ಒಟ್ಟು 679 ಕಡೆಗಳಲ್ಲಿ , 86 ದಾಸರು , 595 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಪಾಹಿಮಾಂ ಸದಾ-ಶ್ರಿತಜನಮೋದ ಮೌನಿಜನಜಾತಕಾಂಬೋದ ಪ ಭಾನುಕೋಟಿ ತೇಜ ಸಾಮಗಾನ ಲೋಲ ಶ್ರೀಮುಕುಂದ ಅ.ಪ ವಾರಿಜಾಸನಾರ್ಚಿತ ಪ್ರಭೋ-ವಂದಾರುಜನ ಪಾರಿಜಾತ ಧೃತಕೌಸ್ತುಭ ಶಾರದೇಂದೀವರನೇತ್ರ ಶ್ಯಾಮಳನೀರದ ಗಾತ್ರ ಸಾರ ಸನ್ಮಣಿ ಕೇಯೂರ ಹಾರ-ಭೂಷಿಸುಪವಿತ್ರ 1 ಸರ್ವಲೊಕಪಾಲಕೇಶ್ವರ-ಸೇವಿತಸುಪರ್ವಗಣಸದ್ಗುಣಾಕರ ಗರ್ವಿತದೈತ್ಯಾಂಧಃಸೂರ್ಯ-ಪರ್ವತಾಧಿರಾಜಧೈರ್ಯ 2 ಸೃಷ್ಟಿರಕ್ಷಣಾಂತಕಾರಕ-ಸರ್ವಾತ್ಮಕ-ಶಿಷ್ಟದೇವ ದ್ವಿಜರಕ್ಷಕ ಅಷ್ಟಸಿದ್ಧಿಪ್ರದಾ ಸರ್ವೋತ್ಕøಷ್ಟ ಕಷ್ಟನಿವಾರಣ ಅಷ್ಟಮೂರ್ತಿ ಪ್ರಿಯ ಸರ್ವಾಭೀಷ್ಟದ ಗೋಪಾಲಕೃಷ್ಣ 3 ಧಾರಿತ ಮಂದರ ಪಾಕವೈರಿಮಣಿನೀಲ ಪಾವನ ಸುಗುಣ ಶೀಲ ಶೋಕಮೋಹಸುವಿವೇಕ ನಿತ್ಯೋದಾರ ಶೂರ 4 ಮಾರಜನಕ ಮಂಗಳಾಕಾರ ಮಾರಶತಕೋಟಿ ಸುಂದರ ಸಾರವಸ್ತುಚಯಪರಿ ಪೂರವ್ಯಾಘ್ರಾದ್ರಿ ವಿಹಾರಧೀರ ವರದ ವಿಠಲ ಸುರಾಸುರಾರ್ಚಿತಾಂಘ್ರಿಕಮಲ 5
--------------
ಸರಗೂರು ವೆಂಕಟವರದಾರ್ಯರು
ಶ್ರೀಭೂತರಾಜರು (ಭಾವೀರುದ್ರರು) ಅಲಘು ಮಹಿಮ ಭಾವೀ | ತ್ರಿನಯನಾಮಲಿನ ಮನವ ಕಳೆಯೋ ಪ ಅಲಘು ಮಹಿಮ ಭಾವೀ ಮರುತಜಲಜ ಪಾದಕ್ಕಳಿಯೆ ಮುಖ್ಯ ಅ.ಪ. ಅಧರ ಕುಸುಮ ಬಂಧೂಕ ಭಾಸ 1 ಚಾಪ ಶರವು ಕರದಿಅದುಭುತಾತ್ಮ ನಾರಾಯಣನವಿಧಿತ ಮಹಿಮನಾಗಿ ನಮಿಪ 2 ಕರ್ಣ ಭೂತ ಮುಖ್ಯಗಣಗಳಿಂದ ಕೂಡಿ ಭೂತಗಣಧೀಶನಾಗಿ ನಾರಾಯಣನ ನಾಮ ಧರಿಸಿ ಮೆರೆವ 3 ಕರ ತ್ರಿಶೂಲಿಮಣಿವೆ ಹರಿಯ ಭಕ್ತ ಮೌಳಿ4 ಸ್ವಾಪ ಮುನ್ನ ಮುಂದೆ ಕುಳಿತುಉಪಾಂಸ್ವನೇಕ ಉಚ್ಚರೀಸಿಗೋಪತಿ ಗುರು ಗೋವಿಂದ ವಿಠಲಸುಪಾದ ಭಜಿಸೆ ಪೋದೆತ್ವರ್ಯ 5
--------------
ಗುರುಗೋವಿಂದವಿಠಲರು
ಶ್ರೀರಂಗೇಶವಿಠಲ | ಪೊರೆಯೆನ್ನ ಹೃದಯಾ- ಧಾರನೆ ಮಾಲೋಲ | ಸ್ಮರಕೋಟಿ ಸುಂದರಾ- ಕಾರ ನತಜನಪಾಲ | ಅರಿಮಸ್ತಕ ಶೂಲ ಪ ಆರು ಅರಿಗಳ ಗೆಲಿಸಿಯೆನ್ನಿಂ- ದಾರು ಎರಡನು ಮುರಿಸಿ ನಿನ್ನೊಳು ಆರು ಮೂರನೆಯಿತ್ತು ಸರ್ವದ ಪಾರುಗೈಯ್ಯಬೇಕೆಂಬೆ ದೇವ ಅ.ಪ. ಆನೆಗೊಂದಿ ನಿವಾಸ | ಭಕುತರ ನಿರಂತರ ಮಾನದಿಂ ಪೊರೆವ ಶ್ರೀಶ | ಎಂದೆಂದಿಗು ನಾನಿನ್ನ ದಾಸರ ದಾಸ | ನೆಂದು ಕರುಣಿಸು ನೀನೆನಗೆ ಲೇಸ | ಭಾನುಕೋಟಿ ಪ್ರಕಾಶ ಮಾನ ಅವಮಾನಗಳು ನಿನ್ನಾ- ಧೀನವೆಂದೇ ನಂಬಿಕೊಂಡಿಹ ದೀನನೆನ್ನನು ದೂರ ನೋಡದೆ ಸಾನುರಾಗದಿ ಪೊರೆವುದೈಯ್ಯಾ ನಳಿನಭವ ಅಂಡದೊಳಗೆ ದಾನಿ ನೀನಲ್ಲದನ್ಯರುಂಟೆ ಏನ ಬೇಡೆನು ನಿನ್ನ ಬಳಿಯಲಿ ಜ್ಞಾನ ಭಕುತಿ ವೈರಾಗ್ಯವಲ್ಲದೆ1 ವರಾಹ ಜನ ತಾಪ | ತ್ರಯ ದೂರ ವಾಮನ ಮಾನವೇಂದ್ರರ ಪ್ರತಾಪ | ವಡಗಿಸಿದೆ ಪ್ರಬಲ ದಾನವೇಂದ್ರನ ಶಾಪ | ನೀನೆ ಕಳೆದೆಯೊ ಶ್ರೀಪಾ ವಾನರ ಬಲ ನೆರಹಿಕೊಂಡು ನೀನು ರಾವಣನನ್ನು ಕೊಂದು ಮಾನಿನಿಯ ಪೊರೆದು ಶರಣಗೆ ನಿ ದಾನ ಮಾಡದೆ ಪಟ್ಟಗಟ್ಟಿದೆ ದಾನವಾಂತಕನೆಂಬ ನಾಮವ- ನ್ಯೂನವಿಲ್ಲದೆ ಪರಸತಿಯರಭಿ ಮಾನ ಕಳುಪಿದ ಜಾಣ ಕಲ್ಕಿಯೆ 2 ಸೂರಿಜನ ಪರಿಪಾಲ ಸದ್ಗುಣಗಣನಿಲಯ ಘೋರರಕ್ಕಸಕಾಲ | ವರಶೇಷತಲ್ಪವ ನೇರಿ ನಿರುಪಮ ಬಾಲ | ನಂದದಿ ನಿರುತ ನೀ ತೋರುತಿರುವೆಯೊ ಲೀಲ | ಶ್ರೀ ರಂಗೇಶವಿಠಲ ಮಾರ ಜನಕನೆ ಮಂಗಳಾಂಗನೆ ಕ್ರೂರ ಕುಲವನದಾವ ಅನಲನೆ ಭೂರಿ ಕರುಣವ ಬೀರಿ ಎನ್ನಸು ಭಾರ ನಿನ್ನದು ವಾರಿಜಾಕ್ಷನೆ ಎನ್ನ ಹೃದಯದಿ ಚಾರು ಬಿಂಬವ ಸಾರಿ ಬೇಡುವೆ ಬಾರಿ ಬಾರಿಗೆ ಶರಧಿ ಬಡಬನೆ3
--------------
ರಂಗೇಶವಿಠಲದಾಸರು
ಶ್ರೀರಾಮ ರಾಮನ ಭಜಿಸೊ ಮನದಲಿ ಶ್ರೀಕೃಷ್ಣನ ಸ್ಮರಿಸೊ ಪÀರಾಭವಾರೂರ್ವು ಪವಾಸಗಳಿಂದ ಪತಿತಪಾವನ ಶ್ರೀಗೋವಿಂದ ಪ ತಾರಕ ರಘುವೀರಾ ಶರಾದಿಬಂಧಿಸಿ ಸೈನ್ಯವು ನಡೆಸಿ ತ್ವರಾ ಲಂಬಿಣಿ ಬೇಧಿಸಿ ಸರಾಗ ದಿಂ-------ಪುರಾದಿ --------ಸರಾಗೆಲ್ಲರನೊಯ್ದಡಿಕ್ಕಿ ಪುರಾಧಿಪತಿ ಮಹಾ----ರಾವಣನ ಶಿರಾಗಳ್ಹತ್ತನೆ ಛಂಡಿಸಿ ಹರೆದನಾ 1 ಶರಾಣೆಂದು ಬಂದರು ನಗಾನಂದ ಕರುಣಿಸು ಚಂದಾ ಸ್ಥಿರಾ ಲಂಕೆ ಪಟ್ಟ ಹರುಷದಲಿಕೊಟ್ಟ ಯಾರು ಎಂದ್ಹೇಳಿದಿರಾ ವೀರಾಧಿವೀರ ಶೌರ್ಯ ಶೂರ ಪ್ರಚಂಡರು ಧೀರ ಹನುಮದೇವರು ಆರಾಮದಲಿತ್ತ ಆರಾಮಿಯಾರಥನೇರಿ ಶಿಕಾರ ತಂದೆ ಕಾಂತೆ ಜಗನ್ನಾಥ 2 ರಾಮಾಯೆಂದು ಭಯ ಭಕ್ತಿಯಿಂದಾ ಸ್ಥಿರಚಿತ್ತದಿಂದಾ ಸ್ಮರಣೆ ಮಾಡುತ ಶ್ರೀಹರಿಯು----------ತ ನಿರಾಳ ಮನ ಕವಿತ ಇರುತಲಿಪ್ಪವರಿಗೆ ಸಂಪತ್ಕರವು ಧರೆಯೋಳ್ ಹೆನ್ನತೀರವಾಸನ ಧೊರೆ 'ಹೆನ್ನ ವಿಠ್ಠಲ’ ರಾಯನ 3
--------------
ಹೆನ್ನೆರಂಗದಾಸರು
ಶ್ರೀವಾಯು ದೇವರು ಅನುದಿನ ಸ್ತುತಿಸುವೆ ದೀನಮನುಜನ ಜನುಮಗಳಳಿಸೋ ಪ ವಾಣಿವಂದಿತ ಪಾದಪದ್ಮನೆ ಕಾಯೋ ಈಗಲೇ ಅ.ಪ. ಜಾನಕೀರಮಣನ ಪ್ರಿಯ ದಾನವಾಂತಕ ಕಾಯ ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ ಜ್ಞಾನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ ಗಣಿಸಲಾಗದ ಸತ್ವಮಂದಿರ ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ 1 ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ ಬಗೆದು ಧರಿಸಿ ಮೆರೆದೇ ಎಂದು ಸಾರಿದೆ ತೋರಿಸಿ ಕಾಯೊ ಸೂತ್ರನೆ 2 ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ 3 ವಿಷಉಂಡುಪೊರೆದ ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ ಧಾಮಸಕಲ ಗುಣಕೆಂದೆನಿಕೊಂಡ ಅನಾದಿ ಅಪರೋಕ್ಷದೇವ ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ ಎನಿಸಿಮೆರೆಯುವೆ 4 ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ ರಾಜಸೂಯವ ಮಾಡಿನಿಂದ ಹರಿಯು ಎಂದ ವನಜನಾಭನಮುಖ್ಯ ಪ್ರತಿಬಿಂಬ ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ ವಾಯು ಅಂತರ ವಿಶ್ವ ಚರಣ ನಂಬಿದೇ 5
--------------
ಕೃಷ್ಣವಿಠಲದಾಸರು
ಶ್ರೀಶಪದ ಕಮಲಕ್ಕೆ ಮಧುಪ | ನಿನ್ನದಾಸನೆಂದೆನಿಸುವುದು ಧನಪ | ಸಖ ಮ-ಹೇಶನ ಸುತ ಪೇಳ್ವೆ ಭಿನ್ನಪ | ನೀ ಪ್ರ-ಕಾಶಿಪುದು ಮನವಿ ವಿಘ್ನಪ 1 ಪತಿ ಕರುಣಿ ಶುಭಗಾತ್ರ | ಗ್ರಂಥಲೇಸೆನಿಸಿ ಲಿಖಿಸಿದೆ ಪವಿತ್ರ | ಮೂರ್ತಿಪಾಶಾಂಕುಶ ಪಾಣಿ ಸುಚರಿತ್ರ 2 ಸ್ವಾಂತ | ದಲ್ಲಿಅಭಯ ನೀ ತಿಳಿಸು ನಿಶ್ಚಿಂತ 3 ವಿಘ್ನಪನೆ ದುರ್ವಿಷಯದಲ್ಲಿ | ಬಹಳಮಗ್ನವಿಹ ಮನವ ಹರಿಯಲ್ಲಿ | ನಿರತಲಗ್ನ ಮಾಡಿಸು ತ್ವರ್ಯದಲ್ಲಿ | ಇನ್ನೂ ವಿಘ್ನಗಳಿಗಂಜಿಕೆಯು ಎಲ್ಲಿ ? | 4 ಧನಪ ವಿಶ್ವಕ್ಸೇನ ಯಮಳ | ಆ ಅ-ಶ್ವಿನೀಗಳ್ಗೆ ಸಮ ಕರಿಗೊರಳ | ಪುತ್ರನನುಜನೇ ಶೇಷ ಶತಗರುಗಳ | ರಲ್ಲಿಗುಣೋತ್ತಮನೆ ಕಾಯೊ ನಮ್ಮಗಳ | 5 ಬವರ | ದಲ್ಲಿಗೌರಿಪತಿ ವರದಿ ಉದ್ಧಟರ | ಆದಕ್ರೂರಿ ಜನ ಸಂಹಾರಿ ಶೂರ | 6 ಸೂತ್ರ ಅಪರೂಪ | ಖಳರದರ್ಪ ಭಂಜನನೆ ಶುಭರೂಪ | 7 ಶ್ರೀಶನತಿ ನಿರ್ಮಲವು ಎನಿಪ | ನಾಭಿದೇಶಗತನಾಗಿಹನೆ ಗಣಪ | ರಕ್ತವಾಸೆರಡು ಶೋಭಿತನೆ ಸುರಪ | ಮಿತ್ರಮೂಷಕಾ ವರವಹನ ರೂಪ | 8 ಶಂಕರಾತ್ಮಜ ದೈತ್ಯ ಜನಕೆ | ಅತಿ ಭ-ಯಂಕರ ಗತಿಯ ನೀಡಲ್ಕೇ | ನೀನುಸಂಕಟ ಚತುರ್ಥಿಗ ಎನೆಲ್ಕೆ | ಹಾಗೆಮಂಕು ಜನಾವೃತವು ಮೋಹಕ್ಕೆ 9 ಸಿದ್ಧಿ ವಿಧ್ಯಾಧರರು ಎಂಬ | ಗಣಾರಾಧ್ಯ ಪದಕಮಲ ನಿನದೆಂಬ | ಜನಕೆಸಿದ್ಧಿದಾಯಕ ವೇಗ ಎಂಬ | ಮಹಿಮಬುದ್ಧಿ ವಿದ್ಯೆಗಳ ಕೊಡು ತುಂಬ 10 ಭಕ್ತವರ ಭವ್ಯಾತ್ಮ ಪರಮ | ಶಾಸ್ತ್ರಸಕ್ತವಾಗಲಿ ಮನವು ಅಧಮ | ವಿಷಯಸಕ್ತಿರಹಿತನ ಮಾಡಿ ಪರಮ | ಶುದ್ಧಭಕ್ತನೆಂದೆನಿಸು ನಿಸ್ಸೀಮ | 11 ಶಕ್ರ ಪೂಜಿಸುತ ಗುರು ನಿನ್ನ ವೈರಿಶುಕ್ರ ಶಿಷ್ಯರ ಕೊಂದ ನಿನ್ನ | ಆ ಉ-ರುಕ್ರಮ ರಾಮ ಪೂಜಿಸೆನ್ನ | ತೋರ್ದವಕ್ರ ತುಂಡನೆ ಕರುಣವನ್ನ 12 ಕೌರವನು ಭಜಿಸದಲೆ ನಿನ್ನ | ಆಸಮೀರನ ಗದೆಯಲಿಂದಿನ್ನ | ಹತನುತಾರಕಾಂತಕನನುಜ ಯೆನ್ನೆ | ಧರ್ಮಪ್ರೇರಕನೆ ಸಂತೈಸು ಎನ್ನ 13 ಮೂಕರನ ವಾಗ್ಮಿಗಳ ಗೈವ | ಗುರು ಕೃ-ಪಾಕರನೆ ಕಾಮಗಳ ಕೊಡುವ | ಪರಮಲೇಖಕನೆ ಮನ್ಮನದಲಿರುವ | ಬಹುವ್ಯಾಕುಲವ ಪರಿಹರಿಸು ದೇವ | 14 ಸತ್ತೆ ವೃತ್ತಿಯು ಮತ್ತೆ ಪ್ರಮಿತಿ | ಜಗಕೆಇತ್ತು ತಾ ಸೃಷ್ಟ್ಯಷ್ಟಕತ್ರ್ರೀ | ಎನಿಪಚಿತ್ತಜ ಪಿತನ ದಿವ್ಯ ಸ್ಮøತಿ | ಇತ್ತುನಿತ್ಯ ನೀ ಪಾಲಿಪುದು ಸದ್ಗತಿ 15 ಪಂಚವಕ್ತ್ರನ ತನಯ ಕೇಳೊ | ಎನಗೆಪಂಚಭೇದದ ಜ್ಞಾನ ಪೇಳೊ | ಹರಿಯುವಾಂಛಿತ ಪ್ರದನ ದಿಟ ಆಳೊ | ಭವದಿವಂಚಿಸದೆ ಕಾಯೊ ಕೃಪಾಳೊ | 16 ಏನು ಬೇಡುವುದಿಲ್ಲ ನಿನ್ನ | ದುಷ್ಟಯೋನಿಗಳು ಬರಲಂಜೆ ಘನ್ನ | ಲಕುಮಿಪ್ರಾಣಪತಿ ತತ್ವರಿಂದಿನ್ನ | ಕಾರ್ಯತಾನೆಂಬ ಮತಿಯ ಕೊಡು ಮುನ್ನ 17 ಭಕ್ತ ಜನ ಕಲ್ಪ ತರುವೆನಿಪ | ಉಮೆಯಪುತ್ರ ಮಮ ಮಮತೆಯನು ಹರಿಪ | ದಾಯಹತ್ತಿಹುದು ನಿನ್ನಲ್ಲಿ ಗಣಪ | ಕಳೆಯೊಎತ್ತಿ ಕೈ ಮುಗಿವೆ ಭವರೂಪ 18 ಜಯ ಜಯವು ಎಂಬೆ ವಿಘ್ನೇಶ | ತಾಪತ್ರಯಗಳಿನು ನೀನೇ ವಿನಾಶ | ಗೈದುಭಯ ಶೋಕರಹಿತ ವಿದ್ಯೇಶ | ಜನ್ಮಾಮಯ ಮೃತಿ ಹರಿಸೊ ನಭಕೀಶ | 19 ನಮಿಸುವೆನೊ ಹೇರೊಡಲ ನಿನ್ನ | ಕರುಣಿಕಮಲಾಕ್ಷ ಹರಿನಾಮವನ್ನ | ನಿರುತವಿಮಲ ಮನದಿ ನುಡಿವಂತೆ ಎನ್ನ | ಮಾಡಿಕಮಲೇಶ ಪದ ತೋರೊ ಘನ್ನ20 ಎರಡು ನವ ಮೂರು ಪದಗಳನ್ನ | ಗೌರಿತರಳನಲಿ ಇರುವಂಥ ಪ್ರಾಣ | ಪತಿಯುಗುರು ಗೋವಿಂದ ವಿಠ್ಠಲನಾ | ಪದದಿಇರಿಸುವರ ಹರಿ ಪೊರೆವ ಅವರನ 21
--------------
ಗುರುಗೋವಿಂದವಿಠಲರು
ಷಟ್ಪದಿ ಕೂಟವಾಳುವ ಶ್ರೇಷ್ಠ ಶಾರದೆ | ಕೈಟ ಭಾರಿಯ ಭಕ್ತಿ ವೃಕ್ಷವ| ನಾಟಿ ಹೃದಯದಿ ಬೆಳಸೆ ಶುಭಗುಣ ಖಣಿಯೆ ಮಂಗಳೆಯೆ 1 ಪೋಲ್ವ ಮೂಢನ | ಭಾರ ನಿನ್ನದೆ ದೀನ ವತ್ಸಲೆ ಯೆ| ಶುಭಮರ್ಮ ಕಳಿಸುತ | ಶ್ರೀನಿವಾಸನ ಭಕ್ತಿ ಜ್ಞಾನವಿರಕ್ತಿ ಕೊಡಿಸಮ್ಮ 2 ವೇಣಿ ವೀಣೆಯ | ಗಾನ ನುಡಿಸುವ ಜಾಣೆ ವಿಧಿಮನ ಹಾರಿ ಕೋಮಲೆಯೆ | ಶೂನ್ಯ ಮೂರು ರೂಪಳೆ | ಸಾನುರಾಗದಿ ವಲಿದು ಹರಿಪಥ ಸಿಗಿಸಿ ಪೊರೆಯಮ್ಮ 3 ರಮ್ಯರೂಪಗಳಿಂದ ನಾ ನಾ | ರಮ್ಯಸೃಷ್ಟಿಗಳಿಗನುವಾಗುತ ಹರಿಯ ಸೇವಿಸಿದೆ | ನುಡಿಸಿ ಕರಿಸುವಿ | ಯಮ್ಮ ಜಗದಿ ಸರಸ್ವತೀಯಂತೆಂದು ವಿಪಮಾತೆ 4 ಮಾಯ್ಗಳ ಗೆಲ್ವ ಬಗೆ ತೋರು | ಮಾತೆ ಯೆನಿಸಿಹೆ ವಿಕಟ ಜಗದವತಾರ ವರ್ಜಿತೆ ಶರಣು ಶ್ರೀ ಸೊಸೆಯೆ 5 ಕೃತಿ ಸುತೆಸು | ಮಧ್ವಶಾಸ್ತ್ರದಲಿ ಮನದಕು| ಬುದ್ದಿಗಳ ಕಡಿಸಿ ಪ್ರಸಿದ್ಧಿಯ ನೀಡಿ ಸಾಕಮ್ಮ | ಪದ್ಮನಾಭನ ವೇದ ಸಮ್ಮತಿ | ಯಿಂದ ಪಾಡುತ ಭಾಗ್ಯವಾಹುದೆ | ಎಂದಿಗಾದರು ನೀನೆ ಮನದಲಿ ನಿಂತು ನುಡಿಸದಲೆ 6 ವಿನೋದ ಗೊಷ್ಠಿಯ | ಹಾದಿ ಹಿಡಿದವಿವೇಕಿ ನಾನಲೆ ಕೇಳು ವಿಪತಾಯೆ | ಮಾಧವನು ಸಿಗನಮ್ಮ | ಆದರದಿ ಸಾರಿದೆನು ಕವಿಜನಗೇಯೆ ವಿಧಿಜಾಯೆ 7 ನೀರಜ ರುದ್ರರ ಬಿಂಬೆ ಭಕ್ತರ | ಸ್ತಂಭೆ ಶಾಂಭವಿ ವಂದ್ಯೆ ನಿತ್ಯದಿ | ಉಂಬೆ ಸುಖಗಳನೂ | ಸಾರ ಕೈಗೊಡಿಸಮ್ಮ ಸಮೀರ ಗ್ಹೇಳುತಲಿ 8 ಭೃತ್ಯ ನಿತ್ಯ ಭಕ್ತಳೆ | ವಿತ್ತ ವನಿತಾ ವ್ಯಾಧಿ ಹರಿಸುತ ಚಿತ್ತ ಶುದ್ಧಿಯನು | ಸಪ್ತ ಶಿವಗಳ ಮರ್ಮ ಬೇಗನೆ ವತ್ತಿ ಮಿಥ್ಯಾಜ್ಞಾನ ತಿಮಿರವ ಭಕ್ತಿ ಭಾಸ್ಕರಳೆ 9 ಸುಖಗಳನುಂಬೆ ಭುಜಿವಿದಿ| ತಳಿಹೆ ಪತಿತೆರದ್ವಿಶತ ಕಲ್ಪಗಳಲ್ಲಿ ಸಾಧನೆಯು | ಶಾಪವ ಶ್ಯಾಮಲಾಶಚಿ | ಗಳಿಗೆ ದ್ರೌಪತಿ ಇಂದ್ರ ಸೇನಾಕಾಳಿ ಚಂದ್ರಾಖ್ಯೆ 10 ನಿಂತು ಶಶಿಯಿಲ್| ಭೂತ ಗುಪಚಯವಿತ್ತು ಸೃಷ್ಠಿಯ ಕಾರ್ಯಗನುವಾಹೆ | ಪತಿ ನಿನಗಹುದಮ್ಮ ಕೊರತೆಯು | ಯಾತರಿಂದಲು ಯಾವಕಾಲುಕು ಇಲ್ಲರಯಿ ನಿನಗೆ 11 ಕವಚ ತೊಡಿಸುತ | ಶ್ರೀನಿವಾಸನಭಕ್ತನಿಚಯಕ್ಕೆ ಕೈಮುಗಿದು ಆನತಾಮರಧೇನು ಮುಖ್ಯ | ಪ್ರಾಣಮಂದಿರನಾದಶುಭಗುಣ ಪೂರ್ಣಪೂರ್ಣಾನಂದ ತದ್ವನ ಬಾದರಾಯಣಗೆ 12 ದೈನ್ಯ ದಿಂದಸಮರ್ಪಿಸುತ ಪವಮಾನರಾಯನ ಕರುಣವೆಲ್ಲೆಡೆ ಅನ್ಯ ವಿಷಯವ ಬೇಡದಂದದಿ ಮಾಡುತಲಿಯನ್ನ | ಜ್ಞಾನ ಭಕ್ತಿ ವಿರಕ್ತಿ ಸಂಪದ | ನೀನೆ ನೀಡುತ ಸಲಹೆ ಕೃತಿಸುತೆ | ನೀನೆ ಸಾಸರಿ ನಮಿಪೆ ಬೃಹತೀಖ್ಯಾತ ಭಾರತಿಯೆ 13 ಸೇರಿ ತಾಂಡವ ಮಾಡಿ ಪಾದ ಪಂಕಜವ ಸೂರಿ ಸಮ್ಮತ ವೇದ ಗಾನದಿ | ಸಾರಿ ಸಾರಿಸೆ ಸೇರು ವದನದಿ | ನೀರ ಜಾಕ್ಷನ ಸೊಸೆಯೆ ಶುಚಿಶತಿ ನಮಿಪೆ ಭೂಯಿಷ್ಠ 14
--------------
ಕೃಷ್ಣವಿಠಲದಾಸರು
ಸಂಕ್ಷೇಪ ರಾಮಾಯಣ ಶ್ರೀಜಾನಕೀಮನೋಹರ ಚರಿತೆಯನು ಮುನಿ ರಾಜವಾಲ್ಮೀಕರಿಗೆ ನಾರದಂಪೇಳ್ದನದು ರಾಜೀವನೇತ್ರ ಪೇಳಿಸಿದಂತೆ ಸಂಕ್ಷೇಪದಿಂ ಪೇಳ್ವೆನಾಲಿಸುವುದು ವರಮುನಿಯಯಾಗಮಂ ಕಾಯ್ದುತಾಟಕಿಯಸಂ ಮುರಿದು ಭೂಸುತೆಯ ಕರಪಿಡಿದಯೋಧ್ಯಾಪುರಿಗೆ ಬರುತ ಭಾರ್ಗವನ ಗರ್ವವಸೆಳೆದು ತಂದೆಯಂ ಹರುಷಪೊಂದಿಸಿದಂರಘುದ್ವಹಂ ರಾಮಚಂದ್ರನು ಬಾಲಕಾಂಡದಲಿ 1 ಮಾತೆಯನುಡಿಗೆ ಪಿತನಭಾಷೆಯಂ ಸಲಿಸಲ್ಕೆ ತಾತಮ್ಮಲಕ್ಷ್ಮಣ ಧರಾತ್ಮಜೆಯರ್ಸಹಿತ ಪ್ರ ಭರತಬಂದು ಜಾತಂಗೆ ಪಾದುಕವನಿತ್ತು ಮನ್ನಿಸಿಮುನಿ ರಘುವರನಯೋಧ್ಯಾಕಾಂಡದಿ 2 ದಂಡಕಾರಣ್ಯದಿ ವಿರಾಧನಂ ಸಂಹರಿಸಿ ಚಂಡಿ ಶೂರ್ಪಣಖಿ ಕಿವಿಮೂಗನಂ ಕೊಯಿಸಿಯು ಮಾಯಾಮೃಗದವ್ಯಾಜದಿಂ ರಾವಣಂ ಕೊಂಡೊಯ್ಯೆಸೀತೆಯಂಅರುಣಸುತನಿಂದಕೋ ದೀಕ್ಷಾಚಾರ್ಯ ಕೇಳ್ದಸತಿವಾರ್ತೆಯಂ ಕಂಡು ಶಬರಿಯನು ಪಂಪಾತಟಕೆಬಂದ ನಾರಣ್ಯಕಾಂಡದೊಳ್ರಾಮನು 3 ಮರುತಾತ್ಮಜನಕಂಡು ಸುಗ್ರೀವಸಖ್ಯವಾ ಚರಿಸಿ ವಾಲಿಯ ಮುರಿದು ಕಪಿರಾಜ್ಯದೋಳ್ ದಿವಾ ಸೀತೆಯಕುಶಳವಂತಹುದೆನೆ ತೆರಳಲು ಚತುರ್ದಿಕ್ಕಿಗಾಗವಾನರರುಮೂ ವರುಬಂದುಪೇಳ್ದರೆಲ್ಲಿಯು ಕಾಣೆವೆಂದು ವನ ಕಿಷ್ಕಿಂಧಕಾಂಡದಲಿ 4 ಶರಧಿಯದಾಟಿ ಲಂಕೆಯ ಪೊಕ್ಕುಲಂಕಿನಿಯ ಮುರಿದು ಪುರವೆಲ್ಲಮುಂ ತಿರುಗಿವನದೊಳಗೆರಘು ವನಭಂಗಮಂಗೈಯ್ಯುತ ಪರಮ ಸಂಭ್ರಮದೊಳಕ್ಷಾದ್ಯರಂಕೊಂದುವಿಧಿ ಶರಕೆ ಮೈಗೊಟ್ಟುಲಮಂಕಾಪುರವಸುಟ್ಟುಬಂ ಪತಿಗೆಸುಂದರಕಾಂಡದಲ್ಲಿ ಹನುಮಾ 5 ವನಧಿಯೊಳ್ಸೇತುವೆಯಗಟ್ಟಿ ಧುರದೊಳಗೆರಾ ವಣ ಕುಂಭಕರ್ಣಾದ್ಯರೆಲ್ಲರಂ ಸದೆದುತ ಪೊಗಳಲು ಜನಕನಂದನೆಯ ಪಾವಕನಿಂ ಪರಿಗ್ರಹಿಸಿ ಘನಪುಷ್ಪಕವನೇರಿಬರುತ ವಹಿಲದಲಿ ಭರ ಯುದ್ಧಕಾಂಡದಲಿ 6 ಪರಮಧರ್ಮದಲಿ ರಾಜ್ಯವಾಳುತಲಿ ಕಲಿರಾಮಭೂ ವರನು ಹನ್ನೊಂದುಸಾವಿರಲವಣನಂ ಪುತ್ರರಿಗೆ ರಾಜ್ಯವಿತ್ತು ಪುರಜನವ ಪಶುಪಕ್ಷಿ ಕೀಟವ್ರಜ ಸಹಿತ ತೆರಳಿದಂದಿವಿಗೆದೇವರ್ಕಳರಳಿನಮಳೆಯ ಸುರಿದು ಜಯಜಯವೆಂದು ಪೊಗಳಿದರುಹರಿ ಯನುತ್ತರಕಾಂಡದಲಿ ತಿಳಿವದು 7 ಇಪ್ಪತ್ತುನಾಲ್ಕುಸಾವಿರ ಶ್ಲೋಕ ಕಾಂಡಗ ಳೊಪ್ಪುವುದು ಸಪ್ತವೈನೂರುಸರ್ಗಗಳೆಂದು ವಾಲ್ಮೀಕಿ ಮುನಿವಿರಚಿಸಿದನು ತಪ್ಪದೇ ಪಠಿಸುವಗಮುದಿನಂ ಗಾಯತ್ರಿ ಇಪ್ಪತ್ತು ನಾಲ್ಕುಲಕ್ಷದ ಜಪದಫಲಬಹುದು ಚರಿತಸಜ್ಜನ ಕಲ್ಪವೃಕ್ಷವಿದುವೆ 8 ಇಂತಪ್ಪ ಮಹಿಮೆಯುಳ್ಳೀಕಥೆಯ ಸಂಕ್ಷೇಪ ದಿಂ ತರಳನಾಂ ಪೇಳ್ದೆತಪ್ಪಿದ್ದಡೆಯು ತಿದ್ದಿ ಸೇವಕಂಸೇವ್ಯನವನು ಎಂತಾದಡೆಯು ಹರಿಯನಾಮಾಮೃತದರುಚಿಮ ಹಾಂತರರಿವರು ದುರ್ಜನರು ನಿಂದಿಸಿದಡೇನು ಸಂಕ್ಷೇಪರಾಮಾಯಣಂ 9
--------------
ಗುರುರಾಮವಿಠಲ
ಸಂತರನ ಸ್ಮರಿಸಿ ಜನರು ಸಂತರನ ಸ್ಮರಿಸಿ ಜನ ನಿಂತಲ್ಲಿ ಕುಳಿತಲ್ಲಿ ಇಂತೆಂತು ಸದ್ಧರ್ಮ ಚರಿಸುವ ಕಾಲಕ್ಕೆ ಅಂತರಂಗದಲಿದ್ದು ಚಿಂತೆಯನು ಬಿಟ್ಟು ಸಿರಿ ಕುಂತುಪಿತನೊಲಿಮೆಯಿಂದ ಪ ವ್ಯಾಸ ಶಿಷ್ಯರಾದ ಗುರುಮಧ್ವ ಮುನಿರಾಯ ಮಾಧವ ಮು ನೇಶ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ ಪೋಷಿತ ಕವೇಂದ್ರತೀರ್ಥರಾ ನ್ಯಾಶಿ ವಾಗೀಶ ಯತಿ ರಾಮಚಂದ್ರ ನಂದ ವ್ಯಾಸ ವಿದ್ಯಾಧೀಶರೂ 1 ವೇದಮುನಿ ಸತ್ಯವ್ರತ ಸತ್ಯನಿಧಿ ರಾಯ ಬೋಧ ಮೂರುತಿ ಸತ್ಯನಾಥ ಸತ್ಯಾಭಿನವ ಕ್ರೋಧ ಜಯ ಸತ್ಯಪೂರ್ಣ ಸತ್ಯ ವಿಜಯ ವಿ ನೋದ ಸತ್ಯಪ್ರಿಯರೂ ಭೇದಾರ್ಥ ಬಲ್ಲ ವಿಭುಧೇಂದ್ರ ರಘುತನಯ ಸ ಮ್ಮೋದ ಜಿತಾಮಿತ್ರ ತೀರ್ಥ ಮುನಿಪ ಸುರೇಂದ್ರ ವಾದಿ ಎದೆ ಶೂಲ ವಿಜಯೀಂದ್ರ ಸುಧಿಯೀಂದ್ರ ಹ ಲ್ಲಾದ ರಾಘವೇಂದ್ರರು 2 ಯೋಗೆಂದ್ರ ಭೂಸುರೇಂದ್ರ ಸುಮತೀಂದ್ರ ಉಪೇಂದ್ರ ಯೋಗಿ ಶ್ರೀಪಾದರಾಯರ ಪೀ ಳಿಗೆಯ ಅತಿ ಸಾಧನವು ವ್ಯಾಸರಾಯರ ಪಾರಂಪರಿಯವ ಲೇ ಸಾಗಿ ಎಣಿಸಿ ಕೊಂಡಾಡಿ ಆಗಮನುಕೂಲ ಮಧ್ವ ಶಾಸ್ತ್ರವನುಸರಿಸಿ ವೇಗದಿಂದಲಿ ಮಹಸಂತರಿಗೆ ಶಿರ ನಿತ್ಯ 3 ಕ್ಷೇತ್ರ ಸರೋವರ ನದಿ ಮಿಗಿಲಾದ ದೇಶದಲಿ ಗಾತ್ರ್ರದಂಡಿಸಿ ಮಾಡಿ ಹರಿಯ ಮೆಚ್ಚಿಸುವ ಪಾ ರತ್ರಯವನೇ ಬಯಸುವ ಪುತ್ರ ಪೌತ್ರರ ಕೂಡಿ ಜ್ಞಾನದಲಿ ಇಪ್ಪ ಚ ರಿತ್ರಾರಾ ಮಹಿಮೆ ಕೊಂಡಾಡಿದವರ ವಿ ಚಿತ್ರವನು ಪೊಗಳುವ ದಾಸದಾಸಿಯರ ಪದ ಸ್ತೋತ್ರ ಮಾಡಿರೋ ಆವಾಗ 4 ಉದಯಕಾಲದಲೆದ್ದು ಸಂತನ ಮಾಲಿಕೆಯನ್ನು ಮೃದು ಪಂಚರತ್ನದಲಿ ನಿರ್ಮಿತವಾಗಿದೆ ಸದಮಲರು ಪೇಳಿ ಸಂತೋಷದಲಿ ಕೇಳಿ ಕೊರಲೊಳಗೆ ಪದರೂಪದಲ್ಲಿ ಧರಿಸಿ ಮದ ಮತ್ಸರವು ಪೋಗಿ ವೈರಾಗ್ಯದಲಿ ಸಾರ ಹೃದಯರ ಬಳಿ ಸೇರಿ ಜ್ಞಾನ ಸಂಪಾದಿಸಿ ಪದೋಪದಿಗೆ ವಿಜಯವಿಠ್ಠಲನ ನಾಮಾಮೃತವ ವದನದಿಂದಲಿ ಸವಿದುಂಬ 5
--------------
ವಿಜಯದಾಸ
ಸಂತೆಯ ಬಿದನೂರು ಹನುಮಂತ ಎನ್ನ ಅಂತರಂಗದಲಿ ಹರಿಯ ತೋರು ಹನುಮಂತ ಪ. ಎನ್ನ ಮೇಲೆ ಪಂಥ ಬೇಡ ನಿಂತು ಬೇಡುವೆ ಹನುಮಂತ ಅ.ಪ. ಅಂಜನಾದೇವಿಯ ಕುಮಾರ ಅಂಜಿಸುವ ಈ ಘೋರ ಸಂಸಾರ ಅಂಜಿಕೆಯ ಬಿಡಿಸೆನ್ನ ಕಾಯೊ ಬಲು ಧೀರ ಸುಗುಣ ಗಂಭೀರ ಸಂಜೀವನನ ಕಂಡ ಶೂರ ಅಂಜನಾದೇವಿಯ ಕುಮಾರ 1 ಕುಂತಿಯಾ ಸುತನಾಗಿ ನೀ ಜನಿಸಿ ಬಂದೇ ಪಂಥದಲಿ ಕೀಚಕನ ಸೋಲಿಸಿ ನಿಂತು ಕಂತುಪಿತನಿಗೆ ದುರ್ಯೋದನನ ಶಿರವ ಒಪ್ಪಿಸಿದೆ 2 ಮದ್ದಿಗೆ ಭಟ್ಟರಲಿ ನೀ ಜನಿಸೀ ಮಧ್ವಮತವನೆ ಉದ್ಧರಿಸಿ ನೀ ಬದರಿಯಲಿ ನಿಂದಿ ಮುದ್ದು ಕೃಷ್ಣನ ಪೂಜಿಸಿ ಉಡುಪಿಲಿ ಸ್ಥಾಪಿಸಿ 3 ಸಂತೆಬಿದನೂರಿನಲಿ ನಿಂತು ಬಂದ ಜನಕೆ ಆನಂದ ಪಡಿಸಿ ಸಂತೋಷದಿಂದ ವರಗಳ ಬೇಡಿದವರಿಗೆ ನೀಡುತ್ತ ಕಂತುಪಿತನ ಧ್ಯಾನದಲಿ ಅನವರತ ಸೇವಿಸುತ 4 ರಾಮ ಸೇವೆ ನೀ ಸಂಭ್ರಮದಲಿ ಮಾಡಿ ರಾಮರ ಧ್ಯಾನ ಮಾಡುತ ಪೂಜಿಸುತಿರುವಿ ರಮಾವಲ್ಲಭವಿಠಲನ ಧ್ಯಾನದಿ ಪಟ್ಟಕೆ ಬರಲಿರುವಿ 5
--------------
ಸರಸಾಬಾಯಿ
ಸತ್ಯ ಸಂಕಲ್ಪ ಸ್ವಾತಂತ್ರ ಸರ್ವೇಶ ಸರ್ವೋತ್ತಮನೆ ಸಾರ್ವಭೌಮಾ ಪ ಭೃತ್ಯರಿಗೆ ಬಂದ ಪರಿಪರಿ ಭಯಗಳನೆ ಕಳೆದುನಿತ್ಯದಲಿ ಕಾಯ್ವ ಸ್ವಾಮೀ ಪ್ರೇಮೀ ಅ.ಪ. ಆವ ಜನುಮದ ಫಲವೊ | ಆವ ಕ್ರಿಯಗಳಿಂದಆವ ಸಾಧನದ ಬಗೆಯೋ ||ಆವುದಿಂದಾವುದಕೆ ಘಟನೆಯನು ಮಾಳ್ಪೆಯೊಆವುದೊ ನಿನ್ನಾಟವೋ ||ಆವ ಪರಿಯಿಂದಲ್ಲಿ ಜೀವಿಗಳ ಸಲಹುವಿಯೊಆವ ನಿನ್ನಾಧೀನವೋ |ದೇವ ದೇವೇಶ ನಿನ್ನ | ಭಾವ ಬಲ್ಲವರಾರೊಭಾವಜನ ಪಿತ ಕೃಪಾಳೊ | ಕೇಳೋ 1 ತೈಜಸ ಪ್ರಾಜ್ಞ ವಿಶ್ವರೂಪಗಳಿಂದಸ್ವಪ್ನ ಕಾಲದಲಿ ನೀನೂ ||ಸುಪರ್ವಾಣ ದೈತ್ಯರ ಸೃಜಿಸಿ ಮನೆಯನು ಮಾಡಿಅಪರಿಮಿತ ಕಾರ್ಯಗಳನೂ |ಸುಫಲ ದುಷ್ಕರ್ಮಗಳ ತೋರಿಸೀ ಜೀವಕ್ಕೆಕ್ಲುಪುತವಾಗಿದ್ದವೆಲ್ಲಾ |ಕೃಪೆಯಿಂದ ತೋರಿ ಬದಾಪತ್ತುಗಳ ಕಳೆವಅಪರಿಮಿತ ಸಾಗರಾ | ಶೂರಾ 2 ಎನ್ನಂಥ ಪಾಪಿಷ್ಠರಿನ್ನಿಲ್ಲ ಧರೆಯೊಳಗೆ ನಿನ್ನಂಥ ಕರುಣಿಯಿಲ್ಲಾ ||ಚೆನ್ನಗುರು ವಿಜಯರಾಯರ ಪೊಂದಿದವನೆಂದೂಮನ್ನಿಸಿ ಸಲಹಬೇಕೋ |ಘನ್ನ ಸಂಸಾರದೊಳು ಬವಣೆ ಬಂದಟ್ಟಿದರುನಿನ್ನ ಸ್ಮøತಿಯೊಂದು ಬರಲೀ |ಸನ್ನುತಾಂಗಿಯ ರಮಣ ವ್ಯಾಸವಿಠಲ ಮಧ್ವಮುನಿಗೊಲಿದೆ ಉಡುಪಿವಾಸಾ | ಶ್ರೀಶಾ 3
--------------
ವ್ಯಾಸವಿಠ್ಠಲರು
ಸತ್ಯಧ್ಯಾನತೀರ್ಥರು ಇಷ್ಟು ಸುಲಭದಲಿ ಈ ಮುದ್ದು ಯತಿ ವರರಿಗೆ ಪ್ರೇಷ್ಠತಮ ನೀ ನೊಲಿದ ಬಗೆಯೇನೋ ರಾಮಾ ಪ ಪಟ್ಟ ಪುತ್ರನ ಶ್ರೇಷ್ಠ ಪೀಠದಲಿ ಕುಳಿತಿಂದು ಮುಟ್ಟಿ ಪೂಜಿಪ ಭಾಗ್ಯಗಿಟ್ಟಹುದೆ ಏನೆಂಬೆ ಅ.ಪ. ಚಿಕ್ಕತನದಲೆ ನೂಕಿ ವಿಷಯ ವಿದ್ಯೆಗಳನ್ನು ಚೊಕ್ಕ ಶಾಸ್ತ್ರಗಳಲ್ಲಿ ಇಕ್ಕಿ ದಾಸರ ಮನವಲಿದ್ಯೋ ಕಕ್ಕಸವುಭವವೆಂದು ವೈರಾಗ್ಯ ಧರಿಸುತಲಿ ಭಕ್ತಿ ಮಾಳ್ಪುದ ನೋಡಿ ಮುಕ್ತರಾಶ್ರಯ ವಲಿದ್ಯೋ 1 ದಾನಶೂರರು ಬಹು ನಿದಾನ ವಂತರು ಹಾಗೆ ಮಾನ ಸಾಗರರೆಂದು ಜ್ಞಾನಿ ಪ್ರಾಪ್ತನೆ ವಲಿದ್ಯೋ ದೀನ ಜನ ಮಂದಾರ ಮಾನ್ಯ ಮುನಿಕುಲ ತಿಲಕ ಶೂನ್ಯವಾದಧ್ವಾಂತ ಭಾನು ವೆಂದೊಲಿದ್ಯೋ 2 ಮೋದವಿತ್ತರು ಸತ್ಯಧ್ಯಾನ ತೀರ್ಥರು ಹಿಂದೆ ಸಾಧಿಸುತ ಸುಖಮತದ ಜಯ ಭೇರಿ ಜಗದೀ ಸಾಧು ಜನರ ಜ್ಞಾನ ಖೇದವಳಿಯುತ ಪ್ರಮೋದ ವೀಯುವರೀಗೆ ಸಿದ್ದವೆಂದೊಲಿದ್ಯೋ 3 ಹಿಂದಿ ನ್ಹಿರಿಯರ ವಲವೊ ಮಂದಿ ಪುಣ್ಯವೊ ಮತ್ತೆ ತಂದೆ ಕರುಣವೊ ಕಾಣೆ ಬಂದುದೀ ಪೀಠದಲಿ ವಿಧಿ ವಿನುತ ರಾಮ ನಿನ್ನೊಲಸಿಹ ಪ್ರ ಮೋದ ತೀರ್ಥರುಸತ್ಯ ಪಾಮರರಿಗಾಗುವುದೆ ಸ್ತುತಿಸೆ 4 ಸಾಧು ಸಜ್ಜನ ಪ್ರಾಪ್ಯ ಬಾದರಾಯಣ ಶರಣು ಮೋದ ಮಯ ನಿರ್ದೋಷ ವೇದ ವೇದ್ಯನೆ ಶರಣು ಮಾಧವ ಶ್ರೀ ಕೃಷ್ಣ ವಿಠಲರಾಯನೆ ಶರಣು ಗಾಧವರ್ಜಿತ ಮಹಿಮ ಶ್ರೀ ರಾಮ ಶರಣು ಶರಣು 5
--------------
ಕೃಷ್ಣವಿಠಲದಾಸರು
ಸತ್ಯಪ್ರಿಯ ಗುರುರಾಯ ಮಂಗಳಕಾಯ ಭೃತ್ಯ ಸಹಾಯ ಪ ಮಧ್ವಮತಾಬ್ಧಿ ಚಂದ್ರ ಸದ್ಗುಣಸಾಂದ್ರ ಅದ್ವೈತಮದ್ರಿ ಇಂದ್ರ ಇದ್ಧರಿಯೊಳಗನಿ ರುದ್ಧನೆ ವರನೆಂದೆದ್ದು ನೆಗಹಿ ಕರ ಬದ್ಧ ಕಂಕಣರಾಗಿ ಸ್ಮರ ಮಾರ್ಗಣ ಗೆದ್ದ 1 ವಿತರಣದಲಿ ಬಲು ಶೂರಾ ಕೀರ್ತಿವಿಹಾರಾ ಸತತ ವೇದಾರ್ಥ ವಿಚಾರ ಮಿತಿ ಇಲ್ಲದೇ ಆ ಕಥಾಮೃತ ತತುವ ಮಾರ್ಗದಲಿ ವಿ ಹಿತ ಶಿಷ್ಯರಿಗೆ ನಗುತ ಪೇಳಿದ ಅ ದ್ಭುತ ಮಹಿಮಾ ಸಂಚರಿಸುತ ಆನಂದ ಭರಿತ 2 ನೆನೆಸಿದವರ ಸುರಧೇನು ನಿನಗೆಲ್ಲಿ ನಾನು ಎಣೆಗಾಣೆ ಎಣಿಸಲು ಮೇಣೂ ಮುನಿ ಸತ್ಯಭೋಧರ ಮನದಲ್ಲಿ ನಿಂದರ್ಚನೆಯನು ಮನದಲ್ಲಿ ಘನವಾಗಿ ಕೈಕೊಂಬ ಗುಣದಿ ವಿಜಯವಿಠ್ಠಲನ ಚರಣಾಂಬುಜ ಧ್ಯಾನ ಮಾಡುವ ತ್ರಾಣ3
--------------
ವಿಜಯದಾಸ
ಸತ್ರಾಜಿತ ಕುಮಾರಿ ಗೃಹಕೆ ಪಕ್ಷಿವಾಹನ ತನ್ನ ಅಚ್ಛದ ಸತಿಯ ಕಾರಣನೆಲ್ಲೂ ಭಾಮೆ ಇಚ್ಛೆಯಿಂದಲಿ ಬಂದನಿಲ್ಲೆ 1 ಮಚ್ಛಲೋಚನೆ ನಗುತ ಅಚ್ಚಮುತ್ತಿನ ದ್ವಾರ್ಯ ಮುಚ್ಚುಕದವ ತೆಗೆಯದೆ ಭಾಮೆ ಅಚ್ಚುತನ ಕೂಡ ವಿನಯದಿ 2 ಮದಗಜಗಮನೆ ಕೇಳೆ ಗಜವರದನು ನಾನೆ ಕದವ ತೆಗೆಯೆ ಕಮಲಾಕ್ಷಿ ಭಾಮೆ ಮುದದಿ ನೋಡೆನ್ನ ನಿರೀಕ್ಷೆ 3 ಗಜವರದನೆ ಗಜವ ವಧೆ ಮಾಡಿದವನು ನಿನ್ನ ನೆಲೆಯ ಬಲ್ಲವರು ನಾವಲ್ಲ ಕೃಷ್ಣ ಕದವ ತೆಗೆಯೋರ್ಯಾರಿಲ್ಲ4 ಉದಕÀದೊಳು ಮುಣುಗಿ ಬ್ಯಾಗ ಮದಕದಿಂದ್ಹಯನ ಕೊಂದು ತವಕದಿ ವೇದವ ತಂದೆ ನಾನು ಭಾಮೆ ಮತ್ಸ್ಯ ನಾನೆ 5 ಹೊಳೆವೊ ಮತ್ಸ್ಯನಾದರೆ ಶರಧಿ ಹುಡುಕುತ ಹೋಗೊ ನಿನಗಾವಾಸಸ್ಥಾನಯಿದಲ್ಲ ಕೃಷ್ಣ ಜಲವೆನ್ನ ಮನೆಯೊಳಗಿಲ್ಲ 6 ಅಂಬುಧಿ ಮಥಿಸಿ ಅಮೃತ ತಂದು ಸುರರಿಗಿಟ್ಟು ಮಂದರವ ಬೆನ್ನಲಿ ತಾಳಿದೆನೆ ಭಾಮೆ ಸುಂದರ ಕೂರ್ಮನು ನಾನೆ 7 ಸುರರಸುರರ ಯುದ್ಧ ಬಿಟ್ಟು ಮೋಹಿನ್ಯಾಗಲ್ಲಿ ನಡೆ ನಾ ಸ್ತ್ರೀರೂಪ ನೋಡೋಳಲ್ಲ ಕೃಷ್ಣ ಛಲದಿಂದ್ವಂಚಿಸು ಹೋಗವರನೆಲ್ಲ 8 ಮಣ್ಣು ಕೆದರುತಲ್ಹೋಗ್ಹಿ- ರಣ್ಯಾಕ್ಷನ್ನ ಸೀಳಿ ಮನ್ನಿಸ್ಯವನಿಯ ತಂದೆ ನಾನೆ ಭಾಮೆ ವರಾಹ ನಾ ಬಂದೀನೆ 9 ವರಾಹ ನೀನಾದರೆ ಗರಿಗಂಹರವ ಸೇರೊ ಮನೆಗೆ ಬರುವೋದುಚಿತಲ್ಲ ಕೃಷ್ಣ ಮೆಲುವ ಬೇರೆನ್ನ ಮನೆಯೊಳಿಲ್ಲ 10 ತರಳ ಕರೆಯಲು ಕಂಬ ಒಡೆದಸುರನ ಒಡಲ ಕಡು ಕೋಪವನ್ನು ತಾಳಿದನೆ ಭಾಮೆ ವರಲಕ್ಷ್ಮೀನರಸಿಂಹ ನಾನೆ 11 ಕರುಳಾಧಾರಕ ಕೇಳೊ ಕರಾಳವದನಕ್ಕಂಜುವೆನು ಕಡುಕೋಪ ಎನ್ನೊಳು ತರವಲ್ಲ ಕೃಷ್ಣ ತರಳರಂಜುವರು ಲಕ್ಷ್ಮೀನಲ್ಲ 12 ಅಂಜೋದ್ಯಾತಕೆ ಚಿಕ್ಕ ಕÀಂದ ವಟುವು ಚೆಲ್ವ ಸುಂದರ ವಾಮನನು ನೋಡೆ ಭಾಮೆ ಬಂದೆನ್ನ ಗುಣವ ಕೊಂಡಾಡೆ 13 ಕಪಟ ರೂಪದಿ ದಾನ ತ್ರಿಪಾದ ಭೂಮಿ ಬೇಡಿದ ವಿಪರೀತ ಮಾಯವ ಕಂಡವಳಲ್ಲ ಕೃಷ್ಣ ಅಪರ್ಮಿತ ಗುಣ ಬಲಿ ಬಲ್ಲ 14 ಸರಸಿಜಮುಖಿ ಕೇಳೆ ನಿರುತ ಜಪತಪಾಚರಿಸಿ ಪರಶುರಾಮನು ನಾ ಬಂದೆನೆ ಭಾಮೆ ಶರಥ ಮಾಡದಿರೆನ್ನೊಳು ನೀನೆ 15 ನಿರುತ ನಿಷ್ಠೆಯ ಬಲ್ಲೆ ಗುರುತು ಮಾತೆಯ ಕೊಂದೆ ಸರಸವಾಡುವೋಳು ನಾನಲ್ಲ ಕೃಷ್ಣ ಶರಥÀ ಕ್ಷತ್ರಿಯರಲ್ಲಿದು ಹೋಗೆಲ್ಲ 16 ಎರಡೈದು ಶಿರಗಳ ಕಡಿದು ಜಾನಕಿದೇವಿ ಒಡಗೊಂಡಯೋಧ್ಯವನಾಳಿದೆನೆ ಭಾಮೆ ಪೊಡವಿಗೊಡೆಯ ರಾಮ ನಾನೆ 17 ಅಡವಿ ಅರಣ್ಯ ತಿರುಗಿ ಮಡದಿಗಪನಿಂದ್ಯವ ಕಟ್ಟಿ ಅಡವಿಗಟ್ಟ್ಯಂತಃಕರಣವಿಲ್ಲ ಕೃಷ್ಣ ಬಿಡು ನಿನ್ನ ಸುಳ್ಳು ವಚನವಿದೆಲ್ಲ 18 ಯದುವಂಶದೊಳು ಜನಿಸಿ ವಧೆಮಾಡಿ ದೈತ್ಯರ ನಿರ್ಭಯದಿಂದ ಬೆಳೆದೆನೆ ಭಾಮೆ ಮಧು ಮುರಾಂತಕÀ ಕೃಷ್ಣ ನಾನೆ 19 ಕಲಹ ಮಾಡುತ ಕಾಲ- ಯಮನಿಂದಲೋಡಿ ಬಂದು ನಿರ್ಭಯದಿಂದ ಬೆಳೆಯಲು ನಿಂದೆಲ್ಲ ಕೃಷ್ಣ ಮಲಗಿದ ಮುಚುಕುಂದ ಬಲ್ಲ 20 ನಿಗಮ ನಿಂದ್ಯವ ಮಾಡಿ ಬಗೆಯಿಂದ ತ್ರಿಪುರರ ಚೆದುರೆಯರನು ಒಲಿಸಿದೆನೆ ಭಾಮೆ ಸುಗುಣ ಶರೀರ ಬೌದ್ಧ ನಾನೆ 21 ತ್ರಿಪುರ ಸತಿಯರನೆಲ್ಲ ವಶಮಾಡಿದಂಥ ಶೂರ ವಸನರಹಿತಾಗಿ ತಿರುಗೋದÀಲ್ಲ ಕೃಷ್ಣ ಶಶಿಮುಖಿಯರು ನಗುವರೆಲ್ಲ 22 ಚೆಲುವ ತುರುಗನೇರಿ ಹೊಳೆವೋ ಕತ್ತಿಯ ಶೂರ ಖಳರ ಮರ್ದನ ಮಾಡುವೆನೆ ಭಾಮೆ ಥಳಥಳಿಸುವ ಕಲ್ಕ್ಯ ನಾನೆ23 ಕಲಿಯ ಸಂಹಾರ ಕೇಳೊ ನಿನ್ನ ಕತ್ತಿಗಂಜುವರ್ಯಾರೊ ಕಟಿಪಿಟ್ಯೆನ್ನೊಳು ತರವಲ್ಲ ಕೃಷ್ಣ ಕಲಿಗಳೆನ್ನರಮನೆಯೊಳಿಲ್ಲ 24 ಜಾಂಬವಂತನ್ನ ಗೆದ್ದು ತಂದೆ <
--------------
ಹರಪನಹಳ್ಳಿಭೀಮವ್ವ
ಸನ್ನುತ ಭೂಲಲಾಮ ರಾವಣಸಂಹರಣ ಅ.ಪ ವಿನುತ ಮರಕತ ಗೋಮೇಧಿಕ ಮಣಿಹಾರಾ | ಸನ್ನುತ ನಿಗಮಾಧಾರಾ || 1 ನಿರುಪಮ ಶೂರಾ ಪುಣ್ಯಶರೀರಾ | ಪರಮೋದಾರಾ ಮಾಂಗಿರಿವರ || 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್