ಒಟ್ಟು 1713 ಕಡೆಗಳಲ್ಲಿ , 104 ದಾಸರು , 1194 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನ್ಯ ಧನ್ಯವಾಯಿತು ಜನುಮಾ | ಆವಪುಣ್ಯವೋ ಅರಿಯೇ ನಮ್ಮಾ ಪ ನಾನಾ ಜನ್ಮದ ಬಲಿಯನೆ ಗೆದ್ದು ಸಲೆ | ಮಾನುಷ ದೇಹದಲಿಂದು | ಮಾನುಭಾವರ ವಂಶದಿ ಬಂದು | ಅವರ | ಸಾನಿಧ್ಯ ಸೇವೆಯ ಪಡೆದು 1 ಗುರುಕ್ಷೇತ್ರವೇ ಯನಗಿದೇ ಕಾಶೀ | ಗಂಗೆ | ಮೆರೆವುದು ಗುರುತೀರ್ಥವೆನಿಸಿ | ಗುರು ವಿಶ್ವೇಶ್ವರ ನೆನೆವಾಸೀ | ಕಂಡು | ಪೂರಿತಾಯಿತು ಮನದಾಸಿ 2 ಭವ | ಕರ್ಮ | ಪಾದ ಧರ್ಮಾ | ನಿಜ | ನಂದನ ಗಾನಂದೋಬ್ರಹ್ಮಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯನಾದೆನಾ ಗುರು ಪ ಸನ್ನುತಾಂಗ ಗುರುರಾಜರ ನೋಡಿಅ.ಪ ಘನ್ನ ಮಹಿಮರಿವರು | ವರ ಪಾವನ್ನಚರಿತರಿವರು | ಸುಖಗಳನೀವರ ನೋಡಿ 1 ಬುಧರ ಮಹಾತ್ಪ್ರಭುವೋ| ಭಜಿಪರ ಮಧುರ ಸುರದ್ರುಮವೋ| ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು| ಅಧಮರ ಮುರಿದಿಹ ಧೀರರ ನೋಡಿ2 ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು | ಕೊಂಡಾಡುತೆ ನೋಡಿ3
--------------
ಶ್ರೀಶ ಕೇಶವದಾಸರು
ಧರಣೀ ರಮಣಾ ರಾಮ | ದುರಿತಹರಣ ನಾಮ ಪ ಸುರನಾಯಕವೈರಿ ಭೀಮಾ | ಸರಸೀರುಹನಯನ ರಾಮಾ ಅ.ಪ ಶರಣಜನ ಸಂಸೇವಿತ ಭಾವಿತ 1 ರಕ್ಷ ನಿತ್ಯಪೂರ್ಣಕಟಾಕ್ಷ 2 ರಥಾಂಗ ಮಾಂಗಿರೀಶ ದೇವೋತ್ತುಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಧರೆಯನಾಳುವನೊಬ್ಬ ದೊರೆ ಜೈಶೀಲನಾ ಹರದಿ ಮಂಜುಳೆಯಿರಲು ಮಕ್ಕಳಿಗಾಗಿ ಮರುಗುತ ಸೊರಗಿರಲು ಈ ಪರಿಯ ನೋಡುತ ಹರನು ಬ್ಯಾಗ ತಾ ತಿಳಿದವರ ಮನ ತಿರುಕನಂದದಿ ಬರಲು ಧಾನ್ಯವ ಕರೆದು ನೀಡಿದರೊಲ್ಲದಾಗಲೆ ತಿರುಗಿ ಪೋದನೆ ಉರಗಭೂಷಣ ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗಿಯರು ಬ್ಯಾಗ 1 ನಂದಿವಾಹನನ ಪೂಜಿಸಿ ಫಲಗಳ ಬೇಡೆ ಕಂದನಿಗಾಯುಷ್ಯವು ಐದರಾ ಮ್ಯಾಲ್ ಹ- ನ್ನೊಂದು ವರುಷವೆನಲು ವರ ನೀಡುತಿರಲು ಮಂಜುಳೆಯು ಗರ್ಭವನೆ ಧರಿಸಲು ಬಂಧುಗಳು ಹೂ ಮುಡಿಸಿ ಪರಮಸಂಭ್ರಮದಿ ಸೀ- ಮಂತ ಮಾಡಲು ತುಂಬಿತಾ ನವಮಾಸವಾಗಲೆ 2 ಜಾತವಾಗಲು ನಾಮಕರಣ ಮಾಡುತ ಚಂದ್ರಶೇಖರ- ನೆಂದ್ಹೆಸರಿಡುತ ಜಾವಳ ಜುಟ್ಟು ಪ್ರೀತಿಂದುಪನಯನ ಮಾಡುತ ವಿದ್ಯೆಗಳ ಕಲಿಸುತ ಆತಘದಿನಾರ್ವರುಷ ಬರುತಿರೆ ಪ್ರೀತಿಯಿಂದ್ಹಣಕೊಟ್ಟು ಕಾಶಿಯಾತ್ರೆಗೆನುತಲಿ ಕಳುಹೆ ಬ್ಯಾಗನೆ3 ಒಂದಾಗಿ ಅಳಿಯ ಮಾವಂದಿರು ಬರುತಿರೆ ಕಂಡಿಳಿದರು ತೋಟವ ಗೆಳತಿಯರು ಬಂದು ಹೂವಿಗೆ ಆಟವಾಡುತಲಿ ಕೋಪಿಸೆ ಒಂದಕ್ಕೊಂದು ಮಾತಾಡೆ ರಾಜ ನಂದನೆಯು ತಾ ನೊಂದುಕೊಳ್ಳದೆ ನಂದಿವಾಹನನರಸಿ ದಯವಿರಲೆಂದು ನಡೆದಳು ಮಂದಿರಕೆ 4 ಬಂದ ರಾಜನ ಮಗಳಿಗೆ ನಿಬ್ಬಣವು ಕರೆ- ತಂದರಸುಕುಮಾರನ ಧಾರೆಯನೆರೆದು ಮಂಗಳ ಸೂತ್ರವನು ಬಂಧನವ ಮಾಡಿದ- ರÀಂದದಿಂದಲಿ ಲಾಜಹೋಮವ ಬಂಧುಗಳ ಸಹಿತುಂಡು ಭೌಮವ ಚೆಂದದಿಂದಲಿ ಸುತ್ತಿಸಾಡ್ಯವ ಅಂದಿನಿರುಳಲಾನಂದವಾಗಿರೆ 