ಒಟ್ಟು 38 ಕಡೆಗಳಲ್ಲಿ , 19 ದಾಸರು , 37 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಶ ನೀನಹುದೋ ಶೇಷಾಚಲವಾಸ ನೀನಹುದೊ ಪ. ಶೇಷಶಯನ ಸುರೇಶವಂದಿತಶೇಷಜನರನು ಪಾಲಿಸಿ ಬಡ್ಡಿಕಾಸು ಸೇರಿಸಿ ಗಂಟುಕಟ್ಟುವಕ್ಯಾಸಕ್ಕಿ ತಿಮ್ಮಪ್ಪ ನೀನೆ ಅ.ಪ. ತÀಂದೆ ನೀನಹುದೊ ಕರುಣಾಸಿಂಧು ನೀನಹುದೊಅಂದುದ್ರುಪದನ ನಂದನೆಯ ಎಳೆತಂದು ಘಾಸಿಯ ಮಾಡುತಿರÀಲುಮುಂದೆ ಬಂದು ಅಕ್ಷಯವೆಂದು ಸಲಹಿದಮಂದಹಾಸ ಮುಕುಂದನು ನೀನೆ 1 ಧೀರ ನೀನಹುದೊ ಜಗದೋದ್ಧಾರ ನೀನಹುದೊಬಾರಿ ಬಾರಿಗೆ ನಿನ್ನಪಾದ ಸುವಾರಿಜಂಗಳಸೇರಿದ ಭಕ್ತರ ಘೋರ ದುರಿತವದೂರಗೈಸುವ ಮಾರಜನಕ ಅ-ಪಾರ ಮಹಿಮನೆ 2 ಧನ್ಯ ನೀನಹುದೊ ಸುರಮುನಿಮಾನ್ಯ ನೀನಹುದೊಪನ್ನಗಾರಿವಾಹನ್ನ ಧರೆಯೊಳುಇನ್ನು ನಿನಗೆದುರ್ಯಾರ ಕಾಣೆನೊ ಪ್ರ-ಸನ್ನನಾಗೆಲೊ ಬಿನ್ನಹ ಕೇಳು ಪ್ರ-ಪನ್ನವತ್ಸಲ ಶ್ರೀ ಹಯವದನ 3
--------------
ವಾದಿರಾಜ
ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ಪ ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ಅ ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ - ರಿಕ್ತಹಸ್ತದಿಂದ ಮನೆಯ ಸೇರುವೆ - ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ - ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ 1 ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ - ದುರಾಸೆಯನ್ನುಮನಸಿನಲ್ಲಿ ಮಡಗಿಕೊಂಡು ಕುದಿವೆನೊಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ2 ಮಾಧವ - ರಂಗಯ್ಯ ರಂಗ3
--------------
ಕನಕದಾಸ
ಸೂರ್ಯಾಂತರ್ಗತ ನಾರಾಯಣ ಪಾಹಿ ಆರ್ಯ ಮಾರುತಿ ಪಂಚಪ್ರಾಣ ಪ ಭಾರ್ಯಳೆಂದೊಡಗೂಡಿ ಸರ್ವಜೀವರೊಳಿದ್ದು ವೀರ್ಯ ಕೊಡುತಲಿರ್ದ ಶರ್ವಾದಿ ವಂದ್ಯಾತಿಅ.ಪ. ದ್ರುಪದನ ಸುತೆ ನಿನ್ನ ಕರೆಯೆ ಅಂದು ಕೃಪಣ ವತ್ಸಲ ಶೀರೆ ಮಳೆಯೇ ಅಪರಿಮಿತವು ನೀರ ಸುರಿಯೆ ಸ್ವಾಮಿ ಕುಪಿತ ದೈತ್ಯರ ಗರ್ವ ಮುರಿಯೇ ಜನಸೋ ಜನರ ವಿಪತ್ತು ಕಳೆದೆ ಈ ಪರಿಯ ದೇವರನೆಲ್ಲಿ ಕಾಣೆನೊ ತಪನಕೋಟ ಪ್ರಕಾಶ ಬಲ ಉಳ್ಳ ಕಪಿಲರೂಪನೆ ಜ್ಞಾನದಾಯಕ 1 ಹೃದಯ ಮಂಟಪದೊಳಗೆಲ್ಲ ಪ್ರಾಣ- ದದುಭುತ ಮಹಿಮೆಯ ಬಲ್ಲ ಸದಮಲನಾಗಿ ತಾವೆಲ್ಲ ಕಾರ್ಯ ಮುದದಿ ಮಾಡಿಸುವ ಶ್ರೀನಲ್ಲ ಹದುಳ ಕೊಡುತಲಿ ಬದಿಲಿ ತಾನಿದ್ದು ಒದಗಿ ನಿನಗೆಲ್ಲ ಮದುವೆ ಮಾಡಿದ ಪದುಮಜಾಂಡೋದರ ಸುದತಿಯ ಮುದದಿ ರಮಿಸೆಂದು ಒದಗಿ ಬೇಡುವೆ 2 ಎನ್ನ ಬಿನ್ನಪವನ್ನು ಕೇಳೊ ಪ್ರಿಯ ಮನ್ನಿಸಿ ನೋಡೊ ದಯಾಳೋ ಹೆಣ್ಣಬಲೆಯ ಮಾತು ಕೇಳೂ ನಾನು ನಿನ್ನವಳಲ್ಲವೇನು ಹೇಳೋ ನಿನ್ನ ಮನದನುಮಾನ ತಿಳಿಯಿತು ಕನ್ಯಾವಸ್ಥೆಯು ಎನ್ನದೆನ್ನದೆ ಚೆನ್ನ ಶ್ರೀನಿಧಿವಿಠಲ ಪ್ರಾಯದ ಕನ್ನೆ ಇವಳನು ದೇವ ಕೂಡಿಕೊ 3
--------------
ಶ್ರೀನಿಧಿವಿಠಲರು
ಇಂಥ ಹೆಣ್ಣನು ನಾನೆಲ್ಲಿ ಕಾಣೆನೊ |ಹೊಂಚತಾರಿ ಕಾಣಿರೊ ಪಸಂತತ ಸುರರಿಗೆ ಅಮೃತವನುಣಿಸಿದಪಂತಿಯೊಳಗೆ ಪರಪಂತಿಯ ಮಾಡಿದ ಅ.ಪಮಂದರಗಿರಿ ತಂದು ಸಿಂಧುವಿನೊಳಗಿಟ್ಟುಚೆಂದದಿಂದಲಿ ಕಡೆದಮೃತವ ತೆಗೆದು ||ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ |ದಂಧನೆಯನು ಮಾಡಿ ದೈತ್ಯರ ವಂಚಿಸಿದ 1ವಿಸುವಾಸದಿಂದಲಿ ಅಸುರಗೆ ವರವಿತ್ತು |ತ್ರಿಶುಲಧರನು ಓಡಿ ಬರುತಿರಲು ||ನಸುನಗುತಲಿ ಬಂದು ಭಸುಮಾಸುರನಿಗೆ |ವಿಷಯದಾಸೆಯ ತೋರಿ ಭಸುಮವ ಮಾಡಿದ 2ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ |ಬಸುರಿಲ್ಲದೆ ಬೊಮ್ಮನ ಪಡೆದಿಹಳು ||ಕುಸುಮನಾಭ ನಮ್ಮ ಪುರಂದರವಿಠಲನ |ಪೆಸರ ಪೊತ್ತವಳು ಈ ಹೊಸ ಕನ್ನಿಕೆಯು 3
--------------
ಪುರಂದರದಾಸರು
ಕಾಯೋ ಕೃಷ್ಣಭವತೋಯದಿ ಮುಳುಗಿ ಉ- |ಪಾಯವ ಕಾಣದೆ ಬಾಯ ಬಿಡುವೆನೋ ಕಾಯೋ ಕಾಯೋ ಪಭಾಗವತರ ಪ್ರಿಯ ನಾಗಭೂಷಣಸಖ|ನೀಗಿಭಯವಕರಬೇಗನೆ ಪಿಡಿಯೊ 1ಇಂದಿರೆಯರಸ ಮುಕುಂದ ಯಶೋದೆಯ |ನಂದನ ಕರುಣಿಸೊ ಇಂದೀವರಾಕ್ಷ2ಸಿಂಧುಶಯನ ಪೊರೆಯೆಂದು ಕರೆಯಕರಿ|ಬಂದು ಸಲಹಿದೆಯೋಮಂದದಯಾಳು3ಕುರುಪ ಪಿಡಿಯಲುದ್ಧರಿಸಿದೆ ತರುಣಿಯ |ನರಕಹ ನಿನಗೆ ನಾ ಪರಕೀಯನಲ್ಲೋ 4ಜಾನಕೀವಲ್ಲಭನೀನೇ ಮರೆದುಬಿಡೆ |ಕಾಣೆನೊ ಒಬ್ಬರ ನಾನವನಿಯೊಳು5ಭಕುತರಿಗೋಸುಗ ಹತ್ತವತಾರವ |ಅರ್ತಿಂದಲಿ ಕೊಂಡುತ್ತಮ ಶ್ಲೋಕ6ದ್ವೇಷಿಗಳೆನ್ನನು ಘಾಸಿಸದಂದದಿ |ಪೋಷಿಸುವುದು ಪ್ರಾಣೇಶ ವಿಠ್ಠಲನೇ 7
