ಒಟ್ಟು 2180 ಕಡೆಗಳಲ್ಲಿ , 120 ದಾಸರು , 1676 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಕೊಡು ಕೊಡು ಹರಿಯೆ ಕೆಡದಂಥ ಪದವಿಯ ಒಡನೆ ನಿಮ್ಮಂಘ್ರಿಯ ಕಡುದೃಢ ಭಕುತಿಯ ಪ ತ್ರಿಜಗ ಪರಿಪಾಲಕ ಭಜಿಸಿಬೇಡುವೆ ನಿಮ್ಮ ಭಜನೆಸವಿಸುಖಲಾಭ 1 ಪರಕೆ ಪರತರವೆನಿಪ ಪರಮಪಾವನ ನಿಮ್ಮ ಚರಿತ ಪೊಗಳಿ ಬಾಳ್ವ ಪರಮಾನಂದದ ಜೋಕು 2 ಯತಿತತಿಗಳು ಬಿಡದೆ ಅತಿ ಭಕ್ತಿಯಿಂ ಬೇಡ್ವ ಪತಿತ ತವಸೇವೆಯಭಿರುಚಿ ಎನ್ನೊಡಲಿಗೆ ಸತತ 3 ಪರಿಭವ ಶರಧಿಯ ಕಿರಿಯಾಗಿ ತೋರಿಪ ಪರಮಪುರುಷ ನಿಮ್ಮ ಕರುಣ ಚರಣ ಮೊರೆ 4 ದುಷ್ಟ ಭ್ರಷ್ಟತೆಯಳಿದು ಶಿಷ್ಟರೊಲುಮೆಯಿತ್ತು ಅಷ್ಟಮೂರುತಿ ನಿಮ್ಮ ಶಿಷ್ಟಪಾದದ ನಿಷ್ಠೆ 5 ಕನಸು ಮನಸಿನೊಳೆನ್ನ ಕೊನೆಯ ನಾಲಗೆ ಮೇಲೆ ನೆನಹು ನಿಲ್ಲಿಸಿ ನಿಮ್ಮ ಕರುಣಘನ ಕೃಪೆ 6 ನಾಶನಸಂಸಾರದಾಸೆಯಳಿದು ನಿಜ ಸಿರಿ 7 ಮೂರ್ಹತ್ತು ಮೂರುಕೋಟಿ ವಾರಿಜಾಸನ ಸುರರು ಸೇರಿ ಭಜಿಪ ನಿಮ್ಮ ಮೂರುಕಾಲದ ನೆನಪು 8 ಅಂತರ ಶೋಧಿಸಿ ಅಂತರಾತ್ಮನ ಕಂಡು ಸಂತಸದ್ಹಿಗ್ಗುವ ಸಂತರ ಮತವರ್ಣ 9 ಸರ್ವಜ್ಞರೆನಿಸಿದವರ ಶರಣರ ಸಂಗಕರುಣಿಸಿ ಕರುಣದಿ ಪರಮ ಜ್ಞಾನೆನುವ ಪದವಿ 10 ಮಿಗಿಲಾಗಿ ನಿರ್ಧರಿಸಿ ಸಿರಿವರನಂಘ್ರಿಯೇ ಜಗಮೂರಧಿಕೆಂಬ ಸುಗುಣಗುಣಾಶ್ರಮ11 ಧರೆಮೂರು ತಲೆಬಾಗಿ ಪರಮಾದರದಿ ಪಾಡ್ವ ಹರಿನಾಮ ಕೀರ್ತನೆ ಪರಮಾದರದಿ ಪಾಡ್ವ 12 ಶಮೆಶಾಂತಿದಯೆಭಕ್ತಿ ವಿಮಲಗುಣಭೂಷಣತೆ ಸುಮನಸಸಮನಿಷ್ಠೆ ಅಮಿತಮತಿವರ ಶ್ರೀ 13 ಮಿಥ್ಯೆವರ್ಜಿತವಖಿಲ ಸತ್ಯತೆ ಸದಮಲ ನಿತ್ಯ ನಿರ್ಮಲವೆನಿಪ ತತ್ವದರ್ಥದ ವಿವರ 14 ತನುನಿತ್ಯ ಸ್ವಸ್ಥತೆ ಘನಕೆ ಘನತರವಾಗಿಮಿನುಗುವ ಘನಮುಕ್ತಿ ಮನುಮುನಿಗಳ ಪ್ರೇಮ ಶ್ರೀರಾಮ15
--------------
ರಾಮದಾಸರು
ಕೊಡು ಸುಖಾನಂದ ಬಾಷ್ಪದರೋಮಾಂಚನ ಗದ್ಗದವಾ ಪ ಮೃಡ ಶ್ರುತಿ ತತಿಯಲಿ ನಿನ್ನ ವಿತತ ಮಹಿಮೆ ಕೇಳಿಅತಿಶಯದಲಿ ರೋಮ ಸತತ ಸುರಿಸುವಂಥ 1 ನಿನ್ನ ಚೆಲುವ ರೂಪವನ್ನೆ ನೋಡುತ ಮುಖಉನ್ನತ ಸುಖ ಜಾಲ ಕಣ್ಣೆಲಿ ಸುರಿವಂಥ 2 ಇಂದು ಕೇಳುತಕಂಠ ನಿಂದು ಬಿಗಿದು ಮಾತು ಒಂದೂ ಬಾರದಂತೆ3
--------------
ಇಂದಿರೇಶರು
