ಒಟ್ಟು 15585 ಕಡೆಗಳಲ್ಲಿ , 137 ದಾಸರು , 6785 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಾನುಜ ಮತೋದ್ಧಾರಕತಾಮಸಗುಣಪಾಶಗಿರಿವಜ್ರದಂಡ ಪ ವ್ಯಾಸರ ತೋಳೆಂದು ನಂದಿಯ ಧ್ವಜದಲ್ಲಿಹೇಸದೆ ಕಟ್ಟಿ ಪೂಜಿಪರು ನೋಡವ್ಯಾಸರದೊಂದು ತೋಳಿಗೆ ಶಿವಶರಣನಸಾಸಿರ ತೋಳ್ಗಳ ತರಿದ ನಮ್ಮಯ್ಯ 1 ಹರಿ ಎಂಬ ಶಬ್ದವ ಕೇಳಿ ಪಿಟ್ಟಕ್ಕನುಹರನ ಹೊಟ್ಟೆಯಲ್ಲಿ ಪುಟ್ಟುವೆನೆಂಬಳುಹರಹರ ಎಂಬ ಶೈವರ ಏಳ್ನೂರುಶಿರಗಳನರಿದನು ನಮ್ಮ ತಾತಯ್ಯ2 ಪಾದ ಮೇಲು ತಿಳಿದು ನೋಡಣ್ಣ 3 ಲಿಂಗವೆ ಘನವೆಂದು ಹೆಚ್ಚಿ ಕುಣಿದಾಡುವಸಂಗನ ಶರಣರೆಲ್ಲರು ಕೇಳಿರಿಲಿಂಗಪ್ರಸಾದವು ಮುಟ್ಟದಂತಾಯಿತು ನಮ್ಮರಂಗನ ಪ್ರಸಾದವು ಲೋಕಪಾವನವು 4 ಧರೆಯೊಳು ವಿರಕ್ತರು ವೀರ ಪವಾಡವಇರಿದು ಎಬ್ಬಿಸುವೆವೆಂದಾಡುವರುಹರಿಯ ನಾಮಾವಳಿಯ ಅನುಮಾನವಿಲ್ಲದೆಯೆಧರಿಸಿದಲ್ಲದೆ ದೊರೆಯದು ಗತಿಯಣ್ಣ 5 ಹರಬಂದು ಓಂಕಾರ ಗುರುವೆ ಎನ್ನುತ ಕೃಷ್ಣನರಮನೆಯ ಮುಂದೆ ಭಿಕ್ಷವ ಬೇಡಲುಹರಿಯುಂಡ ಮೇಲೆ ಪ್ರಸಾದವ ನೀಡಲುಹರ ಉಂಡು ಬ್ರಹ್ಮ ಹತ್ಯೆ ಕಳಕೊಂಡ 6 ಶಿವ ಮಹಾದೇವನು, ಧರೆಗೆ ಹರಿಯೆ ದೈವಭುವನಕ್ಕೆ ಹರಿಹರರೇಕಸ್ಥರುಭವರೋಗ ಹರ ಕಾಗಿನೆಲೆಯಾದಿಕೇಶವನವಿವರ ತಿಳಿದು ಭಜಿಸಿರೊ ಭಕ್ತ ಜನರು7
--------------
ಕನಕದಾಸ
ರಾಮಾನುಜರೇ ನಮೋ ನಮೋಸ್ವಾಮಿ ಲಕ್ಷ್ಮಣ ರೂಪ ನಮೋ ನಮೋ ಪ ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾನಿಡುಶಿಖಿ ಯಜ್ಞೋಪವೀತದಿಂದತೊಡೆದ ದ್ವಾದಶನಾಮ ಶ್ರೀ ಚೂರ್ಣದಿ ಒಪ್ಪುವಒಡೆಯ ರಾಮಾನುಜರೆ ನಮೋ ನಮೋ 1 ಪಂಕಜನಾಭನ ಪಾವನ ಮೂರುತಿಶಂಕೆಯಿಲ್ಲದೆ ನೆನೆವರ ಪಾಲಿಪನೆಮುಂಕೊಂಡು ಶ್ರುತಿಮತ ಚಾರ್ವಾಕರ ಗೆದ್ದಓಂಕಾರ ಮೂರುತಿ ನಮೋ ನಮೋ 2 ಕೇಶವ ಪಾದಾಂಬುಜ ಮಧುಕರಾಪಾಷಂಡ ಗರ್ವಹರ ಗುರುತಿಲಕಶೇಷಾವತಾರಿ ಮುನೀಶವಂದಿತ ಆದಿಕೇಶವ ಮೂರುತಿ ನಮೋ ನಮೋ 3
--------------
ಕನಕದಾಸ
