ಒಟ್ಟು 46 ಕಡೆಗಳಲ್ಲಿ , 19 ದಾಸರು , 43 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿಮುಳುಗುತಿಹೆ ಕೈಯ ಪಿಡಿಯೊ ಜನಕ ಕೃಷ್ಣಯ್ಯ ಪ.ಶ್ರೀನಿವಾಸ ನಿನ್ನ ಭಕ್ತಿ ಮಾಡದ ಅಘವಂತನೆಂದುಹೀನ ಜನರ್ಪಾಳಕಿಟ್ಟರೇನ ಹೇಳಲೊನೀನು ಪಾಲಿಪ ರಾಜ್ಯದಲ್ಲಜ್ಞಾನಿ ದೇಶಿಗನೊಬ್ಬ ಕೆಡಲುಹಾನಿ ಹೆಚ್ಚಳ ನಿನ್ನದಲ್ಲೆ ದೀನದಯಾಳು 1ಚಿತ್ತವೇಗಕ್ಕವಧಿ ಇಲ್ಲ ಹೊತ್ತುಕೊಂಡು ಕಂಡ ಕಡೆಗೆಸುತ್ತುತಿದೆ ತನ್ನ ದಳವ ಕೂಡಿ ರಂಗಯ್ಯಕರ್ತನಿನ್ನ ಪಾದದೆಡೆಯೆ ಒತ್ತಿ ನೀನಿದನಾಳಬೇಕುಹೆತ್ತ ತಾಯಿ ನೀನೆ ಗಡಾನೆತ್ತಿಕೊಳ್ಳಯ್ಯ 2ಹಳುವಗಳು ದಾರಿಕಾಣೆ ಸೆಳವಿನೊಳಾಶ್ರಯ ಕಾಣೆನಳಿನನೇತ್ರ ನೀನೆ ಕಾಯೊ ಸುಲಭರೊಡೆಯನೆಲೆಯ ತೋರಾತಂಕಹಾರಿ ಒಲಿದು ವರಾಭಯವ ಬೀರಿಒಲಿಯೊ ಪ್ರಸನ್ವೆಂಕಟಾದ್ರಿನಿಲಯ ಉದಾರಿ 3
--------------
ಪ್ರಸನ್ನವೆಂಕಟದಾಸರು
ಏನೇನ ಮಾಡಿದರೇನು ಫಲವಯ್ಯಭಾನುಕೋಟಿತೇಜಶ್ರೀನಿವಾಸನ ಭಜಿಸದೆಪ.ಹಲವು ಓದಿದರೇನು ಹಲವು ಕೇಳಿದರೇನುಜಲದೊಳ ಮುಳುಗಿ ಕುಳಿತಿದ್ದರೇನುಛಲದಿಂದ ಮುಸುಕಿಟ್ಟು ಬೆರಳನೆಣಿಸಿದರೇನುಚೆಲುವ ದೇವನೊಳು ಎರತವಿಲ್ಲದಾತನ 1ಅನ್ನ ಜರೆದು ಅರಣ್ಯ ಚರಿಸದರೇನುಉನ್ನತ ವ್ರತಗಳಾಚಾರಿಸಿದರೇನುಚೆನ್ನಗಾತಿಯ ಸಂಗ ಬಿಟ್ಟು ಇದ್ದರೇನುಗಾನ ಲೋಲುನಲಿ ಎರಕವಿಲ್ಲದನಕ 2ಬತ್ತಲೆ ತಿರುಗಿ ಅವಧೂತನೆನಿಸಿದರೇನುತತ್ವ ವಾಕ್ಯಂಗಳ ಪೇಳಿದರೇನುಚಿತ್ತಜನಯ್ಯ ಶ್ರೀ ಪುರಂದರವಿಠಲನಚಿತ್ತದೊಳಿರಿಸಿ ಒಲಿಸಿಕೊಳ್ಳದನಕ 3
--------------
ಪುರಂದರದಾಸರು
ಕಾಳಿ ಮೊದಲಾದವರು ಭಾಳೆ ವಸ್ತಗಳಿಟ್ಟುವ್ಯಾಳಾಶಯನÀನ ಮಡದಿಯರು ಪ.ಬಂದು ಶ್ರೀ ಪ್ರದ್ಯುಮ್ನ ಗಂಧಹಚ್ಚಿ ಐವರಿಗೆಅಂದದಲಿಬುಕ್ಕಿಟ್ಟುಸೂರಾಡಿಮಂದಾರಮಲ್ಲಿಗೆ ತಂದು ಕೊರಳಿಗೆ ಹಾಕಿಆನಂದ ಬಟ್ಟನು ನೋಡಕೆಲದಿ1ಅಚ್ಯುತನ ಮಡದಿಯರುಹಚ್ಚಿಅರಿಷಿಣ ಕುಂಕುಮಮಚ್ಚನೇತ್ರಿಯರು ದ್ರೌಪತಿಗೆಅಚ್ಛಾದ ಸುಭದ್ರೆಗೆಹಚ್ಚಿಅರಿಷಿಣ ಕುಂಕುಮಅಚ್ಚ ಮಲ್ಲಿಗೆಯನ್ನೆ ಮುಡಿಸಿ 2ಶಂಬರಾರಿಪಿತನ ಗಂಭೀರ ತಂಗಿಯರಿಗೆತಾಂಬೂಲ ಅಡಿಕೆಯನೆ ಕೊಟ್ಟುಸಂಭ್ರಮದಿ ರಮಿ ಅರಸು ಅಂಬರಗಳ ಉಡಿಸಿಮೈತುಂಬ ವಸ್ತಗಳ ಇಡಿಸಿ 3
--------------
ಗಲಗಲಿಅವ್ವನವರು
ಕುಸುಮನಾಭನ ಮಡದಿಯರುಹೆಸರ್ಹೇಳ ಅರ್ಥಿಲಿಹಸುಳೆಯರು ಹಾಡಿ ಪಾಡಿಕುಶಲದಿಕೋಲಹೊಯ್ದುಪ.ಬಂದು ರುಕ್ಮಿಣಿ ಭಾವೆಗೆವಂದಿಸಿ ಭದ್ರೆ ದ್ರೌಪತಿಮಂದಾರಮಲ್ಲಿಗೆ ಸಂಪಿಗೆಚಂದದಿಸೂರ್ಯಾಡಿ1ಕೃಷ್ಣನರಸಿಯರು ಇಬ್ಬರುಬುಕ್ಕಿಟ್ಟುಸೂರ್ಯಾಡಿಗಟ್ಟಿ ಕಂಕಣದ ಕರದಲೆಮುಟ್ಟಿ ಆಲಂಗಿಸುತ 2ಹರದಿರುಕ್ಮಿಣಿ ಕೈಯಮರಿಯದಲೆ ಹಿಡಿದು ದ್ರೌಪತಿದೊರೆಯರ ಹೆಸರ್ಹೇಳಿಮುಂದಕೆ ಬರಬೇಕೆಂದರು 3ಸತ್ಯಭಾಮೆಯ ಕೈಯಅರ್ಥಿಲೆ ಹಿಡಿದು ದ್ರೌಪತಿಮತ್ತೆ ಪತಿಗಳ ಹೆಸರುವಿಸ್ತರಿಸೆಂದರು 4ವಾರಿಜಾಕ್ಷನಹೆಸರುನಾರಿಯರಿಬ್ಬರು ಹೇಳಿಶ್ರೀ ರಾಮೇಶನ ಮಡದಿಯರುಏರಿದರು ಆಸನವ 5
--------------
ಗಲಗಲಿಅವ್ವನವರು
ದಾಟುವೆನೆಂದರೆ ದಾಟು ಹೊಳೆಯುಕೈಟಭಾಂತಕ ಭಟರಿಗೆ ಭವಜಲವು ಪ.ಪೂರ್ವಯಾಮದಿ ಹರಿಗುಣಕರ್ಮನಾಮನಿರ್ವಚನದಿ ಕೀರ್ತನೆ ಮಾಡುವ ಮಹಿಮಉರ್ವಿಯ ಮೇಲಿದ್ದು ಒಲಿಸಿಕೊಂಡನು ಸುರಸಾರ್ವಭೌಮನ ಸೀತಾರಾಮನ 1ಜಲದಲಿ ಮಿಂದೂಧ್ರ್ವ ತಿಲಕಿಟ್ಟು ನಲಿದುತುಲಸಿಕುಸುಮಗಂಧ ಅಗ್ರದ ಜಲದಿನಳಿನೇಶನಂಘ್ರಿಗರ್ಪಿಸಿ ಸಹಸ್ರನಾಮಾವಳಿಯಿಂದ ಧೂಪದೀಪಾರತಿ ಬೆಳಗಿ 2ಪರಮಾನು ಯೋಗಾವಾಹನೆ ವಿಸರ್ಜನೆಯುಸ್ಮರಣೆ ವಂದನೆ ಪ್ರದಕ್ಷಿಣೆ ನರ್ತನವುವರಗೀತಪಠಣೆ ಭಾಗವತಾ ಶ್ರವಣವುತ್ವರಿಯದಿ ಭೂತಕೃಪೆಯಲ್ಲಿ ಮನವು 3ಗುರುಪಾದಪದ್ಮದಿ ಬಲಿದು ವಿಶ್ವಾಸಗುರುಕೃಪೆಯಿಲ್ಲದ ಪುಣ್ಯ ನಿಶ್ಯೇಷಗುರುಬೆನ್ನಟ್ಟಿದ ಕರಿಗಡ್ಡಹಾಸ ಹಾಸಗುರುಗಳ ಮರೆದು ಕಳೆಯನೊಂದುಶ್ವಾಸ4ಈಪರಿಹರಿಪುರ ದಾರಿಯ ತೊಲಗಿಕಾಪುರುಷರುಭವಮಡುವಲಿ ಮುಳುಗಿಆಪತ್ತು ಪಡುವರ ನೋಡಿ ಬೆರಗಾಗಿಶ್ರೀ ಪ್ರಸನ್ವೆಂಕಟಪತಿ ನಕ್ಕನಾಗಿ 5
--------------
ಪ್ರಸನ್ನವೆಂಕಟದಾಸರು
ನಮ್ಮಪ್ಪ ಸುಮ್ಮಗಿರೊ ಗೋಪಾಲಾ-|ಗುಮ್ಮನು ಎಳೆದೊಯ್ವನು ಪಎಡದ ಕೈಯಲಿ ಕಪಾಲ-ಗೋಪಾಲಾ-|ಬಲದ ಕೈಯಲಿ ತ್ರಿಶೂಲ ||ಚಳಿಬೆಟ್ಟದ ಹೆಣ್ಣ ಮೈಯೊಳಿಟ್ಟವನಂತೆ |ಅಲೆದು ಸ್ಮಶಾನವ ತಿರುಗುವನಂತೆ 1ಮೂರು ಕಣ್ಣಿನವನೊ-ಗೋಪಾಲಾ-|ಐದು ತಲೆಗಳವನೊ ||ದಾರಿಯ ಪೋಗುವ ನಾರಿಯನೆಳತಂದು |ಸೇರಿಸಿ ಶಿರದಲ್ಲಿ ಹೊತ್ತನೊ 2ಚಂದ್ರನರ್ಧವ ಪಿಡಿದು-ತಲೆಯ ಮೇಲೆ-ಚೆಂದಕಿಟ್ಟಿರುವನಂತೆ ||ಅಂದಗಾರನಂತೆ [ಅನಲನೇತ್ರನಂತೆ] |ಮುಂದಿಪ್ಪ ಹುಡುಗನ ಕೊಂದು ತಿಂದವನಂತೆ 3ನಿನ್ನ ಮಗನ ಮಗನೊ-ಗೋಪಾಲಾ-|ಪನ್ನಗಭೂಷಣನೋ ||ಧನ್ಯನಾಗಿ ಶ್ರೀರಾಮ ನಾಮವನು |ಚೆನ್ನಾಗಿ ಚಿಂತಿಪನೊ 4ಕರಿಯಜಿನ ಪೊತ್ತವನೊ ಗೋಪಾಲಾ-|ನೆರೆದ ಭೂತ ತಂದವನೊ ||ಶರಧಿಶಯನ ನಿನ್ನಚರಣಪಂಕಜಭೃಂಗ|ಪುರಂದರವಿಠಲ ಪನ್ನಂಗ ಶಯನನೆ 5
--------------
ಪುರಂದರದಾಸರು
ನಾರದ ಕೊರವಂಜಿ1ಜಯ ಜಯ ಜಯ ಜಯ ಜಯ ಜಯ ಪ.ಶ್ರೀ ರಮಾರಮಣ ಜಯ ಶ್ರೀಕರ ಗುಣಾಬ್ಧಿ ಜಯಶ್ರೀ ರುಕ್ಮಿಣೀಶ ಜಯ ಶ್ರೀ ಶ್ರೀನಿವಾಸ ಜಯನೀರಚರಕಮಠಕಿಟಿನೃಹರಿವಟುಭೃಗುಜ ರಘುವೀರ ಯದುಪತೆಬುದ್ಧಕಲ್ಕಿ ಸ್ವರೂಪಾ ಜಯ ಜಯ1ಶ್ರೀ ಮತ್ಕಪಿಲ ಋಷಭ ಯಜÕದತ್ತ ಕಂಸ್ತುಘ್ನ ?ಕೌಮಾರ ವ್ಯಾಸ ಹಯಗ್ರೀವ ಶ್ರೀಮದ್ದಜಿತ ಜಯಸ್ವಾಮಿ ಮಹಿದಾಸ ತಾಪಸ ಉರುಕ್ರಮಶೂಲಿವ್ಯಾಮೋಹ ಧನ್ವಂತರೆ ಹಂಸ ಶುಕ್ಲಾ ಜಯ ಜಯ 2ಆನಂದ ಜ್ಞಾನ ಬಲಮಯ ಚಿತ್‍ಸ್ವರೂಪ ಜಯಅನಂತ ಮಹಿಮ ವೈರಾಜ ಪುರುಷೋತ್ತಮ ಜಯಅನಂತ ಬ್ರಹ್ಮ ರುದ್ರೇಂದ್ರಾದಿಸೇವ್ಯಜಯಅನಂತ ಜೀವಗ ಪ್ರಸನ್ವೆಂಕಟ ಕೃಷ್ಣಾ ಜಯ ಜಯ 32ಶರಣು ಮಂಗಳ ದೇವತೇವರಶರಣುಚಿತ್ಸುಖಸಾಗರಶರಣುಅಗಣಿತಗುಣಶುಭಾಕರಶÀರಣು ವೆಂಕಟ ಮಂದಿರ 4ದುರುಳದೈತ್ಯರು ಸೊಕ್ಕಿ ವರದಲಿಧರೆಗೆ ಕಂಬನಿ ತರಿಸಲುತ್ವರದಿ ಸುರರಿಗೆ ಮೊರೆಯನಿಟ್ಟಳುಧರಿಸಲಾರೆನು ಎನುತಲಿ 5ಸರಸಿಜೋದ್ಭವಭವಪುರುಹೂತರರಿದು ಚಿಂತಿಸಿ ಮನದಲಿವರಪಯೋನಿಧಿಗೈದಿ ಸ್ತುತಿಸಲುಕರುಣದಲಿ ಅವತರಿಸಿದೆ 6ಬಂದು ಧರ್ಮದ ವೃಂದ ರಕ್ಷಿಪೆನೆಂದು ದೀಕ್ಷೆಯವಿಡಿದು ನೀಅಂದಗೆಡಿಸುತ ದನುಜನಿಕರವಹೊಂದಿ ದ್ವಾರಕ ನಗರವ 7ಇಂದಿರೆಯು ನಿನ್ನಿಚ್ಛೆಯನುಸರದಿಂದ ಕ್ರೀಡಿಪಳನುದಿನÀಮಂದಜನರಿಗೆ ಮೋಹಿಸುತನರರಂದದಲಿ ತೋರಿದೆ ಹರೆ 8ದೇವಋಷಿ ನಾರದನು ಶ್ರೀಪದಸೇವೆಗÉೂೀಸುಗ ಕೊರವಿಯಭಾವದಲಿ ಜಗದಂಬೆ ರುಕ್ಮಿಣಿದೇವಿಯಳ ಬಳಿಗೈದು ತಾ 9ದೇವ ನಿನ್ನಯ ಬರವ ಬೆಸಸಿದಕೋವಿದತೆಯನು ಪೇಳುವೆಶ್ರೀವರ ಪ್ರಸನ್ವೆಂಕಟ ಕೃಷ್ಣಪಾವನ ಮತಿಯ ಕರುಣಿಸೊ 103ಶ್ರೀ ರಂಭೆ ಭೀಷ್ಮಕನಭೂರಿಪುಣ್ಯದ ಗರ್ಭವಾರಿಧಿಯಲ್ಲಿ ಜನಿಸಿನಾರಿ ರುಕ್ಮಿಣಿಯೆಂಬ ಚಾರುನಾಮದಿಕಳೆಯೇರಿ ಬೆಳೆದಳಂದವ್ವೆ 11ಜನನಿಜನಕರೆಲ್ಲ ತನುಜೆಯ ಹರಿಯಂಘ್ರಿವನಜಕೆ ಕೊಡಬೇಕೆನ್ನೆನೆನೆದು ತಾನೊಂದು ರುಕ್ಮನು ದಮಘೋಷನತನುಜಗೆ ತಂಗಿಯನು 12ಕೈಗೂಡಿಸುವೆನೆಂಬ ವೈಭವದಲ್ಲಿರೆವೈಮನಸದೊಳು ಕನ್ಯೆಯುಸುಯ್ಗರಿಯುತ ಮುರವೈರಿ ಪ್ರಸನ್ವೆಂಕಟಕೃಷ್ಣಯ್ಯನೊಳ್ ಮನವಿಟ್ಟಿರೆ 134ದನುಜಮಥನÀ ಹರಿಸೇವೆ ಇದೆಂದುಅನಿಮಿಷಮುನಿ ಧರೆಗಿಳಿದು ತಾ ಬಂದುವನಿತೆ ಕೊರವಂಜಿಯ ವೇಷವÀ ಧರಿಸಿಜನಪ ಭೀಷ್ಮಕನೋಪವನದಲ್ಲಿ ನೆಲಸಿ 14ಹಲವು ಕೊರವಿಯರ ಕೂಡಿ ಸಿಂಗರದಿಬೆಲೆ ಇಲ್ಲದುಡಿಗೆ ತೊಡಿಗೆ ಇಟ್ಟು ಮುದದಿಇಳೆಯ ಜನರು ಮೋಹಿಸುವಪರಿಇಹಳುಕೆಳದೇರ ಗಡಣದಲಿ ಚೆಲುವೆ ಒಪ್ಪಿದಳು 15ಮಂಜುಗಾವಿಯ ಸೀರೆ ನಿರಿತೆಗೆದುಟ್ಟುಕೆಂಜೆಡೆ ಬಿಟ್ಟೋರೆದುರುಬಿನ ಕಟ್ಟುಪಂಜಿನೋಲೆಯ ಮೂಗುತಿಯ ಬಲಿದಿಟ್ಟು ಗುಲಗಂಜಿ ಹೊಂದಾಳೆ ಸರಗಳಳವಟ್ಟು 16ಕಂಚುಕಪುಟ ಬಿಗುಪೇರಿದ ಕಟ್ಟುಚಂಚಲನೇತ್ರಕಂಜನ ಕಾವಲಿಟ್ಟುಮಿಂಚುವಾಭರಣಿಟ್ಟು ಪ್ರಸನ್ವೆಂಕಟ ಕೃಷ್ಣನಂ ಚಿಂತಿಸಿ ಜಯ ಜಯಯೆಂದಳುಕೊರವಿ175ಅಡಿಗಡಿಗೆ ಝಣ ಝಣರೆಂದು ನಡೆತಂದು ನಡೆತಂದುಮಡದಿ ರಾಜಬೀದಿಯಲಿನಿಂದು18ಮೃಡಗಹಿತನ ಪಟ್ಟದಾನೆ ಮಂದಗಮನೆ ಮಂದಗಮನೆಕಡುಮೌನಿ ಜನರ ಮೋಹಿನೆ 19ಚಪಲ ನೋಟಕೆ ನಾಗರಿಕರು ನೋಟಕರು ನೋಟಕರುಲಿಪಿಯ ಚಿತ್ರದೊಲು ನಿಂತಿಹರು 20ನಿಪುಣೆಕೊರವಿಶ್ರೀಪ್ರಸನ್ವೆಂಕಟ ಕೃಷ್ಣನ್ನ ಕೃಷ್ಣನ್ನಶ್ರೀಪ್ರÀ್ರಸಾದವ ಬೇಡುತಿದ್ದಳಣ್ಣ 216ಬೆಡಗಿನ ಗಮನದಿ ಎಡಬಲಕೊಲಿದುಕಡಗ ಶಂಖದ ಬಳೆ ನುಡಿಸುತ ನಡೆದುಅಡಿಗೊಮ್ಮೆ ತಿರುಮಲ ಒಡೆಯನ ನೆನೆದು ತಕ್ಕಡ ಧಿಗಿಧಿಮಿಕೆಂದುಜಡಿದುತಾಳ್ವಿಡಿದು22ತಿಗುರಿದ ಗಂಧ ಸೆಳ್ಳುಗುರಿನ ನಾಮಮೃಗಮದದ ಬೊಟ್ಟಿನ ನಗೆಮೊಗದ ಪ್ರೇಮಮಗುವನುಡಿಯಲೆತ್ತಿ ಜಗಚ್ಚರಿಯಮ್ಮಹೆಗಲ ರನ್ನದ ಬುಟ್ಟಿ ಮುಳ್ಳುವಿಡಿದಮ್ಮ 23ನಗರದ ಜನದ ಕಣ್ಣಿಗೆ ಕೌತುಕೆನಿಸಿಬಗೆ ಬಗೆ ಒಗಟು ಮಾತುಗಳನುಚ್ಚರಿಸಿನಗರಾಧಿಪತಿಯ ಮನೆಯಕೇಳಿನಡೆದುಮಿಗೆ ಪ್ರಸನ್ವೆಂಕಟ ಕೃಷ್ಣಗೆ ಕೈಮುಗಿದು 247ಬ್ರಾಹ್ಮರ ಕೇರಿಗೆ ಬಂದಳಾಕೊರವಿಪರಬ್ರಹ್ಮನ ಗುರುತ ಕೇಳುತ್ತನಮ್ಮಮ್ಮ ನಮ್ಮವ್ವೆ ನಮ್ಮಜ್ಜಿ ನೀಡೆಂದುಸನ್ಮಾನದಾಲಯವ ಪೊಗುತಾ 25ಇಂತಪ್ಪ ಸೊಬಗುಳ್ಳ ಕೊರವಿಯನು ಕಂಡುನೃಪನಂತಃಪುರದ ಸತಿಯರೈದಿಕಂತುವಿನ ಜನನಿಗೆ ಕರವೆರಡು ಮುಗಿದು ಏಕಾಂತ ಪೇಳಿದರು ಚೆನ್ನಾಗಿ 26ಓರ್ವ ಕಾಲಜ್ಞಾನ ಪೇಳ್ವ ಕೊರವಮ್ಮ ನಮ್ಮೂರ್ವಳಗೆ ತಿರುಗುತಿಹಳಮ್ಮಸರ್ವೇಶ ಪ್ರಸನ್ವೆಂಕಟ ಕೃಷ್ಣನಾಗಮದನಿರ್ವಚನ ಕರೆಸಿ ಕೇಳಮ್ಮ 278ಬಂದಳು ನೃಪನರಮನೆಗೆ ತಾನಿಂದಲ್ಲಿ ನಿಲ್ಲದೆ ಕಿಲಿಕಿಲಿ ನಗುತಾ ಕುಲು ಕುಲು ನಗುತಾ ಪ.ಬಂದ್ಹೇಳಿದ ನುಡಿಗೇಳ್ದು ಪೂರ್ಣೇಂದುವದನೆ ಮುದತಾಳ್ದುಮಂದಿರಕೆ ಕರೆಸಿದಳು ನಲವಿಂದಲಿ ಬಲು ಬೆಡಗಿನ ಕೊರವಂಜಿ 28ತಳಪಿನ ಮುತ್ತಿನ ಕಟ್ಟುಶುಭತಿಲಕದ ಹಚ್ಚೆಯ ಬಟ್ಟುಅಲುಗುವ ಮೂಗುತಿಯಬಲೆ ಸಲೆಬಳುಕುತ ಬಡನಡುವಿನ ಚಪಲೆ 29ಬಟುಗಲ್ಲದ ಮಕರಿಕಾಪತ್ರ ಪವಳದುಟಿ ದಾಡಿಮರದಗೋತ್ರವಿಟಮೃಗಸ್ಮರಶರ ನೇತ್ರ ಕೊರಳ್ದಟಿಸುವಮಣಿಮುತ್ತಿನ್ಹಾರಗಳೊಲಪಲಿ30ಇಟ್ಟೆಡೆ ಮೊಲೆಯ ಪಟ್ಟಿಕೆಯು ಶ್ರೋಣಿಮುಟ್ಟುವ ಮುಡಿಯ ಮಾಲಿಕೆಯುಬಿಟ್ಟ ಮುಂಜೆರಗಮಲಿಕೆಯು ಕಣ್ಣಿಟ್ಟ ಮೃಗಕೆ ಭ್ರೂಸ್ಮರಕಾರ್ಮುಕೆಯು 31ತೆಳ್ವೋದರದ ತ್ರಿವಳಿಯ ಜಗುಳಿಬೀಳ್ವ ಮಣಿಮುಕ್ತಾವಳಿಯಸಲ್ಲಲಿತ ಸಂಪಿಗೆ ಕಳೆಯ ಗೆಲ್ವಚೆಲ್ವೆಕೊರವಿಪುರವೀಥಿಯ ಬಳಿಯ32ಕಿಣಿ ಕಿಣಿ ರವದ ಕಿಂಕಿಣಿಯುಝಣ ಝಣತ್ಕಾರಿಪಂದುಗೆ ಮಣಿಯುಕಣಿ ಕಣಿ ಒಯ್ಯೆಂಬೊಕ್ಕಣಿಯು ಕುಚಕುಣಿ ಕುಣಿಸಿ ನಟಿಪ ನಡೆವಾಂಗನೆಯು 33ಸಿಂಗನ ಉಡಿಯಲ್ಲಿಕಟ್ಟಿಉತ್ಸಂಗದೊಳೊಲಪಿನ ದಿಟ್ಟಿರಂಗ ಶ್ರೀ ಪ್ರಸನ್ವೆಂಕಟ ಕೃಷ್ಣಾಂಗನೆಯನು ಕಾಂಬುವೆನೆಂಬ ತವಕದಿ 349ವಚನಪದುಮನಾಭನ ರಾಣಿ ರಾಣಿವಾಸದಲಿಯದುಕುಲೇಂದ್ರನ ಚರಣೋಚ್ಚಾರಣೆಯಲ್ಲಿರಲುಒದಗಿ ಬಂದಳುಕೊರವಿಕರೆಯುತ್ತ ತಾನುಚದುರ ಪ್ರಸನ್ವೆಂಕಟ ಕೃಷ್ಣನರಸಿಯನು 3510ಎಲ್ಲಿಹಳೆಲ್ಲ್ಲಿಹಳಾ ರಾಯನ ಮಗಳೆಲ್ಲಿಹಳೆ ನೀಡೆಯವ್ವನಲ್ಲೆ ಬಾ ನಲ್ಲೆ ಬಾ ನಲ್ಲೆ ಬಾ ರುಕ್ಮಿಣಿನಲ್ಲೆ ಬಾರೆ ಮುಂದಕವ್ವ 36ಬಲ್ಲೆ ನಾ ಬಲ್ಲೆ ನಿನ್ನಯ ಮನದೆಣಿಕೆಯಸೊಲ್ಲುವೆನೆ ನೀಡೆಯವ್ವನಿಲ್ಲದು ನಿಲ್ಲದಕ್ಕಿಯು ನಿನ್ನದ್ಹಸಿತ ಕೈಒಳ್ಳೆ ಕಜ್ಜಾಯ ನೀಡೆಯವ್ವ 37ಕೆಟ್ಟೋಗರಕೆ ಚಿತ್ತವಿಟ್ಟ ಕೊರವಿಯಲ್ಲಮೃಷ್ಟಾನ್ನವ ನೀಡೆಯವ್ವಶ್ರೇಷ್ಠಾದ ಶಾವಿಗೆ ಬಟ್ಟುವಿ ಪಾಯಸಹೊಟ್ಟೆ ತುಂಬ ನೀಡೆಯವ್ವ 38ಅಟ್ಟಿಟ್ಟ ಪಂಚವಿಧ ಭಕ್ಷ್ಯ ಎನಗಿಂದುಇಷ್ಟ ಕಾಣೆ ನೀಡೆಯವ್ವಇಷ್ಟುಣಲಿಕ್ಕೆನ್ನತುಷ್ಟಿಬಡಿಸಿ ಸತ್ಯಗೋಷ್ಠಿಕೇಳೆ ನೀಡೆಯವ್ವ39ಮನ್ನಣೆ ಇಲ್ಲದ ಮನೆಯ ಹೊಗುವಳಲ್ಲಕನ್ನೆ ಬಾರೆ ಮುಂದಕವ್ವಮುನ್ನ ರಕ್ಕಸನೊಯ್ದ ಮಡದಿಗೆ ಒಳಿತವನೆಲ್ಲ ಹೇಳಿದ್ದೆನವ್ವ 40ನಿನ್ನ ಪ್ರಾಣದ ಪ್ರಿಯನೊಬ್ಬನೆ ಪರದೈವಕನ್ನೆ ಕೇಳಜಕಾಮರವ್ವಕಣ್ಣಾರ ಕಾಂಬೆ ನಿನ್ನಣ್ಣನಪಾಟುಪ್ರಸನ್ನವೆಂಕಟ ಕೃಷ್ಣನಿಂದವ್ವ 4111ಚೂರ್ಣಿಕೆಈ ವಾಕ್ಯವಂಕೇಳಿತೀವಿ ತೋಷವ ತಾಳಿದೇವಿ ರುಕ್ಮಿಣಿಯಕ್ಕ ಪಾವನ ಹಾಸಂಗಿಯಿಕ್ಕಿಆವಲ್ಲಿಂ ಬಂದ್ಯವ್ವ ದೇವಲೋಕದ ಕೊರವೆಈ ಒಳ್ಳೆ ಮೆಚ್ಚು ಮಾತು ಆವಾಗನುಭವೆಂ ಮಾತೆಹೀಗೆಂದಾಸನ ಕೊಟ್ಟು ಬಾಗಿಲೊಳು ಕಾವಲಿಟ್ಟುಬೇಗ ಪ್ರಸನ್ವೆಂಕಟ ಕೃಷ್ಣನಾಗಮವ ಮನದಿ ಕೇಳ್ದಳವ್ವೆ 4212ಕುಳ್ಳಿರೆ ಕುಳ್ಳಿರೆ ಕುಳ್ಳಿರೆ ಕೊರವಂಜಿಫುಲ್ಲಬಾಣನಾನೆ ಕುಳ್ಳಿರೆಸೊಲ್ಲಮ್ಮ ಸೊಲ್ಲಮ್ಮ ಹಲವು ಮಾತಿನ ಜಾಣೆಎಲ್ಲ ಬಯಕೆಯನೆಲ್ಲ ಸೊಲ್ಲಮ್ಮ ಕೊರವಂಜಿ 43ಆದರದಾ ಮಾತ ಕೇಳುತ ಕುಳಿತಳುಯಾದವರರಸ ಮುಕುಂದನಕೋದಂಡಪಾಣಿ ತಿರುವೆಂಗಳ ಮೂರ್ತಿಯಪಾದಕೆ ಮಾಡಿದಳೊಂದನೆ ಕೊರವಂಜಿ 44ಮಣಿಮಯ ಬುಟ್ಟಿಯ ಎಡದಲಿಟ್ಟುಕೊಂಡುವನಿತೆ ಪದ್ಮಾಸನವಿಟ್ಟಳುಮಿನುಗುವ ಎಳೆನಗೆಯಣುಗನ್ನ ಮಲಗಿಸಿವನಿತೆ ರುಕ್ಮಿಣಿಯನ್ನು ಕರೆದಳು ಕೊರವಂಜಿ 45ಜಾಣೆ ಬಾರೆ ಸುಗುಜಾಣೆ ಬಾರೆ ನಾರಿಮಾಣಿಕಳೆಕಟ್ಟಾಣಿಬಾರೆವಾಣಿಪತಿಪಿತ ಪ್ರಸನ್ವೆಂಕಟ ಕೃಷ್ಣನರಾಣಿ ಬಾರೆಸುಪ್ಪಾಣಿಬಾರೆ ಕಲ್ಯಾಣಿ ಬಾರೆ ಫಣಿವೇಣಿ ಬಾರೆಶುಭಶ್ರೋಣಿ ಬಾರೆ ಎಂದು ಕರೆದಳು ಕೊರವಂಜಿ 4613ವಚನಅಮ್ಮ ರುಕ್ಮಿಣಿಯಮ್ಮ ಉಮ್ಮ್ಮಯವಟ್ಟುಮುಮ್ಮೊರದ ರತುನ ಮುತ್ತಿನ ಕಾಣಿಕಿಟ್ಟುಪರಬೊಮ್ಮಪ್ರಸನ್ವೆಂಕಟಕೃಷ್ಣನ ಅಡಿಗಳನಮ್ಮಿಸುತ ಮನೋರಥವÀ ಮನದಿ ಬೆಸಗೊಳ್ಳಲು 47ಉಂಡ ಊಟ ಕಂಡ ಕನಸು ಪುಂಡರೀಕಾಂಬಕಿಯೆತಂಡ ತಂಡದ ವಾರುತೆಗಳ ಪೇಳುವೆನು ಸಖಿಯೆಹಿಂಡುದೈವದಗಂಡಪ್ರಸನ್ವೆಂಕಟ ಕೃಷ್ಣನ ಕಣ್ಣಾರಕಂಡು ಸಾರುವಕೊರವಿಎಳ್ಳನಿತು ಸಟೆಯರಿಯೆ4815ಚೂರ್ಣಿಕೆಕಾಸಿನಾಸೆಯವಳು ನಾನಲ್ಲಭಾಷೆ ಹುಸಿದರೆ ಬಿರುದು ಬಿಸುಡುವೆನೆಲ್ಲಭಾಷೆ ಪಾಲಕರು ನಮ್ಮ ಸಿದ್ಧರೆಲ್ಲ ಲೇಸುಲೇಸೆಂದುಕೇಸಕ್ಕಿತಿಮ್ಮಯ್ಯನ ಬೆತ್ತವ ಮುಟ್ಟೆಲೆ ದುಂಡೆಎನ್ನ ಮನದ ದೈವ ಎನ್ನಕ್ಕ ಕೇಳೆಯವ್ವತಿರುಮಲೆ ತಿರುವೆಂಗಳಯ್ಯವರಅಹೋಬಲ ನರಸಿಂಗಯ್ಯಹರಿಕಂಚಿ ವರದರಾಜಯ್ಯಶಿರಿ ರಂಗದ ರಂಗರಾಯಯ್ಯಬದರಿಯ ನರನಾರಾಯಣಯ್ಯಪುಂಡರೀಕವರದ ಪಂಢರಿರಾಯ ಎಮ್ಮಉಡುಪ ಕುಲಜ ಮನ್ನಾರು ಕೃಷ್ಣಮ್ಮಒಡ್ಡಿಜಗನ್ನಾಥ ಅಲ್ಲಾಳನಾಥಯದುಗಿರಿನಾಥ ಶಿರಿಮುಷ್ಣನಾಥಕೃತಪುರದ ವೀರ ನಾರಾಯಣಕೊಲ್ಲಾಪುರದ ಕನ್ನೆ ವೇಲಾಪುರದ ಚೆನ್ನಅನಂತಶಯನ ಜನಾರ್ದನ್ನಅನವರತಪರಸನ್ನ ವೆಂಕಟ ಕೃಷ್ಣನ ಕನ್ನೆಇಂತಪ್ಪಾನೇಕ ದೈವ ಏಕವೆಂದು ಏಕಾನೇಕವೆಂದುನಂಬಿಪ್ಪೆನೆ ಕೇಳೆಯವ್ವ 4916ಇಂತಿಪ್ಪ ಎನ್ನ ಮನೆಯ ದೈವ ಅವರಂತವ ಬೊಮ್ಮರರಿಯರವ್ವ ವಿಶ್ರಾಂತಿಲಿ ಕೊಂಡಾಡುವೆನವ್ವ ನಾನುಕಂತುವಿನಣ್ಣನ ಮಗಳವ್ವ 50ಇಪ್ಪಲ್ಲಿಪ್ಪಕೊರವಿನಾನಲ್ಲ ಹೋಗಿಬಪ್ಪೆ ಹದಿನಾಲ್ಕು ಲೋಕಕೆಲ್ಲಛಪ್ಪನ್ನದೇಶಗಳ ಸುದ್ದೀನೆಲ್ಲಕೇಳಿಬಪ್ಪುವ ಕಜ್ಜವ ಕೃಷ್ಣ ಬಲ್ಲ 51ಆವಾವ ದೇಶದ ಸುದ್ದಿ ಕೇಳವ್ವ ನಿನ್ನಭಾವದ ಬಯಕೆಯನೆಲ್ಲ ಕೇಳವ್ವಶ್ರೀವರ ಪ್ರಸನ್ನವೆಂಕಟಾದ್ರಿ ಕೃಷ್ಣ ದ್ವಾರಕಿಂದಾವಾಗ ಬಪ್ಪನೆಂದು ಕೇಳವ್ವ 5217ಚೂರ್ಣಿಕೆಓಯಮ್ಮ ನಿನ್ನವರುಗಳು ಆ ಬಲಮಗು ಮದನಕಾಮಬುಡುಕ್ಕಾನೆ ಪರತಾನು ಚಿಂತಿಶೆ ಮಾಣಮ್ಮನಾ ತಿರುಕ್ಕಿ ವಂದ ದೇಶ ಐವತ್ತಾರು ಶೊಲ್ಲರೆಅಂಗ ವಂಗ ಕಳಿಂಗ ಕಾಂಬೋಜ ಭೋಟಕರ್ನಾಟಕ ಘೋಟ ಮಹಾಘೋಟಜಿನ್ನ ಮಹಾಜಿನ್ನ ಜೊನ್ನಗಕಾಶ್ಮೀರ ತುರುಷ್ಕಮಾಗಧಬಂಗಾಳ ಗೌಳ ಮಾಳವ ಮಲೆಯಾಳನೇಪಾಳ ಗೌಡ ಗುರ್ಜರ ಕೊಂಕಣದರ್ದುರಬರ್ಬರ ಸೌರಾಷ್ಟ್ರ ಮಹಾರಾಷ್ಟ್ರಸಂಬರ ಮುಂಗಿಳ ಘೋಟ ಮುಖಏಕಪಾದ ಸೌಳ ಸಂಸಾಳಕಆನರ್ತ ಹಮ್ಮೀರ ಕೊಮ್ಮೀರಮತ್ಸ್ಯಪಾಂಚಾಲರಾಜಶೇಖರ ವರಶೇಖರ ಯುಗಂಧರ ಮಧ್ಯದೇಶಲಂಬಕರ್ಣ ಸ್ತ್ರೀರಾಜ್ಯ ಆಂಧ್ರ ದ್ರವಿಡಅರವ ಕನ್ನಡ ತುಳುವ ತುಳಾಂಡಜಾಳೇಂದ್ರ ಕೈಕೇಯ ಕೌಸಲ ಕಂಚಿಕನೋಜ ಸವ್ವೀರಸಿಂಧುಕೇರಳವೈದರ್ಭ ದೇಶದೊಳ್ಕುಂಡಿನಾಪುರದೊಳ್ ನಿನ್ನಂ ಕಂಡುಮನದಂಡಲಿಕೆಗೆ ಸಾಗಿತ್ತೆನೆಲೆ ದುಂಡೆ 5318ಈ ನಾಡ ಚರಿಸಿ ನಿನ್ನರಸುತ ಬಂದೆನೆಜಾಣೆ ಬಂಗಾರವ್ವ ಕೈ ತೋರೆ 54ನಿನ್ನ ಕಾಣುತ ಹಸಿವೆ ನೀರಡಿಕೆಲ್ಲ ಹೋಯಿತುಜಾಣೆ ಬಂಗಾರವ್ವ ಕೈ ತೋರೆ 55ಸಂಧಾನಕ್ಹಾರುವನಟ್ಟಿದ್ದೆ ಮೊದಲಹುದೇನೆ ಮಂಗಳದೇವಿ ಕೈ ತೋರೆ 56ನೀ ಬರೆದೊಕ್ಕಣೆ ಯದುರಾಯನರಿತಾನುಸೌಭಾಗ್ಯವಂತೆ ಕೈ ತೋರೆ 57ರಥವನೇರಿಕೊಂಡು ಬರಹ ನೋಡಿಕೊಳ್ವಜಾಣೆ ಬಂಗಾರವ್ವ ಕೈ ತೋರೆ 58ಧ್ಯಾನದ ಕಳವಳ ಮುಸುಡುಗಂಟಿನ ಚಿಂತೆಮಾಣು ಮಂಗಳದೇವಿ ಕೈತೋರೆ 59ತ್ರಿಭುವನೇಶ ಪ್ರಸನ್ನವೆಂಕಟ ಕೃಷ್ಣತಾ ಬಹನೆಲೆ ದುಂಡಿ ಕೈ ತೋರೆ 6019ಚೂರ್ಣಿಕೆಎಲೆಲೆ ಎಳೆವೆಂಗಳೆ ಎಲೆ ಹುಲ್ಲೆಗಂಗಳೆಮಹಾಭೂಷಣದ ಮಾರುವೇಣಿ ಮಡದಿಯರಸುಪ್ಪಾಣಿಕೀರವಾಣಿ ಕಿಸಲಯಪಾಣಿಕಂಧಿಜ ಬಿಂಬವದನೆ ಕುಲಿಶಮಣಿರದನೆಮದನಕಾರ್ಮುಕೋಪಮ ಭ್ರೂಲತೆಯಳೆ ಮಹಾಲಕುಮಿಯಳೆಅರುಣವಿಧ್ರುಮಾಧರೆ ಅಬ್ಜಜಾ ಕಂಧರೆಅರ್ಧಚಂದ್ರನ ಪೋಲ್ವಡಿ ಪಣೆಯಳೆ ಅನಘ್ರ್ಯ ಚೂಡಾಮಣಿಯಳೆಸಿಂಧೂರಸೀಮಂತಿನಿಯೆಸಿರಿತಿಲಕದ ಶೋಭಿನಿಯೆನುಣ್ಗದಪುನಾಸಿಕಮಣಿಯಳೆ ನೂತನೊಜ್ರದೋಲೆಯಳೆನಿಷ್ಕ ಕಂಠಾಭರಣೆಯಳೆ ನಿತ್ಯಮಂಗಳ ಸೂತ್ರಿಯಳೆನಿಡುಜಾಲಕ ಮಾಲೆಯಳೆಬುಗುಡಿ ಚಳತುಂಬು ಕೊಪ್ಪಿನ ಕಿವಿಯಳೆಬಾವಲಿ ನಾಗೋತ್ರ ಪೊಂಬರಳೆಲೆ ಲಲಿತ ಬಾಹುಲತೆಯಳೆಲಸತ್ವನಜಕೋರಕ ಸ್ತನಿಯಳೆಕಡು ತೆಳ್ವೋದರಿ ನಿಮ್ನ ನಾಭಿಯಳೆಕಂಠೀರವಕಟಿಯಳೆ ಕರಭೋರು ಯುಗಳೆಯಳೆಅಪರಂಜಿಕಂಚುಕಾಂಬರ ಉತ್ತರೀಯಳೆಅಮೂಲ್ಯ ಕಾಂಚಿದಾಮಾಂಕಿತಳೆಬಟುಗನ್ನಡಿ ಜಾನುದ್ವಯಳೆ ಬ್ಞಣ ಪಂಚಕನ ಬತ್ತಳಿಕೆ ಜಂಘೆಯಳೆಕೋಮಲತರಾಂಘ್ರಿ ಸರಸಿಜಯುಗಳೆನೀಲಪಚ್ಚ ಪದ್ಮರಾಗ ಹೀರ ಮುತ್ತಿನ ಪೆಂಡೆಯಳೆಕಾಲಂದಿಗೆ ಮೆಂಟಿಕೆ ವೀರಮುದ್ರೆ ಕಿರಿ ಪಿಲ್ಲಿಯಳೆಮಣಿಮಯಾಂಗುಲ್ಯದ ವಲಯಾಭರಣೆ ಮದಗಜಗಮನೆಪ್ರತಿಯಿಲ್ಲದ ರನ್ನದ ಬೊಂಬೆ ಪರಬೊಮ್ಮನ ಪಟ್ಟದ ರಂಭೆಬಾಬಾ ತಾತಾ ಎಂದು ವಾಮಕರವಬೇಡಲಿತ್ತಳಾ ರುಕ್ಮಿಣಿ ತಾಯಿ 6120ಜಗದ ನಾರಿಯರ ಕೈಗಳ ಕಂಡೆನವ್ವಮೃಗಮದಗಂಧಿ ನಿನ್ಹೋಲ್ವರಿಲ್ಲವ್ವ 62ಯುಗಯುಗಾಂತರ ದೇಶ ದೇಶದಲ್ಲವ್ವಅಗಲ್ಯಾಟವಿಲ್ಲ ನಿನ್ನರಸ ನಿನಗವ್ವ 63ಸವತೇರು ಬಹಳುಂಟು ನೆಂಟರ ಜಾಣೆ ಎಲೆ ಬೀಗರ ಸುಗುಣೆಯುವತಿ ಪ್ರಸನ್ವೆಂಕಟ ಕೃಷ್ಣ ನಿನ್ನ ಪ್ರಾಣ 6421ಕಣಿ ಕೇಳೆ ಕಣಿ ಕೇಳೆ ಕಣಿ ಕೇಳೆ ಚೆಲ್ವೆಕಣಿ ಕೇಳೆ ನಿನ್ನ ಮನದಾ ಮಾತ್ಹೇಳ್ವೆಎಣಿಕೆಗೊಳ್ಳದಿರಮ್ಮಇಂದುನಾಳೆಂದುಗುಣನಿಧಿ ಗೋಪಾಲ ಬಹ ದಯಾಸಿಂಧು 65ತ್ರುಟಿಯುಗವಾಗಿದೆ ನಿನಗೀಗ ಮುಗ್ಧೆಕುಟಿಲಮಾಗಧಸಾಲ್ವ ನೆನೆವ ದುರ್ಬುದ್ಧೆಘಟಿಸದೆಂದಿಗೆ ಖಳರ ಮನೋರಥ ಸಿದ್ಧೆದಿಟವೆನ್ನವಾಕುಸುರಲೋಕ ಪ್ರಸಿದ್ಧೆ66ಹಿಂದೊಮ್ಮೆ ಖಳರು ಗೋವಿಂದ ಬಂದಾಗಮಂದಮತಿಯಲಿ ಮನ್ನಿಸದಿರಲಾಗಇಂದ್ರ ಸಿಂಹಾಸನವ ಹರಿಗೆ ಕಳುಹಿಸಿದವೃಂದ ದೈತ್ಯರಿಗೆಲ್ಲ ಭಯವ ಸೂಚಿಸಿದ 67ಜಂಭಾರಿಕುಲಿಶಕಂಜುತ ಪೋಕರೆಲ್ಲಥಂಬಿಸಿದರು ವಾಗಾಡಂಬರವೆಲ್ಲಅಂಬುಜಾಕ್ಷಗೆ ನಿನ್ನತಾತಪೂಜಿಸಿದಅಂಬುಜನಾಭ ತನ್ನೊಳುವಿಶ್ವತೋರ್ದ68ಅದನೆಲ್ಲ ಬಲ್ಲ್ಯವ್ವ ಹರಿಯ ನಿಜನಲ್ಲೆಬೆದರಿದೊಲ್ಲೋರ್ವ ನಿನ್ನ ಮಾಯವ ಬಲ್ಲೆಪದುಮಜ ಭವರ ಹೃದಯಾಬ್ಜ ನಿಯಂತ್ರೆಉದಧೀಶನಾಜÕದಿ ಸರ್ವಸ್ವತಂತ್ರೆ 69ಕೇಳಮ್ಮ ನಿನ್ನ ಹೆತ್ತವರಿಗೆ ನಿನ್ನಮೇಲೆ ಹಂಬಲ ಬಹಳ ಪಾಪಿ ನಿಮ್ಮಣ್ಣಆಲೋಚನೆಯಿಲ್ಲದೆ ನಿಶ್ಚೈಸಿದ್ದಾನೆ ಶಿಶುಪಾಲಗೆ ನಿನ್ನ ಕೊಡುತೇನಂತೈದಾನೆ 70ಆಗಲ್ಯಾಕವನಿಂದಲೀಕಜ್ಜ ಬುರ್ರಾಬೇಗ ಭೀಷ್ಮಕನಂತರ ಬಲ್ಲ ಶ್ರೀಧರ್ರಾಸಾಗರಶಯನ ತಾ ಸಮಯಕೈತರುವನೇಗಿಲಧರನು ಕೃಷ್ಣನ ಕೂಡ ಬರುವ 71ಆ ಗೌರಿ ಮೌನಿಯೆಂಬುವಳ ಪೂಜೆಯಲಿಯೋಗವಾಗಿದ್ರ್ದಾ ಕಾಪುರುಷ ಸಭೆಯಲ್ಲಿಮೇಘಮುಸುಕಿರ್ದ ಚಂದಿರನಂತೆ ನಿನ್ನಯೋಗೇಶ ಪ್ರಸನ್ವೆಂಕಟ ಕೃಷ್ಣ ನೊಯ್ವ ಚೆನ್ನ 7222ಇನಿತೆಲ್ಲ ಕೊರವಂಜಿಕರವಪಿಡಿದು ಹೇಳಿಕ್ಷಣ ಕ್ಷಣಕೊಡೆಯನ ಹೊಗಳಿನೆನಪಿಗೆ ಬೆಸಗೊಂಬೆ ಕಾಲಜ್ಞಾನದ ವಾರ್ತೆಎನಗೆ ತಿಮ್ಮಯ್ಯ ಹೇಳೆಂದು 73ಶ್ರೀ ರುಕ್ಮಿಣಿಯ ಮನದುಲ್ಲಾಸವನೆಲ್ಲಪೂರೈಸುವೆನೆಂಬ ನುಡಿಯತೋರು ಎನ್ನಯ ನಾಲಿಗೆಯಿಂದಲುಸುರುವೆವೀರ ದ್ರಾವಿಡ ವೆಂಕಟಯ್ಯ 74ಶರಣ್ಯೆಲೆ ಸತ್ಯನೆ ಶರಣ್ಯೆಲೆ ನಿತ್ಯನೆಶರಣು ಶರಣು ನಿತ್ಯಮುಕ್ತಶರಣು ಪರೇಶನೆ ಶರಣು ಅವಿನಾಶನೆಶರಣು ಪ್ರಸನ್ವೆಂಕಟ ಕೃಷ್ಣ 7523ವಚನಓ ರುಕ್ಮಿಣಿ ತಾಯಾರೆಉನ್ನ ಮನಸಿಲೆ ನಿನೈಚ್ಚ ಕಾರ್ಯಂ ಕೈಕ್ಕೂಡಿನಾಲ್ಎನಕ್ಕೆ ಎನ್ನ ಸಂತೋಷಂ ಪಣ್ಣಿರಾಯ್ಓಯಮ್ಮ ಉನ್ ಪ್ರಾಣನಾಯಗನ್ ಶ್ರೀಕೃಷ್ಣನ್ ವಂದುಪೊಟ್ಟಣೆ ಕೈ ಪಿಡಿಚ್ಚಿ ಕಲ್ಯಾಣಂ ಪಣ್ಣಿಕೊಳ್ಳರಾಂಇಂದ ವಾರ್ತೆ ತಪ್ಪಿನಾಲ್ ನಾಂ ಕೊರ್ತಿಯೇ ಅಲ್ಲೆಉನ್ ತಮಯನ್ ರುಗ್ಮಂ ವೇಕ್ಕತ್ತೆ ಕೊಲ್ಲರಂ ವರಾನುಓಯಮ್ಮ ಇಂದ ವಾರ್ತೆಯೈ ಪಣ್ಣಿಕೋ ಅª, À್ಮು 7624ಮದ್ಯಪಾನಿತಾಮಸಯವನನ ಕೊಲಿಸಿದನೆನಿದ್ರೆಗೈವ ರಾಯನಿಂದಲಿಸದ್ದಿಲ್ಲದೆ ಮಧುರೆ ಜನರ ಸಾಗರದಮಧ್ಯ ದ್ವಾರಕೆಯಲ್ಲಿಟ್ಟನೆ 77ಯವನ ಸೈನ್ಯಜಲಧಿಬತ್ತಿಸಿ ಸಾಲ್ವಾದ್ಯರಹವಣಮುರಿದು ನಿಜರ ಹೊರೆವನು ನಿನ್ನವಿವಹ ಮಾಳ್ಪೆನೆಂಬ ಮಾಗಧನು ಚೈದ್ಯ ತನ್ನಕುವರನೆಂದು ಮಾನವಿಡಿದಿಹ 78ಇನಿತರೊಳು ರಂಗರಾಯನು ಮೋಹರದಿಮಣಿರಥವನೇರಿ ಬಹನುವನಿತೆ ನಿನ್ನಂದಣವ ನೋಡುತ ಜಿಗಿವನಲ್ಲಿಂದ ಘನತರ ಮೃಗೇಂದ್ರನಂದದಿ 79ನರಿಯ ಹಿಂಡಿನೊಳಗಿನಾನೆಯ ಒಯ್ವ ತೆರದಿಹರಿನಿನ್ನಪ್ಪಿಕೊಂಡುಹಾರುವಗರುಡನಮೃತ ಕಲಶವ ಸುರರ ಗೆದ್ದುಹರುಷದಿಂದೊಯ್ಯುವಂತೆ ಒಯ್ವನು 80ಸರಸಿಯಾಬ್ಜ ಹಂಸ ಒಯ್ವವೋಲ್ ಪರಮಪುರುಷತ್ವ, ರಿಯ ತನ್ನ ರಥಕೆ ಒಯ್ವನೆಬರಿಯ ದುಗುಡವ್ಯಾಕೆ ಬಾಲಕಿಪ್ರಸನ್ವೆಂಕಟ ಕೃಷ್ಣ ನಿನ್ನ ಮೆಚ್ಚುಗಾರನೆ 81ಬಂದನೆಂಬ ನುಡಿಯು ಬರುತಿದೆಜವದಿಕೃಷ್ಣಬಹನೆಂಬ ನುಡಿಯು ಬರುತಿದೆ 8225ಚೂರ್ಣಿಕೆನೀಡೆಯವ್ವ ಎನ್ನ ಮನೆ ಗಂಡನ ಕಾಟ ಘನ್ನವವ್ವಕ್ಷಣಕೈದು ನಡೆಯವನವ್ವಒಮ್ಮಾನ ತಿರಿತಂದರೆ ಇಮ್ಮಾನ ಬೇಡುವನವ್ವಚೆಂಬಣ್ಣ ಕರಿಬಿಳಿಯಬಟ್ಟೆನಮ್ಮತ್ತೆಗಳವ್ವಆರು ಮಂದಿ ಗಂಡನ ಗೆಳೆಯರವ್ವಏಳು ಪದರು ಮೂರು ತ್ಯಾಪೆ ಗುಡಲುಂಟವ್ವಎಪ್ಪತ್ತೆರಡು ಸಾವಿರ ನುಲಿಯ ಸಿಂಬಿಗಳವ್ವಗುಡಲೊಳು ಮೂರು ಒಲೆಯುಂಟವ್ವಗುಡಲು ಬಿದ್ದರೆ ನುಲಿಗೆ ಮಾರ್ಯೆವ್ವಒಂಬತ್ತು ಗುದ್ದಿನೊಳಗೆ ಹತ್ತು ಹೆಗ್ಗಣದೋಡ್ಯಾಟವವ್ವಕೊರವನ ಕೈಯಿಚ್ಛೆ ಮೂರು ನಾಯಿಗಳವ್ವಎಣಿಕಿಲ್ಲದ ಕುತ್ತಗಳುಂಟವ್ವಕೊಬ್ಬಿನ ಸವತೇರೆಂಟು ಮಂದಿ ಕೊರವಗೆ ಮಚ್ಚೂಡುವರವ್ವಸಂಸಾರದಲೆಳ್ಳನಿತು ಸುಖವಿಲ್ಲವ್ವಅತ್ತೆಗಳಾಟ ಗಂಡನ ಬ್ಯಾಟ ಸವತಿಯರ ಕಾಟನೆರೆಹೊರೆಯವರ ನೋಟ ಮನೆಯ ಮಾಟಗತರಸದೂಟಕಂಜಿ ನಡುನಡುಗಿಮೂರೂರ ಹಾದಿ ಮೆಟ್ಟಿ ಬಂದುಆರೂರರಸಿನ ಮೊರೆ ಹೊಕ್ಕೆನೆಯವ್ವವಿದರ್ಭದೇಶದ ಕುಂಡಿನಾಪುರದೊಳು ನಿನ್ನ ಗುರುತಕೇಳಿಉಪವನದ ಪ್ರದ್ಯೋತನಾಳ್ವ ಎರಡು ಬಾವಿಯ ಮ್ಯಾಗಣಹೂವಿನ ತೋಟದ ನಡುವೆ ಬುತ್ತಿಯನುಂಡು ನಿನ್ನ ಕಂಡುಕುಂತಳಾಪುರದಲ್ಲಿ ಕುಳಿತುಂಬಬ್ರಹ್ಮಾನಂದದವರ ಭಾಗ್ಯವ ಬೇಡ ಬಂದೆನೆ ಅವ್ವಅಸುವಿಗೆ ಹಾಲನೆರೆಯವ್ವಶಿಶುವಿಗೆನವನೀತನೀಡೆಯವ್ವಬಂಗಾರೆವ್ವ ಸಿಂಗಾರೆವ್ವ ಸೋರ್ಮುಡಿಯವ್ವಮಲ್ಲಿಗೆದುರುಬು ಸಂಪಿಗೆದುರುಬುಪಚ್ಚೆ ಮರುಗ ಮುಡಿವಾಳ ಶಾವಂತಿಗೆ ತುರಬಿನವ್ವಪ್ರಸನ್ವೆಂಕಟಕೃಷ್ಣನ ತೋಳ್ತಲೆಗಿಂಬಿನವ್ವ ನೀಡೆಯವ್ವ 8326ವಚನಇಂತಾಧ್ಯಾತ್ಮವಂ ಪೇಳಿಕಂತುವಿನಯ್ಯನ ಕಾಂತೆಯಂ ಸಂತಸಪಡಿಸಿಅಂತರಂಗದಿ ಚಿಂತಾಯಕನಂ ನೆನೆನೆನೆದುಭ್ರಾಂತಿ ಪರವಶಾದಂತೆ ಕೆಂಜೆಡೆಯಂ ತೂಗಿ ತೂಗಿಅಂತದತ್ಯಂತ ತೂಳಂತುಂಬಿಇಂತೆಂದಳಾ ಕೊರವಂಜಿ 8427ಬರುತಾನೆ ಜಾಣೆ ಬರುತಾನೆಬರುತಾನೆ ಚೆಲ್ವೆ ಬರುತಾನೆ 85ಹಿಂಡುಭಂಡರೆಲ್ಲ ಕೂಡಿ ನಿನ್ನ ಮುಚ್ಚಲು ಎತ್ತಿಕೊಂಡು ಒಯ್ವ ಜಾಣ ಬರುತಾನೆಪುಂಡರೀಕಸುರಗಿ ಖಡ್ಗ ಭಿಂಡಿವಾಲ ನುಗ್ಗುಮಾಡಿದಂಡಿಸುವ ಜಾಣ ಬರುತಾನೆ 86ಕುಂಡಿನಾಪುರದಿ ನೆರೆದ ಕೊಂಡಿ ಕುಹಕರ ತಲೆಯಚಂಡನಾಡ್ವ ಜಾಣ ಬರುತಾನೆಮಂಡೆಯಲ್ಲಿ ಪಚ್ಚಚೂಡವಿಟ್ಟು ರುಕ್ಮನಭಿಮಾನಕೊಂಡೇನೆಂಬ ಜಾಣ ಬರುತಾನೆ 87ತಂಡ ತಂಡದಲ್ಲಿ ನಿನ್ನಯ್ಯನ ಸದ್ವಾಸನನ್ನಉಂಡೇನೆಂಬ ಜಾಣ ಬರುತಾನೆಲೆಂಡದಾನವಾರಿ ಪ್ರಸನ್ನವೆಂಕಟಕೃಷ್ಣ ಬೊಮ್ಮಾಂಡಪತಿ ಜಾಣ ಬರುತಾನೆ 8828ಚೆನ್ನೆ ಕೊರವಂಜಿ ಮಾತು ಶ್ರೀಕನ್ಯೆಕೇಳಿನಲಿವಾಂತುಮನ್ನಿಸಿ ಗುಣವ ಕೊಂಡಾಡಿ ಮುಕ್ತಿರನ್ನಗಾಣಿಕೆಯನು ನೀಡಿ 89ಎಲೆ ಸತ್ಯಲೋಕದ ಕೊರವೆ ನೀಬಲು ಸತ್ಯ ನುಡಿದೆ ನಾನರಿವೆಛಲದಂಕ ದೇವರದೇವ ಈಖಳರೊಳು ಒಯ್ವುದರಿದವ್ವ 90ಹರಿರಥವೇರಿ ಬಾಹೋಣ ಕಾಪುರುಷರ ಮತ ಕೆಡಿಸೋಣಗುರುಪ್ರಸನ್ವೆಂಕಟ ಕೃಷ್ಣ ಬಂದುಹೊರೆವುದುಂಟೇನವ್ವ ರಮಣಿ 9129ನಂಬಲೇನೆ ನಿನ್ನ ಮಾತು ಕೆಳದಿ ಕೊರವಮ್ಮ ನಮ್ಮಂಬುಜಾಕ್ಷ ಬಾಹನೇನೆ ದೇವಿ ಕೊರವಮ್ಮ 92ಉಡಿಯ ಕಂದನಾಣೆ ಇಡುವೆ ನಂಬೆ ರುಕ್ಮಿಣಿ ನಾನುಡಿವ ನಾಮದಾಣೆ ಇಡುವೆ ನಂಬು ರುಕ್ಮಿಣಿ 93ಎಡದ ತೋಳು ತೊಡೆಕಂಗಳುಹಾರಲೊಳಿತೇನೆ ಚಿಲಿಪಿಲಿನುಡಿವಶಕುನಎಡದ ಗೌಳಿಯ ನುಡಿಯು ಒಳಿತೇನೆ94ಕಡಲಶಯನ ನಿನ್ನ ಪ್ರಾಣದೊಡೆಯ ಬಪ್ಪನೌ ಎನ್ನಪಡೆದನಯ್ಯ ಪ್ರಸನ್ನವೆಂಕಟಕೃಷ್ಣ ತಪ್ಪನೌ 9530ನಿನ್ನಗಂಡಬೆಣ್ಣೆಗಳ್ಳ ಕನ್ನೆಗೊಲ್ಲತಿಯರ ನಲ್ಲಕಣ್ಣೆವೆ ಸನ್ನೆಗಾರ ನಂದಗೋಪ ಕುಮಾರ 96ಚಿನ್ನತನದಿ ದಶಲಕ್ಷ ಚಿನ್ನರ ಪಡೆದನು ದಕ್ಷಪೊನ್ನ ಕೊಳಲನೂದಿ ಮೂಜಗವ ಮೋಹಿಸುವ 97ಉನ್ಮತ್ತಮಾತುಳನ್ನ ತುಳಿದ ತನ್ನ ಪೆತ್ತವರೆಡರ್ಗಳೆದಮನ್ನಿಸಿ ಪಾಂಡವರÀ ಪೊರೆದ ಚಿನ್ಮಯ ಸುಖದ 98ಪೆಣ್ಗಳ್ ಹದಿನಾರುಸಾವಿರದ ನೂರೆಂಟನಾಳ್ವ ಚದುರನಿನ್ನ ಪ್ರಾಣ ಪ್ರಿಯ ಬಂದ ಪ್ರಸನ್ನವೆಂಕಟ ಕೃಷ್ಣ ಮುಕುಂದ 9931ನುಡಿ ನುಡಿಯೆಲೆ ಬಡನಡುವಿನ ಮಡದಿ ನಿನ್ನುಡಿಗುಚಿತವಕೊಡುವೆನಡಿವಿಡಿವೆ ಮನವಿಡುವನೆ ಕಡಲೊಡೆಯ ಕೈವಿಡಿವನೆ ಎನ್ನ ಕಡೆಯ ನೋಡಿ ನುಡಿವನೆ ಸವಿನುಡಿಯಕಡು ಬಲಿಭುಜ ಗಡಣಂಗಳ ನಡುವ್ಹಂಸನಪಡಿಮಿಡುಕುವೆನುಡಿ ಬೇಗೆಂದು ಪಡೆಗೂಡಿ ಹಲಿಯೊಡನಾಗಮ ನುಡಿಯೇ ನಿನ್ನುಡಿಗಮೃತವ ಪಡೆಯೇ ಮತ್ತೀಜಡಜಡಿ ಲೋಕೊಡೆಯೆ ಪ್ರಸನ್ನವೆಂಕಟ ಕೃಷ್ಣರಾಯನನುಡಿಯೆಲೆ ನುಡಿನುಡಿಯೆ ನುಡಿನುಡಿಯೆ 10032ಹರಿಬರುತಾನೆ ಗುರುತು ಗಂಟ ಕಟ್ಟೆಪಕೇಳೆ ನರಸಿಂಗನಂಗನೆಯನೊಯಿದು ಕೆಟ್ಟನರಿಗಳಾಳಬಲ್ಲವೇನೆ ನಲಿದು ನೀನುದುರುಳರಿಗೆ ದಕ್ಕಬಲ್ಲ್ಯೇನಮ್ಮ ನಿನ್ನಾಚರಣೆಯೆಲ್ಲ ಜಗದ್ವಿಡಂಬನಮ್ಮ 101ನನ್ನ ತರಳನಾಣೆ ಸಟೆಯನಾಡೆನಮ್ಮ ನಾನೊರೆದವಾಕುಸಾಕ್ಷಿ ಬರುತಾವಮ್ಮ ಮ್ಯಾಲರಕೆಯುಳ್ಳ ತಾಯಿಯಾದರೆ ನೀ ನನ್ನಕರೆಸಿ ಕೇಳೆ ನಿನ್ನ ಮನೆಗೆ ಜಾಣೆ 102ನಿನ್ನ ಹೆಸರ ತಕ್ಕ ಊಟವ ನೀಡೀಗ ನಾಹಸಿದೆನೆಂದು ಉಂಡುಕೊರವಿಬೇಗಪ್ರಸನ್ನವೆಂಕಟ ಕೃಷ್ಣನ ರಾಣಿಗೆÉ ಹಾರೈಸಿದಳು ಬಸುರು ಬುಡುಕೆಂದು 10333ಚಕ್ಕನೆ ನಿಂತಳು ಕೊರವ್ಯಮ್ಮ ಕಂಡುಫಕ್ಕನೆ ನಿಂತಳು ರುಕ್ಮಿಣಮ್ಮ ಪ್ರಾಣದಕ್ಕರ ಬಿಡಲಾರೆ ನಿನ್ನ ಗೆಳತಿ ಪ್ರೇಮಉಕ್ಕುತಿದೆ ನೀ ಹೋಗುವುದೊಳಿತೆ ಎನಲು ನಕ್ಕು 104ಶ್ರೀ ಗೋಪಾಲ ಬಾಹನಕ ನಿಲ್ಲೆ ವಿಯೋಗ ತಾಳಲಾರೆ ನೀ ಬಲ್ಲೆಹೀಗೆನೆÀ್ನ ಬೇಡಿಕೊಂಡಳು ಮರುಳೆ ನೆನೆದಾಗೆ ಬಹೆನೆಂದ್ಹೇಳಿ ತೆರಳೆ ಅನುರಾಗದಿಂದ 105ಆವ ಪರಿಂದಾರೆ ಹರಿಸೇವೆ ಮಾಡಿದೇವಋಷಿ ನಿಜಾನಂದ ತೀವಿಶ್ರೀವರ ಪ್ರಸನ್ವೆಂಕಟ ಕೃಷ್ಣನ ಮಹತೇವಿಡಿದು ಹೊಗಳುತ ಮುನಿರನ್ನ ರಾಮೆಯಾಜÕದಿ 10634ಸುರಋಷಿಪೇಳ್ದ ಒಕ್ಕಣೆಯಹರುಷದಿ ಕೇಳ್ದ ರುಕ್ಮಿಣಿಯಅರಸ ಪ್ರಸನ್ನವೆಂಕಟ ಕೃಷ್ಣನಿರುತದಿ ಜಯ ನಮಗೀವ 107ಜಯ ಜಯ ಚಿನ್ಮಯಮೂರ್ತಿಜಯ ಜಗನ್ಮಯ ಸ್ವಚ್ಛಕೀರ್ತಿಜಯ ಜಯ ಪ್ರಸನ್ವೆಂಕಟ ಕೃಷ್ಣಜಯಮೂರ್ತಿನಿನಗೆ ಶರಣು108
--------------
ಪ್ರಸನ್ನವೆಂಕಟದಾಸರು
ಭಳಿ ಭಳಿರೆ ಭಳಿರೆ ಹನುಮಭಳಿ ಭಳಿರೆ ಋಜುನಿಕರ ಮಕುಟಮಣಿ ಪ.ಅಂಜನಿಜಠರಸಂಜನಿತಪ್ರಾಜÕಮೌಂಜಿಯುತಕೋದಂಡಧೃತಕರಕಂಜನೆದುರಲಿ ಪ್ರಾಂಜಲಿತ ಬಹುಭಕುತಿ ಅಭಿನಯಅಚ್ಛಿನ್ನ ಅಚ್ಚಿನೊಳು ಶುಭಚಿಹ್ನಪಾವನ್ನಗುಣರನ್ನ ಪರಿಪೂರ್ಣಅ.ಪ.ತಾಟಕಾಂತಕ ಭಟರೊಳು ನೀಮೀಟೆನಿಸಿ ಧೀಂಕಿಟ್ಟು ಶರಧಿಯದಾಂಟಿದವನಿಜೆ ತೋಷಕಾರಿ ಅಶೋಕವನಹಾರಿಕೋಟಿ ಕೋಟಿ ನಿಶಾಟ ಹೃದಯಸ್ಫೋಟಕಕ್ಷಯ ಪಾಟವಕರಿತ್ತಟಕೇಸರಿಕಟಿತಟದಿ ಕರವಿಟ್ಟ ಹನುಮದಿಟ್ಟ ವಿಕಟ ಖಳಕಳ ಪಟಾರ್ಭಟಪಟು ಹರಿದ್ವಿಟ್ಟದ್ವಿಟ್ಟು ಚಟುಲವಟು 1ವೀರ ಸಮೀರಕುಮಾರ ಪಾರಾವಾರ ಚರಿತ ಮಾರಜಿತಘನವಾರಿಜೋದ್ಭವಶರಕೆ ಮನ್ನಿಸಿದೇರಿದೌದಾರಿಈರೈದು ಮುಖದವನ ಪುರಪ್ರಸರಾಗಾರವನುರುಹಿ ರಘುಜನಚಾರುಚರಣವ ಕಂಡ ಪ್ಲವಗಪ್ರಚಂಡಶುಭತುಂಡಬಾಲದಂಡಅಗಣಿತಲೆಂಡರ ಖಂಡಪುಂಡರಗಂಡಗಂಡಭೈರುಂಡುದ್ದಂಡ2ಜೀವಜಾಲರ ಜೀವ ವಿಪ ಮಹಾದೇವ ಮುಖ್ಯರ ದೇವ ಚತುರ್ದಶಭುವನಾಶ್ರಿತ ಭೂತಭರ್ಗಸದಾವಿರತಿಭರಿತಾಆವಜನುಮಜ್ಜನುಮ ಎನಗೆನೀ ಒಡೆಯನಾಗ್ಯಾಳುತ ನನಗೀವುದೆಲೆಗುರುಪರಮಭಾಗವತಾರ್ಯ ಆಚರಿಯಹರಿಯ ಕಾರ್ಯಕಕ್ಕರದ ಹಿರಿಯಪರಮವೀರ್ಯಾಚ್ಚರಿಯ ಸಚ್ಚರಿಯ3ಹರಿಸೇವ್ಯಂಗೀಕರಿಸಿ ಒಡನವತರಿಸಿ ಆಜÕಂವೆರಸಿ ಅಟ್ಟಿದಹರಸಿ ಮದಮತ್ತರಿ ಸಮೂಹ ಭಯಹರಿಸ್ಯಭಯ ಧರಿಸಿಹರಿಶುಭಚರಣ ಸರಸಿಜದಿ ಶಿರವಿರಿಸಿ ಸುಗಿರೋಚ್ಚರಿಸಿ ಅಖಿಳೊಪ್ಪಿರಿಸಿ ವಿಷಯ ಸ್ಪರ್ಶವಿಲ್ಲದ ಅರಸ ನೀನೆ ಕಣಾ ಜಾಣರೊಳು ಜಾಣ ಪ್ರಾಣಮುಖ್ಯಪ್ರಾಣಕೇಣಿಗರಗಂಟಲಗಾಣ ಪ್ರವೀಣ ಹನುಮ4ವಾಸವಾರಿಯ ಘಾಸಿಗಂದು ಕಪೀಶರಳಿದಿರಲಾಸಮಯದೊಳೌಷಧವ ತಂದಾಸಮರ್ಥರ ಪೊರೆದ ಕಪಿವರದಶ್ರೀಶ ವರದ ಪ್ರಸನ್ನವೆಂಕಟಾಧೀಶ ಭೃತ್ಯೋಲ್ಲಾಸ ಅಜಪದಧೀಶ ಮೂರವತಾರಿ ಸುಖಕಾರಿ ಸದಾಶೂರಿ ಸಮೀರ ಕುಮಾರ ಭಾರತ ಧೀರಸಾರಯಂತ್ರೋದ್ಧಾರ ತತ್ವವಿಚಾರ5
--------------
ಪ್ರಸನ್ನವೆಂಕಟದಾಸರು
ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತುಪಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
--------------
ಪುರಂದರದಾಸರು
ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ಬ್ರಹ್ಮ-ಶಂಕರಾದಿವಂದ್ಯ ಎನಗೆ ಮುಕ್ತಿ ತೋರಿಸೋ ಪಹುಟ್ಟು ಮೊದಲಾದಂಢ ಕಷ್ಟ ಬಿಡಿಸೋ-ನಿನ್ನಪಟ್ಟದ ರಾಣಿಗೆ ಹೇಳಿಪದವಿಕೊಡಿಸೋ ||ಇಷ್ಟ ಭಕ್ತಜನರೊಳು ಎನ್ನ ಸೇರಿಸೋ-ಈಸೃಷ್ಟಿಯೊಳು ನಿನ್ನ ದಾಸ-ದಾಸನೆನಿಸೋ 1ಅಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂ-ಬಟ್ಟಲೊಳಗಿನ ಹಾಲು ಎನಗೆ ಹೊಯ್ಯಿಸೊ ||ಗಟ್ಟಿ ಸಕ್ಕರೆ ತುಪ್ಪ ರೊಟ್ಟಿಗಳನು ಉಣ್ಣಿಸೋ-ಮುಂದೆಹುಟ್ಟಿಬಾಹಜನ್ಮಂಗಳ ಎನಗೆ ಬಿಡಿಸೋ2ಕಿಟ್ಟಿಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೋ-ಉತ್ಕøಷ್ಟ ಬಂಗಾರದೊಳು ಎನ್ನ ಕೂಡಿಸೋ ||ಬೊಟ್ಟಿಗೆ ಉಂಗುರವ ಮಾಡಿ ಎನ್ನ ಸೇರಿಸೋ-ಎನಗೆದಿಟ್ಟ ಪುರಂದರವಿಠಲನೆಂಬುದನೆ ಪಾಲಿಸೋ 3
--------------
ಪುರಂದರದಾಸರು
ವೈರಾಗ್ಯದಾವಾಗ್ನಿ ಉರಿಯು ಛಟಿಛಟಿಸಿತುಸರ್ವಪ್ರಪಂಚವೆಲ್ಲವ ಅಟ್ಟಟ್ಟಿ ಸುಟ್ಟಿತುಪಸತಿಸುತರು ಎಂಬ ಹೆಮ್ಮರವೀಗ ಸುಟ್ಟವುಪಿತೃ ಮಾತೃವೆಂಬ ಪಲ್ಲವ ಕರಿಕಿಟ್ಟಿತುಹಿತವೆಂಬ ಬಳ್ಳಿಗಳು ಅನಿಲ ಪುಟ್ಟವಿಟ್ಟವುಅತಿಭಾಗ್ಯವೆಂದೆಂಬ ಸಿಂಗಾರ ಹೊಗೆಯಿಟ್ಟವು1ಏಸೋ ಬಂಧುಗಳೆಂಬ ಧ್ರುಮವು ಶಿಖಿಸೋಂಕಿದವುಕ್ಲೇಶವೆಂದೆಂಬ ಕರಡವು ಭುಗಿ ಭುಗಿ ಲೆಂದವುವಾಸಗಳೆಂದೆಂಬಕುಡಿಕಿಡಿಯಾಗಿ ಉದುರಿದವುಆಸೆ ಎಂಬ ಫಲ ವಹ್ನಿಗಾಹಾರವಾದವು2ಘನಭ್ರಾಂತಿ ಎಂಬ ಪಕ್ಷಿಗಳು ಹಾರಿಹೋದವುಮನೆಯೆಂಬ ಗೂಡುಗಳು ನಿಗಿನಿಗಿಯಾದವುಬಿನುಗುಚಿಂತೆ ಎಂಬ ಹರಿಣ ಮುಗ್ಗರಿಸಿದವುಮನಸಿಜನ ಕ್ರೋಧವೆಂಬ ಕಳ್ಳರು ಸತ್ತಿಹರು3ಅಷ್ಟಮದದಾನೆ ಎಂಬುವು ಅಡವಿಯ ಹಿಡಿದವುತುಚ್ಛವಿಷಯಗಳೆಂಬ ನರಿಗಳೋಡಿದವುದುಷ್ಟಗುಣವೆಂದೆಂಬ ದುರ್ಜನ ಮೃಗವು ಚಲ್ಲಿದವುಕಷ್ಟ ತಾಪತ್ರಯದ ಕತ್ತಲು ಹರಿಯಿತು4ಇಂತು ಪ್ರಪಂಚವೆಂಬೀ ವೈರಾಗ್ಯದಾವಾಗ್ನಿಯಂತೆ ಧಗಧಗನೆ ಝಗಝಗನೆ ಸುಡುತಲಿಚಿಂತಯಕ ಚಿದಾನಂದ ಉರಿಯು ಅಖಂಡವಾಗಿಶಾಂತರೆಂಬರ ಮುಕ್ತರುಗಳ ಮಾಡಿತ್ತು5
--------------
ಚಿದಾನಂದ ಅವಧೂತರು
ಸತ್ಯಭಾಮಾವಿಲಾಸಶ್ಲೋಕಶ್ರೀ ಬ್ರಹ್ಮೇಶ ಸುರೇಂದ್ರ ಪೋಷಕಹರಿದ್ವಾರಾವತೀಲ್ಬಾಳ್ದನುಶ್ರೀ ಭೈಷ್ಮೀವರ ಸತ್ಯಭಾಮೆಯ ಬಹು ಸಾಸ್ರಾಂಗನೇರಾಳ್ದನುಈ ಭೂಭಾರಹರಾವತಾರ ಯದುಪಂ ನರ್ಲೀಲೆಯಂ ತಾಳ್ದನುಸೌಭಾಗ್ಯಾಂಬುಧಿ ಕೃಷ್ಣನಯ್ಯ ಜನಕಾನಂದಾಬ್ಧಿಲಿಟ್ಟಾಳ್ದನು 1ಸೌಪರ್ಣಾಂಸದಲಿಟ್ಟು ದೇವ ತರುವ ಸತ್ಯ ಸಹಾ ಒಪ್ಪುವಆಪನ್ನಾನ್ವಯ ಕಾಮಧೇನೆನಿಸುವ ಅಧ್ಯಾತ್ಮ ಶ್ರೀಮಾಧವಈ ಪದ್ಯಂಗಳ ಪೇಳಿಸಿದನು ದಯಾಬ್ಧಿ ಪಾರಿಜಾತಾಖ್ಯವಗೋಪಾಲೇಶನ ಪಾದಪದ್ಮ ನೆನೆವೆ ಆನಂದವಂ ಬೇಡುವೆ 2ಪದಶ್ರೀಕೃಷ್ಣ ದ್ವಾರಕಾನಗರದಿ ಪ್ರೇಮದಾನೀಕದಿ ರಾಜಿಸಲಾಗನಾಕದಲರು ಒಂದು ನಾರದ ತಂದಿರೆಶ್ರೀಕಾಂತನಿತ್ತ ರುಕ್ಮಿಣಿಗೆ 3ಒಂದು ಹೂವಿನ ಪರಿಮಳವುನಗರತುಂಬಿಇಂದುವದನೆಸತ್ಯಭಾಮೆಇಂದುಗೋವಿಂದ ರುಕ್ಮಿಣಿಗೆ ಕುಸುಮವಿತ್ತನೆಂದು ಕೇಳ್ದಳು ಸುಸ್ವಭಾವೆ 4ಶ್ಲೋಕಅರ್ಧಾಂಗಿಯಲಿ ಸ್ನೇಹವೆಗ್ಗಳಕಣಾ ಮುದ್ದಿಸಿ ಹೂವಿತ್ತನುಇದ್ದೇನಿನ್ನು ವೃಥಾ ಭುವಿಯಲಿ ಸಖಿ ನಿರ್ದೇಹವಂ ಸಾರ್ವೆನುಕದ್ದು ಬೆಣ್ಣೆಯ ಮೆದ್ದು ಪುಂಶ್ಚಲಿಯರೊಳಿದ್ದಾತನ ಬುದ್ಧಿಯತಿದ್ದಿ ನೋಡಿದೆ ಸೋತೆ ಎನ್ನ ನಳಿತೋಳ್ಹೊದಿಸಿ ನಾ ಶೌರಿಯ 5ಸಾಕಿನ್ನಾತನ ಚಿತ್ತಪಲ್ಲಟಸಟೆಆ ಕಾಮಿನಿಪ್ರಿಯನನೂಕದಿನ್ನಿರೆ ಎನ್ನ ಮಂಚಕೆ ಬರಲ್ಪೋಕ ಸ್ಮರನಯ್ಯನಯಾಕಿನ್ನಾಭರಣಾಂಬರೋತ್ತರಿ ಸಖೀ ಏಕಾಗ್ರನೇಕಾಂಗನನೀಕಂಡ್ಹೇಳವಮಾನ ತಾಳಳು ಸಖಿ ಜೋಕಿನ್ನು ನಿನ್ಬಹುಮಾನ6ಪದಕ್ರೋಧ ಕಳವಳಿಕೆ ಮುನಿಸಿನಿಂದಲಿ ಸತ್ಯವಾದಿ ಸತ್ರಾಜಿತ ಕನ್ಯೆಮೇದಿನಿಮೇಲೆ ಮಲಗಿದಳು ಧೊಪ್ಪನೆ ಮಂಚಕೈದದೆ ನಿತ್ಯಸುಖಿ ಧನ್ಯೆ 7ಬಿಸಿ ಬಿಸಿ ನಿಟ್ಟುಸಿರ್ಗರೆದು ಕೋಮಲ ಮುಖಶಶಿಯ ಕಸ್ತೂರಿ ಅಂಗಯ್ಯಲೊರೆಸಿಬಿಸಜಾಕ್ಷಿ ಕಂಬನಿದುಂಬೆ ಒರತೆಯಿಟ್ಟುಎಸೆವಕಜ್ಜಲಜಲ ಸೂಸಿ 8ಶ್ಲೋಕವಕ್ಷೋಜಾತದ ಹೊನ್ನ ಕುಪ್ಪಸವನು ಅಕ್ಷೋದದಿಂ ತೋಯಿಸಲ್ಸಾಕ್ಷಾನ್ಮಂಗಳ ಮುತ್ತಿನ್ಹಾರ ಕಡಿದಳ್ ಲಕ್ಷಾಭರಣ್ಬಿಟ್ಟಳುತಾ ಕ್ಷೋಣಿಯನು ಹೊಂದಿ ಬಿದ್ದು ಬೆಮರ್ದಳ್ಅಕ್ಷಯಸೌಗಂಧಿಯಳ್ಪಕ್ಷಿವಾಹನ ಮಾಡಿದ ಉಪಕಾರ ಲಕ್ಷಿಸಿ ಹಾಯೆಂದಳು 9ಹಾ ಹಾ ಕೈತವ ಮೀನ ಜೃಂಭಕಮಠಹಾ ಹೈಮದೃಘ್ಘಾತಕಹಾ ಹಾ ನಿಷ್ಕರುಣಾಂಗ ಶಿಕ್ಷಕ ಹರೆ ಹಾ ಹಾ ಬಲಿರ್ವಂಚಕಹಾ ಮಾತೃ ಮೃಗಾರ್ದ ಜಾರವ್ರತ ಹಾ ಹಾ ಹಾ ಕಲಿರ್ಮಾರಕಹಾ ಹಾ ಮದ್ಗøಹ ದೂರಕ ಪರಸಖ ಆಶಾಬ್ಧಿ ಸಂಶೋಷಕ10ಪದತಾಳಿನ್ನು ತಾಳೆಂದು ತವಕದಿ ಸವತಿಯಮೇಲೆ ಕೋಪಿಸಿ ಸತ್ಯಭಾಮೆಜಾಲಕ ಮಾಲೆಯ ಹರಿದು ಚಿಮ್ಮಿದಳತ್ತಮೇಲೆಣ್ಣೆಗಂಟ ಹರಹಿದಳು 11ಮೂರ್ಛೆಯೊಳ್ಮೈಮರೆದಂತೆ ತೇಲ್ಗಣ್ಣ ಹಾಕಿದುಶ್ಚಿಹ್ನ ಲೀಲೆಯ ತೋರೆನಿಶ್ಚಲ ಭಾವೆಯನರಿತೆತ್ತಿ ಒಯ್ದರುಒಚ್ಚೇರೆಗಂಗಳೆಯರು ಬೆದರಿ12ಶ್ಲೋಕಧೈರ್ಯಂಗೆಟ್ಟ ಮೃಗೇಂದ್ರ ನಾರಿಯಿವಳೊ ನ್ಯೆರಾಶ್ಯ ಬಳ್ಳ್ಯಿಹಳೊವೈಮಾನಿಕರ ದೇವತ್ಯಾಕೆ ಮುನಿದಳಯ್ಯಯ್ಯೊ ಸೌಜನ್ಯಳೊಮಯೂರಭ್ರಮುಡೇಳ್ ಮಹಾಪತಿವ್ರತೇಳ್ಮತ್ತೇಭ ಗಾಮಿನಿಯಳ್ಕೈವಲ್ಯಜÕರು ಬಲ್ಲರೀಕೆಯ ಬಗೆ ಕಾಯಯ್ಯ ಕೃಷ್ಣಯ್ಯನೆ 13ಎತ್ತೊಯ್ದು ಮೃದುತಲ್ಪಮಂಚಕವಳ ಮತ್ತಾಲವಟ್ಬೀಸಲುಫೂತ್ಕಾರಂ ಕಿವಿಯೊಳ್ಪೂರೈಸಿ ನುಡಿಸಲ್ಸತ್ಯಂಗನೆ ಸುಮ್ಮನೆಪ್ರತ್ಯುತ್ತರಗೊಡದಿರಲು ಬೆದರಿವರ್ಚಿತ್ತಜನೈಗ್ಹೇಳಿದರುಮುಕ್ತಕೇಶಿಯ ವಾರ್ತೆ ಕೇಳಿದು ಬಹು ಚಿತ್ರವಿಚಿತ್ರೆಂದನು 14ಪದದೂತೇರ ನುಡಿಗ್ಯದುನಾಥನು ಮನ್ನಿಸಿಆತುರದಲಿ ನಡೆತಂದುಪ್ರೀತಿಗಗ್ಗಳೆ ಸತ್ರಾಜಿತ ಸಂಜಾತಳೆನೀತವೆ ನೀ ಮುನಿದಿಹುದು 15ಎಂದು ಮಂಚದಲಿ ಕುಳಿತು ಪ್ರಾಣನಾಥೆ ಬಾಇಂದುವದನೆಮಾತನಾಡೆಕಂದ ಕಂದರ್ಪನಾಣೆ ಕಪಟವಿಲ್ಲೆನ್ನಲ್ಲಿಕಣ್ಣೆರೆದಿತ್ತಲೊಮ್ಮೆ ನೋಡೆ 16ಶ್ಲೋಕಕಸ್ತೂರಿ ತಿಲಕಿಲ್ಲ ನಿನ್ನ ಪಣೆಯೊಳ್ಮುತ್ತಿನ ಬೊಟ್ಟಿಲ್ಲವೆಮತ್ತೇನ್ಭೂಷಣವೇಣಿ ನಿನ್ನ ನೊಸಲೊಳ್ಮುತ್ತಿನಮಣಿಇಲ್ಲವೆರತ್ನಾಂಕಾಭರಣಿಲ್ಲ ನಿನ್ನ ಶ್ರುತಿಯೊಳ್ಮತ್ವಜ್ರದೋಲಿಲ್ಲವೆಹತ್ತೆಗಟ್ಟಿದ ನಿಷ್ಕಕಂಠ ಪದಕಿಲ್ಲ ಒತ್ತಾದ ಹಾರಿಲ್ಲವೆ 17ವ್ಯತ್ಯಸ್ತ ಸ್ತನಪಟ್ಟಿಕೆ ರುಚಿರ ಶ್ರೀ ಗಂಧಾನುಲೇಪಿಲ್ಲವೆಸ್ವಸ್ತಂಬ್ರ ಸ್ಮರಣಿಲ್ಲವೆ ಮಮಸಖಿ ಸ್ವಸ್ಥಾಗುಸುರ್ಭಾವೆ ನಂಬು ಸ್ತ್ರೈಣರ್ಬಗೆ ತೋರಿದೆ ಸ್ವಸುಖದಿ ತಾ ಸ್ತ್ರೈಣನಲ್ನಿಶ್ಚಯಹೇ ಸ್ತ್ರೀರತ್ನಶಿಖಾಮಣಿರಮಣಿ ಕೇಳ್ದುಶ್ಚಿತ್ತ ಮಾಣೆಂದನು 18ಪದಈಪರಿಭಾವೆಯ ಚರಣದೆಡೆ ಕುಳಿತುಶ್ರೀಪತಿ ಪ್ರಾರ್ಥನೆ ಮಾಡೆತಾ ಪತಿಯೊಡನೊಂದು ಮಾತನಾಡಳುಸತಿತಾಪದ್ವಿಗುಣಿಸಿತು ಕೇಳಿ 19ಮಾನಭಂಗವ ಮಾಡಿದ ಮೇಲೆಂತು ಬಹುಮಾನವನೊಲ್ಲದಿಹ ಸತಿಯತಾನೆತ್ತಿ ತೊಡೆ ಮೇಲೆ ಮಲಗಿಸಿಕೊಂಡು ದುಮ್ಮಾನವ ಬಿಡಿಸುವ ಹರಿಯು 20ಶ್ಲೋಕಮಾನವಮನ್ನಿಸಿದಾಕೆಯ ಸ್ಥಿತಿಯನು ಶ್ರೀನಾಥ ಕಂಡೆಂದನುಏನೆಮಾನಿನಿನಿನ್ನ ಕೋಪ ಬಿಡದೆ ನಾ ನೋಡಿದೆ ಕಲ್ಲೆದೆಮನುಷ್ಯರೊಳುದಾವಸ್ತ್ರೀಗೆ ಸಲಿಗೆ ತಾನಿತ್ತವಂಗೀ ಬಗೆತಾನೆ ತೋರಿದೆವಿಶ್ವಶಿಕ್ಷಿಕ ಗಡಾ ಏನಾಶ್ಚರ್ಯ ಗಡಾ 21ಎಚ್ಚೆತ್ತೆನ್ನೊಳು ಮಾತನಾಡೆ ಪ್ರವುಢೆ ಹುಚ್ಚಾಗದಿರೆಂದನುಸಚ್ಚಿನ್ಮೂರ್ತಿಯ ಮಾತಕೇಳಿ ಕುಳಿತಳ್ವಚ್ಚೆರೆಗಣ್ಮುರಿಯಲುಉಚ್ಚಾರಂ ಗದಗದ್ಗಿಸಿ ಸ್ಛುರಿತಾಧರೆಗಚ್ಚಗ ತಾನೆಂದನುಉಚ್ಚಾರದೊಳಗೊಂದು ನಿನ್ನ ಮನದ ಮಚ್ಚಾಟ ಬೇರೆಂದಳು 22ಪದನಾರಿ ಪತಿಯ ಬಿಟ್ಟು ದೂರದಿ ಕುಳಿತಳುವಾರೆ ನೋಟದ ಬೆಡಗಿನಲಿಜಾರಿದ ಸೆರಗೆದೆಗೇರಿಸಿ ಹೊದ್ದು ಮುರಾರಿಗೆ ವಾರೆ ಮುಖದಿರುಹಿ 23ಕಪಟನಾಟಕ ನಿನ್ನ ಮಾಯವಗಾಧವುಕಪಟಗಿತ್ತಿಗೆದಿವ್ಯಕುಸುಮಅಪಮಾನ ಸತ್ಯಳಿಗೆಮಾನಬಂಗಾರಿಗೆಚಪಲತೆ ತಿಳಿಯದು ನಿನ್ನ 24ಶ್ಲೋಕಕೇಳ್ನಾರೀಮಣಿ ನಾರದ ಕುಸುಮದ ಅರಳೊಂದು ಪಾದಾಬ್ಜಕೆನಲ್ವಿಂದರ್ಪಿಸಲಾಗ ಯೋಚಿಸಿದೆ ನಾ ಚೆಲ್ವ ಅಮರ್ಭೂರುಹಬಲ್ವಿಂದೀ ನಗರಕ್ಕೆ ನಿನ್ನ ಮನೆಯಂಗಳದೊಳು ಸ್ಥಾಪಿಸುವಉಲ್ಲಾಸಂ ಪಿಡಿದಿರ್ದೆ ನಾಕುಸುಮಜೇಷ್ಠಳ್ಗೀಯೆ ನೀ ಮುನಿವರೆ25ಹೂವೊಂದಾಕೆಗೆ ಕೊಟ್ಟೆ ಸಾಕು ತರುವ ನಿವಾರಿಸಿ ವಜ್ರಿಯಗರ್ವಿಂ ನಿನ್ನಿದಿರಲ್ಲಿ ಕೊಂಡು ಬಹೆ ನಾ ಭವ್ಯಾಂಗಿ ಕೇಳ್ಭಾಮಿನಿದಿವ್ಯಾಮೋದಮಯ ದ್ರುವiಂ ಸುರರಿಗಂ ಸೇವ್ಯಾದುದ ನಿನ್ನಯಭವ್ಯಂಗಳದೊಳಗಿಟ್ಟು ಮೆಚ್ಚಿಸುವೆ ನಾ ನವ್ಯಾದ್ಭುತಂನೋಡುನೀ26ಬಿನ್ನಣೆ ಮಾತಲ್ಲ ನಿನ್ನಾಣೆಭಾವಕಿಇನ್ನು ದುಮ್ಮಾನವೇಕೆನ್ನುತಾಚೆನ್ನಿಗರರಸನು ರಮಣಿಯ ನಳಿತೋಳಚೆನ್ನಾಗಿ ಸೆಳೆದಪ್ಪಿಕೊಳುತ 27ಎನ್ನ ಶಪಥÀವಿದು ನಿನ್ನೆತ್ತಿ ಖಗವೇರಿಕನ್ನೆ ಶಚಿಯ ಮನೋಹರನಮನೆಗೆ ಹೋಗಿ ವಿಜಯರವದಿ ತಂದುರನ್ನದತರುನಿನಗೀವೆ ನಾ 28ಶ್ಲೋಕಹೀಗೆಂದಾಕೆಯಮೆಚ್ಚಿಸಿದನುಆ ವಿಯೋಗಿಯಸಂಯೋಗಿಯಭೋಗಭಾಗಾಶೆಯ ನಿಯತಿ ಸುಖಿಯಾ ತ್ರೈಗೇಹ ಸಂಸ್ಥಾನಿಯಾಯೋಗೇಶೇಶ್ವರ ತನ್ನ ಪಾಶ್ರ್ವದಿ ದಿವಿಪ ನಾಗೇಶೈರ್ವಂದಿಯಾಶ್ರೀಗೋವಿಂದ ಮನುಷ್ಯರ ತೆರದಲಿ ಹೀಂಗಾಡಿದ ಲೀಲೆಯ 29ಬಾ ಸತ್ರಾಜಿತ ಗರ್ಭಸಿಂಧು ಸುಮಣಿ ಬಾ ಸೋಮಬಿಂಬಾನನೆಬಾ ಸೌಂದರ್ಯದವಾರಿಧಿಪರಮೆ ಬಾ ಬಾ ಸತ್ಯಭಾಮೆ ರಮೆಬಾ ಸಂಧ್ಯಾರುಣದಂಬಕಿ ಸುಕಬರೆ ಬಾ ಸ್ವಚ್ಛ ಬಿಂಬಾಧರೆಬಾ ಸದ್ರತ್ನದ ಭೂಷಣೆ ಪ್ರಸನ್ನವಾಗೆ ಸರ್ವತೋಷಾಂಗನೆ 30ಪದನಿನಗಾಗಿ ವೇದ ಕದ್ದವನ ಕೊಂದೆನಿನಗಾಗಿ ನನ್ನುದಧಿಯಲ್ಲಿ ನಿನ್ನ ತಂದೆನಿನ್ನ ಕದ್ದವನ ಕೊಂದೆ ನೀ ಬರಲೆತ್ತಿದೆನಿನ್ನ ಭಾಗ್ಯದ ಸಖಿ ಹಿಡಿದೆ 31ನಿನ್ನ ಭಾರವ ತೆಗೆದೆ ನಿನಗಾಗ್ಯಟವಿಯಲ್ಲಿದ್ದೆನಿನ್ನಮುನಿಸುತಿಳಿಯ ಬಂದೆನಿನ್ನನೆ ಮೆಚ್ಚಿ ಅನ್ಯ ಕನ್ಯೇರ ವ್ರತವನಳಿದೆನಿನ್ನ ಪುಣ್ಯದ ಬೆಳಸ ಬೆಳೆದೆ 32ಶ್ಲೋಕಶ್ರೀಶೌರಿಸರಸೋಕ್ತಿಯಿಂದ ಸತಿಯ ಲೇಸಾಗಿ ಸಂತೈಸುತಆಸ್ಯಾಬ್ಜಾಂಕಿತ ಸ್ವೇದವನ್ನು ಸುಮುಖವನೊತ್ತಿ ಆರೈದನುಕೇಶ ನೇವರಿಸುತ್ತ ತಾ ಚತುಷ್ಕಪರ್ದಾ ಸತ್ಯಭಾಮಿನಿಗೆಶ್ರೀಶ ಮಂಡಿಸಿ ವೇಣಿಯಲ್ಲಿ ಇಡುವ ಭೂಷಣಗಳನಿಟ್ಟನು 33ಕಸ್ತೂರಿ ತಿಲಕಿಟ್ಟ ನೇತ್ರಯುಗಕೆ ಮತ್ತಂಜನವಿಟ್ಟನುವೃತ್ತಾದ ಸುಕಪೋಲದೊಳ್ಮಕರಿಕಾ ಪತ್ರಂಗಳನಿಟ್ಟನುಮುಕ್ತಾಹಾರಪ್ರವಾಳನೀಲಮಣಿಗಳ್ವತ್ತಾದ ಸ್ವರ್ಣಮಾಲಿಕಾರತ್ನಾಂಕಾಭರಣಿಟ್ಟನು ಯದುಪತಿ ಸತ್ಯಂಗನಾಪ್ರಿಯನು 34ಪದಮುಡಿಗೆ ಮಲ್ಲಿಗೆಯ ಮುಡಿಸಿದ ಮದನನಯ್ಯಮಡದಿಯೆದೆಗೆ ಮಲಯಜವಕಡು ನರ್ಮೋಕ್ತಿಗಳಲ್ಲಿ ಪೂಸಿದ ಘನಶ್ಯಾಮಬಿಡು ನಿನ್ನ ಖತಿಯೆಂದ ದೇವ 35ಕೋಟಿ ಚಂದ್ರಾರ್ಕ ಲಾವಣ್ಯನರ್ಧಾಂಗಿಗೆಕೋಟಿ ಕೋಟ್ಯಾಭರಣಿತ್ತನೋಟ ಬೇಟದಿ ಮನೋರಥವ ಪೂರೈಸಿದನಾಟಕಸೂತ್ರನಿರ್ಲಿಪ್ತ 36ಶ್ಲೋಕಇತ್ಯಾದಿ ಬಹುಮನ್ನಿಸಿ ಗರುಡನ ಹತ್ತಿದ ಸ್ವಸ್ತ್ರೀ ಸಹನಿತ್ಯಾನಂದಮಯ ಸ್ವರೂಪ ಅಮರಾವತಿಗೆ ಪೋಪನ್ನಕಪೃಥ್ವೀಜಾತನು ಮತ್ತನಾಗಿ ಅಮರರ್ಮೊತ್ತವ ಬಾಧಿಸಲುಇತ್ತೀ ಕಾರ್ಯವ ಬಿಟ್ಟು ಮುಂಚೆ ನಡೆದ ಜೆÉೂೀತಿಷ್ಮತಿಸ್ಥಾನಕೆ 37ಹೋಗಿ ಆ ನರಕನ್ನ ಸೀಳಿ ಭೌಮಿಜಗಿತ್ತನು ಭಾಗ್ಯವಸೌಗಂಧಿಯರ ಷೋಡಶ ಸಹಸ್ರರ ಯೋಗಾರ್ಹರಂ ತಂದನುಶ್ರೀ ಗೋಪೀಜನ ಮೋಹನಾಘಹರಣ ಹೋಗ್ವಾಗ ಸ್ವರ್ಧಾಮಕೆಆಗಿತ್ತಾಕುಂಡಲಅದಿತಿಗೆ ಮ್ಯಾಗಿಂದ್ರನಿಂ ಸಂಪೂಜ್ಯನು 38ಪದಶಚಿಯರಸನು ಪೂಜಿಸಿದ ಮೇಲೆ ರಾಣಿಯಉಚಿತಕೆಮಂದರತರುವಮುಚುಕುಂದವರದನು ತರುತಿರೆ ಅಮರರನಿಚಯಸಹಿತ ಕಾದಿದಿಂದ್ರ 39ಗರುಡನ ಗರಿಯ ಗಾಳಿಯಲೆಲ್ಲರೋಡಿಸಿಧÀರೆಗೆ ತಂದನು ದ್ವಾರಾವತಿಗೆಅರಸಿಯಂಗಳದೊಳು ನಿಲಿಸಿದ ತರುಮೂಲಸರಿ ಲೆತ್ತವಾಡುವ ಎಂದಳಾಗೆ 40ಶ್ಲೋಕಪಾರಿಜಾತದ ಮೂಲ ಚೈತ್ಯದಲ್ಲಿನ ಶ್ರೀರಂಗ ರತ್ನಾಸನಸಾರಿ ಇಬ್ಬರು ಲೆತ್ತವಾಡುವಹರಿನಾರೇರ ಮುಂದೆನ್ನನುಭೂರಿಮಾನಿಯಮಾಡುಸ್ವಾಮಿ ಎನಲು ಕಾರುಣ್ಯ ವಾರಿನಿಧಿಧಾರಿಣಿಯಲ್ಲಿ ಸ್ತ್ರೈಣನೆಂಬರು ಸಖಿ ಈ ರೀತಿ ಮಾಣೆಂದನು 41ನೀ ಲೆತ್ತವನು ವೃಕ್ಷ ಮೂಲದಲಿ ಎನ್ನೊಳಾಡ ಒಲ್ಲೆಂದರೆಮೇಲೀಅಂಬರಭೂಷಣೇಕೆ ವಿಭುವೆ ಮೇಲೀ ಶರೀರೇತಕೆಶ್ರೀಲೋಲ ಶರಣೇಚ್ಛದ ಎನಿಸುವ ನಿನ್ನ ಬಿರುದೇತಕೆಬಾಲೇರ್ಮುಂದಪಹಾಸ್ಯವಾಯಿತೆನುತ ಲೋಲಾಕ್ಷಿ ತಾ ಮುನಿದಳು42ಪದಹಂಸದುಪ್ಪಳದ ಸುಪ್ಪತ್ತಿಗೆ ಮಂಚದಿ ರಾಜಹಂಸಗಮನೆ ಮುನಿದು ಮಲಗೆಮಾಂಶಳು ಕದವನಿಕ್ಕಿದಳು 43ನೀನೆಂದ ಮಾತ ನಡೆಸುವೆ ಮುನಿಯದಿರುಮಾನಿನಿರನ್ನೆ ಕದತೆರೆಯೆಶ್ರೀನಾಥ ಹೀಗೆ ಮನ್ನಿಸಿ ಕದತೆರೆಸಿದ ದಯಾನಿಧಿ ಪ್ರಸನ್ವೆಂಕಟೇಶ 44ಶ್ಲೋಕಲಕ್ಷ್ಮೀ ಭೂರಮಣ ಭವಾಬ್ದಿಮಥನಪಕ್ಷೀಂದ್ರಸದ್ವಾಹನಮೋಕ್ಷಾಧೀಶವಿರಿಂಚಿವಾಯುಫಣಿಭೂ ತ್ರ್ಯಕ್ಷೇಂದ್ರ ದೇವಾಯನವಕ್ಷೋಜಾವರ ಸುಂದರಾಗ್ರಣಿ ವರಲಕ್ಷ್ಮೀ ಮನೋನಾಯಕರಕ್ಷಿಸಿದನು ಸ್ವಸ್ತ್ರೀಯ ನೆರೆದನು ಸಾಕ್ಷಾತ್ ಪ್ರಸನ್ವೆಂಕಟ45ಅನಂತಾಬ್ಬ ಭವಾಂಡ ಹುಟ್ಟಿ [ಸಿ] ಸ[ಲಹು] ವತಾನೇ ಬಯಲ್ಮಾಡುವತಾ ನಿರ್ಲಿಪ್ತ ಸದಾಗಮೈಕ ಸುವಿಜಯಾನಂದ ಪೂರ್ಣಾತ್ಮನುಈ ನಾಟ್ಯವನು ತೋರಿದ ಸುಜನರಿಗಾನಂದ ವೃದ್ಧಿಕರತಾನಾಡಿದನು ಲೆತ್ತವ ಸತಿಗೂಡಜ್ಞಾನಿಪ್ರಸನ್ವೆಂಕಟ 46ಪದಮಂಗಳಾತ್ಮಕ ವಿಶ್ವನಾಟಕವಾಡಿದ ಸತ್ಯಂಗನೆಯೊಳು ಲೆತ್ತದಾಟಅಂಗನೆಷೋಡಶ ಸಹಸ್ರರ ಸೋಲಿಸುವರಂಗ ಪ್ರಸನ್ನವೆಂಕಟೇಶ 47ಶ್ರೀ ಸುರವೃಕ್ಷತಳದಿ ರತ್ನಾಭರಣಮಯನೀ ಸೋತೆ ಸತ್ಯಭಾಮಿನಿಯೆಂದರೆಹರಿನೀ ಸೋತ್ಯೊ ಪ್ರಸನ್ನವೆಂಕಟೇಶ 48ಲೇಶ ಹಾಸದಿ ಜಗತ್ಪ್ಪ್ರಪಂಚವ ತೋರುತ್ತವಾಸುದೇವಪ್ರಕೃತಿ ಗೂಡಿಈ ಶೋಭಿಸುವ ದ್ವಾರಕಾ ನಗರದಲಿದ್ದಪ್ರಸನ್ವೆಂಕಟೇಶನ ನೋಡಿ 49ಅನಂತದೇಶದಿ ಅನಂತ ಕಾಲದಿಅನಂತ ಸದ್ಗುಣಸಾಂದ್ರದೀನ ದಯಾನಿಧಿ ಪ್ರಸನ್ನÉಂಕಟ ಕೃಷ್ಣಮನುಷ್ಯಲೀಲೆಯ ತೋರಿದ 50ಈ ಸತ್ಯಭಾಮಾವಿಲಾಸದ ಪದ್ಯಪದಲೇಸಾಗಿ ನರನಾರಿಯರುತೋಷಭರಿತರಾಗಿ ಪಾಡಲು ಸುಖವೀವಶ್ರೀಶ ಪ್ರಸನ್ನವೆಂಕಟೇಶ 51
--------------
ಪ್ರಸನ್ನವೆಂಕಟದಾಸರು
ಸೊಕ್ಕು ನೋಡಿ ಯೋಗೀಶನ ಸೊಕ್ಕು ನೋಡಿಮಿಕ್ಕು ಮೀರಿ ಮೂರಕ್ಕರಗಳಕಂಡುನಕ್ಕು ಪಶ್ಚಿಮಗಿರಿ ಪೊಕ್ಕು ಬೆಳಗಿ ಜನಪಮೂರಕಟ್ಟಿಮೂರನು ಅರಶೀರಗುಟ್ಟಿಆರು ಎಂಟನೆ ಅಟ್ಟಿ ಐದು ಏಳನು ಮೆಟ್ಟಿತೋರುವ ಎರಡು ನಾಲ್ಕನು ತೊಲಗಿಸಿದಾತನ1ಲೋಕದ ಕೂಡ ಕೂಡಿಯೆ ವಿವೇಕ ಬೇಡಏಕವೆಂಬುದು ಬಿಡ ಅನೇಕವೆಂಬುದ ನಾಡಮೂಕ ಪದಗಳೆಂದು ನಿರಾಕರಿಸುತಲಿಹನು2ಅಕ್ಷಯಮುಚ್ಚಿ ತೆರದು ತೆರದಕ್ಷಯ ಮುಚ್ಚಿರಕ್ಷಿಸುತಿಪ್ಪ ಭಾಳೇಕ್ಷಣ ತಾನೆಂದು-ಪೇಕ್ಷೆಮಾಡುತ ಸರ್ವವ ನಿರೀಕ್ಷಿಸುತಿರುವವನ3ಮತಗಳ ನೆನೆದು ಶಾಸ್ತ್ರಗಳ ಗೆಲಿದುಪಾತಾಳಕಿಟ್ಟ ಮತಿ ಮೋಕ್ಷಗಳ ಬಿಟ್ಟ ತಿರುಗಿಸಿ ತಿರುಗಿಸಿ ಹುಟ್ಟಸತತ ಕಾಲದಿ ತನ್ನ ಮತಿ ಹಿಡಿಯೆಂಬನ4ಏನುಪಾಯ ಈ ಯೋಗಿಗೆ ಇನ್ನೇನು ನ್ಯಾಯತಾನಾಗದಗುರುಚಿದಾನಂದನ ತಾ ಕಂಡುತಾನೆ ತಾನಾಗಿ ತೋರುವ ನಿಜ ಯೋಗಿಯ5
--------------
ಚಿದಾನಂದ ಅವಧೂತರು