ಕೊಡುಜಡಜಾಕ್ಷ ನಿಮ್ಮಡಿ ಧ್ಯಾನಮೃತ ಕಡುದಯದೆನ್ನಯ ಜೆಹ್ವೆಗೆ ಸತತ ಪ ದುರುಳ ದಾನವರೊದೆದ ಸುರರನುದ್ಧರಿಸಿದ ಪರಮಪಾವನ ಪಾದಸ್ಮರಣಸಂಜೀವನ 1 ಅತ್ರಿಮುನಿಯ ಕಾಯ್ದ ಸತ್ರಾಜಿತನ ಪೊರೆದ ಸತ್ಯವ್ರತೆಗೆ ವರವಿತ್ತ ಅಮಿತಪುರುಷ 2 ಭಕ್ತರಾಪತ್ತು ಕಳೆದು ಅರ್ಥಿಯಿಂ ಕಾಯ್ವ ಪ ವಿತ್ರ ಶ್ರೀರಾಮನಾಮ ಮುಕ್ತಿ ಸಂಪದಸಿದ್ಧಿ 3
--------------
ರಾಮದಾಸರು
ಕೊಡುವುದನೆ ಕೊಡುಮತ್ತೆ ಎಷ್ಟಾದರಭವ ಪ ಅಸುವನೀಗಲು ನಾನ್ಹಸಗೆಟ್ಟು ಬೇಡದ ಅಸಮಶುಚಿಮನ ನೀಡೊ ಕುಸುಮಾಕ್ಷ ಹರಿಯೆ 1 ಅತಿಶಯದ ಬಡತನವು ಸತತ ಪೀಡಿಸಲೆನಗೆ ಗತಿಯಿಲ್ಲದವವೆನುತ ಸತಿಸುತರು ಜರಿಲಿ ಧೃತಿಗುಂದಿ ಮತಿಗೆಟ್ಟು ವ್ಯಥೆಬಡುವ ಸ್ಥಿತಿಯನ್ನು ಹಿತದಿಂದ ತೊಲಗಿಸೈ ರತಿಪತಿಪಿತನೆ 2 ಬಿರುಕಿನೊಳು ಬಂದು ಈ ಮುರುಕು ಕಾಯದ ಇರುವು ಹರಕೊಂಡು ಹೋಗಲಿ ಹರಿ ಕರುಣದೋರೊ ನರಕಿಯೆನಿಸುವ ಮಹ ತಿರಕಿ ಸಂಸಾರದ ಮರುಕವನು ಪರಿಹರಿಸೊ ಪರಕೆ ಪರತರನೆ 3 ಊರು ನಾ ಸೇರಿರಲಿ ಅರಣ್ಯದೊಳಗಿರಲಿ ಮೀರಿದ ರೋಗದಿಂ ಘೋರ ಬಡುತಿರಲಿ ಆರೈಸದಾರನ್ನು ಸಾರಸಾಕ್ಷನೆ ನಿನ್ನ ಪಾರನಾಮದ ಸವಿ ಸುಸಾರ ಎನಗಿರಲಿ 4 ಕೊಡೋಧರ್ಮ ನಿನ್ನದಿದೆ ಬೇಡುವುದು ನನ್ನ ಧರ್ಮ ಕೊಡುವುದಾದರೆ ನೀನೆ ಕೊಡು ಎನಗೆ ಇದನು ಪೊಡವಿಯವರಿಗೆ ಬಾಗಿ ಬೇಡದ ಪದವಿಯನು ಪಿಡಿವೆ ತವಪಾದ ಎನ್ನೊಡೆಯ ಶ್ರೀರಾಮ 5
--------------
ರಾಮದಾಸರು
ಕೊಲ್ಹಾಪುರದ - ವಾಸಿನೀ | ಹೇ ಮಹಾಲಕ್ಷ್ಮಿಸೊಲ್ಲ ಲಾಲಿಸೇ ಮಾನಿನೀ ಪ ಬಲ್ಲವರಲ್ಲಿಗೆ ನಿಲ್ಲದೆ ತೆರಳಿಸೆಖುಲ್ಲರ ದಲ್ಲಣ | ನಲ್ಲರಿಸೆ ಮನ ಅ.ಪ. ಭೃಗುಮುನಿಯೂ ತಾ ಬರುತಾ | ವಕ್ಷಘಾತವಾಗಲು ತವ ತಾಣ - ತಾಡಿತ |ಅಗಡ ಮುನೀಗೆ ಪ್ರೀತಾ | ನಾಗುತಲಕುಮಿಗೆ ಅವನು - ಆದ್ರುತದೃಗಜಲಜಿಗಿಸುತ | ಹಗರಣಗೆಯ್ಯುತಜಗಳವ ನಟಿಸುತ | ನಗಧರನಲಿ ನೀನುಜಗದೊಡೆಯನ ಮನ | ಬಗೆಯನು ತಿಳಿಯುತಸೃಗಾಲ ಪುರಕಾಗಿ ಆಗಮ ನಿನ್ನದೂ 1 ಇಂಥಹ ನಿಮ್ಮ ಆಟವೂ | ಭಕ್ತರ ಮುಕ್ತಿಪಂಥವೆನಿಪ - ಮಾರ್ಗವೂಸಂತರ ಅಂತರಂಗವೂ | ನಿರ್ಮಲಿನ ಮುಕ್ತಿಕಾಂತೆಯೊಡನೆ ಆಟವೂ |ಅಂತರಂಗದಲಿಪ್ಪ ಗ್ರಂಥಿಸು ಭೇದನಸಂಚಿತಗಳು ನಾಶ | ಮುಂಜೆನ ನಿರ್ಲೇಪಅಂತರಂಗದಿ ಹರಿ | ಕಾಂತಿಯ ದರ್ಶನಎಂತು ನಾ ಪೇಳಲಿ | ಪಂಥಕೀರ್ತಾಳೀ 2 ಕುಂಡಲ ಕಪೋಲೆ | ಕಿರೀಟ ಮೌಳೇತಿಲಾಲಜ ಕರೆ ಕೋಮಲೇ ||ಕೇಳಿಲಿ ಯಮುನಾ ಕೂಲೇ | ಹರಿಯೊಡನೆ ಲೀಲೇತೂಳಿದಾನಂದ ಸುಜಾಲೇ ||ಕಾಲಕೂಟ ಸಮ | ಕೀಳು ವಿಷಯದಲಿಬೀಳುವುದೆನ ಮನ | ಲಾಲಿಸು ಹೇ ತಾಯೇಶೀಲನೆನ ಹರಿ ಗುರು | ಗೋವಿಂದ ವಿಠಲನ ||ಲೀಲೆಯ ತೋರು | ವಿಶಾಲ ಹೃದಯಳೇ 3