5 ಸತಿಪತಿಯರು ಭಾಳ ಹಿತದಿಂದ ಮಲಗಿರೆ ಅತಿ ಹಸಿವೆನಗೆನಲು ಲಡ್ಡಿಗೆ ತಂದು ಘೃತ ಬಟ್ಟಲೊಳು ಕೊಡಲು ತಿಂದಿಡಲು ಮುದ್ರಿಕಾ ಸತಿ ಸಹಿತ ಸುಖನಿದ್ರೆಲಿರೆ ಪಾ- ರ್ವತಿಯು ಬಂದಾ ಖದ್ರುದೇವಿಸುತ ಬರುವನೆಂದ್ಹೇಳೆ ಕಳಸವ ಅತಿಬ್ಯಾಗದಿ ತುಂಬಿಟ್ಟಳುರಗವ 6 ಅತ್ತೆ ಕಾಶಿಗೆ ಪೋಗಿ ಅಳಿಯ ಮಾವಂದಿರು ಕ್ವಾಷ್ಟನ ಕರೆದು ತಂದು ಕುಳಿತಿರಲಾಗ್ವಿಚಿತ್ರ- ಭೂಷಿತಳು ಬಂದು ನೋಡುತಲಿ ನಿಂದು ಥಟ್ಟನೆದ್ದು ತಾ ತಿರುಗಿ ಪೋಗೆನ್ನ ಪಟ್ಟದರಸಿವನಲ್ಲವೆನುತಲಿ ಹೆತ್ತಜನಕ ನೀ ಅನ್ನಕ್ಷೇತ್ರವ ಇಟ್ಟು ನಡೆಸೀಗ್ವೀಳ್ಯಗಳ ಕೊಡುವುದು 7 ತಂದು ಭೋಜನಮಾಡುತ ಕುಳಿತಿರಲಾಗ ತಂದು ವೀಳ್ಯವ ಕೊಡುತ ಮುಖ ನೋಡಿ ನಗುತ ಸಂದೇಹಿಲ್ಲದೆ ಎನ್ನಪತಿ ಹೌದೆಂದು ನುಡಿದಳು ಬಂದು ಜನರು ನಿಂದು ಗುರುತೇನೆಂದು ಕೇಳಲು ತಂದು ತೋರಿದುಂ(ದಳುಂ?) ಗುರವ ಜನರಿಗೆ 8 ನಿನ್ನ ಗುರುತು ಏನ್ಹೇಳೆನ್ನಲು ಸಭೆಯೊಳು ಪನ್ನಂಗದ ಕಳಸವನು ತೆಗೆಯಲು ಬಾಯಿ ರನ್ನ ಮುತ್ತಿನ ಸರವು ಆಗಿರಲು ಉರಗವು ಕನ್ನೆಯರು ಹರಸ್ಹಾಕೆ ಕೊರಳಿಗೆ ಮನ್ನಿಸುತ ಮಹಾರಾಜ ಮಗಳನು ಚಿನ್ನದಾಭರಣಗಳು ಉಡುಗೊರೆ ತನ್ನಳಿಯಗುಪಚಾರ ಮಾಡುತ 9 ಸತಿಪತಿಯರು ತಮ್ಮ ಪಿತರ ಅಪ್ಪಣೆಗೊಂಡು ರತುನದಂದಣವೇರಲು ಮಾರ್ಗದಿ ಗೌರೀ- ವ್ರತ ಮಾಡಿ ನಡೆತರಲು ಪಿತಗ್ಹೇಳಿ ಕಳುಹಲು ಸುತನು ಬಂದರಮನೆಗೆ ಭಾಗೀ- ರಥಿಯು ಮಾತುಳ ಮಡದಿ ಸಹಿತ ಹಿತದಿ ಬಂದೆರಗಿದರೆ ಸೊಸೆಮಗ ಅತಿಹರುಷದಿಂದಪ್ಪಿ ಕೇಳುತ 10 ದಾವ ಪುಣ್ಯದ ಫಲದಿಂದ ನಿನ್ನರಸನ ಪ್ರಾಣ ಪಡೆದಿಯೆನಲು ಮಂಗಳಗೌರಿ ದೇವಿ- ದಯವಿರಲೆಂದು ಹೇಳಲು ಶ್ರೀಗೌರಿಕಥೆಯನು ಕಾಮಿತವನದೊಳಗೆ ದ್ರೌಪದಿಗ್ಹೇಳಿದನು ಭೀಮೇಶಕೃಷ್ಣನು ಮಾಡಿದರೆ ಮುತ್ತೈದೆತನಗಳ ಬೇಡಿದಿಷ್ಟಾರ್ಥಗಳ ಕೊಡುವೋಳು ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ ಮಂಗಳಾಂಗಿಯರು ಬ್ಯಾಗ 11
--------------
ಹರಪನಹಳ್ಳಿಭೀಮವ್ವ
ಧೇನುಪಾಲ ದಾಸಾರ್ಯಾ | ನುತಿಸುವೆಮಾನವೀಶನ ಪೊರೆದಾರ್ಯಾ ಪ ಕಾಣೆ ನಿನಗೆ ಸಮ ಕರುಣಾಳುಗಳನುಶ್ರೀನಿವಾಸರ ಪೊರೆದಾರ್ಯಾ ಅ.ಪ. ಯತಿವರ ವರದೇಂದ್ರರ ವರಬೋಧ ಪಡೆದು ಸಚ್ಛಾಸ್ತ್ರಗತಿಯನೆ ತಾ ಗಳಿಸುತಹಂ ಮತಿ ವಿಶಿಷ್ಟ ತಚ್ಛಾತ್ರ |ಹಿತವ ನುಡಿಯೆ ವಿಜಯಾರ್ಯಾಗತ ತಿಳಿದು ಸುಪಾತ್ರಕೃತಕನಟಿಸಿ ತಾ ಕಳುಹಿದವರ ಉಪಚಾರದಿ ಮಾತ್ರ 1 ಉತ್ತಮ ನಿಂದೆಯ ಕೃತಿಗೆ ಪ್ರಾಪ್ತಿ ಇವಗೆ ಅತಿರೋಗಇತ್ತ ಮಾತೆಗರಿವಾಯ್ತು ಸುತನ ಕ್ಷೀಣಾರ್ಯುರ್ಯೋಗ |ಅತ್ತ ಅನಿಲಾಜ್ಞೆ ಪೊತ್ತು ವಿಜಯಾರ್ಯಪದ ಸುಯೋಗಪ್ರಾಪ್ತಿಗೈಸಿ ಕ್ಷಮೆಯಾಚಿಸಿ ಆಯ್ತಿವಗೆ ತವಪದ ಯೋಗ 2 ಪರಿ ಯೋಗದಿಂದ ಮೆರೆದೆ ಸುರ ಭೂಸುರ ವೃಂದವು ಪೊಗಳುತಿರಲು ಆಗ 3 ಮೂರ್ತಿ ಕಂಡದೇವ |ರಂಗನೊಲಿಮೆಯಿಂದಂಗ ಜನಸ್ತ್ರದ ಸಂಗರಹಿತ ಭೂದೇವಇಂಗಿತಜ್ಞ ಎನಗೀಯೊ ಗುರುವೆ ದ್ವಂದ್ವ ಸಮರ್ಪಣ ಭಾವ 4 ಹೊತ್ತಿಹೆ ಬಿರುದನು ಭಕ್ತಿರೂಪಿ ಎನೆ ಗುರು ಭಾಗಣ್ಣಹತ್ತು ಎಂಟು ಮತ್ತೊಂದು ಮೊಗದವನ ವಿಶ್ವಮೂರ್ತಿಯನ್ನ |ಪೊತ್ತು ನೀನು ಹೃತ್ಕಂಜದೊಳಗೆ ಬಹು ತುತ್ತಿಪೆಯೊ ಅವನಕೃತ್ತಿವಾಸ ಸಖ ಸರ್ವೋತ್ತಮನೆನುತೊತ್ತಿ ಪೇಳ್ದ ಅಣ್ಣ 5 ಪರಿ ಮೆರೆದೆ ನೀನು ಅಂದುಯೋಗ ಇದನ ಕಂಡಾಗ ಜನರು ಭಯ ಭ್ರಾಂತರಾದರಂದು6 ಮೂರ್ತಿ ಗುರು ಗೋವಿಂದ ವಿಠಲನ ಪಾದತೋರೊ ಭೂಪ 7
--------------
ಗುರುಗೋವಿಂದವಿಠಲರು
ನಗಬೇಡಿ ನಗಬೇಡಿ ನೀವ್ ನಗಬೇಡಿ ನಗಬೇಡಿ ಪ. ನಿಗಮನುತನ ಭಜಿಸುವ ನಿಜದಾಸರ ಬಗೆಯರಿಯದೆ ಬಿನ್ನಾಣದಿಂದ ನೀವ್ ಅ.ಪ. ಹರಿಸರ್ವೋತ್ತಮ ಹೌದ್ಹೌದೆಂಬುವ ಹರಿದಾಸರ ಲಕ್ಷಣಗಳ ತಿಳಿಯದೆ1 ಸ್ಥಿರವಲ್ಲದ ತನುಭ್ರಾಂತಿಯ ಪೊಂದುತ ಗುರುಚರಣ ನಂಬಿದ ದಾಸರ ಕಂಡು 2 ಲಜ್ಜೆಯ ತೊರೆಯುತ ಮೂರ್ಜಗದೊಡೆಯನ ಘರ್ಜಿಸಿ ಪಾಡುವ ಸಜ್ಜನರನೆ ಕಂಡು 3 ಲೋಕವಿಲಕ್ಷಣ ಚರ್ಯೆಯ ಧರಿಸುತ ಶ್ರೀ ಕಾಂತನ ಧ್ಯಾನಿಪರಿವರನರಿಯದೆ4 ಗೋಪಾಲಕೃಷ್ಣವಿಠ್ಠಲನಂಘ್ರಿಗಳನು ಭೋಪರಿ ನಂಬಿದ ನಿಜದಾಸರ ಕಂಡು 5
--------------
ಅಂಬಾಬಾಯಿ
ನಗುವಿನಿಂದಾರೋಗ್ಯ ಉಂಟೆಂಬರಯ್ಯ ನಗುವಿನಲಿ ಹಲವಾರು ಬಗೆಗಳುಂಟಯ್ಯ ಪ ನಗುವಿಂದ ಸನ್ಮಿತ್ರ ಹಗೆಯಪ್ಪುದುಂಟಯ್ಯ ನಗುತ ಬಾಳೆಂಬುದೇ ಸೊಗವೋ ರಂಗಯ್ಯ ಅ.ಪ ಗೊಳ್ಳೆಂಬ ನಗೆಯುಂಟು ಬಲ್ಲವನ ಸಭೆಯಲಿ ಕಳ್ಳನಗೆಯೊಂದುಂಟು ಪೊಳ್ಳುಕಡೆಗಳಲಿ ಸುಳ್ಳುನಗೆಯೊಂದುಂಟು ಜಳ್ಳು ಡಾಂಭಿಕರಲಿ ಮುಳ್ಳುಕಲ್ ನಗೆಯುಂಟು ಕಳ್ಳಕಾಕರಲಿ 1 ನಸುನಗೆಯು ಮನದ ಸಂತಸದ ಕುರುಹು [ಎಸೆ]ವ ರಸನೆ ನಗುವುದೇ ಹಾಸ್ಯವಯ್ಯಾ ರಸಪೂರ್ಣ ನಗುವುಂಟು ಬಿಸಜಾಕ್ಷನಲ್ಲಿ ಹೊಸದಾದ ನಗು ಮಾಂಗಿರಿನಲವಿನಲಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಡೆದು ಬಾರಯ್ಯ ಕೃಷ್ಣ ನಡೆದು ಪ ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ ರಕ್ಷಿಸುವಾತನೆಂದು ವಕ್ಷಸ್ಥಳದಿ ಶ್ರೀಮಾ- ರೀಕ್ಷಕನುಳುಹಿದಂತಕ್ಷದಿ ನೋಡುತಧೋಕ್ಷಜ ಹರಿಯೆ 1 ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ- ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ ಕರಿ ಸರ್ವೋತ್ತಮ ಹರಿಯೆ 2 ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ ಶೂರ ಸುತಗೆ ಸುಕುಮಾರನೆನಿಸಿದಂಥ ಅ- ಸಮೀರಜ ಭವ ಸುರ ನಾರದಪ್ರಿಯನೆ ಉದ್ಧಾರಮಾಡು ಎನ್ನನು 3 ಧ್ವಜ ವಜ್ರಾಂಕುಶ ಪಾದಭಜಕರೆನಿಸುವಂಥ ಸುಜನರ್ವಂದಿತನಾದ ಕುಜನ ಕುಠಾರಿಯೆ ನೀ ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ ನಿಜವಾಗಿ ನೋಡೆನ್ನ ರಜತಮ ಕಳೆಯುವ 4 ಕಡಲಶಯನನಾದ ಉಡುರಾಜ್ವದನ ಬಿಟ್ಟು ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು ಕೊಡು ವರಗಳ ಪೊಡವಿ ಪಾಲಿಪನೆ 5
--------------
ಹರಪನಹಳ್ಳಿಭೀಮವ್ವ
ನಂದಪುತ್ರನ ಆಜ್ಞೆಯಿಂದಲುದ್ಧವ ಬ್ಯಾಗ ಬಂದು ಗೋಕುಲ ಹೊಕ್ಕಾನಂದದಿಂದಲಿ 1 ಬಾಲನ್ವಾರ್ತೆಯ ಕೇಳೆಶೋದ ಗೋಪನು ಕೊಂ- ಡಾಡಿ ಗುಣಗಳ ಮನಕೆ ತಾಳಿದರ್ಹರುಷವ 2 ತಾಪ ಬಿಡದಲೆ ಅಗಲಿ ಶ್ರೀಪತಿ ಕಾಣದೆ ಸಂತಾಪದಿಂದಿರೆ 3 ಸತಿಯರೆಲ್ಲರು ಗೋಪಿಸುತನ ಪಾಡುತ ದಧಿಯ ಮಥಿಸಿ ಕದವನೆ ತೆಗೆಯೆ ರಥವ ಕಂಡರು 4 ದಾವ ಕಾರಣ ನಮ್ಮ ಭಾವಭಕ್ತಿಗೆ ಸ್ವಾಮಿ ತಾನೆ ಬಂದಾನೋ ತನ್ನಕ್ರೂರನ ಕಳಿಸ್ಯಾನೊ 5 ಭದ್ರೆರೆಲ್ಲರೂ ಕೂಡಿ ಎದ್ದು ಬರುತಿರೆ ಮಧ್ಯಮಾರ್ಗದಿ ಅಲ್ಲುದ್ಧವನ ಕಂಡರು 6 ಕಾಂತೇರೆಲ್ಲರು ಕೂಡೇಕಾಂತ ಸ್ಥಳದಲ್ಲಿ ನಿಂತು ಕಂತುನಯ್ಯನು ಲಕ್ಷ್ಮೀಕಾಂತ ಕ್ಷೇಮವೆ 7 ಇಂದಿರೇಶನ ಬಿಟ್ಟಗಲಿ ವ್ರಜದೊಳು ಕಾಲ ಹಿಂದೆ ಕಳೆವೋದ್ಹ್ಯಾಗಿನ್ನ ್ಹಗಲು ಇರುಳನೆ 8 ಮುಂದೆ ಕಾಣದೆ ನೇತ್ರ ಅಂಧಕರಂದದಿ ಮು- ಕ್ಕುಂದನಿಂದಲಿ ರಹಿತರೆಂದಿಗಾದೆವೊ 9 ತೊಡಿಗೆ ಬಂಗಾರ ಶಿರದಿ ಮುಡಿವೊ ಮಲ್ಲಿಗೆ ದೇಹ- ಕ್ಕುಡಿಗೆ ಭಾರವೊ ಬಿಟ್ಟು ಪೊಡವಿಗೊಡೆಯನ 10 ಉದ್ಧವ ನಾವು ಜಾಳು ಸ್ತ್ರೀಯರು ಒಲ್ಲದೆ ಕಾಳಿಮರ್ದನ ಕಾಲಲೊದ್ದು ಪೋದನು 11 ಜಾರಸ್ತ್ರೀಯರುಯೆಂದು ನಗದಿರುದ್ಧವ ಬಿಗಿದ ಮೋಹಪಾಶದಿ ಈ ವಿಚಾರ ಮಾಡಿದ 12 ಬಲೆಯಗಾರಗೆ ಸಿಕ್ಕು ಬಳಲಿದಾಕ್ಷಣ ಅದರ ಕೊ- ರಳ ಕೊಯ್ಯದೆ ಅವಗೆ ಕರುಣ ಬರುವುದೆ 13 ಎಷ್ಟು ಹೇಳಲೊ ಅವನ ಗಟ್ಟಿಯೆದೆಗಳ ಒಲ್ಲದೆ ಬಿಟ್ಟು ನಮ್ಮನು ಮಧುರಾಪಟ್ಟಣ ಸೇರಿದ 14 ಭ್ರಮರಕುಂತಳೆ ಒಂದು ಭ್ರಮರಕಾಣುತ ಬ್ಯಾಡ ಕಮಲನಾಭನ ವಾರ್ತೆ ಕಿವಿಗೆ ಸೊಗಸದು 15 ಮದನಮೋಹನ ಹೋಗಿ ಮಧುರಾಪುರಿಯಲಿ ಅಲ್ಲಿ ಚÉದುರೆರಿಂದಲಿ ಅವಗೆ ಸೊಗಸು ಸಮ್ಮತ 16 ಕ್ರೂರನೆನ್ನದೆ ಇವಗಕ್ರೂರನೆನುತಲಿ ದಾರ್ಹೆಸರಿಟ್ಟರೋ ನಮಗೆ ತೋರಿಸೊ ಅವರನು 17 ಯಾತಕ್ಹೇಳುವಿ ಅವನ ವಾರ್ತೆ ಸೊಗಸದು ಹರಿಯು ಪ್ರೀತಿ ವಿಷಯನು ನಮಗೆ ಘಾತಕನೆನಿಸಿದ 18 ಜಲನ ಭೇದಿಸಿ ಹಯನ ಕೊಂದು ವೇದವ ಹ್ಯಾಗೆ ಹರಣ ಮಾಡಿದ 19 ಕ್ಷೀರ ಮಥನವ ಮಾಡಿ ಸ್ತ್ರೀಯರೂಪದಿಂದಸುರರ ಮೋಹಿಸಿದ್ವಂಚನೆ ನಮಗೆ ಪೂರ್ಣ ತಿಳಿಸಿದ 20 ಭೂಮಿ ಬಗಿದನು ತನ್ನ ಕ್ವಾರೆಯಿಂದಲಿ ನಮ್ಮನ್ನು ಸೀಳಿ ಪೋದರೆ ಇನ್ನೀ ಘೋರ ತಪ್ಪುವುದು21 ಕಂದ ಕರೆಯಲು ಕಂಬದಿ ಬಂದು ಸಲಹಿದನೆಂದು ನಂಬಿ ಕೆಟ್ಟೆವೊ ಇನ್ನಿವನ ಹಂಬಲ ಸಾಕಯ್ಯ 22 ಕೊಟ್ಟ ದಾನವ ಬಲಿಯ ಕಟ್ಟಿ ಪಾಶದಿಂದವನ ಮೆಟ್ಟಿದ ಪಾತಾಳಕಿಂಥಾಕೃತ್ಯಮರುಂಟೇನೊ 23 ಕೊಡಲಿ ಕೈಯ್ಯೊಳು ಪಿಡಿದು ಹಡೆದ ಮಾತೆಯ ಶಿರವ ಕಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 24 ಬಂದ ಸತಿಯಳ ಮೋರೆ ಅಂಗ ಕೆಡಿಸಿದ ತ- ನ್ನಂಗನೆ ಕಾಣದೆ ತಿರುಗಲೆಮಗೆ ಸನ್ಮತ 25 ಪತಿಯ ಸುತರನೆ ಬಿಟ್ಟೆವಶನ ವಸನವ ಅಗಲಿದ್ವಸುನಂದನಗೆ ನಮ್ಮೆಲ್ಲರುಸುರು ಮುಟ್ಟಲ್ಯೊ 26 ಬೌದ್ಧರೂಪದಿ ಸ್ತ್ರೀಯರ ಲಜ್ಜೆಗೆಡಿಸಿದನೆಂಬೊ ಸುದ್ದಿ ಬಲ್ಲೆವೊ ನಾವಿಲ್ಲಿದ್ದವರುದ್ಧವ 27 ಕಲಿಯ ಮನಸಿರೆ ಇವಗೆ ಕಲ್ಕ್ಯನೆಂಬೋರೊ ಕತ್ತಿ ಪಿಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 28 ಬ್ಯಾಡವೆನುತಲಿ ಅವಗೆ ಬೇಡಿಕೊಂಡೆವೊ ಗಾಡಿಕಾರನು ನಮ್ಮ ನೋಡದ್ಹೋದನು 29 ನಮ್ಮ ವಚನವ ಹೋಗಿ ಮನ್ನಿಸುದ್ಧವ ಪನ್ನಂಗಶಯನನ ಪಾದಕ್ಕಿನ್ನು ನಮಿಸೆವೊ 30 ಬಿಟ್ಹ್ಯಾಗಿರುವೊಣೋ ಭೀಮೇಶಕೃಷ್ಣನ ನಮ್ಮ ದೃಷ್ಟಿಗೆ ತೋರಿಸೊ ಮುಕ್ತಿ ಕೊಡುವೊ ದಾತನ31
