ಒಟ್ಟು 85 ಕಡೆಗಳಲ್ಲಿ , 34 ದಾಸರು , 74 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಪರಿಪೂರ್ಣ ಕಾಮ ಪಟ್ಟಾಭಿರಾಮ ತನ್ನ ಸ್ಮರಿಸುವ ಜನಕೀವನು ಕ್ಷೇಮ ಪ ಭಾಸ್ಕರವಂಶ ಭೂಷಣ ತರಣಿಜಮಿತ್ರ ಭವ್ಯ ಚರಿತ್ರ | ದಾಶರಥಿ ಕರುಣಾಳು ಸರೋಜನೇತ್ರ ಅ.ಪ ಜಡಮತಿಯಾದರೂ ಇವನ | ಮರೆಯಾ ಇನ್ನು ಧೃಢಮತಿಗೆ ತನ್ನನೇ ಕೊಡುವೆನೈಯ್ಯಾ 1 ತಮ್ಮೋಳು ತಾವು ತಿಳಿದು | ಭಜಿಸುವರು ಇನ್ನು ಹೆಮ್ಮೆಯ ಮಾತುಗಳು ಬಿಡಿರಿ ಜನರು 2 ರಾಮನು ನರನೆಂಬ ಪಾಮರನ ಬಾಯಲಿ ಮಣ್ಣು ಸೋಮಶೇಖರ ತನ್ನ ಸತಿಗೆ | ಪೇಳಿದ ಇವನ ನಾಮದ ಮಹಿಮೆ ಕುಣಿಕುಣಿದು 3 ನಿರುತಾ ಪೊಗಳುವವಿವನ ವೇದ | ಇವನಾ ಚರಣೆ ಸಜ್ಜನರಿಗೆ ಬಲುಸ್ವಾದ 4 ಸೇತುವೆ ಕಟ್ಟುವುದುಂಟೆ ಕೋತಿದಂಡುಗಳೆಲ್ಲಾ ವ್ರಾತ ರಹಸ್ಯವೇತಕೆ ಚಿಂತೆ 5 ಹೊರಗಿನ ಕಣ್ಣಿಂದ ಅರಿಯಲು ಸಾಧ್ಯವಲ್ಲಾ ನೆರೆ ಒಳಗಣ್ಣಲಿ ನೋಡಬೇಕು | ಸ ದ್ಗುರು ಕಟಾಕ್ಷವಾದವಗೆ ಜೋಕು 6 ಪ್ರತ್ಯಕ್ಷವಾದಿಗಳಿಗೆ ಮೃತ್ಯುವಿನ ಬಾಯೊಳು ಸತ್ತು ಹುಟ್ಟುವುದು ತಪ್ಪುವುದಿಲ್ಲಾ | ಆ ಪತ್ತು ಇದೇ ದುರ್ಜನಿರಿಗೆಲ್ಲಾ 7 ಮಗನು ಬ್ರಹ್ಮನು ಮೊಮ್ಮಗನು ರುದ್ರನು ಮೂ ಜಗವನಾಳುವ ನಾರಾಯಣನಿವನು | ತಾನು ಮಗುವಾಗಿ ದಶರಥಗುದಿಸಿದನು 8 ಮುನಿ ಯಾಗವ ಪಾಲಿಸಿ ವನಿತೆಯ ಶಾಪ ಬಿಡಿಸಿ ತನ್ನೊಳಗಿಟ್ಟು ತಾ ಹುಡುಕಿದನು 9 ನರನಾಗಿ ದೈತ್ಯರ ಮುರಿದು ದೇವತೆಗಳಿಗೆ ಗರಸನಾಗಿ ಸಾಕೇತಪುರದಿ ಪೊಳೆದ 10 ನರನು ಪಾಮರನು ಹ್ಯಾಗೆ ತಿಳಿಯುವನು | ಸಂಸೃತಿ ಶರಧಿಯೊಳು ಬಿದ್ದು ಬಳಲುವನು11
--------------
ಗುರುರಾಮವಿಠಲ
ನಿಂದಕರು ಎಂದವರ ತುಚ್ಚಿಸಲಾಗದುಸಂದೇಹವಿಲ್ಲವು ಅವರು ಅತಿಹಿತರು ಪ ಸಂಚಿಸಿದ ಕರ್ಮದಿಂ ಸತ್ಪುರುಷರುದಿಸಿರಲುಹಂಚಿಕೊಂಬರು ತಾವು ಎಲ್ಲರದನುವಂಚಕರು ಎಂದವರ ನೀಚಸಲಿಕಾಗದು ಮುಂಚೆವಂದಿಸಬೇಕು ಅವರ ಪದಕೆ 1 ತಾಯಿ ಶಿಶುವಿನ ಮಲವ ತಾ ತೃಣದಿ ತೆಗೆಯುವಳುಮಾಯಹರ ಮಹಾಪುರುಷರ ಮಲವನುಆಯಾಸವಿಲ್ಲದಲೆ ತಮ್ಮ ನಾಲಿಗೆಯಲಿ ತೆಗೆಯುವರುಪ್ರಿಯರಿಂತವರಿಗಿಂತ ಹಿತವರುಂಟೆ 2 ಉದಯ ಮಧ್ಯಾಹ್ನ ಮುಹೂರ್ತಗಳ ನೋಡದಲೆವಿಧವಿಧದ ಪಾಪಗಳ ತಮ್ಮ ಮುಖದಿಮುದದಲುಚ್ಚರಿಸಿ ಚಿದಾನಂದ ಗುರುಭಕ್ತರನುಸುಧೆಯ ಸುಖಮುಕ್ತಿಯೊಳು ಹೊಂದಿಸುವವರು 3
--------------
ಚಿದಾನಂದ ಅವಧೂತರು
ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ ಪ ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು ಮಂದರ ಶೈಲ ತವಕದಿ ತಂದಾಗ ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು ಮುದದಿಂದ ಕಟಿಯಲು ಮುನಿದು ಮಹರೋಷದಿ ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು ಸುರರು ಸುಖಬಡಲು 1 ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ ಭೂತಳಾಧಿಪ ರಾಮಚಂದ್ರನ ಪದವಾರಿ ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ ಆತುರದಲಿ ಪುರಹೂತನಂದನ ನಿ ರ್ಭೀತನ ಕೊಲ್ಲಿಸಿ ಶರಧಿಯನು ಹಾರಿ ಸೀತೆಗುಂಗುರ ಕೊಟ್ಟು ಬೆಳೆದ ಚಲ್ವ- ವಾತಹತಮಾಡಿ ಲಂಕಾಪುರವ ಸುಟ್ಟ 2 ಪಾಂಡುಚಕ್ರವರ್ತಿ ಕುಂತಿಯಲಿ ಜನಿಸಿ ಮಂಡಲದೊಳು ಮಹಾಶೂರನೆನಿಸಿ ವಿಷ ಉಂಡು ದಕ್ಕಿಸಿಕೊಂಡು ಉರಗಲೋಕದಲ್ಲಿದ್ದು ತಾಂಡ ಭಾದಿಯ ಗೆದ್ದು ಹಿಡಿದು ಹಿಡಂಬನ ಹಿಂಡಿ ಬಕಾಸುರನ ಖಂಡರಿಸಿ ಕೀಚಕನ ಮಂಡಲದೊಳಗೆ ನಿಂದೆ ವಿರಾಟನ್ನ ದಿಂಡುಗೆಡುಹಿ ಕದನದಲಿ ವೇಗ ಕೊಂದೆ 3 ಬುದ್ಧಿಹೀನರಾಗಿ ಬಾಳಿದ ಮನುಷ್ಯರ ಶುದ್ಧಾತ್ಮರನ ಮಾಡಿ ಶುಭವೇಗದಲಿ ಶ್ರೀ ಮುದ್ರೆಧಾರಣ ಕೊಟ್ಟು ಜ್ಞಾನಾಂಬುಧಿಯೊಳಿಟ್ಟು ಅದ್ವೈತ ಮತ ಕಾಲಿಲೊದ್ದು ಪರವಾದಿ ಎದ್ದೋಡಿ ಬಂದು ತಿರುಗಿ ನಿಮ್ಮ ಉದ್ಧರಿಸಿ ಅವರವರ ದೋಷ ಹೋಯಿತು ಕರಗಿ4 ಭೂವ್ಯೊಮ ಪಾತಾಳದೊಳಗೆ ಎದುರುಗಾಣೆ ವಾಯು ಹನುಮ ಭೀಮ ಮಧ್ವನೆಂದಿನಿಸಿದೆ ಕಾಯಜ ಜನಕನ ಪದವ ಪೂಜಿಸಿ ಅಂಬು ಜೆಯನ ಪದವಿ ಪಡೆದು ಹರ ಇಂದ್ರಾದಿಗಳಿಗೆ ನಾಯಕನೆನಿಸಿದೆ ನಾನಾ ದುರಿತವಾಗಿ ಮಾಯಿಗಳೆಲ್ಲ ತರಿದೆ ಸುಭಕುತರ ಆಯತದಿಂದ ಪೊರೆದೆ ವಿಜಯವಿಠ್ಠಲರಾಯ ವೆಂಕಟನ ಒಲಿಮೆಯಿಂದಲಿ ಮೆರೆದೆ5
--------------
ವಿಜಯದಾಸ
ನೀನೇ ಗತಿಯೆನಗಿನ್ನು ದೀನನಾದೆನು ಬಹಳ ನೀನಲ್ಲದಾರು ಬಳಿಕಾ ದೇವಾಏನು ಸಾಧನವುಂಟು ಶ್ರುತ್ಯರ್ಥಗೋಚರವೆ ಧ್ಯಾನಧಾರಣೆ ದೂರವು ದೇವಾ ಪಕಾಣದೇ ನಿನ್ನಂಘ್ರಿಕಮಲವನು ಭವವೆಂಬಕಾನನಕೆ ಗುರಿಯಾದೆನು ದೇವಾಪ್ರಾಣರಕ್ಷಕರಿಲ್ಲದತಿ ಕಷ್ಟಕೊಳಗಾದಏಣ ಕುಣಕನೊಲಾದೆನು ದೇವಾಏನೆಂಬೆ ಮೂಢತ್ವವೇ ಮೌಲ್ಯವೆನಗಾಯ್ತುಜ್ಞಾನ ದೊರಕೊಂಬುದೆಂತು ದೇವಾಜ್ಞಾನವಿಲ್ಲದೆ ಬಂಧ ಪರಿಹರಿಸದೆಂದೀಗಮಾನಸದಿ ಮರಗುತಿಹೆನು ದೇವಾ 1ದುರಿತಕೋಟಿಗಳ ಜನ್ಮಂಗಳಲಿ ಮಾಡಿದರೆದೊರಕಿತದರಿಂದ ಜಡವು ದೇವಾಪರಿಪರಿಯ ಕರ್ಮಗಳು ಜನ್ಮಗಳ ಕೊಡುವದಕೆತರತರದಿ ಕರವಿಡಿದಿವೆ ದೇವಾಗುರಿಯಾದೆನೀ ಪರಿಯ ಕರ್ಮಶರಧಿಯ ತೆರೆಗೆಪರಿಹರವ ಕಾಣೆನಿದಕೆ ದೇವಾಪರಮ ಪಾವನವಾದ ದುರಿತಹರ ನಾಮಕ್ಕೆಕರಗದೋ ನನ್ನ ಕರ್ಮ ದೇವಾ 2ಲೋಕದೊಳಗಿಹ ಪಾತಕರು ತಾವು ಜೊತೆಯಾಗಿಬೇಕೆಂದು ಪಾತಕವನು ದೇವಾಜೋಕೆಯಲಿ ಛಲವಿಡಿದು ಪಾಪರಾಶಿಯ ಮಾಡೆಸಾಕೆ ನಾಮದ ಸೋಂಕಿಗೆ ದೇವಾನೂಕುವುದು ನಿಷ್ಕøತಿಗೆ ಮಲತ ಪಾಪವ ನಾಮಬೇಕೆ ನೆರವೆಂಬುದದಕೆ ದೇವಾಯಾಕೆ ನಾನೊಬ್ಬ ಮಾಡಿದ ಪಾಪರಾಶಿಯನುನೂಕದಿಹ ಬಗೆುದೇನು ದೇವಾ 3ದುರಿತವೆನಗಿಲ್ಲೆಂದು