ಒಟ್ಟು 68 ಕಡೆಗಳಲ್ಲಿ , 27 ದಾಸರು , 64 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಯವಿಲ್ಲೋ ಭಯವಿಲ್ಲೋ ಭಯಹರ ನರಸಿಂಗನಡಿಯ ದಾಸರಿಗೆ ಪ ವೃಶ್ಚಿಕ ಮುಟ್ಟಲು ಬಾಧೆಯೆ ಇಲ್ಲ ತಕ್ಷ ಕಚ್ಚಲು ವಿಷವಂಟೋಣಿಲ್ಲ ಅಚ್ಯುತಾನಂತನ ಹೆಚ್ಚಿನಡಿದಾವರೆ ಮುಚ್ಚಿಭಜಿಪ ಮಹ ನಿಶ್ಚಲಚಿತ್ತರಿಗೆ 1 ಕಳ್ಳರು ಮುತ್ತಲು ಸುಲಕೊಂಬೋಣಿಲ್ಲ ದಳ್ಳುರಿ ಹತ್ತಲು ಸುಡುವ ಶಕ್ತಿಲ್ಲ ಪಾದ ಉಲ್ಲಾಸ ಮನದಿಂದ ನಿಲ್ಲದೆ ಭಜಿಪರ್ಗೆ ಎಳ್ಳಷ್ಟಾದರು 2 ಹುಲಿ ಕರಡಿ ಬದು ನುಂಗುವ ತ್ರಾಣಿಲ್ಲ ಬಲು ಭೂತ ಬೇತಾಳ ಎದುರೆ ಇಲ್ಲ ಮಲಿನಹರಣ ಕೃಪಾನಿಲಯ ಭಕ್ತಜನ ಸುಲಭನೆಂದೊದರುತ ನಲಿವ ನಿರ್ಮಲರಿಗೆ 3 ಭೂಪತಿಗಳ ಭಯ ರೋಮಕೆ ಇಲ್ಲ ಪಾಪತಾಪಗಳ ಲೇಪವೆ ಇಲ್ಲ ಆ ಪರಬ್ರಹ್ಮ ಜಗದ್ವ್ಯಾಪಕನನುದಿನ ಗೌಪ್ಯದಾರಾಧಿಸುವ ಪಾಪಲೋಪರಿಗೆ 4 ಏಸು ಕಷ್ಟಬಂದರಾಯಾಸವಿಲ್ಲ ನಾಶ ಮೃತ್ಯು ಗಾಳಿಸೊಂಕೋಣಿಲ್ಲ ಹೇಸಿ ದುರ್ಭವದ ವಾಸನಳಿದ ಮಹ ಶ್ರೀಶ ಶ್ರೀರಾಮನ ದಾಸದಾಸರಿಗೆ 5
--------------
ರಾಮದಾಸರು
ಭವ ದಾಂಟಲಿಕಿದುಸಾರಾ ಪ ಅಚ್ಯುತಾನಂತ ಗೋವಿಂದ ಕೇಶವ ಎನ್ನಿ ಸಚ್ಚಿದಾನಂದ ಶ್ರೀ ಕೃಷ್ಣ ನೆನ್ನಿ ಹೆಚ್ಚಿದ ದುರುಳದಾನವರ ಸಂಹರಿಸಿದ ಮುಚುಕುಂದ ವರದಾಯಕ ನೆನ್ನಿ 1 ನೀಲ ಮೇಘ ನಿಭಾಂಗ ರೂಪನು ಎನ್ನಿ ಕಾಳಿಯ ತುಳಿದ ಗೋಪಲ ನೆನ್ನಿ ಪಾಲು ಮೊಸರು ಬೆಣ್ಣೆಗಳ್ಳನಿವನುಎನ್ನಿ ಭೂಲಲನೆಯ ಗಂಡ ನೀತ ನೆನ್ನಿ 2 ಶಂಖ ಚಕ್ರಗದೆ ಪದ್ಮಧರನು ಎನ್ನಿ ಮುರ ವೈರಿಯೆನ್ನಿ ಪಂಕಜ ವದನ ಕಸ್ತೂರಿ ತಿಲಕನೆನ್ನಿ ಡೊಂಕ ತಿದ್ದಿದ ಕುಬುಜೆಯನೀತನೆನ್ನಿ 3 ರಾಣಿಯ ನೊಯ್ದ ರಾವಣನ ಕೊಂದವನೆನ್ನಿ ಬಾಣಾಸುರನ ತೋಳ ತರಿದವನೆನ್ನಿ ವೇಣುನಾದ ಪ್ರಿಯ ಶ್ರೀರಂಗ ನೆನ್ನಿ 4 ನಾಮವೇಗತಿ ಎನ್ನಿ ನಾಮವೇ ಮತಿ ಎನ್ನಿ ನಾಮವೇ ಪರಕೆ ಸಾಧನವು ಎನ್ನಿ ಪ್ರೇಮದಿಂದಲಿ ರಸನೆಯೊಳು ಲಕ್ಷ್ಮೀಶನ ನಾಮ ಸ್ಮರಣೆಯನು ನುಡಿನುಡಿಗೆನ್ನಿ 5
--------------
ಕವಿ ಪರಮದೇವದಾಸರು
ಭಾರ ನಿನ್ನದು ತಂದೆ ಸಿಂಧು ಎಂದೆಂದು | ಗುರುವರ್ಯ ಬಂದು ಕರುಣಿಸುವನು ಮದ್ಬಂಧೊ 1 ಮಂಗಳಾತ್ಮನೆ ಎನ್ನ ಅಂಗದಲಿ ನೀನಿಂದು ಪೊಂಗಳಧರನ ತೋರಯ್ಯ | ಅಜರಾಯ ಭಂಗಬಡಲಾರೆ ಭವದೊಳÀು 2 ನಾರಾಯಣನ ಪುತ್ರ ನಾರಾಯಣಗೆ ಮಿತ್ರ ನಿರವದ್ಯ | ನೀಡಭಯ ಕರುಣಾತ್ಮ ಗುರುವೆ ಒಲಿದಿಂದು 3 ಕಾಮರೂಪನೆ ಹರಿಯನೇಮದಲಿ ಕಪಿಯಾಗಿ ಆ ಮಹಿಮೆಗುಂಗುರ ಅರ್ಪಿಸಿ | ಅಗ್ನಿಯಲಿ ತಾಮಸರ ಹುರಿದೆ ಪುರದಲ್ಲಿ 4 ಮರಳಿ ಶರಧಿಯ ದಾಂಟಿ ಭರದಿ ರಘುಪತಿ ಚರಣ ಸರಸಿಜದಿ ಚೂಡಾಮಣಿಯನ್ನು | ಒಪ್ಪಿಸಿ ಹರಿ ಅಂಗ ಸಂಗ ಪಡೆದಯ್ಯ 5 ಸಿಂಧÀುವನು ಬಂಧಿಸಿ ಬಂದ ವಿಭೀಷಣಗೆ ಕುಂದದೆ ಅಭಯ ಕೊಡಿಸಿದೆ | ದಯಸಿಂಧು ನಿಂದೆನ್ನ ಒಳಗೆ ಮುದವೀಯೊ 6 ದೇವೇಶನಾಜ್ಞೆಯಲಿ ಜೀವೇಶ ಸಂಜೀವ ಪರ್ವತ ತಂದು ಕಪಿಸೈನ್ಯ | ಎಬ್ಬಿಸಿ ಮೊದಲೆಡೆಗೆ ಬಗೆದ ಕುಶಲಾತ್ಮ 7 ದಶಶಿರನ ಕೊಲ್ಲಿಸಿ ವಸುಧಿಪುತ್ರಿಯ ತಂದು ನಸುನಗುತ ರಾಮಚಂದ್ರಾಗೆ | ಒಪ್ಪಿಸಿ ವಿ ಭೀಷಣಗೆ ರಾಷ್ಟ್ರ ಕೊಡಿಸಿದೆ 8 ಪ್ರೇಮದಿ ಭರತನು ಸ್ವಾಮಿ ಬರಲಿಲ್ಲೆಂದು ಕಾಯ ಬಿಡುತೀರೆ | ಉಳುಹಿದೆ ಶ್ರೀ ರಾಮನಾಗಮನ ತಿಳುಹೀಸಿ9 ತುಷ್ಟನಾದೆನು ಹನುಮ ಇಷ್ಟ ನೀ ಬೇಡೆನಲು ಪಾದ ಪಿಡಿಯಲು | ಭಕ್ತಿಯಲಿ ಪಟ್ಟಾಭಿರಾಮ ತನ್ನಿತ್ತ 10 ಆಖಣಾತ್ಮಕಾಯನೆ ಅಕಳಂಕ ಗುಣಧಾಮ ನಿಖಿಲಾತ್ಮ ಹರಿಯ ಪೂಜಿಪ | ದೃಢಮಹಿಮ ಶ್ರೀಕೃಷ್ಣ ಭಕ್ತಾ ಕಲಿಭೀಮ 11 ಶಿಶುಭಾವದಲಿ ನೀನು ಶತಶೃಂಗ ಗಿರಿವಡೆದು ನಸುನಗುತ ಜನನಿಗಭಯವ | ನಿತ್ತಂಥ ಪಶುಪಾಲ ಪರನೆ ಪೊರೆಯೆನ್ನ 12 ದುರ್ಯೋಧನನ ತ್ರಾಣ ತಂತುಗಳ ಹರಿದಾಡಿ ಸರ್ವೇಶ ಹರಿಗೆ ಪ್ರಿಯಮಾಡಿ | ನಲಿದಂಥ ಸರ್ವಜ್ಞ ಭೀಮ ಬಿಡೆ ನಿನ್ನ 13 ದುಶ್ಯಾಸನನ ಮಹಾದುಶ್ಯೀಲ ಸ್ಮರಿಸುತ್ತ ಪಶುವಂತೆ ವಧೆಯ ಮಾಡಿದಿ | ರಣದೊಳು ಸುಸ್ವಾದ ಗುಣಸಾರ ಮಹವೀರ 14 ಮಾನಿನಿಯ ಸಂಕಲ್ಪ ತ್ರಾಣನೀ ಪೂರೈಸಿ ಪ್ರಾಣಸಖನಾಗಿ ಸಲಹಿದೆ | ಜಯಭೀಮ ಪಾಣೆ ಪಿಡಿಯೆನ್ನ ಮಹಘನ್ನ 15 ದುರಾರಾಧಕ ದುಷ್ಟ ಜರಸಂಧನ ಸೀಳಿ ಮುರಾರಿ ಮತ್ಪ್ರೀತಿ ಬಿಡಿಸಿದೆ | ದೀಕ್ಷೆಯಲಿ ತ್ರಿ ಪುರಾರಿ ವಂದ್ಯಾಗತಿ ನೀನೆ 16 ನಾರಾಯಣಾಸ್ತ್ರವನು ವೀರ ಗುರುಸುತ ಬಿಡಲು ಚೀರಿ ನಮೋಯೆನ್ನೆ ನೃಪರೆಲ್ಲ | ಸ್ಮøತಿ ತಪ್ಪೆ ಧೀರ ಎದುರಾಗಿ ನೀ ನಿಂತೆ 17 ಗರಡಿಯಲಿ ಕೀಚಕನ ಮುರಿದು ಮುದ್ದೆಯ ಮಾಡಿ ಮರಿಯದೆ ಅವನ ಅನುಜರ | ಸದೆಬಡಿದು ಮೋದ ನೀನಿತ್ತೆ 18 ಉರಗ ಬಂಧವ ಹರಿದು ಕರಿ ಮುಂದೆ | ನೀನಿಂತೆ ಸರ್ವನಿತ್ಯಾತ್ಮ ಕೃಷ್ಣಾತ್ಮ 19 ಮಧುವೈರಿ ಧ್ಯಾನದಲಿ ಕುದುರೆ ಆಟವನಾಡಿ ಮುದದಿಂದ ಕುರುಪನ್ಹೆಗಲೇರಿ | ಹುದುಗ್ಯವನ ಮುದದಿಂದ ನಲಿದೆ ಕಮಲಾಕ್ಷ 20 ಅರಗಿನ ಮನೆಯಲ್ಲಿ ವೈರಿಜನರ ಕೊಂದು ಪೊರೆದೆ ನೀ ಜನನಿ ಅನುಜರ | ಪಂಜರನೆ ಧರೆಯೊಳಗೆ ಎನ್ನ ಸಲಹಯ್ಯ 21 ಹಿಡಿಂಬನ ಕೊಂದು ವರ ಹಿಡಿಂಬಿಯ ಕೈಪಿಡಿದು ನಡೆದೇಕ ಚಕ್ರಪುರದಲ್ಲಿ | ಬಕನೊರಸಿ ನಡಕ ಬಿಡಿಸೀದಿ ಸುಜನರ 22 ವ್ಯಾಸದೇವನ ಕಂಡು ಸೂಸಿದ ಸದ್ಭಕ್ತಿ ಪಾಶದಲಿ ಕಟ್ಟಿ ಒಳಗಿಟ್ಟು | ಪೂಜಿಸುತ ಲೇಸಾಗಿ ಮುಂದೆ ನಡೆದಯ್ಯ 23 ನೀ ಸ್ವಯಂವರ ಸಭೆಯ ವೇಷಾಂತರದಿ ಪೊಕ್ಕು ವಾಸುದೇವನ ಕಂಡು ಆನಂದ | ತುಳುಕುತ್ತ ಆ ಸತಿಯ ತಂದೆ ವಿಜಯಾತ್ಮ 24 ರಾಜರೆಲ್ಲರ ಹಿಡಿದು ರಾಜಸೂಯಯಾಗವನು ಪೂಜೆಯನು ಮಾಡಿ ಮೆರದಯ್ಯ 25 ಲಕ್ಷ್ಮೀವನಕ್ಹೋದಂತೆ ಪಕ್ಷಿಯರ ಒಡಗೂಡಿ ದಕ್ಷನೆ ನೀನು ವನವಾಸ | ಅಜ್ಞಾತ ಪಕ್ಷವ ಕಳೆದು ಮರಳಿದೆ26 ಸಂಗರವ ನೀ ಹೂಡಿ ಭಂಗಿಸಿ ಕೌರವನ ರಂಗನ ಮುಂದೆ ಅರ್ಪಿಸಿ | ವಂದಿಸಿ ಮಂಗಳಾತ್ಮಕನೆ ಸಲಹೆಮ್ಮ 27 ನಿರ್ಮಲ ರಾಜ್ಯವನು ಧರ್ಮಂಗೆ ನೀನಿತ್ತೆ ನಿರ್ಮೂಲಗೈದು ಅರಿಗಳ | ಕೊಂದ ಪರ ಧರ್ಮಪರರನ್ನು ಪೊರೆದಯ್ಯ 28 ಮಧ್ವಾಖ್ಯ ಮಹವೀರ ಶುದ್ಧ ಸತ್ವ ಶರೀರ ಉದ್ಧರಿಪುದೊಂದೆ ವ್ಯಾಪಾರ | ಕೈಕೊಂಡ ವಿದ್ಯಾಧಿಪತಿಯೆ ಸಲಹೆನ್ನ 29 ಶ್ವಾಸ ನಿಯಾಮಕ ಪ್ರಭುವಾಸವೆ ನಿನ್ನಿಂದ ಉಸರಲೇನಯ್ಯ ನಿನ್ನಲ್ಲಿ | ಜೀವೇಶ ಸೂಸುವ ಭಕ್ತಿ ನೀಡಯ್ಯ 30 ವೇದ ಚೋರನ ಮಡುಹಿ ಸಾದರದಿ ಸುಜನಕ್ಕೆ ಬೋಧ ಮಾಡೆಂದು ಶ್ರೀ ವಿಷ್ಣು | ಕಳುಹಿದ ಮಧ್ವಾಖ್ಯ ಗುರುವೆ ಪರಿಪಾಹಿ 31 ಸುರರು ದುಂದಭಿ ಮೊರೆಯೆ ದುರುಳರ ಎದೆಯು ನಡುಗಲು | ಹರುಷದಲಿ ಮೆರೆದು ನೆರೆದರು ಸುಜನರು 32 ಕೈವಲ್ಯ ನೀನಿತ್ತೆ ಶ್ರೀವಲ್ಲಭನ ಪ್ರಥಮಾಂಗ | ಪ್ರಸನ್ನ ನೀವಲಿದು ಹರಿಯ ತೋರಯ್ಯ 33 ಹುಣಿಸೆ ಬೀಜದಿ ಪಿತನ ಘನೃಣವ ತೀರಿಸಿದಿ ಅಣಿಮಾದಿ ಸಿದ್ಧಿ ತೃಣವಯ್ಯ | ನಿನಗಿನ್ನು ಗುಣಪೂರ್ಣ ಹರಿಯ ಪ್ರತಿಬಿಂಬ 34 ಶಿವಭಟ್ಟನನು ಗೆದ್ದು ಜಯಾಂಕ ರಸ ತೋರೆ ವಿಪ್ರ ಸುರರು ಪೂಜಿಸೆ | ನಲವಿಂದ ಅವನಿಯೊಳು ಪೊಳೆದೆ ರವಿಯಂತೆ 35 ವಿದ್ಯಾಧಿಪತಿ ಗುರುವೆ ವಿದ್ಯೆ ಪೇಳಿದ ದ್ವಿಜಗೆ ಸದ್ಭಕ್ತಿ ದಕ್ಷಿಣೆ ನೀನಿತ್ತೆ | ಕರುಣಾತ್ಮ ಉದ್ಧರಿಸು ಎನ್ನ ದ್ವಿಜರತ್ನ 36 ಜನನಿ ಜನಕರು ತಡಿಯೆ ಅನುವಾದ ಸುತನಿತ್ತು ಘನವಾದ ತುರ್ಯ ಆಶÀ್ರಮ | ಕೈಗೊಂಡು ಸುನವ ಪದ್ಧತಿಯ ತೋರಿದೆ 37 ಅಚ್ಯುತ ಪ್ರೇಕ್ಷಕರಿಗೆ ಹೆಚ್ಚಾದ ದಯದಿ ಹರಿ ನಿನ್ನ | ವೊಯ್ದಿತ್ತ ಅಚ್ಚುಮೆಚ್ಚುವ ನೀ ಹರಿಗೆಂದು 38 ವಾದಿಗಳ ಭಂಗಿಸಲು ಸಾದರದಿ ಯತಿ ಕರಿಯೆ ಛೇದಿಸಿ ಖಳರ ಮದವನ್ನು | ಹರಿಸಿದೆ ಸ್ವಾದ ಗುಣಸಿಂಧು ಮದ್ಬಂಧು 39 ಬಾಳೆಗೊನೆಗಳ ಮೆದ್ದು ಬಾಡಲೇತಕೆ ಉದರ ಪೇಳೆಂದ ಯತಿಗೆ ಜಠರಾಗ್ನಿ | ಬ್ರಹ್ಮಾಂಡ ಕೊಳ್ಳುವದುಯೆಂದು ವರದಯ್ಯ 40 ವಾದಗಳ ಪರಿಹರಿಸಿ ಬೋಧಿಸಲು ಆ ದ್ವಿಜರು ಪಾದಕ್ಕೆ ಎರಗಿ ನಮೋ ಎಂದು ಅಮರರಿಗೆ ಆ ಬೋಧವೊ ಮಹಿಮೆಯೆಂದಾರು 41 ಬದರಿಯಾತ್ರೆಯಲಿ ಸುರನದಿಯು ತಾ ಮಹಿಪಡೆದು ಮುದದಲ್ಲಿ ಬಂದು ನಮಿಸಲು | ಶಿಷ್ಯಜನ ಯೈದಿ ಭಕ್ತಿಯನು ನಮೋ ಎಂದು 42 ಹರಿಯಂತೆ ನರಿಗಳನು ತುರಕ ದೂತರ ಜರಿದು ನರಪನಿಂದರ್ಧ ಮಹಿಮೆಯನ್ನು | ಪಡೆದಂಥ ಯರಡೇಳು ಭುವನ ಅಧಿಪತಿ 43 ಸತ್ಯತೀರ್ಥರ ಬಳಿಗೆ ದೈತ್ಯ ವ್ಯಾಘ್ರನು ಬರಲು ಮೃತ್ಯುವಿನ ಪುರಕೆ ಕಳುಹಿದೆ | ಲೀಲೆಯಲಿ ಭೃತ್ಯತ್ವಯೆನಗೆ ನೀಡಯ್ಯ 44 ಸೂಸುವಾ ಭಕ್ತಿಯಲಿ ವ್ಯಾಸದೇವನ ಕಂಡು ಈಶ ಸಲಹೆಂದು ಎರಗಲು | ಮನವುಬ್ಬಿ ಬಾ ಸುತನೆ ಎಂದು ತಬ್ಬಿದ 45 ಆನಂದ ಮೂರ್ತಿಯ ಆನಂದ ಸಂಗವನು ಆನಂದದಿಂದ ನೀ ಯೈದಿ | ನಂದ ಆನಂದ ತೀರ್ಥ ಕೊಟ್ಟೆಯೊ 46 ನಾರಾಯಣನಲಿ ಕರೆದೊಯ್ಯೆ ಬದರಿಪನ ಚರಣಾಬ್ಜಕೆರಗಿ ಹರಿಲೀಲೆ | ಸ್ಮರಿಸಿದ ಗುರುರತ್ನ ಸಲಹೊ ಧನ್ಯಾತ್ಮ 47 ಅಚ್ಯುತನ ಸಂಗದಲಿ ಚಿತ್ಸುಖವ ಉಂಡುಬ್ಬಿ ಹೆಚ್ಚಿನ ಪದವಿ ಇಲ್ಲೆಂದು | ನಲಿದಂಥ ಅಚ್ಯುತಾತ್ಮಾನೆ ಸಲಹೆನ್ನ 48
--------------
ಜಯೇಶವಿಠಲ
ಮಂಗಳಾರತಿಯು ನಮ್ಮ ಲಿಂಗವಿನುತಗೇ ನಮ್ಮ ಪ ಅಂಗನೆಯರೆಲ್ಲ ಕೂಡಿ ಅಚ್ಯುತಾಯೈ ನಮಃ ಎನ್ನಿ ಅ.ಪ ವೇದಕಾದಿಪ್ರಣವವೆಂದು ಬೋಧಿಸಿದನುಶಿವನುಉಮೆಗೆ ನಾದಬಿಂದುಕಳೆಯಗೂಡಿನ ನಾರಾಯಣನಿಗೆ ಮಂಗಳಂ 1 ಸುರರೂ ನರರೂ ಮುಖ್ಯಮಾದಾ ಗರುಡ ವಿಶ್ವಕ್ಸೇನರೆಲ್ಲ ಪರಮತತ್ವಮಹುದಿದೆಂದು ಯಿರುವೋತದ್ವಿಪಾದಗಳಿಗೆ2 ನಿರ್ವಿಕಲ್ಪ ನಿಶ್ಚಲಾತ್ಮ ಸರ್ವಲೋಕಸಾಕ್ಷಿಭೂತ ಗರ್ವಕಲನುಯೆಂಬೊ ನಾಮ ಉರ್ವಿಯೊಳಗೆ ವಹಿಸಿರುವಗೆ 3 ತತ್ವಗುರುವು ತುಲಶಿರಾಮ ಚಿತ್ಸುಖಾಂಶ ಶಿವಪ್ರಿಯನಿಗೆ 4
--------------
ಚನ್ನಪಟ್ಟಣದ ಅಹೋಬಲದಾಸರು
ಮಾಧವ ದೇವಾದಿ ದೇವಾ ಪ ಪ್ರೇಮದಿಂದ ಕಾವ ಶ್ರೀ ಮಹಾನುಭಾವ ಅ.ಪ. ಯಾರು ಇಲ್ಲದೆ ಘೋರಾಂಧಕಾರದೆ ಸೇರಿ ಸಾಗರ ಧೀರನಾಗಿದ್ದವ 1 ಸೃಷ್ಟಿ ಸ್ಥಿತ್ಯಾದಿ ಅಷ್ಟಕರ್ತನಾದಿ ಇಷ್ಟದಾತನೀತ ಶಿಷ್ಟ ಕೃಪಾನ್ವಿತ 2 ಅಚ್ಯುತಾನಂದ ಸ್ವಚ್ಛಮೂರ್ತಿನಾಥ ನೆಚ್ಚಿದವರ ಬಿಡ ಲಕ್ಷ್ಮೀಕಾಂತ ದೃಢ 3
--------------
ಲಕ್ಷ್ಮೀನಾರಯಣರಾಯರು
