ಒಟ್ಟು 140 ಕಡೆಗಳಲ್ಲಿ , 36 ದಾಸರು , 78 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಬಿಟ್ಟ ಬಳಿಕೆನ್ನ ಸಾಧ್ಯವೇನಿಹ್ಯದು ನೀ ಕರುಣಗೈದರೆ ಸಕಲ ಸಾಧ್ಯ್ಹರಿಯೆ ಪ ಯಂತ್ರವಾಹನೆ ಯಂತ್ರ ನಡೆಸದೆಯಿರಲು ಯಂತ್ರ ನಡೆಯುವುದೆಂತು ಸ್ವಂತ ತಾನೇ ಮಂತ್ರಗಾರಿಲ್ಲದೆ ತಂತ್ರ ತೋರ್ವುದೆ ಸ್ವ ತಂತ್ರ ನೀನಲ್ಲದೆ ಅತಂತ್ರನಿಂದೇನಹುದು 1 ಪಡೆದ ಮಾತೆಯು ಕೂಸಿನೊಡಲು ತಾ ನೋಡದಿರೆ ಒಡಲೊಳಿಟ್ಟ್ಹದಿನಾಲ್ಕುಪೊಡವಿಗಳನಾಳುವ ಒಡೆಯ ಕೊಡದಿರೆ ಕೀರ್ತಿ ಪಡೆಯುವುದೆ ಜೀವಿ 2 ನಿನ್ನಿಂದೆ ಬೆಳಗುವುದು ನಿನ್ನಿಂದೆ ಮುಳುಗುವುದು ನಿನ್ನಿಂದಳಿಯುವುದು ನಿನ್ನಿಂದಲುಳಿಯುವುದು ನಿನ್ನಿಬಿಟ್ಟಿನ್ನಿಲ್ಲ ಎನ್ನಯ್ಯ ಶ್ರೀರಾಮ ಮನ್ನಿಸಿ ಕೃಪೆಮಾಡು ಎನ್ನ ನೀ ಬಿಡದೆ3
--------------
ರಾಮದಾಸರು
ನೀನಿಲ್ಲದ ಜಗವಿನಿತಿಲ್ಲ ನೀನಲ್ಲದೆ ಎನಗಾರಿಲ್ಲ ಪ ನೀನೆ ನೀನೆಯಾಗಿ ಕಾಣಿಸಿ ಜಗ ಮಾಯಮಾಣಿಸುವಿ ನಿಜ ಸುಳ್ಳಲ್ಲ ಅ.ಪ ಹೊತ್ತುಗೊತ್ತು ಎಲ್ಲ ನಿನ್ನಿಂದೇ ನಿತ್ಯ ಅನಿತ್ಯವೆಲ್ಲ ನಿನ್ನಿಂದೇ ಸತುಚಿತುಚಿದ್ವಸ್ತು ತತ್ವಸರ್ವತ್ರಸೂತ್ರವೆಲ್ಲ ನಿನ್ನಿಂದೇ 1 ಸೃಷ್ಟಿ ಕ್ಷೇತ್ರ ತೀರ್ಥ ನಿನ್ನಿಂದೇ ಅಷ್ಟಸ ಭುವಗಳ್ನಿನ್ನಿಂದೇ ಹುಟ್ಟುಸಾವು ಎಲ್ಲ ಸ್ಪಷ್ಟದಿ ನೋಡಲು ಸೃಷ್ಟಿ ಪ್ರಳಯವಷ್ಟು ನಿನ್ನಿಂದೇ 2 ನಿಖಿಲ ವೇದ ನಿನ್ನಿಂದೇ ಅಖಿಲದೇವರೆಲ್ಲ ನಿನ್ನಿಂದೇ ಸಕಲಮಂತ್ರಮೂಲ ಭಕುತಾಭಿ ಶ್ರೀರಾಮ ಮುಕುತಿಸಂಪದ ಸಿದ್ಧಿ ನಿನ್ನಿಂದೇ 3
--------------
ರಾಮದಾಸರು
ನೀನೆನಗೆರವೆ ನಾನಿನ್ನೆಂತಗಲುವೆಬಾ ನನ್ನ ತನುವೆ ಸದ್ಗುರುವಿಗೊಂದಿಸುವರೆ ಪಮೊದಲಿಗಮಿತ ದುಷ್ಟತನುಗಳ ಸಂಗದಿಕುದಿದು ಸಂಸಾರಾಗ್ನಿಯೊಳು ಬಳಲಿದೆನುಅದರಿಂದ ನಿನ್ನ ನಿಗ್ರಹಿಸಿದೆನಲ್ಲದೆಪದರದಿರೆನ್ನೊಳು ಪಡೆಯೆ ನಿನ್ನೊಂದನೂ 1ಗುರುಸೇವೆಗಲಸದೆ ಛಳಿಮಳೆಯೆನ್ನದೆಬರಿಯ ಬಯಲ ಸಂಸಾರ ಭೋಗದಲಿಎರಗದಿರೆನ್ನ ದಾರಿಗೆ ಬಾ ನಿನ್ನಾರೈಕೆುರಲೆನ್ನೊಳಿನ್ನು ತಪಿಸಿ ಕಂಗೆಡಿಪುದಿಲ್ಲ 2ಶ್ರವಣ ಸುಖದಿ ನನ್ನ ಬೆರೆದು ಬೇರಾಗದೆಭವಶರಧಿಯ ದಾಂಟುನಂತೆ ನೀ ಮಾಡುವಿವರಿಸಿ ಹರಿಗುಣ ಕಥೆಗಳನೆಮ್ಮೊಳುಕವಿದಿಪ್ಪ ತಮವ ತೊಲಗಿಸಿಕೊಂಬ ನಾವಿನ್ನು 3ನಿನ್ನಿಂದ ಸಂಸಾರ ವಿಷಯ ಸುಖದ ಲಾಭನಿನ್ನಿಂದ ಕೃಛ್ರಾದಿ ತಪಸಿನ ಲಾಭನಿನ್ನಿಂದ ಸತ್ಕರ್ಮತೀರ್ಥಯಾತ್ರೆಯ ಲಾಭನಿನ್ನಿಂದ ವೈರಾಗ್ಯ ಭಾಗ್ಯದ ಲಾಭ 4ನಿನ್ನೊಳಗಿರುವಿಂದ್ರಿಯಂಗಳಿಂದ್ರಿಯಗಳೊಳುಣ್ಣುವ ಮನ ಮನದೊಳು ಕೂಡ್ವ ಜೀವಎನ್ನುವರೆನ್ನನೆನ್ನಿರವನರಿಯೆನಿದನಿನ್ನಿಂದ ಗುರುಕೃಪೆವಡೆದು ತಿಳಿಯಬೇಕೂ 5ನೆವವಿಲ್ಲದುಪಕಾರಗೈವೆ ನೀನೆನಗಾಗಿವಿವಿಧ ಭೋಗದ ಸುಖವೆನಗೆ ನಿನ್ನಿಂದವಿವರಿಸೆ ನಿನಗೆ ಉಂಟು ಲಾಭವು ಮತ್ತೆನವೆವೆಯಲ್ಲದೆ ವೃದ್ಧಿಯಾಗುವೆಯಾ ಪೇಳು 6ನಿನ್ನಿಂದ ಸುಖಬಟ್ಟು ನಿನ್ನ ಬಾಳಿಸಲಾರದೆನ್ನನುಳುಹುವದೆಂತನ್ಯಾಯ ಸುಖವುಉಣ್ಣುವರಾರಿದನುಂಡು ಬದುಕಿರುವಅಣ್ಣನ ತಿಳಿಯಲು ಗುರುವೆ ಗತಿ ಕಂಡ್ಯಾ 7ವಂದಿಸಿಯೂಳಿಗಗೈವಲ್ಲಿಯಲಸದೆದಂದುಗ ಸುಖಕಾಗಿ ದಾರಿದೆಗೆಯದೆಒಂದಾಗಿ ಯೆನ್ನೊಳಿದ್ದರೆ ನನ್ನ ಸುಖವ ನಾಹೊಂದಲು ನಿನಗಾನಂದವಪ್ಪುದೆ ಕೇಳು 8ಮರುಗಿ ಮನದಿ ನಮ್ಮ ಮರವೆಯಾಟವ ಕಂಡುತಿರುಪತಿ ವೆಂಕಟರಮಣನು ತಾನೆಗುರುವಾಸುದೇವಾರ್ಯನಾಗಿಹನಾತನಚರಣವ ಮರೆಯೊಕ್ಕು ಬದುಕುವ ನಡೆಬೇಗ 9ಕಂ||ಜೀವನ ನುಡಿಯನು ಲಾಲಿಸಿಭಾವದಿ ಸರಿಬಂದ ಬಗೆಯ ಕಾಣದೆ ಗರ್ವದಿತಾವೊಲಿವರೆ ಮನಬಾರದುನೀವೊಬ್ಬನೆ ಸಾಧಿಸೆನೆ ಮನ ಕೆರಳಿ ನುಡಿದುದೂ
--------------
ತಿಮ್ಮಪ್ಪದಾಸರು
ನೀಯೆನ್ನ ಸದ್ಭಾಗ್ಯ ಆನಂದ ನಿಧಿಯೊ ಪ ಮಧುವೈರಿ ತಾಯಿಯಂದದಿ ಕಾಯೊ ಅ.ಪ ಏನಾಗುವ ಪ್ರೀತಿ ನಿನ್ನಿಂದ ಎನಗಯ್ಯ ಜ್ಞಾನಾದಿ ಆನಂದ ಸುಗುಣ ಸಿಂಧು ದೀನ ಬಾಂಧವ ನಿನ್ನಧೀನದವ ನಾನಯ್ಯ ನಿತ್ಯ ಪವಮಾನ ಹೃತ್ಸದನ 1 ವಿದ್ಯ ಬುದ್ಧಿ ಜ್ಞಾನ ಮನಕರಣ ಶಕ್ತಿ ಸದ್ಧೈರ್ಯ ಸುಖನಿಧಿಯು ನಿರ್ಭೀತ ಪದವಿ ಅದ್ವಯನೆ ನೀನೆನಗೆ ಅನಿಮಿತ್ತ ಬಂಧು ಹರಿ ಸಿದ್ಧಿಸೈ ಈ ಜ್ಞಾನ ಸರ್ವಕಾಲದಿ ದೇವ 2 ನಾನು ನನ್ನದು ಎಂಬ ದೋಷದ ಮಕರಿ ಗಾನೆ ಸಿಕ್ಕಿದ ತೆರದಿ ಮೊರೆಯುತಿಹೆನೊ ದಾನವಂತಕನೆ ಶ್ರೀ ಜಯೇಶವಿಠಲ ದೀನ ಕರಿಯನು ಪೊರೆದ ತೆರದಿ ಸಲಹೊ ಎನ್ನ 3
--------------
ಜಯೇಶವಿಠಲ
ಪ(ಪಾ)ವನಾ ಗುರು ಪವಮಾನ ಪ ಪಾವನ ಗುರು ಪವಮಾನ ದೇವ ಅವಾವಕಾಲದಿ ಸಲಹುವ ಕರುಣಿ ಕೃಪಾ ವಲೋಕನದಿಂದ ಕಾವುದೆಮ್ಮನು ಗುರುಅ.ಪ ಪರಮ ಮಹಿಮ ಶ್ರೀ ಮುಕುಂದಾ ನಿಂದ ಕರುಣಾದಿಂದ ಜನಿಸಿಬಂದ ಬಂದು ಸರ್ವಜೀವರೊಳಾನಂದದಿಂದ ಕರಣದೊಳು ನಿಂತಚಂದಾ ||ಆಹ|| ನಿರುತದಿ ಹರಿಪ್ರೇರಣೆಯಿಂದ ಕಾರ್ಯವ ಪರಿಪರಿಮಾಡಿ ಶ್ರೀಹರಿಗರ್ಪಿಸುವ ದೇವ 1 ತರುಚ್ಛಾಯೆಯಂತೆ ಶ್ರೀ ಹರಿಗೆ ನೀನೆ ಪರಮ ಪ್ರತಿಬಿಂಬನಾಗೆ ಸರ್ವ ಚರಾಚರಾದಿಗಳೊಳಗೆ ಅದರ ದರಯೋಗ್ಯತೆಗನುವಾಗೇ ಆಹ ನಿರುತಕಾರ್ಯವ ಮಾಳ್ವೆ ಅಣುಮಹದ್ರೂಪನೆ ಪರಿಪರಿ ಪ್ರಾಣಾದಿಗಳ ಕಾರ್ಯ ನಿನ್ನಿಂದ2 ಚಕ್ರವರ್ತಿ ಆಜ್ಞೆಯಂತೇ ಪುರದ- ಧಿಕಾರಿನಿಯಮದಂತೇ ಅದಕ- ಧಿಕೃತರಿರುವರಂತೇ ಅಂತೆ ತ- ತ್ವ ಕಾರ್ಯವು ನಿನ್ನಿಚ್ಛೆಯಂತೇ ||ಆಹ|| ಮಿಕ್ಕಾದ ತತ್ವರಿಗೆ ತಕ್ಕ ಕಾರ್ಯವನಿತ್ತು ನಿ- ಯುಕ್ತರ ಮಾಡುವೆ ಹರಿಉಕ್ತಿಯ ಮೀರದೆ 3 ಇಭರಾಜವರದನ ಪ್ರೀಯ ನೀನೆ ಪ್ರಭುವಾಗಿರುವೆ ಸರ್ವಕಾಯದೊಳು ಶುಭಾಶುಭಂಗಳ ಕಾರ್ಯ ನಿತ್ಯ ನಿಬಿಡ ನಿನ್ನಿಂದಲೆ ಜೀಯಾ ||ಆಹ|| ಅಬುಜಾಂಡದೊಳಗೆಲ್ಲ ಪ್ರಬಲ ನಿನ್ನಯ ಶೌಂiÀರ್i ಅಬುಜಭವನ ಪದಪಡೆವ ಪ್ರಭುವೆ ನೀನು4 ಪ್ರಾಣಾದೇವ ನಿನ್ನಿಂದ ಪಂಚ- ಪ್ರಾಣಾದಿರೂಪಗಳಿಂದ ತನು ಸ್ಥಾನದಿಭೇದಗಳಿಂದ ಜಡ ಪ್ರಾಣಭೂತ ಪಂಚದಿಂದಾ ||ಆಹ|| ಕಾಣಿಸಿಕೊಳ್ಳದೆ ಜಾಣತನದಿ ಪುಣ್ಯ ಪಾಪ ಜೀವಗೆ ಉಣಿಸುತಲಿರುವೆಯೊ5 ಪಾಯೂಪಸ್ಥದಿ ಅಪಾನ ಮುಖ ನಾಸಿಕ ಶ್ರೋತ್ರ ಪ್ರಾಣಾ-ನಾಭಿ ಅಯನವಾಗಿರುವ ಸಮಾನಾ ಇನ್ನು ಪಯಣವು ನಾಡಿಯೊಳು ವ್ಯಾನ ||ಆಹ|| ಒಯ್ದುಕೊಡುವ ಫಲಕಾರ್ಯವೆಲ್ಲ ಉದಾನನಿಂದ ಕೂಡಿ ಜೀಯ ನೀ ನಡೆಸೂವೆ 6 ಸೃಷ್ಟಿಯೊಳು ನೀ ಪ್ರವಿಷ್ಟನಾಗಿ ಸೃಷ್ಟಿಕಾರ್ಯದೊಳು ಚೇಷ್ಟಾ ಮಾಡಿ ಸೃಷ್ಟೀಶನೊಲಿಸಿ ಪ್ರತಿಷ್ಠಾ ತತ್ವ ಶ್ರೇಷ್ಠರೆಲ್ಲರ ಮನೋಭೀಷ್ಠ ||ಆಹ|| ತುಷ್ಟಿಪಡಿಸಿ ಪರಮೇಷ್ಠಿಯಾಗುವೆ ಕಪಿ ಶ್ರೇಷ್ಠನೆ ಉರಗಾದ್ರಿವಾಸವಿಠಲನದೂತ 7
--------------
ಉರಗಾದ್ರಿವಾಸವಿಠಲದಾಸರು
ಪಂಚಮಿಯ ದಿನ ವಿಭವ ನಮ್ಮ ಶ್ರೀನಿವಾಸನ ಮಹಾತ್ಮವ ಮಾನಿನಿ ರನ್ನೆ ನೀ ಪೇಳೆ ಭಕ್ತಾ- ಧೀನದ ಚರಣದ ಲೀಲೆ ಭಾನು ಉದಯದಲಿ ವೀಣಾದಿ ಸು- ಗಾನ ವಾದ್ಯ ನಾನಾವಿಧ ರಭಸದಿ1 ಎತ್ತಲು ನೋಡಿದಡತ್ತ ಜನ- ಮೊತ್ತವಿಲಾಸವಿದೆತ್ತ ಚಿತ್ತದಿ ನಲಿನಲಿದಾಡಿ ತೋಷ- ವೆತ್ತಿರುವನು ಒಟ್ಟುಗೂಡಿ ಸುತ್ತುಮುತ್ತು ಒತ್ತೊತ್ತಿಲಿಹರು ವಿ- ಪ್ರೋತ್ತಮ ಶ್ರೀಹರಿಭಕ್ತರ ಮಯವಿದು2 ಚಾಮರ ಛತ್ರ ಸಿಗುರಿಯು ಜನ- ಸ್ತೋಮ ಪತಾಕೆ ತೋರಣವು ಹೇಮದ ಕಂಚುಕಿ ಈಟಿ ಗುಣ- ಧಾಮನ ಬಿರುದುಗಳ್ ಕೋಟಿ ಆ ಮಹಾಭೇರಿ ಪಟಹ ನಿಸ್ಸಾಳಕ ಸಾಮಗಾನ ಸಾಮ್ರಾಜ್ಯವೋಲಿಹುದು3 ಬಾಲರು ವೃದ್ಧ ಯೌವನರು\ಜನ- ಜಾಲವೆಲ್ಲರು ಕೂಡಿಹರು ಲೋಲ ಸ್ರೀಮುಂದ್ರಾಂಕಿತದಿ ಬಹು ವಿ- ಶಾಲ ದ್ವಾದಶನಾಮ ಮುದದಿ ಆಲಯದೊಳಗಿಹ ಬಾಲಕಿಯರು ಸಹ ಸಾಲಂಕೃತ ಸಮ್ಮೇಳದಿ ನಲಿವರು4 ಒಂದು ಭಾಗದಿ ವೇದಘೋಷ ಮ- ತ್ತೊಂದು ಭಾಗದಿ ಜನಘೋಷ ಇಂದಿನ ದಿನದತಿಚೋದ್ಯ ಏ- ನೆಂದು ವರ್ಣಿಸುವದಸಾಧ್ಯ ಚಂದಿರಮುಖಿ ಯಾರೆಂದೆನಗುಸುರೆಲೆ ಮಂದರಧರ ಗೋವಿಂದನ ಮಹಿಮೆಯ5 ಊರ್ವಶಿ : ಕೇಳಿದ್ಯಾ ನಳಿನಾಕ್ಷಿ ಶ್ರೀಹರಿಲೀಲೆ ಪೇಳಲೇನದಾ ಮೂರ್ಲೋಕದೊಳಗೀ ವಿ- ಶಾಲವ ನಾ ಕಾಣೆಪ. ಸೋಜಿಗ ಸೌಭಾಗ್ಯ ಸಂಪದಕಿದು ಬೀಜ ಕಾಣೆಲೆ ರಾಜೀವನಾಭನ ಪೂಜಾವಿನೋದದಿ ರಾಜವದನೆ ವನಭೋಜನದಿಂದಿನ1 ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹ ಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹ ರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು2 ನೂತನವೆಂದು ನೀ ಪೇಳುವಿ ಚಂದಿರ ಮುಖಿ ಜನಸಂದಣಿಗಳು ಮಹಾ ಮಂದಿ ಓಲೈಸುವರಿಂದು ಮುಕುಂದನ3 ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆಪ. ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆ ಕಾಣುವ ಯೋಗಭೋಗ1 ಎನಗತಿ ಮನವು ನಿನಗತಿ ಛಲವು ಜನುಮಾಂತರ ಪುಣ್ಯವೈಸೆ ನೀ2 ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾ ಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾಪ. ಅನವರತದಿಂದ ಬರುವ ಪುರುಷನಲ್ಲ ಮೀನಕೇತನ ಶತರೂಪ ಕಾಣೆ1 ನೂತನ ಪುರುಷನಿವನ್ಯಾರೆಂದರಿಯೆನಮ್ಮಾ ಶಾತಕುಂಭದ ಮಂಟಪವೇರಿ ಬರುವನಮ್ಮಾ2 ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾ ತರತರ ರತ್ನವರದ ಬಾಯೊಳಿರುವದಮ್ಮಾ3 ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾ ಪರಮ ಪುರುಷನಂತೆ ತೋರುವನು ಅಮ್ಮಾ4 ಬಾಲಾರ್ಕನಂತೆ ಮುಖ ಪ್ರಜ್ವಲಿಪುದು ನೀಲಮಾಣಿಕ್ಯ ಕಾಂತಿಯ ಸೋಲಿಪುದು5 ತೋರಲರಿಯೆ ಕಾಲಿಗೆರಗುವೆನು ಪೇಳಬೇಕು ಸಖಿಯೆ6 ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾ ಬೆರಳೊಳು ವಜ್ರದುಂಗುರವನಿಟ್ಟವನಮ್ಮಾ7 ವರರತ್ನಖಚಿತದಾಭರಣದಿಂದ ಮೆರೆವ ಚರಣ ಸರೋಜದೊಳು ರೇಖೆಯಿಂ ಶೋಭಿಸುವ 8 ವಲ್ಲಭೆಯರ ಸಹಿತುಲ್ಲಾಸದಿ ಬರುವ ಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ9 ಬಲ್ಲಿದ ಪುರುಷನಿವನೆಲ್ಲಿಂದ ಬಂದ ಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ10 ಊರ್ವಶಿ : ನೋಡು ನಿತ್ಯಾನಂದಕರನ ಮೂಡಗಿರಿಯಿಂದೋಡಿ ಬಂದನ ನೋಡೆಪ. ಛಪ್ಪನ್ನೈವತ್ತಾರು ದೇಶ ಸರ್ಪಶೈಲ ರಾಜವಾಸ ಚಪ್ಪರ ಶ್ರೀ ಶ್ರೀನಿವಾಸ1 ತಿರುಗುತ್ತಿಪ್ಪಾ ತಿರುಮಲೇಶ ಶರಣ ರಾಮನ ಭಕ್ತಿಪಾಶ ದುರುಳಿನಲಿ ನಿಂದಿರ್ಪಶ್ರೀಶ ತರಿಸುವನು ಕಾಣಿಕೆ ವಿಲಾಸ2 ಪಟ್ಟದರಸನಾದ ದೇವ ಸೃಷ್ಟಿಯಾಳುವಜಾನುಭಾವ ದೃಷ್ಟಿಗೋಚರವಾಗಿ ಕಾಯ್ವ ಇಷ್ಟವೆಲ್ಲವ ಸಲಿಸಿ ಕೊಡುವ 3 ಊರ್ವಶಿ : ಬಂದ ಗೋವಿಂದ ಸಾನಂದದಿ ಭಕ್ತರ ವೃಂದ ನೆರಹಿ ವನಕೆ ಅಂದಣವೇರಿ ಮುಕುಂದನೊಲವಿನಲಿ ಕುಂದಣ ಮಂಟಪವೇರಿ ಮತ್ತೊಬ್ಬನು ಸಂದರುಶನವಂ ನೀಡುತ ಯಿಬ್ಬರು ಒಂದಾಗುತ್ತಾನಂದವ ಬೀರುತ್ತ 1 ಅಕ್ಕ ನೀ ನೋಡು ಬಹುಮಾನದಿ ಸಿಕ್ಕಿದಿ ಬಿರುದು ಪೊತ್ತಾ ಉಕ್ಕುವದತಿ ತೋಷ ಸ್ತುತಿಪಾಠಕ ಜನಗಳ ಮಿಕ್ಕಿ ನೊಡುವ ನೋಟಕೆ ಮನಸಿನೊಳು ಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ 2 ಪವಿತ್ರ ನಿಶಾನಿಧಾರಣಾ ಪವಿತ್ರಗೈಯುವ ಕಾರಣ ಮಿತ್ರಮಂಡಳವನು ಮೀರಿ ಪೊಳೆವುತಿಹ ರತ್ನಖಚಿತ ಮಂಟಪದಲಿ ಮಂಡಿಸಿ ಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವ ಕೀರ್ತಿಯ ಧರಿಸಿ ಜಗತ್ರಯಪಾವನ 3 ನಿಸ್ಸಾಳ ಪಟಹ ಭೂರಿ ಜನ ಜಾಲ ಕೂಡಿರುವ ಮೇಳವಿಸುತ್ತನುಕೂಲಿಸಿ ಬಹು ಬಿರು ದಾಳಿಗೆ ಸಂಭ್ರಮದೇಳಿಗೆಯಿಂದಲಿ ಕೋಲು ಪಿಡಿದು ಓಹೋಯೆಂಬಂಥ ವಿ- ಶಾಲ ಭಕ್ತರ ಮೇಲು ಸಂತೋಷದಿ 4 ದೇಶದೇಶದ ಜನರು ನಾನಾ ವಿಧ &ಟಿ
--------------
ತುಪಾಕಿ ವೆಂಕಟರಮಣಾಚಾರ್ಯ
ಪಂಚರೂಪಾತ್ಮಕ ನೀನೇ ಈ ಪಾಂಚಭೌತಿಕ ದೇಹದಿ ಸಂಚರಿಸೂವೆ ಪ ಸ್ಥೂಲರಸವನು ಇತ್ತು ಸಲಹೂವೆ ಅ.ಪ ರಸಪಾಯುಆಪಜಿಹೆÀ್ವನಾಸಿಕ ಗಂಧ ಪೃಥುವಿ ಉಪಸ್ಥಯುಕ್ತ ಕೋಶವಹುದಯ್ಯ ಆ ಶನೈಶ್ವರ ವರುಣ ಭೂದೇವಿಯಿಂದಲಿ ಸೇವಿಪ ಸತತ ಲೇಶವಾದರು ಬಿಡದೆ ತಾ ಖಂಡಾಖಂಡ ರೂಪದಿ ದೇಶ ಕಾಲಗಳಲ್ಲಿ ನೆಲೆಸಿ ಕೋಶಕಾರ್ಯವ ಗೈವೆ ಪ್ರಾಣನಿಂ ಉಭಯಪಕ್ಷಗಳು ಧೇನಿಸುತಿಹರು ಭುಜದ್ವಯ ಶ್ರೀಶ ನಿನ್ನಯ ಮಧ್ಯದೇಶವೆ ಈ ಶರೀರದÀ ಮಧ್ಯಭಾಗವು ಪ್ರಸಿದ್ಧ ಪುರುಷನೆ ನಿನ್ನಿಂದೋಷಧಿಗಳು ಓಷಧಿಗಳಿಂದನ್ನವೆಲ್ಲವು ಪೋಷಣೆ ಎಲ್ಲ ಅನ್ನದಿಂದಲೆ ದೋಷದೂರ ನೀನನ್ನದನ್ನದಾ1 ಪಾಣಿತ್ವಗ್ವಾಯು ಸ್ಪರ್ಶ ನೇತ್ರ ತೇಜ ಪಾದರೂಪಗಳಿಂದಲಿ ಕಾಣಿಸಿಕೊಳ್ಳುವುದು ಪ್ರಾಣಮಯದ ಕೋಶವು ತಾನಲ್ಲಿಹ ಪ್ರದ್ಯುಮ್ನ ಮೂರುತಿ ಸತತ-ಗಣಪತಿ ಅಗ್ನಿ ವಾಯು ಮರೀಚಿಗಳೆಲ್ಲರೂ ಸನ್ನುತಿಪರೋ ಪ್ರಾಣಾಧಾರನಾಗಿಹೆ ತ್ರಾಣ ನಿನ್ನಿಂದ ಸ್ಥೂಲದೇಹಕೆ ಅ- ಪಾನ ನಿಂದೊಡಗೂಡಿ ನೆಲೆಸಿಹೆ ಪ್ರಾಣಪತಿ ಪ್ರದ್ಯುಮ್ನ ನಿನ್ನಯ ಶಿರದ ಸ್ಥಾನವು ಪ್ರಾಣನಲ್ಲಿಹುದೋ ದಕ್ಷಿಣೋತ್ತರಪಕ್ಷವಿರುತಿಹುದೋ ಕಾಣಿಪುದು ಮಧ್ಯದೇಶವು ಆಗಸದೊಳು ಉ- ದಾನ ವಾಯುವಿನಲ್ಲಿ ಇರುತಿಹುದೋ ಧೇನಿಪೋರು ಪೃಥುವಿಯು ಪಾದವೆಂಬುದು ಸ- ಮಾನ ವಾಯುವಿನಲಿ ಇರುತಿಹುದು ಜ್ಞಾನ ರೂಪದಿ ಈ ಪರಿಯಲಿ ರೂಪವಿರುತಿಹುದು ಪ್ರಾಣಿಗಳಿಗಾಯುಷ್ಯವಿತ್ತು ಪ್ರಾಣಪ್ರೇರಕನಾಗಿ ಪೊರೆಯುವೆ ಪ್ರಾಣಧಾರಣೆ ನಿನ್ನದಯ್ಯಾ ಪ್ರಾಣನುತ ಪ್ರದ್ಯುಮ್ನಮೂರುತೆ2 ತತ್ವಯುತವಾಕ್ಯೋಕ್ತಾಗಸ ಶಬ್ದ ಈತೆರ ಯುಕ್ತವಾದೀ ಕೋಶವು ಇದಕೆ ಖ್ಯಾತವಾದ ಮನೋಮಯ ಕೋಶದೊಳು ಸತತ ರುದ್ರೇಂದ್ರಾದಿ ಸುರರೆಲ್ಲರು ವಂದಿಸುತಿಹರು ಖ್ಯಾತ ಸಂಕÀರುಷಣನೆ ಖಂಡಾಖಂಡರೂಪದಿ ನೆಲೆಸಿ ಕೋಶದಿ ಪ್ರೀತಿಯಿಂದಲಿ ವ್ಯಾನನೊಡಗೂಡಿ ನೀನೆ ಯಜ್ಞಭುಕುವು ಯಜುರ್ವೇದವೆ ನಿನ್ನ ಶಿರವಹುದು ಶ್ರುತಿಗಳೊಳು ಭುಜದ್ವಯಂಗಳಾಗಿಹುದು ನುತಿಪ ಪಾಂಚರಾತ್ರಾಗಮ ವೆಂಬುದೆ ನಾಮಕಂಗಳೆನಿಪುದೆ ನಿನ್ನ ಪಾದದ್ವಯಂಗಳು ಖ್ಯಾತ ನಿನ್ನಯ ರೂಪ ಮಹಿಮೆಯ ತಿಳಿಯಲಸದಳವೋ ಜಾತರಹಿತ ನಿನ್ನ ವರ್ಣಿಸೆ ಮಾತು ಮನಸಿಗೆ ನಿಲುಕದಂತಿಹೆ ಖ್ಯಾತ ನೀನಹುದೊ ಮನೋಮಯ ಪ್ರೀತಿಯಿಂದಲಿ ಸಲಹೋ ಎನ್ನನು 3 ಮಹತ್ತತ್ವ ಪ್ರಾಚುರ್ಯದಿಂದಿಹ ಈ ವಿಜ್ಞಾನಮಯಕೋಶದಿ ಶ್ರೀಹರಿ ವಾಸುದೇವಾ ನೀನೆ ನೆಲೆಸಿಹೆ ಅಹರಹ ಬ್ರಹ್ಮ ವಾಯುಗಳಿಂದಲಿ ಮಹಾಪೂಜೆ ವಂದನೆಗೊಳುತಿಹೆ- ಖಂಡಾಖಂಡದಿ ತುಂಬಿಹೆ ದೇಹದೊಳು ಉದಾನನಿಂದೊಡಗೂಡಿ ಸಹಾಯನಾಗಿಹೆ ಜೀವಿಗಳಿಗೆ ಬಾಹ ದುರಿತದಿಂ ಪಾರುಗಾಣಿಸೋ ದೇಹ ದೇಹಿಯ ರೂಪ ನೀ ಸ್ವಗತಭೇದವಿವರ್ಜಿತನೆ ಶಿರವೆ ನಿನ್ನಯ ಶ್ರದ್ಧವೆಂಬೊರು ಮಹಾ ಭುಜಂಗಳೆ ಋತುಸತ್ ಎಂದೆನಿಸಿಕೊಳುತಿಹುದು ಇಹುದು ಮಧ್ಯದೇಶವೆ ಜಗಕೆ ಆಶ್ರಯವೆನಿಪ ಯೋಗಾವು ಮಹವೆಂಬುದೆ ಪಾದವೆನಿಸಿತು ಸೂರ್ಯತೇಜದೊಳು ಮಹಾ ಪ್ರಳಯದಿ ಉದರದೊಳಿಟ್ಟು ಇಹಪರದಿ ರಕ್ಷಿಸುವೆ ದೇವ4 ನಂದಮಯ ಕೋಶವು ತನ್ಮಯ ಅವ್ಯಕ್ತತತ್ವದಿಂದಲಿ ನನ್ನೀಯಿಂದ ಆನಂದಮಯ ಮೂರುತಿ ನಾರಾಯಣನೀ ಕೋಶಾಂತರ್ಗತನು ನೀನೆ ಸಮಾನನೊಡಗೂಡಿಹೆ ಅನಾದಿಲಿಂಗವ ಭಂಗಗೈಸುವಳೋ ಘನಮಹಿಮ ನಿನ್ನ ಅನುಸರಿಸಿ ತಾನಿಪ್ಪಳೋ ಛಿನ್ನ ಭಕ್ತರಿಗೊಲಿಯಳೋ ಅವಿ ಚ್ಛಿನ್ನ ಭಕ್ತರ ಜನನಿ ಎನಿಪಳೋ ಪ್ರಾಪ್ಯನು ಎಂದು ಪ್ರಿಯವೆಂದು ಘನ ದಕ್ಷಿಣೋತ್ತರ ಪಕ್ಷವೆನಿಪೋವು ತನ್ನ ಮಧ್ಯದ ಪ್ರದೇಶವೆಂಬೋದು ಜ್ಞಾನ ಸುಖ ಆನಂದ ಪಾದಗಳು ಬ್ರಹ್ಮನಾಮಕ ವಾಯುವೆಂಬುವರೋ ಆನಂದಮೂರುತಿ ಮಹಿಮೆ ಎಂತಿಹುದೋ ಭಿನ್ನನಾಮದಿ ಕರೆಸುತಲಿ ತಾ ಅ ಭಿನ್ನನಾಗಿ ಚರಿಸಿ ಕೋಶದಿ ಘನಕಾರ್ಯವ ನಡೆಸುತಿರ್ಪೆ ಪನ್ನಗಾದ್ರಿ ಶ್ರೀ ವೇಂಕಟೇಶನೆ 5
--------------
ಉರಗಾದ್ರಿವಾಸವಿಠಲದಾಸರು
ಪರಮ ಸುಗುಣಸಾಂದ್ರ ಗುರುರಾಘವೇಂದ್ರ ಪ ಕರುಣಾಳೋ ಮುನಿ | ವಂಶಸುಧಾಕರ | ಗುರುರಾಜ ಪ್ರಭೋ | ಶ್ರೀ ರಾಘವೇಂದ್ರ ಅ.ಪ ಮುರುಕುಮಂಟಪದೊಳು | ಹರಕುಚಿಂದಿಯನ್ಹೊದ್ದು | ಉರಿಯ ಬೆಳಕಿನಲ್ಲಿ | ಪರಿಮಳ ರಚಿಸಿದೆ || ಗುರುಗಳಾಕ್ಷಣ ಕಂಡು | ಪರಮಸಂಭ್ರಮದಿಂದ | ಪರಿಮಳಾಚಾರ್ಯನೆಂಬ | ಬಿರುದಿತ್ತು ಕರೆದರೊ 1 ಜಡಮತಿ ಬ್ರಾಹ್ಮಣ | ಮಿಡುಕಿ ನಿರೂಪಿಸೆ | ವಡನೆ ಗಂಧವ ತೇದೆ | ಅನಲನ ಜಪಿಸುತೆ || ಒಡಲ ಬೇಗೆಯಿಂ ಜನರು | ಬಡಬಡಿಸಿದ ಕಂಡು | ಕಡಲರಸನ ದಯದಿ | ಕಡುಶಾಂತಿ ಇತ್ತೆಯೊ2 ಬಾದರಾಯಣಮುನಿ | ಭೇದಮತವ ಬಿತ್ತೆ | ಮೋದತೀರ್ಥರು ತರುವ | ಸಾದರಗೈದರೊ || ಸ್ವಾದಫಲಂಗಳು | ನಿನ್ನಿಂದ ತೋರ್ದವು | ಸಾಧುಜನಾರ್ಚಿತ | ಶ್ರೀಶಕೇಶವಪ್ರಿಯ 3
--------------
ಶ್ರೀಶ ಕೇಶವದಾಸರು
ಪರಮಾತ್ಮ ದಿವ್ಯಚರಣಾ ಭಜಿಸುವೆವು ಜ್ಞಾನ ಪೂರ್ಣ ನೀ ತೋರ್ಪುದಯ್ಯ ಕರುಣಾ ತಾಪ ಹರಣಾ ಆನಂದ ರೂಪ ತಾಣಾ ನಾರಾಯಣಾತ್ಮಪೂರ್ಣ ನಿನ್ನಿರವೇ ಜಗವಿದೆಲ್ಲ ನಿನ್ನರಿವೇ ಜೀವರೆಲ್ಲಾ ನಿನ್ನಿಂದೆ ಸುಖವಿದೆಲ್ಲಾ ನೀನೆ ಇದೆಲ್ಲಾ ದೇವಾ ನೀ ಸತ್ಯ ನಿರ್ವಿಕಾರ ನೀನಾತ್ಮರೂಪಸಾರಾ ನೀ ಪರಮ ಮೋಕ್ಷತಾಣಾ ಮರೆತಿರಲು ಜೀವ ನಿನ್ನ ದೊರೆಯುವುದೆ ಶಾಂತಿ ನಿನ್ನ ಪರಿತಾ¥ಬಿಡುತ ಮುನ್ನಾ ತಿರುಗುವನೋ ಜನ್ಮ ಜನ್ಮ ಗುರು ಶಂಕರಾರ್ಯ ನಿನ್ನ ಶರಣುಹುದೆ ಶಾಂತಿತಾಣ ನೀ ಸರ್ವರಾತ್ಮಪೂರ್ಣ
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಮಾನುಗ್ರಹ ಮಾಡು -ಈ ತರಳನ ದಯದಿಂ ನೋಡು ಪ ನರಹರಿ ನೀನಲ್ಲವೆ ಕರುಣಾಳು ಅ.ಪ ಅನ್ನ ಸೇರಲಿಲ್ಲವಂತೆ -ಮಲಗಿ ನಿನ್ನಿಂದಲಿ ಹೀಗಿಹನಂತೆ ಘನ್ನಮಹಿಮ ನಿನ್ನವರಿಗೆಲ್ಲ -ಈ ಬನ್ನ ನ್ಯಾಯವೆ ಪ್ರಸನ್ನ ನೃಸಿಂಹ 1 ತುಡುಗಾಟಗಳಾಡಿ ಬಳಲಿ -ಈ ಹುಡುಗ ಮನೆ ಮನೆಯ ತೊಳಲಿ ಕಡುಭೀತಿಯ ಹೊಂದಿರುವ ನಾವು ನಿ- ನ್ನೊಡವೆಯಲ್ಲವೆ ಒಡೆಯ ನರಹರಿಯೆ 2 ಔಷಧ ಪಥ್ಯಗಳೇಕೆ -ನಿ ರ್ದೋಷ ನೀನೊಳಗಿರಲಿಕ್ಕೆ ಶೇಷಶಯನ ಗುರುರಾಮವಿಠಲ ಪÉೂೀಷಿಸುವನು ನೀನೆ ನೀನೆ ನಿಜ3
--------------
ಗುರುರಾಮವಿಠಲ
ಪವಮಾನ - ಪವಮಾನ - ಪವಮಾನ ಪ ಪ್ರಧಾನ ಮರುತ ನಿ | ನ್ನಾಧೀನವು ಜಗ ನಿನ | ಗೇನು ಬೇಡೆ ಸುಜ್ಞಾನ ವೀವುದೆಂ | ದಾ ನಮಿಸುವೆನೊ |ಗಾನ ಲೋಲ ಹರಿಗಾನಕೆ ಮನ್ಮನ | ಪೋಣಿಸುತನುದಿನ | ಪಾಲಿಸು ಪ್ರಾಣಾ ಅ.ಪ. ಮಣಿ ಭವ ಸಿಂಧು ಇಂದಿರೆ ಲೋಲನಅಂದ ಪದಾಬ್ಜಾನಂದದಿ ತುತಿಪಾನಂದೈಶ್ವರ್ಯವ ಇಂದೆ ಪಾಲಿಸಿ ಪೊರಿಮಂದಜಾಸನ ಸರಿ | ವಂದೇ ಅಸುರಾರಿ 1 ವಜ್ರ ಗರ ಅಧ್ವರ ಕರಿ ಸಿರಿ ಭೃಂಗ ಸಿರಿ ರಂಗನ ತೋರಿಸು ಎಂಬೆನು ಜೀಯಾ | ನಮಿಸುವೆನು ಹರಿಪ್ರಿಯಾ 2 ಕಲಿ ಪ್ರಾಬಲ್ಯ | ದೈತ್ಯರು ಎಲ್ಲ ವೈರಂಗಳೆಲ್ಲಸಾಧಿಸೆ ಬಲ್ಲ | ಮಣಿಮನ ಸೊಲ್ಲ | ಕೇಳುತಲೆಲ್ಲ ಬರುತಿಲ್ಲೆಲ್ಲ | ದುರ್ಮತಗಳ ಬೀರುತ ಬರುತಿರಲು |ಜಗಪುಸಿ ಎನಲು | ದೇವರಿಲ್ಲೆನಲು | ಐಕ್ಯ ಪೇಳಲುಜ್ಞಾನವಳಿಯಲು | ಸಜ್ಜನ ನೋಯಲು | ಮನವು ಕರಗಲುಹರಿಯು ಪೇಳಲು | ನೀ ಬರೊಸೊಲ್ಲು | ಎಲ್ಲೆಲ್ಲು | ಎಲ್ಲೆಲ್ಲು ||ತಪವನು ಮಾಡಲು | ನಡುಮನೆ ದ್ವಿಜನುವರ ಕೊಟ್ಟನು ತಾನನಂತೇಶ್ವರನುಕಂಬದ ಮೇಲೇ ರೋರ್ವ ಪೇಳಿದನುನಿನ್ನವತಾರ ವಿಚಾರವನು |ನೀನರಿದಂದೇ | ನಿನ್ನಿಂದೇ | ನಿನ್ನಿಂದೇ ||ದ್ವಿಜನಲಿ ಬಂದೆ | ಹುರಳಿಯ ತಿಂದೆ | ತಿಂತ್ರಿಣಿಯಿಂದೆ ಋಣ ತೀರಿ ತೆಂದೆ | ಹರಿ ಪ್ರೇಕ್ಷರಿಂದೆ | ಸನ್ಯಾಸ ಪೊಂದೆ ಗಂಗೆಯ ತಂದೆ | ಎನ ತಂದೆ | ಎನ ತಂದೇ ||ವ್ಯಾಸರ ಕಂಡುಪದೇಶವಗೊಂಡೆ | ಹೇ ಸಮೀರ ದು-ರ್ಭಾಷ್ಯವ ಖಂಡಿಸಿ ಶ್ರೀಶ ಸರ್ವೋತ್ತಮಆ ಶಿವ ಮುಖ ಹರಿ | ದಾಸರೆಂದು ಮ |ತೀ ಸಮಸ್ತ ಜಗ ಲೇಸು ಸತ್ಯವೆಂದುಪದೇಶಿಸಿದೆ ಗುರುವರ್ಯ | ಗುರುವರ್ಯ ||ಇಪ್ಪತ್ತು ಒಂದೆ | ಕು ಭಾಷ್ಯವ ಜರಿದೆಮುವತ್ತಾರೊಂದೆ | ಗ್ರಂಥವ ಮಾಡ್ಡೆಶಿಷ್ಯರಿಗ್ಹೇಳ್ದೆ | ಮಾಯವ ಜರಿದೆಉಡುಪಿಗೆ ಬಂದೆ | ಗೋಪಿಯಲಿಂದೆಕೃಷ್ಣನ ತಂದೆ | ಇಲ್ಲೆ ನಿಲಿಸಿದೆಅಷ್ಟ ಯತಿಗಳಿಗೆ | ಪಟ್ಟವಗಟ್ಟುತ | ಕೃಷ್ಣನಪೂಜೆ ನಿರ್ದಿಷ್ಟದಿ ನಡೆಸಿದೆ | ದುಷ್ಟಾದ್ವೈತವಕುಟ್ಟಿ ಸುಜನರುಗ | ಳಟ್ಟುಳಿ ಕಳೆಯೆ ವ |ರಿಷ್ಟರನೆಲ್ಲರ | ಕಟ್ಟಾಳೆನಿಸಿದೆ ||ದಿಟ್ಟ ಮೂರುತಿ ಜಗಜಟ್ಟಿ ಭೀಮಆನಂದತೀರ್ಥ ಗುರು ಗೋವಿಂದ ವಿಠಲನಹೃದದಿಷ್ಟಾನದಿ ತೋರಿಸೆಂದು ತವಪಾದಾಬ್ಜಕೆ ಶಿರ ಇಟ್ಟು ಬೇಡ್ವೆ ಋಜುವರ್ಯಗುರುವರ್ಯ | ಔದಾರ್ಯ | ಔದಾರ್ಯ 3
--------------
ಗುರುಗೋವಿಂದವಿಠಲರು
ಪೊರೆಯಮ್ಮ ವಾಣಿ ತರುಣಿ ವಿಧಿರಾಣಿ ರಮಣಿ ಪ. ಸರಸ್ವತಿ ನಿನ್ನನೇ ನೆರೆ ಭಜಿಸುತ್ತಿಹ ಅರಿಯದೀ ತರಳರಂ ಕರುಣದೊಳೀಕ್ಷಿಸು 1 ದೇವಿ ನಿನ್ನಿಂದ ಲೇ ಜೀವಕೋಟಿಗಳಿಂತು ಜೀವಿಪುದಾರೆಯೆ ದೇವಿ ಸಂಜೀವಿನಿ 2 ಜ್ಞಾನಾಧಿದೇವತೆ ಆನಂದಪ್ರದಾತೆ ಮುನಿಜನ ಸಂಸ್ತುತೆ ವನಜಜದಯಿತೇ 3 ಸದಯ ನೀಂ ದಯೆಗೈಯೆ ಸದಸದ್ವಿಚಾರಮಂ ಹೃದಯ ಸಂಶುದ್ಧಿಯಂ ಪದುಳಮಂ ಧೈರ್ಯಮಂ4 ದೇಶಸೇವೆಗೆಂದು ಆಶಿಪರೊಳಿಂದು ಶೇಷಗಿರೀಶನ ದಾಸರೆನಿಸೆಂದು 5
--------------
ನಂಜನಗೂಡು ತಿರುಮಲಾಂಬಾ
ಪ್ರಸನ್ನ ಶ್ರೀ ಬುದ್ಧ ಜ್ಞಾನಸುಖ ಬಲಪೂರ್ಣ ಅನಘ ಲಕ್ಷ್ಮೀರಮಣ ಅನುಪಮಾದ್ಭುತ ಶಿಶುರೂಪ ನಿರವಧಿಕ ಅಮಿತ ಕಲ್ಯಾಣಗುಣಧಾಮ ಬುದ್ಧ ಶರಣು ಮಾಂಪಾಹಿ ಪ ಮಾಧವ ಗೋವಿಂದ ಶ್ರೀಶ ವಿಷ್ಣೋ ಮಧುಸೂಧನ ತ್ರಿವಿಕ್ರಮ ಈಶ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭ ದಾಮೋದರ1 ವಾಸುದೇವ ಪ್ರದ್ಯುಮ್ನ ನಮೋ ಅನಿರುದ್ಧ ಪುರುಷೋತ್ತಮ ಅಧೋಕ್ಷಜ ನರಸಿಂಹ ಅಚ್ಯುತ ಶ್ರೀಕರ ಜನಾರ್ಧನ ಉಪೇಂದ್ರ ಹರಿ ಕೃಷ್ಣ 2 ಈಜಿ ನಿಂತು ಪೊತ್ತು ಮಣ್ಣೆತ್ತಿ ಎಲ್ಲರನು ಅಂಜಿಸಿ ಬೇಡಿ ಸುತ್ತಾಡಿ ಕಡಲ್‍ದಾಟಿ ರಂಜಿಸಿ ಮೋಹಿಸಿ ಬೋಧಿಸಿದ ವಿಪ್ರಸುತ ತ್ರಿಜಗದೀಶನೇ ಶ್ರೀಶ ಶರಣು ಮಾಂಪಾಹಿ 3 ವಿಶ್ವ ವಿಷ್ಣು ವಷಟ್ಕಾರ ಈಶಾವಾಸ್ಯವು ಸರ್ವ ಈ ಹದಿನಾಲ್ಕು ಭುವನಂಗಳು ಶ್ರೀವರನೇ ನೀ ಪರಮ ಮುಖ್ಯ ನಿಯಾಮಕನು ಸರ್ವದಾ ಅಚಿತ್ ವಸ್ತುಗಳಿಗೆ 4 ಜೀವರುಗಳ ಸತ್ತಾ ಪ್ರವೃತ್ತಿ ಪ್ರತೀತಿಗಳು ಸರ್ವೇಶ್ವರ ನಿನ್ನ ಅಧೀನವು ಸ್ವಾಮಿ ಸರ್ವಪಾಲಕತ್ವ ಗುಣ ನಿನ್ನದೇ ಆದುದರಿಂದ ಸರ್ವಜೀವರುಗಳ ಸ್ವರೂಪ ರಕ್ಷಿಸುತಿ 5 ಜೀವನ ಸ್ವರೂಪಾನುಸಾರದಿ ಮೂರು ವಿಧವು ಸರ್ವ ಹರಿಭಕ್ತರು ಮುಕ್ತಿಸುಖ ಯೋಗ್ಯರು ಸರ್ವ ಹರಿದ್ವೇಷಿಗಳು ತಮೋ ದುಃಖ ಯೋಗ್ಯರು ಸರ್ವದಾ ಸುಖದುಃಖ ಮಿಶ್ರ ಸಂಸಾರಿಗಳು 6 ಬೇವಿನ ಬೀಜಕ್ಕೆ ಸಕ್ಕರೆ ಲೇಪಿಸಲು ಬೇವು ದ್ರಾಕ್ಷಿಗೆ ಸಮ ಆಗುವುದು ಇಲ್ಲ ಬೇವು ಬೀಜವ ಸಕ್ಕರೆ ಪಾತ್ರೆಯಲಿ ಕಂಡ ಯಾವನೂ ಸ್ವೀಕರಿಸ ಎತ್ತಿ ಎಸೆವ 7 ತ್ರಯೀಪುರ ಬೇವುಗಳು ಸತ್ಯಧರ್ಮ ಸಕ್ಕರೆ - ಯೋಳೂ ಪೊಕ್ಕು ದ್ರಾಕ್ಷಿಯಾ ಪೋಲು ಇರೆ ಕಂಡು ಶ್ರೀಪ ನಿನ್ನ ಪಾಲಸಾಗರತಟ ಬಂದು ಶಂಭು ಶಿವ ಶಕ್ರಾದಿಗಳು ಪ್ರಾರ್ಥಿಸಿದರು 8 ಅದ್ರಿ ಚಾಪವನಿತ್ತಿ ತ್ರಿಪುರವ ಸುಟ್ಟ ಸನ್ನುತ ಇವಗೆ ನೀ ಪ್ರಭಂಜನ ಸಹ ಸಹಾಯ ಮಾಡಿದಿಯೋ 9 ಅಂದು ಭಸ್ಮವು ಆದ ತ್ರಿಪುರ ದೈತ್ಯರುಗಳು ಬಂದು ಪುನರ್‍ಜನಿಸಿ ವೈದಿಕ ಸದ್ಧರ್ಮದಲ್ಲಿ ಮುಕ್ತಿ ಯೋಗ್ಯರು ತಿಳಿವ ಬ್ರಹ್ಮ ವಿದ್ಯೆಯ ಕಲಿಯೆ ಸುರರು ನಿನ್ನಲ್ಲಿ ಪೇಳಿದರು 10 ಕಲಿಯುಗದಿ ಈ ತಮೋಯೋಗ್ಯ ದೈತ್ಯರಿಗೆ ಬೆಳೆಯುವುದು ಮೋಹವು ದ್ವೇಷ ಪರಿಪಾಕ ಮಿಳಿತವಾಗಲಿ ಕೂಡದು ಮುಕ್ತಿ ಯೋಗ್ಯರ ಸಹ ಒಳ್ಳೇ ಮುತ್ತಿನ ಸರದೋಳ್ ಮುಳ್ಳ ಬೀಜಗಳೇ ? 11 ಆ ತ್ರಿಪುರ ದೈತ್ಯರ ಪ್ರಮುಖನೂ ತಮೋಯೋಗ್ಯ ಧಾತ್ರಿಯಲಿ ಸೌದ್ಧೋದನ ಜಿನನೆಂದು ಪರಿವಾರ ಸಹ ಜನಿಸಿ ಮುಕ್ತಿಯೋಗ್ಯರ ತೆರದಿ ಚರಿಸಿದರು ಸ್ವಸ್ವ ಯೋಗ್ಯತೆ ಅತಿಕ್ರಮಿಸಿ 12 ದೇವವೃಂದದ ಪ್ರಾರ್ಥನೆ ಅರಿಕೆಯನು ಕೇಳಿ ದೇವವರೇಣ್ಯ ನೀ ಅಭಯವನಿತ್ತಿ ದಿವ್ಯ ಶಿಶುರೂಪವ ಪ್ರಕಟಿಸಿ ಆಗಲೇ ತ್ವರಿತ ಪೋದೆಯೋ ಆ ಜಿನನ ಮಂದಿರಕೆ 13 ಆಗಲೇ ಜಿನನಿಗೆ ಮಗು ಒಂದು ಹುಟ್ಟಿತ್ತು ಪೋಗಿ ನೀ ಆ ಮಗುವ ಮರೆಯಾಗಿಸಲು ಬೇಗನೆ ತೊಟ್ಟಿಲಲಿ ಮಲಗಿದಿಯೋ ವಿಭುವೇ ಜಗನ್ಮೋಹನ ಶಿಶುರೂಪ ಚಿನ್ಮಾತ್ರ 14 ಇದನ್ನರಿಯದೇ ಜಿನಾದಿಗಳು ನಿನ್ನನ್ನೇ ಜಾತವಾದ ತಮ್ಮ ಮಗುವೆಂದು ನೆನೆದು ಬಂಧು ಮಿತ್ರರ ಗುಂಪು ಸ್ತ್ರೀಯರೂ ಪುರುಷರೂ ಮುದದಿ ಕೊಂಡಾಡಿದರು ಪುತ್ರೋತ್ಸವವ 15 ಕದಳೀ ತೆಂಗು ಪೂಗಿ ಮಾವು ತೋರಣವು ವಾದ್ಯಂಗಳ ಅರ್ಭಟ ವೇದ ಘೋಷಗಳು ದೈತ್ಯ ವಿದ್ವಾಂಸರ ವಾದ ಮೀಮಾಂಸವು ಸುಧ್ವನಿಯಲಿ ಪಕಪಕಾ ಎಂದು ನಕ್ಕಿ ನೀನು 16 ಆಶ್ಚರ್ಯ ಏನಿದು ಹಸಿಮಗು ನಗುತಿದೆ ಹೇ ಚಿನ್ನ ನೀನ್ಯಾಕೆ ನಗುತಿ ಎಂದು ಕೇಳೆ ಬುದ್ಧ ನಿನ್ನ ಹೆಸರೆಂದು ಮೆಚ್ಚಲಾರೆನು ವೈದಿಕಕರ್ಮ ಎಂದಿ 17 ವೇದ ಅಪ್ರಾಮಣ್ಯ ಬೋಧಕವೆಂದು ತೋರುವ ಬೌದ್ಧಮತ ಪೇಳಿದಿ ದೈತ್ಯರ ಮೋಹಿಸಲು ಬೋಧಿಸಿದ ಮೋಹಕ ಮಾತು ಜಿನಾದಿಗಳು ಅದರಿಸದಿರೆ ಹರೇ ನೀ ಸುರರನ್ನ ಕರೆದಿ 18 ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ನೀನು ವೇದೋಕ್ತ ಸುರರನ್ನ ಸ್ಮರಿಸಿದಾಕ್ಷಣವೇ ಬಂದರು ಆ ಜಿನಾದಿಗಳಿಗೆ ಕಾಣಿಸುತ ಯುದ್ದಕ್ಕೆ ನಿಂತರು ನೀನು ಪ್ರೇರಿಸಲು 19 ವೇದ ವಿರುದ್ಧ ಮಾತುಗಳಾಡುತ ನೀನು ವೇದ ಅಪ್ರಾಮಣ್ಯ ವಾದಿಸುತ್ತಿ ಸದೆದು ಹಾಕುವೆವು ಎಂದು ಕೂಗುತ್ತ ಆಯುಧಗಳ ಪ್ರಯೋಗಿಸಿದರು ವಿಡಂಬನದಿ 20 ಮೋದಮಯ ಶಿಶುರೂಪ ಅಚ್ಯುತನೇ ನೀನು ಆ ದೇವತೆಗಳು ಪ್ರಯೋಗಿಸಿದ ಆಯುಧ ಒಂದನ್ನೂ ಬಿಡದೇ ನುಂಗಿ ನಗುತ ಎಲ್ಲಿ ಮಧುಸೂಧನ ವಿಷ್ಣು ಬರಲೀ ಅವ ಎಂದಿ 21 ಲೀಲಾ ವಿನೋದದಿ ಮತ್ತೊಂದು ರೂಪದಿ ನೀ ಪೊಳೆವ ಚಕ್ರವ ಪಿಡಿದು ಬಂದು ನಿಲ್ಲೆ ಸೊಲ್ಲು ಹೆಚ್ಚಾಡದೆ ಚಕ್ರವ ಕಿತ್ತುಗೊಂಡು ಒಳ್ಳೆ ಆಸನವೆಂದು ಅದರಮೇಲ್ ಕುಳಿತಿ22 ಸ್ವತಂತ್ರ ಪರಮಾತ್ಮ ನೀ ಸ್ವಸ್ವಯೋಗ್ಯ ಸಾಧನ ಪ್ರವರ್ತಕ ದೈತ್ಯರ ಮೋಹಕ್ಕೆ ಈ ಲೀಲೆ ಸಾಧು ನೀ ಪೇಳಿದ ಶಾಸ್ತ್ರ ಎನ್ನುತ ನಮಿಸಿ ಸುರರು ತಮ್ಮ ತಮ್ಮ ಸ್ಥಳಕೆ 23 ಎಲ್ಲೂ ಕಂಡಿಲ್ಲವು ಇಂಥಾ ಮಹಾತ್ಮನ ಎಲ್ಲ ದೇವತೆಗಳು ಸೋತು ಓಡಿ ಹೋದರು ಬಲಿಷ್ಟ ತತ್ವವು ಶಿಶುರೂಪ ಬುದ್ಧನದೇ ಎಲ್ಲ ದೈತ್ಯರು ಹೀಗೆ ನಿಶ್ಚೈಯಿಸಿಕೊಂಡರು 24 ಅಭಾವ ಕ್ಷಣಿಕ ಶೂನ್ಯವಾದ ಮೋಹಿತರಾಗಿ ಸ್ವಭಾವ ಯೋಗ್ಯತೆಯಂತೆ ವೈದಿಕವ ತೊರೆದು ಬುದ್ಧ ಆ ಜಿನಾದಿ ದೈತ್ಯರ ಸಮೂಹವು ತಬ್ಬಿಕೊಂಡರು ತಮಸ್ ಸಾಧನ ಮತಿಯ 25 ಜಿನಾದಿ ದೈತ್ಯರು ಮೇಲ್ವಾರಿ ಅರ್ಥವ ಮನದಲ್ಲಿ ನಿಶ್ಚಯಿಸಿ ಮೋಹ ವಶರಾಗೇ ನಿನ್ನಲ್ಲಿ ಸ್ವರೂಪತಹ ಭಕ್ತಿಯುತ ಸುರರು ಧನ್ಯರಾದರು ಕೇಳಿ ಯಥಾರ್ಥ ತಿಳಕೊಂಡು 26 ಏನೆಂದು ವರ್ಣಿಪೆ ಪ್ರಶಾಂತ ವಿದ್ಯೆಯ ಸೊಬಗು ಆನಂದ ಸೌಭಾಗ್ಯ ಸಮೃದ್ಧಿ ಸಿದ್ಧಿಪುದು ಮನ ಪುಳಕವಾಗುತ್ತೆ ಜ್ಞಾನ ತೇಜಃಪುಂಜ ನಿನ್ನ ದಯದಿಂದ ಸುಖ ಅನುಭವಕೆ ಸುಲಭ 27 ಅದೋಷನು ನೀನು ದೋಷ ಅಭಾವವಾನ್ ಸದಾ ನೀನು ಭಿನ್ನನು ಜಡ ಜೀವರಿಂದ ಮೋದಮಯ ಅನಂತಕಲ್ಯಾಣಗುಣಪೂರ್ಣ ನೀ ಆದುದರಿಂ ಅ ಎಂದು ನೀನೇವೇ ಜÉ್ಞೀಯ 28 ಭವ್ಯವಾಗಿರುವುದು 'ಅ' ಯಿಂದ ಜಗತ್ತು ಭವ್ಯ ಎಂದರೆ ಉತ್ಪಾದ್ಯ ಎಂಬುವುದು ಅ ಎಂಬ ನಿನ್ನಿಂದ ಉತ್ಪಾದ್ಯ ಜಗತ್ತನ್ನ ಅಭಾವವೆಂದಿ ವಿಭುವೇ ಸತ್ಯಜ್ಞಾನ 29 ಕಾಲ ಅವಯವ ಕ್ಷಣಕ್ಕೆ ಕ್ಷೋಣಿಯು ಸ್ಥಿರವಾಗಿ ಇರುತಿದೆ ಅದರೂ ಕ್ಷಣ ಸ್ಥಾಯಿಯಾಗಿರುವ ಕ್ಷಣದ ಸಂ¨ಂಧದಿ ಜಗತ್ ಕ್ಷಣಿಕವು ಎಂದು ನೀ ಪೇಳಿದಿಯೋ ಧೀರ 30 ಶಂ ಎಂದರೆ ಸುಖವು ಉ ಉತ್ತಮತ್ವವು ಶಂ ಸಹ ಉ ಸೇರಿ ಶೂ ಆಯಿತು ಶೂ ಎಂಬ ಸುಖರೂಪ ಅನುತ್ತಮೋತ್ತಮ ನೀನೇ ಶೂ ವಾಚ್ಯ ನೀನೇವೇ ಅನ್ಯರು ಅಲ್ಲ 31 ಶೂನ್ಯ ಎಂಬುವರು ಜ್ಞಾನವಂತರು ಹೀಗೆ ವಿಗ್ರಹ ಮಾಡುವರು ಆನಂದಮಯನಾದ ಅನುತ್ತಮೋತ್ತಮ ನಿನ್ನ ಅನುಗ್ರಹದಿಂದ ಜಗತ್ ರಕ್ಷಣೆ ನಿಯಮನವು 32 ಜ್ಞಾನಪೂರಿತ ಅರ್ಥ ಪೇಳಿದ ನಿನಗೆ ನಮೋ ಅನ್ಯ ವಸ್ತುಗಳಿಗಿಂತ ಅತ್ಯಂತ ಪ್ರಿಯತಮನೇ ಜನ್ಮಾದಿಕರ್ತನೇ ಪೂಷ ಪೋಷಕನೇ ನಮಸ್ತೇ 33 ದೇವವೃಂದಕ್ಕೆ ನೀ ಪ್ರಶಾಂತವಿದ್ಯೆಯ ಪೇಳಿ ಅವರುಗಳ ಸಹ ನಿಂತು ಮತ್ತೊಂದು ರೂಪದಿಂದ ದಿವಪರ ಸ್ವಸ್ಥಾನ ಸೇರಿದಿಯೋ ಸುಖಮಯನೇ ಭಾವಕರು ಸ್ಮರಿಸೆ ಸರ್ವವಿಧದಲಿ ಒಲಿವಿ 34 ಬುದ್ಧಾವತಾರ ಪರಮಾತ್ಮ ಚಿದಾನಂದಮಯ ಶ್ರೀಶ ದೇವತಾ ವೃಂದಕ್ಕೆ ಸುಬೋಧ ಮಾಡಿದ್ದು ಸಾಕಲ್ಯ ತಿಳಿಯಲಸಖ್ಯ ಶ್ರೀವೇದವ್ಯಾಸ ಶ್ರೀಶ ಶ್ರೀಮಧ್ವ ಆನಂದತೀರ್ಥರ ಅನುಗ್ರಹದಿಂದಲೇ ಯಥಾಯೋಗ್ಯ ತಿಳುವಳಿಕೆ ಉಂಟಾಗುವುದು 35 ವೇದಾರ್ಥ ನಿರ್ಣಾಯಕ ಸೂತ್ರಗಳ ಮಾಡಿ ಇತಿಹಾಸ ಪುರಾಣಾದಿಗಳ ನಮಗಿತ್ತ ವೇದವ್ಯಾಸ ಸುಹೃತ್ ಬುದ್ಧನು ನೀನೇವೇ ಸತ್ಯಧರ್ಮರಿಗೆ ಸೌಭಾಗ್ಯ ಸುಖದಾತ 36 ಜ್ಞಾನಭಕ್ತ ಆಯುರಾರೋಗ್ಯ ಐಶ್ವರ್ಯ ಶ್ರೀಮಧ್ವ ಹನುಮಸ್ಥ ವನಜಭವ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಅನಿಮಿತ್ತ ಬಂಧು ಹರೇ ಕೃಷ್ಣ ರಾಮ ವೇದವ್ಯಾಸ ಬುದ್ಧಾವತಾರ ಮೋದಮಯ ಕರುಣಾಳು 37 -ಇತಿ ಶ್ರೀ ಬುಧ್ಧ ಪ್ರಾದುರ್ಭಾವ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ವೇದವ್ಯಾಸ ಪ್ರಥಮ ಆಧ್ಯಾಯ ಪ್ರಾದುರ್ಭಾವಸಾರ ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ ನಾರಾಯಣ ಸರ್ವ ಉರು ಗುಣಾರ್ಣವ ನಮೋ ಪಾರತಂತ್ರ್ಯಾದ್ಯಖಿಲ ದೋಷಾತಿ ದೂರ ಪರ ಬ್ರಹ್ಮ ಶ್ರೀ ರಮಣ ವಿಷ್ಣು ಸರ್ವೋತ್ತಮನೇ ಸೂರಿ ಜ್ಞಾನ ಪ್ರಾಪ್ಯ ನಿಗಮೈಕ ವೇದ್ಯ 1 ವಾಸುದೇವ ವೈಕುಂಠ ನಮೋ ತುರ್ಯ ಸಂಕರ್ಷಣ ಪ್ರದ್ಯುಮ್ನಾನಿರುದ್ಧ ತುರಗಾಸ್ಯ ಕಾರ್ದಮ ನಾಭಿಜಾತ್ರೇಯನೇ ಪರಮಾತ್ಮ ಉದ್ದಾಮ ಹರಿ ಶ್ರೀನಿವಾಸ 2 ಕೂರ್ಮ ಕ್ರೋಢ ನರಸಿಂಹ ವಾಮನ ಮುನಿಜ ರಾಘವ ಕೃಷ್ಣ ವನಜ ಕಲ್ಕೀಶ ಆನಂದ ಜ್ಞಾನಾದಿ ಗುಣಮಯ ರೂಪಗಳು ನಿತ್ಯ 3 ವಾರಿಜ ಭವಾಂಡವ ಸೃಜಿಸಿ ಅದರೊಳು ಪೊಕ್ಕು ಕೃತಿ ನಡೆಸಿ ಮೂರು ವಿಧ ಅಧಿಕಾರಿಗಳಿಗೆ ಗತಿ ಇತ್ತು ಮೂರು ವಿಧ ಜೀವರಿಗೆ ಯೋಗ್ಯ ಫಲವೀವಿ 4 ಯದಾ ಯದಾಹಿ ಸದ್ಧರ್ಮಕ್ಕೆ ಹಾನಿಯೋ ಅಧರ್ಮಕ್ಕೆ ವೃದ್ಧಿಯೋ ಆದಾಗ ಅವತರಿಪಿ ಸಾಧುಗಳ ಉದ್ಧಾರ ಪಾಪಿಗಳ ಪತನಕ್ಕೆ ಸದ್ಧರ್ಮ ಸ್ಥಾಪನೆಗೆ ಶ್ರೀಶ ಮುಕುಂದ 5 ಕಲಿಯ ಚಟುವಟಿಕೆಯಲಿ ವೈದಿಕ ಜ್ಞಾನ ಇಳೆಯಲಿ ಸುಜನರಲಿ ಕಡಿಮೆ ಆಗಿ ಶೀಲ ಗೌತಮ ಸಹ ನಿಧಾನ ತಪ್ಪಿ ಶಪಿಸೆ ಬೆಳೆಯಿತು ಅಜ್ಞಾನ ಕಲಿ ವಿಷ ಏರಿತು 6 ದೇವತೆಗಳಿದು ನಿನ್ನಲಿ ಪೇಳಿ ಪಾಥಿರ್üಸಲು ದೇವ ದೇವೋತ್ತಮ ನೀ ಅಭಯವನಿತ್ತು ಭುವಿಯಲಿ ಪರಾಶರ ಸತ್ಯವತಿ ಸುತನೆಂದು ಅವತಾರ ಮಾಡಿದಿ ಸಜ್ಜನೋದ್ಧಾರ 7 ವೃತತಿಜಾಸನ ಸುತ ವಸಿಷ್ಠ ಋಷಿಗಳ ಮಗ ಶಕ್ತಿ ಋಷಿಗಳ ಪುತ್ರ ಪರಾಶರ ಋಷಿಯು ಆ ತಪೋಧನ ನಿನ್ನ ಕುರಿತು ತಪಶ್ಚರಿಸಿದರು ಅಜ ನೀ ತನ್ನಲವತರಿಸು ಎಂದು 8 ವೇದ ವೇದಾಂಗ ಕೋವಿದ ಪರಾಶರರ ಶ್ರದ್ಧೆ ಶೀಲತ್ವವ ಮೆಚ್ಚಿ ನೀನು ಪೇಳ್ದಿ ವಸುರಾಜನ ಸುತೆ ಸತ್ಯವತಿಯ ಸುತನೆನಿಸಿ ಅವತಾರ ಮಾಡುವಿ ಎಂದು 9 ವಸುರಾಜ ಅಡವಿಯಲಿ ಬೇಟೆಯಾಡುವಾಗ ಇಚ್ಚೈಸಿ ಮಗ ತನ್ನ ರಾಣಿಯ ನೆನೆಯೇ ವಿಸರ್ಜನೆ ಆಯಿತು ರೇತಸ್ಸು ಅದನ್ನ ತನ್‍ಸತಿಗೆ ಕಳುಹಿಸಿದ ಪಕ್ಷಿ ಮೂಲಕ 10 ಶೇನಪಕ್ಷಿ ಅದನ್ನ ಕುಂಡದಲಿ ಹಿಡಕೊಂಡು ರಾಣಿಯ ಪಟ್ಟಣಕೆ ಹೋಗುವ ಮಾರ್ಗದಲಿ ಯ- ಶೇನಪಕ್ಷಿ ತಡೆದು ಯುದ್ಧ ಮಾಡಿತು 11 ಆಗ ವಸುರಾಜ ಕೊಟ್ಟ ಪೊಟ್ಟಣ ನೀರೊಳು ಬಿದ್ದು ಬಿದ್ದ ವೇಗದಲಿ ಎರಡಾಗಿ ಆಗ ಗಂಗೆಮಾತೆಯು ಪ್ರಸನ್ನಳಾಗಿ ಸಣ್ಣದರೋಳ್ ಆವಿಷ್ಟಳಾದಳು ಅದನ್ನ ಹೆಣ್ಣು ಮೀನೊಂದು ನುಂಗಿ ಗರ್ಭ ಧರಿಸಿತು 12 ಸರ್ವೋತ್ತಮನೇ ನಿನ್ನ ಅವತಾರ ಕಾಲದಲಿ ಗಂಗಾಧರಾದಿ ದೇವತೆಗಳು ತಪಸ್ ಮಾಡಿ ವರಗಳ ಹೊಂದುವುದು ಅನುಚಿತವೂ ಅಲ್ಲ ಆಶ್ಚರ್ಯವೂ ಅಲ್ಲ ಗಂಗಾಧರನೂ ತಪವಾಚರಿಸಿ ನಿನ್ನನುಗ್ರಹದಿಂ ಪುತ್ರನಾದ ಶುಕನಾಗಿ 13 ಮತ್ಸದ ಗರ್ಭವು ವರ್ಧಿಸಿತು ಆಗ ಬೆಸ್ತರು ಆ ಮೀನ ಹಿಡಿದು ಸೀಳೆ ಅದರ ಉದರದಿ ಎರಡು ಶಿಶುಗಳ ಕಂಡರು ಒಂದು ಹೆಣ್ಣು ಮತ್ತೊಂದು ಮಗು ಗಂಡು 14 ತಮ್ಮ ನಾಯಕ ದಾಸರಾಜನಲಿ ಪೋಗಿ ಆ ಮೀನುಗಾರರು ಶಿಶುಗಳ ಕೊಡಲು ಆ ಮತಿವಂತನು ವಸುರಾಜನಲಿ ಪೋಗಿ ಸಮಸ್ತವ ಪೇಳಿ ಮಕ್ಕಳ ಮುಂದೆ ಇಟ್ಟ 15 ವಸುರಾಜನು ವಿಷಯವ ಚೆನ್ನಾಗಿ ಅರಿತು ಶಿಶುಗಳು ತನ್ನದೇ ಎಂದು ತಿಳಿದು ಭಾಸ್ಕರೋಜ್ವಲ ಗಂಡು ತಾನು ಇಟ್ಟುಕೊಂಡು ಶಶಿಕಾಂತಿಯ ಮಾತ್ಸೇಯ ದಾಸನಿಗೆ ಕೊಟ್ಟ 16 ಶೀಲತ್ವ ಸುಗುಣತ್ವದಲಿ ಪ್ರಕಾಶಿಸುತ ಬೆಳೆಯುತಿಹಳು ದಾಸರಾಜನ ಗೃಹದಿ ಬಾಲೆ ಇವಳಿಗೆ ಸತ್ಯವತೀ ಎಂಬ ನಾಮವು ಬಲು ಪುಣ್ಯವಂತಳು ಸುಶುಭ ಲಕ್ಷಣಳು 17 ದಾಸನಾಯಕನ ಮನೆಯಲ್ಲಿ ಬೆಳೆವ ಕಾರಣ ದಾಸನು ನಾವಿಗನು ಆದ್ದರಿಂದ ಸುಶೀಲೆ ಈ ಸತ್ಯವತಿಯು ನಾವೆ ನಡೆಸುವಳು ವಸುರಾಜಪುತ್ರಿ ಇವಳಿಗೆ ಗರ್ವವಿಲ್ಲ 18 ಸಮುದ್ರ ಕುರಿತು ಪ್ರವಹಿಸುವ ಸೂರ್ಯಾತ್ಮಜ ಯಮುನೆಯ ದಾಟಲು ಹಡಗಿನಲ್ಲಿ ಕುಳಿತ ಆ ಮುನಿ ಪರಾಶರರಿಗೆ ಒದಗಿದಳು ಕಾಲ 19 ಶ್ರೀಶ ನಿನ್ನಯ ಮಾತು ನೆನೆದು ಪರಾಶರರು ಆ ಸತ್ಯವತಿಯನ್ನ ಮದುವೆ ಆಗಲು ಒಪ್ಪಲು ವಸಿಷ್ಠರು ಯಾಜ್ಞವಲ್ಕ್ಯಾದಿ ಮುನಿ ಸಭೆಯಲಿ ವಸುರಾಜನು ಧಾರೆ ಎರೆದಿತ್ತ ಮಗಳ 20 ನಾರದರ ವೀಣೆ ಸಂಗೀತ ಗಾಯನವು ಸುರ ಗಂಧರ್ವರ ಸುಸ್ವರ ಗಾನ ಸುರನಾರಿ ನರ್ತಕರ ಆನಂದ ನರ್ತನವು ಸರಸಿಜಾಸನ ಮುಖ ಸುರರ ಸ್ತೋತ್ರಗಳು 21 ನೀಲ ಮೇಘ ಶ್ಯಾಮ ಇಂದಿರಾಪತಿಯು ಕಲಿ ವಿದಾರಕ ವಿಜ್ಞಾನ ಭೋದಕನು ಇಳೆಯಲಿ ವ್ಯಾಸ ಅವತಾರ ಸಮಯವೆಂದು ಸುರರು ಕೂಡಿ ತುಂಬಿದರು 22 ನಿಮೇರ್ಘ ಹಿಮ ಆಗಲಿ ದೇಶ ಪ್ರಕಾಶಿಸಿತು ಮರಗದ ವರ್ಣದಲಿ ಜ್ವಲಿಸುವ ರೂಪ ಉರು ಸ್ವಕಾಂತಿ ಸಹಸ್ರ ಲಕ್ಷ ಕೋಟ್ಯಮಿತ ಸೂರ್ಯತೇಜಃ ಪುಂಜ ಅವತಾರ ಮಾಡಿದಿ 23 ಶೋಣಿತ ಸಂಬಂಧ ಇಲ್ಲವೇ ಇಲ್ಲ ಅಪ್ರಾಕೃತ ಚಿದಾನಂದ ಕಾಯ ಚಿಕ್ಕ ಬಾಲಗೆ ಅಂದು ಒಲಿದು ಕಂಬದಿ ಬಂದ ಶ್ರೀಕಾಂತ ನರಸಿಂಹ ಅವತಾರದಂತೆ 24 ತಂದೆ ತಾಯಿಲ್ಲದೆ ಪುಂ ಸ್ತ್ರೀ ಕೂಡದೆ ಅಂದು ಕಂಬದಿಂದ ಸ್ವೇಚ್ಛದಿ ಬಂದಿ ಇಂದು ಸ್ವತಂತ್ರದಿ ಸತ್ಯವತಿ ಋಷಿ ಮುಂದೆ ಬಂದು ಪ್ರಕಟಿಸಿದಿ ವ್ಯಾಸ ಅವತಾರ 25 ಶೋಣಿತ ರಹಿತ ಅಲೌಕಿಕವಾದರೂ ನೀ ಲೋಕ ರೀತಿಯಲಿ ಪುಟ್ಟಿದ ತೆರದಿ ಕಲಿ ಕಲಿ ಪರಿವಾರ ದುರ್ಜನ ಮೋಹಕ್ಕೆ ಮಾಲೋಲ ನೀ ವಿಡಂಬನ ಮಾಡಿ ತೋರ್ದಿ 26 ಅಂಕುಶ ಅಬ್ಜ ಧ್ವಜ ಚಕ್ರ ರೇಖ ಪದಯುಗ ಪದ್ಮ ಸುಖಜ್ಞಾನಮಯ ಜ್ಞಾನ ಸುಖದ ಧ್ಯಾನಿಪರ್ಗೆ ತಟಿತ್ ಪ್ರಭಾ ಜಟಾಮಕುಟ ಶಿರವು ಪ್ರಕಾಶಿಸುವ ಕಸ್ತೂರಿ ತಿಲಕ ಲಲಾಟ 27 ಸೃಷ್ಟ್ಯಾದಿಕರ್ತ ನಿನ್ನ ಭೃ ಚೆಂದ ನಿಖಿಳ ಇಷ್ಟಪ್ರದ ಅನಿಷ್ಟ ನಿವಾರಕ ನೋಟ ಕರ್ಣ ಕುಂಡಲದ್ವಯವು ಶ್ರೇಷ್ಠತಮ ತುಳಸೀ ದಳಗಳು ಕಿವಿಯೋಳ್ 28 ಸುಧಾರಸ ಸುರಿಸುವ ಶಶಿಕೋಟಿ ನಿಭ ಮುಖ ಸಂದರ್ಶನ ಸುಖ ಸಂದೋಹ ಈವುದು ಮಂದಹಾಸವು ನತಜನ ಶೋಕ ಕಳೆವುದು ಶುಭ ಲೋಹಿತೋಷ್ಟ್ರಗಳು 29 ಸುಂದರ ರೇಖಾತ್ರಯಯುತ ಕುಂಬುಗ್ರೀವದಿ ಕೌಸ್ತುಭ ಮಣಿಯು ಶ್ರೀ ದೇವಿಗಾಶ್ರಯ ವಿಶಾಲ ವಕ್ಷ ಸ್ಥಳದಿ ಚಿದ್ದಮಲ ಮೋದಮಯ ಶ್ರೀವತ್ಸ ಅಂಕ 30 ಪೊಳೆವ ರತ್ನದ ಹಾರಗಳು ಉರದೇಶದಲಿ ವಲಿತ್ರಯಾಂಕಿತ ಉಳ್ಳ ಉದರ ಸುಂದರವು ಕೀಲಾಲಜ ಭವಾಂಡವ ಪಡೆದ ನಾಭಿಯು ಬೆಳಗುತಿದೆ ಮೌಂಜಿಯು ಸುಪ್ರಕಾಶದಲಿ 31 ಸುಪವಿತ್ರ ಜ್ಞಾನ ತೇಜ ಕೃಷ್ಣಾಜಿನವು ಶ್ರೀಪ ನಿನ್ನಯ ದಿವ್ಯ ಯೋಗ ಅಸನವು ಉಪಮವಿಲ್ಲದ ಸುಂದರ ಕಟಿಜಾನು 32 ಉರು ಜಂಘಾ ಗುಲ್ಫ ಪದ್ಮಾಂಘ್ರಿ ಸೌಂದಂiÀರ್i ಉರು ಸುಶುಭ ಲಕ್ಷಣ ವರ್ಣಿಸಲಶಕ್ಯ ವಜ್ರನಖಗಳ ದ್ಯುತಿ ಶಶಿ ಕೋಟ್ಯಮಿತವು ಶುಭ್ರತಮ ಯಜÉ್ಞೂೀಪವೀತ ಧರಿಸಿರುವಿ 33 ತಿಮಿರ ಮಾರ್ತಾಂಡ ನೀ ರವಿ ಕೋಟಿ ಅಮೃತ ಇಂದು ಕೋಟಿ ಅತ್ಯಧಿಕ ತೇಜ ಈ ದಿವ್ಯ ಸುರೂಪದಿ ಶ್ರೀಯಃಪತಿಯೇ ಪ್ರಾದುರ್ಭವಿಸಿದಿ ಸ್ವಾಮಿ 34 ನೀ ಪ್ರಾರ್ದುರ್ಭವಿಸಿ ದಿನ ಏಳೊಳಗೆ ಉಪನಯನ ರೂಪ ಪೂಜೆ ಪರಾಶರರು ಮಾಡಿದರು ಉಪನಯನ ಸಂಸ್ಕಾರ ಲೀಲಾ ಮಾತ್ರವು ನಿನಗೆ ಆ ಪರಾಶರ ಸತ್ಯವತಿಗೆ ಮುದಕರವು 35 ಸತ್ಯವತೀ ಪರಾಶರರ ಸುತನೆಂದು ನೀ ಕೀರ್ತಿ ಅವರಿಗೆ ಜಗತ್ತಲ್ಲಿ ಇತ್ತಿ ಸಾತ್ಯವತೇಯ ಪರಾಶರ್ಯ ನಾಮದಿಂ ಸತ್ ಸೃಷ್ಟಿ ಸುಖಜ್ಞಾನ ಪವಿತ್ರತ್ವಜÉ್ಞೀಯ 36 ಯಾವ ಯಾವಾಗ ಸತ್ಯವತಿ ಪರಾಶರರು ದೇವತಾ ಸಾರ್ವಭೌಮನೇ ವ್ಯಾಸ ನಿನ್ನ ತಾವು ನೋಡಲು ಇಚ್ಛೈಸಿ ನೆನೆಯುವರೋ ಆವಾಗ ತೋರುವಿ ಎಂದಿ ಮಾತೆಗೆ 37 ವ್ಯಾಸ ಅವತಾರದ ಕಾರ್ಯೋನ್ಮುಖನಾಗಿ ನಗ ಮೇರುಗಿರಿಗೆ ಬಿಸಜಭವ ಮೊದಲಾದ ದೇವರು ಹಿಂಬಾಲಿಸುತ ಶ್ರೀಶ ನೀ ಹೊರಟೆ ಪ್ರಣತಾರ್ತಿಹರ ಅಜಿತ 38 ಜ್ಞಾನ ಸುಖಪೂರ್ಣ 'ಪ್ರಸನ್ನ ಶ್ರೀನಿವಾಸ' ಪೂರ್ಣ ಪ್ರಜ್ಞರ ಹೃತ್‍ಸ್ಥ ವನಜ ಭವತಾತ ಸ್ವರ್ಣಾಂಡ ಬಹಿರಂತವ್ರ್ಯಾಪ್ತ ತೇಜಃಪುಂಜ ಆ ನಮಿಪೆ ಬದರೀಶ ಜ್ಞಾನಮುದ ಧನದ 39 - ಇತಿ ಪ್ರಥಮಾದ್ಯಾಯ ಸಂಪೂರ್ಣಂ - ದ್ವಿತೀಯ ಅಧ್ಯಾಯ ಸಾರ ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ ರಾಜ ರಾಜೇಶ್ವರನೇ ರಾಜೀವಾಲಯ ಪತೇ ರಾಜೀವಭವ ಭವಾದ್ಯಮರ ವಿನುತ ರಾಜೀವ ಪದಯುಗಗಳ್ಗೆ ಶರಣಾದೆ ನಿನ್ನಲಿ ರಾಜೀವನಯನ ಔದಾರ್ಯ ಕರುಣಾಬ್ಧಿ 1 ಸೃಷ್ಟಿ ಕಾಲದಲಿ ನೀ ಪರಮೇಷ್ಟಿರಾಯನಿಗೆ ಶ್ರೇಷ್ಟ ನಿಗಮಾದಿಗಳ ಬೋಧಿಸಿದ ತೆರದಿ ಕೃಷ್ಣ ದ್ವೈಪಾಯನನೆ ಸುರಮುನಿಗಳಿಗೆ ಈಗ ಉತ್ಕøಷ್ಟ ಉಪದೇಶ ಮಾಡಿದಿ ಮೇರುವಿಲಿ 2 ಸಮಸ್ತ ಶಾಸ್ತ್ರಾರ್ಥ ನಿದರ್ಶನಾತ್ಮಕವಾದ ವಿಮಲ ಶಾಸ್ತ್ರೋತ್ತಮ ಮಹಾ ಭಾರತವನು ಸುಮಹಾ ವೇದಾರ್ಥ ನಿರ್ಣಯಕವಾದ ಬ್ರಹ್ಮ ಸೂತ್ರಂಗಳ ವಿರಚಿಸಿದಿ ವ್ಯಾಸ 3 ಹರಿ ವ್ಯಾಸ ಕೃಷ್ಣದೈಪಾಯನ ನಿನ್ನ ಅಮಿತ ಬಲಯುತ ಶರದಿಂ ರುದ್ರಾದಿಗಳ ಮನೋಗತವಾಗಿ ಇರುತ್ತಿದ್ದ ಕ್ರೂರ ಕಲಿಮೃತನಾದವನಂತೆ ಆದ 4 ಸಾತ್ಯವತೇ ವ್ಯಾಸ ನಿನ್ನಯ ಮುಖಾಂಬುಧಿಯಿಂದ ಉದ್ಭೂತವಾದ ಉತ್ತಮ ಜ್ಞಾನ ರೂಪ ಸುಧೆಯ ದೇವತೆಗಳು ಭುಂಜಿಸಲು ಆಗ ವಿದೂರರಾದರು ಕಲಿಯ ಕಲ್ಮಷದಿಂದ 5 ವಿಧಿ ವಾಯು ಎಂದೆಂದೂ ಕಲಿಕಲುಷ ವಿದೂರರು ಬಂದ ರುದ್ರಾದಿಗಳು ಮುಂದೆ ಕುಳಿತು ಶ್ರೀದ ನೀ ಬೋಧಿಸಿದ ಮಹಾಭಾರತ ಬ್ರಹ್ಮ- ಸೂತ್ರಾದಿ ಅಮೃತವ ಪಾನ ಮಾಡಿದರು 6 ಮನುಷ್ಯೋತ್ತಮರೊಳು ಇದ್ದ ಕಲಿ ಭಂಜನಕೆ ದೀನ ದಯಾಳು ನೀ ದಿಗ್ವಿಜಯಗೈದಿ ಮಂದಾಧಿಕಾರಿಗಳ ಉಪಕಾರಕಾಗಿ ನೀ ನಿಗಮ ವಿಭಾಗ ಮಾಡಿದಿಯೋ 7 ಯಾವ ಯಾವ ಸಜ್ಜನರು ಅಜ್ಞಾನ ಪೂರಿತರೋ ಅವರು ವಾಸಿಸುವ ಸ್ಥಳಗಳಿಗೆ ಪೋಗಿ ದಿವ್ಯ ಸಜ್ಞಾನವ ಬೋಧಿಸಿ ಕಲಿ ವಿಷ ನಿವಾರಣ ಮಾಡಿದಿ ಕರುಣಾಂಬು ನಿಧಿಯೇ 8 ಪರಮಾರ್ಥ ಭಾಷ್ಯಾರ್ಥ ಐಹಿಕಾಮುಷ್ಮಿಕ ಸರ್ವಾರ್ಥ ಒದಗಿಸುವ ಮುಖ್ಯ ನಿಯಂತೃ ಪರಮಾತ್ಮ ವ್ಯಾಸ ನೀ ದಿಗ್ವಿಜಯ ಮಾರ್ಗದಲಿ ಮರವಟ್ಟ ಕ್ರಿಮಿಗೆ ಔದಾರ್ಯದಲಿ ಒಲಿದಿ 9 ಹರಿಯ ಅಪರೋಕ್ಷ್ಯವು ಲಭಿಸಿದವರಿಗೂ ಸಹ ಕರ್ಮ ನಿಮಿತ್ತ ನರ ನರೇತರ ಜನ್ಮ ಅಸಂಭವವು ಅಲ್ಲವು ಈ ಕ್ರಿಮಿ ಜನ್ಮ ಸಹ ಪ್ರಾರಬ್ಧ ನಿಮಿತ್ತ 10 ಶೂದ್ರನು ಲೋಭಿಯು ಪೂರ್ವ ಜನ್ಮದೀ ಕ್ರಿಮಿಯು ಈ ದೇಹವ ಬಿಡು ರಾಜನಾಗಿ ಹುಟ್ಟಿಸುವೆ ಎಂದು ನೀ ಪೇಳಲು ದೇಹದಾಶೆ ಪ್ರಕಟಿಸಿತು ಆದರೂ ಆ ಕ್ರಿಮಿಗೆ ರಾಜಪದವಿತ್ತಿ 11 ಆ ಕ್ರಿಮಿಯಿಂದ ನೀ ರಾಜ್ಯವ ಆಳಿಸಿ ಜಗದೇಕ ಸ್ವಾಮಿಯು ಸ್ವತಂತ್ರ ಸಚ್ಛಕ್ತ ಭಕ್ತೇಷ್ಟ ಸಿದ್ಧಿದ ಸತಾಂಗತಿ ನೀನೆಂದು ಜಗತ್ತಿಗೆ ವ್ಯಕ್ತ ಮಾಡಿದಿ ದೇವ ದೇವ 12 ಅಗಣಿತ ಗುಣಾರ್ಣವನೇ ವ್ಯಾಸ ಕೃಷ್ಣನೇ ನಿನ್ನ ಮಗನೆಂದು ತಾ ಜನಿಸಿ ಸೇವಿಸಬೇಕೆಂದು ಗಂಗಾಧರ ನಿನ್ನ ಕುರಿತು ಮಹತ್ತಪಸ್ ಮಾಡಿ ಹಾಗೆ ನಿನ್ನಿಂದ ವರ ಪಡೆದು ಮಗನಾದ 13 ಯಥಾರ್ಥ ಹೀಗಿರಲು ನೀನು ಸಹ ತಪಸ್ ಮಾಡಿ ರುದ್ರಗೆ ವರವಿತ್ತು ಅಧಮರ ಮೋಹಿಸಿದಿ ಒಂದೊಂ
