ಒಟ್ಟು 347 ಕಡೆಗಳಲ್ಲಿ , 41 ದಾಸರು , 339 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗÀಣೆಯ ನೀ ಮಾಡಯ್ಯಾ ಯದುಕುಲ ವಾರಿಧಿ ಚಂದ್ರಮನೆ ಪ ಸಾರಸನಯನ ಅಪಾರಮಹಿಮ ಕರು ಣಾರಸ ಪರಿಪೂರ್ಣಸಾರ ಭೋಕ್ತನೆ ಸ್ವಾಮಿ ಅ.ಪ. ಬಡವನು ನಾ ನಿನಗೆ ಕೊಡಲರಿಯೆನೊ ಸ್ವಾಮಿ ಪೊಡವಿಗೊಡೆಯ ನಿನ್ನ ಅಡಿಭಕ್ತ ನಾನಯ್ಯ ಕಡಲಶಯನ ಒಂದು ಕುಡಿತೆ ಪಾಲನು ನಿನಗೆ ಕೊಡುವೆನು ನಿತ್ಯತೃಪ್ತ ಒಡನೆ ಸ್ವೀಕರಿಸಯ್ಯಾ ಮೃಡವಂದಿತ ಪದಜಡಜಯುಗಳದಲಿ ದೃಢಭಕ್ತಿಯ ನೀ ಕೊಡು ಕೈ ಬಿಡದಲೆ ನುಡಿಗೆ ನುಡಿಗೆ ನಿನ್ನ ನಾಮವ ನುಡಿಸಯ್ಯ ಬಡವರ ಬಂಧುವೆ ಕರಿಗಿರೀಶನೆ 1
--------------
ವರಾವಾಣಿರಾಮರಾಯದಾಸರು
ಆವಿರ್ಭವಿಸಿದಳಾಗ ಜಗನ್ಮಾತೆ | ಅಖಿಲಾಂಡ ವಿಖ್ಯಾತೆ ಪ ದೇವದಾನವರು ತಾವೊಡಗೂಡುತ ಲಾವುದಧಿಯಮದಿಸÀುತ್ತಿರಲದರೊಳು ಅ.ಪ ಪೊಳೆವ ಬೆರಳುಂಗುರ ಶೋಭಿತಪಾದ | ಧರಿಸಿದ ಸುರುಚಿರ ರುಳಿಯು ಅಂದಿಗೆ ಗೆಜ್ಜೆಯ ನಾದ | ಕಟಿಯಲಿ ನೋಡೆ ಥಳಥಳವಾದ ಶೃಂಗಾರವಾದ | ಒಡ್ಯಾಣದ ಮೋದ ದಲಿ ತಾನಿಟ್ಟಿಹ ಚಲುವಿಕೆಯಿಂದಲಿ ಸಲೆ ಬೆಳಗುತಲಿ ನಳಿನಲೋಚನೊಳು 1 ಕರಿರಾಜನ ಕರದಂತೆ ಒಪ್ಪುವ ಕರವು | ಬೆರಳಲಿ ನೋಡೆ ಪರಿಶೋಭಿಸುತಿಹ ಮಾಣಿಕ್ಯದುಂಗುರವು | ರಾರಾಜಿಸುವ ಹರಡಿ ಕಂಕಣಗಳು ಬಲು ಸುರುಚಿರವು | ಪರಿಕಿಸೆ ಸುಂದರವು ಪರಿ ಸರಗಳು ಕೊರಳೊಳು ಶೋಭಿಸೆ ತರಣಿ ಕಾಂತಿಯನು ತಿರಸ್ಕರಿಸುತ್ತಲಿ 2 ಮಂದಸ್ಮಿತ ಪರಿಶೋಭಿತ ಶುಭವದನ | ಆನಂದಸದನ ಕುಂದಕುಟ್ಮಲದಂತಿಹ ಸಮರದನ | ಸಂತಾಪಾರ್ದನ ಬಂಧುರ ಚಂಪಕ ನಾಸಿಕದ ಹದನ | ಏಂ ಪೇಳಲಿ ಅದನ ಮಂದರಾದ್ರಿಧರ ಕರಿಗಿರೀಶನ ಎಂದೆಂದಗಲದ ಸುಂದರಾಬ್ಜಮುಖಿ3
--------------
ವರಾವಾಣಿರಾಮರಾಯದಾಸರು
