ಒಟ್ಟು 92 ಕಡೆಗಳಲ್ಲಿ , 31 ದಾಸರು , 75 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಾರೆ ಅತ್ತಿಗೆಯರು ಚಂದನೋಡಿರೆಚಂದ ನೋಡಿರೆ ಇಂದಿರೇಶನ ಮುದ್ದುತಂಗಿಯರು ಕರೆಯಲು ಬಂದಾರೆ ಪ. ಸಾಲು ದೀವಿಗೆಯಂತೆ ಬಾಲೆಯರು ನಿಂತಾರೆ ಮ್ಯಾಲೆ ಸುಭದ್ರೆ ದ್ರೌಪತಿಯೆ ಇಂದೀವರಾಕ್ಷಿಮ್ಯಾಲೆ ಸುಭದ್ರೆ ದ್ರೌಪತಿ ನುಡಿದಳು ಮೇಲೆಂದು ನಿಮ್ಮ ದೊರೆತನ ಇಂದೀವರಾಕ್ಷಿ 1 ಕೃಷ್ಣನ ಮಡದಿಯರು ಎಷ್ಟು ದಯವಂತರು ಅಷ್ಟೂರಲ್ಲಿದ್ದ ಗರುವನೆಅಷ್ಟ್ಟೂರಲ್ಲಿದ್ದ ಗರುವನೆ ತುರುಬಿಗೆ ಮಲ್ಲಿಗೆ ಮಾಡಿ ಮುಡಿದಾರೆ2 ಫುಲ್ಲನಯನರ ದೈವ ಎಲ್ಲಿವರ್ಣಿಸಬೇಕುಎಲ್ಲರಲ್ಲಿದ್ದ ಗರುವನೆ ಎಲ್ಲರಲ್ಲಿದ್ದ ಗರುವನೆ ತಮ್ಮಲ್ಲಿಟ್ಟುಕೊಂಡಾರೆವಿನಯದಿ ಸಖಿಯೆ ಇಂದೀವರಾಕ್ಷಿ 3 ಹಿರಿಯ ಅತ್ತಿಗೆ ತಾನು ಗರುವಿನ ಸೀರೆಯನುಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಕರೆಯಲಿ ನಮ್ಮ ಇದುರಿಗೆ ಇಂದೀವರಾಕ್ಷಿ4 ಮಡದಿ ಸತ್ಯಭಾಮೆ ಬಡಿವಾರದ ಸೀರೆಯನುಟ್ಟುಕಡುಕೋಪವೆಂಬೊ ಕುಪ್ಪುಸವಕಡುಕೋಪವೆಂಬೊ ಕುಪ್ಪುಸವ ತೊಟ್ಟುಒಡಗೂಡಿ ನಮ್ಮ ಕರೆಯಲು ಇಂದೀವರಾಕ್ಷಿ5 ಅಷ್ಟು ಮಡದಿಯರು ಅತಿ ಸಿಟ್ಟಿನ ಸೀರೆಯನುಟ್ಟುಅಷ್ಟ ಮದವೆಂಬೊ ಕುಪ್ಪುಸವಅಷ್ಟ ಮದವೆಂಬೊ ಕುಪ್ಪುಸವ ತೊಟ್ಟುಧಿಟ್ಟಯರು ನಮ್ಮ ಕರೆಯಲು ಇಂದೀವರಾಕ್ಷಿ6 ಭಾಪುರಿ ಅತ್ತಿಗೆಯರು ಕೋಪದೊಸ್ತಗಳಿಟ್ಟುಭೂಪರಾಮೇಶನ ಮಡದಿಯರುಭೂಪರಾಮೇಶನ ಮಡದಿಯರು ಬಂದರೆದ್ರೌಪತಿ ದೇವಿಯ ಕರೆಯಲು ಇಂದೀವರಾಕ್ಷಿ 7
--------------
ಗಲಗಲಿಅವ್ವನವರು
ಬರತಾರಂತ್ಹೇಳೆ ಬಾಲೆಕರೆಯಲು ಬಾಯಿಮಾತಿನಲೆಬರತಾರಂತ್ಹೇಳೆ ಪ. ರಂಗನ ಪಾದಕಮಲ ಭೃಂಗಳೆ ದ್ರೌಪದಿಮಂಗಳಾದೇವಿ ರುಕ್ಮಿಣಿ ಸಖಿಯೆಮಂಗಳಾದೇವಿ ರುಕ್ಮಿಣಿ ಕರೆಯಲು ಅಂಗಳದೊಳಗೆ ಬರುತಾಳೆ ಸಖಿಯೆ 1 ಇಂದಿರೇಶನೆಂಬೊ ಚಂದ್ರಗೆಚಕೋರ ಕುಂದದಂಥವಳ ಸುಭದ್ರಾ ಸಖಿಯೆಕುಂದದಂಥವಳೆ ಸುಭದ್ರೆ ಕರೆಯಲೆ ಬಂದಳು ಭಾಮೆ ಎದುರಲಿ ಸಖಿಯೆ 2 ನಗ ಧರನ ಮುಖವೆಂಬೊ ಮುಗಿಲಿಗೆನವಿಲಸುಗಣಿರೈವರ ಮಡದಿಯರುಸುಗುಣರೈವರ ಮಡದಿಯರು ಕರೆಯಲುಮೂರ್ಜಗದ ಮೋಹನೆಯರು ಬರ್ತಾರೆ ಸಖಿಯೆ3 ಹರಿಯಾಗ್ರಜ ತನ್ನ ಹಿರಿಯರ ಕೂಡಿಕೊಂಡುಬರುವನು ಪರಮ ಹರುಷದಿ ಸಖಿಯೆಬರುವನು ಪರಮ ಹರುಷದಿ ಈ ಮಾತುದೊರೆಗಳಿಗೆ ಹೇಳೆ ವಿನಯದಿ ಸಖಿಯೆ4 ಎಲ್ಲರೂ ಮುತ್ತುರತ್ನ ಝಲ್ಲಿ ವಸ್ತ್ರಗಳಿಟ್ಟುಚಲುವ ಪ್ರದ್ಯುಮ್ನನ ಒಡಗೂಡಿ ಸಖಿಯೆಚಲುವ ಪ್ರದ್ಯುಮ್ನನ ಒಡಗೂಡಿ ಐವರಿಗೆ ಮಲ್ಲಿಗೆ ತೂರಾಡಿ ಕರೆಯಲಿ ಸಖಿಯೆ5 ಅಷ್ಟೂರು ಬಗೆಬಗೆ ಪಟ್ಟಾವಳಿಯನುಟ್ಟುಧಿಟ್ಟ ಸಾಂಬನ ಒಡಗೂಡಿಧಿಟ್ಟ ಸಾಂಬನ ಒಡಗೂಡಿ ಐವರಿಗೆ ಬುಕ್ಕಿಟ್ಟು ತೊರ್ಯಾಡಿ ಕರೆಯಲಿ ಸಖಿಯೆ6 ಮಾನಿನಿ ಮಾನಿನಿ ಸಹಿತಾಗಿ ರಮಿಅರಸುಮಾನದಲಿ ಐವರನ ಕರೆಸುವ ಸಖಿಯೆ7
--------------
ಗಲಗಲಿಅವ್ವನವರು
ಬರಬೇಕು ಇಂದಿಲ್ಲಿಗೆ ಇಂದಿರೆರಮಣಾ ಪಬಾರಯ್ಯಾ ಶ್ರೀಹರಿ 'ಠ್ಠಲ ವೆಂಕಟರಮಣಾಉಡುಪಿಯ ಶ್ರೀಕೃಷ್ಣಾ ಬದರಿನಾರಾಯಣಾ ಅ.ಪಕರಿರಾಜ ಕರೆಯಲು ಕರುಣಸಾಗರ ನೀನುಗರುಡವಾಹನನಾಗಿ ಭರದಿಂದ ಬಂದಂತೆ 1ಭಕ್ತ ಬಾಲನ ಮಾತು ಸತ್ಯಮಾಡಲು ನೀನುತತ್ಕ್ಷಣ ಸ್ತಂಭದಿಂ ಪುಟಿದು ನೀ ಬಂದಂತೆ 2ಸಚ್ಚಿದಾನಂದಾತ್ಮ ಸರ್ವತ್ರ ಪರಿಪೂರ್ಣಭಕ್ತವತ್ಸಲ ಶ್ರೀ ಭೂಪತಿ'ಠ್ಠಲ ಸ್ವಾ'ು 3
--------------
ಭೂಪತಿ ವಿಠಲರು
ಬರಿದೆ ಚಿಂತಿಸಿ ನೀನು ಬಳಲುವದೇಕೆ ಮನವೆ ಹರಿನಾಮ ಸ್ಮರಣೆಯು ಹರುಷದಲಿ ಸ್ಮರಿಸಿ ಧರ್ಮಾರ್ಥ ಕಾಮ ವರಮೋಕ್ಷ ಫಲಗಳು ಕರುಣಾ ಕಟಾಕ್ಷದಿಂದ ಶ್ರೀಧರ ನಿರುತ ಕೊಡುವ ಪ ಅರಿಷಡ್ವರ್ಗಕೆ ಸಿಲ್ಕಿ ಅರಿಯದೆ ಭವಸಾಗರದೊಳು ಮುಣುಗಿ ಮೈಮರೆದು ಶ್ರೀನರಹರಿ ಶರಣರ ಪೊರೆವ ಬಿರುದುಳ್ಳಂಥ ಗರುಡವಾಹನ ಸಿರಿಯರಸ ಪರಮಾತ್ಮನ ಕಮಲ ಅನುದಿನ 1 ನೆಚ್ಚಿ ನೀ ಮಂದಾಂಧನಾಗಿ ಅಂದು ಪ್ರಹ್ಲಾದ ಪರಮಾನಂದದಿ ಕರೆಯಲು ದ್ವಂದ್ವರೂಪತಾಳಿ ಬಂದು ಕಾಯಿದಾ ವೃಂದಾರ ಕೇಂದ್ರನುತ ಮಂದರಧರ ಮುಚುಕುಂದ ವರದನ್ನ ಸಲಹೆಂದು ಮೊರೆಯ ಹೋಗದೆ 2 ನರಜನ್ಮ ತಾಳಿ ಸುಖಸ್ಥಿರ ಮಾರ್ಗ ಕಾಣದೆ ಸತ್ಪುರುಷರ ಜರಿದು ಗರ್ವ ಭರಿತನಾಗಿ ಮುರನರಕಾಂತಕ ಮುಕ್ತಿದಾಯಕ ಶುಭಕರ ಸ್ಮರಜನಕ ಶ್ರೀಧರ ಮಾಧವ ತ್ವರದಿ ರಕ್ಷಿಸೋಯನ್ನ ಹರಿಸರ್ವೋತ್ತಮ ನೆನದೆ 3