--------------
ಹರಪನಹಳ್ಳಿಭೀಮವ್ವ
ನದಿಗಳ ಸ್ತೋತ್ರ ಕಾವೇರಿ ಕಲುಷ ಸಂಹರಳೆ ಕಾವೇರಿ ಪ ವಿಧಿ ಸುತೆ ನಮ್ಮ | ಕಾವುದು ಬಿಡದಲೆ ಅ.ಪ. ಅಮಿತಾಭ ಕವೇರ ನೃಪನು | ಪುಣ್ಯಶಮದಮದಿಂದಯುತನು | ಸಾರಿಹಿಮನಗ ತಪ್ಪಲುಗಳನು | ದಿವ್ಯಸಮಶತದಶ ವರ್ಷಗಳನು | ಆಹಸುಮನ ಸೋತ್ತಮನಾದ | ಬೊಮ್ಮನ ಧೇನಿಸಿಅಮಮಸುಘೋರವು | ವಿಮಲ ತಪವ ಗೈದ 1 ಬೊಮ್ಮ | ಅಚ್ಚ್ಯುತ ಮಾಯ ತನ್‍ಇಚ್ಛೆಯ ಸುತೆ ನಿನ | ಮೆಚ್ಚು ಪುತ್ರಿಯಹಳು 2 ಸ್ಮರಣೆ ಮಾತ್ರದಿ ವಿಷ್ಣುಮಾಯಾ | ದಿವ್ಯತರುಣಿ ರೂಪದಿ ಬ್ರಹ್ಮರಾಯ | ನೆದುರುಕರವ ಮುಗಿದು ಪೇಳು ಜೀಯಾ | ಎನೆಬರೆದನಾ5ದು ಕವೇರ್ಕನ್ಯಾ | ಆಹಸರಿತು ರೂಪದಿ ಮೋಕ್ಷ | ವg್ವ5ರ ವಹುದು ನೀಸರುವ ತೀರಥ ಮಯಿ | ಪರಿವುದು ಈ ಪರಿ 3 ಎರಡು ಅಂಶವು ನಿನಗಿಹುದೂ | ಒಂದುಸರಿತಾಗಿ ಪ್ರವಹಿಸುವೂದು | ಮತ್ತೆತರುಣಿ ರೂಪದಿ ಪತ್ನಿಯಹುದು | ಮುನಿವರ ಕುಂಭ ಸಂಭವಗಹುದು | ಆಹಕರೆಸಿ ಲೋಪಾಮುದ್ರೆ | ಮೆರೆವುದು | ಪತಿವ್ರತೆಶಿರೋಮಣಿ ಎನಿಸಿ ನೀ | ಮೆರೆವುದು ಭುವಿಯಲ್ಲಿ 4 ವರವಿತ್ತು ಮರೆಯಾಗೆ ಅಜನು | ನೃಪವರ ಸುತೆಯೊಡನೆ ಪೊರಟನು | ಕಾಲಕರ ಮರತನದಿ ಕಳೆದಾನು | ಮುಂದೆವ್ಯೆರಾಗ್ಯದಿಂ ಪೇಳಿದಾನು | ಆಹಪರಿಶುದ್ಧನಿಹೆ ನಿನ್ನ | ದರುಶನ ಮಾತ್ರದಿಪರಮ ನಿಷ್ಕಾಮದ | ಕರ್ಮವನೆಸಗುತ್ತ 5 ಹರಿಧ್ಯಾನದೊಳು ಬಲುರತ | ನಿರೆನರಪತಿ ಹರಿಲೋಕ ಗತ | ನಾಗೆತರುಣಿ ಕಾವೇರಿಯು ಸ್ಥಿತ | ಘೋರವರ ತಪವನ್ನು ಗೈಯ್ಯುತ್ತ | ಆಹಇg5ರಲೀ ಪರಿ ಪರಿ ಪರಿ ಬೇಡಿದಳ್ 6 ಸರಿದ್ರೂಪಳಾಗಿನ್ನು ಪರಿದೂ | ಹರಿಶರಣರ ಪಾಪವ ತರಿದೂ | ಮತ್ತೆಸರುವರ ತಾಪವ ಕಳೆದೂ | ಇನ್ನುಸರಿತು ಗಂಗಾದಿಗೆ ಹಿರಿದೂ | ಆಹವರ ಕೀರ್ತಿಯಿಂದಲಿ | ಮೆರೆಯುತ ಲೋಕೋಪಕರಳೆನಿಸಿ ಪ್ರವಹಿಸಿ | ಶರಧಿಯ ಸೇರ್ವಂಥ 7 ಸ್ಮರಣೆ ಮಾತ್ರದಿ ಪಾಪನಾಶಾ | ಮಾಳ್ಪಗಿರಿಯುಂಟು ಸಹ್ಯ ಆದ್ರೀಶ | ಅಲ್ಲಿತರು ರೂಪಮಲಕ ದೊಳ್ವಾಸಾ | ನಿನ್ನಚರಣ ಕಮಲವ ವಾಣೀಶಾ | ಆಹವಿರಜೆ ಪುಣ್ಯದ ಜಲ | ವರ ಕಂಬುವಿಲಿ ತುಂಬಿಎರದಭಿಷೇಚಿಸೆ | ಪರಿವುದದರ ಸಹ 8 ವರ ದತ್ತಾತ್ರೇಯ ನೆಂದೆನಿಸಿ | ತವಶಿರ ಸ್ಥಾನದಲ್ಲಿ ವಾಸೀಸಿ | ಎನ್ನಶರಣರ ಅಘಗಳ ಹರಿಸೀ | ನಿನ್ನವರ ದಕ್ಷಗಂಗೆಂದು ಕರೆಸೀ | ಆಹವರ ತವೋತ್ಸಂಗದಿ | ಶಿರವಿಟ್ಟು ಮಲಗುತ್ತಸರಿದ್ವರಳೆನಿಸುತ್ತ | ಮೆರೆಸುವೆ ನಿನ್ನನು 9 ಮಂಗಳ ಜಪತಪ ಸ್ನಾನ | ಮಿಕ್ಕಗಂಗಾದಿ ತೀರ್ಥಾನುಷ್ಠಾನ | ನಾಲ್ಕ್ಯುಗಂಗಳೊಳಗೆ ಮಾಳ್ಪ ನಾನಾ | ಕರ್‍ಮಂಗಳ್ತವೋತ್ಸುಂಗ ಶಿರಸ್ಥಾನ | ಆಹಮಂಗಳಾಮಲಕ ಜಲಂಗಳಿಗ ಸಮ ಕ-ಳೆಂಗಳ್ಷೋಡಶಕ್ಕೊಂದಂಗ ಸರಿ ಬರೆದು 10 ದಾತ | ತನ್ನಕಾಮಂಡುಲಿನೊಳ್ ನಿನ್ನ ಧೃತ | ಆಹನೇಮದಿಂದೊಂದಂಶ | ಲೋಪಾ ಮುದ್ರೆಯು ಆಗಿಆ ಮಹ ಮುನಿಯನ್ನ | ಪ್ರೇಮದಿ ವರಿಸುವೆ 11 ವರವಿತ್ತು ಮರೆಯಾಗೆ ಹರಿಯು | ಅತ್ತವರ ಮುನಿ ತಪಸಿನ ಧಗೆಯು | ಕಂಡುಸುರಜೇಷ್ಠ ಅವನೆದುರು ಹೊಳೆಯು | ಆಗಬರೆದನು ಜೀವನ ಧೊರೆಯು | ಆಹಹೊರಲಾರದವ ತಾನು | ವರ ಸನ್ಯಾಸದಿ ಮನವಿರಸಿರುವುದು ನಿರಾ | ಕರಿಸುತ್ತ ಪೇಳ್ದನು 12 ಚಕ್ರಧರ | ತುಂಬಿದ ಮನದಿಂದಹಂಬಲಿಸಿ ಕೈಗೊಂಡು | ಬೆಂಬಿಡದೆ ಸಲಹುವ 13 ಮುನಿವರಗಸ್ತ್ಯನು ಅಜನ | ಮಾತಮನವಿಟ್ಟು ಕೇಳುತ್ತ ವಚನ | ಪೇಳ್ದಅನುಕೂಲ ಭಾರ್ಯಳಾಳ್ವುದನ | ಯೋಗಅನುಕೂಲಿಸುವುದೆಂಬ ಹದನ | ಆಹವನಜ ಗರ್ಭನು ತನ್ನ | ತನುಜೆಯ ಸುಕನ್ಯಾಮಣಿಯ ಕಾವೇರಿಯ | ವಿನಯದಿ ವರಿಸೆಂದ 14 ನಗ ಶೃಂಗದಿರಿಸುತ್ತಮಿಗೆ ಚೆಲ್ವ ಸರಿತಾಗಿ | ಪೋಗಲನುಗ್ರಹಿಸು 15 ಮೋದ ತಾಳುತ್ತಸುಗುಣೆಯ ಬೆಸಸೀದ | ನಗು ಮುಖದಿಂದಲಿ 16 ಹೊರ ಮುಖಳಾದಳ್ ಕಾವೇರಿ | ಮುನಿವರನ ಸತ್ಕರಿಸಲು ನಾರಿ | ದ್ವಿಜವರ ಪೇಳೆ ಬ್ರಹ್ಮಗನುಸಾರಿ | ಆಕೆವರಗಳ ಬೇಡಲು ಭಾರಿ | ಆಹಸುರಜೇಷ್ಠ ನ್ವೊರೆದಂತೆ | ವರಗಳ ನೀಯಲುಸುರಕನ್ಯಾಮಣಿಯಾಗ | ವರಿಸಿದಳಾ ಮುನಿಯ 17 ವಾಹನ ಪತ್ನಿ ಸೇರಿ | ಶಿರಿಕಂಸಾರಿ ಗರುಡನ್ನ ಏರಿ | ಕ್ರತುಧ್ವಂಸಿ ಉಮಾ ನಂದಿ ಏರಿ | ಇಂದ್ರಶಂಸಿ ಸೈರಾವತನೇರಿ | ಆಹಸಾಂಶರು ಯೋಗ್ಯ ನಿರಂಶರು ಸೇರಿ ಪ್ರ-ಶಂಸನ ಗೈಯುತ್ತ ವೈವಾಹ ನಡೆಸಿದರ್ 18 ಮದುವೆ ವೈಭವ ಪೇಳಲಾರೆ | ಜಗದುದಯಾದಿ ನಡೆಪರಿಹಾರೆ | ಹರಿಮುದ ಪೊಂದಲಿನ್ನೆದುರ್ಯಾರೆ | ಎಲ್ಲರ್ವೊದಗಿ ಆಶೀರ್ವದಿಶ್ಯಾರೆ | ಆಹವಿಧ ವಿಧ ದುಡುಗೊರೆ | ಅದ ಪೇಳಲಳವಲ್ಲಅದುಭುತ ಜರುಗಿತು | ಉದ್ವಾಹ ಕಾರ್ಯವು 19 ಗಮನ | ಮತ್ತೆಕಾವೇರಿ ಸಹ ಮುನಿ ಹಿಮನ | ಕೇಳ್ಕೆಭಾವಿಸುತಲ್ಲೆ ಕೆಲದಿನ | ಆಹಆವಾಸಿಸಿರೆ ಋಷಿ | ಸಾರ್ವರ ಮನ ತಿಳಿದುಆಹ್ವಾನ ವಿತ್ತಳು | ಸಹ್ಯಾದ್ರಿ ಸನಿಯಕ್ಕೆ 20 ಗಮನ | ಆಹಇಂಬಿಟ್ಟನ್ನೊಂದಂಶ | ಲೋಪಾಮುದ್ರೆಯು ಕುಂಭಸಂಭವ ಸಹ ಸಹ್ಯ ಅದ್ರಿಗೆ ಗಮಿಸಿದಳ್ 21 ಉತ್ತರ ಹಿಮನಗ ಬಿಡುತ | ವನಸುತ್ತುತ ವಿಂಧ್ಯ ಮೀರುತ್ತ | ಹಾಂಗೆಉತ್ತಮ ಸಹ್ಯಾಚಲೇರುತ್ತ | ಅಲ್ಯುನ್ನತ್ತ ಬ್ರಹ್ಮಗಿರಿ ಸಾರುತ್ತ | ಆಹಉತ್ತಮ ಕ್ಷೇತ್ರದಿ ಜತ್ತಾಗಿ ಕಮಂಡಲಒತ್ತಟ್ಟಿಗಿರಿಸುತ್ತ ಪತ್ನಿಗೆ ಬೆಸಸಿದರ್ 22 ಕಾಲ ಮುದದಿ ಕರಕದಿಂದಅದುಭೂತವೆನೆ ಸರಿದ್ವರಳಾಗಿ ಪ್ರವಹಿಸು 23 ಪರಿ ಕಾಲ ಸಮೀಪವಾಗಲು ಸುರಪ 24 ಹರಿ ಮನೋಭಾವಾನು ಸಾರಿ | ಮಳೆಗರೆಯಲನ್ಯತರುವ ಸಾರಿ | ಶಿಷ್ಯರುಗಳಾಶ್ರಯಿಸಲು ಮೀರಿ | ಕುಂಡಸರುವೆ ತೀರಥಗಳು ಉಸುರಿ | ಆಹಪರ್ವ ಕಾಲವು ಇದು | ಪೊರಮಡು ಕಾವೇರಿಪರಿವೆವು ನಿನ ಪಿಂತೆ | ತೀರ್ಥಗಳಗ್ರಣಿಯೆ 25 ವಿಧಿ ಬಂದ ಹಂಸವನೇರಿ | ಆವಮುದದಿಂದ ವನಗಳ್ ಸಂಚಾರಿ | ಇನ್ನುಅದುಭೂತಾಮಿತ ತೀರ್ಥ ಗಿರಿ | ಕಂಡುಒದಗಿ ಕರಕದ ಜಲ ಭಾರಿ | ಆಹಮುದದಿ ಮೀಯುತ ಜಪ ಅದುಭೂತಾಷ್ಟಾಕ್ಷರಪದುಮ ಸಂಭವ ಹರಿಧ್ಯಾನದಿ ರತನಾದ 26 ಮಂದ ಮಾರುತ ಬೀಸೆ ವಿಮಲ | ಧಾತ್ರಿಗಂಧ ವೆಂದೆನುತಲಿ ಬಹಳ | ಮುದದಿಂದೆಚ್ಚರಗೊಂಡು ಕಂಗಳ | ಮುಂದೆಸುಂದರಾಮಲಕಾ ಕೃತಿಗಳ | ಆಹಎಂದು ಕಾಣದ ದೃಶ್ಯ | ವೆಂದೆನುತಲಿ ಮನದಿಂದ ಧೇನಿಸೆ ಅದು | ಛಂದದಿ ಮರೆಯಾಯ್ತು27 ಸಿರಿ ಹರಿಯು | ಸಿರಿವತ್ಸಾಂಕಿತನು ಬಾಹು ದ್ವಿದ್ವಯು | ಇಂದಮೆಚು5Àೂಪವ ತೋರೆ ವಿಧಿಯು | ಆಹ |ಸಚ್ಚರಿತೆಯ ಪಾಡೆ | ನಿಚ್ಚಳಾಮಲಕದಉಚ್ಚರೂಪವ ಕಂಡು | ಅರ್ಚಿಸಿದನು ಬಹಳ 28 ಗಾತ್ರ ಪಾದ | ಬಿಸಜಗಳ್ವಂದಿಸಿಬಿಸಜ ಸಂಭವ ಗೈದ | ಅಸಮ ಸಂಪೂಜೆಯ 29 ಧಾತಾ ಸ್ವ ಕುಂಡಿಕಾಸ್ಥಿತ | ವಿಮಲ ತೀರ್ಥವು ವಿರಜೆಯಿಂ ಹೃತ | ಶಂಖಪೂರ್ತಿಸಿ ಪೂಜಾ ಪದಾರ್ಥ | ಪ್ರೋಕ್ಷಿಸಿಪೂತಾತ್ಮಾಮಲಕದಿ ಸ್ಥಿv5 ಆಹಶ್ರೀ ತರುಣೀಶನ | ದತ್ತಾತ್ರೇಯನ ರೂಪಖ್ಯಾತ ಪೂಜಿಸುತಿರಲಶರೀರ ವಾಕ್ಕಾಯ್ತು 30 ಪರಿ ಗೈಯ್ಯುವ ಭಾಮಾ ಮಣಿಕುರಿತು ಪೇಳಿತು ವಾಣಿ ನೇಮ | ನೀನುಶರಧೀ ಸೇರುವ ಮನೋ ಕಾಮಾ | ಆಹಪರಿಪೂರ್ಣವಹುದೀಗ | ವರ ತುಲಾಪರ್ವದಿಶರತ್ಕಾಲ ಮುಕ್ತಿದ | ಪರಿವುದು ಕಾವೇರಿ31 ತತುಕ್ಷಣ ಮುನಿಯ ಕಮಂಡ್ಲು | ದೊಳುಸ್ಥಿತ ಸರ್ವ ತೀರ್ಥಮಾನಿಗಳೂ | ಪೇಳೆತುತುಕಾಲ ಕವೇರ ತನುಜಳೂ | ಶೀಘ್ರಉತು ಪತ್ತಿ ತಾಳಿ ಪರಿದಾಳೂ | ಆಹಇತರ ತೀರಥಗಳು | ಸರಿತು ರೂಪದಿ ಹಿಂದೆಅತಿ ತ್ವರೆಯಲಿ ಪ್ರವ | ಹಿತರಾಗಿ ಪೋದರು 32 ಋಷಿವರ್ಯ ಸ್ನಾನವ ಮಾಡಿ | ಪರಿಕ್ಷಿಸಲಾಗ ವಿಸ್ಮಯ ಕೂಡಿ | ಶಿಷ್ಯರಿಗುಸರಲಾಕ್ಷೇಪದ ನುಡಿ | ಅವರುಸಿರಿದರ್ ಮಳೆಯ ಗಡಿಬಿಡಿ | ಆಹರಸ ರೂಪದಲಿ ಪರಿವ | ಅಸಮ ಪತ್ನಿಯ ಕೂಗೆಋಷಿಗೆ ಶಾಂತಿಯ ಸೊಲ್ಲ | ಒಸೆದು ಪೇಳಿದಳವಳೂ 33 ಸುರವರ ಪೂಜ್ಯ ಧಾತ್ರಿಯು | ಇನ್ನುತರುವು ಆ ಮಲಕದ ಬಳಿಯು | ತೀರ್ಥವರ ಶಂಖ ಸಂಜ್ಞಿತ ತಿಳಿಯು | ಇಲ್ಲಿವಿರಜೆಯ ದೊಂದಿಹ ಕಳೆಯು | ಆಹವರ ನಭೊ ಗಂಗೆಯು | ಸರಿ ಸಹ್ಯಾಮಲಕವುವರಣಿಸಲಳವಲ್ಲ | ಸರಿದ್ವರ ಮಹಿಮೆಯ 34 ಕೈವಲ್ಯ | ದಾತನ ಒಲಿಮೆಯು 35 ಗಂಗಾನದೀಗಗಳು ತಮ್ಮ | ಪಾಪಹಿಂಗಿಸಲೋಸುಗವಮ್ಮ | ತುಲಾಮಂಗಳ ಮಾಸದಲಮ್ಮ | ಒಂದುತಿಂಗಳಿಹರಿಲ್ಲಿ ಸಂಭ್ರಮ್ಮಾ | ಆಹಗಂಗೆ ದಕ್ಷಿಣಾಖ್ಯೆ | ಮಂಗಳೆ ಜನಗಳಘಂಗಳ ಕಳೆಯುತ್ತ | ತುಂಗೋಪಕಾರಿಯೆ 36 ಕಾವೇರಿ ಪ್ರವಹಿಸಿ ಭರತ | ವರ್ಷಪಾವಿಸುತಿಹಳು ತಾ ನಿರುತ | ಬಂದುಸೇವಿಸೂವರ ಪಾಪ ತ್ವರಿತ | ದೂರಗೈವಳೆಂಬುವದೆ ನಿಶ್ಚಿತ | ಆಹಈ ವಿಧ ಮಹಿಮೆಯ ಓವಿ | ಪಾಲಿಸಿದನು |ಶ್ರೀವರ ಶ್ರೀ ಗುರು | ಗೋವಿಂದ ವಿಠಲಯ್ಯ 37
--------------
ಗುರುಗೋವಿಂದವಿಠಲರು
ನನಗಾವ ಬಲವಿಲ್ಲ ನಿರುಪಮನೆ ಹೇಳೈಯ ವನಜ ಸಂಭವ ಜನಕ ತವ ಚರಣ ವಲ್ಲದಲೆ ಪ ಮಣಿದು ಬೇಡುವೆನೈಯ ಪ್ರಣತಾರ್ಥಿ ಹರಕೃಷ್ಣ ಜನುಮಗಳ ಹರಿಸುತಲಿ ಭವಬಂಧ ಬಿಡಿಸೈಯಅ.ಪ ನರರ ನಂಬಿದೆ ನೈಯ ಸಿರಿಯುರಿಗೆ ಬಾಯ್ಬಿಟ್ಟೆ ಅರಿಯದೆಲೆ ತವ ಮಹಿಮೆ ಬರಿದೆ ಬಳಲಿದೆಭವದಿ ಧೊರೆ ತನವು ಸವಿಯಹುದೆ ತವ ಸವಿಯ ಕಂಡವಗೆ ಜರಿಯ ದಲೆ ಬಡವನನು ಕರೆದು ಪಾಲಿಸು ತಂದೆ 1 ಹಣ ವನಿತೆ ಭೂ ವಿಷಯ ಉಂಡುಂಡು ಬೆಂಡಾದೆ ತನುಜ ಕರಣಗಳಿನ್ನು ಶತ್ರುಗಳ ಸಮವಿಹವು ಗುಣ, ಪೂರ್ಣ ಬಿಂಬನನು ನೆನೆಯ ಗೊಡದಲೆ ನಿತ್ಯ ಇನಸುತನ ಪುರದೆಡೆಗೆ ಸೆಳೆಯುತಿಹವೋ ಸ್ವಾಮಿ 2 ಸುರರು ಸುರರಿಗಾಶ್ರಯ ನೀರ ಮರುತಗಾಶ್ರಯ ಸಿರಿಯು ಸಿರಿರಮಣನೀನಿರಲು ಚರಣ ಸೇವಕ ನೆನ್ನ ನರರಿಗೊಡ್ಡುವರೇನೊ ಸರ್ವೇಶ ಅಕ್ಷರನೆ ಮೊರೆ ಹೊಕ್ಕೆ ಸಲಹೈಯ 3 ದೇವ ದೇವರ ದೇವ ದೇವತ್ವ ನೀಡುವನೆ ಕಾವ ಜೀವರ ನಿಚಯ ಸಾರ್ವಭೌಮನು ನೀನು ನೀವಲಿದು ಪೊರೆಯದಿರೆ ಆಗುವುದೆ ಸುಖಮುಕ್ತಿ ನಾವಿಕನು ನೀನೆಂದು ನಂಬಿದೆನು ಕೈಪಿಡಿಯೊ 4 ಅಗಲಿ ಬದುಕಿರಲಾರೆ ಗೋಪ ಪುರುಷನೆ ನಿನ್ನ ಸುಗಮ ಮಾಡಿಸು ಪಥವ ಸರ್ವಜ್ಞ ತವಪುರಕೆ ನಗವೈರಿ ಜಯತೀರ್ಥ ವಾಯು ವಂತರದಿರ್ಪನಗೆ ಮೊಗದ ಶ್ರೀಕಾಂತ ಕೃಷ್ಣವಿಠಲನೆ ಬೇಗ 5