ಆವೂರು ಈ ಊರು ಯಾವೂರು ಆದರೇನು ಪ ಕಾವೋರು ಶ್ರೀಹರಿ ಲೇಸಾಗಿ ಇರಲೂ ಅ.ಪ ನೀರಜನಾಭನ ಕಾಳಿಂಗ ಮಥನನ ಪಾರಿಜಾತವ ತಂದ ರುಕ್ಮಿಣಿ ಪತಿಯ ಸಾರುತ್ತ ಪಾಡುತ್ತ ಪೊಗಳುತ್ತಬೇಡುತ್ತ ಚರಣಾವ ನೆರೆನಂಬಿ ತಿರುಗುವ ದಾಸರಿಗೆ1 ಆರು ಆಳಿದರೇನು ಆರು ಅಳಿದರೇನು ಮಾರುವ ಧಾರಣಿ ಏರಿದರೇನು ಇಳಿದರೇನು ಊರೆಲ್ಲ ಎದುರಾದರೇನು ಹಿತವಾದರೇನು ಕರಿರಾಜವರದನ ಕೊನೇರಿ ವಾಸನ ಕರುಣವ ಪಡೆದವಗೆ 2 ಕಾಸು ಎಂದರೆ ಪ್ರಾಣ ಸಾಮಾನ್ಯಜನರಿಗೆ ಈ ಶರೀರವ ಕಷ್ಟದಿ ಬಿಡುವಾಗ ಬಾಹುದೈ ಪಾದ ಸೋಮಶೇಖರ ವಂದ್ಯ ಶೇಷಗಿರೀಶನ ದಾಸಾನು ಎಂತೆಂದು ಕುಣಿವವಗೆ 3 ಮೂರುಲೋಕದ ಅರಸು ಸಾರಂಗ ಪಾಣಿಯು ನೀರಜಭವಾಂಡ ಉದಯಕೆ ಕಾರಣ ಅಷ್ಟಕರ್ತ ಸಿರಿಪದ್ಮಜಾಸನ ವಂದ್ಯ ದೇವಾದಿದೇವನ ಮೀರಿ ನಡೆವುದುಂಟೆ ಈ ಚರಾಚರ ಜಗದೊಳು ಮನವೇ4 ಊರೆಲ್ಲನೆಂಟರು ಉಣಬಡಿಸುವರಿಲ್ಲ ಸಿರಿಯಿದ್ದಕಾಲಕ್ಕೆ ಎಲ್ಲರು ನೆಂಟರಯ್ಯ ಸಿರಿತನ ತಾ ತಪ್ಪಿ ಬಡತನ ಬಂದರೆ ನಡಿನಡಿಯೆಂಬರು 5 ಹರಿ ಊರು ನಮ್ಮೂರು ಹರಿವೋರು ನಮ್ಮೋರು ಹರಿನಾಮ ಬಂಧುವು ಹರಿನಾಮ ಬಳಗ ಹರಿಹರಿ ಎಂದರೆ ದುರಿತವು ಪರಿಹಾರ ಹರಿಗುರು ಚರಣವೆ ಪರಗತಿ ಸಾಧನ ಮನವೇ 6 ಕೋರಿ ಕೋರಿದ ವರವ ನೀಡುವ ಪ್ರಭುವು ಸಿರಿಜಯಮುನಿ ಹೃಸ್ಥವಾಯುಗ “ ಶ್ರೀ ಕೃಷ್ಣವಿಠಲಾ” ಸಾರಿದ ಜನರನು ಪೊರೆಯುವ ಕರುಣದಿ ನೆರೆನಂಬುಮನವೆ ಭಯಬೇಡ ಮನವೇ7
--------------
ಕೃಷ್ಣವಿಠಲದಾಸರು
ಇಂದಿರೇಶ ದಯದಿಂದಲಿ ತ್ವರಿತದಿ ಬಂದು ಒದಗಿ ಸಲಹೊ ಸುಧೆಯಾನಂದ ಉಣಿಸಿದ ಪ. ಇನ್ನು ನಿರೀಕ್ಷಿಸಲೆನಗೆ ಸಾಧ್ಯವಿಲ್ಲ ಅನ್ಯ ಸಾಧನವಿಲ್ಲ ಮುನ್ನಿನ ಮಾರ್ಗದ ರೀತಿಯ ನೋಡಲು ಮನ್ನಿಪ ಜನರಿಲ್ಲ ಧನ್ಯ ವಿಬುಧ ಗಣ ಮಾನ್ಯ ಮುಕುಂದನೆ ಮಾಧವ 1 ದಾರು ನೀನಲ್ಲದೆ ಮಾರಮಣನೆ ನಿನ್ನ ಸೇರಿದ ಬಳಿಕೀ ಧಾರುಣಿ ಒಳಗೆ ನಿವಾರಣೆಯದೇನೊ ಮೂರು ದೊರೆಗಳಲಿ ವಾರಿಜನಾಭ ನೀ ಪ್ರೇರಕನಾಗಿರೆ ಘೋರವಾವರಿಸುವುದೆ 2 ತಪ್ಪುಗಳೆಲ್ಲವ ಒಪ್ಪಿಕೊಳ್ಳೊಯೆನ್ನಪ್ಪ ನೀ ಕರುಣದಲಿ ಒಪ್ಪಿಸಿ ಪಡದನು ತಪ್ಪದೆ ಮನದೊಳಗಿಪ್ಪ ವ್ಯಸನ ಬಿಡಿಸೊ ಸರ್ಪ ಗಿರೀಂದ್ರನೊಳೊಪ್ಪುವ ಸತ್ಯ ಸಂ- ಕಲ್ಪ ಭಜಕ ನಿಜ ಕಲ್ಪತರುವೆನಿಪ 3
--------------
ತುಪಾಕಿ ವೆಂಕಟರಮಣಾಚಾರ್ಯ
ಇಂದಿರೇಶನೆ ಸುಂದರಾಂಗನೆ ಮಂದಹಾಸದಿಂದ ಬೇಗ ಬಂದು ರಕ್ಷಿಸೈ 1 ಮರೆಯಬೇಡವೊ ಸಿರಿಯ ಅರಸನೆ ಪೊರೆಯದಂತೆ ಮರೆಯಬಹುದೆ ಸಿರಿಯನಾಥನೆ 2 ರಂಗ ರಮಣನೆ ಭುಜಂಗಶಯನನೆ ಮಂಗಳಾಂಗ ನಿನ್ನ ಕರುಣಾಪಾಂಗ ಬೇಡುವೆ 3 ಮಾರಜನಕನೆ ಉದಾರಚರಿತನೆ ಭಾರವೇನೊ ದೀನಜನರುದ್ಧಾರ ಮಾಡುವುದು 4 ನಾಮಗಿರೀಶನೆ ನಿಸ್ಸೀಮ ಮಹಿಮನೆ ಪ್ರೇಮವಿಟ್ಟು ಪಾಲಿಸೆನ್ನ ಸ್ವಾಮಿ ನರಹರೆ 5
--------------
ವಿದ್ಯಾರತ್ನಾಕರತೀರ್ಥರು
ಇವನೆ ಪ್ರಹ್ಲಾದನಿಂದಲಿ ಉಪಾಸ್ಯ ಪವಮಾನ ಪಿತ ಭಕ್ತವರದ ಲಕ್ಷ್ಮೀಶ ಪ. ವಲಯಕಾರದಿ ಶೇಷ ಛತ್ತರಿಯಾಗಿ ಹಲ ಮುಸಲ ಧರಿಸಿ ಎಡದಲಿ ವಾರುಣೀ ಬಲದಲ್ಲಿ ಶಂಬುಕ ವರ್ಣನೆಂಬ ಪುತ್ರನ ಸಹಿತ ನಲಿದು ಸೇರಿಸೆ ಇಂಥ ಆಸನದಿ ಕುಳಿತಾ 1 ಯೋಗಾಸನವನ್ಹಾಕಿ ಎಡತೊಡೆಯ ಮೇಲ್ ಸಿರಿಯು ಆಗಮನುತ ಬಲದ ತೊಡೆಯಲ್ಲಿ ವಾಯು ಭೋಗ ರೂಪನು ಸರ್ವ ಆಭರಣ ಶೃಂಗಾರ ಸಾಗರಾತ್ಮಜೆ ಪತಿಯು ಧರಿಸಿ ಮೆರೆವಂಥಾ2 ಶಿರದಿ ನವರತ್ನ ಮಕುಟವು ಫಣೆಯು ತಿಲಕವೂ ಕರ್ಣ ಕುಂಡಲವೂ ನಾಸಿಕ ಗಲ್ಲ ತೆರದ ಬಾಯ್‍ದಾಡೆಗಳು ದುರುಳರಿಗೆ ಘೋರ ವರಭಕ್ತರಿಗೆ ಅಭಯ 3 ಕಂಠ ಕೌಸ್ತುಭಮಣಿಯು ಶ್ರೀವತ್ಸ ತುಳಸಿ ಸರ ವೈಜಯಂತಿ ಹಾರಾ ಕರ ಶಂಖ ಚಕ್ರವು ಪದ್ಮ ಗದೆ ಅಭಯ ವಂಟಿ ಕರಶಿರಿ ಭುಜದಿ ದ್ವಯ ಯೋಗ ಚಿಹ್ನೆ 4 ಉರ ಉದರ ಶೃಂಗಾರ ಅರವಿಂದ ಪೊಕ್ಕಳಲಿ ಬ್ರಹ್ಮ ಮೆರೆಯೇ ಮಿರುಗುವೋ ಮಕುಟ ಉಟ್ಟಿರುವ ನಡು ಕಿರುಗೆಜ್ಜೆ ಕರಿಸೊಂಡಲಿನ ತೊಡೆಯು ಸುರವರದ ಚರಣಾ5 ಚರಣದಾಭರಣ ಸಾಲ್ಯೆರಳನಖ ಕಾಂತಿಗಳು ಪಾದ ಪದುಮಾ ಮೃಗ ಮುಖವು ನರಮೃಗಾಕೃತಿರೂಪ ತರಳ ಪ್ರಹ್ಲಾದನಲಿ ಕರುಣಾರ್ದ ದೃಷ್ಟಿ 6 ಎಡತೊಡೆಯಲಿ ಸಿರಿಯು ಬಲಕರದಿ ಪದುಮವ ಪಿಡಿದು ಎಡತೊಡೆಯ ಮೇಲೆ ಮದನನ ಕುಳ್ಳಿರಿಸುತಾ ಮದನ ಇರಿಸಿ ಹೂ ಬಾಣವನು ಪಿಡಿದು ರತಿ ಪದುಮ ಕರದಿಂದ ಶೋಭಿಸಲೂ 7 ಹರಿಗೆ ಬಲತೊಡೆಯಲಿದ್ದಂಥ ವಾಯುವು ತನ್ನ ಅರಸಿ ಭಾರತಿಯ ಎಡತೊಡೆಯಲಿಟ್ಟೂ ತರಳ ವಿಷ್ವಕ್ಸೇನನನು ಬಲದ ತೊಡೆಯಲ್ಲಿ ಇರಿಸಿಕೊಂಡತುಲ ಸಂತಸದಿಂದ ಮೆರೆಯೇ 8 ಚತುರ ಹಸ್ತನು ವಾಯು ಎಡಗೈಲಿ ಪಿಡಿದು ಗದೆ ಹಿತದಿ ಬಲಗೈಯ್ಯ ಭಕ್ತರಿಗಭಯ ತೋರ್ವ ಅತಿಭಕ್ತಿಯಿಂದುಭಯಕರ ಅಂಜಲಿಯ ಮಾಡಿ ಪತಿ ಭಿಕ್ಷೆ ಬೇಡುವಾ9 ನಾಭಿಯಲಿ ಬ್ರಹ್ಮ ಉದ್ಭವಿಸಿ ಹಸ್ತದಿ ವೇದ ಶೋಭಿಸಲು ಎಡತೊಡೆಯ ಮೇಲೆ ವಾಣೀ ಆಭರಣ ಶೃಂಗರದಿ ವೀಣೆ ಪುಸ್ತಕ ಧರಿಸಿ ವೈಭವದಿ ದೇವ ಮುನಿ ಎಡೆ ತೊಡೆಯೊಳಿರಲೂ10 ಬ್ರಹ್ಮ ಬಲತೊಡೆಯಲ್ಲಿ ಪಂಚಮುಖ ರುದ್ರನ್ನ ಸುಮ್ಮಾನದಿಂದ ಕುಳ್ಳಿರಿಸಿಕೊಂಡಿರಲೂ ಬ್ರಹ್ಮಸುತ ಕರದಿ ಆಯುಧ ಗೌರಿ ಎಡದಲ್ಲಿ ಷಣ್ಮುಖನ ಬಲ ತೊಡೆಯಲ್ಲಿಟ್ಟು ಮೆರೆಯೇ 11 ಗೌರಿಗಣಪನ ತನ್ನ ತೊಡೆಯೊಳಿಟ್ಟಿರಲು ಈ ರೀತಿಯಿಂದ ಪರಿವಾರ ಸಹಿತಾ ಶೌರಿ ಮೆರೆಯುವ ದಿವ್ಯ ಅದ್ಭುತಾಕೃತಿ ನೃಹರಿ ಪತಿ ಮನದಿ ತೊರೆ ಭಕ್ತರಿಗೆ 12 ಕಾಲನಾಮಕ ಗರುಡ ಬಾಲೆ ಸೌಪರ್ಣಿ ಲೀಲೆಯಿಂದಲಿ ಕೂಡಿ ಸಮ್ಮುಖದಿ ನಿಂದೂ ಓಲಗವ ಕೊಡುತ ಹರಿಗನುಕೂಲನಾಗಿರುವ ಲೀಲ ಮಾನುಷ ಇಂಥ ವೈಭವದಿ ಮೆರೆವಾ13 ಇಂತೆಸೆವ ಹರಿ ಎದುರು ನಿಂತು ಪ್ರಹ್ಲಾದ ಗುಣ ವಂತೆ ಸಾಧ್ವೀ ಸಾಧುಮತಿ ಸತಿಯ ಸಹಿತಾ ಅಂತರಂಗದಿ ಚಿಂತಿಸುತ ಅಂಜಲಿಯ ಕರದಿ ಶಾಂತಮನದಲಿ ಸುಖಿಸಿ ಆನಂದಿಸುವನೂ14 ವರಭಕ್ತ ಪ್ರಹ್ಲಾದ ವರದನ್ನ ಈ ರೂಪ ನರರು