ಒಟ್ಟು 13948 ಕಡೆಗಳಲ್ಲಿ , 132 ದಾಸರು , 6945 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗಧ್ಯಾನ ಶ್ರೀರಂಗನ ಧ್ಯಾನ ಮುಕ್ತಿಗೆ ಸಾಧನ ಮಂಗಲಮೆನಿಪ ಅಂಗಕೆ ಶೋಭೆ ಪ ಮನುಮುನಿ ಸುರಗಣ ಮನಮಂದಿರನ ನೆನವನುದಿನದಲಿ ಮನಕಚಲಾನಂದನ 1 ಉರಗಶಯನ ಗಿರಿಧರ ಮುರಾರಿ ಚರಣಸ್ಮರಣ ಸ್ಥಿರ ಪರಲೋಕಕರವಶ 2 ಆ ಮಹಾಮಹಿಮ ಸ್ವಾಮಿ ಶ್ರೀರಾಮ ನಾಮಭಜನ ಸದಾ ಕ್ಷೇಮಸಂಪದ ಸುಖ 3
--------------
ರಾಮದಾಸರು
ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಪ ಜಗದಂತರಂಗ ಹೋ ಹೋಅಪ ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ ಲೀಲಾ ವಿನೋದ ಸುತ್ತಿ ಪರಿಗೊಲಿದ ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ- ಕಾಮಿತಗರೆದ ಹೋ ಹೋ 1 ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ ಅಂದು ಪಡೆದ-ಮಗನಿಗೆ ನುಡಿದ ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ ಬಂದ ಪರಮಾ-ನಂದ ಹೋ ಹೋ 2 ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ ಪೂಜೆಗೊಂಬ ಸರ್ವರ-ಬಿಂಬ ಹೋ ಹೋ 3 ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ ಮಾಡಿಸಿಕೊಂಡ -ಬಲು ಪ್ರಚಂಡ ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ ಕರುಣಾ-ಸಿಂಧು ಹೋ ಹೋ 4 ಮೂಜಗದ್ದಪ್ಪ ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ ಅಪ್ರಾಕೃತ ಶರೀರ-ಧೃತ ಮಂದಾರ ವಾಹನ ರಾಜಾಧಿರಾಜ ಹೋ ಹೋ 5
--------------
ವಿಜಯದಾಸ