ಮುಕುಂದ ಹರಿ ವಿಠಲ | ಸಾಕ ಬೇಕಿವನಾ ಪ ಅಕಳಂಕ ಚರಿತ ಹರಿ | ವಿಖನ ಸಾಂಡೊಡೆಯ ಅ.ಪ. ಮೋದಮುನಿ ಸನ್ಮಾರ್ಗ | ಬೋದೆಯುಳ್ಳವನಿವನುವಾದಿರಾಜರ ಕರುಣ | ಪಾತ್ರನಿಹ ನೀತಾಸಾಧು ಸನ್ಮಾರ್ಗದಲಿ | ಆದರಣೆಯುಳ್ಳವನುಕಾರುಕೊ ಬಿಡದಿವನ | ಬಾದರಾಯಣನೇ 1 ಜ್ಞಾನಿಗಳ ವಂಶದಲಿ | ಜನುಮಪೊತ್ತಿಹನೀತಜ್ಞಾನಾನು ಸಂಧಾನ | ಪಾಲಿಸೀ ಇವಗೇಮೌನಿಗಳ ಸಹವಾಸ | ಸಾನುಕೂಲಿಸಿ ಹರಿಯೆಧ್ಯಾನಗೋಚರನಾಗೊ | ವೇಣುಗೋಪಾಲ 2 ಪಾದ | ಸದ್ಭಜಕ ನೆನಿಸೋಅಧ್ವೈತ ಪ್ರಕ್ರಿಯವ | ಪ್ರಧ್ವಂಸಗೈವಂಥಶುದ್ಧ ಮತಿಯನೆ ಇತ್ತು | ಉದ್ದರಿಸೊ ಇವನಾ 3 ಅಚ್ಯುತಾನಂತ ಹರಿ | ಉಚ್ಚರೊಳು ಉಚ್ಚನಿಹಉಚ್ಚ ನೀಚಗಳೆಂದು | ಸರ್ವ ಜೀವರೊಳುಸ್ವಚ್ಛ ತರತಮ ಬೇಧ | ಪಂಚಕವ ತಿಳಿಸಿವಗೆಸಚ್ಚಿದಾನಂದಾತ್ಮ | ಮಚ್ಛಾದಿ ವಪುಷಾ 4 ಭಾವುಕರ ಪರಿಪಾಲ | ದೇವರಾತನಿಗೊಲಿದೆಜೀವರಂತರ್ಯಾಮಿ | ವಿವಿಧ ರೂಪಾತ್ಮಾನೀವೊಲಿದು ಇವನೀಗೆ | ಸರ್ವದಾ ಪೊರೆಯಂದುದೇವ ಭಿನ್ನವಿಪೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ ಪ ರಂಗ ಕಲುಷವಿಭಂಗ ಗರುಡ ತು-ರಂಗ ನವಮೋಹನಾಂಗ ಶ್ರೀರಂಗ ಅ.ಪ ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟುಮೆಚ್ಚಿ ಮುದ್ದಾಡುವನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದಎಚ್ಚರಿಕೆಯಲಿ ಲಂಕೆಯನು ಪೊಕ್ಕುಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ ಖರದೂಷಣರ ಶಿರಗಳಕೊಚ್ಚಿದ ಅಚ್ಯುತಾನಂತ1 ಮುತ್ತಿನ ಹಾರವನು ಕಂಠದೊಳಿಟ್ಟುಎತ್ತಿ ಮುದ್ದಾಡುವೆನುಹತ್ತಿದ ರಥವನು ಮುಂದೊತ್ತಿದಕೌರವರ ಸೇನೆಗೆ ಮುತ್ತಿದಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಳನೆಲ್ಲಒತ್ತರಿಸಿ ಮುಂದೊತ್ತಿ ನಡೆಯುತಇತ್ತರದಿ ನಿಂತ ವರ ರಥಿಕರಕತ್ತರಿಸಿ ಕಾಳಗವ ಮಾಡಿದ 2 ಉಂಗುರಗಳನು ನಿನ್ನ ಅಂಗುಳಿಗಿಟ್ಟುಕಂಗಳಿಂದಲಿ ನೋಡುವೆಹೆಂಗಳ ಉತ್ತುಂಗದ ಕುಚಂಗಳಆಲಂಗಿಸಿದ ಭುಜಂಗಳಕಮಲಸಮ ಪಾದಂಗಳಹಿಂಗದೆ ಸ್ಮರಿಸಿದ ಮಾತಂಗನಭಂಗವ ಪರಿಹರಿಸಿ ಬ್ಯಾಗದಿಮಂಗಳ ಸ್ವರ್ಗವನಿತ್ತ ಉ-ತ್ತುಂಗ ವಿಕ್ರಮ ರಂಗವಿಠಲನೆ 3
--------------
ಶ್ರೀಪಾದರಾಜರು
