ಒಟ್ಟು 38 ಕಡೆಗಳಲ್ಲಿ , 15 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಮೆಯನಾಥ ನಿನ್ನಂಘ್ರಿಗಳ ಸೇರಿದನ ದೂರ ಮಾಡಿರುವುದುಚಿತವೆ ಪ ವಾರಿಜಾಂಬಕ ಎನ್ನ ಕ್ರೂರಚಿಂತೆಯ ಹರಿಸಿ ಬೇಡಿದುಪ್ಪವನೀವುದೂ ಅ.ಪ ವ್ರತಶೀಲನಾಗಿ ಭೂಪತಿ ಅಂಬರೀಷನ ಅತಿಶಯದಿ ಪೊಗಳುತಿರಲೂ ಯತಿರಾಜ ದೂರ್ವಾಸನಡೆತಂದು ದ್ವಾದಶಿಯ ತಿಥಿಯೊಳನ್ನವ ಬೇಡಲು ಪೃಥಿವೀಶ ಕೊಟ್ಟನೆನೆ ದ್ವಾದಶಿಯ ಪಾರಣೆಯ ಮಿತಿ ಮೀರಿ ಪೋಗುತಿರಲೂ ಕಥನದಿಂ ಶ್ರೀತುಳಸಿಯನು ಭುಂಜಿಸಲು ಕೋಪಿಸಲಾಗ ನತಜನಾಶ್ರಯ ನೀನು ಪೊರೆದೆ ಅಹುದು 1 ಮುಂದನರಿಯದೆ ಯಮನಂದನಂ ದ್ಯೂತಮಂ ಅಂದು ಕೌರವನೊಳಾಡೆ ಮಂದಮತಿಯಾಗಿ ಸೋಲಲು ನಾರಿಯನು ಆ ಸಭೆಗೆ ತಂದು ಮಾನಭಂಗವನೆ ಮಾಡೆ ಇಂದುಮುಖಿಯುಟ್ಟ ಸೀರೆ ಅಕ್ಷಯ ವೆಂದು ನಂದಕುಮಾರ ಸಲಹೇ 2 ಎನ್ನಳವೆ ನಿನ್ನಯ ಮಹಿಮೆಯನು ಪೊಗಳುವಡೆ ಯ ಪರ್ಣವಾಹನರೊಡನೇ ಮನ್ಮಥನ ಶತಕೋಟಿ ಲಾವಣ್ಯ ಯದುಕುಲಾಮ ರಾರ್ಣವಕೆ ಚಂದ್ರ ನೀನೇ ಸನ್ನುತನಾದೆ ಸುರಪುರದ ಲಕ್ಷ್ಮೀವರನೆ ಮನ್ನಿಪುದು ಶರಣಪ್ರಿಯನೆ ಭಿನ್ನವಿಲ್ಲದೆ ನೀಂ ದಾಸಾನುದಾಸರನು ಪ್ರ ಇಂದು ಬಂದು3
--------------
ಕವಿ ಲಕ್ಷ್ಮೀಶ
ಸಲಹು ನಂದಕುಮಾರ ಸಲಹು ಗೋಪೀತನಯ ಸಲಹು ವಸುದೇವನಿಗೆ ಪುತ್ರನೆನಿಸಿದನೆಸಲಹು ದೇವಕಿ ಜಠರದಲಿ ಬಂದನೆನಿಸಿದನೆಸಲಹು ಶ್ರೀ ರಾಮ ಶ್ರೀಕೃಷ್ಣ ಜಯ ಕೃಷ್ಣ ಸಲಹು ಸಲಹೂ ಪನಂದನೆನೆ ಸಕಲ ಸಂಪತ್ತ ಸೂಚಿಸುತಿಹುದುಚಂದದಿಂದಣಿಮಾದಿ ಸಿದ್ಧಿುರಲಾಗಿಬಂದವಿದ್ಯೆಯು ಮುಚ್ಚಲಾ ಶಕ್ತಿ ಕುತ್ಸಿತವುಹಿಂದುಗಳೆವದರಿಂದ ನಂದನಕುಮಾರ 1ಜ್ಞಾನಶಕ್ತಿಯು ತಾನು ಗುಪ್ತವಾಗಿರಲಾಗಿಧ್ಯಾನಿಸುವ ಭಕ್ತರಿಗೆ ವಿಸ್ತರಿಸಿ ಕೊಡಲುನೀನು ಗೋಪೀತನಯನೆಂಬ ನಾಮವ ತಾಳ್ದೆದೀನರಕ್ಷಾಮಣಿಯೆ ಜ್ಞಾನದಾಯಕನೆ 2ವಸುವೆನಲು ಪರಿಶುದ್ಧವಾದ ಕರಣದ ಪೆಸರುಎಸೆದು ನೀನಿರಲಲ್ಲಿ ದೇವನೆನಿಸುವದುಅಸಮ ತೇಜದಿ ಪುರುಷನೆನಿಸಿ ಸಲಹಲು ಜಗವವಸುದೇವಪುತ್ರನೆನಿಸಿತು ನಿನ್ನ ನಾಮ 3ದೇವಕಿಯು ನಿನ್ನ ಬಗೆ ಮಾಯೆ ಬ್ರಹ್ಮಾಂಡಗಳಭಾವಿಸಲು ನೀನದನು ಕುಕ್ಷಿಯೊಳಗಿರಿಸಿಸಾವಧಾನದಿ ಸಕಲದೊಳು ಸತ್ಯನಾಗಿರಲುದೇವಕಿಯ ಜಠರದಲಿ ಬಂದನೆನಿಸಿದನೆ 4ನಿತ್ಯದಲಿ ಯೋಗಿಗಳು ನಿನ್ನಲ್ಲಿ ರಮಿಸುತಿರೆಪ್ರತ್ಯಕ್ಪ್ರಕಾಶದಲಿ ಜಡಪದಾರ್ಥಗಳುಅತ್ಯಂತ ರಮಣೀಯವಾಗಿಯದರೊಳು ಜನರುನಿತ್ಯ ರಮಿಸಲು ರಾಮನೆನಿಪ ಶ್ರೀ ಹರಿಯೆ 5ಮೂರು ವರ್ಣದ ನಾಮ ಮುನಿವಂದ್ಯ ನಿನಗಿರಲುಸಾರುವುದು ಸದ್ರೂಪನೆಂದೆರಡು ವರ್ಣಮೂರನೆಯ ವರ್ಣವಾನಂದಮಯನೆನ್ನುತಿದೆಈ ರೀತಿಯಲಿ ನೀನು ಕೃಷ್ಣನೆನಿಸಿದನೆ 6ಪರಮಾತ್ಮ ನೀನಾಗಿ ಪರಿಪರಿಯ ರೂಪಿನಲಿಸುರಮುನೀಶ್ವರ ಭಾವ್ಯ ಚರಿತನೆಂದೆನಿಸಿತಿರುಪತಿಯ ವಾಸವನು ಸ್ಥಿರವಾಗಿ ನಿರ್ಧರಿಸಿುರುವ ವೆಂಕಟರಮಣ ಕರುಣರಸಪೂರ್ಣ 7ಓಂ ಯಶೋದಾವತ್ಸಲಾಯ ನಮಃ
--------------
ತಿಮ್ಮಪ್ಪದಾಸರು
ಸುಕೃತ ಫಲವೋ ದರುಶನ ಏಸು ಪುಣ್ಯಕರವೋ ಪ ಸುಕೃತ ಫಲವೋ ಶ್ರೀ ವ್ಯಾಸರಾಜ ಗುರುವರ್ಯರ ದರುಶನ ಅ.ಪ ವರ ಕರ್ಣಾಟಕ ಸಿಂಹಾಸನದಲಿ ಮೆರೆಯುತಲಿರುವ ಯತೀಂದ್ರರ ದರುಶನ 1 ಚಂದ್ರಿಕ ನ್ಯಾಯಾಮೃತ ತಾಂಡವದಲಿ ನಂದಕುಮಾರನ ಕುಣಿಸುವÀ ದರುಶನ 2 ಹಗಲು ದೀವಟಿಗೆ ಹಸುರು ಛತ್ರಿ ಮುಖ ಬಗೆ ಬಗೆ ಬಿರುದಾವಳಿಗಳ ವೈಭವ 3 ರಾಜನ ಕುಹಯೋಗವನೆ ನಿವಾರಿಸಿ ರಾಜಾಧಿರಾಜ ಸಂಪೂಜ್ಯರ ದರುಶನ 4 ರುಕುಮಿಣಿ ಭಾಮಾರಮಣನ ಪೂಜಿಸಿ ಸುಕೃತ ಸ್ವರೂಪ ಪ್ರಸನ್ನರ ದರುಶನ 5