ರಂಗನಂಗದ ಸಂಗ ಸುಖ ನೋಡ ಅಂಗನೆಲಕುಮಿಯ ಸಂಗದುರ್ಲಭವೆಈಅಂಗನೆಯರು ಮಾಡಿದ ಸುಕೃತವಂತೆ ಪ. ಗುಂಗುರಗೂದಲ ಮ್ಯಾಲೆ ಭೃಂಗದ ಮರಿಗಳು ರಂಗನ ಮುಖದ ರಸವನೆರಂಗನ ಮುಖದ ರಸವನೆ ಸÀವಿದುತಮ್ಮಂಗವ ಮರೆತು ಕುಳಿತಾರೆ ಬ್ರಹ್ಮಾದಿ ವಂದ್ಯ1 ಪಂಕಜನಾಭಗೆ ವಂಕಿ ಬಾಪುರಿ ಇಟ್ಟುಕಂಕಣ ಕಡಗ ಮೊದಲಾಗಿಕಂಕಣ ಕಡಗ ಮೊದಲಾಗಿ ರಂಗಗೆಅಲಂಕಾರ ಮಾಡಿ ಕೆಲದೆಯರು2 ಪಂಚಬೆರಳಿಗೆ ತಕ್ಕ ಮಿಂಚು ಮುದ್ರೆಗಳಿಟ್ಟುಪಂಚರತ್ನದಲಿ ರಚಿಸಿದಪಂಚರತ್ನದಲಿ ರಚಿಸಿದ ವಡ್ಯಾಣಕೆಂಚೆಯರು ಇಟ್ಟು ನಡುವಿಗೆ 3 ಶ್ರೀದೇವಿ ಅರಸಗೆ ಕ್ಯಾದಿಗೆ ಮುಡಿಸುತಊದಿನ ಕಡ್ಡಿಪರಿಮಳಊದಿನ ಕಡ್ಡಿಪರಿಮಳ ಮೂಸುತಮೋದ ಬಡುವವರು ಕಡೆಯಿಲ್ಲ4 ನೀಲವರ್ಣನ ಮುಂದೆ ಸಾಲು ದೀವಿಗೆಯಿಟ್ಟುಮ್ಯಾಲೆ ಚಾಮರವ ಸುಳಿಸುತಮ್ಯಾಲೆ ಚಾಮರವ ಸುಳಿಸುತಶಿರಮ್ಯಾಲೆ ಪೂಮಳೆಯ ಗರೆದಾರು 5 ಚಲ್ವ ರಂಗನ ಮುಂದೆ ಜಲಪಾತ್ರೆಯನ್ನಿಟ್ಟುಎಲೆಅಡಕಿ ತಬಕ ಫಲಗಳು ಎಲೆಅಡಕಿ ತಬಕ ಫಲಗಳ ತಂದಿಟ್ಟುಕೆಲದೆಯರು ಕೈಯ ಮುಗಿದಾರು 6 ಅಪಾರ ಮಹಿಮಗೆ ಧೂಪಾರತಿಯನೆತ್ತಿಭೂಪರಾಮೇಶ ಸಲುಹೆಂದುಭೂಪರಾಮೇಶ ಸಲುಹೆಂದುಗೋಪಾಲಕೃಷ್ಣಯ್ಯನ ಎದುರಲಿ ನಿಂತಾರು 7
--------------
ಗಲಗಲಿಅವ್ವನವರು
ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ ಪ ಉಪೇಂದ್ರ ಭಗವಂತ ಪಟುರೂಪ ಧರಿಸಿ ಚಂದ್ರಮಂಡಲ ಮೀರಿ ಬೆಳದಜಾಂಡವನೊಡಿಯೆ ಸಾಂದ್ರಗುಣದಿಂದ ಉದ್ಭವಿಸಿದೆ ಜನನಿ 1 ಕಮಲವನು ತೊಳಿಯಲಾವೇಗದಿಂದ ವಿಮಲಗತಿಯಲಿ ಬಂದು ಮಂದಾಕಿನಿ ಎನಿಸಿ ಸುಮನ ಸಾವನಿಯಲ್ಲಿ ಪರಿದೆ ಸ್ವರ್ಣನದಿಯೇ2 ಧ್ರುವಲೋಕಕಿಳಿದು ಅಮರಾಲಯವ ಸಾರಿದೆ ತವಕದಿಂದಲಿ ಧುಮುಕಿ ಚತುರಭಾಗವಾದೆ ಭವ ಪರಿಹರಿಸಿ ಭಾಗೀರಥಿ ಎನಿಸಿದೆ 3 ಭವದೊರೆ ಭಗೀರಥಗೆ ಒಲಿದು ಬರುತ ಜವನ ಮನಿಯ ಕೊಡ ಮಣಿಕರ್ಣಿಕೆ ನೆರದೆ4 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಉದ್ಧಾರ ನಿಃಸಂದೇಹಾ ಮಜ್ಜನ ಪೊಳೆವ ವೈಕುಂಠಪುರ ಅವನ ಹೃದಯದಲಿ5 ಕುಲಪ್ರವಹವಾಗಿದ್ದ ಜೀವರ ಪುಣ್ಯವನು ಹೇಳಿ ಕೇಳುವವನಾರು ಮೂಲೋಕದಿ ಸೀಲಗುಣ ಸಂಪನ್ನೆ ವರುಣನರ್ಧಾಂಗಿನಿ ಕಾಲ ಕಾಲಕೆ ನಿನ್ನ ಧ್ಯಾನದಿಂದಲ್ಲಿರಿಸು 6 ದೇಶದೇಶದಲಿಂದ ಬಂದ ಸುಜನರ ಪಾಪ ಮಾಧವ ಚಲುವ ಶ್ರೀನಿವಾಸ ಯದುಪತಿ ವಿಜಯವಿಠ್ಠಲನ ಸುತೆ ಖ್ಯಾತೇ 7
--------------
ವಿಜಯದಾಸ
ರಂಗನಾಥ ಮಾಂ ಗಂಗಾಜನಕ ತುಂಗ ಮಹಿಮ ಮಂಗಳಾಂಗ ಪಾಹಿ ಪ ತಿಂಗಳ ತೇಜದಲಿ ಪೊಳೆಯುತ ಕಂಗೊಳಿಸುವ ಮುಕುಟ ಮಂಡಿತ ಬಂಗಾರದಾಭರಣ ಭೂಷಿತ ಶೃಂಗಾರದಿ ರಥವನೇರುತ ಮಂಗಳ ವಾದ್ಯಂಗಳುಲಿಯೆ ರಂಗನಾಥ ಪ್ರತಿವರ್ಷದಿ ತುಂಗಛತ್ರ ಚಾಮರ ವ್ಯಜ- ನಂಗಳ ವಿಭವದಿ ಬರುತಿರೆ ಕಂಗಳಿಂದ ನೋಳ್ಪ ಭಕ್ತ ಜಂಗುಳಿ ಪಾಲಿಸಲೋಸುಗ ಮಂಗಳಸಿರಿ ಜಾಲಹಳ್ಳಿ ಪುರನಿಲಯ ಪೊರೆ ಎನ್ನ1 ಹಿಂದಕೆ ಮುದಗಲ್ಲು ಪುರದಿ ಬಂದಿಹ ಉಪ್ಪಾರ ಜನದಿ ಬಂದು ಗೋಣಿಯೊಳಗೆ ಮುದದಿ ನಿಂದಿಯೊ ಪದಮೆಟ್ಟೆ ಬೆಟ್ಟದಿ ಅಂದಿನ ರಾತಿಯ ಸ್ವಪ್ನದಿ ಸಂದರ್ಶನವಿತ್ತು ಪುರದಿ ಮಂದಿರಕಾರ್ಯವ ಸೂಚಿಸ- ಲಂದು ರಾಯಗೌಡನಿಂದ ಬಂಧುರದಲಿ ನಿರ್ಮಿತ ಆ- ನಂದನಿಲಯ ಮಂದಿರ ಮು ಕುಂದನಂದ ಕಂದನೆ ಮದ್ ಹೃದಯದಲಿ ಸದಾತೋರೋ2 ವಾರಿಚರ ಮಂದರಧರ ಭೂ ಚೋರಮಥನ ಘೋರರೂಪನೆ ಚಾರು ಬ್ರಹ್ಮಚಾರಿ ವಾಮನ ಶೂರ ಪರಶುರಾಮನೆ ನಮೊ ಧಾರುಣಿ ಜಾವಲ್ಲಭ ಕಂ- ಸಾರಿ ವಸನದೂರನೆ ಹಯ ವೇರಿ ದುಷ್ಟ ದಿತಿಜರ ಭಯ ದೂರ ಮಾಡಿ ಕಾವದೇವ ಧಾರುಣಿಸುರ ಪರಿಪಾಲಕ ವಾರಿಜಭವ ನುತ ಕಾರ್ಪರಾ- ಗಾರವೀರ ನಾರಸಿಂಹ ನಮಿಸುವೆನು ರಮಾರಮಣ3
