ಒಟ್ಟು 1112 ಕಡೆಗಳಲ್ಲಿ , 99 ದಾಸರು , 907 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಥ ಕೇಳಿನ್ನು ಪ ಅಂತರಂಗದಲಿ ಶಾಂತಿಯ ತಾಳಿ | ಅಂತರಾತ್ಮನು ನೀನೆನ್ನು | ಸತಿಸುತರಿಗೆ ಗತಿಯೇ ನಂಬಿದೆ | ಗತಿಯಿದ್ದದ್ದಾಗುವದೆನ್ನು | ಅತಿಶಯ ದುಷ್ಕರ್ಮಿಗಳು ನಿಂದಿಸೆ | ಕೃತ ಪೂರ್ವದ ಫಲವೆನ್ನು || ಸತತ ದ್ರವ್ಯವ ಬಯಸಿ ಗಳಿಸಿದೆ | ಗತಿಯಾಗುವದದು ಏನು ? | ಪತಿತ ಪಾವನ ರಘೂನಾಥನ | ನಾಮವ ಗುಪಿತದಿ ಜಪಿಸೊ ನೀನು 1 ಅಣ್ಣ ತಮ್ಮ ತಾಯಿ ತಂದೆ ಬಳಗದ | ಕಣ್ಣು ಮುಂದಿರಬೇಡಿನ್ನು | ಬಣ್ಣ ಬಣ್ಣ ಮಾತುಗಳಾಡಲು | ಪುಣ್ಯವು ಅದರಲಿ ಏನು ? || ಹೆಣ್ಣು ನೋಡಿ ಮನದಲಿ ಹಿಗ್ಗುವಿ | ಮಣ್ಣು ಕೂಡಿತದು ಏನು ? | ಹಣ್ಣು ಹಾಲು ಮೃಷ್ಟಾನ್ನಕಿಂತ ನೀ | ಉಣ್ಣು ಬ್ರಹ್ಮಾನಂದಾಮೃತವನ್ನು 2 ಅಂಶವುಳಿಯಬೇಕೆಂದರೆ ಈ ಜಗ- | ದಂಶವು ನನ್ನದು ಎನ್ನು | ಮಾಂಸಪಿಂಡ ಮುಖಾಂಡ ದಹನವು ಹುತಾಶನಗಾಹುತಿ ಎನ್ನು | ಕಂಸನ ತಂಗಿಯ ಮಗ ಪಾರ್ಥಗೆ ಹೇಳಿದ | ಸಂಶಯವ್ಯಾತಕೆ ಇನ್ನು | ಹಂಸ ಪರಮರ ಐಕ್ಯವ ತಿಳಿಯದೆ | ಹಂಸೋಹಂ ಎಂದರದೇನು ? 3 ನೋಡಿದುದೆಲ್ಲಾ ಪುಸಿಯೆಂದು | ಮಾಡೋ ನಿಶ್ಚಯವಿನ್ನು | ಆಡಬೇಡ ಅನೃತ ವಚನವನು | ಆಡುತಲಿರು ಸತ್ಯವನು | ಕೂಡಬೇಡ ಕಾಮಂದಿಯ ಸಂಗ | ಕೇಡು ತಪ್ಪದದಿನ್ನು | ರೂಢಿಯೊಳಗೆ ನರನಾಗಿ ಪುಟ್ಟಿ | ಮಾಡುತ ನಡಿ ಧರ್ಮವನು 4 ಮೂರ್ತಿ ಪಡಿ | ನಾದವನಾಲಿಸು ನೀನು 5
--------------
ಭಾವತರಕರು
