ಒಟ್ಟು 123 ಕಡೆಗಳಲ್ಲಿ , 37 ದಾಸರು , 116 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋಜೋ ಶಂಕರ ಸುತ ಗುಣಮಾಲಾ | ಜೋಜೋ ಪ ಕುಂದರದನ ಅರವಿಂದಾಕ್ಷ ಜೋಜೋ ಮಂದರಧರ ಸಖ ಸ್ಕಂದನೆ ಜೋಜೋ ವೃಂದಾರಕ ಮುನಿ ವಂದಿತ ಜೋಜೋ 1 ಮೂರ್ತಿ ಕೇಸರಿ ಧರಣಿಸುರಕಲ್ಪ ತರು ಗುಹ ಜೋಜೋ ಜೋಜೋ 2 ವಾಸವನುತ ಸರ್ವ ಪೋಷಕ ಜೋಜೋಸಾಸಿರ ಪೆಸರ ವಲ್ಲೀಶನೆ ಜೋಜೋ | ವಾಸ ಪಾವಂಜೆ ಸರ್ವೇಶನೆ ಜೋಜೋ ದಾಸ ಜನರ ಮನ ತೋಷಕಾ ಜೋಜೋ ಜೋಜೋ 3
--------------
ಬೆಳ್ಳೆ ದಾಸಪ್ಪಯ್ಯ
ಜ್ಯೇಷ್ಠಾಭಿಷೇಕ ಗೀತೆ ನೋಡಿದೆ ಜ್ಯೇಷ್ಠಾಭಿಷೇಕದುತ್ಸವವ ಸೃಷ್ಟಿಯೊಳಾಶ್ಚರ್ಯವಾ ಪ. [ಒಪ್ಪುವ] ಮಿಥುನಮಾಸದ ಶುಕ್ಲಪಕ್ಷ ಚತುರ್ದಶಿಯಲ್ಲಿ ವಿಪ್ರರು ಕೂಡಿ ಸಹ್ಯೋದ್ಭವೆಯನ್ನು ತರುವೆವೆಂದೆನುತಲೆ ವಿಪ್ರರು ಪೋದ ವಿಚಿತ್ರ[ವ] ನೋಡಿದೆ 1 ಅಂದು ಗಜೇಂದ್ರನ ತಂದು ಸಿಂಗಾರ ಮಾಡಿ ಕುಂದಣದ ಛತ್ರಿ ಚಾಮರ ಬೀಸುತ್ತ ವಿಪ್ರರು ಬರುವುದ 2 ವೇದಘೋಷಗಳಿಂದ ವಿಪ್ರರು ಕೊಡಗಳ ವಿ ನೋದದಿಂದಲೆ ಪೊತ್ತು ತಾ[ಳ] ತಮ್ಮಟೆ ಭೇರಿ ನಾನಾ ವಾದ್ಯಂಗಳ ಮುಂದೆ ರಜತದಕೊಡ ಬರುವ ವೈಭೋಗವ 3 ಕರಿ ಕೊಡವನ್ನು ಇಳಿಸಲು ಅಸಮಾನ [2ನಿ2]ರಿಗಳ ಬಿಚ್ಚಿ ಹೊಸಬಟ್ಟೆಗಳ ಹಾಸಿ ಕುಶಲದಿಂದಲೆ ಹೊಲೆದು ಪೊಸದಾಗಿ ಕಟ್ಟುವತಿಶಯ[ವ] 4 ಗರ್ಭಗೃಹವು ಗಾಯಿತ್ರಿ ಮಂಟಪವನ್ನು ಶುಭ್ರವಾಗಿಯೆ ತೊಳೆದು ಘಮಘಮಿಸುವ ದಿವ್ಯ ಪರಿಮಳ ವು ಬರುವಂಥ ಗಂಧÀವ ತಳಿದರು ಅಂದು ಆಲಯಕ್ಕೆಲ್ಲ 5 ಭಕ್ತರಿಗೆ ತೊಟ್ಟಕವಚವ ಕಳೆದು ಅಭಯ ಹಸ್ತ ಪಾದವ ನಿತ್ತು ಕಸ್ತೂರಿ ಕಮ್ಮೆಣ್ಣೆ ಒತ್ತಿ ಸಂಭ್ರಮದಿಂದ ಮಿತ್ರಸಹಿತ ನಿಂದ ಭಕ್ತವತ್ಸಲ ರಂಗ 6 ಛಂದದಿ ಇಕ್ಷುರಸವು ಚೂತ ಕದಲಿ ರಸಂಗಳು ದಧಿ ತಿಂತ್ರಿಣಿ ನಿಂಬೆರಸ ಕ್ಷೀರ ಘೃತಗಳಿಂದ ಆ ನಂದದಿ ಯೆರೆದರು ಇಂದಿರೆರಮಣಗೆ 7 ಕೇಸರಿ ಪುನಗಿನ ತೈಲವನೆ ತೆಗೆದು ವಾಸುಕಿಶಯನಗೆ ಲೇಪವನು ಮಾಡಿ ಸ ಹಸ್ರಕೊಡದ ಅಭಿಷೇಕವ ಮಾಡಿದರು 8 ಪಟ್ಟುಪೀತಾಂಬರವನುಟ್ಟು ಶ್ರೀರಂಗನು ಕಳೆದ ಕವಚ ತೊಟ್ಟು ಹತ್ತುಸಾವಿರಸೇರಿನ ಅಕ್ಕಿ ಅನ್ನವ ನಿಟ್ಟು ವಿಪ್ರರು ಸುರಿದರು ವಿಸ್ತಾರವಾಗಿಯೆ9 ದಧಿ ಕದಳಿ ಫಲದಿಂದ ನೈ [ವೃಂದಕ್ಕೆ] ಕರೆಕರೆದು ಕೊಡುವ ಪರಿಯ ನಾ 10 ರಂಗನಾಯಕಿ ಪಟ್ಟದರಸಿ [ವೆರಸಿ]ನರಹರಿ ಚಕ್ರಮೂರುತಿಗೆ ಆಗ ಕಲ್ಪೋಕ್ತದಿಂದಭಿಷೇಕವ ಮಾಡೆ ಕರ್ಪೂರ ತೈಲವ [ಲೇ ಸಾಗಿ]ಹಚ್ಚಿ ಮಲಗಿದ ವೆಂಕಟರಂಗ[ನ] 11
--------------
ಯದುಗಿರಿಯಮ್ಮ
ತಾಂಬೂಲ ಕೊಡುವೆನೀಗ ಕೈಕೊಳ್ಳೈ ಪ್ರಿಯ ನಾಂ ಬಲು ವಿಲಾಸದಿಂದ ಬೆಳ್ಳಿತಟ್ಟಿಯೊಳ್ ನಿಮಗೆ ಪ ಮೈಸೂರುವೀಳೆಯದೆಲೆ ಬೀರೂರುಅಡಕೆ ವಾಸನಾಯುಕ್ತ ಚನ್ನಪಟ್ಟಣಸುಣ್ಣವು ಸಹಿತ1 ಏಲಾಲವಂಗ ಜಾಯಿಕಾಯಿ ಪತ್ರೆಯ ಒಳ್ಳೆ ಕೇಸರಿ ಬೆರೆದ 2 ಖಂಡಸಕ್ಕರೆ ಕೊಬರಿ ಸೇರಿಸಿರುವೆನೈ ಅ ಖಂಡಾದಿ ದೇವಸೇವ್ಯ ಜಾಜಿಕೇಶವಾ ಸವಿಯ 3
--------------
ಶಾಮಶರ್ಮರು
ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ ಪ ಹೆಚ್ಚಿದ ತಮನೆಂಬ ದನುಜ ವೇದವ ಕದ್ದುಬಚ್ಚಿಟ್ಟು ನೀರೊಳು ಮುಳುಗಿರಲುಮಚ್ಚ ರೂಪದಿಂದ ಪೋಗಿ ಅವನ ಕೊಂದಅಚ್ಯುತರಾಯನೆಂಬ ಮಾಸಾಳಮ್ಮ1 ಕೂರ್ಮ ರೂಪಿನಿಂದೆತ್ತಿದ ಗೋ-ವಿಂದನೆಂಬುವ ಮಾಸಾಳಮ್ಮ2 ವರಾಹ ರೂಪಿ ಮಾಸಾಳಮ್ಮ 3 ಲೇಸು ತಪ್ಪಿದನೆಂದು ಹಿರಣ್ಯಕ ತನಯನಘಾಸಿ ಮಾಡಲು, ಕಂಬ ಒಡೆದುದಿಸಿರೋಷದಿ ದೈತ್ಯನ ಕರುಳ ಕಿತ್ತ ನರಕೇಸರಿ ರೂಪಿನ ಮಾಸಾಳಮ್ಮ 4 ಆ ಮಹಾಸಿರಿಯ ಗರ್ವದಿ ಮುಂದರಿಯದೆಭೂಮಿಯನು ಬಲಿ ತಾನಾಳುತಿರೆನೇಮಿಸಿ ಎರಡೇ ಹೆಜ್ಜೆಯೊಳಳಕೊಂಡವಾಮನ ರೂಪಿನ ಮಾಸಾಳಮ್ಮ 5 ಕಾಮಧೇನುವಿಗಾಗಿ ಕಾರ್ತವೀರ್ಯಾರ್ಜುನಆ ಮಹಾಮುನಿಯ ಪ್ರಾಣಕೆ ಮುನಿಯೆತಾಮಸವಿಲ್ಲದೆ ಕ್ಷತ್ರಿಯರ ಸಂಹರಿಸಿದರಾಮ ಭಾರ್ಗವನೆಂಬ ಮಾಸಾಳಮ್ಮ 6 ಜನಕ ಸುತೆಯನು ಕದ್ದೊಯ್ಯಲು ಲಂಕೆಗೆಗಣಿತಾತೀತ ಶರಧಿಯ ಕಟ್ಟಿಘನ ಕೋಪದಿ ದಶಿಶಿರನ ಕತ್ತರಿಸಿದಇನಕುಲ ರಾಮನೆಂಬ ಮಾಸಾಳಮ್ಮ 7 ದೇವಕಿ ಬಸುರೊಳು ಬಂದು ಗೋಕುಲದಿಆವ ಕಾವ ಗೊಲ್ಲರ ಸಲಹಿಮಾವನ ಕೊಂದು ಮತ್ತೈವರ ಸಲಹಿದದೇವ ಕೃಷ್ಣನೆಂಬ ಮಾಸಾಳಮ್ಮ8 ಪತಿವ್ರತೆಯರ ವ್ರತವಳಿಯಬೇಕೆನುತಲಿಅತಿಶಯದಿ ತ್ರಿಪುರದ ಸ್ತ್ರೀಯರನುತ ಬೌದ್ಧ ರೂಪದಿ ಬಹು ಭಂಗಪಡಿಸಿದರತಿಪತಿಪಿತನೆಂಬ ಮಾಸಾಳಮ್ಮ 9 ಖುಲ್ಲ ಮನುಜರನು ಕೊಲ್ಲಬೇಕೆನುತಲಿಭಲ್ಲೆ ಹಿಡಿದು ತುರಗವನೇರಿಅಲ್ಲಲ್ಲೆ ಸೊಲ್ಲಡಗಿಸಿ ವಲ್ಲಭನೆನಿಸಿದಬಲ್ಲಿದ ಕಲ್ಕಿಯೆಂಬ ಮಾಸಾಳಮ್ಮ 10 ಮಂಗಳ ಮಹಿಮ ಭುಜಂಗ ಶಯನ ಕಾ-ಳಿಂಗ ಮರ್ದನ ದೇವೋತ್ತುಂಗಅಂಗಜಪಿತ ನೆಲೆಯಾದಿಕೇಶವ ಅಂತ-ರಂಗದೊಳಿರುವ ಮಾಸಾಳಮ್ಮ 11
--------------
ಕನಕದಾಸ
