ನಂದಪದವನಿತ್ತ ಅದ್ಭುತಗುಣವೆಲ್ಲ 1ಮಚ್ಛ್ಯಾದ್ಯಾನಂತಾವತಾರ ಅಷ್ಟಾದಶಸ್ವಚ್ಛ ಪುರಾಣಗಳಮೃತದಸಾರ ||ಕಚ್ಛಪನಾಗಿ ತ್ರೈಜಗಕೆ ಆಧಾರ ತ -ನ್ನಿಚ್ಛೆಯಿಂದಲಿ ತಾನು ಮಾಳ್ಪ ವ್ಯಾಪಾರ 2ಒಬ್ಬರೀತಗೆ ಸಮರಿಲ್ಲ ತ -ನ್ನಬ್ಬರದಿಂದಲಿ ಸಲಹುವನೆಲ್ಲ ||ಕಬ್ಬು ಬಿಲ್ಲನ ಪಿತಪುರಂದರ ವಿಠಲ ವೈದರ್ಭಿಯ ರಮಣನ ವರಸುಗುಣಗಳೆಲ್ಲ 3
--------------
ಪುರಂದರದಾಸರು
ಪಂಚಭೇದತಿಳಿವದು ಪ್ರತಿದಿನದಲೀ |ಮುಂಚಿನಜ ಮಧ್ವಮುನಿ ಮತವನುಸರಿಸಿದವರೂ ಪಜೀವೇಶರಿಗೆ ಭೇದ ಜೀವ ಜೀವಕೆ ಭೇದ |ದೇವರಿಗು ಜಡಕು, ಜಡಕೆ ಜಡ ಭೇದಾ ||ಆವಾಗಜೀವರಿಗೆ ಜಡಗಳಿಗೆ ಭೇದುಂಟು |ಈ ವಿವರವ ಪೇಳ್ವೆ ಯನ್ನಾಪನಿತು ಕೇಳುವದೂ 1ಈಶನಿತ್ಯಅನಾದಿಸ್ವರತಸರ್ವಗ ಸ್ವಪ್ರ- |ಕಾಶ ಸರ್ವಜÕವಿಶ್ವವಿಲಕ್ಷಣಾ ||ಮೇಶ ಅಪರಿಚ್ಛಿನ್ನಮೂರ್ತಿಪ್ರಾಣಿಗಳಿಂದ |ತಾ ಸಾಕ್ಷಿಯಾಗಿ ಬಹು ಕರ್ಮಗಳ ಮಾಡಿಸುವ 2ಶ್ರೀ ಮುಖ ಜಗತ್ಯಕುತ್ಪತ್ಯಾದಿ ಕಾರಣ ಮ- |ಹಾ ಮಹಿಮ ಸರ್ವತಂತ್ರ ಸ್ವತಂತ್ರಾ ||ಆಮಯವಿದೂರ ಜ್ಞಾನಾನಂದ ಬಲ ಪೂರ್ಣ |ಸೀಮೆಯಿಲ್ಲದ ಸುಗುಣ ಕ್ರಿಯಾತ್ಮಕ ಸ್ವರೂಪ 3ಸುಖ ದುಃಖಭೋಗಿಜೀವನು ಅಸ್ವತಂತ್ರ ಬಹು |ಕಕುಲಾತಿಉಳ್ಳವನು ದುರ್ವಿಷಯದೀ ||ಲಕುಮೀಶನಲ್ಲಿ ಭಕ್ತಿ ವಿವರ್ಜಿತನುಪ್ರತಿಕ್ಷ- |ಣಕೆ ಅನಂತ ಅಪರಾಧಿ ಜನ್ಮ ಮೃತಿ ಉಳ್ಳವನು 4ಆದಿ ವ್ಯಾಧಿಗಳಿಂದ ಪೀಡಿತನು ಅಜ್ಞಾನಿ |ಮಾಧವನ ಬಂಧಕ ಶಕುತಿಯೊಳಗಿಹ್ಯಾ ||ತಾ ಧರಿಸಿಹನುಪ್ರಾಕೃತಪ್ರಾಕೃತಾವರಣ |ಭೇದವೆ ಸಿದ್ಧ ಯಿಂಥ ಜೀವಗೂ ಹರಿಗ್ಯೂ 5ಒಂದಲ್ಲ ಸರ್ವ ಜೀವರು ಸತ್ವ ರಜ ತಮರು |ಯಂದು ಭೇದಗಳುಂಟವರ ಲಕ್ಷಣಾ ||ಮುಂದಿನ ಪದದಿ ಪೇಳ್ವೆ ಸಜ್ಜನರು ಕೇಳಿಯಾ- |ನಂದ ಬಡಲೆಂದು ವಿನಯದಲಿ ಬಿನ್ನೈಸುವೆನು 6ಛಿನ್ನ ಭಕ್ತರು ಯನಿಪರೆಲ್ಲ ದೇವತಿಗಳ |ಚ್ಛಿನ್ನ ಭಕ್ತರು ವಿಧೀರವರ್ಹೆಂಡರೂ ||ಚನ್ನಾಗಿ ಮುದದಿ ಈ ನಿರ್ಜರರ ತರತಮ್ಯ |ವನ್ನು ಕೇಳಿಕೊಬೇಕು ಜ್ಞಾನಿಗಳ ಮುಖದಿಂದ 7ವಿಧಿಮೊದಲು ತೃಣ ಜೀವಪರಿಯಂತಸಾತ್ವಿಕರು |ಇದರೊಳಗೆ ದೇವ, ಋಷಿ, ಪಿತೃಪ, ನರರೂ ||ಸುಧಿಗೆ ಯೋಗ್ಯ ರಜಾದಿಗೀರ್ವಾಣಗಂಧರ್ವ |ತುದಿಯಾಗಿ ಸಾಂಶರು ನಿರಂಶರುಳಿದವರೆಲ್ಲ 8ಇವರಿಂದ ಭಿನ್ನ ರಾಜಸರು ಗೋ ಭೂ ನರಕ |ತ್ರಿವಿಧಗತಿಉಳ್ಳವರು ಪಂಚಭೇದಾ ||ವಿವರ ತರತಮ ದೇವರ ಮಹತ್ಮಿಯನು ಅರಿಯ |ದವರು ಲಿಂಗಕಳಿಯರುಧಾಮತ್ರಯಪೊಗದವರೂ 9ಸಂಸಾರಿಗಳಿಗೆ ಭಿನ್ನರು ತಮೋಗುಣದವರು |ಕಂಸಾರಿಯಲಿ ದ್ವೇಷವರ ಸ್ವಭಾವಾ ||ಆ ಸುರಾರಿಗಳು ನಾಲ್ಕು ಪ್ರಕಾರ ದೈತ್ಯ ರಾ |ಕ್ಷಸರು, ಪಿಶಾಚರವರನುಗರು, ನರಾಧಮರು 10ಈ ನಾಲ್ಕು ಬಗೆಯ ಸುರರಿಗೆ ಅರಸು ಕಲಿಯವನಾ |ಹೀನತನವೆಷ್ಟುಚ್ಚರಿಸಲಿ ಮಿಥ್ಯಾ ||ಜ್ಞಾನಿಭೇದವನರಿಯ ಪಂಚ ಮಹಾಪಾತಕಿ ಪು- |ರಾಣ ವೇದಗಳಿಗೆ ವಿರುದ್ಧಾರ್ಥ ಕಲ್ಪಿಸುವಾ 11ಸುಜನರಾಚರಣೆ ನಡಿಯಗುಡ ದುಃಖ ಬಡಿಸುವ |ಕುಜನರಿಗನೇಕ ಬಗೆ ಸಹಯವಹನೂ ||ಪ್ರಜಗಳನ ರೋಗನಾ ವೃಷ್ಟಿಯಿಂ ದಣಿಸುವನು |ವೃಜನವನ ವಪು ತಾಯಿ ತಂಗಿಯಂಬರನರಿಯ 12ಬವರಬಂಗಾರ ದ್ಯೂತಾ ಪೇಯಅನೃತನಟ |ಯುವತಿಯೀಯಾರು ಸ್ಥಳ ನಿಲಯವವರಿಗೆ ||ನವವಿಧ ದ್ವೇಷಿಗಳಿಗಾಕಾರನೆನಿಸುವನು |ಅವನ ಸಮ ಪಾಪಿಗಳು ಮೂರು ಲೋಕದಲಿಲ್ಲ 13ಆ ನೀಚನ ಮಲಮೂತ್ರ ವಿಸರ್ಜನದಿಘೋರ|ಕಾನನದಿ ಕತ್ತಲಿಯೊಳಗೆ ಸ್ಮರಿಪುದೂ ||ಕ್ಷೋಣಿಯೊಳವನ ನಿಂದೆ ನಿರುತದಲಿ ಮಾಡುವದೆ |ಶ್ರೀನಾಥನರ್ಚನೆ ಮಹಾಯಜÕವೆನಿಸುವದು 14ಈ ವಿಧದಿ ಮೂರು ಗುಣದಿಂದ ಪರಸ್ಪರ ಜೀವ |ಜೀವರಿಗೆ ಭೇದ ಯೋಗ್ಯತಿ ಪ್ರಕಾರಾ ||ಮೂವರಿಗೆ ಪಾಪಮಿಶ್ರಿತಕರ್ಮಪುಣ್ಯ ಬಹು |ನೋವು ಸ್ವರ್ಗ ನರಕ ಸುಮೋಕ್ಷಾದಿಗತಿಉಂಟು 15ಈ ಜೀವರಿಗೆ ಉಳ್ಳನುಭವ ಜಡಗಳಿಗಿಲ್ಲ |ನೈಜವಾಯಿತು ಭೇದ ಜೀವ ಜಡಕೇ ||ಆ ಜಡ ತ್ರಿ, ನಿತ್ಯಾ ಅನಿತ್ಯನಿತ್ಯಾ,ನಿತ್ಯ|ಮಾಜದವು ಅವ್ಯಾಕೃತ ನಭಶೃತಿ ವರ್ಣಗಳೂ 16ಪ್ರಾಕೃತವಿಕೃತ ವೈಕೃತತ್ರಯ ಅಸ್ಥಿರ ಜಡವು |ಪ್ರಾಕೃತವಜಾಂಡ ಧೊರ ಆವರಣವೂ ||ಸ್ವೀಕೃತೈವತ್ತು ಕೋಟ್ಯೋಜನ ಸುವರ್ಣಾತ್ಮ |ಕಾಕ್ರಮಿಸಿಹದಜಾಂಡಕಿದು ವಿಕೃತ ಜಡವೆಂದು 17ಸರಸಿಜಭವಾಂಡದೊಳಿಹ ನೆಲಜಲಧಿಗಿರಿಗಳು |ಎರಡೇಳುಭುವನವೈಕೃತ ಜಡವಿದೂ ||ಸ್ಥಿರ ಅಸ್ಥಿರ ಜಡತ್ರಯ ವಿಧ ಪುರಾಣಗಳರ್ಥ |ಇರುತಿಹವು ಅಚಲಾಗಿ ಶಬ್ದಗಳ ನಿತ್ಯಾ 18ಮೂಲ ಪ್ರಕೃತಿಗತ ತ್ರಿವಿಧಾನಂತ ಪರಮಾಣು |ಜಾಲಕಾರಣತ ಸುಸ್ಥಿರವೆನಿಪವೂ ||ಮ್ಯಾಲೆ ಅದರಿಂದಾದ ತತ್ವಗಳನಿತ್ಯಮಹ |ಕಾಲವೆಂದಿಗ್ಯುನಿತ್ಯಅಣುಕಾಲಗಳ ನಿತ್ಯಾ19ಹೀಗೆ ಮೂರು ವಿಧ ಜಡ ಒಂದೊಂದೆ ಮೂರು ಮೂ- |ರಾಗಿರಲು ಜಡ ಜಡಕೆ ಭೇದ ಸಿದ್ಧಾ ||ಭಾಗಾರ ಮಾಡಿ ಗುಣರೂಪ ಕ್ರಯದಿ ನೋಡೆ |ನಾಗಾರಿವಹಗೆ ಜಡಗಳಿಗೆ ಭೇದವೇ ಸತ್ಯಾ20ಈ ಕಮಲಜಾಂಡವು ಅನಿತ್ಯವಿದರೊಳಗೆ ಎಂ- |ದೂ ಕೆಡದೆ ಸುಖಕಾಂತಿ ಯುಕ್ತವಾದಾ ||ಶ್ರೀಕಳತ್ರನ ತ್ರಿಧಾಮಗಳು ಕುಕಲಿಗೆ ತಕ್ಕ |ಶೋಕಪೂರಿತವಾದನಿತ್ಯನರಕಗಳಿಹವು 