ರಾಮನೆಯಖಿಲ ಜಗತ್ಸ್ವಾಮಿ [ಯೌ] ದಾರ್ಯ ಜಯತು ಪ ಸಾಮಗಾನಪ್ರಿಯ ಕೋಮಲಶರೀರ ಜಯ ತಾಮರಸನಯನ ಲಕ್ಷ್ಮೀ ಮನೋಹರನೆ ಜಯ ಮಾಧವ ಮೂರ್ತಿ ಕೀರ್ತಿ ಜಯ ನೇಮಿ ಜಗದಂತರ್ಯಾಮಿ ಚಾತುರ್ಯ ಜಯತು 1 ರಾಮಕೃಷ್ಣ ಮುರಾರಿ ಜಯತು ಮೇಘ ಶ್ಯಾಮ ಅಚ್ಯುತಾನಂತ ಜಯತು ನಿ- ಸ್ಸೀಮ ಲೋಕಶರಣ್ಯ ಜಯತು ಸಾರ್ವ- ಭೌಮ ವಿರಾಡ್ರೂಪ ಜಯ ಜಯತು 2 ಶ್ರುತಿ ಸ್ತೋಮ ಸಂಸ್ತುತ ಜಯ ಜಯತು ವೈಕುಂ- ಠೇತಿ ಸುಕ್ಷೇಮ ಲೋಕಾರಾಧ್ಯ ಜಯತು ಸುತ್ರಾಮಾರ್ಚಿತಾಂಘ್ರಿಯುಗಳ ಜಯತು ಜ್ಯೋತಿ ಪರಂಜ್ಯೋತಿ ನಿರಾಮಯ ವೇಲಾಪುರೀಶನೆ ಜಯತು3
--------------
ಬೇಲೂರು ವೈಕುಂಠದಾಸರು
ಲೋಕನೀತಿ ಅಚ್ಯುತಾನಂತ ಗೋವಿಂದ ಅಕ್ಷರೊತ್ತಮ ಸದಾನಂದ ಪ. ನಿಶ್ಚಲ ಭಕ್ತಿಯಿಂ ಮೆಚ್ಚಿಸು ಹರಿಯಂ ನಿಶ್ಚಯ ಪೋಪುದು ಭವಬಂಧ ಅ.ಪ. ಆಧಿವ್ಯಾಧಿಹರಣ ಕಾರಣ ಮಧು ಸೂದನ ಸತ್ಯ ಸದ್ಗುಣವೃಂದ ವೇದಗಮ್ಯ ಪ್ರಹ್ಲಾದ ಕ್ಷೇಮದ ಮ- ಹೋದಧಿಶಯನ ಮುಕುಂದ 1 ಶ್ರೀಬ್ರಹ್ಮಾದಿ ದಿವಿಜಕುಲವಂದಿತ ಶೋಭಿತ ಪಾದಾರವಿಂದ ಈ ಭೂಮಿಯೊಳಗೆ ಜನಿಸಿದಕೆ ಸಫಲ ಲಾಭವೆ ಹರಿಕಥಾನಂದ 2 ಪ್ರಾಣನಿಯಾಮಕ ಸರ್ವತ್ರ ವ್ಯಾಪ್ತ ಧ್ಯಾನಿಸದಿರು ನೀ ಬೇರೊಂದ ದೀನವತ್ಸಲ ಸುಮ್ಮಾನದಿ ಕಾವ ಲ- ಕ್ಷ್ಮೀನಾರಾಯಣ ದಯದಿಂದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶುಭ ಮಂಗಳಂ ಮಂಗಳಂ ಹರಿಸಚ್ಚಿದಾನಂದಗ ಮಂಗಳಂ ಅಚ್ಯುತಾನಂತ ಗೋವಿಂದಗೆ ಮಂಗಳಂ ವಿಧಿಭವಾಮರ ವಂದ್ಯಗೆ ಪ ಆನಂದ ಕೋಶಗ ಅಖಿಳಜನಪೋಷ ದಾನವಿನಾಶಗ ದೇವೇಶಗ ವನಮೂಲಭೂಷಗವರದ ಹೃಷೀಕೇಶಗ ಮುನಿಜನೋಲ್ಲಾಸಗ ಧರಿಣೀಶಗೆ 1 ಮಾಯಾ ವಿಮುಕ್ತಗ ಸಕಲಗುಣಯುಕ್ತಗ ವಿರಹಿತಂಗೆ ಭಕ್ತಾನುರಕ್ತಗ ಚಿಂತ್ಯ ಅವ್ಯಕ್ತಗ ಅಕುತೋಭಯದಾ ತಗ ಜದಧಾತಗೆ 2 ವರಯದುರಾಯಗ ನಂದ ಕುಮಾರಗ ಸುರಸಹಕಾರಗ ಸುಂದರಗ ದುರಿತ ಸಂಹಾರಗ ಅಮಿತಾವತಾರಗ ಗುರುಮಹೀಪತಿ ನಂದ ನೋದ್ಧರಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ವೆಂಕಟೇಶ ಷಡ್ಗುಣಧಾಮ ಶ್ರೀ ವೆಂಕಟೇಶಶ್ರೀ ವೆಂಕಟೇಶ ಸದಾನಂದ ವಿಗ್ರಹ ಪಾವನಕೀರ್ತೇ ಪರಮೇಶ ಪಕೇಶವ ಬ್ರಹ್ಮಾದಿಕಾಯ ನಾರಾಯಣಶ್ರೀಶ ಗೋವಿಂದ ಗೋವರ್ಧನೋದ್ಧರ ವಿಷ್ಣೋ 1ಮಧುಸೂದನಾಮಿತಮಹಿಮ ತ್ರಿವಿಕ್ರಮಬುಧವಂದ್ಯ ವಾಮನ ಭಯಹರ ಶ್ರೀಧರ 2ಹೃೀಕೇಶ ನಿಜ ಜನಹೃತ್ಕಂಜಸ್ಥಿರ ಭಾನೋವಿಷಮರಹಿತ ಪದ್ಮನಾಭ ದಾಮೋದರ 3ಸಂಕರ್ಷಣ ವಾಸುದೇವ ಸನಾತನಪಂಕಜನೇತ್ರ ಪಾವಕಮುಖ್ಯ ಪ್ರದ್ಯುಮ್ನ 4ಅನಿರುದ್ದ ಪುರುಷೋತ್ತಮಾದಿಕಾರಣ ಲೋಕಜನಕಾಧೋಕ್ಷಜ ಜೀವಸುಖ ಶುದ್ಧ ನರಸಿಂಹ 5ಅಚ್ಯುತಾನಂತ ಜನಾರ್ದನಾಮಿತ ರೂಪಸಚ್ಚಿದ್ರೂಪೋಪೇಂದ್ರ ಸರ್ವೇಶ ಶ್ರೀಹರೆ 6ಶ್ರೀ ಕೃಷ್ಣ ರುಕ್ಮಿಣೀ ಸತ್ಯಭಾಮಾ ಧವಏಕರೂಪಾವ್ಯಯಾನೇಕ ಶಕ್ತ್ಯಾತ್ಮಕ 7ಕ್ಲೇಶತಿಮಿರ ಹರ ಕೋಟನಾಮಾತ್ಮಕಕೋಶಪಂಚಕ ದೂರ ಕೋಶ ಪ್ರವರ್ತಕ 8ತಿರುಪತೀತಿಖ್ಯಾತ ದಿವ್ಯಕ್ಷೇತ್ರೋದ್ಭವಸುರತರು ವೆಂಕಟಧರಣೀಧರಾಧೀಶ 9ಓಂ ನರಕಾಂತಕಾಯ ನಮಃ
--------------
ತಿಮ್ಮಪ್ಪದಾಸರು
ಸಚ್ಚಿದಾನಂದನ ನೆಚ್ಚಿಕೊಂಡಿರೋ ಮನವೆ ಧ್ರುವ ಎಚ್ಚತ್ತಿರೋ ನಿನ್ನೊಳು ನಿಶ್ಚಿಂತನಾಗಿ ನೀಬಾಳು ಅಚ್ಯುತಾನಂತ ಕೃಪಾಳೂ ನಿಶ್ಚಯದಲಿ ಕೇಳು 1 ಕೊಟ್ಟ ಭಾಷೆಗೆ ತಪ್ಪ ಶಿಷ್ಟ ಜನರ ಪಾಲಿಪ ದೃಷ್ಟಿಸುವ ನಿಜಸ್ವರೂಪ ಗುಟ್ಟಿನೊಳಾಪ 2 ಹೊಂದಿ ಬದುಕಿರೋ ಪೂರ್ಣ ತಂದೆ ಸದ್ಗುರುಚರಣ ಅನುದಿನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಚ್ಚಿದಾನಂದಾತ್ಮ ಪರಿಪಾಹಿ ಪಾಹಿ ಪರಮಾತ್ಮ ಪ ಸಚ್ಚಿದಾನಂದಾತ್ಮ ಮುಕುಂದ ಅಚ್ಯುತಾನಂತ ಗೋವಿಂದ ಆನಂದಾ ಅ.ಪ ಜನರುದ್ಧಾರ ನೀರಜಾಂಡ- ಚರ ಬಾಹಿರಾಂತರ ನಿರುತ ಚರಾಚರದೊಳಗೆ ಸಂಚಾರಾ ಗಂಭೀರ ಗಂಭೀರ ಗಂಭೀರ ವಾರಿವಿಹಾರ ಮಂದರೋದ್ಧಾರಾ ಧರಣಿಸೂಕರ ನರಮೃಗಾಕಾರ ಯಾಚಕ ಧೀರ ನರಪರ ಶಿರತರಿದೆತ್ತಿ ಬಿಲ್ಲನು ದಶಕತ್ತನು ಕ್ಷಣದೊಳು ಕ- ತ್ತರಿಸಿ ತುರುಗಳ ಕಾಯ್ದ ಬತ್ತಲೆ ನಿಂದ ತೊರೆಯುತ ಬಂದ ಗೋವಿಂದಾ ಈ ಭೂ- ಧರದೊಳು ನಲವಿಂದ ಕ್ರೀಡಿಪ ಪರಿಪರಿಯಿಂದ ಸುರಮುನಿಗಣ ಸಂಸ್ತುತಿಯಿಂದ ಗೋವಿಂದ ಗೋವಿಂದ 1 ಕಾಂತಾ ಕಾಂತಾ ಕಾಂತಾ ಕಾಂತಾ ಜಗದಾ- ದ್ಯಂತ ನಿರುತ ನಿಶ್ಚಿಂತ ಗುಣಗಣಭರಿತ ಸಂತತ ನಿನ್ನ ವಾಕ್ ತಂತಿನಾಮ ಧಾಮದಿ ಈ ಜಗ ಬಂಧಿಸಿಹುದು ಆದ್ಯಂತ ಶ್ರೀಕಾಂತ ಶ್ರೀಕಾಂತ ಶ್ರೀಕಾಂತ ಶ್ರೀಕಾಂತ ಶ್ರೀಕಾಂತಾ ಶ್ರೀಕರಾರ್ಚಿತತ್ರಿಗುಣವರ್ಜಿತ ಅನುಪಮಚರಿತ ಆದ್ಯಂತರಹಿತ ಸ್ವರಸಸುಭೋಕ್ತ ಸ್ವಗತಭೇದವಿವರ್ಜಿತ ಅಚ್ಯುತ ಮಚ್ಛಕಚ್ಛಪಾದ್ಯಜಿತಾದಿರೂಪನಿ- ನ್ನಿಚ್ಚೆಯಂತೆ ಸಿರಿಮೆಚ್ಚಿಸಿ ನಿನ್ನ ವಿಚಿತ್ರಕರ್ಮಗಳ ನಿಚ್ಚದಿ ನೋಡಿ ನಲವಿಂದ ಈ ಸೃಷ್ಟಿಲೀಲೆ- ಯ ಚಂದಾ ಚತುಷ್ಟಾತು ನಿನ್ನಯ ದಯದಿಂದ ಈ ಜಗಬಂಧಕ ಶಕುತಿ ನಿನ್ನಿಂದ ಗೋವಿಂದ 2 ದೇವ ದೇವ ದೇವ ದೇವಾದಿವಿಜಯವಂದ್ಯಸ್ವಭಾವ ದೇವ ನಿಜಸದ್ಭಾವ ಭಜಕರ ಕಾವ ಅಭಯವ- ನೀವ ವಿಶ್ವಾದಿ ರೂಪದಿಂದ ಜೀವರ ಭೋ- ಗಾವಸ್ಥಾತ್ರಯದಲಿ ನಡೆಸುತ್ತಿರುವ ಭೂ ದೇವ ಶ್ರೀ- ದೇವ ಭೂದೇವ ದುರ್ಗಾಧವ-ದುರ್ಗಾಧವಾ ನೀವ್ಯಾಪ್ತನು ಸರ್ವ-ತತುವರ ಕ್ರಿ- ಯವಾ ಪ್ರೇರಿಸಿ ನಡೆವ ದೇವ ವ್ಯಾಪಾ ರವ ಮಾಡಿ ಮಾಡಿಸಿ ಎತ್ತಲು ಚೇತನಚಿ- ತ್ತವಿತ್ತು ಪ್ರವೃತ್ತಿಗೈಸಿ ಫಲವಿತ್ತು ಜನು- ಮವ ಸುತ್ತಿಸುತ್ತಿಸಿತಂದಿತ್ತಪೆ ಶ್ರೀಪುರುಷೋತ್ತಮ ನೀನಿರ್ಲಿಪ್ತ ನೀನಂಚಿತ್ಯ ಅನಂತ ಶ್ರೀ ವೇಂಕಟೇಶ ನಿನ್ನಂಥ ಪೊರೆವರಕಾಣೆ ಉನ್ನಂತ ಉರಗಾದ್ರಿವಾಸವಿಠಲ ಶಾಂತ ಮಹಂತ3
--------------
ಉರಗಾದ್ರಿವಾಸವಿಠಲದಾಸರು
ಸಾವಧಾನವೆಂದು ಶ್ರುತಿಸಾರುತಿದೆಕೋ ಭಾವದಿಂದಲಿ ಮನವೆ ನೀ ಎಚ್ಚತ್ತುಕೋ ಧ್ರುವ ಭವದ ನಿದ್ರಿಗಳೆದು ಸಾವದಾನವಾಗೋ ನಿವಾಂತ ಕೂಡಲಿಕ್ಯದ ಬಲು ಬೆಳಗೋ ವಿವೇಕವೆಂಬ ಸ್ಮರಣೆ ಇದೆ ನಿನಗೋ ಭವಹರ ಗುರುವಿಗೆ ಶರಣಯುಗೋ 1 ಮುಚ್ಚಿದ ಮಾಯದ ಮುಸಕ್ಹಾರಿಸುವದೆ ಙÁ್ಞನ ಎಚ್ಚತ್ತಮ್ಯಾಲಿದೆ ಖೂನ ಸುವಸ್ತು ಧ್ಯಾನ ಅಚ್ಯುತಾನಂತನ ಕಾಂಬುದನುಸಂಧಾನ ಅಚಲವೆಲ್ಲಕ್ಕಿದೆ ಸುಪಥಸಾಧನ 2 ಬೆಳಗಿನ ಬೆಳಗಿದೆ ಬಲು ನಿಶ್ಚಲ ಒಳಗೆ ಹೊರಗೆ ತೋರುವ ಆನಂದ ಕಲ್ಲೋಳ ಹೊಳೆವ ಮಹಿಪತಿಸ್ವಾಮಿ ಪ್ರಭೆಯು ಬಹಳ ಬೆಳಗಾಯಿತು ಗುರುದಯ ಪ್ರಬಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೀತಾಪತಿ ಹರಿ ವಿಠಲಾ | ಪ್ರೀತ ನಾಗೊ ಇವಗೇ ಪ ಮಾತಿಗೆ ಗತಿ ಪ್ರದ | ಖ್ಯಾತಿ ಉಳ್ಳವನೇ ಅ.ಪ. ಉಚ್ಛ ಸಂಸ್ಕøತಿ ಪೊತ್ತು | ಮೆಚ್ಚಿ ಹರಿಪಾದ ದಾಸ್ಯದೀಕ್ಷೆ ಕಾಂಕ್ಷಿಸುತಿಹನು | ಅಚ್ಯುತಾನಂತಾಕುಚ್ಛಿತನು ಇವನಲ್ಲ | ಅಚ್ಚ ಭಕುತನು ಇವಗೆಮೆಚ್ಚಿ ತವದಾಸ್ಯ ಕೊಡು | ಸಚ್ಚಿದಾನಂದಾ 1 ಸಿರಿ | ತೈಜಸಾಭಿಧನಿಂದಬೋದಿಸಿಹೆ ಅಂಕಿತವ | ಶ್ರೀದ ಶ್ರೀ ರಾಮ 2 ಮಧ್ವಮತ ಪದ್ದತಿಯ | ವೃದ್ಧಿಗೈಸಿವನಲ್ಲಿಬುದ್ಧಿ ಚತುರತೆ ಇತ್ತು | ಉದ್ದರಿಸೊ ಇವನಾಕೃದ್ಧ ಖಳ ಜನರಿವನ | ಸ್ಪರ್ಧಿಸದ ತೆರಮಾಡೊಮಧ್ವಾಂತರಾತ್ಮಕನೆ | ಅದ್ವಯನೆ ದೇವಾ 3 ಬಿಂಬೈಕ್ಯ ಚಿಂತನೆಯ | ಹಂಬಲವನೇ ಹಚ್ಚಿತುಂಬಿಸೋ ಸಾಧನವ | ಅಂಬುಜಾಂಬುಕನೇಉಂಬುಡುವ ಕ್ರಿಯೆಗಳನು | ಬಿಂಬ ಮಾಡಿಸೆ ಪ್ರತಿಬಿಂಬ ಮಾಳ್ಪನು ಎಂಬ | ನಂಬುಗೆಯ ನೀಯೋ 4 ಶ್ರೀವರನೆ ತವನಾಮ | ಸರ್ವದಾಸ್ಮರಿಪಂಥಭಾವವೀಯುತ ಹೃದಯ | ಗಹ್ವರದಿ ತೋರೀತಾವಕಗೆ ಭವವನಧಿ | ದಾಂಟಿಸಲು ಪ್ರಾರ್ಥಿಸುವೆಪಾವು ಮದ ಹರ್ತ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು