ಒಟ್ಟು 63 ಕಡೆಗಳಲ್ಲಿ , 8 ದಾಸರು , 44 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೌತಿಯ ದಿವಸರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ-ಮೌರಿರಭಸದಿ ಲಕ್ಷ್ಮೀಕಾಂತಭೂರಿವೈಭವದಿ ಪೊರಟನೆತ್ತ ಯಾವಕಾರಣವೆಂದು ಪೇಳೆಲೆ ಸತ್ಯ 1ದೇವರ ಪೂಜೆಗೋಸುಗ ಬಂದಪಾವನಮೂರ್ತಿಯಾದುದರಿಂದ ನಮ್ಮಕಾವನು ಕರುಣಾಕಟಾಕ್ಷದಿಂದ 2ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ-ನ್ನಾಥನಿಗ್ಯಾವ ಕುಲವು ಕಾಣೆರೀತಿಯನರುಹಬೇಕೆಲೆ ಬಾಲೆ ಸರ್ವಚೇತನಾತ್ಮನ ನಾಟಕದ ಲೀಲೆ 3ಕೊಂಡಕಾರಣದಿ ಪೂಜೆಗಳೆಲ್ಲಕಂಡು ಪೊಗಳಲು ಕವಿಗು ಸಲ್ಲ ಇನ್ನುಪುಂಡರೀಕಾಕ್ಷನವನೆ ಬಲ್ಲ 4ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ-ಭೋಜನಾಭನು ತಾಕ್ಷ್ರ್ಯನ ಮೇಲೆರಾಜಬೀದಿಯೊಳ್ ಬರುವದೇನೆ ಇಂಥಸೋಜಿಗವೇನು ಪೇಳೆಲೆ ಜಾಣೆ 5ಬಟೆನಿಸ್ಸಾಳರವದಿ ಬರುವ ಚಂದಸಟೆಯಲ್ಲ ಕೇಳು ಕರುಣದಿಂದ ನಮ್ಮಕಟಕರಕ್ಷಿಸಲು ಬರುವ ಗೋವಿಂದ6ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ-ಗಲಭೆಗಳಿಂದ ಪೋಗುವದೇನೆನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ-ಜಲಜನಾಭನ ಮಹಿಮೆಯ ಜಾಣೆ 7ದೀಪವೆಂದೆನುತ ಭಕ್ತರು ಮುದದಿಶ್ರೀಪರಮಾತ್ಮ ವಿಲಾಸದಿ ಭಕ್ತ-ರಾಪೇಕ್ಷೆಗಳನು ಸಲ್ಲಿಸುವಂದದಿ 8ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ-ಸ್ತೋಮಜೇನುಂಡೆಬಿರುಸುಮಿಗಿಲುವ್ಯೋಮಕೇಶಗಳ ಪೊಗಳತೀರದು ಸರಿಭೂಮಿಯೊಳ್ ಕಾಣೆನೆಂಬಂತಾದುದು 9ಅಮಮ ಇದೇನೆ ಇಂದಿನ ಲೀಲೆ ಜನ-ರಮರಿಕೊಂಡಿಹರೇನಿದು ಬಾಲೆಸಮವಿಲ್ಲ ಇಂತೀ ವೈಭೋಗಕ್ಕೆಲೆ ನ-ಮ್ಮಮರಾವತಿಗಿಂತಧಿಕ ಬಾಲೆ 10ಲಾರ್ತಿ ಹರಣವಾಗ್ವದು ಜಾಣೆಕೀರ್ತಿತರಂಗಮಾಗಿಹುದೇನೆ ಶೇಷ-ತೀರ್ಥವೆಂದರೆ ಕೇಳಿದು ಪ್ರವೀಣೆ 11ರಂಭೆ :ಏಸುದೊಡ್ಡಿತೆ ಕೇಳಲೆ ಬಾಲೆ ಅನಂ-ತಾಸನದಂತೆ ಮರೆವುದಲ್ಲೇನಾಸಿರ ದೀಪಸೋಪಾನದಲೆ ಮಹಾ-ಶೇಷನಿಹನು ಮಧ್ಯದೊಳಿಲ್ಲೇ 12ಊರ್ವಶಿ :ಕರುಣಾಕರನು ನಮ್ಮೆಲ್ಲರನುನಿತ್ಯಪೊರೆಯಲೋಸುಗ ಬಂದನು ತಾನುಸುರುಚಿರ ಮಂಟಪವೇರಿದನು ಭೂ-ಸುರರಿಂದ ವೇದಘೋಷವ ಕೇಳ್ವನು 13ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮಸೃಷ್ಟಿಗೆ ಪೊಸತಾಗಿಹುದು ಕಾಣೆಕಟ್ಟಿಸಿದವನು ಪುಣ್ಯೋತ್ತಮನು ಪರ-ಮೇಷ್ಠಿ ಜನಕನ ಕೃಪೆಯಿನ್ನೇನು 14ಭಜಕರ ಮುಖದಿಂದೆಲ್ಲ ತಾನು ಭೂ-ಭುಜನಾಗಿ ನಡೆಸುವನಿದನೆಲ್ಲನುನಿಜವಾಗಿನಿತ್ಯಸಾಕಾರವನು ತೋರಿತ್ರಿಜಗವನೆಲ್ಲ ರಕ್ಷಿಸುತಿಹನು 15ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ-ದೊಡೆಯ ಪೊರಡುವ ಕಾಲದಿ ಭಾರಿಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥಕಡು ಬೆಡಗನು ಉಸುರೆಲೆ ಬಾಲೆ 16ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮತನುವಿಗೆ ಸೋಂಕಲದನೆಲ್ಲವಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ-ಧ್ವನಿಯೆಸಗಿದರು ಕೇಳಿದರಂದವ 17ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು-ಬರುವನು ವೇದನಿನಾದದಲಿವರರತ್ನ ಖಚಿತ ಮಂಟಪದಲ್ಲಿ ನಿಂತನಿರವದಿ ಸುಖದಾಯಕನಲ್ಲಿ 18ಶರಣರ ಪಾಪ ಮನಕೆ ತಾರ ದುಡಿದವರಭೇರಿಗೆರೆವ ಬಿಸಿನೀರವರಲಕ್ಷ್ಮೀನಾರಾಯಣಧೀರ ಸುರು-ಚಿರ ಸಿಂಹಾಸನವೇರಿದ ವೀರ 19
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜನನಿರುದ್ರಾಣಿ ರಕ್ಷಿಸು ಎನ್ನಜಗದೀಶನ ರಾಣಿ ಪ.ವನಜಭವಸುರಮುನಿಕುಲಾರ್ಚಿತೆಕನಕವರ್ಣಶರೀರೆ ಕಮಲಾ-ನನೆ ಕರುಣಾಸಾಗರೆ ನಮಜ್ಜನ-ಮನಮುದಾಕರೆ ಮಾನಿತೋದ್ಧರೆ ಅ.ಪ.ಆದಿಕೃತಾಯುಗದಿ ಪ್ರತಿಷ್ಠಿತ-ಳಾದೆ ಧರಾತಳದಿಆದಿತೇಯರ ಬಾಧಿಸುವ ದಿತಿ-ಜಾಧಮರ ಭೇದಿಸಿದೆ ಸಜ್ಜನ-ರಾದವರ ಮನ್ನಿಸಿದೆ ತ್ರೈಜಗ-ದಾದಿಮಾಯೆ ವಿನೋದರೂಪಿಣಿ 1ಖಂಡ ಪರಶುಪ್ರೀತೆ ನಿಖಿಲಬ್ರ-ಹ್ಮಾಂಡೋದರಭರಿತೆಚಂಡಮುಂಡವೇತಂಡದಳನೋ-ದ್ದಂಡಸಿಂಹೆ ಅಖಂಡಲಾರ್ಚಿತೆಪಾಂಡುತನುಜಕೋದಂಡವಿತರಣೆಚಂಡಿಕೇ ಕರದಂಡಲೋಚನಿ 2ಸಿಂಧೂರಸಮಯಾನೆ ಸರಸ ಗುಣ-ವೃಂದೆ ಕೋಕಿಲಗಾನೆಸುಂದರಾಂಗಿ ಮೃಗೇಂದ್ರವಾಹಿನಿಚಂದ್ರಚೂಡಮನೋಜೆÕ ಸತತಾ-ನಂದಪೂರ್ಣೆ ಮುನೀಂದ್ರನುತೆ ಸುಮ-ಗಂಧಿ ಗೌರಿ ಶಿವೇ ಭವಾನಿ 3ಲಂಬೋದರಮಾತೆ ಲಲಿತ ಜಗ-ದಂಬಿಕೆ ಗಿರಿಜಾತೆಕಂಬುಕಂಠಿ ಕಾದಂಬನೀಕು-ರುಂಬಜಿತಧಮ್ಮಿಲ್ಲೆ ತವ ಪಾ-ದಾಂಬುಜವ ನಾ ನಂಬಿದೆನು ಎನ-ಗಿಂಬು ಪಾಲಿಸೆ ಶುಂಭಮರ್ದಿನಿ 4ಘನವೇಣುಪುರವಾಸೆ ಸರ್ವಾರ್ಥದಾ-ಯಿನಿ ತ್ರೈಜಗದೀಶೆಸನಕನುತೆ ಶ್ರೀಲಕ್ಷುಮಿನಾರಾ-ಯಣಭಗಿನಿ ಶ್ರೀಮಹಿಷಮರ್ದಿನಿಮನಮಥಾಮಿತರೂಪೆ ಕಾತ್ಯಾ-ಯಿನಿ ನಿರಾಮಯೆ ಮಂಜುಭಾಷಿಣಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯ ಶಂಕರ ಪರಮೇಶ ದಿಗಂಬರಜಯ ಗಿರಿಜೆಯವರ|ಸಾಂಬನಮೋಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಜಯಕಿಂಕರಪರಿಪಾಲಪರಾತ್ಪರಜಯ ಭವಭಯಹರ ಶಂಭು ನಮೋ1ವಾಸವಸುತ ಫಣಿಭೂಷಣ ನತಜನ-ಕ್ಲೇಶನಾಶ ಜಗದೀಶ ನಮೋ |ಕೇಶವ ಹಿತಭೂತೇಶಜಯತು ಕೈ-ಲಾಸ ವಾಸ ಅಘನಾಶ ನಮೋ2ದಂಡಧರನ ಶಿರಖಂಡನಶಶಿಧರರುಂಡಮಾಲ ಪ್ರಚಂಡ ನಮೋ |ಖಂಡ ಪರಶುಬ್ರಹ್ಮಾಂಡದೊಡೆಯ ಗೋ-ವಿಂದವಿನುತಚಂಡೇಶ ನಮೋ3
--------------
ಗೋವಿಂದದಾಸ
ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ.ದಯಾಸಾಗರೆ ದಾರಿದ್ರ್ಯದುಃಖ ಭವ-ಭಯನಾಶಿನಿ ಮಣಿಮಯಕೃತಭೂಷಿಣಿ ಅ.ಪ.ಗಜವದನನ ಮಾತೆ ಸುಜನ-ವ್ರಜಸತ್ಫಲದಾತೆಕುಜನಭಂಜನಿ ನಿರಂಜನಿ ಶೈಲಾ-ತ್ಮಜೆ ಮಹೋಜೆ ನೀರಜದಳಲೋಚನಿ 1ಇಂದ್ರಾದ್ಯಮರನುತೆ ಪೂರ್ಣಾನಂದೆ ನಂದಜಾತೆಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ-ಗೇಂದ್ರವಾಹಿನಿ ಮದಾಂಧರಿಪು ಮಥನಿ 2ಅಂಗಜಶತರೂಪೆ ಸದಯಾ-ಪಾಂಗೆ ಸುಪ್ರತಾಪೆಗಂಗಾಧರವಾಮಾಂಗಶೋಭೆ ಸಾ-ರಂಗನೇತ್ರೆ ಶ್ರೀರಂಗಸಹೋದರಿ 3ದಾಸಜನರ ಪೋಷೆ ರವಿಸಂ-ಕಾಶೆ ತ್ರಿಜಗದೀಶೆವಾಸುದೇವನ ಸ್ಮರಣಾಸಕ್ತಿಯ ಕೊಡುಭಾಸುರಜ್ಞಾನಪ್ರಕಾಶವಿಲಾಸಿನಿ 4ಸೌಖ್ಯವು ಭಕ್ತರ್ಗೆ ಸಲಿಸಲುಸೌಖ್ಯವು ನೀ ಭರ್ಗೆಲಕ್ಕುಮಿನಾರಾಯಣನ ಭಗಿನಿ ನಿ-ರ್ದುಃಖಪ್ರದಕಟಿಲಾಖ್ಯಪುರೇಶ್ವರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ-ರಂಭಸೂತ್ರಳೆ ಇಂಬುದೋರಿನ್ನು ಪ.ಅಂಬುಜಾಂಬಕಿ ಶುಂಭಮರ್ದಿನಿಕಂಬುಗ್ರೀವೆಹೇರಂಬಜನನಿಶೋ-ಣಾಂಬರಾವೃತೆ ಶಂಭುಪ್ರಿಯೆ ದಯಾ-ಲಂಬೆ ಸುರನಿಕುರುಂಬಸನ್ನುತೆ ಅ.ಪ.ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ-ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ-ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ-ಗಾರೆ ರಿಪುಸಂಹಾರೆ ತುಂಬುರುನಾರದಾದಿಮುನೀಂದ್ರ ನುತಚರ-ಣಾರವಿಂದೆ ಮಯೂರಗಾಮಿನಿಸೂರಿಜನ ಸುಮನೋರಥಪ್ರದೆ 1ಮೂಲರೂಪೆ ದಯಾಲವಾಲೆವಿಶಾಲಸುಗುಣಯುತೆ ಮುನಿಜನ-ಲೋಲತರುಣಮರಾಳೆ ಸಚ್ಚರಿತೆ ನವಮಣಿಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ-ಬಾಲೆ ನೀಲತಮಾಲವರ್ಣೆ ಕ-ರಾಳಸುರಗಿ ಕಪಾಲಧರೆ ಸುಜ-ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ 2ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ-ವಾಕರಾಭೆಪರಾಕುಶರಣಜನೈಕಹಿತದಾತೆ ಸುರನರ-ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ-ವಾಕುಕಾಯದಿಂದ ಗೈದಾನೇಕ ದುರಿತವ ದೂರಗೈದು ರ-ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ3ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ-ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ-ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ-ಲ್ಲಾಸೆ ಯೋಗೀಶಾಶಯಸ್ಥಿತೆವಾಸವಾರ್ಚಿತೆ ಶ್ರೀಸರಸ್ವತಿದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ 4ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ-ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ-ವಾಮಭಾಗಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯಶ್ರೀಮಹಾಲಕ್ಷ್ಮಿ ನಾರಾಯಣಿರಾಮನಾಮಾಸಕ್ತೆ ಕವಿಜನ-ಸ್ತೋಮಕೃತ ಪರಿಣಾಮೆ ಭೌಮೆ ಪುಲೋಮಜಾರ್ಚಿತೆಸೋಮಶೇಖರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಾರಾಯಣ ನರಸಿಂಹ ಲ-ಕ್ಷ್ಮೀರಮಣನೆ ಪರಬ್ರಹ್ಮ ಪ.ಸಾರಭೋಕ್ತನೆ ಸ್ವತಂತ್ರನೆ ದೋಷವಿ-ದೂರ ಪರಿಪೂರ್ಣಕಾಮ ಅ.ಪ.ಸತ್ವಾದಿಗುಣಾತೀತ ವಿತತ ಸ-ರ್ವೋತ್ತಮ ನಿರುಪಮ ಮಹಿಮಪ್ರತ್ಯಗಾತ್ಮ ನಿಗಮಾಗಮವೇದ್ಯ ಸು-ಹೃತ್ತಮ ಮಂಗಲಧಾಮ 1ವಿಧಿಭವೇಂದ್ರಾದಿ ವಿಬುಧಾಶ್ರಿತಪದ-ಪದುಮ ನೀಲಾಂಬುದಶ್ಯಾಮಹೃದಯಾಬ್ಜಮಧ್ಯಸದನ ಸಾಮಜವ-ರದ ಯದುವಂಶಲಲಾಮ 2ಮಾಯಾತೀತ ಮಹೋನ್ನತ ಸುರಜನ-ಪ್ರಿಯ ದ್ಯೆತ್ಯೇಯನಿರ್ನಾಮವಾಯುವಾಹನ ಜನಾರ್ದನ ಲಕ್ಷ್ಮೀನಾ-ರಾಯಣ ತೇ ನಮೋ ನಮಃ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಂಚಮಿಯ ದಿನರಂಭೆs :ಏನಿದು ಇಂದಿನವಿಭವನಮ್ಮಶ್ರೀನಿವಾಸನ ಮಹಾತ್ಮವಮಾನಿನಿರನ್ನೆ ನೀ ಪೇಳೆ ಭಕ್ತಾ-ಧೀನದ ಚರಣದ ಲೀಲೆಭಾನುಉದಯದಲಿ ವೀಣಾದಿ ಸು-ಗಾನ ವಾದ್ಯ ನಾನಾವಿಧ ರಭಸದಿ 1ಎತ್ತಲು ನೋಡಿದಡತ್ತ ಜನ-ಮೊತ್ತವಿಲಾಸವಿದೆತ್ತಚಿತ್ತದಿ ನಲಿನಲಿದಾಡಿ ತೋಷ-ವೆತ್ತಿರುವನು ಒಟ್ಟುಗೂಡಿಸುತ್ತುಮುತ್ತು ಒತ್ತೊತ್ತಿಲಿಹರು ವಿ-ಪ್ರೋತ್ತಮ ಶ್ರೀಹರಿಭಕ್ತರ ಮಯವಿದು 2ಚಾಮರ ಛತ್ರ ಸಿಗುರಿಯು ಜನ-ಸ್ತೋಮಪತಾಕೆ ತೋರಣವುಹೇಮದ ಕಂಚುಕಿ ಈಟಿ ಗುಣ-ಧಾಮನ ಬಿರುದುಗಳ್ ಕೋಟಿಆ ಮಹಾಭೇರಿ ಪಟಹ ನಿಸ್ಸಾಳಕಸಾಮಗಾನ ಸಾಮ್ರಾಜ್ಯವೋಲಿಹುದು 3ಬಾಲರು ವೃದ್ಧ ಯೌವನರು\ಜನ-ಜಾಲವೆಲ್ಲರು ಕೂಡಿಹರುಲೋಲಸ್ರೀಮುಂದ್ರಾಂಕಿತದಿ ಬಹು ವಿ-ಶಾಲ ದ್ವಾದಶನಾಮ ಮುದದಿಆಲಯದೊಳಗಿಹ ಬಾಲಕಿಯರು ಸಹಸಾಲಂಕೃತ ಸಮ್ಮೇಳದಿ ನಲಿವರು 4ಒಂದು ಭಾಗದಿ ವೇದಘೋಷ ಮ-ತ್ತೊಂದು ಭಾಗದಿ ಜನಘೋಷಇಂದಿನ ದಿನದತಿಚೋದ್ಯ ಏ-ನೆಂದು ವರ್ಣಿಸುವದಸಾಧ್ಯಚಂದಿರಮುಖಿ ಯಾರೆಂದೆನಗುಸುರೆಲೆಮಂದರಧರಗೋವಿಂದನ ಮಹಿಮೆಯ5ಪೇಳಲೇನದಾ ಮೂರ್ಲೋಕದೊಳಗೀ ವಿ-ಶಾಲವ ನಾ ಕಾಣೆ ಪ.ಸೋಜಿಗಸೌಭಾಗ್ಯ ಸಂಪದಕಿದು ಬೀಜ ಕಾಣೆಲೆರಾಜೀವನಾಭನ ಪೂಜಾವಿನೋದದಿರಾಜವದನೆ ವನಭೋಜನದಿಂದಿನ 1ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು 2ಇಂದಿನ ದಿನದಂದವನೂತನವೆಂದು ನೀ ಪೇಳುವಿಚಂದಿರ ಮುಖಿ ಜನಸಂದಣಿಗಳು ಮಹಾಮಂದಿ ಓಲೈಸುವರಿಂದು ಮುಕುಂದನ 3ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆ ಪ.ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆಕಾಣುವ ಯೋಗಭೋಗ 1ಎನಗತಿ ಮನವು ನಿನಗತಿ ಛಲವುಜನುಮಾಂತರ ಪುಣ್ಯವೈಸೆ ನೀ 2ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾ ಪ.ಅನವರತದಿಂದ ಬರುವ ಪುರುಷನಲ್ಲಮೀನಕೇತನ ಶತರೂಪ ಕಾಣೆ 1ನೂತನ ಪುರುಷನಿವನ್ಯಾರೆಂದರಿಯೆನಮ್ಮಾಶಾತಕುಂಭದ ಮಂಟಪವೇರಿ ಬರುವನಮ್ಮಾ 2ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾತರತರ ರತ್ನವರದ ಬಾಯೊಳಿರುವದಮ್ಮಾ 3ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾಪರಮಪುರುಷನಂತೆ ತೋರುವನು ಅಮ್ಮಾ4ಬಾಲಾರ್ಕನಂತೆ ಮುಖ ಪ್ರಜ್ವಲಿಪುದುನೀಲಮಾಣಿಕ್ಯ ಕಾಂತಿಯ ಸೋಲಿಪುದು 5ಮೂರ್ಲೋಕದೊಳಗೆ ಸರಿಯುಪಮೆತೋರಲರಿಯೆಕಾಲಿಗೆರಗುವೆನು ಪೇಳಬೇಕು ಸಖಿಯೆ 6ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾಬೆರಳೊಳು ವಜ್ರದುಂಗುರವನಿಟ್ಟವನಮ್ಮಾ 7ವರರತ್ನಖಚಿತದಾಭರಣದಿಂದ ಮೆರೆವಚರಣಸರೋಜದೊಳು ರೇಖೆಯಿಂ ಶೋಭಿಸುವ8ವಲ್ಲಭೆಯರ ಸಹಿತುಲ್ಲಾಸದಿ ಬರುವಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ 9ಬಲ್ಲಿದಪುರುಷನಿವನೆಲ್ಲಿಂದ ಬಂದಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ 10ಊರ್ವಶಿ :ನೋಡುನಿತ್ಯಾನಂದಕರನಮೂಡಗಿರಿಯಿಂದೋಡಿ ಬಂದನ ನೋಡೆ ಪ.ಛಪ್ಪನ್ನೈವತ್ತಾರು ದೇಶಕಪ್ಪಕಾಣಿಕೆಗೊಂಬ ತೋಷಸರ್ಪಶೈಲ ರಾಜವಾಸಚಪ್ಪರ ಶ್ರೀ ಶ್ರೀನಿವಾಸ 1ತಿರುಗುತ್ತಿಪ್ಪಾ ತಿರುಮಲೇಶಶರಣ ರಾಮನ ಭಕ್ತಿಪಾಶದುರುಳಿನಲಿ ನಿಂದಿರ್ಪಶ್ರೀಶತರಿಸುವನುಕಾಣಿಕೆವಿಲಾಸ2ಪಟ್ಟದರಸನಾದ ದೇವಸೃಷ್ಟಿಯಾಳುವಜಾನುಭಾವದೃಷ್ಟಿಗೋಚರವಾಗಿ ಕಾಯ್ವಇಷ್ಟವೆಲ್ಲವ ಸಲಿಸಿ ಕೊಡುವ 3ವೃಂದ ನೆರಹಿ ವನಕೆಅಂದಣವೇರಿ ಮುಕುಂದನೊಲವಿನಲಿಕುಂದಣಮಂಟಪವೇರಿ ಮತ್ತೊಬ್ಬನುಸಂದರುಶನವಂ ನೀಡುತ ಯಿಬ್ಬರುಒಂದಾಗುತ್ತಾನಂದವ ಬೀರುತ್ತ 1ಅಕ್ಕ ನೀನೋಡುಬಹುಮಾನದಿಸಿಕ್ಕಿದಿ ಬಿರುದು ಪೊತ್ತಾತೆಕ್ಕೆಪಕ್ಕೆಯ ವಿಲಾಸ ಮನಸಿನೊಳುಉಕ್ಕುವದತಿ ತೋಷಇಕ್ಕೆಲದಲಿ ಬೀಸುವ ಚಾಮರಗಳ ವಕ್ಕಣಿಸುವಸ್ತುತಿಪಾಠಕ ಜನಗಳಮಿಕ್ಕಿ ನೊಡುವ ನೋಟಕೆ ಮನಸಿನೊಳುಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ 2ಛತ್ರ ಚಾಮರ ತೋರಣ ಪತಾಕೆಪವಿತ್ರ ನಿಶಾನಿಧಾರಣಾಸುತ್ರಾಮಾರ್ಚಿತ ಚರಣಭಕ್ತರನುಪವಿತ್ರಗೈಯುವ ಕಾರಣಮಿತ್ರಮಂಡಳವನು ಮೀರಿ ಪೊಳೆವುತಿಹರತ್ನಖಚಿತ ಮಂಟಪದಲಿ ಮಂಡಿಸಿಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವಕೀರ್ತಿಯ ಧರಿಸಿ ಜಗತ್ರಯಪಾವನ 3ವಾಲಗಶ್ರುತಿಭೇರಿಡಿಂಡಿಮನಿಸ್ಸಾಳ ಪಟಹಭೂರಿತಾಳ ಮೃದಂಗ ರವದಿಂದಜನಜಾಲಕೂಡಿರುವಮೇಳವಿಸುತ್ತನುಕೂಲಿಸಿ ಬಹು ಬಿರುದಾಳಿಗೆ ಸಂಭ್ರಮದೇಳಿಗೆಯಿಂದಲಿಕೋಲು ಪಿಡಿದು ಓಹೋಯೆಂಬಂಥ ವಿ-ಶಾಲ ಭಕ್ತರ ಮೇಲು ಸಂತೋಷದಿ 4ದೇಶದೇಶದ ಜನರು ನಾನಾ ವಿಧಭಾಷೆ ಪ್ರವರ್ತಕರುಆಶಾಪಾಶರು ಪಾತಕಮಾನಸ-ರೀ ಸಮಯದಿ ಶ್ರೀನಿವಾಸನೆ ಎಮ್ಮಯದೋಷಗಳೆಲ್ಲವ ನಾಸಿಸು ಯೆನುತಭಿ-ಲಾಷೆಯ ಜನಗಳ ಪೈಸರದಿಂದಲಿ 5ವೇದಶಾಸ್ತ್ರಪೌರಾಣಪ್ರಜÕರು ತರ್ಕವಾದಿಪಾಠಕ ಜಾಣಸಾಧು ಕುಶಲದಿ ವಿದ್ಯಾಪ್ರವೀಣವಿನೋದ ಸಿದ್ಧ-ಸಾಧ್ಯ ಸಾದರದಿಂದ ಸರಸಕವಿ ವಾಗೀಂ-ದ್ರಾದಿಗೀರ್ವಾಣಸಮುದಾಯದಿಂದ ಕೃ-ಪೋದಯ ತೋರುತ್ತಾದಿಮೂರುತಿ ಜಯ-ನಾದದಿ ಭಕ್ತರಮೋದಪಡಿಸುತ್ತಾ6ರಂಭೆ : ನಾರಿ ಕೇಳೆ ಶ್ರೀರಮಾಧವಸ್ವಾರಿ ಪೊರಟ ಕಾರಣ ಪೇಳೆ 1ಯಾವ ರಾಜ್ಯದಿ ಪ್ರಭುದೇವಸ್ವಾರಿಯಠೀವಿಯ ಕಾಣೆ ಅಂತರ್ಭಾವವೇನೆ 2ಭೂರಿದೇಶವ ಸಂತತಪ .ವೀರವೈಷ್ಣವ ಭಕ್ತರು ಸದ್ಭಕ್ತಿಯಸಾರದಿ ನಿಲಿಸಿದರುಮಾರಜನಕನಿಗೆ ಮನನಿಲ್ಲದೆ ಸಂ-ಚಾರಕೆ ತಾ ಮೈದೋರಲು ಬೇಕೆಂ-ಬೀ ರೀತಿಗೆ ತಾ ಪೂರ್ವಸ್ಥಾನ ವಿ-ಚಾರಕೆ ಬಂದಿಹ ಕಾರಣವೀಗಲೆ 1ರಾಜ ಬಂದನೆ ಅಮ್ಮಾ ಆಶ್ರಿತಸುರ-ಭೂಜಬಂದನೆ ಅಮ್ಮಾಓಜೆಯಿಂದಲಿ ಕಾಣಿಕೆಯನ್ನು ಒಪ್ಪಿಸಿರಾಜಕದಿವ್ಯಾರತಿಯನು ಎತ್ತುತರಾಜೀವನಾಭನೆ ರಕ್ಷಿಸೆನುತ್ತಲಿಸೋಜಿಗಪಟ್ಟೆಲ್ಲಾಜನವಿರ್ದುದು 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾರೋ ವೆಂಕಟಗಿರಿನಾಥ| ದಯ-ದೋರೈ ಭಕುತರ ಪ್ರೀತ ಪ.ಮಾರಪಿತ ಗುಣಹಾರ ಮಂದರ-ಧಾರ ದೈತ್ಯಸಂಹಾರ ಸುಜನೋದ್ಧಾರ ಮಮಹೃದಯಾರವಿಂದಕೆಬಾರೋ ಕೃಪೆದೋರೋ ವೆಂಕಟ ಅ.ಪ.ವೃಷಭಾಸುರನೊಳು ಕಾದಿ ಸಾ-ಹಸವ ಮೆರೆಸಿದ ವಿನೋದಿವಶಗೈದು ದೈತ್ಯನ ಶಿರವ ಕತ್ತ-ರಿಸುತಲಿ ನೀನಿತ್ತೆ ವರವವಸುಧೆಯೊಳಗಿಹ ಸುಜನರನು ಮ-ನ್ನಿಸುತಲಿಷ್ಟವನಿತ್ತು ಕರುಣಾ-ರಸದಿ ಸಲಹುವ ಬಿಸಜನಾಭ ಶ್ರೀ-ವೃಷಭಾಚಲವೊಡೆಯ ವೆಂಕಟ 1ಅಂಜನೆಯೆಂಬಳ ತಪಕೆ ಭಕ್ತ-ಸಂಜೀವನೆಂಬ ಶಪಥಕೆರಂಜಿಪ ಪದವಿತ್ತೆ ಮುದದಿ ಖಿಲ-ಭಂಜನಮೂರ್ತಿ ಕರುಣದಿ|ಮಂಜುಳಾಂಗ ಶ್ರೀರಂಗ ಸುರವರಕಂಜಭವವಿನುತಾದಿ ಮಾಯಾ-ರಂಜಿತಾಂಘ್ರಿ ಸರೋರುಹದ್ವಯಅಂಜನಾಚಲವೊಡೆಯ ವೆಂಕಟ 2ಶೇಷನ ಮೊರೆಯ ತಾಕೇಳಿಬಲುತೋಷವ ಮನಸಿನೊಳ್ತಾಳಿದೋಷರಹಿತನೆಂದೆನಿಸಿ ಕರು-ಣಾಶರಧಿಯ ತಾನೆ ಧರಿಸಿಶ್ರೀಶಹರಿಸರ್ವೇಶ ನತಜನ-ಪೋಷ ದುರ್ಜನನಾಶ ರವಿಶತ-ಭಾಸ ಕೌಸ್ತುಭಭೂಷವರಶ್ರೀ-ಶೇಷಾಚಲವಾಸ ವೆಂಕಟ 3ಮಾಧವವಿಪ್ರ ವಿರಹದಿ ಭ್ರಷ್ಟಹೊಲತಿಗಳನು ಸೇರ್ದ ಮುದದಿಸಾದರದಲಿ ನಿನ್ನ ಬಳಿಗೆ ಬರೆನೀ ದಯಾನಿಧಿ ಕಂಡು ಅವಗೆಶೋಧಿಸುತ ಪಾಪಗಳೆಲ್ಲವಛೇದಿ ಬಿಸುಡುತನಿಂದುವೆಂಕಟ-ಭೂಧರದ ನೆಲೆಯಾದ ನಾದವಿ-ಭೇದಬಿಂದು ಕಲಾದಿಮೂರುತಿ 4ಧನಪತಿಯೊಳು ತಾನು ಸಾಲಕೊಂಡಘನಕೀರ್ತಿಯಿಂದ ಶ್ರೀಲೋಲವನಿತೆ ಪದ್ಮಾವತಿಪ್ರೀತ ಭಕ್ತ-ಜನಸುರಧೇನು ಶ್ರೀನಾಥವನಧಿಶಯನ ಮುರಾರಿಹರಿಚಿ-ಧ್ವನಿನಿಭಾಂಗ ಸುಶೀಲ ಕೋಮಲವನಜನಾಭನೀಯೆನ್ನ ಕೃಪೆಯೊಳ-ಗನುದಿನದಿ ಕಾಯೊ ಕೃಪಾಕರ 5ಛಪ್ಪನ್ನೈವತ್ತಾರು ದೇಶದಿಂದಕಪ್ಪವಗೊಂಬ ಸರ್ವೇಶಅಪ್ಪ ಹೋಳಿಗೆಯನ್ನುಮಾರಿಹಣ-ಒಪ್ಪಿಸಿಕೊಂಬ ಉದಾರಿಸರ್ಪಶಯನ ಕಂದರ್ಪಪಿತ ಭಜಿ-ಸಿರ್ಪವರ ಸಲಹಿರ್ಪ ಕುಜನರದರ್ಪಹರಿಸುತ ಕಪ್ಪಕಾಣಿಕೆಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6ಚಾರುಚರಣತೀರ್ಥವೀಂಟಿ ನಿನ್ನೊ-ಳ್ಸಾರಿ ಬರುವ ಪುಣ್ಯಕೋಟಿಸೇರಿದೆ ಕೊಡು ಮನೋರಥವ ಲಕ್ಷ್ಮೀ-ನಾರಾಯಣನೆನ್ನೊಳ್ದಯವತೋರುನಿರತಸಮೀರಭವ ವರ-ದಾರವಿಂದದಳಾಕ್ಷ ತಿರುಪತಿವೀರ ವೆಂಕಟರಮಣ ಮದ್ಬಹು-ಭಾರನಿನ್ನದು ಪಾಲಿಸೆನ್ನನು7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮುಕ್ಕೋಟ ದ್ವಾದಶಿಯ ದಿವಸ(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)ವ್ರತತಿಯಧಿಪನಂತೆ ನೀರೆ ತೋರ್ಪಅತಿಶಯಾಗಮ ಬಗೆ ಬ್ಯಾರೆ ರತ್ನದ್ಯುತಿಯಾಭರಣವ ಶೃಂಗಾರ ಆಹಾಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-ಗತಿಸ್ಮøತಿತತಿಗಳ ಮತಿಗಗೋಚರನಂತೆ1ಲೋಲಲೋಚನನ ನಾಟಕ ಸತ್ಕಥನವಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿಬಾಲಾರ್ಕಸದೃಶನೀತನು ಇರ್ಪನಲ್ಲಿನೀಲನಿಭಾಂಗನು ನೆನೆವರ ಪಾಪವಘೋಲುಘಡಿಸಲೆಂದೆನುತಲಿಭಾರ್ಗವಕೋಲಿಂದೆಸಗಿದ ಧರಣಿಗೆ ಬಂದು ಸ-ಲೀಲೆಗಳೆಸಗುವ ಜಾಲವಿದೆಲ್ಲ 2ಸರಸಿಜಗಂಧಿ ಕೇಳ್ ದಿಟದಿ ತನ್ನಅರಮನೆಯಿಂದ ಸದ್ವಿಧದಿ ಈರ್ವ-ರರಸಿಯರ್ ಸಹಿತ ಮಿನಿಯದಿ ಅತಿಭರದಿಂದ ಸೂರ್ಯನುದಯದಿ ಆಹಾಉರುತರ ಹೇಮಪಲ್ಲಂಕಿಯೊಳಡರಿತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ 3ಬದ್ಧನೀ ಪೇಳ್ದ ಮನದ ಶಂಕಾವ್ರಾತತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳುಶುದ್ಧ ದ್ವಾದಶಿಸೂರ್ಯಉದಯ ಕಾಲದೊಳುಭದ್ರಭವನವನು ಪೊರಟು ವಿನೋದದಿಅದ್ರಿಧರನು ಸಜ್ಜನರೊಡಗೂಡಿ ಉ-ಪದ್ರಿತ ಪಾಪವ ಛಿದ್ರಿಪ ಸ್ನಾನಕೆರೌದ್ರಿತ ರಾಮಸಮುದ್ರದ ಬಳಿಗೆ 4ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿಪರಮಮಹಿಮೆನೆಂದ ಮೇರೆಗೆ ಘನ-ತರ ಸ್ನಾನವೇನಿದು ಕಡೆಗೆ ವೃತದಿರವೋ ಉತ್ಸವವೋ ಪೇಳೆನಗೆ ಆಹಾತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈಪರಿಗಳ ಸಾಂಗದಿಂದರುಹಬೇಕೆನಗಿನ್ನು 5ಸಕಲಾಂತರ್ಯಾತ್ಮನೀತನು ಸತ್ಯಶೀಲೆ-ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿಭಕುತವತ್ಸಲನು ಉತ್ಸವಿಸುವನಲ್ಲಿವಿಕಳಹೃದಯ ನರನಿಕರಕಸಾಧ್ಯವೆಂದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿಅಖಿಳೋತ್ಸವ ಮಸ್ತಕಕಿದುವೆಗ್ಗಳಮುಕುಟೋತ್ಸವವೆಂದೆನುತಲಿ ರಚಿಸುವ 6ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನವೊಲವಿಂದ ಗೈದ ಮೇಲಿವನು ತನ್ನರಮಣಿಯರ್ಸಹಿತಂದಣವನು ಏರಿನಿಲುನಿಲುತ್ಯಾಕೆ ಬರುವನು ಆಹಾಪೊಳಲೊಳಗಿಹ ಜನನಿಳಯದ ದ್ವಾರದಿಕಳಕಳವೇನಿದ ತಿಳುಪೆನಗೀ ಹದ 7ಮಿಂದು ತೋಷದಿ ಅಂದಣವನ್ನೇರಿ ತಾನುಇಂದೀ ಪುರದೊಳಿರ್ಪ ಜನರ ದೋಷಗಳಕುಂದಿಸಲೆಂದವರವರ ದ್ವಾರದೊಳುನಿಂದಿರುತಲ್ಲಿಯದಲ್ಲಿ ಆರತಿಗಳಚಂದದಿ ಕೊಳುತೊಲವಿಂದಕಾಣಿಕೆಜನ-ವೃಂದದಿ ಕೊಡುತಾನಂದ ಸೌಭಾಗ್ಯವಒಂದಕನಂತವ ಹೊಂದಿಸಿ ಕೊಡುವ 8ರಂಭೆ : ಸರಸಿಜಾನನೆ ಮತ್ತೇನಿದನು ತನ್ನಅರಮನೆಯಲ್ಲಿ ಭೂದ್ವಿಜನರನು ಸರ್ವಪುರಜನ ಸಹಿತೊಳಗಿವನು ನಾನಾತರದಿ ಮೆರೆವ ಭೋಜನವನು ಆಹಾ-ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ 9ಗಂಗಾಜನಕತನ್ನ ಗೃಹದಿ ವಿಪ್ರರನುಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿಸಂಗಾತದಲಿ ಆರೋಗಣೆ ಗೈದು ಮೆರೆಸಿಅಂಗಣದಲಿ ರಾತ್ರೆಯಲಿ ವಿನೋದದಿಕಂಗೊಳಿಸುವ ಉರಿದರಳ ಸಮೂಹಕೆರಂಗಪೂಜೆಯನುತ್ತಂಗವಿಸುವ ನಿಗ-ಮಂಗಳೊಡೆಯನು ವಿಹಂಗಮಾರೂಢ 10ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-ಕುಮುದಾಪ್ತ ಠಾವಿನ ವೋಲು ಬಂದುಆದರಿಸಲಿದರ ಮಧ್ಯದೊಳು ತನ್ನರಮಣಿಯರ್ ಸಹಿತ ತೋಷದೊಳು ಆಹಾವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ 11ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆಚಾರುಈ ಹೂವಿನ ತೇರನೇರುತಲಿಕೇರಿ ಕೇರಿಯೊಳಾರತಿಗೊಳ್ಳುತಲಿಭೋರಿಡುತಿಹ ವಾದ್ಯಧ್ವನಿ ಘನತರಭೇರಿಮೃದಂಗಾದ್ಯಖಿಳ ವಿನೋದದಿಸ್ವಾರಿಗೆ ತೆರಳುವ ಕ್ರೂರ ನರರ ಆ-ಘೋರಪಾಪ ಜರ್ಝರಿಸಲೆಂದು12ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನಅರಮನೆಯಿದಿರು ರಥವನು ತಾನುಭರದೊಳಗಿಳಿದಂದಣವನು ಏರಿಮೆರೆವಾಲಯದ ಸುತ್ತುಗಳನು ಆಹಾತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-ಭರಿತ ಗಾಯನಭೇರಿಧ್ವನಿಗಳೇನಿದ ಪೇಳೆ13ದುಷ್ಟಮರ್ದನ ರಥವಿಳಿವುತ್ತಲಾಗೇಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆಅಷ್ಟಾವಧಾನವ ರಚಿಸುತ್ತ ಕಡೆಗೆಶ್ರೇಷ್ಠನು ರತ್ನಾಸನದಿ ಗ್ರಹದಿಪರಮೇಷ್ಟಜನಕೆ ಸಂತೋಷಾನಂದದಿಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತಇಷ್ಟವನೀವ ಯಥೇಷ್ಟ ದಯಾಬ್ಧ 14ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನುಹರಿಏಕರೂಪನೆನ್ನುತಲಿ ಲಕ್ಷ್ಮೀಕರವೆನಿಸುವ ಕಾರ್ಕಳದಲಿ ಭಾಗ್ಯೋ-ದಯ ದೇವಾಲಯದ ಮಧ್ಯದಲಿ ಆಹಾತ್ವರಿತದಿ ನುತಿಸಿರೊಗುರುನಾರಸಿಂಹ ಶ್ರೀ-ಕರವೆಂಕಟೇಶನ ಚರಣಕಮಲಗಳ15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಾಘವೇಂದ್ರಾ ನೀನೆ ಪಾಲಿಸೊಶ್ರಿತಜನ- ಪಾಲಾxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಯೋಗಿಜನಾ - ಲೋಲನೆ ಪಜಾಗುಮಾಡದೆನಿನ್ನಾನು- ರಾಗದಿ ಮನಸಾರಬಾಗಿ ನಮಿಸಿ ಬೇಡಿಕೊಂಬೆ -ಯೋಗಿಕುಲ ಶಿರೋಮಣಿಯೇ ಅ.ಪಅನುಭವ ಮಾಡಿದೆನು |ಘನಮಹಿಮನೆ ನಿನ್ನಘನಸುಖವಿತ್ತ್ತು ಎನ್ನ| ಮನ ಪೂರ್ತಿ ಭಜಿಸುವಂತೆಅನುಪಮ ಙ್ಞÕನ - ಭಕ್ತಿ | ಜನುಮ ಜನುಮದಿ ಇತ್ತು 1ಹೇಸಿ - ಸಂಸಾರದಲ್ಲಿ | ಮೋಸಗೊಂಡು ಅದರ ಸುಖಲೇಶಗಾಣದೆ ಬಹು | ಕ್ಲೇಶಬಡುವೆನಯ್ಯಾ ನಿತ್ಯಾಈಶ ! ಸಂಸಾರ ಮಹ | ಪಾಶಬಿಡಿಸಿ ತವೋ -ಪಾಸನದಲ್ಲಿ ಮನ | ಲೇಸು ಇತ್ತು ನಿತ್ಯಾದಲ್ಲಿ 2ದೃಷ್ಟಿ ಇತ್ತು ಗುರುಜಗನ್ನಾಥ | ವಿಠಲನ್ನ ತೊರಿಸಯ್ಯಾ 3
--------------
ಗುರುಜಗನ್ನಾಥದಾಸರು
ರಾಯರ ನೋಡಿರೈ ಶುಭತಮ ಕಾಯರ ಪಾಡಿರೈ ಪತೋಯಜ-ಪತಿನಾರಾಯಣ ಪದಯುಗxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಭೃಂಗಾ - ಭüಕ್ತಕೃಪಾಂಗಾ ಅ.ಪಮಂದಸ್ಮಿತಯುತ ದ್ವಂದ್ವ ಓಷ್ಠ,ಶ್ರುತಿಕಂಧರಯುತ ಪೂರಂದರ - ಕರಿಕರಸುಂದರ ಹೃದಯದಿ ನಾಮಾ ಹಚ್ಚಿಹÀ ಪ್ರೇಮಾ 1ಸ್ವಸ್ತಿಕಾಸನ- ಸ್ಥಿತ-ಮೋದಕೃತವಿನೋದವಸ್ತ್ರದಿ ಶೋಭಿಪಗಾತ್ರಶುಭಚರಿತ್ರಸ್ವಸ್ಥ ಮನದಿ ಪ್ರಶಸ್ತ ಹರಿಯಪಾದಸ್ವಿಸ್ತಿಕ-ಯುಗಳ- ಧ್ಯಾನ ಮಾಡುವಙ್ಞÕನಸ್ವಸ್ತಿದನೆನಿಸಿದ ಭೂಪಾ ಭವ್ಯ ಪ್ರತಾಪ 2ಕುಟಲವಿಮತರ ಪಟಲಾಂಧಕಾರಕೆಪಟುತರದಿನಮಣಿ ರೂಪಾ ನಿಜ ಜನ-ಸುರಪಾಸ್ಪುಟಿತ-ಹಾಟಕ- ಚಂದ್ರಾ ಸದ್ಗುಣಸಾಂದ್ರಚಟುಲಜನರ ಪರಿಪಾಲಾ ಕರುಣವಿಶಾಲಾಕಿಟಿರದ-ಭವ- ನದಿ - ತಟ-ಕೃತ - ಮಂದಿರಧಿಟ ಗುರುಜಗನ್ನಾಥಾ ವಿಠಲ ದೂತಾ 3
--------------
ಗುರುಜಗನ್ನಾಥದಾಸರು
ಶಂಕರ ಗುರುವರ ಮಹದೇವ ಭವ-ಸಂಕಟ ಪರಿಹರಿಸಯ್ಯ ಶಿವ ಪ.ಸಂಕಲ್ಪ ವಿಕಲ್ಪಮನೋನಿಯಾಮಕಕಿಂಕರಜನಸಂಜೀವ ಅ.ಪ.ಭಾಗವತರರಸ ಭಾಗೀರಥೀಧರಬಾಗುವೆ ಶಿರ ಶರಣಾಗುವೆ ಹರಶ್ರೀ ಗೌರೀವರ ಯೋಗಿಜನೋದ್ಧರಸಾಗರಗುಣಗಂಭೀರ 1ರಾಯ ಲಕ್ಷ್ಮೀನಾರಾಯಣ ಭಕ್ತಿಪ-ರಾಯಣ ತ್ರಿನಯನ ಪುರಹನಕಾಯಜಮಥನ ಮುನೀಂದ್ರ ಸಿದ್ಧಜನ-ಗೇಯಸ್ವರೂಪೇಶಾನ 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ವರದೇಂದ್ರರು93ರಥವಾನೇರಿದಾ ಯತಿಕುಲನಾಥಾ ಸದ್ಗುಣ ವಿಖ್ಯಾತಾ ಪವಿತತಸುಮಹಿಮಾ-ನತ- ಜನ-ತತಿ- ಕೃತxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಸ್ತುತಿಗೆ ಒಲಿವ - ಯತಿ ವರದೇಂದ್ರಾ ಅ.ಪಪತಿತಾ ಪಾವನ ತಾನೆನಿಸುತ ಮೆರವಾ -ಅತಿಹಿತದಲಿ ಭಕುತರ ಕರಪಿಡಿವಾ -ನುತಿಸುವ ಜನ-ತತಿ- ಗತಿಹಿತದಲಿ ಸೂ-ಪಥವ ತೋರಿಸಿ ಸ -ದ್ಗತಿಯ ನೀಡುವೆನೆಂದು 1ದಶಮತಿಸಮಯಾಖ್ಯಾಭ್ಧಿಶಶಾಂಕಾ- ತಾನಿಹನಕಳಂಕವಸುಧೀಂದ್ರರಕರ- ಬಿಸಜೋದ್ಭವ ತಾವಸುಧಿಯನಾಳುವ - ಕುಸುಮದಳಾಂಬಕ 2ಧಾತಾಂಶರಿಂದಲಿ ತಾನುದ್ಭವಿಸೀ - ಸದ್ಗುರುವರನೆನಿಸಿಧೂತ - ಪಾಪಾತ್ಮಕನು ತಾನಾಗೀ - ಶ್ರೀಹರಿಗೆ ಬೇಕಾಗಿಪ್ರೀತಿಲಿ ಭಜಿಸುತ - ದೂತರ ಪೊರೆವಾ 3
--------------
ಗುರುಜಗನ್ನಾಥದಾಸರು
ಶ್ರೀಮದನಂತಸ್ವಾಮಿ ರಕ್ಷಿಸು ಪುಣ್ಯ-ನಾಮ ಸರ್ವಾಂತರ್ಯಾಮಿ ಪ.ಸೋಮಾರ್ಕಕಾಮಸೂತ್ರಾಮ ಪ್ರಮುಖಸುರ-ಸ್ತೋಮವಂದಿತ ಭೀಮಬಲ ಗುಣ-ಧಾಮವರನಿಸ್ಸೀಮ ಮಹಿಮನೆಅ.ಪ.ಅಂತರ್ಬಹಿವ್ರ್ಯಾಪ್ತನೆ ಸತತ ರಮಾ-ಕಾಂತಗೆ ಪರಮಾಪ್ತನೆಚಿಂತಿಪ ಭಕ್ತರ ಚಿಂತಾಮಣಿ ನಿ-ಶ್ಚಿಂತನೊಂದೆ ಶಿರದಿ ಸಾಸವೆ-ಯಂತೆ ಲೋಕವನಾಂತುಕೊಂಡಿಹೆ 1ರಾಮನ ಸೇವೆಗಾಗಿ ಲಕ್ಷ್ಮಣನೆಂಬನಾಮವ ತಾಳ್ದಯೋಗಿಯಾಮಿನೀಚರರ ನಿರ್ನಾಮಗೈದ ವೀರಲ-ಲಾಮ ನಿರ್ಜಿತಕಾಮ ಸಜ್ಜನ-ಪ್ರೇಮಭೌಮನಿರಾಮಯನೆ ಜಯ2ಸಂಕರ್ಷಣ ಸುಗುಣಾ-ಭರಣ ನಿ-ಶ್ಯಂಕ ವೈರಿಭೀಷಣಶಂಕರಾದಿಸುರಸಂಕುಲನುತಪಾದ-ಪಂಕಜನೆ ತಾಟಂಕಗೋಪಾ-ಲಂಕೃತಾಂಗ ಶುಭಂಕರನೆ ಜಯ 3ಸಾರತತ್ತ್ವಬೋಧನೆ ಶರಣುಜನವಾರಿಧಿಚಂದ್ರಮನೆಘೋರಭವಾರ್ಣವತಾರಕನಮಲ ಪಾ-ದಾರವಿಂದದ ಸೌಂದರ್ಯ ನಿಜಭೂರಿನೇತ್ರಗಳಿಂದ ಕಾಣುವೆ4ಮಂಜುಳ ನಗರೇಶನೆ ಭಕ್ತಭಯ-ಭಂಜನಸುವಿಲಾಸನೆಕಂಜಾಕ್ಷಸಖ ಲಕ್ಷ್ಮೀನಾರಾಯಣನ ತೇಜಃ-ಪುಂಜ ಭಗವದ್ಭಕ್ತಜನಮನೋ-ರಂಜನಾತ್ಮ ನಿರಂಜನನೆ ಜಯ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