ಸ್ಥಿರಬುದ್ಧಿುಂದೊಮ್ಮೆುರುತಿಹೆನು ಧೈರ್ಯವಿಡಿದು ದೇವಾಅರಿವು ಸಿಕ್ಕದೆ ಮರವೆ ಮುಂದಾಗಿ ನಿಂದಿರಲುಮರುಗಿ ಮತ್ತೊಮ್ಮೆ ಮನದಿ ದೇವಾಅರಿವೆಂತು ಸಿಕ್ಕುವದು ದುರಿತಭರಿತನಿಗೆಂದುಸ್ಥಿರಬುದ್ಧಿ ನಿಲ್ಲದಿಹುದು ದೇವಾಉರುಳುವುದು ಮನವೆಲ್ಲಿ ಪರಿವುತಿಹೆ ನಾನಲ್ಲಿಸ್ಥಿರವೆಂದಿಗೆನಗಪ್ಪುದು ದೇವಾ 4ಏನಾದಡೇನಘವು ಬಹಳವಾಗಿಹುದಿದಕೆಹೀನಬುದ್ಧಿಯೆ ಸಾಕ್ಷಿಯು ದೇವಾನಾನಿನಿತು ದೋಯಾದಡದೇನು ದೋಗಳನೀನೈಸೆ ರಕ್ಷಿಸುವನು ದೇವಾಭಾನುವಿನ ಮುಂಭಾಗದಲಿ ತಿಮಿರ ತಾ ನಿಂದುಏನಾಗಬಲ್ಲುದೈ ದೇವಾದೀನತನವಳಿವಂತೆ ಜ್ಞಾನವನು ಬಳಿಕಿತ್ತುಆನತನ ನೀ ರಕ್ಷಿಸು ದೇವಾ 5ಕಾಲ ಬಂದರೆ ಮೋಕ್ಷ ತಾನೆ ದೊರಕುವದೆಂದುಮೇಲಾಗಿ ಶ್ರುತಿ ನುಡಿಯಲು ದೇವಾಕಾಲವೆಂಬೀ ನದಿಗೆ ಕಡೆುಲ್ಲ ಮೋಕ್ಷಕ್ಕೆಕಾಲ ತಾ ಬಹು ದೂರವು ದೇವಾಕಾಲಕರ್ಮಗಳೆಂಬ ನೇಮವನೆ ದೃಢವಿಡಿಯೆಕಾಲವೇ ಕಲ್ಪಿತವದು ದೇವಾಲೀಲೆುಂ ನಿರ್ಮಿಸಿದ ಸಂಸಾರ ಭಂಜನೆಗೆಕಾಲವದು ನಿನ್ನ ಕೃಪೆಯು ದೇವಾ 6ನನ್ನ ನಂಬಿದವರ್ಗೆ ಸಂಸಾರಗೋಷ್ಪದವುಚೆನ್ನಾಗಿ ನಂಬಿಯೆಂದು ದೇವಾನಿನ್ನ ನುಡಿುಂದ ಗೀತೆಯಲಂದು ಬೋಧಿಸಿದೆಧನ್ಯನಾದನು ಪಾರ್ಥನು ದೇವಾಉನ್ನತದ ಯೋಗಾದಿ ಸಾಧನದಿ ಪರಿಹರವೆನಿನ್ನ ಕೃಪೆಯೇ ಮುಖ್ಯವು ದೇವಾನಿನ್ನ ನಂಬಿದೆನು ತಿರುಪತಿಯ ವೆಂಕಟರಮಣಧನ್ಯ ಧನ್ಯನು ಧನ್ಯನೂ ದೇವಾ 7ಕಂ|| ಬುಧವಾರದರ್ಚನೆಯನಿದಮುದದಿಂ ಸ್ವೀಕರಿಸಿ ನನ್ನ ಮೊರೆಯಂ ಕೇಳ್ದಾಬುಧ ಸಂಗವನಿತ್ತು ನಿನ್ನಪದಸೇವಕನೆನಿಪುದೆಂದು ವೆಂಕಟರಮಣಾಓಂ ಕಾಳೀಯ ಫಣಾಮಾಣಿಕ್ಯರಂಜಿತ ಶ್ರೀಪದಾಂಬುಜಾಯ ನಮಃ
--------------
ತಿಮ್ಮಪ್ಪದಾಸರು
ನೀರಜ ಯುಗ ಮನೋ - ವಾರಿಜದಲಿ ನಾ ಭಜಿಸುವೆನು ಪ ಸಾರಿದ ಜನರ‌ಘದೂರದಿ ಓಡಿಸಿ ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ ಅವರ ಪದಜಲ ಈ ಭುವನತ್ರಯ ಪಾವನ ತರವೆಂದೆನಿಸುವದೋ ಅವರ ಪದಯುಗ ಕೋವಿದಜನರು ಭಾವದಿ ದಿನದಿನ ಸೇವಿಪರೋ ಅವರ ಹೃದಯದಿ ನಾರಾಯಣ ಚ - ಕ್ರಾವತಾರವ ಧರಿಸಿಹನೊ ಶ್ರೀವರ ಹರಿ ಕರುಣಾವಲೋಕನದಿ ದೇವಸ್ವಭಾವವ ನೈದಿಹರೋ 1 ಆವ ಮಾನವನಿವರಚರಣ ಸೇವಕತೆರನೆಂದೆನಿಸುವನ್ನೋ ಕೋವಿದ ಜನರೆಲ್ಲರು ಆವನ ದೇವೋತ್ತುಮನೆಂದೆನಿಸುವನು ಪಾವನಿ ಮುಖ ದೇವೋತ್ತುಮರೆಲ್ಲರು ಈ ವಿಧ ಮಹಿಮೆಯ ತೀವ್ರದಿ ತೋರುವ 2 ಅವರು ಅವನೀ ದೇವತೆಗಳಿಗೆ ಜೀವನವಿತ್ತು ಪೊರೆದಿಹರೋ ಪಾವಕಘಾಕಿದ ಹಾರವ ಮತ್ತೆ ಭೂವರನಿಗೆ ತಂದಿತ್ತಿಹರೋ ಮಾವಿನ ರಸದಲಿ ಬಿದ್ದಿಹ ಶಿಶುವಿಗೆ ಜೀವನವಿತ್ತು ಕಾಯ್ದಿಹರೋ ಶೈವನ ನಿಜಶೈವವ ಬಿಡಿಸೀ ತಮ್ಮ ಸೇವೆಯನಿತ್ತು ಕಾಯ್ದಿಹರೋ 3 ಸಲಿಲವ ತಂದಿರುತಿಹ ನರನಿಗೆ ಸುಲಲಿತ ಮುಕ್ತಿಯನಿತ್ತಿಹರೋ ಚಲುವ ತನಯನಾ ಪುಲಿನದಿ ಪಡೆದಿಹ ಲಲನೆಯ ಚೈಲದಿ ಕಾದಿಹರೋ ಸಲಿಲವು ಇಲ್ಲದೆ ಬಳಲಿದ ಜನಕೆ ಸಲಿಲವನಿತ್ತು ಸಲಹಿದರೋ ಇಳೆಯೊಳು ಯತಿಕುಲತಿಲಕರೆಂದೆನಿಸಿ ಸಲಿದಂಥದು ತಾವು ಸಲಿಸಿಹರೋ 4 ಅನುದಿನದಲಿ ತಮ್ಮ ಪದಕಮಲವನು ಮನದಲಿ ಬಿಡದೆ ಭಜಿಸುವರಾ ಜನರಿಗೆ ನಿಜಘನಸುಖವನು ಕೊಟ್ಟವ - ರನುಸರಿಸೀ ಇರುತಿಹರಾ ಮನೋ ವಾಕ್ಕಾಯದಿ ನಂಬಿದ ಜನಕೆ ಜನುಮವನ್ನುನೀಡರು ಇವರ ಘನಗುಣ ನಿಧಿ ಗುರುಜಗನ್ನಾಥ ವಿಠಲ - ನಣುಗಾಗ್ರೇಸರೆರೆನಿಸಿಹರಾ 5
--------------
ಗುರುಜಗನ್ನಾಥದಾಸರು
ನೀಲಕಂಠನ ಸುತಗಭಿನಮಿಸಿ ಆದಿಬ್ರಹ್ಮನ ಸತಿಯಳ ಭಜಿಸಿ ನೀಲವರ್ಣನು ಲಕ್ಷ್ಮೀಲೋಲನ ದಯದಿಂದ ಪಾಲಿಸಿದರೆ ಪಾಡಿ ಪೊಗಳುವೆನು ಪ ಜಯ ಜಯ ಭೀಮ ಭಾರತಿಗೆ ಜಯ ಜಯ ಧರ್ಮ ಭೀಮಾರ್ಜುನರಿಗೆ ಜಯ ದ್ರೌಪದಿ ನಕುಲ ಸಾದೇವಗೆ .......... ........... ............ 1 ಉಕ್ಕುವೊಯೆಣ್ಣೆಯೊಳಗೆ ನೋಡಿ ಕೊಟ್ಟೇನೆನುತ ಪರಮುತ್ಸವದಿಂದಲಿ ಪೃಥಿವಿರಾಯರಿಗ್ವಾಲೆ ಬರೆದ ರಾಯ 2 ದಿಕ್ಕು ದಿಕ್ಕಿನ ರಾಜರು ಬರಲು ಕೃಷ್ಣ್ಣೆಸ್ವಯಂವರ ನೋಡಬೇಕೆನುತ ವಿಪ್ರವೇಷವÀ ಧರಿಸಿ ಹೆತ್ತಮ್ಮನ ಸಹಿತಾಗಿ ಸತ್ಯಪಾಂಡವರು ಬಂದರು ಬ್ಯಾಗ 3 ಬಲವಂತ ರಾಯರೆಲ್ಲರು ತಾವು ಬಲುಮೆಯಿಂದಲಿ ಧನುವೆತ್ತಿ ಬೀಳೆ ಹಲಧರನನುಜ ತಾ ಚೆಲುವ ಪಾರ್ಥನ ನೋಡಿ ಬಲವಕೊಟ್ಟನು ಭೀಮಾರ್ಜುನಗೆ 4 ಸಾದೇವನನುಜ ಸುಂದರ ಪಾರ್ಥ ಆದಿಮೂರುತಿಯ ಪಾದಕ್ಕೆ ನಮಿಸಿ ಕಾದಯೆಣ್ಣೆಯ ನೋಡಿ ಕಟ್ಟಿದ ಮೀನವ ತಾ ಧನುವೆತ್ತಿ ಹೊಡೆದನಾಗ 5 ಚೆಲ್ಲೆಗಂಗಳ ದ್ರೌಪದಿದೇವಿ ವಲ್ಲಭ ಪಾರ್ಥಗೊಲಿದು ಬ್ಯಾಗ ಮಲ್ಲಮರ್ದನಸಖನಲ್ಲಿ ನಡೆದು ಬಂದು ಮಲ್ಲಿಗೆ ಮಾಲೆ ಹಾಕಿದಳಾಗ 6 ವಿಪ್ರ ಕ್ಷತ್ರಿಯರೊ ದಾವಕುಲವೊ ನೆಲೆ ಕಾಣದಲೆ ಮಾಜದೆ ನಿಮ್ಮ ಮರ್ಮಗಳ್ಹೇಳಬೇಕೆಂದು ಕೇಳುತ್ತಿದ್ದನು ಕಂಗೆಡುತ ರಾಯ 7 ಮಚ್ಛಯೆಸೆಯಲು ಮಗಳ ನಾನು ಕೊಟ್ಟೇನೆನುತ ನಿಶ್ಚಯವ ಮಾಡಿ ಇಷ್ಟುವಿಚಾರದಿಂದೀಗೇನು ಫಲವೆಂದು ಸತ್ಯಧರ್ಮಜ ನುಡಿದನು ನಗುತ 8 ಕೇಳುತ ಕುಂತಿಸುತರುಯೆಂದು ಭಾಳ ಸಂಭ್ರಮದಿ ಪಾದವ ತೊಳೆಯೆ ಕಾಲ ನೀಡಲು ಕಂಡು ತಾ ಜಾರಿ ಹಿಂದಕ್ಕೆ ಸರಿದ ರಾಜ9 ಸತ್ಯವತಿಯ ಸುತರ್ಹೇಳುತಿರೆ ಮತ್ತಾಗೆರೆದನು ಮಗಳ ಧಾರೆ ಮುತ್ತು ಮಾಣಿಕ್ಯದ ಮಂಗಳಸೂತ್ರವ ಕಟ್ಟಿ ಕೊಟ್ಟನೈವರಿಗೆ ದ್ರೌಪದಿಯನಾಗ 10 ಲಾಜಾಹೋಮವು ಭೂಮಾನಂತರದಿ ಮೂರ್ಜಗದೊಡೆಯ ಕೃಷ್ಣನ ಸಹಿತ ರಾಜಾಧಿರಾಜರೈವರು ಕುಳಿತಿರೆ ಕೃಷ್ಣ ರಾಜ ಧರ್ಮರ ವಾಮಭಾಗದಲಿ 11 ರುಕ್ಮಿಣಿದೇವಿ ಪಾರ್ವತಿ ಗಂಗಾ ಸತ್ಯಭಾಮೇರ ಸಹಿತಾಗಿ ಬಂದು ಸತ್ಯ ಪಾಂಡವರಿಗೂಟಣಿ (ಉರುಟಣೆ?) ಮಾಡಬೇಕೆಂದು ಕೃಷ್ಣೆ ನೀಯೇಳೆಯೇಳೆನುತಿದ್ದರು 12 ಕಂಜನೈಯ್ಯನು ಕಡೆನೋಟದಲಿ ತಂಗಿ ಕೃಷ್ಣೆಯ ಮುಖವನು