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀನಿವಾಸ ಕಲ್ಯಾಣ ಜಯ ಜಯ ಜಯ ಶ್ರೀನಿವಾಸ ಕೃತಿ ಮಾಯಾ ಶ್ರೀಶ ಭಯಬಂಧಮೋಚಕ ಜೀಯ ಆಹ ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ ಮಂದಜಭವ ಸುರವೃಂದ ಸಂಸೇವ್ಯ ಜಯ ಪ ಸುರಸರಿತ ತೀರದಿಂದ ಸುರಮುನಿ ಭೃಗು ಬಂದು ನಿನ್ನ ಪರಸಮರಹಿತನೆಂದರಿತ ಆಹ ಸಿರಿಯು ನಿನ ಭಾವವನುಸರಿಸಿ ಬೇಗ ಕರವೀರ ಪುರ ಪೋಗೆ ಗಿರಿಪುತ್ತ ಪೊಕ್ಕೆಯೊ 1 ಮೇರುಸುತನೆ ಹಾಟಕಾದ್ರಿ ವೀರ ಭಕುತ ವೃಷಭಾದ್ರಿ ಸರೀಸೃಪಾವರಿಸಿದ ಸೌರಭ್ಯಗಿರಿಯಿದು ಪರವೇಂಕಟಾದ್ರಿಯು ಹರಿತು ವಿಪ್ರನ ಪಾಪ 2 ನೀನಿದ್ದ ಸ್ಥಳವೇ ವೈಕುಂಠ ನಿನಗಾರು ಸಮರುಂಟೆ ಶ್ರೀಶ ದೀನ ಸುಜನರಿಗೆ ನಂಟ ಆಹ ಧೇನು ಪಾಲ್ಗರೆಯಲು ಪಾಲಕ ಹೊಡೆಯಲು ದೀನರಕ್ಷಕ ನೀನು ಶಿರಸಿತ್ತು ಪೊರೆದೆಯೊ 3 ಏಳು 2ತಾಳದ ಉದ್ದ ರಕ್ತ ತಾಳಲಾರದೆ ಬಿದ್ದ ಗೋಪ ಚೋಳರಾಯಗೆ ಕೊಟ್ಟೆ ಶಾಪ ಆಹ ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ ಶೀಲ ಸುರರ ಗುರು ಚಿಕಿತ್ಸೆಯನೈದಿದೆ 4 ಸ್ವಗತ ಭೇದವಿಲ್ಲದಂಥ ಸ್ವಚ್ಛ ಚಿತ್ಸುಖಮಯನಂತ ಸ್ವಾನಿರ್ವಾಹಕ ವಿಶೇಷ ಆಹ ಶ್ವೇತವರಾಹನ ಸಂವಾದದಿಂದಲಿ ಸ್ವೀಕರಿಸಿದೀ ಸ್ಥಳ ಮೊದಲು ಪೂಜೆಯ ಕೊಟ್ಟು 5 ಸರಸ್ವತೀ ಸ್ವಾಮಿ ಪುಷ್ಕರಣಿ ಸುರಮುನಿನರರಿಗೆ ಸ್ನಾನ ಪರಸುಖಮಾರ್ಗ ಸೋಪಾನ ಆಹ ಸುರತಟಿನ್ಯಾದಿ ಸುತೀರ್ಥಗಳೆಲ್ಲವು ಸರಿತವಾಗಿರುತವೆ ಈ ಸ್ವಾಮಿ ತೀರ್ಥದಿ 6 ಆದಿಕಾರಣ ನಿನ್ನ 3ಲೀಲಾ ಮೋದಸಂಭ್ರಮವನ್ನು ನೋಡೆ ಕಾದುಕೊಂಡಿಹರು ಕೋವಿದರು ಆಹ ಸಾಧು ಸಂಭಾವಿತ ಬಕುಳಾದೇವಿಯುಗೈದ ನಿತ್ಯ ಸಂತೃಪ್ತ 7 ಮಂಗಳ ಚಿನ್ಮಯ ರಂಗಾ - ನಂಗನಯ್ಯನೆ ಮೋಹನಾಂಗ ತುಂಗ ಮಹಿಮನೆ ಶುಭಾಂಗ ಆಹ ಬಂಗಾರ ಕುದುರೆ ಮೇಲಂಗನೇರಲಿ 4ಬಂದ ಶೃಂಗಾರವೇನೆಂಬೆ ಎಂದಿಗೂ ಸ್ವರಮಣ8 ತೋಂಡಮಾನ ರಾಯನಣ್ಣ ಚಂಡಭೂಪನು ಆಕಾಶ ಕಂಡನು ಕಮಲದೊಳ್ ಶಿಶುವ ಆಹ ಅಖಿಳ ಕೋಟಿ ಅಸಮ ಈ ಶಿಶುವನ್ನು ಹೆಂಡತಿ ಧರಣಿಯು ಕೊಂಡಳು ಮಗಳಾಗಿ 9 ಮೂಲೇಶ ನಿನ್ನಯ ರಾಣಿ ಮೂಲಪ್ರಕೃತಿ ಗುಣಮಾನಿ ಭವ ತಾಯಿ ಆಹ ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು 5 ಬಾಲೇರ ಸಹ ಪುಷ್ಪವನಕೆ ಬಂದಿಹಳೊ 10 ಮಹಿದೇವಿ ಕಮಲವಾಸಿನಿಯು ಬಹಿನೋಟಕ್ಕೆ ರಾಜಸುತೆಯು ಬಹು ಚಿತ್ರ ಪುಷ್ಪವ ಕೊಯ್ಯೆ ಆಹ ಮಹತಿಪಾಣಿಯು ಬಹು ವಯೋರೂಪದಲಿ ಬಂದು ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ 11 ಹಾಟಕಗಿರಿಯಿಂದ ನೀನು ಬೇಟೆಯಾಡುವ ರೂಪ ತಾಳಿ ಘೋಟಕವೇರಿ ಸಂಭ್ರಮದಿ ಆಹ ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ ನಾಟಕವಾಡಿದ್ದು ಪಾಡಲರಿಯೆನೊ 12 ನಿತ್ಯನಿರ್ಮಲ ಅವಿಕಾರ ಮತ್ರ್ಯರವೋಲು ನೀ 1ನಟಿಸೋ ಕೃತ್ಯಗಳರಿವರು ಯಾರೋ ಆಹ ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ ಸಂತ್ಯಸಂಕಲ್ಪ ನಿನ ಸಂದೇಶ ಕಳುಹಿದೆ 13 ಪೊಂದಿದೆ ಫುಲ್ಕಸೀ ರೂಪ ಮಂಧಜಭವ ಶಿಶುವಾಗೆ ನಂದಿನಿಧರ ಯಷ್ಟಿಯಾದ ಆಹ ಮಂದಜಭವಾಂಡ ಗುಣಗುಲ್ಮ ಮಾಡಿ ನೀ ಕಂಧರದಲಿ ಗುಂಜ ಕಂಬುಸರವ ತೊಟ್ಟೆ 14 ನಾರಾಯಣಪುರಿಯಲ್ಲಿ ಮಾರನಯ್ಯನೆ ನಿನ್ನ ಸುಗುಣ ವಾರಿಧಿ ಪೊಕ್ಕಳು ಪದುಮೆ ಆಹ ಪುರಿಪ ಧರಣೀದೇವೀ ಪುತ್ರಿಗೆ ಜ್ವರವೆಂದು ಪರಿಪರಿ ಪರಿಹಾರ ಪರದು ನೋಡಿದರಾಗ 15 ಶುದ್ಧ ಸುಂದರ ಸುಖಕಾಯ ವೃದ್ಧ ಫುಲ್ಕಸೀ ವೇಷಧಾರಿ ಬದ್ಧ ಶೋಕರ ಬಳಿ ಪೋದೆ ಆಹ ಇದ್ದ ಸುದ್ದಿಯ ಅಬದ್ಧವಿಲ್ಲದೆ ಪೇಳಿ ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ 16 ವಹಿಸಿ ನಿನ ಶಾಸನ ಬಕುಳ ಮಹದೇವನಾಲಯದಿಂದ ಮಹಿಳೆಯರ ಸಹ ಕೂಡಿ ಆಹ ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ ಬಹು ಶುಭವಾರ್ತೆಯ ತಂದು ಪೇಳಿದಳೊ 17 ಶುಕಮುನಿ ಕರಪ್ರದವಾದ ಆಕಾಶ ನೃಪ ಲಗ್ನಪತ್ರ ಸ್ವೀಕರಿಸಿದೆ ಬಹು ಹಿತದಿ ಆಹ ವಾಗೀಶ ಶಶಿಧರ ನಾಗೇಶ ಸೌಪರ್ಣ ನಾಕೀಶ ಮೊದಲಾದ ಸುರರನು ಕರೆದೆ 18 ಶಿಷ್ಟ ಸನ್ಮುನಿಜನ ಕೂಟ ತುಷ್ಟ ಸುಮನಸ ಸಮೂಹ ಶ್ರೇಷ್ಠಸುಗಂಧಿ ಆಗಮನ ಆಹ ಸೃಷ್ಟ್ಯಾದಿಕರ್ತೆ ನಿನ ಸುಮಹೋತ್ಸವ ನೋಡಿ ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ 19 ಮಾಯ ಜಯೇಶ ಶ್ರೀವತ್ಸ ಛಾಯೇಶಗುಪಾಯ ಪೇಳಿ ತೋಯಜೆಯನು ಕರೆತಂದೆ ಆಹ ಸಿರಿ ಕೃತಿ ಕಾಂತಿ ನಿನ್ನಿಂದ ವಿಯೋಗರಹಿತರು ಎಂದೂ ಎಲ್ಲೆಲ್ಲೂ 20 ಬೃಹದಣುವಿಗೆ ಸತ್ತಾಪ್ರದನೆ ಸುಹೃದ ಸಂತೃಪ್ತ ಮುಖಾಬ್ಧೇ ದೃಢವ್ರತ ಶುಕಮುನಿಗೊಲಿದೆ ಆಹ ಬೃಹತೀ ಫಲಾನ್ನವನುಂಡು ಫೂತ್ಕಾರದಿ ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ 21 ಸುಜನರಿಗಾನಂದ ದಾತ ದ್ವಿಜರೂಢ ಜಗದೀಶ ನೀನು ಅಜಸುರರೊಡಗೂಡಿ ಬರೆ ಆಹ ಅಜಿತ ಚಿನ್ಮಯ ನಿನ್ನ ಆಕಾರ ನೃಪ ನೋಡಿ ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ 22 ಅಜರ ಮಂದಿರ ಪೋಲ್ವ ಮನೆಯು ಪ್ರಜುವಲಿಸುವ ದಿವ್ಯ ಸಭೆಯು ನಿಜಭಕ್ತ ಪುರುಜನ ಗುಂಪು ಆಹ ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ 23 ಸುರಮುನಿಜನ ಮೂರು ವಿಧಕೆ ತರತಮ ಯೋಗ್ಯತೆ ಆರಿತು ಪರಿಪರಿ ಸಾಧನವಿತ್ತೆ ಆಹ ನೀರರುಹಜಾಂಡವು ನಿನ್ನಾಧೀನವು ಸಿರಿಭೂದೊರೆಯೇ ಶ್ರೀನಿವಾಸ ದಯಾನಿಧೆ 24 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ಚನ್ನಮಾರುತ ಮನೋಗತನೆ ಆಹ ವನರುಜಹಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 25
--------------
ಪ್ರಸನ್ನ ಶ್ರೀನಿವಾಸದಾಸರು