ತೂಗಿರೆ ಗುರುಗಳ ತೂಗಿರೆ ಯತಿಗಳ ತೂಗಿರೆ ದಾಸಗ್ರೇಸರರ ನಾಗಶಯನನು ರಾಗವ ಪಡೆದಂಥ ಯೋಗಿವರೇಣ್ಯರ ತೂಗಿರೆ ಪ ಈ ಮಹಿಯೊಳು ಪುಟ್ಟಿ ಶ್ರೀಮುದತೀರ್ಥ ಸು- ನಾಮದಿ ಕರೆಸುವರ ತೂಗಿರೆ ಆ ಮುದತೀರ್ಥ ಪದ್ಮನಾಭ ನಾಮದಿಂದಿರುವರ ತೂಗಿರೆ1 ರಾಮನ ತಂದಿತ್ತ ನರಹರಿ ಮುನಿಪರ ಮಾಧವ ತೀರ್ಥರ ತೂಗಿರೆ ಆಮ- ಹಾವಿದ್ಯಾರಣ್ಯರನ ಗೆಲಿದಂಥ ಶ್ರೀ ಮದಕ್ಷೋಭ್ಯರ ತೂಗಿರೆ 2 ಕಾಕಿಣಿತೀರಸ್ಥ ಟೀಕಾಚಾರ್ಯರೆಂಬೊ ನಾಕಪಾಂಶಜರನ ತೂಗಿರೆ ಶ್ರೀಕೃಷ್ಣ ತಟದಿ ಜಿತಾಮಿತ್ರರೆಂಬೊ ಪಿ- ನಾಕಿ ಅಂಶಜರನ ತೂಗಿರೆ 3 ರಾಜರಂದದಿ ಸುಖಭೋಜನ ಕೃದ್ಯತಿ ರಾಜ ಶ್ರೀಪಾದರ ತೂಗಿರೆ ವ್ಯಾಜದಿ ವಿಜಯ ಸಾಮ್ರಾಜ್ಯರೆನಿಸಿ ವ್ಯಾಸರಾಜರು ಮಲಗ್ಯಾರ ತೂಗಿರೆ 4 ವಾದಿಗಳನು ಯುಕ್ತಿವಾದದಿ ಗೆಲಿದಂಥ ವಾದಿರಾಜರನ್ನ ತೂಗಿರೆ ಮೇದಿನಿಯೊಳು ಕೃಷ್ಣದ್ವೈಪಾಯನರೆಂಬೊ ವೇದವ್ಯಾಸಾತ್ಮಜರ ತೂಗಿರೆ 5 ಪರಿಮಳ ರಚಿಸಿದ ವರಹಜ ತೀರಸ್ಥ ಇರುಳು ಕಾಲದಲಿ ತರಣಿಯ ತೋರಿದ ಗುರುಸತ್ಯ ಬೋಧರ ತೂಗಿರೆ 6 ಪರಮತ ಖಂಡನ ನಿರುತದಿ ಮಾಡಿದ ಗುರುವರದೇಂದ್ರರ ತೂಗಿರೆ ಗುರು ಭುವನೇಂದ್ರರ ಕರಜವ್ಯಾಸತತ್ವ ವರಿತ ಯತೀಶರ ತೂಗಿರೆ 7 ವರಭಾಗವತಸಾರ ಸರಸದಿ ರಚಿಸಿದ ಗುರುವಿಷ್ಣು ತೀರ್ಥರ ತೂಗಿರೆ ಪರಮ ಕ್ಷೇತ್ರಕೂಡಲಿಯೊಳಗಿರುವಂಥ ಗುರುರಘುವೀರರ ತೂಗಿರೆ 8 ಹರಿಯ ಮಹಿಮೆಯನ್ನು ಸರಸದಿ ಪೇಳಿದ ಪುರಂದರ ದಾಸರ ತೂಗಿರೆ ಹರಿಸರ್ವೋತ್ತಮನೆಂದು ಸುರಮುನಿ ಗರುಹಿದ ಗುರು ವಿಜಯದಾಸರ ತೂಗಿರೆ 9 ಬನ್ನವ ಬಿಡಿಸಿ ಶಿಷ್ಯನ್ನ ಪಾಲಿಸಿದ ಭಾಗಣ್ಣ ದಾಸರನ್ನು ತೂಗಿರೆ ಘನ್ನ ಹರಿಯಗುಣ ವರ್ಣಿಸಿದಂಥ ಜ ಗನ್ನಾಥ ದಾಸರ ತೂಗಿರೆ 10 ಮಾನವಿರಾಯರ ಪ್ರಾಣಪದಕರಾದ ಪ್ರಾಣೇಶದಾಸರ ತೂಗಿರೆ ವೇಣುಗೋಪಾಲನ್ನ ಗಾನದಿ ತುತಿಸಿದ ಆನಂದದಾಸರ ತೂಗಿರೆ 11 ವಾಸ ಆದಿಶಿಲಾಧೀಶನ್ನ ಭಜಿಸಿದ ಶೇಷ್ಠ ದಾಸರನ್ನ ತೂಗೀರೆ ಶ್ರೇಷ್ಠ ಕಾರ್ಪರ ನರಕೇಸರಿಗತಿಪ್ರೀಯ ದಾಸೋತ್ತಮರನ್ನ ತೂಗೀರೆ 12
--------------
ಕಾರ್ಪರ ನರಹರಿದಾಸರು
ತೊಂಡ ನೆನಿಸ ಬೇಡ ಹರಿಯೇ ಪ ಪುಂಡರೀಕಾಕ್ಷನೆ ಕಾವ ತೊಂಡರ ತೊಂಡನೆನಿಸೋ ಅ.ಪ. ಹೆಂಡತಿಯ ಬಿಡಬಹುದು-ಕಾಡಿಗ್ಹೋಗಲಿ ಬಹುದು ಬಿಡದೆ ಜಪಿಸಲಿ ಬಹುದು-ಕಟುತಪವ ಮಾಡಲಿಬಹುದು ಒಡೆಯ ಕೃಷ್ಣನೆ ನಿನ್ನ ಅಡಿಯ ಕಾಡಲಿಬಹುದು ಕಂಡವರ ಊಳಿಗದಿ ಕೀರ್ತಿ ಪಡೆಯಲಾಗದೊ ದೇವ 1 ಆಶೆಯ ತೊರೆದು ನಿಜ ದಾಸನಾಗಲಿಬಹುದು ದೇಶ ದೇಶವ ತಿರುಗಿ ಕಾಸುಗಳಿಸಲಬಹುದು ಕೇಸರಿಯ ಹಿಡಿತಂದು ಪಾಶದಲಿ ಕಟ್ಟಬಹುದು ಶ್ರೀಶನಿನಗಲ್ಲದವರ ಸಂಗ ಏಸೇಸು ಜನ್ಮಕ್ಕು ಬ್ಯಾಡೋ 2 ಹೀನ ಜನರಾ ಸಂಗ ಮಾನವಂತರಿಗಲ್ಲ ದೀನಜನಮಂದಾರ ಕೊಡಬೇಡ ಇದು ಎನಗೇ ಮಾನಾಭಿಮಾನವನು ನಿನಗೆ ಒಪ್ಪಿಸಿದೆನೋ ಇನ್ನಾದರೂ ಸಲಹೋ ಶ್ರೀನಿವಾಸ ಕೃಷ್ಣವಿಠ್ಠಲನೆ ಜೀಯಾ 3
--------------
ಕೃಷ್ಣವಿಠಲದಾಸರು
ತೊರವಿ ನರಹರಿ ಸ್ತೋತ್ರ ಹರಿಯು ನಿಂದಿಹ ನೋಡೀ | ಭೂತಳದಿ ತೊರವಿಲಿಹರಿಯು ಇಂದಿರೆಗೂಡಿ | ಒಡವೆರೆಸಿ ಸರ್ವದಶರಣ ಜನರೊಡನಾಡೀ | ಸುಖವೀವ ನೋಡೀ ಪ ಹರಿಯೆ ಪರನೆಂಧ್ಹೇಳ್ಪ ಬಾಲಕೆದುರುಳ ಕಾಶ್ಯಪು ಪರಿಪರೀಯಲಿಕರ ಕೆರೆಯ ಗೊಡಲಾಗ ನರಹರಿತರುಳನುದ್ಧರ ಗೈದ ಶ್ರೀಹರಿ ಅ.ಪ. ಉದರ ಪೋಷಕ ಬೋಧಾ ಗುರುಶಂಡಮರ್ಕರು ಮುದದಿ ತಿಳುಹಲ ಗಾಧ | ಸರಿಸುತ್ತ ದೂರದಿಹದನ ಪೇಳಿದ ವೇದ | ಪ್ರತಿಪಾದ್ಯ ಶ್ರೀಹರಿವಿಧ ವಿಧವು ಕಾರ್ಯಗಾಧ | ಸೃಷ್ಠಿ ಲಯ ಮೊದಲಾದಅದುಭೂತವು ಎನೆ ಕಾರ್ಯ ಬಹಳವಗೈದು ಲೀಲೆಯ ತೋರಿ ಜಗದೊಳುಮುದವ ಬೀರುತ ಸಾಧು ಸಜ್ಜನಮೋದ ಬಡಿಸುವೆ ನೆಂದು ಪೇಳಿದ 1 ಕರಿಯಪದತಳ ತುಳಸೀ | ಪ್ರಹ್ಲಾದ ಬಾಲನಹಿರಿದು ಶರಧಿಯೊಳಿರಿಸೀ | ಮತ್ತವನು ಉಳಿದಿರೆಧರೆಯ ಗುಹೆಯೊಳಗಿರಿಸೀ | ಮೇಲ್ಕಿಲೆಯ ಮುಚ್ಚಲುಮರಳಿ ಬಂದನು ಜೀವಿಸೀ | ಹರಿಯ ವಿಶ್ವಾಸೀ ತರಳನಿಗೆ ಅಹಿಯಿಂದ ಕಚ್ಚಿಸಿಕರುಣಿ ಮಾತೆಯು ವಿಷವನೂಡಿಸೆಗರಸಹೋದರಿ ಪೊರೆಯಲವನನುತರಳನಿಂಧ್ಹರಿವರನುಯೆಂದ 2 ಬಂದ ಚಿಮ್ಮಲಿಗಿಂದ | ಭಕುತಂಗೆ ಪೇಳುತನಂದ ಹುಲ್ಲೆಸೆಯಂದ | ಅದು ಹತ್ತಿ ಉಳಿಯಲುನಿಂದಿಹೆ ತಾ ನಲ್ಲೆಂದ | ಅದರಂತೆ ಗೈಯಲುನಿಂದ ತೋರವಿಲಿ ಛಂದ | ಹರಿಯು ಬಹು ಆನಂದನಂದ ನಂದನನಾದ ಗುರು ಗೋ-ವಿಂದ ವಿಠಲನ್ನಕೇಸರಿಯುಚಂದದಿಂ ದೂವ್ರ್ಯಾಸ ಪೂಜಿತನಂದ ಕಂದ ಮುಕುಂದ ಶ್ರೀಹರಿ 3
--------------
ಗುರುಗೋವಿಂದವಿಠಲರು
ದಯಾ ಸಾಗರ ದಾನವಾರಿ ಸರೋಜ ನಯನ ಸೂತ್ರಧಾರಿ ಪ ಶ್ರೀಯಾಭರಣ ಭೂಷಣ ಶ್ರೀಹರಿ ನಯ ನೀತಿ ಕಾರಣ ನೃಕೇಸರಿ ಅ.ಪ ಸನಕಾರ್ಜಿತ ಸುರಪೂಜನ ಸುನೀಲ ಮಾಂಗಿರಿನಿಕೇತನ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದುರಿತ ಗಜಕೇಸರಿಯೆ ತ್ರಿಲೋಕದ ದೊರೆಯೆ ನಿನಗಾರು ಸರಿಯೆ ಭಾಗ್ಯದ ಸಿರಿಯೆ | ಕರುಣವ ಮಾಡಿ ಪರಿಯಲಿ ಸಾರಂಗ | ಧರನೆ ಧರಣಿಧರ ವರ ಪರಿಯಂತಾ ಪ ಭೂಮಿಯೊಳಗೆ ಉತ್ತಮ ನೆಲಾ ನೀಡೆಂದು | ಹೇಮ ಮುನೀಶ್ವರ ಕಾಮಿಸಿ ಹರಿಪಾದ | ನೀ ನೇಮ ನಿತ್ಯದಲ್ಲಿ | ತಾ ಮನೋರಥನಾಗಿ || ಸಾಮಜವರದನ ನಾಮವ ನೆನೆಯಲು | ಹೇಮ ತೀರಥದೊಳು | ತಾ ಮನಗೊಂಬ ನಾಮನೆ ಪಡೆದು 1 ಮಂಗಳಾಂಗಿಯೇ ಬರಲು ರಂಗರಾಯನು ಸಾ | ರಂಗಶರವೇಪಿಡಿದುಶೃಂಗಾರಮಯದಿಂದ | ಬಂಗಾರ ರಥ ತು | ರಂಗಗಳ ಸಮೇತ ಭುಜಂಗಶಯನನಾಗಿ ಕಂಗೊಳಿಸುತ್ತಲೂ | ತುಂಗ ಮಹಿಮ ವಿಹಂಗಾದಿಗಳಿಂದ ಕೈಕೊಳ್ಳುತ್ತಿಂಗಿತದಲಿ ನೀಲಾಂಗ ನಿರ್ದೋಷಾ 2 ಜಯ ಕುಂಭಘೋಣನಿಲಯಾನೆನೆಸುವ ಉ | ಭಯ ಕಾವೇರಿ ನಿವಾಸಾ | ಭಯ ಕೃದ್ಭಯನಾಶ | ತ್ರಯ ಗುಣವಿರಹಿತಾ ವಿಯದ್ಗಂಗಾನದಿ ತಾತಾ | ಜಯ ಜಯವೆನುತಿರೆ ಪ್ರಿಯನಾಗಿ ಕೇಳುತಾ | ನಯನ ಮೀತಾರ ಪಾಲಯಪಾವನದೇವಾ | ದಯಮುಖ ಹರಾ ವಿಜಯವಿಠ್ಠಲಪರಾ 3
--------------
ವಿಜಯದಾಸ
ದುರ್ಜನರ ಸಂಗವನು ತ್ಯಜಿಸು ಮನವೆ, ಸಾಧು ಸಜ್ಜನರ ಸಂಗವನು ಭಜಿಸಿ ಸುಖಿಯಾಗೆಲವೊ ಪ ದುಷ್ಟ ವ್ಯಾಘ್ರನ ಕೈಯ ಮುಟ್ಟಿ ಹಿಡಿ ತರಬಹುದು ಅಟ್ಟಿಬಹ ಮದಕರಿಯ ಕಟ್ಟಬಹುದು ಕೃಷ್ಣಸರ್ಪನ ಹುತ್ತ ಕಲಕಿ ಜೀವಿಸಬಹುದು ದುಷ್ಟಾತ್ಮರಾದವರ ಬಿಟ್ಟು ಕಳೆ ಮನವೆ 1 ಚೇಳಬಾಲದ ಉರಿಯ ಜ್ವಾಲೆ ತಾಳಲುಬಹುದು ಕಾಲಮೇಘದ ಸಿಡಿಲು ಬೀಳಬಹುದು ಶೂಲಪಾಣಿಯ ಫಣೆಯ ಆಲಿ ಕೀಳಲುಬಹುದು ಕಾಳುಮೂಳರ ಸಂಗ ಮರೆದು ಕಳೆ ಮನವೆ 2 ಹರಿವ ಗರಗಸಿನಲ್ಲಿ ಶಿರವನೊಡ್ಡಲುಬಹುದು ಬೆರಸಿಬಹ ಕಾಡ್ಗಿಚ್ಚ ಧರಿಸಬಹುದು ಸರಿಸದಲಿ ನಿಂತು ಕೇಸರಿಯ ಕೆಣಕಲುಬಹುದು ಮರೆಸಿ ಕೊರಳನು ಕೊಯ್ವ ನರರ ಮರೆ ಮನವೆ 3 ಒಂದು ಜಾತಿಗೆ ವಿಷವು ಪುಚ್ಚದೊಳಗಿರುತಿಹುದು ಮ- ತ್ತೊಂದು ಜಾತಿಗೆ ದಂತದೊಳಗೆ ವಿಷವು ಒಂದು ಜಾತಿಗೆ ಮೈಯ ಅಂದವೆಲ್ಲವು ವಿಷವು ಹಿಂದೆಯಾಡುವ ನುಡಿಯು ಘೋರ ವಿಷ ಮನವೆ 4 ತೇರ ಕಂಡರೆ ತೊಲಗು ಮಾರೈದನಾಕ್ಷಣದಿ ವಾರುವಗೆ ಕಡೆ ಸಾರು ಈರೈದು ಮಾರುವನು ದಾರಿಯನು ಬಿಡು ಗಜಕೆ ಮೂರು ಸಾವಿರವನ್ನು ಊರ ಬಿಡು ದುರ್ಜನರ ಸೇರದಿರು ಮನವೆ 5 ಸತ್ಯವಂತರ ಕಂಡರರ್ಥಿಯಿಂದಲೆ ಎರಗು ನಿತ್ಯದೊಳು ಶ್ರೀಹರಿಯ ಕೀರ್ತನೆಯ ಮಾಡು ಉತ್ತಮೋತ್ತಮ ಪದವ ಹತ್ತಿಸುವವರ ಬೇಡು ಧೂರ್ತಮನುಜರ ಸಂಗ ಕಿತ್ತು ಕಳೆ ಮನವೆ 6 ಶುದ್ಧಮನವೆ ಎನ್ನ ಬುದ್ಧಿಯೊಳಗಡಗಿರ್ದು ಉದ್ಧರಿಸು ವರಾಹತಿಮ್ಮಪ್ಪನನು ನೆನೆದು ಮದ್ದನರೆ ಜನ್ಮದೊಳು ಮರಳಿಬಾರದ ಹಾಗೆ ಗದ್ದುಗೆಯ ಹಾಯ್ಕೆನ್ನ ಹೃದಯ ಮಧ್ಯದಲಿ 7
--------------
ವರಹತಿಮ್ಮಪ್ಪ