ನೋಡಿ ಅಂಜದಲ್ಹೇಳುತಲೈವರ ಗುಣಗಳ ಹಂಗೀಸೂಟಾಣಿ ಮಾಡಬೇಕೆಂದನು 13 ಕನ್ನೆ ದ್ರೌಪದಿ ಅರಿಷಿಣ ಪಿಡಿದು ತನ್ನ ಪತಿಗೆ ಎದುರಾಗಿ ನಿಂತು ಸುಮ್ಮನೆ ರಾಜ್ಯವ ಬಿಟ್ಟು ವನವನಾ ತಿರುಗೋ ಧsÀರ್ಮರೇ ನಿಮ್ಮ ಮುಖ ತೋರಿರೆಂದಳು 14 ಕಂಕಭಟ್ಟೆನಿಸುವೊ ದೊರೆಗಳಿಗೆ ಕುಂಕುಮ ಹಚ್ಚುವೆ ಕುಶಲದಿಂದ ಪಂಚಾಂಗ ಪಠಿಸುವ ಪಾಣಿಯ ಪಿಡಿದು ನಾ ಮುಂಚೆ ಗಂಧವ ಹಚ್ಚುವೆನೆಂದಳು 15 ಯಿಟ್ಟಸತಿಯ ಅನುಜರನೆಲ್ಲ ಗಟ್ಟಿ ಹೃದಯಕ್ಕೆ ಬುಕ್ಕಿ ್ಹಟ್ಟು ಪರಿಮಳ ಹಚ್ಚಿ ಅಚ್ಚ ಮಲ್ಲಿಗೆ ಹಾರ ಹಾಕುವೆನೆಂದಳು 16 ಶಾಂತಧರ್ಮರ ಚರಣಕ್ಕೆ ಎರಗಿ ಮಂತ್ರಿಭೀಮನ ಮುಂಭಾಗದಲಿ ಕಾಂತರ ಮುಖಕ್ಕೆ ಹಚ್ಚುವೆನೆಂದಳು 17 ಬಂದೇಕಚಕ್ರನಗರದಲ್ಲಿ ಬಂಡಿಲನ್ನವನುಂಡು ¨ಕಾಸುರನ ತುಂಡು ಮಾಡ್ಯವನ ತೋರಣ ಕಟ್ಟಿದ ತೋಳಿಗೆ ಗಂಧವ ಹಚ್ಚೇನೆಂದಳು ನಗುತ 18 ಇಟ್ಟ ವಿಷದ ಲಡ್ಡಿಗೆಯ ಮೆದ್ದು ಭಿಕ್ಷÀದನ್ನವು ಬರಿಯಾಗದಲೆ ಹುಟ್ಟುಹಿಡಿದು ಅಟ್ಟುಂಬೋ ಪುರುಷರಿಗೆ ಬು- ಕ್ಕಿ ್ಹಟ್ಟು ಪರಿಮಳ ಹಾಕುವೆನೆಂದಳು 19 ಕಪಿಗಳೊಳಗೆ ಶ್ರೇಷ್ಠರುಯೆನಿಸಿ ಅತಿ ಬ್ಯಾಗದಿಂದ ಕೌರವರ ಕುಲ ಹತವ ಮಾಡ್ಯತಿಯಾಗೋ ಪತಿಗೆ ಮಾಲೆಯ ಹಾಕಿ ಅತಿ ಭಕ್ತಿಲಿಂದೆರಗಿದಳಾಗ 20 ಸರಸಿಜಮುಖಿ ದ್ರೌಪದಿದೇವಿ ಅರಸು ಅರ್ಜುನಗೆದುರಾಗಿ ನಿಂತು ಅರಿಷಿಣ ಕುಂಕುಮ ಪಿಡಿದು ಸ್ತ್ರೀರೂಪವ ಧರಿಸುವ ನಿಮ್ಮ ಮುಖ ತೋ(ರಿ)ರೆಂದಳು 21 ತಂದು ಗಜವ ತೋ
--------------
ಹರಪನಹಳ್ಳಿಭೀಮವ್ವ
ನೀಲಕಂಧÀರಾ ಪಾಲಿಸು ಎನ್ನ ನೀಲಕÀಂಧರಾ ಪ ಸುರರು ತಾವು ತಾಳದೆ ಬಿಟ್ಟಿಹ ಕಾಳಕೂಟವನು ತಾಳಿದ ಧೀರಾ ಅ.ಪ ಇಂದುಶೇಖರಾ ನಮಿಸುವೆÀ ನಿನ್ನ ನಂದಿಯ ತೇರಾ ಇಂದ್ರವಂದ್ಯಹರ ಮಂದಾಕಿನಿ ಧರ ಗೊಂದೆವಳವಿಗೆ ಮುಕುಂದನ ದಾಸ 1 ಶಂಭೋ ಮಹಾದೇವ ಭಜಿಸುವ ಭಕುತಕ - ವಂದಿಪ ಜನಕಾ - ನಂದ ನೀಡುವ ಗೋ - ವಿಂದನ ನಿಜಮನ ಮಂದಿರದಲಿ ತೋರೋ 2 ಭೂತನಾಥನೆ ಗುರುಜಗನ್ನಾಥವಿಠಲ ದೂತನೆ ಪಾತಕರಾಶಿಯ ಘಾತಿಸು ತ್ರಿಪುರಾ - ರಾತಿಯೆ ನಿನ್ನಲಿ ಪ್ರೀತಿಯ ಸಲಿಸೋ 3
--------------
ಗುರುಜಗನ್ನಾಥದಾಸರು
ಪುರಂಜನೋಪಾಖ್ಯಾನ ಲಾವಣಿ ಗೆರಗಿ ಮಹೇಶ್ವರನಾ ಶಾರದೆಯ ಸರಸಿಜಸಂಭವನಾ | ಇಂದಿರೆ ಪರಮಭಕ್ತಿಯಲಿ ಪ್ರಾರ್ಥಿಸಿ ಸತ್ಕವಿ ಕರುಣಿಪುದು ಜ್ಞಾನ | ಚರಣಗಳಿಗೆ ಬಿನ್ನೈಸುವೆನಾ 1 ಯತಿಗಣಪ್ರಾಸೊಂದಾದರು ತಿಳಿಯದು ಮತಿಹೀನನು ನಾನು | ನಾನಾಚಮ- ತ್ಕøತಿಗಳರಿಯದವನು | ಆದರೀ ಕೃತಿಯಲಿ ತಪ್ಪೇನು | ಮತಿವಂತರಾಲಿಸುವುದು ನೀವಿದನು 2 ಒಂದರೊಳಗೆ ಎರಡಾಗಿ ಎರಡರೊಳು ಹೊಂದಿ ಮೂರ್ನಾಲ್ಕೈದಾಗಿ ಆರೇಳೆಂಟೊಂಬತ್ತುಗಳಾಗಿ | ಸಕಲದೊಳು ಹೊಂದಿರುವುದುತಾಗಿ ಕುಂದಿಲ್ಲದೆ ಇರುತಿರುವ ಮಹಾತ್ಮನ ರಂದವ ಚನ್ನಾಗಿ | ತಿಳಿದು ಸುಖ ತಂದವನೇಯೋಗಿ 3 ಮೊದಲು ಮಹತ್ ಸೃಷ್ಟಿಯಲಿ ಎಲ್ಲತ- ತ್ವದಲಿ ತೋರುತಿಹುದು ಬೇರೆಬೇರಾಗಿ ಕಾಣಿಸುವುದು ಅದುಭುತವಾಗಿಹ ಅನಾದಿ ಕರ್ಮತ್ರಿ- ವಿಧದಿ ಭಾದಿಸುವುದು | ಅದರೊಳು ಬಿ- ಡದೆ ತಾ ಮುತ್ತುವುದು ಎಂದಿಗು ನಿಜವತಿ ರಹಸ್ಯವಿದು 4 ಮೊಟ್ಟೆವೊಂದು ದಶಸಾವಿರವರುಷಗ ಳಿಟ್ಟು ಜಲದಿತಾನು | ಅದಕೆ ಕೈ- ಗೊಟ್ಟು ಎಬ್ಬಿಸಿದನು | ನಾನಾ ವಿಧ ವೆಷ್ಟಿ ಸಮಷ್ಟಿಗಳೆರಡೆಂದದರೊಳು ಗುಟ್ಟಂಗಡಿಸಿದನು | ಗುರಿಯಮಾ ಡಿಟ್ಟು ಚೇತನಗಳನು | ಅನೇಕವು ಪಟ್ಟಣ ರಚಿಸಿದನು 5 ಈ ಪಟ್ಟಣಕಾರ್ ಮಂದಿ ಇರುವರತಿ ಕಾಪಾಡುವರದರೊಳು ವ್ಯಾಪಾರಗಳನು | ಬಹುವಿಧಮಾಡುವ- ರಾಪುರ ಜನರುಗಳು | ಇವರುನಡೆ ಕೋಪಿಸೆ ಹಗಲಿರುಳು 6 ಎರಡು ಮಾರ್ಗದೊಳಿರುತಿಹರೆಲ್ಲರು ಹುರುಡಿಲ್ಲವುನೋಡೆ | ಗಜಿಬಿಜಿಯು ತರತರದಲಿಮಾಡೆ | ನಮಗಿದೆ ಸ್ಥಿರವೆನ್ನುತ ಕೂಡೆ | ಪರಿಪರಿ ಬಗೆಯಲಿ ಭೇದ ಪುಟ್ಟುವುದು ಕರೆಕರೆಯಂದುಡೆ | ವಳಗೆಕೆಲ ಬರುಹರುಷದಿ ನೋಡೆ | ಯುವಶೃಂ- ಗರುವು ಇದಕೆ ಈಡೆ 7 ಇದೆತನ್ನದೆನುತೋರ್ವಳು ಮಾನಿನಿ ಚದುರತನದಿ ಬಂದು | ಊರ ಮುಂದಿರುವ ವನದಿ ನಿಂದು | ಅವಳಿಗಿರು ವುದು ಜನ ಹನ್ನೊಂದು ಚದುರೆಯೈದುತಲೆ ಸರ್ಪವಾಡಿಸುತ ಜಾಣೆಯಿರುವಳಂದು | ತಾನೊಬ್ಬನ ಇಂದು | ಸುಖದೊಳಾ- ಳ್ಬೇಕುರಾಜ್ಯವೆಂದು 8 ಅರಸನೊಬ್ಬ ವಿಜ್ಞಾತನೆಂಬ ಭೂ- ಸುರನಸಹಿತನಾನಾ | ದೇಶಗಳ ತಿರುಗುತ ಉದ್ಯಾನ | ವನದಿಕಂ- ಡನು ಆತರುಣಿಯನ ಪರಮ ಮಿತ್ರನಹ ಬ್ರಾಹ್ಮಣನ ಮರೆತು ಹರುಷದಿ ಪೊಕ್ಕುವನ | ಸ್ಮರಶರಕೆ ತರಹರಿಸುತಲಿರೆ ಮನ | ಕೇಳಿದನು ನಗುತಲಿ ನಾರಿಯನ 9 ಯಾರೆ ಹುಡುಗಿ ನೀನ್ಯಾರೆ ನಿನ್ನ ಪೆಸ- ರೇನು ಪೇಳೆ ಹೆಣ್ಣೆ | ಮಾತನಾ- ಡೆಲೆ ತಾವರೆಗಣ್ಣೆ | ನಿನ್ನ ಮೈ- ಸುಲಿದ ಬಾಳೆಯ ಹಣ್ಣೆ ಯಾರದು ಈ ಜನ ಉರಗವೇನು ವನ- ವಾರದು ಶಶಿವದನೆ | ಈ ಪುರವ- ನಾಳುವನಾವವನೆ | ಒರ್ವಳಿ- ಲ್ಲಿರುವುದಕೇನ್ಹದನೆ 10 ಎನಲು ನಸುನಗುತವನಿತೆನುಡಿದಳೀ ಜನಗಳು ನನ್ನವರು | ಇಲ್ಲಿಕಾ- ಣುವ ಪುರ ನನ್ನೂರು | ಸರ್ಪನ- ನ್ನದು ಇದಕಿನ್ನಾರು | ಅರಸರಿಲ್ಲ ನಾನೊಬ್ಬಳಿರುವೆನೀ ವನದೊಳು ನೀನ್ಯಾರು | ನಿನ್ನಕಥೆ ವಿವರಿಸೆನಗೆ ತೋರು | ಯನ್ನ ಬಳಿ- ಗಿಷ್ಟವಿರಲುಸಾರು 11 ಎಲ್ಲಿ ನೋಡೆ ಸ್ಥಳವಿಲ್ಲವೆನಗೆ ನಿ- ನೆನ್ನ ಪುಷ್ಪಶರನು | ನೀನುಪೇ- ಪರಿ ವಲ್ಲಭನನು ಮಾಡಿಕೊ ಎನ್ನನು ಬಹು ಬಲ್ಲಿಯಳೆ ನೀನು | ನಿನ್ನಸರಿ ಚಲ್ವೆಯರಾರಿನ್ನು | ಇಬ್ಬ- ರಾಳ್ವೆಯೀವೂರನ್ನು 12 ಎನಲು ಹರುಷಗೊಂಡಾಕೆ ಸಮ್ಮತಿಸಿ ಜನವೆರಗಿತಂದು | ನುಡಿದಳಾಮೊಗದ- ಲಿನಗೆತಂದು | ನಿನ್ನಮೇಲ್ ಮನಸಾಯಿತುಯಿಂದು ನಿನ್ನನು ಮಾನವೇತಕಿಂದು | ಆಳು