--------------
ಗುರುಗೋವಿಂದವಿಠಲರು
ಕೋಲಾಟದ ಪದಗಳು ಕುಶಲದಿಂದ ಬಾಳಿರೈ ಯಶವನಾಂತು ಬೆಳಗಿರೈ ಕುಶೇಶಯಾಕ್ಷನೊಲಿದು ಸಂತೋಷವೀಯಲಿ ಪ. ಪಿತೃಭಕ್ತರೆನಿಸುತ ಮಾತೃಸೇವೆಗೈಯುತ ಪುತ್ರಪೌತ್ರಮಿತ್ರರಿಂ ಕಲತ್ರಭಾಗ್ಯದಿಂ1 ಕಾರ್ಯಸಿದ್ಧಿಯಾಗೆ ನಿಮ್ಮಾರ್ಯಮಾತೆಗೆರಗುತ ಸಾರಸತ್ಯಧರ್ಮಮಂ ನೀವ್ ಮೀರದಾವಗಂ 2 ದಾನವೇಂದ್ರನ ತೆರದೊಳು ದಾನಶೂರರೆನ್ನಿಸಿಳೆಯೊಳ್ ದೀನ ದುಃಖಗಳಿಗೆ ನೀವು ಶ್ರೀನಿಧಾನರೆನ್ನುವೋಲ್ 3 ಈ ಶರತ್ಸಮಾಗಮಂ ದೇಶಮಾತೆಗೆ ಸಂಭ್ರಮಂ ದೇಶಭಕ್ತರಿಗುತ್ಸವಂ ಇದೇ ನಮಗೆ ಸಂಭ್ರಮಂ4 ತಂದೆ ಶೇಷಗಿರಿವರಂ ನಂದಿನಿಯ ಕೈಪಿಡಿಯುತಾ ನಂದದಾಯಕ್ ನೆನಿಸಲೆಂದೆಂದು ಹರಸುತ 5
--------------
ನಂಜನಗೂಡು ತಿರುಮಲಾಂಬಾ
ಕ್ರಿಯ ರೂಪ ಗುಣ ನಾಮ ದರ್ಶನ ಕರ್ತಾ ಪ ದಯವನಧಿ ಗೋಪಾಲಗೈಸು ಅಹಂ ನಾಶ ಅ.ಪ ಉಂಡು ಉಣಿಸುವಿ ನೀನು ದಣುವಿಕೆಗೆ ನಾನಯ್ಯ ಥಂಡ ಥಂಡದಿ ನಿನ್ನ ಲೀಲ ಜಾಲ ಕಂಡರೂ ಕಾಣದಲೆ ಬೆಂಡಾದೆ ಬಹುನೊಂದು ಮಂಡೆ ತಾಗಿದರು ಮನಕೆಚ್ಚರಾಗದು ಸ್ವಾಮಿ 1 ನಾಯಿಯಂದದಿ ವಿಷಯಕ್ಹಾರುವುದು ಈ ಮನಸು ದಾಯಾದಿಗಳ ವಶದಿ ಸಿಕ್ಕಿ ಸತತ ಕಾಯಜಾಪಿತ ನಿನ್ನ ರೂಪ ಧ್ಯಾನಕೆ ಬರದು ಮಾಯೇಶ ಮಾರಮಣ ಕಾಯೆನ್ನ ಕರುಣಾಬ್ಧಿ 2 ತೆಗಿ ನನ್ನ ಭೋಗ ಬಲೆ ನಗೆ ಮುಖವ ತೋರಯ್ಯ ನಿಗಮ ವೇದ್ಯ ಜಯೇಶವಿಠಲರಾಯ ಖಗಧ್ವಜ ಪರೆ ತೆಗೆದು ಜ್ಞಾನ ಚಕ್ಷುಸು ನೀಡು 3
--------------
ಜಯೇಶವಿಠಲ
ಕ್ಲೇಶಮಾಡಲಿ ಬೇಡ ಮನವೆ ನೀನೂ ದೇಶದೊಳಗೆ ಕೇಳು ಜ್ಞಾನಿಗಳ ಸಮ್ಮತಾ ಪ ವಸಿಷ್ಠ ಮಹಾಋಷಿಗೆ ನೂರುಮಂದಿ ಸುತರು ಅಸಮಸಾಹಸರು ಬಲು ಶೀಲಜ್ಞರು ಕಾಲ ಮೃತ್ಯುವಿನ ಕೈ ವಶವಾಗಿ ಹೋದರದು ನೋಡು ದು:ಖವ ಬಿಡು 1 ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠಪಿತ, ಪಾರ್ಥನು ಪಡೆದ ಶೂರ ಇಷ್ಟು ಜನ ಇರಲಾಗಿ ಅಭಿಮನ್ಯು ದೇಹವನು ಬಿಟ್ಟು ಪೋಗಲು ಒಬ್ಬರಾದರು ಉಳುಹಿದರೆ2 ಇಂಥವರಿಗೀತ್ಯರನು ನಿನಗಾವ ಸ್ವಾತಂತ್ರ್ಯ ಸಂತೋಷವೆ ಬಡು ಧೈರ್ಯದಲ್ಲಿ ಕಂತು ಜನಕ ನಮ್ಮ ವಿಜಯವಿಟ್ಠಲನಂಘ್ರಿ ಅಂತರಂಗದಲಿಡು ಮುಂದಿನಗತಿ ಬೇಡು 3
--------------
ವಿಜಯದಾಸ