ರಾಮಾನುಜಾಚಾರ್ಯ ಮೌನಿವರ್ಯ ನೇಮದಿಂದಲಿ ಗೈದೆ ನೀಂ ಸ್ವಾಮಿ ಕಾರ್ಯ ಪ ಆದಿಯೊಳು ನೀನಾದಿಶೇಷನು ಹರಿಶಯ್ಯೆ ಮೋದಕರ ಪ್ರಹ್ಲಾದ ಎಂದೆನಿಸಿದೆ ಸೋದರದಿ ಸೌಮಿತ್ರಿ ಸಂಕರ್ಷಣನು ಆದೆ ನಾಥ ಯಾಮಾನ ಪಥದಿ ಅರಿಗಳನು ಗೆಲ್ದೆ 1 ಗೀತ ಸೂತ್ರಕೆ ಭಾಷ್ಯಕಾರ ನೀನಾಗಿರುವೆ ಖ್ಯಾತಿಸಿದೆ ವ್ಯಾಸ ಪರಾಶರರ ಹೆಸರ ಪೂತ ಆಳುವಾರುಗಳ ಶ್ರೀಸೂಕ್ತಿ ಪ್ರಕಟಿಸಿದೆ ಮಾತೆವೊಲು ಉಭಯವೇದಗಳ ಪೊರೆದೆ 2 ನೂರೆಂಟು ತಿರುಪತಿಯ ಯಾತ್ರೆಗಳ ಮಾಡುತ್ತ ದಾರಿತೋರಿದೆ ಹರಿಯ ಸೇವಿಸುವ ಪರಿಯ ಪರಮಾರ್ಥಿಕರಾಗಿ ಪರಮವೈಷ್ಣವರಿರಲು ಸಾರಸುಖ ಪದತೋರ್ದೆ ಯತಿಸಾರ್ವಭೌಮ 3 ಎಂದೆಂದು ಮರೆಯದ ಕೂರೇಶರಾ ಸಖ್ಯ ಅಂದು ಬೋಧೆಯ ಕೊಟ್ಟ ಪೂರ್ಣಾರ್ಯರ ನೊಂದಕಾಲವ ನೆನೆದು ಕಣ್ಣೀರ ಕರೆಯುವೆನು ತಂದೆ ಗುರುವಿನ ಗುರುವೆ ದೇವಮಾನ್ಯ 4 ಯಾದವನ ಚೋಳನ ಕೃತ್ರಿಮದ ಕೋಟೆಗಳು ಮಾಧವನ ಡೆಲ್ಲಿಯಿಂ ಕರೆತಂದುದು ಬಾಧಿಸದೆ ಬ್ರಹ್ಮಪೀಡೆಗಳು ಓಡಿದುದು ಈ ಧರೆಯ ಕೀರ್ತಿಗೆ ಮೊದಲಾದವು 5 ರಾಮಚಂದ್ರನ ಕಾಡವಾಸವಂ ನೆನಪೀವ ಸ್ವಾಮಿಯರು ಗಿರಿಸೇರ್ದ ಗುರಿ ಎಲ್ಲವೂ ತಾಮಸರು ಸಾವಿರರ ಒಂದೆ ವಾರದಿ ಗೆಲ್ದ ಮಾಮೈಮೆ ಯಾರಿಗಿದೆ ಭೋಗಿರಾಜಾ 6 ಸಿರಿರಂಗ ತಿರುಪತಿ ಕಂಚಿ ಯದುಶೈಲಗಳ ಪರಮಪದಕೂ ಮಿಗಿಲು ವೈಭವವ ಗೈದೆ ನಿರುತ ತಮ್ಮವರಿಂಗೆ ಸಕಲ ಪಾಪವ ಸುಟ್ಟು ಹರಿಯ ಭರವಸೆ ಪಡೆದೆ ಮೋಕ್ಷ ಕೊಡುವಂತೆ 7 ನಿನ್ನಂತೆ ನಡೆವ ಪ್ರಪನ್ನರೇ ಧನ್ಯರು ಮನ್ನಣೆಯ ಪಡೆದಿರವ ಶ್ರೀಮಂತರು ಎನ್ನ ಬಿನ್ನಪ ಕೇಳಿ ನಿನ್ನವನ ಮಾಡಿಕೋ ಮೂರ್ತಿ ಜಾಜೀಶ ಕೀರ್ತಿ 8
--------------
ಶಾಮಶರ್ಮರು
ರಾಮಾಯನ್ನಮ:ರಾಮ ಸದಾ ಓಂ ರಾಮಾಯನ್ನಮ:ರಾಮ ಪ ವೇದಾದಿ ರಾಮ ವೇದಾಂತರಾಮ ವೇದಾಂತ ವೇದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 1 ವೇದಮಯ ರಾಮ ವೇದ ನಿರ್ಮಯ ರಾಮ ವೇದ ವೇದಾತೀತಕಾದಿ ರಾಮ ಮಹ ದಾದಿಗಾದಿರಾಮ ( ಸದಾ) ಓಂ ಮಹ ದಾದಿಗಾದಿ ರಾಮ 2 ನಾದಯುತಾದಿ ರಾಮ ನಾದರಹಿತಾದಿ ರಾಮ ನಾದಾತೀತಾದ್ಯನಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 3 ಆದಿಗಾದಿರಾಮ ಅ ನಾದಿಗಾದಿರಾಮ ಆದಿ ಅನಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 4 ಸತ್ಪಥದಾದಿರಾಮ ¸ À ಚ್ಚಿತ್ತದಾದಿರಾಮ ಉತ್ಪತ್ತಿ ಸ್ಥಿತಿಲಯಕಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 5 ಸ್ವರ್ಗ ಭೋಗಾದಿ ರಾಮ ಧೀರ್ಘಕ್ಕೆ ದೀರ್ಘಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 6 ಜಪತಪದಾದಿ ರಾಮ ಗುಪಿತ ಗುಪ್ತಾದಿ ರಾಮ ಅಪರೋಕ್ಷ ಪರೋಕ್ಷಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 7 ಮಂತ್ರಮಯಾದಿ ರಾಮ ಮಂತ್ರ ತಂತ್ರಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 8 ಮಾಯಮಯಾದಿ ರಾಮ ಮಾಯ ನಿರ್ಮಯ ರಾಮ ಮಾಯ ಮಾಯಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 9 ಕಾಲಕಾಲದಿ ರಾಮ ಕಾಲಮೂಲಾದಿ ರಾಮ ಕಾಲಕಾಲನಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 10 ದಶರಥರಾಮ ದಶರಥಗಾದಿ ರಾಮ ದಶವಿಧೌತಾರದಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 11 ದಿವ್ಯಮಹಿಮಾದಿ ರಾಮ ಭವ್ಯಚರಿತಾದಿ ರಾಮ ದಿವ್ಯ ದೇವರ ದೇವರಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 12 ಬ್ರಹ್ಮನೆಯಾದಿ ರಾಮ ನಿರ್ಮಲಾತ್ಮಾದಿ ರಾಮ ಬ್ರಹ್ಮ ಬ್ರಹ್ಮಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 13 ಸತ್ಯ ಸತ್ಯಾದಿ ರಾಮ ನಿತ್ಯ ನಿತ್ಯಾದಿ ರಾಮ ತತ್ವ ಪಂಚದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 14 ಭುವಿತ್ರಯದಾದಿ ರಾಮ ಭವಭವದಾದಿ ರಾಮ ದಿವನಿಶಿಗಳಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 15 ಬೋಧಾದಿಮಯ ರಾಮ ಬೋಧಾದಿಗಾದಿ ರಾಮ ಸ ಸಾಧನ ಸಿದ್ಧಿಯಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 16 ನಿರ್ನಾಮ ರಾಮ ನಿರ್ಗುಣ ನಿರಂಜನಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 17 ಭಕ್ತಭಿರಾಮ ಮುಕ್ತೀಶ ರಾಮ ನಿತ್ಯ ನಿರ್ಮಲ ಜಗದಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 18 ಚಿನುಮಯ ರಾಮ ಚಿದ್ರೂಪ ರಾಮ ಜನನಮರಣ ಹರಣಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 19 ರಮಾಧವ ರಾಮ ಕ್ಷಮೆಯುತ ರಾಮ ಸುಮನಸ ಭಕ್ತಾಧೀನ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 20 ಜಯ ಜಯ ರಾಮ ಜಯ ಶ್ರೀರಾಮ ಜಯವೆಂದು ನೂರೆಂಟು ಪೊಗಳಲೀ ನಾಮ ದಯದೀಯ್ವಮುಕ್ತಿ ರಾಮ ಸದಾ ಓಂ ಮಹ ದಾದಿಗಾದಿ ರಾಮ21
--------------
ರಾಮದಾಸರು
ರಾಮೇತಿ ಮಂಗಳಂ ದಿವ್ಯನಾಮಾಪ್ರೇಮದಲಿ ಪಾಡುವರ ಕಾಯೋ ಕರುಣಾಳೋ ಪ ಚಿತ್ರ ಚರಿತಾಂಬೂಜ ಪುತ್ರ ದಶರಥ ಬಾಲಾಉತ್ತುಮಾನಾಮವನೆ ಭಕ್ತಿಯಿಂದನಿತ್ಯ ಪಠಿಸಲು ನಿಜ ಭಕ್ತರಿಗೆ ಸಂಸಾರಮೃತ್ಯು ಸುಖ ಹರಿ ಮೋಕ್ಷ ಇತ್ತು ಪಾಲಿಸುವ 1 ಶಬರಿ ಸಾಕ್ಷಿ ಇದಕೆ ಶರಭಂಗ ಋಷಿ ಸಾಕ್ಷಿಸಿಲೆಯು ಸಾಕ್ಷಿ ಸುತನ ಕಪಿಯು ಸಾಕ್ಷಿಶಿವನ ಸಾಕ್ಷಿಯು ಸೂರ್ಯಸುತ ಮುಖ್ಯ ವಾಹನರಗೋಚರನ ರಾಕ್ಷಸರ ಸಾಕ್ಷಿ ನರ ಸಾಕ್ಷಿ 2 ದಾಶರಥೆ ಸಕಲ ಮುನಿ ಪೋಷಕನು ಲಂಕಾದಿಪ್ರೇಶನಾಶಕ ಭೃಗುಜ ತೋಷಿತಾಶಾಶ್ರೀಚರಿಯ ತೀರದಲೆ ಸೀತೆ ಸಿಂಧೆ ಇಂದಿ-ರೇಶ ಪಾಹತ ಸದ್ಗುಣತ ವಿಭೀಷಣ ತ್ರಾತಾ 3
--------------
ಇಂದಿರೇಶರು
ರಾಯ ಕಳುಹಿದ ರಂಗ ರಾಯ ಕಳುಹಿದ ಪ್ರಿಯಭಾವೆ ರುಕ್ಮಿಣಿಯರಪ್ರೇಮಭಾಳೆ ನಿಮ್ಮ ಮ್ಯಾಲೆ ಪ. ಕೇಳೋರಾಯ ನಿಮ್ಮ ಮ್ಯಾಲಿ ಬಹಳ ಪ್ರೇಮಕೃಷ್ಣರಾಯ ಹೇಳಲ್ಪಶವೆಮುಯ್ಯ ತಂದು ಏಳು ದ್ವಾರ ದಾಟಿ ಬಂದು1 ಚಂಚಲಾಕ್ಷಿ ಅರಸಿಯರು ನಿಮಗೆ ಪಂಚಪ್ರಾಣ ಕೃಷ್ಣರಾಯ ಕೆಂಚಿ ರುಕ್ಮಿಣಿಮುಯ್ಯ ತಂದುಮುಂಚಿ ಬಾಗಿಲಮನೆಯೊಳು ಇಳಿದರು 2 ಕುಂತಿದೇವಿಯರ ಅರಮನೆಗೆ ಚಿಂತಾಮಣಿಯ ತಾನೆ ಬಂದ ಎಂಥ ಸುಕೃತರಾಯ ನಿಮ್ಮಇಂಥ ಭಾಗ್ಯ ಎಲ್ಲಿ ಕಾಣೆ 3 ಸುದ್ದಿ ಕೇಳಿ ಧರ್ಮರಾಯ ಗದ್ಗದಿ ನುಡಿಯನೆ ನುಡಿದಾನಮುದ್ದು ಮುಖವ ನೋಡಿಪಾದಕೆ ಬಿದ್ದು ಧನ್ಯರಾದೆವಮ್ಮ 4 ಅಂದ ಮಾತು ಕೇಳಿರಾಯ ನಂದ ಬಟ್ಟು ನಂದ ಭಾಷ್ಪಬಿಂದು ಉದುರಿ ಬಿಗಿದು ಕಂಠಛಂದದಿ ರೋಮಗಳು ಉಬ್ಬಿ 5 ಇಂದು ಭದ್ರೆ ದ್ರೌಪತಿಗೆ ತಂದರಮ್ಮ ರುಕ್ಮಿಣಿ ಮುಯ್ಯಆನಂದದಿಂದ ಭಾವೆ ಕೃಷ್ಣಇಂದು ನಿಮ್ಮ ಅರಮನೆಗೆ 6 ಎಷ್ಟು ಸುಕೃತರಾಯ ನಿಮ್ಮ ಧಿಟ್ಟ ರಾಮೇಶತಾನೆ ಬಂದ ಅಷ್ಟ ಸೌಭಾಗ್ಯದ ಮುಯ್ಯ ಶ್ರೇಷ್ಠ ತೋರೋದಮ್ಮ ಸಭೆಯು 7
--------------
ಗಲಗಲಿಅವ್ವನವರು
ರಾಯ ಬಾರೋ | ತಂದೆ ತಾಯಿ ಬಾರೋ ಅ ನ್ಯಾಯವಾಗಿ ಕಾಲಕಳೆದೆನು ಕಾಯಬಾರೋ ಪ ಅನುದಿನದಲಿ ನಿನ್ನ ಸ್ಮರಣೆಯ ಮಾಡದೆ ಕೆಟ್ಟೆನಯ್ಯ ಕಷ್ಟಗಳನೆ ಕಳೆದಿಷ್ಟವ ಸಲ್ಲಿಸಿ ರಕ್ಷಿಸೊ ನೀನು 1 ಜಪತಪ ಮಾಡದೆ ಪಾಪವಗಳಿಸಿದೆ ಕೃಪೆ ಮಾಡು ಗುರುವೇ ತಾಪವ ಹರಿಸು ಪ್ರೀತಿಯ ತೋರಿಸು ಪೋಷಿಸುನೀನು 2 ಕನಸಿಲಿ ಮನಸಿಲಿ ನಿನ್ನನು ಸ್ತುತಿಸುವೆ ಧನ್ಯನ ಮಾಡೈ ಮನ್ನಿಸದಿದ್ದರೆ ಅನ್ಯರ ಕಾಣಿಸು ನಿನ್ನ ನಾ ಬಿಡೆನೈ 3
--------------
ರಾಧಾಬಾಯಿ
ರಾಯ ಬಾರೋ ತಂದೆ ತಾಯಿ ಬಾರೋ ನಮ್ಮ ಕಾಯೊ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ ಪ ಭಾಸುರ ಚರಿತನೆ ಭೂಸುರ ವಂದ್ಯನೆ ಶ್ರೀ ಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ ಶ್ರೀ ಸುಧೀಂದ್ರಾರ್ಯರ ವರಪುತ್ರರೆನಿಸಿದ ದೇಸಿಕರೊಡೆಯ ರಾಘವೇಂದ್ರರಾಯ ಬಾರೋ 1 ವಂದಿಪ ಜನರಿಗೆ ಮಂದಾರ ತರುವಂತೆ ಕುಂದಾದಭೀಷ್ಟೆಯ ಸಲಿಸುತಿಪ್ಪ ರಾಯ ಕುಂದದಾಭೀಷ್ಟ ಸಲಿಸುತಿಪ್ಪ ಸರ್ವಜ್ಞ ಮಂದನಮತಿಗೆ ರಾಘವೇಂದ್ರ ರಾಯ ಬಾರೋ 2 ಆರು ಮೂರೇಳು ನಾಲ್ಕೆಂಟು ಗ್ರಂಥ ಸಾರಾರ್ಥ ತೋರಿಸಿದೆ ನ್ಯಾಯದಿಂದ ಸರ್ವರಿಗೆ ರಾಯ ಬಾರೋ ಸೂರಿಗಳರಸನೆ ರಾಘವೇಂದ್ರಾ ರಾಯ ಬಾರೋ 3 ರಾಮ ಪಾದಾಂಬುಜ ಸರಸಭೃಂಗ ಕೃಪಾಪಾಂಗ ಭ್ರಾಮಕ ಜನರ ಮಾನಭಂಗ ರಾಯ ಬಾರೋ ಭ್ರಾಮಕಜನ ಸನ್ಮಾನಭಂಗ ಮಾಡೀದಾ ಧೀಮಂತರೊಡೆಯನೆ ರಾಘವೇಂದ್ರಾ ರಾಯ ಬಾರೋ4 ಭೂತಳಾಧಿಪನಾ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದ ಮಹಿಷಿಯಾ ರಾಯ ಬಾರೋ ಪ್ರೇತತ್ವ ಕಳೆವ ಮಹಿಷಿಯಾ ಶ್ರೀಜಗ ನ್ನಾಥ ವಿಠ್ಠಲನಾ ಪ್ರೀತಿಪಾತ್ರಾ ರಾಯ ಬಾರೋ 5
--------------
ಜಗನ್ನಾಥದಾಸರು
ರಾಯ ಬಾರೋ ತಾಯಿ ಬಾ ಎನ್ನ ಕಾಯಲು ತ್ವರ ಬಾರೋ ನೀ ಗುರು ಪ ದಿನದಿನಕೆ ಮನಸಿನ ತಾಪವು ಘನವಾಗುವುದನ್ನು ಬಿಡಿಸಲು ಬಾರದು 1 ಅರಸನಾಗಿ ನೀ ಧರೆಯನಾಳಿದಿ ಭರತ ಭೂಮಿಯಲಿ ಅವತರಿಸಿದಿ ಮತಿ-2 ವರಗುಣಮಣಿಯೇ ಕರುಣದ ಖಣಿಯೇ ಶರನಾದವನನ್ನು ಬಿಡಿಸೋ ಬಾ ಗುರು 3 ಬಾಲ್ಹೀಕನೇ ಬಾ ಪ್ರಲ್ಹಾದನೇ ಬಾ ತಲ್ಲಣಿಸುವೆ ಯತಿ ಆಗಿ ಬಂದ ಗುರು 4 ಸುಮ್ಮನಿರುವೆ ಮತ್ತೊಮ್ಮೆ ಮರಗುವೆ ಒಮ್ಮನಸಿÀಲ್ಲವೋ ಸನ್ಮುಖನಾಗೈ 5
--------------
ಹನುಮೇಶವಿಠಲ
ರಾಯ ಹರಿಯ ಪ್ರಿಯ ಕೃಷ್ಣರಾಯದಾರಿ ನೋಡುವನು ತೊರೆಯದಿ ಅಪ್ಪಣೆಯ ಬೇಡಿ ಎರಗಿ ನಿಂತಳು ಪ. ಹರಿಯ ಬದಿಯಲಿ ಹೋಗಿ ನೀನು ಪರಮ ಪ್ರೇಮದಿಂದಲೈವರು ಬರುವರು ಈ ಕ್ಷಣದಲಿ ಎಂದು ಎರಗಿ ಹೇಳಮ್ಮ1 ಚಿತ್ತಜನೈಯನ ನೋಡಿ ಚಿತ್ತಹರುಷ ಬಡಿಸೆವಮ್ಮವೃತ್ತಾಂತವ ಹೋಗಿ ಹೇಳೆ ಕೀರ್ತಿವಂತಗೆ2 ಮಿತ್ರೆ ದ್ರೌಪತಿಯು ದೂತೆಗೆ ತೃಪ್ತಿಪಡಿಸಿ ಭೋಜನಾದಿಮುತ್ತು ರತ್ನದ ವಸ್ತ ವಸ್ತ್ರಗಳೆ ಕೊಟ್ಟಳು 3 ಅಂಬುಜಾಕ್ಷೆ ದ್ರೌಪತಿಯುತಾಂಬೂಲ ಅಡಿಕೆ ಕೊಟ್ಟುಸಂಭ್ರಮದಿ ಆನೆ ಅಂಬಾರಿ ಕೊಟ್ಟಳು 4 ಕುಂತಿದೇವಿ ಮೊದಲಾದವರುಕಾಂತೆಯರ ಪರಿವಾರ ಸಹಿತ ಕಂತುನೈಯನ ಕರೆಯ ಬರಲು ನಿಂತಾರಂತ್ಹೇಳೆ 5 ಪಂಚ ಪಾಂಡವರ ಮಡದಿ ಪಾಂಚಾಲಿ ದೇವಿಯುತಾನು ಕೆಂಚೆಯರಿಂದ ಕೂಡಿಮುಂಚೆ ಬಾಹೋರಂತ್ಹೇಳೆ6 ಪನ್ನಂಗ ಶಯನನ ನೋಡದೆ ಅನ್ನ ಸೊಗಸವಮ್ಮ ನಮಗೆ ಚನ್ನರಂಗಯ್ಯನ ಮುಂದೆ ಇನ್ನು ನೀ ಹೇಳೆ 7 ಮುದ್ದು ರಂಗನಮುಖವ ನೋಡದೆ ನಿದ್ರೆ ಬಾರದಮ್ಮ ನಮಗೆ ಹದ್ದು ವಾಹನನ ಮುಂದೆ ಸುದ್ದಿ ನೀ ಹೇಳೆ 8 ವೀತ ದೋಷ ರಾಮೇಶನ ಪ್ರೀತಿ ಇರಲಿ ಅಂತೆ ಹೇಳಮ್ಮಆತನ ಕಾಣದೆ ಒಂದು ಮಾತು ಸೊಗಸದು 9
--------------
ಗಲಗಲಿಅವ್ವನವರು
ರಾಯರೆ ಗತಿಯು ನಮಗೆ | ವಾಯುಮತೋದ್ಧಾರ ಶ್ರೀ ರಾಘವೇಂದ್ರಗುರು ಪ ಯುಕುತ ಮಾಗಿಹ ಚೂತ ಸುಕುಜ ಗತಿಯು | ಅಕಳಂಕ ಶ್ರೀಮಂತ್ರಮಂದಿರದಿ ನೆಲೆಸಿಪ್ಪ 1 ಋಷಿಗಳಿಗೆ ಪ್ರಣವೆಗತಿ ಝಷಗಳಿಗೆ ಜಲವೆ ಗತಿ ಸಸಿಗಳಭಿವೃದ್ಧಿಗೆ ಶಶಿರವಿ ಗತಿಯೊ ಶಿಶುಗಳಿಗೆ ಜನನಿಗತಿ ಪಶುಗಳಿಗೆ ತೃಣವೆ ಗತಿ ಅಸಮ ಮಹಿಮೆಯಲಿ ಮೆರೆವ ಮಿಸುನಿ ಶಯ್ಯಜರಾದ 2 ಕಾಮಿನಿ ಮಣಿಯರಿಗೆ ಕೈಪಿಡಿದ ಕಾಂತಗತಿ ಭೂಮಿ ಬುಧರಿಗೆ ಮಧ್ವಶಾಸ್ತ್ರ ಗತಿಯೊ ಧಾಮ ಭಯ ಪೋಪುದಕೆ ಶಾಮಸುಂದರವಿಠಲ ಸ್ವಾಮಿ ನಾಮವೆ ಗತಿಯೊ 3
--------------
ಶಾಮಸುಂದರ ವಿಠಲ
ರುಕ್ಮಿಣಿಯ ದಿವ್ಯತರ ರೂಪವನು ವರ್ಣಿಸಲು ರುಕ್ಮಗರ್ಭಗೆ ವಶವೆ ರೂಢಿಯೊಳಗೆ ಪ ಮಿಕ್ಕ ಮನುಜರ ಮಾತು ಲೆಕ್ಕವೇತರದಯ್ಯಾ ಪಕ್ಷಿವಾಹನ ಕೇಳು ಪರಮಪುರುಷ ಅ.ಪ ಆ ದೇವಿಯಂಘ್ರಿಗಳ ಕೋಮಲಕೆ ಕುರುಹಾಗಿ ಭೂದೇವಿ ತರುಗಳಲಿ ತಳಿರ ತಾಳಿಹಳೊ 1 ಪಾದ ನಖಕಾಂತಿ ತಾ ಪ್ರಕಾಶಿಪ ತೆರೆಯು ಈ ಪುತ್ಥಳಿಯ ಗಮನವಾದರ್ಶ ಹಂಸಕೆ 2 ಬಡನಡುವ ತಾ ನೋಡಿ ಅಡವಿ ಸೇರಿತು ಸಿಂಹ ಚೆಲುವ ನೇತ್ರವ ನೋಡಿ ಚಪಲ ಹೊಂದಿತು ಹರಿಣ3 ನೀಲವೇಣಿಯ ನೋಡಿ ನಾಗಗಳು ನಾಚಿದವುಶ್ರೀ ಲಕುಮಿಯಾ ಕನ್ಯೆ ಶ್ರೀ ಕರಿಗಿರೀಶನರಾಣಿ 4
--------------
ವರಾವಾಣಿರಾಮರಾಯದಾಸರು
ರುಕ್ಮಿಣೀಶ ವಿಠಲ | ಕಾಪಾಡೊ ಇವನಾ ಪ ವಿಖನ ಸಾಂಡದ ದೊರೆಯೆ | ಅಖಳಂಕ ಮಹಿಮಾ ಅ.ಪ. ಸುಪಥದಲಿ ನಡೆವಂತ | ನಿಪುಣತರ ನಿವನೀಗೆಉಪದೇಶವಿತ್ತಿಹೆನೊ | ಅಪವರ್ಗದಾತಾ |ಕೃಪಣ ವತ್ಸಲ ನಿನ್ನ | ಕೃಪೆ ದೃಷ್ಟಿಯಲಿ ನೋಡಿಅಪೇಕ್ಷಿತವನಿತ್ತು | ನೀ ಪೋಷಿಸಿವನಾ 1 ಜ್ಞಾನವಿಜ್ಞಾನದಲಿ | ನೀನಿರುವ ತತ್ವವನುನೀನಾಗಿ ತಿಳಿಸುತ್ತ | ಕಾಪಾಡೊ ಹರಿಯೇ |ಶ್ರೀನಿವಾಸನೆ ದಯಾ | ಪೂರ್ಣ ನೀನಾಗುತ್ತಜ್ಞಾನಭಕ್ತಿಯನಿತ್ತು | ಕಾಪಾಡೊ ಹರಿಯೆ 2 