--------------
ಪ್ರಾಣೇಶದಾಸರು
ಗಂಗಾಪಿತ ರಾಘವ ನಂಬಿದೆ ಶ್ಯಾಮ-ಲಾಂಗ ನಿನ್ನಯ ಪಾದವ ||ಮಂಗಳೆ ರಮಣ ಭುಜಂಗಧರಾರ್ಚಿತಾ |ನಂಗಜ ಜನಕ ಪಾಲಿಸಿಂಗಡಲೊಡೆಯನೆ ಪಶಫರ, ಕಮಠ,ಕೋಲನೃಹರಿ ಬಾಲ |ನೃಪಕುಲ ಪವನ ವ್ಯಾಲ ||ವಿಪಿನಸಂಚರಾ ಕೃಷ್ಣ ವಿಪುಳಾಬುದ್ಧಕಲ್ಕಿ |ವಪುಧರ ಅನಿರುದ್ಧಕೃಪಣವತ್ಸಲ ಸ್ವರ್ಪಾ- ||ದಪನೆಹರಿಕಾಶ್ಯಪಿಯೊಳಗೆ ಸುರ ರಿಪುಹ | ಶಿವನ ಕ |ರಿಪನ ನರಪತಿ ದ್ರುಪದ ನಂದನೆಯ ಪೊರೆದೀಶ್ವರ |ಕಪಟನಾಟಕ ಕಪಿಲ ರೂಪಿ 1ಕುರು ಕುಲೋತ್ತಮನಾಗಾರದೊಳಗೆಕ್ಷೀರ|ಸುರಿದೆ ಗೋಕುಲ ವಿಹಾರ ||ವರವಿಪ್ರಜರ ತಂದೆ ಹರಚಾಪಹನನಈ |ಶರೀರವೇ ನಿನ್ನದು ಸರಿಬಂದದನು ಮಾಡೋ ||ಕರೆಕರೆಯ ಭವಶರಧಿಯೊಳು ಬಾ- |ಯ್ದೆರೆವೆ ರಕ್ಷಿಸುವರನು ಕಾಣೆನೊಬ್ಬರ ನಿನ್ನುಳಿ- ||ದುರಗ ಶಯನನೇ ಧರಿಜವಲ್ಲಭಕರುಣಿ ಕೇಶವ2ಜನನ ಮರಣ ದೂರ ಇಂದ್ರಾನುಜ |ಮುನಿ ಗೇಯಾ ಚಲಧರ ||ವನರುಹಭವಸಂಕ್ರಂದನವಂದ್ಯ ವೀತ ಆ |ವನಿ ಮುಖ ತನ್ಮಾತ್ರಾಗುಣ ಪ್ರಾಣೇಶ ವಿಠಲ ||ಪ್ರನಮಿತಾಘ ಕಕ್ಷಾನಲ ಕಂದರ್ಪನ ಪಿತನೆ |ನಿನ್ನನುಗರೊಳಗಿಡೋ ಮಣಿಯೇ ಅನ್ಯರಿ ||ಗನಘ ಪಾಲಿಪುದನವರತ ಯನ್ನನು ಬಿಡದಲೆ 3
--------------
ಪ್ರಾಣೇಶದಾಸರು
ನೀನೇಕೊ ನಿನ್ನ ಹಂಗೇಕೊ - ನಿನ್ನ -ನಾಮದ ಬಲವೆನಗಿದ್ದರೆ ಸಾಕೊ ಪ.ಆ ಮರ ಈ ಮರವೆಂದೆನ್ನುತಿರೆ ರಾಮ - |ನಾಮವೆ ವ್ಯಾಧನ ಮುನಿಪನ ಮಾಡಿತು 1ನಾರಾಯಣೆನ್ನದೆ ನಾರಗನೆನ್ನಲು |ಘೋರಪಾತಕಿಯನು ನಾಮವೆ ಕಾಯ್ದಿತೊ2ತಂದೆ ಪ್ರಹ್ಲಾದನ ಬಾಧೆಯ ಪಡಿಸೆ - ಗೋ |ವಿಂದನೆಂಬ ಸಿರಿನಾಮವೆ ಕಾಯ್ದಿತೊ 3ಉತ್ತರೆಯು ಗರ್ಭದಿ ಸುತ್ತಲಸ್ತ್ರವಿರೆ |ಚಿತ್ತಜಪಿತ ನಿನ್ನ ನಾಮವೆ ಕಾಯ್ದಿತೊ 4ಕರಿಮಕರಿಗೆ ಸಿಲ್ಕಿ ಮೊರೆ ಇಡುತಿರುವಾಗ |ಪರಮಪುರುಷ ಹರಿನಾಮವೆ ಕಾಯ್ದಿತೊ 5ನಾರಿಯನೆಳತಂದು ಸೀರೆ ಸೆಳೆಯುತಿರೆ |ದ್ವಾರಕಾಪತಿ ನಿನ್ನ ನಾಮವೆ ಕಾಯ್ದಿತೊ 6ಹಸುಳೆ ಧ್ರುವರಾಯನು ಅಡವಿಗೆ ಪೋಪಾಗ |ವಸುದೇವಸುತ ನಿನ್ನ ನಾಮವೆ ಕಾಯ್ದಿತೊ 7ನಿನ್ನ ನಾಮಕೆ ಸರಿಯಾವುದ ಕಾಣೆನೊಪನ್ನಗಶಯನ ಶ್ರೀ ಪುರಂದರವಿಠಲ 8
--------------
ಪುರಂದರದಾಸರು