ಪಥವ ಬಿಡು ಬಿಡು ದೇವ ಪಥದಿ ಮಲಗುವರೆಗತಿ ಚಿದಾನಂದನಿರೆ ಗತಿಗೆಡುವೆನೆ ಭಯಕೆ ಪ ಭವ ಹರಿದುನಿಲ್ಲದಲೆ ನಾನೀಗಲೈ ತರಲಿಕೆಇಲ್ಲಿ ಸರ್ವವೆ ಆಗಿ ನೀ ಬಂದು ಮಲಗಿರುವೆಸುಳ್ಳನಿತು ಸೇರದಿದು ನಿನ್ನವಗೆ ಬಿಡು ಪಥವ1 ಮನುಜ ಸಂಗವನಳಿದು ಮಹದರಣ್ಯವ ಹೊಕ್ಕುಅನಂತರದ ಪುಣ್ಯದಾಶ್ರಮವ ನೋಡಿಸನುಮತದಿ ಪೂಜೆಯನು ಮಾಳ್ಪೆನಾನೆಂದು ಬರೆಘನಸರ್ಪವಾಗಿ ನೀನಡ್ಡ ಬಿದ್ದಿಹೆ ದೇವ 2 ಸಕಲ ಸಂಗವನುಳಿದು ಸ್ವಾನುಭಾವಗಳಿಂದಅಖಿಲ ಮೃಗಗಳ ಕೂಡಿ ನಿಶ್ಚಲತೆಯಿಂದಭಕುತಿಯಲಿ ನಿನ್ನನು ಭಜಿಪೆನೆಂದೈದುತಿರೆಭಕುತನಿಗೆ ಸರ್ಪನಂತಿಹುದಿದೇನೈ ಸ್ವಾಮಿ3 ಏಕಾಂತ ಗೃಹಗಳಲಿ ಏಕಾಂತ ಸ್ಥಳಗಳಲಿಏಕಾಂತವಾಗಿ ನಿನ್ನನೆ ಪೂಜಿಸಿಏಕಾಂತ ಸರ್ವಸಾಧನವೆನುತಲೈದುತಿರೆಏಕಾಂತ ಮಾತೇಕೆ ಪಥವ ಬಿಡು ಎಲೆ ದೇವ 4 ಶುಕಗೆ ಪಂಜರದಂತೆ ಸಾಕ್ಷಿಯೆನಗಿರುತಿರಲುಅಖಿಲ ಚಿಂತೆಯ ಗಿಡುಗ ಬರಲಹುದೆಮುಕುತಿದಾಯಕ ಚಿದಾನಂದ ಗುರು ಕೇಳೆನಗೆಯುಕುತಿಯುಂಟೇ ಬೇರೆ ಬಿಡುಬಿಡಿರೆ ಬಿಡು ಪಥವ5
--------------
ಚಿದಾನಂದ ಅವಧೂತರು
ಪಂಥವ್ಯಾಕೋ ಗುಣವಂತ ಸಖಿಯೊಳಿನ್ನು ಪುಷ್ಪಾವ- ಸಂತ ಆಡಿದೊರೆಯೆ ಶ್ರೀಮಂತ ದೇವನೂರಲಿ ನಿಂತ ಲಕ್ಷ್ಮೀಯ ಕಾಂತ ಪ ರೂಢಿಯೊಳಗೆ ನೀನಾಡಿ ಪೆಣ್ಣಲ್ಲವೆಂದು ನೋಡಿ ಸವಿಮಾತನಾಡಿ ಗಾಡಿಕಾರೆಯರ ಒಡ- ಗೂಡಿ ಬಲ್ಮೊಲೆಗೆ ಕೈಯನೀಡಿ ಸುರತದೊಳು ಕೂಡಿ ಮೋಹವ ಮಾಡಿ ||1|| ಎಲ್ಲರಂತೆ ನಾ ತರುಣಿಯಲ್ಲ ಬಣ್ಣನೆ ಮಾತು ಒಲ್ಲ ಅವಳು ಮೊದಲೆ ಅಲ್ಲಿ ಇಲ್ಲದೆ ಪೂವಿಲ್ಲ ಇನ್ನಷ್ಟು ದಯವಿಲ್ಲ ಶ್ರೀ ವಲ್ಲಭ ನಿನಗೀ ನಿತ್ತವಲ್ಲ 2 ಜಾರವಿದ್ಯದಿ ನೇಮಗಾರ ಯೆನ್ನಯ ಮಾತ ಮೀರದೆ ಕೃಪೆ ಬಂದು ಸರಸಗುಣ ವಿ- ಚಾರವರಿತು ವೈಯಾರ ಪೊರೆದೆಯೇ ದೇವ- ನೂರ ವಿಹಾರ ಲಕ್ಷ್ಮೀಮನೋಹರ ಮೋಹನಾಕಾರ3