ಕ್ಷಣದಲಿ ಸೌಖ್ಯ ಕ್ಷಣದಲಿ ದುಃಖ ಬಣಗು ಸಂಸಾರದಿ ಎಣಿಸಿದರೆ ಪ ಕೊಟ್ಟರೆ ತಂದರೆ ಸಂತೋಷ ಬಿಟ್ಟರೆ ಕೊಡದಿರೆ ಬಲುರೋಷ 1 ಎರೆಡು ಘಳಿಗೆ ಬಹಳಾಯಾಸ ಏನು ಇಲ್ಲ ಕೊನೆಗೆ ನಿರಾಶ 2 ತಾನೇಕಾದಶಿ ಪಿಕ್ನಿಕ್‍ವೂಟ ಭಾನುವಾರ ಇಸ್ಪೇಟಾಟ3 ಕೋಟುಷರಟು ಜುಬ್ಬ ಇಜಾರು ನೋಟಕೆ ಮೇಲೆ ಕಾರ್ಬಾರು 4 ಕರುಡು ಕುಂಟ ಮೂಕರು ಮಾತ್ರ ಸತ್ಪಾತ್ರ 5 ಅತಿಜಾರಿಗೆ ಕೆಂಪು ಬೆಂಡೋಲೆ 6 ಹಾದರಗಿತ್ತಿಗೆ ದೂದ್‍ಫೇಢ ಸಾಧುಸ್ತ್ರೀಗನ್ನವು ಬೇಡ 7 ಹಿರಿಯರ ಮಾತಿಗೆ ನಾನ್ಸೆನ್ಸು ದುರುಳರ ಬೋಧೆಗೆ ತಾ ಒಳ್ಳೆಮನಸು 8 ಮೋಕ್ಷವಿದ್ಯೆ ಕೆಲಸಕೆ ಬಾರದು ಕುಕ್ಷಿಂಬರ ವಿದ್ಯೆ ಬಲು ದೊಡ್ಡದು 9 ಹರಿಕಥೆ ಕೇಳ್ವುದು ಬೇಜಾರು ಹರಟೆ ಹರಟುವುದು ಬಲು ಜೋರು 10 ಪರರ ನೋಡಿ ನನ್ನಾಚರಣೆ ಗುರುರಾಮ ವಿಠಲನಲಿಲ್ಲ ಸ್ಮರಣೆ 11
--------------
ಗುರುರಾಮವಿಠಲ
ಕ್ಷಮಿಸೊ ಯೆನ್ನಪರಾಧಗಳನು ಪ ಮಾಯಾ ಭ್ರಮಿತನ ಕರುಣದೊಳೀಕ್ಷಿಸೊ ಅ.ಪ ಗಿಷ್ಟಾದರು ದಯೆಯಿಟ್ಟು ಪೊರೆಯೊ ಹರಿ 1 ಮಂದರಧರ ಸರ್ವೇಶ್ವರನೆ || ನಂದದ ಸ್ಮರಣೆಯ ಕುಂದದೆ ಪಾಲಿಸೊ 2 ಸತಿಸುತರಿಹಪರವೆನಗೆ ನೀನೆ ಸ-| ಸತತ ಮೈದೋರೊ ಸದಾನಂದ ಗುರುವರ 3
--------------
ಸದಾನಂದರು
ಕ್ಷೀರಶರಧಿಶಯನ ನಾರಾಯಣ ಪ ತೋರೊ ಎನ್ನಲಿ ಕರುಣ ನಾರಾಯಣ ಅ.ಪ ಕ್ಷಿತಿಯೊಳೆನಗೆ ಸ್ಥಿತಿ ಗತಿಯು ಬೇರಿಲ್ಲವೊ ಶ್ರಿತಜನ ಕಲ್ಪತರು ಶ್ರೀರಮಣ 1 ಅರಿಷಡ್ಪರ್ಗವ ಮುರಿದು ಎನಗೆ ನಿನ್ನ ವರ ಸೇವೆಯ ನೀಡೊ ಶ್ರೀ ನರಹರಿ 2 ಪಾಮರ ಭಕುತರ ಕ್ಷೇಮವಹಿಸಿ ಅವರ ಕಾಮಿತಗಳ ನೀಡೊ ಕಾಮಧೇನು 3 ಸಂತತ ಹೃದಯದಿ ನೆಲೆಸಿ ಎನಗೆ ಮನ ಶಾಂತಿಯ ದಯಮಾಡೊ ಚಿಂತಾಮಣಿ 4 ನಿನ್ನ ದಾಸರದಾಸನೆನ್ನಲಿ ದಯದಿ ಪ್ರ ಸನ್ನ ನಾಗೊ ಶ್ರೀಶ ಲಕ್ಷ್ಮೀಶ5
--------------
ವಿದ್ಯಾಪ್ರಸನ್ನತೀರ್ಥರು
ಖಗವರಧ್ವಜ ವಿಠಲ ಪೊರೆಯ ಬೇಕಿವನ ಪ ಭಾಗವತ ಸುಶ್ಲೋಕ್ಯ ಬಗೆಬಗೆಯಲಿಂದಿವನಮಿಗಿಲಾಗಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ಅ.ಪ. ವಿತ್ತಪತಿಯೊಲಿಮೆಗಳು | ಕತ್ತರಿಸಿ ಪೋಗಿ ಕೃತಕೃತ್ಯತಾನೆಂಬ ಉ | ತ್ಕøಷ್ಟಮತಿಯೊದಗೇಕೃತಿವಾಸನ ತಾತ | ಇತ್ತುದಕೆ ಸಂತೃಪ್ತಿಪೊತ್ತು ತವದಾಸ್ಯವನು | ಅರ್ಥಿಸುವ ಹರಿಯೇ 1 ಪೋರನಾ ಮಯಕಳೆದು | ತಾರತಮ್ಯ ಜ್ಞಾನ ಮೂರೆರಡು ಭೇದಗಳ | ಸಾರವನೆ ಅರುಹೀಕಾರಣಿಕ ನೀನೆ ಉ | ದ್ದಾರವನೆ ಮಾಡೊ ಹರಿಬೇಕೊಂದ ಪ್ರಾರ್ಥಿಪೆನೊ | ಕಾರುಣ್ಯ ಮೂರ್ತೇ 2 ಅನೇಕ ಜನ್ಮದಲಿ | ಹೀನಯೋನಿಲಿ ನೊಂದುಜ್ಞಾನ ಸಾಧನ ವಿರದೆ | ದೀನ ನಾದವಗೇಮಾನ ನಿಧಿ ಶಾಸ್ತ್ರ ಸಂ | ಧಾನ ವೀಯುತ ತ್ವರ್ಯಧ್ಯಾನ ಸಾಧನ ವೀಯೊ | ಪ್ರಾಣಾಂತರಾತ್ಮಾ 3 ಲೌಕಿಕವನೆಲ್ಲ ವೈ | ದೀಕ ವೆಂದೆನಿಸೊ ಹರಿಕಾಕು ಸಂಗವ ಕೊಡದೆ | ನೀ ಕೊಡೊ ಸತ್ಸಂಗಏಕಮೇವನೆ ಸ್ವಾಮಿ | ಮಾಕಳತ್ರನೆ ನಿನ್ನ_ನೇಕ ಬಗೆಯಲಿ ತುತಿಪ | ವಾಕ್ಸಿದ್ಧಿ ಈಯೋ 4 ಪದ್ಮನಾಭನೇ ಹೃ | ತ್ಪದ್ಮದಲಿ ತವರೂಪಸಿದ್ಧಿಸುತ ಸಂಚಿತವ | ಪ್ರಧ್ವಂಸ ಗೈದೂಅದ್ವೈತ ತ್ರಯದರಿವು | ಬುದ್ದಿಗೆ ನಿಲುಕಿಸೆನೆಹೃದ್ಯ ಗುರು ಗೋವಿಂದ ವಿಠಲ ಬಿನ್ನವಿಪೇ 5
--------------
ಗುರುಗೋವಿಂದವಿಠಲರು
ಗಂಗಾ ಜನಕ ವಿಠಲ | ಅಂಗನೆಯ ಪೊರೆಯೋ ಪ ಮಂಗಳಾಂಗನೆ ದೇವ | ರಂಗ ಭವಹಾರೀ ಅ.ಪ. ವೈರಾಗ್ಯ ಭಾಗ್ಯಗಳ | ಹಾರೈಸುವಂತೆಸಗೋಸಾರಸುಖ ಸಾಂದ್ರ ಹರಿ | ಮಾರಮಣ ದೇವಾ |ಘೋರ ಭವವೆನಿಪ ಕೂ | ಪಾಠ ದಾಟಿಸೊ ಹರಿಯೆಕಾರುಣ್ಯ ಶರಧಿತವ | ಓರೆ ನೋಟದಲೀ1 ಗಣನೆಗೊಳಗಾಗದಿಹ | ಜನನ ಮರಣವು ಬರಲಿತನು ಮನದ ಸಂತಾಪ | ಅಣು ಬೃಹತು ಇರಲೀಗುಣ ಪೂರ್ಣ ಶ್ರೀಹರಿಯೆ | ಗಣನೆಗದು ಸಿಗದ ತೆರಅನನುತನೆ ನಿನ್ನ ಕಾರುಣ್ಯ ಒಂದಿರಲೀ 2 ಅಂಗನೆಗೆ ಸ್ವಪ್ನದಲಿ | ಗಂಗೆ ಮೀಯಿಸಿ ಬಾಲಸಂಗದಲಿ ಧವಳಾಖ್ಯ | ಗಂಗೆ ಸೋಪಾನಾಭಂಗ ವಿಲ್ಲದೆ ಯೇರಿ | ಮಂಗಳಾಂಗೆರ ಕಂಡುಶಿಂಗರದಿ ಪೂಜಿಸಿಹ | ಅಂಗನಾ ಮಣಿಯಾ 3 ಉಚ್ಚ ನೀ ಚಂಗಳನು | ಸ್ವಚ್ಛ ತಿಳಿಸುತ್ತಿವಳಕೃಚ್ಛ್ರಕೇ ಒಲಿಯುತ್ತ | ಲಕ್ಷ್ಮೀ ರಮಣಾಅಚ್ಚ ಭಕುತಿ ಜ್ಞಾನ | ನಿಚ್ಚಳದ ಮನವಿತ್ತುಸಚ್ಚಿದಾನಂದಾತ್ಮ | ಉಚ್ಚಳೆಂದೆನಿಸೋ 4 ವಿಷ್ಣು ಪದಿಧರಸಖನೆ | ದಶರಥಾತ್ಮಜ ಹರಿಯೆಯಶವಂತೆ ಗೃಹಿಣಿ ತವ | ಎಸೆವಪದ ಬಿಸಜವನು ಹಸನು ಸೇರಿಸೊಗುರೂ ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗಂಗೆ ನಿನಗೋಸ್ಕರ ನಾನು ನಮೋ ಎಂಬೆತುಂಗೆ ಎನ್ನ ಪಂಥವ ಕೇಳಿ ಗೆಲಿಸೆಂಬೆ ಪ. ಅಚ್ಯುತನ ನಖತಾಕಿ ಬಿಚ್ಚಿ ಬ್ರಹ್ಮಾಂಡವುಸ್ವಚ್ಚಜಲವಾಗಸುರಿದಾವುಸ್ವಚ್ಚ ಜಲವಾಗ ಸುರಿದಾವುಅಜನೋಡಿ ಉತ್ಸಾಹದಿ ನುತಿಸಿದ1 ತಂದೆಯ ನಖದಿಂದ ಬಂದ ಜಲಕಂಡು ಮಂದಜಾಸನು ಸ್ತುತಿಸಿದಮಂದಜಾಸನು ಸ್ತುತಿಸಿದ ಸರಸ್ವತಿಬಂದು ಆರುತಿಯ ಬೆಳಗೋಳು 2 ತುಂಬಿ ಭೂಮಂಡಲ ಪತಿಯ ಚರಣವಭೂಮಂಡಲ ಪತಿಯ ಚರಣವ ತೊಳೆಯಲುಕೊಂಡಾಡಿ ಹರನು ಧರಿಸಿದ 3 ರೇಣು ರೇಣು ಹರಿದಿಲ್ಲಿ ಬಂತೆಂದುಸುರರು ಸಂತೋಷಪಡುತಲಿ4 ವಿಷ್ಣುಪದಿಯೆಂದು ಇಟ್ಟರು ನಾಮವಧಿಟ್ಟ ರಾಮೇಶನ ಮಗಳಿಗೆ ಧಿಟ್ಟ ರಾಮೇಶನ ಮಗಳಿಗೆ ಧೃವರಾಯಎಷ್ಟು ಭಕ್ತಿಂದ ಸ್ತುತಿಸಿದ 5
--------------
ಗಲಗಲಿಅವ್ವನವರು
ಗಣಪತಿ ಶಾರದೆಗೆರಗಿದೆ ಇಂದೇ | ಇಬ್ಬರ ಹೃದಯದಿ ಕರುಣದಿ ಬಂದೆ | ನುಡಿಸಿದರ್ವಚನವ ಒಂದೊಂದು ತಂದೆ | ಕೇಳಿರಿ ಜನರೆಲ್ಲಾ ಕಿವಿಗೊಟ್ಟು ಬಂದೆ 1 ನರನಾಗಿ ಬಂದು ನೀ ಮಾಡಿದಿ ಏನಾ | ತಿಳಿಯದೆ ಬೊಗಳುವಿಯಾತಕೆ ಶ್ವಾನಾ | ಎಳ್ಳಷ್ಟು ಇಲ್ಲದೆ ಹೋಯಿತು ಜ್ಞಾನಾ | ಇನ್ನಾದರೂ ಮಾಡೊ ಸದ್ಗುರುವಿನ ಧ್ಯಾನಾ2 ಮಾಡಲಿಲ್ಲಾ ಪುಟ್ಟಿ ನೀ ದಾನ ಧರ್ಮಾ | ಮಾಡಿದಿ ತಿಳಿಯದೆ ನೀ ಕೆಟ್ಟ ಕರ್ಮಾ | ಆಡಿದಿ ನೀ ಸಾಧುಸಂತರಿಗೊರ್ಮಾ | ನೋಡಿಕೊ ನಿನಗಿಲ್ಲದಾಯ್ತು ಶರ್ಮಾ 3 ಮಾಡಿದ ಬದುಕನು ಸುಮ್ಮನೆ ಕಳೆದೆ | ಮಾಡುವಾಗ ಬಹು ನಿಜವೆಂದು ತಿಳಿದೆ | ನೋಡದೆ ಪೂರ್ವದ ಸುಕೃತವನಳಿದೆ | ರೂಢಿಯೊಳಗೆ ಪಾಮರನಾಗಿ ಬೆಳೆದೆ 4 ಮಾಡುವ ಕರ್ಮಕೆ ಮನವೇ ಸಾಕ್ಷೀ | ಮಾಡುವಿ ಜಪ ನಿನಗ್ಯಾಕೀ ರುದ್ರಾಕ್ಷೀ | ಮಾಡಿದನೇ ಗುರು ಹೀಗೆಂದು ದೀಕ್ಷಾ | ಆಡಲ್ಯಾತಕೊ ನಾಳೆ ಆದೀತೋ ಶಿಕ್ಷಾ 5 ಹುಣಶಿ ಹಣ್ಣ ಹಚ್ಚಿ ಬೆಳಗಿದಿ ಗಿಂಡೀ | ಎಣಕೀ ಶರಣ ಮಾಡಿ ಅಲ್ಲೇನು ಕಂಡೀ | ಸಂತರ ನಿಂದಾ ಬಲು ಮಾಡಿ ಉಂಡೀ | ಅಂತರಂಗದಿ ಇರು ಛೇ ಹುಚ್ಚ ಮುಂಡೀ 6 ಹಗಲೂ ಇರುಳೂ ಎದ್ದುಂಬುವಿ ಕೂಳೂ | ಕೂಳಿಗೆ ಆದಿ ನೀ ಒಬ್ಬರ ಆಳೂ | ಬಲು ಮಂದಿ ಮನೆಯನು ಮಾಡಿದಿ ಹಾಳೂ |ಏನು ಪುಣ್ಯ ಬಂದದ ಅದನಾರ ಹೇಳು 7 ಹಗಲೂ ಇರುಳೂ ಎದ್ದು ಮಾಡಿದಿ ಬದಕಾ | ಮಾಡುತ ಮಾಡುತ ಆದೆಲ್ಲೊ ಮುದುಕಾ | ಸಾಯುವ ತನಕಾ ಬಿಡಲಿಲ್ಲೊ ಚುದಕಾ | ಸತ್ತಮೇಲೆ ನೀ ಆಗುವಿ ಶುನಕಾ 8 ಏನೇನಿಲ್ಲದೆ ಹೋಯಿತು ಬುದ್ಧೀ | ಶಾಸ್ತ್ರ ಪುರಾಣದಿ ಕೇಳಿಲ್ಲ ಸುದ್ದೀ | ಇರುಳ ಕಂಡ ಕುಣಿ ಹಗಲ್ಯಾಕೆ ಬಿದ್ದೀ | ಮರುಳಾದ್ಯಾ ಯಮ ನಾಳೆ ಕೊಂದಾನೊ ಗುದ್ದೀ 9 ಸಂಸಾರ ನಂಬಿದಿ ನಿಜದಲಿ ಹ್ಯಾಂಗ | ಸದ್ಗುರು ಪಾದವ ನಂಬೋ ನೀ ಹಾಂಗ || ಸಂಶಯಾ ಅದಕಂಜಿ ಬಿಟ್ಟರೆ ಈಗ |ಕಾಂಶಿಲಿ ಬಡಿದಾರು ತಿಳಿದೀತು ಆಗ 10 ಬೆಳಕಿನೊಳಗ ಒಂದು ನೋಡುವ ಕಣ್ಣು | ಕತ್ತಲಿಯೊಳ ಗೊಂದು ಕಾಂಬುವ ಕಣ್ಣು | ಕತ್ತಲಿ ಬೆಳಕನ್ನು ನೋಡುವ ಕಣ್ಣು | ಅದ ಬಿಟ್ಟು ಏನ ನೋಡುತಿ ಮಣ್ಣು 11 ಅನುದಿನ ಶಾಸ್ತ್ರ ಪುರಾಣಾ | ಅದರೊಳಗಿನ ಮಾತ ತಿಳಿಯದೆ ಕೋಣಾ || ಅರ್ಥವ ಹೇಳುವಿ ಮಂದಿಗೆ ಜಾಣಾ | ರುವ್ವಿಯ ಬೇಡಲು ಹೋಯಿತು ಪ್ರಾಣಾ12 ಕಂಡರೆ ನೋಡುವಿ ಹೆರವರ ಹೆಣ್ಣು | ಚೆಲುವೆಂದೂ ಇಟ್ಟೆಲ್ಲೊ ಆಕೆಗೆ ಕಣ್ಣೂ | ಆದರೆ ಹತ್ತ್ಯಾವೊ ಆಕೆಯ ಹುಣ್ಣು | ಕಡೆಯಲಿ ಬಿದ್ದಿತು ಬಾಯಲಿ ಮಣ್ಣು 13 ನಿತ್ಯ ತೆಗೆದುಕೊಳ್ಳುವಿ ದೇವರ ತೀರ್ಥಾ | ಮತ್ತಿನ್ನು ಬಿಡಲಿಲ್ಲ ಮನದ ಸ್ವಾರ್ಥಾ || ಕತ್ತೆಯ ಹಾಂಗ ನೀನೊದರುವಿ ವ್ಯರ್ಥಾ | ಎಂದೆಂದಿಗೂ ದೊರೆಯದು ಆ ಪರಮಾರ್ಥಾ 14 ತನುವು ನಾನೆಂಬುವಿ ತನುವಿದು ತೊಗಲು | ತನುವಿಗೆ ಅವ ನೋಡು ಒಂಬತ್ತು ಹುಗಲು | ಚಿಂತಿ ಮಾಡುವದ್ಯಾಕೊ ಹಗಲೂ ಇರುಳೂ | ನಿನ್ನಾಧೀನವು ಹೀಗೆಂದು ಇರಲು 15 ದೂರ ಹೋಗದಿನ್ನು ಆಗದು ಕಾಶೀ | ದೂರ ಮಾಡಿ ಕಳಿ ನೀನು ಮೂರಾಶಿ | ತೀರದು ಶಿವಯೋಗ ಪುಣ್ಯ ರಾಶಿ | ಸೇರುವಿ ಸಾಯುಜ್ಯದಲಿ ಮಿರಾಶಿ 16 ಮಾಯಾ ಮಾಯಾ ಮಾಯಾ | ದುಡ್ಡಿನಂತೆ ಮಾಡೊ ಮನಕೆ ನಿರ್ಮಾಯಾ 17 ಮೀಶಿಯ ಹುರಿ ಮಾಡಿ ಮೇಲಕೆ ನೋಡಿ | ಕಾಲಾಗ ಸಿಕ್ಕವು ಮೋಹದ ಬೇಡಿ || ಮಾಡಬಾರದಂಥ ಕೆಲ್ಸವ ಮಾಡಿ | ಸಿಕ್ಕಿದೆಲ್ಲೊ ಗಾಂಡೂ ಇನ್ನೆತ್ತ ಓಡೀ 18 ಪಾದ ದೊರೆವುದಿನ್ನೆಲ್ಲಿ 19 ಕಾಮನ ಸುಡುವುದು ನೋಡು ಹೀಂಗಲ್ಲಾ | ಕಾಮನ ಶಿವ ಸುಟ್ಟರವ ಸಾಯಲಿಲ್ಲ || ಕಾಮನು ಸುಡುವ ಮೂರು ಲೋಕವನೆಲ್ಲ | ಕಾಮರಹಿತ ಭವತಾರಕ ಬಲ್ಲ 20 ಕಟ್ಟಿದಿ ಮನೆಯನು ನೀ ಬಲು ಛಂದಾ | ಬಿಟ್ಟು ಹೋಗುತಿ ಇದದಾವಂದಾ || ತೊಟ್ಟಿಲೊಳಗೆ ಇದ್ದ ಹೇಳಿದ ಕಂದಾ | ಎಷ್ಟಂತ ಹೇಳಲಿ ನೀ ಮತಿಮಂದಾ 21 ಪಾತಕ ಬರುವದು ಬಿಡಬ್ಯಾಡ ವಾಜಿ | ನೀತಿಯಿಂದಲಿ ಮಾಡು ನೀ ಗುರು ಪೂಜಿ | ಯಾತನ ಬಡಿಸುವ ನಾಳಿನ ಪಾಜಿ 22 ಒದರುವಿ ಯಾತಕೆ ಬಾಯನು ಕಿಸ್ತು | ಬೆದರ ಬೇಡಾದುದಕೆನ್ನು ಅಸ್ತು || ಚತುರ ತನದಲಿ ಸಾಧಿಸು ನೀ ವಸ್ತು |ಆದರಿಂದಲಾಗುವದು ಆ ಮನ ಸ್ವಸ್ತು 23 ಪಾತಕ ಬರುವದು ತಿಳಿಯದೆ ಕೋಳಿ || ನೀತಿಯಿಂದಲಿ ತತ್ತ್ವ್ವ ಮಾತನು ಕೇಳಿ | ಘಾತಕ ಯಮ ನಾಳೆ ಬರುವನು ದಾಳಿ 24 ಭವ ಬಿಟ್ಟಿ | ಮಾಡದೆ ದಾನ ಧರ್ಮವ ಕೆಟ್ಟೀ || ಮಾಡಿದುದೆಲ್ಲಾ ನೀ ಜೋಕಿಲಿ ಇಟ್ಟಿ | ಮಾಡಲು ಬಾಧೆಯ ನೀ ಬಾಯ ಬಿಟ್ಟಿ 25 ನೆನೆದರೆ ದೃಢದಲಿ ರಾಮ ನಾಮ | ತನುವಿದು