21ಈಪಂಚಭೇದಜ್ಞಾನಿಲ್ಲದವ ಶ್ರೀ ಮುದ್ರಿ |ಗೋಪಿಚಂದನ ಧರಿಸಿದರು ಫಲವೇನೂ ||ಈ ಪೊಡವಿಯೊಳು ವೇಷಧಾರಿಗಳು ಜೀವಿಸರೆ |ಆ ಪರಿಯ ಭಾಸ ವೈಷ್ಣವನೆಂದರಿಯಬೇಕೂ 22ಹರಿಗುರುಗಳ ದಯ ಪಡೆವರಿಗೆರುಚಿತೋರ್ವದಿತ |ರರಿಗೆ ಈ ಕೃತಿಯುಕರ್ಣಕಠೋರವೂ ||ತರಣಿಬರೆ ಸರ್ವರಿಗೆ ಘೂಕಗಾದಂತೆ ಇದು |ಬರಿಯ ಮಾತಲ್ಲ ಶಾಸ್ತ್ರಕೆ ಸಮ್ಮತಾಗಿಹದು 23ಹೀನರೊಳು ಬೆರಿಯದಲೆ ಪಂಚಭೇದವ ತಿಳಿದು |ಸಾನುರಾಗದಲಿಹರಿಸರ್ವೋತ್ತುಮಾ ||ಪ್ರಾಣದೇವರೆ ಗುರುಗಳೆಂದರಿತು ಭಜಿಸುವರು |ಕಾಣರು ಕು ಸಂಸಾರ ಧಾಮತ್ರ ವೈದುವರು 24ಇಪ್ಪತ್ತೈದು ಪದಗಳಿಂದ ಸಂಗತಿಯಾಗಿ |ಒಪ್ಪುತಿಹ ಈ ಪಂಚಭೇದವನ್ನೂ ||ತಪ್ಪದಲೆನಿತ್ಯಪಠಿಸುವರ ಪೊರವವನು ಬೊಮ್ಮ- |ನಪ್ಪ ಶ್ರೀ ಪ್ರಾಣೇಶ ವಿಠಲನಿಹಪರದಲ್ಲಿ 25
--------------
ಪ್ರಾಣೇಶದಾಸರು
ಪ್ರಥಮ ಕೀರ್ತನೆಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರಸುವೃತತಿ ಜಾಂಫ್ರಿಯಲಿ ಶರಣಾದೆ ಸತತಸರ್ವೇಷ್ಟದಾತರುವಿಜ್ಞಾನಬೋಧಕರುಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪಅಖಿಳಗುಣಆಧಾರ ನಿರ್ದೋಷ ಶ್ರೀರಮಣಜಗದಾದಿ ಮೂಲಗುರು ಅಗುರು ಶ್ರೀ ಹಂಸವಾಗೀಶಸನಕಾದಿ ದೂರ್ವಾಸಾದಿಗಳಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1ಪುರುಷೋತ್ತಮತೀರ್ಥಅಚ್ಯುತಪ್ರೇಕ್ಷರಿಗೆಪುರುಷೋತ್ತ ಮಾರ್ಯರಕರಕಮಲಜಾತವರವಾತಅವತಾರ ಆನಂದತೀರ್ಥರಚರಣಪದ್ಮದಲಿ ನಾ ಶರಣಾದೆ ಸತತ2ಶ್ರೀ ಮಧ್ವ ಆನಂದತೀರ್ಥಕರಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆನಮಿಪೆಶ್ರೀ ಮನೋಹರ ಪ್ರಿಯರು ಸಂತೈಪರೆಮ್ಮ 3ತ್ರೇತೆಯಲ್ಲಿ ಶ್ರೀ ರಾಮಚಂದ್ರನ್ನ ಸೇವಿಸಲುಸೀತಾ ಪ್ರತಿಕೃತಿಯಲ್ಲಿ ತಾಪೊಕ್ಕವಾತನ್ನೊಲಿಸಿಕೊಳ್ಳ ದವರ್ಗೆಹರಿಒಲಿಯಎಂದು ಜಗಕೆ ತೋರ್ದ ವಾಲಿಯೇ ಇಂದ್ರ 4ವಾತಾವತಾರ ಹನುಮಂತನೇ ದ್ವಾಪರದಿಕೌಂತೇಯ ಭೀಮನು ಅವನಿಗೆಅನುಜಇಂದ್ರ ಅರ್ಜುನನಾಗಿ ಸೇವಿಸಿ ಹನುಮಧ್ವಜಪಾದಮೂಲದಿ ಕುಳಿತ ಕೃಷ್ಣನು ಒಲಿದ5ಅಖಂಡೈಕ ಸಾರಾತ್ಮ ಅನಂತರೂಪಾಭಿನ್ನಶ್ರೀಕೃಷ್ಣ ರಾಮನೇ ಋಷಿವಂಶದಲ್ಲಿಈ ಕುವಲಯದಲ್ಲಿ ಪ್ರಾದುರ್ಭವಿಸಿದ ವ್ಯಾಸಅಕಳಂಕ ಸುಖಜಿತ್ವಪುಷಶ್ರೀಪತಿಯು6ಆಮ್ನಾಯತತಿಪುರಾಣಗಳು ಪೇಳ್ವಂತೆರಮೆಯರಸ ವ್ಯಾಸನ್ನ ಸೇವಿಸಲು ಇಳೆಯೋಳ್ಭೀಮನೇ ಯತಿ ರೂಪದಲ್ಲಿ ಬಂದಿಹನೆಂದುಸುಮನಸರಾಜ ಪುಟ್ಟಿದನು ಪುನಃ7ಹದಿನೆಂಟು ವರುಷಗಳು ಎತ್ತಾಗಿ ತಾನಿದ್ದುಹೊತ್ತು ಮಧ್ವಾಚಾರ್ಯರ ಪುಸ್ತಕಗಳಭಕ್ತಿಯಲಿ ಸೇವಿಸಿ ಮಧ್ವರಾಯರು ಪಾಠಬೋಧಿಸುವದು ಕೇಳ್ದ ವೃಷಭರಾಟ್ ಇಂದ್ರ 8ಆನಂದಪ್ರದ ತತ್ವಬೋಧಕ ಭಾಷ್ಯಾದಿಗಳಆನಂದ ಮುನಿಮಧ್ವ ಬೋಧಿಸಲು ಗ್ರಹಿಸಿವಿನಯದಿ ಕೇಳ್ದರು ಶಿಷ್ಯರು ಟೀಕೆಗಳಗ್ರಂಥಗಳಿಗೆ ಯಾರು ಮಾಡುವುದು ಎಂದು 9ಈ ಗೋರಾಜನೇ ಟೀಕೆಗಳ ಸಂರಚಿಸಿಜಗತ್ತಲ್ಲಿ ಸತ್ತತ್ವ ಶಾಸ್ತ್ರ ಪ್ರಕಟಿಸುವಹೀಗೆಂದು ಶ್ರೀ ಮಧ್ವಾಚಾರ್ಯರಾಜ್ಞಾಪಿಸಲುಮಿಗೆ ಹರುಷದಲಿ ಗೋರಾಟ್ ಶಿರವ ಬಾಗಿದನು 10ಯುಕ್ತ ಕಾಲದಿ ಈ ಗೋರಾಜ ನೇವೆರಘುನಾಥ ದೇಶಪಾಂಡೆ ರುಕ್ಮಾಬಾಯಿಗೆಮಗನಾಗಿ ಜನಿಸಿದನು ಮಂಗಳವೇಢೆಯಲಿಈ ಗ್ರಾಮ ಪಂಢರಪುರದ ಸಮೀಪ 11ಧೋಂಡುರಾಯನು ಎಂಬ ನಾಮದಲಿ ಬೆಳೆದಗಂಡಿಗೆ ಉಪನಯನ ಮದುವೆಯೂ ಆಯ್ತುಹೆಂಡತಿ ಭೀಮಾಬಾಯಿ ಸುಗುಣೆ ಸೌಂದರ್ಯವತಿಚಂಡ ಶ್ರೀಮಂತರ ಮನೆತನದವಳು 12ಒಂದುದಿನ ಧೋಂಡುರಾಯನು ನದೀ ದಡಕೆಬಂದನು ಕುದುರೆಯ ಮೇಲೇರಿಕೊಂಡುಅಂದು ಅಕ್ಷೋಭ್ಯ ಮಠ ಸಂಚಾರ ಕ್ರಮದಲ್ಲಿನಿಂತಿತ್ತು ಮೊಕ್ಕಾಮಾಗಿ ಆಚೆಕಟ್ಟೆಯಲಿ 13ನದೀತೀರ ಕುಳಿತಿದ್ದ ಅಕ್ಷೋಭ್ಯ ತೀರ್ಥರುಎದುರಾಗಿ ನದಿಯಲ್ಲಿ ಆಚೆದಡದಿಂದಕುದುರೆ ಸವಾರನು ವರ್ಚಸ್ವಿ ಯುವಕನುಬೆದರದೆ ಪ್ರವಾಹದಲಿ ಬರುವದು ನೋಡಿದರು 14ಕುದುರೆ ಮೇಲ್ ಅಸೀನನಾಗಿದ್ದ ಯುವಕನುಕ್ಷುತ್ತೃಷೆಶಮನಕ್ಕೆ ಯತ್ನ ಮಾಡುತ್ತಾಉದಕವ ಕೈಯಿಂದ ತುಂಬಿಕೊಳ್ಳದಲೇಎತ್ತಗಳು ಕುಡಿವಂತೆ ಬಾಯಿ ಹಚ್ಚಿದನು 15ಮಾಧವಮಧ್ವರು ಮೊದಲೇ ಸೂಚಿಸಿದಂತೆಇಂದುಆ ಕುರುಹ ಅರಿತು ಅಕ್ಷೋಭ್ಯರುಇದು ಏನು `ಪಶು' ವಂತೆ ಎಂದು ಧ್ವನಿಕೊಟ್ಟರುಹಿಂದಿನ ಜನ್ಮ ಧೊಂಡೋಗೆ ನೆನಪಾಯ್ತು 16ಪ್ರವಾಹದ ನಗಾರಿಯ ಸಮಬಲಿ ಧೋಂಡುವೇಗ ಲೆಕ್ಕಿಸದಲೇ ದಡಕೆ ತಾ ಬಂದುಮುಗಿದಕರಬಾಗಿ ಶಿರ ನಮಿಸಿ ಅಕ್ಷೋಭ್ಯರಆಗಲೇ ಸಂನ್ಯಾಸಕೊಡಲು ಬೇಡಿದನು 17ಗಾಧಿ ಅರ್ಜುನ ಸಮ ಬಲ ರೂಪದಲಿ ತೋರ್ಪಈತ ರಾಯರ ಸುತನಾದರೂ ವೈರಾಗ್ಯಯುತ ಭಕ್ತಿಮಾನ್ ಸುಶುಭ ಲಕ್ಷಣನೆಂದುಹರಿಮಧ್ವ ನಿಯಮಿತ ಅವಗೆ ಕೊಟ್ಟರು ಸಂನ್ಯಾಸ 18ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವಜಯ ಶೀಲ ಹೊಸಯತಿಗೆ ಇತ್ತು ಅಭಿಷೇಕಅಕ್ಷೋಭ್ಯಗುರು ಮಾಡೆ ಗಗನದಿ ಪೂವರ್ಷಜಯ ಷೋಷ ಹರಡಿತು ಪರಿಮಳ ಸುಗಂಧ 19ತಂದೆ ರಘುನಾಥರಾಯನು ಸುದ್ದಿಕೇಳಿಬಂದು ಅಕ್ಷೋಭ್ಯರ ಕಂಡು ಬಲುಕೋಪದಿಂದ ಯಾಕೆ ಸಂನ್ಯಾಸ ಯುವಕಗೆ ಕೊಟ್ಟಿರಿಎಂದು ವಾದಿಸಿದನು ಪುತ್ರ ಮೋಹದಲಿ 20ಪೂರ್ವಧೋಂಡುರಾಯ ಈಗ ಜಯತೀರ್ಥರುತಾವೇ ಸ್ವೇಚ್ಛೆಯಿಂದ ಕೊಂಡರು ಸಂನ್ಯಾಸಈ ವಿಷಯ ತಿಳಕೊಂಡರೂ ಸಹ ರಘುನಾಥಸೇವಕರ ಸಹ ಮಗನ ಕರಕೊಂಡು ಹೋದ 21ರಾಯನು ಮಗನನ್ನ ಗೃಹಸ್ಥ ಚರ್ಯದಲಿರಿಸೆಶಯನಗೃಹದೊಳು ಪತ್ನಿ ಸಹಿತ ಕಳುಹಿದನುಶಯನ ತಲ್ಪದಿ ದೊಡ್ಡ ಸರ್ಪಕಂಡಳು ಯುವತಿಭಯದಿಂದ ಹೊರಬಂದು ಹೇಳಿದಳು ವಿಷಯ 22ತನ್ನಪತಿಧೊಂಡರಾಯನ್ನ ತಲ್ಪದಲಿಕಾಣದೆ ಅವರಿದ್ದ ಸ್ಥಾನದಲಿ ಸರ್ಪಘನಧೀರ್ಘಗಾತ್ರವಿಸ್ತಾರ ಹೆಡೆಯಿಂದಮಿನುಗುತ್ತ ಕುಳಿತಿದ್ದ ವಿವರ ಪೇಳಿದಳು 23ರಘುನಾಥರಾಯನು ಹರಿಚಿತ್ತ ಇದು ಎಂದುಮಗನ ಪ್ರಭಾವವ ಅರಿತು ತ್ವರಿತದಲಿಅಕ್ಷೋಭ್ಯರಲಿ ಹೋಗಿ ಶಿಷ್ಯನ್ನ ಒಪ್ಪಿಸಿಬಾಗಿ ಶಿರ ಸನ್ನಮಿಸಿ ಕ್ಷಮೆಯ ಬೇಡಿದನು 24ವಂಶ ವೃಧ್ಧಿಗೆ ಮತ್ತೂ ಪುತ್ರಪುಟ್ಟವನೆಂದುದೇಶಪಾಂಡೆಯ ಅನುಗ್ರಹಿಸಿ ಕಳುಹಿಸಿದಶಪ್ರಮತಿ ಪೀಳಿಗೆಯೊಳು ಅಕ್ಷೋಭ್ಯಮುನಿಗ¼ Àುಶಿಷ್ಯ ಜಯತೀರ್ಥರಿಗೆ ಸ್ಥಾನ ನೇಮಿಸಿದರು 25ಶ್ರೀ ಮದ್ವಾಚಾರ್ಯರು ಬೋಧಿಸಿ ತೋರಿಸಿದಶ್ರೀ ರಮಾಪತಿ ಪೂಜಾ ಸತ್ತತ್ವವಾದದುರ್ಮತ ಖಂಡನದ ರೀತಿಯ ಜಯಾರ್ಯರಿಗೆಸಮ್ಮುದದಿ ಅರುಹಿದರು ಅಕ್ಷೋಭ್ಯ ಗುರುವು 26ಶಕ ವರುಷ ಹನ್ನೊಂದು ನೂರು ಅರವತ್ತೇಳುಮಾರ್ಗಶಿರ ಕೃಷ್ಣ ಪಂಚಮಿ ವಿಶ್ವಾವಸುವಲ್ಲಿಅಕ್ಷೋಭ್ಯ ತೀರ್ಥರ ಪೀಠ ಆರೋಹಿಸಿಶ್ರೀಕರಗೆ ಪ್ರೀತಿಕರ ಪಟ್ಟವಾಳಿದರು 27ದೇವತಾರ್ಚನೆ ಶಿಷ್ಯ ಉಪದೇಶ ಮಾಡುತ್ತದಿಗ್ವಿಜಯದಲಿ ದುರ್ವಾದಿಗಳ ಗೆದ್ದುಮಧ್ವಗ್ರಂಥಗಳಿಗೆ ಟೀಕೆಗಳ ರಚಿಸಿಪ್ರಖ್ಯಾತರಾದರು ಜಯತೀರ್ಥ ಆರ್ಯ 28ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣನಿರ್ದೋಷಶ್ರೀಯಃ ಪತಿಗೆ ಪ್ರಿಯಘನ ಕರುಣಿಜಯತೀರ್ಥಗುರುನಮೋಪಾಹಿ29|| ಪ್ರಥಮ ಕೀರ್ತನೆ ಸಮಾಪ್ತ ||ದ್ವಿತೀಯಕೀರ್ತನೆಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರಸುವೃತತಿ ಜಾಂಫ್ರಿಯಲಿ ಶರಣಾದೆ ಸತತಸರ್ವೇಷ್ಟದಾತರುವಿಜ್ಞಾನಬೋಧಕರುಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪನರಹರಿಯ ಮಹಾದುರ್ಗೆಯ ಕುರಿತು ತಪಸ್ ಆಚರಿಸಿವರವ ಪಡೆದಿಹರು ಈ ಜಯತೀರ್ಥ ಆರ್ಯಬರೆವುದಕೆ ಲೇಖನವು ಅಡಿಕೆಯುಅರದೂರದುರ್ಗೆಯು ಕೊಟ್ಟಿಹಳು ಇವರ್ಗೆ1ಎರಗೋಳದಲ್ಲಿದ್ದು