--------------
ಕವಿ ಲಕ್ಷ್ಮೀಶ
ಪದವ ಕಲಿಸೆನಗೆ ಶ್ರೀಹರಿ ಪದವ ಕಲಿಸೆನಗೆ ಪ ಪದವ ಕಲಿಸಯ್ಯ ಪದುಮನಾಭ ಪದದ ಮಹಿಮೆಯೆಂಬ ಸುಧೆಯು ಭರಿತವಾದ ಅ.ಪ ನಾಗಶಾಯಿಯ ವಿಮಲನಾಮವೆಂಬ ರಾಗಕಲಿಸು ಮಿಗಿಲು ಭೋಗ ಭಾಗ್ಯದಾಸೆ ನೀಗಿಸಿ ಈ ಭವ ರೋಗ ಗೆಲಿದು ತಲೆದೂಗಿ ನಲಿಯುವಂಥ 1 ದೋಷದೂರನ ಚರಿತರಸದಿಂ ಸೂಸಿ ಹರಿವ ಕವಿತ ಶ್ಲೇಷ ನೀಗಿಸಿ ಪ್ರಪಂಚ್ವಾಸನದುಳಕಿಸಿ ಸಾಸಿರನಾಮ ಹುಸಿ ತಾಳದಿ ಪಾಡುವಂಥ 2 ಯತಿತತಿಗಳು ಪೊಗಳ್ವ ಬಿಡದತಿ ಮತಿಮಾನ್ಯರು ಪಾಡ್ವ ರತಿಪತಿಪಿತ ಶ್ರೀರಾಮ ನಿನ್ನಡಿಭ ಕ್ತ್ಯತಿಗಣಕೂಡಿದ ಅತಿಶಯಾನಂದಕರ 3
--------------
ರಾಮದಾಸರು
ಪರಮಪಾವನ್ನನಾಮ ಭಳಿರೆ ಸಂಗರ ಭೀಮ ಸರಸಗುಣಾಭಿರಾಮ ತರಣಿವಂಶ ಲಲಾಮ ತಾರಾನಂದನ ಪ್ರೇಮ ಪರಿಪೂರ್ಣಧಾಮ ಪಟ್ಟಾಭಿರಾಮ ಪ. ಚಿಕ್ಕಪ್ರಾಯದಲಿ ಬಲುರಕ್ಕಸಿಯನು ಸೀಳಿ ತಾಕಲದೆ ಕಾಲ್ಪೆಣ್ಗೈದು ರಾಜಮೌಳಿಯ ಬಿಲ್ಲ ಗಕ್ಕನೆ ಖಂಡ್ರಿಸಿ ಕೈವಿಡಿದು ಸೊಬಗನುಕ್ಕುವ ಜಾನಕಿಯ ಧಿಕ್ಕರಿಸುತ ಪೋಗಿ ದಿತಿಯ ಕೈಕೆಯ ಮಾತು ದಕ್ಕಲೆನುತ ಪೋಗಿ ದಂಡಕಾರಣ್ಯವ ಭೂರಿ ದಾನವಹಿಂಡ ಚಕ್ಕಂದದಲಿ ಕೊಂದ ಜಾಣ ನೀನಹುದೊ 1 ಭುವನೇಶ ಶಬರಿಯ ಪೂಜೆಯ ಕೈಕೊಂಡು ಪವನಾತ್ಮಜನ ಕಂಡು ಬರಹೇಳಿ ರವಿಯ ಸೂನನ ಕಾಣಿಸಿಕೊಂಡು ತವಕದಿಂ ವಾಲಿಯ ಹವಣರಿಯದಸುವ ಕೊಂದು ಪ್ಲವಗ ಬಲವನು ಕೂಡಿ ಬಲು ಸಮುದ್ರವ ಬಂಧ- ನವ ಮಾಡಿ ಕುಂಭಕರ್ಣ ರಾವಣನ ಸಂಹಾರ ಮಾಡಿ ಲಂಕಾರಾ ಜ್ಯ ವಿಭೀಷಣಗಿತ್ತು ಅವನಿಜೆಸಹ ಪುಷ್ಪಕವನೇರಿ ನಡೆದೆ 