ಚಿಂತಿಸಲಳವೆ ಚರಿಪ ಭಕ್ತಿಯಲೀ ಪರಮ ಉತ್ಸಾರಕರನೊಂದೊಂದು ಅಂಶದಲಿ ವರ ಭಕ್ತರಲಿ ನೆಲಸೆ ಚಿಂತನೆಗೆ ನಿಲುವಾ 15 ಪರಿವಾರ ಆಭರಣ ಆಯುಧಗಳಿಂ ಮೆರೆವ ನರಹರಿಯ ಈ ರೂಪ ನಿರುತ ಸ್ಮರಿಸೇ ಗುರುವರದ ಕರಿಗಿರೀ ಯೋಗ ಭೋಗಾ ನೃಹರಿ ಕರುಣಿಸುವ ಮುಕ್ತಿ ಗೋಪಾಲಕೃಷ್ಣವಿಠಲಾ16
--------------
ಅಂಬಾಬಾಯಿ
ಈಶಾ ಕೈಲಾಸವಾಸಾ | ಕಾಶೀನಗರಾಧೀಶಾ | ಶೇಷಭೂಷಣ | ಗಿರೀಶಾ | ವಿಶ್ವೇಶ ಚಿತ್ತವಾಸಾ ಪ ಶಿವಸಿದ್ಧ ಸಾಧ್ಯ ಸೇವ್ಯಾ | ಭವವನಾಶವ ದಿವ್ಯ | ಕವಿ ಪ್ರಿಯ ಜ್ಞಾನ ದ್ರವ್ಯಾ ಹಾ || ಶಿವ ಓಂ ನಮಃ ಶಿವ | ಸÀವಚರಣ ನೋಡುವ | ಪವಿತ್ರ ಚಿತ್ತವ ಕೊಡು | ಧವಳ ಗಂಗಾಧರನೇ 1 ವ್ರಾತ | ಪತಿತ ಪಾವನ ತಾತ | ಕೃತುವೈ ಪದ್ಮಜಾತ ಹಾ || ಕ್ಷಿತಿಯೊಳು ನೀಲಲೋಹಿತ | ನೀನೇ ಗುರುವೆಂದು | ತುತಿಪ ಗತಿಗೆ ರಘು | ಪತಿನಾಮ ಎನಗೀಯೋ 2 ತ್ರಯನೇತ್ರ ಚಿತ್ರಗಾತ್ರ | ನಯ ನಮಿಪರ ಮಿತ್ರ ಜಯ | ಜಯಾಮರ ಸ್ತೋತ್ರ | ದಯಮಾಡೋ ಪುಣ್ಯ ಪಾತ್ರಾ ಹಾ || ಸಿರಿ | ವಿಜಯವಿಠ್ಠಲನ | ಭಕುತಿಯ ಕೊಡು ಅತಿ | ಶಯದಿ ಪಿನಾಕೀಶಾ 3
--------------
ವಿಜಯದಾಸ
ಉಗಾಭೋಗ ಪರಮಪುರುಷ ಕೇಳು ಒರೆದ ಮಾತಿಗೆ ನಾನು ನೆರೆ ತಪ್ಪುವನಲ್ಲ ವಂಚನೆ ಲೇಶವಿಲ್ಲ ಉರುದೈವ ವ್ಯಾಪಾರಕ್ಕೇನ ಮಾಡಲಿ ನಾನು ಸರ್ವವು ನಿನಗೆಂದು ಒಪ್ಪಿಸಿಹೆನಲ್ಲ ನರಕವಾಸಕೆ ನಾನು ಅಂಜÀುವನಲ್ಲವು ಮರಣಪಾಶಕೆಯಿನ್ನು ಅಂಜುವ ನಾನಲ್ಲ ಸರ್ವಸ್ವ ಹೋದರೂ ಚಿಂತೆ ಎನಗಿಲ್ಲ ಥರಥರ ಅಂಜುವೆ ನೊಂದೆ ವಿಷಯಕ್ಕೆ ಅರಿಯಲು ಅನೃತಕ್ಕೆ ಅಂಜುವೆ ನಾನಿನ್ನು ಸಿರಿ ಪರಾಕ್ರಮ ಶೌರ್ಯ ಇವುಗಳಿಂದಲಿ ಕೂಡಿ ಗರುವಪಡುತ ನಾನು ಮದಾಂಧನಾಗಿದ್ದೆ ಉರು ಶಿಕ್ಷೆ ಎನಗಿತ್ತು ಉದ್ಧಾರ ಮಾಡಿದೆ ಕುರುಡಗೆ ನೇತ್ರವು ದೊರೆತಂತೆ ಆಯಿತು ಪರಮ ಭಕ್ತನು ಆತನೆ ಪ್ರಹ್ಲಾದನು ಪರಿ ಪೀಡೆಗೆ ಗುರಿಯಾಗಿದ್ದರು ನಿನ್ನ ಸ್ಮರಿಸಿ ತಾನುತ್ತಮ ಗತಿಯನ್ನು ಪಡೆದನು ಸಿರಿಮದ ಕಳೆದೆನ್ನುನುದ್ಧಾರ ಮಾಡಿದೆ ಪರಮಪುರುಷ ನಿನಗೆ ಪ್ರಣಾಮ ಮಾಡುವೆ ಕರಿಗಿರೀಶನೆ ಕರುಣಿ ಕಾಯಬೇಕೆನ್ನನು