ಶ್ರೀ ಮದಾಚಾರ್ಯರಪರಸುಖಪ್ರಮೂಲಗ್ರಂಥಗಳ ಟೀಕಾಬರೆದಿಹರು ಅನುಪಮ ಉತ್ತಮ ರೀತಿಯಲಿಭರದಿ ಓದುವವರೇ ಬಲ್ಲರು ಮಹಿಮೆ 2ಶ್ರೀ ಮಧ್ವಕೃತವು ಶ್ರೀ ಬ್ರಹ್ಮಸೂತ್ರಭಾಷ್ಯವುಆ ಮೂಲಗ್ರಂಥವು ಎರಡು ಸಾವಿರವುಆ ಮಹಾಭಾಷ್ಯಕ್ಕೆ ಟೀಕೆ ಅಷ್ಟ ಸಹಸ್ರವುಅಮ್ಮಮ್ಮ ಏನೆಂಬೆ ಈ ಮಹಾ ಕಾರ್ಯ 3ಅನುವ್ಯಾಖ್ಯಾನದ ನಾಲಕ್ಕು ಸಾವಿರಘನತರ ಗ್ರಂಥಕ್ಕೆ ಜಯತೀರ್ಥರಜ್ಞಾನಪ್ರದ ಅಜ್ಞಾನಗಿರಿವಜ್ರಟೀಕೆಯಗ್ರಂಥ ಇಪ್ಪತ್ತೆಂಟು ಸಾವಿರ ಸಂಖ್ಯಾ 4ಈ ನುಡಿ ಬರೆವಾಗ ಬಿಂದುಮಾಧವ ಪೇಳ್ದಘನ್ನ ಶುಭತರ ಮಧ್ವ ವಿಜಯದಲ್ಲಿಅನುವ್ಯಾಖ್ಯಾನದ ಟೀಕಾ ಸುಧಾ ಎಂದುಶ್ರೀ ನಾರಾಯಣಾಚಾರ್ಯ ಸೂಚಿಸಿಹರೆಂದು 5ತತ್ವ ಸಂಖ್ಯಾನಕ್ಕೂ ಕಥಾ ಲಕ್ಷಣಕ್ಕೂತತ್ವ ವಿವೇಕಕ್ಕೂ ಋಗ್ಬಾಷ್ಯಕ್ಕೂತತ್ವ ನಿರ್ಣಯಕ್ಕೂ ಪ್ರಮಾಣ ಲಕ್ಷಣಕ್ಕೂತತ್ವೋದ್ಯೋತಕ್ಕೂಕರ್ಮನಿರ್ಣಯಕ್ಕೂ6ಮಾಯಾವಾದಉಪಾಧಿಖಂಡನಗಳಿಗೂಮಿಥ್ಯಾತ್ವಾನುಮಾನ ಖಂಡನಕ್ಕೂನ್ಯಾಯ ವಿವರಣಕ್ಕೂ ಗೀತಾ ಭಾಷ್ಯಕ್ಕೂನ್ಯಾಯ ತೇಜೋಜ್ವಲ ಗೀತಾ ತಾತ್ವರ್ಯಕ್ಕೂ 7ಪಟ್ಟ್ರಶ್ನ ಈಶಾವಾಸ್ಯ ಭಾಷ್ಯಗಳಿಗೂಅಷ್ಟಾದಶ ಈ ಗ್ರಂಥಗಳಿಗೆಪಟು ಪಟೀಯಸವಾಗಿ ಟೀಕೆಯಾ ಬರೆದಿಹರುಇಷ್ಟೇ ಅಲ್ಲದೇ ಇನ್ನೂ ನಾಲ್ಕು ರಚಿಸಿಹರು 8ಪ್ರತ್ಯಕ್ಷ ಅನುಮಾನಆಗಮಪ್ರಮಾಣಗಳರೀತಿ ಲಕ್ಷಣ ಪೇಳ್ವ ಪ್ರಮಾಣ ಪದ್ಧತಿಯುಮಾಧವನ ಸರ್ವೋತ್ತಮ ಜಗತ್ ಸತ್ಯತ್ವಇಂಥಾದ್ದು ಸಾಧಿಸುವ ವಾದಾವಳಿಯು 9ತಂತ್ರಸಾರಪಾಂಚರಾತ್ರಾಗಮಾನುಸರಿಸಿಪದ್ಯಮಾಲಾನಾಮ ಗ್ರಂಥದಲ್ಲಿಶ್ರೀಧರ ಸರ್ವೋತ್ತಮಾರ್ಚನೆ ಬಗೆ ಪೇಳಿದರುಶತಾಪರಾಧ ಸ್ತೋತ್ರವು ಮಾಡಿಹರು 10ದಿಗ್ವಿಜಯ ಮಾಡಿ ಸಜ್ಜನರ ಉದ್ಧರಿಸುತ್ತಾದುರ್ವಿದ್ಯಾ ದುರ್ಮತಗಳನ್ನ ಛೇದಿಸುತಸುವೈದಿಕ ಮಧ್ವಸಿದ್ಧಾಂತ ಸ್ಥಾಪಿಸುತಭುವಿಯಲಿ ಪ್ರಖ್ಯಾತರಾದರು ಜಯಾರ್ಯ 11ಒಂದು ಸಮಯದಿ ವಿದ್ಯಾರಣ್ಯರು ಶ್ರೀಮಧ್ವಗ್ರಂಥ ಓದಿ ನೋಡಿ ಅರ್ಥವಾಗದಲೆಗ್ರಂಥಕ್ಕೆ ಜಯರಾಯರು ಬರೆದ ಟೀಕೆಯಓದಲು ಅರ್ಥವು ವಿಶದವಾಯ್ತು 12ಪೂರ್ವಾಪರ ಸಂಗತಿ ಮತ್ತು ವಾಕ್ಯಾರ್ಥಸರ್ವ ಪ್ರಕಾರದಲೂ ಉತ್ತಮವಾಗಿಹುದುಸರ್ವಜÕ ಮುನಿಗಳ ಗ್ರಂಥದ ಸರಿಯಾದಭಾವವ ವಿವರಿಸುವುದೆಂದು ಹೇಳಿದರು 13ಈ ರೀತಿ ವಿದ್ಯಾರಣ್ಯರು ಕೊಂಡಾಡಿಪುರಿ ರಾಜಬೀದಿಯಲಿ ಆನೆ ಅಂಬಾರಿಮೆರವಣಿಗೆ ಮಾಡಿಸಿ ಜಯಘೋಷ ಮಾಡುತ್ತಾಮರ್ಯಾದೆ ಮಾಡಿದರು ವಿಜಯನಗರದಲಿ 14ಮಧ್ವಗಂಥಗಳನ್ನು ಜಯಾರ್ಯ ಬರೆದಿರುವಉತ್ತಮ ಟೀಕೆಗಳ ಬಲು ಶ್ಲಾಘಿಸುತ್ತವಿದ್ಯಾರಣ್ಯರು ನಮಸ್ಕಾರ ಮಾಡಿದರುಎಂದು ಇತಿಹಾಸವ ಸುಜನರು ಪೇಳುವರು 15ಸ್ವಮತ ಪರಮತ ವಿದ್ವಜ್ಜನರಿಂದಈ ಮಹಾಮಹಿಮ ಟೀಕಾಚಾರ್ಯ ಆರ್ಯಈ ಮಹಿಯಲ್ಲಿ ಪ್ರಖ್ಯಾತ ಪೂಜಿತರಾಗಿತಮ್ಮ ಗುರುಕ್ಷೇತ್ರ ಮಳಖೇಡ ಸೇರಿದರು 16ಮಳಖೇಡ ಕ್ಷೇತ್ರದಲ್ಲಿ ಕಾಗಿನೀ ನದಿತೀರಮಾಲೋಲ ಪ್ರಿಯ ಅಕ್ಷೋಭ್ಯರ ವೃಂದಾವನಶೀಲತಮ ಜಯರಾಯ ಅಲ್ಲಿಯೇ ನಿಂತರುಅಳವೇ ವರ್ಣಿಸಲು ಈ ಮಹಾತ್ಮರ ಮಹಿಮೆ 17ಹನ್ನೊಂದು ತೊಂಭತ್ತು ಶಕವಿಭವಆಷಾಢಕೃಷ್ಣ ಪಂಚಮಿ ಪುಣ್ಯದಿನದಲ್ಲಿ ಇವರುತನ್ನ ಸೇವಾ ವಿಷ್ಣು ಮಧ್ವರಿಗೆ ಪೂರೈಸಿಶ್ರೀ ನಾರಾಯಣನಪಾದಸೇರಿದರು18ಮತ್ತೊಂದು ಅಂಶದಲ್ಲಿ ವೃಂದಾವನದಲ್ಲಿಇದ್ದು ಸೇವಿಸುವವರ್ಗೆ ವಾಂಛಿತವೀಯುತ್ತಮಧ್ವಸ್ಥ ಶ್ರೀ ಹರಿಯ ಧ್ಯಾನಿಸುತ ತಮ್ಮಗುರುಬದಿಯಲ್ಲಿ ಕುಳಿತಿಹರು ಸ್ಮರಿಸೆ ಪಾಲಿಪರು 19ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣನಿರ್ದೋಷಶ್ರೀಯಃ ಪತಿಗೆ ಪ್ರಿಯಘನಕರುಣಿ ಜಯತೀರ್ಥಗುರುನಮೋಪಾಹಿ20||ಇತಿ ಶ್ರೀ ಜಯತೀರ್ಥವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಸತ್ಯಪ್ರಜÕರಾಯರಂಘ್ರಿಗಳ ಸಂತತಹೃತ್ಪದ್ಮದಲಿ ನೆನೆಯಿರಯ್ಯ ಪುನರಪಿಭವ.....ತ್ವತಿಯಂ ತೋರಿ ಸಾಪ್ರಾಯ ಪದ್ಧತಿಯ ವಿಪ್ರತಿಯಂ ತೋರುವಹೊರೆವಪ.ಸೂತ್ರಾರ್ಥಸ್ತೇಯ ದಾನವರಿಳೆಗೆ ಭಾರಾಗಿವೇತ್ತøಜನಗಳ ಮತಿಗೆಡಿಸಿ ಬಾಧಿಸುತಿರಲುಗೋತ್ರಧರನಾಜÕದಿಂ ಶ್ರೀ ಮಾರುತನು ತನ್ನಯ ತೃತೀಯಾವತಾರದಿಂದ್ವಾತ್ರಿಂಶತ್ ಲಕ್ಷಣಾನ್ವಿತನಾಗಿ ಋಜುಗಣದಗೋತ್ರದಲ್ಲೆಸೆದು ನಿಜಜನನಿಗ್ಹರುಷವನಿತ್ತುಧಾತ್ರಿಗೆ ಭೂಷಣದ ಮಣಿಯಂತೆ ಹೊಳೆ ಹೊಳೆವಸುತ್ರಾಮಾಶೇಷವರದ ಅಭಯದ 1ವಿಶ್ವವೆಲ್ಲ ಮಿಥ್ಯಪ್ರತಿಷ್ಠಿತವು ಅಲ್ಲವು ನಿರೀಶ್ವರ ಭುವನವೆಂಬ ಕುಮತಿಘಟಿಗಳ ಮಾತರಿಶ್ವಕಂಠೀರವನೀ ಯತಿ ರೂಪದಲಿ ಸದೆದುಸುಸ್ವಭಾವದಲ್ಲಿ ಒಪ್ಪುತ ಸುಶಶ್ವದೇಕ ಶ್ರೀ ಹರಿಯು ಜೀವ ಜಗದೊಡೆಯನಶ್ವರಾನಶ್ವರಾರ್ಥೇತರ ಮುಕುಂದೆನ್ನುತತಾ ಸ್ವಕೀಯರಿಗೆಲ್ಲಶ್ರುತಿಸ್ಮøತಿಸುವಾಕ್ಯದಿಂವಿಶ್ವಾಸವಂ ಬಲಿಸಿದ ಸುಬೋಧ 2ಮತ್ರ್ಯದ ಬುಧರು ಬುದ್ಧಿಭ್ರಂಶದಲಿ ಮಾಯಿಮತಗರ್ತದಲಿ ಬಿದ್ದಿರಲು ಕಂಡು ಕರುಣದಲಿ ಸುಖತೀರ್ಥ ಮಧ್ವಾನಂದ ದಶಪ್ರಮತಿಯೆಂಬ ವೇದಾರ್ಥ ನಾಮದಲಿ ಮೆರೆದುಧೂರ್ತದುರ್ಭಾಷ್ಯಾಂಧಕಾರವಂ ಬಿಡಿಸಿ ವಿದ್ಯಾರ್ಥಿಗಳಿಗೊಲಿದು