ಜನಸಹಿತ ಪುರವ ಮುಂದು ನೀನು ನಾನಿರುವೆವಾಗಿವಂದು 13 ಸರ್ವವನ್ನು ಭವದಿ ಆದರಿಸುತತತ್ಪುರ ಮಧ್ಯ | ದೊ ಳುಪ್ಪರಿಗೆಯೇರಿ ತ್ವರದಿ | ಸರ ಸಗಳನಾಡಿ | ಬಹುತರದಿ ಮುಳುಗಿ ಸಂಸಾರವೆಂಬಶರಧಿ 14 ಅನ್ನಪಾನಾಭರಣ ಕುಸುಮ ವಿನ್ನು ಗಂಧಧೂಪ | ತಾಂಬೂಲಗಳ ಮನ್ನಣೆಯಲಿ ಭೂಪ | ಪೊಂದಿದ ಸುಖ ವನು ನಾನಾರೂಪ | ನನ್ನದು ಎನ್ನುತಲಿ ಪ್ರತಾಪ | ಶಾಲಿತಾ- ರಾಜ್ಯವಾಳಿದನಾಗುತಭೂಪ 15 ದ್ವಾರಗಳೊಂಭತ್ತಾಪುರಕಿರುವುದು ಮೂರು ಪೂರ್ವದಲ್ಲಿ | ಮೇ- ಲೆರಡು ಕಿಟಕಿಗಳಿಹವಲ್ಲಿ | ಬಿಗಿಸಿ ಕಟ್ಟಿಹುದು ಕನ್ನಡಿಯಲಿ ತೋರುವುದುತ್ತರದಕ್ಷಿಣದೊಳೆರಡು ದ್ವಾರ ಪಶ್ಚಿಮದಲಿ ಕಾರಣವದರಲ್ಲಿ 16 ಮತ್ತದರೊಳಗಾರ್ಸುತ್ತು ಕೋಟೆ ಒಂ- ಬತ್ತು ಬಾಗಿಲ ಪುರದಿ | ಅನೇಕವು ಗೊತ್ತನಾವವಿಧವಿ | ಉತ್ತಮವಹಪುರದಿ | ಮುಖ್ಯವಾ- ಗಿರುವದೆರಡು ಬೀದಿ | ದೊರೆಯಮನೆ- ಯಿರುವುದು ವಿಸ್ತರದಿ17 ಇಂತರಮನೆಯಲಿ ದೊರೆ ಕಲಿಯಾಗುತ ಕಾಂತೆಯೊಡನೆ ಸೇರಿ | ಸದಾಸು- ಸ್ವಾಂತನಾಗಿಮೀರಿ | ಸೌಖ್ಯಹೊಂ- ದುತಲಾವೈಯ್ಯಾರಿ ನಿಂತರೆ ನಿಲುವನು ಕುಳಿತರೆ ಕೂಡುವ ಮಲಗಿದರೆ ನಾರಿ | ತಾನು ಮಲಗುವಯೇಕದಿ ಸೇರಿ | ಉಂಡ- ರುಣ್ಣುವನು ಅವಳನುಸಾರಿ 18 ಮನದಿಯೋಚಿಸದನೂ | ಈಗಲೆ ಮೃಗಯಾತ್ರೆಗೆತಾನೂ | ಸೊಗಸಿಂದ ಸೈನ್ಯವ ಕೂಡುತ ಪುಂ- ಚಪ್ರಸ್ಥವನವನು | ಪೊಕ್ಕು ಅ- ಲ್ಲಿರುವಮೃಗಗಳನ್ನು | ಹೊಡೆದು ಸಂ- ತೋಷದಿ ಸುಖಿಸುವೆನು 19 ಮೂರೆರಡು ಕುದುರೆಯೈದು ಮೇಲ್ ಮೂರು ಪತಾಕಿಗಳು | ಅ- ಚ್ಚೆರಡು ಎರಡು ಕೂಬರಗಳು | ಚಕ್ರ ವೆರಡುವರೂಥಗಳೇಳು ಆರಥಕೊಪ್ಪುವದೇ- ಕರಶ್ಮಿನಾಲ್ಕೊಂದು ವಿಕ್ರಮಗಳು | ಒಬ್ಬ ಸಾರಥಿ ಎರಡು ಗತಿಗಳು | ಬಿಗಿಸಿಹುದು ಕನಕಭೂಷಣಗಳು 20 ಪುರಂಜನ ಭೂ- ಕಾಂತಕರದಿ ಧನುವ | ಪಿಡಿದುಸು- ಸ್ವಾಮತದಿಂದಲನುವಾ | ಗಿಬಹ ಹನ್ನೊಂ- ದು ತನ್ನ ಜನನ | ಸಂತಸದಲಿ ಕೂ- ಡುತ ಹೊರಡುತ ತಾ ಪೊಕ್ಕನು ಕಾನನವಾ | ಶರಗಳಿಂ- ದ್ಹೊಡದು ಮೃಗನಿವಹವಾ | ಮೇರೆಯಿಲ್ಲ- ದೆ ತಟ್ಟುತ ಭುಜವಾ 21 ಇನಿತು ಬೇಟೆಯಾಡುವ ಕಾಲದಿ ತನ್ನ ಮನದಿ ನೆನೆದು ಸತಿಯಾ | ತಕ್ಷಣವೇ ಬಂದು ಸೇರಿ ಮನೆಯ | ಕಾಣದೆ ಹುಡುಕಿದನು ಯುವತಿಯ ಮಂಚದೊಳಿಹ ಸತಿಯ | ಕಂಡುಲಾ- ಲಿಸುತ ಚಮತ್ಕøತಿಯಾ | ನುಡಿಯಲುಪ- ಚರಿಸಿದನಾಕಾಂತೆಯ 22 ನೂರುವರುಷವೀರೀತಿಯವಳೊಡನೆ ನೂರುಹನ್ನೊಂದು ಮಕ್ಕಳನ್ನು | ಪಡೆದು ಸಂ- ಸಾರದಿ ಕಾಲವನು | ಯಾರೆ- ಮೀರಿ ಹೋದುದಿನ್ನು | ಮೊಮ್ಮಕ್ಕಳ ಪಡೆದನನೇಕರನು ದೇಶತುಂಬಿಸಿದ ತನ್ನ | ವರನು 23 ಉತ್ತರ ದಕ್ಷಿಣ ಪಾಂಚಾಲಗಳಾ ಳುತ್ತಲಿವನು ತನ್ನ | ಸುತರಬೆರೆ- ಯುತ್ತಸದಾ ಚಿನ್ನ | ಬೆಳ್ಳಿ ನವ- ರತ್ನರಾಶಿಗಳನಾ | ಮತ್ತೆ ಮತ್ತೆ ಕೂಡಿ- ಸುತೈಶ್ವರ್ಯದಿ ಮತ್ತನಾ | ಗುತಲನ್ಯಾ ಚಿಂತೆಯಿಲ್ಲದೆ ನಾ | ಬಲು ಪುಣ್ಯವಂತನೆ | ನ್ನುತ್ತತಿಳಿದಿರುವನಾ 24 ಚಂಡವೇಗವೆಂಬುವರಾ ತಮ್ಮತಮ್ಮ ಹೆಂಡಿರುಗಳು ತಾವು | ಸೇರಿಮು- ನ್ನೂರರವತ್ತು ಜನವು | ಗಂಧರ್ವರು ಬಂಡೆಬ್ಬಿಸಿ ಪುರವು | ದಂಡು ಮುಂದಾಗೆ ರಿಪುಬಲವು | ಕ್ಷೀಣಗತಿ ಹೊಂದುತಲಿರೆ ಪುರವು 25 ಸ್ತ್ರೀಜಿತನಾಗಿಹಕಾರಣದಲಿಯಾ ರಾಜಪುರಂಜನಗೆ | ಯತ್ನವಿ- ಲ್ಲದೆ ತನ್ನಯಪುರಿಗೆ | ಕೇಡುಬಂ- ದರು ತೋರದು ಕೊನೆಗೆ | ಶೋಕದಿ ಮನದೊಳಗೆ | ಮಿ ಡುಕುತಲಿರಲಾನೃಪತಿಮೇಗೆ | ಮತ್ತು ಶತ್ರುಗಳುನೆರೆಯೆ ಹೀಗೆ 26 ಯವನೇಶ್ವರನೊಬ್ಬನುಭಯಪ್ರಜ್ವಾ ರಾದಿ ಸೈನಿಕರನು | ಕಾಲಕನ್ಯಾಖ್ಯ ಯುವತಿಯನ್ನು | ಕರೆದುಕೊಂ- ಡೀಪುರವ ಸೇರಿದನು | ಬವರದಿ ಗೆದ್ದನು ಭವಿಸಿದನಾ ಕನ್ಯಾಮಣಿಪಟ್ಣವನು | ಭೋಗಿಸಿದ- ಳಾಪ್ರಜ್ವಾರನನು | ಸುಡಲುಪುರಿ ಕಂಡು ಪುರಂಜನನು 27 ಕಾಲಕನ್ಯೆ ತಾ ಲೀಲೆಯಿಂದಲಿ ನೃ- ಪಾಲನ ಹತ್ತಿಗೆಯಾ | ಪಿಡಿಯೆ ಹಾ- ಹಾಯೆನಲಾರಾಯಾ | ಅಬಲತೋ- ರದು ಮುಂದೆ ಉಪಾಯ | ಬಾಲಕರನು ಪತ್ನಿಯ | ನುಕೂಗಿಬಿಡು-
--------------
ಗುರುರಾಮವಿಠಲ
ಪ್ರಸನ್ನ ರಾಮಾಯಣ ಸುಂದರಕಾಂಡ ಜಯ ಜಯ ಜಯ ರಾಮಚಂದ್ರ ಜಯ ರಾಮಭದ್ರ ಸರ್ವೇಶ ಜಯ ಜಯ ಜಯ ರಾಮ ಸ್ವರತ ಆಹ ಜಯ ಸೀತಾರಮಣ ನೀ ಭಯಬಂಧ ಮೋಚಕ ಜಲ ಸಂಭವಮುಖ ಸುರಸೇವ್ಯ ನಮೋ ನಮೋ ಪ ಶಾಶ್ವತ ಸುಗುಣಾಬ್ಧಿ ರಾಮ ಸವೇಶ್ವರನೆ ಬಲವೀರ್ಯ ಸಂಪೂರ್ಣಾರ್ಣವ ನಿನ್ನ ನಮಿಸಿ ಆಹ ಶೀಘ್ರ ಆ ಗಿರಿಯೆತ್ತಿ ಹನುಮ ಹಾರಲು ಆಗ ಸಾಗರ ಸರ್ವವು ಕಲಕಿ ಓಡಿತು ಕೂಡ 1 ಹಿಂದೆ ಪರ್ವತಗಳ ಪಕ್ಷ ಹನನ ಕಾಲದಿ ವಾಯು ತನ್ನ ಹಿತದಿ ರಕ್ಷಿಸಿದನು ಎಂದು ಆಹ ಹಿಮಗಿರಿಸುತ ಮೈನಾಕನು ಮೇಲೆ ಬಂದಾಗ ಹನುಮಗೆ ನಮಿಸಿ ವಿಶ್ರಮಿಸಿಕೊಳ್ಳೆಂದ2 ಶ್ರಮರಹಿತನು ಎಂದೂ ಹನುಮ ಶ್ರಮ ನಿವಾರಣ ಅನಪೇಕ್ಷ ಆಶ್ಲೇಷಿಸಿ ನಗವರನ ಆಹ ನಿಸ್ಸೀಮ ಪೌರುಷ ಬಲಯುತ ಹನುಮನು ನಿಲ್ಲದೆ ಮುಂದೆ ತಾ ಸುರಸೆಯೊಳ್ ಹೊಕ್ ಹೊರಟ 3 ಪರೀಕ್ಷಿಸೆ ಸುರಸೆಯ ಸುರರು ಪ್ರೇರಿಸಿ ವರವನ್ನು ಕೊಡಲು ಆಹ ಫಣಿಗಳ ತಾಯಿ ಅವಳು ಬಾಯಿ ತೆರೆಯಲು ಪೊಕ್ಕು ಲೀಲೆಯಿಂ ಹನುಮ ಹೊರಹೊರಟ4 ಸುರರು ಆನಂದದಿ ಆಗ ಸ್ತುತಿಸಿ ಹನುಮನ ಕೊಂಡಾಡಿ ಸುರಿಯಲು ಪುಷ್ಪದ ಮಳೆಯ ಆಹ ಶೀಘ್ರ ಪವನಜನು ಮುಂದೆ ತಾ ಹೋಗುತ್ತ ಸಿಂಹಿಕಾ ರಾಕ್ಷಸಿ ಛಾಯಾಗ್ರಹವ ಕಂಡ 5 ಸರಸಿಜಾಸನ ವರಬಲದಿ ಸಿಂಹಿಕಾ ಲಂಕಾ ಪೋಗುವರ ಸೆಳೆದು ತಾ ನಿಗ್ರಹಿಸುವಳು ಆಹ ಸೆಳೆಯೆ ಆ ರಾಕ್ಷಸಿ ಹನುಮನ ಛಾಯೆಯ ಸೀಳಿದ ಹನುಮ ಅವಳ ಶರೀರದಿ ಪೊಕ್ಕು 6 ತನ್ನ ನಿಸ್ಸೀಮ ಬಲವನು ತೋರಿಸಿ ಈ ರೀತಿ ಹನುಮ ಧುಮುಕಿದ ಲಂಬ ಪರ್ವತದಿ ಆಹ ತೋರ್ಪುದು ಲಂಕಾ ಪ್ರಕಾರದೊಲï