ಒಟ್ಟು 35 ಕಡೆಗಳಲ್ಲಿ , 17 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಗವಂತನ ಸಂಕೀರ್ತನೆ2ಅಷ್ಟರೊಳಗೆ ಕೃಷ್ಣ ಬಂದನೆಸೃಷ್ಟಿಗೊಡೆಯ ದೇವನು ಪಜಗದುದರಜಾÕನಿಗಳ ಧ್ಯಾನಕೆಗೋಚರಾಗೋಚರನಾಗುತ ಅಪಅಂದಿಗೆ ಕಾಲ್ಗೆಜ್ಜೆ ಸರಪಣಿಬಂದಿ ಕಂಕಣ ತೋಳಬಾಪುರಿಮಂದಹಾಸ ಮುಂಗುರುಳು ಮುಖದಸುಂದರಾಂಗನ ಹುಡುಕುತಿರಲು 1ತರಳರೊಡನೆ ಕೂಡಿ ಕೃಷ್ಣಮುರಳಿನಾದ ಗೇಯ್ಯುತಿರಲುಸರಸಿಜಾಕ್ಷನ ಕಾಣದೆ ತವಕಿಸಿಹರಿಯ ಹುಡÀುಕುತಿರಲೆಶೋದೆ 2ವತ್ಸಗಳ ಬಾಲಗಳನೆ ಪಿಡಿದುಸ್ವೇಚ್ಛೆಯಿಂದ ನಲಿಯುತಿರಲುಅಚ್ಚುತನೆಲ್ಲೊ ಕಾಣೆನೆನುತಕೃಷ್ಣ ಕೃಷ್ಣನೆಂದು ಕರೆಯೆ 3ಮನೆ ಮನೆಗಳ ಪೊಕ್ಕು ಪಾಲುಮೊಸರು ಬೆಣ್ಣೆ ಮೆಲುವೆನೆನುವವನಿತೆಯರಸಂತೈಸಿಕಳುಹಿತನಯನೆಲ್ಲೆಂದುಡುಕುತಿರಲು 4ಬಂದನು ಬಲರಾಮ ಭಯದಿಇಂದಿರೇಶ ಮಣ್ಣು ಮೆಲುವನೆಂದು ಪೇಳೆ ಬಾಯ ತೆಗಿಸಿಕಂಡು ವಿಶ್ವವ ವಿಸ್ಮಯಗೊಳುತಿರೆ 5ಸುರಗಂಧರ್ವರು ನೆರೆದರಂಬರದಿಪರಮಧನ್ಯಳೆಶೋದೆ ಎನುತಹರಿಯ ಗುಣಗಳನ್ನೆ ಸ್ತುತಿಸಿಹರುಷದಿಂದ ನಲಿಯುತಿರಲು 6ಕಮಲಸಂಭವ ಜನಕನನೆತ್ತಿವಿನಯದಿಂದ ಮುದ್ದಿಸುತ್ತಿರೆಕಮಲನಾಭ ವಿಠ್ಠಲನ ಸಿರದಿಕಮಲಕುಸುಮಮಳೆಗರೆದರು7ಮಂಗಳಂ ಜಯ ಮಂಗಳಂಶುಭಮಂಗಳಂ ಶ್ರೀ ಕೃಷ್ಣಗೇ
--------------
ನಿಡಗುರುಕಿ ಜೀವೂಬಾಯಿ
ವೆಂಕಟಪತಿ ಶರಣು ಹಾಹಾ ವೆಂಕಟಪತಿ ಶರಣು ಪ.ಕಮಲಸಂಭವನುತಚರಣಶುಭಕಮಲಾರಿಕುಲಭರಣಕಮಲಸಖಸಂತಾರುಣ ಕಿರಣ ಕರುಣಾಸಂಪೂರ್ಣ1ಸಿರಿಭೂದೇವಿಯರ ರಮಣ ದಿವ್ಯಸರಸಾಕ್ಷ ಖಗವರಗಮನಸುರರಿಪುಗಣಾಸುರದಮನಭವಹರಸುರವರಸಮ ನಾಮ ನಮೊ2ಶೇಷಗಿರಿಯತಟನಿಲಯ ಫಣಶೇಷಭೂಷಣಮಣಿನಿಲಯಪ್ರಸನ್ವೆಂಕಟ ತಿರುಮಲೆಯೊಳಿಹ ಚೆಲುವ ಸ್ವಸುಖ
--------------
ಪ್ರಸನ್ನವೆಂಕಟದಾಸರು
ಶರಣು ಶರಣೂ ಪ.ಮಹಾದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನುಸಾಧುಮಾತೆಯ ಶಾಪವನ್ನು ಕೈಗೊಂಡುಆದಿಪೂಜೆಗೆ ಅಭಿಮಾನಿದೇವತೆಯಾದಿಮಾಧವನಮ್ಮ ಹಯವದನನ್ನ ಪ್ರಿಯ1ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದುಕಮಲಸಂಭವಸುತನ ಒಲಿಸಬೇಕೆಂದುರಮಣಿ ರಾಮಮಂತ್ರ್ರ ದಿನಸಹಸ್ರವು ಜಪಿಸೆಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ 2ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿಕಡುಘೋರ ತಪಗೈಯೆ ಮನ್ಮಥನು ಬರಲುಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿಕಡಲೊಡೆಯ ನಮ್ಮ ಹಯವದನನ್ನ ಪ್ರಿಯ 3ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲುತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲುಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರಅಚ್ಯುತನಮ್ಮ ಹಯವದನನ್ನ ಪ್ರಿಯೆ4ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನುತ್ರೇತೆಯಲಿ ರಾಮರ ಸೇವೆಯನು ಮಾಡಿಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀಶ್ರೀಪತಿ ಹಯವದನ ದೂತ ಪ್ರಖ್ಯಾತ 5ಈರೇಳು ಲೋಕದ ಜನರ ನಾಲಗೆಯಲ್ಲಿಬೀಜವನು ಬಿತ್ತಿ ಅನ್ನವ ಕೊಡುವ ತಾಯೆವಾರಿಜಸಂಭವನ ಹಿರಿಯ ಪಟ್ಟದ ರಾಣಿನೀರಜಾಕ್ಷನಮ್ಮ ಹಯವದನನ್ನ ಪ್ರಿಯೆ6ಜನನಿಹುಟ್ಟಿದ ನಾಳದಲ್ಲಿ ಜನಿಸಿದಿ ನೀನುಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದುಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲುವನಜಾಕ್ಷ ನಮ್ಮ ಹಯವದನನ್ನ ಪ್ರಿಯ 7ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದುಪದ್ಮಾಕ್ಷನ ರಥಕ್ಕೆ ಕೈ ನೀಡಿ ಬಂದೆಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳುಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ 8ಅನಂತ ನಾಟಕಾನಂತ ಸೂತ್ರಧಾರಿಅನಂತ ಚರಿತ ನಿತ್ಯಾನಂದಭರಿತಅನಂತಾಸನ ಶ್ವೇತದ್ವೀಪ ವೈಕುಂಠಅನಂತಗುಣಭರಿತ ಹಯವದನ ಚರಿತ 9ಶರಣುಮತ್ಸ್ಯಕೂರ್ಮವರಾಹನಾರಸಿಂಹಶರಣು ವಾಮನಭಾರ್ಗವರಾಮಚಂದ್ರಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆಶರಣು ಹಯವದನನ್ನ ಚರಣಗಳ ನುತಿಪೆ 10
--------------