2 ಸುರರೆಲ್ಲ ಪೂಮಳೆಗರೆಯೆ ಸುಗ್ರೀವಾದಿ ವರರಾವಣರ ಸೇನೆ ಬೈಲಾಗಿ ನೀ ನಡೆಯೆ ಶೃಂ- ಗಾರವಾದ ಸಾಕೇತಪುರಕೆ ಭರದಿ ಬಂದು ನಿರುತ ಸೌಖ್ಯದಲಿ ನಿಂದು ಸಿರನೆಲೆವಿನಯದಿ ಚಿನ್ಮಯನಾ ಗಿರಿಯ ಶುಭಕರ್ಣವೊ(?) ಸೀತಾಲಕ್ಷ್ಮಣ ಭರತಶತ್ರುಘ್ನಯಿರೆ ಹನುಮನ ಸೇವೆ ದಿವ್ಯಸಿಂಹಾಸನವೇರಿ ಧರೆ ಆಳಿದ ಪರಿಣಾಮದಿ ಹಯವದನ ರಾಮ3
--------------
ವಾದಿರಾಜ
ಪರಿ ನಡಿಯುತ ಪುಣ್ಯವಂತರಾದ ಪ ಹರುಷಾದಿ ಆಚರಿಸುತಾ ಪಾದ ಬಿಡದೆ ನಿಜಭಕ್ತಿಯಲಿರುವಂಥ 1 ಪರಿಪರಿ ಶೋಧಿಸಿ ಮಹಿಮೆ ಸ್ಥಿರವಾಗಿ ಮನದಲ್ಲಿ ತಿಳಿದು ಸಿದ್ಧಿಸಿದಂಥಾ 2 ಇಷ್ಟದಿಂದ ಅತಿಯೋಗ್ಯರ ಕೂಡಿ ಶ್ರೇಷ್ಠ ಜ್ಞಾನಾಧಿಕ ನಿಷ್ಠಾರು ಎನಿಸಿದ ಶಿಷ್ಟ ಮಾನವ ಸಾಧು ಸಜ್ಜನರಾದಂಥ 3 ಮಾನವನಾಗುವದೇ ಘನಸಾರವನೆ ಗ್ರಹಿಸಿ ಮಾನಿತರೆನಿಸೀದ ಮಹಿಮರಾದಂಥಾ 4 ಭೂಮಿಪಾಲಕನಾದ `ಹೆನ್ನೆವಿಠ್ಠಲನ’ ಪ್ರೇಮದಿ ಹೇದಯಾದಿ ಪ್ರಣಿತಾರ್ಥವು ಹಿಡದು ಸ್ವಾಮಿ ನೀನೇಗತಿ ಸಕಲಾವು ನೀನೆಯೆಂಬೊ5
--------------
ಹೆನ್ನೆರಂಗದಾಸರು
ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ ವಿವಿಧ ಭಕುತರು ಕೂಡಿ ಹರುಷದಿ ಪ್ಲವನಾಮ ಸಂವತ್ಸರದಲಿ ಸವಿನಯದಿ ಭಜನೆಗಳ ಮಾಳ್ಪರು ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ ಪೊಕ್ಕುಳಲಿ ಪಡೆದನಂತೆ ಸೊಕ್ಕಿದ ಅಸುರರನು ಬಡಿಯಲು ಮಿಕ್ಕ ಸುರರನು ಪೊರೆಯಲೋಸುಗ ರಕ್ಕಸಾಂತಕ ಹರುಷದಿಂದಲಿ ಚೊಕ್ಕ ಸ್ತ್ರೀ ರೂಪಾದನಂತೆ 1 ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು ಸುಂದರ ಸ್ತ್ರೀಯಾದನಂತೆ ನಿಂದು ನೋಡುತ ಚಂದ್ರಶೇಖರ ಮಂದಹಾಸದಿ ಪಿಡಿಪೋದನಂತೆ ಮಂದಗಮನೆಯು ಸಿಗದೆ ದೂರದಿ ನಿಂದು ಕಣ್ಮರೆಯಾದಳಂತೆ2 ವಿಸ್ಮಯವಾದನಂತೇ ಪಶುಪತಿಯ ಸಿರದಲಿ ಹಸ್ತ ನೀಡಿದನಂತೇ ಮತ್ತೆ ರಕ್ಷಕರಿಲ್ಲವೆಂದು ತತ್ತರಿಸಿ ಭಯಪಟ್ಟನಂತೆ ತಕ್ಷಣದಿ ಶ್ರೀ ಕಮಲನಾಭ ವಿಠ್ಠಲ ರಕ್ಷಿಸಿ ಪೊರೆದನಂತೆ 3
--------------
ನಿಡಗುರುಕಿ ಜೀವೂಬಾಯಿ
ಪಾತಕ ಪರಿಹಾರ ದನುಜರಕರುಣಕ್ಕೆ ಕಾರಣ ನಂಬೆಲೊ ಮನುಜ ಪ ಗಂಗೆ ಮೊದಲಾದ ತೀರ್ಥಂಗಳೆಣೆಯ ಶ್ರೀ-ರಂಗ ಮೊದಲಾದ ಕ್ಷೇತ್ರವು ಸರಿಯೆ ಉ-ತ್ತುಂಗ ಜಪತಪÀ ಹೋಮಂಗಳೆದುರೆ ಶ್ರೀ-ರಂಗನಾಥನ ದಿನದೊಂದುಪವಾಸಕೆ 1 ಸುಕೃತ ಬೆಳಸುಮುಂದಣ ಮುಕುತಿಗೆ ಕಲ್ಪ ಲತಾಂಕುರಇಂದಿರೇಶನ ದಿನದೊಂದುಪವಾಸಕೆ 2 ರುಕುಮಾಂಗದ ಮೊದಲಾದ ಭಕುತರೆಲ್ಲಸಕಲವ ಬಿಟ್ಟು ಏಕಾದಶಿ ವ್ರತವಭಕುತಿಯಿಂ ಕೂಡಿ ಶ್ರೀಕೃಷ್ಣನ ಮೆಚ್ಚಿಸಿಮುಕುತಿ ಸೂರೆಯಗೊಂಡರೆಂಬುದನರಿಯ 3
--------------
ವ್ಯಾಸರಾಯರು
ಪಾದ 1ಸುರರ ಮಣಿಮಕುಟಗಳು ಸೋಕಿ ಶೋಭಿಪ ಪಾದಪರಮ ಪಾವನೆ ಲಕ್ಷ್ಮಿ ಪಿಡಿದೊತ್ತುವ ಪಾದಧುರದಿ ನರರಥವೇರಿ ದೇದೀಪಿಸಿದ ಪಾದಹರಿವೈರಿಕರಗಳಲಿ ಹೊಳೆವ ಪಾದ 2ಸಿರಿಯುಳ್ಳ ಕುರುಪತಿಯ ಶಿರವೆರಗಿಸಿದ ಪಾದಪರಿದು ನಾಗನ ಶಿರಗಳೊಳು ಹೊಳೆದ ಪಾದಅರವಿಂದಮುಖಿಯರೊಡನತಿ ನರ್ತಿಸಿದ ಪಾದನೆರೆ ಜರೆದ ಶಿಶುಪಾಲನ್ನೊಳಗಿಟ್ಟ ಪಾದ 3ಕರುಗಳೊಡಗೂಡಿ ಕಾನನದಲಾಡಿದ ಪಾದಕರುಣದಿಂ ಪಾಂಡವರ ಕಾಯ್ದ ಪಾದಮರೆಯೊಕ್ಕ ಸುಜನರಿಗೆ ಮುಕ್ತಿಗೊಡುತಿಹ ಪಾದಸ್ಮರಿಸಲಘರಾಶಿಗಳ ಸಂಹರಿಪ ಪಾದ 4ಬಲಿ ಯಜ್ಞವಾಟಕ್ಕೆ ಬಂದು ನೆಲಸಿದ ಪಾದಬಲು ಬೆಳೆದು ಲೋಕಗಳ ಬಂಧಿಸಿದ ಪಾದಕಲಕಿ ಗಂಗೆಯ ಧರೆಗೆ ಕೋಡಿವರಿಸಿದ ಪಾದಸುಲಭದಿಂ ಭಕ್ತರಿಗೆ ಸುಖವೀವ ಪಾದ 5ಧ್ವಜರೇಖೆುಂ ಕೂಡಿ ಥಳಿಥಳಿಸುತಿಹ ಪಾದವಿಜಯವಹ ವಜ್ರದಿಂದೊಪ್ಪುತಿಹ ಪಾದಗಜವ ಶಿಕ್ಷಿಪಮುದ್ರೆ ಗೋಚರಿಸುತಿಹ ಪಾದನಿಜಪದ್ಮದಿಂ ಲೋಕನಿಧಿಯಾದ ಪಾದ 6ಅರೆಯಾದ ಸತಿಯನಂಗನೆಯ ಮಾಡಿದ ಪಾದಧರೆಯ ಧರಿಸಿಹ ಶೇಷ ಧ್ಯಾನಿಸುವ ಪಾದತರುಣನಾಯಕ ಪುರದಿ ಸ್ಥಿರದಿ ನೆಲಸಿದ ಪಾದತಿರುಪತಿಯ ವೆಂಕಟೇಶ್ವರ ನಿಮ್ಮ ಪಾದ 7ಓಂ ವೃಷಭಾಸುರ ವಿಧ್ವಂಸಿನೇ ನಮಃ
--------------
ತಿಮ್ಮಪ್ಪದಾಸರು
ಪಾದ ಎಂಥ ಸುಂದರ ಪಾದಎಂಥೆಂಥವರಿಗದರ ಅಂತ ತಿಳಿಯದಂಥಾ ಅ.ಪಸರ್ವದಾ ಸಿರಿದೇ'ಯು ತೊಡೆಯಮೇಲೆಇಟ್ಟು ಮೆತ್ತಗೆ ಒತ್ತುತಾ ದಿಟ್ಟಿಸಿ ನೋಡುತಾದ್ಟೃತಾಕೀತೆಂದು ಗಟ್ಟಿ ಹಣೆಯ ಹಚ್ಚಿಬಚ್ಚಿಟ್ಟುಕೊಂಡಂಥಾ 1ಹುಡಗರ ಕೂಡಿಕೊಂಡು ಗಡಿಗೆಯ ಒಡೆದುಕುಡಿದು ಕೆನೆಪಾಲ್ ಮೊಸರು 'ಡಿತುಂಬ ಬೆಣ್ಣೆಯ'ಡಕೊಂಡು ಓಡುತ 'ಡಿಯಬಂದರೆ ದೊಡ್ಡಗಿಡವೇರಿ ಅಡಗು' 2ಚಲುವ ಗಂಗೆಯ ಪಡೆದ ಪಾವನಪಾದಶಿಲೆಯು ಸತಿಯ ಮಾಡಿತು ಪ್ರಲಯಕಾಲದ ಆಲ-ದೆಲೆ ಮೇಲೆ ಮಲಗುತ ಬಲಪಾದಾಂಗುಟಚೀಪುವ ಭೂಪತಿ'ಠ್ಠಲ 3
--------------
ಭೂಪತಿ ವಿಠಲರು
ಪಾದ ಕೂಡಿ ಸಾಧು ಸಂಗ ಮಾಡಿ ಭೇದಾಭೇದೀಡ್ಯಾಡಿ ಧ್ರುವ ಮರಹು ಮರಿಯ ನೀಗಿ ಅರವ್ಹಿನೊಳಗಾಗಿ ಕುರುಹ್ಹದೋರಿಕೊಡುವ ಗುರು ಬ್ರಹ್ಮಾನಂದಯೋಗಿ 1 ತಿರುಗಿನೋಡಿ ನಿಮ್ಮ ಅರಿತು ನಿಜವರ್ಮ ಪಾರಗೆಲಿಸುವದಿದು ಗುರುಪಾದ ಧರ್ಮ 2 ಕಣ್ದೆರೆದು ನೋಡಿ ತನ್ನೊಳು ಬೆರೆದಾಡಿ ಧನ್ಯವಾದ ಮಹಿಪತಿ ಗುರುಪಾದ ಕೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ಕೂಡಿ ಧ್ರುವ ವಾದ ಮಾಡಬ್ಯಾಡಿ ಸದ್ಬೋಧ ಇದೆ ನೋಡಿ ಭೇದ ಬುದ್ಧೀ ಡ್ಯಾಡಿ ಹಾದಿ ಇದೆ ಕೂಡಿ 1 ಇಂಬು ನಿಜವಾದ ಗುಂಭಗುರುತಾದಾರಂಭದೋರುವದ 2 ಹಿಡಿದು ನಿಜ ವರ್ಮ ಪಡಿಯಬೇಕು ಧರ್ಮ ಜಡಿದು ಪರಬ್ರಹ್ಮ ಕಡೆವದು ದುಷ್ಕರ್ಮ 3 ಗುರುವೆ ನರನೆಂದು ಮರೆದುಬಿಡಿ ಸಂದು ಅರಿತು ನಿಜವೆಂದು ಬೆರೆತು ಕೂಡಿಬಂದು 4 ಇದೆ ಸ್ವತ:ಸಿದ್ಧ ಸದ್ಗುರು ಕೃಪೆಯಿಂದ ಸದ್ಗೈಸುವಾನಂದ ಇದೆ ಮಹಿಪತ್ಯೆಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ನಾ ನಂಬಿದ ಭಕುತರ ಇಂಬಾಗಿ ಪೊರೆದೆನೆಂತೆಂಬ ವಾರುತಿ ಕೇಳಿ ಪ ದೂರವಾದರೆ ತಾನು ನಾರಿಯ ಮೊರೆ ಕೇಳಿ ಚೀರಿ ಕರೆದಳೆಂದು ಶೀರಿಗಳನೆ ಇತ್ತು ಬೀರಿದನರಿಯಾ ಬಿಂಕವ ಬಿಟ್ಟು ಸೇರಿಕೊ ಹರಿಯ ದಾರಿ ಕಾಣದೆ ವನ ಸೇರಿದ ಕುವರನ್ನ ಸಾರೆಗರೆದು ಸೌಖ್ಯ ಪೂರೈಸಿದನೆಂದು 1 ಕಾಡಾನೆ ವ್ರಜದೊಳು ಕೂಡಿದ್ದ ಗಜರಾಜ ಗಾಡಾಹ ತಾಪದಿಂದ ಬಾಡಿ ನೀರಡಿಸಲು ಗೂಢ ಸರೋವರ ನೋಡಿ ನೀರನೆ ಪೊಕ್ಕು ಆಡಾಲು ಮದದಿ ನಕ್ರನು ಬಂದು ಪೀಡಿಸೆ ಭರದಿ ಮೂಢ ನಾನೆಲೊ ಕೃಷ್ಣ ಮಾಡೊ ರಕ್ಷಣೆಯನ್ನು ಪರಿ ನೋಡಿ 2 ಕಾಸು ಬಾಳದ ಸ್ತ್ರೀಯಳಿಗೆ ಆತನೆ ವಶವಾಗಿ ಹೇಸಿಕಿಲ್ಲದೆ ಅಲ್ಲಿ ತಾ ಸೂನುಗಳ ಪಡಿಯೆ ಸಹ ವಾಸರ ಕಳಿಯೆ ಕಾಲನು ಘೋರ ಪಾಶದಿ ಶಳಿಯೆ ಆ ಸಮಯದಿ ಕೊನೆ ಕೂಸನ್ನೆ ಕೂಗಲುವಾಸುದೇವವಿಠಲ ತಾ ಸಲಹಿದನೆಂದು 3
--------------
ವ್ಯಾಸತತ್ವಜ್ಞದಾಸರು