--------------
ಕೃಷ್ಣವಿಠಲದಾಸರು
ನನ್ನ ಕರ್ಮವು ಬಂದು ಇನ್ನು ಬಾಧಿಸುತಿರೆ ಅನ್ಯರೇನ ಮಾಡುವರೈ ಪ ಕನ್ನೆ ಶಿರೋಮಣಿ ದ್ರೌಪತಿ ವರದನೆ ಎನ್ನ ಪಾಲಿಸೊವೋ ಪ್ರಸನ್ನ ರಂಗನಾಥ ಅ.ಪ ಭಿಕ್ಷಕ್ಕೆ ಬಂದಾಗ ಲಕ್ಷ್ಯವಿಡದೆ ಹೋಗಿ ಸಾಕ್ಷಿಯ ನಾಕಂಡೆನೈ ಪಕ್ಷಿ ವಾಹನನೆ ನೀರಕ್ಷಿಸಬೇಕಯ್ಯ ಸಾಕ್ಷಾತನೆಂತೆಂಬೊ ಮೋಕ್ಷಾಧಿಕಾರಿಯೆ 1 ದೋಷಕ್ಕೆ ಗುರಿಯಾದೆನೈ ಆಶೆಯ ಬಿಡಿಸಯ್ಯಾ ಶ್ರೀ ವೆಂಕಟರಮಣ ದೋಷರಹಿತ ಗುರುವು ದಾಸ ತುಲಸೀರಾಮ 2
--------------
ಚನ್ನಪಟ್ಟಣದ ಅಹೋಬಲದಾಸರು
ನಂಬಬೇಕು ಹರಿಯ ನಾಮಾ ಪ ನಾಮವೇ ಸ್ನಾನವು ನಾಮವೇ ಸಂಧ್ಯಾನವು| ನಾಮವೇ ಜಪ ತಪ ನಾಮವೇ ಖೂನವು| ನಾಮವೇ ಜ್ಞಾನಾ ನಾಮವೇ ಧ್ಯಾನಾ| ನಾಮವೇ ಧಾರಣ ನಾಮ ನಿಧಾನಾ 1 ಕಾನನ ಮಾರ್ಗದಿ| ಗುಣದ ಪಶುಪರಿ ಕಾಣದೇ ತಿರುಗುವಿ| ಏನು ಪಲವೋ ಮತಿ ಹೀನ ಗುರು| ಜ್ಞಾನದ ಮನಿ ನಿಧಾನದಿ ಕೇಳು2 ಪೋಡವಿಲಿ ಗಂಗೆಯ ತಡಿಯೋಳು ಕುಳಿತಿರೆ| ಕುಡಿಯಲು ಜಲವನು ಹುಡುಕುವ ಭಾವಿಯ| ನಡತಿದು ಛಂದವೆ ಬಿಡು ಬಿಡು ಸಂಶಯ| ಹಿಡಿಗುರು ಮಹಿಪತಿ ಒಡಿಯನ ಬೋಧಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ ನಂಬದೆ ಕೆಡುವುರುಂಟೋ ಪ ನಂಬಿದ ಜನರಿಗೆ - ಬೆಂಬಲ ತಾನಾಗಿ ತುಂಬಿ ಕೊಡುವರನ್ನ ಅ.ಪ ಜಲಧರ ದ್ವಿಜವರಗೆ ತಾನೇ ಒಲಿದು ಸುಲಭದಿ ಮುಕುತಿಯನಿತ್ತ ಚಲುವ ಸುತನ ಪಡೆದಲಲನೆಗೆ ತ್ವರದಿಂದ ಪುಲಿನ ಗರ್ತದಿ ದಿವ್ಯ - ಜಲವ ನಿತ್ತವರನ್ನ 1 ಮೃತ್ಯುದೂತರು ತನ್ನನು ಪೊಂದಿದ ನಿಜ ಭೃತ್ಯನ ಕರೆದೊಯ್ಯಲು ಸತ್ತ ದ್ವಿಜನ ತಾನು - ಮತ್ತು ಧsರೆಗೆ ತಂದು ಮೃತ್ಯು ಬಿಡಿಸಿ ಸುಖ - ವಿತ್ತು ಪೊರೆದಿಹರನ್ನಾ 2 ಧಿಟ ಗುರುಜಗನ್ನಾಥ ವಿಠಲನೊಲಿಮೆ ಘಟನವಾದುದರಿಂದ ಘಟನಾಘಟನ ಕಾರ್ಯ - ಘಟನಾ ಮಾಡುವ ನಮ್ಮ ಪಟು ಗುರುವರ ಹೃ - ತ್ಪುಟ ದಿರುವೋರನ್ನ 3
--------------
ಗುರುಜಗನ್ನಾಥದಾಸರು
ನಂಬಿ ಬಂದಿಹೆನಯ್ಯಾ ಪ ನಿನ್ನನಾ ಸ್ತುತಿಸಿ ಕೊಂಡಾಡುವೆ 1 ಕುಂದಿದ ಮನದಲಿ ನಿನ್ನನಾ ನೆನೆಯುದೆ ಮುಂದೇನುಗತಿ ಎನಗೆಂದು ತಿಳಿಯದೆ ಇನ್ನಾದರೆನ್ನ ಮನನಿನ್ನಲ್ಲಿ ನಿಲಿಸು 2 ಭೂಮಂಡಲವೆಲ್ಲಾ ತಿರುಗಿದೆ ಪ್ರಭುವೇ ನಿಮ್ಮ ಶರಣು ಬಂದಿಹೆ ನಯ್ಯ ಹೇಗುರುವೇ3 ಇಂದೆನ್ನ ಮೊರೆಕೇಳಿ ಕೇಳಿಸದಂತಿರುವೆಯಾ ಪ್ರಭುವೆ 4 ಪರದೇಶಿಯೆನುತೆನ್ನ ಕೈಬಿಡಬೇಡವೋ ಬಿಡದೆ ನಿನ್ನಡಿಗಳ ಪಿಡಿದಿಹೆನಯ್ಯಾ 5 ದೃಷ್ಟಿಯಿಂಲಿ ನೋಡಿ ರಕ್ಷಿಸು ನಮ್ಮನು | ಘಟ್ಯಾಗಿ ನಿಮ್ಮಪಾದ ಮುಟ್ಟಿ ನಾ ಭಜಿಸುವೆ6 ಸರ್ವಾಪರಾಧವ ಕ್ಷಮಿಸಿ ನೀ ಕಾಯೋ ಕಾಲಮೀರದೆಮ್ಮನು ಪಾಲಿಸಬೇಕಯ್ಯ 7
--------------
ರಾಧಾಬಾಯಿ