--------------
ಕಾರ್ಪರ ನರಹರಿದಾಸರು
ರಂಗನಾಥನ ನೋಡುವ ಬನ್ನಿ ಶ್ರೀ- ಪ ರಂಗನ ದಿವ್ಯ ವಿಮಾನದಲ್ಲಿಹನಅ.ಪ. ಕಮನೀಯಗಾತ್ರನ ಕರುಣಾಂತರಂಗನಕಾಮಿತಾರ್ಥವೀವ ಕಲ್ಪವೃಕ್ಷನಕಮಲದಳನೇತ್ರನ ಕಸ್ತೂರಿ ರಂಗನಕಾಮಧೇನು ಕಾವೇರಿ ರಂಗನ1 ವಾಸುಕಿಶಯನನ ವಾರಿಧಿನಿಲಯನವಾಸುದೇವ ವಾರಿಜನಾಭನವಾಸವಾದಿ ಭಕ್ತ ಹೃದಯಾಂಬುಜದಲ್ಲಿವಾಸವಾಗಿರುತಿಹ ವಸುದೇವಸುತನ2 ಮಂಗಳಗಾತ್ರನ ಮಂಜುಳಭಾಷನಗಂಗಾಜನಕ ಅಜಜನಕನಸಂಗೀತಲೋಲನ ಸಾಧುಸಮ್ಮತನರಂಗವಿಠಲ ರಾಜೀವನೇತ್ರನ 3
--------------
ಶ್ರೀಪಾದರಾಜರು
ರಂಗನಾಥಾ ಅಂಗಜಾಪಿತಾ [ಮಾ] ವಂದಿತ ಪ ಜಗದಾದಿ ಮೂಲಕಾರಣ ನಗಧರಾಘ ನಿವಾರಣ ಖಗನುತಾ ಭಕ್ತಕಂಕಣ 1 ದೀನಪಾಲ ಸ್ವರ್ಣಮೇಖಲಾ | ಗಾನಲೋಲಾನುಪಮಲೀಲಾ ಕರುಣಾಲವಾಲ 2 ತಾಮಸನಿಕರಮಾನಿತಾ ಶ್ಯಾಮಲಾಂಗಾ ಪೊರೆ ಶ್ರೀಯುತಾ ರಾಮದಾಸಾರ್ಚಿತ [ಮಾಂಗಿರೀಶ] 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗನಾಯಕ----ತ್ತುಂಗನಾದ ಧೊರಿಯೆ ಪ ಮೂರುತಿ ಮಹಾಮಹಿಮನಾದ ಅಂಗಜ ಜನಕ ಕೃಪಾಂಗ ದೇವೋತ್ತುಂಗ ಅ.ಪ ಸಿಂಧು ಶಯನ ದೇವ ಭಕುತರ ಬಂಧು ಮಹಾನುಭಾವ ಇಂದಿರಾ ಹೃದಯ ಧೀರಾ ಈ ಜನರಿಗಾನಂದನಾಗಿ ತೋರಾ ಮಂದರಧರ ಮುಕುಂದ ಮಾಧವ ಸುಜನ ಪೋಷಕ ಕಂದನ ಸಲಹಿದ ಕರುಣಸಾಗರ ಇಂದು ನಿಮ್ಮ ಚರಣ ದ್ವಂದ್ವಗಳ ತೋರು 1 ವೆಂಕಟಗಿರಿವಾಸ--- ಕಿಂಕರ ನಾ ಅಣುದಾಸ ಶಂಕೆಯಿಲ್ಲದ ದೋಷಾ ಮಾಡಿದಂಥ---- ಸಂಕಟಗಳೆಂಬೀ---- ಕರಗಳೆನ್ನ ಇರಲೂ ಕೊಂಕುಗಳ ಪರಿಹರಿಸ ----ದರ ಪರಮಪಾವನಾ 2 ವೇಣುಗಾನ ವಿನೋದಾ ನೀಹಿತ--ಮೂಲನಾದ ಶ್ರೀನಿವಾಸ ಗೋವಿಂದಾ ಶ್ರೀತಜನ ರಕ್ಷಣಾನಂದ ನಿಲಯನಾದ ಭಾನುಕೋಟಿ ಪ್ರಕಾಶದೇವ---- ಸೂಸುತಿರುವ ದಾನವಾಂತಕ 'ಹೆನ್ನೆ ವಿಠ್ಠಲ’ ಧೇನುರಕ್ಷಕ ದೀನಪೋಷಕ 3