--------------
ವರಾವಾಣಿರಾಮರಾಯದಾಸರು
ಉದದಿ ಮೇಖಳೆಯ ಭಾರವನಿಳುಹುವನೆಂದು ವಿಧಿಪೂರ್ವಸುರರು ಬಂದು ಕ್ಷೀರಾಬ್ಧಿಯ ಸಿಂಧು ಪ. ಶೌರಿ ಗೃಹದ ಗೋಪಿ ಜನಕೆ ನಾನಾ ವಿಧದ ಲೀಲಿಯ ತೋರಿ ದೈತ್ಯರ ಸದೆದು ಗೋವುಗಳ ಕಾಯ್ದ ಕೃಷ್ಣಗೆ ಪದುಮದಾರತಿಯ ಬೆಳಗಿರೆ ಶೋಭಾನೆ 1 ಮೆಲ್ಲನೆ ಮಧುರೆಗೆ ಹೋಗಿ ಮಾವನ ದೊಡ್ಡ ಬಿಲ್ಲ ಮಧ್ಯದಿ ನಿಂದು ರಂಗದಿ ಹಸ್ತ ಮಲ್ಲಾದಿಗಳ ತರಿದು ಕೈದೋರಿ ಮೆರೆದು ಖುಲ್ಲನನು ಮಡುಹಿ ಬಂಧುಗ- ಳೆಲ್ಲರನು ಸಂರಕ್ಷಿಸಿದ ಸಿರಿ ನಲ್ಲ ಗೋಪೀ ವಲ್ಲಭನ ಪದ ಪಲ್ಲವಗಳನು ಪಾಡಿ ಪೊಗಳುತ ಮಲ್ಲಿಗೆಯಾರತಿಯ ಬೆಳಗಿರಿ ಶೋಭಾನೆ 2 ಮಂದಿಮಾಗದ ಮೊದಲಾದ ರಾಯರ ಮದ ಕುಂದಿಸಿ ರಥದೊಳಂದು ಭೈಷ್ಮಿಯ ಕರ ತಂದು ದ್ವಾರಕೆಗೆ ಬಂದು ಭಾಮಾದಿ ಮಹಿಷೀ ವೃಂದ ಸಂಗ್ರಹಿಸಿದ ಪರಾಪರ ವಂದ್ಯ ಶೇಷಗಿರೀಂದ್ರನಾಥನ ಚಂದನಾತ್ಮಕ ಮೂರುತಿಯ ಹೃ- ನ್ಮಂದಿರದ ಮಧ್ಯದಲಿ ಮಂಡಿಸಿಕುಂದಣದಾರತಿಯ ಬೆಳಗಿರೆ ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಉದಾರಗುಣ ಶಾರದಾಮನೋಹರ ಸದಾನಂದ ರಾಮಾನುಜಂ ಪ ಮದೀಯ ಗುರುವರ ಸದಾ ಶ್ರಿತಾಕರ ತ್ರಿದಂಡಧರ ರಾಮಾನುಜಂ ಅ.ಪ ವಿಭೂತಿಯುಗ ಸತ್‍ಪ್ರಭಾವಿರಾಜಿತ ಸುಭೂಜವರ ರಾಮಾನುಜಂ ವಿಭುಂ ಭಜೇ ರಾಮಾನುಜಂ 1 ಪಾತಕನಾಶನ ಭೂತವಿಮೋಚನ ಪತಿತಪಾಲ ರಾಮಾನುಜಂ ಭೀತಿವಿದಾರಣ ಭವಭಯಹರಣ ಕರುಣಾಮಯ ರಾಮಾನುಜಂ 2 ಧರಾಂಬುಧರ ರಾಮಾನುಜಂ ಪರಾತ್ಪರ ಮಾಂಗಿರೀಶ ಪದ ಚಂಚರೀಕ ಮುನಿ ರಾಮಾನುಜಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಉಪಕೃತಿ ಎನ್ನದಲ್ಲ ನರಹರಿ ಕೃಪೆ ಕಾರಣವಿದಕೆಲ್ಲ ಪ ಅಪರಾಧಗಳನು ಮನ್ನಿಸಿ ಪೊರೆಯುವ ವಿಪುಲ ಕೃಪಾನಿಧಿ ಹರಿಯಲ್ಲದೆಲೆ ಅÀ.ಪ. ಜೀವ ಪರಾಧೀನ ಸ್ವತಂತ್ರ ರಾ ಜೀವದಳನಯನ ಸರ್ವೋತ್ತಮ ಪ್ರಭು ಕರಿಗಿರೀಶನೆ ಜಗ ಜೀವನ ಪಾವನ ಪ್ರೇರಕನಲ್ಲದೆ 1
--------------
ವರಾವಾಣಿರಾಮರಾಯದಾಸರು
ಎಂತು ಜೀವಿಪೆನಯ್ಯಾ ನಿನ್ನನಗಲಿ ನಾನು ಶಾಂತ ಮೂರುತಿ ಕೃಷ್ಣ ಕೃಷ್ಣಯ್ಯಾ ಪ ದಂತಿವರದ ಭಕ್ತ ಚಿಂತಾಮಣಿಯೆ ಲಕ್ಷ್ಮೀ ಕಾಂತ ಸಕಲ ಜಗದಂತರಾತ್ಮಕ ದೇವ ಅ.ಪ. ಅಂಗಜಪಿತ ನಿನ್ನ ಅನುಪಮ ರೂಪವ ನಿತ್ಯ ನೋಡಿ ನಲಿಯುತ ತುಂಗಮಹಿಮ ನಿನ್ನ ಘನ ಕೃಪೆಯಿಂದ ಅಂತ- ರಂಗದ ಭಕ್ತ ನಾನೆಂದೆನಿಸಿರಲಾಗಿ ಮಂಗಳಾಂಗ ಮನೋಹರ ನಿನ್ನ ಸಂಗ ಬಿಟ್ಟಿರಲಾರೆನೋ ಸ್ವಾಮಿ ರಂಗ ಎನ್ನಂತರಂಗವರಿಯಯಾ ಇಂಗಿತಜ್ಞ ನೀನಲ್ಲವೇ ಕೃಷ್ಣ 1 ಇಂದಿರೇಶನೆ ನಿನ್ನ ಚರಿತೆಯ ಕೇಳಿ ಆ- ನಂದದ ಸವಿ ಕಂಡೆ ಪುಣ್ಯಾತ್ಮರಿಗೆ ಬೇರೆ ಒಂದರಲಭಿರುಚಿ ತೋರ್ಪುದೆ ಗುಣಗಣ ಸಿಂಧು ನಿನ್ನನು ಬಿಟ್ಟೇನೊಂದ ನಾನೊಲ್ಲೆನು ಸಿಂಧು ಮಂದಿರ ಸುಂದರ ನಿನ್ನ ಪೊಂದಿಕೊಂಡಿಹನಲ್ಲವೇ ಕೃಷ್ಣ ತಂದೆ ಕೈ ಬಿಡಬೇಡವೊ ಎಳ- ಗಂದಿಯೆಂಬುದ ನೆನೆದು ಪಾಲಿಸೊ 2 ದೋಷ ರಹಿತ ಯಾದವೇಶ ಭಕ್ತರ ಪೋಷ ಶ್ರೀಶ ಕರಿಗಿರೀಶ ಸಕಲ ಲೋಕೇಶ ಪಾದ ಭೂಸುರ ಪ್ರಿಯ ಎನ್ನ ದೋಷಗಳೆಣಿಸದೆ ನೀ ಸಲಹಲಿ ಬೇಕೊ ವಾಸುದೇವ ಪರಾತ್ಪರ ಕೃಷ್ಣ ಕ್ಲೇಶ ಪರಿಹರನಲ್ಲವೆ ಸ್ವಾಮಿ ದಾಸ ಜನರಭೀಷ್ಟದಾಯಕ ನಾ ಶರಣು ಹೊಕ್ಕಿಹೆನು ರಕ್ಷಿಸು 3
--------------
ವರಾವಾಣಿರಾಮರಾಯದಾಸರು