--------------
ವಿದ್ಯಾಪ್ರಸನ್ನತೀರ್ಥರು
ಸುಂದರ ಕೃಷ್ಣನು ಕರೆಯುವ ಬನ್ನಿರೆ ಇಂದುಮುಖಿಯರೆಲ್ಲ ಪ ಚಂದದಿ ವಿಹರಿಸುವ ಬನ್ನಿರಿ ಇಂದುಮುಖಿಯರೆಲ್ಲ ಅ.ಪ ಭಾಸುರಾಂಗನ ಕೂಡಿ ನಾವು ರಾಸಕ್ರೀಡೆಯಲಿ ಈ ಸಂಸಾರದ ಕ್ಲೇಶಗಳನು ಪರಿ ಹಾಸ ಮಾಡುವ ಬನ್ನಿ 1 ಪರಿಮಳ ಕುಸುಮಗಳ ಸೊಗಸಿನ ತರುಲತೆ ಬುಡದಲ್ಲಿ ಮುರಹರ ಕೃಷ್ಣನ ಮುರಳಿಯನೂದುವ ತರಳೆಯ ಅಂಬನ್ನಿ 2 ನಂದಕುಮಾರನಿಗೆ ನಾವು ಮಂದಹಾಸದಲ್ಲಿ ಗಂಧ ತಾಂಬೂಲಗಳಂದದಿ ನೀಡುತಾ ನಂದಪಡುವ ಬನ್ನಿ 3 ಯಮುನಾ ತೀರದಲಿ ನಾವು ಸುಮಬÁಣನ ಸೊಲ್ಲನು ಮುರಿಯುವ ಬನ್ನಿ ಕಮಲಾಕ್ಷಿಯರೆಲ್ಲಾ 4 ಪನ್ನಗವೇಣಿಯರೇ ಈಗ ಪ್ರ ಸನ್ನವದನ ಕೃಷ್ಣ ತನ್ನ ಇಂಗಿತವನರುಹಲು ಎಮ್ಮನು ಸನ್ನೆಯ ಮಾಡುತಿಹ 5
--------------
ವಿದ್ಯಾಪ್ರಸನ್ನತೀರ್ಥರು
ಸುಲಲಿತ ಮಧುಕರ ಕೊಳಲನೂದುವುದನು ಕಲಿಸಿದರಾರೇ ನಳಿನಮುಖೀ ರಾಧೇ ಪ ಬಲಿಸಂಹಾರನು ಲೋಕದ ನಾರಿಯ ರಲಸದೆ ಗಾನವ ಕಲಿಸಿದನೇನೇ ಅ.ಪ ಕರು ತುರುಗಳ ಬಳಿ ಸರಸವನಾಡುತ ಮುರಳಿಯನೂದುವ ಸರಸಿಜನಾಭ ಕರೆಕರೆದು ನಿನ್ನ ಬೆರಳಿಗುಂಗುರವಿಟ್ಟು ಸ್ವರಗಳ ಬೋಧಿಸಿ ನಲಿನಲಿದಿಹನೇನೇ 1 ಬೃಂದಾವನದಲಿ ನಂದಕುಮಾರನ ವಂದಿಸೆ ನಾರದ ಬಂದುಹಾಡಿದನೇ ಅಂದದ ಕಲಿಕೆಯ ತುಂಬುರ ನಿನಗಾ ನಂದದಿ ಗಾನವ ಕಲಿಸಿದನೇನೆ 2 ಅಂಗಜಪಿತನಿಗೆ ಮಂಗಳಗಾನವ ಅಂಗನೆ ಶಾರದೆ ಪಾಡಿದಳೇನೇ ಮಾಂಗಿರಿರಂಗ ಮಾತಂಗವರದನಂತ ರಂಗದರಾಣಿ ನೀ ಕಲಿಯೆಂದನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