ಪಾದ ಬಿಡಲಾರೆ ಎನ್ನೊಡೆಯ ರಂಗ ಭಾರ ನಿನ್ನಗೆ ಕೂಡಿತು ಪ ನೀನೆ ಚಿಂತಾಮಣಿ ನೀನೆ ಪರುಷದ ಖಣಿ ನೀನೆ ಎನ್ನಗೆ ಧಣಿ ವೇಣುಗೋಪಾಲ 1 ಪಕ್ಷಿವಾಹನ ಲೋಕರಕ್ಷಿಪನು ನೀನೆಲೊ ಅಕ್ಷಯದಿ ದ್ರೌಪದಿಯ ರಕ್ಷಿಸಿದವ ನೀನೆ 2 ಪಾರ ಮಹಿಮನೆ ಸರ್ವಭಾರ ನಿನ್ನದಯ್ಯ ಸೇರಿದೆನು ನಿಮ್ಮ ಪದಕೆ ಮಾರಪಿತ ಶ್ರೀರಾಮ 3
--------------
ರಾಮದಾಸರು
ಪಾದ ನಂಬಿದೆ ಜನಕೆ ಪಾರುಗಾಣಿಪ ಪರಮ ಕರುಣಿ ಶ್ರೀ ಧೀರೇಂದ್ರವರ್ಯಾ ಪ ನಿತ್ಯ ಅನವರತ ಭಕ್ತಿಯನೆ ಇತ್ತೆನ್ನ ಕಾಯೆಯ್ಯ ಕರುಣಾನಿಧೆ ಅ.ಪ. ವಸುಧೀಂದ್ರ ಕರಕಮಲ ಸಂಜಾತ ವಸುಧೆಯೊಳು ವಾಸವಾಗಿಹ ಭಕ್ತ ಜನಕೆಲ್ಲಾ ವಾಸವಾನುಜ ಶ್ರೀ ವಾಸುದೇವನ ಸರ್ವಜಗಕೆಲ್ಲಾಪಾಯನೆಂಬಾ ವಾಸುದೇವನ ಮತವ ಬೋಧಿಸುತೆ ಸಾತಾರಾ ಪುನಯಾದಿ ನಗರದ ವಾದಿಗಳನೆಲ್ಲಾ ವಾದದಿಂದಲಿ ಗೆದ್ದು ಬಹುಮಾನವನೆ ಪಡೆದು ಮಹಿಯೊಳಗೆ ಬಹು ಖ್ಯಾತಿ ಪಡೆದ ಮಹಾಮಹಿಮ 1 ಭೂರಮಣ ಶ್ರೀಕಾಂತ ಬಹುಕೋಪದಿಂದಲಿ ಕೋದಂಡಪಾಣಿಯಾಗಿ ಭವಜನಕೆ ಮೋಹವನೆ ಬೀರುವಾ ಸಮಯದಲಿ ಬಹು ಭ್ರಾಂತಿಗೊಂಡು ಇರಲು ಭಾರತೀಶನ ದಯದಿ ಭಾಗೀರಥಿಯ ಕೂಡಿ ಬಹುಭಕ್ತಿಯಿಂದ ಒಲಿಸಿ ಭೂಮಿಜೆಯ ಕಳ್ಳನನೆ ಸಂಹರಿಪ ಕಾರ್ಯದಲಿ ಬಹುಸೇವೆಗೈದಂಥ ಪುಣ್ಯಶಾಲಿ 2 ಶ್ರೀರಮಣನಾಜ್ಞೆಯಲಿ ಭಜಿಪ ಭಕ್ತರಿಗೆಲ್ಲ ಬೇಡಿದಿಷ್ಟಾರ್ಥಗಳ ಸಲಿಸುತ್ತಲೀ ಶ್ರೀಕೃಷ್ಣಭಕ್ತರಿಗೆ ಕೃಷ್ಣವಾಗಿಹ ಮನವ ಉತ್ಕøಷ್ಟಗೈಯ್ಯುತ್ತಲೇ ಶ್ರೀಸುರಪನಾಯಕೆ ಸರಿಮಿಗಿಲು ಎಂದೆನಿಪ ಬಹುಭಾಗ್ಯವನ್ನೆ ಪಡೆದು ಶ್ರೀಗುರುತಂದೆವರದ-ಗೋಪಾಲ ಅಸಿ ಬಿಟ್ಟು ಬಿಡದಲೆ ಭಕ್ತಿಯಿಂ ಭಜಿಪ ಗುರುವರ್ಯ 3
--------------
ಸಿರಿಗುರುತಂದೆವರದವಿಠಲರು