ವಾದಿರಾಜ
ಶಾರದಾಂಬೆಯೆ ನಾರಿ ಲಕುಮೀಸಾರಸಾಕ್ಷಿ ಮಹೇಶ್ವರಿಘೋರಮಹಿಷಿನಿಶುಂಭ ಮರ್ದಿನಿಧೀರ ಚಂಡಮುಂಡಾರ್ದನಿ ಜಯತು ಜಯತೂ ಪಜ್ವಾಲಿನೀ ಅಕ್ಷಾರ ಮಾಲಿನೀನೀಲಕುಂತಳೆ ಭಾರ್ಗವೀಶೂಲಿನೀ ಹರಿಲೋಲೆ ನೀಗುಣಶೀಲೆ ಗಾಯನ ರಾಣಿ ಜಯತು ಜಯತೂ 1ವಾರಿಜಾಲಯೆ ವೀಣಾಪಾಣಿಯೇಮಾರಹರನ ಅರ್ಧಾಂಗಿಯೇಕ್ಷೀರಸಾಗರಕನ್ಯೆ ಗಿರಿಸುತೆಕೀರವಾಣಿ ಸರಸ್ವತೀ ಜಯತು ಜಯತೂ 2ರಮೆಯೆ ರಕ್ಷಿಸು ಉಮೆಯೆಪಾಲಿಸುಕಮಲಸಂಭವನರಸಿಯೆಅಮಿತ ಮಂಗಲೆ ಅಮರ ದೈವವೆಕಮಲಮುಖಿ ವಾಗ್ದೇವಿಯೆ ಜಯತು ಜಯತೂ 3ಕರವಮುಗಿವೆ ಸ್ಮರಿಸಿ ನಿನ್ನನುಶಿರವ ಚಾಚುವೆ ಚರಣಕೆಕರುಣದಲಿ ಗೋವಿಂದದಾಸನಪರಸಿ ರಕ್ಷಿಸಬೇಹುದು ಜಯತು ಜಯತೂ 4
--------------
ಗೋವಿಂದದಾಸ
ಶ್ರೀವಿಭವಸಂವತ್ಸರ ಸ್ತೋತ್ರ146ರಾಜ ರಾಜೇಶ್ವರ ಉಪೇಂದ್ರನಿಗೆ ನಮೋ ಎಂಬೆಭ್ರಾಜ ಲಕ್ಷ್ಮಿ ಭೂಮ ನಾರಸಿಂಹನಿಗೂ ಆನಮಿಪೆ ಪರಾಜಿಸುವವಿಭವನಾಮ ಸಂವತ್ಸರ ನಿಯಾಮಿಕ ಏಕಾತ್ಮನಲ್ಲಿನಿಜ ಭಕ್ತಿಯಿಂದ ಸ್ತುತಿಪರನ್ನ ಸಂರಕ್ಷಿಪ ಶ್ರೀಹರಿಯು 1ಭಾಸ್ಕರೋದಯದಲ್ಲಿ ಪ್ರಭವಾಸಿತ ಪಕ್ಷ ನಂತರವಿಭವಸಿತ ಪ್ರತಿಸತ್ಊಶನ ಶುಕ್ರಭಾರ್ಗವವಾಸರವು ನಮೋ ಎಂಬೆಶುಕ್ರನಿಗೆ ನಮ್ಮ ಹಿತಕಾಯ್ವಿ 2ದಿನೋದಯದಿವಿಭವಸಂವತ್ಸರಸಿತಪಕ್ಷದ್ವಿತಿಯೇಯು ಸೌರವಾಸರವುರಾಜಶನೈಶ್ಚರಗೂ ಮಂತ್ರಿಬುಧಮೊದಲಾದವರಿಗೂನಮೋ ಎಂಬೆ ದಯವಾಗಲಿ 3ಊದ ಕೊರತೆ ಅತಿ ಉಷ್ಣ ಸಸ್ಯಸಾಂದು ರಾಜರಾಜರಾಜ ಜನ ಮನಸ್ತಾಪಜನಕಾಷ್ಟ ನೀದಯದಿ ಪರಿಹರಿಸಿ ಸಲಹೋಕೃಪಾನಿಧಿಯೇ ನರಹರಿಯೇ 4ಧವಳಗಂಗೆಗೆ ಅಪ್ರಸಿದ್ಧ ಹೆಸರು ಕೂರ್ಮತೀರ್ಥವುಎಂದುಂಟು ಅದು ಪ್ರಾಮಾಣಿಕ ಎಂದುತಿಳಿಯುವುದು ವಿಭವದಲಿ ನೀರಿನ ಮಟ್ಟ ಸ್ವಲ್ಪಕಾಲ ತಗ್ಗುವಾಗ 5ಸಂವತ್ಸರ ನಿಯಾಮಕಹರಿರೂಪಗಳ ಸೋಚಿತಆಚರಣೆ ಸಹ ಸಂಸ್ಮರಿಸಿಕುಲ ಇಷ್ಟದೇವರ ಮತ್ತು ಗುರುಗಳ ನೆನೆದು ಭಕ್ತಿಮಾಳ್ಪಜನರಿಗೆ ಸುಖಕಾಲ 6ಕಮಲಸಂಭವ ಪಿತ ಕಮಲಾಲಯಪತಿಅಮಲಪೂರ್ಣಾನಂದಾದಿಗುಣ ನಿಧಿಯುಸುಮನಸರೊಡೆಯ ಶ್ರೀ ಪ್ರಸನ್ನ ಶ್ರೀನಿವಾಸನುತನ್ನ ಭಕ್ತರಿಗೆಈವಸುಕ್ಷೇಮವನು ಸರ್ವದಾ7
--------------
ಪ್ರಸನ್ನ ಶ್ರೀನಿವಾಸದಾಸರು