370ಜಲಜಾಲಯೇ | ಜಗನ್ಮೋಹಿನಿಯೇ ||ಜಲಜಾಲಯೇಪಜಲಜ ಲೋಚನೆಯೇ | ಜಲಜಗಂಧಿನಿಯೆ |ಜಲಜನಾಭನ | ಪ್ರಿಯೇ ಜಲಜಮುಖಿಯೆ ಪೊರೆಯೆ1ಸಾಮಜಗಮನೆ | ಕೋಮಲಾಂಗಿ ನೀನೆ |ಕೋಮಲ ಚರಣೆ | ಕೋಕಿಲ ಸುಗಾನೆ2ಚಂದ್ರ ಕೋಟಿ ವದನೆ | ನಂದಕುಂದರದನೆ|ಬಂದು ಗೋವಿಂದನಾ|ದಾಸನ ಪಾಲಿಸು ||ಜಲಜ||||3||xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಜಲಜ ಲೋಚನೆಯೇ | ಜಲಜಗಂಧಿನಿಯೆ |ಜಲಜನಾಭನ | ಪ್ರಿಯೇ ಜಲಜಮುಖಿಯೆ ಪೊರೆಯೆ1ಸಾಮಜಗಮನೆ | ಕೋಮಲಾಂಗಿ ನೀನೆ |ಕೋಮಲ ಚರಣೆ | ಕೋಕಿಲ ಸುಗಾನೆ2ಚಂದ್ರ ಕೋಟಿ ವದನೆ | ನಂದಕುಂದರದನೆ|ಬಂದು ಗೋವಿಂದನಾ|ದಾಸನ ಪಾಲಿಸು ||ಜಲಜ||||3||
--------------
ಗೋವಿಂದದಾಸ
ಕಂಡೆನು ಪಾರ್ವತಿಯಾ | ಮೈಸೂರ |ಚಾಮುಂಡೇಶ್ವರಿಯಾ ಪಕಂಡೆನು ಕರುಣದಿ ಭಕ್ತರ ಪಾಲಿಪ |ಚಂಡಿಕರಾಳಿಯ ಪುಂಡರೀಕಾಕ್ಷಿಯ ಅಸುತ್ತಲು ಜ್ಯೋತಿಗಳ | ಹೊಳೆಯುವ |ಮುತ್ತಿನ ಕಾಂತಿಗಳೂ ಚಕೆತ್ತಿದ ನವಮಣಿರತ್ನದಿ ಶೋಭಿಪ |ಉತ್ತಮ ಕನಕಾಭರಣ ಭವಾನಿಂiÀi 1ಸಹಸ್ರಾಯುಧಭರಿತೇ | ನೀಕ್ಷಿಸೆ |ಸಹಸ್ರ ಹಸ್ತದಾತೇ |ಸಹಸ್ರರೂಪದಿ ಜಗವನು ಪಾಲಿಪ |ಸಹಸ್ರನಾಮದ್ವಯ ಸಹಸ್ರಲೋಚನೆಯ 2ಸಂಭ್ರಮದಲಿ ಚಂಡಾಮುಂಡರು |ಡೊಂಬಿಯೊಳ್ ಪ್ರಚಂಡಾ- |ರೆಂಬಾ ದೈತ್ಯಕದಂಬವ ಖಂಡಿಸಿ |ಕುಂಭಿüüನಿಗಿಳುಹಿದ ಶಾಂಭವೆ ಶಕ್ತಿಯ 3ರಾಜ ಕುಲಕೆ ದೀಪಾ | ಮೈಸೂರ್ |ರಾಜ ಕೃಷ್ಣ ಭೂಪಾ |ರಾಜನು ದಿನ ದಿನ ಪೂಜಿಸಿ ನಮಿಸುವ |ರಾಜ ರಾಜಗಿರಿರಾಜಕುಮಾರಿಯ 4ಚಂದ್ರಕೋಟಿವದನೇ | ಶೋಭಿಪ |ನಂದಕುಂದರದನೇ |ಮಂದಗಮನೆ ಗೋವಿಂದನ ಪೂಜಿಪಚಂದಿರಧರನರ್ಧಾಂಗಿಯ ಚರಣವ ||ಕಂಡೆನು||
--------------
ಗೋವಿಂದದಾಸ