--------------
ಹೆನ್ನೆರಂಗದಾಸರು
ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ಪ. ವರಗಿರಿ ವಾಸನ ಕರೆಯ ಬರುವ ಸೊಬಗು ಧರೆಯ ಮ್ಯಾಲಿಲ್ಲ ಸುಂದರಿಯೆ ರುಕ್ಮಿಣಿಯೆ 1 ಪಾಂಚಾಲಿ ಮೊದಲಾದ ಕೆಂಚೆಯರ ಆಭರಣವುಮಿಂಚಿನಂತೆ ಹೊಳೆಯುತ ಸಿದ್ಧರಾಗಿಹರಮ್ಮ ಚಂಚಲೆಯರು2 ಕಾಲಿಂದಿ ಮೊದಲಾದವರು ಭಾಳ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಳಾಶಯನನ ಬಳಿಗೆ 3 ಭದ್ರೆ ಮೊದಲಾದವರು ತಿದ್ದಿ ತಳಪಿಟ್ಟು ಶುದ್ಧ ವಸ್ತಗಳಿಟ್ಟುಸಿದ್ಧರಾಗಿಹರಮ್ಮ ಅನಿರುದ್ದನ ಕರೆಯಲು4 ಮಂದಗಮನೆಯರು ಗಂಧಕಸ್ತೂರಿ ಪುಷ್ಪಅಂದಾಗಿ ಧರಿಸಿ ಆನಂದವಾಗಿಹರಮ್ಮ5 ಕಾಲಂದುಗೆಗೆಜ್ಜಿ ತೋಳಲೆ ತಾಯಿತ ಭಾರಿ ವಸ್ತಗಳಿಟ್ಟು ಲೋಲ್ಯಾಡುತಿಹರಮ್ಮ6 ಅಚ್ಚಮುತ್ತಿನ ವಸ್ತ ಸ್ವಚ್ಚತೋರುವಂತೆ ಬಿಚ್ಚಿ ಚಾದರ ಹೊತ್ತು ಮಚ್ಚನೇತ್ರಿಯರೆಲ್ಲ 7 ಅಂದುಗೆ ಅರಳೆಲೆ ಬಿಂದುಲಿ ಭಾಪುರಿ ಕಂದರಿಗೊಸ್ತಗಳಿಟ್ಟು ಆನಂದವಾಗಿಹರಮ್ಮ8 ಮುತ್ತಿನ ಝಲ್ಲೆ ವಸ್ತಗಳಿಟ್ಟು ಫುಲ್ಲನಾಭನ ಕರೆಯಲು ಎಲ್ಲರೂನಿಂತಾರೆ9 ಶ್ರೇಷ್ಠ ರಾಮೇಶನ ಅಷ್ಷೊಂದು ಕರೆಯಲು ಪಟ್ಟಾವಳಿಗಳನುಟ್ಟು ಧಿಟ್ಟೆಯರು ನಿಂತಾರೆ10
--------------
ಗಲಗಲಿಅವ್ವನವರು
ಬಾ ಬಾ ಬಾರೈ ಬಾ ಬಾ ಬಾ ಬಾರೈ ಬಾ ಬೇಗ ಬಾರೆಂದು ಭಕುತರು ಕರೆಯಲು ಹರಿ ಪ. ಶ್ರೀಸತಿಯಪ್ಪಿಕೊಂಡಿಪ್ಪನೆ ಬಾ ಶೇಷಶಯನ ಎನ್ನಪ್ಪನೆ ಬಾ 1 ಮತ್ಸ್ಯನಾಗಿ ಜಲದೊಳಾಡಿದವನೆ ಬಾ ಕಚ್ಛಪವತಾರವ ಮಾಳ್ದನೆ ಬಾ 2 ಧsÀರೆಗಾಗಿ ಜಲದೊಳಗಿಳಿದನೆ ಬಾ ಹಿರಣ್ಯಕನುದರವ ಸೀಳ್ದನೆ ಬಾ 3 ಶಕ್ರನ ಪೊರೆದ ಶ್ರೀ ವಾಮನನೆ ಬಾ ವಕ್ರನೃಪಾಲಕುಲಶಮನನೆ ಬಾ 4 ರಾವಣಾಂತಕ ರಘುರಾಮನೆ ಬಾ ದೇವಕಿ ನಿಜಸುತ ಪ್ರೇಮನೆ ಬಾ 5 ಸತಿಯರ ವ್ರತವ ಕೆಡಿಸಿದನೆ ಬಾ ಚತುರ ಕಲಿಯನೋಡಿಸಿದನೆ ಬಾ 6 ಹಯವದನಾಶ್ರಿತ ಶರಣನೆ ಬಾ ಪ್ರಿಯಸುರ ಸೇವಿತ ಚರಣನೆ ಬಾ 7
--------------
ವಾದಿರಾಜ
ಬೆಳಗಿರೆ ಆರುತಿ ಲಲನೆಯರೆಲ್ಲರು ಬಲಿ ನೃಪತಿಯ ಬಾಗಿಲ ಕಾಯ್ದವಗೇ ಪ ಶಿಲೆಯನು ಪದದಲಿ ಲಲನೆಯ ಮಾಡಿದ ಇಳಿಜಾರಮಣನ ಚಲುವ ಮೂರುತಿಗೆ1 ಪದುಮಾವತಿಯಳ ಮದುವೆ ಯಾದವಗೆ ಸುದತಿಯೆಲ್ಲರು ಮುದದಲಿ ಪಾಡುತ 2 ಕರಿವರ ಕರೆಯಲು ಭರದಿ ಬಂದೊದಗಿದ “ಸಿರಿ ಕಾರ್ಪರ ನರಹರಿ“ ರೂಪನಿಗೆ 3
--------------
ಕಾರ್ಪರ ನರಹರಿದಾಸರು
ಬ್ಯಾಡ ಬ್ಯಾಡಿರೆಂದ ಅವರೊಳು ಪಂಥಬ್ಯಾಡ ಬ್ಯಾಡಿರೆಂದು ಬ್ಯಾಡ ಬ್ಯಾಡ ಪಂಥ ನೋಡಿಕೊ ರುಕ್ಮಿಣಿಮಾಡೋರು ಮುಖಭಂಗಬೇಡಿಕೊಂಡೆನು ಭಾವೆ ಪ. ಹರದೆಯರಾಡಿದ ಮಾತು ಹರಿಯು ಕೇಳುತಬೇಗ ಕರೆಯ ಹೋಗೆಂದ ಮಡದಿಯರ ಕರಿಯ ಹೋಗೆಂದ ಮಡದಿಯರ ದ್ರೌಪತಿಯೆಸರಿಯಲ್ಲ ಪಂಥ ಬಿಡಿರೆಂದ1 ಹಾದಿ ಬೀದಿಯ ಮಾತು ಸಾಧಿಸುವರೆ ನೀವುವೇದಾಂತ ಮಳೆಯ ಗರೆದಾರುವೇದಾಂತ ಮಳೆಯ ಗರೆದಾರು ನಿಮ್ಮ ಮುಖಆದೀತು ಸಣ್ಣ ಸಭೆಯೊಳು 2 ಅತ್ತಲಿತ್ತಲೆ ಮಾತು ಜತ್ತು ಮಾಡೋರೆನೀವುಶ್ರುತ್ಯರ್ಥವೆಲ್ಲ ಸುರಿಸೋರುಶ್ರುತ್ಯರ್ಥವೆಲ್ಲ ಸುರಿಸೋರು ನಿಮ್ಮಮುಖ ಬತ್ತೀತು ಒಂದು ಕ್ಷಣದಾಗೆ 3 ಮಂದರಧರ ತನ್ನ ತಂಗಿಯರ ಕರೆಯೆಂದು ಮಂದಹಾಸದಲಿ ನುಡಿದನುಮಂದಹಾಸದಲಿ ನುಡಿದನು ಭಾವೆರುಕ್ಮಿಣಿ ಬಂದರು ಭಾಳೆ ವಿನಯದಿ4 ಆರು ಮಂದಿ ಹರಿಯ ನಾರಿಯರುಹದಿನಾರು ಸಾವಿರ ಮಂದಿ ಸಹಿತಾಗಿಹದಿನಾರು ಸಾವಿರ ಮಂದಿ ಸಹಿತಾಗಿ ಬಂದರು ನಾರಿ ದ್ರೌಪದಿಯ ಕರೆಯಲು5 ನೂರುಮಂದಿ ಹರಿಯನಾರಿಯರುತಂತಮ್ಮ ಹಾರಭಾರಗಳ ಅಲವೂತಹಾರಭಾರಗಳು ಅಲವೂತ ಬಂದರು ನೀರೆ ಸುಭದ್ರೆಯು ಕರೆಯಲು 6 ಪನ್ನಂಗ ವೇಣಿಯರು ಮನ್ನಿಸಿ ಹರಿಯಾಜ್ಞೆಚನ್ನ ರಾಮೇಶನ ಮಡದಿಯರು ಚನ್ನ ರಾಮೇಶನ ಮಡದಿಯರು ಬಂದರುಕನಿ ದ್ರೌಪತಿಯ ಕರೆಯಲು 7
--------------
ಗಲಗಲಿಅವ್ವನವರು
ಭಜಿಸುವೆನು ನಾನಿನ್ನ ಭಕ್ತಾಧೀನ ಅಜಹರನುತ ಅಗಣಿತಚರಿತ ಹರಿ ಪ ಅಂದು ಮುನಿಸತಿ ಶಾಪದಿಂದ ಶಿಲೆಯಾಗಿರೆ ಛಂದದಿ ಚರಣಾರವಿಂದ ಸ್ಪರ್ಶವಾಗಲು ಕುಂದು ಪರಿಹಾರವಾಗಿ ಸುಂದರ ಮಣಿಯಾದಳೆಂದು ನಿಮ್ಮಯ ಪಾದದ್ವಂದ್ವ ಬಿಡದಲೆ ನಾ 1 ಕಂದ ಕರೆಯಲು ಶ್ರೀ ಗೋವಿಂದ ಘನ ಸ್ತಂಭದೊಳ್ ಬಂದು ದೈತ್ಯನ ಕೊಂದ ಇಂದಿರಾರಮಣ ಕಂದರ್ಪ ಜನಕ ಮುಚುಕುಂದ ವರ ಕೃಷ್ಣಾ ಮಂದರಧರ ಸಲಹೆಂದು ಅನವರತ 2 ದೃಢ ಧ್ರುವರಾಯನ ಬಿಡದೆ ಮಲತಾಯಿ ತಾ ಅಡವಿಗೆ ನೂಕಿಸಲು ಕಡು ಮುದದಿ ಕಡಲಶಯನ ಜಗದೊಡಿಯನೆ ಕಾಯ್ದೆ ಗರುಡವಾಹನನೊಡನೆ ನುಡಿಯಯ್ಯ 3 ದುರುಳ ರಾವಣನ ದಶಶಿರಗಳು ಖಂಡಿಸಿ ಶರಣೆಂದು ವಿಭೀಷಣ ಗೇ ಸ್ಥಿರದಿ ಪಟ್ಟವನಿತ್ತು ಪರಮಪುರುಷ ಶಿರಿವರ ನರಹರಿ ಶೌರಿ ಮೊರೆ ಹೊಕ್ಕೆ ರಕ್ಷಿಸೋ ಮುರಹರ ಕರುಣಾಂಬುಧೆ 4 ಕರಿಸರೋವರದಿ ಮಕರಿಯ ಬಾಧೆಗೆ ಸಿಕ್ಕು ಹರಿನೀನೆ ಗತಿಯೆಂದು ಸ್ಮರಿಸುತಲಿರಲು ಭರದಿಪೋಗಿ ಕಷ್ಟಪರಿಹರಿಸಿ ಪೊರೆದಿ ಶ್ರೀಧರವರÀ ಹೆನ್ನೆಯಪುರ ಲಕ್ಷ್ಮೀನರಸಿಂಗ 5
--------------
ಹೆನ್ನೆರಂಗದಾಸರು
ಭಾಗೀರಥಿ ಭಾಗೀರಥಿಬಾಗುವವರಿಗೆ ದಯವಾಗಿರತಿ ಪ. ಗಂಗೆ ಗೌತುಮೆ ತುಂಗೆ ಮಂಗಳೆ ಕೃಷ್ಣಿ ನಿನ್ನಹಿಂಗದೆ ಅವರನ ರಂಗಿಸುವರೆ ತಾಯಿ 1 ಮಾನಸ ಸರೋವರನಾನಾ ತೀರ್ಥಗಳೆಲ್ಲಧೇನಿಸಿ ನಿನ್ನಯ ಮಾನ್ಯವ ಪಡೆದಿವೆ2 ಬ್ರಮ್ಹಾಂಡ ಬಿಚ್ಚಿ ಪರಬೊಮ್ಮಗ ಮಗಳಾದಿಬೊಮ್ಮನ ತಂಗಿ ನಾವು ನಿನ್ನನು ನೆನೆದೆವು3 ಸತ್ಯ ಲೋಕವ ಸ್ಮರಿಸಿ ಮತ್ತೆ ಸ್ವರ್ಗಕೆ ಬಂದಿಪ್ರಾರ್ಥಿಸಿದ ದೈವ ನಿನ್ನ ಅರ್ಥಿಲೆ ಗೆಲಿಸಮ್ಮ 4 ಭಗೀರಥ ಕರೆಯಲು ನಗದಲ್ಲಿ ಬಿದ್ದು ಕಾಶಿನಗರಕ್ಕೆ ಬಂದ ರಮಿ ಮಗಳ ಬಲಗೊಂಬೆ 5
--------------
ಗಲಗಲಿಅವ್ವನವರು
ಮಂಗಳ ಜಯ ಮಂಗಳ ಮಂಗಳ ಶ್ರೀ ನರಸಿಂಗ ಮೂರುತಿಗೆ ಪ ಅಂಗುಟಾಗ್ರದಿ ಗಂಗೆಯ ಪಡೆದ ಗಾತ್ರ ಶ್ರೀ ರಂಗನಿಗೆ ಅಂಗಜರಿಪು ಧನು ಭಂಗವ ಮಾಡಿ ಸೀ- ತಾಂಗನೆಯಳ ಕರಪಿಡಿದವಗೆ 1 ವರಮತ್ಸ್ಯಗೆ ಗಿರಿಧರ ಕ್ರೋಢಗೆ ತರುಳನ ರಕ್ಷಿಸಿ ಧರೆಯ ಬೇಡಿದಗೆ ಪರಶು ಧರಿಸಿದ ರಾಮಕೃಷ್ಣಗೆ ಧರಿಸದೆ ವಸನವ ತುರಗನೇರಿದಗೆ 2 ಕರಿವರ ಕರೆಯಲು ಭರದಿ ಬಂದವಗೆ ಸ್ಮರಿಪರ ಭಯ ಪರಿಹರಿಸುವ ದೇವಗೆ ಶರಣು ಜನಕೆ ಸುರತರುವೆಂದೆನಿಸಿದ ಸಿರಿ ಕಾರ್ಪರ ನರಹರಿ ರೂಪಗೆ 3
--------------
ಕಾರ್ಪರ ನರಹರಿದಾಸರು