ಮುಂದೆ ಬಾರದು ನೇಮ || ಮನದೊಳು ಪುಟ್ಟಿತು ತಾನೆ ನಿಷ್ಕಾಮ | ಘನಸುಖ ತೋರಿತು ಅದು ಸಾರ್ವಭೌಮ 26 ಹುಟ್ಟಿ ಹುಟ್ಟಿ ನೀ ಯಾತಕೆ ಸತ್ತೀ | ಹುಟ್ಟುತ ಸಾವುತ ನಿತ್ಯದಿ ಅತ್ತೀ || ಹುಟ್ಟು ಸಾವನ್ನು ಕಳೆಯಲೊ ಕತ್ತೀ | ಕೆಟ್ಟಿಯೊ ಇನ್ನಾರ ಬೆಳಿ ಧರ್ಮಾ ಬಿತ್ತೀ 27 ಶಾಸ್ತ್ರ ಪುರಾಣವ ಓದುವಿ ಬರಿದೇ | ಉತ್ತಮ ಸ್ತ್ರೀಯರ ಕಂಡು ನೀ ಕರೆದೆ || ನಿನ್ನೊಳು ತಿಳಿದು ನೀ ನೋಡುದು ಮರೆದೇ | ಸಾಧು ಸಂತರುಗಳ ಸೇವೆಗೆ ಮರೆದೆ 28 ಪಡಿ ಜೋಳಕೊಬ್ಬರ ಅಡಿಗಳ ಹಿಡಿವೆ | ಕೊಡುವದಿಲ್ಲೆಂದರೆ ದವಡಿಯ ಕಡಿವೆ || ಕೊಟ್ಟರೆ ಮನದೊಳು ಸಂತೋಷ ಪಡುವೆ | ಕೆಟ್ಟ ಮಾರ್ಗದಿಂದ ಕಡೆ ತನಕಾ ನಡಿವೆ 29 ಭವ ಪರಿಹರಿಸುವದಿದು ಏನು ಅರಿದು || ಭವದೊಳು ಬಿಟ್ಟರು ನಾಮವ ಮರೆದು | ಭವಕಿನ್ನು ಕರಸ್ಯಾರೊ ಆತನ ಬರದು 30 ಮಾಡಿದೆ ಏನು ಬದುಕನು ಹೇಳು | ಮಾಡಿದುದೆಲ್ಲಾ ತಿಂದೆಲ್ಲಾ ಕೂಳು || ಕೂಳಿಗಾಗಿ ಆದಿ ಒಬ್ಬರ ಆಳು | ನೋಡಿ ಏನು ಸದ್ಗತಿಯ ಹೇಳು 31 ಮನದೊಳು ಗಳಿಸಿದಿ ಕೆಂಚೀ ಹೊನ್ನು | ಗಳಿಸಿದವರು ಏನು ಒಯ್ದಾರು ಇನ್ನು || ಬಿಟ್ಟು ಹೋದರು ಹ್ಯಾಂಗ ಬಲ್ಲೆಲ್ಲಾ ನೀನು | ನಿಷ್ಠೆಯಿಂದಲಿ ಒಮ್ಮೆ ಹರಗುರು ಎನ್ನು 32 ಮಾಡಲಿಲ್ಲ ಒಂದು ನರನಾಗಿ ಯೋಗಾ | ಮಾಡುವಿ ಸುಖವೆಂದು ಸ್ತ್ರೀಯರ ಭೋೀಗಾ | ಆಡಲ್ಯಾಕೆ ಆಯುಷ್ಯ ಹಾರಿತು ಬೇಗಾ | ನೋಡಿಕೊಳ್ಳೊ ಇನ್ನು ತಿಳಿದೀತು ಈಗಾ 33 ಪರಿ ಸಂಸಾರ ಯುಕ್ತಿ | ಮಾಡಲು ಒಲ್ಲ್ಯೋ ಶ್ರೀ ಗುರು ಭಕ್ತಿ || ಹೋಯಿತೊ ದೇಹದೋಳ್ ನಿನ್ನ ಶಕ್ತಿ | ಸಾಧಿಸಲರಿಯೊ ನೀ ಜೀವನ್ಮುಕ್ತಿ 34 ಅನುದಿನ ವೇದಾ | ಸಾಧಿಸಿ ತಿಳಿಯದೆ ಜೀವಶಿವ ಭೇದಾ || ಕಾದಾಡಿ ಕೊಂಬುವದು ಸುಮ್ಮನೆ ವಾದಾ |ಬ್ಯಾಡಿನ್ನು ಶೋಧಿಸು ನಿನ್ನೊಳು ಬೋಧಾ 35 ಭವ ಬೀಜವ ಕೊಂಬೆ 36 ಮಾಯಾ ಮರವನು ತ್ಯಜಿಸು || ಧ್ಯಾನ ಮುದ್ರೆಯೋಳ್ ಮನವನು ನಿಲಿಸು | ಜಗವಿದು ನಿಜವೇ ನೋಡೆಲು ಕನಸು 37 ರೂಪದೊಳಗಿಲ್ಲಾ ಗುಣವೊಂದು ತೃಣವು | ಗುಣದೊಳಗಿಲ್ಲವು ರೂಪದ ಅಣುವು || ರೂಪ ನಾಮಕ್ರಿಯಾ ಆದೀತು ಹೆಣವು | ಆ ಪರಬ್ರಹ್ಮನೆ ತಿಳಿಯಿನ್ನು ಪ್ರಣವು 38 ಪಾದ | ಅರಿತು ಪೂಜಿಸಿದವ ಪರಶಿವನಾದ || ಅನುಭವಿ ಬಲ್ಲನು ಆ ಸುಖ ಸ್ವಾದ | ತನ್ನೊಳು ಆಲಿಸುತಲಿ ನಿಂತ ನಾದ 39
--------------
ಭಾವತರಕರು