ದ್ವಾರಪಾಲಕರಿಗಾನಮಿಪೆ ನಿತ್ಯ ಶ್ರೀ ರಮಣ ನಾರಯಣನ ಪುರತ್ರಯದೊಳಿಹ ಪ ಜಯ ವಿಜಯ ಬಲಪ್ರಬಲ ಚಂಡ ಪ್ರಚಂಡ ನಿ ರ್ಭಯ ನಂದ ಸುನಂದ ಕುಮುದ ಕುಮುದಾ ಧಾಮ ಸುಧಾಮ ಸಂ ಪ್ರಿಯ ತಮನ ಆಜ್ಞಾಧಾರಕರೆಂದೆನಿಸುವ 1 ಲಸದೂಧ್ರ್ವಪುಂಡ್ರ ದ್ವಾದಶನಾಮ ಶಂಖ ಸುದ ರುಶನ ಸುಗದಾ ಪದ್ಮ ನಾಮ ಮುದ್ರಾ ಕುಸುಮ ಮಾಲಿಕೆ ಧರಿಸಿ ನಸುನಗುತಹರ್ನಿಶಿಗಳಲಿ ಹರಿಯ ತುತಿಪಾ 2 ಕುಂಡಲ ಹಾರ ಪದಕ ಕಂ ಕಣ ನಡುವಿನೊಡ್ಯಾಣ ಪೀತಾಂಬರ ಕ್ವಣಿತನೂಪುರ ಗೆಜ್ಜೆ ಚರಣಾಭರಣ ಸುಲ ಕ್ಷಣರಾದ ಸರ್ವಾಂಗ ಸುಂದರರೆನಿಸುವಾ 3 ಕರದೊಳೊಪ್ಪುವ ಗದಾಯುಧ ಕುಂದರದನ ಕ ಸ್ತುರಿನಾಮ ಮಾಣಿಕಕ್ಷತೆಯ ಧರಿಸಿ ಕುಸುಮ ಕೇಸರಿ ಗಂಧದಿಂ ಭಯಂ ನಿತ್ಯ 4 ಮೂರು ಬಾಗಿಲಲಿ ಶ್ರೀ ದೇವಿಯಿಪ್ಪಳು ವಾಯು ಭಾರತಿ ಆಜ್ಞದಿಂದೀ ದೇವರು ವೀರಜಯ ವಿಜಯಾದಿಗಳಿಗೆ ವಿಷ್ವಕ್ಸೇನ ಪ್ರೇರಕನು ತಾನಾಗಿ ಶ್ರೀಶನರ್ಚಿಪನೆಂದು 5 ಹೃದಯ ಶ್ರೋತ್ರ ಚಕ್ಷುವದನಾದಿ ಕರಣದೊಳು ನದನದಿಗಳೊಳು ಮಹೋದಧಿಗಳೊಳಗೆ ಉದಿತ ಭಾಸ್ಕರ ಮಂಡಲದಿ ದೇವಗೃಹದಿ ಸದಸದ್ವಿಲಕ್ಷಣ ಸುದತಿಸಹ ಪೂಜಿಸುವ 6 ದ್ರುಹಿಣ ಮೊದಲಾದ ಸುಮನಸ ಪೂಜ್ಯ ಚರಣಾಬ್ಜ ಮಹಿಮ ಮಂಗಳಚರಿತ ಸುಗುಣ ಭರಿತ ಅಹಿರಾಜ ಶಯನ ಜಗನ್ನಾಥವಿಠಲನ ಸ ನ್ಮಹಿಮೆಗಳ ತಿಳಿಸಿ ತೋರಿಸಲಿ ಮನ್ಮನದೀ 7 ತೀರ್ಥಕ್ಷೇತ್ರ
--------------
ಜಗನ್ನಾಥದಾಸರು
ಧನ್ಯರಾದರು ಗುರುಗಳನು ಪೂಜಿಸುತ ಇನ್ನಿವರ ಪಾತಕವು ತೊಲಗಿತು ಜಗದಿ ಪ. ತಂದೆ ಮುದ್ದುಮೋಹನದಾಸ ರಾಯರನು ಚಂದದಿಂ ಸತಿಸಹಿತ ಕರೆತಂದು ಮನೆಗೆ ಮಂದರೋದ್ಧರನ ಪದಸೇವೆ ಇದು ಎಂದರಿತು ಮಂದಹಾಸದಲಿ ನಸುನಗುತ ಸದ್ಭಕ್ತರು 1 ಮಂಗಳೋದಕದಿಂದ ಮಜ್ಜನವಗೈಸುತಲಿ ಅಂಗಗಳನೊರೆಸುತಲಿ ನಾಮಗಳನ್ಹಚ್ಚಿ ರಂಗನಾಥನಿಗರ್ಪಿಸುತ ಪುಷ್ಪಹಾರವನ್ಹಾಕಿ ಶೃಂಗಾರವನೆಗೈದು ಶ್ರೀ ಗುರುಗಳನ್ನು 2 ಪಚ್ಚೆಕರ್ಪೂರ ಕೇಸರಿಯಿಂದ ಕೂಡಿದ ಅಚ್ಚ ಗಂಧವನ್ಹಚ್ಚಿ ಅಕ್ಷತೆಯನಿಟ್ಟು ಮಚ್ಛರೂಪಿಯ ನೆನೆದು ಪಾದಕಮಲವ ತೊಳೆದು ನಿಚ್ಚಳದ ಭಕ್ತಿಯಲಿ ನಿಜ ಭಕ್ತರೆಲ್ಲ 3 ಸತಿಸಹಿತ ಕುಳ್ಳಿರಿಸಿ ಗುರುಗಳನು ಪೀಠದಲ್ಲಿ ಅತಿಶಯದಿ ಕುಡಿಬಾಳೆ ಎಲೆಗಳನೆ ಹಾಕಿ ಮತಿಯಿಂದ ರಂಗೋಲೆಗಳನ್ಹಾಕಿ ಲವಣ ಸ- ಪರಿಯಂತ ಬಡಿಸುತಲಿ 4 ಅನ್ನಾದಿ ಸಕಲ ಷಡ್ರಸಗಳನೆ ಬಡಿಸುತ್ತ ಘನ್ನ ಮಹಿಮರಿಗೆ ಭಕ್ಷಾದಿಗಳ ಬಡಿಸಿ ಸನ್ನುತಿಸುತಲಿ ತೀರ್ಥ ಆಪೋಷನವನ್ಹಾಕಿ ಪನ್ನಗಶಯನನಿಗೆ ಅರ್ಪಿಸುತ ಮುದದಿ 5 ಘೃತಶರ್ಕರಾದಿಗಳನಡಿಗಡಿಗೆ ಬಡಿಸುತಲಿ ನುತಿಸಿ ಗಾನಗಳಿಂದ ಗುರುಮಹಿಮೆಯ ದಧಿ ಕ್ಷೀರದನ್ನಗಳನುಣಿಸುತಲಿ ಘೃತ ಕ್ಷೀರದಿಂದ ಕೈ ತೊಳೆದು ಸಂಭ್ರಮದಿ 6 ಯಾಲಕ್ಕಿ ಕರ್ಪೂರ ಮಿಳಿತ ವೀಳೆಯವನಿತ್ತು ವೇಳೆವೇಳೆಗೆ ತಪ್ಪು ಕ್ಷಮೆಯ ಬೇಡುತಲಿ ವ್ಯಾಳಶಯನಗರ್ಪಿಸುತ ಉಡಿಗೆ ತೊಡಿಗೆಗಳನಿತ್ತು ಮಾಲೆಹಾಕುತ ಆರತಿಯನೆತ್ತಿ ಮುದದಿ 7 ಹರಿಪ್ರೀತನಾಗುವನು ಗುರು ಹೃದಯದಲಿ ನಿಂತು ಕರ್ಮ ತೊಡಕುಗಳು ಸರಸಿಜಾಕ್ಷನು ತಾನು ಹರುಷಪಡುವನು ದಯದಿ ಕರಕರೆಯ ಸಂಸಾರ ಕಡಿದು ಗತಿ ಈವ 8 ಗುರುದ್ವಾರ ಒಲಿಯುವನು ಹರಿಯು ಮೋಕ್ಷಾರ್ಥಿಗಳ ಅರಘಳಿಗೆಯಗಲದಲೆ ಕಾಯುವನು ಸತತ ಗುರು ಅಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ತ್ವರಿತದಿಂ ಹೃದಯದಲಿ ತೋರ್ವನು ತನ್ನ9
--------------
ಅಂಬಾಬಾಯಿ
ನಂಬಿದೇ ಗುರುವರಾ ನಂಬಿದೇಪ ನಂಬಿದೆ ಗುರುಸಾರ್ವಭೌಮಾ ತುಂಟುಮನದೊಳು ಹರಿಭಕ್ತಿ ನಿಸ್ಸೀಮಆಹಾ ಅಂಬುಜೋದ್ಭವಪಿತನ ಕಂಭದಿ ತೋರಿದ ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ ಅ.ಪ. ದಾಸನೆಂದಡಿಗೆ ಬಿದ್ದೆನೋ ಈಗ ದೋಷ ನಾಶಮಾಡೋ ಎನಗೆ ಬೇಗ ಆಹಾ ವಾಸುಕಿಶಯನನ ಬ್ಯಾಸರದೆ ಸ್ತುತಿಸಿ ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ 1 ಪಾತಕರೊಳಗೆ ಅಗ್ರೇಸರನಾನು ಪೂತಮಾಡುವರೊಳಗೆ ನಿಸ್ಸೀಮ ನೀನು ಆಹಾ ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ 2 ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ ಭೂಪನ ಕುಹಯೋಗ ಕಳೆದ ಯತಿಕುಲತಿಲಕ 3 ಮಧ್ವಶಾಸ್ತ್ರಗಳ ಮಂದರರಿಯದಿರಲು ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ಆಹಾ ಆದರದಿಂದಲಿ ಪುರಂದರಕನಕರಿಗೆ ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ 4 ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ಆಹಾ ಕತ್ತಲೆ ಅದ್ವೈತವಾದಗಳಿಗೆಲ್ಲಾ ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ 5 ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ಆಹಾ ಅಪ್ಪ ಶ್ರೀರಾಮರ ಪೂಜಿಸಬೇಕೆಂದು ಒಪ್ಪಿಸನ್ಯಾಸವ ರಾಘವೇಂದ್ರನಾದ 6 ಮುದದಿ ದೇಶ ದೇಶವ ಚರಿಸಿದೇ ಸಮಯದಿ ಸುಜನರಕ್ಲೇಶಗಳಳಿದೇ ಆಹಾ ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ ಬುಧರಿಗೆ ತತ್ವ ಕನ್ನಡಿ ತೋರ್ದ ಗುಣಗಣನಿಧಿಯೇ7 ಪರಿಪರಿ ಮಹಿಮೆಯ ತೋರುವ ಗುರುವೇ ಸುರತರು ಅಂದದಿ ಹರಕೆ ಗಳೀವೆ ಪ್ರಭುವೇ ಆಹಾ ಮೂರೆರಡು ಒಂದುನೂರು ವರುಷ ಪರಿಯಂತ ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು8 ದಯದಿಂದ ನೋಡೆನ್ನ ದೀನೋದ್ಧಾರ ಭವ ಬಿಡಿಸು ಕರುಣಾಸಾರ ಆಹಾ ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣ ವಿಠಲನ ಹೃ- ದಯಮಂದಿರದಿ ತೋರೆನಗೆ ಗುರುಸಾರ್ವಭೌಮ 9
--------------
ಕೃಷ್ಣವಿಠಲದಾಸರು
ನರಸಿಂಗಪುರ ವಾಸ | ಕಯಾಧು ಶಿಶುಪೋಷಕರುಣಾಮಯ ಸುವಪುಷ | ಪರಿಪಾಲಿಸು ಮೇಶ ಪ ಶರಧಿಜೆ ಲಕುಮೀಶ ಮೃತ್ಯುಂಜಯಗೆ ಬಿಂಬಶರಣ ಜನಾಬ್ದಿ ಭೇಶ | ಸರಸಿಜ ಭವಾದೀಶ ಅ.ಪ. ಕೃಷ್ಣಾತೀರ ವಾಸ | ಕೃಷ್ಣೆಯ ಮಾನ ಪೋಷಜಿಷ್ಣು ಸಾಹಸ ಭಾಸ | ವೃಷ್ಣಿ ಕುಲಕೆ ಭೂಷ 1 ಕೋಳ ನೃಹರಿ ಕಾಯಿ 2 ಶುಭ ಕಾಯ ಹೇಮ ಕಶಿಪು ಕಾಯನೇಮದೊಳಗೆ ಶೀಳ್ದ | ಕಾಮಿತ ಫಲಪ್ರದ 3 ಕಾಡುವ ರಕ್ಕಸನ | ಒಡಲ ಶೀಳಲು ಬಾಹುಷೋಡಶ ಧರಿಸಿದ | ಗಾಢ ಕಾರಣವೇನೊ 4 ದರ್ಶದಿನದೊಳಾ | ದರ್ಶ ದಾಸರ ದಿನ ದರ್ಶನ ನೀನಿತ್ತು | ಸ್ಪರ್ಶ ಪೂಜೆಯ ಕೊಂಡೆ5 ಜ್ವಾಲಾ ನೃಕೇಸರಿ | ಹಾಲಾಹಲವು ಭವಜಾಲ ದೊಳ್ಹಾಕದಿರು | ಕೇಳುವೆ ವರ ನಿನ್ನ 6 ಗೋವರ್ಧನೋದ್ದರ | ಗೋವ್ಗಳ ಪಾಲ ಗುರುಗೋವಿಂದ ವಿಠಲನೆ | ಭಾವದೊಳಗೆ ತೋರೊ 7
--------------
ಗುರುಗೋವಿಂದವಿಠಲರು
ನರಹರಿ ತೀರ್ಥಯತಿವರ್ಯ ಇಷ್ಟೆಂದೊ ಚರಿಯ ಪ ಸುರವಿನುತ ಪದಹರುಷತೀರ್ಥರ ಕರಕಮಲ ಸಂಜಾತರೆನಿಸುತ ಧರೆಯೊಳಗೆ ಸಿರಿಸಹಿತರಾ ಮನ ಕರೆದು ಧರೆಸುರ ಜನಕೆ ತೋರಿದ ಅ.ಪ ಚರಿಸುತ ಬರಲು ಗಜಪುರದಿ ಪುರ- ದರಸನಿಲ್ಲದಿರೆ ಯೋಚಿಸುತ ಕರಿಕರದಿ ವರಮಾಲಿಕೆಯ ಕೊಡಲಾಕ್ಷಣದೀ ಯತಿ ವರರ ಕಂಠದಲಿ ಹಾಕಲು ಜನ ಸಭದಿ ಪುರಜನದ ಪ್ರಾರ್ಥನದಿ ದ್ವಾದಶ ವರುಷ ಪ್ರಜರನು ಪೊರೆದು ಕೋಶದೊಳಿ- ರುವ ಧರಿಜಾಸಹಿತ ರಾಮನ ತರಿಸಿ ಪೊರಟರು ಕುದುರೆಯೇರುತ1 ಆ ಮಹಾಮುನಿಪರು ತ್ವರದಿ ಬಂದು ಶ್ರೀ ಮದಾನಂದ ತೀರ್ಥರ ಪದಯುಗದಿ ಪ್ರೇಮವಂದನ ಪೂರ್ವಕದಿ ಸೀತಾ ರಾಮಮೂರ್ತಿಯ ನೊಪ್ಪಿಸಿದರು ಕರದೀ ಶ್ರೀ ಮನೋಹರ ನಂಘ್ರಿಯುಗಲವ ಪ್ರೇಮದಿಂದಲಿ ಪೂಜಿಸುತಲಿರೆ ಈ ಮಹಾತ್ಮರ ಕರೆದು ಕೊಟ್ಟರು ನೇಮದಿಂದರ್ಚಿಸಿರಿ ಎನುತಲಿ 2 ಭಾಸುರ ಹೇಮಮಂಟಪದಿ ನಿತ್ಯಾ ಶ್ರೀಸೀತಾರಾಮನರ್ಚಿಪರು ವೈಭವದೀ ಭೂಸುರ ಕೃತ ವೇದಘೋಷದಿ ಮತ್ತೆ ವ್ಯಾಸಸೂತ್ರಗಳ ನಾಮಾವಳಿ ಪಠಣ ದಿ ದೇಶ ದೇಶಗಳಲ್ಲಿ ಚರಿಸುತ ತೋಷತೀರ್ಥರ ಮತವ ಬೋಧಿಸಿ ಸಿರಿ ನರ ಕೇಸರಿಗೆ ಪ್ರಿಯದಾಸರೆನಿಸಿದ 3
--------------
ಕಾರ್ಪರ ನರಹರಿದಾಸರು