ಎಲ್ಲೆಲ್ಲು ನೀನಿರುವೆ | ಸೊಲ್ಲನ್ನು ಅನುಭವಕೆಉಲ್ಲಾಸದಲಿ ಇತ್ತು | ಬಿಲ್ಲಾಳು ಎನಿಸೋಬಲ್ಲಿದರ ಕೂಟದಲಿ | ಬಿಲ್ಲಿ ನಂತರಿಸುತ್ತಮಲ್ಲಮರ್ದನಕೃಷ್ಣ | ಕಾಪಾಡೊ ಇವನ 3 ಸತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂದೆಂಬಮತಿಯನೇ ಕರುಣಿಸುತ | ಅತಿಶಯವ ತೋರೀಮತಿಮತಾಂವರರಂಘ್ರಿ | ರತಿಯನ್ನೆ ಕರುಣಿಸುತಮತಿವಂತ ನೆನಸಿವನ | ಮಾರುತನ ಮತದೀ 4 ದೇವತವ ಮಹಿಮೆಗಳು | ಭಾವದಲಿ ಪೊಳೆಯಲ್ಕೆಕೋವಿದರ ಸಂಗವನು | ನೀ ವೊಲಿದು ಈಯೋ |ನೀ ವೊಲಿಯದಿನ್ನಿಲ್ಲ | ಗೋವುಗಳ ಪರಿಪಾಲದೇವ ದೇವೇಶ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ರುದ್ರ ಭವ ಶಂಭೋ ಪ ಬೇಡಿಕೊಂಬೆ ನಿನ್ನಡಿಗಳಿಗೆರಗಿ ನಾ ಕಡಲ ಕುವರಿಯ ಒಡೆಯನಲಿ ಮನ ಅ.ಪ ಮನಕಾರಣವಲ್ಲವೊ ಅನಲಾಕ್ಷನೇ ಹೀನ ಸುಕರ್ಮಕೆ ಪ್ರೇರಣೆ ಹೊರತು 1 ಮೃತ್ಯುಂಜಯ ಮುಪ್ಪುರಹರ ದೇವನೆ ಅತ್ಯಪರಾಧಗಳೆತ್ತೆಣಿಸದಿರೈ 2 ಶ್ರೀ ನರಹರಿಯಾಸುತನ ಕುವರನೇ ಅನುದಿನದಲಿ ಮನ ದೋಷಗಳಳಿಯ್ಯೆ 3
--------------
ಪ್ರದ್ಯುಮ್ನತೀರ್ಥರು
ರುದ್ರ (ಶಿವ) ಸ್ತುತಿ ಲೋಕರಕ್ಷಕನೆಂಬೊ ಹರ ಗಂಗಾಧರಗೆ ಪ ನೀಕಮಲಮುಖಿ ಅಖುವೈರಿ ಅ- ನೇಕ ಮೈಯೊಳು ಸುತ್ತಿಕೊಂಡು ವಿ- ವೇಕವಿಲ್ಲದೆ ವಿಷವನುಂಡ ಪಿ- ನಾಕಧರನಿಗೆ ಸೋಲುವುದೆ ಅ.ಪ ಶಿರದೊಳು ಶಶಿಯ ಕೆಂಜಡೆಯಿಪ್ಪಭೋಗಿ ಸ್ಮರನದಹಿಸಿ ಭಸ್ಮ ಹಣೆಗಿಟ್ಟಯೋಗಿ ಇರುವೊಡೆ ಸ್ಥಳವಿಲ್ಲ ದಂತೆ ತಾ ಪೋಗಿ ಬೆರೆವ ಸ್ಮಶಾನ ಮಂದಿರ ಸುಖವಾಗಿ ಬರಿದೆ ಒಲಿವುದೆ ಗರುವೆ ಪಾರ್ವತಿ1 ಜಾಹ್ನವಿ ಶಶಿಯನ್ನೆ ಮಾಡಿ ರುಂಡಮಾಲೆಗಳ ಕೊರಲೊಳಗಿಟ್ಟು ಆಡಿ ಕುಂಡಲಗಳ ಧರಿಸಿರುವನ ನೋಡಿ ಖಂಡಪರಶುವೆಂದು ಅವನ ಕೊಂಡಾಡಿ ದಿಂಡೆಯಾಹ ಪ್ರಾಯದವಳು ನೀ ಕಂಡು ನೀನವ ಗಂಡನೆಂದು ಪ್ರಾ- ಚಂಡಗೊಲಿದಿಹೆ ಸರಿಯೆ ಪಾರ್ವತಿ 2 ವಿರಚಿಸುವ ಲೀಲಾವಿನೋದನ ವರದ ಶ್ರೀ ಗುರುರಾಮವಿಠಲನ ಪರಮ ಪ್ರಿಯ ಪರಮೇಶ ಶಿವಗೆ 3
--------------
ಗುರುರಾಮವಿಠಲ