ಒಟ್ಟು 35 ಕಡೆಗಳಲ್ಲಿ , 21 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ಪ.ಶೀತಲವಾಯ್ತುಹಾಲಾಹಲಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ 1ಸಿರಿಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ 2ತ್ಯಾಗಭೋಗಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ ಫಲವಿದುಶ್ರೀ ಗಂಗಾಜನಕನ ತಂದು ತೋರುವುದು 3ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಅಸಂಪ್ರಜ್ಞಾತಸ್ಥರಿಗೆ ಹರಿಗೋಲುಸುಪ್ರಾಪ್ತ ಮುಕ್ತರುಂಬಮೃತ ಕಣಗಳುಶ್ರೀ ಪ್ರಾಣನಾಥನ ನಾಮಾವಳಿಗಳು 4ಸ್ವಾದನ್ನದೊಟ್ಟಿಲು ಹರಿನಾಮಸ್ಮರಣೆಮಧ್ವಶಾಸ್ತ್ರಜÕರ ವಚನಾಗ್ನಿಗೆ ಅರಣಿಅದ್ವೈತಮತಧ್ವಾಂತಕ್ಕುದಿತ ಸತ್ತರಣಿ ಶ್ರೀಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ 5
--------------
ಪ್ರಸನ್ನವೆಂಕಟದಾಸರು
ಸಂತತ ನಿಮ್ಮ ಸ್ಮರಣೆ ಉಳ್ಳವರಿಗೆಅಂತರ್ಬಾಹ್ಯಾರ್ಥವು ತೋರುವುದೊಂದರಿದೆ ಪ.ಅಂತ್ಯಜಾತಿಯಳಂಗಸಂಗದಿ ಮತಿಗೆಟ್ಟುಅಂತ್ಯವಸಾನದೊಳೊಯ್ಯ ಬಂದಅಂತಕನವರ್ಗಂಜಿಅಣುಗನಾರಾಯಣನೆಂತೆಂದಜಾಮಿಳನ ಕಾಯ್ದೆ ಕರುಣಾಬ್ಧಿ 1ಕಾಂತಾರತಿರುಗಿ ಕ್ರೀಡೆಗೆ ಜಲದೊಳು ಪೊಕ್ಕದಂತಿಅಂಘ್ರಿಯನಕ್ರನುಂಗೆಳೆಯೆಚಿಂತಿಸಿ ತುದಿಯಲ್ಲೆ ಹರಿಯೆಂದು ಕೂಗಲನಂತಾಸನವ ಬಿಟ್ಟು ಬಂದೆತ್ತಿ ಹೊರೆದೆ 2ಕಂತುವೈರಿಯ ಭಕ್ತ ಸೊಕ್ಕಿ ನೃಪರನೌಸೆಕಾಂತ ನಿಮ್ಮಡಿಗೆ ಬಿನ್ನಹ ಕಳುಹೆಕುಂತಿಯ ತನುಜನಿಂದವನ ಕೊಲ್ಲಿಸಿ ಭೂಕಾಂತರಿಗೊಲಿದ್ಯೊ ಪ್ರಸನ್ನವೆಂಕಟಕೃಷ್ಣ 3
--------------
ಪ್ರಸನ್ನವೆಂಕಟದಾಸರು
ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ ಶಿವನಿಂದ್ಯ ಗೈವಿರಿಪಬ್ರಹ್ಮ ಸುಜ್ಞಾನದಿ ಹರಿಹರರಾರೆಂಬಮರ್ಮವರಿತು ಧರ್ಮಾಧರ್ಮ ಯೋಚಿಸದೀಗಾಅ.ಪಗರುಡವಾಹನನು ಶ್ರೀವರನು ನೋಡಿಉರಗಭೂಷಣನು ಗೌರೀಶ್ವರಗೂಗರುಡೋರಗರ ದ್ವೇಷ ಹರಿಹರರೊಳಗುಂಟೆಎರಡು ಮೂರ್ತಿಗಳೇಕ ರೂಪವೆಂದರಿಯಾದೆ1ಸ್ಮರನ ತಾತನು ನಾರಾಯಣನುಕೇಳಿಸ್ಮರನ ವೈರಿಯು ತ್ರಿಗಣೇಶ್ವರನುಹರಿನಿಂದನೆ ಶಿವ ಶಿರದಿ ತಾನ್ ಧರಿಸಿದಹರನ ಲಿಂಗವನಿತ್ಯಪೂಜಿಸಿ ನಮಿಸುವಾ2ಕ್ಷೀರಾಬ್ಧಿ ವಿಷ್ಣುಗೆಸತಿಗೃಹವೊ ಶಿವನನಾರೀ ಮಂದಿರ ಹಿಮಾಲಯವೂನಾರೀ ರಮೆಯ ಹೃದಯದಿ ಧರಿಸಿದವಿಷ್ಣುಮಾರನಂತಕ ಉಮೆಗಿತ್ತನರ್ಧಾಂಗವ3ಬಲಿಯೊಳ್ ಬಾಗಿಲ ಕಾಯ್ದ ಹರಿಯೂ ಬಾಣಗೊಲಿದು ದ್ವಾರದಿ ನಿಂತ ಹರನೂಗೆಲಿದು ತಾ ಅಜಾಮಿಳನ ಸಲಹಿದ ವಿಷ್ಣುಒಲಿದು ಮಾರ್ಕಾಂಡೆಗಂತಕನ ಮರ್ದಿಸೆ ಶಿವ4ಚೋರನೆನ್ನುವಿರಿ ಕೇಶವನ ಬಲೋ-ತ್ಕಾರಿ ಎಂಬಿರಿ ಪರಮೇಶ್ವರನಾನಿರ್ವಾಣಿಬೌದ್ಧನುಶರ್ವದಿಗಂಬರಹರಿಯು ಜಾರನು ಜಗಪೀಠ ಶಂಕರಗೆಂದು5ರುದ್ರಾಕ್ಷಿ ಭಸ್ಮಲೇಪನವು ಶಿವಗೆಮುದ್ರೆಯು ತುಳಸಿಮಣಿ ಸರವುಊಧ್ರ್ವ ಪೌಂಡ್ರಕಗೋಪಿಕೃಷ್ಣಾಜಿನಾಸನರುದ್ರ ಜಡೆಯ ಪಠಿಸು ವ್ಯಾಘ್ರ ಚರ್ಮದಿ ಕುಳಿತು6ಸ್ಮಾರ್ತರ್ ವೈಷ್ಣವರು ಮತ್ಸರದೆ ದ್ವಯಮೂರ್ತಿಯೊಳ್ ಸಮದೆ ಯೋಚಿಸದೇವ್ಯರ್ಥ ಕೆಡುವಿರಿ ಗೋವಿಂದನ ದಾಸರುಸ್ವಾರ್ಥವಾಗದು ಕಾರ್ಯ ಹರನ ಭಕ್ತರುಕೇಳಿ7
--------------
ಗೋವಿಂದದಾಸ
ಹರಿನಾಮವೆ ಜಯ ಮಂಗಳವು |ಶ್ರೀ ಹರಿನಾಮವೆಶುಭಮಂಗಳವು ||ಹರಿನಾಮವ ದಿನ ಸ್ಮರಿಸುವ ಸುಜನರ-ದುರಿತರಾಶಿಗಳೆಲ್ಲ ತರಿಯುವಮಾಧವ1ಉರಗಶಯನವರಪರಮೇಶನಸಖ|ಗರುಡಗಮನಸಿರಿಯರಸನೆಂದೆನಿಸಿದಹರಿ2ನಾರದಮುನಿ ಹರಿನಾರಾಯಣನೆಂದು |ಭಾರಿ ಭಜನೆ ಗೈವ | ಮಾರಜನಕನೆಂಬಹರಿ3ಅಜಾಮಿಳನಂತ್ಯದಿ | ಭುಜಗಶಯನನೆಂದು |ಭಜಿಸಲು ಸಲಹಿದವಿಜಯಸಾರಥಿಯಾದಹರಿ4ಸರಸಿಯೊಳ್ ಮೊರೆಯಿಟ್ಟು | ಮರುಗುವ ಗಜವನು |ಗರುಡನ ಹೆಗಲೇರಿ ಪಿಡಿದು ರಕ್ಷಿಸಿದಂಥ5ಶೇಷಗಿರಿಯ ಮೇಲೆ ವಾಸವಾಗಿರುತಿಹ |ದಾಸ ಜನರ ಪ್ರಿಯ | ದೋಷರಹಿತನೆಂಬ6ವೃಂದಾವನದೊಳಾ | ನಂದದೊಳಾಡುವ |ಸುಂದರಕರಗೋವಿಂದನೆಂದಿನಿಸಿದಹರಿ7
--------------
ಗೋವಿಂದದಾಸ