ಸದ್ಭಾಷ್ಯಗಳ ರಚಿಸಿಪರಮಾರ್ಥ ವ್ಯಾಖ್ಯಾನಗಳ ಪೇಳಿ ಉದ್ಧರಿಸಿದ ಸಮರ್ಥ ಮಾರ್ತಾಂಡನಾದ ಸುಖದ 3ಮಬ್ಬು ಮುಸುಕಿದ ಪರೆಯ ತೆರೆದ ಸುಜನರ ಹೊರೆದಕೊಬ್ಬಿದ ಕುತರ್ಕಿಗಳ ತರಿದ ಇಂದುವ ಜರಿದÀಸಭ್ಯರಿಗೆ ತತ್ವಸುಧೆಯೆರೆದ ಮಂತ್ರವನೊರೆದನಬ್ಬಗುರುಪೂರ್ಣಬೋಧದುಬ್ಬಿ ತಮಸಿನೊಳು ಮಿಥ್ಯಾತ್ಮಕ ದುರಾತ್ಮರಿಳೆಗುಬ್ಬಸದ ದರ್ಶನಗಳೊರೆಸಿ ಸತ್ಯವ ಮೆರೆಸಿಅಬ್ಬರದ ತಪ್ತ ಮುದ್ರೆಯನಿತ್ತಘವ ಕಿತ್ತುನಿರ್ಭಯವ ಪದವನೀವಕಾವ4ಇಂಥ ಸಂಕರ್ಷಣನ ಪ್ರೀತಿಯ ಕುವರ ಅಮಲವಾತನಿಖಿಳಪ್ರಾಣನಾಥ ರಘುಪತಿಯಸೇವ್ಯತ್ರೇತೆಯಲಿ ಮೂಡಿ ಪ್ರಖ್ಯಾತಾಕ್ಷಯ ಪ್ರಮುಖಭೂತಳದ ಭಾರರೊದೆದಪೂತನಾರಿಯ ಪಕ್ಷಪಾತದಿಂ ಬಕ ಜರಾಜಾತ ಗಾಂಧಾರ್ಯರಂ ಘಾತಿಸಿದ ಶ್ರೀಸವಿತನಯನಾಜÕದಲಿ ಪಾತಕಿಗಳೊರಸಿದಾದ್ವೈತ ಮತ ಕಾಲನೆನಿಪ್ಪ 5ಹತ್ತುಪನಿಷದ್ಭಾಷ್ಯಸೂತ್ರಗೀತಾಭಾಷ್ಯಮತ್ತೆ ಅಣುಭಾಷ್ಯ ಋಗ್ಭಾಷ್ಯಭಾಗವತತಾತ್ಪರ್ಯ ವಿಷ್ಣುಸ್ತೋತ್ರದ್ವಯಂ ಕಲ್ಪದ್ವಯಂಹತ್ತು ಪ್ರಕರಣವು ಕೃತಿಯುತಂತ್ರಸಾರಕೃಷ್ಣಾಮೃತಾಬ್ಧಿಯ ಮಹಾಭಾರತಾನ್ವಯ ವಿವರ್ಣನವೆಂಬ ಸದ್ಗ್ರಂಥ ಮೂವತ್ತೇಳು ರಚಿಸಿ ಮೋಕ್ಷೋಪಾಯವರುಹಿದ ವಿಧಾತ್ರ ಪದಕರ್ತನೀತತಾತ6ಭಾಟ್ಟ ಪ್ರಭಾತ ಛೆರಾನಾಯತ ? ಪ್ರತ್ಯಕ್ಷ ಮತಿ............... ಚಾರ್ವಾಕ....................ಚೌದ್ಧನೆ............ಶಂಕರನೆ ಕಡೆಯಾಗಿಪ್ಪತ್ತೊಂದುನಷ್ಟ ಭಾಷ್ಯವನಂಘ್ರಿಯಲಿಮೆಟ್ಟಿ ಸದ್ಗುಣಶರಧಿಹರಿಯು ಭುವನಂಗಳನುಹುಟ್ಟಿಸೆತ್ತಿಳಿದಾಡಿ ಮುಕುತಿಯ ನಿಜರ್ಗಿತ್ತುಕಷ್ಟವ ಖಳರ್ಗೀವನೆಂದು ಡಂಗುರಿದದಿಟ್ಟಾಲವಬೋಧ ರಾಜತೇಜ 7ಶ್ರುತಿವೇದನಿಕರ ಚಕ್ರವ ಪಿಡಿದು ಬ್ರಹ್ಮತರ್ಕಾವಳಿಯ ಶಂಖದ ಭೀಕರ ಘೋಷದಿಂದ ಜಗತ್ಪ್ಪಾವನನ ಪುರಾಣಗದೆ ಇತಿಹಾಸ ಪಂಚರಾತ್ರಭಾವಶಾಙ್ರ್ಗವಿಡಿದುಜೀವೇಶ ಭೇದಶರಪಂಚಕದಿ ಬ್ರಹ್ಮಸೂತ್ರಾವಳಿಯಿಂಬಿನ ನಂದಕವ ಧರಿಸಿ ಬೆಂಬತ್ತಿದೇವರಿಪುದುರ್ಮತವ ಓಡಿಸಿದಮಧ್ವನಾರಾಯಣ ಪಾರಾಯಣ ಯತಿ ಸುಮತಿ 8ತರುಣರವಿತೇಜಸುಸ್ಮಿತ ಸುಂದರ ನಾನಾ ಸುವರ್ಣಕಾಪಿನ ಭ್ರಾತ ಪ್ರಬೋಧ ಮುದ್ರಾಭಯಕರಸರೋರುಹದಿಂದ ಮೆರೆವ ವಿಧಿಪನಶರಣಜನ ಮಂದಾರನಪರಮನವರತ್ನದ ಪದ್ಮದ ಮಾಲೆಯಿದು ಪುಣ್ಯಕರವು ವೈಷ್ಣವರ್ಗೆ ಅಘದೋಟ ಮುಕ್ತಿಯ ಕೂಟಗುರುಮೂರ್ತಿಯ ಕೀರ್ತಿ ಪ್ರಸನ್ನವೆಂಕಟಪತಿಯವರಪ್ರಧಾನಾಂಗ ಮೂರ್ತಿಯ ವಾರ್ತಿ9
--------------
ಪ್ರಸನ್ನವೆಂಕಟದಾಸರು