ಎಂಥಾ ಸ್ಥಿತಿಯೆ ಶ್ರೀರಾಮಗೆ ಪ ಚಿಂತಿತ ಫಲದಗೆ ಚಿಂತಾಪ್ರಾಪ್ತಿಯೆ ಅ.ಪ. ಲೋಕೈಕನಾಥಗೆ ಈ ಕಪಿನಾಥನು ಸು- ಗ್ರೀವನು ನಾಥನೆಂದೆನಿಸುವ ಪರಿಯೆ 1 ಸಕಲ ಲೋಕ ಶರಣ್ಯಗೆ ಕಕುಲತೆಯಿಂದನ್ಯರಲಿ ದೈನ್ಯವೆ 2 ಯಾವನನುಗ್ರಹ ಬೇಡುವರು ಈ ವಿಭುವಿಗೆ ಸುಗ್ರೀವನ ದಯವೆ 3 ಎಲ್ಲರ ದುಃಖವ ಪರಿಹರಿಸುವನಿಗೆ ಇಲ್ಲಿ ಸುಗ್ರೀವನೊಳ್ ದೈನ್ಯದ ಮೊರೆಯೆ 4 ಕರಿಗಿರೀಶನ ಕಾರ್ಯಕೆ ಕಪಿವರ ಪರಿ ಮಾಡಿಸುವುದೆ 5
--------------
ವರಾವಾಣಿರಾಮರಾಯದಾಸರು
ಎಂದೆಂದಿಗೂ ನಾ ಬಿಡೆ ನಿನ್ನ ಚರಣಾ ಬಂದೆನ್ನ ಕಾಯೊ ಶ್ರೀ ವೇಂಕಟರಮಣಾ ಪ ಪಟ್ಟಿ ಪೀತಾಂಬರ ತೊಟ್ಟ ಮುತ್ತಿನ ಹಾರಾ ವೈಜಯಂತಿ ಸುಂದರ ವದನ ಶುಭಾಂಗ ಮನೋಹರಾ ಮಕರ ಕುಂಡಲಧರ ಮೋಹನ ರೂಪಾ1 ನಿತ್ಯ ಕಲ್ಯಾಣನೆ ನಿಗಮ ಗೋಚರನೆ ಅಕಳಂಕ ಚರಿತನೆ ಸಕಲರಪಾಲಿಪ ಅನಂತ ರೂಪಾ ಶ್ರೀ ವೆಂಕಟೇಶಾ2 ಪರಮ ಕಲ್ಯಾಣ ಗುಣಾರ್ಣವನೇ ದುರಿತ ವಿದೂರನೆ ಪರಮದಯಾ ನಿಧೆ ವರಗಿರಿವಾಸಾ 3 ಘಾಸಿ ಗೊಂಡಿಹೆ ಭರದಿ ಕ್ಲೇಶ ಪಾಶಂಗಳ ಪರಿಹರಿಸಯ್ಯಾ ವಾಸುದೇವನೆ ನಿಮ್ಮ ನಾಮ ಸ್ಮರಿಸುವಂತೆ ನಿತ್ಯ ಪಾಲಿಸು ಪ್ರಭುವೆ4 ಸುರಮುನಿ ವಂದ್ಯನೇ ಸುರನರ ಸೇವ್ಯನೇ ಶರಣರ ಪಾಲಿಪ ಸರ್ವೋತ್ತಮನೇ ತಿರುಪತಿವಾಸನೆ ತಿರುಮಲೆ ಶ್ರೀಶನೇ ಶೇಶಗಿರೀಶನೆ ಶ್ರೀ ವೇಂಕಟವಿಠಲನೇ 5
--------------
ರಾಧಾಬಾಯಿ
ಎನ್ನನಾರು ಕರದು ತಂದರೇ ಇಲ್ಲಿಗೆ ಪ ಮುನ್ನಗೈದ ಕರ್ಮವೆಂದು ನನ್ನ ಪುಣ್ಯ ಭಾಗ್ಯವೆಂದು ಭಿನ್ನಮತವ ಪೇಳ್ವದು ನನ್ನ ಮಟ್ಟಿಗೊದಗದು ಅ.ಪ ಯಾರ ಕರೆದು ತಂದರೇನು | ಯಾರು ಹೊತ್ತು ಹೆತ್ತರೇನು ಗಾರು ಹೇಳೆನೆ ಕುಲವದೇನು ಮಾರಜನಕ ಪೊರೆವ ನೀನು 1 ತಂದೆ ನೀನೆ ಕರೆದುತಂದೆ ಎಂದು ನಾನು ಭರದಿಬಂದೆ ಬಂದು ನಿಂದೆ ಏಕೆ ತಂದೆ ಕುಲವನೆಣಿಸಬೇಡ ತಂದೆ 2 ಯಾವದೈವವ ತೋರಿಸುವೆಯೊ ಯಾವ ಜಪವ ಮಾಡಿಸುವೆಯೊ ಯಾವ ಕೃಪೆಯ ಬೀಳಿಸುತಿಹೆಯೊ ದೇವ ಮಾಂಗಿರೀಶ ಕಾಯೊ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್