--------------
ಹೆನ್ನೆರಂಗದಾಸರು
ರಂಗನ್ಯಾಕೆ ಬಾರ ತಂಗಿ ಮಂಗಳ ಮಹಿಮನ ದಿವ್ಯಾಂಗವ ಕಾಣದೆ ಎನ್ನಕಂಗಳು ಕಂಗೆಡುತಿವೆಪ. ರಂಗುಮಾಣಿಕದುಂಗುರದಂಗುಲಿಯ ಸನ್ನೆಯಿಂದಪೊಂಗೊಳಲೂದುವನ ತೋರೆ ರಮಣಿ ಅ.ಪ. ತಿಂಗಳು ಮೂಡಿತು ಪಿಕ ಸಂಗೀತವ ತೊಡಗಿತುಭೃಂಗ ತನ್ನಂಗನೆಯರ ಸಂಗಡ ನಲಿದು ಬಂದಶೃಂಗಾರವನದ ಮೃದು ತಂಗಾಳಿ ಬೀಸಿತು ನೋಡಾ-ನಂಗ ನೆಚ್ಚ ಬಾಣಗಳೆಂತೊ ಅಂತರಂಗವ ತಾಕಿದರೆನ್ನ ಇಂಗಿತವರಿತು ದೇವೋ-ತ್ತುಂಗ ಕಾಯದಿರೆ ಉಳಿವಂಗನ ನಾಕಾಣೆ ನಮ್ಮಪೆಂಗಳಿಗೆ ಬಂದ ಬಲುಭಂಗ ತನ್ನದಲ್ಲವೆ ಸಾ-ರಂಗಾಕ್ಷಿ ಬೇಗವನ ತೋರೆ ರಮಣಿ 1 ಕೌಸ್ತುಭ ರತ್ನಕರ್ಣಕುಂಡಲಸರಸಿಜಮುಖದಿ ಕಸ್ತೂರಿ ತಿಲಕವೆಸೆಯೆಪರಿಮಳಿಸುವ ಪೂಮಾಲೆಮೆರೆಯೆ ಪೊಳೆವ ಪೀತಾಂಬರದ ಸುತ್ತಲೊಲೆವಕಿರುಗೆಜ್ಜೆ ಮಣಿಮಯಕಾಂತಿ ಮಿಂಚುತಿರಲುಚರಣನೂಪುರ ಘಲುಘಲುಕೆನೆ ಕುಣಿವÀ ಶ್ರೀಹರಿಯನು ಕರೆದುತಾರೆ ರಮಣಿ 2 ಮಂದಜಾಸನನ ತಂದೆಯೆಂದೆನಿಪ ಗೋವಿಂದನಕಂದರ್ಪ ವೃಂದಾದಿಗಳ ಕಂದಿಸುವ ಕುಂದಿಲ್ಲದಸೌಂದರ್ಯಸಂದೋಹದೊಳಗೊಂದೊಂದನಾರು ಬಲ್ಲರುಎಂದೆಂದಿವನನು ಪೊಂದಿಪ್ಪಇಂದಿರೆ ಇವನ ಗುಣಸಾಂದ್ರ ಕಿರುಬೆರಳಿನಂದವನೋಡುತ್ತ ಆನಂದಸಿಂಧುವಿನೊಳ್ಮುಣುಗಿದಳಿಂದು ಹಯವದನ ಮುಕುಂದನ ತಂದೆನ್ನ ಮುಂದೆಇಂದುಮುಖಿ ಕರೆದುತಾರೆ ರಮಣಿ3
--------------
ವಾದಿರಾಜ
ರಂಗನ್ಯಾಕೆ ಮಮತೆಕೊಟ್ಟು ದಣಿಸುವಿಕೃಷ್ಣ ನೀ ಕರುಣದಿ ಪಾಲಿಸೊ ಪ. ತನುವು ತನ್ನದು ಅಲ್ಲ ....ತನುವಿನ ಸಂಬಂಧಿಗಳೆಂಬೊ ಅವರ್ಯಾರೊನಾನ್ಯಾರೊ ಅವರಿಗೆ ಧನ ಮೊದಲಾದ ವಿಷಯಂಗಳಅನುಭವ ಹಿಂದಿನ ದೇಹದಂತರ ಅರಿಯೆವೊ 1 ನಿನ್ನ ಹಂಬಲಿಸದೆ ಅನ್ಯ ವಿಷಯಗಳಿಗೆನ್ನನೊಪ್ಪಿಸುವದು ನೀತವೆಮನ್ನಿಸಿ ದಯದಿ ನೀ ಯನ್ನ ಪಾಲಿಸಲು ನಾನಿನ್ನ ನೇಮಕೆ ಪ್ರತಿಕೂಲನೆ 2 ಇಂದ್ರಿಯಂಗಳು ವಿಷಯಂಗಳಿಗೆಳೆಯೆ ಗೋ-ವಿಂದಯೆನ್ನ ವಶಕೆ ಬಾರದುಇಂದಿರೆಯರಸ ಬ್ರಹ್ಮೇಂದ್ರವಂದಿತ ಸುಖಸಾಂದ್ರ ಭವಮೋಚಕ ನಮೋ ನಮೋ 3 ಅರಿತು ಅರಿತು ಯನಗರೆಲವವಾದರುವಿರಕುತಿ ವಿಷಯದಿ ಬಾರದುಕರುಣಾಸಾಗರ ನಿಮ್ಮ ದರುಶನವಲ್ಲದೆಮರಳು ನೀಗುವ ಬಗೆ ಕಾಣೆನೊ 4 ಭವ ಮೋಚಕ ನಮೋ ನಮೋ 5
--------------
ಗೋಪಾಲದಾಸರು
ರಂಗಬಾರನ್ಯಾತಕೆ ಸಖಿಯೆ ಮುದ್ದು ಪ ಶರಧಿಯ ಪೊಕ್ಕನೇನೆ ಸುರರೆಲ್ಲರು ಕೂಡಿ ಗಿರಿಯ ಬೆನ್ನಾಲಿ ಅವರು ಪೊರಿಸಿದರೇನೆ 1 ಧರೆಯನೆತ್ತಲು ಪೋಗಿ ನರಹರಿಯಾದನೇನೇ ಗರುವರಹಿತ ಬ್ರಹ್ಮಚಾರಿಯಾದನೇನು 2 ಪರಶುಪಿಡಿದು ಕ್ಷತ್ರಿಯರ ಸವರುವೆನೆಂದು ಗಿರಿವನಗಳಲಿ ತಾನು ಚರಿಸುತಲಿಹನೇನೇ 3 ಸ್ಮರನ ಪಿತನು ತಾನು ನಾರಿ ಪಾಂಚಾಲೆಯ ಮೊರೆಯ ಕೇಳುತ ಭರದಿ ಸಾರಿದನೇನೆ 4 ಮಾನವ ತಾ ಸೂರೆಗೊಳ್ಳಲು ತೇಜಿ ಏರಿ ಪೋದನೇನೆ ಶ್ರೀ ರಂಗೇಶವಿಠಲ 5
--------------
ರಂಗೇಶವಿಠಲದಾಸರು
ರಂಗಯ್ಯ ರಂಗ ಬಾರೋ ಬರುತೀಯ ನಮ್ಮನಿಗೆ ಬಾರೋ ಪ ಬಂದರೆ ಬುಗುರೀ ಚಂಡುಗಳನೆ ಕೊಟ್ಟು ಬಗೆ ಬಗೆ ಆಟವÀ ಕಲಿಸಿ ವಲಿಸುವೇ1 ಬಂದರೆ ರಸಾ ರಸಾಯನಗಳನುಣಿಸೀ ಮುಸುಕಿನೊಳಗೆ ಬಚ್ಚಿಟ್ಟುಕೊಂಬೆನು ಬಾರೊ 2 ಬಂದರೆ ಶ್ರೀದವಿಠ್ಠಲ ನಿನಗೇ ಸುಂದರೆ ಸವಿಮಾತಾ ಹೇಳುªರೊಂದು 3
--------------
ಶ್ರೀದವಿಠಲರು
ರಂಗರುಕ್ಮಿಣಿ ಸತ್ಯಭಾಮೆಗೆ ಬಂಗಾರದ ಪ ಮಂಟಪದೊಳು ಸತಿಯರೆಂಟುಮಂದಿಯು ಕೂಡಿ ಒಂಟಿಮುತ್ತೊ ್ಹಳೆವೊ ವೈಕುಂಠಪತಿಗೆ ಬ್ಯಾಗ 1 ವಾರಿಜಾಕ್ಷಿಯರ್ಹದಿನಾರುಸಾವಿರ ಮಂದಿ ಮಾರನಯ್ಯನ ಮುದ್ದು ಮಕ್ಕಳ ಸಹಿತಾಗಿ 2 ಎಡಬಲ ತೊಡೆಯಲ್ಲಿ ಮಡದಿ ರುಕ್ಮಿಣಿ ಭಾಮೆ ನಡುವೆ ಭೀಮೇಶಕೃಷ್ಣ ನಗುತ ಕುಳಿತನಾಗ 3
--------------
ಹರಪನಹಳ್ಳಿಭೀಮವ್ವ
ರಂಗವಲಿದ ಗುರುರಾಯರ ನೀ ನೋಡೋ | ಅಂತರಂಗದಿ ಪಾಡೋ ಭಂಗ ಬಡಿಪ ದುರಿತಂಗಳ ಈಡ್ಯಾಡೋ ಸತ್ ಸಂಗವ ಬೇಡೋ ಅ.ಪ ಹಿಂದೆ ಮೂರೊಂದವತಾರ ಧರಿಸಿದಾತ ಇದು ಹಿರಿಯರು ಮಾತ | ಬಂದ ಮರಳಿ ಮಹೀತಳದಿ ಜಗನ್ನಾಥ ದಾಸಾರ್ಯ ಪ್ರಖ್ಯಾತ || ತಂದೆ ನಮಗೆ ತಿಳಿ ಎಂದೆಂದಿಗು ಎಂದೆಂದಿಗು ಈತ ಆನಂದ ಪ್ರದಾತ 1 ಬಣ್ಣಿಸಲೆನಗಿನ್ನೊಶವೆ ಇವರ ಚರಿಯ ಕಣ್ಣುಗಳಿಂದಲಿ ಕಾಣುತ ಪೂರ್ಣಯ್ಯತಾನಾಗಿ ವಿಧೇಯ ಧನ್ಯನೆನಿಸಿ ಸತ್ಪುಣ್ಯ ಪಡೆದುದರಿಯ ಪುಸಿಯಲ್ಲವೊ ಖರಿಯ 2 ದಾಸವರ್ಯರಾ ವಾಸಗೈದ ಸ್ಥಾನ ಗಯಕಾಶಿ ಸಮಾನ ಲೇಸು ಭಕ್ತಿಯಲಿ ಸೇವಿಸಲನುದಿನ ಕೊಡುವುದುಸುಜ್ಞಾನ ಶ್ವಾನ | ಯಾತಕೆ ಅನುಮಾನ 3 ಸಾರ ನಿರ್ಮಿಸಿರುವ ದೇಹಾಖ್ಯ ರಥವ ಸೊಗಸಿಲಿಂದ ತಾನೇರಿ ನಗುತ ಬರುವ ಚತುರ್ದಿಕ್ಕಿಲಿ ಮೆರೆವ ಮಿಗೆ ವಿರೋಧಿಸುವ ಪಾಪಿಗೆ ಪಲ್ಮುರಿವ ಪೊಗಳುವರಷತರಿವ 4 ಶಾಮಸುಂದರನ ಸುಕಥಾಮೃತಸಾರ | ರಚಿಸಿದ ಬಹುಚತುರ ಪಾಮರ ಜನರ ಪ್ರೇಮದಿ ಉದ್ಧಾರ ಮಾಡಲು ಗಂಭೀರ ಶ್ರೀಮಾನ್ ಮಾನವಿಕ್ಷೇತ್ರನೆ | ನಿಜಾಗಾರವೆಂದೆನಿಸಿದ ಧೀರ 5
--------------
ಶಾಮಸುಂದರ ವಿಠಲ
ರಂಗವಲಿದ ದಾಸರಾಯ | ಸಾಧು ಸಂಗವಿಡಿಸಿ ಕರುಣದಿ ಪಿಡಿ ಕೈಯ್ಯ ಪ ಕುಂಭಿಣಿ ಸುರನಾಥ | ನಂಬಿದೆ ನಿನ್ನ ಪಾದ ಬೆಂಬಿಡದಲೆ ಕಾಯೊ || ಕಂಬು ಕಂಧರ ಭಕ್ತಮಂದಾರ 1 ಹರಿಕಥೆ ಸುಧಾಸಾರ | ಸುರಸಗ್ರಂಥವ ಜಗದಿ | ವಿರಚಿಸಿರುವ ನಿನ್ನ || ವರ ಉಪಕಾರ | ವರ್ಣಿಸಲಪಾರ | ಪರಮೋದಾರ 2 ಸಾಮಗಾನ ವಿಲೋಲ | ಶಾಮಸುಂದರವಿಠಲ ಸ್ವಾಮಿಯ ಭಕುತಿ | ನಿ | ಅನುಜ ಸಲ್ಹಾದ ನೀಡೆನಗಲ್ಹಾದ 3
--------------
ಶಾಮಸುಂದರ ವಿಠಲ