ಮದನ ಜನಕ ಹೃದಯ ನಿಲಯಕೆ ಮುರವÀುಥನ ಪ ಆದರದಲಿ ಉಪಚರಿಸುವೆನು ಕಲಿ ಬಾಧೆಯ ಪರಿಹರಿಸೋ ಮಧುಸೂದನ ಅ.ಪ ಪೂರ್ಣಸದಾಗಣಿತೇಡ್ಯಗುಣಾನುಭ ವೈಕಶರೀರ ಕಲುಷದೂರ ಚೀರ್ಣ ಪುಣ್ಯಚಯದಿಂದ ಕರೆಯಲು ತ್ರಾಣವಿಹುದು ಮನ್ಮನದಲಿ ನೆಲಿಸೊ 1 ಶಮದಮಗಳನುಗ್ರಹಿಸುತ ಸಜ್ಜನ ಸಮಿತಿಯ ಸಹವಾಸವ ನೀಡೋ ಅಮಿತಪ್ರಮತಿಗಳ ಶಾಸ್ತ್ರಪ್ರವಚನದಿ ಮಮತೆಯ ಸ್ಥಿರಪಡಿಸೊ ಶೃತಿಪತೇ 2 ಗುರುಕರಣವು ನಿನ್ನನರಿಯಲು ಕಾರಣ ಶರಣಂಭವ ಸಂತತ ಹಿರಿಯರು ಮಾಡಿದ ಸಾಧನಗಳಿಗಿದು ಹಿರಿದಾಗುವುದೇ ಪ್ರಣತ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಪ ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ1 ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ 2 ದುರಿತ ಭವ ಪಾಶಾ - ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು3
--------------
ಕನಕದಾಸ
ಮಾಧವ ನಮ್ಮ ಹೆ ಜ್ಜಾಜಿಯ ಚೆನ್ನಕೇಶವಾ ಪ ಸಾಜದಿ ಶರಣರಿಗೊಲಿವಾ ಸುರ ಭೂಜನು ಪರವಾಸುದೇವಾ ಅ.ಪ ಮರೆತವರಿಗೆ ಮತ್ತೂ ದೂರನು ಇವ ಮರೆಹೊಕ್ಕವರ ಮುಂದಿರುವನು ದುರಿತಗಳಡಗಿಸಿ ದಾಸರ ಪೊರೆವಾ ಪರಮದಯಾಳುವು ಪ್ರಭು ಶ್ರೀನಿಭವ 1 ನಿರ್ಜರ ಮುನಿಗಣ ಲೋಲಾ ಶೀಲಾ ಸಾರಥಿ ಲೀಲಾ ಪರ್ಜನ್ಯ ಪ್ರಭುಪರಿಪಾಲ ನೀಲಾ ದುರ್ಜನ ವಂಶಕ್ಕೆ ಕಾಲಾ 2 ನಿತ್ಯತಂದೆಯು ತಾಯಿಯು ಶ್ರೀರಂಗಾ ಸತ್ಯಸಹೋದರನು ವೆಂಕಟರಂಗಾ ಸ್ತುತ್ಯ ಬಂಧುವು ತಾನೆ ನರಸಿಂಗಾ ಇವ ಪ್ರತ್ಯಕ್ಷನೊ ಅಂತರಂಗ 3 ವೆಂಕಟವರದನೆ ಸದಯಾ ಗುರು ಸಂಕಟಹರ ಬಹುವಿನಯಾ ರಂಗ ಪಂಕಜಸಂಭವ ತನಯಾ 4 ಯಾದವ ಯದುಶೈಲಶೃಂಗಾ ಸಾಂಗ ಮಣಿ ಉತ್ತಮಾಂಗ [ವೇದ] ವೇದ್ಯನೆ ಗರುಡತುರಂಗಾ ಗಂಗಾ ಬಾದರಾಯಣ ಗೀತೋತ್ತುಂಗ 5 ಸಂಪಿಗೆ ಕಂಪಿನ ಸುಂದರ ಸಂಪೂರ್ಣ ಸಂಪತ್ಕುಮಾರ ಶ್ರೀ ಭೂನೀಳ ರಮಣ ತಂಪಿನ ಹೃದಯದ ಪ್ರಾಣಸೂತ್ರಾದಿ ಪೆಂಪಿನಗುರು ಶ್ರೀನಿವಾಸ ಕಲ್ಯಾಣ6 ರಾಘವಜಯ ಸೀತಾರಾಮಾ ಸ್ವಾಮಿ ರವಿಕುಲ ಸುಂದರಸೋಮ ಯೋಗಿ ಜನಾನಂದ ಧಾಮಾ ಪ್ರೇಮಪ್ರಿಯ ಶ್ರೀಶ್ಯಾಮ ಭಾಗವತಾನಂದಪ್ರಿಯ ಪುಣ್ಯನಾಮಾ ಚತು ಸಾಗರಾಂತ ಸಾರ್ವಭೌಮ 7 ಭಕ್ತಮಂಡಲಿ ಕಾಮಧೇನು ಜೇನು ವಿ ರಕ್ತ ಜನರ ಹೃದಯಭಾನು ಮುಕ್ತಿ ಬಯಸಿ ಬಂದೆ ನಾನು ಪ್ರೇಮಾ ಸಕ್ತಿ ಸಿದ್ದಿಯ ನೀಡು ನೀನು 8 ಸಕಲದೇವರೊಳೆಲ್ಲ ನೀನೇ ಹೆಚ್ಚು ಅಕಳಂಕ ಸಾಧುಗಳ ಸವಿಬೆಲ್ಲದಚ್ಚು ನಿಖಿಳಜೀವರೊಳೆಲ್ಲ ಪರಮಾತ್ಮನಚ್ಚು ಸುಕರದಿ ನೆನೆಯುವ ನನಗೆ ನಿನ್ನಯ ಹುಚ್ಚು 9 ಪರಿಪರಿ ಭವಸಂಸಾರಾ ಸಾರಾ ಹೊರಲಾಲೆ ದೂಡುವೆ ದೂರಾ ಪರಮಾತ್ಮಾ ಪದಗಳ ಸೇರಾ ಸಾರಿ ಕರೆಯಲು ಕರಗಳ ತೋರಾ 10 ರಾಜ ಜನಾರ್ಧನ ದಿವ್ಯಂ ದಿವ್ಯಂ ಜಾಜಿ ತುಲಸೀ ಮಾಲ ಭವ್ಯಂ ಯಾಜಿ ಕಮಂಡಲ ದ್ರವ್ಯಂ ಸ್ತವ್ಯಂ ಜನಗಾನ ಶ್ರೋತವ್ಯಂ 11 ಸರ್ವಲೋಕ ಶರಣ್ಯ ಗಣ್ಯ ಉರ್ವಿ ದೇವ ವರೇಣ್ಯ ಹಿರಣ್ಯ ಸ್ವರ್ಣ ವಿರ್ವತ ದರಶ್ಯಾಮ ಪುಣ್ಯ 12
--------------
ಶಾಮಶರ್ಮರು
ಮಾನವ ನೀನುವಾದಿರಾಜರ ಪೂಜಿಸೋ ಪ ಶಾರ್ವರಿ ವತ್ಸರದೀ | ಜನಿಸಿ ಗೌರಿಗರ್ಭ ಸುಧಾಂಬುಧಿಲೀ ||ಪುರಬಾಹ್ಯ ಪುಟ್ಟಿದ | ಕಾರಣದಿಂದಲಿವರಯತಿ ವಾಗೀಶ | ಕರಜನೆನಿಸಿ ಮೆರೆದ 1 ವಿನುತ ಸಿರಿ ಹರಿಯ ಪೂಜಿಸಿದ 2 ವಾಲಿ ಭಂಡಾರವನೂ | ಶೋಧಿಸೆ ಅಲ್ಲಿಶೀಲ ಇನಜಾರ್ಚಿಸಿದ ||ಲೀಲ ವಿಗ್ರಹ ರಾಮ | ವಿಠಲ ಮೂರ್ತಿಗಳನ್ನಕೋಲಾಹಲದಿ ತಂದು | ಭಾಳ ಪೂಜಿಸಿದ 3 ವ್ಯಾಸರಾಜಾರ್ಚಿತನಾ | ದೇವನವೇದವ್ಯಾಸರಿಂದಲಿ ಗಳಿಸಿದಾ |ವ್ಯಾಸಮುಷ್ಠಿಕೆಯ ವಿ | ಶ್ವಾಸದಿಂದಲಿ ಪೊಂದಿಶ್ರೀಶ ಉಡುಪಿನ ಕೃಷ್ಣ | ವಾಸ ಸ್ಥಾನಕೆ ಬಂದ 4 ಕವಿಕುಲ ಸಭೆಯೊಳಗೇ | ಪೂಣೆಯ ಪುರದಿನವರಸಲಂಕಾರದೀ ||ಕವನ ರಚಿಸಿ ರುಕ್ಮಿ | ಣೀಶ ವಿಜಯ ಗ್ರಂಥಕವಿ ಕುಲೋತ್ತಂಸ | ತಾನೆನಿಸುತ್ತ ಮೆರೆದಂಥ 5 ಪಂಢರಿ ಪುರ ಮಾರ್ಗವ | ಸವೆಸುತ ಬರೆಪುಂಡು ಸೈನಿಕರ್ ಬರಲೂ ||ಪುಂಡಲೀಕಗೆ ವರದ | ಪುಂಡರೀಕಾಕ್ಷನಹಿಂಡು ಶ್ವೇತಾಶ್ವಗಳಿಂದ ವಾರಿಸಿದಾ 6 ಹರಿವಾಣ ಪೂರಣವ ||ಹಯವದನನು ಬಂದು | ಜಯ ಘೋಷದಲಿ ಮೆದ್ದುದಯ ದೃಷ್ಟಿ ತೋರಿದ | ಭಾವಿ ಮಾರುತರ 7 ಪಾದ | ಬಿಸಜವ ಕಂಡರ 8 ಬೊಮ್ಮ ರಕ್ಕಸನಾಗೀ 9 ಸಕಲ ಶಿಷ್ಯರವೆರಸಿ | ರಾಜರು ಬರೆರಕ್ಕಸ ಕರೆದ ವಾದಕ್ಕೇ ||`ಆಕಾಮವೈ` ಕೋ ನಸ್ನಾತನೆಂದೆನೆ ಅವಕಾಕು ರಂಡೆಯ ಪುತ್ರ | ತೋಕ ನೀನೆಂದ 10 ಮೇನೆ ಪಾಲಕಿ ಹೊರುವ | ನರೆಯಣ ಭೂತಯಾನ ವಾಹಕನಾದನೂ ||ಆನೆಂತು ಬಣ್ಣಿಪೆ | ಮುನಿಕುಲ ದಿನಮಣಿವೇಣುಗಾನ ಪ್ರಿಯ | ಕೃಷ್ಣ ಸೇವಕರಾ 11 ಆ ಮಹ ನೇತ್ರಾವತಿ | ಸಂಗಮವೆನ್ನಕೌಮಾರ ನದಿ ಸನಿಯದಿ ||ಈ ಮಹಾ ಮಹಿಮರು | ಸಾಸಿರ ಲಿಂಗದನೇಮದ ಪೂಜೆಗೆ | ನಿರ್ಮಿಸಿದರು ತೀರ್ಥ 12 ಪಾದ್ಯ | ಸ್ವರ್ಣ ಗರ್ಭನ ಪಿತಪೂರ್ಣಗೆ ಸುಪ್ರೀಯ | ಗಸದಳವೇನಿದು13 ಗರಳ ಮಿಶ್ರಿತ ನೈವೇದ್ಯ | ಪಾಚಕತೆರೆಹರಿಗೆ ಸಮರ್ಪಿಸಿದಾ ||ಸಿರಿಪತಿ ಕಂಠದೋಳ್ | ಕರಿಯ ವರ್ಣವ ಕಂಡುಅರಿತು ಸೇವಿಸಿದನು | ಹರಿಯ ಪ್ರಸಾದವ 14 ಸಿರಿ ಕೃಷ್ಣ | ನಂಘ್ರಿಗರ್ಪಿಸಿದ 15 ಅರಿಯು ಮುತ್ತಲು ಪುರವ | ಸೋದಾಧಿಪಮೊರೆಯ ಹೊಕ್ಕನು ರಾಜರ ||ಭರದಿ ನಾರಾಯಣ | ವರ ಭೂತನನ ಕಳುಹಿಅರಿಭಯ ವಾರಿಸಿ | ಪೊರೆದ ನಾಯಕನಾ 16 ಸೋದೆಯಲ್ಲೋರ್ವ ಶೈವ | ಬಲುಗರ್ವದಿವಾದ ಮಾಡುತಲವನೂ ||ವೇದ ಮತವ ಬಲು | ವಿಧದಿ ದೂಷಿಸಿ ಕಡುಬಾಧೆ ಪಡಿಸುತಲಿದ್ದ | ಬುಧಜನ ವೃಂದವ 17 ಭೃತ್ಯ ಭಾವದಿ | ವಿಜಯ ಪತ್ರವನಿತ್ತುನಿಜ ಬಿರುದುಗಳವರ | ಪದಕೆ ಅರ್ಪಿಸಿದ 18 ತ್ರಿವಿಕ್ರಮಾಲಯ ಸ್ಥಾಪನೆ | ರಚಿಸಿ ಮೆರೆದ ದಿವ್ಯ ಶಾಲೀವಾಹನ್ನ ||ಸಾವಿರೈನೂರ್ನಾಲ್ಕು | ಚಿತ್ರ ಭಾನುವಿನಲ್ಲಿರವಿಯು ಮೇಷಾರ್ಧದಿ | ಚರಿಸುವ ದಿನದಿ 19 ರಥದಿಮೂರ್ತಿಯ ಸೇರಿಸಿ | ಬದರಿಯಿಂದಭೂತ ನರೆಯಣ ಬರುತಿರೆ ||ಪಥದಿ ರಕ್ಕಸ ಸೆಣೆಸೆ | ಪೃಥುಕು ಆಯುಧ ಬಿಟ್ಟುರಥದ ಗಾಲಿಯಲಿಂದ | ಹತಗೈದನವನ 20 ವೇದಾರ್ಥ ಬೃಂಹಿತದ | ಬಹು ಗ್ರಂಥಗಳ್‍ಪದ ಪದ್ಯ ಸೂಳ್ಹಾದಿಯ ||ಸೋದೆ ಮಠದಿ ನಿಂದು | ವಾದಿರಾಜರು ರಚಿಸಿಬುಧರಿಗಾನಂದವ | ಮುದದಿ ಪಾಲಿಸಿದ 21 ತ್ರಿವಿಕ್ರಮ ರಥೋತ್ಸವದಿ | ಕರೆಯಲು ಬಂದದಿವಿರಾಜ ಜನರು ಕಳುಹಿ ||ಭವ್ಯ ಸು ಪಂಚ ವೃಂದಾವನಗಳ ರಚಿಸಿದಿವಿರಾಜ ಗರುಹಿದರ್ ತಮ್ಮಯ ಬರವನು 22 ಶಾರ್ವರಿ ವತ್ಸರದೀ | ಫಾಲ್ಗುಣ ವದ್ಯಮೂರನೆ ದಿವಸದಲ್ಲೀ ||ವರ ವೃಂದಾವನ ಪೊಕ್ಕು | ಗುರು ಗೋವಿಂದ ವಿಠಲನನಿರುತ ಧ್ಯಾನದೊಳಲ್ಲಿ | ವರವ ಪಾಲಿಸುತಿಹರ 23
--------------
ಗುರುಗೋವಿಂದವಿಠಲರು