ಈ ಗಿರಿ ತನ್ನ ರೂಪವ ಸಣ್ಣ ಹನುಮ ಮಾಡಿದನಾಗ 7 ಆಗಿ ಬಿಡಾಲದೊಲ್ ಸಣ್ಣ ಅಸಿತ ಕಾಲದಿ ಪೋಗೆ ಪುರಿಗೆ ಅಲ್ಲಿದ್ದ ಲಂಕಿಣಿ ತಡೆಯೆ ಆಹ ಅವಳ ಹನುಮ ಮುಷ್ಟಿಯಿಂದ ಕುಟ್ಟಿ ಜಯಿಸಿ ಅನುಮತಿಯಿಂದಲ್ಲೆ ಲಂಕೆಯೊಳ್ ಪೋದ 8 ಶ್ರೀಘ್ರ ಅಶೋಕ ವನದಲಿ ಶಿಂಶುಪಾವೃಕ್ಷ ಮೂಲದಲಿ ಸೀತಾ ಅಕೃತಿಯನು ಕಂಡ ಆಹ ಸೀತೆಗೆ ಏನೇನು ಭೂಷಣ ಉಂಟೋ ಸೀತಾ ಆಕೃತಿಗೂ ಸಹ ಅದರವೊಲಿತ್ತು 9 ಅವನಿಯೋಳು ನಿನ್ನ ವಿಡಂಬ ಅರಿತು ಅನುಸರಿಸಿ ಹನುಮ ಅದರಂತೆ ಪರಿಪಂಥಾವಳಿಗೆ ಆಹ ಅವಶ್ಯ ಮಾತುಗಳಾಡಿ ಅಂಗುಲೀಯಕವೀಯೆ ಚೂಡಾಮಣಿ ನಿನಗೆಂದು ಕೊಟ್ಟಳು 10 ಅರಿಯರು ರಾಕ್ಷಸರಿದನು ಅಮರರು ಕಲಿಮುಖರೆಲ್ಲ ಅವಲೋಕಿಸಿದರು ಈ ಕಾರ್ಯ ಆಹ ಅಮರರು ಲೋಕವಿಡಂಬವಿದೆಂದರಿಯೆ ಅಧಮ ಕಲ್ಯಾದಿಗಳ್ ಮೋಹಿತರಾದರು 11 ಕೃತಕೃತ್ಯವಾಗಿ ತಾ ಹನುಮ ಕೋವಿದೋತ್ತಮ ಬಲವಂತ ಕಾಣಿಸಿಕೊಳ್ಳುವ ಮನದಿ ಕಿಂಚಿತ್ತೂ ಭಯವೇನೂ ಇಲ್ಲದೆ ವನವನು ಕಡಿದು ಧ್ವಂಸವ ಗೈದ ಆ ಶಿಂಶುಪವ ಬಿಟ್ಟು 12 ಕುಜನ ರಾಕ್ಷಸರನು ಕೊಲ್ಲೆ ಕೂಗಿ ಆರ್ಭಟಮಾಡೆ ಹನುಮ ಕೇಳಿ ಚೇಷ್ಟೆಗಳ ರಾವಣನು ಆಹ ಕಪ್ಪು ಕಂಠನ ವರ ಆಯುಧಯುತರು ಕೋಟಿ ಎಂಬತ್ತರ ಮೇಲ್ ಭೃತ್ಯರ ಕಳುಹಿದ 13 ಆರ್ಭಟದಿಂದ ಘೋಷಿಸುತ ಅವರು ಆವರಿಸಿ ಹನುಮನ ಆಯುಧಗಳ ಪ್ರಯೋಗಿಸಲು ಆಹ ಪವನಜ ಮುಷ್ಟಿಪ್ರಹರದಿ ಆ ವೀರರೆಲ್ಲರ ಹಿಟ್ಟು ಮಾಡಿದ ಬೇಗ 14 ಕಡುಕೋಪದಿಂದ ರಾವಣನು ಕಳುಹಿದನು ಏಳು ಮಂತ್ರಿ ಕುವರರ ವರ ಬಲಯುತರ ಆಹ ಖಳರು ಈ ಏಳ್ವರ ಮೆಟ್ಟಿ ಷಿಷ್ಟವ ಮಾಡೆ ಕುಮತಿ ರಾಕ್ಷಸ ಸೈನ್ಯ ತೃತೀಯ ಭಾಗವು ಹೋಯ್ತು 15 ಅನುಪಮ ಬಲಕಾರ್ಯಕೇಳಿ ಅಧಮ ರಾವಣ ತನ್ನ ಸುತನ ಅಕ್ಷನ ಕಳುಹಲು ಹನುಮ ಆಹ ಅಕ್ಷನ ಚಕ್ರಾಕಾರದಿ ಎತ್ತಿ ಸುತ್ತಾಡಿ ಅವನ ಅಪ್ಪಳಿಸಿ ನೆಲದಿ ಚೂರ್ಣ ಮಾಡಿದ 16 ಅತಿ ದುಃಖದಿಂದ ರಾವಣನು ಅಕ್ಷನಗ್ರಜ ಇಂದ್ರಜಿತನ ಒಡಂಪಟ್ಟ ಸ್ವೇಚ್ಛದಿ ಹನುಮ ಬ್ರಹ್ಮಾಸ್ತ್ರಕೆ 17 ರಾವಣನಲಿ ಕೊಂಡು ಪೋಗೆ ರಾವಣ ಪ್ರಶ್ನೆಯ ಮಾಡೆ ರಾಮಗೆ ನಮಿಸಿ ಹನುಮನು ಆಹ ರಘುವರ ರಾಮ ದುರಂತ ವಿಕ್ರಮ ಹರಿ ರಾಕ್ಷಸಾಂತಕ ದೂತ ಮಾರುತಿ ತಾನೆಂದ 18 ರಘುವರ ಪ್ರಿಯೆಯನು ಬೇಗ ರಾಮಗರ್ಪಿಸಲೊಲ್ಲೆ ಎನ್ನೆ ಹನುಮ ಪ್ರಕೋಪದಿ ಅವನ ಆಹ ರಾಜ್ಯ ಮಿತ್ರ ಬಂಧು ಸರ್ವನಾಶ ರಾಘವ ಮಾಡುವನೆಂದು ಪೇಳಿದನು 19 ಅಜ ಶಿವ ಮೊದಲಾದ ಸರ್ವ ಅಮರೇಶ್ವರರು ತಾವು ತಡೆಯ ಆಶಕ್ತರು ರಾಮಬಾಣವನು ಆಹ ಅಂಥ ಬಾಣವ ಅಲ್ಪಶಕ್ತ ರಾವಣ ತಾಳೆ ಅಸಮರ್ಥನೆಂದ ಪ್ರಭಂಜನ ಸುತನು 20 ಪ್ರಭಂಜನ 1 ಸುತ ಮಾತು ಕೇಳಿ ಪ್ರಕುಪಿತನಾಗಿ ರಾವಣನು ಪ್ರಯತ್ನಿಸೆ ಹನುಮನ ಕೊಲ್ಲೆ ಆಹ ಪ್ರಕೃಷ್ಟ ಮನದಿ ವಿಭೀಷಣ ಬುದ್ಧಿ ಪೇಳಲು ಪುಚ್ಛಕ್ಕೆ ಬೆಂಕಿ ಹಚ್ಚೆಂದ ರಾಕ್ಷಸರಾಜ21 ಆತಿಭಾರ ವಸ್ತ್ರ ಕಟ್ಟುಗಳಿಂ ಅಧಮರು ಸುತ್ತಿ ಬಾಲವನು ಅಗ್ನಿಯ ತೀವ್ರದಿ ಹಚ್ಚೆ ಆಹ ಅಗ್ನಿಯ ಪರಸಖ ವಾಯು ಆದುದರಿಂದ ಅಂಜನಾಸುತ ನಿರಾಮಯನ ಸುಡಲೇ ಇಲ್ಲ 22 ಅಧಮ ರಾಕ್ಷಸರ ಚೇಷ್ಟೆಗಳ ಅಸಮ ಬಲಾಢ್ಯನು ಹನುಮ ಅನುಭವಿಸಿ ಕುತೂಹಲದಿ ಆಹ ಅಲ್ಲಲ್ಲಿ ಹಾರಿ ಆ ಲಂಕಾಪುರಿಯ ಸುಟ್ಟು ಅತಿ ಮುದದಲಿ ಗರ್ಜಿಸಿದ ರಾಮದೂತ 23 ಅಧಮ ಸಪುತ್ರ ರಾವಣನ ಅಲ್ಪ ತೃಣೋಪಮ ಮಾಡಿ ಅವರೆದುರಿಗೆ ಪುರಿ ಸುಟ್ಟು ಆಹ ಅಬ್ಧಿಯ ದಾಟೆ ವಾನರರು ಪ್ರಪೂಜಿಸೆ ಉತ್ತಮ ಮಧುವುಂಡು ಪ್ರಭುವೇ ನಿನ್ನಲಿ ಬಂದ 24 ಸಮಸ್ತ ವಾನರ ವರರೊಡನೆ ಸಮರ್ಥ ಹನುಮ ಧೀರ ಬಂದು ಶುಭಸೂಚಕ ಚೂಡಾಮಣಿಯ ಆಹ ಶ್ರೀಶ ನಿನ್ನಯ ಪಾದದ್ವಂದ್ವದಿ ಇಟ್ಟು ತಾ ಸನ್ನಮಿಸಿದ ಭಕ್ತಿಭರಿತ ಸವಾರ್ಂಗದಿ 25 ಭಕ್ತಿ ಸವೈರಾಗ್ಯ ಜ್ಞಾನ ಪ್ರಜ್ಞಾ ಮೇಧಾ ಧೃತಿ ಸ್ಥಿತಿಯು ಪ್ರಾಣ ಯೋಗ ಬಲ ಇಂಥಾ ಆಹ ತುಂಬಿ ಇರುವುವು ಈ ಪ್ರಭಂಜನ ವಾಯು ಹನುಮನಲಿ ಸರ್ವದಾ 26 ಸರ್ವೇಶ ರಾಮ ಅಗಾಧ ಸದ್ಗುಣಾರ್ಣವ ನೀ ಹನುಮನ ಸಂಪೂರ್ಣ ಭಕ್ತಿಗೆ ಮೆಚ್ಚಿ ಆಹ ಸಮ ಯಾವುದೂ ಇಲ್ಲದೆ ನಿನ್ನನ್ನೇ ನೀ ಕೊಟ್ಟೆ ಸುಪ್ರಮೋದದಿ ಹನುಮನ ಆಲಿಂಗನ ಮಾಡಿ27 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ನಮ್ಯ ಮಾರುತಿ ಮನೋಗತನೆ ಆಹ ನೀರಜಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 28
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ವೇದವ್ಯಾಸ ಪ್ರಥಮ ಆಧ್ಯಾಯ ಪ್ರಾದುರ್ಭಾವಸಾರ ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ ನಾರಾಯಣ ಸರ್ವ ಉರು ಗುಣಾರ್ಣವ ನಮೋ ಪಾರತಂತ್ರ್ಯಾದ್ಯಖಿಲ ದೋಷಾತಿ ದೂರ ಪರ ಬ್ರಹ್ಮ ಶ್ರೀ ರಮಣ ವಿಷ್ಣು ಸರ್ವೋತ್ತಮನೇ ಸೂರಿ ಜ್ಞಾನ ಪ್ರಾಪ್ಯ ನಿಗಮೈಕ ವೇದ್ಯ 1 ವಾಸುದೇವ ವೈಕುಂಠ ನಮೋ ತುರ್ಯ ಸಂಕರ್ಷಣ ಪ್ರದ್ಯುಮ್ನಾನಿರುದ್ಧ ತುರಗಾಸ್ಯ ಕಾರ್ದಮ ನಾಭಿಜಾತ್ರೇಯನೇ ಪರಮಾತ್ಮ ಉದ್ದಾಮ ಹರಿ ಶ್ರೀನಿವಾಸ 2 ಕೂರ್ಮ ಕ್ರೋಢ ನರಸಿಂಹ ವಾಮನ ಮುನಿಜ ರಾಘವ ಕೃಷ್ಣ ವನಜ ಕಲ್ಕೀಶ ಆನಂದ ಜ್ಞಾನಾದಿ ಗುಣಮಯ ರೂಪಗಳು ನಿತ್ಯ 3 ವಾರಿಜ ಭವಾಂಡವ ಸೃಜಿಸಿ ಅದರೊಳು ಪೊಕ್ಕು ಕೃತಿ ನಡೆಸಿ ಮೂರು ವಿಧ ಅಧಿಕಾರಿಗಳಿಗೆ ಗತಿ ಇತ್ತು ಮೂರು ವಿಧ ಜೀವರಿಗೆ ಯೋಗ್ಯ ಫಲವೀವಿ 4 ಯದಾ ಯದಾಹಿ ಸದ್ಧರ್ಮಕ್ಕೆ ಹಾನಿಯೋ ಅಧರ್ಮಕ್ಕೆ ವೃದ್ಧಿಯೋ ಆದಾಗ ಅವತರಿಪಿ ಸಾಧುಗಳ ಉದ್ಧಾರ ಪಾಪಿಗಳ ಪತನಕ್ಕೆ ಸದ್ಧರ್ಮ ಸ್ಥಾಪನೆಗೆ ಶ್ರೀಶ ಮುಕುಂದ 5 ಕಲಿಯ ಚಟುವಟಿಕೆಯಲಿ ವೈದಿಕ ಜ್ಞಾನ ಇಳೆಯಲಿ ಸುಜನರಲಿ ಕಡಿಮೆ ಆಗಿ ಶೀಲ ಗೌತಮ ಸಹ ನಿಧಾನ ತಪ್ಪಿ ಶಪಿಸೆ ಬೆಳೆಯಿತು ಅಜ್ಞಾನ ಕಲಿ ವಿಷ ಏರಿತು 6 ದೇವತೆಗಳಿದು ನಿನ್ನಲಿ ಪೇಳಿ ಪಾಥಿರ್üಸಲು ದೇವ ದೇವೋತ್ತಮ ನೀ ಅಭಯವನಿತ್ತು ಭುವಿಯಲಿ ಪರಾಶರ ಸತ್ಯವತಿ ಸುತನೆಂದು ಅವತಾರ ಮಾಡಿದಿ ಸಜ್ಜನೋದ್ಧಾರ 7 ವೃತತಿಜಾಸನ ಸುತ ವಸಿಷ್ಠ ಋಷಿಗಳ ಮಗ ಶಕ್ತಿ ಋಷಿಗಳ ಪುತ್ರ ಪರಾಶರ ಋಷಿಯು ಆ ತಪೋಧನ ನಿನ್ನ ಕುರಿತು ತಪಶ್ಚರಿಸಿದರು ಅಜ ನೀ ತನ್ನಲವತರಿಸು ಎಂದು 8 ವೇದ ವೇದಾಂಗ ಕೋವಿದ ಪರಾಶರರ ಶ್ರದ್ಧೆ ಶೀಲತ್ವವ ಮೆಚ್ಚಿ ನೀನು ಪೇಳ್ದಿ ವಸುರಾಜನ ಸುತೆ ಸತ್ಯವತಿಯ ಸುತನೆನಿಸಿ ಅವತಾರ ಮಾಡುವಿ ಎಂದು 9 ವಸುರಾಜ ಅಡವಿಯಲಿ ಬೇಟೆಯಾಡುವಾಗ ಇಚ್ಚೈಸಿ ಮಗ ತನ್ನ ರಾಣಿಯ ನೆನೆಯೇ ವಿಸರ್ಜನೆ ಆಯಿತು ರೇತಸ್ಸು ಅದನ್ನ ತನ್‍ಸತಿಗೆ ಕಳುಹಿಸಿದ ಪಕ್ಷಿ ಮೂಲಕ 10 ಶೇನಪಕ್ಷಿ ಅದನ್ನ ಕುಂಡದಲಿ ಹಿಡಕೊಂಡು ರಾಣಿಯ ಪಟ್ಟಣಕೆ ಹೋಗುವ ಮಾರ್ಗದಲಿ ಯ- ಶೇನಪಕ್ಷಿ ತಡೆದು ಯುದ್ಧ ಮಾಡಿತು 11 ಆಗ ವಸುರಾಜ ಕೊಟ್ಟ ಪೊಟ್ಟಣ ನೀರೊಳು ಬಿದ್ದು ಬಿದ್ದ ವೇಗದಲಿ ಎರಡಾಗಿ ಆಗ ಗಂಗೆಮಾತೆಯು ಪ್ರಸನ್ನಳಾಗಿ ಸಣ್ಣದರೋಳ್ ಆವಿಷ್ಟಳಾದಳು ಅದನ್ನ ಹೆಣ್ಣು ಮೀನೊಂದು ನುಂಗಿ ಗರ್ಭ ಧರಿಸಿತು 12 ಸರ್ವೋತ್ತಮನೇ ನಿನ್ನ ಅವತಾರ ಕಾಲದಲಿ ಗಂಗಾಧರಾದಿ ದೇವತೆಗಳು ತಪಸ್ ಮಾಡಿ ವರಗಳ ಹೊಂದುವುದು ಅನುಚಿತವೂ ಅಲ್ಲ ಆಶ್ಚರ್ಯವೂ ಅಲ್ಲ ಗಂಗಾಧರನೂ ತಪವಾಚರಿಸಿ ನಿನ್ನನುಗ್ರಹದಿಂ ಪುತ್ರನಾದ ಶುಕನಾಗಿ 13 ಮತ್ಸದ ಗರ್ಭವು ವರ್ಧಿಸಿತು ಆಗ ಬೆಸ್ತರು ಆ ಮೀನ ಹಿಡಿದು ಸೀಳೆ ಅದರ ಉದರದಿ ಎರಡು ಶಿಶುಗಳ ಕಂಡರು ಒಂದು ಹೆಣ್ಣು ಮತ್ತೊಂದು ಮಗು ಗಂಡು 14 ತಮ್ಮ ನಾಯಕ ದಾಸರಾಜನಲಿ ಪೋಗಿ ಆ ಮೀನುಗಾರರು ಶಿಶುಗಳ ಕೊಡಲು ಆ ಮತಿವಂತನು ವಸುರಾಜನಲಿ ಪೋಗಿ ಸಮಸ್ತವ ಪೇಳಿ ಮಕ್ಕಳ ಮುಂದೆ ಇಟ್ಟ 15 ವಸುರಾಜನು ವಿಷಯವ ಚೆನ್ನಾಗಿ ಅರಿತು ಶಿಶುಗಳು ತನ್ನದೇ ಎಂದು ತಿಳಿದು ಭಾಸ್ಕರೋಜ್ವಲ ಗಂಡು ತಾನು ಇಟ್ಟುಕೊಂಡು ಶಶಿಕಾಂತಿಯ ಮಾತ್ಸೇಯ ದಾಸನಿಗೆ ಕೊಟ್ಟ 16 ಶೀಲತ್ವ ಸುಗುಣತ್ವದಲಿ ಪ್ರಕಾಶಿಸುತ ಬೆಳೆಯುತಿಹಳು ದಾಸರಾಜನ ಗೃಹದಿ ಬಾಲೆ ಇವಳಿಗೆ ಸತ್ಯವತೀ ಎಂಬ ನಾಮವು ಬಲು ಪುಣ್ಯವಂತಳು ಸುಶುಭ ಲಕ್ಷಣಳು 17 ದಾಸನಾಯಕನ ಮನೆಯಲ್ಲಿ ಬೆಳೆವ ಕಾರಣ ದಾಸನು ನಾವಿಗನು ಆದ್ದರಿಂದ ಸುಶೀಲೆ ಈ ಸತ್ಯವತಿಯು ನಾವೆ ನಡೆಸುವಳು ವಸುರಾಜಪುತ್ರಿ ಇವಳಿಗೆ ಗರ್ವವಿಲ್ಲ 18 ಸಮುದ್ರ ಕುರಿತು ಪ್ರವಹಿಸುವ ಸೂರ್ಯಾತ್ಮಜ ಯಮುನೆಯ ದಾಟಲು ಹಡಗಿನಲ್ಲಿ ಕುಳಿತ ಆ ಮುನಿ ಪರಾಶರರಿಗೆ ಒದಗಿದಳು ಕಾಲ 19 ಶ್ರೀಶ ನಿನ್ನಯ ಮಾತು ನೆನೆದು ಪರಾಶರರು ಆ ಸತ್ಯವತಿಯನ್ನ ಮದುವೆ ಆಗಲು ಒಪ್ಪಲು ವಸಿಷ್ಠರು ಯಾಜ್ಞವಲ್ಕ್ಯಾದಿ ಮುನಿ ಸಭೆಯಲಿ ವಸುರಾಜನು ಧಾರೆ ಎರೆದಿತ್ತ ಮಗಳ 20 ನಾರದರ ವೀಣೆ ಸಂಗೀತ ಗಾಯನವು ಸುರ ಗಂಧರ್ವರ ಸುಸ್ವರ ಗಾನ ಸುರನಾರಿ ನರ್ತಕರ ಆನಂದ ನರ್ತನವು ಸರಸಿಜಾಸನ ಮುಖ ಸುರರ ಸ್ತೋತ್ರಗಳು 21 ನೀಲ ಮೇಘ ಶ್ಯಾಮ ಇಂದಿರಾಪತಿಯು ಕಲಿ ವಿದಾರಕ ವಿಜ್ಞಾನ ಭೋದಕನು ಇಳೆಯಲಿ ವ್ಯಾಸ ಅವತಾರ ಸಮಯವೆಂದು ಸುರರು ಕೂಡಿ ತುಂಬಿದರು 22 ನಿಮೇರ್ಘ ಹಿಮ ಆಗಲಿ ದೇಶ ಪ್ರಕಾಶಿಸಿತು ಮರಗದ ವರ್ಣದಲಿ ಜ್ವಲಿಸುವ ರೂಪ ಉರು ಸ್ವಕಾಂತಿ ಸಹಸ್ರ ಲಕ್ಷ ಕೋಟ್ಯಮಿತ ಸೂರ್ಯತೇಜಃ ಪುಂಜ ಅವತಾರ ಮಾಡಿದಿ 23 ಶೋಣಿತ ಸಂಬಂಧ ಇಲ್ಲವೇ ಇಲ್ಲ ಅಪ್ರಾಕೃತ ಚಿದಾನಂದ ಕಾಯ ಚಿಕ್ಕ ಬಾಲಗೆ ಅಂದು ಒಲಿದು ಕಂಬದಿ ಬಂದ ಶ್ರೀಕಾಂತ ನರಸಿಂಹ ಅವತಾರದಂತೆ 24 ತಂದೆ ತಾಯಿಲ್ಲದೆ ಪುಂ ಸ್ತ್ರೀ ಕೂಡದೆ ಅಂದು ಕಂಬದಿಂದ ಸ್ವೇಚ್ಛದಿ ಬಂದಿ ಇಂದು ಸ್ವತಂತ್ರದಿ ಸತ್ಯವತಿ ಋಷಿ ಮುಂದೆ ಬಂದು ಪ್ರಕಟಿಸಿದಿ ವ್ಯಾಸ ಅವತಾರ 25 ಶೋಣಿತ ರಹಿತ ಅಲೌಕಿಕವಾದರೂ ನೀ ಲೋಕ ರೀತಿಯಲಿ ಪುಟ್ಟಿದ ತೆರದಿ ಕಲಿ ಕಲಿ ಪರಿವಾರ ದುರ್ಜನ ಮೋಹಕ್ಕೆ ಮಾಲೋಲ ನೀ ವಿಡಂಬನ ಮಾಡಿ ತೋರ್ದಿ 26 ಅಂಕುಶ ಅಬ್ಜ ಧ್ವಜ ಚಕ್ರ ರೇಖ ಪದಯುಗ ಪದ್ಮ ಸುಖಜ್ಞಾನಮಯ ಜ್ಞಾನ ಸುಖದ ಧ್ಯಾನಿಪರ್ಗೆ ತಟಿತ್ ಪ್ರಭಾ ಜಟಾಮಕುಟ ಶಿರವು ಪ್ರಕಾಶಿಸುವ ಕಸ್ತೂರಿ ತಿಲಕ ಲಲಾಟ 27 ಸೃಷ್ಟ್ಯಾದಿಕರ್ತ ನಿನ್ನ ಭೃ ಚೆಂದ ನಿಖಿಳ ಇಷ್ಟಪ್ರದ ಅನಿಷ್ಟ ನಿವಾರಕ ನೋಟ ಕರ್ಣ ಕುಂಡಲದ್ವಯವು ಶ್ರೇಷ್ಠತಮ ತುಳಸೀ ದಳಗಳು ಕಿವಿಯೋಳ್ 28 ಸುಧಾರಸ ಸುರಿಸುವ ಶಶಿಕೋಟಿ ನಿಭ ಮುಖ ಸಂದರ್ಶನ ಸುಖ ಸಂದೋಹ ಈವುದು ಮಂದಹಾಸವು ನತಜನ ಶೋಕ ಕಳೆವುದು ಶುಭ ಲೋಹಿತೋಷ್ಟ್ರಗಳು 29 ಸುಂದರ ರೇಖಾತ್ರಯಯುತ ಕುಂಬುಗ್ರೀವದಿ ಕೌಸ್ತುಭ ಮಣಿಯು ಶ್ರೀ ದೇವಿಗಾಶ್ರಯ ವಿಶಾಲ ವಕ್ಷ ಸ್ಥಳದಿ ಚಿದ್ದಮಲ ಮೋದಮಯ ಶ್ರೀವತ್ಸ ಅಂಕ 30 ಪೊಳೆವ ರತ್ನದ ಹಾರಗಳು ಉರದೇಶದಲಿ ವಲಿತ್ರಯಾಂಕಿತ ಉಳ್ಳ ಉದರ ಸುಂದರವು ಕೀಲಾಲಜ ಭವಾಂಡವ ಪಡೆದ ನಾಭಿಯು ಬೆಳಗುತಿದೆ ಮೌಂಜಿಯು ಸುಪ್ರಕಾಶದಲಿ 31 ಸುಪವಿತ್ರ ಜ್ಞಾನ ತೇಜ ಕೃಷ್ಣಾಜಿನವು ಶ್ರೀಪ ನಿನ್ನಯ ದಿವ್ಯ ಯೋಗ ಅಸನವು ಉಪಮವಿಲ್ಲದ ಸುಂದರ ಕಟಿಜಾನು 32 ಉರು ಜಂಘಾ ಗುಲ್ಫ ಪದ್ಮಾಂಘ್ರಿ ಸೌಂದಂiÀರ್i ಉರು ಸುಶುಭ ಲಕ್ಷಣ ವರ್ಣಿಸಲಶಕ್ಯ ವಜ್ರನಖಗಳ ದ್ಯುತಿ ಶಶಿ ಕೋಟ್ಯಮಿತವು ಶುಭ್ರತಮ ಯಜÉ್ಞೂೀಪವೀತ ಧರಿಸಿರುವಿ 33 ತಿಮಿರ ಮಾರ್ತಾಂಡ ನೀ ರವಿ ಕೋಟಿ ಅಮೃತ ಇಂದು ಕೋಟಿ ಅತ್ಯಧಿಕ ತೇಜ ಈ ದಿವ್ಯ ಸುರೂಪದಿ ಶ್ರೀಯಃಪತಿಯೇ ಪ್ರಾದುರ್ಭವಿಸಿದಿ ಸ್ವಾಮಿ 34 ನೀ ಪ್ರಾರ್ದುರ್ಭವಿಸಿ ದಿನ ಏಳೊಳಗೆ ಉಪನಯನ ರೂಪ ಪೂಜೆ ಪರಾಶರರು ಮಾಡಿದರು ಉಪನಯನ ಸಂಸ್ಕಾರ ಲೀಲಾ ಮಾತ್ರವು ನಿನಗೆ ಆ ಪರಾಶರ ಸತ್ಯವತಿಗೆ ಮುದಕರವು 35 ಸತ್ಯವತೀ ಪರಾಶರರ ಸುತನೆಂದು ನೀ ಕೀರ್ತಿ ಅವರಿಗೆ ಜಗತ್ತಲ್ಲಿ ಇತ್ತಿ ಸಾತ್ಯವತೇಯ ಪರಾಶರ್ಯ ನಾಮದಿಂ ಸತ್ ಸೃಷ್ಟಿ ಸುಖಜ್ಞಾನ ಪವಿತ್ರತ್ವಜÉ್ಞೀಯ 36 ಯಾವ ಯಾವಾಗ ಸತ್ಯವತಿ ಪರಾಶರರು ದೇವತಾ ಸಾರ್ವಭೌಮನೇ ವ್ಯಾಸ ನಿನ್ನ ತಾವು ನೋಡಲು ಇಚ್ಛೈಸಿ ನೆನೆಯುವರೋ ಆವಾಗ ತೋರುವಿ ಎಂದಿ ಮಾತೆಗೆ 37 ವ್ಯಾಸ ಅವತಾರದ ಕಾರ್ಯೋನ್ಮುಖನಾಗಿ ನಗ ಮೇರುಗಿರಿಗೆ ಬಿಸಜಭವ ಮೊದಲಾದ ದೇವರು ಹಿಂಬಾಲಿಸುತ ಶ್ರೀಶ ನೀ ಹೊರಟೆ ಪ್ರಣತಾರ್ತಿಹರ ಅಜಿತ 38 ಜ್ಞಾನ ಸುಖಪೂರ್ಣ 'ಪ್ರಸನ್ನ ಶ್ರೀನಿವಾಸ' ಪೂರ್ಣ ಪ್ರಜ್ಞರ ಹೃತ್‍ಸ್ಥ ವನಜ ಭವತಾತ ಸ್ವರ್ಣಾಂಡ ಬಹಿರಂತವ್ರ್ಯಾಪ್ತ ತೇಜಃಪುಂಜ ಆ ನಮಿಪೆ ಬದರೀಶ ಜ್ಞಾನಮುದ ಧನದ 39 - ಇತಿ ಪ್ರಥಮಾದ್ಯಾಯ ಸಂಪೂರ್ಣಂ - ದ್ವಿತೀಯ ಅಧ್ಯಾಯ ಸಾರ ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ ರಾಜ ರಾಜೇಶ್ವರನೇ ರಾಜೀವಾಲಯ ಪತೇ ರಾಜೀವಭವ ಭವಾದ್ಯಮರ ವಿನುತ ರಾಜೀವ ಪದಯುಗಗಳ್ಗೆ ಶರಣಾದೆ ನಿನ್ನಲಿ ರಾಜೀವನಯನ ಔದಾರ್ಯ ಕರುಣಾಬ್ಧಿ 1 ಸೃಷ್ಟಿ ಕಾಲದಲಿ ನೀ ಪರಮೇಷ್ಟಿರಾಯನಿಗೆ ಶ್ರೇಷ್ಟ ನಿಗಮಾದಿಗಳ ಬೋಧಿಸಿದ ತೆರದಿ ಕೃಷ್ಣ ದ್ವೈಪಾಯನನೆ ಸುರಮುನಿಗಳಿಗೆ ಈಗ ಉತ್ಕøಷ್ಟ ಉಪದೇಶ ಮಾಡಿದಿ ಮೇರುವಿಲಿ 2 ಸಮಸ್ತ ಶಾಸ್ತ್ರಾರ್ಥ ನಿದರ್ಶನಾತ್ಮಕವಾದ ವಿಮಲ ಶಾಸ್ತ್ರೋತ್ತಮ ಮಹಾ ಭಾರತವನು ಸುಮಹಾ ವೇದಾರ್ಥ ನಿರ್ಣಯಕವಾದ ಬ್ರಹ್ಮ ಸೂತ್ರಂಗಳ ವಿರಚಿಸಿದಿ ವ್ಯಾಸ 3 ಹರಿ ವ್ಯಾಸ ಕೃಷ್ಣದೈಪಾಯನ ನಿನ್ನ ಅಮಿತ ಬಲಯುತ ಶರದಿಂ ರುದ್ರಾದಿಗಳ ಮನೋಗತವಾಗಿ ಇರುತ್ತಿದ್ದ ಕ್ರೂರ ಕಲಿಮೃತನಾದವನಂತೆ ಆದ 4 ಸಾತ್ಯವತೇ ವ್ಯಾಸ ನಿನ್ನಯ ಮುಖಾಂಬುಧಿಯಿಂದ ಉದ್ಭೂತವಾದ ಉತ್ತಮ ಜ್ಞಾನ ರೂಪ ಸುಧೆಯ ದೇವತೆಗಳು ಭುಂಜಿಸಲು ಆಗ ವಿದೂರರಾದರು ಕಲಿಯ ಕಲ್ಮಷದಿಂದ 5 ವಿಧಿ ವಾಯು ಎಂದೆಂದೂ ಕಲಿಕಲುಷ ವಿದೂರರು ಬಂದ ರುದ್ರಾದಿಗಳು ಮುಂದೆ ಕುಳಿತು ಶ್ರೀದ ನೀ ಬೋಧಿಸಿದ ಮಹಾಭಾರತ ಬ್ರಹ್ಮ- ಸೂತ್ರಾದಿ ಅಮೃತವ ಪಾನ ಮಾಡಿದರು 6 ಮನುಷ್ಯೋತ್ತಮರೊಳು ಇದ್ದ ಕಲಿ ಭಂಜನಕೆ ದೀನ ದಯಾಳು ನೀ ದಿಗ್ವಿಜಯಗೈದಿ ಮಂದಾಧಿಕಾರಿಗಳ ಉಪಕಾರಕಾಗಿ ನೀ ನಿಗಮ ವಿಭಾಗ ಮಾಡಿದಿಯೋ 7 ಯಾವ ಯಾವ ಸಜ್ಜನರು ಅಜ್ಞಾನ ಪೂರಿತರೋ ಅವರು ವಾಸಿಸುವ ಸ್ಥಳಗಳಿಗೆ ಪೋಗಿ ದಿವ್ಯ ಸಜ್ಞಾನವ ಬೋಧಿಸಿ ಕಲಿ ವಿಷ ನಿವಾರಣ ಮಾಡಿದಿ ಕರುಣಾಂಬು ನಿಧಿಯೇ 8 ಪರಮಾರ್ಥ ಭಾಷ್ಯಾರ್ಥ ಐಹಿಕಾಮುಷ್ಮಿಕ ಸರ್ವಾರ್ಥ ಒದಗಿಸುವ ಮುಖ್ಯ ನಿಯಂತೃ ಪರಮಾತ್ಮ ವ್ಯಾಸ ನೀ ದಿಗ್ವಿಜಯ ಮಾರ್ಗದಲಿ ಮರವಟ್ಟ ಕ್ರಿಮಿಗೆ ಔದಾರ್ಯದಲಿ ಒಲಿದಿ 9 ಹರಿಯ ಅಪರೋಕ್ಷ್ಯವು ಲಭಿಸಿದವರಿಗೂ ಸಹ ಕರ್ಮ ನಿಮಿತ್ತ ನರ ನರೇತರ ಜನ್ಮ ಅಸಂಭವವು ಅಲ್ಲವು ಈ ಕ್ರಿಮಿ ಜನ್ಮ ಸಹ ಪ್ರಾರಬ್ಧ ನಿಮಿತ್ತ 10 ಶೂದ್ರನು ಲೋಭಿಯು ಪೂರ್ವ ಜನ್ಮದೀ ಕ್ರಿಮಿಯು ಈ ದೇಹವ ಬಿಡು ರಾಜನಾಗಿ ಹುಟ್ಟಿಸುವೆ ಎಂದು ನೀ ಪೇಳಲು ದೇಹದಾಶೆ ಪ್ರಕಟಿಸಿತು ಆದರೂ ಆ ಕ್ರಿಮಿಗೆ ರಾಜಪದವಿತ್ತಿ 11 ಆ ಕ್ರಿಮಿಯಿಂದ ನೀ ರಾಜ್ಯವ ಆಳಿಸಿ ಜಗದೇಕ ಸ್ವಾಮಿಯು ಸ್ವತಂತ್ರ ಸಚ್ಛಕ್ತ ಭಕ್ತೇಷ್ಟ ಸಿದ್ಧಿದ ಸತಾಂಗತಿ ನೀನೆಂದು ಜಗತ್ತಿಗೆ ವ್ಯಕ್ತ ಮಾಡಿದಿ ದೇವ ದೇವ 12 ಅಗಣಿತ ಗುಣಾರ್ಣವನೇ ವ್ಯಾಸ ಕೃಷ್ಣನೇ ನಿನ್ನ ಮಗನೆಂದು ತಾ ಜನಿಸಿ ಸೇವಿಸಬೇಕೆಂದು ಗಂಗಾಧರ ನಿನ್ನ ಕುರಿತು ಮಹತ್ತಪಸ್ ಮಾಡಿ ಹಾಗೆ ನಿನ್ನಿಂದ ವರ ಪಡೆದು ಮಗನಾದ 13 ಯಥಾರ್ಥ ಹೀಗಿರಲು ನೀನು ಸಹ ತಪಸ್ ಮಾಡಿ ರುದ್ರಗೆ ವರವಿತ್ತು ಅಧಮರ ಮೋಹಿಸಿದಿ ಒಂದೊಂ
--------------
ಪ್ರಸನ್ನ ಶ್ರೀನಿವಾಸದಾಸರು
ಬಯಲ ಜಾತ್ರೆಗೆ ನಡೆಹೋಗುವ ಬಾರದಲೆ ಅಲ್ಲಿರುವ ಪ ಶಾಂತಿ ಎಂದೆಂಬ ಕಂಟಲೆಗಳು ಶಮೆ ಹುರಿಗೆಜ್ಜೆ ಎತ್ತುಗಳುದಾಂತಿ ಎಂದೆಂಬ ಕಾವಡಿಗಳು ದಮೆ ಎಂಬ ಹೂಜೆಗಳು1 ಮಂಗಳವೆಂಬ ಬಾಲಕರು ಮುಕ್ತಿ ಎಂಬ ಮುತ್ತೈದೆಯರುಸಂಗ ಹರರಹ ವಿಟಗಾರರು ಸೈರಣೆ ಎಂಬ ಹಿರಿಯರು 2 ಸಂತೋಷವೆಂಬ ಅಂಗಡಿಗುಂಪು ಸಹಜದ ಹೂಕಂಪುಶಾಂತರೆನಿಪ ದೊರೆಗಳ ಗುಂಪು ಸುಖ ಛತ್ರಿಯ ತಂಪು 3 ಓಂಕಾರನಾದದ ನಗಾರಿ ವೀಣಾನಾದದ ತುತ್ತೂರಿಸಂಕಲ್ಪ ಸುಳ್ಳೆಂಬ ತಂಬೂರಿ ಸಾಮವೆನಿಸುವ ಭೇರಿ 4 ಅಮೃತ ಬಿಂದುವಿನ ಮೊಗೆಯುದಾರಿದಾರಿಗೆ ಸೋಹಂಸ್ಮರಣೆ ದೃಢ ಮನವದು ಚಡಿಯು 5 ಆನಂದ ವನಗಳ ಸಾರುತ ಆಯಾಸ ಕಳೆಯುತ್ತಸ್ವಾನಂದ ಗೋಪುರ ಕಾಣುತ ಸುಮ್ಮಾನವ ಪಡೆಯುತ6 ಮೃಢನಾಳ ದ್ವಾರವ ಪೋಗುತ ಮುಂದೆ ಚಂದ್ರನ ಕಾಣುತಅಡರಿದ್ವಿದಳ ಸದರೇರುತ ಅತ್ತತ್ತ ಸಾರುತ 7 ಕಮಲ ಪೀಠವನೇರುವರ ಮಹೇಶನೆನ್ನು ಅವರ8 ತುರೀಯವೆಂದೆಂಬ ಬಯಲಗೂಡಿ ತಾವು ಹೋಗುವ ನಾಡಿಹರ್ಷದ ಧೂಳ ದರ್ಶನ ಮಾಡಿ ಹಾಯಿಗುಡಾರ ಹೂಡಿ9 ಶಿಂಶುಮಾರವೇ ದೇವರ ಪೀಠ ಸಿದ್ಧವೆಂಬ ಕವಾಟಸಂಶಯವಿಲ್ಲದ ಎಡೆಯಾಟ ತತ್ಪುರುಷರ ಕೂಟ10 ಸೂರ್ಯ ಕೋಟಿಗೆ ಘನವುಒತ್ತೊತ್ತು ಪೂರ್ಣಾಭಿಷೇಕ ಓಂ ಎಂದೆಂಬ ಸ್ವರವು 11 ಸುವಾಸನೆ ಎಂದೆಂಬ ಧೂಪವು ಸುಂದರ ಪುಷ್ಪಗಂಧತಾವು ಮಾಡುವ ಭಾವದಲಿಂದ ತೃಪ್ತಿ ನೈವೇದ್ಯ ಚಂದ12 ಎರಡಿಲ್ಲದೇಕಾರ್ತಿ ಬೆಳಗುತ ಎಲ್ಲೆಡೆ ತಾ ಹೊಳೆಯುತಹೊರ ವೊಳಗೆಂಬುದ ಮರೆಯುತ ಹೇಮದ ತಗಡಾಗಿ ಇರುತ13 ಬೆಳಕ ಕಂಡಾರತಿ ಎತ್ತುತ ಬೆಳಗನು ಬೆಳಗುತ್ತತಿಳಿದು ಪ್ರದಕ್ಷಿಣೆ ಮಾಡುತ ತೋರುವುದು ಬ್ರಹ್ಮವದೆನ್ನುತ 14 ಭಯದ ವಿಸರ್ಜನೆ ಮಾಡುತ ಬಯಲಾಗಿಯೆ ತೋರುತಬಯಲ ಚಿದಾನಂದನಿಗೆರಗುತ್ತ ಬ್ರಹ್ಮನಾಗಿ ತಾನಿರುತ 15
--------------
ಚಿದಾನಂದ ಅವಧೂತರು
ಬರತಾರಂತ್ಹೇಳೆ ಹರಿಪಾದ ದರ್ಶನಕೆತ್ವರಿತದಿ ಪಾಂಡವರು ಪ. ಹದಿನಾಲ್ಕು ಲೋಕದ ಪದುಮಗಂಧಿಯರೆಲ್ಲಮದನನಯ್ಯನ ಮನೆನೋಡಲುಮದನನಯ್ಯನ ಮನೆನೋಡೋ ವ್ಯಾಜ್ಯದಿಮುದದಿಂದ ಮುಯ್ಯ ತರುತಾರೆ1 ಸುರನಾರಿಯರು ನಾನಾ ಪರಿಯ ಭೂಷಣವನಿಟ್ಟುಹರಿಯ ಮನೆ ನೋಡೋ ಹರುಷದಿಹರಿಯ ಮನೆ ನೋಡೋ ಹರುಷದಿ ಮುಯ್ಯವತರತಾರೆ ತಾವು ತವಕದಿ2 ನಾರಿಯರೆಲ್ಲರು ನಾನಾ ವಸ್ತಗÀಳಿಟ್ಟುಸಾರಾವಳಿಗಳ ನಿರಿದುಟ್ಟು ಸಾರಾವಳಿಗಳ ನಿರಿದುಟ್ಟು ಹೊರಡೆ ಸೂರ್ಯಮುಳಗಿದನೆ ಆಕಾಶದಲಿ 3 ಅಕ್ಕತಂಗಿಯರು ತಾವು ಚಕ್ಕನೆ ವಸ್ತಗಳಿಟ್ಟುಮಕ್ಕಳಿಗೆ ಬಾಲ್ಯ ಉಡಿಗೆಯಿಟ್ಟುಮಕ್ಕಳಿಗೆ ಬಾಲ್ಯ ಉಡಿಗೆಯಿಟ್ಟು ಹೊರಡಲುಅರ್ಕ ಮುಳುಗಿದ ಆಗಸದಿ 4 ಮಂದ ಗಮನೆಯರೆಲ್ಲ ತುಂಬಿದೊಸ್ತಗಳಿಟ್ಟುಕಂದರಿಗೆ ಬಾಲರ ಉಡುಗೆ ಇಟ್ಟುಕಂದರಿಗೆ ಬಾಲರ ಉಡುಗೆಯಿಟ್ಟು ಹೊರಡಲುಚಂದ್ರಜ್ಯೋತಿಗಳು ಹಿಡಿದಾವೆ 5 ಸುಮನಸೆಯರೆಲ್ಲ ಯಮುನಾದೇವಿಯ ದಾಟಿಧಿಮಿ ಧಿಮಿ ಭೇರಿ ಹೊಯಿಸುತಧಿಮಿ ಧಿಮಿ ಭೇರಿ ಹೊಯಿಸುತ ಬರುವಾಗಭುವನದ ಬೆಳಕು ಹರವಿತು6 ಆನೆಗಳು ಕುಂಭಿಣಿ ಜಡಿದು ಬರತಾವೆ ಕುಂಭಿಣಿ ಜಡಿದು ಬರತಾವೆ ರಾಮೇಶನ ಪದಾಂಬುಜ ನೋಡೊ ಭರದಿಂದ7
--------------
ಗಲಗಲಿಅವ್ವನವರು
ಬ್ರಹ್ಮಜ್ಞಾನಿಗಳ ನೋಡಿರೊ ಇಹ್ಹಿಹ್ಹಿಬ್ರಹ್ಮಜ್ಞಾನಿಗಳ ನೋಡಿರೋ ಪ ಜ್ಞಾನಿಗಳು ತಾವು ಅಂತೆ ತಾವೇ ಪರಬ್ರಹ್ಮರಂತೆಏನೋನೋ ಹುಚ್ಚುಮಾತು ಕೇಳಿರಯ್ಯ ಅಹ್ಹಹ್ಹ 1 ಜೊಂಡು ಹುಲ್ಲಿನಂತೆ ಮಂಡೆಗಳ ಬೆಳೆಸಿಕೊಂಡುಕಂಡ ಕಂಡಂತೆ ತಿರುಗುವವರ ನೋಡಿರಯ್ಯ ಅಹ್ಹಹ್ಹ 2 ಸಂಧ್ಯವಿಲ್ಲ ಸ್ನಾನವಿಲ್ಲ ಮುಂದೆ ಹೋಮ ತರ್ಪಣವಿಲ್ಲಅಂದು ತಾವೇ ಬ್ರಹ್ಮವಂತೆ ಕಂಡಿರೇನೋ ಅಹ್ಹಹ್ಹ3 ಕಾವಿ ಕೌಪವುಟ್ಟುಕೊಂಡು ಕಮಂಡಲು ಹಿಡಿದುಕೊಂಡುದೈವ ತಾನೇ ಎಂಬ ದೈವಗಳ ನೋಡಿರೋ ಅಹ್ಹಹ್ಹ4 ಇಂತು ಚಿದಾನಂದ ಗುರು ಭಕ್ತರಗಳ ನಿಂದ್ಯಮಾಡಿಅಂತು ಕಾಲನ ಅರಮನೆಯ ಕುರಿಗಳಾದರಹ್ಹಹ್ಹ 5
--------------
ಚಿದಾನಂದ ಅವಧೂತರು
ಬ್ರಾಹ್ಮಣನುಣಲಿಕೆ ರಾಗಿ ಹಿಟ್ಟು ತನ್ನ ಬಂಧು ಜನಕ್ಕೆ ಒಬ್ಬಟ್ಟು ಪ ಪಾಮರ ಜನರಲಿ ವಾಡಿಕೆಯಿದು | ಶ್ರೀ ರಾಮನೊಲಿವನೆ ಎಂದಿಗಾದರು ಅ.ಪ ಮಾತು ಮಾತಿಗೆ ಸಾಲಮಾಡಿ | ಬಹ ಳಾತುರದಲಿ ಓಡಾಡಿ ಜಾತುಕನಂದದಿ ಜನಗಳ ಮೆಚ್ಚಿಸಿ ಪಾತಕವಾದರು ಲಾಭವಧಿಕ 1 ದೊಡ್ಡದಾಗಿ ಮನೆಕಟ್ಟಿದರೆ -ಸಾಲ ಹೆಡ್ಡಗಾದರು ಹುಟ್ಟುವುದು ದುಡ್ಡುದೇವರಿಗಿಂತ ದೊಡ್ಡದೇವರು ಯಾವುದು? ಬಡ್ಡಿ ಹಚ್ಚು ಬರುವನೆ ಮಹರಾಯನು2 ಹೊಟ್ಟೆಗೆ ತಿಂಬುವದ್ಯಾರು ಬಲ್ಲರು? ವುಟ್ಟ ಬಟ್ಟೆಯಲ್ಲರು ನೋಡುವರು ಸಿಟ್ಟು ಬಂದರೆ ಬೆಂಕಿಯಂತವ ನಾನು ಹೊಟ್ಟೆ ಚಿಕ್ಕದು ಕಣ್ಣು ದೊಡ್ಡದು 3 ಪರಲೋಕವು ಉಂಟೆಂದು ಪೇಳು ವರರಿಯದವರು ತಾವು ಮುಂದು ನರಕವುಸ್ವರ್ಗವು ಯಾರು ನೋಡಿರುವರು ಪುರಾಣ ಶಾಸ್ತ್ರಗಳು ಯಾತಕೆ ಬಿಡಿ4 ಅತಿಥಿಗಳಿಗೆ ನೀರುಮಜ್ಜಿಗೆ | ಮೊಸರು ಸತಿಸುತರಿಗೂ ಮತ್ತು ತನಗೆ ಯಿತರರಿಗೆಲ್ಲಾ ಎಣ್ಣೆಕರೆದ ಭಕ್ಷ್ಯ ಘೃತಭಕ್ಷ ತನಗೆ ಮಾತ್ರ 5 ಎಣ್ಣೆಯು ಬಲುರುಚಿ ನಮಗೆ | ತುಪ್ಪ ವಿನ್ನೇತಕೆ ಹೆಚ್ಚು ಬೆಲೆಗೆ ಕಣ್ಣಲಿ ಕಂಡದು ಮಾತ್ರ ಸತ್ಯ | ನಾ ವನ್ಯರ ನುಡಿ ನಂಬುವುದಿಲ್ಲವು 6 ವೊರಿಗೆಲ್ಲ ನಾ ಮೇಟಿ | ಯನ್ನ ನಾರು ಪೋಲುವರು ಸಾಟಿ ನೂರೆಲೆ ಬೀಳ್ವುದು ನಮ್ಮ ಮನೇಲೀ ಘೋರ ಕ್ಷಾಮದಲಿ ನಾನೆ ಪೊರೆವೆ 7 ಪರರಂತೆ ನಾನಿರಬೇಕು | ಶ್ರೀ ಹರಿ ಇಷ್ಟು ಕೊಟ್ಟರೆ ಸಾಕು ಗುರುಹಿರಿಯರು ನುಡಿಯೇತಕವರು ಮುದು- ಕರು ಏನು ಬಲ್ಲರು ಲೌಕೀಕವ 8 ಗುರುರಾಮವಿಠಲೆಲ್ಲಿ ಭ್ರಾಂತು -ಈ ಕರೆಕರೆ ನಮಗೇಕೆ ಬಂತು ಸೇರಿತು ಬಡವರಾವು 9
--------------
ಗುರುರಾಮವಿಠಲ
ಭೂತರಾಜರು ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೊಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ ಪ ಭಾವ ಶುದ್ಧದಿ ಓದಿ ಗ್ರಂಥಸಾರವಾ ವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ 1 ಅಷ್ಟ ಮಂದಿಯಾ ಅಮೃತವೃಷ್ಟಿಗರೆವರೂ ಶ್ರೀ ಕೃಷ್ಣಮಹಿಮೆಯ ತಾವು ಕೂಡಿ ಪಾಡೊರೊ2 ತಂದೆ ಎಂಬೊದೂ ತಾನು ಒಂದನರಿಯದೆ ನಿಂದೆ ಮಾಡಿ ತಾನೆ ಬಲುಕುಂದಿಗಳುಕುವಾ 3 ಶಿಷ್ಟ ಜನರೊಳು ಇವನೇ ಶ್ರೇಷ್ಠವೇನಿದೂ ಸಿಟ್ಟಿನಿಂದ ಬೈದು ಬಹು ಕಷ್ಟಬಡುವನೊ 4 ಛಂಡಿ ಮನುಜನೇ ಪ್ರಚಂಡ ತಪಶಿಯೋಕೆಂಡ ತುಳಿದು ವ್ಯರ್ಥ ನೀನು ದಂಡಕಳುಕುವಿ 5 ಏನು ಪೇಳಲಿ ಇನ್ನೇನು ಹೇಳಲೀಜ್ಞಾನ ಶೂನ್ಯನಂತೆ ಶಿಕ್ಕಿ ನುಡಿಯ ಬ್ಯಾಡೆಲೋ 6 ಖುಲ್ಲ ಕೇಳೆಲೋ ಎಲೋ ಘಲ್ಲ ತೊಡದಿರೋನಿಗಮವೆಲ್ಲ ಪೇಳಿಸುವಾ ಕಲ್ಲಿನಿಂದಲೇ 7 ಶರಣು ಪೊಕ್ಕೆನೊ ಸ್ವಾಮಿ ಮರೆಯ ಪೊಕ್ಕೆನೊ ಕರುಣ ಮಾಡಿರೀ ಕಂಣು ತೆರೆದು ನೋಡಿರೀ 8 ಪಾದ ಸೋಂಕಲೂ9 ಭೀತಿಗೊಳಿಸುತಾನೇಕ ಭೂತ ಪ್ರೇತಕೇರಾಜನಾಗಿ ನೀನು ಭೂತ ಪ್ರೇತ ಗಣದೊಳು 10 ನಂದಿವಾಹನಾಪದಕೆ ಮುಂದೆ ಬಾಹುವೀ ಯನ್ನ ಕಂದ ನೀನು ನಾನೇ ಭಾವಿ ಮಂದಜಾಸನಾ 11 ಪಂಚವೃಂದದೀ ಸದ್ವøಂದ ಪೂಜ್ಯನಾ ದ್ವಂದ್ವ ಪೊಂದಿ ತಾನು ಸ್ವಾನಂದ ಪಡೆದನೂ 12 ಸ್ವಾದಿನಿಲಯನಾ ಬಲು ಪ್ರೀತಿ ಪಡೆದು ತಾ ತ್ರಿಶೂಲ ಧರಿಸಿದಾ ಭಾವಿ ಶೂಲ ರಮಣನೂ 13 ರೇಣು ಪಾದ ಫಣಿಯಲೀ ಪ್ರಾಣಿನಿಡದನಾ ಅವನ ಪ್ರಾಣ ಸೆಳೆವನಾ14 ಎಂತು ಪೇಳಲೀ ಇವರ ಅಚಿಂತ್ಯಮಹಿಮೆಯಾ ಶಾಂತಮೂರುತಿ ಶಶಿಕಾಂತ ಕೀರುತೀ15 ದೂಷಜನರನಾ ಬಲು ಘಾಸಿಗೊಳಿಸಿದಾ ಶಕ್ತಿದಾಯಕ ತಂದೆವರದಗೋಪಾಲವಿಠಲನು 16
--------------
ತಂದೆವರದಗೋಪಾಲವಿಠಲರು